text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ಕುಟುಂಬವು ಕಡ್ಡಾಯವಾಗಿ ಶೌಚಾಲಯ: Latest ಕುಟುಂಬವು ಕಡ್ಡಾಯವಾಗಿ ಶೌಚಾಲಯ News & Updates, Photos & Images, Videos | Vijaya Karnataka August,24,2019, 14:47:33 ಕುಟುಂಬವು ಕಡ್ಡಾಯವಾಗಿ ಶೌಚಾಲಯ LAST UPDATED: Dec 17, 2018, 05.00 AM IST ಶೌಚಾಲಯ ನಿರ್ಮಿಸಿಕೊಳ್ಳಲು ಸಲಹೆ Feb 14, 2015, 05.53 AM ಸ್ವಚ್ಛ ಭಾರತ ಅಭಿಯಾನ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಜಿ.ಪಂ.ಅಧ್ಯಕ್ಷ ಡಿ.ಸಿ.ನಾಗೇಂದ್ರ ತಿಳಿಸಿದರು. ನರೇಗಾ ಸಾಧನೆ ಸಿಎಜಿ ಆಡಿಟ್: ಸಂಸತ್ತಿನಲ್ಲಿ ಮಂಡನೆ Aug 20, 2012, 06.11 AM ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಲು ಕೇಂದ್ರ ಸರಕಾರ ಜಾರಿಗೆ ತಂದಿರುವ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೊಜನೆಯಡಿ ಎಲ್ಲಾ ರಾಜ್ಯಗಳು ಸಾಧಿಸಿರುವ ಪ್ರಗತಿ, ಹಣ ಬಳಕೆ ಸೇರಿದಂತೆ ಎಲ್ಲವನ್ನು ಸಿಎಜಿಯಿಂದ ಆಡಿಟ್ ಮಾಡಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ ರಮೇಶ್ ಪ್ರಕಟಿಸಿದರು.
2019/08/24 09:17:34
https://vijaykarnataka.indiatimes.com/topics/%E0%B2%95%E0%B3%81%E0%B2%9F%E0%B3%81%E0%B2%82%E0%B2%AC%E0%B2%B5%E0%B3%81-%E0%B2%95%E0%B2%A1%E0%B3%8D%E0%B2%A1%E0%B2%BE%E0%B2%AF%E0%B2%B5%E0%B2%BE%E0%B2%97%E0%B2%BF-%E0%B2%B6%E0%B3%8C%E0%B2%9A%E0%B2%BE%E0%B2%B2%E0%B2%AF
mC4
ಬೆನ್ನಿಗೆ ಚಾಕು ಚುಚ್ಚಿರುವ ಸಂಗತಿ ಸಾವನ್ನಪ್ಪಿದ ವಿದ್ಯಾರ್ಥಿಗೆ ಗೊತ್ತಾಗಿದ್ದು ಗಂಟೆ ನಂತರ! | KANNADIGA WORLD Home ಕನ್ನಡ ವಾರ್ತೆಗಳು ಕರ್ನಾಟಕ ಬೆನ್ನಿಗೆ ಚಾಕು ಚುಚ್ಚಿರುವ ಸಂಗತಿ ಸಾವನ್ನಪ್ಪಿದ ವಿದ್ಯಾರ್ಥಿಗೆ ಗೊತ್ತಾಗಿದ್ದು ಗಂಟೆ ನಂತರ! ಬೆನ್ನಿಗೆ ಚಾಕು ಚುಚ್ಚಿರುವ ಸಂಗತಿ ಸಾವನ್ನಪ್ಪಿದ ವಿದ್ಯಾರ್ಥಿಗೆ ಗೊತ್ತಾಗಿದ್ದು ಗಂಟೆ ನಂತರ! Posted By: Karnataka News BureauPosted date: December 23, 2016 In: ಕರ್ನಾಟಕ ಬೆಂಗಳೂರು: ಪಿಇಎಸ್ ಕಾಲೇಜು ಸಮೀಪದ ವಾಟರ್ ಟ್ಯಾಂಕ್ ಪಾರ್ಕ್‌ ಬಳಿ ದುಷ್ಕರ್ಮಿಗಳು ಡಿಪ್ಲೊಮಾ (ಮೆಕ್ಯಾನಿಕಲ್) ವಿದ್ಯಾರ್ಥಿ ಹರ್ಷ (19) ಎಂಬುವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಏಕಾಏಕಿ ಹರ್ಷ ಹಾಗೂ ಅವರ ಸ್ನೇಹಿತರ ಜತೆ ಜಗಳ ಪ್ರಾರಂಭಿಸಿದ್ದಾರೆ. ಈ ವೇಳೆ ಒಬ್ಬಾತ, ಕೆಳಗೆ ಬಿದ್ದಿದ್ದ ಹರ್ಷ ಅವರ ಬೆನ್ನಿಗೆ ಇರಿದಿದ್ದಾನೆ. ಬಲವಾಗಿ ಚುಚ್ಚಿದ್ದರಿಂದ ಚಾಕು ಶ್ವಾಸಕೋಶವನ್ನು ಹಾನಿಗೊಳಿಸಿದೆ. ಚಿಕಿತ್ಸೆಗೆ ಸ್ಪಂದಿಸದ ಹರ್ಷ, ರಾತ್ರಿ 12 ಗಂಟೆಗೆ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದರು. ಗೊತ್ತೇ ಆಗಿರಲಿಲ್ಲ: ಗಲಾಟೆ ಸಮಯದಲ್ಲಿ ಎದುರಾಳಿ ಗುಂಪಿನವರು ತಮ್ಮ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ ಎಂಬ ಸಂಗತಿ ಹರ್ಷ ಅವರಿಗೆ ಗೊತ್ತಾಗಿದ್ದು ಒಂದು ಗಂಟೆಯ ನಂತರ! 'ಗಲಾಟೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸುತ್ತಿದ್ದಂತೆಯೇ ಆರೋಪಿಗಳು ಪರಾರಿಯಾದರು. ಆದರೆ, ಬೆನ್ನಿಗೆ ಇರಿದಿರುವ ವಿಷಯ ತಿಳಿಯದ ಹರ್ಷ, ಸ್ನೇಹಿತನ ಬೈಕ್‌ ಹತ್ತಿ ಪಿಇಎಸ್ ಕಾಲೇಜು, ಬ್ಯಾಂಕ್‌ ಕಾಲೊನಿ, ಬನಶಂಕರಿ 1ನೇ ಹಂತ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಒಂದು ತಾಸು ಸುತ್ತಾಡಿದ್ದರು' ಎಂದು ತನಿಖಾಧಿಕಾರಿಗಳು ತಿಳಿಸಿದರು. 'ಮಧ್ಯಾಹ್ನ 2.30ರ ಸುಮಾರಿಗೆ ವಾಪಸ್ ಕಾಲೇಜಿನ ಬಳಿ ಬಂದಾಗ, ಇನ್ನೊಬ್ಬ ಸ್ನೇಹಿತ ಹರ್ಷ ಅವರ ಅಂಗಿ ರಕ್ತಸಿಕ್ತವಾಗಿರುವುದನ್ನು ಕಂಡಿದ್ದಾರೆ. ಆತ ಹೇಳಿದ ಬಳಿಕ ಹರ್ಷ ಅಂಗಿ ಕಳಚಿ ನೋಡಿದಾಗ ದೊಡ್ಡ ಪ್ರಮಾಣದ ಗಾಯವಾಗಿರುವುದು ಗೊತ್ತಾಗಿದೆ. ಕೂಡಲೇ ಅವರು ಸ್ನೇಹಿತರ ಜತೆ ಹನುಮಂತನಗರ 50ಅಡಿ ರಸ್ತೆಯ ಗಣಪತಿ ಕ್ಲಿನಿಕ್‌ಗೆ ಹೋಗಿದ್ದಾರೆ. ಈ ಹಂತದಲ್ಲಿ ಸ್ನೇಹಿತರು ಹರ್ಷ ತಂದೆ ಜಗದೀಶ್ ಅವರಿಗೆ ಕರೆ ಮಾಡಿ ಹೇಳಿದ್ದಾರೆ. 'ಕ್ಲಿನಿಕ್‌ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಮಧ್ಯಾಹ್ನ 3 ಗಂಟೆಗೆ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಸಂಜೆ ಜಯದೇವ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಶ್ವಾಸಕೋಶಕ್ಕೂ ಹಾನಿಯಾಗಿದ್ದು ಬದುಕುವ ಸಾಧ್ಯತೆ ಕಡಿಮೆ ಎಂದಿದ್ದಾರೆ. 'ಆ ನಂತರ ಜಗದೀಶ್, ರಾತ್ರಿ 11.30ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ಮುಟ್ಟಿಸಿದ್ದಾರೆ. ಹೇಳಿಕೆ ದಾಖಲಿಸಿಕೊಳ್ಳಲು ಆಸ್ಪತ್ರೆ ಬಳಿ ತೆರಳುವಷ್ಟರಲ್ಲಿ ಹರ್ಷ ಕೊನೆಯುಸಿರೆಳೆದಿದ್ದಾರೆ. ಹಂತಕರ ಪತ್ತೆಗೆ ಮೂವರು ಇನ್‌ಸ್ಪೆಕ್ಟರ್‌ಗಳ ವಿಶೇಷ ತಂಡಗಳು ರಚನೆಯಾಗಿವೆ' ಎಂದುತನಿಖಾಧಿಖಾರಿಗಳು ಹೇಳಿದರು. ತಂದೆ ಚಪಾತಿ ವ್ಯಾಪಾರಿ: ಹರ್ಷ, ಜಗದೀಶ್ ಹಾಗೂ ಲಕ್ಷ್ಮಿ ದಂಪತಿಯ ಹಿರಿಯ ಮಗ. ಈ ಕುಟುಂಬ ಶ್ರೀನಗರ ಸಮೀಪದ ಕಾಳಿದಾಸ ಲೇಔಟ್‌ನಲ್ಲಿ ನೆಲೆಸಿದೆ. ಶ್ರೀನಗರ 58ನೇ ಅಡ್ಡರಸ್ತೆಯಲ್ಲಿ ಮಳಿಗೆ ಹೊಂದಿರುವ ಜಗದೀಶ್, ಚಪಾತಿ ತಯಾರಿಸಿ ನಗರದ ಹೋಟೆಲ್‌ಗಳಿಗೆ ಸರಬರಾಜು ಮಾಡುತ್ತಾರೆ. ತರಗತಿಗೆ ಹಾಜರಾಗಿರಲಿಲ್ಲ 'ಮಧ್ಯಂತರ ರಜೆ ಮುಗಿದು ಡಿಸೆಂಬರ್ ಮೊದಲ ವಾರದಲ್ಲಿ ತರಗತಿಗಳು ಪುನರಾರಂಭವಾಗಿದ್ದವು. ಆದರೆ, ರಜೆ ಬಳಿಕ ಹರ್ಷ ತರಗತಿಗೆ ಹಾಜರಾಗಿರಲಿಲ್ಲ' ಎಂದು ಕಾಲೇಜು ಆಡಳಿತ ಮಂಡಳಿಯವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. 'ಹಾಜರಾತಿ ಕಡಿಮೆ ಇರುವುದರಿಂದ ದಂಡ ಕಟ್ಟಬೇಕು ಎಂದು ಹೇಳಿದ್ದ ಮಗ, ಬೆಳಿಗ್ಗೆ ಹಣ ಪಡೆದುಕೊಂಡು ಕಾಲೇಜಿಗೆ ತೆರಳಿದ್ದ' ಎಂದು ಮೃತರ ಪೋಷಕರು ಹೇಳಿಕೆ ಕೊಟ್ಟಿದ್ದಾಗಿ ಹಿರಿಯ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು. ಎರಡು ಗಲಾಟೆಗಳು '4 ದಿನಗಳ ಹಿಂದೆ ಬ್ಯಾಟರಾಯನಪುರದ ಮೈದಾನವೊಂದರಲ್ಲಿ ಕ್ರಿಕೆಟ್ ಆಡುವಾಗ ಹರ್ಷ ಸ್ಥಳೀಯ ಹುಡುಗರ ಜತೆ ಗಲಾಟೆ ಮಾಡಿಕೊಂಡಿದ್ದರು. ಎರಡು ದಿನಗಳ ಹಿಂದೆ ಜಯನಗರದ ಸೌತ್‌ ಎಂಡ್‌ ವೃತ್ತದಲ್ಲೂ ಕೆಲ ಯುವಕರ ಜತೆ ಜಗಳವಾಡಿದ್ದರು. ಅನುಮಾನದ ಮೇಲೆ ಆ ಹುಡುಗರನ್ನು ವಿಚಾರಣೆ ನಡೆಸಲಾಗುತ್ತಿದೆ. ಘಟನೆ ನಡೆದಾಗ ಹರ್ಷ ಅವರ ಜತೆಗಿದ್ದ ಸ್ನೇಹಿತರಿಂದಲೂ ಹೇಳಿಕೆ ಪಡೆಯಲಾಗುತ್ತಿದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
2021/02/25 05:27:45
https://www.kannadigaworld.com/kannada/karnataka-kn/297813.html
mC4
ವಿಎಂಸಿಟಿ ಶಿರೂರು ತಂಡಕ್ಕೆ ಮೇಸ್ತ ಟ್ರೋಫಿ-2013 - ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು ವಿಎಂಸಿಟಿ ಶಿರೂರು ತಂಡಕ್ಕೆ ಮೇಸ್ತ ಟ್ರೋಫಿ-2013 ಗಂಗೊಳ್ಳಿ: ಶ್ರೀ ಸುಬ್ರಹ್ಮಣ್ಯೇಶ್ವರ ಯೂಥ್ ಕ್ಲಬ್ ಬೆಣ್ಣೆಗೆರೆ ಇವರ ಆಶ್ರಯದಲ್ಲಿ ದಿ. ಗಿರೀಶ್ ಮೇಸ್ತ ಸ್ಮರಣಾರ್ಥ ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಆಹ್ವಾನಿತ ತಂಡಗಳ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿರೂರಿನ ವಿಎಂಸಿಟಿ ತಂಡ ಪ್ರಥಮ ಸ್ಥಾನ ಪಡೆದು ಮೇಸ್ತ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಜಯ್ ಶಿರೂರು ತಂಡ ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಉಪಾಂತ್ಯ ಪಂದ್ಯಗಳಲ್ಲಿ ವಿಎಂಸಿಟಿ ತಂಡ ಬೆಣ್ಣೆಗೆರೆಯ ಶ್ರೀ ಸುಬ್ರಹ್ಮಣ್ಯೇಶ್ವರ ತಂಡವನ್ನು ಮತ್ತು ಜಯ ಶಿರೂರು ತಂಡ ಎಸ್‌ಎಸ್ಸಿಟಿ ಶಿರೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಂಗೊಳ್ಳಿಯ ಮತ್ಸ್ಯೋದ್ಯಮಿ ರಮೇಶ ಕುಂದರ್ ಕೋಟ ವಹಿಸಿದ್ದರು. ಗಂಗೊಳ್ಳಿ ಟೌನ್ ಸೌಹಾರ್ಧ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್, ಉದ್ಯಮಿ ಉಮೇಶ ಮೇಸ್ತ, ಗುಜ್ಜಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ಮೇಸ್ತ, ಬೆಣ್ಣೆಗೆರೆ ಶ್ರೀ ನಾಗ ದೇವಸ್ಥಾನದ ಅಧ್ಯಕ್ಷ ವಿಷ್ಣುಮೂರ್ತಿ ಮೇಸ್ತ, ಸಂಘದ ಅಧ್ಯಕ್ಷ ವೆಂಕಟೇಶ ಮೇಸ್ತ, ಕಾರ್ಯದರ್ಶಿ ಶ್ರೀನಿವಾಸ ಮೇಸ್ತ ಮೊದಲಾದವರು ಉಪಸ್ಥಿತರಿದ್ದರು. ಪಂದ್ಯಾಟವನ್ನು ಗಂಗೊಳ್ಳಿ ಪಸರ್‌ನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ಶೇಖರ ಸೂತ್ರಬೆಟ್ಟು ಉದ್ಘಾಟಿಸಿದ್ದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುರೇಂದ್ರ ಖಾವರ್ ಶುಭ ಹಾರೈಸಿದರು. 2 ದಿನಗಳ ಕಾಲ ನಡೆದ ಈ ಪಂದ್ಯಾಟದಲ್ಲಿ ರಾಜ್ಯ ಮಟ್ಟದ 23 ತಂಡಗಳು ಭಾಗವಹಿದ್ದವು.
2022/01/20 07:39:04
http://crime.kundapra.in/2013/02/Cricket-Gamgolli.html
mC4
ಲೇಖನಗಳು – ಅನಿವಾಸಿ – ಯು.ಕೆ ಕನ್ನಡಿಗರ ತಂಗುದಾಣ Quote February 25, 2022 February 25, 2022 Gouri Prasanna7 Comments ನಲುಮೆಯ ಓದುಗರೇ ನಮಸ್ಕಾರ. 'ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ಈಯವನಿಯೊಲೆಯೊಳೆಮ್ಮಯ ಬಾಳ- ನಟ್ಟು ವಿಧಿ ಬಾಯ ಚಪ್ಪರಿಸುವನು ಮಂಕುತಿಮ್ಮ|' ಎನ್ನುತ್ತಾರೆ ತಿಮ್ಮಗುರು ಡಿ.ವಿ.ಜಿ. ನಿತ್ಯ ನಿರಂತರತೆ, ಸದೈವ ಜೀವಂತತೆ ಬದುಕಿನ ಲಕ್ಷಣ. ಎಂದೂ, ಎಲ್ಲೂ , ಯಾವ ಪ್ರಸಂಗದಲ್ಲೂ ಬದುಕ ಬಂಡಿ ನಿಲ್ಲುವುದಿಲ್ಲ; ಚಲಿಸುತ್ತಲೇ ಇರುತ್ತದೆ..ಏರು-ತಗ್ಗಿನಲಿ, ಕಾಣದಿಹ ಅನಂತ ತಿರುವುಗಳಲ್ಲಿ, ಬಿಸಿಲು-ಮಳೆಗಳಲ್ಲಿ, ವಸಂತ-ಗ್ರೀಷ್ಮಗಳಲ್ಲಿ..ನಾವಿದ್ದರೂ..ಇಲ್ಲದಿದ್ದರೂ 'ಬದುಕು ಸೂಜಿದಾರದಂತೆ.ಒಂದು ಕಡೆ ಚುಚ್ಚುತ್ತ ಹಿಂದೆಯೇ ಹೊಲೆಯುತ್ತ ಹೋಗುತ್ತದೆ ಸಾರ್' ಎನ್ನುತ್ತಾನೆ ನಮ್ಮ ಕೆ.ನಲ್ಲತಂಬಿಯವರ ಕೋಶಿ'ಸ್ ಕವಿತೆಗಳ […] ವಿಶ್ವಭಾರತಿಗೆ ಕನ್ನಡದಾರತಿ..ಚನ್ನವೀರ ಕಣವಿಯವರಿಗೆ ಅನಿವಾಸಿಯ ಭಾವಾಂಜಲಿ February 18, 2022 February 18, 2022 Gouri Prasanna8 Comments 'ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯಸಂಸ್ಕಾರಿ'... ಎಲ್ಲಾ ಶಾಲಾ-ಕಾಲೇಜುಗಳ ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ಹಾಡು ಸ್ವಾಗತ ಗೀತೆಯಾಗಿಯೋ, ಪ್ರಾರ್ಥನಾ ಗೀತೆಯಾಗಿಯೋ ಅನುರಣಿಸಲೇಬೇಕಿತ್ತು ಆಗ. ಅಂತೆಯೇ 'ನನ್ನ ದೇಶ ನನ್ನ ಜನ ನನ್ನ ಮಾನಪ್ರಾಣಧನ ತೀರಿಸುವನೇ ಅದರ ಋಣ ಈ ಒಂದೇ ಜನ್ಮದಿ' ಎನ್ನುವ ಆಕಾಶವಾಣಿಯ ವಂದನಾದ ಕೊನೆಯ ದೇಶಭಕ್ತಿ ಗೀತೆಯೊಂದಿಗೇ ನಮ್ಮ ಹೆಚ್ಚಿನ ಬೆಳಗುಗಳು ಆರಂಭವಾಗುತ್ತಿದ್ದವು. ಕವಿಯ ಬಗ್ಗೆ ಏನೇನೂ ಗೊತ್ತಿಲ್ಲದಾಗಲೂ ಅವರ ಕವನಗಳು ಹೀಗೆ ಹಾಡಾಗಿ ಹರಿದು ಸಾಮಾನ್ಯರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿ ಬಿಡುವುದೇ ಆ ಕಾವ್ಯದ ಗೆಲುವು. ಸಾರ್ಥಕ ತುಂಬು ಜೀವನ ನಡೆಸಿದ ಚೆಂಬೆಳಕಿನ ಕವಿಚೇತನ ಮಹಾಬೆಳಗಿನಲಿ ವಿಲೀನವಾಗಿದೆ. ಆದರೆ ಅರವತ್ತೆಂಟು ವರುಷ ಜೊತೆಯಾಗಿ ದಾಂಪತ್ಯ ರಥವನ್ನೆಳೆದ ತಮ್ಮ ಪತ್ನೀವಿಯೋಗದ ಸಂದರ್ಭ ದಲ್ಲಿ ಅವರೇ ಹೇಳಿದ ಮಾತಿನಂತೆ ಹೇಳುವುದಾದರೆ –'ಇಲ್ಲಿದ್ರು..ಇಲ್ಲೇ ಇದ್ರು..ಈಗ – ಎಲ್ಲಾ ಕಡೆ ಅದಾರ. ಇದ್ದಾಗ ಇರುವು ಇಲ್ಲಷ್ಟೇ ಇತ್ತು. ಈಗ ಸರ್ವವ್ಯಾಪಿ ಆದ್ರು. ಥೇಟ್ ಚೆಂಬೆಳಕಿನ್ಹಂಗ..' ಸಮನ್ವಯ ಕವಿಯೆಂದೇ ಖ್ಯಾತರಾದ ಕಣವಿಯವರು ಕನ್ನಡದಲ್ಲಿ ಸಮೃದ್ಧವಾದ ಕಾವ್ಯಪರಂಪರೆಯನ್ನು ನಿರ್ಮಿಸಿದವರು.ಮೃದು ಮಾತಿನ ಆದರೆ ಖಚಿತ ನಿಲುವಿನ ಸಜ್ಜನಿಕೆಯ ಕವಿಯವರು. ಧಾರವಾಡದ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲಿನ ಅವರ ಉಪಸ್ಥಿತಿ ನನಗೆ ಶಾಂತವಾಗಿ,ಸದ್ದಿಲ್ಲದೇ ಬೆಳಗುವ ನಂದಾದೀಪದಂತೆ ಕಂಡದ್ದಿದೆ. ಕಣವಿಯವರ ಕಾವ್ಯ ಮುಂಗಾರಿನ ಮಳೆಯ ಆರ್ಭಟದಂತೆಯೋ, ಶ್ರಾವಣದ ಮುಸಲಧಾರೆಯಂತೆಯೋ ಅಬ್ಬರದ್ದಲ್ಲ;ಇದ್ದೂ ಇಲ್ಲದಂತೆ ಶೃತಿ ಹಿಡಿದು ಸುರಿದು ನೆಲವ ಹದಗೊಳಿಸಿ, ಮನವ ಮುದಗೊಳಿಸುವ ಮುಂಜಾವಿನ ಸೋನೆಮಳೆ.. 'ಬಾನ ಸಾಣಿಗೆ ಹಿಟ್ಟು ಸಣಿಸಿದಂತೆ' ಜಿನುಗಿದ ಸೋನೆ. ಕವಿವರ್ಯರ ಪ್ರಸಿದ್ಧ ಗೀತೆ 'ಹೂವು ಹೊರಳುವವು ಸೂರ್ಯನ ಕಡೆಗೆ' ಇದರ ಬಗ್ಗೆ ಅರ್ಥಪೂರ್ಣ ಲೇಖನವನ್ನು ನಮ್ಮ ಆಹ್ವಾನದ ಮೇರೆಗೆ ಅತಿ ಕಡಿಮೆ ವೇಳೆಯಲ್ಲಿ ಸರೋಜಿನಿ ಪಡಸಲಗಿಯವರು ಬರೆದು ಕಳಿಸಿದ್ದು ಅವರ ಕವಿ-ಕಾವ್ಯ ಪ್ರೇಮವನ್ನೂ, ಅನಿವಾಸಿಯ ಬಗೆಗಿನ ಅಭಿಮಾನವನ್ನೂ ಎತ್ತಿ ತೋರಿಸುತ್ತದೆ. ತಮ್ಮ ಶೃತಿಬದ್ಧವಾದ ಇನಿದನಿಯಲ್ಲಿ 'ಒಂದು ಮುಂಜಾವಿನಲಿ' ಹಾಡುವುದರ ಮೂಲಕ ಕವಿಗೆ ಗೀತನಮನ ಸಲ್ಲಿಸಿದ್ದಾರೆ ಸುಮನಾ ಧ್ರುವ್ ಅವರು. ತಮ್ಮ ವಿದ್ಯಾರ್ಥಿದೆಸೆಯಲ್ಲಾದ ಕವಿವರ್ಯರ ಮುಖಾಮುಖಿ ಭೇಟಿಯ ಕುರಿತಾದ ಮಧುರ ನೆನಪುಗಳನ್ನು ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ ಶಿವ್ ಮೇಟಿ ಹಾಗೂ ಅಮಿತಾ ರವಿಕಿರಣ್ ಅವರು. ಕವಿಯ ಯಶೋಕಾಯಕ್ಕೆ ಕಾಲದ-ಹಂಗಿಲ್ಲ.ಅನಂತದವರೆಗೂ ವಿಶ್ವಭಾರತಿಗೆ ಕನ್ನಡದಾರತಿ ಬೆಳಗುತ್ತಲೇ ಇರುತ್ತದೆ; ಮಂಗಳ ಜಯಭೇರಿ ಮೊಳಗುತ್ತಲೇ ಇರುತ್ತದೆ. ಮುಟ್ಟಿದರೆ ಮಾಸುತಿಹ ಮಂಜಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯು ಬಿಂಬಿಸುತ್ತಲೇ ಇರುತ್ತದೆ. ಸೋನೆಮಳೆ ಸುರಿಸುರಿದು ನೆಲದೆದೆ ಹದಗೊಳ್ಳುತ್ತಲೇ ಇರುತ್ತದೆ. ಬನ್ನಿ ಓದುಗರೇ, ಇವತ್ತಿನ ಸಂಚಿಕೆಯನ್ನೋದಿ ಕವಿಗೊಂದು ಭಾವನಮನ ಸಲ್ಲಿಸಿ. ಧಾರವಾಡದವಳಾದ ನಾನೀಗ ಸಧ್ಯ ಬೆಂಗಳೂರು ವಾಸಿ. ಸಾಮಾನ್ಯ ಗೃಹಿಣಿ. ಚಿಕ್ಕಂದಿನಿಂದಲೂ ಹಾಡಿನ ಹುಚ್ಚು; ಸಂಯೋಜಿಸುವ, ಹಾಡುವ ಗುಂಗು.ಇದೇ ಕವಿತೆಗಳನ್ನು ಬರೆಯುವತ್ತ ಕೊಂಡೊಯ್ತು. ಓದುವ ಹವ್ಯಾಸವೂ ಹಾಗೇ. ಈಗ ಎರಡು ಕವನಸಂಕಲನ ಹೊರ ಬಂದಿವೆ. ವೈದ್ಯ ಪತ್ನಿಯ ಅನುಭವ ಕಥನ; ಸ್ವರಚಿತ ಸಂಪ್ರದಾಯದ ಹಾಡುಗಳು ತಾಯಿ-ಮಗು ಇವೆರಡೂ ಅಚ್ಚಿನಲ್ಲಿವೆ. ನಾನು ಅನಿವಾಸಿ ಅಲ್ಲದಿದ್ದರೂ ಅನಿವಾಸಿ ಮಗನ ತಾಯಿ ನಾನು. ಅದಕ್ಕೇ ಏನೋ ಈ ಅನಿವಾಸಿ ಬಳಗ ನನ್ನದೇ ಎಂಬ ಆತ್ಮೀಯ, ಆಪ್ತ ಭಾವ. ಚೆಂಬೆಳಕಿನ ಕವಿ - ಚೆಂಬೆಳಕಿನ ಕವಿತೆ- ನಾಲ್ಕು ಮಾತು "ನಾಡೋಜ, ಚೆಂಬೆಳಕಿನ ಕವಿ ಚೆನ್ನವೀರ ಕಣವಿಯವರು ಇನ್ನಿಲ್ಲ" . ಟಿವಿ ಯಲ್ಲಿ ಬಿತ್ತರವಾಗುತ್ತಿದ್ದ ಸುದ್ದಿ ಕೇಳುತ್ತಿದ್ದಂತೆಯೇ ನನಗೇ ಗೊತ್ತಿಲ್ಲದಂತೆ ಒಂದು ಗಳಿಗೆ ಹಾಗೇ ಸ್ತಬ್ಧವಾಗಿ ಬಿಟ್ಟೆ. ಈ ೯೩ ರ, ಜೀವನದ ಸಂಧ್ಯಾ ಕಾಲದಲ್ಲಿ ಕೋರೋನಾದ ಕರಾಳ ಬಂಧನದಲ್ಲಿ ಸಿಲುಕಿ , ನಲುಗುತ್ತಿರುವ ಆ ಜೀವ ಸೋತು ಹೋಗಿದ್ದರೂ , ಮತ್ತೆ ಚಿಗುರೀತೇನೋ ಮಾಗಿದ ಚೇತನ ಎಂಬ ಅರ್ಥವಿಲ್ಲದ ಆಸೆ ದೂರದಲ್ಲಿತ್ತು. ಈಗ ' ದೀಪ ಹೊತ್ತಿಸಿದ ದೀಪವೇ ನಂದಿ ಹೋಯ್ತಲ್ಲ' ಎಂಬ ದಿಗ್ಭ್ರಮೆ ! ಈಗಿದ್ದು ಮುಂದಿನ ಗಳಿಗೆಗೇ ಇಲ್ಲದಂತಾಗುವುದು ಜೀವವೊಂದೇ ಏನೋ ಎಂಬ ಹತಾಶೆ ಭರಿತ ವಿಷಾದದಲೆ ಸುಳಿದು ಹೋಗಿ , ಕಣ್ತುಂಬಿ ತುಳುಕಿ ಅದರಲ್ಲೇ ಆ ಮಗುವಿನ ಮನದ, ಮುಗ್ಧ ನಗೆಯ ಮೃದು ವ್ಯಕ್ತಿತ್ವ ಅದೇ ಶುಭ್ರ ನಗೆಯೊಡನೆ ತೇಲಿದ ಭಾಸ. ಒಣ ಕಠೋರತೆ, ಅಣುಕು ಮಾತುಗಳಿಂದ ಬಲು ದೂರ ಇದ್ದ ಆ ಭಾವಜೀವಿಯ ಎದೆ ತುಂಬಿದ ಕನಸುಗಳು ಅರಳಿ ಕವಿತೆಯಾಗಿ ಹರಿದ ಆ ಕೋಮಲ ಧಾರೆಯಲಿ ಮುಳುಗಿ ಹೋದೆ ನಾ, ಅವರ ಭೇಟಿಯಾದ ಗಳಿಗೆಯ ನೆನಪಿನೊಡನೆ! ಧಾರವಾಡದ ಕಲ್ಯಾಣ ನಗರದ ಅವರ ಮನೆಯ ಹೊಸ್ತಿಲನ್ನು ಅಳುಕುತ್ತಲೇ ತುಳಿದಾಗ ಅವರ ಆ ತುಟಿತುಂಬ ಹರಡಿದ ಮೃದು ಹಾಸ, ನೀಡಿದ ಮನದುಂಬಿದ ಸ್ವಾಗತ ," ಬಾ ಯವ್ವಾ ಬಾ ತಂಗಿ ಬಾ ಒಳಗ" ಅಂದ ಆ ಮೆತ್ತಗಿನ ಧ್ವನಿ ಇನ್ನೂ ಕಿವಿಯಲ್ಲಿ ಗುಂಜಿಸುತ್ತಿದೆ. ಆ ಒಂದು ಗಂಟೆಯಲ್ಲಿ ಎಷ್ಟೊಂದು ಮಾತಾಡಿದೆವು! ಆದರೆ ಅದರಲ್ಲಿ ನನ್ನ ತಲೆಗೆ ಎಷ್ಟು ಹೋಯ್ತೋ ಗೊತ್ತಿಲ್ಲ. ಅವರ ಕವಿತೆಯಂತೆ ಇರುವ ಆ ವ್ಯಕ್ತಿತ್ವದಲ್ಲಿ ಕರಗಿ ಹೋಗಿದ್ದೆ ನಾ! ಅಂತಹ ಧೀಮಂತ ಚೇತನ ಇನ್ನು ನಮ್ಮೊಡನಿಲ್ಲ. ಆದರೆ ಅವರ ಒಂದೊಂದು ಕವಿತೆ ಒಂದೊಂದು ಮಾತು ಹೇಳುತ್ತ ಚಿರಸ್ಥಾಯಿಯಾಗಿ ಉಳಿಯುವಂಥವೇ. ಆ ಕಾವ್ಯ- ಕವನಗಳೊಂದಿಗೆ ಅವರೂ ನಮ್ಮೊಡನೆಯೇ ಇದ್ದಾರೆ ಎಂಬ ಹುಚ್ಚು ಸಮಾಧಾನ." ಹೂವು ಹೊರಳುವವು ಸೂರ್ಯನ ಕಡೆಗೆ....." ಎಂದು ಅವರು ಹಾಡಿದಂತೆ ಆ ಸ್ವಚ್ಛ ಮನದ ಕವಿ ಆ ಶುಭ್ರತೆಯಲ್ಲೇ, ಆ ಬೆಳಕಿನಲ್ಲೇ ಒಂದಾಗಿ ಹೋಗಿದ್ದಾರೆ. ಅವರ ಈ ಕವಿತೆ ನನಗೆ ಅತ್ಯಂತ ಪ್ರಿಯವಾದ ಕವಿತೆ. ಅವರಿನ್ನಿಲ್ಲದ ಸುದ್ದಿ ಕೇಳಿದಾಗಿನಿಂದ ಎಷ್ಟು ಸಲ ಆ ಹಾಡು ರತ್ನಮಾಲಾ ಪ್ರಕಾಶ ಅವರ ಧ್ವನಿಯಲ್ಲಿ ಕೇಳಿದೀನೋ ನನಗೇ ಗೊತ್ತಿಲ್ಲ! ಮತ್ತೊಮ್ಮೆ ಹುಟ್ಟಿ ಬಾ ಅನ್ನುವುದು ಅದೆಷ್ಟು ವಾಸ್ತವಿಕ ಗೊತ್ತಿಲ್ಲ. ಈಗ ನಮ್ಮ ಕೈಲಿರುವುದು ಅವರ ನೆನಪಲ್ಲಿ ನಾಲ್ಕು ಹನಿ ಕಣ್ಣೀರು ಸುರಿಸುವ ಅಸಹಾಯಕತೆ ಒಂದೇ. ನಾನೀಗ ಅವರ ಈ ಕವಿತೆಯ ಕುರಿತು ನನಗೆ ತಿಳಿದ ಹಾಗೆ ಬರೆದ ನಾಲ್ಕು ಮಾತುಗಳೇ ಚೆಂಬೆಳಕಿನ ಕವಿಗೆ ನನ್ನ ಶ್ರದ್ಧಾಂಜಲಿ ! ಹೂವು ಹೊರಳುವವು ಸೂರ್ಯನ ಕಡೆಗೆ.. ನಮ್ಮ ದಾರಿ ಬರಿ ಚಂದ್ರನ ವರೆಗೆ ಇರುಳಿನ ಒಡಲಿಗೆ ದೂರದ ಕಡಲಿಗೆ ಮುಳುಗಿದಂತೆ, ದಿನ ಬೆಳಗಿದಂತೆ ಹೊರ ಬರುವನು ಕೂಸಿನ ಹಾಗೆ ಜಗದ ಮೂಸೆಯಲಿ ಕರಗಿಸಿ ಬಿಡುವನು ಎಲ್ಲ ಬಗೆಯ ಸರಕು ಅದಕೆ ಅದರ ಗುಣ ದೋಷಗಳಂಟಿಸಿ ಬಿಡಿಸಿ ಬಿಟ್ಟ ತೊಡಕು ಗಿಡದಿಂದುರುವ ಎಲೆಗಳಿಗೂ ಮುದ ಚಿಗುರುವಾಗಲೂ ಒಂದೆ ಹದ ನೆಲದ ಒಡಲಿನೊಳಗೇನು ನಡೆವುದೋ ಎಲ್ಲಿ ಕುಳಿತಿಹನೋ ಕಲಾವಿದ ಬಿಸಿಲ ಧಗೆಯ ಬಸಿರಿಂದಲೇ ಸುಳಿವುದು ಮೆಲು ತಂಗಾಳಿಯು ಬಳಿಗೆ ಸಹಿಸಿಕೊಂಡ ಸಂಕಟವನು ಸೋಸಲು ಬಂದೇ ಬರುವುದು ಗಳಿಗೆ ಸಹಜ ನಡೆದರೂ ಭೂಮಿಯ ಲಯದಲಿ ಪದಗಳನಿರಿಸಿದ ಹಾಗೆ ವಿಶ್ವದ ರಚನೆಯ ಹೊಳಹಿನಲ್ಲಿ ನಾಲ್ಕು ಮಾತುಗಳು ಕವಿತೆ ನನಗನಿಸಿದಂತೆ - ನಾಡೋಜ ಕವಿ ಚೆನ್ನವೀರ ಕಣವಿಯವರ ಈ ಕವಿತೆ " ಹೂವು ಹೊರಳುವವು ಸೂರ್ಯನ ಕಡೆಗೆ....." ಹಾಗೇ ಓದಿ, ಆಲಿಸಿದ್ರೆ ಒಂದು ಸರಳ , ಸುಂದರ ಭಾವಗೀತೆ ಅನ್ನಿಸಿದ್ರೂ ಬಗೆದಷ್ಟು ಗೂಢಾರ್ಥ ಅದರೊಡಲಲ್ಲಿ ಅಂತ ನನಗನ್ನಿಸ್ತು. ಹೂವು ಇಲ್ಲಿ ಸುಂದರ, ಸರಳ, ಸ್ವಚ್ಛ ಮನದ ಪ್ರತೀಕ. ಅಂತೆಯೇ ಸಹಜವಾಗಿಯೇ ಅವು ಸೂರ್ಯನ ಅಂದರೆ ತಮದ ಲವಲೇಶವೂ ಇಲ್ಲದ, ಶುಭ್ರ, ಸ್ವಚ್ಛ ಪ್ರಕಾಶದ, ಅರಿವಿನ ದ್ಯೋತಕ; ಅತ್ತ ಹೊರಳಬಲ್ಲವು , ಆ ಬೆಳಕು ಪ್ರಖರವಾಗಿದ್ದರೂ. ಆದರೆ ನಾವು ಮನುಷ್ಯರು ; ಮಾನವ ಸಹಜ ದುರ್ಬಲತೆ ನಮ್ಮಲ್ಲಿ. ಮಾಯಾ, ಮೋಹ, ಅಹಂ ದ ಗಾಢ ಕತ್ತಲು, ತುಮುಲದಲ್ಲಿ ಮುಳುಗಿರುವ ನಾವು ಅದನ್ನು ಜೀರ್ಣಿಸಿಕೊಳ್ಳುವ ತಾಕತ್ತೂ ಇಲ್ಲದವರು. ನಮ್ಮ ದಾರಿ ಬರಿ ಚಂದ್ರನ ವರೆಗಷ್ಟೇ; ಸೂರ್ಯನ ಪ್ರತಿಫಲಿತ ಬೆಳಕಿನ ಚಂದ್ರನ ವರೆಗಷ್ಟೇ . ಆ ಜ್ವಾಜ್ವಲ್ಯಮಾನ ಬೆಳಕಿನೆಡೆ ಕಣ್ಣೆತ್ತಿ ನೋಡಲೂ ಆಗದಷ್ಟು ಆಳವಾಗಿ ಹುದುಲಿನಲ್ಲಿ ಸಿಲುಕಿದವರು. ಆ ಇರುಳಿನ ಒಡಲಿಂದ ಸಾಗಿ ಬೆಳಕಿನೆಡೆ ಸಾಗಲು ಸೇತುವೆಯಂತಿರುವ ಈ ಜೀವನದ ಕಡಲಿನಲ್ಲೇ ಮುಳುಗಿ ಅಲ್ಲೇ ಎಲ್ಲಾ ದುರ್ಬಲತೆ, ಜಂಜಾಟಗಳನ್ನೆಲ್ಲ ಕಳಚಿ ಎದ್ದು ನಿಷ್ಕಲ್ಮಶ ಮನಸಿನ ಕೂಸಿನಂತೆ ಹೊರಬಂದರೆ ಸೂರ್ಯನತ್ತ ಹೊರಳುವ ಯೋಗ್ಯತೆ ಬಂದೀತೋ ಏನೋ ಅಂತ. ಸೂರ್ಯನು ದಿನವೂ ಇರುಳಿನೊಡಲಲ್ಲಿ ಮುಳುಗಿ, ಕಡಲಿನಿಂದ ಬೆಳಗುತ್ತ ಕೂಸಿನ ಹಾಗೆ ಶುಭ್ರವಾಗಿ ಹೊರಬಂದು ಇದನ್ನೇ ಹೇಳ್ತಾ ಇದಾನೆ ಅಂತ ಕವಿ ಸೂಚ್ಯವಾಗಿ ಹೇಳಿದ್ದಾರೆ ಇಲ್ಲಿ. ನಿಜಕ್ಕೂ ಇದೊಂದು ಅನುಪಮ ಪ್ರತಿಮೆ.ಮಾನವನೂ ಸೂರ್ಯ ದಿನ ಬೆಳಗಿದ ಹಾಗೆ ಬೆಳಗುತ್ತ ಅಂದರೆ ತುಸು ತುಸುವಾಗಿ ತಿಳಿವು ವಿಕಸಿಸಿ, ಸ್ವಚ್ಛ ಮನದ ಬೆಳಕಲಿ ಹೊಳೆಯುತ್ತ ಕೂಸಿನ ಹಾಗೆ ಶುಭ್ರವಾಗಿ ಹೊರಬರಲಿ ಕಡಲ ಮಡಿಲಿಂದ ಥೇಟ್ ಆ ನೇಸರ ಬಂದ ಹಾಗೆ ಎಂಬುದು ಕವಿಯ ಆಶಯ. ಎರಡನೇ ಚರಣದಲ್ಲಿ ಇದನ್ನೇ ಮುಂದುವರಿಸುತ್ತ ಕವಿ ಹೇಳ್ತಾರೆ - ಯಾರು ಹೇಗೇ ಬಂದರೂ, ಅವರ ಯಾವ ಗುಣಾವ ಗುಣಗಳನ್ನು ಗಣನೆಗೆ ತಾರದೇ ಅವರವರ ಯೋಗ್ಯತೆಗೆ ತಕ್ಕಂತೆ ಈ ಜಗದ ದಿನ ನಿತ್ಯದ ಬದುಕಿನಲ್ಲಿ ಮುಳುಗಿಸಿ ಬಿಡ್ತಾನೆ ಆತ. ಹಾಗೇ ಆ ಒಂದೇ ಮೂಸೆಯಲ್ಲಿಯೇ ಅಕ್ಕಸಾಲಿಗನಂತೆ ಕರಗಿಸಿ ಮಸೆಸಿ ಬಿಟ್ಟು, ಒರೆಗ್ಹಚ್ಚಿ ಶುದ್ಧೀಕರಿಸುವದೊಂದೇ ಆತನ ಕೆಲಸ. ಆದರೆ ಒಂದೇ ಬಾರಿಗೆ ಆಗುವುದಲ್ಲ ಅದು. ಅವರವರ ಒಳಿತು ಕೆಡುಕುಗಳ ಕರ್ಮದ ಗಂಟು ಅವರ ಬೆನ್ನಿಗೇ. ಅಲ್ಲಿ ಯಾವ ಏಚು ಪೇಚಿಲ್ಲ; ತೊಡಕು ತೊಡರಿಲ್ಲ. ಬಲು ಸ್ಪಷ್ಟ ಆ ಲೆಕ್ಕ. ಇನ್ನು ಈ ಕರಗಿಸಿ ಶುದ್ಧೀಕರಿಸಿದ್ದು ಎಷ್ಟರ ಮಟ್ಟಿಗೆ ಫಲ ಕೊಟ್ಟಿದೆ ಎಂಬುದನ್ನು ಮೂರನೇ ಚರಣದಲ್ಲಿ ಹೇಳ್ತಾರೆ ಕವಿ. ಗಿಡದಿಂದ ಉದುರುವ ಎಲೆಗೂ ಒಂದು ಮುದ ಇದೆ ಅಂತ. ನಿಜ; ಮಾಗಿದ ಮನದ ಪ್ರತೀಕ ಅದು. ಮನ ಮಾಗಿ ಪಕ್ವವಾಗಿ ತೊಟ್ಟು ಕಳಚಿ ಗಿಡದಿಂದ ಉದುರುವ ಎಲೆಯಂತಾಗಿದ್ರೂ ಆ ಹಣ್ಣಾದ ಮನದಲ್ಲಿ ಏನೋ ಒಂದು ನಿರಾಳ, ನಿವಾಂತ ಭಾವ. ಯಾವ ಗೊಂದಲದ ಗೋಜಿಲ್ಲದೇ, ತಿಳಿವು ಅರಿವಿನ ಹುಡುಕಾಟದಿ ನಲುಗದ ಸ್ಥಿತಿ ಅದು; ಸ್ಥಿತಪ್ರಜ್ಞನ ಹಾಗೆ. ತಾ ಏನು, ತನ್ನ ದಾರಿ ಎತ್ತ ಎಂಬುದರ ಕಲ್ಪನೆ ನಿಚ್ಚಳವಾಗಿದೆ ಈಗ ಆ‌ ಜೀವಕೆ. ಅದಕ್ಕೇ ಹೊಸ ಚಿಗುರಿನ ಹದದಂತೆಯೇ ಆ ಮನವೀಗ. ಷೇಕ್ಸ್ ಪಿಯರ್ ನ ಕವಿತೆಯ ನೆನಪು ಬಾರದಿರದೀಗ; ಶಿಶುವಾಗಿ ಆಗಮಿಸಿ ಶಿಶುವಿನಂತೆ ನಿರ್ಗಮನ. ನಿರ್ಗಮನ ಆದ ಹಣ್ಣೆಲೆ ಭೂಮಿ ಒಡಲು ಸೇರಿ ಮತ್ತೆ ಚಿಗುರೊಡೆಯುವುದೂ ಅಲ್ಲಿಂದಲೇ. ಆ ಹಂತದಲ್ಲಿ ಅಲ್ಲಿ ಏನು ನಡೀತದೋ ಗೊತ್ತಿಲ್ಲ, ಆಗುವುದೂ ಇಲ್ಲ. ಇದು ಜನನ- ಮರಣ - ಜನನ ಈ ಚಕ್ರದ ಸೂಚಕ. ಆ ಕಲಾವಿದ ಮತ್ತೆ ಅವುಗಳ ಗುಣದೋಷಗಳನು ಅಂಟಿಸಿ ಕಳಿಸಬೇಕಲ್ಲ ರೂಪಿಸಿ! ಒಂದು ಹದದ ಲೆಕ್ಕ, ಅಳತೆಗೋಲು ಇಟ್ಟುಕೊಂಡೇ ಇರ್ತಾನೆ ಆ ಕಲಾವಿದ- ಅದೇ ಸೃಷ್ಟಿಕರ್ತ, ಯಾರ ಅಳಿವಿಗೂ ನಿಲುಕದವನಾತ ಎಂದು ಹೇಳ್ತಿದ್ದಾರೆ ಕವಿ. ಈಗ ನಾಲ್ಕನೇ ಚರಣದಲ್ಲಿ ಕವಿ ಸಂತೈಸ್ತಿದಾರೆ ಆ ಜೀವಗಳನ, ಗುಣದೋಷಗಳ ಮೂಟೆ ಹೊತ್ತು ತಿರುಗುವ ಜೀವಗಳನ. ಈ ಹೆಣಗಾಟದ ಮಧ್ಯೆಯೂ ಒಂದು ಸುಂದರ ಗಳಿಗೆ ಬಂದೇ ಬರತದೆ.ಸಾಗಿ ಬಂದ ದಾರಿಯ ಹಿಂದಿರುಗಿ ನೋಡಿ , ತನ್ನನ್ನೇ ತಾ ಮಥಿಸಿ ಸೋಸಿ ನೋಡಿದಾಗ ವಿಷಯ ನಿಚ್ಚಳವಾಗಿ ಗೋಚರಿಸಿ ಒಂದು ನಿರಾಳತೆ ಮನದಲ್ಲಿ. ಇದೇ ಆ ಹೆಣಗಾಟದ ಗರ್ಭದಲ್ಲಿಯೇ ಇರುವ ತಂಪೆರೆವ ಹಾಯಿಯ ನೆರಳಿನೆಳೆ. ಇದನ್ನು ಗುರುತಿಸುವ ಗಳಿಗೆ ಬಂದೇ ಬರುತ್ತದೆ ಎಂಬುದು ಕವಿಯ ಧೃಡ ನಂಬಿಕೆ. ಇಲ್ಲಿ ಬಿಸಿಲಿನ ಧಗೆ ಜೀವನ ಪರ್ಯಂತದ ಜಂಜಾಟ, ಗುದ್ದಾಟವೇ; ಮಾಗುವಿಕೆ ಬರೋ ತನಕ. ನಂತರ ಬರುವುದು ಮೆಲು ತಂಗಾಳಿಯ ಅಲೆ. ನಿಧಾನವಾಗಿ ಬರೋದದು. ಆ ಹಣ್ಣೆಲೆಗೆ ಮುದ ನೀಡುವುದೂ ಇದೇ. ಇದನ್ನೆಲ್ಲ ನೋಡಿ ಕವಿಗೆ ಎಲ್ಲ ಅಂಶಗಳ ನಡೆ, ಚಲನೆಯಲ್ಲೂ ಒಂದು ಲಯಬದ್ಧತೆ, ಕ್ರಮ ಬದ್ಧತೆ ಎದ್ದು ಕಾಣುತ್ತದೆ. ಸೃಷ್ಟಿಯ ಪ್ರತಿ ಅಣು , ಪ್ರತಿ ಕಣವನ್ನೂ ವ್ಯವಸ್ಥಿತವಾಗಿ, ಸರಿಯುತ್ತಿರುವ ಸಮಯದ ಚಲನೆಯಲ್ಲೂ, ಭೂಮಿಯು ಸಾಗುವ ಗತಿಯಲ್ಲೂ ಆಚೀಚೆ ಅಲುಗಾಡದಂತೆ , ಅದರದರದೇ ಸ್ಥಳದಲ್ಲೇ ಜೋಡಿಸಿರುವುದರಲ್ಲೂ ಒಂದು ಸೌಂದರ್ಯ ಕಾಣ್ತಿದೆ , ಕವಿತೆಯ ಲಯಬದ್ಧ ಪದ ಜೋಡಣೆಯಲ್ಲಿರುವ ಹಾಗೆ. ಅದಕ್ಕೇ ಕವಿಗೆ ಈ ಜೀವನವೇ ಒಂದು ಕವಿತೆ ಅನಿಸಿ ಬಿಟ್ಟು, ಅದು ಈ ಜಗದ ಮೊಳಹಿನಲ್ಲಿಯೇ ಅಂದರೆ ಜೀವನದ ಉಗಮದಲ್ಲಿಯೇ ರೂಪ ತಾಳಿ ಬಿಟ್ತು ಅಂತ ಹೇಳ್ತಾರೆ. ಹೀಗೆ ಜೀವನದ ಸಾರವನ್ನು ಪೂರ್ತಿಯಾಗಿ ಹೇಳಿ ಅದನ್ನು ಕವಿತೆ ಎನ್ನುವುದು ಅನುಪಮ ಹೇಳಿಕೆ.ಜೀವನವೇ ಕವಿತೆ ಎನ್ನುವುದು ನಿಜಕ್ಕೂ ಅಪ್ರತಿಮ ಪ್ರತಿಮೆ. ಒಟ್ಟಿನಲ್ಲಿ ಈ ಛಂದದ ಕವಿತೆ ಮನದ ತುಂಬಾ ಯೋಚನಾ ಭಾವ ತರಂಗಗಳನೆಬ್ಬಿಸುವದಂತೂ ನಿರಂತರ ಸತ್ಯ! ಈಗ ಅವರನ್ನು ಕಳೆದುಕೊಂಡು ಮಂಕು ಕವಿದು, ಮಬ್ಬುಗತ್ತಲೆ ಆವರಿಸಿದ್ದರೂ, ಇಂತಹ ಅಪರೂಪದ ಕವಿತೆಗಳಿಂದ ಚೆಂಬೆಳಕನ್ನು ಹರಡುತ್ತಾ, ಆ ಮಬ್ಬುಗತ್ತಲೆಯ ಮಂಕನ್ನು ಸರಿಸುತ್ತಾ ನಮ್ಮ ಜೊತೆಯಲ್ಲೇ ಇರುತ್ತಾರೆಂಬುದೂ ಅಷ್ಟೇ ಸತ್ಯ! ~ ಸರೋಜಿನಿ ಪಡಸಲಗಿ ಒಂದು ಮುಂಜಾವಿನಲಿ..ಸುಮನಾ ಧ್ರುವ್ ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ ಈ ಹಾಡನ್ನು ಅದೆಷ್ಟು ಬಾರಿ ಆ ಮೊದಲು ಹಾಡಿದ್ದೆ ಆದರೆ , ಆ ದಿನ ಒಂಥರಾ ಭಯಮಿಶ್ರಿತ ಖುಷಿ ಯಾಕೆಂದರೆ ಕವಿಯ ಎದುರೆ ಅವರ ಹಾಡು ಹಾಡುವ ಸೌಭಾಗ್ಯ ಎಲ್ಲ ಗಾಯಕರಿಗೂ ಸಿಗುವಂತದ್ದಲ್ಲ, ಆ ಒಂದು ವಿಷಯದಲ್ಲಿ ನಾನು ನಿಜಕ್ಕೂ ನಶೀಬವಾನ,ಈ ಅವಕಾಶ ನನಗೆ ಹಲವುಬಾರಿ ಸಿಕ್ಕಿದೆ. ಕಣವಿ ಅವರನ್ನ ಅದೇ ಮೊದಲ ಬಾರಿ ನೋಡಿದ್ದು , ಧಾರವಾಡದ ವಿದ್ಯಾವರ್ಧಕ ಸಂಘದ ಯಾವುದೋ ಕಾರ್ಯಕ್ರಮಕ್ಕೆ ವಿಶ್ವ ವಿನೂತನ ಹಾಡಲಿಕ್ಕೆಂದು ನಾವು ಕೆಲವು ಸಂಗೀತ ವಿದ್ಯಾರ್ಥಿಗಳು ಹೋಗಿದ್ದೆವು. ವಿಶ್ವವಿನೂತನ ಹಾಡಿನ ಹೊಸದೊಂದು ಸಂಯೋಜನೆಯನ್ನು ನಮ್ಮ ಉಪನ್ಯಾಸಕರಾದ ಡಾ ನಂದಾ ಪಾಟೀಲ್ ಅವರು ನಮಗೆ ಕಲಿಸಿದ್ದರು. ಹಾಡಿನ ನಂತರ "ಚಲೋ ಹಾಡಿದ್ರು ಹುಡುಗೂರು". ಅಂದು ಮುಗುಳುನಕ್ಕರು ಅವರ ಕವಿತೆಗಳಂತೆ ಅವರ ನಗುವೂ ಚಂದ ಚಂದ, ಪುಟ್ಟ ಮಗುವಿನ ನಗುವಿನಂತೆ. ಧಾರವಾಡದಲ್ಲಿ ಇದ್ದಷ್ಟು ದಿನ ಆಗೊಮ್ಮೆ ಈಗೊಮ್ಮೆ ಸಾಹಿತ್ಯ ಸಂಗೀತ ಕಾರ್ಯಕ್ರಮದಲ್ಲಿ ಅವರ ಭೇಟಿ ಆಗುತ್ತಲೇ ಇರುತ್ತಿತ್ತು. ಈಗಿನಂತೆ selfi ಕಾಲವಾಗಿದ್ದ್ರೆ ಅದೆಷ್ಟು ಫೋಟೋಗಳ ಸಂಗ್ರಹವಾಗುತ್ತಿತ್ತೋ. ಮನಸ್ಸಲ್ಲಿ ಅಚ್ಚಾದ ಆ ನೆನಪಿನ ಚಿತ್ರಗಳನ್ನು ಅಕ್ಷರದಲ್ಲಿ ಬಿಂಬಿಸಲು ಸೋಲುತ್ತಿದ್ದೇನೆ. ಕನ್ನಡ ಭಾವಗೀತೆಗಳ ಗುಂಗಿಗೆ ಬಿದ್ದವರು, ತಮ್ಮ ಜೀವನದ ಎಲ್ಲ ಸಂದರ್ಭಕ್ಕೂ ಒಂದು ಹಾಡನ್ನು ತಮ್ಮ ಅರಿವಿಲ್ಲದಂತೆ ಗುನುಗಿಕೊಂಡು ಬಿಡುತ್ತೇವೆ. ಹಾಗೆ ಎಂದೋ ಕೇಳಿದ ಮುಂಜಾವಾದಲಿ ಹಸಿರುಹುಲ್ಲ ಮಖಮಲ್ಲಿನಲಿ ಪಾರಿಜಾತವೂ ಹೂವು ಸುರಿಸಿದಂತೆ ಹಾಡು ಪಾರಿಜಾತ ಸಿಗದ ನಾಡಿಗೆ ಬಂದರೂ ಇಬ್ಬನಿ ತುಂಬಿದ ಹಸಿರು ಹೊದ್ದ ನೆಲವನ್ನು ಕಂಡರೆ ಪಕ್ಕನೆ ಗುನುಗಿಬಿಡುತ್ತೇನೆ. ಏಳುತ್ತಲೇ ಮಳೆ ನಾದ ಕೇಳಿದರೆ ತುಂತುರಿನ ಸೋನೆಮಳೆ ಎಂದು ಮನಸು ಹಾಡತೊಡಗುತ್ತದೆ. ಎಲ್ಲಕ್ಕಿಂತ ಹೆಚ್ಚು ಆಪ್ಯಾಯಮಾನ ಹಾಡು ಎಂದರೆ ಹೂವು ಹೊರಳುವವು ಸೂರ್ಯನ ಕಡೆಗೆ ಎನ್ನುವ ಗೀತೆ, ಈಗಲೂ ಸೂರ್ಯನತ್ತ ಮುಖಮಾಡಿದ ಹೂಗಳನ್ನು ನೋಡಿದಾಗ, ಆ ಸಾಲು ನೆನಪಾಗುತ್ತದೆ. ~ ಅಮಿತಾ ರವಿಕಿರಣ್ ಕಣವಿಯವರ ಜೊತೆಗೆ ನನ್ನದೊಂದು ಭೇಟಿ ನಾವಿದ್ದ ಸಮಯದಲ್ಲಿ ಕೆಎಂಸಿಯ ಕನ್ನಡ ಸಂಘ ತುಂಬಾ ಚುರುಕಾಗಿತ್ತು . ಪ್ರತಿ ವರ್ಷ ' ಬೇಂದ್ರೆಯವರ ' ದಿನಾಚರಣೆಯನ್ನು ಆಚರಿಸುವುದು ವಾಡಿಕೆಯಾಗಿತ್ತು . ಯಾರಾದರೂ ಸಾಹಿತಿಗಳನ್ನು ಮುಖ್ಯ ಅತಿಥಿಗಳನ್ನಾಗಿ ಕರೆತರುವದು ವರ್ಷಗಳಿಂದ ನಡೆದುಬಂದ ರೂಢಿಯಾಗಿತ್ತು . ಅದು ೧೯೯೦ ರ ಬೇಂದ್ರೆ ದಿನಾಚರಣೆ . ನಮ್ಮ ಸಂಘದ ಮುಖ್ಯಸ್ಥರಾಗಿದ್ದ ಡಾ . ಪಾರ್ಶ್ವನಾಥ ಸಾರರ ಮೇರೆಗೆ ಆ ಸಲ ನಾಡೋಜ ಕವಿ ಚೆನ್ನವೀರ ಕಣವಿಯವರನ್ನು ಮುಖ್ಯ ಅತಿಥಿಯಾಗಿ ಕರೆಯಬೇಕೆಂದು ನಿರ್ಧಾರವಾಗಿತ್ತು . ನನ್ನ ಸೌಭಾಗ್ಯವೋ ಏನೊ ನನಗೆ ಆ ಜವಾಬ್ಧಾರಿಯನ್ನು ಒಪ್ಪಿಸಲಾಗಿತ್ತು . ನಾನು ಅವರನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ . ಅವರ ಪದ್ಯಗಳನ್ನು ಪಠ್ಯ ಪುಸ್ತಕದಲ್ಲಿ ಓದಿದ್ದೆ. ಧಾರವಾಡದಲ್ಲಿ ಇದ್ದಾಗ ಬೇಂದ್ರೆಯವರ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತಾದರೂ ಕಣವಿಯವರನ್ನು ಕಾಣುವ ಸಂದರ್ಭ ಒದಗಿ ಬಂದಿರಲಿಲ್ಲ. ಒಂದು ಸಂಜೆ ನಾನು ಮತ್ತು ನನ್ನ ಗೆಳೆಯ ಸೇರಿ ಧಾರವಾಡಕ್ಕೆ ಪಯಣ ಬೆಳೆಸಿದೆವು. ಆಗಿನ ಸಮಯದಲ್ಲಿ ಈಗಿನಂತೆ ಮೊಬೈಲ್ ಫೋನಗಳು ಮತ್ತು ಅಂತರ್ಜಾಲದ ಅನುಕೂಲತೆಯೂ ಇರಲಿಲ್ಲ . ಅವರು ಧಾರವಾಡ ವಿಶ್ವ ವಿದ್ಯಾಲಯದ ನೌಕರರ ಕ್ವಾರ್ಟರ್ಸ್ ನಲ್ಲಿ ಇರುತ್ತಾರೆಂದು ಗೊತ್ತಿತ್ತು . ಮನೆಯ ನಂಬರನ್ನು ನಮ್ಮ ಸಾರರಿಂದ ಪಡೆದುಕೊಂಡಿದ್ದೆವು . ಸಂಜೆ ೭ ಘಂಟೆಯ ಸುಮಾರಿಗೆ ಸಿಟಿ ಬಸ್ಸ ಹಿಡಿದು ವಿಶ್ವವಿದ್ಯಾಲಯವನ್ನು ತಲುಪಿದ್ದೆವು . ಬಸ್ಸಿನಿಂದ ಕೆಳಗಿಳಿದ ಮೇಲೆ ಎಲ್ಲಿಹೋಗಬೇಕೆಂದು ಗೊತ್ತಾಗದೆ ಯಾರನ್ನಾದರೂ ಕೇಳಿದರಾಯಿತು ಎಂದು ಕಾಯುತ್ತಿದ್ದೆವು. ಅಷ್ಟರಲ್ಲಿಯೇ ನಮ್ಮ ಹಿಂದೆಯೇ ಇನ್ನೊಬ್ಬರು ಬಸ್ಸಿನಿಂದ ಇಳಿದರು . ನೆಹರು ಶರ್ಟ್ ಮತ್ತು ಪಾಯಜಾಮ್ ಹಾಕಿದ್ದರು ತಲೆಯ ಮೇಲೆ ಒಂದು ಟೋಪಿ ಇತ್ತು ಮತ್ತು ಕೈಯಲ್ಲಿ ಒಂದು ಕಾಯಿಪಲ್ಲೆ ತುಂಬಿದ ಚೀಲವಿತ್ತು . ನಾವು ಹೋಗಿ ಅವರನ್ನು ಕೇಳಿದೆವು - 'ಕಣವಿ ಸರ್ರರ್ ಮನೆಗೆ ಹೋಗಬೇಕು , ದಾರಿಯನ್ನು ಹುಡುಕುತ್ತಿದ್ದೇವೆ ನಿಮಗೇನಾದರೂ ಗೊತ್ತೇನು' ಎಂದು . ನಮ್ಮನ್ನೊಮ್ಮೆ ನೋಡಿ ಅವರೆಂದರು ' ನಾನು ಅಲ್ಲಿಯೇ ಹೊರಟಿದ್ದೇನೆ ನೀವೂ ನನ್ನ ಜೊತೆಗೆ ಬರಬಹುದು ಎಂದು. ಅವರನ್ನೇ ಹಿಂಬಾಲಿಸಿದೆವು ಅವರ ಮನೆಯನ್ನು ಮುಟ್ಟಿದ್ದಾಗ ನಮಗೆ ಗೊತ್ತಾಯಿತು ಅವರೇ ಕಣವಿಯವರೆಂದು . ನಾವೇನೋ ತಪ್ಪು ಮಾಡಿದೆವು ಎಂದು ಅನಿಸಿತ್ತು. 'ನಿಮ್ಮನ್ನು ಗೊತ್ತು ಹಿಡಿಯಲು ಆಗಲಿಲ್ಲವೆಂದು ' ಕ್ಷಮೆಯಾಚಿಸಿದ್ದೆವು .ನಾವು ಬೆಪ್ಪಾಗಿರುವದನ್ನು ಕಂಡು ಅವರೇ ಮಾತನಾಡಿದರು . 'ಪರವಾಗಿಲ್ಲ ಬಿಡ್ರಪ್ಪಾ ! ಎಲ್ಲರೂ ಗೊತ್ತು ಹಿಡಿಯುವದಕ್ಕೆ ನಾನೇನು ಫಿಲ್ಮ್ ನಟನೇನೂ ' ಅಂತ ಎಂದಿದ್ದರು . ಬಂದ ವಿಷಯವನ್ನು ಹೇಳಿದೆವು . ಅವರು ತುಂಬು ಹೃದಯದಿಂದ ಒಪ್ಪಿಕೊಂಡಿದ್ದರು. ಅಷ್ಟರಲ್ಲಿಯೇ ಅವರ ಪತ್ನಿಯವರು ಗರಂ ಚಹಾ ತಂದು ಇಟ್ಟಿದ್ದರು. ಚಹಾ ಕುಡಿದು ಮನೆಯನ್ನು ಬಿಟ್ಟಿದ್ದೆವು . ಅವರ ಸರಳ ಜೀವನದ ಶೈಲಿಯನ್ನು ಕಂಡು ನಾನು ದಂಗಾಗಿದ್ದೆ. ೧೫ ದಿನಗಳ ನಂತರ ಅವರನ್ನು ಕಾರ್ಯಕ್ರಮಕ್ಕೆ ಕರೆ ತರಲು ಕಾರು ತೆಗೆದುಕೊಂಡು ಹೋಗಿದ್ದೆವು. ಕಾರನ್ನು ಕಂಡು ಅವರೆಂದಿದ್ದರು ' ಇದಕ್ಕ್ಯಾಕ ಇಷ್ಟು ಖರ್ಚು ಮಾಡಿದ್ರಿ , ಅರ್ಧ ಘಂಟೆಗೊಂದ ಸಿಟಿ ಬಸ್ಸ ಅದಾವ ಬಸ್ಸಿನಾಗ ಹೋಗಬಹುದಿತ್ತಲ್ಲ?' ಎಂದು . ಆ ಮಾತುಗಳು ಅವರ ಸರಳ ಜೀವನಕ್ಕೆ ಇನ್ನೊಂದು ಸಾಕ್ಷಿಯಾಗಿದ್ದವು . ಅರ್ಧ ಘಂಟೆಯ ಕಾರು ಪಯಣದಲ್ಲಿ ನಮ್ಮ ಜೊತೆಗೆ ಎಷ್ಟೊಂದು ಸಲೀಸಾಗಿ ಮಾತನಾಡಿದ್ದರು . ಅವರಿಗೆ ತಾವೊಬ್ಬ ದೊಡ್ಡ ಕವಿ ಎಂಬ ಅಹಂಕಾರ ಸ್ವಲ್ಪವೂ ಇರಲಿಲ್ಲ . ಕೆಎಂಸಿ ಯ ಕನ್ನಡ ಸಂಘದ ಬಗ್ಗೆ ಮತ್ತು ಬೇಂದ್ರೆಯವರ ದಿನಾಚರಣೆ ಬಗ್ಗೆ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದರು. ಬೇಂದ್ರೆಯವರ ಬಗ್ಗೆ ಅವರಿಗೆ ತುಂಬಾ ಗೌರವವಿತ್ತು . ಅವರ ಬಗ್ಗೆ ಮನಸು ಬಿಚ್ಚಿ ಮಾತನಾಡಿದ್ದರು ಕಾರ್ಯಕ್ರಮದಲ್ಲಿ . ಅಂಥ ಸರಳ ಮತ್ತು ಶಿಸ್ತಿನ ಕವಿ ಜೀವಿಯ ಜೊತೆಗಿನ ನನ್ನ ಸಣ್ಣ ಭೇಟಿ ಮತ್ತು ಅರ್ಧಘಂಟೆಯ ಕಾರು ಪಯಣ ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯೊಲ್ಲೊಂದು . ಇಲ್ಲಿ ಅದನ್ನು ನೆನಪಿಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ.
2022/05/16 19:09:03
https://anivaasi.com/category/%E0%B2%B2%E0%B3%87%E0%B2%96%E0%B2%A8%E0%B2%97%E0%B2%B3%E0%B3%81/
mC4
ಚರ್ಚೆಪುಟ:ಶಿವಮೊಗ್ಗ - ವಿಕಿಪೀಡಿಯ ಚರ್ಚೆಪುಟ:ಶಿವಮೊಗ್ಗ ೧.ಕೆ. ವಿ. ಸುಬ್ಬಣ್ಣ್, ತಪ್ಪು. ಕೆ. ವಿ. ಸುಬ್ಬಣ್ಣ - ಸರಿಯಾದ ಹೆಸರು. ಕನ್ನಡದ ಹೆಚ್ಚಿನ ಪದಗಳು ಹಾಗೂ ಹೆಸರುಗಳು 'ಅ' 'ಇ' 'ಉ' ಉಚ್ಚಾರದಿ೦ದ ಕೊನೆಗೊಳ್ಳುತ್ತವೆ.. Bschandrasgr ೦೮:೫೯, ೩ ಜನವರಿ ೨೦೧೪ (UTC) -ಸದಸ್ಯ:Bschandrasgr ಬಿ.ಎಸ್ ಚಂದ್ರಶೇಖರ -ಸಾಗರ ಈ ಭಾಗದಲ್ಲಿ ಬರೆದಿರುವ ಲೇಖನ ಮಾಹಿತಿಯ ರೀತಿಯಾಗಿರದೆ ವೈಯಕ್ತಿಕ ಅಭಿಪ್ರಾಯವಿದ್ದಹಾಗಿದೆ - "ಸಾಗರ ನಗರವನ್ನು ಕೇಂದ್ರವಾಗಿಟ್ಟುಕೊಂಡು ಸಾಗರ ಜಿಲ್ಲೆಯನ್ನು ರಚಿಸುವುದು ಅತ್ಯಂತ ಸೂಕ್ತ" ( ಸಾಗರ ಜಿಲ್ಲೆಯ ಒತ್ತಾಯ). ಹಾಗೇ, ಈ ಭಾಗದಲ್ಲಿ ಯಾವುದೇ ಉಲ್ಲೇಖಗಳಿಲ್ಲದಿರುವುದೂ ಮತ್ತಷ್ಟು ಗೊಂದಲಕ್ಕೀಡುಮಾಡುತ್ತದೆ. --ವಿಶ್ವನಾಥ/Vishwanatha (ಚರ್ಚೆ) ೦೮:೫೨, ೧ ಫೆಬ್ರುವರಿ ೨೦೧೬ (UTC) ಶಿವಮೊಗ್ಗ ಜಿಲ್ಲಾಪಂಚಾಯತಿ ಅಧ್ಯಕ್ಷ ಚುನಾವಣೆ ೨೦೧೬ ಮೇ[ಬದಲಾಯಿಸಿ] ೪/೫-೫-೨೦೧೬:ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಭದ್ರಾವತಿ ತಾಲ್ಲೂಕು ಹಿರಿಯೂರು ಕ್ಷೇತ್ರದ ಜೆಡಿಎಸ್‌ ಸದಸ್ಯೆ ಜ್ಯೋತಿ ಕುಮಾರ್ ಹಾಗೂ ಉಪಾಧ್ಯಕ್ಷೆ ಯಾಗಿ ಶಿವಮೊಗ್ಗ ತಾಲ್ಲೂಕು ಹಸೂಡಿ ಕ್ಷೇತ್ರದ ವೇದಾ ವಿಜಯ ಕುಮಾರ್‌ ಗುರುವಾರ ಆಯ್ಕೆಯಾದರು. ಜಿಲ್ಲಾ ಪಂಚಾಯ್ತಿ 31 ಸದಸ್ಯರಲ್ಲಿ ಬಿಜೆಪಿ 15, ಕಾಂಗ್ರೆಸ್‌ 8, ಜೆಡಿಎಸ್ 7 ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಇದ್ದಾರೆ.[[೧]]
2022/01/18 01:32:40
https://kn.wikipedia.org/wiki/%E0%B2%9A%E0%B2%B0%E0%B3%8D%E0%B2%9A%E0%B3%86%E0%B2%AA%E0%B3%81%E0%B2%9F:%E0%B2%B6%E0%B2%BF%E0%B2%B5%E0%B2%AE%E0%B3%8A%E0%B2%97%E0%B3%8D%E0%B2%97
mC4
ಬಿರುಗಾಳಿ ಮಳೆ: 10 ಸಾವಿರ ಬಾಳೆಗಿಡ ನಾಶ | Udayavani – ಉದಯವಾಣಿ Saturday, 11 Jul 2020 | UPDATED: 07:53 AM IST ಬಿರುಗಾಳಿ ಮಳೆ: 10 ಸಾವಿರ ಬಾಳೆಗಿಡ ನಾಶ Team Udayavani, May 2, 2019, 3:00 AM IST ಹನೂರು: ಫ‌ನಿ ಚಂಡಮಾರುತದ ಪ್ರಭಾವಕ್ಕೆ ಗಡಿ ಭಾಗದ ಹನೂರು ತಾಲೂಕು ತತ್ತರಿಸಿದ್ದು ಮಂಗಳವಾರ ರಾತ್ರಿ ಸುರಿದ ಬಿರುಗಾಳಿಯುಕ್ತ ಮಳೆಗೆ ಹಲವೆಡೆ ಫ‌ಸಲು ನೆಲ ಕಚ್ಚಿದ್ದು, ಮನೆಗಳು ಹಾನಿಗೀಡಾಗಿದ್ದು, ಮರಗಳು ಧರೆಗುರುಳಿವೆ. ಧರೆಗುರುಳಿದ ಮರಗಳು: ಮಂಗಳವಾರ ರಾತ್ರಿ ಹನೂರು ಪಟ್ಟಣದಲ್ಲಿ ಪ್ರಾರಂಭವಾದ ಬಿರುಗಾಳಿಯಕ್ತ ಮಳೆಗೆ ಸಾರಿಗೆ ಬಸ್‌ ನಿಲ್ದಾಣದ ಮುಂಭಾಗದ ಬೇವಿನ ಮರ ಮುರಿದು ಬಿದ್ದಿದೆ. ಅಲ್ಲದೆ ಹನೂರು – ಬಂಡಳ್ಳಿ ಮಾರ್ಗಮಧ್ಯದಲ್ಲಿ ಚಾಮುಂಡೇಶ್ವರಿ ದೇವಾಲಯದ ಸಮೀಪ ಗೊಬ್ಬಳಿ ಮರ ಮುರಿದು ಬಿದ್ದಿದೆ. ಹನೂರು ರಾಮಾಪುರ ಮಾರ್ಗದಲ್ಲಿ ಮಲೆ ಮಹದೇಶ್ವರ ಕ್ರೀಡಾಂಗಣದ ಸಮೀಪದ ರಾಜಶೇಖರ್‌ಮೂರ್ತಿ ಅವರ ಜಮೀನಿನಲ್ಲಿದ್ದ ತೆಂಗಿನಮರಗಳು ನೆಲಕಚ್ಚಿವೆ. ಅಲ್ಲದೆ ಜಮೀನಿನಲ್ಲಿದ್ದ ತೇಗದ ಸಸಿಕೂಡ ಮುರಿದು ಬಿದ್ದಿದೆ. ಪಟ್ಟಣದ ಶಂಕರೇಗೌಡರ ಜಮೀನಿನಲ್ಲಿದ್ದ ಬೇವಿನ ಮರವೂ ಕೂಡ ಧರೆಗುರುಳಿದೆ. ಪರಿಣಾಮ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ಪಟ್ಟಣದ ಸಾರಿಗೆ ಬಸ್‌ ನಿಲ್ದಾಣದ ಸಮೀಪ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದ ಪರಿಣಾಮ 1 ಗಂಟೆಗೂ ಹೆಚ್ಚು ಕಾಲ ಮ.ಬೆಟ್ಟ ಮುಖ್ಯ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಂಡಳ್ಳಿ ಮಾರ್ಗದಲ್ಲಿ ಗೊಬ್ಬಳಿ ಮರ ಬಿದ್ದಿದ್ದರಿಂದ ಸಂಚಾರ ಸಾಧ್ಯವಾಗದೆ ವಾಹನಗಳೆಲ್ಲಾ ವೈಶಂಪಾಳ್ಯ, ಗೂಳ್ಯ ಮಾರ್ಗವಾಗಿ ತೆರಳುತ್ತಿದ್ದವು. ಅಲ್ಲದೆ ಬರಹಳ್ಳವು ಮೈದುಂಬಿ ಹರಿಯುತ್ತಿದ್ದುದರಿಂದ ಹಳ್ಳದ ಎರಡು ಬದಿಯಲ್ಲಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಗಾಳಿಗೆ ಹಾರಿದ ಮನೆಯ ಛಾವಣಿ: ತಾಲೂಕಿನ ಶಾಗ್ಯ ಗ್ರಾಮದಲ್ಲಿ ಚಂದ್ರಮ್ಮ ಎಂಬುವವರು ಮನೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ. ಮಂಗಳವಾರ ರಾತ್ರಿ ಚಂದ್ರಮ್ಮ ಮತ್ತು ಆಕೆಯ ಮಗ ಮಲ್ಲೇಶ್‌, ಸೊಸೆ ರಾಜಮ್ಮ ಎಂಬುವವರು ಮನೆಯಲ್ಲಿ ವಾಸವಿದ್ದರು. ಈ ವೇಳೆಗೆ ಬೀಸಿದ ಭಾರೀ ಗಾಳಿಗೆ ಇತ್ತೀಚೆಗಷ್ಟೇ ನಿರ್ಮಿಸಿದ್ದ ಮನೆಯ ಮೇಲ್ಛಾವಣಿಯ ಶೀಟುಗಳು ಹಾರಿಹೋಗಿದೆ. ಘಟನೆಯಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲವಾದೂ ಮನೆಯಲ್ಲಿದ್ದ ದಿನಸಿ ಪದಾರ್ಥಗಳು, ಗೃಹ ಬಳಕೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಭಾರೀ ಗಾಳಿ ಮತ್ತು ಮಳೆ ತೀವ್ರತೆಯನ್ನು ಅರಿತ ಚಂದ್ರಮ್ಮ ಮತ್ತು ಕುಟುಂಬಸ್ಥರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಚಂದ್ರಮ್ಮ, ವಾಸಕ್ಕಾಗಿ ನಿರ್ಮಿಸಿದ್ದ ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಯಿಂದ ಕುಟುಂಬ ಕಂಗಾಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಮುರಿದುಬಿದ್ದ ಸಾವಿರಾರು ಬಾಳೆಗಿಡಗಳು: ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿಗೆ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಬಾಳೆಗಿಡಗಳು ನೆಲಕ್ಕುರುಳಿವೆ. ಬಾಳೆ ಬೆಳೆದು ಇನ್ನೇನು ಫ‌ಸಲು ಕೈ ಸೇರುವ ಖುಷಿಯಲ್ಲಿದ್ದ ರೈತರಿಗೆ ಫ‌ನಿ ಚಂಡಮಾರುತ ಬರ ಸಿಡಿಲಿನಂತೆ ಬಡಿದಿದೆ. ಬಾಳೆ ಫ‌ಸಲು ನೆಲಕಚ್ಚಿರುವುದರಿಂದ ಸರಿ ಸುಮಾರು ತಾಲೂಕು ವ್ಯಾಪ್ತಿಯ ರೈತರಿಗೆ ಸರಿ ಸುಮಾರು 50ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಹನೂರು ಪಟ್ಟಣದ ಒಂದರಲ್ಲಿಯೇ ಸರಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಗಿಡಗಳು ನೆಲಕ್ಕುರುಳಿವೆ. ಕಗ್ಗತ್ತಲಿನಲ್ಲಿ ಹನೂರು ಪಟ್ಟಣ: ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿಗೆ ಹನೂರು ಪಟ್ಟಣದ ಹಲವೆಡೆ ವಿದ್ಯುತ್‌ ಕಂಬಗಳೂ ಧರೆಗುರುಳಿದ ಪರಿಣಾಮವಾಗಿ ಪಟ್ಟಣದ ಆಶ್ರಯ ಬಡಾವಣೆ, ದೇವಾಂಗಪೇಟೆ, ಆರ್‌.ಎಸ್‌.ದೊಡ್ಡಿ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ 11 ಗಂಟೆಗೆ ನಿಲುಗಡೆಗೊಂಡ ವಿದ್ಯುತ್‌ ಬುಧವಾರ ಮಧ್ಯಾಹ್ನ 6 ಗಂಟೆಯಾದರೂ ಬಂದಿರಲಿಲ್ಲ. ಅಲ್ಲದೆ ಹನೂರು ಪಟ್ಟಣದಲ್ಲಿ ಮಹಿಷಾಸುರ ಮರ್ಧಿನಿ ಅಮ್ಮನವರ ಜಾತ್ರಾ ಮಹೋತ್ಸವವಿದ್ದ ಹಿನ್ನೆಲೆ ಬಂಧು ಬಳಗದವರನ್ನು ಹಬ್ಬಕ್ಕೆ ಆಹ್ವಾನಿಸಿದ್ದ ಹಿನ್ನೆಲೆ ವಿದ್ಯುತ್‌ ಸಮಸ್ಯೆಯಿಂದಾಗಿ ಮಾಂಸಾಹಾರ ಭೋಜನವನ್ನೂ ವ್ಯವಸ್ಥೆ ಮಾಡಲಾಗದೆ ತೊಂದರೆ ಅನುಭವಿಸಿದ್ದರಿಂದ ಸೆಸ್ಕ್ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರು. ತಾಲೂಕು ವ್ಯಾಪ್ತಿಯಲ್ಲಿ ಬಾಳೆ ಫ‌ಸಲು ನೆಲಕಚ್ಚಿರುವುದು ತಿಳಿದಿದ್ದು ಈ ಸಂಬಂಧ ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಳೆ ಹಾನಿಗೀಡಾಗಿರುವ ರೈತರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಸರ್ಕಾರದ ನಿಯಮಾನುಸಾರ ಪರಿಹಾರ ವಿತರಿಸಲು ಕ್ರಮವಹಿಸಲಾಗುವುದು.
2020/07/11 02:24:06
https://www.udayavani.com/district-news/chamarajanagar-news/storm-rain-10-thousand-bananas-destroyed
mC4
ಗೋ ಸಂತತಿ ನಶಿಸದಂತೆ ರಕ್ಷಣೆ ಅಗತ್ಯ | Prajavani ಗೋ ಸಂತತಿ ನಶಿಸದಂತೆ ರಕ್ಷಣೆ ಅಗತ್ಯ ದನಗಳ ಜಾತ್ರೆಯ ಗೋವಿನ ಸಂತತಿ ಉಳಿಸುವ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮನವಿ Published: 22 ಮಾರ್ಚ್ 2018, 18:11 IST Updated: 22 ಮಾರ್ಚ್ 2018, 18:11 IST ಮಾಗಡಿ: ಸತ್ಯ– ಅಹಿಂಸೆ ಮುಂದೆ ಅಸತ್ಯ– ಹಿಂಸೆ ನಾಶವಾಗಿ ಹೋಗುತ್ತದೆ ಎಂಬ ಸತ್ಯ ಸಂದೇಶವನ್ನು ಸಾರಿರುವ ಗೋವಿನ ಸಂತತಿ ಮತ್ತು ಗೋಮಾಳ ಹಾಗೂ ಗೋಪಾಲಕರನ್ನು ನಾಶವಾಗದಂತೆ ಉಳಿಸಿಕೊಳ್ಳಬೇಕು ಎಂದು ಬೆಂಗಳೂರಿನ ಮಾರುತಿ ಮೆಡಿಕಲ್ಸ್‌ ಮಾಲೀಕ ಮಹೇಂದ್ರ ಮುನೋತ್ ಜೈನ್‌ ತಿಳಿಸಿದರು. ದನಗಳ ಜಾತ್ರೆಯಲ್ಲಿ ಬುಧವಾರ ಗೋವಿನ ಸಂತತಿ ಉಳಿಸುವ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ಸಿಂಧೂ ಕೊಳ್ಳದ ನಾಗರಿಕತೆಯ ಕಾಲದಿಂದಲೂ ಸಮಾಜದೊಂದಿಗೆ ಬೆರೆತುಗೊಂಡು ವ್ಯವಸಾಯಗಾರನ ಜೊತೆಯಾಗಿ ದುಡಿಯುವ ವರ್ಗಕ್ಕೆ ದಾರಿ ಮಾಡಿಕೊಟ್ಟಿರುವ ರಾಸುಗಳನ್ನು ನಾವು ಪ್ರಿತಿಸಬೇಕು. ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುವ ಬದಲು ಗೋ ಸಂರಕ್ಷಣಾ ಕೇಂದ್ರಕ್ಕೆ ನೀಡಬೇಕು. ನೀನ್ಯಾರಿಗಾದೆಯೋ ಎಲೆ ಮಾನವ ಹರಿ ಹರಿ ಗೋವು ನಾನು ಮತ್ತು ಗೋವಿನ ಹಾಡನ್ನು ಪ್ರತಿಯೊಂದು ಮನೆಯಲ್ಲೂ ಮಕ್ಕಳಿಗೆ ಕಲಿಸುವುದರ ಮೂಲಕ ನಮ್ಮ ಪೂರ್ವಿಕರ ಪಶುಪಾಲನಾ ಪರಂಪರೆಯನ್ನು ಮುಂದುವರೆಸುವ ಅಗತ್ಯವಿದೆ' ಎಂದರು. ದನಗಳ ಜಾತ್ರೆಯಲ್ಲಿ ಬೆಲೆಬಾಳುವ ರಾಸುಗಳನ್ನು ಪ್ರದರ್ಶನಕ್ಕೆ ಇಟ್ಟಿರುವ ದೇವರ ಹಟ್ಟಿ ಚಿಕ್ಕಣ್ಣ ಸ್ವಾಮಿ ಪೂಜಾರಿ ಪಾಪಣ್ಣ ಮಾತನಾಡಿ, 'ನಮಗೆ ಪಶುಗಳೇ ದೇವರು. ಹಣಕ್ಕಿಂತ ಹಸುಗಳು ಮುಖ್ಯ ಎಂಬ ಸತ್ಯದ ಸಂದೇಶ ಬಿತ್ತಿರಿಸಬೇಕು. ಹಸು ಸಾಕುವ ಗೋ ಪಾಲಕರಿಗೆ ವಿಶೇಷ ಅನುಕೂಲ ಮಾಡಿಕೊಡಬೇಕು. ವಿನಾಶದತ್ತ ಸಾಗಿರುವ ಗೋ ಸಂತತಿ ಉಳಿಸಲು ಅರಿವು ಮೂಡಿಸುತ್ತಿರುವ ಮುನೋತ್‌ ಜೈನ್‌ ಅವರ ಶ್ರಮವನ್ನು ನಾವೆಲ್ಲರೂ ಮನನ ಮಾಡಿಕೊಳ್ಳಬೇಕು' ಎಂದರು. ಬೆಲೆಬಾಳುವ ರಾಸುಗಳನ್ನು ಪ್ರದರ್ಶನಕ್ಕೆ ಇಟ್ಟಿರುವ ರೈತ ಜುಟ್ಟನ ಹಳ್ಳಿ ಜಯರಾಮಯ್ಯ, ಚಂದ್ರಪ್ಪ, ಕುಂಬಳ ಗೂಡಿನ ಪಟೇಲ್‌ ನರಸೇಗೌಡ, ಪಟೇಲ್‌ ನಾಗರಾಜು, ಪಟೇಲ್‌ ಕೆ.ಎನ್‌.ದೇವರಾಜು, ತಮ್ಮಯ್ಯಣ್ಣ, ರಮೇಶ್‌, ತಿರುಮಲೆ ಮಲ್ಲಿಗೆ ನಾಗರಾಜು ಗೋ ಸಂತತಿ ಉಳಿಸುವ ಮಹತ್ವ ಕುರಿತು ಮಾತನಾಡಿದರು. ಮಾರುತಿ ಮೆಡಿಕಲ್ಸ್‌ ವತಿಯಿಂದ ಜಾತ್ರೆಯಲ್ಲಿನ ರಾಸುಗಳಿಗೆ 3 ದಿನದಿಂದ 4 ಟ್ರ್ಯಾಕ್ಟರ್‌ಗಳಲ್ಲಿ ಕುಡಿಯುವ ನೀರನ್ನು ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ. ಜಾಲಮಂಗಲ ಬಸವರಾಜು, ನಾಯ್ಡು ಹಾಗೂ ರೈತರು ಇದ್ದರು. ರೈತರಿಗೆ ಉಚಿತವಾಗಿ ಪ್ರಜಾವಾಣಿ ಪತ್ರಿಕೆಗಳನ್ನು ವಿತರಿಸಿದರು. ಗೋವುಗಳ ಬಳಿ ಹೋಗಿ ರೈತರೊಂದಿಗೆ ಪಶುಪಾಲನೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಮಹೇಂದ್ರ ಜೈನ್‌ ಸಂವಾದ ಮಾಡಿದರು. ಹಳ್ಳಿಕಾರ್‌ ಹಸು ತಳಿ ರಕ್ಷಣೆಗೆ ಪ್ರೋತ್ಸಾಹ ಮಹೇಂದ್ರ ಮುನೋತ್ ಜೈನ್‌ ಮಾತನಾಡಿ, ಹುಲ್ಲು, ನೀರು ಇಲ್ಲ ಎಂಬ ಕಾರಣಕ್ಕೆ ಪುಣ್ಯಕೋಟಿಯ ಸಂತಾನ ನಾಶವಾಗಬಾರದು. ಮೈಸೂರಿನ ಯದುವಂಶದ ಅರಸರು ಪ್ರತಿಯೊಂದು ಗ್ರಾಮದ ಬಳಿ ನೂರಾರು ಎಕರೆ ಗೋಮಾಳ ಮತ್ತು ಗುಂಡು ತೋಪನ್ನು ಬೆಳೆಸಿ, ಹಳ್ಳಿಕಾರ್‌ ತಳಿಯ ಹಸುಗಳು ಮತ್ತು ಹೋರಿಗಳನ್ನು ಸಾಕುವವರಿಗೆ ಪ್ರೋತ್ಸಾಹ ನೀಡಿದ್ದರು. ಹಳ್ಳಿಕಾರ್‌ ನಾಟಿ ಹಸುಗಳ ಸಂತತಿ ನಶಿಸದಂತೆ ಎಚ್ಚರಿಕೆ ವಹಿಸದಿದ್ದರೆ, ಕನ್ನಡ ನಾಡಿನ ಭವ್ಯ ಪರಂಪರೆಗೆ ಧಕ್ಕೆಯಾಗಲಿದೆ ಎಂದು ತಿಳಿಸಿದರು. ಕೆರೆ, ಕಟ್ಟೆ, ಗೋ ಕಟ್ಟೆ, ಗೋ ಮಾಳಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಹಳ್ಳಿಕಾರ್‌ ತಳಿಯ ರಾಸುಗಳನ್ನು ಸಾಕುವ ರೈತರಿಗೆ ಸರ್ಕಾರ ವಿಶೇಷ ಸವಲತ್ತುಗಳನ್ನು ನೀಡಬೇಕು. ತುರು-ಕರು ಇಲ್ಲದ ಊರು ನರಕಕ್ಕೆ ಸಮಾನ ಎಂಬ ಹಿರಿಯರ ಮಾತು ಬಾವು ಅರಿಯಬೇಕು. ತಿರುವೆಂಗಳನಾಥ ರಂಗನಾಥ ಸ್ವಾಮಿ ದನಗಳ ಜಾತ್ರಾ ಬಯಲು ಮತ್ತು ಕಲ್ಯಾಣಿಗಳನ್ನು ಉಳಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡುವುದಾಗಿ ತಿಳಿಸಿದರು.
2019/01/17 09:18:01
https://www.prajavani.net/news/article/2018/03/22/561142.html
mC4
ವಂಚಕ ಸ್ವಾಮಿಯಿಂದ ಕೊಟ್ಯಾಂತರ ರೂ. ವರ್ಗಾವಣೆ ಆರೋಪ : ಸಿಸಿಬಿ ವಿಚಾರಣೆಗೆ ಹಾಜರಾದ ನಟಿ ರಾಧಿಕಾ ಕುಮಾರಸ್ವಾಮಿ | KANNADIGA WORLD Home ಕನ್ನಡ ವಾರ್ತೆಗಳು ಕರಾವಳಿ ವಂಚಕ ಸ್ವಾಮಿಯಿಂದ ಕೊಟ್ಯಾಂತರ ರೂ. ವರ್ಗಾವಣೆ ಆರೋಪ : ಸಿಸಿಬಿ ವಿಚಾರಣೆಗೆ ಹಾಜರಾದ ನಟಿ ರಾಧಿಕಾ ಕುಮಾರಸ್ವಾಮಿ Posted By: Sathish KapikadPosted date: January 08, 2021 In: ಕರಾವಳಿ, ಕರ್ನಾಟಕ, ಪ್ರಮುಖ ವರದಿಗಳು, ಮುಂಬೈ ಬೆಂಗಳೂರು: ಯುವರಾಜ್ ಸ್ವಾಮಿ ವಂಚನೆ ಪ್ರಕರಣ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಯವರು ಶುಕ್ರವಾರ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ. ಬ್ಯಾಂಕ್ ಖಾತೆಗೆ 75 ಲಕ್ಷ ಹಣ ಜಮಾವಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಇಂದು ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು. ರಾಧಿಕಾ ಸಹೋದರ ರವಿರಾಜ್‌ ಸಹ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ಬಂಧಿಸಿದ್ದ ಜ್ಯೋತಿಷಿ ಯುವರಾಜ್ ಅವರಿಂದ ರಾಧಿಕಾ ಕುಮಾರಸ್ವಾಮಿ ಅವರ ಖಾತೆಗೆ 75 ಲಕ್ಷ ರೂ. ಜಮಾವಣೆಯಾಗಿತ್ತು. ರಾಜಕಾರಣಿಗಳ ಹೆಸರಿನಲ್ಲಿ ಹಲವರಿಗೆ ವಂಚಿಸಿರುವ ಆರೋಪದ ಮೇರೆಗೆ ಸಿಸಿಬಿ ಬಂಧಿಸಿರುವ ಆರೋಪಿ ಯುವರಾಜ್ (ಸ್ವಾಮಿ) ಖಾತೆಯಿಂದ ರಾಧಿಕಾ ಅವರಿಗೆ ಕೋಟಿಗಟ್ಟಲೆ ಹಣ ವರ್ಗಾವಣೆಗೊಂಡಿರುವ ಆರೋಪ ಸಂಬಂಧ ರಾಧಿಕಾ ಸುದ್ದಿಗೋಷ್ಠಿ ನಡೆಸಿದ್ದರು. 'ಯುವರಾಜ್ ತಮ್ಮ ಕುಟುಂಬಕ್ಕೆ 17 ವರ್ಷದಿಂದ ಪರಿಚಯವಿದ್ದರು. ಐತಿಹಾಸಿಕ ಸಿನಿಮಾವೊಂದಕ್ಕೆ ಮುಂಗಡವಾಗಿ ರೂ. 15 ಲಕ್ಷ ಹಾಕಿದ್ದರು. ನಿರ್ಮಾಪಕರೊಬ್ಬರಿಂದ ರೂ.60 ಲಕ್ಷ ಹಾಕಿಸಿದ್ದರು. ಇದನ್ನು ಹೊರತುಪಡಿಸಿ ಅವರೊಂದಿಗೆ ರಾಜಕೀಯ ವ್ಯವಹಾರಗಳು ನಡೆದಿಲ್ಲ' ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಈ ಕುರಿತಂತೆ ಸ್ಪಷ್ಟನೆ ನೀಡುವಂತೆ ಸಿಸಿಬಿ ಎಸಿಪಿ ನಾಗರಾಜ್ ಅವರು ರಾಧಿಕಾ ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಹೀಗಾಗಿ ಇಂದು ತಮ್ಮ ಸಹೋದರ ರವಿರಾಜ್ ಅವರ ಜೊತೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಗೆ ಆಗಮಿಸಿ ಎಸಿಪಿ ನಾಗರಾಜ್ ಅವರ ಮುಂದೆ ವಿಚಾರಣೆಗೆ ಹಾಜರಾದರು. ಹಣ ವರ್ಗಾವಣೆಯಾದ ಕುರಿತಂತೆ ಸಿಸಿಬಿ ಪೊಲೀಸರು 44ಕ್ಕೂ ಹೆಚ್ಚು ಪ್ರಶ್ನೆಗಳ ಪಟ್ಟಿ ಸಿದ್ದಪಡಿಸಿಕೊಂಡು ರಾಧಿಕಾ ಅವರಿಂದ ಉತ್ತರ ಪಡೆದುಕೊಂಡರು ಎನ್ನಲಾಗಿದೆ. ಮನೆಯಿಂದ ಹೊರಡುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಧಿಕಾ ಕುಮಾರಸ್ವಾಮಿಯವರು, ನೋಟಿಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ತರಳುತ್ತಿದ್ದೇನೆ. ವಿಚಾರಣೆ ಪೂರ್ಣಗೊಂಡ ಬಳಿಕ ಪ್ರತಿಕ್ರಿಯೆ ನೀಡುತ್ತೇನೆಂದು ಹೇಳಿದ್ದಾರೆ. ನಾಟ್ಯರಾಣಿ ಶಾಂತಲಾ ಚಿತ್ರದಲ್ಲಿ ನಟಿಸಲು 75 ಲಕ್ಷ ರೂ.ಗಳ ಮುಂಗಡ ಹಣ ಪಡೆದಿದ್ದೆ. ಯುವರಾಜ್ ಅವರಿಂದ ಖಾತೆಯಿಂದ 15 ಲಕ್ಷ ಹಾಗೂ ನಿರ್ಮಾಪಕರ ಖಾತೆಯಿಂದ 60 ಲಕ್ಷ ಹಣ ನನ್ನ ಖಾತೆಗೆ ವರ್ಗಾವಣೆಯಾಗಿತ್ತು. ಚಿತ್ರದಲ್ಲಿ ನಟಿಸುವ ಕುರಿತಂತೆ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಆದರೂ ನನ್ನ ಖಾತೆಗೆ 75 ಲಕ್ಷ ವರ್ಗಾವಣೆಯಾಗಿತ್ತು ಎಂದು ರಾಧಿಕಾ ಕುಮಾರಸ್ವಾಮಿ ತಿಳಿಸಿದ್ದರು. ನಾವು ಜ್ಯೋತಿಷಿ ಯುವರಾಜ್ ಒಳ್ಳೆಯ ವ್ಯಕ್ತಿ ಎಂದು ಭಾವಿಸೆದ್ದೆವು. ಇದೀಗ ಅವರ ಬಣ್ಣ ಬಯಲಾಗಿದೆ. ಹೀಗಾಗಿ ಜಮಾವಣೆಯಾದ ಹಣವನ್ನು ವಾಪಸ್ ಮಾಡಲಾಗುವುದು. ಇದೇ ವಿಚಾರವನ್ನು ಸಿಸಿಬಿ ವಿಚಾರಣೆ ಸಂದರ್ಭದಲ್ಲೂ ತಿಳಿಸಲಿದ್ದೇನೆ ಎಂದು ಹೇಳಿದ್ದರು.
2021/04/12 02:46:15
https://www.kannadigaworld.com/news/topnews/445082.html
mC4
102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ | News13 News13 > ಅಂಕಣಗಳು > ಪ್ರಚಲಿತ > 102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ 102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ Friday, July 19th, 2019 ಪ್ರಚಲಿತ Admin ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ದೇಶಗಳಲ್ಲಿಯೂ ವಾಯುಮಾಲಿನ್ಯ ಎಂಬುದು ಒಂದು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಪ್ರತಿ ವರ್ಷ, ವಿಶೇಷವಾಗಿ ಚಳಿಗಾಲದಲ್ಲಿ ದೆಹಲಿ-ಎನ್‌ಸಿಆರ್ ಮತ್ತು ದೇಶದ ಇತರ ನಗರಗಳ ನಿವಾಸಿಗಳು ದಟ್ಟ, ಮಾಲಿನ್ಯಪೂರಿತ ಹೊಗೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದೆಷ್ಟೇ ಪರಿಹಾರವನ್ನು ಕಂಡುಕೊಂಡರು ಕೂಡ ವಾಯುಮಾಲಿನ್ಯದ ಸಮಸ್ಯೆಯನ್ನು ಕುಗ್ಗಿಸಲು ಇದುವರೆಗೆ ಸಾಧ್ಯವಾಗಿಲ್ಲ. 2024 ರ ವೇಳೆಗೆ ವಾಯುಮಾಲಿನ್ಯವನ್ನು ಶೇ. 20-30 ರಷ್ಟು ಕಡಿಮೆ ಮಾಡುವ ಉದ್ದೇಶದಿಂದ ಮೋದಿ ಸರ್ಕಾರವು ಕಳೆದ ಜನವರಿಯಲ್ಲಿ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮವನ್ನು (ಎನ್‌ಸಿಎಪಿ-National Clean Air Programme) ಪ್ರಾರಂಭಿಸಿತ್ತು. ದೇಶದ 102 ನಗರಗಳಲ್ಲಿನ ಪರಿಸರದಲ್ಲಿರುವ ಮಾಲಿನ್ಯಕಾರಕಗಳನ್ನು ಶೇ. 20-30 ರಷ್ಟು ಕಡಿಮೆ ಮಾಡುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಈಗ, ವರದಿಗಳ ಪ್ರಕಾರ, ಮೋದಿ ಸರ್ಕಾರವು ಎನ್‌ಸಿಎಪಿ ಅಡಿಯಲ್ಲಿರುವ 102 ನಗರಗಳಿಗೆ ಆರಂಭಿಕ ಹಂತದ 10 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ದೆಹಲಿ, ಮುಂಬೈ, ಕಾನ್ಪುರ್, ಲಕ್ನೋ, ಚಂಡೀಗಢ, ವಾರಣಾಸಿ, ಬೆಂಗಳೂರು, ಕೋಲ್ಕತಾ, ಹೈದರಾಬಾದ್ ಮತ್ತು ಪಾಟ್ನಾ ಇವುಗಳ ಪೈಕಿ ಸೇರಿವೆ. 2011 ರಿಂದ 2015 ರವರೆಗೆ ಐದು ವರ್ಷಗಳಲ್ಲಿ 102 ನಗರಗಳನ್ನು ಪಿಎಂ 10 ಅಥವಾ ಸಾರಜನಕ ಡೈಆಕ್ಸೈಡ್ ಮಟ್ಟದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. 2011 ರಿಂದ 2015 ರವರೆಗೆ 5 ವರ್ಷಗಳ ಕಾಲ ಸತತವಾಗಿ ಗಾಳಿಯ ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ಈ ನಗರಗಳನ್ನು 'ಸಾಧಿಸಲು ವಿಫಲವಾದ' ನಗರಗಳೆಂದು ಘೋಷಿಸಲಾಗಿದೆ. ಈ ನಗರಗಳ ಪೈಕಿ ಮಹಾರಾಷ್ಟ್ರವು ಅತಿ ಹೆಚ್ಚು ನಗರಗಳನ್ನು ಹೊಂದಿದ್ದು, ಕೇಂದ್ರ ಸರ್ಕಾರದ ಧನಸಹಾಯಕ್ಕೆ ಅರ್ಹವಾದ 17 ನಗರಗಳನ್ನು ಹೊಂದಿದೆ ಮತ್ತು ಉತ್ತರ ಪ್ರದೇಶವು ಅಂತಹ 15 ನಗರಗಳನ್ನು ಹೊಂದಿದೆ. ಮಣಿಪುರ, ಸಿಕ್ಕಿಂ, ಅರುಣಾಚಲ ಪ್ರದೇಶ, ಮಿಜೋರಾಂ, ತ್ರಿಪುರ, ಕೇರಳ, ಗೋವಾ ಮತ್ತು ಹರಿಯಾಣ ರಾಜ್ಯಗಳು ಈ ಪಟ್ಟಿಯಲ್ಲಿ ಯಾವುದೇ ನಗರಗಳನ್ನು ಹೊಂದಿಲ್ಲ. ಹತ್ತು ಲಕ್ಷ ಜನಸಂಖ್ಯೆ ಇರುವ 74 ನಗರಗಳು ಐದು ರಿಂದ 20 ಲಕ್ಷ ರೂಪಾಯಿಗಳನ್ನು, 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನರಗಳು ತಲಾ 10 ಲಕ್ಷ ರೂ. ಪಡೆಯಲಿವೆ. "102 ನಗರಗಳಲ್ಲಿ 80 ನಗರಗಳು ಈಗಾಗಲೇ ತಮ್ಮ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿವೆ ಮತ್ತು ಅವುಗಳ ಮಾಲಿನ್ಯ ತಗ್ಗಿಸುವ ಕ್ರಮಗಳನ್ನು ಕೇಂದ್ರವು ಬೆಂಬಲಿಸಲಿದೆ" ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. "ಭೂಮಿಯನ್ನು ಹಸಿರು ಮತ್ತು ಆಕಾಶವನ್ನು ನೀಲಿ ಮಾಡುವ ಉದ್ದೇಶವನ್ನು ಬಜೆಟ್ ಘೋಷಿಸಿದೆ. ಅರಣ್ಯೀಕರಣ ಮತ್ತು ನಗರಗಳನ್ನು ಮಾಲಿನ್ಯ ರಹಿತವಾಗಿಸುವ ಮೂಲಕ ಇದನ್ನು ಸಾಧಿಸಲಾಗುವುದು" ಎಂದು ಅವರು ಹೇಳಿದ್ದಾರೆ. ದಿ ಹಿಂದೂ ವರದಿಯ ಪ್ರಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಬೃಹತ್ ಕೈಗಾರಿಕಾ ಸಚಿವಾಲಯ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಕೃಷಿ ಸಚಿವಾಲಯ, ಆರೋಗ್ಯ ಸಚಿವಾಲಯ, ನೀತಿ ಆಯೋಗ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಇದರ ಭಾಗವಾಗಲಿದೆ. ಎನ್‌ಸಿಎಪಿ ಅನುಷ್ಠಾನದಲ್ಲಿ ಉದ್ಯಮ ಮತ್ತು ಅಕಾಡೆಮಿಗಳು ಸಚಿವಾಲಯಗಳೊಂದಿಗೆ ಮತ್ತು ಸಂಸ್ಥೆಗಳೊಂದಿಗೆ ಸಹಕರಿಸಲಿವೆ. "ಸುದೀರ್ಘ ಅವಧಿಯ ಬಳಿಕ. ದೇಶಾದ್ಯಂತದ ವಾಯುಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಹೊರತರಲಾದ ಎನ್‌ಸಿಎಪಿಯ ಅಂತಿಮ ಆವೃತ್ತಿಯನ್ನು ನೋಡುತ್ತಿರುವುದು ಸಂತೋಷವನ್ನು ತಂದಿದೆ. 2024 ರ ವೇಳೆಗೆ ಶೇ. 20-30% ರಷ್ಟು ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುವ ಗುರಿ ಇದರ ಪ್ರಮುಖ ಅಂಶವಾಗಿದೆ" ಎಂದು ಗ್ರೀನ್‌ಪೀಸ್ ಭಾರತದ ಹಿರಿಯ ಪ್ರಚಾರಕ ಸುನಿಲ್ ದಹಿಯಾ ಹೇಳಿದ್ದಾರೆ. ದೇಶಕ್ಕೆ ವಾಯುಮಾಲಿನ್ಯವನ್ನು ನಿಯಂತ್ರಣ ಮಾಡುವುದು ಅನಿವಾರ್ಯವಾಗಿದೆ. ಭಾರತದಲ್ಲಿ ಶೇ. 12.5 ರಷ್ಟು ಸಾವುಗಳು ವಾಯುಮಾಲಿನ್ಯದಿಂದಾಗಿ ಆಗುತ್ತದೆ ಎಂಬುದನ್ನು ವರದಿಗಳು ತಿಳಿಸುತ್ತವೆ. ವಾಯುಮಾಲಿನ್ಯವು ದೇಶಕ್ಕೆ ಒಂದು ದೊಡ್ಡ ಸಮಸ್ಯೆಯಾಗಿದೆ, ಆದರೆ ಕೆಲವರು ದೀಪಾವಳಿಯ ಸಂದರ್ಭದಲ್ಲಿ ಮಾತ್ರ ವಾಯುಮಾಲಿನ್ಯವಾಗುತ್ತದೆ ಎಂದು ಅಂದುಕೊಂಡಿದ್ದಾರೆ. ಈಗ ಮೋದಿ ಸರ್ಕಾರ ಸಮಸ್ಯೆಯನ್ನು ಪರಿಹರಿಸಲು ಅವಿರತ ಪ್ರಯತ್ನಗಳನ್ನು ಮಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
2020/06/02 18:24:25
https://news13.in/archives/131618
mC4
ದಿನಕ್ಕೊಂದು ಕಥೆ- ವಿಪರ್ಯಾಸ | themangaloremirror.in ಹಿಮಗಿರಿಯ ಮೇಲೆ ಧಿರಿಸು ದರಿಸಿ ಕಾಯುತ್ತಿರುವ ಸೈನಿಕ ಅವನು. ಮಂಜಿನ ಮಳೆಯೇ ದಿನವು ಹನಿಯುತ್ತಿರುವ ಜಾಗ. ರೆಪ್ಪೆಗಳ ಅಲಗಿನ ಮೇಲೆ ಬಿಳಿ ಮಂಜು ಕ್ಷಣ ಬಿಡದೆ ಸುರಿದರೂ ಆತ ರೆಪ್ಪೆ ಅಲುಗಿಸದೆ ಬಂದೂಕು ಹಿಡಿದು ದೇಶ ಕಾಯುತ್ತಿದ್ದಾನೆ. ರಜೆ ಘೋಷಣೆಯಾಯಿತು .ಮನೆಗೆ ಹೊರಟು. ಊರಿನ ನಡುವೆ ಸಾಗಿದಾಗ ಸ್ವಾಗತಿಸಿದರು. ಕುಶಲೋಪರಿ, ಮಾತುಕತೆ, ಊರಿನ ನಡುವೆ ಆತ್ಮೀಯರ ಜೊತೆ ಓಡಾಟ. ಅಲ್ಲೊಂದು ಮನೆಗೆ ಬೆಂಕಿ ಬಿದ್ದ ಸುದ್ದಿ ತಿಳಿದ ತಕ್ಷಣ ಅತ್ತ ಧಾವಿಸಿದ. ದೇಶ ಕಾಯೋನಿಗೆ ತನ್ನವರನ್ನು ಉಳಿಸಲು ವಿಶೇಷವಾಗಿ ಹೇಳಬೇಕಾಗಿಲ್ಲ ಬಿಡಿ. ಒಳಗೆ ಸಿಲುಕಿದ ಜೀವಗಳನ್ನು ಉಳಿಸಲು ಅಗ್ನಿಯೊಳಗೆ ದುಮುಕಿದ. ಜೀವಗಳನ್ನು ಜತನವಾಗಿ ಹೊರತಂದ .ಇನ್ನೊಂದು ಉಳಿದಿತ್ತು. ಆಗಲಿ ಸೈನಿಕನ ದೇಹ ಅರ್ಧದಷ್ಟು ಸುಟ್ಟುಹೋಗಿತ್ತು. ಕಾರ್ಯ ನಿಲ್ಲಿಸಿಲ್ಲ. ಮತ್ತೆ ಒಳಗೆ ಸಾಗಿ ಬಡಿಯುತ್ತಿರೋ ಪುಟ್ಟ ಜೀವವನ್ನು ಹೊರತಂದು ಪ್ರಜ್ಞೆತಪ್ಪಿದ. ದೇಹ ಬೆಂದಿತ್ತು, ಗುರುತೆ ಮಾಯವಾಗಿತ್ತು .ಜೀವ ಕ್ಷೀಣಿಸುವ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ಸಾಗಿಸಿದರು. ಉಳಿಸುವ ಪ್ರಯತ್ನವಾದರೂ ಭಗವಂತ ಕರೆದುಕೊಂಡೇ ಬಿಟ್ಟ .ಈ ಸುದ್ದಿ ಸದ್ದಾಗಲೇ ಇಲ್ಲ. ಮಾಧ್ಯಮ ನಮಗೆ ತಿಳಿಸಲೇ ಇಲ್ಲ. ಚಿತ್ರನಟಿಯ ಕೆಲವು ಲಕ್ಷದ ಸುದ್ದಿಯಿತ್ತು, ಯಾವುದು ಚಲನಚಿತ್ರದ ಭರಾಟೆಗೆ ಇತ್ತು ,ಈ ಸುದ್ದಿ ಅವನ ಮನೆಯವರಿಗೆ ಮಾತ್ರ ತಿಳಿದಿತ್ತು. ವಿಪರ್ಯಾಸ ….. ಹಿಮಗಿರಿ ಇವನ ಬರುವಿಕೆಗೆ ಕಾದಿದೆ ಆದರೆ ಅವನಿಲ್ಲ? ನಮ್ಮೊಳಗಿನ ನೆನಪಿನ ಹಾಗೆ ….. Related Topics:DAILY STORIESdheeraj bellaredheeraj bellare storiesstoryಕಥೆಕಥೆಗಾರದಿನದ ಕಥೆಧೀರಜ್ ಬೆಳ್ಳಾರೆವಿಪರ್ಯಾಸ
2021/05/06 16:26:58
https://themangaloremirror.in/dheeraj-bellares-daily-stories-34/
mC4
ಅಭಿಷೇಕ್‌ ಬ್ಯಾಡ್‌ ಮ್ಯಾನರ್ಸ್‌ ನೀವ್‌ ನೋಡಿದ್ರ.. – Kannada News Live | ಕನ್ನಡ ನ್ಯೂಸ್ ಲೈವ್ | kannadanews.live ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಷ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಅಮರ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಭಿಷೇಕ್‌, ಸದ್ಯ ಬ್ಯಾಡ್‌ ಮ್ಯಾನರ್ಸ್‌ ಇಟ್ಕೊಂಡು ಗಾಂಧಿನಗರದಲ್ಲಿ ಹವಾ ತೋರಿಸೋಕೆ ರೆಡಿಯಾಗ್ತಿರೋದು ಮತ್ತು ಅಭಿಷೇಕ್‌ಗೆ ಬ್ಯಾಟ್‌ ಮ್ಯಾನರ್ಸ್‌ ಹೇಳಿಕೊಡ್ತಾ ಇರೋದು ಸುಕ್ಕಾ ಸೂರಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ, ಇನ್ನು ಈ ಚಿತ್ರದ ಶೂಟಿಂಗ್‌ ಹಂತ ಹಂತವಾಗಿ ಈಗಾಗಲೇ ಮಾಡ್ತಾ ಇದ್ದು, ಇವತ್ತು ಅಭಿಷೇಕ್‌ ಅಂಬರೀಷ್‌ ಅವ್ರ ಹುಟ್ಟುಹಬ್ಬದ ವಿಶೇಷವಾಗಿ ಸುಕ್ಕಾ ಸೂರಿ ಅಂಡ್‌ ಟೀಂ ಯಂಗ್‌ ರೆಬೆಲ್‌ ಸ್ಟಾರ್‌ ಒಂದು ಗಿಫ್ಟ್‌ ನೀಡಿದೆ. ಬ್ಯಾಡ್‌ ಮ್ಯಾನರ್ಸ್‌ ಚಿತ್ರತಂಡದಿಂದ ಒಂದು ಪ್ರೋಮೋ ವಿಡಿಯೋ ರಿಲೀಸ್‌ ಮಾಡಿದ್ದು, ಚಿತ್ರದ ಒಂದು ತುಣುಕನ್ನು ರಿಲೀಸ್‌ ಮಾಡಿದ್ದಾರೆ. ರಗಡ್‌ ಲುಕ್‌ನಲ್ಲಿ ಕಾಣಿಸೋ ಅಭಿಷೇಕ್‌ ಒಂದು ಕಡೆ, ಇದು ಸಹ ಒಂದು ಪಕ್ಕಾ ಮಾಸ್‌ ಮತ್ತು ಸುಕ್ಕಾ ಸಿನಿಮಾ ಅನ್ನೋ ಫೀಲ್‌ ಕೊಡೋ ವಿಡಿಯೋ ಎರಡು ಸದ್ಯ ಸಿನಿರಸಿಕರಿಗೆ ಸಖತ್‌ ಥ್ರಿಲ್‌ ನೀಡಿದೆ. ಈಗಾಗಲೇ ವಿಡಿಯೋ ರಿಲೀಸ್‌ ಆಗಿದ್ದು, ಅಭಿಷೇಕ್‌ ಅಭಿಮಾನಿಗಳು ಸಖತ್‌ ಥ್ರಿಲ್‌ ಆಗಿದ್ದಾರೆ. ಇನ್ನು ವಿಡಿಯೋ ಜೊತೆಯಲ್ಲಿ ಅಭಿಷೇಕ್‌ ಬ್ಯಾಡ್‌ಮ್ಯಾನರ್ಸ್‌ ಲುಕ್‌ ಕೂಡ ಬಿಡುಗಡೆ ಮಾಡಿದ್ದು, ಸಿನಿರಸಿಕರ ಕ್ಯೂರ್ಯಾಸಿಟಿ ಹೆಚ್ಚಿಸಿದೆ. ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್‌ ಸಿಕ್ಕಿದ್ದು, ನಮ್‌ ಕಡೆಯಿಂದಾನೂ ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಷ್‌ಗೆ ಬರ್ತ್‌ಡೇ ವಿಶ್‌ ಹೇಳೋಣ.
2021/01/21 02:23:06
https://www.kannadanews.live/%E0%B2%85%E0%B2%AD%E0%B2%BF%E0%B2%B7%E0%B3%87%E0%B2%95%E0%B3%8D%E2%80%8C-%E0%B2%AC%E0%B3%8D%E0%B2%AF%E0%B2%BE%E0%B2%A1%E0%B3%8D%E2%80%8C-%E0%B2%AE%E0%B3%8D%E0%B2%AF%E0%B2%BE%E0%B2%A8%E0%B2%B0%E0%B3%8D/
mC4
ಐಆರ್‌ಸಿಟಿಸಿ ಷೇರು: ಭಾರಿ ಗಳಿಕೆ | Prajavani ಒಂದೇ ದಿನ ಶೇ 129ರಷ್ಟು ಜಿಗಿತ: ಪ್ರತಿ ಷೇರಿನ ಬೆಲೆ ₹ 728.60 ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಷೇರುಗಳು ಸೋಮವಾರ ಭರ್ಜರಿ ವಹಿವಾಟು ಕಂಡವು. ಪ್ರತಿ ಷೇರಿಗೆ ನೀಡಿಕೆ ಬೆಲೆ ₹ 320 ನಿಗದಿಪಡಿಸಲಾಗಿತ್ತು. ಆದರೆ ಅದಕ್ಕಿಂತಲೂ ಶೇ 127ರಷ್ಟು ಹೆಚ್ಚು ಅಂದರೆ ಪ್ರತಿ ಷೇರು ₹ 728.60ರಂತೆ ಮಾರಾಟವಾಯಿತು. ಇದರಿಂದ ಷೇರು ವಿಕ್ರಯಕ್ಕೆ ಉತ್ತೇಜನ ದೊರೆತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ವಹಿವಾಟಿಗೆ ಪ್ರವೇಶಿಸಿದ ಮೊದಲ ದಿನವೇ ಷೇರುಗಳ ಬೆಲೆಯಲ್ಲಿ ಗರಿಷ್ಠ ಏರಿಕೆ ಕಂಡ ಎರಡನೇ ಕಂಪನಿ ಎನ್ನುವ ಹೆಗ್ಗಳಿಕೆಯನ್ನೂ ಐಆರ್‌ಸಿಟಿಸಿ ತನ್ನದಾಗಿಸಿಕೊಂಡಿದೆ. ಐಆರ್‌ಸಿಟಿಸಿನ ಮಾರುಕಟ್ಟೆ ಮೌಲ್ಯ ಈಗ ₹ 11,657.60 ಕೋಟಿಗಳಿಗೆ ತಲುಪಿದೆ. 2017ರ ಜುಲೈನಲ್ಲಿ ಸಾಲ್ಸರ್‌ ಎಂಜಿನಿಯರಿಂಗ್‌ ಷೇರುಗಳು ಶೇ 142ರಷ್ಟು ಜಿಗಿತ ಕಂಡಿದ್ದವು.
2019/11/13 15:37:06
https://www.prajavani.net/business/commerce-news/irctc-share-673806.html
mC4
'ಪರಮಾತ್ಮ' ದಾಖಲೆ ಮುರಿದ 'ಸಂಗೊಳ್ಳಿ ರಾಯಣ್ಣ' | Kranthiveera Sangolli Raayanna | Audio Rights Sold | Rs 64 Lakhs | ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ | ಆಡಿಯೋ ರೈಟ್ಸ್ | ರು.64 ಲಕ್ಷ - Kannada Filmibeat 'ಪರಮಾತ್ಮ' ದಾಖಲೆ ಮುರಿದ 'ಸಂಗೊಳ್ಳಿ ರಾಯಣ್ಣ' | Published: Wednesday, February 29, 2012, 17:13 [IST] ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಆರಂಭದಿಂದಲೂ ಸದ್ದಿನ ಮೇಲೆ ಸದ್ದು ಮಾಡುತ್ತಲೇ ಇದೆ. ಭಾರಿ ಬಜೆಟ್‍ ಚಿತ್ರ ಎಂಬ ಕಾರಣಕ್ಕೆ ಚಿತ್ರದ ಮೇಲೆ ಭರವಸೆಗಳೂ ಬೆಟ್ಟದಷ್ಟಿವೆ. ಚಿತ್ರದ ಆಡಿಯೋ ರೈಟ್ಸ್ ಕೂಡ ಭರ್ಜರಿ ಬೆಲೆಗೆ ಮಾರಾಟವಾಗಿರುವುದು ಈಗ ಇನ್ನೊಂದು ವಿಶೇಷ ಸುದ್ದಿ. ಚಿತ್ರದ ಆಡಿಯೋ ರೈಟ್ಸ್‌ನ್ನು ಅಶ್ವಿನಿ ಆಡಿಯೋ ಸಂಸ್ಥೆ ಭರ್ಜರಿ ಬೆಲೆಗೆ ಖರೀದಿಸಿದೆ. ರು.64 ಲಕ್ಷ ದಾಖಲೆ ಬೆಲೆಗೆ ಕ್ರಾಂ.ವೀ.ಸಂ ಆಡಿಯೋ ರೈಟ್ಸ್ ಮಾರಾಟವಾಗಿವೆ ಎನ್ನುತ್ತವೆ ಮೂಲಗಳು. ಪುನೀತ್ ರಾಜ್ ಕುಮಾರ್ ಅಭಿನಯದ 'ಪರಮಾತ್ಮ' ಆಡಿಯೋ ರೈಟ್ಸ್ ರು.57 ಲಕ್ಷಕ್ಕೆ ಮಾರಾಟವಾಗಿತ್ತು. ಈಗ ಆ ದಾಖಲೆಯನ್ನು 'ಕ್ರಾಂ.ವೀ.ಸಂ' ಚಿತ್ರ ಮುರಿದಿದೆ. ಚಿತ್ರದ ಟಿವಿ ರೈಟ್ಸ್‌ ಬಗ್ಗೆ ಮಾತುಕತೆ ನಡೆಯುತ್ತಿದೆ. ಚಿತ್ರದ ಬಜೆಟ್‌ನ ಶೇ.25ರಷ್ಟನ್ನು ಅಂದರೆ ರು.7 ಕೋಟಿ ಬೇಡಿಕೆಯನ್ನು ನಿರ್ಮಾಪಕರು ಮುಂದಿಟ್ಟಿದ್ದಾರೆ. 'ಕ್ರಾ.ವೀ.ಸಂ' ಚಿತ್ರದ ಟಿವಿ ರೈಟ್ಸ್‌ ಉದಯ ವಾಹಿನಿ ಕೈ ಸೇರುವ ಸಾಧ್ಯತೆಗಳಿವೆ. ಯಶೋವರ್ಧನ್ ಸಂಗೀತ ನೀಡಿರುವ ಚಿತ್ರದ ಆಡಿಯೋ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್) Read more about: ದರ್ಶನ್ ನಿಖಿತಾ ತುಕ್ರಲ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ darshan nikita thukral kranthiveera sangolli raayanna Challenging Star Darshan's forthcoming filmkranthiveera sangolli raayanna audio rights were sold for ahwini media networks for a highest price of 64 lakhs. This indeed is a good price for a Sandalwood film. Yashovardhan composed the tunes for the film.
2021/06/16 14:32:10
https://kannada.filmibeat.com/music/29-kranthiveera-sangolli-raayanna-audio-rights-sold-aid0052.html
mC4
ನೈಜ ಘಟನೆ ಆಧಾರಿತ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ – PopcornKannada ನೈಜ ಘಟನೆ ಆಧಾರಿತ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೀತಾ ರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್‌ ಕುಮಾರಸ್ವಾಮಿ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಈಗ ಅದಕ್ಕೆ ತೆರೆ ಬಿದ್ದಿದ್ದು, ರಿಯಲ್‌ ಕಥೆಗೆ ನಿಖಿಲ್‌ ಹೀರೋ ಆಗಲಿದ್ದಾರೆ. ಪೈಲ್ವಾನ್‌ ಸಿನಿಮಾದ ಯಶಸ್ಸಿನ ನಂತರ ಕೃಷ್ಣ ಅವರು ನಿಖಿಲ್‌ಗೆ ನಿರ್ದೇಶನ ಮಾಡಲಿದ್ದಾರೆ. ಅವರು ಈ ರಿಯಲ್‌ ಕಥೆಗೆ ಚಿತ್ರಕಥೆ ಬರೆಯುತ್ತಿದ್ದು, ನೈಜ ಘಟನೆಗಳನ್ನು ಆಧರಿಸಿದೆಯಂತೆ. ಈಗಾಗಲೇ ಚೆನ್ನೈನಲ್ಲಿ ಕುಳಿತು ಕಥೆಯನ್ನು ಫೈನಲ್ ಮಾಡುತ್ತಿರುವ ಕೃಷ್ಣ ಈ ಚಿತ್ರದಲ್ಲಿ ನಿಖಿಲ್‌ ಅವರನ್ನು ಡಿಫ್ರೆಂಟ್ ಆಗಿ ತೋರಿಸಲಿದ್ದಾರೆ. ವಿಶೇಷ ಎಂದರೆ ನಿಖಿಲ್‌ ಸಹ ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದು, ಡಿಫ್ರೆಂಟ್‌ ಅವತಾರದಲ್ಲಿ ಪ್ರೇಕ್ಷಕರ ಎದುರು ಬರಲಿದ್ದಾರಂತೆ . ಸದ್ಯಕ್ಕೆ ಉಳಿದ ತಾರಾಗಣ, ತಂತ್ರಜ್ಞರು ಯಾರು ಎಂಬುದು ಇನ್ನೂ ಡಿಸೈಡ್‌ ಆಗಿಲ್ಲ. ಆದರೆ ಒಂದೊಳ್ಳೆ ಕಥೆಯ ಮೂಲಕ ತಮ್ಮ ಮೂರನೇ ಚಿತ್ರದಲ್ಲಿ ನಟಿಸಲಿದ್ದಾರೆ ನಿಖಿಲ್‌.
2020/08/13 14:14:35
http://popcornkannada.com/nikhil-to-star-in-a-real-incident-based-film/
mC4
ವಿನಾಶದತ್ತ ಭಾಜಪ: ರೈತ ಮತಗಳ ಫಸಲು ಕೊಯಿಲಿಗಾಗಿ ಕಾದಿರುವ ಇತರೆ ಪಕ್ಷಗಳು | Agriculture: BJP Towards Destruction: Other Parties Waiting For The Harvest Of Farmers Votes - Kannada Oneindia 32 min ago ಮಹಾರಾಷ್ಟ್ರ, ಕರ್ನಾಟಕದಲ್ಲಿ 18-44 ವರ್ಷದವರಿಗೆ ಇಲ್ಲ ಕೊರೊನಾ ಲಸಿಕೆ! | Updated: Tuesday, February 23, 2021, 13:03 [IST] ವಿನಾಶಕಾಲೇ ವಿಪರೀತ ಬುದ್ದಿ ಎಂಬ ಮಾತಿದೆ. ಭಾಜಪ ಸರ್ಕಾರಕ್ಕೆ ಈ ಮಾತು ಹೇಳಿಮಾಡಿಸಿದಂತಿದೆ. ಇವರು ಅಧಿಕಾರಕ್ಕೆ ಬಂದಾಗಿನಿಂದ "ವಿಪರೀತ ಬುದ್ಧಿ" ಯನ್ನು ಹೇಗೆ ಪ್ರದರ್ಶಿಸಿದ್ದಾರೆ ಎಂಬುದನ್ನು ನೋಡೋಣ. ಮೊದಲ ಭಾರಿ ಭಾರತೀಯ ಜನತಾ ಪಕ್ಷ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿ ನಡೆಸಿದ ಪ್ರಚಾರಾಂದೋಲನದಲ್ಲಿ ಅನೇಕ ಭರಸೆಗಳನ್ನು ನೀಡಿದ್ದರು. ಅದರಲ್ಲಿ ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ C2+50% ನೀಡುವುದಾಗಿ ಕೂಡಾ ಆಶ್ವಾಸನೆ ನೀಡಿದ್ದರು. Infact ಅದು ಭಾಜಪ ಪ್ರಣಾಳಿಕೆಯ ಭಾಗವಾಗಿತ್ತು. ರೈತ ನಾಯಕರೇ ಎಚ್ಚರದಿಂದಿರಿ C2+50% ಅಂದರೆ ಬೆಳೆಯ ಸಮಗ್ರ ಉತ್ಪಾದನಾ ವೆಚ್ಚದ ಮೇಲೆ ಶೇಕಡಾ ಐವತ್ತರಷ್ಟು ಲಾಭ ನೀಡುವುದು ಎಂದರ್ಥ. ರೈತರು ಆ ಮಾತನ್ನ ನಂಬಿದರು. ಮತ ಕೊಟ್ಟರು ಭಾಜಪ ಅಧಿಕಾರಕ್ಕೆ ಬಂತು. ಬಂದಾದ ಮೇಲೆ ಆ ಬಗ್ಗೆ ಮೋದಿ ಸರ್ಕಾರ ಚಕಾರವೇ ಎತ್ತಲಿಲ್ಲ. ಜುಲೈ 2018 ರಲ್ಲಿ ಕ್ಯಾಬಿನೆಟ್ ನಲ್ಲಿ MSP ಕುರಿತಾಗೆ ಒಂದಿಷ್ಟು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ ಸ್ವಾಮಿನಾಥನ್ ವರದಿಯಂತೆ ರೈತರಿಗೆ MSP ಕೊಟ್ಟಿದ್ದೇವೆ ಎಂದು ಪ್ರಚಾರ ಗಿಟ್ಟಿಸಿಕೊಂಡರು. ಆ ಬಗ್ಗೆ ಖುದ್ದು ಸ್ವಾಮಿನಾಥನ್ ಅವರನ್ನೇ ಸಂಪರ್ಕಿಸಿ ಸರ್ಕಾರದ ಸ್ಟೇಟ್ಮೆಂಟ್ ಕುರಿತಾಗಿ ಅವರ ಪ್ರತಿಕ್ರಿಯೆ ಕೇಳಿದ್ದೆ. ಆಗವರು ನೀಡಿದ ಅಂಕಿ ಅಂಶಗಳು ಹೀಗಿವೆ.(Extract of the press note released by M S Swaminathan in July 2018) The MSP announced is higher in absolute terms but below the recommended level. For example, the MSP of common paddy has been hiked from Rs 1550 to Rs 1750 per quintal. Taking the C2 cost of last year (2017-18) and assuming a 3.6 per cent rise in input costs based on the input cost index used by CACP, the estimated C2 cost for this year (2018-19) is Rs 1524. So, the new MSP is C2+15%, not C2+50%. In the case of ragi, the new MSP is C2+20%. Similarly, for moong, the MSP has been raised from Rs 5575 to Rs 6975, so it is now C2+19%. ಮತ್ತೊಂದು ಭಾರಿ ಬಹುಮತ ಪಡೆದು ಅಧಿಕಾರಕ್ಕೆ ಈಗ ವಿಷಯಕ್ಕೆ ಬರೋಣ. ಮೊದಲಿಗೆ ಭಾಜಪ ಸರ್ಕಾರ ತನ್ನ ಪ್ರಚಾರಾಂದೋಲನದಲ್ಲಿ ಆಶ್ವಾಸನೆ ನೀಡಿದ ಹಾಗೆ C2+50% ಕೊಡಲಿಲ್ಲ. ಮಾತಿಗೆ ತಪ್ಪಿ ರೈತರಿಗೆ ಮೋಸ ಮಾಡಿತು. ಮುಂದುವರೆದು C2+50% ಕೊಟ್ಟಿದ್ದೇವೆ ಎಂದು ಸುಳ್ಳು ಪ್ರಚಾರ ಗಿಟ್ಟಿಸಿಕೊಂಡಿತು. ಜನಪದರದ್ದೊಂದು ಮಾತಿದೆ "ಮೋಸ ನಾಸ್ನ-ಸುಳ್ಳು ದರಿದ್ರ" ಅಂತಾ ನಾಸ್ನ ಅಂದ್ರೆ ನಾಶ ಎಂದರ್ಥ. ಆದರೆ ಭಾಜಪ ಎಷ್ಟೇ ಮೋಸದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರೂ ಸುಳ್ಳುಗಳನ್ನು ಬಿತ್ತರಿಸಿದರೂ ಅದು ನಾಶವೂ ಆಗುತ್ತಿಲ್ಲ, ಮತ್ತದಕ್ಕೆ ದರಿದ್ರವೂ ಅಂಟಿಕೊಳ್ಳುತ್ತಿಲ್ಲ. ಮತ್ತೊಂದು ಭಾರಿ ಬಹುಮತ ಪಡೆದು ಅಧಿಕಾರಕ್ಕೆ ಬಂತು. ಸರ್ಕಾರ ಕೃಷಿ ಕಾನೂನುಗಳನ್ನು ರೂಪಿಸುವಂತಿಲ್ಲ ಕೇಂದ್ರ ತಂದಿರುವ ಮೂರು ಕೃಷಿ ಕಾಯಿದೆಗಳ ಬಗ್ಗೆ ಸಂವಿಧಾನ ತಜ್ಞರು ವ್ಯಾಖ್ಯಾನಿಸುವಂತೆ ಕೃಷಿ ಎಂದಿಗೂ ರಾಜ್ಯಗಳ ವಿಷಯ. ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ರೂಪಿಸುವಂತಿಲ್ಲ. ಹಾಗೆ ಮಾಡಿದಲ್ಲಿ ಅದು ಒಕ್ಕೂಟ ವ್ಯವಸ್ಥೆಗೆ ವಿರುದ್ಧದ ನಡೆ ಎಂಬುದಾಗಿಯೂ, ಮತ್ತೊಂದು ಕಡೆ ಈ ಕಾಯಿದೆಗಳನ್ನು ತರಲು ಕಾನೂನಿನಲ್ಲಿ ಅವಕಾಶವೇ ಇಲ್ಲ, ಇವುಗಳನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಬೇಕು ಎಂಬ ಮಾತುಗಳು ಕೂಡಾ ಕೇಳಿಬರುತ್ತಿವೆ. ಆದಾಗ್ಯೂ ಕೇಂದ್ರ ಸರ್ಕಾರ ಏನೂ ಆಗಿಲ್ಲವೇನೋ ಎಂಬಂತೆ ನಿರುಮ್ಮಳವಾಗಿರುವುದಲ್ಲದೆ, ಚಳವಳಿ ನಿರತ ರೈತರ ಬಗ್ಗೆ ತನ್ನ ಶಕ್ತಿ ಮೀರಿ ಅಸಡ್ಡೆ ತೋರುತ್ತಿದೆ. ಕೋರ್ಟ್ ಮಧ್ಯಪ್ರವೇಶಿಸಿ ಅಷ್ಟೇ ವೇಗವಾಗಿ ಸುಮ್ಮನಾಯಿತು ಇನ್ನು ಈ ಮೂರು ಕೃಷಿ ಕಾಯಿದೆಗಳ ವಿರುದ್ಧ ಜನಪರ ಅರ್ಥಶಾಸ್ತ್ರಜ್ಞರು ಮಾತನಾಡಿದಾಗ ದಿವ್ಯ ಮೌನವಹಿಸಿದ್ದ ಕೇಂದ್ರ ಸರ್ಕಾರ, ರೈತರು "ದಿಲ್ಲಿ ಚಲೋ" ಮಾಡಿದಾಗ ಚರ್ಚೆಗೆ ಕರೆದು ಕಾನೂನಿಗೆ ಅಗತ್ಯ ತಿದ್ದುಪಡಿ ತರುವ ಭರವಸೆ ನೀಡಿತು. ಎರಡನೆಯ ಭಾಗದಲ್ಲಿ ಈಗ ತಂದಿರುವ ಕಾನೂನುಗಳು ರೈತ ಪರವಾಗಿವೆ ಎಂದು ಹೇಳಿಕೊಂಡಿತು. ಮೂರನೆಯ ಭಾಗದಲ್ಲಿ ಈಗ ಚಳವಳಿ ನಿರತವಾಗಿರುವವರು ರೈತರೇ ಅಲ್ಲ ಎಂದು ಹೇಳಿತು. ಅದೂ ಸಾಲದೆಂಬದೆ ಖಲೀಸ್ತಾನಿಗಳು ಎಂದು ಹೇಳಿತು. ಇನ್ನೂ ಮುಂದುವರೆದು ಇದು ಕೇವಲ ಪಂಜಾಬ್ ರೈತರ ತಕರಾರಷ್ಟೇ ಎಂದಿತು. ಏತನ್ಮಧ್ಯೆ ತಮ್ಮ ಪಕ್ಷಕ್ಕೆ ನಡೆದುಕೊಳ್ಳುವ ಒಂದಿಷ್ಟು ರೈತರಿಂದ ಈಗ ತಂದಿರುವ ಕೃಷಿ ಕಾಯಿದೆಗಳು ಸರಿಯಾಗಿವೆ. ಇದರಿಂದ ರೈತರಿಗೆ ಲಾಭವಿದೆ. ಕಳೆದ ಇಪ್ಪತ್ತು ವರ್ಷಗಳಿಂದ ನಾವಿದನ್ನೇ ಕೇಳುತ್ತಿದ್ದದ್ದು ಎಂದೆಲ್ಲಾ ಹೇಳಿಕೆಗಳನ್ನು ಬಿಡುಗಡೆ ಮಾಡಿತು. ಏತನ್ಮಧ್ಯೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಅಷ್ಟೇ ವೇಗವಾಗಿ ಸುಮ್ಮನಾದ ಪ್ರಸಂಗವೂ ನಡೆಯಿತು. ಚಳುವಳಿ ಮುಂದುವರೆಯುತ್ತಿದೆ. ಜನವರಿ 26ರ ಘಟನೆ ಲಕ್ಷಾಂತರ ರೈತರು ದಿಲ್ಲಿಗೆ ಟ್ರಾಕ್ಟರ್ ಗಳನ್ನು ತಂದರು. ಪೊಲೀಸರು ಹಾಕಿದ್ದ ತಡೆಗೋಡೆಗಳನ್ನು ತೆರವು ಮಾಡಿ ದಿಲ್ಲಿಯೊಳಗೆ ಹೋದರು. ಲಾಠಿ ಚಾರ್ಚ್, ಅಶ್ರುವಾಯು ಸಿಡಿಸಿದ ಪೊಲೀಸರು ರೈತರ ಟ್ರಾಕ್ಟರ್ ರ್‍ಯಾಲಿಗೆ ಅಡಚಣೆ ಮಾಡಿದರು. ಏತನ್ಮಧ್ಯೆ ಕೆಂಪುಕೋಟೆಗೆ ನುಗ್ಗಿದವರಲ್ಲೊಬ್ಬ ಖಲೀಸ್ತಾನದ ಬಾವುಟ ಹಾರಿಸಿದ. ಮುಂದಿನ ದಿನಗಳಲ್ಲಿ ಆತನ ಹಿನ್ನೆಲೆ, ಏತಕ್ಕಾಗಿ ಅದೆಲ್ಲಾ ನಡೆಯಿತು ಎಂಬಿತ್ಯಾದಿ ಸತ್ಯ ಸಂಗತಿಗಳು ಜಗತ್ತಿನ ಮುಂದೆ ಅನಾವರಣಗೊಂಡವು. ರಾಕೇಶ್ ಟಿಕಾಯತ್ ಕಣ್ಣೀರು ಕೇಂದ್ರ ಸರ್ಕಾರ ರೈತ ಚಳುವಳಿಗೆ "ರಾಷ್ಟ್ರ ದ್ರೋಹ"ದ ಪಟ್ಟವನ್ನು ಕಟ್ಟಿದ್ದು, ರೈತ ಚಳವಳಿಯನ್ನು ಒಕ್ಕಲೆಬ್ಬಿಸಲು ಇನ್ನಿಲ್ಲದ ಕಿರುಕುಳ ಕೊಟ್ಟ ಹಿನ್ನೆಲೆಯಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಕಣ್ಣೀರು ಹಾಕಿದರು. ಮರುಕ್ಷಣ ದೇಶದ ದಿಕ್ಕು ದಿಕ್ಕುಗಳಿಂದ ಸಾಗರೋಪಾದಿಯಲ್ಲಿ ರೈತರು ದಿಲ್ಲಿಯತ್ತ ಹೊರಟರು. ಮುಖ್ಯವಾಗಿ ಉತ್ತರ ಪ್ರದೇಶ, ರಾಜಾಸ್ಥಾನ, ಪಂಜಾಬ್ ಹರಿಯಾಣ ರಾಜ್ಯಗಳಿಂದ ಅಕ್ಷರಶಃ ರೈತರು ರಾತ್ರೋರಾತ್ರಿ ದಿಲ್ಲಿಯತ್ತ ಪ್ರಯಾಣ ಬೆಳಿಸಿದರು. ಚಳುವಳಿ ಮರುಹುಟ್ಟು ಪಡೆಯಿತು. ಗಟ್ಟಿಯಾಯಿತು. ಸಂಘಟಿತ ರೈತ ಹೋರಾಟದ ಹಿನ್ನೆಲೆ ಇದೀಗ ದಿಲ್ಲಿಯಲ್ಲಿ ಸಂಘಟಿತವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಏಕಾಏಕಿ ಸಂಘಟಿತವಾಗಿರುವುದೇನಲ್ಲ. 1995 ರಿಂದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತ ಹೋರಾಟಗಳು ಸಂಘಟಿತವಾಗಿವೆ. ಅವೆಲ್ಲಾ ಈಗ ರೂಪುಗೊಂಡಿರುವ ಸಂಘಟಿತ ಹೋರಾಟಕ್ಕೆ ಭದ್ರ ಬುನಾದಿ ಹಾಕಿವೆ. ಹಿಂದೆ ಇಂಡಿಯನ್ ಕೋ-ಆರ್ಡಿನೇಶನ್ ಕಮಿಟಿ ಫಾರ್ ಫಾರ್ಮಸ್ ಹೆಸರಿನ ವೇದಿಕೆಯನ್ನು ಪ್ರೊ.ಎಂಡಿಎನ್ ಹಾಗೂ ಮಹೇಂದ್ರ ಸಿಂಗ್ ಟಿಕಾಯತ್ ಇರುವಾಗಲೇ ಮಾಡಿದ್ದರು. ಅದೇ ರೀತಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ವೇದಿಕೆಗಳೂ ಇದ್ದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾ ವಯಾಕ್ಯಾಂಪೆಸಿನಾ ಹೆಸರಿನ ರೈತ ಚಳುವಳಿಗಳ ವೇದಿಕೆಯಿದೆ. ಇವೆಲ್ಲವೂ ಈಗಲೂ ಕ್ರಿಯಾಶೀಲವಾಗಿವೆ. ಇದೇ ಮಾದರಿಯಲ್ಲಿ ಈಗ ಸಂಯುಕ್ತ ಕಿಸಾನ್ ಮೋರ್ಚಾ ಜನ್ಮತಾಳಿದೆ. ರೈತ ನಾಯಕರಿಗೆ ಇರಬೇಕಾದ ಎಚ್ಚರ ಪ್ರಸ್ತುತ ದಿಲ್ಲಿ ಚಳುವಳಿಗೆ ಅನೇಕ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಆ ಬಗ್ಗೆ ರೈತ ನಾಯಕರು ಸಂಭ್ರಮಪಡುವುದನ್ನು ಬಿಟ್ಟು ಎಚ್ಚರದಿಂದ ಇರುವುದು ಒಳ್ಳೆಯದು. ರೈತ ಚಳುವಳಿಯ ಫಸಲನ್ನು ಮತಗಳಲ್ಲಿ ಕೊಯಿಲು ಮಾಡಿಕೊಳ್ಳುವಲ್ಲಿ ರಾಜಕೀಯ ಪಕ್ಷಗಳು ಬಲು ಚಾಲಾಕಿ. ಹಿಂದೆ ಕರ್ನಾಟಕದಲ್ಲಿ (1983-89 ಮತ್ತು 1994 ರಲ್ಲಿ) ರೈತ ಸಂಘದ ಮತಗಳನ್ನು ಜನತಾ ಪಕ್ಷ ಕೊಯಿಲು ಮಾಡಿಕೊಂಡದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಎಡ ಪಕ್ಷಗಳು ಅಥವಾ ಕಾಂಗ್ರೆಸ್ ರೈತ ಮತಗಳನ್ನು ಕೊಯಿಲು ಮಾಡಿಕೊಳ್ಳಲು ಹವಣಿಸುತ್ತಿರಬಹುದು. ದಟ್ಟ ದರಿದ್ರ ಸ್ಥಿತಿಯಲ್ಲಿಟ್ಟದ್ದು ಕಾಂಗ್ರೆಸ್ ರೈತ ನಾಯಕರಿಗೆ ಒಂದು ವಿಷಯದ ಬಗ್ಗೆ ಯಾವಗಲೂ ಎಚ್ಚರವಿರಬೇಕು. ಇವ್ಯಾವ ರಾಜಕೀಯ ಪಕ್ಷಗಳೂ ರೈತರ ಹಿತ ಕಾಯುವುದಿಲ್ಲ. ಸ್ವಾತಂತ್ರ್ಯಾ ನಂತರ ಇಷ್ಟೂ ಕಾಲ ರೈತರನ್ನು ದಟ್ಟ ದರಿದ್ರ ಸ್ಥಿತಿಯಲ್ಲಿಟ್ಟದ್ದು ಕಾಂಗ್ರೆಸ್ ಪಕ್ಷವೇ ಎಂಬುದನ್ನು ಮರೆಯದಿರಿ. ಈಗ ನಾವು ರೈತರು ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೇವಷ್ಟೇ. So, ಚಳವಳಿಯನ್ನು ಗಟ್ಟಿಯಾಗಿ ಉಳಿಸಿಕೊಂಡು ರೈತ ಕುಲಕ್ಕೆ ಅಗತ್ಯವಾಗಿ ಬೇಕಾದ ಸಲವತ್ತುಗಳನ್ನು ಪಡೆದುಕೊಳ್ಳಲು ಸರ್ಕಾರಗಳ ಮೇಲೆ ಒತ್ತಡ ತರುವುದು ಬಿಟ್ಟರೆ ರೈತರ ಹಿತವನ್ನು ಯಾವುದೋ ರಾಜಕೀಯ ಪಕ್ಷ ಕಾಯುತ್ತದೆ ಅಂದುಕೊಂಡರೆ ಅದು ಮೂರ್ಖತನವಲ್ಲದೆ ಬೇರೇನೂ ಅಲ್ಲ. farmer protest agriculture bjp congress central government ರೈತ ಪ್ರತಿಭಟನೆ ಕೃಷಿ ಬಿಜೆಪಿ ಕಾಂಗ್ರೆಸ್ ಕೇಂದ್ರ ಸರ್ಕಾರ politics BJP also promised to give C2 + 50% as recommended in the Swaminathan report for agricultural products. Infact it was part of the BJP manifesto.
2021/05/13 03:43:37
https://kannada.oneindia.com/agriculture/bjp-towards-destruction-other-parties-waiting-for-the-harvest-of-farmers-votes-216160.html?ref_medium=Desktop&ref_source=OI-KN&ref_campaign=Also-Read
mC4
ಕಸ ಸಂಗ್ರಹ: 2ನೇ ದಿನ ಸುಧಾರಿಸಿದ ನಾಗರಿಕರ ಸ್ಪಂದನ | Prajavani ಕಸ ಸಂಗ್ರಹ: 2ನೇ ದಿನ ಸುಧಾರಿಸಿದ ನಾಗರಿಕರ ಸ್ಪಂದನ Published: 03 ಅಕ್ಟೋಬರ್ 2012, 00:40 IST Updated: 03 ಅಕ್ಟೋಬರ್ 2012, 00:40 IST ಬೆಂಗಳೂರು: ನಗರದಲ್ಲಿ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ಪೂರೈಸಬೇಕು ಎಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಯತ್ನಕ್ಕೆ ನಾಗರಿಕರಿಂದ ಎರಡನೇ ದಿನ ಸ್ವಲ್ಪಮಟ್ಟಿಗೆ ಉತ್ತಮ ಸ್ಪಂದನೆ ದೊರೆತಿದೆ. ಆದರೆ, ವಾಣಿಜ್ಯ ಸಂಕೀರ್ಣಗಳು ಹಾಗೂ ಹೋಟೆಲ್, ಮಾಲ್‌ಗಳು ಒಣ ಕಸವನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ರಸ್ತೆ ಬದಿ ಎಸೆದಿರುವುದರಿಂದ ನಗರದ ಹೃದಯ ಭಾಗದಲ್ಲಿರುವ ಎಂ.ಜಿ. ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ಗಳಂತಹ ಕಡೆಗಳಲ್ಲಿ ಕಸದ ರಾಶಿ ಎದ್ದು ಕಂಡಿತು. ಈ ನಡುವೆ, ಮೇಯರ್ ಡಿ.ವೆಂಕಟೇಶಮೂರ್ತಿ, ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳು ಮಂಗಳವಾರ ಕತ್ರಿಗುತ್ತೆ ಆಸುಪಾಸಿನ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕಸ ವಿಂಗಡಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಮೂಲದಿಂದಲೇ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸುವ ನೀತಿ ಅನುಷ್ಠಾನಗೊಂಡಿದ್ದು ಪಾಲಿಕೆಯ ಸ್ಪಷ್ಟ ಸೂಚನೆಯ ಮೇರೆಗೆ ಪೌರ ಕಾರ್ಮಿಕರು ಕೇವಲ ಹಸಿ ತ್ಯಾಜ್ಯವನ್ನು ಮನೆಗಳಿಂದ ಸಂಗ್ರಹಿಸುತ್ತಿದ್ದಾರೆ. ಆದರೆ, ನಾಗರಿಕರು ಒಣ ತ್ಯಾಜ್ಯವನ್ನು ಮನೆಯಲ್ಲಿಯೇ ಇರಿಸಿಕೊಳ್ಳಲಾಗದೇ ಕಸವನ್ನು ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ. ಇದರಿಂದಾಗಿ ನಗರದ ಅನೇಕ ಕಡೆ ರಸ್ತೆ ಬದಿಗಳಲ್ಲಿ ಕಸದ ರಾಶಿ ಮಂಗಳವಾರ ಕಂಡು ಬಂದಿತು. `ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಕಸ ವಿಂಗಡಣೆಗೆ ಸೋಮವಾರದಿಂದ ಚಾಲನೆ ದೊರಕಿತ್ತು. ಮೊದಲ ದಿನ ನಗರದಾದ್ಯಂತ ಸರಾಸರಿ ಶೇ.20 ರಷ್ಟು ಕಸವನ್ನು ವಿಂಗಡಿಸಿ ಸಂಗ್ರಹಿಸಲಾಗಿತ್ತು. ಮಂಗಳವಾರ ಕೂಡ ಕಸ ವಿಂಗಡಿಸಿ ಸಂಗ್ರಹಿಸುವ ಕಾರ್ಯ ಮುಂದುವರೆದಿದ್ದು, ಶೇ 30 ರಷ್ಟು ಹಸಿ ತ್ಯಾಜ್ಯ ಸಂಗ್ರಹವಾಗಿದೆ~ ಎಂದು ಪಾಲಿಕೆಯ ಆಯುಕ್ತ ಡಾ. ರಜನೀಶ್ ಗೋಯಲ್ ತಿಳಿಸಿದರು. `ಬುಧವಾರದಿಂದ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವುದರ ಮೂಲಕ ಕಸ ವಿಂಗಡಣೆಗೆ ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು. ಸಂಗ್ರಹಿಸಿದ ಹಸಿ ಕಸ ವಿಲೇವಾರಿಗೆ ಯಾವುದೇ ರೀತಿಯ ಸಮಸ್ಯೆ ಉದ್ಭವಿಸಲಾರದು. ತಕ್ಷಣ ರೈತರಿಂದ ಸಾಕಷ್ಟು ಬೇಡಿಕೆ ಬಂದಿರುವುದರಿಂದ ಅದನ್ನು ಉತ್ತಮ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು~ ಎಂದು ಅವರು ತಿಳಿಸಿದರು. ಯಲಹಂಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ : ಈ ನಡುವೆ, ಯಲಹಂಕ ವಲಯದ 11 ವಾರ್ಡ್‌ಗಳಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ಶೇ 100ರಷ್ಟು ಕಸ ಸಂಗ್ರಹಿಸಲಾಗಿದೆ. ಇಲ್ಲಿ 35 ಟನ್‌ಗಳಷ್ಟು ಹಸಿ ಕಸ ಸಂಗ್ರಹಿಸಲಾಗಿದೆ. 500 ಕೆ.ಜಿ.ಗಳಷ್ಟು ಒಣ ಕಸ, 55 ಕೆ.ಜಿ.ಯಷ್ಟು ಸ್ಯಾನಿಟರಿ ವೇಸ್ಟ್ (ಬಯೋಮೆಡಿಕಲ್ ತ್ಯಾಜ್ಯ) ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ರಾಮ್ಕಿ ಸಂಸ್ಥೆಯ ಮುಖಾಂತರ ವೈಜ್ಞಾನಿಕವಾಗಿ ವಿಲೇವಾರಿಗಾಗಿ ಕಳುಹಿಸಲಾಗಿದೆ. 500 ಕೆ.ಜಿ.ಗಳಷ್ಟು ಸಂಗ್ರಹಿಸಲಾದ ಒಣ ಕಸವನ್ನು ಕಸ ವಿಂಗಡಣೆ ಘಟಕದಲ್ಲಿ ಹಾಕಲಾಗಿದೆ. ಯಲಹಂಕ ವಲಯದ ಎಲ್ಲ 11 ವಾರ್ಡ್‌ಗಳಿಂದ ಸಂಗ್ರಹಿಸಲಾದ 35 ಟನ್‌ಗಳಷ್ಟು ಹಸಿ ಕಸವನ್ನು ಗುತ್ತಿಗೆದಾರರು 5,000 ರೂಪಾಯಿಗೆ ರೈತರಿಗೆ ಮಾರಿದ್ದಾರೆ. ಬಿಬಿಎಂಪಿಯಿಂದ ಸಂಗ್ರಹಿಸಲಾದ ಹಸಿ ಕಸಕ್ಕೆ ರೈತರಿಂದ ಸಾಕಷ್ಟು ಬೇಡಿಕೆ ವ್ಯಕ್ತವಾಗಿದೆ ಎಂದು ಯಲಹಂಕ ವಲಯದ ಜಂಟಿ ಆಯುಕ್ತ ರಾಮಚಂದ್ರಮೂರ್ತಿ ತಿಳಿಸಿದ್ದಾರೆ. ಈ ನಡುವೆ, ಬೇರ್ಪಡಿಸಿದ ಒಣ ಹಾಗೂ ಹಸಿ ತ್ಯಾಜ್ಯವನ್ನು ಸ್ವೀಕರಿಸುವ ಕುರಿತು ಪೌರ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ತರಬೇತಿ ನೀಡದ ಹಿನ್ನೆಲೆಯಲ್ಲಿ ಗೊಂದಲ ಮುಂದುವರಿದಿದೆ. ಸಾರ್ವಜನಿಕ ಅಭಿಪ್ರಾಯಗಳು ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸುತ್ತಿದ್ದೇವೆ. ಆದರೆ ವಾರಕ್ಕೊಮ್ಮೆ ಒಣ ತ್ಯಾಜ್ಯವನ್ನು ಪೌರಕಾರ್ಮಿಕರು ಸಂಗ್ರಹಿಸಲು ಸೂಚನೆ ನೀಡಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಒಣ ತ್ಯಾಜ್ಯವನ್ನು ಮನೆಯಲ್ಲಿಯೇ ಶೇಖರಿಸಿಡಲು ಸಾಧ್ಯವಿಲ್ಲ. ಇದನ್ನು ಏನು ಮಾಡುವುದೆಂಬುದೇ ತಿಳಿಯುತ್ತಿಲ್ಲ. -ವಿಶಾಲಾಕ್ಷಿ, ಜರಗನಹಳ್ಳಿ ಪಾಲಿಕೆ ತ್ಯಾಜ್ಯ ವಿಂಗಡಿಸಿ ನೀಡಿ ಎಂದು ಸೂಚನೆ ನೀಡಿದೆ. ಆದರೆ ಅದರಲ್ಲೂ ವಾರಕ್ಕೊಮ್ಮೆ ಒಣತ್ಯಾಜ್ಯವನ್ನು ಸಂಗ್ರಹಿಸುವುದಿರಿಂದ ನಮಗೆಲ್ಲ ಪರದಾಡುವಂತಾಗಿದೆ. ಚಿಕ್ಕ ಮನೆಯಾದರೂ ಎರಡು ಬಿನ್‌ಗಳನ್ನು ಇಟ್ಟುಕೊಂಡಿದ್ದೇವೆ. ಹಸಿ ತ್ಯಾಜ್ಯವನ್ನು ಕೊಂಡೊಯ್ಯುತ್ತಿದ್ದಾರೆ. ಏಳು ದಿನದ ತ್ಯಾಜ್ಯಕ್ಕೆ ಒಂದೇ ಬಿನ್ ಸಾಲುತ್ತದೆಯೇ ಎಂಬ ಚಿಂತೆಯಾಗಿದೆ. - ಜಲಜಾ, ಯಲಚೇನಹಳ್ಳಿ ಮೂಲದಿಂದಲೇ ತ್ಯಾಜ್ಯ ವಿಂಗಡಣೆ ಮತ್ತು ಅದರ ಸಮರ್ಪಕ ವಿಲೇವಾರಿಯಾದಾಗ ಮಾತ್ರ ನಗರದಲ್ಲಿ ತ್ಯಾಜ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪಾಲಿಕೆ ಕಸ ವಿಂಗಡಣೆಗೆ ಒತ್ತು ನೀಡಿದಂತೆ ಅದರ ವಿಲೇವಾರಿಯತ್ತ ಹೆಚ್ಚಿನ ಗಮನ ಹರಿಸಬೇಕು. - ರಾಜಮ್ಮ, ಜೆ.ಪಿ.ನಗರ ಬಿಬಿಎಂಪಿ ಏಕಾಏಕಿ ಈ ನೀತಿಯನ್ನು ತರುವ ಬದಲು ಹಂತ ಹಂತವಾಗಿ ಜಾರಿಗೊಳಿಸಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಕಸ ಸಂಗ್ರಹ ಮತ್ತು ವಿಲೇವಾರಿಯ ಬಗ್ಗೆ ನಾಗರಿಕರಿಗೆ ಸಮಗ್ರವಾಗಿ ಮಾಹಿತಿ ದೊರೆತಾಗ ಮಾತ್ರ ಇನ್ನಷ್ಟು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನೀತಿ ಬಂದ ಮೇಲೂ ರಾಜಧಾನಿಯಲ್ಲಿ ಕಸ ಬಿದ್ದರೆ ಪಾಲಿಕೆಗೆ ಅವಮಾನವಾದಂತೆ - ರಾಮಪ್ಪ , ಅಂಗಡಿ ಮಾಲೀಕ, ಕೋಣನ ಕುಂಟೆ ಕ್ರಾಸ್ ಪಾಲಿಕೆ ದಿನಕ್ಕೊಂದು ನೀತಿ ರೂಪಿಸುತ್ತಿದೆ. ಆದರೆ, ಯಾವುದೂ ವ್ಯವಸ್ಥಿತವಾಗಿ ಇರುವುದಿಲ್ಲ. ಎರಡು ದಿನಕ್ಕೇ ಒಣ ಕಸದ ಬಿನ್ ತುಂಬಿ ಹೋಗಿದೆ. ಇನ್ನೂ ಒಂದು ವಾರ ಕಾಲ ಈ ಬಿನ್ ತುಂಬದೇ ಇರುತ್ತದೆಯೇ? ಕೆಲವರಂತೂ ಇದನ್ನು ಮನೆಯ ಮುಂದೆಯೇ ಸುರಿಯುತ್ತಿದ್ದಾರೆ. ಹೀಗಾದರೆ ಹೊಸ ನೀತಿಯ ಉಪಯೋಗವೇನು?
2019/01/24 09:22:35
https://www.prajavani.net/article/%E0%B2%95%E0%B2%B8-%E0%B2%B8%E0%B2%82%E0%B2%97%E0%B3%8D%E0%B2%B0%E0%B2%B9-2%E0%B2%A8%E0%B3%87-%E0%B2%A6%E0%B2%BF%E0%B2%A8-%E0%B2%B8%E0%B3%81%E0%B2%A7%E0%B2%BE%E0%B2%B0%E0%B2%BF%E0%B2%B8%E0%B2%BF%E0%B2%A6-%E0%B2%A8%E0%B2%BE%E0%B2%97%E0%B2%B0%E0%B2%BF%E0%B2%95%E0%B2%B0-%E0%B2%B8%E0%B3%8D%E0%B2%AA%E0%B2%82%E0%B2%A6%E0%B2%A8
mC4
ಹೀಗೆ ಮಾಡಿ ಗ್ಯಾಸ್ ಉಳಿತಾಯ | Prajavani ಹೀಗೆ ಮಾಡಿ ಗ್ಯಾಸ್ ಉಳಿತಾಯ ಗೃಹಬಳಕೆ ಅನಿಲ ಸಿಲಿಂಡರ್‌ಗೆ ಸಂಬಂಧಿಸಿದಂತೆ ಬದಲಾಗಿರುವ ನೀತಿಯ ಬಿಸಿ ಇದೀಗ ಜನರನ್ನು ತಟ್ಟುತ್ತಿದೆ. ಒಂದು ಕುಟುಂಬ ವಾರ್ಷಿಕವಾಗಿ ಆರು ಸಿಲಿಂಡರ್‌ಗಳನ್ನಷ್ಟೇ ಸಬ್ಸಿಡಿ ದರದಲ್ಲಿ ಪಡೆಯಬಹುದಾಗಿದ್ದು, ಈ ಸಂಖ್ಯೆಯನ್ನು ದಾಟಿದರೆ ಪ್ರತಿ ಸಿಲಿಂಡರ್‌ಗೆ ಸುಮಾರು ಮೂರು ಪಟ್ಟು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಆರ್ಥಿಕವಾಗಿ ಮೇಲ್ವರ್ಗದಲ್ಲಿರುವವರಿಗೆ ಇದರ ಬಿಸಿ ಹೆಚ್ಚಾಗಿ ತಟ್ಟದಿದ್ದರೂ, ಮಧ್ಯಮ ಹಾಗೂ ಕೆಳವರ್ಗದವರಿಗೆ ಈ ಹೆಚ್ಚಿನ ಹೊರೆಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವೇ. ಅದರಲ್ಲೂ ಅಡುಗೆ ಮನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗಂತೂ ಸರ್ಕಾರದ ಈ ನೀತಿ `ಶಾಕ್~ ಹೊಡೆಸಿದೆ. ಸರ್ಕಾರ ಈ ಬಗ್ಗೆ ಅದೆಷ್ಟೇ ಸಮಜಾಯಿಷಿ ನೀಡಿದರೂ ಸಾಮಾನ್ಯ ಜನರಿಗೆ ಇದರ ನಿರ್ವಹಣೆ ಬಲು ಕಷ್ಟ. ಅದೇನೇ ಕಾರಣಗಳಿದ್ದರೂ, ಇದೀಗ ಗ್ಯಾಸ್ ಸಿಲಿಂಡರ್‌ಗಳ ಮಿತ-ಹಿತ ಬಳಕೆ ಮಾಡುವುದು ದುಬಾರಿ ಜೀವನದ ಈ ದಿನಗಳಲ್ಲಿ ಅತಿ ಅಗತ್ಯ. ಹಲವಾರು ಮನೆಗಳಲ್ಲಿ ನಾವು ಅಡುಗೆ ಅನಿಲವನ್ನು ಅಗತ್ಯ ಇರುವುದ ಕ್ಕಿಂತಲೂ ಹೆಚ್ಚಾಗಿ ಬಳಸುತ್ತಿದ್ದೇವೆ. ಇದಕ್ಕೆ ನಮ್ಮ ಅವೈಜ್ಞಾನಿಕ ನಿರ್ವಹಣಾ ವಿಧಾನಗಳೇ ಕಾರಣ ಎಂದು ಹೇಳಬಹುದು. ಹೀಗಾಗಿ ಕೆಲವು ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಹಾಗೂ ನಮ್ಮ ಅಡುಗೆ ತಯಾರಿಕಾ ವಿಧಾನದಲ್ಲಿ ತುಸು ಬದಲಾವಣೆ ಮಾಡಿಕೊಳ್ಳುವುದರಿಂದ ಖಂಡಿತವಾಗಿ ಶೇ 15-25ರಷ್ಟು ಗ್ಯಾಸ್ ಇಂಧನ ಉಳಿತಾಯ ಮಾಡಬಹುದು! ಅಂತಹ ಕೆಲವು ಟಿಪ್ಸ್‌ಗಳು ಇಲ್ಲಿವೆ, ನಿಮಗಾಗಿ: ಪ್ರೆಷರ್ ಕುಕ್ಕರ್‌ನ ಬಳಕೆ: ಗ್ಯಾಸ್ ಉಳಿತಾಯದಲ್ಲಿ ಪ್ರೆಷರ್ ಕುಕ್ಕರ್‌ನ ಬಳಕೆ ಅತ್ಯಂತ ಪ್ರಾಮುಖ್ಯತೆ ಹೊಂದಿದೆ. ಸಾಮಾನ್ಯವಾಗಿ ಅಕ್ಕಿ, ಬೇಳೆ, ಕಾಳು ಅಥವಾ ಇನ್ನಾವುದೇ ವಸ್ತುಗಳನ್ನು ಪ್ರೆಷರ್ ಕುಕ್ಕರ್‌ನ ಹಬೆಯಲ್ಲಿ ಬೇಯಿಸುವುದರಿಂದ ಸಾಧಾರಣ ವಿಧಾನಕ್ಕಿಂತಲೂ ಶೇಕಡಾ 50ರಷ್ಟು ಕಡಿವೆು ಅವಧಿ ಸಾಕು. ಪ್ರೆಷರ್ ಕುಕ್ಕರ್‌ನಲ್ಲಿ ಉಂಟಾಗುವ ಒತ್ತಡದಿಂದ ನೀರಿನ ಕುದಿಯುವ ಬಿಂದು ಹೆಚ್ಚಾಗುತ್ತದೆ. ಇದರಿಂದ ಹೆಚ್ಚಾಗುವ ಉಷ್ಣತೆಗೆ ಕಡಿವೆು ಅವಧಿಯಲ್ಲೇ ಆಹಾರ ಪದಾರ್ಥಗಳು ಬೇಯುತ್ತವೆ. ಆದರೆ ಆಹಾರ ವಸ್ತು ಗಳನ್ನು, ಬೇಳೆಗಳನ್ನು ಬೇಯಿಸುವಾಗ ಅತ್ಯಧಿಕ ಪ್ರಮಾಣದ ನೀರಿನ ಬಳಕೆ ಮಾಡಬಾರದು. ಹೀಗೆ ಮಾಡಿದರೆ ಬೇಯಲು ಹೆಚ್ಚಿನ ಸಮಯ ಬೇಕಾಗಿ, ಗ್ಯಾಸ್‌ನ ನಷ್ಟ ಉಂಟಾಗುತ್ತದೆ. ನೀವು ಪ್ರೆಷರ್ ಕುಕ್ಕರ್ ಬಳಸುತ್ತಿಲ್ಲವಾದರೆ ಇಂದೇ ಅದನ್ನು ಖರೀದಿಸಿ ಗ್ಯಾಸ್‌ನ ಉಳಿತಾಯದ ತುಲನೆ ಮಾಡಿ ನೋಡಬಹುದು. ಕುಕ್ಕರ್‌ನಲ್ಲಿ ಅನ್ನ ಬೇಯಿಸುವಾಗ ಬಳಸಿದ ನೀರು ಅದರಲ್ಲೇ ಇರುವುದರಿಂದ ಹೆಚ್ಚಿನ ಪೋಷಕಾಂಶಗಳೂ ನಮಗೆ ದೊರೆಯುತ್ತದೆ. ಕೇಳಿದ್ದೀರಾ `ಹೇ ಬಾಕ್ಸ್~? ಇದೇನಿದು `ಹೇ ಬಾಕ್ಸ್~ ಎಂದು ಆಶ್ಚರ್ಯಪಡುತ್ತಿದ್ದೀರಾ? ಇದೊಂದು ವಿಧದ ಕುಕ್ಕರ್. ಯಾವುದೇ ಅನಿಲದ ಅಗತ್ಯವಿಲ್ಲದೇ ವಿಜ್ಞಾನದ ತತ್ವದಲ್ಲಿ ಕೆಲಸ ಮಾಡುವ ಪೆಟ್ಟಿಗೆ ಅಥವಾ ಕುಕ್ಕರ್! ಕೆಲವು ಮನೆಗಳಲ್ಲಿ ಕುಕ್ಕರ್‌ನಲ್ಲಿ ಅನ್ನ ಬೇಯಿಸುವ ರೂಢಿ ಇಲ್ಲದ ಕಾರಣ, ಅಕ್ಕಿಯನ್ನು ಪಾತ್ರೆಯಲ್ಲಿಟ್ಟು ನೀರಿನೊಡನೆ ನೇರವಾಗಿ ಬೇಯಿಸಿ ಅನ್ನ ತಯಾರಿಸುತ್ತಾರೆ. ಈ ವಿಧಾನಕ್ಕೆ 25-30 ನಿಮಿಷಗಳ ಕಾಲ ಗ್ಯಾಸ್ ಉರಿಸಬೇಕಾಗುತ್ತದೆ. ಆದರೆ ಪಾತ್ರೆಯಲ್ಲಿ ಅಕ್ಕಿಯೊಡನೆ ಹಾಕಿದ ನೀರು ಕುದಿಯಲಾರಂಭಿಸಿದ ಕೂಡಲೇ ಪಾತ್ರೆಯನ್ನು ಮುಚ್ಚಿ ಈ `ಹೇ ಬಾಕ್ಸ್~ನಲ್ಲಿ ಇಟ್ಟು ಬಿಡಿ, ಅಂದರೆ ಅರ್ಧ ಬೆಂದ ಅಕ್ಕಿಯನ್ನು ಈ ಬಾಕ್ಸ್‌ನಲ್ಲಿ ಇಡುವುದರಿಂದ, ಉಳಿದ ಭಾಗವು ಯಾವುದೇ ಇಂಧನದ ಅಗತ್ಯವಿಲ್ಲದೇ ಬೇಯುತ್ತದೆ. ಅಕ್ಕಿ ಬೆರೆಸಿದ ನೀರು ಕುದಿಯಲು 8-10 ನಿಮಿಷ ಬೇಕು. ಅಂದರೆ ಇದರಿಂದ ಸುಮಾರು ಅರ್ಧದಷ್ಟು ಗ್ಯಾಸ್ ಇಂಧನ ಉಳಿತಾಯವಾಗುತ್ತದೆ! `ಹೇ ಬಾಕ್ಸ್~ ಹೀಗೆ ತಯಾರಿಸಿ `ಹೇ ಬಾಕ್ಸ್~ನ ರಚನೆ ಸುಲಭವಾಗಿದ್ದು, ಇದನ್ನು ಯಾರು ಬೇಕಾದರೂ ತಯಾರಿಸಬಹುದು. ಯಾವುದಾದರೂ ತಗಡಿನ ಡಬ್ಬ ತೆಗೆದುಕೊಂಡು ಅದರ ಒಳಗಡೆ ಸುತ್ತಲೂ ಥರ್ಮೊಕೋಲ್‌ನ ಹೊದಿಕೆ ನೀಡಬೇಕು. ಅಡುಗೆಗೆ ಬಳಸುವ ಪಾತ್ರೆಯನ್ನು ಸುಲಭವಾಗಿ ಇದರಲ್ಲಿ ಇಡುವಂತಿರಬೇಕು. ಇದರ ಒಳಗಡೆ ಬಳಸುವ ಥರ್ಮೊಕೋಲ್ ಉಷ್ಣತೆಯ ಆವಾಹಕ ಆಗಿರುತ್ತದೆ. ಆದ್ದರಿಂದ ಕುದಿಯುತ್ತಿರುವ ಅಕ್ಕಿಯ ಪಾತ್ರೆಯನ್ನು ಇದರೊಳಗಡೆ ಇಟ್ಟು ಮುಚ್ಚುವುದರಿಂದ, ನೀರಿನ ಕುದಿಯುವ ಬಿಂದುವಿನ ಉಷ್ಣತೆ ಬಹಳ ಹೊತ್ತಿನವರೆಗೂ ಇದರಲ್ಲಿ ನಷ್ಟವಾಗದೇ ಉಳಿಯುತ್ತದೆ. ಇದರಿಂದ ನಿಧಾನವಾಗಿ (15-20 ನಿಮಿಷಗಳಲ್ಲಿ) ಉಳಿದ ಭಾಗವೂ ಬೇಯುತ್ತದೆ. ಬಿಸಿ ಪಲ್ಯ ಅಥವಾ ಸಾಂಬಾರನ್ನು ಕೂಡ ಇಡುವುದರಿಂದ, ಬಹಳ ಹೊತ್ತಿನವರೆಗೂ ಅವು ಬಿಸಿಯಾಗಿರುತ್ತವೆ. ಕೆಲವು ಪಾತ್ರೆ ಅಂಗಡಿಗಳಲ್ಲಿ ಸಹ ಇಂತಹ ಕುಕ್ಕರ್ ದೊರೆಯುತ್ತದೆ. ಉರಿ ಸಣ್ಣದಾಗಿಡಿ: ಯಾವುದೇ ದ್ರವ ಪದಾರ್ಥ ಕುದಿಯಲಾರಂಭಿಸಿದಾಗ ಜ್ವಾಲೆ ಚಿಕ್ಕದಾಗಿಸುವುದನ್ನು ಮರೆಯಬೇಡಿ, ದ್ರವ ಪದಾರ್ಥ (ಮುಖ್ಯವಾಗಿ ನೀರನ್ನು ಹೊಂದಿರುವ ಆಹಾರ ವಸ್ತು) ಕುದಿಯಲಾರಂಭಿಸಿದಾಗ ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್ ತಲುಪಿರುತ್ತದೆ. ಹೀಗಾಗಿ ಗ್ಯಾಸ್ ಜ್ವಾಲೆ ದೊಡ್ಡದಿದ್ದಾಗ ನೀರಿನ ಕುದಿಯುವ ಬಿಂದು ಅಷ್ಟೇ ಇದ್ದು, ನೀರು ಆವಿಯಾಗಲಾರಂಭಿಸುತ್ತದೆ. ಹೀಗಾಗಿ ಹೆಚ್ಚಿನ ಪ್ರಮಾಣದ ಉಷ್ಣತೆಯು ನೀರಿನ ಆವಿಯಾಗುವಿಕೆಗೆ ಕಾರಣವಾಗಿ, ಗ್ಯಾಸ್ ಇಂಧನ ನಷ್ಟವಾಗುತ್ತದೆ. ಪಾತ್ರೆಯನ್ನು ಮುಚ್ಚಿಡಿ: ಯಾವುದೇ ವಸ್ತುವನ್ನು ಬಿಸಿ ಮಾಡುವಾಗ ಅಥವಾ ಬೇಯಿಸುವಾಗ ಪಾತ್ರೆಯನ್ನು ಮುಚ್ಚಿಡಲು ಮರೆಯಬೇಡಿ. ಇದರಿಂದ ಉಷ್ಣತೆಯು ಪಾತ್ರೆಯಲ್ಲೇ ಉಳಿಯುವುದರಿಂದ ಬೇಯುವಿಕೆ ವೇಗವಾಗಿ, ಗ್ಯಾಸ್‌ನ ಉಳಿತಾಯ ಮಾಡಬಹುದು. ಯಾವ ವಿಧದ ಪಾತ್ರೆ ಬಳಸಬೇಕು?: ಗ್ಯಾಸ್‌ನ ಮೇಲೆ ಇಡುವ ಪಾತ್ರೆಗಳ ತಳ ಯಾವಾಗಲೂ ಜ್ವಾಲೆಗಿಂತ ತುಸು ದೊಡ್ಡದಿದ್ದರೆ ಉಷ್ಣತೆಯು ನಷ್ಟವಾಗದೇ ಗ್ಯಾಸ್‌ನ ಉಳಿತಾಯದಲ್ಲಿ ನೆರವಾಗುತ್ತದೆ. ಕೆಲವೊಮ್ಮೆ ಗ್ಯಾಸ್ ಜ್ವಾಲೆ ಕೆಂಪು ಅಥವಾ ಹಳದಿ ಬಣ್ಣದಿಂದ ಉರಿಯುತ್ತಿದ್ದರೆ ಅಂತಹ ಬರ್ನರ್‌ಗಳನ್ನು ಶುಚಿಗೊಳಿಸಬೇಕು. ನೀಲಿ ಬಣ್ಣದ ಜ್ವಾಲೆಯಲ್ಲಿ ಹಳದಿ ಬಣ್ಣದ ಜ್ವಾಲೆಗಿಂತ ಹೆಚ್ಚಿನ ಶಾಖ ಇರುತ್ತದೆ. ಈ ಮೊದಲು ವಿವರಿಸಿದ ಎಲ್ಲ ಅಂಶಗಳ ಜೊತೆಗೆ ಗೃಹಿಣಿಯರು ತಮ್ಮದೇ ಆದ ಕೆಲವು ವಿಧಾನಗಳನ್ನೂ ಬಳಸಬಹುದು. ಉದಾಹರಣೆಗೆ ಬೇಳೆ, ದವಸ ಧಾನ್ಯಗಳನ್ನು ಬೇಯಿಸುವ ಕನಿಷ್ಠ 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಆ ಬಳಿಕ ಬೇಯಿಸಬಹುದು. ಇದರಿಂದ ಬೇಳೆ-ಧಾನ್ಯಗಳು ಬೇಯಲು ತೆಗೆದುಕೊಳ್ಳುವ ಸಮಯ ಕಡಿಮೆಯಾಗುತ್ತದೆ. ತರಕಾರಿಗಳನ್ನು ಬೇಯಿಸುವ ಮೊದಲೇ ಉಪ್ಪನ್ನು ಹಾಕಬೇಡಿ, ಸುಮಾರು ಮುಕ್ಕಾಲು ಭಾಗ ಬೆಂದ ಬಳಿಕ ಉಪ್ಪು ಹಾಕುವುದರಿಂದ ಗ್ಯಾಸ್ ಕಡಿಮೆ ಸಾಕಾಗುತ್ತದೆ. ರಾತ್ರಿ ಊಟದ ಸಮಯದಲ್ಲಿ ಮಧ್ಯಾಹ್ನದ ಉಳಿದ ಪಲ್ಯವನ್ನು ನೇರವಾಗಿ ಗ್ಯಾಸ್ ಒಲೆಯ ಮೇಲಿಟ್ಟು ಬಿಸಿ ಮಾಡುವ ಬದಲು ಸಾರು, ಪಲ್ಯ ಅಥವಾ ಸಾಂಬಾರನ್ನು ಬಿಸಿ ಮಾಡುವ ಪಾತ್ರೆಯ ಮೇಲೆ ಇನ್ನೊಂದು ಪುಟ್ಟ ಪಾತ್ರೆಯಲ್ಲಿ ಪಲ್ಯವನ್ನು ಹಾಕಿ ಮುಚ್ಚಿಡುವುದರಿಂದ ಹೆಚ್ಚಿನ ಗ್ಯಾಸ್‌ನ ಅಗತ್ಯವಿಲ್ಲದೇ ಮಧ್ಯಾಹ್ನದ ಪಲ್ಯವನ್ನು ಬಿಸಿ ಮಾಡಬಹುದು. ರೆಫ್ರಿಜಿರೇಟರ್‌ನ ಒಳಗಡೆ ಇಟ್ಟ ಆಹಾರ ಪದಾರ್ಥಗಳನ್ನು ನೇರವಾಗಿ ಬಿಸಿ ಮಾಡುವ ಬದಲು, ಸ್ವಲ್ಪ ಹೊತ್ತು ಅದರಿಂದ ತೆಗೆದು ಹೊರಗಡೆ ಇಟ್ಟು, ಕೊಠಡಿಯ ತಾಪಮಾನಕ್ಕೆ ಬಂದ ಬಳಿಕ ಬಿಸಿ ಮಾಡಬಹುದು. ಇನ್ನು ಕೆಲವು ಮಹಿಳೆಯರಂತೂ ಬೆಳಿಗ್ಗೆ 9- 10 ಗಂಟೆಯೊಳಗೇ ಮಧ್ಯಾಹ್ನದ ಅಡುಗೆಯನ್ನು ಬೇಯಿಸಿಟ್ಟು, ಮಧ್ಯಾಹ್ನ ಊಟದ ಸಮಯದಲ್ಲಿ ಮತ್ತೆ ಅಡುಗೆಯನ್ನು ಬಿಸಿ ಮಾಡುತ್ತಾರೆ. ಅಂತೆಯೇ ರಾತ್ರಿಯ ಅಡುಗೆ ಕೂಡ ಸಂಜೆಯೇ ಮುಗಿಸಿಟ್ಟು ರಾತ್ರಿ ಮತ್ತೆ ಬಿಸಿ ಮಾಡುವ ಅಭ್ಯಾಸ ಇರುತ್ತದೆ. ತಾಜಾ ಆಗಿ ತಯಾರಿಸಿದ ಬಿಸಿ ಊಟದ ರುಚಿಯೇ ಬೇರೆ. ಜೊತೆಗೆ ತರಕಾರಿಗಳನ್ನು ಹಲವಾರು ಬಾರಿ ಬಿಸಿ ಮಾಡುವುದರಿಂದ ಪೌಷ್ಟಿಕಾಂಶಗಳೂ ನಾಶವಾಗುತ್ತವೆ. ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ಊಟ-ತಿಂಡಿ ಸೇವಿಸುವುದರಿಂದ ಪದೇ ಪದೇ ಬಿಸಿ ಮಾಡುವುದನ್ನು ತಪ್ಪಿಸಬಹುದು. ಈ ಎಲ್ಲ ವಿಷಯಗಳು ಮಹಿಳೆಯರಿಗೆ ಗೊತ್ತಿದ್ದೂ, ಹಲವಾರು ಮಂದಿ ಗ್ಯಾಸ್‌ನ ನಷ್ಟ ಮಾಡುತ್ತಾರೆ. ಇಂತಹ ಕೆಲವು ಸರಳ ವಿಷಯಗಳಿಗಾಗಿಯೇ ನನಗೂ, ಪಿಎಚ್.ಡಿ ಪದವಿ ಪಡೆದಿರುವ ನನ್ನ ಪತ್ನಿಗೂ ಆಗಾಗ ಮಾತುಕತೆ ಆಗುವುದಿದೆ! ನೆನಪಿಡಿ, ಮೇಲೆ ವಿವರಿಸಿದ ಎಲ್ಲ ವಿಧಾನಗಳನ್ನೂ ಪ್ರತಿ ಕುಟುಂಬ ಕಡ್ಡಾಯವಾಗಿ ಅನುಸರಿಸಿದರೆ, ನಮ್ಮ ಇಂಧನ ಸಚಿವರು ಹೇಳುವಂತೆ `ಪ್ರತಿ ಕುಟುಂಬಕ್ಕೂ ಅಡುಗೆಗಾಗಿ ವರ್ಷಕ್ಕೆ ಆರು ಸಿಲಿಂಡರ್‌ಗಳು ಸಾಕು~. ಸುರಕ್ಷತೆ ಕಾಯ್ದುಕೊಳ್ಳಿ -ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಯಾವಾಗಲೂ ಬಿಐಎಸ್ (ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಮಾನ್ಯತೆ ಪಡೆದ ಉಪಕರಣಗಳನ್ನೇ ಬಳಸಿ -ರಬ್ಬರ್ ಕೊಳವೆಗಳು ಮತ್ತು ರೆಗ್ಯುಲೇಟರ್‌ಗಳನ್ನು ಅಧಿಕೃತ ವಿತರಕರಿಂದ ಮಾತ್ರ ಖರೀದಿಸಿ -ಹೊಸದಾಗಿ ಸರಬರಾಜಾದ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಸುರಕ್ಷಾ ಮುಚ್ಚಳ ಮತ್ತು ಕಂಪೆನಿಯ ಸೀಲ್ ಕಡ್ಡಾಯವಾಗಿ ಇರಬೇಕು - ಸಿಲಿಂಡರ್‌ನ್ನು ಯಾವಾಗಲೂ ಸ್ಟೌನಿಂದ ದೂರ ನೆಲದ ಮಟ್ಟದಲ್ಲಿ ಇಡಬೇಕು -ಅನಿಲ ಸೋರಿಕೆ ಸಾಧ್ಯತೆಯನ್ನು ವಾಸನೆಯಿಂದ ಕಂಡುಕೊಳ್ಳಿ. ಅದು ಬಿಟ್ಟು ಬೆಂಕಿಕಡ್ಡಿ, ಮೇಣದಬತ್ತಿ ಅಥವಾ ಲೈಟರ್‌ಗಳನ್ನು ಹಚ್ಚಿ ಪರೀಕ್ಷಿಸುವುದು ಅತ್ಯಂತ ಅಪಾಯಕಾರಿ -ಸಿಲಿಂಡರ್‌ನ್ನು ಸುಲಭವಾಗಿ ಕಾಣಿಸದ ಜಾಗದಲ್ಲಿ ಅಥವಾ ಗಾಳಿಯಾಡದ ಮುಚ್ಚಿದ ಆವರಣದಲ್ಲಿ ಇಡುವುದು ಸರಿಯಲ್ಲ -ಉರಿಯುತ್ತಿರುವ ಸ್ಟೌನ ಸಮೀಪ ಧೂಮಪಾನ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ -ಅಡುಗೆ ಕಾರ್ಯ ಪೂರ್ಣಗೊಳಿಸಿದ ಬಳಿಕ ಮತ್ತು ರಾತ್ರಿ ವೇಳೆ ರೆಗ್ಯುಲೇಟರ್‌ನ್ನು ಆಫ್ ಮಾಡಿ -ತುಂಬಿದ ಅಥವಾ ಖಾಲಿಯಾದ ಸಿಲಿಂಡರ್‌ನ್ನು ಬಿಸಿ ಅಥವಾ ಬೆಂಕಿ ಮೂಲ ಇಲ್ಲದ ಸ್ಥಳಗಳಲ್ಲಿ ಸುರಕ್ಷಾ ಮುಚ್ಚಳವನ್ನು ಹಾಕಿಯೇ ಇಡಬೇಕು -ರಬ್ಬರ್ ಕೊಳವೆಯನ್ನು ಆಗಾಗ್ಗೆ ಪರಿಶೀಲಿಸುತ್ತಿರಿ. ಕನಿಷ್ಠ ಎರಡು ವರ್ಷಗಳಿಗೆ ಒಮ್ಮೆಯಾದರೂ ಅದನ್ನು ಬದಲಾಯಿಸಿ ನೆನಪಿಡಿ... -ಸಣ್ಣ ಬರ್ನರ್‌ನ್ನೇ ಹೆಚ್ಚಾಗಿ ಬಳಸಿ. ಇದು ದೊಡ್ಡ ಬರ್ನರ್‌ಗಿಂತ ಶೇ 6- 10ರಷ್ಟು ಗ್ಯಾಸ್ ಉಳಿತಾಯ ಮಾಡುತ್ತದೆ. -ಬರ್ನರ್‌ಗಳನ್ನು ಆಗಾಗ್ಗೆ ಶುಚಿಗೊಳಿಸುತ್ತಾ ಇರಿ. ಇದರಿಂದ ಉಕ್ಕಿದ ಹಾಲು ಅಥವಾ ಇತರ ಆಹಾರ ಪದಾರ್ಥದ ಕಣಗಳು ಬರ್ನರ್‌ನ ಒಳಗೆ ಸೇರಿಕೊಂಡು ಉರಿ ಸಮ ಪ್ರಮಾಣದಲ್ಲಿ ಇರದಂತೆ ತಡೆಯುವುದು ತಪ್ಪುತ್ತದೆ. -ಉರಿ ನೀಲಿ ಬಣ್ಣದಲ್ಲಿದ್ದರೆ ನಿಮ್ಮ ಸ್ಟೌ ಸರಿಯಾಗಿ ಉರಿಯುತ್ತಿದೆ ಎಂದರ್ಥ. ಅದಿಲ್ಲದೆ ಉರಿಯು ಕೇಸರಿ, ಹಳದಿ ಬಣ್ಣದಿಂದ ಕೂಡಿದ್ದರೆ ಅಥವಾ ಒಂದೇ ಸಮನಾಗಿ ಇರದಿದ್ದರೆ ಕೂಡಲೇ ಬರ್ನರ್‌ನ್ನು ಶುದ್ಧ ಮಾಡಿ. ಸಾಮಾನ್ಯವಾಗಿ ಅನಿಲ ಬರುವ ಮಾರ್ಗದಲ್ಲಿ ಕೊಳೆ ತುಂಬಿಕೊಂಡಿದ್ದರೆ ಹೀಗಾಗುತ್ತದೆ. ಆಗ ಇಂಧನ ಅರ್ಧಂಬರ್ಧ ಉರಿದು ಕಾರ್ಬನ್ ರೂಪದಲ್ಲಿ ಒಂದೆಡೆ ಸಂಗ್ರಹವಾಗುತ್ತದೆ. ಇದರಿಂದ ಇಂಧನದ ಉರಿಯುವ ಸಾಮರ್ಥ್ಯ ವ್ಯರ್ಥವಾಗುತ್ತದೆ. -ಒದ್ದೆ ಪಾತ್ರೆಯನ್ನು ನೇರವಾಗಿ ಉರಿಯುತ್ತಿರುವ ಸ್ಟೌ ಮೇಲಿಡಬೇಡಿ. ಒದ್ದೆಯನ್ನು ಒರೆಸಿದ ಬಳಿಕವಷ್ಟೇ ಇಡಿ. ಇದರಿಂದಲೂ ಒಂದಷ್ಟು ಗ್ಯಾಸ್ ಉಳಿತಾಯ ಮಾಡಬಹುದು. -ಸ್ಟೌ ಮೇಲೆ ಪಾತ್ರೆ ಇಟ್ಟು ನಂತರ ತರಕಾರಿ ಹೆಚ್ಚುವುದು ಅಥವಾ ಅಡುಗೆಗೆ ಬೇಕಾದ ತಕ್ಷಣದ ಇತರ ಸಿದ್ಧತೆಗಳನ್ನು ಮಾಡಿಕೊಳ್ಳಲು ಮುಂದಾಗಬೇಡಿ. ಪಾತ್ರೆಯನ್ನು ಮತ್ತು ಅದರ ಒಳಗೆ ಹಾಕಬೇಕಾದ ವಸ್ತುಗಳನ್ನು ಮೊದಲೇ ಸಿದ್ಧಪಡಿಸಿಕೊಂಡು ಕೈಗೆಟಕುವಂತೆ ಇಟ್ಟುಕೊಂಡ ಬಳಿಕವಷ್ಟೇ ಸ್ಟೌ ಹಚ್ಚಿ. -ಬರ್ನರ್‌ಗಿಂತ ಕೇವಲ ಎರಡು ಇಂಚು ಸಣ್ಣದಾದ ಪಾತ್ರೆ ಇಟ್ಟರೂ ಶೇ 40ರಷ್ಟು ಉರಿ ವ್ಯರ್ಥವಾಗಿ ಹೋಗುತ್ತದೆ. '); $('#div-gpt-ad-124458-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-124458'); }); googletag.cmd.push(function() { googletag.display('gpt-text-700x20-ad2-124458'); }); },300); var x1 = $('#node-124458 .field-name-body .field-items div.field-item > p'); if(x1 != null && x1.length != 0) { $('#node-124458 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-124458').addClass('inartprocessed'); } else $('#in-article-124458').hide(); } else { _taboola.push({article:'auto', url:'https://www.prajavani.net/124458.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-124458', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-124458'); }); googletag.cmd.push(function() { googletag.display('gpt-text-300x20-ad2-124458'); }); // Remove current Outbrain //$('#dk-art-outbrain-124458').remove(); //ad before trending $('#mob_rhs1_124458').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-124458 .field-name-body .field-items div.field-item > p'); if(x1 != null && x1.length != 0) { $('#node-124458 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-124458 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-124458'); }); } else { $('#in-article-mob-124458').hide(); $('#in-article-mob-3rd-124458').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-124458','#in-article-722396','#in-article-717428','#in-article-717424','#in-article-706997']; var twids = ['#twblock_124458','#twblock_722396','#twblock_717428','#twblock_717424','#twblock_706997']; var twdataids = ['#twdatablk_124458','#twdatablk_722396','#twdatablk_717428','#twdatablk_717424','#twdatablk_706997']; var obURLs = ['https://www.prajavani.net/124458.html','https://www.prajavani.net/corona-panic-is-nessecary-to-stay-away-from-spouse-722396.html','https://www.prajavani.net/children-safety-717428.html','https://www.prajavani.net/corona-effect-raising-family-disputes-717424.html','https://www.prajavani.net/jade-roll-massage-for-beauty-706997.html']; var vuukleIds = ['#vuukle-comments-124458','#vuukle-comments-722396','#vuukle-comments-717428','#vuukle-comments-717424','#vuukle-comments-706997']; // var nids = [124458,722396,717428,717424,706997]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2021/04/17 05:26:05
https://www.prajavani.net/124458.html
mC4
ಕಾಶ್ಮೀರದಲ್ಲಿ ಕಿರಿದಾಗುತ್ತಿರುವ ಚುನಾವಣಾ ಅವಕಾಶಗಳು | Economic and Political Weekly ಕಾಶ್ಮೀರದಲ್ಲಿ ಕಿರಿದಾಗುತ್ತಿರುವ ಚುನಾವಣಾ ಅವಕಾಶಗಳು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಮುಖ್ಯಧಾರೆ ರಾಜಕೀಯ ಪಕ್ಷಗಳಿಗೆ ಶುಭ ಸೂಚನೆಯನ್ನೇನೂ ನೀಡುತ್ತಿಲ್ಲ. ರೇಖಾ ಚೌಧರಿ ಬರೆಯುತ್ತಾರೆ: ಜಮ್ಮು-ಕಾಶ್ಮೀರದ ನಗರ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗಳು ಕಾಶ್ಮೀರ ಕಣಿವೆಯಲ್ಲಿ ಪ್ರಜಾತಂತ್ರದ ಅವಕಾಶಗಳು ಕಿರಿದಾಗುತ್ತಿರುವುದನ್ನು ಸ್ಪಷ್ಟವಾಗಿ ಬಯಲುಗೊಳಿಸಿದೆ. ೨೦೦೨ರ ಶಾಸನಸಭಾ ಚುನಾವಣೆಗಳನಂತರ ಅಲ್ಲಿ ತೆರೆದುಕೊಂಡಿದ್ದ ಸಕ್ರಿಯ ಚುನಾವಣಾ ಪ್ರಜಾತಂತ್ರದ ಅವಕಾಶಗಳು ಕಳೆದ ಕೆಲವು ವರ್ಷಗಳಿಂದ ಕಿರಿದಾಗುತ್ತಾ ಸಾಗಿವೆ. ಶ್ರೀನಗರ ಮತ್ತು ಜಮ್ಮುವಿನ ೭೧ ಮುನಿಸಿಪಲ್ ಕಾರ್ಪೊರೇಷನ್‌ಗಳನ್ನೂ ಒಳಗೊಂಡಂತೆ ೭೯ ನಗರ ಸ್ಥಳೀಯ ಸಂಸ್ಥೆಗಳಿಗೂ, ಆರು ಮುನಿಸಿಪಲ್ ಕೌನ್ಸಿಲ್ ಮತ್ತು ೭೧ ಮುನಿಸಿಪಲ್ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ರಾಜ್ಯಾದ್ಯಂತ ಶೇ.೩೫ರಷ್ಟು ಮತದಾನವಾಗಿದೆ. ಮತದಾನದ ಪ್ರಮಾಣ ಇಷ್ಟಾದರೂ ಅಗಲೂ ಪ್ರಮುಖ ಕಾರಣವೆಂದರೆ ಜಮ್ಮು ಮತ್ತು ಲಡಖ್ ಪ್ರದೇಶದಲ್ಲಿ ಅತಿಹೆಚ್ಚು ಮತದಾನವಾಗಿದ್ದು. ಆದರೆ ಕಾಶ್ಮೀರ ಕಣಿವೆಯಲ್ಲಿ ಈ ಚುನಾವಣಾ ಕಸರತ್ತನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸಿದರು. ಚುನಾವಣೆಯ ಮೊದಲ ಹಂತದಲ್ಲಿ ಆದ ಶೇ.೮.೩ರಷ್ಟು ಮತದಾನವೇ ಕಣಿವೆಯಲ್ಲಾದ ಅತಿ ಹೆಚ್ಚು ಮತದಾನವಾಗಿತ್ತು. ಮತದಾನದ ನಂತರದ ಹಂತದಲ್ಲಿ ಈ ಪ್ರಮಾಣ ಇನ್ನೂ ಕುಸಿಯಿತು. ಎರಡನೇ ಹಂತದಲ್ಲಿ ಮತದಾನದ ಪ್ರಮಾಣ ಶೇ.೩.೪ಕ್ಕೆ ಕುಸಿದರೆ, ಮೂರನೇ ಹಂತದಲ್ಲಿ ಶೇ.೩.೪೯ ಮತ್ತು ನಾಲ್ಕನೇ ಹಂತದಲ್ಲಿ ಶೇ. ೪ರಷ್ಟು ಮಾತ್ರ ಮತದಾನವಾಯಿತು. ಜನರು ಈ ಚುನಾವಣಾ ಕಸರತ್ತನ್ನು ತಿರಸ್ಕರಿಸಲಿದ್ದಾರೆಂಬುದು ಮತದಾನದ ದಿನಗಳಿಗೆ ಮುನ್ನವೇ ಸಾಬೀತಾಗಿತ್ತು. ಏಕೆಂದರೆ ಚುನಾವಣೆಯ ದಿನಗಳು ಹತ್ತಿರ ಬರುತ್ತಿದ್ದರೂ ನಾಮಪತ್ರವನ್ನು ಸಲ್ಲಿಸಲು ಸ್ಪರ್ಧಿಗಳೇ ಮುಂದೆ ಬಂದಿರಲಿಲ್ಲ. ಬಹಳಷ್ಟು ವಾರ್ಡುಗಳಲ್ಲಿ ಒಂದೋ ಒಬ್ಬ ಸ್ಪರ್ಧಿಯೂ ಇರಲಿಲ್ಲಾ ಅಥವಾ ಒಬ್ಬರೇ ಒಬ್ಬ ಸ್ಪರ್ಧಿಯಿದ್ದರು. ಹೀಗಾಗಿ ಕಾಶ್ಮೀರದ ಒಟ್ಟು ೫೯೮ ವಾರ್ಡುಗಳಲ್ಲಿ ಕೇವಲ ೧೮೬ ವಾರ್ಡುಗಳಲ್ಲಿ ಮಾತ್ರ ಮತದಾನವು ನಡೆಯಿತು. ಅಲ್ಲದೆ ಏಕೈಕ ಸ್ಪರ್ದಿಯಿದ್ದ ೨೩೧ ವಾರ್ಡುಗಳಲ್ಲಿ ಸ್ಪರ್ಧಿಗಳು ಅವಿರೋಧವಾಗಿ ಆಯ್ಕೆಯಾದರೆ, ೧೮೧ ವಾರ್ಡುಗಳಲ್ಲಿ ಒಬ್ಬ ಸ್ಪರ್ಧಿಯೂ ಇರಲಿಲ್ಲ. ಹೀಗಾಗಿ ಅಂತಿಮವಾಗಿ ೪೧೨ರಷ್ಟು ವಾರ್ಡುಗಳಲ್ಲಿ ಮತದಾನವೇ ನಡೆಯಲಿಲ್ಲ. ಪ್ರತ್ಯೇಕತಾವಾದಿಗಳು ಮತ್ತು ಮಿಲಿಟೆಂಟ್ ಸಂಘಟನೆಗಳು ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿದ್ದರಿಂದ ಪರಿಸ್ಥಿಯು ಎಷ್ಟು ಕೆಟ್ಟದಾಗಿತ್ತೆಂದರೆ ಮತದಾನವು ನಡೆದ ವಾರ್ಡುಗಳಲ್ಲಿ ಯಾವುದೇ ಪ್ರಚಾರ ನಡೆದಿರಲಿಲ್ಲ. ಇನ್ನೂ ಎಷ್ಟೋ ವಾರ್ಡುಗಳಲ್ಲಿ ಭದ್ರತೆಯ ಕಾರಣದಿಂದ ಸ್ಪರ್ಧಾಳುಗಳ ಹೆಸರನ್ನು ಕೊನೆ ನಿಮಿಷದವರೆಗೆ ರಹಸ್ಯವಾಗಿಟ್ಟಿದ್ದರಿಂದ ಸ್ಪರ್ಧಿಗಳು ಯಾರೆಂಬುದೇ ಮತದಾರರಿಗೆ ಗೊತ್ತಾಗಲಿಲ್ಲ. ಈ ಚುನಾವಣಾ ಸನ್ನಿವೇಶವು ೧೯೮೯ರ ನಂತರದ ಮಿಲಿಟೆನ್ಸಿ ಪ್ರಬಲಗೊಂಡ ಕಾಲಾವಧಿಯನ್ನು ನೆನಪಿಸುವಂತಿತ್ತು. ಆ ದಿನಗಳಲ್ಲಿ ಪ್ರಧಾನಧಾರೆ ರಾಜಕಾರಣವು ಸಂಪೂರ್ಣವಾಗಿ ಕುಸಿದಿತ್ತಲ್ಲದೆ ಚುನಾವಣಾ ರಾಜಕಾರಣವು ಸಂಪೂರ್ಣವಾಗಿ ಅಮಾನ್ಯಗೊಂಡಿತ್ತು. ಉದಾಹರಣೆಗೆ ೧೯೮೯ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕೇವಲ ಶೇ.೫ರಷ್ಟು ಮಾತ್ರ ಮತದಾನವಾಗಿತ್ತು ಮತ್ತು ಆ ಚುನಾವಣೆಯನ್ನು ಮೋಸಪೂರಿತ ಚುನಾವಣೆಯೆಂದು ಬಣ್ಣಿಸಲಾಗಿತ್ತು. ೧೯೯೬ರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಾದರೂ ಮತದಾರರ ನಡುವೆ ಅಪಾರವಾದ ಸೇನಾ ತುಕಡಿಗಳ ಮತ್ತು ದ್ರೋಹಿ ಮಿಲಿಟೆಂಟುಗಳ ಓಡಾಟಗಳು ವಿಸ್ತೃತವಾಗಿ ಇದ್ದಿದ್ದರಿಂದ ಅದು ಬಲವಂತದ ಮತದಾನವೆಂದು ಪರಿಗಣಿತವಾಗಿ ಮಾನ್ಯತೆಯನ್ನು ಗಳಿಸಲಾಗಲಿಲ್ಲ. ೨೦೦೧ರಲ್ಲಿ ನಡೆದ ಪಂಚಾಯತಿ ಚುನಾವಣೆಗಳು ಸಹ ವಿವಾದಕ್ಕೀಡಾಗಿದ್ದವು. ಏಕೆಂದರೆ ಬಹಳಷ್ಟು ಕ್ಷೇತ್ರಗಳಲ್ಲಿ ಯಾವೊಬ್ಬ ಸ್ಪರ್ಧಿಯೂ ನಾಮಪತ್ರವನ್ನು ಸಲ್ಲಿಸಿರಲಿಲ್ಲ. ಆದರೆ ೨೦೦೨ರ ವಿಧಾನಸಭಾ ಚುನಾವಣೆಗಳನಂತರ ಚುನಾವಣಾ ಪ್ರಕ್ರಿಯೆಗಳಮಾನ್ಯತೆಯು ಹೆಚ್ಚುತ್ತಾ ಹೋಯಿತು. ಪ್ರತ್ಯೇಕತವಾದಿಗಳ ಪ್ರಭಾವು ಒಂದೆಡೆ ದಟ್ಟವಾಗಿಯೇ ಇದ್ದರೂ, ಕಾಶ್ಮೀರ ಮೂಲದ ರಾಜಕೀಯ ಪಕ್ಷಗಳಾದ ನ್ಯಾಷನಲ್ ಕಾನ್ಫೆರೆನ್ಸ್ ಮತ್ತು ಪೀಪಲ್ಸ್ ಡೆಮಕ್ರಾಟಿಕ್ ಪಾರ್ಟಿ (ಪಿಡಿಪಿ)ಗಳ ನಡುವಿನ ತುರುಸಿನ ಸ್ಪರ್ಧೆಯು ಚುನಾವಣಾ ರಾಜಕೀಯದ ಬಗೆಗಿನ ಹಿತಾಸಕ್ತಿಯನ್ನು ಮತ್ತು ಜನರ ಪಾಲ್ಗೊಳ್ಳುವಿಕೆಯನ್ನೂ ಹೆಚ್ಚಿಸಿತು. ಒಂದು ನಿರ್ದಿಷ್ಟ ಮಾದರಿಯಲ್ಲಿ ನಂತರದ ಪ್ರತಿ ಚುನಾವಣೆಗಳಲ್ಲೂ ಮತದಾನದ ಪ್ರಮಾಣ ವೇಗವಾಗಿ ಹೆಚ್ಚುತ್ತಾ ಹೋಯಿತು. ಚುನಾವಣೆಯು ಹೆಚ್ಚು ಸ್ಥಳೀಯವಾದಷ್ಟೂ ಮತದಾನದ ಪ್ರಮಾಣವೂ ಹೆಚ್ಚಾಗುತ್ತಿತ್ತು. ಹೀಗಾಗಿ ಲೋಕಸಭಾ ಚುನಾವಣೆಗಳಿಗಿಂತ ರಾಜ್ಯ ವಿಧಾನಸಭಾ ಚುನಾವಣೆಗಳ ಬಗ್ಗೆ ಜರಲ್ಲಿ ಹೆಚ್ಚಿನ ಉತ್ಸಾಹ ವ್ಯಕ್ತವಾಗುತ್ತಿತ್ತು. ವಿಧಾನಸಭಾ ಚುನಾವಣೆಗಳಿಗಿಂತ ಪಂಚಾಯತ್ ಚುನಾವಣೆಗಳು ಜನರಲ್ಲಿ ಇನ್ನೂ ಹೆಚ್ಚಿನ ಉತ್ಸಾಹವನ್ನು ಮೂಡಿಸಿತ್ತು. ೨೦೧೧ರ ಪಂಚಾಯತ್ ಚುನಾವಣೆಯಲ್ಲಂತೂ ಶೇ.೮೦ರಷ್ಟು ಮತದಾನವಾಗಿತ್ತು. ಈ ಇಡೀ ಅವಧಿಯಲ್ಲಿ ಪ್ರತ್ಯೇಕತವಾದಿಗಳು ಮತ್ತು ಮಿಲಿಟೆಂಟ್ ಸಂಘಟನೆಗಳು ಚುನಾವಣೆಗಳನ್ನು ಬಹಿಷ್ಕರಿಸಲು ಕೊಟ್ಟ ಕರೆಯನ್ನು ಜನರು ತಿರಸ್ಕರಿಸಿದರು. ಅಮರನಾಥ ಭೂಮಿ ವಿವಾದದ ಸಂದರ್ಭದಲ್ಲಿ ೨೦೦೮ರಲ್ಲಿ ಮತ್ತೊಮ್ಮೆ ಬೃಹತ್ ಪ್ರತ್ಯೇಕತವಾದಿ ಬಂಡಾಯವು ಹುಟ್ಟಿಕೊಂಡ ಸನ್ನಿವೇಶದಲ್ಲೂ ಕೆಲವೇ ತಿಂಗಳನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಶೇ. ೫೨ರಷ್ಟು ಮತದಾನವಾಗಿತ್ತು (ಕನಿಷ್ಟ ನಾಲ್ಕು ಜಿಲ್ಲೆಗಳಲ್ಲಿ ಶೇ.೬೦ರಷ್ಟು ಮತದಾನವಾಗಿತ್ತು). ಅದೇ ರೀತಿ ೨೦೧೦ರಲ್ಲಿ ಭುಗಿಲೆದ್ದ ಮತ್ತೊಂದು ಸುತ್ತಿನ ಪ್ರತ್ಯೇಕತವಾದಿ ಬಂಡಾಯವು ೫ ತಿಂಗಳಕಾಲ ನಿರಂತರವಾಗಿ ಮುಂದುವರೆದರೂ, ೨೦೧೧ರಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಕಾಶ್ಮೀರದ ಜನ ಉತ್ಸಾಹದಿಂದಲೇ ಭಾಗವಹಿಸಿದರು. ಈ ಸಜೀವ-ಸಕ್ರಿಯ ಚುನಾವಣಾ ಪ್ರಕ್ರಿಯೆಗಳು ೨೦೧೪ರ ವಿಧಾನಸಭಾ ಚುನಾವಣೆಗಳಲ್ಲೂ ಮುಂದುವರೆದವು. ಚುನಾವಣಾ ಪಕ್ಷಗಳು ಈ ಪ್ರಕ್ರಿಯೆಗಳಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರಲ್ಲದೆ ಮತದಾನಕ್ಕೆ ಮುನ್ನ ಬಿರುಸಾದ ಚುನಾವಣಾ ಪ್ರಚಾರಗಳೂ ನಡೆದಿದ್ದವು. ಕಾಶ್ಮೀರ ಪ್ರದೇಶದಲ್ಲಿರುವ ೪೬ ವಿಧಾನಸಭಾ ಕ್ಷೇತ್ರಗಳಲ್ಲಿ ೨೩ ಕ್ಷೇತ್ರಗಳಲ್ಲಿ ಶೇ.೬೦ರಷ್ಟು ಮತದಾನವಾಗಿತ್ತು. ಅದರಲ್ಲಿ ೧೩ ಕ್ಷೇತ್ರಗಳಲ್ಲಿ ಶೇ.೭೦ಕ್ಕಿಂತ ಹೆಚ್ಚು ಮತದಾನವಾಗಿದ್ದರೆ ೫ ಕ್ಷೇತ್ರಗಳಲ್ಲಿ ಶೇ.೮೦ಕ್ಕಿಂತ ಹೆಚ್ಚು ಮತದಾನವಾಗಿತ್ತು. ಚುನವಣಾ ಪ್ರಕ್ರಿಯೆಗಳು ಸಜೀವವಾಗಿದ್ದ ಈ ಇಡೀ ಅವಧಿಯಲ್ಲಿ ಕಾಶ್ಮೀರಿಗಳು ಆಡಳಿತದ ರಾಜಕಾರಣ (ಮುಖ್ಯಧಾರೆ ರಾಜಕಾರಣ) ಮತ್ತು ಸಂಘರ್ಷ ಪರಿಹಾರ ರಾಜಕಾರಣ (ಪ್ರತ್ಯೇಕತವಾದಿ ರಾಜಕೀಯ)ಗಳನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಮಾಡಿಕೊಂಡಿದ್ದರು. ಹೀಗಾಗಿ ಪ್ರತ್ಯೇಕತಾವಾದಿ ರಾಜಕಾರಣ ಸಜೀವವಾಗಿದ್ದರೂ ಪ್ರಜಾತಾಂತ್ರಿಕ ರಾಜಕಾರಣವೂ ಕೂಡಾ ಸಕ್ರಿಯವಾಗಿತ್ತು. ಪ್ರತ್ಯೇಕತಾವಾದಿ ಮನೋಭಾವನೆಯನ್ನು ಉಳಿಸಿಕೊಂಡು ಸಹ ತಮ್ಮ ದಿನನಿತ್ಯದ ಅಗತ್ಯಗಳಾದ ನೀರು, ರಸ್ತೆ, ವಿದ್ಯುತ್ ಗಳಂಥಾ ವಿಷಯಗಳಿಗೆ ಚುನಾವಣಾ ರಾಜಕಾರಣವು ಅಗತ್ಯವೆಂಬುದು ಕಾಶ್ಮೀರಿಗಳಿಗೆ ಮನವರಿಕೆಯಾಗಿತ್ತು. ಈ ಕಾರಣದಿಂದಾಗಿಯೇ ಪ್ರತ್ಯೇಕತಾವಾದಿ ರಾಜಕಾರಣವೂ ಭುಗಿಲೆದ್ದು ನಿಂತಾಗಲೂ ಕಾಶ್ಮೀರಿಗಳು ಚುನಾವಣಾ ರಾಜಕಾರಣಕ್ಕೆ ಮತ್ತು ಆಡಳಿತದ ರಾಜಕೀಯಕ್ಕೆ ಮಾನ್ಯತೆಯನ್ನು ನೀಡುತ್ತಾ ಬಂದಿದ್ದರು. ಈ ಬಗೆಯಲ್ಲಿ ಆಡಳಿತದ ರಾಜಕೀಯ ಮತ್ತು ಸಂಘರ್ಷ ಪರಿಹಾರದ ರಾಜಕೀಯವು ಏಕಕಾಲದಲ್ಲಿ ಪರ್ಯಾಯವಾಗಿ ಸಹಅಸ್ಥಿತ್ವ ಪಡೆದಿದ್ದ ಹಂತವು ಈಗ ಮುಗಿದಂತೆ ಕಾಣುತ್ತಿದೆ. ೨೦೧೪ರಲ್ಲಿ ಯಶಸ್ವಿಯಾದ ಚುನಾವಣಾ ಪ್ರಕ್ರಿಯೆಗಳು ನಡೆದ ನಂತರದದ ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ ೨೦೧೬ರ ಪ್ರತ್ಯೇಕತಾವಾದಿ ಬಂಡಾಯವು ಭುಗಿಲೆದ್ದ ನಂತರದಲ್ಲಿ ಕಾಶ್ಮೀರದಲ್ಲಿನ ಪರಿಸ್ಥಿತಿಗಳು ಗುಣಾತ್ಮಕವಾಗಿ ಬದಲಾಗಿದೆ. ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ೨೦೧೭ರಲ್ಲಿ ನಡೆದ ಉಪಚುನಾವಣೆಯಲ್ಲೇ ಈ ವಿದ್ಯಮಾನ ಬೆಳಕಿಗೆ ಬಂದಿತ್ತು. ಆ ಚುನಾವಣೆಯಲ್ಲಿ ಸಾಕಷ್ಟು ಹಿಂಸಾಚಾರಗಳು ಮತ್ತು ಬೃಹತ್ ಪ್ರತಿಭಟನೆಗಳು ನqದಿದ್ದವಲ್ಲದೆ ಕೇವಲ ಶೇ.೮ರಷ್ಟು ಮಾತ್ರ ಮತದಾನವಾಗಿತ್ತು. ಕಾಶ್ಮೀರದ ಪ್ರಧಾನಧಾರೆ ಚುನಾವಣಾ ಪಕ್ಷಗಳು ತೀವ್ರ ಸ್ವರೂಪದ ಸವಾಲನ್ನೆದುರಿಸುತ್ತಿದ್ದಾರೆ. ಇದು ನ್ಯಾಷನಲ್ ಕಾನ್ಫೆರೆನ್ಸ್ ಮತ್ತು ಪಿಡಿಪಿ ಪಕ್ಷಗಳು ನಗರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಬಹಿಷ್ಕರಿಸಿದ್ದರಲ್ಲೇ ಸ್ಪಷ್ಟವಾಗಿ ವ್ಯಕ್ತವಾಗಿದೆ. ಸಂವಿಧಾನದ ೩೫ಎ ಕಲಮಿನ ಸಿಂಧುತ್ವವನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿರುವುದರಿಂದ ಉಂಟಾಗಿರುವ ರಾಜಕೀಯ ಅತಂತ್ರತೆಯ ಕಾರಣದಿಂದ ಈ ಎರಡೂ ಪಕ್ಷಗಳೂ ಚುನಾವಣಾ ಪ್ರಕ್ರಿಯೆಗಳಿಂದ ದೂರ ಉಳಿಯಬೇಕಾಯಿತು ಎಂದು ಹೇಳಿಕೊಳ್ಳುತ್ತಿದ್ದರೂ ಅಸಲಿ ಕಾರಣವೆಂದರೆ ಕಾಶ್ಮೀರದಲ್ಲಿನ ಪರಿಸ್ಥಿತಿ ಪ್ರಧಾನಧಾರೆ ರಾಜಕೀಯಕ್ಕೆ ಪೂರಕವಾಗಿಲ್ಲ ಎಂಬುದೇ ಆಗಿದೆ.
2021/04/14 23:21:08
https://www.epw.in/kn/journal/2018/44/comment/kashmirs-shrinking-electoral-space.html
mC4
(ಋಣವಿದ್ಯುತ್ಕಣ ಇಂದ ಪುನರ್ನಿರ್ದೇಶಿತ) ಪರಮಾಣು ಸಿದ್ದಾಂತಸಂಪಾದಿಸಿ ಸರಿಸುಮಾರು ೧೯೧೪ರಲ್ಲಿ ಭೌತ ವಿಜ್ಞಾನಿಗಳಾದ ರುದರ್ ರ್ಫೊಡ್, ಹೆನ್ರಿ ಮೊಸಲೆನು, ಜೆಮ್ಸ್ ಫ್ರ್ಯಾಂಕ್ ಮತು ಗುಸ್ತವ್ ಹೆರ್ಟ್ಶ್ರಾರವರ ಪ್ರಯೋಗಗಳಿಂದ ಪರಮಾಣುವಿನ ರಚನೆಯಲ್ಲಿ ದಟ್ಟವಾದ ದನಾತ್ಮಕ ಚಾರ್ಜ್ ಉಳ್ಳ ಬೀಜಕೇಂದ್ರ (ನ್ಯುಕ್ಲಿಯಸ್ಸ್) ಸುತ್ತ ಕಡಿಮೆ ತೂಕ ಉಳ್ಳ ಎಲೆಕ್ಟ್ರಾನ್ ಇರುತ್ತದೆ ಎಂದು ಸ್ಥಾಪಿಸಿದರು. ೧೯೧೩ರಲ್ಲಿ ಡ್ಯಾನಿಷ್ ಭೌತ ವಿಜ್ಞಾನಿ ನೀಲ್ಸ್ ಬೋರ್ ಎಲೆಕ್ಟ್ರಾನ್ ಕ್ವಾಂಟೈಸ್ ಶಕ್ತಿಗಳ ಸ್ಥಿತಿಗಳಲ್ಲಿ ಇರುತ್ತದೆ ಎಂದು ಮಂಡಿಸಿದನು. ೧೯೨೪ರಲ್ಲಿ ಆಸ್ಟ್ರಿಯನ್ ಭೌತಶಾಸ್ತ್ರದ ವಿಜ್ಞಾನಿ ವುಲ್ಫ್ ಗ್ಯಾಂಗ್ ಪಾಲಿ ಕವಚ ಅಥವಾ ಶೆಲ್ (shell) ಮಾದರಿಯ ರಚನೆಯನ್ನು ನಾಲ್ಕು ನಿಯತಾಂಕಗಳಲ್ಲಿ ಪಾಲಿ ಹೊರಗಿಡುವ ನಿಯಮ (pauli exclusion principle)ದಲ್ಲಿ ವಿವರಿಸಿದನು. ಎಲೆಕ್ಟ್ರಾನಿನ ತೂಕವು 9.1 × 10 − 31 {\displaystyle \textstyle 9.1\times 10^{-31}} ಕಿಲೊಗ್ರಾಮ್. ಐನ್ ಸ್ಟೀನ್ ತತ್ವದ ಪ್ರಕಾರ ಈ ತೂಕವು ೦.೫೧೧ MeV ಅಷ್ಟು ಶಕ್ತಿಯುಳ್ಳದ್ದಾಗಿರುತ್ತದೆ. ಒಂದು ಎಲೆಕ್ಟ್ರಾನಿಗೆ -೧.೬೦೨^-೧೯ ಕೂಲಂಬಷ್ಟು ಎಲೆಟ್ರಿಕ್ ಚಾರ್ಜ್ ಹೊಂದಿದೆ. e-ಎಂಬ ಚಿನ್ಹೆಯಿಂದ ಗುರುತಿಸಲಾಗಿದೆ.ಋಣ ಚಿನ್ಹೆ ಋಣ ಚಾರ್ಜ್ ಅನ್ನು ತೋರಿಸುತ್ತದೆ. ಒಂದು ಎಲೆಕ್ಟ್ರಾನ್ ಪರಮಾಣುವಿನ ಬೀಜಕೇಂದ್ರ ಆಕರ್ಷ್ಕ ಮದುವಿನಲ್ಲಿ ಲಗತ್ತಿಸಲಾಗಿದೆ.ಒಂದು ನ್ಯೂಕ್ಲಿಯಸ್‌ಗೆ ಒಂದು ಅಥವಾ ಹೆಚ್ಚು ಎಲೆಕ್ಟ್ರಾನ್‌ಗಳು ಲಗತ್ತಿಸಿದ ವ್ಯವಸ್ಥೆಗೆ ಒಂದು ಪರಮಾಣು ಎಂದು ಕರೆಯುತ್ತಾರೆ. ಅನ್ವಯಗಳುಸಂಪಾದಿಸಿ ಎಲೆಕ್ಟ್ರಾನ್ ಕಿರಣಗಳನ್ನು ಬೆಸೆಯಲು ಉಪಯೋಗಿಸಲಾಗುತ್ತದೆ. ಇವು 10 11 W c m − 2 {\displaystyle 10^{11}Wcm^{-2}} ವರೆಗಿನ ಶಕ್ತಿ ಸಾಂದ್ರತೆಯುಳ್ಳ ೦.೧ ರಿಂದ ೧,೩ಮಿ.ಮಿ ಪರಿಮಿತ ಕೆಂದ್ರೀಕರಣವು ವ್ಯಾಸದ ಅಡ್ಡಲಾಗಿ ಅನುಮತಿಸುತ್ತದೆ. ಈ ಬೆಸುಗೆಯ ತಂತ್ರವನ್ನು ನಿರ್ವಾತದಲ್ಲಿ ಮಾಡಬೇಕು.ಏಕೆಂದರೆ ತಮ್ಮ ಗುರಿಯನ್ನು ತಲಪುವ ಮೊದಲೇ ಎಲೆಕ್ಟ್ರಾನ್ ಗಳು ಅನಿಲ ಗೊಂಡು ಪ್ರತಿಕ್ರಿಯಿಸುತ್ತದೆ. ಎಲೆಕ್ಟ್ರಾನ್ ಬೀಮ್ ಲಿತಿಯೊಗ್ರಾಫಿಯನ್ನು ಬಳಸಿ ಅರೆವಾಹಕಗಳನ್ನು ಎಚ್ಚಿಸುತ್ತಾರೆ. ಎಲೆಕ್ಟ್ರಾನ್ ಮ್ಯೆಕ್ರೊಸ್ಕೋಪ್ ನಲ್ಲಿ ಅತಿ ಸೂಕ್ಷ್ಮವಾದ ವಸ್ತುಗಳನ್ನು ವೀಕ್ಷಿಸಲು ಎಲೆಕ್ಟ್ರಾನ್ ಕಿರಣಗಳನ್ನು ಉಪಯೋಗಿಸಲಾಗುತ್ತದೆ.
2022/06/26 11:47:35
https://kn.m.wikipedia.org/wiki/%E0%B2%8B%E0%B2%A3%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A4%E0%B3%8D%E0%B2%95%E0%B2%A3
mC4
ಉಷೆ ಉದಯ: February 2012 ಚೇತರಿಸಿಕೊಂಡ "ನಿತ್ಯೋತ್ಸವ ಕವಿ" ಮತ್ತು ಹೃದಯವಂತಿಕೆ ಕವಿ ನಿಸಾರ್ ಅಹಮದ್ ನಿತ್ಯೋತ್ಸವ ಕವಿ ಎಂದೇ ಕರೆಸಿಕೊಂಡಿರುವ ಕವಿ ಪ್ರೊ.ನಿಸಾರ್ ಅಹಮದ್ ಅವರು ಹುಷಾರ್ ಇಲ್ಲದಾಗಿನಿಂದ ಅವರನ್ನು ಇಷ್ಟಪಡುವ, ಪ್ರೀತಿಸುವ, ಅವರ ಬರಹಗಳಿಂದ ಪ್ರಭಾವಿತರಾಗಿರುವ ಲೆಕ್ಕವಿಲ್ಲದಷ್ಟು ಕವಿ ಪ್ರೇಮಿಗಳಿಗೆ ದಿಗಿಲು ಬದಿದಂತಾಗಿದೆ. ನನಗೆ ತಿಳಿದ ಮಟ್ಟಿಗೆ ಎಸ್ಟೋ ಜನ ಅವರು ಚೇತರಿಸಿಕೊಳ್ಳಲಿ ಎಂದು ಪೂಜೆ ಮಾಡಿದ್ದಾರೆ (ಆದರೆ ಅದು ಎಲ್ಲೂ ಸುದ್ದಿಯಾಗಿಲ್ಲ). ಅಲ್ಲಾನನ್ನು ಬೇಡಿದ್ದರೆ, ಮಂದಿರದಲ್ಲಿ ಪ್ರಾರ್ಥಿಸಿದ್ದಾರೆ. ನಿಸಾರ್ ಸರ್ ಹುಷಾರಿ ಬರಲಿ ಎಂದು ಹಾರೈಸಿದ್ದಾರೆ. ಆಧಾರ ಫಲವೋ ಏನೋ ಎಂಬಂತೆ ದಿನಗಳೆದಂತೆ ನಿಸಾರ್ ಸರ್ ಚೇತರಿಸಿಕೊಳ್ಳುತ್ತಿದ್ದಾರೆ. ನಿಸಾರ್ ಕೇವಲ ಕವಿ ಅಥವಾ ಸಾಹಿತಿ ಮಾತ್ರವಲ್ಲ, ಉತ್ತಮ ಸಹೃದಯಿ. ಮಗು ಮನಸ್ಸಿನ "ಕವಿರಾಜ". ಅವರ ಅಂಥ ಗುಣದಿಂದಲೇ ಇಂದು ಅವರನ್ನ ಕನ್ನಡ ನಾಡು ಮಾತ್ರವಲ್ಲ ಇತರ ರಾಜ್ಯಗಳು, ಅಮೇರಿಕ, ಲಂಡನ್ದು, ಬೈ, ಕುವೈತ್ ಮುಂತಾದ ದೇಶಗಳಲ್ಲೂ ಅವರನ್ನು ಪ್ರೀತಿಸುವ ಜನರಿದ್ದಾರೆ. ಮೊದಲನೆಯದಾಗಿ ಅವರು ಚೇತರಿಸಿಕೊಳ್ಳಲಿ ಎಂದು ಹರಸಿದ ಎಲ್ಲ ಕವಿಪ್ರೀತಿ ಹೃದಯಗಳಿಗೆ ಅವರ ಹಾಗೂ ಅವರ ಶಿಷ್ಯನಾದ ನನ್ನ ಪರವಾಗಿ ಧನ್ಯವಾದಗಳು. ನಿಸಾರ್ ಜೊತೆ ಸಮಾಲೋಚನೆ ವೇಳೆ. ನಿಜ ಹೇಳ ಬೇಕೆಂದರೆ ಅವರು ನನ್ನಗೆ "ನಿತ್ಯೋತ್ಸವ" ಕವಿತೆಯ ಮೂಲವೇ ಪರಿಚಯವಾದದ್ದು. ಅಲ್ಲಿಂದ ನಿರಂತರವಾಗಿ ಅವರ ಸನಿಹದಲ್ಲಿಯೇ ಇದ್ದು ಅವರಿಂದ ಸಾಕಷ್ಟು ಬುದ್ದಿವಾದ ಕೇಳಿಸಿಕೊಂಡು ಬೆಳೆದವನು ನಾನು. ಪುಟ್ಟ ಮಗುವೊಂದು ಒಂದು ಹೂವು ಹಿಡಿದು "ಹ್ಯಾಪಿ ಬರ್ತ್ ಡೇ... ತಾತ" ಎಂದಾಗಲು ಅದನ್ನು ಎತ್ತಿ ಒಂದು ಮುತ್ತು ಜತೆಗೊಂದು ಜೇಬಲ್ಲಿದ್ದ ಚಾಕೊಲೆಟ್ ಕೊಟ್ಟು "ನೂರು ಕಾಲ ಬಾಳಪ್ಪ" ಎಂದು ಹರಸುವ ಮಧುರ ಮನಸ್ಸು ಅವರದ್ದು. ಅವರಿಗಿಂತ ಹಿರಿಯರಾದವರು ಅವರನ್ನು ನೋಡಲು ಹೋದಾಗಲೂ "ಇಲ್ಲಿವರೆಗೆ ಯಾಕೆ ಈ ವಯಸ್ಸಲ್ಲಿ ಬರೋಕೆ ಹೋದ್ರಿ? ಒಂದು ಫೋನ್ ಮಾಡಿದ್ರೆ ಸಾಕಿತ್ತು ಅಲ್ವ... ನಿಮ್ಮ ಆರೋಗ್ಯ ಚನ್ನಾಗಿ ನೋಡಿಕೊಳ್ಳಿ" ಎಂದು ಕಾಲಟಿ ತೋರುತ್ತಿದ್ದ ತಾಯಿ ಪ್ರೀತಿ ಅವರದು. ನಿಸಾರ್ ಹಾಗು ಅವರ ಮಡದಿ ಷಾನವಾಜ್ ಬೇಗಂ ಜೊತೆ ನಾನು ಅಂಥ ಕವಿ ಕೆಲವು ದಿನಗಳ ಹಿಂದೆ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ನ್ಯುಮೋನಿಯಕ್ಕೆ ಚಿಕಿತ್ಸೆ ಪಡೆಯಲು ದಾಖಲಾದಾಗ ನನಗಂತೂ ಆಕಾಶವೇ ತಲೆ ಮೇಲೆ ಬಿದ್ದ ಅನುಭವ. ಅವರು ಆಸ್ಪತ್ರೆಗೆ ಸೇರಿದಾಗಿನಿಂದ ನಿತ್ಯ ನಾನು ಅವರ ಸಂಪರ್ಕದಲ್ಲಿದ್ದೇನೆ, ಅವರ ಆರೋಗ್ಯ ವಿಚಾರಿಸುತ್ತಿದ್ದೇನೆ. ಅವರಿಗೆ ಚಿಕಿತ್ಸೆ ಕೊಡುತ್ತಿರುವ ಮೂವರು ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದೇನೆ. ಅವರ ಪ್ರಕಾರ ಈಗ ನಿಸಾರ್ ಸರ್ ಚೇತರಿಸಿಕೊಳ್ಳುತ್ತಿದ್ದಾರೆ. ಇಸಿಯೂನಿಂದ ಈಗ ಅವರನ್ನು ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಆದರೆ ಅಲ್ಲಿ ಅವರನ್ನು ನೋಡಲು ಬರುವರಿಂದ ಅವರು ದೂರ ಇದ್ದಾರೆ ಒಳ್ಳೆಯದು ಎಂದು ವೈದ್ಯರು ತಿಳಿಸಿದ್ದಾರೆ. ಕಾರಣ ಇಷ್ಟೇ, ಬಂದವರನ್ನು ನೋಡಿದ ತಕ್ಷಣ ನಿಸಾರ್ ಸರ್ ಸುಮ್ಮನೆ ಇರುವುದಿಲ್ಲ. ಅವರ ಜೊತೆ ಮಾತಿಗೆ ಇಳಿಯುತ್ತಾರೆ. ಅವರಿಗಿಂತ ಮೊದಲೇ ಇವರೇ ಬಂದವರ ಆರೋಗ್ಯ ವಿಚಾರಿಸುತ್ತಾರೆ. ಇದೆ ವೈದ್ಯರಿಗೆ ಸವಾಲಾಗಿದೆ. ಆದರು ಸಂದರ್ಶಕರನ್ನು ಸಾಕಷ್ಟು ಅವೈಡ್ ಮಾಡಿದ್ದಾರೆ. ಇದು ಕೇವಲ ಅವರ ಆರೋಗ್ಯಕ್ಕಾಗಿ, ಕವಿ ಬೇಗ ಚೇತರಿಸಿಕೊಳ್ಳಲಿ ಎಂಬ ಸದುದ್ದೇಶದಿಂದ. ಹಾಗಾಗಿ ವೈದ್ಯರಿಗೆ ಥ್ಯಾಂಕ್ಸ್ ಹೇಳಲೇಬೇಕು. ಅವರ 75 ನೇ ವರ್ಷದ ನೆನಪಿಗೆ ನೀಡಿದ "ನಿತ್ಯೋತ್ಸವ" ಸಿಡಿ (ಚಿತ್ರ: ರವೀಂದ್ರ ನಾಯಕ್) ನಿತ್ಯ ಅವರನ್ನು ನೋಡಲು ಬಂದವರ ಜೊತೆ ನಿಸಾರ್ ಮಾತನಾಡದೆ ಇರಲಾರರು. ಮೊನ್ನೆ ಬೆಳಗ್ಗೆ ನಿಸಾರ್ ಅವರನ್ನು ನೋಡಲು ಎಂದಿನಂತೆ ಹೊರತು ನಿಂತಾಗ ನನ್ನ ಮಡದಿ ಉಷಾ "ನಾನು ಬರುತ್ತೇನೆ, ಅವರನ್ನೊಮ್ಮೆ ನೋಡಬೇಕು ಅನಿಸುತ್ತಿದೆ" ಎಂದು ಹಟಕ್ಕೆ ಬಿದ್ದವಳಂತೆ ಆಡತೊಡಗಿದಳು. ಸರಿ ಇನ್ನೇನು ಮಾಡುವುದು ಎಂದು ಕರೆದುಕೊಂಡು ಹೋದೆ. ನಾವು ಅವರ ವಾರ್ಡ್ಗೆ ಕಾಲಿಡುತ್ತಿದ್ದಂತೆಯೇ ನನ್ನ ಮಡದಿಯನ್ನು ಮೊದಲೇ ಗೊತ್ತಿದ್ದಿದ್ದರಿಂದ ಹೇಗಿದ್ದೀಯಮ್ಮ, ಆರೋಗ್ಯನ... ಎಂದು ವಿಚಾರಿಸಿದರು. ಅವಳಿಗೆ ಸ್ವಲ್ಪ ಕಸಿವಿಸಿ ಆಯಿತು "ಆಸ್ಪತ್ರೆಯಲ್ಲಿರುವವರು ನೀವು, ನಾವು ನಿಮ್ಮ ಆರೋಗ್ಯ ವಿಚಾರಿಸಲು ಬಂದಿದ್ದು. ನೀವು ದಯಮಾಡಿ ಹೇಗೆಲ್ಲ ಮಾತನಾಡದೆ ವಿಶ್ರಾಂತಿ ತೆಗೆದುಕೊಳ್ಳಿ" ಎಂದಳು. ನಾನು ಕೂಡ ಅದನ್ನೇ ಬೆಂಬಲಿಸಿದೆ. ಆಗ ವೈದ್ಯರು ಹತ್ತಿರ ಬಂದು ಅವರು ಹೇಳಿದ್ದು ಸರಿ ಎಂದರು. ಆನಂತರ ಚಿಕತ್ಸೆ ಮುಂದುವರಿಯಿತು... ಹೀಗೆ ಸದಾ ಬೇರೆಯವರಿಗೆ ಒಳಿತನ್ನೇ ಬಯಸುವ ಕವಿ ನಿಸಾರ್, ತಮ್ಮ ಬಗ್ಗೆ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದ್ದು ನಿಜ. ಅದೂ ಈ ಇಲಿ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದದ್ದು ತೀರ ಮುಖ್ಯ. ಅದನ್ನು ಬದಿಗಿಟ್ಟು ಅವರು ಹೆಚ್ಚು ಓಡಾಟದಲ್ಲಿ ತೊಡಗಿದ್ದರು. ಅದು ಜನರ ಪ್ರೀತಿಗಾಗಿ. ಆ ಪ್ರೀತಿಯೇ ಅವರನ್ನು ಇಂದು ಕಾಪಾಡಿದೆ. ಆ ಪ್ರೀತಿ ನೀಡಿದ ನಿಮ್ಮೆಲ್ಲರಿಗೂ ಅನಂತ ಅನಂತ ಧನ್ಯವಾದಗಳು... Posted by ರಮೇಶ್ ಹಿರೇಜಂಬೂರು at 8:04 AM No comments: Links to this post ಸದನದಲ್ಲಿ "ಕಾಮ ಕಲಾಪ": ನಾವು ನೀವು ಮತ್ತು ಕರ್ನಾಟಕದ ಮಾನ ಪ್ರಜಾಪಭುತ್ವದ ನಿಜವಾದ ದೇಗುಲ ವಿಧಾನ ಸೌಧ. ಅಲ್ಲಿ ಏನು ನಡೆಯಬಾರದಿತ್ತೋ ಅದು ನಿನ್ನೆ (ಫೆ.೭) ನಡೆದು ಹೋಗಿದೆ. ಜತೆಗೆ ಅದೇ ದಿನ ಹೋರಾಟಗಾರ್ತಿ ಮೇಧಾ ಪಾಟ್ಕರ್ ರಾಜ್ಯ ಸರಕಾರದ "ಬಸವಶ್ರೀ ಪ್ರಶಸ್ತಿ" ಯನ್ನು ತಿರಸ್ಕರಿಸಿದ್ದಾರೆ. ಅಲ್ಲಿಗೆ ಒಟ್ಟೊಟ್ಟಿಗೆ ಎರಡು ರೀತಿಯಲ್ಲಿ ಕರ್ನಾಟಕದ ಮಾನ ಹಾರಜಿಗೆ ಬಿದ್ದಿದೆ!! ವಿಧಾನ ಸೌಧದಲ್ಲಿ ನಡೆದ "ಕಾಮ ಕಲಾಪ"ಕ್ಕೆ ಸಂಬಂದಿಸಿದಂತೆ ಮೂವರು ಸಚಿವರ ತಲೆ ದಂಡ ಕೂಡ ಆಗಿದೆ ನಿಜ. ಆದರೆ ಅವರು ಮೊದಲು ಶಾಸಕರು, ಆಮೇಲೆ ಸಚಿವರು. ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಅಲ್ಲಿಗೆ ಈ ಪ್ರಕರಣ ಮುಗಿಯಿತ...? ಒಂದು ವೇಳೆ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದರೆ ಮತ್ತೆ ಚುನಾವಣಾ, ಅಲ್ಲೊಂದಿಷ್ಟು ಹೆಂಡ- ಹಣದ ನರ್ತನ. ಮತ್ತೆ ಅದೇ ಜನಪ್ರತಿನಿಧಿಗಳು. ಆನಂತರ ಮತ್ತೆ ಯಥಾ: ಸ್ಥಿತಿ. ಇಷ್ಟೇನೆ...? ಇಂಥದ್ದೊಂದು ಪ್ರಶ್ನೆಯನ್ನ ಈ ಸಮಾಜದಲ್ಲಿ ಬದಕುವ ನಾವೆಲ್ಲರೂ ನಮಗೆ ನಾವೇ ಹಾಕಿಕೊಳ್ಳಬೇಕಿದೆ. ಮೂರು ತಿಂಗಳ ಹಿಂದೆ ನಾನು ನನ್ನ ಸ್ನೇಹಿತರೊಬ್ಬರ ಹಳ್ಳಿ ಮನೆಗೆ ಹೋಗಿದ್ದೆ. ಅಲ್ಲಿ ಒಂದು ಕುಟುಂಬದ ನಡುವೆ ಹಹಲ ದೊಡ್ಡದಾಗಿ ಜಗಳ ನಡೆಯುತ್ತಿತ್ತು. ನಾನು ಕುತೂಹಲಕ್ಕಾಗಿ ಜತೆಗೆ ಅದು ನನ್ನ ಸ್ನೇಹಿತನ ಸಂಬಂದಿಗಳ ಜಗಳ ಎನ್ನುವ ಕಾರಣಕ್ಕೆ ಅಲ್ಲಿ ಹೋದೆ. ಆಸ್ತಿಗಾಗಿ ಅಣ್ಣ ತಮ್ಮನ ನಡುಉವೆ ಜಗಳ ನಡೆದಿತ್ತು. ತಮ್ಮ ಅಣ್ಣನ ತಲೆ ಒಡೆದಿದ್ದ...! ಅದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರಲಿಲ್ಲ. ಬದಲಿಗೆ ಗ್ರಾಮದವರೇ ಅದನ್ನು ಪಂಚಾಯಿತಿ ಮೂಲಕ ಬಗೆಹರಿಸೋಣ, ಊರಿಗೆ ಪೊಲೀಸರು ಬರುವುದು ಬೇಡ ಎಂದು ತೀರ್ಮಾನಿಸಿ ಪಂಚಾಯಿತಿ ಕರೆದಿದ್ದರು. ಆಗ ತಮ್ಮ ಅಣ್ಣನ ತಲೆ ಒಡೆದಿದ್ದು. ಆಟ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದುದು ಎಲ್ಲವು ಕಣ್ಣ ಮುಂದೆ ಇತ್ತು. ಜತೆಗೆ ಜಗಳ ನಡೆಯುವಾಗ ಅದನ್ನ ನೋಡಿದವರು ಇದ್ದರು. ಆದರು ಆ ತಮ್ಮ ಪಂಚಾಯಿತಿಯಲ್ಲಿ ನನ್ನ ಅಣ್ಣನ ತಲೆಯನ್ನು ನಾನು ಒದೆದಿಲ್ಲ ಇದೆಲ್ಲ ಸುಳ್ಳು ಕಥೆ, ನಾನು ಯಾವ ದೇವರ ಮೇಲಾದ್ರು ಪ್ರಮಾಣ ಮಾಡಿ ಹೇಳ್ತೇನೆ. ನಾನು ಆ ತಪ್ಪು ಮಾಡಿಲ್ಲ ಎನ್ನುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಪಂಚಾಯಿತಿಯ ಹಿರಿಯರು "ಅಲ್ಲಯ್ಯ ಊರವರೆ ಎಸ್ಟೋ ಜನ ನೀವು ಜಗಳ ಆಡಿದ್ದು, ನೀನು ತಲೆ ಒಡೆದಿದ್ದು ಎಲ್ಲ ನೋಡಿದಾರೆ. ಆದರು ಹೀಗೆ ಹೇಳ್ತಿಯಲ್ಲ" ಎಂದಾಗ ಆಟ ಹೇಳಿದ " ಈ ರಾಜ್ಯದ ಮುಕ್ಯಮಂತ್ರಿಯಾದವ್ರೆ ದೇವರ ಮೇಲೆ ಆನೆ ಮಾಡಿ ಹೇಳ್ತಾರೆ, ನಾನು ಆಣೆ ಮಾಡಿ ಹೇಳಿದ್ರೆ ತಪ್ಪೇನು. ನಾನು ಆ ಕೆಲಸ ಮಾಡೇ ಇಲ್ಲ..." ಎಂದ. ನಾನು ಮಾತ್ರವಲ್ಲ ಅಲ್ಲಿ ನೆರೆದ ಅಷ್ಟೂ ಜನ ಅವನ ಮಾತಿನಿಂದ ಬೆಚ್ಚಿ ಬಿದ್ದಿದ್ದರು.( ಇದು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರ ಆಣೆ ಪ್ರಮಾಣದ ಎಫೆಕ್ಟ್.) ಇದಾಗಿ ಸ್ವಲ್ಪ ದಿನದ ಹಿಂದೆ... ಅದೇ ಊರಿನಲ್ಲಿ ಮತ್ತೊಂದು ಘಟನೆ ನಡೆದಿತ್ತು. ಅಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಪತ್ನಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಆಗ ಈ ವಿಚಾರ ಪಂಚಾಯಿತಿಗೆ ಬಂದಿತ್ತು. ಆಗ ಆ ಪ್ರಕರಣದಲ್ಲಿ ಅದಕ್ಕೂ ಕೂಡ ಗ್ರಾಮದ ಸಾಕಷ್ಟು ಜನ ಸಾಕ್ಷಿಯಿದ್ದರು. ಆದರೂ ಪಂಚಾಯಿತಿಯಲ್ಲಿ ಅವರಿಬ್ಬರೂ "ಈ ವಿಚಾರ ಆಕೆಯ ಗಂಡನಿಗೂ ಗೊತ್ತು. ಹೌದು, ಇದು ನಮ್ಮ ವಯಕ್ತಿಕ ವಿಚಾರ. ಇದು ನನ್ನ ಅವಳ ಇಷ್ಟ, ಕೇಳೋಕೆ ನೀವ್ಯಾರು?" ಎಂದು ಒಮ್ಮೆ ಹೇಳುತ್ತಿದ್ದನಂತೆ, ಇನ್ನೊಮ್ಮೆ ನಮ್ಮಿಬ್ಬರ ನಡುವೆ ಅಂತ ಯಾವ "ಕ್ರಿಯೆ" ಯೂ ನಡೆದೇ ಇಲ್ಲ. ನಾವು ನಿರಪರಾದಿಗಳು ಎಂದು ವಾದಿಸುತ್ತಿದ್ದರಂತೆ. ಇದೆಲ್ಲವನ್ನು ನೋಡಿ ಅಲ್ಲಿಯ ಜನ ಬೇಸತ್ತು ಹೋಗಿದ್ದಲ್ಲದೇ. ನಮ್ಮ ಊರು ಈ ಮಟ್ಟಕ್ಕೆ ಹಾಲಯಿತಲ್ಲ ಎಂದು ನೊಂದುಕೊಲ್ಲುತ್ತಿದ್ದಾರೆ. (ಇದು ಬಹುಶ: ರೇಣುಕಾಚಾರ್ಯ ಹಾಗು ಹಾಲಪ್ಪನ ಕಾಮ ಪ್ರಕರಣದ ಎಫೆಕ್ಟ್) ಇನ್ನು ಮುಂದೆ ಹರೆಯದ ಯುವಕರು ತಮ್ಮ ಮೊಬೈಲ್ ಗಳಲ್ಲಿ ನೀಲಿ ಚಿತ್ರಗಳನ್ನು ಮನೆಯಲ್ಲೇ ನೋಡುತ್ತಾ ಇರುವಾಗ ಅಪ್ಪ ಅಮ್ಮ ಕೇಳಿದರೆ "ನೋಡಿದರೆ ತಪ್ಪೇನು...!?" ಎಂದರೂ ಆಶ್ಚರ್ಯ ಇಲ್ಲ. ಯಾಕಂದ್ರೆ ಇದೆಲ್ಲ. ರಾಜ್ಯ ಸರಕಾರದ ಹಾಗು ನಮ್ಮ ಜನಪ್ರತಿನಿಧಿಗಳ ಮಾದರಿಗಳು. ಹಿಂದೆ ಸಿನಿಮಾ ರಂಗದ ನಾಯಕ, ನಾಯಕಿಯರನ್ನು ಅನುಕರಿಸುವ ಸಂಪ್ರದಾಯ ಇತ್ತು. ಆದರೆ ಈಗ ಜನ "ಚುನಾವಣೆಯಲ್ಲಿ ಆಯ್ಕೆಯಾದ ನಾಯಕರು"ಗಳನ್ನೂ ಬಹು ಬೇಗ ಅನುಕರಿಸುತ್ತಿದ್ದಾರೆ. ಅವರೇ ಇವರಿಗೆ ನಾಯಕರಾಗುತ್ತಿದ್ದಾರೆ. ಇಂಥ ಸಂಧರ್ಭದಲ್ಲಿ ತಳಮಟ್ಟದ ಜನ ಸಮುದಾಯವನ್ನು, ಸಮಾಜವನ್ನು ತಮ್ಮ ಸಚ್ಚಾರಿತ್ರ್ಯದ ಮೂಲಕ ಒಳ್ಳೆಯ ದಿಕ್ಕಿನ ಕಡೆಗೆ ನಡೆಸಿಕೊಂಡು ಹೋಗಬೇಕಾದ ಜನಪ್ರತಿನಿದಿಗಳು ಅವರನ್ನು ಹೇಗೆ ದಿಕ್ಕು ತಪ್ಪಿಸಿ, ತಾವು ಮಾಡುತ್ತಿರುವುದೇ ಸರಿ ಎಂದು ವಾದಿಸುವ ಕ್ರಮ ಇದೆಯಲ್ಲ ಅದಕ್ಕಿಂತ ಬೇರೆ ನಾಚಿಕೆಗೇಡಿನ ಕೆಲಸ ಇನ್ನೊಂದಿಲ್ಲ ಎನಿಸುತ್ತದೆ. ಈ ಬಿಜೆಪಿ ಸರಕಾರ ಬಂದಂದಿನಿಂದ ಇಲ್ಲಿರುವ ಸಚಿವ, ಶಾಸಕರಿಗೆ ಅರ್ಧ ರಾತ್ರಿಯಲ್ಲಿ ಐಶ್ವರ್ಯ ಬಂದ ಹಾಗಾಗಿದೆ. ಅದಕ್ಕಾಗಿ ಇವರೆಲ್ಲ ಏನು ಮಾಡಿದರು ಅದು ಸರಿ ಎನ್ನುವಂತಾಗಿದೆ. ಸಚಿವ ರೇಣುಕಾಚಾರ್ಯ ತಮ್ಮ ಹಾಗು ಜಯಲಕ್ಷ್ಮಿ ಸೆಕ್ಸ್ ಪ್ರಕರಣವನ್ನು ಸಮರ್ತಿಸಿಕೊಂಡು ಮಂತ್ರಿಯಾದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಾವು ಏನೇ ತಪ್ಪು ಮಾಡಿದರು ಅದು ಸರಿ ಎಂದು ಭಂಡತನದಲ್ಲಿ ವಾದಿಸುತ್ತಲೇ ಕೆಳಗಿಳಿದರು. ಹಾಲಪ್ಪ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ ನಾನು "ಮಾಡೇ ಇಲ್ಲ" ಎಂದು ವಾದಿಸುತ್ತಲೇ ಹೋದರು. ಕಟ್ಟಾ, ಜನಾರ್ಧನ ರೆಡ್ಡಿ ತಾವು ಯಾವ ತಪ್ಪೂ ಮಾಡಿಲ್ಲ. ಇದು ಪ್ರತಿ ಪಕ್ಷಗಳ ಕೈವಾಡ ಎಂದು ತಿಪ್ಪೆ ಸಾರಿಸಲು ಯತ್ನಿಸಿ ಜೈಲು ಸೇರಿದರು. ಮೊನ್ನೆ ಮೊನ್ನೆಯಷ್ಟೇ ಕರಾವಳಿಯಲ್ಲಿ ನಡೆದ ಸೈಂಟ್ ಮೇರೀಸ್ ದ್ವೀಪದಲ್ಲಿ ನಡೆದ ರೇವು ಪಾರ್ಟಿಯನ್ನು ಮುಖ್ಯಮಂತ್ರಿ ಸದಾನದ ಗೌಡ "ಇದು ಪ್ರವಾಸೋದ್ಯಮದ ಸಂಸ್ಕೃತಿ" ಇಲ್ಲಿ ಯಾವುದೇ ಅನಾಚಾರ ನಡೆದಿಲ್ಲ ಎಂದು ಸಮರ್ತಿಸಿಕೊಂಡರು. ಅದರ ಬೆನ್ನಲ್ಲೇ ಈಗ ಸಚಿವರಾದ ಲಕ್ಷ್ಮಣ ಸವದಿ "ಸಹಕಾರ" ದಿಂದ ಸಿ.ಸಿ.ಪಾಟೀಲ್ ಹಾಗು ಕೃಷ್ಣ ಪಾಲೆಮಾರ್ ವಿಧಾನ ಸೌಧದಲ್ಲಿಯೇ ನೀಲಿ ಚಿತ್ರ ವೀಕ್ಷಣೆ ಮಾಡಿ "ಹೊಸ ಸಂಸ್ಕೃತಿ" ಗೆ ನಾಂದಿ ಹಾಡಿದ್ದಾರೆ. ಜೊತೆಗೆ ಅದು ತಪ್ಪೇ ಅಲ್ಲ, ನಾವು ನಿರಪರಾದಿಗಳು. ಇದು ಮಾದ್ಯಮಗಳ ಪಿತೂರಿ ಎನ್ನುವಂತೆ ನಾಚಿಕೆ ಬಿಟ್ಟು ಸಮರ್ಥಿಸಿಕೊಂಡಿದ್ದಾರೆ! ಜೊತೆಗೆ ಅದಕ್ಕೆ ಮುಸ್ಲಿಂ ದೇಶದಲ್ಲಿ ಒಬ್ಬ ಮಹಿಳೆಯ ಮೇಲಿನ ದೌರ್ಜನ್ಯವನ್ನು ವೀಕ್ಷಿಸುತ್ತಿದ್ದೆ ಎಂದು ಹೇಳುವ ಮೂಲಕ ಇಲ್ಲೂ ಕೂಡ ತಮ್ಮ ಕೊಮುವಾದಿತನವನ್ನು ಪ್ರದರ್ಶಿಸಲು ಮುಂದಾಗಿ ಸೋತಿದ್ದಾರೆ. ಅಲ್ಲಿಗೆ ಬಿಜೆಪಿಯ ಒಳಗೆ "ನಿಜ ರಾಮನಿಲ್ಲ" ಇಲ್ಲಿರುವುದು "ಕಾಮ" ಮಾತ್ರ ರಾವನಿನ ಹೊಲಿಕೆಗೂ ಇವರು ಸಮರ್ತರಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಇದಕ್ಕೆ ಸರಿ ಹೊಂದುವಂತೆ ಬಿಜೆಪಿಯ ರಾಜ್ಯಾದ್ಯಕ್ಷ ಈಶ್ವರಪ್ಪ, ಮುಖ್ಯ ಮಂತ್ರಿ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲರು "ಅವರೇ ಸ್ವಯಂಪ್ರೇರಿತರಾಗಿ ರಾಜೆನಾಮೆ ನೀಡಿದ್ದಾರೆ" ಎಂದು ಹೇಳುವ ಮೂಲಕ ತಿಪ್ಪೆ ಸಾರಿಸಲು ಯತ್ನಿಸುತ್ತಿದ್ದಾರೆ. ಪಕ್ಷೇತರ ಶಾಸಕರನ್ನು ರಾತ್ರೋ ರಾತ್ರಿ ವಜಾಗೊಳಿಸಿ ತಮ್ಮದು ಸಮರ್ಥ ನಿರ್ಧಾರ ಎಂದು ಹೇಳಿಕೊಂಡಿದ್ದ ಸ್ಪೀಕರ್ ಭೂಪಯ್ಯ ಕೂಡ ಮಾಧ್ಯಮದಲ್ಲಿ ಅಸ್ಟೆಲ್ಲ ಸುದ್ದಿಯಾಗಿದ್ದರು "ಅದು ನನ್ನ ಗಮನಕ್ಕೆ ಬಂದಿಲ್ಲ" ಎಂದರು. ಆನತರ "ಕಾನೂನು ಏನು ಹೇಳುತ್ತದೆ ನೋಡಿ ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ" ಎಂದರು. ಅಂದರೆ ಅಲ್ಲಿ ಸ್ಪೀಕರ್ ಗೂ ಸಂಪೂರ್ಣ ಅಧಿಕಾರ ಇಲ್ಲ ಎನ್ನುವುದು ಶ್ರೀರಾಮುಲು ಪ್ರಕರಣದ ನಟರ ಮತ್ತೊಮ್ಮೆ ಸಾಬೀತಾಗಿದೆ ಇಲ್ಲವೇ ಸ್ಪೀಕರ್ ಕೂಡ ಬಿಜೆಪಿ ಪಕ್ಷದ ಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಬಿಜೆಪಿ ಹಾಗು ಸಂಘ ಪರಿವಾರದ "ಯೋಗ ಶಿಬಿರ" ನಡೆದ ದಿನವೇ ವಿಧಾನ ಸೌಧದಲ್ಲಿ ಮತ್ತೊಂದು "ಯೋಗ ಪುರಾಣ" ಹೊರಬಿದ್ದಿದ್ದು. ಅದೇ ದಿನ ರಾಜ್ಯ ಸರಕಾರ ನೀಡಲು ಇಚ್ಚಿಸಿದ್ದ "ಬಸವಶ್ರೀ ಪ್ರಶಸ್ತಿ"ಯನ್ನು ನರ್ಮದ ಬಚಾವೋ ಅಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ "ಕರ್ನಾಟಕ ಸರಕಾರ ತನ್ನ ಹಗರಣಗಳ ಬಗ್ಗೆಯೇ ಸರಿಯಾದ ತನಿಖೆ ನಡೆಸಿಲ್ಲ ಅಂತ ಸರಕಾರ ನೀಡುವ ಪ್ರಶಸ್ತಿ ನನಗೆ ಬೇಡ" ಎಂದು ತಿರಸ್ಕರಿಸಿರುವುದು ಈ ರಾಜ್ಯದ ಜನತೆಗೆ ತೀರ ನಾಚಿಕೆಗೇಡಿನ ಸಂಗತಿ. ಇಂಥ ಹೀನ ಜನಪ್ರತಿನಿಧಿಗಳಿಗೆ ಜನಸಾಮಾನ್ಯರು ಮುಂದೆಯಾದರೂ ಸರಿಯಾದ ಪಾಠ ಕಲಿಸಲೇಬೇಕು. ಇಲ್ಲದೆ ಹೋದರೆ ಅದರ ಪರಿಣಾಮವನ್ನು ಜನಸಾಮಾನ್ಯರೇ ಉಣ್ಣಬೇಕಾದ ದಿನ ದೂರವಿಲ್ಲ... ಎಚ್ಚ್ಚರ... Posted by ರಮೇಶ್ ಹಿರೇಜಂಬೂರು at 12:06 AM No comments: Links to this post ನಾಡೋಜ ಶ್ರೀ ನಿಸಾರ್ ಅಹಮದ್ ಅವರಿಗೆ ಜನ್ಮ ದಿನದ ಅಂಗವಾಗಿ ನುಡಿ ನಮನ ನಾಳೆ (ಫೆ.5 ) ಕನ್ನಡ ಖ್ಯಾತ ಕವಿ, ನಾಡೋಜ ಶ್ರೀ ನಿಸಾರ್ ಅಹಮದ್ ಅವರ ಜನ್ಮ ದಿನ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಕಳೆದ ವರ್ಷ ನಾನು ಅವರ ಜೊತೆ ಇದೇ ದಿನ ಸುಮ್ಮನೆ ಕುಳಿತು ಸುಮಾರು 3 ಗಂಟೆ ಹಾಗೇ ಸುಮ್ಮನೆ ಹರಟಿದ್ದೆ. ಅವರ ಜೊತೆ ಬಿಡುವು ಸಿಕ್ಕಾಗೆಲ್ಲ ಮಾತನಾಡುತ್ತೇನೆ. ಆದರೆ ಆ ಸಮಯವನ್ನು ನನ್ನ ಜೀವನದಲ್ಲಿ ಮರೆಯಲಿಕ್ಕೆ ಸಾಧವಿಲ್ಲ. ಅಂದು ಅವರು ನನಗೆ ಅವರ ಬದುಕಿನ ಅದೆಷ್ಟೋ ವಿಚಾರಗಳನ್ನ ಹರವಿದ್ದರು. ಅವುಗಳಿಂದ ನಾನು ನಿಜಕ್ಕೂ ಪ್ರಭಾವಿತನಾನಿದ್ದೇನೆ. ಆ ವೇಳೆ ಹೊರ ಬಂದ ವಿಶಿಷ್ಟ ವಿಚಾರಗಳಲ್ಲಿ ಕೆಲವನ್ನು ನಾನು ಪತ್ರಿಕೆಯಲ್ಲಿ ಬರೆದಿದ್ದೆ. ಅದಕ್ಕೆ ನನಗೆ ಬಂದ ಪ್ರತಿಕ್ರಿಯೆ ಅಷ್ಟಿಷ್ಟಲ್ಲ... ಅವುಗಳನ್ನು ಮತ್ತೊಮ್ಮೆ ನಿಮಗಾಗಿ ನೀಡುತ್ತಿದ್ದೇನೆ... Sir ನಿಜಕ್ಕೂ ಹ್ಯಾಟ್ಸ್ ಆಫ್ ಟು ಯೂ... ones again Happy Birth Day Sir... ನಿಸಾರ್ ಹೃದಯ ನೀನಾದ.. ನಾಡೋಜ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕವಿಯಾಗಿ ಜನಮಾನಸಕ್ಕೆ ಪರಿಚಿತರಾದ ನಿಸಾರ್, ಇಂದು ೭೫ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಹಳೆಯ ಕೆಲವು ಖಾಸಗಿ ನೆನಪುಗಳನ್ನು ಅವರು 'ಲವಲವಿಕೆ'ಯೊಂದಿಗೆ ಹಂಚಿಕೊಂಡಿದ್ದಾರೆ. ಅಪರೂಪದ ಈ ನೆನಪಿನ ಬುತ್ತಿ ನಿಮ್ಮ ಮುಂದೆ... 'ನೆನಪಾಗಿ ಬಾರದಿರು ಮಣ್ಣುಗೂಡಿದ ಒಲವೇ- ಎಂದೋ ನಲಿಸಿದ ನಗೆಯ ಸಂಚಿನಲ್ಲಿ ; ಹೊಸ ಬದುಕ ಕಲೆಗೊಳಿಸಲೆಂದು ನಾ ಹೆಣಗಿರುವೆ- ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ.' ಕೆಎಸ್.ನಿಸಾರ್ ಅಹಮದ್ ಅವರ ಜತೆ ಬಾಲ್ಯದಲ್ಲಿ ಇದ್ದುದು ಒಂದೇ ಒಂದು ಅದು ಲಾಲ್‌ಬಾಗ್! ಆದರೆ ಅವರಿಗೆ ಓದಿನ ಗೀಳು ಹಚ್ಚಿದ್ದು ಅವರ ತಂದೆ ಕೆ.ಎಸ್. ಹೈದರ್, ಶಿಸ್ತು ಬೆಳೆಸಿದ್ದು ತಾಯಿ ಹಮೀದಾ ಬೇಗಂ. ಇದೆಲ್ಲದರ ಜತೆಗೆ ಕವಿ ನಿಸಾರ್ ಒಬ್ಬ ಭಗ್ನ ಪ್ರೇಮಿಯೂ ಹೌದು...!! ಅದೂ ಕೂಡ ಸಾಕಷ್ಟು ಕವಿತೆಗಳಿಗೆ ಸೂರ್ತಿ... ಅದನ್ನು ನಿಸಾರ್ ನಿಸ್ಸಂಕೋಚವಾಗಿ ಒಪ್ಪಿಕೊಳ್ಳುತ್ತಾರೆ. ಅವೆಲ್ಲ ಘಟನೆಗಳು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ನಡೆಯಲೇಬೇಕು. ದ್ವೇಷ, ಅಸೂಯೆಗಳನ್ನು ಬಿತ್ತಿ ಬೆಳೆಸಿಕೊಳ್ಳುವುದರ ಬದಲು ಪ್ರೀತಿಯ ಗುಲಾಬಿ ಗಿಡ ನೆಟ್ಟುಕೊಳ್ಳುವುದೇ ಲೇಸು ಎನ್ನುತ್ತಾರೆ ನಿಸಾರ್. ಪ್ರೀತಿ ಕೈ ಕೊಟ್ಟಾಗ ಮುಳ್ಳಿನ ಹಾಗೆ ಚುಚ್ಚುತ್ತದೆ; ಆದರೂ ಆ ಹೂವು ಕಂಡಾಗ ಅವೆಲ್ಲವೂ ಗೌಣವಾಗುತ್ತವೆ ಎನ್ನುವುದು ಅವರ ಅಂತರಾಳದ ನುಡಿ. ನಾನೂ ಒಬ್ಬ ಸಾಮಾನ್ಯ ಮನುಷ್ಯ. ಪ್ರೇಮ ಲೋಕದಿಂದ ಹೊರಗುಳಿದಿಲ್ಲ. ೨ನೇ ಹಾನರ‍್ಸ್ ಮಾಡುವಾಗ ಕಾಲೇಜು ದಿನಗಳಲ್ಲಿ ಪ್ರೀತಿಸಿದ್ದೇನೆ. ಆದರೆ ಅದನ್ನು ಪಡೆಯದೆ ಸೋತಿದ್ದೇನೆ. ಪ್ರೀತಿ ಶೃಂಗಾರ ಕಾವ್ಯ. ಅದರ ಸೆಳೆತಕ್ಕೆ ಸಿಕ್ಕಿ ನಾನು ಸೋತು, ವಿರಹ ವೇದನೆ ಅನುಭವಿಸಿದ್ದೇನೆ. ಆಗ ನಾನು, ಅವಳು ಇಬ್ಬರೂ ಪ್ರೀತಿಸುತ್ತಿದ್ದೆವು. ಕಲ್ಪನೆಯಲ್ಲಿ ವಿಹರಿಸುತ್ತಿದ್ದೆವು. ಅದು ಇಬ್ಬರಿಗೂ ಗೊತ್ತಿತ್ತು. ಆದರೆ ಇಬ್ಬರೂ ಹೃದಯದ ಭಾವನೆಗಳನ್ನು ವ್ಯಕ್ತಪಡಿಸಲಿಲ್ಲ. ಆದರೆ ಭಾವನೆಯ ಬುತ್ತಿ ಬಿಚ್ಚುವಷ್ಟರಲ್ಲಿ ಆಕೆಗೆ ಮನೆಯವರು 'ಮದುವೆ' ನಿಶ್ಚಯ ಮಾಡಿದ್ದರು. ಆಗ ಇಬ್ಬರಿಗೂ ಸಿಡಿಲು ಬಡಿದಿತ್ತು. ಒಬ್ಬರಿಗೊಬ್ಬರು ಗೊತ್ತಿಲ್ಲದೆ ನೊಂದುಕೊಂಡಿದ್ದೆವು. ನಾನಂತೂ ತುಂಬಾ ನೊಂದಿದ್ದೆ. ಆ ಅಗಲಿಕೆಯ ವೇದನೆಯೇ ನನ್ನಿಂದ ಬಹುತೇಕ ವಿರಹದ ಕಾವ್ಯಗಳ 'ಚಿಲುಮೆ'ಯಾಯಿತು. 'ನವೋಲ್ಲಾಸ ' ಸಂಕಲನದ 'ಎಲ್ಲಿರುವೆಯೋ ಈಗ ನನ್ನ ಚಿನ್ನ', 'ನನ್ನ ಬಾಲ್ಯದ ಗೆಳತಿ' ಮುಂತಾದ ಕಾವ್ಯಗಳು ಆ ನೆನಪಿನಲ್ಲೇ ಬರೆದವು. ಆದರೆ ಆಗ ಪ್ರೀತಿಯಲ್ಲಿ ಸೋತಿದ್ದರಿಂದ ಕೆಲವೊಮ್ಮೆ ಜೀವನವೇ ಬೇಡ, ಇದು 'ನಾದವಿರದ ಬದುಕು' ಎನಿಸಿದ್ದೂ ಉಂಟು! ಆಗ ನನ್ನ ಕೈ ಹಿಡಿದಿದ್ದೇ ಲಾಲ್‌ಬಾಗ್. ಹಾಗಂತ ಎದೆಗುಂದಲಿಲ್ಲ. ನೀ ಮತ್ತೆ 'ನೆನಪಾಗಿ ಬಾರದಿರು' ಎನ್ನುತ್ತಲೇ ಸಾಹಿತ್ಯದ ಕಡೆ ಒಲವು ತೋರಿದೆ. ಭಾವನೆಗಳೇ ಕಾವ್ಯವಾಗಿ ಹೊರ ಬಂದವು. ಮತ್ತೆ 'ನಿತ್ಯೋತ್ಸವ' ಶುರವಾಯಿತು. ಆದರೆ ಅದಕ್ಕಿಂತ ನನಗೆ ಹೆಚ್ಚು ಕಾಡಿದ್ದು 'ಎಲ್ಲ ಮರೆತಿರುವಾಗ' ನಾನು ಪ್ರೀತಿಸಿದ ಹುಡುಗಿ ಅಜ್ಜಿಯಾಗಿ ಮಗಳು, ಮೊಮ್ಮಗುವಿನೊಂದಿಗೆ ಒಂದು ಆರತಕ್ಷತೆಯಲ್ಲಿ ಸಿಕ್ಕು ಮಾತನಾಡಿಸಿದ್ದು...!! ಆಕೆಯೇ ನನ್ನನ್ನು ಗುರುತಿಸಿ, ಬಂದು ಮಾತನಾಡಿಸಿ "ನನ್ನ ಪರಿಚಯವಿದೆಯಾ ನಿಮಗೆ...?" ಎಂದಾಗ ಆದ ಶಾಕ್ ಅಷ್ಟಿಷ್ಟಲ್ಲ. ಆಗ 'ಆ ನೋವಿನ ಹಾಡು' ಮನದ ಸ್ವಾಸ್ಥ್ಯ ಕೆಡಿಸಿದ್ದು ನಿಜ, ಆಗ ಬಾಯಿ ಕಟ್ಟಿ ಹೋಗಿತ್ತು. ಕ್ಷಣ ಹೊತ್ತು ಭಾವೋತ್ಕಟತೆಯಿಂದ ವರ್ತಿಸಿದ್ದೆ. ಹಳೆಯ ನೆನಪುಗಳು ಮರುಕಳಿಸಿ ಜೋಗದ 'ಜಲಪಾತ'ವಾಗಿ ಹರಿಯುವುದರ ಜತೆಗೆ ಅಂದು ನಾನೇನಾದರೂ ತಪ್ಪಾಗಿ ಮಾತನಾಡಿರಬಹುದೇ ? ಅದರಿಂದ ಇಂದು ಅವಳೆದುರು ನಾ ಚಿಕ್ಕವನಾದೆನೆ? ಎಂಬ ಅಳುಕು. ಕಾಲೇಜು ದಿನಗಳಲ್ಲಿ ಎಷ್ಟೇ ಜಾಗೃತನಾಗಿ ಭಯದಿಂದಲೇ ಸಭ್ಯರಾಗಿ ಅವಳ ಜತೆ ನಾನು, ನನ್ನ ಜತೆ ಅವಳು ವ್ಯವಹರಿಸುವಾಗ ಆಡಿದ ಮಾತುಗಳಲ್ಲಿ ತಪ್ಪಿದ್ದರೆ, ಇವನೇನಾ... ನಿಸಾರ್ ಅಹಮದ್ ಎಂಬ ಭಾವನೆ ಮೂಡಿದ್ದರೆ!? ಎಂಬ ಆತಂಕ ಕಾಡತೊಡಗಿತ್ತು. ಆ ಕಾರಣಕ್ಕೇ ಎರಡು ದಿನ ಕಂಗೆಟ್ಟಿದ್ದೂ ಉಂಟು. ಹರೆಯದಲ್ಲಿ ಒಬ್ಬ ಹುಡುಗ ಹುಡುಗಿ ನಡುವೆ ಪ್ರೀತಿ ಶುರುವಾದಾಗ ಖಾಸಗಿತನ ಹುಟ್ಟಿಕೊಳ್ಳುತ್ತದೆ. ಆ ಕಾರಣಕ್ಕೇ ಆ ದುಗುಡ ನನ್ನನ್ನು ಕಾಡಿದ್ದು. ಜೀವನವೇ ಅಂತಹದ್ದು, ಅಂದುಕೊಂಡದ್ದಕ್ಕಿಂತ ಮೀರಿ ನಿಲ್ಲುತ್ತಲೇ ದೊಡ್ಡ ದೊಡ್ಡ ಸವಾಲು ತಂದೊಡ್ಡುವುದೇ ಬದುಕು. ಅದಕ್ಕೇ ಅದು ನಿಗೂಢ ಎನಿಸುತ್ತದೆ. ಅಘಟಿತ ಘಟನಾ ಪರಂಪರೆಯನ್ನು ಜೀವನ ಸೃಷ್ಟಿ ಮಾಡುತ್ತದೆ. ಇಲ್ಲಿ ಒಂದು ಘಟನೆ ಮತ್ತೊಂದನ್ನು ಮರೆಸುತ್ತಾ ಬರುತ್ತೆ. ಇದು ನನ್ನ ಜೀವನದ ಮರೆಯಲಾಗ ಪ್ರೀತಿ. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ ಆನಂತರ ಇಂಥ ಸಾಕಷ್ಟು ಘಟನೆಗಳು ನಡೆದಿವೆ. 'ನಗೆಯೇ ಪ್ರೀತಿಯೆಂದು ನಂಬಿ', 'ನೀನೇ ಸರ್ವಸ್ವ' ಎಂದುಕೊಂಡದ್ದೂ ಉಂಟು. ಆದರೆ ಅವ್ಯಾವೂ ಅಚ್ಚಳಿಯದೆ ಉಳಿದಿಲ್ಲ. ಆ ಕಾರಣಕ್ಕೋ ಏನೋ First love is Best love ಎನ್ನುವುದು. ಪ್ರೀತಿಯನ್ನು ಲೈಂಗಿಕತೆಯಿಂದ ಅಳೆಯಬಾ ರದು. ಅದೊಂದು ಸ್ವಚ್ಛಂದವಾದ ಭಾವನಾತ್ಮಕ ಸಂಬಂಧ. ಈ ಸಮಯದಲ್ಲಿ ಲಾಲ್ ಬಾಗ್ ನನಗೆ ಕಾಶ್ಮೀರವಾಗಿತ್ತು. ಏಕಾಂತಕ್ಕೆ ಅದೇ ನನ್ನ ಅಚ್ಚುಮೆಚ್ಚಿನ ತಾಣ. ಲೋಕಾಂತಕ್ಕೆ ಗಾಂಬಜಾರ್‌ನ ಕಲಾಮಂದಿರ... ಯಾರೇ ಆಗಲಿ ಒಂದು ಸಲ ಪ್ರೇಮದ ಸವಿಯನ್ನು ಸವಿಯಬೇಕು. ಅದರಿಂದ ಬಿಡಿಸಿಕೊಂಡು ಆಚೆ ಬಂದಾಗ ಜೀವನ ಸಾರ್ಥಕ ಎನಿಸುತ್ತದೆ. ಪ್ರೀತಿಯಲ್ಲಿ ಬರುವ ತ್ಯಾಗದ ನೋವಲ್ಲೂ ಏನೋ ಒಂದು ರೀತಿ ಹಿತವಿರುತ್ತದೆ... ವಿವಾಹದ ನಂತರದ ಪ್ರೇಮ: "ನನ್ನದು Arrenged Marriage. ೩೦ನೇ ವರ್ಷಕ್ಕೆ ವಿವಾಹವಾದೆ. ಆಗ ನನಗೆ ಮೆಚ್ಯೂರಿಟಿ ಬಂದಿತ್ತು. ನಮ್ಮಲ್ಲಿ ಎಷ್ಟೆಲ್ಲಾ ಸಂಪ್ರದಾಯಗಳಿದ್ದರೂ ನಾನು ಷಾನವಾಜ್ ಬೇಗಂ ಅವರನ್ನು ನೋಡಿ ಮೆಚ್ಚಿಕೊಂಡು ಕೈಹಿ ಡಿದೆ. ಆ ಕಾರಣಕ್ಕೋ ಏನೋ ಷಾನವಾಜ್ ನನ್ನ ಬದುಕಲ್ಲಿ ಗೃಹಲಕ್ಷ್ಮೀಯಾಗಿ ಬಂದಳು. ಆಕೆ ಕೂಡ ಡಬ್ಬಲ್ ಗ್ಯಾಜುಯೆಟ್. ಪ್ರಾಧ್ಯಾಪಕಿಯಾಗಿದ್ದವಳು. ಮನೆ, ಮನ ಎರಡನ್ನೂ ಬೆಳಗುವುದರ ಜತೆಗೆ ಈಗ ಮನೆಯ ಇಡೀ ಜವಾಬ್ದಾರಿಯನ್ನು ನಿರ್ವಹಿಸುವವಳು ಅವಳೇ. 'ಮದುವೆ' ನಂತರದ ಪ್ರೀತಿಯಲ್ಲಿ ಗೆದ್ದಿದ್ದೇನೆ. ಆಕೆಯನ್ನು ಮದುವೆಯಾಗಿದ್ದಕ್ಕೆ ನನಗೆ, ನನ್ನನ್ನು ವಿವಾಹವಾಗಿದ್ದಕ್ಕೆ ಅವಳಿಗೆ ಹೆಮ್ಮೆಯಿದೆ. ಆದರೆ ನಮ್ಮ ನಡುವಿರುವ ವ್ಯತ್ಯಾಸ ನಾನು ಅಜಾತಕನು. ಅವಳು ಜಾತಕಳು. ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊಮ್ಮಕ್ಕಳಿಗೆ 'ತಾತ' ಎಂದರೆ ಅಚ್ಚುಮೆಚ್ಚು. ಇವರು ಸಹಾಯಕ ಭೂ ವಿಜ್ಞಾನಿ! ೧೯೫೭ರಲ್ಲಿ ಬಿಎಸ್ಸಿ ಹಾನರ‍್ಸ್ ಮುಗಿಸಿ ೧೯೫ ೮ರಲ್ಲಿ ಭೂ ವಿeನದಲ್ಲಿ ಎಂಎಸ್ಸಿ ಮಾಡುವಾಗ ನಿಸಾರ್ ಅಹಮದ್ ಅವರಿಗೆ ಗುಲ್ಬರ್ಗದಲ್ಲಿ ಮೈಸೂರು ಗಣಿ ಮತ್ತು ಭೂ ವಿeನ ಇಲಾಖೆಯಲ್ಲಿ ಸಹಾಯಕ ಭೂ ವಿeನಿಯಾಗಿ ನೌಕರಿ ಸಿಕ್ಕಿತು. ಕೆಲಸಕ್ಕೆ ಸೇರಿದ ಅವರು, ಗುಲ್ಬರ್ಗಕ್ಕೆ ತೆರಳಿ ಒಂದು ವರ್ಷ ಸೇವೆ ಮಾಡಿದರು. ಜೀವನದ ಮೊದಲ 'ಬಿಸಿ' ಅನುಭವಿಸಿದ್ದೇ ಅಲ್ಲಿ. ಅದು 'ಆದಿಯನರಿಯದ ಪಯಣ'. ಅವರು ಕಚೇರಿಯಲ್ಲಿಯೇ ಇರುವ ರೂಮಿನಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಅಲ್ಲಿನ ಜೀವನವನ್ನು ಅವರಿಂದ ಇಂದಿಗೂ ಮರೆಯಲಾಗುತ್ತಿಲ್ಲ. ಕಾರಣ ಅಲ್ಲಿನ ವಾತಾವರಣ, ನೀರು, ಹಿಡಿಸದೆ ತುಂಬಾ ವೇದನೆ ಅನುಭವಿಸುತ್ತಾ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದರು. ಆದರೂ ಗುಲ್ಬರ್ಗ ಜಿಲ್ಲೆಯಾದ್ಯಂತ ಸುತ್ತಿ ಸರ್ವೆ ಕಾರ್ಯ ನಡೆಸಿದ್ದರು. ಅಂತರ್ಜಲ, ಸುಣ್ಣದ ಕಲ್ಲು ಸರ್ವೇಕ್ಷಣೆ ಮಾಡಿದ್ದರು. ಸೇಡಂ ಬಳಿ ಅವರು ಸರ್ವೆ ಮಾಡಿದ ಕರಿಘಟ್ಟವೇ ಇಂದಿನ ಸಿಮೆಂಟ್ ಕಾರ್ಖಾನೆಯಾಗಿದೆ. ಕೆಲಸ ಇಷ್ಟವಾದರೂ ಮನೆಯವರಿಂದ ದೂರವಾಗಿದ್ದರಿಂದ, ಜತೆಗೆ ಸಾಹಿತಿಗಳ ಹಾಗೂ ಆಕಾಶವಾಣಿಯ ಸಂಪರ್ಕ ಕಳೆದುಕೊಂಡಿದ್ದರಿಂದ ಏನೋ ಕಳೆದುಕೊಂಡಂತ ಅನುಭವ, ಅನಾಥ ಪ್ರe ಹಾಗೂ 'ಮತ್ತದೇ ಬೇಸರ' ಕಾ ಡುತ್ತಿತ್ತು. ಆ ಕಾರಣಕ್ಕೆ ೧೯೫೯ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ವಾಪಸ್ ಬಂದರು. ಸಿನಿಮಾ ಹುಚ್ಚಿತ್ತು : 'ಬಾಲ್ಯ'ದಿಂದಲೂ ಹಿಂದಿ ಸಿನಿಮಾ ಎಂದರೆ ನಿಸಾರ್ ಅವರಿಗೆ ಪ್ರಾಣ. ಮನೆ ಬಳಿಯೇ ಮಿನರ್ವ ಟಾಕೀಸ್ ಇತ್ತು. ಒಂದಾಣೆ, ಎರಡಾಣೆ ಸಂಗ್ರಹಿಸಿ ತಮ್ಮನ ಜತೆಗೂಡಿ ಅಂದಿನ ಪ್ಯಾರಾಮೌಂಟ್ ಚಿತ್ರಮಂದಿರದ ಗೇಟ್ ಕೀಪರ್‌ಗೆ ಕೊಟ್ಟು ಮೆಲ್ಲಗೆ ನುಸುಳಿಕೊಂಡು ಹೋಗಿ ಸಿನಿಮಾ ನೋಡುತ್ತಿದ್ದರು. ಸಿನಿಮಾ ನೋಡಿ ಲೇಟಾಗಿ ಮನೆಗೆ ಬಂದಾಗ ತಮ್ಮಿಂದ ಶಿಸ್ತು ಬಯಸುತ್ತಿದ್ದ ಅಮ್ಮ ಕೇಳಿದಾಗ ಸು ಳ್ಳು ಹೇಳಿದ್ದೂ ಉಂಟು. ಅಪ್ಪನಿಗೆ ಅದು ಗೊತ್ತಾಗುತ್ತಿತ್ತು. ಆದರೂ ಸುಮ್ಮನಿರುತ್ತಿದ್ದರು. ಅಪ್ಪನ ಪ್ರೇರಣೆ: ಸಾಹಿತ್ಯದ ಬಗ್ಗೆ ಹೆಚ್ಚು ಒಲವು ಬೆಳೆಸಿದ್ದು ಅಪ್ಪ ಕೆ.ಎಸ್. ಹೈದರ್. ಆ ಕಾರಣಕ್ಕಾಗಿಯೇ ಅವರಿಗೆ ತಂದೆಯೇ ಮೊದಲ ಗುರು. ಆಹಾರ ನಿರೀಕ್ಷಕರಾದ ತಂದೆಯೇ ಅವರಿಗೆ ಕನ್ನಡ, ಇಂಗ್ಲಿಷ್, ಸಂಸ್ಕೃತವನ್ನೂ ಹೇಳಿಕೊಟ್ಟದ್ದು. ಹದ್ದು ಮೀರಿ ವರ್ತಿಸದಂತೆ ಎಚ್ಚರವಹಿಸುವುದು, ಉದಾರ ಮನೋಭಾವ, ಸರಳತೆ ಬೆಳೆಸಿದ್ದು ತಂದೆಯೇ. ತಾಯಿಯಿಂದ ಶಿಸ್ತು ಕಲಿತರೆ, ಜನರ ಮಧ್ಯೆ ಬೆಳೆಯುವುದನ್ನು ಕಲಿತದ್ದು ತಂದೆಯಿಂದ. ನೆನಪಿನ ಬುತ್ತಿಯ ಅಚ್ಚು ಮೆಚ್ಚು: * ಹೈಸ್ಕೂಲಿನಲ್ಲಿದ್ದಾಗ ಜಲಪಾತವನ್ನೇ ನೋಡದೆ ಮೊದಲು ಬರೆದ ಪದ್ಯ 'ಜಲಪಾತ'. *ನಿಸಾರ್ ಅಹಮದ್ ೧೯೫೫ರಲ್ಲಿ ದ.ರಾ.ಬೇಂದ್ರೆ ಅಧ್ಯಕ್ಷತೆಯಲ್ಲಿ ಬೆಂಗಳೂರು ಕಸಾಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ 'ಸಮರ ಗೀತೆ' ಪದ್ಯ ಓದಿ, ಬೇಂದ್ರೆಯಿಂದ ಬೆನ್ನು ತಟ್ಟಿಸಿಕೊಂಡಿದ್ದರು. * ಆನಂತರ ೧೯೫೬ರಲ್ಲಿ ಮೊದಲ ಬಾರಿಗೆ ಆಕಾಶವಾಣಿಯಲ್ಲಿ 'ಕಾವ್ಯಧಾರೆ' ಎಂಬ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅದೇ ಕಾವ್ಯವನ್ನು ಓದಿದ್ದು. * ಗಾಂಬಜಾರ್‌ನ ಕಲಾಮಂದಿರದಿಂದಲೇ ಸಾಹಿತಿಗಳ ಸಂಪರ್ಕ ಸಿಕ್ಕಿತ್ತು. * ಅಶೋಕ್ ಕುಮಾರ್, ಶ್ಯಾಮ್, ಕುಂದಲ್‌ಲಾಲ್ ಸೈಗಲ್, ದಿಲೀಪ್‌ಕುಮಾರ್, ರಾಜ್‌ಕಪೂರ್ ನೆಚ್ಚಿನ ಹೀರೋಗಳು. *'ಕಿಸ್ಮತ್' ನೆಚ್ಚಿನ ಚಿತ್ರ. ಅಂದೇ ಎರಡ್ಮೂರು ಬಾರಿ ನೋಡಿದ್ದ ಇನ್ನೊಂದು ಚಿತ್ರ 'ಫನ್ನಾ' *ಫೈಜಲ್ ಪಂಕಜ್ ಮಲ್ಲಿಕ್ ಇಷ್ಟದ ಗಾಯಕರು. * ವಿಜಯದಶಮಿ ವಿಶೇಷ ಕವಿ ಸಮ್ಮೇಳನದಲ್ಲಿ ಕುವೆಂಪು, ಮಾಸ್ತಿ, ಪುತಿನ ಸಮ್ಮುಖದಲ್ಲಿ ಮತ್ತ್ತೆ ಕಾವ್ಯ ವಾಚನ. ಕುವೆಂಪು ಅವರಿಂದ ಪ್ರಶಂಸೆ. * ಮೈಸೂರಿನ ದಸರಾ ಕವಿ ಸಮ್ಮೇಳನದಲ್ಲಿ ಮತ್ತೆ ಕುವೆಂಪು ಎದುರು 'ಸಿಡಿದ ಸದ್ದು' ಕಾವ್ಯವಾಚನ. * ಮೈಸೂರು ವಿವಿಯ ವೈಸ್ ಚಾನ್ಸಲರ್ ಆಗಿದ್ದ ಕುವೆಂಪು ಅವರ ಕೃಪೆಯಿಂದ ೧೯೫೯ರ ನ.೧೬ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವೆಂಕಟಾಚಲಪತಿ ಎಂಬ ಪ್ರಾಧ್ಯಾಪಕರ ಜಾಗಕ್ಕೆ ಪ್ರಾಧ್ಯಾಪಕರಾಗಿ ನೇಮಕ. *ಶಿವಮೊಗ್ಗದಲ್ಲಿ ಕಳೆದ ೮ ವರ್ಷಗಳು ಮರೆಯುವಂತಿಲ್ಲ. ಅದು ಸೃಜನಶೀಲತೆಯ ತವರು. Posted by ರಮೇಶ್ ಹಿರೇಜಂಬೂರು at 5:00 AM No comments: Links to this post ಕನ್ನಡದ ಹಾಸ್ಯ ನಟ ಕರಿಬಸವಯ್ಯ ಇನ್ನಿಲ್ಲ ಕನ್ನಡದ ಹಾಸ್ಯ ನಟ ಕರಿಬಸವಯ್ಯ ಇಂದು ಮಧ್ಯಾನ ನಿಧನರಾಗಿದ್ದಾರೆ. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಬೆಂಗಳೂರಿನ Pristine ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಸೋಮವಾರ ಕನಕಪುರ ರಸ್ತೆಯಲ್ಲಿ ಅವರ ವಾಹನ ಆಳವಾದ ತಗಿಗೆ ಬಿದ್ದು ಅಪಘಾತಕ್ಕೆ ಈಡಾಗಿತ್ತು. ಇದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದರು. ಮಂಗಳವಾರ ಬೆಳಗಿನ ಜಾವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ (ಇಂದು) ಮಧ್ಯಾನ ಕೊನೆಯುಸಿರೆಳೆದಿದ್ದಾರೆ. ರಂಗಭೂಮಿಯಿಂದ ಕನ್ನಡ ಚಿತ್ರ ರಂಗಕ್ಕೆ ಬಂದ ಅವರು, ನಾಗತಿ ಹಳ್ಳಿ ಚಂದ್ರಶೇಖರ್ ನಿರ್ದೇಶನದ "ಉಂಡು ಹೋದ ಕೊಂದು ಹೋದ" ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಅಲ್ಲಿಂದ 100 ಕ್ಕೂ ಹೆಚ್ಹು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಜನಪದ ಕಲೆಯಾದ ಹರಿಕತೆಯಲ್ಲಿ ವಿದ್ವಾನ್ ಆಗಿದ್ದವರು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲವರ್ಷಗಳ ಕಾಲ ಕೆಲಸ ಮಾಡಿದವರು. ತಾಯಿ, ಉಲ್ಟಾ ಪಲ್ಟಾ, ಪರಿಚಯ, ಸ್ಟೋರಿ, ಯಾರಿಗೆ ಸಾಲುತ್ತೆ ಸಂಬಳ, ಜನಪದ, ಮ್ಯಾಜಿಕ್ ಅಜ್ಜಿ, ರೈಟ್ ಅಂದ್ರೆ, ದುರ್ಗಿ, ಗಲಾಟೆ ಅಳಿಯಂದ್ರು, ಕ್ರೇಜಿ ಕುಟುಂಬ, ಹೋಳಿ, ನೂರು ಜನ್ಮಕು, ಐತಲಕಡಿ, ಉಲ್ಲಾಸ ಉತ್ಸಾಹ, ಶ್ರೀ ಮೋಕ್ಷ, 5 ಈಡಿಯಟ್ಸ್ ಮುಂತಾದವು ಅವರ ಪ್ರಮುಖ ಚಿತ್ರಗಳು. ಅವರ ಸಹಜ ಅಬಿನಯದಿಂದಲೇ ಜನಮನ ಗೆದ್ದಿದ್ದರು. ಅವರ ಮಗಳು 2009 ರಲ್ಲಿ ರಾಧ ಮದುವೆಯ ನಂತರ ಆತ್ಮಹತ್ಯೆ ಮಾಡಿಕೊಂಡ ನಂತರ ಅವರು ಮಾನಸಿಕವಾಗಿ ನೊಂದಿದ್ದರು. ಅವರ ಆಸ್ಪತ್ರೆಯ ವೆಚವನ್ನು ನಿರ್ದೇಶಕ ನಾಗಿತಿಹಳ್ಳಿ ಚಂದ್ರಶೇಖರ ಅವರು ತಮ್ಮ ಅಭಿವ್ಯಕ್ತಿ ಸಾಂಸ್ಕೃತಿಕ ವೇಧಿಕೆ ವತಿಯಿಂದ ಭರಿಸಲು ಮುಂದೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಅವರು ಕನ್ನಡ ಹಾಸ್ಯ ನಟ ಮಾತ್ರವಲ್ಲ ರಂಗ ಭೂಮಿಯಲ್ಲೂ ಅಪಾರ ಸೇವೆ ಸಲ್ಲಿಸಿದವು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಹಾಸ್ಯ ನಟ ಕರಿಬಸವಯ್ಯ ನಿಧನ ನಿಜಕ್ಕೂ ಇವರು ಕನ್ನಡದ ಪ್ರತಿಭಾವಂತ ನಟ, ಕಡು ಕಷ್ಟದಲ್ಲೂ ಈ ಮಟ್ಟಕ್ಕೆ ಬೆಳೆದು ಬಂದವರು. ರಂಗ ಕಲೆ, ಕನ್ನಡದ ಸಿನೆಮಾ ಹಾಗೂ ದಾರವಾಹಿಗಳಲ್ಲಿ ತಮ್ಮದೇ ಆದ ಹೆಸರು ಮಾಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ...
2018/07/19 15:35:15
http://usheudaya.blogspot.com/2012/02/
mC4
ವಿಂಡೀಸ್ ವಿರುದ್ಧ ಭಾರತಕ್ಕೆ 59 ರನ್‌ಗಳ ಜಯ – ಮೈಸೂರು ಟುಡೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹುಟ್ಟುಹಬ್ಬ ಆಚರಣೆ ಮೈಸೂರು ಜಿಲ್ಲೆಯಲ್ಲಿಂದು 151 ಕೊರೋನಾ ವೈರಸ್ ಸೋಂಕು ಪ್ರಕರಣ ಪತ್ತೆ : ಸಾವಿನ ಸಂಖ್ಯೆ 37ಕ್ಕೇರಿಕೆ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಕ್ರಮ : ಜಿಲ್ಲಾಧಿಕಾರಿಗಳಿಂದ ಮಾಹಿತಿ ಸರಕಾರದ ವಶಕ್ಕೆ ತಮ್ಮಲ್ಲಿರುವ ಶೇ.50ರಷ್ಟು ಹಾಸಿಗೆಗಳನ್ನು ಇದುವರೆಗೂ ನೀಡದ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳ ಮಾನ್ಯತೆಯನ್ನು ಕೂಡಲೇ ರದ್ದು ಮಾಡಬೇಕು : ಡಾ. ಸಿ.ಎನ್. ಅಶ್ವತ್ಥನಾರಾಯಣ ಅಧಿಕಾರಿಗಳ ವಿರುದ್ಧ ಸ್ವತಃ ಸಿಎಂ ಬಿ.ಎಸ್‌. ಯಡಿಯೂರಪ್ಪ ಗರಂ ಕೋವಿಡ್ ವಿರುದ್ಧ ಅಖಾಡಕ್ಕಿಳಿದು ಕೆಲಸ ಮಾಡುತ್ತೇವೆ ; ಸಚಿವ ಎಸ್ ಟಿ ಸೋಮಶೇಖರ್ ಕೋವಿಡ್ ತುರ್ತು ಚಿಕಿತ್ಸೆಗೆ ಕ್ರಮವಹಿಸಿ : ಸಚಿವ ಎಸ್ ಟಿ ಸೋಮಶೇಖರ್ ಸೂಚನೆ ಮೊಮ್ಮಗ ಸಂವೇದ್ ಗೌಡ ಜಿ.ಹೆಚ್ ಜನ್ಮದಿನದ ಪ್ರಯುಕ್ತ ಚಾಮುಂಡಿ ಹುಲಿ ದತ್ತು ಸ್ವೀಕಾರ ನವೀಕರಣಗೊಳಿಸಿದ ಜಿ.ಟಿ.ದೇವೇಗೌಡ ನಮ್ಮೂರು ನಮ್ಮೋರು ಸೇವಾ ಟ್ರಸ್ಟ್ ಮತ್ತು ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಕೆ ಹೆಚ್ ರಾಮಯ್ಯ ಅವರ 141 ನೇ ಜಯಂತಿ ಆಚರಣೆ Home/ ಕ್ರೀಡೆ/ವಿಂಡೀಸ್ ವಿರುದ್ಧ ಭಾರತಕ್ಕೆ 59 ರನ್‌ಗಳ ಜಯ ವಿಂಡೀಸ್ ವಿರುದ್ಧ ಭಾರತಕ್ಕೆ 59 ರನ್‌ಗಳ ಜಯ CT BUREAU August 12, 2019 ಪೋರ್ಟ್ ಆಫ್ ಸ್ಪೇನ್,ಆ.12-ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಡಕ್‌ವರ್ತ್ –ಲೂಯಿಸ್ ನಿಯಮದಡಿ 59 ರನ್‌ಗಳ ಅಂತರದಿಂದ ಜಯಿಸಿದೆ. ಈ ಗೆಲುವಿನ ಮೂಲಕ ಭಾರತ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 125 ಎಸೆತಗಳಲ್ಲಿ 120 ರನ್ ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕ (71) ನೆರವಿನಿಂದ 7 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತು. ಪಂದ್ಯಕ್ಕೆ ಎರಡನೇ ಬಾರಿ ಮಳೆ ಅಡ್ಡಿಪಡಿಸಿದ ಕಾರಣ ಡಕ್‌ವರ್ತ್ –ಲೂಯಿಸ್ ನಿಯಮದಡಿ ವಿಂಡೀಸ್ ಗೆಲುವಿಗೆ 46 ಓವರ್‌ಗಳಲ್ಲಿ 270 ರನ್ ಪರಿಷ್ಕೃತ ಗುರಿ ಪಡೆಯಿತು. ಈ ಗುರಿ ಬೆನ್ನತ್ತಿದ ವಿಂಡೀಸ್ 42 ಓವರ್‌ಗಳಲ್ಲಿ ಕೇವಲ 210 ರನ್‌ ಗಳಿಸಲಷ್ಟೇ ಶಕ್ತವಾಯಿತು. ಆತಿಥೇಯ ತಂಡ ಒಂದು ಹಂತದಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 148 ರನ್ ಗಳಿಸಿತು. ಆದರೆ, ದಿಢೀರ್ ಕುಸಿತು ಕಂಡು 62 ರನ್‌ಗೆ ಕೊನೆಯ 6 ವಿಕೆಟ್‌ಗಳನ್ನು ಕಳೆದುಕೊಂಡು 210 ರನ್‌ ಗಳಿಸುವ ಮೂಲಕ ಸೋಲನ್ನು ಒಪ್ಪಿಕೊಂಡಿತು. ಭಾರತದ ಪರ ಭುವನೇಶ್ವರ ಕುಮಾರ್ 4, ಮುಹಮ್ಮದ್ ಶಮಿ, ಕುಲದೀಪ್ ಯಾದವ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಲಾರಾ ದಾಖಲೆ ಮುರಿದ ಗೇಲ್ ವಿಂಡೀಸ್‌ನ ಪರ ಗರಿಷ್ಠ 300ನೇ ಏಕದಿನ ಪಂದ್ಯವನ್ನಾಡಿದ ಆರಂಭಿಕ ಆಟಗಾರ ಕ್ರಿಸ್ ಗೇಲ್ ಮಹತ್ವದ ಮೈಲುಗಲ್ಲು ತಲುಪಿದರು. ವಿಂಡೀಸ್ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ಲೆಜೆಂಡ್ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಹಿಂದಿಕ್ಕಿದರು. ಖಲೀಲ್ ಅಹ್ಮದ್ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿದ ಗೇಲ್ ಒಟ್ಟು 10,353 ರನ್ ಗಳಿಸಿದರು. ಒಟ್ಟು 10,348 ರನ್ ಗಳಿಸಿದ್ದ ಲಾರಾ ಅವರ ಗರಿಷ್ಠ ಸ್ಕೋರ್ ದಾಖಲೆಯನ್ನು ಮುರಿದರು. ಎವಿನ್ ಲೂಯಿಸ್(65) ಮೊದಲ ವಿಕೆಟ್ ಜೊತೆಯಾಟದಲ್ಲಿ 45 ರನ್ ಸೇರಿಸಿ ಉತ್ತಮ ಆರಂಭವನ್ನು ನೀಡಿದ ಗೇಲ್ 24 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿ ಭುವನೇಶ್ವರ್‌ಗೆ ವಿಕೆಟ್ ಒಪ್ಪಿಸಿದರು. (ಎಂ.ಎನ್)
2020/07/13 17:18:20
https://kannada.citytoday.news/259085/
mC4
ಹರಿಹರ: Latest ಹರಿಹರ News & Updates, Photos & Images, Videos | Vijaya Karnataka - Page 8 October,22,2019, 19:39:48 ಅ.12,13 'ಕೊಡವ ನಮ್ಮೆ'ಗೆ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಈ ಬಾರಿ 'ಕೊಡವ ನಮ್ಮೆ'ಯನ್ನು ಅಕ್ಟೋಬರ್‌ 12 ಮತ್ತು 13 ರಂದು ಆಚರಿಸಲು ಒಕ್ಕೂಟದ ಮಾಸಿಕ ಸಭೆ ನಿರ್ಧರಿಸಿದೆ. ಕರೆಂಟ್‌ ಕಟ್‌ಗೆ ನೀರಿಲ್ಲದೆ ಒಣಗಿದ ಭತ್ತ ಬೆಳೆ! ನದಿ ದಡದಲ್ಲಿದ್ದರೂ ವಿದ್ಯುತ್‌ ಸಮಸ್ಯೆಯಿಂದ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗದೆ ಇಬ್ಬರು ಸಹೋದರರ 7 ಎಕರೆ ಭತ್ತದ ಬೆಳೆ ಒಣಗಿರುವ ಘಟನೆ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೇಡಿಕೆ ಈಡೇರಿಕೆಗೆ ವಾಲ್ಮೀಕಿ ಸಂಘ ಮನವಿ ಕೇಂದ್ರ ಸರಕಾರದ ಮಾದರಿಯಲ್ಲಿ ರಾಜ್ಯ ಸರಕಾರವು ಪರಶಿಷ್ಟ ಪಂಗಡದವರಿಗೆ ಶೇ.7.5 ಮೀಸಲಾತಿ ನೀಡಬೇಕು ಆಗ್ರಹಿಸಿ ಶೃಂಗೇರಿ ಕ್ಷೇತ್ರ ವಾಲ್ಮೀಕಿ ನಾಯಕರ ಸಂಘದ ವತಿಯಿಂದ ರಾಜ್ಯಪಾಲರಿಗೆ ತಲುಪುವಂತೆ ತಹಶೀಲ್ದಾರ್‌ ಮೂಲಕ ಮಂಗಳವಾರ ಮನವಿ ಸಲ್ಲಿಸಲಾಯಿತು.
2019/10/22 14:09:49
https://vijaykarnataka.com/topics/%E0%B2%B9%E0%B2%B0%E0%B2%BF%E0%B2%B9%E0%B2%B0/8
mC4
ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಈಗ ಕನ್ನಡ ಚಿತ್ರ ನಿರ್ಮಾಪಕ | Aa Ondu Dina movie is producing by Uttara Kannada formar - Kannada Filmibeat 3 min ago ಡ್ರಗ್ಸ್ ಪ್ರಕರಣ: 'ಕೆಂಪೇಗೌಡ-2' ಸಿನಿಮಾ ನಿರ್ಮಾಪಕನ ಮನೆ ಮೇಲೆ ದಾಳಿ 11 min ago ಬಿಗ್‌ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಈಗ ಕನ್ನಡ ಚಿತ್ರ ನಿರ್ಮಾಪಕ ಒಂದು ಸಿನಿಮಾ ನಿರ್ಮಾಣ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಆದರೆ ಇಂತಹ ಸಾಹಸವನ್ನು ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಒಬ್ಬರು ಮಾಡಿದ್ದಾರೆ. ಮೂಲತಃ ಕೃಷಿಕರಾಗಿದ್ದ ರವೀಂದ್ರ ಗೌಡ ಪಾಟೀಲ್ 'ಆ ಒಂದು ದಿನ' ಎಂಬ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ದೇಶಕ್ಕೆ ಏನಾದರೂ ಮಾಡಬೇಕು ಎಂಬ ಆಸೆ ಹೊಂದಿದ್ದ ಇವರು ಒಂದು ಸಿನಿಮಾ ಮಾಡಿ ಅದರ ಮೂಲಕ ಒಂದು ಒಳ್ಳೆಯ ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಇಂದಿನ ರಾಜಕೀಯ ವ್ಯವಸ್ಥೆ ಹಾಳಾಗಿದೆ, ಪ್ರಜಾಪ್ರಭುತ್ವವನ್ನು ಪ್ರಜೆಗಳೆ ಸರಿ ಮಾಡಬೇಕು ಎನ್ನುವ ಇವರು ತಮ್ಮ 'ಆ ಒಂದು ದಿನ' ಸಿನಿಮಾ ಮೂಲಕ ಜನರಿಗೆ ತಿಳಿ ಹೇಳಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಕೂಡ ಅವರೇ ಬರೆದಿದ್ದಾರೆ. ದೇಶದ ಅಭಿವೃದ್ಧಿಗೆ ಬದಲಾವಣೆ ಮುಖ್ಯ ಎನ್ನುವ ಕಾರಣದಿಂದ ಈ ಚಿತ್ರವನ್ನು ಅವರು ಮಾಡಿದ್ದಾರೆ. 'ಆ ಒಂದು ದಿನ' ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರು ಕೂಡ ಹೊಸಬರೇ. ಹಳ್ಳಿಯಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ್ದು, ಆ ಹಳ್ಳಿಯ ಜನರೇ ಚಿತ್ರದಲ್ಲಿ ನಟಿಸಿದ್ದಾರೆ. ಸಿಮ್ರಾನ್ ಚಿತ್ರದ ನಾಯಕಿ ಆಗಿದ್ದಾರೆ. ಧಾರವಾಡದ ಹುಡುಗಿ ಆಗಿರುವ ಸಿಮ್ರಾನ್ ಮುಂಬೈನಲ್ಲಿ ನೆಲೆಸಿದ್ದರು. ಇದು ಅವರ ಮೊದಲ ಕನ್ನಡ ಸಿನಿಮಾ. ಶ್ರೀ ಹರ್ಷಎಂಬುವವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾದ ಒಂದು ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದು, ಆ ಹಾಡು ಅದ್ಬುತವಾಗಿದೆ. ಸಂಜಯ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 'Aa Ondu Dina' kannada new movie songs released. The movie is producing by Uttara Kannada formar Ravindra Gowda Patil.
2021/03/08 18:28:29
https://kannada.filmibeat.com/news/aa-ondu-dina-movie-is-producing-by-uttara-kannada-formar-029134.html
mC4
ಐಶೂ ನಕಲಿ ಪಾಸ್‌ಪೋರ್ಟ್ ಸೃಷ್ಟಿಕರ್ತರ ಬಂಧನ | Aishwarya Rai Fake Passport | Cops Arrest Four Accused | At Vadodara | ಐಶ್ವರ್ಯ ರೈ ನಕಲಿ ಪಾಸ್‌ಪೋರ್ಟ್ | ಸೃಷ್ಟಿಕರ್ತರ ಬಂಧನ - Kannada Filmibeat ಐಶೂ ನಕಲಿ ಪಾಸ್‌ಪೋರ್ಟ್ ಸೃಷ್ಟಿಕರ್ತರ ಬಂಧನ | Published: Saturday, March 31, 2012, 13:23 [IST] ಇತ್ತೀಚೆಗೆ ಪೊಲೀಸರು ವಡೋದರದ ಪ್ರೇಮ್‌ಚಂದ್ರ ಖಾಂಡೇಲ್‌ವಾಲಾ ಎಂಬುವರ ಮನೆಯ ಮೇಲೆ ದಾಳಿ ಮಾಡಿದಾಗ ಅವರಿಗೊಂದು ಶಾಖ್ ಕಾದಿತ್ತು. ಆ ಮನೆಯಲ್ಲಿ ಬಾಲಿವುಡ್ ತಾರೆ ಐಶ್ವರ್ಯ ರೈ ಪಾಸ್‌ಪೋರ್ಟ್ ಫೋಟೋ ಕಾಪಿಗಳು ಪತ್ತೆಯಾಗಿದ್ದವು. ಈ ಸಂಬಂಧ ತನಿಖೆ ತೀವ್ರಗೊಳಿಸಿದ ಪೊಲೀಸರು ನಾಲ್ಕು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆ ಮನೆಯಲ್ಲಿ ಸಿಕ್ಕಿದ ಐಶ್ವರ್ಯ ರೈ ಅವರ ಪಾಸ್‌ಪೋರ್ಟ್ ನಕಲಿಯೇ ಅಥವಾ ಅಸಲಿಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಐಶ್ವರ್ಯ ರೈ ಹುಟ್ಟಿನ ಸ್ಥಳ, ಜನ್ಮ ದಿನಾಂಕ, ನವೀಕರಣ ಸಂಖ್ಯೆ ಸೇರಿದಂತೆ ಪಾಸ್‌ಪೋರ್ಟ್ ಸಂಖ್ಯೆಯೂ ಇದರಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಿವಾಸದಲ್ಲಿ ಕೆಲವು ಡ್ರೈವಿಂಗ್ ಲೈಸೆನ್ಸ್‌ಗಳು, 11 ಪಾಸ್‌ಪೋರ್ಟ್‌ಗಳು, 19 ಮಾರ್ಕ್ಸ್‌ಕಾರ್ಡ್ಸ್, ಮ್ಯಾರೇಜ್ ಸರ್ಟಿಫಿಕೇಟ್ ಹಲವು ದಾಖಲೆ ಪತ್ರಗಳು ಲಭ್ಯವಾಗಿವೆ. (ಏಜೆನ್ಸೀಸ್) Read more about: ಐಶ್ವರ್ಯ ರೈ ಬಾಲಿವುಡ್ aishwarya rai passport bollywood The special operations group discovered few documents during a raid at the residence of Premchandra Khandelwal on Vasna Road, at Vadodara. Something that left all in a shocked state was when the cops found the photocopy of actress Aishwarya Rai's passport.
2021/06/22 01:50:51
https://kannada.filmibeat.com/bollywood/31-cops-arrests-aishwarya-rai-passport-photocopy-aid0052.html
mC4
ರಮೇಶ್​ ಜಾರಕಿಹೊಳಿಗೆ ಗೇಟ್​ಪಾಸ್​?: ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ ಸತೀಶ್​ ಜಾರಕಿಹೊಳಿ | KANNADIGA WORLD Home ಕನ್ನಡ ವಾರ್ತೆಗಳು ಕರ್ನಾಟಕ ರಮೇಶ್​ ಜಾರಕಿಹೊಳಿಗೆ ಗೇಟ್​ಪಾಸ್​?: ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ ಸತೀಶ್​ ಜಾರಕಿಹೊಳಿ ರಮೇಶ್​ ಜಾರಕಿಹೊಳಿಗೆ ಗೇಟ್​ಪಾಸ್​?: ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ ಸತೀಶ್​ ಜಾರಕಿಹೊಳಿ Posted By: Karnataka News BureauPosted date: April 18, 2019 In: ಕರ್ನಾಟಕ ಗೋಕಾಕ್: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ರಮೇಶ್ ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಮೈತ್ರಿ ಸರ್ಕಾರದ ಸಂಪುಟ ಸಭೆ ವಿಸ್ತರಣೆಯ ನಂತರ ಸಚಿವ ರಮೇಶ್ ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದರಿಂದ ಕಾಂಗ್ರೆಸ್​ ವಿರುದ್ಧ ಮುನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಕಳೆದ ಕೆಲ ತಿಂಗಳಿನಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಚಿಂಚೊಳ್ಳಿ ಮಾಜಿ ಶಾಸಕ ಉಮೇಶ್ ಜಾಧವ್ ಸೇರಿದಂತೆ 4 ಶಾಸಕರ ಜೊತೆ ಮುಂಬೈ ತೆರಳಿ ಸರ್ಕಾರವನ್ನೇ ಬೀಳಿಸುವ ಬೆದರಿಕೆಯನ್ನೂ ಒಡ್ಡಿದ್ದರು. ಆದರೆ, ಅಷ್ಟೊತ್ತಿಗಾಗಲೆ ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪ ಆಡಿಯೋ ಪ್ರಕರಣ ಸದ್ದು ಮಾಡಿದ ಪರಿಣಾಮ ರಮೇಶ್ ಸುಮ್ಮನಾಗಿದ್ದರು. ಆದರೆ, ಲೋಕಸಭಾ ಚುನಾವಣೆ ಗರಿಗೆದರಿರುವ ಈ ದಿನಗಳಲ್ಲಿ ರಮೇಶ್ ಮತ್ತೆ ರೆಬೆಲ್ ಆಗಿದ್ದಾರೆ. ಈ ನಡುವೆ ಕಳೆದ ಕೆಲ ದಿನಗಳಿಂದ ಬೆಳಗಾವಿಯ ಚಿಕ್ಕೋಡಿ ನಿಪ್ಪಾಣಿ ಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಬಿಜೆಪಿ ಪರ ಕೆಲಸ ಮಾಡುತ್ತಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾದರೆ, ರಮೇಶ್ ನಡೆಯಿಂದ ಸಹೋದರ ಸತೀಶ್​ ಜಾರಕಿಹೊಳಿಗೂ ಪಕ್ಷ ಹಾಗೂ ಕ್ಷೇತ್ರದಲ್ಲಿ ಇರಿಸುಮುರಿಸು ಉಂಟಾಗಿರುವುದು ಸುಳ್ಳಲ್ಲ. ಹೀಗಾಗಿ ಸಹೋದರನ ಪಕ್ಷ ವಿರೋಧಿ ಚಟುವಟಿಕೆ ಕುರಿತು ಗೋಕಾಕ್ ತಾಲೂಕಿನ ಕೊಳವಿ ಗ್ರಾಮದಲ್ಲಿ ಇಂದು ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ, "ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮಕ್ಕೆ ಹೈಕಮಾಂಡ್​ಗೆ ಶಿಫಾರಸು ಮಾಡಲಾಗುವುದು ಅಲ್ಲದೆ ಗೋಕಾಕ್ ವಿಧಾನ ಸಭಾ ಕ್ಷೇತ್ರದಲ್ಲಿ ರಮೇಶ್​ಗೆ ಪರ್ಯಾಯವಾಗಿ ಲಖನ್ ಜಾರಕಿಹೊಳಿಯನ್ನು ಬೆಳೆಸಲಾಗುವುದು" ಎಂದು ಹೇಳುವ ಮೂಲಕ ಭವಿಷ್ಯದಲ್ಲಿ ರೆಬೆಲ್ ಶಾಸಕ ರಮೇಶ್ ಪಕ್ಷದಲ್ಲಿ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
2022/05/21 00:01:55
https://www.kannadigaworld.com/kannada/karnataka-kn/379323.html
mC4
ಜುಲೈ 4, 1862 - ಬ್ರಿಟಿಷ್ ರಾಯಲ್ ಹವಾಮಾನ ಸೊಸೈಟಿಯ ಜರ್ನಲ್ ಮಂದ ವಿವರಿಸುತ್ತಾರೆ ದಿನ. ಆದಾಗ್ಯೂ, ಚಾರ್ಲ್ಸ್ ಡಾಡ್ಜ್ಸನ್ ಮತ್ತು ತನ್ನ ಪುಟ್ಟ ಸ್ನೇಹಿತರು: ಲಾರಾ ತಂದೆಯ, ಎಡಿತ್ ಮತ್ತು ಆಲಿಸ್ ಲಿಡೆಲ್ - ಅವರು ಜೀವನದಲ್ಲಿ ಬಿಸಿಲಿನ ಒಂದಾಯಿತು. ಕ್ಯಾರೋಲ್ ಹುಡುಗಿಯರು ದೋಣಿ ಕೈಗೊಂಡರೆ ಥೇಮ್ಸ್ ಹೋಗಿ ಸಲಹೆ. ಕೈಗಂಬಿಯ ಮೇಲೆ ಕುಳಿತಿದ್ದ ಆಲಿಸ್ ಲಿಡ್ಡೆಲ್, ಬೇಸರ ಮತ್ತು ತಕ್ಷಣ ಡಾಡ್ಜ್ಸನ್ ಕಥೆ ಹೇಳಿದರು ಬೇಡಿಕೆ, ಮತ್ತು ಇದು ಎಷ್ಟು ಅಸಂಬದ್ಧ ಇರಬೇಕು. ಚಾರ್ಲ್ಸ್ ತನ್ನ ನೆಚ್ಚಿನ ತಿರಸ್ಕರಿಸಬಹುದು ಸಾಧ್ಯವಿಲ್ಲ, ಮತ್ತು ಹೊಸ ಕಥೆ ಆವಿಷ್ಕಾರ ಒಂದು ಹತಾಶ ಪ್ರಯತ್ನದಲ್ಲಿ, ಅವರು ಅಂತ್ಯವಿಲ್ಲದ ಮೊಲದ ಕುಳಿಯ ಪ್ರಯಾಣ ನಾಯಕಿ ಕಳುಹಿಸಲು ನಿರ್ಧರಿಸಿದರು. ಹೀಗಾಗಿ ರಂದು ವಿಶ್ವದಾದ್ಯಂತ ಅಭಿಮಾನಿಗಳು ಮತ್ತು ವಿಶ್ವಾದ್ಯಂತ ಮಕ್ಕಳಿಗೆ ಮತ್ತು ವಯಸ್ಕರಿಗೆ ಮರಳಿ ಓದಲು ಕಾಲ್ಪನಿಕ ಕಥೆಗಳ ಜಗತ್ತಿನಲ್ಲಿ ಮಹಾನ್ ವ್ಯಕ್ತಿ ಜನಿಸಿದರು. ಆದಾಗ್ಯೂ ಜೀವನಚರಿತ್ರೆ ಲೆವಿಸ್ ಕ್ಯಾರೋಲ್ ಅವರ ಕೃತಿಗಳು ಹೆಚ್ಚು ಕಡಿಮೆ ಆಸಕ್ತಿಯನ್ನು. ಈ ವಿಧಿಯ ನಿರ್ದಿಷ್ಟವಾದ ವಿಷಯ. Charz ಡಾಡ್ಜ್ಸನ್: ಮುಂಚಿನ ವರ್ಷಗಳು Charlz Dodzhson ಚೆಶೈರ್ ನಲ್ಲಿ, 1832 ರಲ್ಲಿ, Daresbury ಹಳ್ಳಿಯಲ್ಲಿ ಜನಿಸಿದರು. ಪಾಲಕರು ಭವಿಷ್ಯದ ಗಣಿತಜ್ಞ ಮತ್ತು ಬರಹಗಾರ, ಪಾದ್ರಿ ಚಾರ್ಲ್ಸ್ ಲಟ್ವಿಜ್ Dzhodzhson ಮತ್ತು ಫ್ರಾನ್ಸಿಸ್ ಆಯಿತು. ಚಾರ್ಲ್ಸ್ ಪೋಷಕರು ಹೆಸರುಗಳು ಗೌರವಾರ್ಥವಾಗಿ ಕಲ್ಪಿತ ತೆಗೆದುಕೊಂಡಿತು. ಲ್ಯಾಟಿನ್ Charlz Lyutvidzh carlus Lyudovikus ರೀತಿಯಲ್ಲಿ ಧ್ವನಿಸುತ್ತದೆ. ನೀವು ಕೆಲವು ಸ್ಥಳಗಳಲ್ಲಿ ಪದಗಳನ್ನು ಬದಲಾಯಿಸಲು ಮತ್ತು ವೇಳೆ, ಇಂಗ್ಲೀಷ್ ಮರುಪ್ರವೇಶಕ್ಕೆ ಅನುವಾದ ತಿನ್ನುವೆ Lyuis Kerroll - ನಮ್ಮ ಸಮಯದಲ್ಲಿ ಎಲ್ಲರಿಗೂ ಪರಿಚಿತವಾಗಿರುವ ಹೆಸರು. ಬಾಲ್ಯದಿಂದಲೂ, ಚಾರ್ಲಿ ಗಣಿತ ಆಕರ್ಷಿತನಾದನು. ಮಾತ್ರ ಆಕ್ಸ್ಫರ್ಡ್ ಗಣಿತಶಾಸ್ತ್ರದ ಫ್ಯಾಕಲ್ಟಿ: ಇದು ವೃತ್ತಿಯಾಗಿ ಆಯ್ಕೆ ಬಂದ ನಂತರ, ಯಾವುದೇ ಸಂದೇಹವಿರಲಿಲ್ಲ. ಪದವಿಯ ನಂತರ ಡಾಡ್ಜ್ಸನ್ ಒಂದು ಉಪನ್ಯಾಸಕನಾಗಿ ವಿಶ್ವವಿದ್ಯಾನಿಲಯದಲ್ಲಿ ಉಳಿಯಿತು. ಆಕ್ಸ್ಫರ್ಡ್ ಆಕರ್ಷಣೆಯಾಗಿದೆ ಹೊಸ ಸ್ಥಿತಿ ಪಡೆದ ನಂತರ ಡಾಡ್ಜ್ಸನ್ ಗೋಪುರಗಳುಳ್ಳ ಸ್ನೇಹಶೀಲ ಮನೆಯಲ್ಲಿ ನೆಲೆಸಿದರು. ಯಂಗ್ ಶಿಕ್ಷಕ ತ್ವರಿತವಾಗಿ ಗೋಚರತೆಯನ್ನು ವಿಚಿತ್ರ ಏಕೆಂದರೆ, ಆಕ್ಸ್ಫರ್ಡ್ ಆಕರ್ಷಣೆಗಳಲ್ಲಿ ಒಂದಾಯಿತು: ಸ್ವಲ್ಪ ಅಸಮ್ಮಿತ ಮುಖ, ತುಟಿ ಒಂದು ಮೂಲೆ, ಇತರ ಕಡಿಮೆ ಏರಿಸಲಾಗುತ್ತದೆ. ಜೊತೆಗೆ, ಇದು ಸಾಕಷ್ಟು ತೊದಲುತ್ತಿದ್ದರು ಇದೆ. ಬಹುಶಃ ಅವರು ಡೇಟಿಂಗ್ ಮತ್ತು ಆಕ್ಸ್ಫರ್ಡ್ ಹೊರವಲಯದಲ್ಲಿರುವ ವಾಕಿಂಗ್ ದೀರ್ಘ ಗಂಟೆಗಳ ತಪ್ಪಿಸಲು ಪ್ರಯತ್ನಿಸಿದರು ಏಕೆ ಪ್ರೊಫೆಸರ್ ಆದ್ದರಿಂದ ಒಂಟಿಯಾಗಿ ಇಲ್ಲಿದೆ. ಲೆಕ್ಚರ್ಸ್ ಡಾಡ್ಜ್ಸನ್ ವಿದ್ಯಾರ್ಥಿಗಳು ನೀರಸ ಹೇಗೆ: ಇದು ಒಣ ನಿರ್ಜೀವ ಧ್ವನಿ ಪಾಠ ಹೆಚ್ಚು ಆಸಕ್ತಿಕರ ಮಾಡಲು ಪ್ರಯತ್ನಿಸುವ ಇಲ್ಲದೆ, ನಿಮ್ಮ ವಸ್ತುಗಳ ಓದಲು. ಛಾಯಾಗ್ರಹಣ ಉತ್ಸಾಹ ಲೂಯಿಸ್ ಕೆರೋಲ್ ಬಯಾಗ್ರಫಿ ಸ್ವಲ್ಪ ವಿಭಿನ್ನವಾಗಿ ಔಟ್ ತಿರುಗಿದ್ದಾರೆ. ಅವರ ಯೌವನದಲ್ಲಿ, ಡಾಡ್ಜ್ಸನ್ ಕಲಾವಿದ ಕನಸನ್ನು ಕಂಡಿದ್ದರು: ಅವರು ಸೆಳೆಯಿತು, ಮತ್ತು ಅವರು ಅವರ ಸಣ್ಣ ಕಥೆಗಳ ಸಚಿತ್ರ. ಡಾಡ್ಜ್ಸನ್ ಒಮ್ಮೆ ಸಹ "ಟೈಮ್" ಪತ್ರಿಕೆ ತನ್ನ ಚಿತ್ರಗಳ ಕಳುಹಿಸಲಾಗಿದೆ. ಟ್ರೂ, ಸಂಪಾದಕರು ಪ್ರಕಟಿಸಲು ಸಾಕಷ್ಟು ತಮ್ಮ ವೃತ್ತಿಪರ ಪರಿಗಣಿಸಲಿಲ್ಲ. ಚಾರ್ಲ್ಸ್ ಮುಖ್ಯ ಹವ್ಯಾಸ ಛಾಯಾಗ್ರಹಣ ಆಗಿತ್ತು. ಕ್ಲಾಯ್ಡೆಲ್ ಪರಿಹಾರ ಆವರಿಸಿದ ವಿಶೇಷ ಗಾಜಿನ ಫಲಕಗಳ ಮೇಲೆ ಛಾಯಾಚಿತ್ರಗಳಲ್ಲಿ: XIX ಶತಮಾನದಲ್ಲಿ ಹವ್ಯಾಸಿ ಛಾಯಾಗ್ರಾಹಕರು ಚಿತ್ರಗಳನ್ನು ಪಡೆಯಲು ಶ್ರಮವನ್ನು ಮಾಡಬೇಕಾಯಿತು. ಆದಾಗ್ಯೂ, ಈ ತೊಂದರೆಗಳನ್ನು ಡಾಡ್ಜ್ಸನ್ ನಿಲ್ಲಿಸಲಾಗಲಿಲ್ಲ: ಅವರು ಅದ್ಭುತ ಭಾವಚಿತ್ರಗಳು ಹಕ್ಸ್ಲೆ ಟೆನ್ನಿಸನ್, ಫ್ಯಾರಡೆ ಮಾಡಲು ಸಾಧ್ಯವಾಯಿತು. ಆದಾಗ್ಯೂ, ನಂಬಿರುವ ಅವರ ಅತ್ಯುತ್ತಮ ಡಾಡ್ಜ್ಸನ್ ಮೀಸಲಾದ ಆಲಿಸ್ ಲಿಡ್ಡೆಲ್ - ಮಗಳ ದಿ ರೆಕ್ಟರ್ ಆಫ್ ದಿ ಯುನಿವರ್ಸಿಟಿ ಆಫ್ ಆಕ್ಸ್ಫರ್ಡ್. ಏಪ್ರಿಲ್ 1856 ರಲ್ಲಿ ಡಾಡ್ಜ್ಸನ್ ಆಕ್ಸ್ಫರ್ಡ್ ರೆಕ್ಟರ್ ಒಂದು ಆಕರ್ಷಕ ಮಗಳು ಭೇಟಿಯಾದರು. ಮತ್ತು ಧನ್ಯವಾದಗಳು ಈ ಸಭೆಯ, ಲೆವಿಸ್ ಕ್ಯಾರೋಲ್ ಜೀವನಚರಿತ್ರೆ ತೀಕ್ಷ್ಣವಾದ ತಿರುವು ಮಾಡಿದ. ಆಲಿಸ್ ಲಿಡ್ಡೆಲ್ ನಿಜವಾದ ಮ್ಯೂಸ್ ಸೇರದ ಗಣಿತ: ಇದು ತನ್ನ ಅವರು ಅತ್ಯಂತ ವ್ಯಾಪಕವಾಗಿ ಓದಲ್ಪಟ್ಟ ಪ್ರಕಟಿಸಿದನು ಒಂದು ಇದು ಅವನ ಪುಸ್ತಕ, ಸಮರ್ಪಿಸಿದ ಮತ್ತು ವಿಶ್ವದ ಉಲ್ಲೇಖಿಸಲಾಗಿದೆ. ಆಲಿಸ್ ಲಿಡ್ಡೆಲ್ ಹಲವಾರು ಭಾವಚಿತ್ರವು ಉಳಿಯಲಿಲ್ಲ: ವಿಮರ್ಶಕರು ಅವರ ನಿಸ್ಸಂದೇಹವಾದ ಕಲಾತ್ಮಕ ಮೌಲ್ಯವನ್ನು ಸೂಚಿಸುತ್ತಾರೆ. ಆದಾಗ್ಯೂ, ಸ್ನೇಹ ಕೆಲವೇ ವರ್ಷಗಳಲ್ಲಿ ಕೊನೆಯಾಯಿತು. ಮ್ಯೂಸ್ ಅಗಲುವಿಕೆ ಆಲಿಸ್ 12 ವರ್ಷದವನಿದ್ದಾಗ, Charlz Dodzhson ಆಕ್ಸ್ಫರ್ಡ್ ರೆಕ್ಟರ್ ಮನೆಯಲ್ಲಿ ಒಂದು ಅಪರೂಪದ ಅತಿಥಿ ಆಯಿತು. ಜೀವನಚರಿತ್ರೆಕಾರ ಇನ್ನೂ ಚರ್ಚಿಸಿದ್ದು ಈ ಹೊರಗಿಡುವ ಕಾರಣ ಏನು. ವದಂತಿ ಡಾಡ್ಜ್ಸನ್ ಆಲಿಸ್ ಪ್ರೀತಿಸುತ್ತಿದ್ದೆ, ಮತ್ತು ತನ್ನ ಮದುವೆ ಪ್ರಸ್ತಾಪವನ್ನು ಮಾಡಿದ ಮಾಡಿಕೊಡುತ್ತಾನೆ. ಕೆಲವು ಗಣಿತ ಹುಡುಗಿ ವ್ಯವಹರಿಸುವಾಗ ಸಭ್ಯತೆಯ ಮಿತಿಗಳನ್ನು ಜಾರಿಗೆ ವಾದಿಸುತ್ತಾರೆ. ನಂತರದ ನಿಜವಾದ ಸಂಭಾವ್ಯವಲ್ಲ: ಎಲ್ಲಾ ಸಭೆಗಳು ಮತ್ತು Dzhodzhsona ಲಿಡ್ಡೆಲ್ ಸಹೋದರಿಯರು ವಯಸ್ಕರಿಗೆ ಉಪಸ್ಥಿತಿಯಲ್ಲಿ ನಡೆಯಿತು. ಆದಾಗ್ಯೂ, ಕ್ಯಾರೋಲ್ ಡೈರಿ ಪುಟಗಳು, ಒಂದು ಕಾಲ್ಪನಿಕ ಸಮಯವನ್ನು ಬಗ್ಗೆ ಹೇಳುವ, ಹರಿದ, ನಾಶವಾಗುತ್ತವೆ. ಆದ್ದರಿಂದ, ಅನೇಕ ಗಮನ ಸೆಳೆಯುತ್ತದೆ ಇಂಗ್ಲೀಷ್ ನಲ್ಲಿ ಲೆವಿಸ್ ಕ್ಯಾರೋಲ್ ಜೀವನಚರಿತ್ರೆ ಹುಡುಗಿಯರಲ್ಲಿ ಸ್ನೇಹಿ ಆಸಕ್ತಿಯನ್ನು ಹೊಂದಿದ್ದ ನಂಬುವುದಿಲ್ಲ. ಜೊತೆಗೆ, ಆಲಿಸ್ಳ ತಾಯಿ ಡಾಡ್ಜ್ಸನ್ ತೆಗೆದ ಚಿತ್ರಗಳ ಮಗಳು ಅತ್ಯಂತ ನಾಶ, ಮತ್ತು ಅಕ್ಷರದ ಹುಡುಗಿ ಉದ್ದೇಶಿಸಿ ದಹನ ಮಾಡಿತು. ಆದಾಗ್ಯೂ, ಮೇ ಮಾಹಿತಿ, ಡಾಡ್ಜ್ಸನ್ ಆಲಿಸ್ ಲಿಡ್ಡೆಲ್ ಅಮರತ್ವದ ನೀಡಲು ನಿರ್ವಹಿಸುತ್ತಿತ್ತು ಎಂದು: ". ಲೆವಿಸ್ ಕ್ಯಾರೋಲ್ ಕಥೆಯಿಂದ ಆಲಿಸ್" ಸಹ ತನ್ನ ಟೂಂಬ್ಸ್ಟೋನ್ ಬರೆಯಲಾಗಿದೆ, ಶಾಶ್ವತ ಮಗು ಅವರು Lyuis Kerroll (ಜೀವನಚರಿತ್ರೆ ಈ ಲೇಖನದಲ್ಲಿ ಅರ್ಥಗರ್ಭಿತವಾಗಿ) ಬಾಲ್ಯ ತನ್ನ ಜೀವನ ಉಳಿಸಿಕೊಳ್ಳಲು ನಿರ್ವಹಿಸಿದ್ದಾರೆ ಹೇಳುತ್ತಾರೆ. ತನ್ನ ಸ್ನೇಹಿತರು ಗಣಿತ ಅವರಿಗೆ ಗಮನಾರ್ಹವಾಗಿ ಕಿರಿಯರು ಏಕೆ ಬಹುಶಃ ಈ ವಿವರಿಸುತ್ತದೆ. ಮಕ್ಕಳ ಕಂಪನಿ ಡಾಡ್ಜ್ಸನ್ ಉಗ್ಗು ನಿಲ್ಲಿಸಿತು ರಲ್ಲಿ ತಮ್ಮ ಮಾತು ಅವನು ಬೇರೆ ವ್ಯಕ್ತಿ ತಿರುಗಿ ವೇಳೆ ಜೀವಿತಕಾಲದಲ್ಲಿ ಆಯಿತು. ಆದಾಗ್ಯೂ, ಅವರು ಹಳೆಯ ಬೆಳೆಯಲು ತಮ್ಮ ಸ್ನೇಹಿತರು ಡಾಡ್ಜ್ಸನ್ ಕ್ರಮೇಣ ಅವುಗಳನ್ನು ಆಸಕ್ತಿಯನ್ನು ಕಳೆದುಕೊಂಡನು. ಮಕ್ಕಳ ಸೃಜನಶೀಲತೆಗೆ ಸ್ಪೂರ್ತಿಪಡೆದ ಅವರು ಗಣಿತ ತನ್ನ ಪುಟ್ಟ ಸ್ನೇಹಿತರು ಬರೆದ ಪತ್ರಗಳನ್ನು ಓದಿ ಅಗತ್ಯ, ಅವರು ಕೆರೋಲ್ ಮುಖ್ಯ ಉತ್ಪನ್ನ ಗಿಂತ ಕಡಿಮೆ ಆಸಕ್ತಿಯಾಗಿವೆ. ಜನಪ್ರಿಯತೆಯ ರಹಸ್ಯ ಇದು ಕ್ಯಾರೊಲ್ ಕಥೆ ಆದ್ದರಿಂದ ಜನಪ್ರಿಯ ಮಾಡಿದ ಹೇಳುವುದು ಕಷ್ಟ. ಬಹುಶಃ ಭಾಷೆಯನ್ನು ಹಲವಾರು ಪ್ರಯೋಗಗಳಲ್ಲಿ ಇಡೀ ವಿಷಯ: ಉದಾಹರಣೆಗೆ ಸ್ವಾತಂತ್ರ್ಯಗಳ ಮಾತ್ರ ಮಕ್ಕಳಲ್ಲಿ ಮಾತನಾಡಬಹುದು. ಈ ಪ್ರೀತಿ ಮಕ್ಕಳು ಆದರೆ ವಯಸ್ಕರು ಮಾತ್ರ ಕಥೆ ವಾಸ್ತವವಾಗಿ: ಇದು ಕಥೆ ಸೂಕ್ಷ್ಮ ತಾತ್ವಿಕ ಮತ್ತು ತಾರ್ಕಿಕ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಸಹಾಯ ಮಾಡುತ್ತದೆ ಸಾಧ್ಯ. ಹಾಸ್ಯ, ತರ್ಕ, ಗಣಿತಶಾಸ್ತ್ರ, ಮತ್ತು ಉತ್ತಮ ಕಥೆ: ಜೊತೆಗೆ, ಲೆವಿಸ್ ಕ್ಯಾರೋಲ್ ಮಕ್ಕಳ ಜೀವನಚರಿತ್ರೆ ಈ ವ್ಯಕ್ತಿ ತೋರುವ ವಿರುದ್ಧ ವಿಷಯಗಳನ್ನು ಸಂಪರ್ಕ ಸಾಧ್ಯವಾಯಿತು ಎಂದು ಸಾಬಿತು. ವಾಸ್ತವವಾಗಿ, ಅನೇಕ ವಿರೋಧಾಭಾಸದ ಕ್ಯಾರೋಲ್ ಸಾಹಿತ್ಯದ ಜನಕ ಆಗಿದೆ ಎಂದು, ಪ್ರತಿ ಹೆಜ್ಜೆಯಲ್ಲೂ ತರ್ಕ ಉಲ್ಲಂಘಿಸುವ ಪಾತ್ರಗಳು ನಂಬುತ್ತಾರೆ. ಆದಾಗ್ಯೂ, ಇದು ಅಲ್ಲ. ವಿಚಿತ್ರವಾಗಿ ಸಾಕಷ್ಟು, "ಇನ್ ವಂಡರ್ಲ್ಯಾಂಡ್" ಮತ್ತು "ಇನ್ ವಂಡರ್ಲ್ಯಾಂಡ್" ಪಾತ್ರಗಳನ್ನು ಯಾವಾಗಲೂ ತರ್ಕ, ಆದಾಗ್ಯೂ, ಅನುಸರಿಸಿ ಒಂದು ಅಸಂಬದ್ಧ ಅದೇ ಸಮಯದಲ್ಲಿ ತರಲು. ಏಕೆ Lyuis Kerroll ಒಂದು ಸಣ್ಣ ಜೀವನಚರಿತ್ರೆ ಮೇಲೆ ಇಂಗ್ಲೀಷ್ ಮನುಕುಲದ ಮಹಾನ್ ಕಥೆಹೇಳುವವರ ಒಂದು ಸ್ಥಿತಿಯನ್ನು ಪಡೆಯಲು ಸಾಧ್ಯವಾಯಿತು ಯಾರಿಗೂ ಕುತೂಹಲಕಾರಿ ಎಂದು. ಒಂದು ಪ್ರತಿಭಾವಂತ ಎರಡು ಬದಿ Charlz Dodzhson ಮಾತ್ರ ಇದೊಂದು ಮೂಲ ವಿಕ್ಟೋರಿಯನ್ ವಿಲಕ್ಷಣ ವಿಜ್ಞಾನಿ ಎಲ್ಲಾ ಲಕ್ಷಣಗಳು ಸಾಕಾರಗೊಳಿಸಿದ ವೇಳೆ, ಕಾಲ್ಪನಿಕ ಕಥೆಗಳ ಜಗತ್ತಿನಲ್ಲಿ ಮಹಾನ್ ವ್ಯಕ್ತಿ ಸೃಷ್ಟಿಸಿಲ್ಲ. ಸೇರದ ಮತ್ತು ಮಿತಭಾಷಿ ಗಣಿತಜ್ಞ ಯಾವಾಗಲೂ ಉನ್ನತ ಟೋಪಿ ಮತ್ತು ಕೈಗವಸುಗಳನ್ನು ಧರಿಸಿದ್ದನು. ಅವರು ವಿರಳವಾಗಿ ಮೋಜಿನ ಮತ್ತು ಬಹುತೇಕ ತಪಸ್ವಿ ಬದುಕು ನಡೆಸಿದರು. ಅವರ ಕೃತಿಗಳು ತಾರ್ಕಿಕವಾಗಿ ಗಣಿತ ಶಾಸ್ತ್ರೀಯ ಪರಿಗಣಿಸಲಾಗಿದೆ. ಆದಾಗ್ಯೂ, ಈ ವ್ಯಕ್ತಿ ಮತ್ತು ಬಿಸಿಲಿನಿಂದ. ಲೂಯಿಸ್ ಕೆರೋಲ್ ಬಯಾಗ್ರಫಿ ಅವರು, ಯಾವುದೇ ಮಗು ನಗುವುದು ಎಂದು ಉತ್ತಮ ಕಥೆಗಳು ಮತ್ತು ಅಕ್ಷರಗಳು, ಉತ್ಸಾಹದಿಂದ ರೇಖಾಚಿತ್ರ ಮತ್ತು ಹಾಸ್ಯಮಯ ಕಥೆಗಳನ್ನು ಬರೆಯಲು ಬರೆದರು ಹೇಳುತ್ತಾರೆ. ಹೊಂದಾಣಿಕೆಯಾಗದ ಒಂದಾಗುವ ಸಾಮರ್ಥ್ಯವನ್ನು - ಯಾರು, ಬಹುಶಃ ಪ್ರತಿಭೆ ಗೊತ್ತು? ಹಾಗಿದ್ದಲ್ಲಿ, ಚಾರ್ಲ್ಸ್ ಡಾಡ್ಜ್ಸನ್, ಉತ್ತಮ ಪರಿಚಿತ ಎಂದು Lyuis Kerroll, ಕ್ಯಾನ್ ಬಿ ಕರೆಯಲಾಗುತ್ತದೆ ಒಂದು ದಿ ಮಹಾನ್ ಪ್ರತಿಭೆಗಳ ಮಾನವಕುಲದ. Lyuis Kerroll, ಇದು ಅಚ್ಚರಿ ಎನಿಸುತ್ತದೆ ಮಕ್ಕಳಿಗೆ ಒಂದು ಶಾರ್ಟ್ ಬಯೋಗ್ರಫಿ, ಗಣಿತ, ಅಕ್ಷರಗಳನ್ನು ಮತ್ತು ಕಥೆಗಳು ಅನೇಕ ಕೃತಿಗಳನ್ನು ಬಿಟ್ಟು. ಆದಾಗ್ಯೂ, ವೈಭವ ಅವರು ಆಲಿಸ್ ಲಿಡ್ಡೆಲ್ ಬಗ್ಗೆ ಎರಡು ಪುಸ್ತಕಗಳು ತಂದರು. ಓದಿ "ಇನ್ ವಂಡರ್ಲ್ಯಾಂಡ್" ಮತ್ತು "ಆಲಿಸ್" ಯೋಗ್ಯವಾಗಿದೆ ಪ್ರತಿ ಒಂದು: ಇಂತಹ, ಉತ್ತಮ ಪ್ರಕಾಶಮಾನವಾದ ಮತ್ತು ಅದ್ಭುತ ಪುಸ್ತಕಗಳು ಬಹಳ ಕಡಿಮೆ ಬರೆಯಲಾಗಿದೆ.
2020/07/09 18:59:09
https://kn.unansea.com/%E0%B2%95%E0%B3%8D%E0%B2%B0%E0%B2%BF%E0%B2%AF%E0%B3%86%E0%B2%9F%E0%B2%BF%E0%B2%B5%E0%B2%BF%E0%B2%9F%E0%B2%BF-%E0%B2%AE%E0%B2%A4%E0%B3%8D%E0%B2%A4%E0%B3%81/
mC4
ನೀವು ಕಳುಹಿಸಿದ ಫೋಟೋ, ವೀಡಿಯೋಗಳನ್ನು ಇನ್ನೊಬ್ಬರ ಫೋನ್‍ನಿಂದ ಡಿಲೀಟ್ ಮಾಡಬಹುದು! | Vartha Bharati- ವಾರ್ತಾ ಭಾರತಿ ಹೊಸ ಫೀಚರ್ ನೊಂದಿಗೆ ಬರುತ್ತಿದೆ ವಾಟ್ಸ್ ಆ್ಯಪ್ ವಾರ್ತಾ ಭಾರತಿ Oct 02, 2020, 6:15 PM IST ನ್ಯೂಯಾರ್ಕ್: ವಾಟ್ಸ್ ಆ್ಯಪ್ ಹೊಸ ಫೀಚರ್ ಒಂದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆಯೆನ್ನಲಾಗಿದ್ದು ಈ ಹೊಸ ಫೀಚರ್ ಬಳಕೆದಾರರಿಗೆ ತಾವು ಇನ್ನೊಬ್ಬರಿಗೆ ಕಳುಹಿಸಿದ ಚಿತ್ರ, ವೀಡಿಯೋ ಅಥವಾ ಗಿಫ್ ಅನ್ನು ನಂತರ ಅವರ ಫೋನ್‍ನಿಂದ ಡಿಲೀಟ್ ಮಾಡಲು ಅನುವು ಮಾಡಿಕೊಡುತ್ತದೆ. 'ದಿ ಎಕ್ಸ್‍ಪೈರಿಂಗ್ ಮೀಡಿಯಾ' ಎಂಬ ಹೆಸರಿನ ಫೀಚರ್ ಅನ್ನು ಎನೇಬಲ್ ಮಾಡಬೇಕಿದ್ದರೆ ಚಿತ್ರ ಅಥವಾ ವೀಡಿಯೋ ಸಂದೇಶ ಕಳುಹಿಸುವವರು `ವೀವ್ ಒನ್ಸ್' ಬಟನ್ ಆಯ್ಕೆ ಮಾಡಬೇಕಿದೆ. ಈ ಸಂದೇಶ ಸಂಬಂಧಿತರ ಫೋನ್‍ಗೆ ತಲುಪಿದ ನಂತರ ಅವರು ಚ್ಯಾಟ್‍ನಲ್ಲಿರುವಾಗ ಮಾತ್ರ ಅದು ಕಾಣಿಸುತ್ತದೆ. ಅವರು ಚ್ಯಾಟ್ ವಿಂಡೋದಿಂದ ಹೊರಬರುತ್ತಿದ್ದಂತೆಯೇ 'ದಿಸ್ ಮೀಡಿಯಾ ವಿಲ್ ಡಿಸ್‍ಅಪೀಯರ್ ಒನ್ಸ್ ಯು ಲೀವ್ ದಿಸ್ ಚ್ಯಾಟ್,' ಎಂಬ ಸಂದೇಶ ಕಾಣಿಸುತ್ತದೆ. ಅವರು ಮತ್ತೆ ಚ್ಯಾಟ್ ವಿಂಡೋಗೆ ಹೋದರೆ "ವೀವ್ ಒನ್ಸ್ ಫೋಟೋ ಎಕ್ಸ್‍ ಪೈಯರ್ಡ್,'' ಸಂದೇಶ ಕಾಣಿಸುತ್ತದೆ. ವಾಟ್ಸ್ ಆ್ಯಪ್ ಬೇಟಾ ಆಂಡ್ರಾಯ್ಡ್ 2.20.2011 ವರ್ಷನ್‍ಗಾಗಿ ಅಭಿವೃದ್ಧಿ ಪಡಿಸಲಾಗುತ್ತಿರುವ ಈ ಹೊಸ ಫೀಚರ್ ಯಾವಾಗ ಲಭ್ಯವಾಗಲಿದೆಯೆಂದು ತಿಳಿದು ಬಂದಿಲ್ಲ.
2022/07/04 00:31:33
https://www.varthabharati.in/article/e-jagathu/261643
mC4
ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ | Udayavani – ಉದಯವಾಣಿ Monday, 13 Jul 2020 | UPDATED: 08:16 AM IST Team Udayavani, Jan 28, 2020, 3:55 PM IST ದೊಡ್ಡಬಳ್ಳಾಪುರ: ನಗರದ ಕೋರ್ಟ್‌ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ನಾಲ್ಕು ಅಂಗಡಿ ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು ಸೋಮವಾರ ಪೊಲೀಸ್‌ ಭದ್ರತೆಯೊಂದಿಗೆ ತೆರವು ಗೊಳಿಸಿದರು. ಕೋರ್ಟ್‌ ರಸ್ತೆಯಲ್ಲಿನ ಖಾಸಗಿ ವಸತಿ ಗೃಹದ ಮುಂಭಾಗದಲ್ಲಿ ನಗರಸಭೆಯಿಂದ ಅನುಮತಿ ಪಡೆಯದೆ, ಹೈ-ಟೆನ್ಷನ್‌ ವೈರ್‌ ಹಾದುಹೋಗಿರುವ ಕೆಳಭಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಮಳಿಗೆ ನಿರ್ಮಿಸಿದ್ದರು. ಈ ಕುರಿತು ಸ್ಥಳೀಯರೊಬ್ಬರು ನೀಡಿದ ದೂರಿನ ಮೇರೆಗೆ, ನಗರಸಭೆಯಿಂದ ಕಟ್ಟಡ ತೆರವುಗೊಳಿಸಲು ಈ ಹಿಂದೆ ನೊಟೀಸ್‌ ನೀಡಲಾಗಿತ್ತು. ಆದರೆ ತೆರವುಗೊಳಿಸದೇ ಇದ್ದುದರಿಂದ, ಕಟ್ಟಡ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು ಎನ್ನಲಾಗಿದೆ. ನ್ಯಾಯಾಲಯದ ಪ್ರಕ್ರಿಯೆ ಪೂರ್ಣಗೊಂಡು ಕಟ್ಟಡ ತೆರವಿಗೆ ಆದೇಶ ನೀಡಿದ ಹಿನ್ನಲೆ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಷೇಕ್‌ ಫಿರೋಜ್‌, ನಗರ ಠಾಣೆ ಸಬ್‌ ಇನ್ಸ್ ಪೆಕ್ಟರ್‌ ವೆಂಕಟೇಶ್‌ ಸಮ್ಮುಖದಲ್ಲಿ ಕಟ್ಟಡವನ್ನು ತೆರವುಗೊಳಿಸಲಾಯಿತು. ನಗರಸಭೆ ಕಿರಿಯ ಅಭಿಯಂತರರಾದ ಚಂದ್ರಶೇಖರ್‌, ರಾಮೇಗೌಡ ಹಾಗೂ ಬೆಸ್ಕಾಂ ಸಿಬ್ಬಂದಿ ಇದ್ದರು.
2020/07/13 02:47:22
https://www.udayavani.com/district-news/bangalore-rural-news/illegally-built-stores-clearing-operation
mC4
ಕೊಡುಗೆ ಕೊಡೋದಲ್ಲ, ಇದ್ದಿದ್ದನ್ನೂ ಕಿತ್ಕೊಂಡ್ರು! | Udayavani – ಉದಯವಾಣಿ Tuesday, 11 Aug 2020 | UPDATED: 11:47 PM IST ಕೊಡುಗೆ ಕೊಡೋದಲ್ಲ, ಇದ್ದಿದ್ದನ್ನೂ ಕಿತ್ಕೊಂಡ್ರು! ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಶಿರಾ ಘಟಕ, ಸರ್ಕಾರಿ ಕಾಲೇಜು ಸ್ಥಳಾಂತರ ಮಾಡಿದ್ದೇ ಸಾಧನೆ Team Udayavani, Jul 1, 2019, 12:15 PM IST ಚಿತ್ರದುರ್ಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೂರೈಸಿದ್ದು, ಮಧ್ಯ ಕರ್ನಾಟಕದ ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಯಾವುದೇ ವಿಶೇಷ ಕೊಡುಗೆ ನೀಡಿಲ್ಲ. ಬದಲಾಗಿ ಜಿಲ್ಲೆಯಲ್ಲಿದ್ದ ಪ್ರಮುಖ ಎರಡು ಮಹತ್ವದ ಯೋಜನೆಗಳನ್ನ ಕಿತ್ತುಕೊಂಡು ಹಳೆ ಮೈಸೂರು ಭಾಗದ ಜೆಡಿಎಸ್‌ ಬಲಿಷ್ಠವಾಗಿರುವ ಎರಡು ಜಿಲ್ಲೆಗಳಿಗೆ ಹಂಚಿಕೆ ಮಾಡುವ ಮೂಲಕ ಚಿತ್ರದುರ್ಗ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗೀಯ ಕಚೇರಿಯಲ್ಲಿದ್ದ ಶಿರಾ ಘಟಕವನ್ನು ತುಮಕೂರು ಜಿಲ್ಲೆಗೆ, ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರ ಮಾಡುವ ಮೂಲಕ ಹಿಂದುಳಿದ ಜಿಲ್ಲೆಯ ಜನರ ಗಾಯದ ಮೇಲೆ ಬರೆ ಎಳೆದಿದೆ. ಜಿಲ್ಲೆಗೆ ದಕ್ಕಬೇಕಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಗಗನಕುಸುಮವಾಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದಿಂದ ಹಿಡಿದು ಸಮ್ಮಿಶ್ರ ಸರ್ಕಾರದವರೆಗೂ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ವೈದ್ಯಕೀಯ ಕಾಲೇಜನ್ನು ಆರಂಭ ಮಾಡುತ್ತಿಲ್ಲ. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಒಂದಿಂಚೂ ಮುಂದೆ ಸಾಗದೆ ಇದ್ದಲ್ಲೇ ಇದೆ. ಈ ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನ ಮಾಡುತ್ತಿಲ್ಲ, ಅನುದಾನವನ್ನೂ ನೀಡುತ್ತಿಲ್ಲ. ಹಾಗಾಗಿ ರೈಲು ಹಳಿ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಚಳ್ಳಕೆರೆ, ಮೊಳಕಾಲ್ಮೂರು, ಪಾವಗಡ ತಾಲೂಕುಗಳಿಗೆ ತುಂಗಭದ್ರಾ ಹಿನ್ನೀರು ಯೋಜನೆಗೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ 2800 ಕೋಟಿ ರೂ.ಗಳು ಮಂಜೂರಾಗಿದ್ದು ಆಮೆಗತಿಯಲ್ಲಿ ಸಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗದಲ್ಲಿದ್ದ ಶಿರಾ ಘಟಕವನ್ನು ವಾಪಸ್‌ ತುಮಕೂರು ಜಿಲ್ಲೆಗೆ ಮರು ಸೇರ್ಪಡೆ ಮಾಡುವ ಮೂಲಕ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ. ಇದಲ್ಲದೆ ಜಿಲ್ಲೆಯ ಜವನಗೊಂಡಹಳ್ಳಿ ಹೋಬಳಿ ಕೇಂದ್ರದಲ್ಲಿದ್ದ ಸರ್ಕಾರಿ ಪದವಿ ಕಾಲೇಜ್‌ ಅನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರಿಸುವ ಮೂಲಕ ಶೈಕ್ಷಣಿಕವಾಗಿಯೂ ತಾರತಮ್ಯ ಮಾಡಲಾಗಿದೆ. ಮುಂದುವರೆದ ಕಾಮಗಾರಿ ಪಟ್ಟಿಯಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಸದ್ಯಕ್ಕೆ ಅನುದಾನ ಕೊರತೆ ಕಾಣುತ್ತಿಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ 700 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಿ ಬಿಡುಗಡೆ ಆಗಿದೆ. ಆ ಮೊತ್ತದಲ್ಲಿ 657.28 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಈ ಅನುದಾನವನ್ನು ಹೊರತು ಪಡಿಸಿದರೆ ಯಾವುದೇ ರೀತಿಯ ಹೆಚ್ಚುವರಿ ಅನುದಾನ ಜಿಲ್ಲೆಗೆ ಸಿಕ್ಕಿಲ್ಲ. ಆದರೆ ಲೋಕೋಪಯೋಗಿ ಇಲಾಖೆ ಈ ಮಾತಿಗೆ ಅಪವಾದ. ಏಕೆಂದರೆ ಜಿಲ್ಲೆಯಾದ್ಯಂತ 150 ಮುಂದುವರೆದ ಕಾಮಗಾರಿಗಳಿದ್ದು 6.40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ 3 ಕೋಟಿ ರೂ. ಖರ್ಚಾಗಿದ್ದು ಕಾಮಗಾರಿಗಳು ವೇಗದಲ್ಲಿ ಸಾಗುತ್ತಿವೆ. ಇದಲ್ಲದೆ ಎಸ್ಸಿಪಿ, ಟಿಎಸ್ಪಿ ಅನುದಾನದಡಿಯಲ್ಲಿ 162 ಮುಂದುವರೆದ ಕಾಮಗಾರಿಗಳು ನಡೆಯುತ್ತಿದ್ದು 12.46 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಪೈಕಿ 1.83 ಕೋಟಿ ರೂ.ಗಳು ಖರ್ಚಾಗಿದ್ದು ಎಲ್ಲ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಲೋಕೋಪಯೋಗಿ ಇಲಾಖೆಗೆ ಜಿಲ್ಲೆಯ ಆರು ತಾಲೂಕುಗಳಿಂದ ಹೊಸದಾಗಿ 109.70 ಕೋಟಿ ರೂ.ಗಳಲ್ಲಿ 51 ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು ಮಂಜೂರಾತಿ, ಸರ್ವೆ, ಡಿಪಿಆರ್‌, ಹಂತದಲ್ಲಿವೆ. ಒಂದೆರಡು ತಿಂಗಳಲ್ಲಿ ಇಷ್ಟು ಅನುದಾನ ಬಿಡುಗಡೆಯಾಗಿ ಕಾಮಗಾರಿಗಳು ಆರಂಭವಾಗಲಿವೆ. ಇದೇ ಮಾತನ್ನು ಬೇರೆ ಇಲಾಖೆಗೆ ಹೇಳುವಂತಿಲ್ಲ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಆರು ತಾಲೂಕುಗಳಲ್ಲಿ 84 ಕಾಮಗಾರಿಗಳನ್ನು ವಿವಿಧ ಹೆಡ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು 34.80 ಕೋಟಿ ರೂ.ಗಳ ಮಂಜೂರಾತಿ ನೀಡಿ ಕಾಮಗಾರಿ ಆರಂಭಿಸಲಾಗಿದೆ. ಹೊಸ ಕೆರೆ ನಿರ್ಮಾಣಕ್ಕಾಗಿ 50 ಲಕ್ಷ, ಕೆರೆಗಳ ಆಧುನೀಕರಣಕ್ಕಾಗಿ 6.38 ಕೋಟಿ, ಅಣೆಕಟ್ಟು ಮತ್ತು ಪಿಕಪ್‌ 12.89 ಕೋಟಿ, ಚೆಕ್‌ ಡ್ಯಾಂ ನಿರ್ಮಾಣಕ್ಕಾಗಿ 1.45 ಕೋಟಿ, ಕೊಳವೆ ಬಾವಿ ಕಾಮಗಾರಿಗಳಿಗೆ 5.55 ಕೋಟಿ, ನಬಾರ್ಡ್‌ ಅನುದಾನದಡಿ ಹೊಸ ಕೆರೆಗಳ ನಿರ್ಮಾಣಕ್ಕಾಗಿ 1.50 ಕೋಟಿ, ಕೆರೆಗಳ ಆಧುನೀಕರಣ 2.49 ಕೋಟಿ, ಅಣೆಕಟ್ಟು ಮತ್ತು ಪಿಕಪ್‌ 4.04 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲವೇ ಕೆಲವು ಇಲಾಖೆಗಳಿಗೆ ಹೆಚ್ಚಿನ ಅನುದಾನ ಮಂಜೂರಾಗಿದ್ದು ಬಿಟ್ಟರೆ ಸಮ್ಮಿಶ್ರ ಸರ್ಕಾರದ ಒಂದು ವರ್ಷದ ಸಾಧನೆ ನಿರಾಶಾದಾಯಕವಾಗಿದೆ. ಇನ್ನುಳಿದ ನಾಲ್ಕು ವರ್ಷಗಳಲ್ಲಾದರೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಮನಸ್ಸು ಮಾಡಬೇಕಿದೆ. ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆ ತೃಪ್ತಿ ತಂದಿದೆ. ತುಂಗಭದ್ರಾ ಹಿನ್ನೀರು ಯೋಜನೆ ಕೂಡ್ಲಗಿ ತಾಲೂಕಿನಲ್ಲಿ ಆರಂಭವಾಗಿದೆ. ಹೊಸದಾಗಿ ಮಂಜೂರಾಗಿರುವ ಕಾಮಗಾರಿಗಳಿಗೆ ಅನುದಾನದ ಕೊರತೆಯಿಲ್ಲ. ಉಳಿದ ನಾಲ್ಕು ವರ್ಷದಲ್ಲಿ ಜಿಲ್ಲೆಯ ಎಲ್ಲ ಯೋಜನೆಗಳೂ ಆರಂಭವಾಗಲಿವೆ.
2020/08/11 18:18:42
https://www.udayavani.com/district-news/chitradurga-shira-unit-of-state-road-transport-corporation
mC4
ಸೋಂಪುರದಲ್ಲಿ ಪರಿಷೆ | Prajavani ಸೋಂಪುರದಲ್ಲಿ ಪರಿಷೆ ಕೆಂಗೇರಿ ಸಮೀಪದ ಸೋಂಪುರದಲ್ಲಿ ಸಂಕ್ರಾಂತಿ ಹಬ್ಬವನ್ನು ಗ್ರಾಮದ ಸುತ್ತಮುತ್ತಲಿನ ಜನರೆಲ್ಲ ಸೇರಿಕೊಂಡು ಆಚರಿಸುವುದು ವಿಶೇಷ. ಸೋಂಪುರದ ನಂದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಊರ ಹಬ್ಬದ ರೀತಿಯಲ್ಲಿ ಸಂಕ್ರಾಂತಿ ಆಚರಿಸಲಾಗುತ್ತದೆ. ಈ ವರ್ಷವೂ ಜ.15ರಂದು ಸಂಕ್ರಾಂತಿ ಹಬ್ಬ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ರೈತರು ತಾವು ಬೆಳೆದ ದವಸ ದಾನ್ಯಗಳು, ತರಕಾರಿಗಳನ್ನು ಮಾರಾಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಸೋಂಪುರ ಬಳಿಯ ಚನ್ನವೀರಯ್ಯನ ಪಾಳ್ಯದಲ್ಲಿರುವ ನಂದಿ ಬಸವೇಶ್ವರಸ್ವಾಮಿ ದೇವಸ್ಥಾನವು ಚೋಳರ ಕಾಲದ್ದು. 2006ರಲ್ಲಿ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದು ಹೊಸ ರೂಪ ನೀಡಲಾಯಿತು. ಇದರ ನೇತೃತ್ವ ವಹಿಸಿದ್ದ ಸ್ಥಳೀಯ ಮುಖಂಡ ಎಂ.ರುದ್ರೇಶ್‍ ದೇವಸ್ಥಾನಕ್ಕೆ ಸಂಪರ್ಕ ವ್ಯವಸ್ಥೆಯನ್ನೂ ಕಲ್ಪಿಸಿದರು. ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಆಚರಣೆಗೆ ಇಲ್ಲಿ ವಿಶೇಷ ಮಹತ್ವ. ನಂದಿ ಬಸವೇಶ್ವರ ದೇವರ ಉತ್ಸವ, ಜಾತ್ರಾ ಮಹೋತ್ಸವ ಜರುಗಲಿದ್ದು ಹೆಮ್ಮಿಗೆಪುರದ ಮಾರಮ್ಮ, ಗಟ್ಟಿಗೆರೆ ಪಾಳ್ಯ, ಕಬ್ಬಾಳಮ್ಮ, ಚನ್ನವೀರಯ್ಯನಪಾಳ್ಯ, ಮಾರಮ್ಮ, ಎಚ್.ಗೊಲ್ಲಹಳ್ಳಿ ಕಬ್ಬಾಳಮ್ಮ ಸೇರಿದಂತೆ ವಿವಿಧ ದೇವರುಗಳ ಮೆರವಣಿಗೆ ನಡೆಯುತ್ತದೆ. ಡಂಕಣಿಕೋಟೆ, ತಳಿ, ಧರ್ಮಪುರಿ, ಪಾವಗಡ, ಗೌರಿಬಿದನೂರು, ಕನಕಪುರ, ಮಾಗಡಿಯಿಂದ ಬರುವ ರೈತರು ತಲಾ ಎರಡು ಲೀಟರ್ ಕಡಲೇಕಾಯಿ ಹಾಗೂ ಒಂದು ಜೊತೆ ಕಬ್ಬನ್ನು ಉಚಿತವಾಗಿ ವಿತರಿಸುವ ಮೂಲಕ ಕಡಲೇಕಾಯಿ ಪರಿಷೆಯನ್ನೇ ನಡೆಸುವುದು ಈ ಊರಿನ ಸಂಕ್ರಾಂತಿ ಹಬ್ಬದ ವಿಶೇಷ. ಕಡಲೆಕಾಯಿ ಪರಿಷೆ ಶುರುವಾಗಿದ್ದು ಈ ದೇವಸ್ಥಾನದಲ್ಲಿಯೇ ಎಂಬುದು ಸೋಂಪುರದ ಹಿರಿಯರ ಅಭಿಪ್ರಾಯ. ಈ ಬಾರಿಯ ಸಂಕ್ರಾಂತಿ ಉತ್ಸವದಲ್ಲಿ ಗ್ರಾಮದ, 60 ವರ್ಷ ತುಂಬಿದ ಹಿರಿಯ ರೈತರನ್ನು ಗೌರವಿಸುವ 'ಮಾತೃಪಿತೃ ದೇವೋಭವ' ಎಂಬ ವಿಶಿಷ್ಟ ಕಾರ್ಯಕ್ರಮವೂ ಇದೆ. ಉತ್ಸವಕ್ಕೆ ಧರ್ಮದ ಬೇಲಿ ಇಲ್ಲದಿರುವುದು ಮತ್ತೊಂದು ವಿಶೇಷ. ಮುಸಲ್ಮಾನ ಮತ್ತು ಕ್ರೈಸ್ತ ಜನಾಂಗದ ರೈತರೂ ಉತ್ಸವದಲ್ಲಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನೈಸ್ ಜಂಕ್ಷನ್ ಸೋಂಪುರ ಬಳಿಯ ಚನ್ನವೀರಯ್ಯನಪಾಳ್ಯದಲ್ಲಿ ನಡೆಯುವ ಈ ಜಾತ್ರೆಯು ರಾತ್ರಿ 8 ಗಂಟೆವರೆಗೆ ನಡೆಯಲಿದೆ. ಪೂಜಾ ಕುಣಿತ, ಪಟದ ಕುಣಿತ, ಡೊಳ್ಳು ಕುಣಿತ, ನಂದಿಧ್ವಜ, ಗೊರವನ ಕುಣಿತ, ವೀರಭದ್ರನ ಕುಣಿತ, ನಗಾರಿವಾದ್ಯ ಮಹಿಳೆಯರಿಂದ ವೀರಗಾಸೆ, ಕಂಸಾಳೆ, ಕರಡಿಕುಣಿತ ಸೇರಿದಂತೆ ಹಲವಾರು ಜಾನಪದ ಕಲೆಗಳ ಪ್ರದರ್ಶನವೂ ಇರುತ್ತದೆ. ಮಲ್ಲಗಂಬ ಏರುವುದು, ಗುಂಡುಕಲ್ಲು ಎತ್ತುವ ಸ್ಪರ್ಧೆ, ಮಡಕೆ ಒಡೆಯುವುದು, ಹಾಲು ಕರೆಯುವ ಮತ್ತು ರಂಗೋಲಿ ಬಿಡಿಸುವ ಸ್ಪರ್ಧೆಗಳು ನಡೆಯಲಿವೆ. ಸಂಜೆ 6ಕ್ಕೆ ನಡೆಯುವ ಹಸುಗಳ ಕಿಚ್ಚು ಹಾಯಿಸುವ ಕಾರ್ಯಕ್ರಮ ಜಾತ್ರೆಯ ವಿಶೇಷ ಆಕರ್ಷಣೆ.
2018/12/14 21:59:56
https://www.prajavani.net/news/article/2018/01/14/547312.html
mC4
ವಿಮೆಯ ಆರೋಗ್ಯ ವಿಚಾರಿಸ್ಕೊಳ್ಳಿ ಹೊಸ ನಿಯಮ ಏನು ಬಂದಿದೆ ಗೊತ್ತಾ? | Udayavani - ಉದಯವಾಣಿ ಸರ್ಕಾರದ ಆರೋಗ್ಯ ಯೋಜನೆಗಳೆಲ್ಲವೂ ನಿರೀಕ್ಷಿತ ಫ‌ಲ ನೀಡದ ಕಾರಣ ಬಳಕೆದಾರರು ತಮ್ಮ ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಿ ವಿಮೆ ಪಾಲಿಸಿ ಪಡೆದು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಖಾಸಗಿ ವಿಮೆ ಕಂಪನಿಗಳು ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ಮಧ್ಯವರ್ತಿಗಳು ಥರ್ಡ್‌ ಪಾರ್ಟಿ ಅಡ್ಮಿನಿಸ್ಟ್ರೇಟರ್ ಕೈಜೋಡಿಸಿ, ಪಾಲಿಸಿದಾರರಿಗೆ ಸೇವೆ ನೀಡುವ ಬದಲು ಸಂಕಷ್ಟಗಳನ್ನೇ ನೀಡುತ್ತಾ ಬಂದಿದ್ದಾರೆ. ಗ್ರಾಹಕ ವೇದಿಕೆಗಳಲ್ಲಿ ಆರೋಗ್ಯ ವಿಮೆಗೆ ಸಂಬಂಧಿಸಿದ ದೂರುಗಳನ್ನು ಗಮನಿಸಿದರೆ, ಬಳಕೆದಾರರ ಎದುರಿಸುತ್ತಿರುವ ಸಮಸ್ಯೆಗಳು ತಿಳಿಯುತ್ತದೆ. ವಿಮೆ ಪಾಲಿಸಿ ಮಾರಾಟ ಮಾಡುವಾಗ ಕಂಪನಿಗಳು ಬಳಕೆದಾರರ ಬಗ್ಗೆ ತೋರುವ ಕಾಳಜಿ ಆನಂತರ ಇರುವುದಿಲ್ಲ. ಚಿಕಿತ್ಸೆ ಪಡೆದು, ತಮ್ಮ ಕೈನಿಂದ ಹಣ ನೀಡಿ, ಅದರ ಮರುಪಾವತಿಗೆ ಅರ್ಜಿ ಸಲ್ಲಿಸಿದಾಗಲೇ ನಿಜವಾದ ಸಮಸ್ಯೆ ಗೋಚರಿಸುವುದು. ಆರೋಗ್ಯ ವಿಮೆ ಪಾಲಿಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿರುವ ಭಾರತೀಯ ವಿಮೆ ಅಭಿವೃದ್ಧಿ ಮತ್ತು ನಿಯಂತ್ರಣ ಪಾಧಿಕಾರ ಐಆರ್‌ಡಿಎಐ ಕಳೆದ ಜುಲೈ ತಿಂಗಳಲ್ಲಿ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದೆ. ಇದರಲ್ಲಿ ವಿಮೆ ಉದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರೂ, ಕೆಲವೊಂದು ಅಂಶಗಳು ಬಳಕೆದಾರರಿಗೂ ಅನುಕೂಲ ತರಲಿದೆ. ಆರೋಗ್ಯ ವಿಮೆಯ ಆಧಾರದ ಮೇಲೆ ಬಳಕೆದಾರರು ಸಾಲ ಪಡೆಯಬಹುದಾಗಿದೆ. ಆರೋಗ್ಯ ಮತ್ತು ಜೀವ ವಿಮಾ ಕಂಪನಿಗಳು ಈ ರೀತಿಯ ಪಾಲಿಸಿಗಳನ್ನು ಮಾರಾಟ ಮಾಡಬಹುದಾಗಿದೆ. ಪಾಲಿಸಿಯ ವಾಯ್ದೆಯನ್ನು ಐದು ವರ್ಷಕ್ಕೆ ವಿಸ್ತರಿಸಲಾಗಿದೆ. ಪಾಲಿಸಿದಾರರು ಸಾಲ ಪಡೆದಿದ್ದು, ಅನಾರೋಗ್ಯದ ಕಾರಣ ಅದನ್ನು ತೀರಿಸಲಾಗದಿದ್ದರೆ, ವಿಮೆ ಕಂಪನಿಯು, ಪಾಲಿಸಿ ಆಧಾರದ ಮೇಲೆ ಆ ಸಾಲವನ್ನು ತೀರುಸುತ್ತದೆ. ಈ ಹಿಂದೆ ಜೀವ ವಿಮಾ ಕಂಪನಿಗಳು ಮಾತ್ರ ಈ ರೀತಿ ಪಾಲಿಸಿಗಳನ್ನು ಮಾರಾಟಮಾಡುತ್ತಿದ್ದವು. ಇನ್ನು ಮುಂದೆ ವಿಮಾ ಕಂಪನಿಗಳು ಆರೋಗ್ಯ ಪಾಲಿಸಿಗಳನ್ನು ಮಾರಾಟಮಾಡುವಂತಿಲ್ಲ. ಈಗಾಗಲೆ ಚಾಲ್ತಿಯಲ್ಲಿರುವ ಪಾಲಿಸಿಗಳನ್ನು ಅದರ ವಾಯ್ದೆ ಮುಗಿದ ಕೂಡಲೆ ನಿಲ್ಲಿಸಬೇಕಾಗುತ್ತದೆ. ಅದನ್ನು ಮತ್ತೆ ಪರಿಷ್ಕರಿಸುವಂತಿಲ್ಲ. ಜೊತೆಗೆ, ಇನ್ನು ಮೂರು ತಿಂಗಳಲ್ಲಿ ಆ ಮಾದರಿ ಪಾಲಿಸಿಗಳನ್ನು ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ. ಆರೋಗ್ಯ ವಿಮೆ ಖರೀದಿಸುವವರಿಗೆ ಇನ್ನು ಮುಂದೆ ಅನೇಕ ರಿಯಾಯಿತಿ ದೊರೆಯಲಿದೆ. ಐಆರ್‌ಟಿಎಐ ನಿಯಮದ ಪ್ರಕಾರ ಆರೋಗ್ಯ ವಿಮೆ ಕಂಪನಿಗಳು ಪಾಲಿಸಿದಾರರಿಗೆ ಹೊಸ ಪ್ರೋತ್ಸಾಹ ಯೋಜನೆಗಳನ್ನು ನೀಡಬಹುದು. ವಿಶೇಷವಾಗಿ ಯುವಜನಾಂಗಕ್ಕೆ ಪಾಲಿಸಿ ಮಾರಾಟಮಾಡುವ ಸಮಯದಲ್ಲಿ ಕಂಪನಿಗಳು ತಮ್ಮದೆ ಆದ ಪ್ರೋತ್ಸಾಹ ಯೋಜನೆಗಳನ್ನು ರೂಪಿಸಬಹುದಾಗಿದೆ. ಹೊಸ ಪಾಲಿಸಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಷಯದಲ್ಲಿ ಜೀವ ವಿಮೆಅಲ್ಲದ ವಿಮಾ ಕಂಪನಿಗಳಿಗಳಿಗೆ ಕೆಲವೊಂದು ವಿನಾಯಿತಿ ಅಥವಾ ಸ್ವಾತಂತ್ರ ನೀಡಲಾಗಿದೆ. ಜೀವ ವಿಮಾ ಕಂಪನಿಗಳು ಒಂದು ವರ್ಷದಿಂದ ಐದು ವರ್ಷದವರೆಗಿನ ಪಾಲಿಸಿಗಳನ್ನು ನೀಡಬಹುದಾಗಿದೆ. ಈ ಅವಧಿಯನ್ನು ವಿಮೆ ಕಂಪನಿಗಳು ಮಾರುಕಟ್ಟೆಗೆ ಅನುಗುಣವಾಗಿ ಬದಲಾವಣೆ, ಸುಧಾರಣೆ ಮಾಡಬಹುದು. ನಿಯಮದ ಪ್ರಕಾರ ವಿಮೆ ಕಂಪನಿಗಳು ಐದು ವರ್ಷ ಅವಧಿಯ ಪಾಲಿಸಿ ಮಾರಾಟ ಮಾಡಬಹುದು. ಒಂದು ವೇಳೆ ಆ ಪಾಲಿಸಿ ಸರಿಯಿಲ್ಲವೆಂದು ತೋರಿದಲ್ಲಿ, ಐದು ವರ್ಷದ ನಂತರ ಅದನ್ನು ನಿಲ್ಲಿಸಬಹುದು ಅಥವಾ ಹಿಂದಕ್ಕೆ ಪಡೆಯಬಹುದು. ವಿಮೆ ಬಗ್ಗೆ ಕಂಪನಿಗಳು ನೀಡುವ ಮಾಹಿತಿ ವಿಷಯದಲ್ಲೂ ಕೆಲವೊಂದು ನಿಯಮ ಜಾರಿಗೆ ಬಂದಿದೆ. ಇದು ಬಳಕೆದಾರರಿಗೆ ನೇರವಾಗಿ ಉಪಯೋಗ ಆಗದಿದ್ದರೂ, ವಿಮಾ ಉದ್ಯಮದಲ್ಲಿ ಪಾರದರ್ಶಕತೆ ತರಲಿದೆ. ಆರೊಗ್ಯ ವಿಮೆ ಪಾಲಿಸಿಯ ವಿಷಯದಲ್ಲಿ ವಿಮೆ ಕಂಪನಿಗಳು ಎರಡು ರೀತಿಯ ಕ್ರಮ ಕೈಗೊಳ್ಳುತ್ತದೆ, ಒಂದು ಪಾಲಿಸಿದಾರರ ಕ್ಲೈಮ್‌ಅನ್ನು ನಿರಾಕರಿಸುವುದು. ಮತ್ತೂಂದು ಕ್ಲೈಮ್‌ಅನ್ನು ಕ್ಲೋಸ್‌ ಮಾಡುವುದು ಅಥವಾ ಮುಕ್ತಾಯಗೊಳಿಸುವುದು. ಪಾಲಿಸಿದಾರರು ಪ್ರೀಮಿಯಮ್‌ ಪಾವತಿಸದಿದ್ದಲ್ಲಿ, ಪಾಲಿಸಿ ಕೊನೆಗೊಳ್ಳುತ್ತದೆ ಅಥವಾ ಸರಿಯಾದ ದಾಖಲೆ ಇಲ್ಲದಿದ್ದಲ್ಲಿ ಪಾಲಿಸಿ ಕೊನೆಗೊಳ್ಳುತ್ತದೆ. ಪ್ರಸ್ತುತ ವಿಮೆ ಕಂಪನಿಗಳು ಇವೆರಡನ್ನೂ ಒಟ್ಟಾಗಿಸಿ, ಮಾಹಿತಿ ನೀಡುವಂತಿಲ್ಲ. ಹೊಸ ನಿಯಮದ ಪ್ರಕಾರ ಕ್ಲೈಮ್‌ಅನ್ನು ಪಾಲಿಸಿ ಮುಕ್ತಾಯವಾಗಿದೆ ಎಂದು ಪರಿಗಣಿಸುವಂತಿಲ್ಲ. ತೀವೃ ಅನಾರೋಗ್ಯ ಮತ್ತು ಅಪಘಾತ ಎರಡೂ ಒಟ್ಟಿಗೆ ಸೇರಿರುವ ವಿಮೆ ಪಾಲಿಸಿಯನ್ನು ನೀಡುವ ನಿಯಮ ಜಾರಿಗೆ ಬರಲಿದೆ. ಪಾಲಿಸದಾರರು ಯಾವುದಾದರು ಅನಾರೋಗ್ಯಕ್ಕೆ ಪಾಲಿಸಿ ಪಡೆದಿದ್ದಲ್ಲಿ, ಆ ಅನಾರೋಗ್ಯದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಪಡೆಯಬಹುದು. ಅಲ್ಲದೆ ಪಾಲಿಸಿದಾರರು ಯಾವುದಾದರು ಅಪಘಾತಕ್ಕೀಡಾದಲ್ಲಿ, ಅದರ ಚಿಕಿತ್ಸೆಗೆ ತಗಲುವ ವೆಚ್ಚವನ್ನೂ ಪಡೆಯಬಹುದಾಗಿದೆ. ಒಟ್ಟಾರೆ, ಐಆರ್‌ಡಿಎಐ ಸ್ಥಾಪನೆಗೊಂಡಾಗಿನಿಂದ ಸತತವಾಗಿ ಬಳಕೆದಾರರಿಗೆ ಅನುಕೂಲವಾಗುವ ನಿ¿ನಿಯಮಗಳನ್ನು ತರುತ್ತಿದೆ. ಜೊತೆಗೆ, ವಿಮೆ ಉದ್ಯಮಕ್ಕೂ ಉತ್ತೇಜನ ನೀಡುತ್ತಿದೆ. ಗ್ರಾಹಕ ಸಂರಕ್ಷಣೆಯಲ್ಲಿ ತೊಡಗಿರುವ ಸಂಘ/ಸಂಸ್ಥೆಗಳು ವಿಮಾ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ಸೇರಿಸಿಕೊಳ್ಳಬೇಕಿದೆ.
2019/02/20 16:04:39
https://www.udayavani.com/kannada/news/%E0%B2%90%E0%B2%B8%E0%B2%BF%E0%B2%B0%E0%B2%BF/172995/%E0%B2%B5%E0%B2%BF%E0%B2%AE%E0%B3%86%E0%B2%AF-%E0%B2%86%E0%B2%B0%E0%B3%8B%E0%B2%97%E0%B3%8D%E0%B2%AF-%E0%B2%B5%E0%B2%BF%E0%B2%9A%E0%B2%BE%E0%B2%B0%E0%B2%BF%E0%B2%B8%E0%B3%8D%E0%B2%95%E0%B3%8A%E0%B2%B3%E0%B3%8D%E0%B2%B3%E0%B2%BF-%E0%B2%B9%E0%B3%8A%E0%B2%B8-%E0%B2%A8%E0%B2%BF%E0%B2%AF%E0%B2%AE-%E0%B2%8F%E0%B2%A8%E0%B3%81-%E0%B2%AC%E0%B2%82%E0%B2%A6%E0%B2%BF%E0%B2%A6%E0%B3%86-%E0%B2%97%E0%B3%86%E0%B3%82%E0%B2%A4%E0%B3%8D%E0%B2%A4%E0%B2%BE
mC4
ಕುಡಿಯೋದೇ ನನ್ ವೀಕ್ನೆಸ್ಸೂ… | ಅವಧಿ । AVADHI ಕುಡಿಯೋದೇ ನನ್ ವೀಕ್ನೆಸ್ಸೂ… – ಎ ಎಸ್ ಅಶೋಕ ಸೂರ್ಯ ನಡು ನೆತ್ತಿಯ ಮೇಲೆ ಸುಡುತ್ತಿದ್ದ. ಅತ್ಲಾಗಿ ಎರಡು ಹೆಜ್ಜೆ ಬಲಕ್ಕೆ ತಿರುಗಿದರೆ ಉಡುಪಿ ಕೃಷ್ಣ ಭವನ, ಇತ್ಲಾಗಿ ಎರಡು ಹೆಜ್ಜೆ ಎಡಕ್ಕೆ ತಿರುಗಿದರೆ ಕವಿತಾ ಬಾರ್ ಅಂತಿದ್ದ ಜಾಗದಲ್ಲಿ ಸರಿಯಾಗಿ ದೊಡ್ಡೇಗೌಡ್ರ ದರ್ಶನ ಅತು. ನನ್ನನ್ನು ನೋಡಿದವರೆ ಬಿಸಿಲಿನ ಝಳಕ್ಕೆ ತಮ್ಮ ನೆತ್ತಿಗೆ ಅಡ್ಡ ಹಿಡಿದಿದ್ದ ಪೇಪರನ್ನು ತುಸು ಕೆಳಗಿಳಿಸಿ ನಕ್ಕೋತ ನಮಸ್ಕಾರ ಅಂದ್ರು. 'ನಮಸ್ಕಾರ ಗೌಡ್ರೆ, ಪೇಪರ್ ಏನು ಹೇಳ್ತಾ ಇದೆ' ಅಂತ ಪ್ರಶ್ನೆ ಎಸೆದೆ. 'ಇನ್ನೂ ಓದಿಲ್ಲ' ಅಂತ ಸರಳ ಉತ್ತರ ಬಂತು. ಮಾತಿಗೆ ನಾನು ಎಳೆ ಹುಡುಕುತ್ತಿರ ಬೇಕಾದ್ರೆ ಗೌಡ್ರು ಏಕಾ ಏಕಿ 'ವಸಿ ತಕ್ಕೊಳೋಣ್ವೆ' ಅಂದು ಬಿಡಬೇಕೆ! ನಾನು ಗಾಭರಿಯಿಂದ , 'ಗೌಡ್ರೆ ಇದೇನು ತಮಾಷೆ' ಅಂದೆ . 'ತಮಾಷೆ ಅಲ್ಲ ಇದು, ಕಹಿ ಸತ್ಯ. ಮೊದಲೆಲ್ಲಾ ನಾನು ಆರೋಗ್ಯಕ್ಕೊಳ್ಳೇದಲ್ಲ ಅಂತ ಕುಡೀತಾನೆ ಇರಲಿಲ್ಲ. ಆದ್ರೆ ಹಾಳಾದ್ದು ಈ ಪ್ರೆಂಡ್ಸ್ ಬಿಡ್ಬೇಕಲ್ಲ. ಯಾಕವ್ರ ಮನಸ್ಸು ನೋಯ್ಸೋದು ಅಂತ ಒಂದಿಷ್ಟು.. ಒಂದಷ್ಟು ಅಂತ ಸುರು ಮಾಡ್ದೆ ನೋಡಿ.. ಹಾಳಾದ್ದು ಚಟಾ ಹತ್ಕಂಬುಡ್ತು. ಈಗ ಹೆಂಡ್ತಿನ್ನಾರೂ ಬುಟ್ಟೇನು, ಇದನ್ ಬುಡಾಕಾಗಕಿಲ್ಲ..'ಅಂದರು ಗೌಡರು. ಅವರೆಡೆಗೆ ಅನುಕಂಪದ ದೃಷ್ಟಿ ಬೀರಿ, 'ಗಟ್ಟಿ ಮನಸ್ಸು ಮಾಡಿ ಬಿಟ್ಬಿಡಿ ಗೌಡ್ರೆ' ಅಂದೆ. 'ಅಯ್ಯೋ, ನಿಮ್ಮಂತ ಪ್ರೆಂಡ್ಸನ್ನೆಲ್ಲಾ ಸಂಪಾದ್ಸಿಕೊಟ್ಟಿರೋ ಈ ಚಟನ್ನ ಹಂಗೆಲ್ಲಾ ಸಲೀಸಾಗಿ ಬುಟ್ಬುಡೋಕಾಗುತ್ಯೇ!? ಅಲ್ಲಾ ಅದ್ಯಾಕ್ ಹಂಗ್ ಮಾನ ಹರಾಜಾದಂಗೆ ಮಖ ಮಾಡ್ಕಂಡ್ರಿ! ನಾನು ಕರೆದಿದ್ದು ..ಓ ಆಲ್ಲೈತೆ ನೋಡಿ ಉಡುಪಿ ಹೋಟೆಲ್, ಅಲ್ಹೋಗಿ ಪೇಪರ್ ಬುಡುಸ್ಕೊಂಡು ಒಂದು ಗುಟುಕು ಸ್ಟ್ರಾಂಗ್ ಕಾಫಿ ಕುಡಿಯೋದಕ್ಕೆ..' ಗೌಡ್ರ ಮುಖದಲ್ಲಿ ತುಂಟ ನಗುವಿತ್ತು. ಗೌಡ್ರ ಪಾಲಿನ ಕಹಿ ಸತ್ಯ ನನಗೂ ಅನ್ವಯಿಸುವುದೇ ಆಗಿತ್ತು. 'ಓಹ್ ಹಾಗೋ..ಅಲ್ಲಾ ಒಂದು ಗುಟುಕು ಯಾವ ಮೂಲೆಗೆ ಗೌಡ್ರೇ..ಒಂದು ಲೀಟರ್ರೇ ಇಳ್ಸೋಣ್ವಂತೆ, ನಡೀರಿ..' ಅಂದೆ ನಾನು ಅಗದಿ ಕುಡುಕನ ತರ ಅಲ್ಲಲ್ಲಾ ಕಾಫಿ ಕುಡುಕನ ತರ ! ಕಾಫಿ ಕುಡಿಯಲು ನಾನು ಮುಹೂರ್ತ ನೋಡುವವನೇ ಅಲ್ಲ. ಗೌಡರ ಜೊತೆ ಮಟ ಮಟ ಮದ್ಯಾಹ್ನ ಬಿಸಿ ಬಿಸಿ ಕಾಫಿ ಹೀರಿ ವಿದಾಯ ಹೇಳಿ ಬಂದೆ. ಮನಸ್ಯಾಕೋ ಕಾಫಿಯ ಹಿಂದೆಯೇ ಅಲೆಯತೊಡಗಿತು. ಈ ವಿ ಷಯದಲ್ಲಿ ಮಾತ್ರ ನಾನು ' ಕುಡಿಯೋದೆ ನನ್ ವೀಕ್‌ನೆಸ್ಸು' ಅಂತ ಎದೆ ತಟ್ಟಿ ಹೇಳಿಕೊಳ್ಳಲು ಹಿಂದೆ ಮುಂದೆ ನೋಡುವವನಲ್ಲ. ಅಲ್ಲ.. ಇದರಲ್ಲಿ ನಾಚಿಕೆ ಏನು ಬಂತು. ನಮ್ಮ ತಾತ ಮುತ್ತಾತರಾದಿಯಾಗಿ ನಡೆದು ಬಂದಿರೋದು ತಾನೆ ಇದು. ಅವರೆಲ್ಲಾ ಬೆಳಗ್ಗೆ ಎದ್ದೊಡನೆಯೆ ಕಾಫಿಯೆಂಬ ಮಾಯಾಂಗನೆಯನ್ನು ಅರಸಿಕೊಂಡು ಅಡುಗೆ ಮನೆಗೆ ಹೋಗುತ್ತಿದ್ದರು. ನಾವು ಬೆಡ್ಡಲ್ಲೇ ಬಿದ್ದುಕೊಂಡು 'ಕಾಪಿ… ಕಾಫಿ' ಎಂದು ಅರಚುತ್ತಿರುತ್ತೇವೆ, ಅಷ್ಟೇ ವ್ಯತ್ಯಾಸ. ನಮ್ಮ ಅಜ್ಜಿಯಂತೂ ಪೀಪಾಯಿಗಟ್ಟಲೆ ಕಾಫಿ ಕುಡಿದು ಬಾಳಿ ಬದುಕಿದವರು. ಬರೇ ಕುಡಿಯುವುದು ಮಾತ್ರ ಅಲ್ಲ, ಇಡ್ಲಿ ದೋಸೆಗಳಿಗೂ ಸಾಂಬಾರಿನಂತೆ ಸುರಿದುಕೊಳ್ಳುತ್ತಿದ್ದರು. ಬಾಯಾರಿಕೆಯಾದಾಗಲೆಲ್ಲ ನೀರಿಗೆ ಬದಲಾಗಿ ಪಾತ್ರೆಯಲ್ಲಿ ಸದಾ ಸಿದ್ದವಾಗಿರುತ್ತಿದ್ದ ಕೋಲ್ಡ್ ಕಾಫಿ ಹೀರುತ್ತಿದ್ದರು. ಭರ್ತಿ ತೊಂಬತ್ತು ವರ್ಷ ಹಾಯಾಗಿ ಬದುಕಿದ ದೊಡ್ಡ ಜೀವ ಅವರದ್ದು. ಕಾಫಿಯಲ್ಲಿರೋ ಕೆಫಿನ್ ಗೆ ಅವರನ್ನೇನೂ ಜಗ್ಗಿಸಲಾಗಿರಲಿಲ್ಲ. ಅಂತಾ ಅಜ್ಜಿಯ ಹಿರೀ ಪುಳ್ಳಿ ನಾನು. ಕೆಫಿನ್‌ಗೆ ಹೆದರುವುದುಂಟೇ? ಪರಂಪರೆಗೇ ಅವಮಾನವಲ್ಲವೇ? ನನಗೆ ಹತ್ತಿದ ಕಾಫಿ ಚಟ ಇಂದು ನಿನ್ನೆಯದಲ್ಲ. ನನ್ನ ಮತ್ತು ಅಜ್ಜಿಯ ನಂಟಿನಷ್ಟೇ ಹಳೆಯದು. ಆಗೆಲ್ಲಾ ಸಕ್ಕರೆ ಕಾಫಿಯ ಜಮಾನ ಸುರುವಾಗಿರಲಿಲ್ಲ. ಏನಿದ್ದರೂ ಬೆಲ್ಲದ ಕಾಫಿಯದ್ದೇ ದರ್ಬಾರು. ಅಜ್ಜಿ ಪ್ರತಿ ನಿತ್ಯ ಬೆಳ್ಳಿ ಮೂಡುವ ಮೊದಲೇ ಎದ್ದು, ಒಲೆಯ ಮೇಲೆ ದೊಡ್ಡ ಕೊಪ್ಪರಿಗೆಯಂತಾ ಪಾತ್ರದ ತುಂಬಾ ನೀರಿಗೆ ಒಂದು ಹೆಡಿಗೆ ಕರಿ ಬೆಲ್ಲ ಹಾಕಿ ಕುದಿಯಲು ಇರಿಸುತ್ತಿದ್ದರು. ಅದು ಕುದಿಯುವವರೆಗೆ ಕಾಫಿ ಹುಡಿ ಹಾಕುವಂತಿರಲಿಲ್ಲ. ಕಾಫಿ ಕುಡಿಯದೆ ಬೇರೇನೂ ಕೆಲಸ ಮಾಡುವ ಕ್ರಮ ಇಲ್ಲವಾಗಿತ್ತು. ಹಾಗಾಗಿ ಒಲೆ ಬುಡದಲ್ಲೆ ಕುಳಿತು, ಬೆಂಕಿಯ ಕಾ"ಗೆ ಮೈಯೊಡ್ಡಿಕೊಂಡು ಕಾಫಿ ಹಂಡೆಯನ್ನೇ ದಿಟ್ಟಿಸಿ ನೋಡುತ್ತಾ, 'ಈಶ ನಿನ್ನ ಚರಣ ಭಜನೆ ಆಸೆಂದ ಮಾಡುವೆನು' ಅಂಬೊ ಕನಕದಾಸರ ಕೀರ್ತನೆಯನ್ನು ಭಕ್ತಿ ಭಾವದಲ್ಲಿ ರಾಗವಾಗಿ ಹೇಳಿಕೊಳ್ಳುತ್ತಿದ್ದರು. ಅದೇನು ಮಾಯವೋ ಕಾಣೆ, ಈ ಹೊತ್ತಿಗೆ ನನಗೆ ಪಳಕ್ಕನೆ ಎಚ್ಚರಿಕೆಯಾಗಿ ಬಿಡುತ್ತಿತ್ತು. ಚುಮು ಚುಮು ಚಳಿಗೆ ಕಂಬಳಿಯಡಿಯಲ್ಲಿ ಗಾಢ ನಿದ್ರೆಯಲ್ಲಿರುತ್ತಿದ್ದ ಅಮ್ಮನ ತೋಳ್ತೆಕ್ಕೆಯಿಂದ ಮೆಲ್ಲನೆ ಬಿಡಿಸಿಕೊಂಡು ಕಣ್ಣು ಹೊಸಕಿಕೊಳ್ಳುತ್ತಾ ಅಡುಗೆ ಮನೆಗೆ ಬಂದು ಅಜ್ಜಿಗೆ ಮೈಯಾನಿಸಿ ಕುಳಿತು ಬಿಡುತ್ತಿದ್ದೆ. ಸ್ವಲ್ಪ ಹೊತ್ತಿಗೆ ನೀರು ಕುದಿಯಲಾರಂಭಿಸಿ, ತಳದಲ್ಲಿ ಇನ್ನೂ ಕರಗದ ಬೆಲ್ಲದ ತುಣುಕುಗಳು ಪಾತ್ರೆಯನ್ನು ಒಳಗಿಂದಲೇ ತಾಳ ಹಾಕಿದಂತೆ ಕುಟ್ಟಲಾರಂಭಿಸುತ್ತಿದ್ದವು. ಈ ವಿಶಿಷ್ಟ ಸ್ವರ ಸಂಯೋಜನೆಯ ಹಿಮ್ಮೇಳದಲ್ಲಿ, ಅಜ್ಜಿಯ ತೋಳ ಸಂದಿನಲ್ಲಿ ತಲೆರಿಸಿ ಬೆಚ್ಚಗೆ ಕುಳಿತಿರುತ್ತಿದ್ದ ನನ್ನ ಕಿವಿಗಳಿಗೆ ದಾಸರ ಭಜನೆ ಈಗಿನ ಡಾಲ್ಬಿ ಸರೌಂಡ್ ಸೌಂಡ್ ಸಿಸ್ಟಮಿನಲ್ಲಿ ಕೇಳಿದಂತಾಗುತ್ತಿತ್ತು. ಬೆಲ್ಲದ ಥಕ ಥೈ ಶಬ್ದ ನಿಲ್ಲುವಾಗ ಕಾಫಿ ಹುಡಿ ಹಾಕುವ ಮಹೂರ್ತ ಸನ್ನಿಹಿತವಾಯಿತೆಂದೇ ಅರ್ಥ. ಇನ್ನು ಅಜ್ಜಿಯೊಂದಿಗೆ ಕಣ್ಣು ಮುಚ್ಚಿಕೊಂಡು ಸೊರ್ ಬರ್ ಎಂದು ಶಬ್ದ ಮಾಡುತ್ತಾ ಬಿಸಿ ಬಿಸಿ ಕಾಫಿಯನ್ನು ಹೀರುವುದಕ್ಕೆ ಹೆಚ್ಚು ಕಾಯಬೇಕಿಲ್ಲ. ಅಷ್ಟರಲ್ಲಿ ನನ್ನನ್ನು ಆಚೆ ದೂಡಿ, 'ಹೋಗು ಹಲ್ಲುಜ್ಜಿ ಮುಖ ತೊಳೆದುಕೊಂಡು ಬಾ, ಇಲ್ಲದಿದ್ರೆ ಕಾಫಿ ಇಲ್ಲ' ಎಂಬ ಆರ್ಡರ್ ಹೊರಡಿಸುತ್ತಿದ್ದರು. . ಕೊರೆವ ಚಳಿಯಲ್ಲಿ, ಮನೆಯಿಂದ ಹೊರಗಿದ್ದ ಬಚ್ಚಲಿನವರೆಗೆ ಹೋಗಿ ಹಲ್ಲು ತಿಕ್ಕುವ ಶಿಕ್ಷೆ ಯಾರಿಗೆ ಬೇಕು? ಇನ್ನೂ ಕತ್ತಲು ಇರುತ್ತಿದ್ದದ್ದರಿಂದ ಭೂತ ಪಿಶಾಚಿಗಳ ಭಯ ಒಂದು ಕಡೆ. ಹಾಗಂತ ಸುಮ್ಮನಿದ್ದರೆ ಕಾಫಿ ದಕ್ಕುತ್ತಿರಲಿಲ್ಲ. ಹೀಗಿರುವಾಗ ಬಾಯಲ್ಲಿ ಶಾಸ್ತ್ರಕ್ಕಾದರೂ ಒಂದೂ ಹಲ್ಲಿಲ್ಲದ ಅಜ್ಜಿ ಎಷ್ಟು ಪುಣ್ಯವಂತೆ ಎಂದು ನನಗನಿಸುತ್ತಿದ್ದುದರಲ್ಲಿ ಏನು ತಪ್ಪಿದೆ? ಮನಸ್ಸಿಲ್ಲದ ಮನಸ್ಸಿನಲ್ಲಿ ಅಜ್ಜಿಯ ಆಜ್ಞೆಯನ್ನು ಪಾಲಿಸಿ, ಕಹಿ ಮಿಶ್ರಿತ ಸಿಹಿಯ ಅಮೃತ ಸಮಾನವಾದ ಆ ಪೇಯವನ್ನು ಕುಡಿದು ಏನೂ ಅರಿಯದವನಂತೆ ಸದ್ದು ಮಾಡದೆ ಅಮ್ಮನ ಬಳಿ ಹೋಗಿ ಮತ್ತೆ ಮಲಗಿಕೊಳ್ಳುತ್ತಿದ್ದೆ. ಕಾಫಿಯ ರುಚಿ ಇನ್ನೂ ನಾಲಗೆಯಲ್ಲಿ ಇರುವಾಗಲೇ ಅದೆಲ್ಲಿಂದ ನಿದ್ದೆ ಬರುತ್ತಿತ್ತೋ ಏನೋ! ಮತ್ತೆ ಕನಸುಗಳ ಸರಮಾಲೆ ಬಿಚ್ಚಿಕೊಳ್ಳುತ್ತಿತ್ತು. ಒಂದು ದಿನವಂತೂ ಕನಸೋ ನನಸೋ ಎಂದು ಹೇಳಲಾರದಷ್ಟು ನಿಚ್ಚಳವಾಗಿ ಒಂದು ದಿವ್ಯ ಅನುಭೂತಿಯಾಗಿತ್ತು. ಬೆಳ್ಳಿ ಬೆಟ್ಟದ ಶಿವನ ಮನೆ ಮುಂದೆ ರೇಷನ್ ಅಂಗಡಿಯ ಮುಂದೆ ಇರುವಂತೆ ಒಂದು ಸರತಿಯ ಸಾಲು. ಸಾಲಿನಲ್ಲಿ ಯಾರ್ಯಾರು ನಿಂತಿದ್ದಾರೆ ಎಂದು ನೋಡಿದರೆ, ಚಿತ್ರ ವಿಚಿತ್ರ ಆಯುಧಗಳನ್ನು ಬಗಲಲ್ಲಿ ಸಿಕ್ಕಿಸಿಕೊಂಡು ಕೈಯ್ಯಲ್ಲಿ ಸಾಸರ್ ಅನ್ನು ಹೋಲುವಂತಹ ಬಟ್ಟಲುಗಳನ್ನು ಹಿಡಿದ ಶಿವ ಗಣಗಳು. ಅಷುತೋಷ್ ಮಹರಾಜ್ ಕಿ ಜೈ, ಸುಬ್ಬಮ್ಮಾ ಕಿ ಜೈ ಎಂಬ ಜೈಕಾರಗಳು ಮುಗಿಲು ಮುಟ್ಟುತ್ತಿವೆ. ಅರೆ..!! ಸುಬ್ಬಮ್ಮ ನನ್ನ ಅಜ್ಜಿಯಲ್ಲವೇ!? ಅಚ್ಚರಿಂದ ಸರತಿಯ ಸಾಲಿನ ಮುಂಭಾಗಕ್ಕೆ ಕಣ್ಣು ಹಾಯಿಸಿದರೆ ಅಲ್ಲಿ ಸಾಕ್ಷಾತ್ ನನ್ನ ಅಜ್ಜಿ ಹಣೆಯ ಮೇಲೆ ನೀಟಾಗಿ ಮೂರು ಗೆರೆ ವಿಭೂತಿ ಬಳಿದುಕೊಂಡು, ನಡುವೆ ಕಾಸಗಲದ ಕುಂಕುಮದ ಬೊಟ್ಟನ್ನಿಟ್ಟುಕೊಂಡು ದಿವ್ಯ ಮಂದಹಾಸವನ್ನು ಬೀರುತ್ತಿದ್ದಾರೆ!! ಏನಾಶ್ಚರ್ಯ! ಒಬ್ಬರ ಹಿಂದೆ ಒಬ್ಬರಂತೆ ಶಿವ ಗಣಗಳೊಂದಿಗೆ ದೇವಾನುದೇವತೆಗಳು ಸಹಾ ಅಜ್ಜಿಯ ಕೈಂದ ಬೆಳ್ಳಿಯ ಸೌಟಿನಲ್ಲಿ ಹಬೆಯಾಡುತ್ತಿರುವ ಕಾಫಿಯನ್ನು ಸ್ವೀಕರಿಸುತ್ತಿದ್ದಾರೆ! ಇನ್ನೊಂದು ಬದಿಯಲ್ಲಾಗಲೇ ಗಣಪತಿ ಚಾ"ಯು ತನ್ನ ಸೊಂಡಿಲನ್ನು ಸ್ಟ್ರಾದಂತೆ ಬಳಸಿಕೊಂಡು ವಿನೋದ ಭಾವದಲ್ಲಿ ಕಾಪಿ ಹೀರುತ್ತಿದ್ದಾನೆ. ಆಗ ಅವನ ತಮ್ಮ ಸುಬ್ರಮಣ್ಯ ನಾನೇನು ಕಮ್ಮಿ ಅನ್ನುವ ಹಾಗೆ ತನ್ನ ಈಟಿಯ ಅಲಗನ್ನು ತಿರುಗಣೆ ತಿರುಗಿಸಿದಂತೆ ಬಿಚ್ಚಿ ಬದಿಗಿಟ್ಟು ಸ್ಟ್ರಾದಂತೆ ಮಾಡಿಕೊಂಡ. ನನಗೆ ಸುಬ್ರಮಣ್ಯನ ಉಪಾಯ ಇಷ್ಟವಾಗಿ ಜೋರಾಗಿ ಚಪ್ಪಾಳೆ ತಟ್ಟಿದೆ. ಆದರೆ ಅದು ಅವರಿಗೆ ಕೇಳಿಸಲೇ ಇಲ್ಲ! ನಿಧಾನಕ್ಕೊಮ್ಮೆ ಒಂದು ಸುತ್ತು ತಿರುಗಿ ಬಂದೆ. ಯಾರೂ ನನ್ನನ್ನು 'ಕ್ಯಾರೇ' ಅನ್ನಲಿಲ್ಲ! ಅಯ್ಯೋ..ಸಕಲವನ್ನೂ ಬಲ್ಲವನಾದ ಮಹಾದೇವ ಶಿವನಿಗೇ ನಾನಿಲ್ಲಿರುವುದು ಗೊತ್ತಾಗಿರಲಿಲ್ಲ. ಯಾಕೋ ದುಃಖ ಒತ್ತರಿಸಿಕೊಂಡು ಬಂದು ಅಜ್ಜಿಯ ಕಡೆಗೆ ಓಡಿ ಅವರ ಕಾಲುಗಳನ್ನು ತಬ್ಬಿಕೊಂಡು ಜೋತು ಬಿದ್ದೆ. ಅಜ್ಜಿ ಮಿಸುಕಾಡಲಿಲ್ಲ. ಈಗಷ್ಟೆ ಅಡುಗೆ ಮನೆಯಲ್ಲಿ ಒಲೆಯ ಮುಂದೆ ಕುಕ್ಕರುಗಾಲಿನಲ್ಲಿ ಕೂತಿದ್ದ ಅಜ್ಜಿ ನನಗೆ ಹೇಳದೆ ಇಲ್ಲಿಗೆ ಬಂದದ್ದೂ ಅಲ್ಲದೆ, ಈಗ ನನ್ನನ್ನು ಪರಿಚಯವಿಲ್ಲದಂತೆ ಮಾಡುತ್ತಿರುವುದು ಅತಿ ದೊಡ್ಡ ಮೋಸವೆಂದೆನಿಸಿ ಜೋರಾಗಿ ಅಳುವುದಕ್ಕೆ ಸುರು ಮಾಡಿದೆ. ಅಜ್ಜಿಗೆ ಕರುಣೆ ಬಂತೋ ಏನೋ! ನನ್ನನ್ನು ಎದೆಗೊತ್ತಿಕೊಂಡು ಏನಾಯ್ತು ಪುಟ್ಟಪ್ಪ.. ಏನಾಯ್ತು ರಾಜ ಅಂತೆಲ್ಲಾ ಮುದ್ದಿನಿಂದ ಕೇಳಲು ತೊಡಗಿದರು. ಅರೆ ಅಜ್ಜಿ ಈಗ ಮಾತಾಡ್ತಾ ಇದ್ದಾರೆ! ಹಾಗಾದ್ರೆ ಈಗ ದೇವರುಗಳೆಲ್ಲಾ ನನ್ನೊಂದಿಗೆ ಮಾತಾಡುವರೋ ಎನೋ ಅಂದುಕೊಂಡು ಹಿಂದೆ ತಿರುಗಿ ನೋಡಿದರೆ ಆಲ್ಲಿ ನಮ್ಮ ದೇವರ ಕೋಣೆಯಲ್ಲಿ ತೂಗು ಹಾಕಿದ್ದ ಶಿವ ,ಪಾರ್ವತಿ , ಗಣಪತಿ ಇವರ ಚಿತ್ರ ಪಟಗಳು ಮಾತ್ರ ಕಾಣಬೇಕೆ ! ಛೆ.. ಹಾಗಾದರೆ ನಾನೆಲ್ಲಿದ್ದೇನೆಂದು ಮೆಲ್ಲನೆ ಕಣ್ಣು ಹೊಸಕಿಕೊಂಡು ನೋಡಿದರೆ ಅಮ್ಮ ಎದ್ದು ಹೋದ ಖಾಲೀ ಹಾಸಿಗೆಯಲ್ಲಿ ನಾನೊಬ್ಬನೇ ಇದ್ದೆ. ನನ್ನನ್ನು ಪ್ರೀತಿಂದ ದಿಟ್ಟಿಸಿ ನೋಡುತ್ತಿದ್ದ ಅಜ್ಜಿಯ ಮುಖದಲ್ಲಿದೊಡ್ಡ ನಾಮದ ವಿಭೂತಿಯೂ ಇಲ್ಲ,ಕಾಸಗಲದ ಕುಂಕುಮವೂ ಇಲ್ಲ! ನಾನು ಸಂದೇಹಭರಿತ ಸ್ವರದಲ್ಲಿ ಅಜ್ಜಿಯನ್ನು ಕೇಳಿದೆ , 'ಕೈಲಾಸದಲ್ಲಿ ಈಗಷ್ಟೆ ಕಾಫಿ ಹಂಚುತ್ತಿದ್ದದ್ದು ನೀವೆ ತಾನೆ?!' ಅಜ್ಜಿ ನಗುತ್ತಾ, 'ನಿನಗೆಲ್ಲೋ ಕನಸು! ಸಧ್ಯಕ್ಕೆ ನಿಮ್ಮಜ್ಜನ ಮನೆಯೇ ನನಗೆ ಕೈಲಾಸ. ಇದನ್ನು ಬಿಟ್ಟು ಇನ್ಯಾವ ಕೈಲಾಸಕ್ಕೆ ಹೋಗಲಿ! ಹಾಗೊಂದು ವೇಳೆ ಹೋದರೂ, ನಿನಗೆ ಯಾರು ಕಾಫಿ ಮಾಡಿ ಕೊಡುವುದು!? ಸಾಕ್ಷಾತ್ ಶಿವನೇ ಬಂದು ಕರೆದರೂ ನಾನು ನನ್ನ ಪುಟ್ಟುವನ್ನು ಬಿಟ್ಟು ಹೋಗೋಲ್ಲ' ಅಂತ ಹೇಳುತ್ತಾ ಅಜ್ಜಿ ನನ್ನ ಕೈಯ್ಯಲ್ಲಿ ಕಾಫಿಯ ಗ್ಲಾಸನ್ನಿರಿಸಿದ್ದು ಈಗಲೂ ನೆನಪಿದೆ. ಹೀಗೆ ಅಜ್ಜಿ ಮಾಡುತ್ತಿದ್ದ ಬೆಲ್ಲದ ಕಾಪಿ ನನಗೆ ಚಿಕ್ಕ ವಯಸ್ಸಿನಲ್ಲೇ ಕೈಲಾಸ ದರ್ಶನವನ್ನೂ ಮಾಡಿಸಿ ಬಿಟ್ಟಿತ್ತು. ಅಂದ ಹಾಗೆ ನಸುಕಿನ ನಮ್ಮ ಕಾಫಿ ಸಮರಾಧನೆ ಸಾಂಗೋಪಸಾಂಗವಾಗಿ ನಡೆಯುತ್ತಿತ್ತು ಅಂತ ನಾನು ತಪ್ಪು ಮಾಹಿತಿ ಕೊಡುವುದಿಲ್ಲ. ಕೆಲವೊಮ್ಮೆ ಪರಮಾನಂದವನ್ನನುಭವಿಸುತ್ತಾ ಕಣ್ಣು ಮುಚ್ಚಿ ಕಾಫಿ ಹೀರುತ್ತಿರುವಾಗ, ಅದೆಲ್ಲಿಂದಲೋ ದುತ್ತನೆ ಪ್ರತ್ಯಕ್ಷವಾಗುತ್ತಿದ್ದ ನನ್ನಮ್ಮ ಲೋಟವನ್ನು ಕಸಿದುಕೊಂಡು ಬದಲಿಗೆ ಸಪ್ಪೆ ಹಾಲಿನ ಲೋಟವನ್ನು ಕೈಗೆ ಹಿಡಿಸುತ್ತಿದ್ದರು. ನಾನು ವರುಣಾಸ್ತ್ರವನ್ನು ಬಳಸಿ ಅಮ್ಮನನ್ನು ಸೋಲಿಸಿ ಕಾಫಿಯ ಲೋಟವನ್ನು ಮತ್ತೆ ಪಡೆಯುತ್ತಿದ್ದೆ. ಒಮ್ಮೊಮ್ಮೆ ಮುಸ್ಸಂಜೆ ಹೊತ್ತಿನಲ್ಲಿ ಅಜ್ಜಿಯ ಬಾಯಿಯಿಂದ ಕಥೆ ಕೇಳುತ್ತಾ ಕುಳಿತಿರುವಾಗ, ಒಳ್ಳೆ ಆಸಕ್ತಿಕರ ಘಟ್ಟದಲ್ಲೇ ಅಜ್ಜಿಗೆ ಗಂಟಲು ಗರ ಗರ ಎನ್ನಲು ತೊಡಗುತ್ತಿತ್ತು. ಆಗೆಲ್ಲಾ ನಾನು ಅಮ್ಮನಿಗೆ ದಂಬಾಲು ಬಿದ್ದು ಅಜ್ಜಿಗೆ ಕಾಫಿ ಮಾಡಿಸಿ ಕೊಡುತ್ತಿದ್ದೆ. ಇದರಿಂದ ಅಜ್ಜಿಯ ಕತೆಗಳಲ್ಲಿ ಧೈರ್ಯವನ್ನಷ್ಟೇ ಬಂಡವಾಳವಾಗಿಟ್ಟುಕೊಂಡು ಮೂರು ಲೋಕಗಳನ್ನು ಜೈಸುತ್ತಿದ್ದ ವೀರರು ಹಾಗೂ ಸಾಧಾರಣ ರೂಪಿನ ಹುಡುಗರನ್ನು ಕೇವಲ ಗುಣದ ಆಧಾರದ ಮೇಲೆ ಮೆಚ್ಚಿ ವರಿಸುತ್ತಿದ್ದ ಸುಂದರ ರಾಜಕುಮಾರಿಯರು ಕಥೆಯ ಕಟ್ಟಿನಿಂದ ಜಾರಿ ಹೋಗುತ್ತಿರಲಿಲ್ಲ. ಅಲ್ಲದೆ ಅಜ್ಜಿಯ ಗಂಟಲು ರಿಪೇರಿಯ ನೆಪದಲ್ಲಿ ನನ್ನ ಗಂಟಲೂ ಕಾಫಿಂದ ನೆನೆದು ಧನ್ಯವಾಗುತ್ತಿತ್ತು. ನಿಮ್ಮಲ್ಲಿ ಹಲವರೀಗ, ಏನು ಮಹಾ ! ನಾವು ಕಾಣದ ಕಾಫಿಯೇ ಅಂತ ಅಂದುಕೊಳ್ಳುತ್ತಿರ ಬಹುದು. ಕ್ಷಮಿಸಿ, ನಿಖರವಾಗಿ ಹಾಗೂ ನಿರ್ಧಿಷ್ಟವಾಗಿ ಇಲ್ಲಿಯೇ ನಿಮ್ಮನ್ನು ತಿದ್ದಲು ಬಯಸುತ್ತೇನೆ. ಇದು ನೀವು ಪ್ರತಿನಿತ್ಯ ಕುಡಿಯುವ ಸಕ್ಕರೆ ಕಾಫಿ ಅಲ್ಲ. ಅಥವಾ ಯಾವುದೊ ಬಲವಾದ ಕಾರಣಕ್ಕೆ ಕಟ್ಟು ಬಿದ್ದು ಕಾಫಿ ಡೇಯಲ್ಲಿ ಕುಡಿಯುವ ದುಬಾರಿ ಎಸ್ಪ್ರೆಸ್ಸೋ ಕಾಫಿಯೂ ಅಲ್ಲ. ಇದು ಸಾಧಾರಣ ಕರಿ ಬೆಲ್ಲದ ಕಾಫಿ. ಒಮ್ಮೆ ಮಾಡಿ ಕುಡಿದು ನೋಡಿ. ನೀವು ಅದರ ರುಚಿಯನ್ನು ಪ್ರಶಂಶಿಸದೇ ಇರಲು ಸಾಧ್ಯವಿಲ್ಲ. ಕರಿ ಕಾಫಿ ಕುಡಿಯಲು ಮನಸ್ಸಿಲ್ಲದವರು ಸ್ವಲ್ಪ ಹಾಲು ಬೆರೆಸಿಕೊಳ್ಳಿ, ನನ್ನದೇನೂ ಅಭ್ಯಂತರವಿಲ್ಲ. ಇದರ ರುಚಿ ನಿಮ್ಮೊಳಗೆ ತಣ್ಣಗೆ ಮಲಗಿರುವ ವ್ಯಾಪಾರಿಯನ್ನು ಬಡಿದೆಬ್ಬಿಸಲೂ ಸಾಕು. ಮುಂದೊಂದು ದಿನ ನೀವು ಕಾಫಿ ಡೇಯನ್ನು ಮೀರಿಸುವಂತಹ, ಅಪ್ಪಟ ದೇಸೀ ಶೈಲಿಯ, ಬೆಲ್ಲದ ಕಾಫಿಯ ಸರಣಿ ಅಂಗಡಿಗಳ ಯಶಸ್ವೀ ಮಾಲಿಕರೂ ಆಗಬಹುದು. ಹಾಗೇನಾದರೂ ಆದ ಪಕ್ಷದಲ್ಲಿ ದಯವಿಟ್ಟು ನನಗೆ ರಾಯಲ್ಟೀ ಕಳುಹಿಸಲು ಮರೆಯದಿರಿ.]]> ← ಹಿಂದಿನದು: ಸಪ್ತಕ ಮುಂದಿನದು: ನಿಷೇಧ ಸಂಸ್ಕೃತಿ ಪೊಲೀಸರ ಇತ್ತೀಚಿನ ವರಸೆ! → Veena Bhat on May 6, 2012 at 12:33 PM ಮಕ್ಕಳಿಗೆ ಬೆಲ್ಲದ ನೀರು ..ದೊಡ್ಡವರಿಗೆ ಮಾತ್ರ ಕಾಫಿ ಇತ್ತು ಆವಾಗ …:) ಕಾಫಿಯ ಸಿಹಿ ಕಹಿ ನೆನಪುಗಳು….:) ಆತ್ಮೀಯ ಬರಹ … Anitha Naresh Manchi on May 6, 2012 at 1:12 PM ಒಳ್ಳೇ ಕಾಫೀ.. ಬಿಸಿಯಾಗಿದೆ.. 🙂 ಈಶ್ವರ ಕಿರಣ on May 6, 2012 at 2:34 PM ಆಹಾ ಚೆನ್ನಾಗಿದೆ 🙂 ಒಳ್ಳೆ ಬರಹ 🙂 suguna on May 6, 2012 at 3:05 PM ಬೆಲ್ಲದ ಕಾಫಿ ನಾವು ಕುಡಿದಿದ್ದೇವೆ ನಮ್ಮ ಅಜ್ಜಿ ಮನೆಯಲ್ಲಿ ಮಾಡುತ್ತಲಿದ್ದರು… ತುಂಬಾ ಚೆನ್ನಾಗಿರುತ್ತೆ. ಅಂದಹಾಗೆ ನಿಮ್ಮ ನೆನಪಿನ ಕಾಫಿ ತಣ್ಣಗೇ ಹಾಗಿಲ್ಲ ನೋಡಿ ಇನ್ನೂ ಬಿಸಿಬಿಸಿಯಾಗಿದೆ. D.RAVI VARMA on May 6, 2012 at 4:00 PM ನಮ್ಮ ಬದುಕಿನ ಬಾಲ್ಯದ ಸುಖ, ಆ palavattada ಬದುಕು , ಆ ಕಥೆಗಳು, ಆ ಆಟಗಳು, ಎಲ್ಲವಿಂದ ಈ ಮಕ್ಕಳು ವಂಚಿತರಗುತಿದ್ದರಲ್ಲ, ಅನ್ನೋದೇ ಕೊರಗು ,ನಿಮ್ಮ ಸ್ವದಿಸ್ತ ಕಾಫ್ಫೀಯನ್ನು ನಾನು ತುಂಬಾ enjoymaadide ನಾನು ತಿತ್ಲೇ ನೋಡಿ ಏನೋ ಗುಂಡಿನ ಬಗ್ಗೆ ಬರೆದಿದ್ದೆರಿ ಅಂತಾ ತುಂಬಾ ಕುತೂಹಲದಿಂದ ಓದಿದೆ, ಅದು ನಮ್ಮಜ್ಜಿ ಕಥೆನೇ ನಾನಾಗ ದೊಡ್ಡ cupnalle ಕಾಫಿ ಕೇಳ್ತಿದ್ದೆ,, ಸ್ವಲ್ಪ ನೆಗಡಿ ಬಂದ್ರೆ ನಮ್ಮಮ್ಮ ಸೊಂಟಿ ಕಾಫಿ ಮಾಡಿಕೊದುತಿದ್ದಳು, ಕುಡಿಯೋದು ಸ್ವಲ್ಪ ಕಸ್ತವಗ್ತಾ ಇತ್ತು kududmele ಆ ನೆಗಡಿ,ಕೆಮ್ಮು ಓದಿಹೊಗಿರ್ತಿತ್ತು ಯಾವಾಗ್ಲಾದ್ರು ಬೆಲ್ಲದ ಕಾಫ್ಫೆ ಕುಡಿಯೋ ಆಶೆ ಆಗ್ತಿದೆ ,ಆದ್ರೆ…………. ರವಿ ವರ್ಮ hosapete Swarna on May 7, 2012 at 3:19 PM ಈಗ ಕರಿಬೆಲ್ಲ ಹುಡುಕ ಬೇಕು 🙂 Ashoka Bhagamandala on May 9, 2012 at 11:10 PM ಓದಿದ ಮತ್ತು ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. Murali Krishna Maddikeri on May 13, 2012 at 8:56 PM ಹಾಸ್ಯ, ನೆನಪು, ಬಾಲ್ಯ ಇತ್ಯಾದಿ ನಮ್ಮ ಆಪ್ತ ವಿಷಯಗಳನ್ನ ಕಾಫಿ ಎನ್ನುವ ದಾರದಿಂದ ಪೋಣಿಸಿ ಸುಂದರವಾದ ಹೂಮಾಲೆಯನ್ನ ಕಟ್ಟಿದ್ದೀರಿ ಅಶೋಕ.. ಹೂವಿನ ಸೌಂದರ್ಯ, ಕೋಮಲತೆ ಮತ್ತು ಕಾಫಿಯ ವಿಶಿಷ್ಟ ಸುವಾಸನೆಯಿಂದ ಕೂಡಿದ ನಿಮ್ಮ ಈ ಲೇಖನ ತುಂಬಾ ಖುಷಿ ಕೊಟ್ಟಿತು.. ಬಾಲ್ಯದ ನೆನಪುಗಳನ್ನೂ ತಂದಿತು.. ಪದವಿಯ ಮೊದಲನೇ ವರ್ಷಕ್ಕೆ ಕಾಲಿಡುವವರೆಗೂ ಕಾಫಿಯನ್ನೇ ನಾನು ಕುಡಿದಿರಲಿಲ್ಲ.. ಆದರೆ ಮೈಸೂರಿನ ಕಾಫಿ ಪ್ರಿಯ ಸ್ನೇಹಿತರು ಮತ್ತು ಸ್ಥಳೀಯ ಸ್ನೇಹಿತರು ಮತ್ತು ಕುಟುಂಬಗಳಿಂದ ಕಾಫಿಯ ನಶೆ ಏರಿಸಿಕೊಂದುಬಿಟ್ಟೆ.. 🙂 ಸಂತೋಷ ಹಂಚಿಕೊಂಡಿದ್ದಕ್ಕೆ ಧನ್ಯವಾದ..
2021/01/17 07:01:32
https://avadhimag.com/%E0%B2%95%E0%B3%81%E0%B2%A1%E0%B2%BF%E0%B2%AF%E0%B3%8B%E0%B2%A6%E0%B3%87-%E0%B2%A8%E0%B2%A8%E0%B3%8D-%E0%B2%B5%E0%B3%80%E0%B2%95%E0%B3%8D%E0%B2%A8%E0%B3%86%E0%B2%B8%E0%B3%8D%E0%B2%B8%E0%B3%82/?replytocom=21075
mC4
ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು | Prajavani ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಆಮಿಷವೊಡ್ಡಿದ ಆರೋಪ ಬೆಂಗಳೂರು: ಬಿಜೆಪಿಗೆ ಅಗತ್ಯ ಸಂಖ್ಯೆಯ ಶಾಸಕರಿಲ್ಲದಿದ್ದರೂ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿ, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರಿಗೆ ಹಣದ ಆಮಿಷವೊಡ್ಡಿದ್ದರು ಎಂದು ಆರೋಪಿಸಿ 'ಭ್ರಷ್ಟಾಚಾರ ನಿಗ್ರಹ ದಳ'ಕ್ಕೆ (ಎಸಿಬಿ) ದೂರು ಕೊಡಲಾಗಿದೆ. ರಾಜ್ಯ ಕಾಂಗ್ರೆಸ್‌ ಕಾನೂನು ವಿಭಾಗದ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ಅವರು ಎಸಿಬಿಗೆ ಕೊಟ್ಟಿರುವ ಮೂರು ಪುಟಗಳ ದೂರಿನಲ್ಲಿ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ, ಬಿ.ವೈ. ವಿಜಯೇಂದ್ರ, ಶಾಸಕರಾದ ಶ್ರೀರಾಮುಲು, ಬಿ.ಜೆ. ಪುಟ್ಟಸ್ವಾಮಿ ಅವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ನಡೆದ ರಾಜಕೀಯ ಬೆಳವಣಿಗೆಯನ್ನು ದೂರಿನಲ್ಲಿ ವಿವರಿಸಲಾಗಿದೆ. ಈ ಆರೋಪಕ್ಕೆ ಪೂರಕವಾಗಿ ಬಿಜೆಪಿ ನಾಯಕರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾದ ಧ್ವನಿಮುದ್ರಿಕೆಗಳನ್ನು ಲಗತ್ತಿಸಲಾಗಿದೆ. ಯಡಿಯೂರಪ್ಪ ವಿಧಾನಸಭೆಯಲ್ಲಿ ಮೇ 19ರಂದು ಬಹುಮತ ಸಾಬೀತುಪಡಿಸುವ ಉದ್ದೇಶದಿಂದ ಶಾಸಕರಿಗೆ ಕೊಡುವುದಕ್ಕಾಗಿ ಭಾರಿ ಪ್ರಮಾಣದ ಹಣವನ್ನು ತಮ್ಮ ಪಕ್ಷದ ಮುಖಂಡರಿಗೆ ನೀಡಿದ್ದರು ಎಂದೂ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. 'ವಿಧಾನಸಭೆಯಲ್ಲಿ ವಿಶ್ವಾಸ ಮತದ ನಿರ್ಣಯ ಮಂಡಿಸಿ ಮಾತನಾಡಿದ ಸಮಯದಲ್ಲಿ, ಕೆಲವು ಶಾಸಕರ ಜೊತೆ ತಾವು ಮಾತನಾಡಿದ್ದು ನಿಜ ಎಂದು ಸ್ವತಃ ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಅವರ ಹೇಳಿಕೆಯೇ ನಮ್ಮ ಆರೋಪಕ್ಕೆ ಸಾಂದರ್ಭಿಕ ಸಾಕ್ಷ್ಯ ಒದಗಿಸಿದೆ' ಎಂದು ಸೂರ್ಯ ಮುಕುಂದರಾಜ್‌ ವಿವರಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಪಿತೂರಿ ಹಾಗೂ ಏಕ ಉದ್ದೇಶದಿಂದ ಕೂಟ ಕಟ್ಟಿದ ಆರೋಪದ ಮೇಲೆ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಿಸುವಂತೆ ಹೇಳಲಾಗಿದೆ. ಮೇ 17ರಂದು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಮೇ 19ರಂದು ವಿಶ್ವಾಸ ಮತ ಯಾಚಿಸಿ ನಿರ್ಣಯ ಮಂಡಿಸಿದ್ದರು. ಆದರೆ, ಈ ನಿರ್ಣಯವನ್ನು ಮತಕ್ಕೆ ಹಾಕುವ ಮೊದಲೇ ರಾಜೀನಾಮೆ ಪ್ರಕಟಿಸಿದರು.
2019/01/16 04:35:42
https://www.prajavani.net/news/article/2018/05/24/574919.html
mC4
ಪೊಲೀಸ್‌ ಇಲಾಖೆಯಿಂದ ನಗರದ ಮೂರು: ಕುದುರೆ ಕಟ್ಟುವ ಮನೆಯೇ ವಸತಿಗೃಹ! - a horse-making house lodge | Vijaya Karnataka a horse-making house lodge ಕುದುರೆ ಕಟ್ಟುವ ಮನೆಯೇ ವಸತಿಗೃಹ! ಬಸವರಾಜ ಸರೂರ ರಾಣೇಬೆನ್ನೂರ: ಪೊಲೀಸ್‌ ಇಲಾಖೆಯಿಂದ ನಗರದ ಮೂರು ಕಡೆ ಪೊಲೀಸ್‌ ವಸತಿ ಗೃಹಗಳಿದ್ದು ಆ ಪೈಕಿ ಕಳೆದ ವರ್ಷ ನಿರ್ಮಿಸಲಾದ ವಸತಿ ಗೃಹಗಳು ಮಾತ್ರ ಉತ್ತಮ ಸ್ಥಿತಿಯಲ್ಲಿವೆ. ರೇಲ್ವೆ ಸ್ಟೇಷನ್‌ ರಸ್ತೆಯಲ್ಲಿಬ್ರಿಟಿಷರ ಕಾಲದಲ್ಲಿಕುದುರೆಗಳನ್ನು ಕಟ್ಟಲು ಬಳಸಲಾಗುತ್ತಿದ್ದ ಕಟ್ಟಡಗಳನ್ನೇ ಪೊಲೀಸ್‌ ವಸತಿ ಗೃಹಗಳನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿ28 ಮನೆಗಳಿದ್ದರೂ 10 ಮನೆಗಳಲ್ಲಿಮಾತ್ರ ಪೊಲೀಸ್‌ ಕುಟುಂಬ ತಮ್ಮ ಸ್ವಂತ ಖರ್ಚಿನಲ್ಲಿತಕ್ಕಮಟ್ಟಿಗೆ ದುರಸ್ತಿ ಮಾಡಿಸಿಕೊಂಡು ವಾಸವಾಗಿವೆ. 2008-09 ರಲ್ಲಿಒಂದು ಬಾರಿ ಅವುಗಳ ಹೆಂಚುಗಳನ್ನು ರಿಪೇರಿ ಮಾಡಿಸಿದ್ದನ್ನು ಬಿಟ್ಟರೆ ಮತ್ತೆ ರಿಪೇರಿ ಭಾಗ್ಯ ಇಲ್ಲವಾಗಿದೆ. ಈ ಕಾಮಗಾರಿಯೂ ಕಳಪೆಯಾಗಿತ್ತು ಎನ್ನುವುದು ಸಿಬ್ಬಂದಿ ಆರೋಪವಾಗಿದೆ. ನಂತರ ಇಲಾಖೆ ವತಿಯಿಂದ ಅವುಗಳನ್ನು ಕೆಡವಲು ಪತ್ರ ಬರೆಯಲಾಗಿದ್ದರೂ ಲೋಕೋಪಯೋಗಿ ಇಲಾಖೆಯಿಂದ ಪರವಾನಗಿ ಸಿಕ್ಕಿಲ್ಲ. ಇಲ್ಲಿನ ಮನೆಗಳಿಗೆ ಬೋರ್‌ವೆಲ್‌ ನೀರು ಪೂರೈಸಲಾಗುತ್ತಿದ್ದು ನದಿ ನೀರು ಇಲ್ಲವಾಗಿದೆ. ಇನ್ನು ಮಾರುತಿನಗರದಲ್ಲಿ7 ವಸತಿಗೃಹಗಳನ್ನು 2005ರಲ್ಲಿನಿರ್ಮಿಸಲಾಗಿದ್ದು, ಇದ್ದುದರಲ್ಲಿತಕ್ಕಮಟ್ಟಿಗೆ ಯೋಗ್ಯವಾಗಿವೆ. ನದಿ ನೀರು ಪೂರೈಕೆಯಿದೆ. ಆದರೆ ಕೆಲ ಮನೆಗಳು ಮಳೆಗಾಲದಲ್ಲಿಸೋರುತ್ತವೆ. 2018ರಲ್ಲಿನಿರ್ಮಾಣಗೊಂಡ ಶ್ರೀರಾಮನಗರದ ಮನೆಗಳು ಉತ್ತಮವಾಗಿವೆ. ಇಲ್ಲಿಎರಡು ಬೆಡ್‌ರೂಮ್‌, ಹಾಲ್‌, ಅಡುಗೆಮನೆ ಹೊಂದಿರುವ 24 ಮನೆಗಳನ್ನು ಎರಡು ಅಂತಸ್ತುಗಳಲ್ಲಿನಿರ್ಮಿಸಲಾಗಿದೆ. ಇಲ್ಲಿಬೋರ್‌ವೆಲ್‌ ನೀರಿನ ಪೂರೈಕೆಯಿದ್ದು ನದಿ ನೀರಿನ ಪೂರೈಕೆಯಿಲ್ಲ. Web Title a horse making house lodge Keywords:ವಸತಿ ಗೃಹಗಳು ಮಾತ್ರ ಉತ್ತಮ ಸ್ಥಿತಿಯಲ್ಲಿವೆ|ರಾಣೇಬೆನ್ನೂರ|ಪೊಲೀಸ್‌ ಇಲಾಖೆಯಿಂದ ನಗರದ ಮೂರು|ಕಡೆ ಪೊಲೀಸ್‌ ವಸತಿ ಗೃಹಗಳಿದ್ದು|ಆ ಪೈಕಿ ಕಳೆದ ವರ್ಷ ನಿರ್ಮಿಸಲಾದ
2019/10/17 08:09:44
https://vijaykarnataka.com/news/haveri/a-horse-making-house-lodge/articleshow/71136554.cms
mC4
ಇವಿಎಂ: Latest News, Photos, Videos on ಇವಿಎಂ | kannada.asianetnews.com Politics11, Feb 2020, 9:17 PM Karnataka Districts9, Jan 2020, 10:41 AM India30, Nov 2019, 8:44 AM ಬಂಗಾಳ ಬೈಎಲೆಕ್ಷನ್ ಸೋಲು: ಈಗ ಬಿಜೆಪಿಗೂ ಇವಿಎಂ ಕುರಿತು ಅನುಮಾನ! ಈಗ ಬಿಜೆಪಿಗೂ ಇವಿಎಂ ಕುರಿತು ಅನುಮಾನ!| ಬಂಗಾಳ ಉಪಚುನಾವಣೆಯಲ್ಲಿ ಸೋಲು ಹಿನ್ನೆಲೆ| ಚುನಾವಣಾ ಆಯೋಗಕ್ಕೆ ದೂರಲು ತೀರ್ಮಾನ India29, Nov 2019, 3:47 PM ಶತಮಾನದ ಸತ್ಯ?: ಇವಿಎಂ ಹ್ಯಾಕ್ ಆಗತ್ತೆ ಎಂದ ಬಿಜೆಪಿ ನಾಯಕ! ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಪ.ಬಂಗಾಳದ ಬಿಜೆಪಿ ನಾಯಕ ರಾಹುಲ್ ಸಿನ್ಹಾ, ಪ.ಬಂಗಾಳ ಉಪಚುನಾವಣೆಯಲ್ಲಿ ಇವಿಎಂ ಮತಯಂತ್ರದ ದುರುಪಯೋಗ ನಡೆದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. Karnataka Districts23, Nov 2019, 10:06 AM ಉಪ ಚುನಾವಣೆಗೆ ಮಿಷನ್‌-3 ಯಂತ್ರ ಸಿದ್ಧ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾನ ಮಾಡುವ ಮಿಷನ್‌-3 ಎಂಬ 540 ಯಂತ್ರಗಳು ಸಿದ್ಧಗೊಂಡಿವೆ, ಮತದಾನ ನಡೆಸುವ ಅಧಿಕಾರಿಗಳಿಗೆ ಮತ್ತು ಮಾಡುವ ಮತದಾರರಿಗೂ ತರಬೇತಿ ಮೂಲಕ ಜಾಗೃತಿಗೊಳಿಸುವ ಸಿದ್ಧತೆಯನ್ನು ಚುನಾವಣಾ ಆಯೋಗ ತಯಾರಿ ನಡೆಸುತ್ತಿದೆ. Politics18, Nov 2019, 8:46 AM ತಾಕತ್ತಿದ್ದರೆ ಮೋದಿ ಬ್ಯಾಲೆಟ್‌ ಪೇಪರ್‌ ಬಳಸಿ ಗೆಲ್ಲಲಿ| ದೇಶವನ್ನೂ ಅಧೋಗತಿಗೆ ತಳ್ಳಿದ್ದಾರೆ ಎಂದು ಆರೋಪ| ಚುನಾವಣಾ ಅಖಾಡದಲ್ಲಿ ಮೋದಿಗೆ ಸವಾಲೆಸೆದ ಕೈ ಮುಖಂಡ NEWS10, Aug 2019, 9:50 AM ಇವಿಎಂ ಬಿಟ್ಟು ಬ್ಯಾಲಟ್‌ ಪೇಪರ್‌ ಬಳಸುವ ಪ್ರಶ್ನೆ ಇಲ್ಲವೇ ಇಲ್ಲ: ಆಯೋಗ ಸ್ಪಷ್ಟನೆ ಇವಿಎಂ ಬಿಟ್ಟು ಬ್ಯಾಲಟ್‌ ಪೇಪರ್‌ ಬಳಸುವ ಪ್ರಶ್ನೆ ಇಲ್ಲವೇ ಇಲ್ಲ: ಆಯೋಗ| ಕಾಶ್ಮೀರ ಚುನಾವಣೆ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ 'ಕೇಂದ್ರ ಗೃಹ ಸಚಿವಾಲಯ ಮತ್ತು ಕಾನೂನು ಸಚಿವಾಲಯದ ಜೊತೆ ಸಂಪರ್ಕದಲ್ಲಿದ್ದು, ಅವರ ಮಾಹಿತಿಗಾಗಿ ಕಾಯುತ್ತಿದ್ದೇವೆ NEWS3, Aug 2019, 3:05 PM NEWS22, Jul 2019, 9:42 AM ಮತ್ತೆ ಇವಿಎಂ ವಿರುದ್ಧ ವಿಪಕ್ಷ ಹೋರಾಟ| ವಿಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್‌ ಯತ್ನ| ಬಜೆಟ್‌ ಅಧಿವೇಶನ ಮುಗಿಯುತ್ತಿದ್ದಂತೆ ಸಭೆ| ತ್ರಿರಾಜ್ಯ ವಿಧಾನಸಭೆ ಚುನಾವಣೆ ಬಹಿಷ್ಕಾರ? NEWS26, Jun 2019, 5:07 PM NEWS24, Jun 2019, 7:35 AM ಕೇಂದ್ರ ವಿರುದ್ಧ ಹೋರಾಡಲು ರಾಹುಲ್ ಮನಸ್ಸು, ಸೋನಿಯಾ ಅಡ್ಡಗಾಲು! ಕೇಂದ್ರದ ವಿರುದ್ಧ ರಾಹುಲ್‌ ಅಸಹಕಾರ ಚಳವಳಿ?| ಇವಿಎಂ ತಿರುಚಿದ್ದರಿಂದಲೇ ಕಾಂಗ್ರೆಸ್‌ಗೆ ಸೋಲು ಎಂಬ ಪಕ್ಷದ ಡೇಟಾ ಅನಾಲಿಟಿಕ್ಸ್‌ ವಿಭಾಗದ ವರದಿ ಹಿನ್ನೆಲೆ| ಅಸೆಂಬ್ಲಿ ಚುನಾವಣೆಗಳಿಗೆ ಬಹಿಷ್ಕಾರ, ದೇಶವ್ಯಾಪಿ ಹೋರಾಟಕ್ಕೆ ಚಿಂತನೆ| ಇದಕ್ಕೆ ಸೋನಿಯಾ, ಹಿರಿಯ ಕಾಂಗ್ರೆಸ್ಸಿಗರ ವಿರೋಧ NEWS4, Jun 2019, 3:18 PM 'ಚುನಾವಣೆಯಲ್ಲಿ ಬಳಸಿದ ಇವಿಎಂ ಮೇಲೆ ಅನುಮಾನ' ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡಲಾಗಿದ್ದ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. NEWS3, Jun 2019, 3:52 PM 'ಲೋಕ ಚುನಾವಣೆಯಲ್ಲಿ ಬಿಜೆಪಿಗೆ ಯದ್ವಾತದ್ವಾ ಲೀಡ್; EVM ಹ್ಯಾಕ್ ಶಂಕೆ' ಲೋಕಸಭೆ ಚುನಾವಣೆ ಬೆನ್ನಲ್ಲೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಹುತೇಕ ಕಡೆ ರಾಜ್ಯದ ಮತದಾರರು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಜೈ ಅಂದಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ಮತ್ತೆ ಇವಿಎಂ ಮೇಲೆ ರಾಜಕೀಯ ಮುಖಂಡರು ಬೊಟ್ಟು ಮಾಡಲಾರಂಭಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಇಂತಹ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
2020/05/31 14:00:37
https://kannada.asianetnews.com/topic/%E0%B2%87%E0%B2%B5%E0%B2%BF%E0%B2%8E%E0%B2%82
mC4
ಐಸಿಸಿ ಟೂರ್ನಿ : ಭಾರತ, ಜಹೀರ್‌ ಖಾನ್‌ ಶುಭಾರಂಭ | ICC knock out : India beat kenya - Kannada Oneindia ಐಸಿಸಿ ಟೂರ್ನಿ : ಭಾರತ, ಜಹೀರ್‌ ಖಾನ್‌ ಶುಭಾರಂಭ ನೈರೋಬಿ: ಐಸಿಸಿ ನಾಕ್‌ಔಟ್‌ ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ಅತಿಥೇಯ ಕೀನ್ಯಾ ವಿರುದ್ಧ 8 ವಿಕೆಟ್‌ಗಳ ನಿರೀಕ್ಷಿತ ಜಯ ಗಳಿಸಿತು. ಗೆಲ್ಲಲು 50 ಓವರ್‌ಗಳಲ್ಲಿ 209 ರನ್‌ಗಳ ಸವಾಲು ಪಡೆದ ಭಾರತ ಇನ್ನೂ 7.3 ಓವರುಗಳಿರುವಂತೆಯೇ ಕೇವಲ 2 ವಿಕೆಟ್‌ ನಷ್ಟಕ್ಕೆ ಗುರಿ ಮುಟ್ಟಿತು. ಭಾರತದ ಪರ 68 ರನ್‌ (7 ಬೌಂಡರಿ) ಗಳಿಸಿದ ದ್ರಾವಿಡ್‌ ಔಟಾಗದೆ ಉಳಿದರು. ಉತ್ತಮ ಆರಂಭ ಒದಗಿಸಿಕೊಟ್ಟ ನಾಯಕ ಸೌರವ್‌ ಗಂಗೂಲಿ, ಮಾರಿಸ್‌ ಒಡುಂಬೆ ಬೌಲಿಂಗ್‌ನಲ್ಲಿ ಸ್ಟಂಪ್‌ ಆಗುವ ಮುನ್ನ 66 (7 ಬೌಂಡರಿ, 2 ಸಿಕ್ಸರ್‌) ರನ್‌ಗಳಿಸಿದ್ದರು. 33 ಎಸೆತಗಳಲ್ಲಿ 7 ಬೌಂಡರಿಗಳಿದ್ದ 39 ರನ್‌ ಗಳಿಸಿದ ವಿನೋದ್‌ ಕಾಂಬ್ಳಿ ತಮ್ಮ ಹಳೆಯ ಆಟ ನೆನಪಿಸಿದರು. ಕೀನ್ಯಾ ಪರ ರವಿಂದು ಶಾ (60), ಒಡುಂಬೆ (51) ಹಾಗೂ ಥಾಮಸ್‌ ಒಡೊಯಾ (ಔಟಾಗದೆ 35) ಬಿಟ್ಟರೆ ಉಳಿದವರಾರೂ 20ರ ಗಡಿ ದಾಟಲಿಲ್ಲ. ಭಾರತದ ಪರ ಮೊದಲ ಅಂತರರಾಷ್ಟ್ರೀಯ ಪಂದ್ಯ ಆಡಿದ ವೇಗಿ ಜಹೀರ್‌ ಖಾನ್‌ 10 ಓವರ್‌ಗಳಲ್ಲಿ 48 ರನ್‌ ನೀಡಿ 3 ವಿಕೆಟ್‌ ಗಳಿಸಿದರು. ಉಳಿದಂತೆ ಪ್ರಸಾದ್‌, ಅಗರ್ಕರ್‌ ಹಾಗೂ ಕುಂಬ್ಳೆ ತಲಾ 2 ವಿಕೆಟ್‌ ಗಳಿಸಿದರು. ಕೀನ್ಯಾ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 208ರನ್‌ ಗಳಿಸಿತು.
2019/07/23 17:02:28
https://kannada.oneindia.com/news/2000/10/04/cricket.html
mC4
ವಾರಿಯರ್ಸ್‌ಗೆ ಆಹಾರ ಕಿಟ್‌ ವಿತರಣೆ | Udayavani – ಉದಯವಾಣಿ Friday, 22 Oct 2021 | UPDATED: 01:58 AM IST ವಾರಿಯರ್ಸ್‌ಗೆ ಆಹಾರ ಕಿಟ್‌ ವಿತರಣೆ Team Udayavani, Jun 11, 2021, 7:37 PM IST ಮಂಡ್ಯ: ಯೋಧ ಹಾಗೂ ರೈತ ದೇಶದ ಬೆನ್ನುಲುಬಾದರೆ, ಪ್ರಸ್ತುತ ಸಂದರ್ಭದಲ್ಲಿ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು ದೇಶದಆರೋಗ್ಯ ಸುಧಾರಿಸುವಲ್ಲಿ ಬೆನ್ನೆಲುಬಾಗಿ ಶ್ರಮಿಸುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಕೀಲಾರ ಕೆ.ಕೆ.ರಾಧಾಕೃಷ್ಣ ಅಭಿಪ್ರಾಯಪಟ್ಟರು. ನಗರದ ಶಂಕರಪುರ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವಆಶಾ ಕಾರ್ಯಕರ್ತೆಯರು, ದಾದಿಯರಿಗೆ ಕೀಲಾರರಾಧಾಕೃಷ್ಣ ಅಭಿಮಾನಿಗಳ ಬಳಗದ ವತಿಯಿಂದಆಹಾರ ಕಿಟ್‌ ವಿತರಿಸಿ ಮಾತನಾಡಿದರು. ಕೊರೊನಾಇನ್ನೂ 2ರಿಂದ 3 ವರ್ಷ ಇರುವ ಮುನ್ಸೂಚನೆ ಇದ್ದು,ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗವಹಿಸುವುದನ್ನು ಕಡಿಮೆ ಮಾಡಿ ಎಂದರು.ವಿಧಾನಸಭಾಕ್ಷೇತ್ರದ ಎಲ್ಲ 24 ಗ್ರಾಪಂ ವ್ಯಾಪ್ತಿಯ ವಾರಿಯರ್ಗಳಾದ ಆಶಾ, ಶುಶ್ರೂಷಕರು, ಡಿ.ಗ್ರೂಪ್‌ ನೌಕರರಿಗೆಆಹಾರ ಕಿಟ್‌ ವಿತರಿಸಲಾಗಿದ್ದು, ಈಗಾಗಲೇ ನಗರದ35 ವಾರ್ಡ್‌, 160 ಹಳ್ಳಿಗಳಲ್ಲಿ ಸ್ಯಾನಿಟೈಸರ್‌ ಸಿಂಪಡಣೆಮಾಡಲಾಗಿದೆ ಎಂದರು. ಶಂಕರಪುರ ಪ್ರಾಥಮಿಕಆರೋಗ್ಯ ಕೇಂದ್ರದ ವೈದ್ಯಾ ಧಿಕಾರಿ ಡಾ.ಯಶವಂತಗೌಡ, ಗ್ರಾಪಂ ಸದಸ್ಯೆ ಕಲ್ಪನಾ, ನಗರಸಭಾ ಸದಸ್ಯೆಸೌಭಾಗ್ಯ, ಮಾಜಿ ಸದಸ್ಯ ಬೋರೇಗೌಡ ಇದ್ದರು.
2021/10/21 20:32:54
https://www.udayavani.com/district-news/mandya-news/food-kit-delivery-4
mC4
ಸಂಗೀತ ಸಂಯೋಜಕ ರಾಜನ್‌ ಗೆ ಗಣ್ಯರ ಸಂತಾಪ – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal ಕನ್ನಡ ಚಿತ್ರರಂಗದ ಮೇರು ಸಂಗೀತ ಸಂಯೋಜಕ ಜೋಡಿ ರಾಜನ್-ನಾಗೇಂದ್ರ. ಈ ಸಹೋದರರಲ್ಲಿ ನಾಗೇಂದ್ರ 2000ರಲ್ಲಿ ನಮ್ಮನ್ನು ಅಗಲಿದ್ದರು. ನಿನ್ನೆ ಭಾನುವಾರ ರಾತ್ರಿ 11 ಗಂಟೆಗೆ ರಾಜನ್‌ (85) ಇಹಲೋಕ ತ್ಯಜಿಸಿದ್ದಾರೆ. 'ಸೌಭಾಗ್ಯಲಕ್ಷ್ಮಿ' (1953) ರಾಜನ್‌-ನಾಗೇಂದ್ರ ಸಂಗೀತ ಸಂಯೋಜನೆಯ ಮೊದಲ ಸಿನಿಮಾ. ಕನ್ನಡ ಸೇರಿದಂತೆ ತೆಲುಗು, ತಮಿಳು, ತುಳು, ಸಿಂಹಳಿ ಭಾಷೆಗಳ ಮುನ್ನೂರ ಎಪ್ಪತ್ತೈದಕ್ಕೂ ಹೆಚ್ಚು ಸಿನಿಮಾಗಳು, ಹಲವಾರು ಭಕ್ತಿಗೀತೆ ಆಲ್ಬಂಗಳಿಗೆ ರಾಜನ್-ನಾಗೇಂದ್ರ ಸಂಗೀತ ಸಂಯೋಜಿಸಿದ್ದಾರೆ. ಮೊನ್ನೆಯವರೆಗೂ ರಾಜನ್ ತಮ್ಮ 'ಸಪ್ತಸ್ವರಾಂಜಲಿ' ಸಂಗೀತ ಶಾಲೆಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅವರ ಗರಡಿಯಲ್ಲಿ ನೂರಾರು ಸಂಗೀತರಾರರು ತಯಾರಾಗಿದ್ದು, ತಮ್ಮ ಸಂಗೀತ ಸಂಯೋಜನೆಯ ಹಾಡುಗಳ ಮೂಲಕ ಅವರು ಸದಾ ಕನ್ನಡಿಗರ ಮನದಲ್ಲುಳಿಯಲಿದ್ದಾರೆ. ತಂದೆಯವರ ಮರೆಯಲಾಗದ ಸಿನಿಮಾಗಳಾದ ಗಂಧದಗುಡಿ, ಮಯೂರ, ನಾ ನಿನ್ನ ಮರೆಯಲಾರೆ ಹಾಗು ಹಲಾವಾರು ಸಿನೆಮಾಗಳನ್ನು ನಿರ್ದೇಶಿಸಿರುವ ವಿಜಯ್ ರೆಡ್ಡಿ ಅವರು… Posted by Puneeth Rajkumar on Friday, October 9, 2020 Related Topics:FeaturedMusic director Rajan ಭತ್ತದ ಬೆಳೆಯಲ್ಲಿ ದುಂಡಾಣು ಅಂಗಮಾರಿ ರೋಗದ ನಿವಾರಣೆ ಹೇಗೆ..? ಸುದ್ದಿದಿನ,ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 7,98,378* ಕ್ಕೆ ಏರಿಕೆಯಾಗಿದ್ದು, ಶನಿವಾರ 7,153 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆದರು.ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 7,00,737 ಮಂದಿ. ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 86,749 ಇದ್ದು, ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 52 ಆಗಿದೆ. ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 10,873 ಮಂದಿ. ಕರ್ನಾಟಕದಲ್ಲಿಂದು ಏಳು ಲಕ್ಷ 98 ಸಾವಿರದ ಗಡಿ ದಾಟಿದ್ದು, ಜಿಲ್ಲಾವಾರು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೀಗಿದೆ. ಬಾಗಲಕೋಟೆ -57 ಬಳ್ಳಾರಿ – 129 ಬೆಳಗಾವಿ – 73 ಬೆಂಗಳೂರು ಗ್ರಾಮಾಂತರ – 102 ಬೆಂಗಳೂರು ನಗರ- 2,251 ಬೀದರ್- 07 ಚಾಮರಾಜನಗರ- 34 ಚಿಕ್ಕಬಳ್ಳಾಪುರ- 78 ಚಿಕ್ಕಮಗಳೂರು – 85 ಚಿತ್ರದುರ್ಗ – 84 ದಕ್ಷಿಣಕನ್ನಡ – 136 ದಾವಣಗೆರೆ – 52 ಧಾರವಾಡ – 93 ಗದಗ – 14 ಹಾಸನ – 136 ಹಾವೇರಿ – 30 ಕಲಬುರಗಿ- 71 ಕೊಡಗು – 33 ಕೋಲಾರ- 45 ಕೊಪ್ಪಳ – 49 ಮಂಡ್ಯ – 163 ಮೈಸೂರು- 173 ರಾಯಚೂರು- 25 ರಾಮನಗರ- 22 ಶಿವಮೊಗ್ಗ- 79 ತುಮಕೂರು- 232 ಉಡುಪಿ- 81 ಉತ್ತರಕನ್ನಡ- 48 ವಿಜಯಪುರ- 62 ಯಾದಗಿರಿ- 27 ಸುದ್ದಿದಿನ,ಮೈಸೂರು : ಕೋವಿಡ್-19 ಸಾಂಕ್ರಾಮಿಕ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಸರ್ಕಾರದ ವತಿಯಿಂದ ಈ ಬಾರಿ ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ ನಿಗಧಿತ ಕಲಾತಂಡಗಳನ್ನು ನಿಯೋಜಿಸಲಾಗಿದೆ. ಅಕ್ಟೋಬರ್ 26 ರಂದು ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳ ಕ್ರಮಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.ಮಧ್ಯಾಹ್ನ 2.59 ರಿಂದ 3.20 ರವರೆಗೆ ನಂದೀಧ್ವಜ ಪೂಜೆ, ಕೆ.ಎನ್.ಮಹೇಶ್ ಮತ್ತು ತಂಡದಿಂದ ವೀರಗಾಸೆ ಇರಲಿದೆ. ಮೆರವಣಿಗೆಯಲ್ಲಿ ಮಧ್ಯಾಹ್ನ 3.30 ರಿಂದ 3.40 ರವರೆಗೆ ನಿಶಾನೆ ಆನೆಗಳು, ನೌಪತ್ ಆನೆಗಳು, ಕೃಷ್ಣಮೂರ್ತಿ ವಿ ಮತ್ತು ತಂಡ ಹಾಗೂ ಪುಟ್ಟಸ್ವಾಮಿ ಎ ಮತ್ತು ತಂಡದಿಂದ ನಾದಸ್ವರ, ರಾಜಪ್ಪ ಮತ್ತು ತಂಡದಿಂದ ವೀರಗಾಸೆ ಇರಲಿದೆ. ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸುರು ವತಿಯಿಂದ ಸ್ತಬ್ಧಚಿತ್ರ, ಶ್ರೀನಿವಾಸ್ ರಾವ್ ಮತ್ತು ತಂಡದಿಂದ ಚೆಂಡೆ ಮೇಳ, ಸಿದ್ದರಾಜು ಮತ್ತು ತಂಡದಿಂದ ಮರಗಾಲು ವೇಷ, ಟಿ.ಕೆ. ರಾಜೇಶಖರ್ ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ ಇರಲಿದೆ. ಮಧ್ಯಾಹ್ನ 3.50 ರಿಂದ 4.15 ಗಂಟೆಯವರೆಗೆ ಕರ್ನಾಟಕ ಪೊಲೀಸ್ ಬ್ಯಾಂಡ್ ವತಿಯಿಂದ ಆನೆ ಬಂಡಿ ಸ್ತಬ್ಧಚಿತ್ರ, ಬಳಿಕ ಪೊಲೀಸ್ ಅಶ್ವದಳ ಪ್ರಧಾನ ದಳಪತಿ, ಕೆ.ಎ.ಆರ್.ಪಿ ಮೌಂಟೆಡ್ ಕಂಪನಿ, ಮೈಸೂರು, ನಟರಾಜು ವಿ ಮತ್ತು ತಂಡದಿಂದ ಪಟ್ಟದ ನಾದಸ್ವರ ಇರಲಿದೆ. ಮಧ್ಯಾಹ್ನ 3.40 ರಿಂದ 4.15 ಗಂಟೆಯವರೆಗೆ ಚಿನ್ನದ ಅಂಬಾರಿಯಲ್ಲಿರುವ ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಕೆ, ಬಳಿಕ ಪೊಲೀಸ್ ಅಶ್ವದಳ-ಕೆ.ಎ.ಆರ್.ಪಿ ಮೌಂಟೆಡ್ ಕಂಪನಿ, ಮೈಸೂರು. ಬಳಿಕ ಫಿರಂಗಿ ಗಾಡಿಗಳು, ಅರಣ್ಯ ಇಲಾಖೆ ವೈದ್ಯರ ತಂಡ, ಅಗ್ನಿಶಾಮಕ ತಂಡ ಹಾಗೂ ತುರ್ತುಚಿಕಿತ್ಸಾ ವಾಹನ ಇರಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು, ದಸರಾ ಮಹೋತ್ಸವ 2020ರ ಮೆರವಣಿಗೆ ಉಪಸಮಿತಿಯ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮೊಳಗಿನ ಕೊಳಕು ನಮಗೆ ಕಾಣದಾದಾಗ, ಬೇರೆಯವರ ದೂಷಣೆ ನಮ್ಮಲ್ಲಿ ಆಕ್ರೋಶ ಮೂಡಿಸುತ್ತದೆ. ಡೊಲಾಂಡ್ ಟ್ರಂಪ್ ಭಾರತವನ್ನು ಕೊಳಕು ಎಂದು ಜರೆದಿರುವುದು ಭಾರತದಲ್ಲಿ ತೀವ್ರ ಟೀಕೆ, ಆಕ್ರೋಶಕ್ಕೆ ಗುರಿಯಾಗಿದೆ. ಇದಕ್ಕೆ ಕಾರಣ ನಾವು ನಮ್ಮೊಳಗಿನ ಹೊಲಸನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ನಾವು ಪರಿಶುದ್ಧರು ಎನ್ನುವ ಅಹಮಿಕೆ ನಮ್ಮನ್ನು ಆವರಿಸಿದೆ. ಸ್ವಚ್ಚ ಭಾರತ ಅಭಿಯಾನದ ನಂತರ ನಾವೇ ಮೊದಲು, ನಾವೇ ನಂಬರ್ ಒನ್ ಎನ್ನುವ ಸುದ್ದಿಮನೆಗಳ ಪರಿಭಾಷೆ ಪ್ರತಿಯೊಬ್ಬರಲ್ಲೂ ಕಾಣಿಸುತ್ತಿದೆ. ಕೊಂಚ ಆತ್ಮಾವಲೋಕನ ಮಾಡಿಕೊಂಡು ನಮ್ಮ ದೃಷ್ಟಿಯನ್ನು ಅತ್ತಿತ್ತ ಹರಿಸಿದರೆ ನಮ್ಮದು ಎಂತಹ ಸ್ವಚ್ಚ ಭಾರತ ಎಂದು ಅರಿವಾಗುತ್ತದೆ. ಸರ್ಕಾರ ತನ್ನ ಹಿರಿಮೆ-ಗರಿಮೆಯನ್ನು ಹೆಚ್ಚಿಸಿಕೊಳ್ಳಲು, ತನ್ನ ಹಮ್ಮು ಬಿಮ್ಮುಗಳನ್ನು ತೋರಿಸಿಕೊಳ್ಳಲು ಘೋಷಿಸುವ ಯೋಜನೆಗಳು ಅಂಕಿಅಂಶಗಳ ಆಧಾರದ ಮೇಲೆ ಸಾಫಲ್ಯ ವೈಫಲ್ಯಗಳನ್ನು ಕಾಣುತ್ತವೆ. ವಾಸ್ತವ ಪರಿಸ್ಥಿತಿ ಭಿನ್ನವಾಗಿದ್ದು, ನಮ್ಮ ಕಣ್ಣ ಮುಂದೆಯೇ ಇರುತ್ತದೆ. ಶೌಚಾಲಯ ನಿರ್ಮಾಣವೇ ಸ್ವಚ್ಚಭಾರತವನ್ನು ಬಿಂಬಿಸುವ ಪ್ರಧಾನ ಮಾನದಂಡವಾಗಿದ್ದೇನೋ ಸರಿ. ಬಯಲು ಶೌಚಮುಕ್ತ ಭಾರತಕ್ಕಾಗಿ ಶ್ರಮಿಸುತ್ತಿರುವುದು ಸ್ವಾಗತಾರ್ಹ ಕ್ರಮ. ಆದರೆ ಶೌಚಾಲಯದ ಬಳಕೆಯ ಪ್ರಮಾಣ ಎಷ್ಟಿದೆ, ಸರ್ಕಾರದ ಅನುದಾನ ಬಳಸಿ ನಿರ್ಮಿಸಲಾದ ಲಕ್ಷಾಂತರ ಶೌಚಾಲಯಗಳಲ್ಲಿ ಸ್ವಚ್ಚತೆ ಹೇಗಿದೆ, ನಿರ್ವಹಣೆಯ ಗುಣಮಟ್ಟ ಹೇಗಿದೆ, ಶೌಚಾಲಯ ಇರುವೆಡೆಯೆಲ್ಲಾ ನೀರಿನ ಸೌಕರ್ಯ ಇದೆಯೇ, ನೀರಿನ ಸೌಕರ್ಯ ಇರುವೆಡೆ ಚರಂಡಿಯ ವ್ಯವಸ್ಥೆ ಇದೆಯೇ. ಮಲಗುಂಡಿಗಳ ನಿರ್ವಹಣೆಯ ಗುಣಮಟ್ಟ ಹೇಗಿದೆ. ಈ ಎಲ್ಲ ಪ್ರಶ್ನೆಗಳೂ ಎದುರಾಗುತ್ತಿರುವಂತೆಯೇ ನಗರ ಪ್ರದೇಶಗಳಲ್ಲೇ ಮಲಗುಂಡಿಗಳಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವವರ ಅಸ್ಪೃಶ್ಯ ಸಮುದಾಯದ ಶೋಷಿತರ ಹೃದಯ ವಿದ್ರಾವಕ ಚಿತ್ರ ಕಣ್ಣೆದುರು ನಿಲ್ಲುತ್ತದೆ. ಸ್ವಚ್ಚತೆ ಎನ್ನುವುದೇ ಸಾಪೇಕ್ಷ ವಿದ್ಯಮಾನವಾಗಿರುವುದು ಭಾರತದ ವೈಶಿಷ್ಟ್ಯ. ನಗರ ಪ್ರದೇಶಗಳಲ್ಲಿ ಕೇಂದ್ರ ಮಾರುಕಟ್ಟೆ ಬೀದಿ ಮತ್ತು ಹಿತವಲಯದ ಜನರು ಹೆಚ್ಚಾಗಿ ಬಳಸುವ ಮಾರುಕಟ್ಟೆ ಪ್ರದೇಶಗಳು, ಸೂಪರ್ ಮಾರುಕಟ್ಟೆ, ಮಾಲ್ ಗಳನ್ನು ಹೊಂದಿರುವ ರಸ್ತೆಗಳು, ಸರ್ಕಾರಿ ಕಚೇರಿ, ನ್ಯಾಯಾಲಯ ಮುಂತಾದ ಕಟ್ಟಡಗಳಿರುವ ಪ್ರದೇಶ ಇವೆಲ್ಲವೂ ಫಳಫಳ ಹೊಳೆಯತ್ತಿರುತ್ತವೆ. ಹೊರವಲಯಗಳಲ್ಲಿ, ಬಡಾವಣೆಗಳಲ್ಲಿ ಕೊಳಕು ಹರಡಿರುತ್ತದೆ. ವರ್ತುಲ ರಸ್ತೆಗಳು ಅಕ್ಷರಶಃ ತ್ಯಾಜ್ಯದ ಬಿಡಾರಗಳಾಗಿರುತ್ತದೆ. ತ್ಯಾಜ್ಯ ವಿಲೇವಾರಿ ಎಂದರೆ ಕೇವಲ ಮನೆಗಳಿಗೆ ಮಾತ್ರ ಸೀಮಿತವಾದ ಕಾರ್ಯಾಚರಣೆಯಾಗಿರುವುದರಿಂದ ಹೊರವಲಯದ ರಸ್ತೆ ಬದಿಗಳಲ್ಲಿ ಬಿಸಾಡುವ ಒಣ ಮತ್ತು ಹಸಿ ಕಸದ ರಾಶಿ ಕೊಳೆತು ನಾರುವವರೆಗೂ ಹಾಗೆಯೇ ಬಿದ್ದಿರುತ್ತವೆ. ತಮ್ಮ ಮನೆಗಳಲ್ಲಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸುವ ಹಿತವಲಯದ ಮಧ್ಯಮ ವರ್ಗದ ಸುಶಿಕ್ಷಿತರು ಹೊರವಲಯಗಳಲ್ಲಿ ನಡೆಸುವ ಭೋಜನ ಕೂಟಗಳ ಸಂದರ್ಭದಲ್ಲಿ, ಗುಂಡು ತುಂಡು ಪಾರ್ಟಿ ನಡೆಸುವ ಸಂದರ್ಭದಲ್ಲಿ ರಸ್ತೆ ಬದಿಯನ್ನೇ ಕಸದ ಗುಂಡಿ ಎಂದು ಭಾವಿಸಿ ಹೆಂಡದ ಬಾಟಲು, ಪಾರ್ಸೆಲ್ ತಂದ ಆಹಾರದ ಪ್ಯಾಕೆಟ್ ಗಳು, ಬಳಸಿ ಬಿಸಾಡುವ ಪೇಪರ್ ಅಥವಾ ಪ್ಲಾಸ್ಟಿಕ್ ಲೋಟಗಳು ಎಲ್ಲವನ್ನೂ ಬಿಸಾಡಿ ತಮ್ಮದೇ ಆದ ಸ್ವಚ್ಚ ಪರಿಸರಕ್ಕೆ ಮರಳುವುದು ಗುಟ್ಟಿನ ಮಾತೇನಲ್ಲ. ಪ್ರವಾಸಿ ತಾಣಗಳಲ್ಲಿ ಇದು ಸಾಮಾನ್ಯವಾಗಿ ಕಾಣಬಹುದಾದ ಸಂಗತಿ. ಡೊಲಾಂಡ್ ಟ್ರಂಪ್ ಭಾರತವನ್ನು ಕೊಳಕು ಎಂದರೆ ಆಕ್ರೋಶಭರಿತರಾಗುವ ನಮಗೆ ನಮ್ಮ ದೇಶದ ನದಿಗಳು, ಜಲಸಂಪನ್ಮೂಲಗಳು, ಬೆಟ್ಟಗುಡ್ಡಗಳು, ಅರಣ್ಯ ಪ್ರದೇಶಗಳು ಎಷ್ಟು ಸ್ವಚ್ಚವಾಗಿವೆ ಎಂಬ ಪರಿವೆ ಇದೆಯೇ ? ಸಂಪ್ರದಾಯದ ಹೆಸರಿನಲ್ಲಿ, ಪರಂಪರೆಯ ಹೆಸರಿನಲ್ಲಿ, ನಂಬಿಕೆಯ ನೆಪವೊಡ್ಡಿ ನದಿಗಳನ್ನು ಕಲುಷಿತಗೊಳಿಸುತ್ತಿರುವ ನಾವು, ಕೈಗಾರಿಕೋದ್ಯಮದ ಬೆಳವಣಿಗೆಯ ಮೂಲಕವೂ ನದಿ ನೀರನ್ನು ಮಲಿನಗೊಳಿಸುತ್ತಿದ್ದೇವೆ. ಗಂಗಾ ನದಿಯನ್ನು ಸ್ವಚ್ಚಗೊಳಿಸಿಬಿಟ್ಟರೆ ಇಡೀ ದೇಶದ ಜಲಸಂಪನ್ಮೂಲ ನೆಲೆಗಳು ಸ್ವಚ್ಚವಾಗಿಬಿಡುತ್ತವೆ ಎನ್ನುವ ಅಪ್ರಬುದ್ಧ ಚಿಂತನೆಯಲ್ಲಿರುವ ಕೇಂದ್ರ ಸರ್ಕಾರಗಳು ನಮಾಮಿ ಗಂಗೆ ಎಂದು ಹೇಳುವಾಗ, ತುಂಗೆ, ಕಾವೇರಿ, ಕೃಷ್ಣ, ಭದ್ರ, ಬ್ರಹ್ಮಪುತ್ರ ಎಲ್ಲವನ್ನೂ ಮರೆತುಬಿಡುತ್ತವೆ. ತಲಕಾವೇರಿಯ ತೀರ್ಥೋದ್ಭವದ ಸಂದರ್ಭದಲ್ಲಿ ತರ್ಪಣ ಬಿಡುವವರು, ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಶ್ರಾದ್ಧ ಕ್ರಿಯಾವಿಧಿಗಳನ್ನು ನೆರವೇರಿಸುವವರು, ನದಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವವರು ಇವರೆಲ್ಲರೂ ಕೊಳಕು ಭಾರತದ ರಾಯಭಾರಿಗಳಾಗಿ ಕಾಣಬೇಕಲ್ಲವೇ ? ಸತ್ತವರ ಆತ್ಮಕ್ಕೆ ಶಾಂತಿ ಸಿಗಲೆಂದು ಶವದ ಬೂದಿಯನ್ನು ತಂದು ನದಿಗೆ ಎಸೆಯುವವರು ಸಾಂಕೇತಿಕವಾಗಿ ಆಚರಿಸಲೂ ಅವಕಾಶಗಳಿವೆ ಅಲ್ಲವೇ ? ಈ ಮೌಢ್ಯವನ್ನು ಬದಿಗಿರಿಸಿ, ನಂಬಿಕೆ ಇರುವವರಿಗೆ ಮಾನ್ಯತೆ ನೀಡುತ್ತಲೇ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಲ್ಲವೇ ? ಹರಿವ ನೀರಿನಲ್ಲಿ ಯಾವುದೇ ತ್ಯಾಜ್ಯ ಎಸೆದರೂ ಹರಿದು ಹೋಗಿಬಿಡುತ್ತದೆ ಅಡ್ಡಿಯಿಲ್ಲ ಎನ್ನುವ ವಿತಂಡ ವಾದವೇ ಭಾರತದ ಬಹುಪಾಲು ನದಿಗಳನ್ನು ಪುಣ್ಯ ಗಳಿಸುವ ಕೇಂದ್ರ ಕಚೇರಿಗಳನ್ನಾಗಿ ಮಾಡಿರುವುದು ದುರಂತ. ನದಿಯಲ್ಲಿ ಮುಳುಗಿ ತಮ್ಮ ದೇಹದ ಮೇಲಿನ, ಒಳಗಿನ ಎಲ್ಲ ಮಲಿನ ದ್ರವ್ಯಗಳನ್ನೂ ನದಿ ಪಾಲು ಮಾಡುವವರು ಪಡೆಯುವ ಪುಣ್ಯ ಭವಿಷ್ಯದ ಪೀಳಿಗೆಗೆ ಪಾಪದ ಕೂಪಗಳನ್ನು ಸೃಷ್ಟಿಸುತ್ತದೆ ಎನ್ನುವ ಪರಿಜ್ಞಾನ ಸುಶಿಕ್ಷಿತರಲ್ಲೂ ಇಲ್ಲದಿರುವುದು ದುರಂತ ಅಲ್ಲವೇ ? ಸರ್ಕಾರಗಳು ಹಲವು ದಶಕಗಳ ಹಿಂದೆ ನಿಗದಿಡಪಸಿದಿರುವ ತ್ಯಾಜ್ಯ ವಿಲೇವಾರಿ ಘಟಕಗಳು ಮತ್ತು ತ್ಯಾಜ್ಯ ಸಂಗ್ರಹಾಗಾರಗಳು ಬಹುತೇಕ ನಗರಗಳಲ್ಲಿ ನಗರ ವಿಸ್ತರಣೆಯ ಪರಿಣಾಮವಾಗಿ ನಗರಗಳ ಮಧ್ಯಭಾಗಕ್ಕೆ ಸೇರಿಬಿಟ್ಟಿವೆ,. ವಸತಿ ಬಡಾವಣೆಗಳ ನಡುವೆಯೇ ಇರುವ ಈ ಕಸದ ಗುಡ್ಡಗಳನ್ನು ಹೊರವಲಯಕ್ಕೆ ಸ್ಥಳಾಂತರಿಸುವುದು, ಬೆಟ್ಟಗಳಂತೆ ಬಿದ್ದಿರುವ ಕಸದ ರಾಶಿಯನ್ನು ಶೀಘ್ರಗತಿಯಲ್ಲಿ ಸಂಸ್ಕರಿಸುವುದು, ಸುತ್ತಲಿನ ಪರಿಸರದಲ್ಲಿ ಮಾಲಿನ್ಯ ಮತ್ತು ದುರ್ವಾಸನೆ ಹರಡದಂತೆ ಎಚ್ಚರವಹಿಸುವುದು ಈ ಯಾವುದೇ ಯೋಜನೆಗಳನ್ನು ಸರ್ಕಾರಗಳು ಈವರೆಗೂ ಹಮ್ಮಿಕೊಂಡಿಲ್ಲ. ಮೈಸೂರಿನಲ್ಲೇ ಸೂಯೆಜ್ ಫಾರ್ಮ್ ಎಂದು ಸುಂದರ ಹೆಸರಿನಿಂದ ಕರೆಯಲಾಗುವ ತ್ಯಾಜ್ಯದ ಗುಡ್ಡಗಳಿಂದ ಸುತ್ತಮುತ್ತಲಿನ ಬಡಾವಣೆಗಳ ಜನರು ಸಂಜೆಯಾದರೆ ಮೂಗು ಮುಚ್ಚಿ ಬದುಕುವಂತಾಗಿದೆ. ಇದರಿಂದ ಇತರ ರೋಗಗಳೂ ಹರಡುತ್ತವೆ ಎಂದು ಮೈಸೂರಿನ ಹಲವು ತಜ್ಞರು, ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಬೆಂಗಳೂರಿನ ಬಿನ್ನಿಮಿಲ್ ಬಳಿ ಮತ್ತೊಂದು ಗುಡ್ಡ ಹಲವು ವರ್ಷಗಳಿಂದ ಸಂರಕ್ಷಣೆಗೊಳಗಾಗಿದೆ. ಮತ್ತೊಂದೆಡೆ ಕೈಗಾರಿಕಾ ತ್ಯಾಜ್ಯಗಳು ನದಿಗಳನ್ನು ಸೇರುವುದು ನಮ್ಮ ದೇಶದಲ್ಲಿ ಒಂದು ಸಮಸ್ಯೆ ಎನಿಸಿಯೇ ಇಲ್ಲ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನು ನೋಡಿದರೆ ಹರಪ್ಪ ಮೊಹೆಂಜಾದಾರೋ ನೆನಪಾಗುವಂತಿರುತ್ತವೆ. ಬೆಂಗಳೂರು, ಮೈಸೂರಿನಲ್ಲಿ ಮಳೆ ಬಂದಾಗಲೆಲ್ಲಾ ಪ್ರವಾಹದ ಹುಯಿಲೆಬ್ಬಿಸಲಾಗುತ್ತದೆ. ಇದು ಜಲಪ್ರವಾಹವಲ್ಲ, ಚರಂಡಿಯಿಂದ ಹೊರ ಹರಿಯುವ ನೀರಿನ ಪ್ರವಾಹ, ಮಲಿನ ನೀರಿನ ಪ್ರವಾಹ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ರಾಜಕಾಲುವೆಗಳ ಒತ್ತುವರಿ, ಒಳಚರಂಡಿಯ ಕಳಪೆ ನಿರ್ವಹಣೆ, ಚರಂಡಿಯಲ್ಲಿ ಶೇಖರವಾಗಿರುವ ಕಸವನ್ನು ತೆಗೆಯದಿರುವುದು, ರಾಜಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿಗಳು ಮತ್ತು ಸುರಿದಿರುವ ಕಸದ ಪ್ರಮಾಣ ಇವೆಲ್ಲವೂ ನಗರಗಳನ್ನು ಕೊಚ್ಚೆಯ ನದಿಗಳನ್ನಾಗಿ ಮಾಡುತ್ತಿರುವುದನ್ನು ಮನರಂಜನೆಯಂತೆ ಟಿವಿ ಪರದೆಗಳ ಮೇಲೆ ನೋಡಿ ಆನಂದಿಸುತ್ತಿದ್ದೇವೆ. ಇತ್ತೀಚೆಗೆ ಬೆಂಗಳೂರಿನ ವೃಷಭಾವತಿ ಕಾಲುವೆ ಒಡೆದುಹೋಗಿ ರಸ್ತೆಯೇ ಕುಸಿದಿರುವುದು ನಮ್ಮ ಸರ್ಕಾರಿ ಇಲಾಖೆಗಳ ಕಾಮಗಾರಿಯ ದಕ್ಷತೆಗೆ ಕನ್ನಡಿ ಹಿಡಿದಂತಿದೆ. ಈ ಎಲ್ಲ ಸಮಸ್ಯೆಗಳಿದ್ದರೂ ಸ್ವಚ್ಚ ಭಾರತದ ಯೋಜನೆಯಡಿ ಒಂದು ಪ್ರಶಸ್ತಿ ಪತ್ರ ಪಡೆದು ಆತ್ಮರತಿಯಲ್ಲಿ ಬೀಗುತ್ತಾ ಬೆನ್ನುತಟ್ಟಿಕೊಳ್ಳುವುದರಲ್ಲಿ ನಗರ ಪಾಲಿಕೆಗಳು, ಪುರಸಭೆಗಳು, ಸರ್ಕಾರಗಳು ನಿರತರಾಗಿವೆ. ನದಿಗಳ ಮಾಲಿನ್ಯಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡುವ ಕೈಗಾರಿಕೆಗಳನ್ನು ನಿಯಂತ್ರಿಸುವ ಯಾವುದೇ ಆಡಳಿತ ಯಂತ್ರವನ್ನು ಕಾಣಲಾಗುತ್ತಿಲ್ಲ. ಕೈಗಾರಿಕಾ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ಈಗ ಕೊರೋನಾ ತ್ಯಾಜ್ಯ, ಮಾಸ್ಕ್ ಗಳು, ಕೈಗವುಸುಗಳು, ಸ್ಯಾನಿಟೈಸರ್ ಬಾಟಲಿಗಳು ಭಾರತದ ತ್ಯಾಜ್ಯ ಶಿಖರಗಳನ್ನು ಎತ್ತರಿಸುವ ಕಚ್ಚಾವಸ್ತುಗಳಾಗುತ್ತಿವೆ. ಇದರ ನಡುವೆ ಭಾರತದಲ್ಲಿ ವಾಯು ಮಾಲಿನ್ಯದ ಬಗ್ಗೆ ಯಾವ ಸರ್ಕಾರವೂ ಚಿಂತಿಸುತ್ತಿಲ್ಲ. ಮೂಲತಃ ಡೊಲಾಂಡ್ ಟ್ರಂಪ್ ಟೀಕೆ ಮಾಡಿರುವುದು ದೆಹಲಿಯಲ್ಲಿನ ವಾಯು ಮಾಲಿನ್ಯವನ್ನು ಕುರಿತು. ಇದು ನಿಜವೂ ಹೌದು. ಬೆಂಗಳೂರು ದೆಹಲಿಗಿಂತಲೂ ಕಡಿಮೆಯೇನಿಲ್ಲ. ವಾಹನ ದಟ್ಟಣೆ ಹೆಚ್ಚಾಗುತ್ತಿರುವುದು, ಅನಗತ್ಯ ವಾಹನ ಬಳಕೆ ಮತ್ತು ಕೈಗಾರಿಕಾ ಘಟಕಗಳಿಂದ ಹೊರಬರುವ ಇಂಗಾಲದ ಪ್ರಮಾಣ ಭಾರತದ ಎಲ್ಲ ಪ್ರಮುಖ ನಗರಗಳಲ್ಲೂ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಿಸುತ್ತಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕಾಗಿಯೂ ಭಾರತದಲ್ಲಿ ಹಲವು ಕಾನೂನುಗಳಿವೆ. ಆದರೆ ಯಾವುದೂ ಪಾಲನೆಯಾಗುತ್ತಿಲ್ಲ. ಈ ದೇಶದಲ್ಲಿ ಕಾನೂನು ಉಲ್ಲಂಘನೆಯೂ ಸಹ ಶ್ರೇಣೀಕೃತವಾಗಿರುವುದರಿಂದ ಎಲ್ಲರಿಗೂ ಶಿಕ್ಷೆಯಾಗುವುದಿಲ್ಲ. ಹಥ್ರಾಸ್ ಪ್ರಕರಣದಲ್ಲಿ ಇದು ಅತ್ಯಾಚಾರಕ್ಕೂ ಅನ್ವಯವಾಗಿರುವುದನ್ನು ಕಾಣಬಹುದು. ತ್ಯಾಜ್ಯ ವಿಲೇವಾರಿ ಎಂದರೆ ಮನೆಗಳಿಂದ ಸಂಗ್ರಹಿಸಿ ಒಂದೆಡೆ ಶೇಖರಿಸುವುದು, ರಸ್ತೆ ಬದಿಯ ತೊಟ್ಟಿಗಳಲ್ಲಿರುವುದನ್ನು ತ್ಯಾಜ್ಯಗುಡ್ಡದ ಮೇಲೆ ಸುರಿಯುವುದು ಇಷ್ಟು ಮಾತ್ರವೇನೋ ಎನ್ನುವಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ರಸ್ತೆ ಬದಿಗಳಲ್ಲಿನ ಕಸದ ತೊಟ್ಟಿಗಳ ದುರ್ನಾತ ನಾಲ್ಕಾರು ರಸ್ತೆಗಳಿಗೆ ಹರಡುವವರೆಗೂ ಅಲ್ಲಿಯೇ ಇರುತ್ತವೆ. ನಾವು ಅದನ್ನು ಹಾದು ಹೋಗುವಾಗ ಮೂಗು ಮುಚ್ಚಿಕೊಂಡು ಹೋಗುತ್ತೇವೆಯೇ ಹೊರತು, ಇದೇಕೆ ಹೀಗೆ ಎಂದು ಯೋಚಿಸುವುದಿಲ್ಲ. ಏಕೆಂದರೆ ಕಸ ಹಾಕುವುದು ನಮ್ಮ ಕೆಲಸ, ತೆಗೆಯುವುದು ಅಲ್ಲ ಎನ್ನುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಾಗಿದೆ. ಇದಕ್ಕೆ ಕಾರಣ ಜಾತಿ ವ್ಯವಸ್ಥೆ ಎಂದು ಹೇಳಬೇಕಿಲ್ಲ. ಕಸ ವಿಲೇವಾರಿಗೆ ಬರುವ ಕಾರ್ಮಿಕರ ಸಮವಸ್ತ್ರ ಮತ್ತು ಅವರ ದೈಹಿಕ ರಕ್ಷಣೆ ಮತ್ತು ಆರೋಗ್ಯ ರಕ್ಷೆಯ ಸಾಧನಗಳನ್ನು ನೋಡಿದರೆ ಎದೆ ಝಲ್ಲೆನ್ನುತ್ತದೆ. ಕೊರೋನಾ ಸಂದರ್ಭದಲ್ಲೂ ಇದೇ ರೀತಿಯಲ್ಲೇ ಕಾರ್ಯ ನಿರ್ವಹಿಸಿರುವುದನ್ನು ನೋಡಿದ್ದೇವೆ. ಈ ಕೊಳಕು ನಮ್ಮದೇ ಕೊಡುಗೆ ಅಲ್ಲವೇ ? ಈ ಕಸದ ರಾಶಿಯನ್ನು, ದೊಡ್ಡ ಗಾತ್ರದ ಕಸದ ತೊಟ್ಟಿಗಳನ್ನು ಶುಚಿಗೊಳಿಸಲು ಯಂತ್ರಗಳನ್ನು ಬಳಸಬಹುದು. ಕಸ ಸಾಗಿಸುವ ವಾಹನಗಳನ್ನು ನಿತ್ಯ ಸ್ವಚ್ಚಗೊಳಿಸಬಹುದು. ಕಸದ ವಾಹನ ಎಂದರೆ ಪಕ್ಕದಲ್ಲಿ ನಿಲ್ಲಲಾರದಷ್ಟು ದುರ್ನಾತ ಹೊಂದಿರಲೇಬೇಕು ಎನ್ನುವ ನಿಯಮವೇನಾದರೂ ಇದೆಯೇ ? ನಮ್ಮಲ್ಲಿ ಶವ ಸಾಗಿಸುವ ವಾಹನ ಇದಕ್ಕಿಂತಲೂ ಹೆಚ್ಚು ಶುಚಿಯಾಗಿ ಕಾಣುತ್ತದೆ. ಕಸ ಸಾಗಿಸುವ ನೌಕರರು ದೊಡ್ಡ ಲಾರಿಗಳಲ್ಲಿ ಕಸದ ರಾಶಿಯ ಮೇಲೆ ಅಥವಾ ಅದರ ನಡುವೆ ಕುಳಿತು ಪ್ರಯಾಣ ಮಾಡುವ ದೃಶ್ಯವನ್ನು ಯಾವುದೇ ನಗರಗಳಲ್ಲಾದರೂ ಕಾಣಬಹುದು ? ಏಕೆ ಹೀಗೆ ? ಅವರಿಗಾಗಿಯೇ ಪ್ರತ್ಯೇಕ ವಾಹನ ಒದಗಿಸಲಾಗುವುದಿಲ್ಲವೇ ? ಕಳ್ಳತನ, ಕೊಲೆ, ಸುಲಿಗೆ, ಅತ್ಯಾಚಾರ ಹೀಗೆ ಅಪರಾಧಗಳನ್ನೆಸಗಿದವರನ್ನು ಕರೆದೊಯ್ಯುವ ಪೊಲೀಸ್ ಇಲಾಖೆಯ ವಾಹನಗಳು ಎಷ್ಟು ಶುಚಿಯಾಗಿರುತ್ತವೆ ಅಲ್ಲವೇ ? ಯಾವುದೇ ತಪ್ಪು ಮಾಡದೆ ಮಾನವ ಸಮಾಜದ ಉತ್ತಮ ಆರೋಗ್ಯಕ್ಕಾಗಿ, ಸ್ವಚ್ಚ ಪರಿಸರಕ್ಕಾಗಿ ತಮ್ಮ ಜೀವ ಒತ್ತ ಇಟ್ಟು ದುಡಿಯುವ ಈ ಕಾರ್ಮಿಕರಿಗೆ ಸುಸಜ್ಜಿತ ವಾಹನ ನೀಡಲಾಗುವುದಿಲ್ಲವೇ ? ಇದು ಸಾಧ್ಯ ಆದರೆ ಮಾಡುವ ಇಚ್ಚಾಶಕ್ತಿ ನಮ್ಮ ಆಡಳಿತ ವ್ಯವಸ್ಥೆಗೆ, ಆಳುವ ವರ್ಗಗಳಿಗೆ ಇಲ್ಲ. ಇಚ್ಚಾಶಕ್ತಿ ಇದ್ದರೂ ಜನುಮಕ್ಕಂಟಿದ ಜಾತಿ ಪ್ರಜ್ಞೆ ಅಡ್ಡಿಯಾಗುತ್ತದೆ. ಕಾರಣ ಈ ತ್ಯಾಜ್ಯದ ಗುಡ್ಡಗಳನ್ನೂ ಮೀರಿಸುವಷ್ಟು ಕೊಳಕು ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೆ, ಜಾತಿ ಪ್ರಜ್ಞೆಯ ರೂಪದಲ್ಲಿ ಸೇರಿಕೊಂಡುಬಿಟ್ಟಿದೆ. ಮಲಗುಂಡಿಯಲ್ಲಿ ಬಿದ್ದು ಸಾಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದರೂ ಒಂದು ಕಠಿಣ ಕಾನೂನು ಜಾರಿಯಾಗಿಲ್ಲ, ಎರಡು ದಶಕಗಳ ಹಿಂದೆ ಮಲಗುಂಡಿ ಸ್ವಚ್ಚತೆಗೆ ಮಾನವ ಶ್ರಮ ಬಳಸುವಂತಿಲ್ಲ ಎಂದು ಕಠಿಣ ಕಾನೂನು ಜಾರಿಯಾಗಿದ್ದರೂ ಪಾಲಿಸುವವರಿಲ್ಲ. ಇದು ಕೇವಲ ಮಲಗುಂಡಿಗೆ ಸಂಬಂಧಪಟ್ಟ ವಿಚಾರವಲ್ಲ. ಹಥ್ರಾಸ್ ಘಟನೆ ನಮ್ಮ ದೇಶದಲ್ಲಿ ಅಸ್ಪೃಶ್ಯತೆ ಎಂತಹ ಕ್ರೌರ್ಯವನ್ನು ಸೃಷ್ಟಿಸಿದೆ ಎನ್ನುವುದನ್ನು ನಿರೂಪಿಸಿದೆ. ಅಲ್ಲಿ ಇಡೀ ಆಡಳಿತ ವ್ಯವಸ್ಥೆಯೇ ಮಲಗುಂಡಿಯಂತೆ ಕಾಣಿಸುತ್ತಿದೆ. ಖೈರ್ಲಾಂಜಿಯಿಂದ ಹಥ್ರಾಸ್ ವರೆಗೆ ಇದನ್ನು ಗಮನಿಸುತ್ತಲೇ ಬಂದಿದ್ದೇವೆ. ಒಂದು ಅಸ್ಪೃಶ್ಯ ಜೀವ ಕಸದ ರಾಶಿಯ ಮೇಲಿರಲಿ, ಮಲಗುಂಡಿಯಲ್ಲಿರಲಿ, ಅನಾಥ ಶವದಂತೆ ಬಿದ್ದಿರಲಿ ನಮ್ಮ ಆಡಳಿತ ವ್ಯವಸ್ಥೆಯ ಮನಸು ವಿಚಲಿತವಾಗುವುದಿಲ್ಲ. ಆಡಳಿತ ವ್ಯವಸ್ಥೆಯ ಒಂದು ಭಾಗವಾಗಿದ್ದು, ಅಧಿಕಾರ ರಾಜಕಾರಣದ ಪ್ರಭಾವದಿಂದ ತಮ್ಮ ಸ್ವಂತಿಕೆಯನ್ನೂ ಕಳೆದುಕೊಂಡಿರುವ ಜನಪ್ರತಿನಿಧಿಗಳೂ ವಿಚಲಿತರಾಗುವುದಿಲ್ಲ. ಹಥ್ರಾಸ್ ಸ್ವತಂತ್ರ ಭಾರತದ ಮೊದಲ ಕಪ್ಪು ಚುಕ್ಕೆಯಲ್ಲ. ಕೊನೆಯದೂ ಅಲ್ಲ. ಆದರೆ ಈ ಕಪ್ಪುಚುಕ್ಕೆ ನಮ್ಮ ದೃಷ್ಟಿಗೆ ಅಡ್ಡಬರದೆ ಹೋದರೆ ನಾವು ದೃಷ್ಟಿಹೀನರಾಗುವುದೇ ಲೇಸು. ಅತ್ಯಾಚಾರಕ್ಕೊಳಗಾದ ಅಸ್ಪೃಶ್ಯ ಸಮುದಾಯದ ಹೆಣ್ಣುಮಗಳ ಶವವನ್ನು ಕುಟುಂಬದವರಿಗೂ ನೀಡದೆ ಸುಟ್ಟುಹಾಕುವ ಒಂದು ಆಡಳಿತ ವ್ಯವಸ್ಥೆ ನಮ್ಮಲ್ಲಿದೆ. ಖೈರ್ಲಾಂಜಿ ಮತ್ತು ಕಂಬಾಲಪಲ್ಲಿಯಲ್ಲಿ ಮೇಲ್ಜಾತಿಯ ದುಷ್ಟ ಮನಸುಗಳು ಮಾಡಿದ್ದ ಕೃತ್ಯವನ್ನು ಹಥ್ರಾಸ್ ನಲ್ಲಿ ಮೇಲ್ಜಾತಿಯ ರಕ್ಷಕರಾಗಿ ಪೊಲೀಸ್ ಸಿಬ್ಬಂದಿ ನೆರವೇರಿಸಿದ್ದಾರೆ. ಅಂದರೆ ಪ್ರಭುತ್ವದ ಒಂದು ಅಂಗ ಭಾರತದ ಜಾತಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಪಾಲಿಸುತ್ತಿದೆ. ಇನ್ನೊಂದು ಅಂಗ ರಕ್ಷಣೆ ನೀಡುತ್ತಿದೆ. ಈ ಘಟನೆ ನಮ್ಮೊಳಗಿನ ಜಾತಿ ಮನಸಿನ ಮಾಲಿನ್ಯವನ್ನು ಸಂಪೂರ್ಣವಾಗಿ ಹೊರಗೆಡಹಿದೆ. ಒಂದು ಅತ್ಯಾಚಾರ ಪ್ರಕರಣಕ್ಕೆ ಪ್ರತಿಕ್ರಯಿಸಲೂ,ಸ್ಪಂದಿಸಲೂ ಜಾತಿ ಒಂದು ಅಡ್ಡಗೋಡೆಯಂತೆ ತಡೆಯೊಡ್ಡುವುದು ನಮ್ಮೊಳಗಿನ ಹಸಿ ಮತ್ತು ಒಣಕಸದ ಸುಳಿವನ್ನು ನೀಡುವಂತಿದೆ. ಸ್ವಚ್ಚ ಭಾರತ ಮತ್ತು ಶುಚಿತ್ವವನ್ನು ಶೌಚಾಲಯಗಳಿಂದ ಹೊರತಂದು ಮನೆಮನೆಗೂ ತಲುಪಿಸಬೇಕೆಂದರೆ ಭಾರತೀಯ ಸಮಾಜ ಈ ಜಾತಿ ಮನಸ್ಸಿನ ಕೊಳಕನ್ನು ಹೊರಹಾಕಬೇಕು. ಡೊಲಾಂಡ್ ಟ್ರಂಪ್ ಅವರ ಮಾತುಗಳು ರಾಜಕೀಯ ಲಾಭಕ್ಕಾಗಿ ನೀಡಿರುವ ಒಂದು ಹೇಳಿಕೆ. ಅದು ನಮ್ಮಲ್ಲಿ ಆಕ್ರೋಶ ಉಂಟುಮಾಡಬೇಕಾದ ಅನಿವಾರ್ಯತೆಯೂ ಇಲ್ಲ. ಏಕೆಂದರೆ ಕೊರೋನಾ ವೈರಾಣುವಿನ ನಡುವೆ ಅವರು ಭಾರತಕ್ಕೆ ಭೇಟಿ ನೀಡಿದಾಗ ದೇಶಕ್ಕೆ ಆರ್ಥಿಕ ಅಭಿವೃದ್ಧಿಯ ಮಾದರಿಯನ್ನು ನೀಡಿದ ರಾಜ್ಯದಲ್ಲೇ, ರಸ್ತೆಯ ಇಕ್ಕೆಲಗಳಲ್ಲಿರುವ ಕೊಳಕನ್ನು ಮರೆಮಾಚಲು ನೂರು ಕೋಟಿ ರೂ ಖರ್ಚು ಮಾಡಿ ಗೋಡೆಗಳನ್ನು ನಿರ್ಮಿಸಲಾಗಿತ್ತು. ಇದು ವಿದೇಶಿ ಗಣ್ಯರೊಬ್ಬರನ್ನು ಸಂತುಷ್ಟಗೊಳಿಸಲು ನಿರ್ಮಿಸಿದ ಗೋಡೆ. ಆದರೆ ನಮ್ಮ ನಡುವೆಯೇ ನಾವೇ ನಿರ್ಮಿಸಿಕೊಂಡಿರುವ ಜಾತಿ ಗೋಡೆಗಳಲ್ಲಿ ಅಡಗಿರುವ ಕೊಳಕು, ಹೊಲಸು ಮತ್ತು ತ್ಯಾಜ್ಯ ಇವು ಬೌದ್ಧಿಕ ಸ್ವರೂಪದ್ದು ಎನ್ನುವುದನ್ನು ಮರೆಯಕೂಡದು. ಈ ಬೌದ್ಧಿಕ ಕೊಳಕನ್ನು ಹೊರಹಾಕುವ ಮೂಲಕ ಅಥವಾ ದೇಶದ ಮೇಲ್ಜಾತಿ ಸಮುದಾಯದ ಮನದಾಳದಲ್ಲಿ ಸುಪ್ತವಾಗಿದ್ದು, ಗುಪ್ತಗಾಮಿನಿಯಂತೆ ಹರಿಯುತ್ತಿರುವ ಜಾತಿ ಪ್ರಜ್ಞೆ, ಜಾತಿ ಶ್ರೇಷ್ಠತೆಯ ಅಹಮಿಕೆ ಹಾಗು ಅಸ್ಪೃಶ್ಯತೆಯ ಬಗ್ಗೆ ಇರುವ ನಿಷ್ಕಾಳಜಿಯನ್ನು ತೊಡೆದುಹಾಕುವ ಮೂಲಕ ನಾವು ಡೊಲಾಂಡ್ ಟ್ರಂಪ್ ಅವರಿಗೆ ಸವಾಲು ಹಾಕಬಹುದು. ಒಂದು ಸಮಾಜ ಅಥವಾ ದೇಶ ಅಥವಾ ಒಂದು ದೇಹ ಶುಚಿ ಎನಿಸುವುದು, ಪರಿಶುದ್ಧ ಎನಿಸುವುದು, ಪ್ರಬುದ್ಧ ಎನಿಸುವುದು ಬಾಹ್ಯ ಸ್ವಚ್ಚತೆಯಿಂದಲ್ಲ, ಆಂತರಿಕ ಸ್ವಚ್ಚತೆಯಿಂದ. ಈ ನಿಟ್ಟಿನಲ್ಲಿ ಭಾರತ ಇನ್ನು ಬಹುದೂರ ಸಾಗಬೇಕಿದೆ. ವಿಜ್ಞಾನ, ವೈಚಾರಿಕತೆ, ವಿವೇಕ, ವಿವೇಚನೆ ಇವೆಲ್ಲವನ್ನೂ ಒಳಗೊಂಡಂತೆ ಕಂಡರೂ ಭಾರತ ಕೊಳಕಾಗಿ ಕಾಣುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣ ನಮ್ಮ ಬೌದ್ಧಿಕ ಮಾಲಿನ್ಯ. ಈ ಬೌದ್ಧಿಕ ಮಾಲಿನ್ಯದ ಮೂಲ ಇರುವುದು ಜಾತಿ ವ್ಯವಸ್ಥೆಯಲ್ಲಿ, ಜಾತಿ ಪ್ರಜ್ಞೆಯಲ್ಲಿ, ಜಾತಿ ಶ್ರೇಷ್ಠತೆಯಲ್ಲಿ. ಇದರಿಂದ ಹೊರಬರಲು ಟ್ರಂಪ್ ನೆನಪಿಸಬೇಕಿಲ್ಲ. ನಮ್ಮಲ್ಲಿ ಪ್ರಜ್ಞೆ ಜಾಗೃತವಾಗಬೇಕಷ್ಟೇ.
2020/10/24 23:55:22
https://www.suddidina.com/daily-news/music-director-rajan-passes-away/
mC4
ಗಣರಾಜ್ಯೋತ್ಸವದಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿ; ಪೊಲೀಸರ ನಿರ್ಧಾರಕ್ಕೆ ಬಿಟ್ಟ ಕೋರ್ಟ್ | Police First Authority To Decide On Farmers Tractor Rally In Delhi Said Supreme Court - Kannada Oneindia ನವದೆಹಲಿ, ಜನವರಿ 18: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಸಂಬಂಧಿಸಿದಂತೆ ನಿರ್ದೇಶನ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಪರಿಶೀಲಿಸಿದೆ. "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸರದ್ದು. ಹೀಗಾಗಿ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನೀಡಬೇಕೋ ಬೇಡವೋ ಎಂಬುದನ್ನು ಪೊಲೀಸರು ಮೊದಲು ನಿರ್ಧರಿಸಬೇಕಿದೆ. ಅವರೇ ಈ ವಿಷಯದಲ್ಲಿ ಮೊದಲು ನಿರ್ಧಾರ ತೆಗೆದುಕೊಳ್ಳಬೇಕಿರುವವರು" ಎಂದು ಹೇಳಿದೆ. ಸೋಮವಾರ ವಿಚಾರಣೆ ನಡೆಸಿದ ಎಸ್.ಎ ಬೊಬ್ಡೆ ಅವರನ್ನೊಳಗೊಂಡ ಪೀಠವು, "ಪೊಲೀಸರು ಕಾನೂನಿನಡಿಯಲ್ಲಿ ಎಲ್ಲಾ ಅಧಿಕಾರ ಬಳಸಿಕೊಳ್ಳಲು ಅವಕಾಶವಿದೆ" ಎಂದು ತಿಳಿಸಿದ್ದು, ಜನವರಿ 20ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಕಳೆದ ವಾರ ಕೇಂದ್ರದ ಮೂರು ವಿವಾದಿತ ಕೃಷಿ ಕಾಯ್ದೆಗಳಿಗೆ ತಡೆಯೊಡ್ಡಿದ್ದ ಸುಪ್ರೀಂ ಕೋರ್ಟ್, ನಾಲ್ಕು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ರೈತರು ಹಾಗೂ ಕೇಂದ್ರದ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಮುಂದಾಗಿತ್ತು. ಆದರೆ ಈ ಸಮಿತಿಯ ಯಾವುದೇ ಸಭೆಗಳಿಗೂ ಹೋಗುವುದಿಲ್ಲ ಎಂದು ರೈತ ಸಂಘಟನೆಗಳು ನಿರ್ಧರಿಸಿದ್ದು, ತಮ್ಮ ನಿಲುವಿಗೆ ಬದ್ಧರಾಗಿ ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. ಗಣರಾಜ್ಯೋತ್ಸವದ ಮೆರವಣಿಗೆಗೆ ಅಡ್ಡಿ ಮಾಡದೇ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. farmer agriculture protest republic day delhi supreme court ರೈತ ಕೃಷಿ ಪ್ರತಿಭಟನೆ ಗಣರಾಜ್ಯೋತ್ಸವ ದೆಹಲಿ ಸುಪ್ರೀಂ ಕೋರ್ಟ್ The question of farmers entry into Delhi is a law and order situation that is to be determined by Police said Supreme Court while hearing about proposed tractor rally on Republic Day
2021/06/23 16:17:52
https://kannada.oneindia.com/agriculture/police-first-authority-to-decide-on-farmers-tractor-rally-in-delhi-said-supreme-court-212969.html
mC4
ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?! | BJP brings out 2010 incident to attack Rahul Gandhi - Kannada Oneindia » ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?! Updated: Tuesday, November 28, 2017, 17:10 [IST] ರಾಹುಲ್ ಗಾಂಧಿ ತೊಂದರೆಯಲ್ಲಿದ್ದಾರಾ? ಏನಿದು ಬಿಜೆಪಿ ಹೊಸ ಪ್ಲಾನ್ ? | Oneindia Kannada ಅಹ್ಮದಾಬಾದ್, ನವೆಂಬರ್ 28: ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಲಿರುವ ರಾಹುಲ್ ಗಾಂಧಿ, ತಾವೇ ಆಡಿದ ಮಾತುಗಳಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರಾ? ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ರಾಹುಲ್ ಗಾಂಧಿ ಆಡಿದ್ದ ಬಾಲಿಶ ಹೇಳಿಕೆಗಳನ್ನೇ ಇದೀಗ ಕೆದಕಿ, ಗುಜರಾತ್ ಚುನಾವಣೆಯ ಹೊತ್ತಲ್ಲಿ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆಯಾ? ಹೌದು, ಗುಜರಾತ್ ಚುನಾವಣೆಗೆ ಈಗಾಗಲೇ ದಿನಗಣನೆ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್ ಉಭಯ ಪಕ್ಷಗಳೂ ಬಿರುಸಿನ ಪ್ರಚಾರಕ್ಕೆತೊಡಗಿವೆ. ಈ ಮಧ್ಯೆ, ಉಗ್ರ ಹಫೀಜ್ ಸಯೀದ್ ಬಿಡುಗಡೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯ ಎಂಬಂತೆ ಬಿಂಬಿಸಿ, 'hugplomacy'ಗೆ ಸೋಲುಂಟಾಗಿದೆ ಎಂದು ಜರೆದಿರುವ ರಾಹುಲ್ ಗಾಂಧಿ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 2010 ರ ಸಮಯದಲ್ಲಿ ಆಡಿದ್ದ ಮಾತುಗಳನ್ನು ಇದೀಗ 'ರಿವೈಂಡ್' ಮಾಡಿರುವ ಬಿಜೆಪಿಯ ಕೇಂದ್ರ ಕಾನೂನು ಸಚಿವ, ಬಿಜೆಪಿಯ ರವಿಶಂಕರ್ ಪ್ರಸಾದ್ ಕಾಂಗ್ರೆಸ್ ಯುವರಾಜರನ್ನು ಲೇವಡಿ ಮಾಡಿದ್ದಾರೆ! ಏನಿದು hugplomacy ಹೇಳಿಕೆ? ಜಾಮತ್ ಉಲ್ ದಾವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ, ಮುಂಬೈ ಸ್ಫೋಟದ ರೂವಾರಿ, ಲಷ್ಕರ್ ಇ ತೊಯ್ಬಾ ಸ್ಥಾಪಕರಲ್ಲೊಬ್ಬನಾದ ಹಫೀಜ್ ಸಯೀದ್ ನನ್ನು ಪಾಕ್ ಸರ್ಕಾರ, 'ಸ್ಪಷ್ಟ ಸಾಕ್ಷ್ಯಾಧಾರವಿಲ್ಲ' ಎಂಬ ಕಾರಣಕ್ಕೆ ಬಿಡುಗಡೆ ಮಾಡಿದೆ. ಇದನ್ನು ಮೋದಿ ಸರ್ಕಾರದ ವೈಫಲ್ಯ ಎಂದಿರುವ ರಾಹುಲ್ ಗಾಂಧಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ಮತ್ತು ಅಪ್ಪುಗೆಗಳು ಯಾವುದೇ ಪರಿಣಾಮ ಬೀರಿಲ್ಲ. ಈ ಅಪ್ಪುಗೆ ಶೈಲಿ ವೈಫಲ್ಯವಾಗಿದೆ ಎಂಬುದನ್ನೇ ವಿಭಿನ್ನವಾಗಿ hugplomacy ಎಂದು ಕರೆದು ಟ್ವೀಟ್ ಮಾಡಿದ್ದರು. ಇದು ಬಿಜೆಪಿ ನಾಯಕರ ಕೆಂಗಣ್ಣಿಗೆ ಕಾರಣವಾಗಿತ್ತು. 2010 ರಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು? 2010 ರಲ್ಲಿ, ಆಗಿನ ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಭಾರತಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, ಹಿಲರಿಯವರನ್ನು ಊಟಕ್ಕೆ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಹಾಜರಿದ್ದ ರಾಹುಲ್ ಗಾಂಧಿ ಅವರನ್ನು ಅಮೆರಿಕ ರಾಯಭಾರಿ ಟೊಮೋಥಿ ರೊಯ್ಮರ್, 'ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು' ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ರಾಹುಲ್, 'ಲಷ್ಕರ್ ವಿಷಯ ಬಿಡಿ, ಭಾರತದಲ್ಲಿ ಅದಕ್ಕಿಂತ ಭಯಾನಕವಾದುದು ಹಿಂದೂ ಭಯೋತ್ಪಾದನೆ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಿಕಿಲೀಕ್ಸ್ ಮೂಲಕ ಲೀಕ್ ಆಗಿತ್ತು! ರಾಹುಲ್ ಗಾಂಧಿ ನೀಡಿದ್ದ ಈ ವಿವಾದಾತ್ಮಕ ಹೇಳಿಕೆ ವಿಕಿಲೀಕ್ಸ್ ಮೂಲಕ ಬಯಲಿಗೆ ಬಂದಿತ್ತು. 'ಭಾರತದಲ್ಲಿ ಲಷ್ಕರ್ ಇ ತೊಯ್ಬಾ ಸಂಘಟನೆಗಿಂತ ಭಯಾನಕವಾಗಿರುವುದು ಹಿಂದೂ ಸಂಘಟನೆ. ಹಿಂದೂ ಮೂಲಭೂತವಾದವೇ ಈ ದೇಶಕ್ಕೆ ಬಹುದೊಡ್ಡ ಅಪಾಯವಾಗಬಹುದು' ಎಂದು ರಾಹುಲ್ ಗಾಂಧಿ ಹೇಳಿದ್ದರು ಎಂದು ಪತ್ರಿಕೆಯೊಂದು ಬರೆದಿತ್ತು. ಈಗೇಕೆ ನೆನಪಾಯ್ತು ಈ ವಿವಾದ? ಈ ವಿವಾದ ಈಗ ನೆನಪಾಗಿರುವ ಹಿಂದೆ ಗುಜರಾತ್ ಚುನಾವಣೆಯಲ್ಲಿ ಜನರಿಗೆ ರಾಹುಲ್ ಗಾಂಧಿಯವರ ಅಪ್ರಬುದ್ಧ ಹೇಳಿಕೆಗಳನ್ನು ನೆನಪಿಸುವ ಉದ್ದೇಶವಿರುವುದು ಸುಳ್ಳಲ್ಲ. ಅದರೊಂದಿಗೆ, ಒಂದಾನೊಂದು ಕಾಲದಲ್ಲಿ ಹಿಂದೂಗಳೇ ಲಷ್ಕರ್ ಭಯೋತ್ಪಾದಕರಿಗಿಂತ ಅಪಾಯಕಾರಿ ಎಂದಿದ್ದ ರಾಹುಲ್, ಇದೀಗ ಹಫೀಜ್ ಬಿಡುಗಡೆಯ ಬಗ್ಗೆ ಮೋದಿ ಸರ್ಕಾರದ ಕಾಲೆಳೆಯುವ ಪ್ರಯತ್ನ ಮಾಡುತ್ತಿರುವುದೇಕೆ ಎಂಬ ಪ್ರಶ್ನೆಯೂ ಇರದೇ ಇಲ್ಲ. ಒಟ್ಟಿನಲ್ಲಿ ತಾವೇ ತೋಡಿದ್ದ ವಿವಾದದ ಹಳ್ಳದಲ್ಲಿ ಇದೀಗ ರಾಹುಲ್ ಗಾಂಧಿ ತಾವೇ ಬೀಳುವಂಥ ಪರಿಸ್ಥಿತಿ ತಂದುಕೊಂಡಿದ್ದಾರೆ. rahul gandhi gujarat gujarat assembly elections 2017 bjp congress narendra modi ರಾಹುಲ್ ಗಾಂಧಿ ಕಾಂಗ್ರೆಸ್ ಬಿಜೆಪಿ ನರೇಂದ್ರ ಮೋದಿ Union Law Minister Ravi Shankar Prasad on Nov 28th raked up a 2010 incident in which Congress Vice President Rahul Gandhi had termed 'Hindu terror' as a threat to the nation instead of Lashkar-e-Taiba (LeT) chief and 2008 Mumbai attack mastermind, Hafiz Saeed.
2018/10/17 15:11:50
https://kannada.oneindia.com/news/india/bjp-brings-out-2010-incident-to-attack-rahul-gandhi-130052.html
mC4
ಸ್ಪೇನಿನ ಜನಪದ ಕತೆ: ಮಾಯಾ ಕನ್ನಡಿ – ಋತುಮಾನ ಸ್ಪೇನಿನ ಜನಪದ ಕತೆ: ಮಾಯಾ ಕನ್ನಡಿ Author Ruthumana Date May 26, 2017 ಜಗತ್ತಿನ ಜನಪದವೇ ಋತುಮಾನದ ಹೊಸ ಅಂಕಣ 'ಜಗಪದ'. ಬೇರೆ ಬೇರೆ ದೇಶಭಾಷೆಗಳ ಅಪರೂಪದ ಜನಪದ ಕತೆಗಳೀಗ ಕನ್ನಡದಲ್ಲಿ. ಮೊದಲಿಗೆ ಸ್ಪೇನ್ ದೇಶದ ಕತೆ ಮಾಯಾ ಕನ್ನಡಿ. ಗ್ರನಾಡದ ರಾಜ ಮದುವೆಯಾಗುತ್ತಾನೆಂಬ ಸುದ್ದಿ ಮೊದಲು ತಲುಪಿದ್ದು ಅಸ್ಥಾನದ ಕ್ಷೌರಿಕನಿಗೆ. ನಂತರ ರಾತ್ರಿ ಪಾಳೆಗಾರನಿಗೆ. ತದ ನಂತರ ಈ ವಿಷಯ ತಲುಪಿದ್ದು ಗ್ರನಾಡದ ಹಣ್ಣು ಹಣ್ಣು ಮುದುಕಿಗೆ. ಕ್ಷೌರಿಕ ತನ್ನಲ್ಲಿ ಬರುವ ಗಿರಾಕಿಗಳಿಗೆಲ್ಲ ಮದುವೆಯ ಸುದ್ದಿ ಹೇಳತೊಡಗಿದ. ಅವರು ಅವರವರ ಗೆಳೆಯರಿಗೆ ಹೇಳಿದರು. ರಾತ್ರಿ ಪಾಳೆಗಾರ , ಆಸ್ಥಾನದ ಕೆಲಸಗಾರರಿಗೆ ಕೇಳಿಸುವಂತೆ ಹೇಳಿದ. ಸುದ್ದಿ ಕೇಳಿದ ಆಳುಗಳು ಅದರ ಯೋಚನೆಯಲ್ಲೇ ಮುಳುಗಿಹೋದರು. ಹಗಲು ರಾತ್ರಿ ಎನ್ನದೆ ವಯಸ್ಸಾದ ಮಹಿಳೆಯರ ಬಾಯಿಂದ ಬಾಯಿಗೆ ರಾಜನ ಮದುವೆಯ ವಿಚಾರ ಹರಡಿ, ಅದು ಎಲ್ಲರಿಗೂ ಮತ್ತೆ ಮತ್ತೆ ನೆನಪಾಯಿತು. ಕೊನೆಗೂ ಒಂದು ದಿನ ಮದುವೆಯ ಸುದ್ದಿ ಹಳತಾಯಿತು. ಆಗ ಪ್ರಶ್ನೆಗಳು ಎದ್ದವು. " ರಾಜ ಮದುವೆಯಾಗುವುದು ಯಾರನ್ನು?" ಆಗ ಕ್ಷೌರಿಕ " ರಾಜ ಹೆಣ್ಣನ್ನೇ ಮದುವೆಯಾಗುತ್ತಾನೆ." ಅಂದ "ಹೆಣ್ಣೇ! ಹೆಣ್ಣಲ್ಲದೆ ಮತ್ಯಾರನ್ನು ಮದುವೆಯಾಗಬೇಕು ಅವರು?" ಅಂದರು ಕೇಳಿದವರು. " ಎಲ್ಲಾ ಹೆಣ್ಣು ರಾಜನನ್ನು ಮದುವೆಯಾಗಲು ಯೋಗ್ಯ್ರರಲ್ಲ. ಕೆಲವರು ಅಶುದ್ಧರೂ ಇರ್ತಾರೆ" ಕ್ಷೌರಿಕ ಉತ್ತರಿಸಿದ. " ಅಶುದ್ಧರೇ? ಏನು ನಿನ್ನ ಮಾತಿನ ಅರ್ಥ? ಇಲ್ಲಿ ಈ ಸ್ಪೇನ್ ನೆಲದಲ್ಲಿ ನಮ್ಮ ರಾಜನಿಗೆ ಒಬ್ಬ ಯೋಗ್ಯವಾದ ಹೆಣ್ಣು ಸಿಗುವುದಿಲ್ಲವೇ?" ಕೇಳುಗರ ಪ್ರಶ್ನೆ ಬೆಳೆಯುತ್ತ ಹೋಯಿತು. " ಸಿಗುತ್ತಾಳೆ. ಸುಲಭವಾಗಿ ಸಿಗುವವರೆಲ್ಲ ನಾವಂದುಕೊಂಡಂತೆ ಇರುವುದಿಲ್ಲ. ಆದರೆ ಯೋಗ್ಯ ರಾಣಿಯನ್ನು ಹುಡುಕುವ ಕಷ್ಟದಲ್ಲೀಗ ನಾನಿದ್ದೇನೆ " ಎಂದು ಹೇಳಿದ ಕ್ಷೌರಿಕ. " ಏನು? ನೀನಾ? ರಾಜನಿಗೆ ರಾಣಿಯನ್ನು ಹುಡುಕುವುದಕ್ಕೂ, ನಿನಗೂ ಎಲ್ಲಿಂದೆಲ್ಲಿಯ ಸಂಬಂಧವಯ್ಯ?" ಎಲ್ಲರೂ ಕೂಗಿಕೊಂಡರು ಆಶ್ಚರ್ಯದಿಂದ. " ಮರೆಯದಿರಿ. ನಾನೀಗ ರಾಜನ ಅನುಜ್ನೆಗೆ ಒಳಗಾಗಿದ್ದೇನೆ. ಈಗ ರಾಜನ ಚಹರೆಯನ್ನು ಮುಟ್ಟುವ ಅವಕಾಶವಿರುವುದು ನನಗೊಬ್ಬನಿಗೆ. ಅ ಮಾಯಾ ಕನ್ನಡಿ ಇರುವುದು ಕೂಡ ಈಗ ನನ್ನ ಬಳಿ ಮಾತ್ರ. ನಡತೆಯಲ್ಲಾಗಲೀ, ಗುಣದಲ್ಲಾಗಲೀ, ರೂಪದಲ್ಲಾಗಲೀ ಸರಿಯಿಲ್ಲದ ಹೆಣ್ಣು ಆ ಮಾಯಾ ಕನ್ನಡಿಯಲಿ ನೋಡಿದರೆ, ಆಕೆಯ ನಡತೆಯಲ್ಲಿನ ನ್ಯೂನತೆಗಳು ಕನ್ನಡಿಯ ಪ್ರತಿಬಿಂಬದಲ್ಲಿ ಕಲೆಯಾಗಿ ಕಾಣಿಸುತ್ತದೆ." " ರಾಜನ ಮದುವೆಗೆ ಇರಬೇಕಾದ ಅರ್ಹತೆಗಳಲ್ಲಿ ಇದೂ ಒಂದು ಅರ್ಹತೆಯೇ?" ಎಲ್ಲರೂ ಕೇಳಿದರು. " ಇರಬೇಕಾಗಿರುವುದೇ ಕೇವಲ ಇದೊಂದೇ ಅರ್ಹತೆ." ತನ್ನ ಜಾಣತನವನ್ನು ಮೆರೆಯುತ್ತ ಕ್ಷೌರಿಕ ಹೇಳಿದ. "ಆದರೇ.. ವಯಸ್ಸಿನ ಮಿತಿ ಏನಾದರೂ ಇದೆಯೇ?" ಮತ್ತಷ್ಟು ಕುತೂಹಲದಿಂದ ಕೇಳಿದರು. "ಹದಿನೆಂಟು ವಯಸ್ಸು ಮೇಲ್ಪಟ್ಟಿದ್ದರೆ ಸಾಕು." ಕನ್ನಡಿಯ ಮಾಲಿಕ ಹೇಳಿದ. "ಹಾಗಾದರೆ ಗ್ರನಾಡದ ಪ್ರತಿಯೊಬ್ಬ ಹೆಣ್ಣೂ ರಾಣಿಯಾಗುವ ಅರ್ಹತೆ ಪಡೆದಿದ್ದಾರೆ!" ಮತ್ತೊಬ್ಬ ಹೇಳಿದ. "ಆದರೇ ಮೊದಲಿಗೆ ಅವರು ರಾಣಿಯಾಗುವ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕು. ಅವರು ಹೇಳಿದ ಮಾತುಗಳನ್ನು ನಾನಂತೂ ನಂಬುವುದಿಲ್ಲ. ಅದಕ್ಕೆ ಅವರು ನನ್ನ ಪಕ್ಕಕ್ಕೆ ನಿಂತು ಕನ್ನಡಿಯೊಳಗೆ ನೋಡಬೇಕು." ರಾಣಿಯಾಗುವ ಕನಸನ್ನು ಕಂಡವರಿಗೆ ಇರುವ ಏಕೈಕ ಷರತ್ತನ್ನು ತಿಳಿಸಲಾಯಿತು. ಹಲವರು ಈ ಷರತ್ತನ್ನು ಕೇಳಿ ತಮಾಶೆ ಮಾಡಿದರು. ಕೇಳಲು ವಿಚಿತ್ರವೆನಿಸಬಹುದು. ಅದರೆ ಕ್ಷೌರಿಕನ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ನೋಡಲು ಯಾವೊಬ್ಬ ಹೆಣ್ಣೂ ಮುಂದೆ ಬರಲಿಲ್ಲ. ದಿನಗಳು, ವಾರಗಳು ಹಾಗೇ ಕಳೆದು ಹೋದವು. ರಾಜನಿಗೆ ರಾಣಿ ಸಿಗುವ ಯಾವ ಸೂಚನೆಗಳೂ ಸಿಗಲಿಲ್ಲ. ಕೆಲ ಉದಾರ ಮಹಿಳೆಯರು ತಮ್ಮ ಗೆಳತಿಯರಿಗೆ ಈ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸಿದರೂ ಯಾರೊಬ್ಬರೂ ಒಪ್ಪಲಿಲ್ಲ. ರಾಜ ಸುಂದರವಾಗಿದ್ದಾನೆ. ಒಳ್ಳೆ ಮನುಷ್ಯನೂ ಹೌದು. ತನ್ನ ಸದ್ಗುಣಗಳಿಂದ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ. ಅದ್ದರಿಂದ ಯಾರೊಬ್ಬರೂ ರಾಣಿಯಾಗಲು ಮುಂದೆ ಬಾರದಿರುವುದು ತುಂಬಾ ಅಶ್ಚರ್ಯವೆನಿಸಿತು. ಹೀಗೆ ಬಾರದೆ ಇರುವುದಕ್ಕೆ ಸಾಕಷ್ಟು ನೆಪಗಳಂತೂ ಹರಿದು ಬಂದವು. ಕೆಲವರು ಆಗಲೇ ಮದುವೆಯಾಗಿದ್ದಾರೆಂದು ಹೇಳಲಾಯಿತು. ಕೆಲವರು ಕ್ಷೌರಿಕನ ಅಂಗಡಿಯೊಳಗೆ ಕಾಲಿಡಲಾರೆವು ಎಂದರು. ಮತ್ತೆ ಕೆಲವರು ತಾವು ಮದುವೆಯಾಗದೆ ಒಂಟಿಯಾಗಿ ಇರಲು ಬಯಸಿದ್ದೇವೆ ಎಂದರು. ಇದಾದನಂತರದ ನೆಪಗಳು ಮತ್ತಷ್ಟು ಚಾಣಾಕ್ಶತೆಯಿಂದ ಕೂಡಿದ್ದವು. ಪ್ರಜೆಗಳು ರಾಜನ ಮದುವೆಯಾಗುವ ತನಕ ಗ್ರನಾಡದ ಬೇರೆ ಯಾವ ವ್ಯಕ್ತಿಯೂ ಮದುವೆಯಾಗುವ ಬಗ್ಗೆ ಯೋಚನೆ ಕೂಡ ಮಾಡಬಾರದೆಂದು ತಮ್ಮಷ್ಟಕ್ಕೆ ತಾವೆ ಘೊಷಿಸಿಕೊಂಡರು. ನಿಜ ಹೇಳುವುದಾದರೆ ಇದೆಲ್ಲ ನೆಪಗಳು ಆ ಕನ್ನಡಿ ನೋಡುವ ಕರಾರನ್ನು ವಿರೋಧಿಸುವುದಾಗಿತ್ತು. ಮನೆಗಳಲ್ಲಿ ಒಂದು ಕಡೆ ತಂದೆಗೆ ರಾಣಿಯಾಗುವ ಮಗಳ ಆಸೆಯನ್ನು ಕಂಡು ಕಿರಿಕಿರಿ ಅನ್ನಿಸಿದರೆ ಇನ್ನೊಂದು ಕಡೆ ತಾಯಿ ಈ ವಿಷಯದಲ್ಲಿ ಮೌನವಾಗಿರುವುದು ಸಾಮಾನ್ಯವಾಗಿಬಿಟ್ಟಿತ್ತು. ಪ್ರತಿದಿನ ಮುಂಜಾನೆ ರಾಜ ಎದ್ದ ತಕ್ಷಣ ಕೇಳುತ್ತಿದ್ದುದು ಒಂದೇ ಪ್ರಶ್ನೆ. "ಯಾರಾದರೂ ಕನ್ನಡಿಯಲ್ಲಿ ಮುಖ ನೋಡಲು ಒಪ್ಪಿದ್ದಾರೆಯೇ?" ಉತ್ತರವೂ ಯಾವಾಗಲೂ ಒಂದೇ ಇರುತ್ತಿತ್ತು. "ಇಲ್ಲ." ಹಲವರು ಯಾರಾದರೂ ಕ್ಷೌರಿಕನ ಅಂಗಡಿಯ ಒಳಗೆ ಹೋಗುತ್ತಾರೆಯೇ ಎಂದು ಸದಾ ದಿಟ್ಟಿಸುತ್ತಿರುತ್ತಿದ್ದರೇ ವಿನಹ ಒಳ ಹೋಗುವ ಸಾಹಸಕ್ಕೆ ಯಾರೂ ಕೈ ಹಾಕುತ್ತಿರಲಿಲ್ಲ. " ಓ ಗ್ರನಾಡ, ಗ್ರನಾಡ.. ನನಗೋಸ್ಕರ ನಿನ್ನ ಮಡಿಲಲ್ಲಿ ಯಾವೊಬ್ಬ ಮಗಳೂ ಇಲ್ಲವೇ? ನನ್ನ ಪೂರ್ವಜರು ತಮ್ಮ ತಮ್ಮ ಹೆಂಡತಿಯರ ಜೊತೆ ಸಂತೋಷದಿಂದ ಕಾಲ ಕಳೆದಿದ್ದಾರೆ. ಅವರ ಸಾಮೀಪ್ಯವನ್ನು ಅನುಭವಿಸಿದ್ದಾರೆ. ನನಗಾ ಭಾಗ್ಯ ಇಲ್ಲದೇ ಹೋಯಿತೆ?" ಎಂದು ರಾಜ ಜೋರಾಗಿ ರೋದಿಸಿದ. ಆಗ ಕ್ಷೌರಿಕ, " ರಾಜ, ಆ ದಿನಗಳಲ್ಲಿ ಮಾಯಾ ಕನ್ನಡಿ ಅಪರಿಚಿತವಾಗಿತ್ತು. ಅದು ಅಷ್ಟಾಗಿ ಬೇಕಾಗಿಯೂ ಇರಲಿಲ್ಲ. ಪುರುಷರು ಬರೀ ಕಲೆ ಮಾತ್ರ ಓದುತ್ತಿದ್ದರು. ಆದರೀಗ ವಿಜ್ಞಾನ ಕೂಡ ಓದಿನಲ್ಲಿ ಸೇರಿಕೊಂಡಿದೆ" ಅಂದನು. " ಅಂದರೇ ನಿನ್ನ ಅರ್ಥ ಜ್ನಾನದ ಹೆಚ್ಚಳಿಕೆ ಒಳ್ಳೆಯದನ್ನು ಮಾಡಲಿಲ್ಲವೇ?" ರಾಜ ಪ್ರಶ್ನಿಸಿದ. " ನನ್ನ ಅರ್ಥ , ಜ್ನಾನದ ಬೆಳವಣಿಗೆಯಿಂದ ಜಾಸ್ತಿ ಒಳ್ಳೆಯದಾಗಿದೆ. ಆದರೆ ಜನ ಮೊದಲಿಗಿಂತ ಕೆಟ್ಟವರಾಗಿದ್ದಾರೆ." " ದೇವರು ದೊಡ್ಡವನು . ಈ ಗೋಡೆಗಳು ಹೇಳುವುದು ಅದನ್ನೇ ಅಲ್ಲವೇ? ಅರಿತುಕೊಳ್ಳುವುದೆಂದರೆ ಜಾಣರಾಗುವುದು." " ಯಾವಾಗಲೂ ಅಲ್ಲ ರಾಜ. ಬಹುತೇಕ ಬಾರಿ ಜಾಸ್ತಿ ತಿಳಿದುಕೊಂಡ ಪುರುಷರು, ಮಹಿಳೆಯರು ಚತುರರಾಗಿದ್ದಾರೆ, ಆದರೆ ಜಾಣರಲ್ಲ. ಚತುರತೆಗೂ ಜಾಣತನಕ್ಕೂ ತುಂಬಾ ವ್ಯತ್ಯಾಸವಿದೆ; ಸ್ವರ್ಗ ಭೂಮಿಯಷ್ಟು." " ಎಲೆ ಕ್ಷೌರಿಕ" ಸಿಟ್ಟಿನಿಂದ ಕೂಗಿದ ರಾಜ. " ನನಗೆ ನಿನು ಹೆಂಡತಿಯನ್ನು ಹುಡುಕಿ ತರಲೇಬೇಕು. ಅವಳು ಇಬ್ಬನಿಯಷ್ಟು ಪವಿತ್ರ, ಚಿನ್ನದಷ್ಟು ಶುದ್ಧವಾಗಿರಬೇಕು. ಆ ಮಾಯಾ ಕನ್ನಡಿಯಲ್ಲಿ ನೋಡಲು ಕಿಂಚಿತ್ತೂ ಭಯ ಪಡದವಳಾಗಿರಬೇಕು." " ರಾಜ, ಕನ್ನಡಿಯಲ್ಲಿ ಇರುವ ಜಾದೂಗಾರಿಕೆಯ ಕೆಲಸ ನಮ್ಮ ಗ್ರನಾಡದ ಮಹಿಳೆಯರ ದುಷ್ಟತನ ತೋರಿಸುವುದು. ಪರ್ವತದ ಆಚೆಗೆ ಸಾಮಾನ್ಯ ಕುರಿ ಕಾಯುವ ಹುಡುಗಿಯೊಬ್ಬಳಿದ್ದಾಳೆ. ಅವಳಿಗೆ ಕನ್ನಡಿಯಲ್ಲಿ ದೃಷ್ಟಿಸುವ ದಿಟ್ಟತನವಿದೆ. ಮುಗ್ದತೆಯ ಅರಿವಿದೆ. ಆದರೆ ಅಂತವಳನ್ನು ನಮ್ಮ ರಾಜ್ಯದ ರಾಣಿಯನ್ನಾಗಿ ಹೇಗೆ ಮಾಡುವುದು? ಅವಳನ್ನು ಹೇಗೆ ಮದುವೆಯಾಗುತ್ತೀರಿ?" "ಅಂತಹವಳೇ ಈ ರಾಜ್ಯದ ರಾಣಿಯಾಗುವುದಕ್ಕೆ ಸೂಕ್ತಳು. ಬೆಲೆ ಕಟ್ಟಲಾಗದ ಮುತ್ತವಳು. ಹೋಗು ಅವಳನ್ನು ನಮ್ಮ ಆಸ್ಥಾನಕ್ಕೆ ಕರೆದುಕೊಂಡು ಬಾ. ನಮ್ಮೆಲ್ಲರ ಮುಂದೆ ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಲಿ ಅವಳು." ಕ್ಷೌರಿಕನಿಗೆ ಸಾಮಾನ್ಯ ಕುರಿಕಾಯುವವಳು ಬಂದು ಕನ್ನಡಿಯಲ್ಲಿ ನೋಡುವುದು ಸರಿ ಅನ್ನಿಸಲೇ ಇಲ್ಲ. ಅವಳನ್ನು ಕರೆಸುವ ಮನಸ್ಸೂ ಬರಲಿಲ್ಲ. ಕುರಿಕಾಯುವವಳ ಪರೀಕ್ಷೆಯ ವಾರ್ತೆ ಬೆಂಕಿಯಂತೆ ಎಲ್ಲೆಡೆ ಹಬ್ಬಿತು. ಆಸ್ಥಾನದ ಮುಖ್ಯ ಕೊಠಡಿ ಬಹುಬೇಗನೆ ರಾಜ ಮನೆತನದವರಿಂದ ತುಂಬಿ ಹೋಯಿತು. ಕುರಿಕಾಯುವವಳು ಆಸ್ಥಾನ ಪ್ರವೇಶಿಸಿದಾಗ, ಆ ವೈಭೋಗದೊಳಗೆ ತಾನಿರುವುದನ್ನು ನೋಡಿ ನಾಚಿಕೊಂಡಳು. ಆಕೆಯನ್ನು ನೋಡಿದವರು ಊಹಿಸಿದ್ದಕ್ಕಿಂತ ಚೆನ್ನಾಗಿದ್ದಾಳೆಂದು ಮಾತನಾಡಿಕೊಂಡರು. ಅವಳ ಸ್ವರೂಪವನ್ನು ರಾಜ ಮೆಚ್ಚಿಕೊಂಡ. ಪ್ರೀತಿಯಿಂದ ಸ್ವಾಗತಿಸಿದ. ಅವಳಿಗೆ ತಾನು ರಾಣಿಯಾಗಲು ಇಷ್ಟಪಟ್ಟಲ್ಲಿ ಕನ್ನಡಿಯೊಳಗೆ ನೋಡಬೇಕು. ಆದರೆ ನಮ್ಮಲ್ಲೇನಾದರೂ ದೋಷಗಳಿದ್ದರೆ , ಮನಸಿನಲ್ಲಿ ನ್ಯೂನತೆಗಳಿದ್ದರೆ ಅವು ಪ್ರತಿಬಿಂಬದಲ್ಲಿ ಕಲೆಯಾಗಿ ಕಾಣುತ್ತವೆ ಎಂದು ರಾಜ ಅವಳಿಗೆ ವಿವರಿಸಿದನು. " ಸ್ವಾಮಿ, ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಪಾಪಿಗಳೇ. ಆದರೆ ನಾನು ಕುರಿಗಳ ಜೊತೆ ಜೀವಿಸುವ ಬಡ ಕುರಿಕಾಯುವವಳು. ನನಗೆ ಪ್ರೀತಿಸುವುದೇನೆಂದರೆ ಗೊತ್ತು. ಕುರಿಗಳು ಅಪಾಯವನ್ನು ಅರಿತಾಗ ನನ್ನ ಬಳಿ ರಕ್ಷಣೆಗೆ ಬರುತ್ತವೆ. ಕಾಡಿನ ಹೂಗಳೇ ನನಗೆ ಮಾಲೆಯಾಗಿವೆ. ಆಕಾಶ ನನ್ನ ಏಕ ಮಾತ್ರ ಛಾವಣಿ. ದೇವರು ನನ್ನ ವಿಶ್ವಾಸಿ, ಆತ್ಮೀಯ ಸ್ನೇಹಿತ. ಹಾಗಾಗಿ ಕನ್ನಡಿಯಲ್ಲಿ ನೋಡಲು ನಾನು ಹೆದರುವುದಿಲ್ಲ. ಅದಾಗ್ಯೂ ರಾಣಿಯಾಗುವ ಆಸೆಯೂ ನನಗಿಲ್ಲ. ಚೆಂದ ಕಾಣಬೇಕೆಂಬ ಹೆಮ್ಮೆಯ ಕೊರತೆ ಇದೆಯೇ ನನಗೇ?" ಎಂದಳು ಅವಳು. ಇಷ್ಟನ್ನು ಹೇಳಿ ಅವಳು ಕನ್ನಡಿಯತ್ತ ನಡೆದಳು. ಅದರಲ್ಲಿ ದೃಷ್ಟಿಸಿ ನೋಡಿದಳು. ಪರ್ವತ ಪ್ರದೇಶದಲ್ಲಿ ಹರಿಯುವ ಝರಿಗಳಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿದ್ದಳು. ಈಗ ಕನ್ನಡಿಯಲ್ಲಿ ತನ್ನದೇ ಸೌಂದರ್ಯ ನೋಡಿ ಕೆನ್ನೆ ಕೆಂಪಾದವು. ಆಸ್ಥಾನದ ಮಹಿಳೆಯರು ಅವಳನ್ನು ಸುತ್ತುವರೆದರು. ಮಾಯಾ ಕನ್ನಡಿಯ ಪ್ರತಿಬಿಂಬದಲ್ಲಿ ಯಾವುದೇ ಕಲೆಗಳಿಲ್ಲದ್ದನ್ನು ಕಂಡು ಅವರು ಹೌಹಾರಿದರು. ಒಮ್ಮೆಲೆ ಅವಳಿಂದ ಕನ್ನಡಿಯನ್ನು ಕಸಿದುಕೊಂಡರು. "ಇದರಲ್ಲಿ ಯಾವ ಮಾಯೆಯೂ ಇಲ್ಲ. ನಮಗೆಲ್ಲ ಮೋಸವಾಗಿದೆ" ಎಂದು ಕೂಗಾಡತೊಡಗಿದರು. ರಾಜನು ಶಾಂತಚಿತ್ತದಿಂದ ಹೇಳಿದ. " ಇಲ್ಲ ಮಹನೀಯರೇ, ನೀವು ನಿಮಗೇ ಧನ್ಯವಾದ ಹೇಳಬೇಕು. ನೀವು ಈ ಕುರಿ ಕಾಯುವ ಹುಡುಗಿಯಷ್ಟು ಮುಗ್ದರಾಗಿದ್ದೀರಾ? ನನ್ನ ರಾಣಿಯಾಗ ಬಯಸುವವರು ಈ ಕನ್ನಡಿಯಲ್ಲಿ ಮುಖ ನೋಡಲು ಇಷ್ಟೊಂದು ಭಯಪಡಬಾರದಿತ್ತು." ರಾಜನ ವೈಭವದ ವಿವಾಹ ಮುಗಿದ ನಂತರ ಕ್ಷೌರಿಕ ಆಗಾಗ ಹೇಳುತ್ತಿದ್ದನಂತೆ ; ಈಗ ಕನ್ನಡಿಯು ತನ್ನ ಮಾಯೆಯನ್ನು ಕಳೆದುಕೊಂಡಿದೆ. ಆದರೆ ಯಾರಿಗೆ ಗೊತ್ತು ಅದು ಪುನಃ ಗ್ರನಾಡಕ್ಕೆ ಬಂದರೂ ಬರಬಹುದು!
2022/05/17 13:49:55
https://ruthumana.com/2017/05/26/mayakannadi/
mC4
ಲಿಮ್ಕಾ ರೆಕಾರ್ಡಿಗೆ ಸಚಿನ್ ತೆಂಡೂಲ್ಕರ್ ಆತ್ಮಚರಿತ್ರೆ ಸೇರ್ಪಡೆ | Tendulkar's autobiography enters Limca Book of Records - Kannada Oneindia » ಲಿಮ್ಕಾ ರೆಕಾರ್ಡಿಗೆ ಸಚಿನ್ ತೆಂಡೂಲ್ಕರ್ ಆತ್ಮಚರಿತ್ರೆ ಸೇರ್ಪಡೆ ಲಿಮ್ಕಾ ರೆಕಾರ್ಡಿಗೆ ಸಚಿನ್ ತೆಂಡೂಲ್ಕರ್ ಆತ್ಮಚರಿತ್ರೆ ಸೇರ್ಪಡೆ Updated: Thursday, February 18, 2016, 19:59 [IST] ಬೆಂಗಳೂರು, ಫೆ. 18: ಕ್ರಿಕೆಟ್ ಲೋಕದ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥೆ 'ಪ್ಲೇಯಿಂಗ್ ಇಟ್ ಮೈ ವೇ' ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಗೊಂಡಿದೆ. ಬಹುನಿರೀಕ್ಷಿತ ಪುಸ್ತಕ ನವೆಂಬರ್ 06, 2014 ರಂದು ಲೋಕಾರ್ಪಣೆ ಮಾಡಲಾಯಿತು. ಸಚಿನ್ ಅವರು ಮೊದಲ ಪ್ರತಿಯನ್ನು ತಮ್ಮ ತಾಯಿಗೆ ನೀಡಿ, ತಮ್ಮ ಆತ್ಮಕಥೆಯನ್ನು ಅಭಿಮಾನಿಗಳಿಗೆ ಅರ್ಪಿಸಿದ್ದರು. [ಸಚಿನ್ ನಿವೃತ್ತಿ ಬಗ್ಗೆ ಟ್ವೀಟ್ಸ್ ಮಹಾಪೂರ] 28 ಅಧ್ಯಾಯಗಳುಳ್ಳ 496 ಪುಟಗಳ 899 ರು ಬೆಲೆಯ 'ಪ್ಲೇಯಿಂಗ್ ಇಟ್ ಮೈ ವೇ' ಪುಸ್ತಕ ಬಿಡುಗಡೆಗೂ ಮುನ್ನ ಭಾರಿ ಚರ್ಚೆಗೊಳಲ್ಪಟ್ಟಿತ್ತು. ಇಲ್ಲಿ ತನಕ ಸುಮಾರು 13.51 ಕೋಟಿ ರು ಗೂ ಅಧಿಕ ಗಳಿಕೆ ಮಾಡಿದೆ. [ಗ್ರೆಗ್ ಚಾಪೆಲ್ ರನ್ನು 'ರಿಂಗ್ ಮಾಸ್ಟರ್' ಎಂದ ಸಚಿನ್] ಕಾದಂಬರಿ ಹಾಗೂ ಆತ್ಮಕಥನ ವಿಭಾಗಗಳೆರಡರಲ್ಲೂ ಅತಿ ಹೆಚ್ಚು ಮಾರಾಟವಾಗಿರುವ ದಾಖಲೆಯನ್ನು ಸಾಧಿಸಿದೆ. Hachette ಇಂಡಿಯಾ ಪ್ರಕಟಣೆಯ ಈ ಆತ್ಮಕಥೆಗೆ ಸುಮಾರು 1,50,289 ಚಂದಾದಾರರು ಸಿಕ್ಕಿದ್ದಾರೆ ಎಂದು ಪ್ರಕಾಶಕರು ಹೇಳಿದ್ದಾರೆ. ಡಾಬನ್ ಬ್ರೌನ್ಸ್ ಅವರ ಇನ್ ಫರ್ನೊ, ವಾಲ್ಟರ್ ಇಸಾಸ್ಕನ್ಸ್ ಸ್ಟೀವ್ ಜಾಬ್ಸ್ ಹಾಗೂ ಜೆಕೆ ರೋಲಿಂಗ್ಸ್ ಕ್ಯಾಶುವಲ್ ವೇಕೆನ್ಸಿ ದಾಖಲೆಯನ್ನು ಪ್ಲೇಯಿಂಗ್ ಇಟ್ ಮೈ ವೇ ಮುರಿದಿದೆ. ಬೊರಿಯಾ ಮಂಜುದಾರ್ ಅವರು ಸಚಿನ್ ಅವರ ಆತ್ಮಕಥೆಯ ಸಹ ಲೇಖಕರಾಗಿದ್ದಾರೆ. ಕೋಚ್ ಗ್ರೆಗ್ ಚಾಪೆಲ್ ಬಗ್ಗೆ, ವೆಸ್ಟ್ ಇಂಡೀಸ್ ಪ್ರವಾಸದ ನಂತರ ನಿವೃತ್ತಿ ಬಗ್ಗೆ, ಸಹ ಆಟಗಾರರ ಬಗ್ಗೆ, ಮಂಕಿಗೇಟ್ ಪ್ರಕರಣ, ಕ್ರಿಕೆಟ್ ಬಗ್ಗೆ ಪತ್ನಿ ಅಂಜಲಿಗಿದ್ದ ಅಭಿಪ್ರಾಯದ ಬಗ್ಗೆ ಹೀಗೆ ನಾನಾ ವಿಷಯಗಳ ಬಗ್ಗೆ ಸಚಿನ್ ಅವರು ಬರೆದ ಅಧ್ಯಾಯಗಳು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. [ಪ್ಲೇಯಿಂಗ್ ಇಟ್ ಮೈ ವೇ ಪುಸ್ತಕ ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ] ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಆಡಿದ ನಂತರ ನವೆಂಬರ್ 17ರಂದು ಸಚಿನ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ತಮ್ಮ 200ನೇ ಟೆಸ್ಟ್ ಪಂದ್ಯವಾಡಿದ ಸಚಿನ್ ಅವರಿಗೆ ಭಾವಪೂರ್ಣ ಗುಡ್ ಬೈ ಹೇಳಲಾಗಿತ್ತು. (ಪಿಟಿಐ)
2017/10/17 04:14:10
https://kannada.oneindia.com/sports/cricket/tendulkar-s-autobiography-enters-limca-book-records-101078.html
mC4
ಲಡಾಖ್ ಸಮೀಪ ಪಾಕ್ ನ ಯುದ್ಧ ವಿಮಾನಗಳ ರವಾನೆ; ಭಾರತದ ಕಣ್ಗಾವಲು | Udayavani – ಉದಯವಾಣಿ Team Udayavani, Aug 12, 2019, 1:45 PM IST ನವದೆಹಲಿ/ಇಸ್ಲಾಮಾಬಾದ್:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಭಾರತದ ನಿರ್ಧಾರದ ವಿರುದ್ಧ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಏತನ್ಮಧ್ಯೆ ಪಾಕಿಸ್ತಾನ ಲಡಾಖ್ ಸಮೀಪ ಯುದ್ಧೋಪಕರಣಗಳನ್ನು ರವಾನಿಸತೊಡಗಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವರದಿ ತಿಳಿಸಿದೆ. ಕೇಂದ್ರಾಡಳಿತ ಲಡಾಖ್ ನ ಸಮೀಪದ ಸ್ಕರ್ದು ಏರ್ ಬೇಸ್ ಗೆ ಪಾಕಿಸ್ತಾನ ವಾಯುಪಡೆ ಮೂರು ಸಿ 130 ಏರ್ ಕ್ರಾಫ್ಟ್ ಅನ್ನು ಕಳುಹಿಸಿರುವುದಾಗಿ ವರದಿ ವಿವರಿಸಿದೆ. ಪಾಕಿಸ್ತಾನದ ಚಲನವಲನ ಹಾಗೂ ಗಡಿಭಾಗದಲ್ಲಿನ ಬೆಳವಣಿಗೆ ಬಗ್ಗೆ ಭಾರತದ ಗುಪ್ತಚರ ಇಲಾಖೆ ಸೂಕ್ಷ್ಮ ಕಣ್ಗಾವಲು ಇರಿಸಿರುವುದಾಗಿ ಮೂಲಗಳು ತಿಳಿಸಿವೆ ಎಂದು ಎಎನ್ ಐ ವರದಿ ಮಾಡಿದೆ. ಪಾಕಿಸ್ತಾನ ಸರಕಾರ ಸ್ಕರ್ದು ವಾಯು ನೆಲೆಗೆ ಜೆಎಫ್-17 ಯುದ್ಧ ವಿಮಾನವನ್ನು ಕಳುಹಿಸುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ. ಯುದ್ಧ ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಏರ್ ಬೇಸ್ ನಲ್ಲಿ ಪಾಕ್ ಯುದ್ಧೋಪಕರಣಗಳನ್ನು ರವಾನಿಸುತ್ತಿರುವುದಾಗಿ ಮೂಲಗಳು ಹೇಳಿವೆ ಎಂದು ಎಎನ್ ಐ ವರದಿ ವಿವರಿಸಿದೆ.
2020/05/27 09:17:05
https://www.udayavani.com/news-section/national-news/india-keeping-a-close-eye-as-pakistan-moves-to-base-j-17-fighters-at-skardu-near-ladakh
mC4
ಪರ್ಯಾಯೋತ್ಸವಕ್ಕೆ ಮೆರುಗು ತಂದ ಕಛೇರಿಗಳು | Udayavani – ಉದಯವಾಣಿ Friday, 29 May 2020 | UPDATED: 04:09 PM IST ಪರ್ಯಾಯದ ಸಾಂಸ್ಕೃತಿಕ ಕಾರ್ಯಕ್ರಮಗಳು Team Udayavani, Feb 7, 2020, 5:00 AM IST ಪಂ|ಭೀಮ್‌ಸೇನ್‌ ಜೋಷಿಯವರು ಹಾಡಿರುವಂತಹ ಮಾಝೇ ಮಾಹೇ ರಾಪಂಡರೀ ಅಭಂಗ್‌ ಮಿಶ್ರ ಮಾಂಡ್‌ನ‌ಲ್ಲಿ , ಕೃಷ್ಣಾನೀ ಬೇಗನೆ ಬಾರೋ, ಪಾಯೋಜೀ ಮೈನೆ, ಕೊನೆಯಲ್ಲಿ ಭೈರವಿ ನುಡಿಸಿದರು. ಭೈರವಿಯಲ್ಲಿ ನುಡಿಸಿದ ಸೂಕ್ಷ್ಮಾತಿಸೂಕ್ಷ್ಮ ಭಾವಗಳು ಹೃದ್ಯವಾಗಿದ್ದುವು. ಈ ಬಾರಿಯ ಪರ್ಯಾಯೋತ್ಸವದಲ್ಲಿ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ‌ ಸಾಧಕರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜ.18ರಂದು ಪದ್ಮಶ್ರೀ ಡಾ| ಎನ್‌.ರಾಜಮ್‌ , ಮಗಳು ಸಂಗೀತಾ ಶಂಕರ್‌ ಹಾಗೂ ಮೊಮ್ಮಕ್ಕಳು ರಾಗಿಣಿ ಶಂಕರ್‌ ಹಾಗೂ ನಂದಿನಿ ಶಂಕರ್‌ ಅವರ ಹಿಂದುಸ್ಥಾನಿ ವಯೊಲಿನ್‌ ವಾದನದ ಕಛೇರಿ ನಡೆಯಿತು. ಟಿ.ಎನ್‌. ಕೃಷ್ಣನ್‌ ಸಹೋದರಿಯಾಗಿರುವ ಡಾ| ರಾಜಮ್‌ ಸಂಪೂರ್ಣವಾಗಿ ಹಿಂದುಸ್ಥಾನಿಯಲ್ಲಿ ತೊಡಗಿಸಿಕೊಂಡವರು. ಮಗಳು ಹಾಗೂ ಮೊಮ್ಮಕ್ಕಳಿಗೆ ತನ್ನ ಜ್ಞಾನವನ್ನು ಸಂಪೂರ್ಣವಾಗಿ ಧಾರೆಯೆರೆದದ್ದು ಕಛೇರಿಯಲ್ಲಿ ಶ್ರುತಪಟ್ಟಿತು. ಗಾಯಕೀ ಅಂಗ್‌ಗೆ ಪ್ರಸಿದ್ಧರಾಗಿರುವ ವಾದಕಿ ಬಾಗೇಶ್ರೀ ರಾಗದಿಂದ ವಾದನವನ್ನು ಆರಂಭಿಸಿದರು. ಈ ನಾಲ್ವರೂ ಬೇರೆ ಬೇರೆಯಾಗಿ ಅವರವರ ಕಲ್ಪನೆಗಳಿಗ‌ನುಗುಣವಾಗಿ ನುಡಿಸಿ ತಾಳದ ಸಮ್‌ ಬರುವಾಗ ಒಟ್ಟಿಗೇ ಸೇರಿ ಒಂದೇ ತೆರನಾಗಿ ನುಡಿಸುತ್ತಿದ್ದರು. ಮುಂದೆ ನುಡಿಸಿದ ದೇಶ್‌ನ ನಂತರ ಕಮಾಚ್‌ನಲ್ಲಿ ಗೋಪಿಯರ ಬಗ್ಗೆ ಹೇಳುವಂತಹ ಸೊಗಸಾದ ಠುಮ್ರಿಯನ್ನು ನುಡಿಸಿದರು. ಪಂ|ಭೀಮ್‌ಸೇನ್‌ ಜೋಷಿಯವರು ಹಾಡಿರುವಂತಹ ಮಾಝೇ ಮಾಹೇ ರಾಪಂಡರೀ ಅಭಂಗ್‌ ಮಿಶ್ರ ಮಾಂಡ್‌ನ‌ಲ್ಲಿ , ಕೃಷ್ಣಾನೀ ಬೇಗನೆ ಬಾರೋ, ಪಾಯೋಜೀ ಮೈನೆ, ಕೊನೆಯಲ್ಲಿ ಭೈರವಿ ನುಡಿಸಿದರು. ಭೈರವಿಯಲ್ಲಿ ನುಡಿಸಿದ ಸೂಕ್ಷ್ಮಾತಿಸೂಕ್ಷ್ಮ ಭಾವಗಳು ಹೃದ್ಯವಾಗಿದ್ದುವು. ತಬಲಾ ಸಾಥಿ ನೀಡಿದ ಸೌರಭ ಕರಿಕರ್‌ಪರಿಣಾಮಕಾರಿ ವಾದನದಿಂದ ಮನ ಗೆದ್ದರು. ಜ.19ರಂದು ರಂಜನಿ -ಗಾಯತ್ರಿ ಸಹೋದರಿಯರ ಹಾಡುಗಾರಿಕೆ ನಡೆಯಿತು. ನಾಟದ ಸ್ವಾಮಿನಾಥ ಪರಿಪಾಲಯಾಶುಮಾಂ ಕೃತಿಗೆ ವಾಮದೇವ ಪಾರ್ವತಿ ಸುಕುಮಾರದಲ್ಲಿ ಕ್ಷಿಪ್ರಗತಿಯಲ್ಲಿ ಹಾಕಿದ ಸ್ವರಪ್ರಸ್ತಾರದಿಂದ ಮೊದಲ್ಗೊಂಡು ಮುಂದೆ ಶೋಭಿಲ್ಲು ಸಪ್ತಸ್ವರ, ಧರರುಕ್ಸಾಮಾದುಲಲೋ ಎಂಬಲ್ಲಿ ಬಹಳ ಕರಾರುವಾಕ್ಕಾದ ನೆರೆವಲ್‌ ಮಾಡಿದರು. ಬೃಂದಾವನಿಯ ರಂಗಪುರವಿಹಾರದ ಬಳಿಕ ಪುರಂದರದಾಸರ ಕೀರ್ತನೆ ಆಡಿದನೋ ರಂಗವನ್ನು ಆರಭಿಯ ವಿಸ್ತಾರವಾದ ರಾಗಾಲಾಪನೆ, ಕಲ್ಪನಾ ಸ್ವರಗಳೊಂದಿಗೆ ವಿಸ್ತರಿಸಿದರು. ಆಮೇಲೆ ವನಜಮುಖೀಯರ ಮನದಿಷ್ಟಾರ್ಥವ ಎಂಬ ಕನಕದಾಸರ ಕೃತಿಯನ್ನು ಕಾನಡ ರಾಗದಲ್ಲಿ ಸಂಯೋಜಿಸಿ ಹಾಡಿದರು. ಅನಂತರ ಷಣ್ಮುಖಪ್ರಿಯ ರಾಗದ ಬೇರೆ ಬೇರೆ ರೀತಿಯ ಸಾಧ್ಯತೆಗಳನ್ನು ತೋರಿಸುವಂತಹ ಉತ್ಕೃಷ್ಟ ಮಟ್ಟದ ರಾಗಾಲಾಪನೆಯನ್ನು ಮಾಡಿ ರಾಗಂ ತಾನಂ ಪಲ್ಲವಿಯನ್ನು ನಿರೂಪಿಸಿ ಭೇಷ್‌ ಎನಿಸಿಕೊಂಡರು. ಭೈರವಿ ರಾಗದ ಮುದ್ರೆಯನ್ನೊತ್ತಿಕೊಡಿರುವ "ಓಡಿ ಬಾರಯ್ನಾ'ವನ್ನು ಪಲ್ಲವಿಗಾಗಿ ಬಳಸಿಕೊಂಡು, ಖಂಡ ಜಾತಿ ತ್ರಿಪುಟ ತಾಳದಲ್ಲಿ ಪ್ರಸ್ತುತಿ ಪಡಿಸಿದರು. ಬೌಳಿ ಹಾಗೂ ಮಾಂಡ್‌ ರಾಗದಲ್ಲಿ ರಾಗಮಾಲಿಕಾ ಸ್ವರಗಳನ್ನು ಹಾಡಿದರು. ಪತ್ರಿ ಸತೀಶ್‌ ಕುಮಾರ್‌ (ಮೃದಂಗ) ಹಾಗೂ ಉಳ್ಳೂರು ಗಿರಿಧರ ಉಡುಪ (ಘಟಂ) ಅವರ ಭರ್ಜರಿ ತನಿ ಆವರ್ತನ ನಡೆಯಿತು. ನಾಥಹರೇ (ಮಧುವಂತಿ) ಉಗಾಭೋಗಗಳೊಂದಿಗೆ ಆಡಿಸಿದಳೆಶೋದ, ಮರಾಠಿ ಅಭಂಗ್‌ನೊಂದಿಗೆ ಕಛೇರಿ ಮುಕ್ತಾಯವಾಯಿತು. ಈ ಕಛೇರಿಗೆ ಎಚ್‌. ಎಮ್‌. ಸ್ಮಿತಾ ಒಳ್ಳೆಯ ವಯೊಲಿನ್‌ ಪಕ್ಕವಾದ್ಯವನ್ನು ನೀಡಿದರು. ಜ.20ರಂದು ಮಹೇಶ್‌ ಕಾಳೆಯವರ ಹಿಂದುಸ್ಥಾನಿ ಗಾಯನವಿತ್ತು. ಮಾರೋ ಬೇಹಾಗ್‌ ರಾಗದ ಸೊಬಗನ್ನು ಕೇಳಿಸುವುದರೊಂದಿಗೆ ಗಾಯನ ಶುರುವಾಯಿತು. ಅಲ್ಲಲ್ಲಿ ಕೇಳುಗರೊಂದಿಗೆ ತನ್ನ ಗಾಯನ ಸರಿಯಾಯಿತೇ? ಕೇಳುಗರು ಖುಷಿ ಪಡುತ್ತಿದ್ದಾರಾ? ಮುಂತಾದ ಪ್ರಶ್ನೆಗಳನ್ನು ಕೇಳುತ್ತಾ ಅವರಿಂದ ಉತ್ತರವನ್ನು ನಿರೀಕ್ಷಿಸುತ್ತಾ ಕೇಳುಗರ ಭಾವನೆಗಳಿಗೆ ಸ್ಪಂದಿಸುತ್ತಾ ಅವರ ಜೊತೆಗೆ ಆನಂದವನ್ನು ಸವಿದ ಒಂದು ವಿಶಿಷ್ಟ ಗಾಯನ ಇದಾಗಿತ್ತು. ಮುಂದೆ ಅವರೇ ಹೇಳಿರುವಂತೆ "Garland on the feet of the god' ಒಂದು ಹಾರವಾಗಿ ರಾಗ ಮಾಲಿಕೆಯನ್ನು ಹಾಡಿದರು. ಈ ಹಾರ ಬಹಳ ಉದ್ದವಾಗಿಯೇ ಇದ್ದು ಇದರಲ್ಲಿ ಸೋಹನಿ. ಭೂಪ್‌, ಛಾಯಾನಟ್‌, ಬಿಲಾವಲ್‌, ಶಂಕರ, ದೇಶ್‌, ತಿಲಕ್‌ಕಾಮೋದ್‌, ಬಸಂತ್‌, ಶ್ರೀ, ಪೂರಿಯಾ, ಭೈರವ್‌, ಗುರ್ಜರಿ, ಸಾರಂಗ, ಖರಹರಪ್ರಿಯ ಹೀಗೆ ಅನೇಕ ರಾಗಗಳ ಬಳಕೆ ಇತ್ತು. ಒಂದೊಂದು ರಾಗಗಳನ್ನೂ ವಿಸ್ತರಿಸಿಕೊಂಡೇ ಮುಂದಿನ ರಾಗಕ್ಕೆ ಹೋಗುತ್ತಿ¤ದ್ದುದ್ದು ವಿಶೇಷ. ಬಳಿಕ ಯಾರೂ ನಿರೀಕ್ಷಿಸದ ಪರಿಯಲ್ಲಿ ಹಂಸಧ್ವನಿಯ ವಾತಾಪಿಗಣಪತಿಂಭಜೇಯನ್ನು ಕ್ಷಿಪ್ರವಾಗಿ ಹಾಡಿದರು. ಇದು ತಬ್ಲಾ, ಫ‌ಕ್ವಾಜ್‌ ಹಾಗೂ ತಾಳಗಳೊಂದಿಗೆ ಭಜನೆಯಂತೆ ಧ್ವನಿಸಿತು. ಕೆಲ ಭಜನ್‌ ಹಾಗೂ ಅಭಂಗಗಳಿಂದ ರಂಜಿಸಿ, ಕೊನೆಯಲ್ಲಿ ಕಳಲಾ ವಿಠಲಾ ಕಾನಡಾನಾಥಾ ಎಂಬ ಹಾಡಿನಲ್ಲಿ ಸಭಿಕರನ್ನು ವಿಠಲಾ ವಿಠಲಾ ಎಂದು ಹಾಡುವಂತೆ ಮಾಡಿದರು. ಹಾರ್ಮೋನಿಯಂನಲ್ಲಿ ಸತೀಶ್‌ ಕೊಳ್ಳಿ, ತಬಲಾದಲ್ಲಿ ಜಗದೀಶ್‌ ಕುರ್ತುಕೋಟಿ, ಪಕ್ವಾಜ್‌ನಲ್ಲಿ ಸತ್ಯಮೂರ್ತಿ, ತಾಳದಲ್ಲಿ ರಾಜೇಶ್‌ ಪಡಿಯಾರ್‌ ಸಹಕರಿಸಿದರು.
2020/05/29 10:40:14
https://www.udayavani.com/supplements/art-culture/ultural-programs-of-the-paryaya
mC4
ವಾದ್ರಾ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಹರಿಹಾಯ್ದ ಮಿಸ್ತ್ರಿ | Misthry lost cool asking about Vadra land deal - Kannada Oneindia ವಾದ್ರಾ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಹರಿಹಾಯ್ದ ಮಿಸ್ತ್ರಿ | Published: Saturday, November 8, 2014, 10:57 [IST] ಲಕ್ನೋ, ನ. 8: ಕಾಂಗ್ರೆಸ್ ವರಿಷ್ಠೆ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಅವರ ಮೇಲಿರುವ ಭೂ ಅವ್ಯವಹಾರ ಆರೋಪ ಕುರಿತು ಪ್ರಶ್ನಿಸಿದ ಪತ್ರಕರ್ತರ ಮೇಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಹರಿಹಾಯ್ದಿದ್ದಾರೆ. ಉತ್ತರ ಪ್ರದೇಶದ ವಿವಿಧ ಜಿಲ್ಲಾ ಮುಖಂಡರ ಸಭೆ ನಡೆಸುವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದ ಮಿಸ್ತ್ರಿ ರಾಬರ್ಟ್ ವಾದ್ರಾ ಕುರಿತು ಪ್ರಶ್ನಿಸುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದರು. ಅಲ್ಲದೆ, ಮಾಧ್ಯಮಗಳು ಎನ್‌ಡಿಎ ಸರ್ಕಾರದ ಪರ ಪಕ್ಷಪಾತ ತೋರುತ್ತಿವೆ ಎಂದು ಆರೋಪಿಸಿದರು. ರಾಬರ್ಟ್ ವಾದ್ರಾ ಅವರನ್ನು ಕಾರಣವಿಲ್ಲದೆ ಗುರಿ ಮಾಡಲಾಗುತ್ತಿದೆ. ಗುಜರಾತ್‌ನಲ್ಲಿ ನಡೆದ ಭೂ ಅವ್ಯವಹಾರದ ಕುರಿತು ಪತ್ರಕರ್ತರು ಪ್ರಶ್ನಿಸುತ್ತಿಲ್ಲ. ಆದರೆ, ರಾಬರ್ಟ್ ವಾದ್ರಾ ಕುರಿತು ಮಾತ್ರ ಆರೋಪಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನರೇಂದ್ರ ಮೋದಿ ಎದುರು ಚುನಾವಣೆಗೆ ನಿಂತು ಹೀನಾಯ ಸೋಲನುಭವಿಸಿರುವ ಮಧುಸೂದನ ಮಿಸ್ತ್ರಿ, ಅವರ ಹೆಸರನ್ನು ನನ್ನ ಎದುರು ಹೇಳಬೇಡಿ. ಅವರ ಹೆಸರು ಕೇಳಿದರೆ ನನ್ನ ರಕ್ತ ಕುದಿಯುತ್ತದೆ ಎಂದು ಸಿಟ್ಟಿಗೆದ್ದರು. ಪತ್ರಕರ್ತರು ಮತ್ತೆ ರಾಬರ್ಟ್ ವಾದ್ರಾ ಕುರಿತು ಕೇಳುತ್ತಿದ್ದಂತೆ ಮಧುಸೂದನ ಮಿಸ್ತ್ರಿ ಅವರು ಪತ್ರಿಕಾಗೋಷ್ಠಿಯನ್ನು ಅಲ್ಲಿಯೇ ಮೊಟಕುಗೊಳಿಸಿದರು. ಇನ್ನಷ್ಟು land ಸುದ್ದಿಗಳು ತುಮಕೂರು ರಸ್ತೆ, ನೆಲಮಂಗಲದಲ್ಲಿ ಕೈಗೆಟಕುವ ಬೆಲೆಯಲ್ಲಿ ಸೈಟುಗಳು ಲಭ್ಯ ಪೆರಿಫೆರಲ್ ರಿಂಗ್ ರಸ್ತೆ, ನಿಖರ ಮಾಹಿತಿ ಸಲ್ಲಿಸಲು ಸುಪ್ರೀಂ ಆದೇಶ ಪೆರಿಫೆರಲ್ ರಸ್ತೆ ಕಾಮಗಾರಿ, ಅಂತಿಮ ಸಮೀಕ್ಷೆ, ಶೀಘ್ರ ಟೆಂಡರ್ land narendra modi haryana ಭೂಮಿ ನರೇಂದ್ರ ಮೋದಿ ಹರ್ಯಾಣ Congress general secretary Madhisudan Misthry lost his cool when he was asked about land deal of Robert Vadra. He accused media for being partial to the NDA government.
2019/09/19 22:24:26
https://kannada.oneindia.com/news/india/misthry-lost-cool-asking-about-vadra-land-deal-088911.html
mC4
ರೈತರಿಗೆ ಹಲಸಿನ ಮಹತ್ವದ ಅರಿವು ಮೂಡಿಸಿ | Udayavani – ಉದಯವಾಣಿ ಮೌಲ್ಯವರ್ಧಿತ ಹಲಸಿನ ಮೇಳದಲ್ಲಿ ಶಾಸಕ ಡಿ.ಎಸ್‌.ಸುರೇಶ್‌ ಸಲಹೆ Team Udayavani, Jun 26, 2019, 5:08 PM IST ತರೀಕೆರೆ: ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ನಡೆದ ಮೌಲ್ಯವರ್ಧಿತ ಹಲಸಿನ ಮೇಳವನ್ನು ಶಾಸಕ ಡಿ.ಎಸ್‌.ಸುರೇಶ್‌ ಉದ್ಘಾಟಿಸಿದರು. ತರೀಕೆರೆ: ರೈತರಿಗೆ ಲಾಭದಾಯಕವಾದ, ರೋಗ ನಿರೋಧಕ ಶಕ್ತಿಯುಳ್ಳ ಮತ್ತು ರಾಸಾಯನಿಕವಿಲ್ಲದ, ಕಲಬೆರಕೆರಹಿತ ಹಲಸಿನ ಹಣ್ಣು ನಿರ್ಲಕ್ಷಕ್ಕೆ ಒಳಗಾಗಿದೆ. ರೈತರಿಗೆ ಹಲಸಿನ ಹಣ್ಣಿನ ಮಹತ್ವದ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಶಾಸಕ ಡಿ.ಎಸ್‌.ಸುರೇಶ್‌ ಹೇಳಿದರು. ಪಟ್ಟಣದ ಡಾ| ಅಂಬೇಡ್ಕರ್‌ ಭವನದಲ್ಲಿ ಮಮತಾ ಮಹಿಳಾ ಸಮಾಜ ಮತ್ತು ಕಲಾ ಫಾರಂ ವತಿಯಿಂದ ಹಮ್ಮಿಕೊಂಡಿದ್ದ ಮೌಲ್ಯವರ್ಧಿತ ಹಲಸಿನ ಮೇಳ ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಿಂದ ಹೊರ ದೇಶಕ್ಕೆ ಹಲಸಿನ ಹಣ್ಣು ರಫ್ತು ಮಾಡಲಾಗುತ್ತಿದೆ. ಆದರೂ, ರೈತರಲ್ಲಿ ಹಲಸಿನ ಹಣ್ಣು ಬೆಳೆಯ ಬಗ್ಗೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಹಲವಾರು ತಳಿಗಳನ್ನು ಹೊಂದಿರುವ ಹಲಸು ಅನೇಕ ಕಾಯಿಲೆಗಳಿಗೆ ಮದ್ದಾಗಿದೆ. ಹಲಸಿನ ಕೃಷಿ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದರ ಮಹತ್ವವನ್ನು ಎಲ್ಲರಿಗೂ ತಿಳಿಸುವ ಕೆಲಸವಾಗಬೇಕೆಂದರು. ತಾಲೂಕಿನ ವ್ಯಾಪ್ತಿಯಲ್ಲಿ ಎಲ್ಲಿಯೂ ಕೂಡ ಹಲಸಿನ ಹಣ್ಣಿನ ಫಾರಂ ಇಲ್ಲ. ಹಲಸಿನ ಬಗ್ಗೆ ಎಲ್ಲಾ ರೈತರಿಗೂ ಮಾಹಿತಿ ದೊರೆಯುವಂತಾಗಬೇಕು. ಕಲಾ ಫಾರಂನಲ್ಲಿ ಹಲಸಿನ ಬೆಳೆ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಕೂಡಲೇ ಏರ್ಪಡಿಸುವಂತೆ ತೋಟಗಾರಿಕಾ ಅಧಿಕಾರಿ ಲಿಂಗರಾಜು ಅವರಿಗೆ ಸೂಚನೆ ನೀಡಿದರು. ಪ್ರಗತಿಪರ ಕೃಷಿಕ ಶಿವಣ್ಣ ಮಾತನಾಡಿ, ಹಲಸಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ವಿದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಹಲಸಿನಲ್ಲಿ ಮಧುಮೇಹ, ಹೃದಯಾಘಾತ ಮತ್ತು ರಕ್ತದೊತ್ತಡ ಕಡಿಮೆ ಮಾಡುವ ಶಕ್ತಿ ಇದೆ. ಹಲವಾರು ರೋಗಗಳನ್ನು ಗುಣಪಡಿಸುವ ಗುಣವಿರುವ ಹಲಸಿನ ಹಣ್ಣು, ಕಾಯಿಗಳನ್ನು ಸಮರ್ಪಕವಾಗಿ ಉಪಯೋಗದ ಬಗ್ಗೆ ನಮಗೆ ಸರಿಯಾದ ಅರಿವು ಮೂಡಿಲ್ಲ ಎಂದರು. ಹಲಸಿನ ಹಣ್ಣಿನಿಂದ ಹಲವಾರು ಖಾದ್ಯಗಳನ್ನು ತಯಾರಿಸಿ ಉಪಯೋಗಿಸಬಹುದು. ಬೀಜದಿಂದಲೂ ಉಪಯೋಗವಿದೆ. ಆಹಾರವಾಗಿಯೂ ಬಳಸಬಹುದು. ಹಲಸು ಬೆಳಸುವುದರಿಂದ ರೈತರಿಗೆ ಹಲವಾರು ಉಪಯೋಗಗಳಿವೆ. ಮರದಿಂದ ಬೀಳುವ ಎಲೆಗಳಿಂದ ಗೊಬ್ಬರವಾಗುತ್ತದೆ. ಬೆಳೆದು ನಿಂತ ಮರ ತೇವಾಂಶವನ್ನು ಭೂಮಿಗೆ ನೀಡುತ್ತದೆ ಹಾಗೂ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಸಿವಿನಿಂದ ಬಳಲುವವರಿಗೆ ಹಲಸು ಆಹಾರವಾಗುತ್ತದೆ ಎಂದರು. ಹಲಸನ್ನು ನವ ಕಲ್ಪವೃಕ್ಷ ಎಂದು ಕರೆಯಲಾಗುತ್ತಿದೆ. ಹಲಸಿನ ಬೆಳೆಯನ್ನು ಮಾರುಕಟ್ಟೆ ಮಾಡುವುದನ್ನು ರೈತರು ಕಲಿತುಕೊಳ್ಳಬೇಕು. ಹಣ್ಣುಗಳ ಮೌಲ್ಯವರ್ಧನೆ ಮಾಡಿಕೊಳ್ಳಬೇಕು. ಅವುಗಳನ್ನು ಪ್ಯಾಕ್‌ ಮಾಡಿ ಮಾರುಕಟ್ಟೆಗೆ ತಲುಪಿಸುವ ಕೆಲಸ ಮಾಡಿದರೆ ಲಾಭ ಗಳಿಸಬಹುದಾಗಿದೆ. ಒಂದು ಮರದಿಂದ ಲಕ್ಷ ರೂ.ಆದಾಯ ಪಡೆಯಬಹುದು ಎಂದರು. ತೋಟಗಾರಿಕಾ ಇಲಾಖೆಯ ಲಿಂಗರಾಜು, ಪ್ರಗತಿಪರ ಕೃಷಿಕ ವೀರಣ್ಣ, ಜನಾರ್ದನ್‌, ಶೋಭಾ ಮಹೇಂದ್ರ, ಮಮತಾ ಮಹಿಳಾ ಸಮಾಜದ ಅದ್ಯಕ್ಷೆ ಸೌಭಾಗ್ಯ ಶ್ರೀರಂಗಪ್ಪ ಮಾತನಾಡಿದರು. ಹಲಸಿನ ಖಾದ್ಯ ಮೇಳ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಹಲಸಿನ ಹಣ್ಣಿನಿಂದ ವಿವಿಧ ಬಗೆಯ ಖಾದ್ಯಗಳನ್ನು ಸ್ಥಳದಲ್ಲಿಯೇ ತಯಾರಿಸಿ ಮಾರಾಟ ಮಾಡಲಾಯಿತು. ಹಲಸಿನ ಮಿಲ್ಕಶೇಕ್‌, ಬೋಂಡಾ, ಕಬಾಬ್‌, ಹಲಸಿನ ಹೋಳಿಗೆ, ಬನ್‌, ದೋಸೆ, ಬಿಳಿ ಹೋಳಿಗೆ ಆಹಾರ ಪ್ರಿಯರ ಮೆಚ್ಚುಗೆಗೆ ಪಾತ್ರವಾದವು.
2019/12/09 22:20:06
https://www.udayavani.com/district-news/tarikere-jackfruit-mela
mC4
ದೈಹಿಕ ಹಲ್ಲೆ: ಪ್ರಕರಣ ದಾಖಲು|ದೈಹಿಕ ಹಲ್ಲೆ: ಪ್ರಕರಣ ದಾಖಲು - chikkamagaluru - News in kannada, vijaykarnataka ದೈಹಿಕ ಹಲ್ಲೆ: ಪ್ರಕರಣ ದಾಖಲು ದೈಹಿಕ ಹಲ್ಲೆ: ಪ್ರಕರಣ ದಾಖಲು ಕೊಪ್ಪ:ಪಟ್ಟಣದ ಹೊರವಲಯದ ಬಾಳಗಡಿಯ ಶಾಂತಿ ಲಿಕ್ಕರ್‌ ಬಾರ್‌ ಬಳಿ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ 6 ಮಂದಿ ವಿರುದ್ಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಜಿತ್‌ ಶೆಟ್ಟಿ, ರವಿ, ಸುಜಯ, ಪುನೀತ್‌, ಸಂತೋಷ್‌ ಮತ್ತು ವಿಶಾಖ ಆರೋಪಿಗಳಾಗಿದ್ದಾರೆ. ಗಾಯಾಳು ನವೀನ್‌ ನೀಡಿದ ದೂರಿನಲ್ಲಿ ಬಾಳಗಡಿಯ ಶಾಂತಿ ಲಿಕ್ಕರ್‌ ಬಾರಿನಲ್ಲಿ ಕೂಲಿ ಕೆಲಸದ ಸಂಬಳದ ಹಣಕ್ಕಾಗಿ ಶೇಖರ್‌ ಎಂಬುವವರನ್ನು ಕಾಯುತ್ತಾ ಕುಳಿತಿದ್ದಾಗ, ಸುಜಿತ್‌ ಶೆಟ್ಟಿ ಮತ್ತು ತಂಡದವರು ಆಗಮಿಸಿ ಹಲ್ಲೆ ನಡೆಸಿದ್ದಾರೆ. ತನ್ನ ಗೆಳೆಯರಾದ ಶಶಿ ಮತ್ತು ಸಿದ್ದರಾಜು ಎಂಬುವವರು ಗಾಯಗೊಂಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸುಜಯ ಮತ್ತು ರವಿ ಬಂಗಾರದ ಸರ ಕಿತ್ತುಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಸಾಂತ್ವನ: ಗಾಯಾಳುಗಳಿದ್ದ ಸಾರ್ವಜನಿಕ ಆಸ್ಪತ್ರೆಗೆ ಕಾಂಗ್ರೆಸ್‌ ಮುಖಂಡ ಟಿ.ಡಿ.ರಾಜೇ ಗೌಡ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ತಿಳಿಸಿದರು.
2017/12/15 23:16:49
https://vijaykarnataka.indiatimes.com/district/chikkamagaluru/-/articleshow/59206171.cms
mC4
ಚಂದ್ರಕೊಡೆ: ದಿವಾಕರಣಂದಿ ಮತ್ತು ವಡ್ಡಾರಾಧನೆ – ಕಣಜ ಚಂದ್ರಕೊಡೆ: ದಿವಾಕರಣಂದಿ ಮತ್ತು ವಡ್ಡಾರಾಧನೆ Home/ಇತಿಹಾಸ, ಕರ್ನಾಟಕ ಇತಿಹಾಸ, ವಿಶ್ಲೇಷಣೆ ಮತ್ತು ಸಂಶೋಧನೆ, ಸಮುದಾಯ ಸಾಹಿತ್ಯ, ಸಾಹಿತ್ಯ/ಚಂದ್ರಕೊಡೆ: ದಿವಾಕರಣಂದಿ ಮತ್ತು ವಡ್ಡಾರಾಧನೆ ವಡ್ಡಾರಾಧನೆಯಲ್ಲಿ ಅನ್ಯಾನ್ಯಮೂಲಗಳಿಂದ ಉದಾಹೃತವಾಗಿರುವ ಕನ್ನಡೇತರ ಪದ್ಯಗಳಿಗೆ ಇದುವರೆಗೆ ಸಂಶೋಧಿತವಾಗದ ಮೂಲಗಳತ್ತ ಬೆಳಕು ಚೆಲ್ಲುವ ಹಲವು ಲೇಖನಗಳನ್ನು ಪ್ರಕಟಿಸಿದ್ದೇನೆ. ಆ ಮಾಲೆಗೆ ಈಗ ಇನ್ನೊಂದು ಹೂ ಪೋಣಿಸುತ್ತಿದ್ದೇನೆ. ವಡ್ಡಾರಾಧನೆಯ ೧೩ ನೆಯ ಕಥೆಯಾದ 'ವಿದ್ಯುಚ್ಚೋರನೆಂಬ ರಿಸಿಯ ಕಥೆ' ಯಲ್ಲೂ (ಪುಟ ೧೨೬) ಮತ್ತು ೧೬ ನೆಯ 'ದಂಡಕನೆಂಬ ರಿಸಿಯ ಕಥೆ'ಯಲ್ಲೂ (ಪುಟ ೧೭೦) ಬಳಕೆಯಾಗಿರುವ ಒಂದು ಸಮಾನ ಪ್ರಾಕೃತ ಗಾಹೆ ಹೀಗಿದೆ: ಅಚ್ಚಿಣಿಮೀಳಣ ಮೇತ್ತಂ ಣತ್ಥಿ ಸುಹಂ ದುಖ್ಖಮೇವ ಅಣುಬದ್ಧಂ ಣಿರಯೇ ಣಿರಯೇ ಯಾಣಂ ಅಹಣ್ಣಿಸಂ ಪಚ್ಚಮಾಣಾ ಣಂ || ಇದು ಎರಡೂ ಕಥೆಗಳಲ್ಲಿ ಬಂದಿರುವ ಸಮಾನ ಗಾಹೆಯಷ್ಟೇ ಅಲ್ಲದೆ ಸಮಾನವಾದ ಸಂದರ್ಭದಲ್ಲಿಯೇ ಉದಾಹೃತವಾಗಿದೆ. ಈ ಗಾಹೆ ನಾರಕರು ನರಕದಲ್ಲಿ ಹಗಲಿರುಳೂ ಎಡೆಬಿಡದೆ ಕಷ್ಟಪಡುವುದನ್ನು ಪ್ರಸ್ತಾಪಿಸುತ್ತದೆ. ಮೇಲೆ ಹೇಳಿದ ಎರಡು ಕಥೆಗಳಲ್ಲೂ ನರಕಶಿಕ್ಷೆ ಕುರಿತು ತಿಳಿಸುವ ಸಂದರ್ಭದಲ್ಲಿ ಈ ಗಾಹೆಯನ್ನು ಉಲ್ಲೇಖಿಸಲಾಗಿದೆ. ಅನ್ಯಮೂಲದಿಂದ ಹೆಚ್ಚಿದ ಈ ಗಾಹೆ ವಾಸ್ತವವಾಗಿ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಯ ಪ್ರಾಕೃತ ಕೃತಿ ತಿಲೋಯಸಾರಕ್ಕೆ ಸೇರಿದ್ದು (ಗಾಹೆ ೨೦೭). ಚಾವುಂಡರಾಯನ ಗುರುಗಳೂ ಅನೇಕ ಗ್ರಂಥಗಳ ಕರ್ತೃವೂ ಆದ ನೇಮಿಚಂದ್ರಚಾರ್ಯನ ಕಾಲ ೧೦ನೆಯ ಶತಮಾನದ ಉತ್ತರಾರ್ಧ. ಈ ಗಾಹೆಯ ಸಂಬಂಧವಾಗಿ ಇದುವರೆಗೆ ಬೇರೆ ಯಾರೂ ಹೇಳದಿರುವ ಒಂದು ಹೊಸ ಮಾಹಿತಿಯನ್ನು ಮೊತ್ತ ಮೊದಲಬಾರಿಗೆ ಬಹಿರಂಗಪಡಿಸುವುದು ಈ ಪುಟ್ಟ ಟಿಪ್ಪಣಿಯ ಮುಖ್ಯ ಉದ್ದೇಶ. ಒಂದೆರಡು ಪಾಠಾಂತರಗಳ ಹೊರತು, ಬೇರೆ ಯಾವ ಬದಲಾವಣೆಯೂ ಇಲ್ಲದೆ, ಈ ಗಾಹೆ ಯಥಾಸ್ಥಿತಿಯಲ್ಲಿ ದಿವಾಕರಣಂದಿಯ 'ತತ್ವಾರ್ಥ ಸೂತ್ರಾನುಗತ ಕರ್ಣಾಟಕ ಲಗುವೃತ್ತಿಯಲ್ಲಿ' ಯಲ್ಲಿ ಉದಾಹೃತವಾಗಿದೆ; ಹೆಚ್ಚಿನ ಸಂಗತಿಯೇನೆಂದರೆ ಪ್ರಾಕೃತ ಗಾಹೆಗೆ ದಿವಾಕರಣಂದಿಯ ಕನ್ನಡ ವೃತ್ತಿಯನ್ನು ಕೊಟ್ಟಿದ್ದಾನೆ: ಅಚ್ಚಿಣಿಮೀಳಣಮೆತ್ತ = ಕಣ್ಣಮೆ ಇಕ್ಕುವನಿತುವಂ ಬೇಗಮಾದೊಡಂ, ಣತ್ಥಿ ಸುಹಂ = ಸುಖವಿಲ್ಲ, ದುಕ್ಖಮೇವ ಅಣುಬದ್ಧಂ = ದುಃಖಮನೆ ಬಳಿ ಸಂಧಿಪ್ಪರು, ಣಿರಯೇ = ನರಕದಲ್ಲಿ, ಣಿರಯೀ ಯಾಣಂ = ನಾರಕರು, ಅಹಣ್ಣಿಸಂ = ಅಹರ್ನಿಶಂ, ಪಚ್ಚಮಾಣಾಣಂ = ದುಃಖಾಗ್ನಿಯಿಂ ಸುಡೆಪಡುತ್ತಿಪ್ಪವರ್ಗಳುಂ || ಉಮಾಸ್ವಾತಿ(ಮಿ) ಇಲ್ಲವೇ ಗೃಧ್ರಪಿಂಛಾಚಾರ್ಯಕೃತ ಸಂಸ್ಕೃತ 'ತತ್ವಾರ್ಥ ಸೂತ್ರ' ಶಾಸ್ತ್ರಗ್ರಂಥಕ್ಕೆ ಕನ್ನಡದಲ್ಲಿ ಬರೆಯಲಾದ ಮೊದಲ ವ್ಯಾಖ್ಯಾನ ಗ್ರಂಥವೇ ದಿವಾಕರಣಂದಿ ರಚಿಸಿರುವ ತತ್ವಾರ್ಥಸೂತ್ರ ವೃತ್ತಿ. ದಿವಾಕರಣಂದಿಯ ವಿಚಾರವಾಗಿ ನಗರ ೫೭ನೆಯ ಶಾಸನ ಮತ್ತು ಸೊರಬ ೫೮ನೆಯ ಶಾಸನದಿಂದ ಕೆಲವು ವಿಚಾರಗಳು ತಿಳಿದುಬರುತ್ತವೆ. ಅದರ ಪ್ರಕಾರ ದಿವಾಕರಣಂದಿಯ ಕಾಲ ೧೦೬೨ (ಶಕ ೯೮೪) ಎಂದು ಖಚಿತವಾಗಿ ಗೊತ್ತಾಗುತ್ತದೆ. ಹಾಗಾದರೆ ವಡ್ಡಾರಾಧನೆಯ ಕಾಲ ನಿರ್ಧಾರಕ್ಕೆ ಇದನ್ನೇ ಒಂದು ಪ್ರಬಲ ಆಧಾರವೆಂದು ಅಂಗೀಕರಿಸಬಹುದೇ ಎಂಬುದು ನಮ್ಮ ಮುಂದಿನ ಸಮಸ್ಯೆ. ಇದನ್ನು ಮುಖ್ಯ ಆಕರವಾಗಿ ಸ್ವೀಕರಿಸಲು ಮೂರು ತೊಡಕುಗಳಿವೆ. ೧. ಈ ಕನ್ನಡ ವೃತ್ತಿಯಲ್ಲಿ ವೃತ್ತಿಕಾರನಾದ ದಿವಾಕರಣಂದಿಯು ಮೂಲದಲ್ಲಿಲ್ಲದ ಎಷ್ಟೋ ಸಂಸ್ಕೃತ ಪ್ರಾಕೃತ ಪದ್ಯಗಳನ್ನು ಯಥೋಚಿತವಾಗಿ ಅನ್ಯಮೂಲಗಳಿಂದ ತಂದು ಸೇರಿಸಿದ್ದಾನೆ. ೨. ಈ ಗಾಹೆಯು ದಿವಾಕರಣಂದಿಯ ವೃತ್ತಿಯ ಉಪಲಬ್ದ ತಾಡೆಯೋಲೆ ಹಸ್ತ ಪ್ರತಿಗಳಲ್ಲಿ ಒಂದರಲ್ಲಿ ಮಾತ್ರ ಇದ್ದು, ಇನ್ನೆರಡು ಪ್ರತಿಗಳಲ್ಲಿ ದೊರೆಯುವುದಿಲ್ಲ. ೩. ಈಗಾಗಲೇ ತಿಳಿದಿರುವಂತೆ ಈ ಗಾಹೆಯು ದಿವಾಕರಣಂದಿಗಿಂತಲೂ ಹಿಂದಿನದು, ನೇಮಿಚಂದ್ರರ ತ್ರಿಲೋಕಸಾರಕ್ಕೆ ಸೇರಿದ್ದು. ಈ ಮೂರು ಕಾರಣಗಳಿಗಾಗಿ ವಡ್ಡಾರಾಧನೆಯ ಕಾಲವಿಚಾರ ಚರ್ಚೆಇನ್ನೂ ಶೋಧನೆಗೆ ತೆರೆದ ವಿಷಯವಾಗಿಯೇ ಉಳಿದುಕೊಳ್ಳುತ್ತದೆ. By kanaja|2015-06-20T10:00:05+05:30June 20, 2015|ಇತಿಹಾಸ, ಕರ್ನಾಟಕ ಇತಿಹಾಸ, ವಿಶ್ಲೇಷಣೆ ಮತ್ತು ಸಂಶೋಧನೆ, ಸಮುದಾಯ ಸಾಹಿತ್ಯ, ಸಾಹಿತ್ಯ|0 Comments
2022/01/28 08:30:47
https://kanaja.karnataka.gov.in/%E0%B2%9A%E0%B2%82%E0%B2%A6%E0%B3%8D%E0%B2%B0%E0%B2%95%E0%B3%8A%E0%B2%A1%E0%B3%86-%E0%B2%A6%E0%B2%BF%E0%B2%B5%E0%B2%BE%E0%B2%95%E0%B2%B0%E0%B2%A3%E0%B2%82%E0%B2%A6%E0%B2%BF-%E0%B2%AE%E0%B2%A4/
mC4
ಧರ್ಮ ಮತ್ತು ರಾಜಕಾರಣದ ನಡುವೆ… | Udayavani – ಉದಯವಾಣಿ Wednesday, 08 Apr 2020 | UPDATED: 02:15 AM IST Team Udayavani, Jan 20, 2020, 6:45 AM IST ಪ್ರಜಾಪ್ರಭುತ್ವ ಅಥವಾ ಜನತಂತ್ರಕ್ಕೆ ಅಪಮಾನ ಆಗದಂತೆ ನಡೆದುಕೊಳ್ಳಬೇಕಾದುದು ಎಲ್ಲ ಧಾರ್ಮಿಕರ ಕರ್ತವ್ಯ. ಮುಖ್ಯಮಂತ್ರಿಗಳನ್ನು ಸಭಿಕರ ಮುಂದೆ ಅವಮಾನ ಮಾಡುವುದು ಯಾವುದೇ ಪೀಠಕ್ಕೂ ಶೋಭಾಯಮಾನ ಅಲ್ಲ. ಬದುಕೊಂದು ಹಾದಿಗಳು ನೂರಾರು. ಅದರಲ್ಲೂ ಪ್ರಮುಖವಾಗಿ ಎರಡು ಮಾರ್ಗಗಳು. ಸಂಸಾರ ಮತ್ತು ಸನ್ಯಾಸ. ಪ್ರತಿಶತ 95% ಜನರು ಸಾಂಸಾರಿಕ ಮಾರ್ಗವನ್ನು ಅನುಸರಿಸುತ್ತಾರೆ. ಕೇವಲ 5% ಜನರು ಸನ್ಯಾಸವನ್ನು ಅನುಭವಿಸುತ್ತಾರೆ. ಬಡತನ, ಅಸಹಾಯಕತೆ, ಪರಿಸ್ಥಿತಿಯ ಒತ್ತಡದಿಂದಾಗಿ ಕೆಲವರು ಸನ್ಯಾಸದ ಕಡೆಗೆ ವಾಲುವಂತಾದರೆ, ಗುರುಕುಲ ಮಾದರಿ ಶಿಕ್ಷಣದಿಂದಾಗಿ ಕೆಲವರು ಆ ಹಾದಿಯನ್ನು ಅನುಸರಿಸುತ್ತಾರೆ. ಆಗಾಗ ಕೆಲವರು ಎಲ್ಲವನ್ನು ತೊರೆಯಲು ನಾನೇನು ಸನ್ಯಾಸಿಯೇ? ಎಂದು ಗೇಲಿ ಮಾಡುತ್ತಾರೆ. ಸನ್ಯಾಸ ಜೀವನದಲ್ಲು ಸವಾಲುಗಳು ಇವೆಯೆಂಬುದು ಕೆಲವರಿಗೆ ತಿಳಿದಿಲ್ಲವೆಂದು ಕಾಣುತ್ತದೆ. ಗೆಡ್ಡೆ- ಗೆಣಸು ಸ್ವೀಕರಿಸುತ್ತ, ಊರಿಂದೂರಿಗೆ ಸಂಚರಿಸುತ್ತ, ಒಮ್ಮೊಮ್ಮೆ ಭಿಕ್ಷೆ ಬೇಡುತ್ತ ತನ್ನ ವ್ರತ-ನಿಯಮಾದಿಗಳನ್ನು ಪಾಲಿಸುವವರು ಸನ್ಯಾಸಿಗಳೆಂದು ಕರೆಸಿಕೊಳ್ಳುತ್ತಾರೆ. ಸನ್ಯಾಸಿಗಳು ಒಂದೇ ಕಡೆ ಜಪ-ತಪ ಆಚರಿಸಲು ಅವಕಾಶವಿದೆ; ಅದರಂತೆ ಪರ್ಯಟನೆ ಮಾಡುತ್ತ ಜೀವನ ನಡೆಸಬಹುದಾಗಿರುತ್ತದೆ. ಇವರಿಗೆ ಒಮ್ಮೊಮ್ಮೆ ಕುಡಿಯಲು ನೀರು ಸಹ ಸಿಗುವುದಿಲ್ಲ. ಎಲ್ಲರಿಗೂ ಬದುಕಿನ ನಿರ್ವಹಣೆ ಬೃಹತ್‌ ಸಮಸ್ಯೆಯಾಗಿ ಕಾಡುತ್ತದೆ. ಕಾಡು-ಮೇಡಿನಲ್ಲಿ ವಾಸಿಸುವ ಸನ್ಯಾಸಿಗಳು ದುಡಿಯುವುದಿಲ್ಲವಾದರೂ, ಜೀವನ ನಿರ್ವಹಣೆ ಅವರವರದೇ ಆಗಿರುತ್ತದೆ. ಬದ್ಧತೆಗೆ ಒಳಗಾಗುವವರನ್ನು ಸ್ವಾಮಿಗಳೆಂದು ಗುರುತಿಸಬಹುದು. ಬದ್ಧತೆಯೆಂದರೆ ಸಾಮಾಜಿಕ ಹೊಣೆಗಾರಿಕೆ. ಸಂಘ-ಸಂಸ್ಥೆಗಳ ಜವಾಬ್ದಾರಿ. ಒಂದು ಮಠ-ಪೀಠವನ್ನು ನಡೆಸಿಕೊಂಡು ಹೋಗುವುದು ಸುಲಭವೇನಲ್ಲ! ಸಮಸ್ಯೆಗಳು ಇರತಕ್ಕವೆ. ಹೆಜ್ಜೆ ಹೆಜ್ಜೆಗೆ ಕಾಡುವವರು ಇರುತ್ತಾರೆ. ಇವರ ಕಣ್ಣು ಎಲ್ಲರ ಮೇಲಿದ್ದರೆ, ಎಲ್ಲರ ಕಣ್ಣು ಇವರ ಮೇಲಿರುತ್ತದೆ. ಅನೇಕರ ಅನುಮಾನಗಳ ನಡುವೆ ಒಬ್ಬ ಸ್ವಾಮಿಯು ಜೀವನ ನಡೆಸಬೇಕಾಗುತ್ತದೆ. ಅನುಮಾನವು ಅವಮಾನಕ್ಕೆ ಕಾರಣ ಆಗುತ್ತದೆ. ಸಾಮಾಜಿಕ ಬದ್ಧತೆಗೆ ಒಳಗಾಗಿ, ಸಂಘ-ಸಂಸ್ಥೆ ಸ್ಥಾಪಿಸುವವರದು ಸ್ವಾಮಿತ್ವ; ಅಲೆಮಾರಿ ಜೀವನ ನಡೆಸುತ್ತ ಕಂದಮೂಲಾದಿಗಳನ್ನು ಸೇವಿಸುತ್ತ ಜೀವನ ನಡೆಸುವುದು ಸನ್ಯಾಸತ್ವ. ಸಂನ್ಯಾಸತ್ವದಲ್ಲಿ ಏಕವ್ಯಕ್ತಿ ಸುಖ; ಸ್ವಾಮಿತ್ವದಲ್ಲಿ ಬಹುಮುಖೀ ಸೇವಾಸುಖ. ಸನ್ಯಾಸಿಗೆ ಯಾವ ಕಟ್ಟುಪಾಡುಗಳು ಇರುವುದಿಲ್ಲ; ಸ್ವಾಮಿತ್ವಕ್ಕೆ ಹಲವಾರು ಕಟ್ಟುಪಾಡುಗಳಿರುತ್ತವೆ. ಬಾಯಾರಿಕೆಯಾದರೆ ಎಲ್ಲರಂತೆ ಅವನು ನೀರು ಕುಡಿಯುವಂತಿಲ್ಲ. ಧ್ಯಾನಾದಿಗಳನ್ನು (ಪೂಜೆ) ಮಾಡಿಯೇ ಪ್ರಸಾದ ಸ್ವೀಕರಿಸಬೇಕೆಂಬ ವ್ರತಾಚರಣೆ. ನೀರು ಕುಡಿಯುವ ಸ್ವಾತಂತ್ರÂವೂ ಅವನಿಗೆ ಇರುವುದಿಲ್ಲ. ಅಕಸ್ಮಾ ತ್ತಾಗಿ ಬಹಿರಂಗ ಸಭೆಯಲ್ಲಿ ನೀರು ಕುಡಿದರೆ ಅದನ್ನು ಚಿತ್ರೀಕರಣ ಮಾಡಿಕೊಂಡು ಕೆಲವರು ಸೋಷಿಯಲ್‌ ಮೀಡಿಯಾಗಳಿಗೆ ರವಾನಿಸುತ್ತಾರೆ. ಒಂದು ಅಪರಾಧ ಎಂಬಂತೆ ಬಿಂಬಿಸಲಾಗುತ್ತದೆ. ಸಭೆ-ಸಮಾರಂಭ ಇತ್ಯಾದಿಗಳಲ್ಲಿ ನಿರತರಾದಾಗ ವೇಳೆಗೆ ಸರಿಯಾಗಿ ಪ್ರಸಾದ (ಭೋಜನ) ಸ್ವೀಕರಿಸಲು ಆಗುವುದಿಲ್ಲ. ನಮ್ಮ ಶ್ರೀಮಠದಲ್ಲಿ ವೇಳೆಗೆ ಸರಿಯಾಗಿ ಪ್ರಸಾದ ಸ್ವೀಕರಿಸುವವರೆಂದರೆ ವಿದ್ಯಾರ್ಥಿಗಳು/ಮಕ್ಕಳು ಮತ್ತು ಬರುವ ಭಕ್ತಾದಿಗಳು. ಕೊನೆಯಲ್ಲಿ ಭೋಜನ ಸ್ವೀಕರಿಸುವವನು ನಾನಾಗಿರುತ್ತೇನೆ. ಮಧ್ಯಾಹ್ನ 3 ಗಂಟೆ ಅಥವಾ 4 ಗಂಟೆ, ರಾತ್ರಿ 10 ಅಥವಾ 11 ಗಂಟೆಗೆ ಪ್ರಸಾದ ಸ್ವೀಕರಿಸ ಬೇಕಾದ ಅನಿವಾರ್ಯತೆ. ದಿನವೂ ಈ ಪದ್ಧತಿ ಮುಂದುವರಿದರೆ ಅಸಿಡಿಟಿ, ಅಲ್ಸರ್‌, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮೂತ್ರಕೋಶದ ತೊಂದರೆಗಳು ಎದುರಾಗುತ್ತವೆ. ಬಹಳ ಜನ ಸ್ವಾಮಿಗಳು ಮೂತ್ರಕೋಶದ ತೊಂದರೆ ಅನುಭವಿಸುತ್ತಾರೆ (ವೇಳೆಗೆ ಸರಿಯಾಗಿ ನೀರು ಕುಡಿಯದೆ ಇರುವುದರಿಂದ). ಇದನ್ನೆಲ್ಲ ಗಮನಿಸಿದ ಕೆಲವರು ಧೈರ್ಯವಾಗಿ ಇತ್ತೀಚೆಗೆ ಬಹಿರಂಗವಾಗಿ ನೀರು ಕುಡಿಯುವುದನ್ನು ಆರಂಭಿಸಿದ್ದಾರೆ. ಮಠಾಧೀಶರ ಮತ್ತೂಂದು ಜಟಿಲವಾದ ಸಮಸ್ಯೆಯೆಂದರೆ ಮಧುಮೇಹ. ಈ ಕಾಯಿಲೆಯು ಅತಿಯಾದ ಒತ್ತಡ (ಖಠಿrಛಿss)ದಿಂದ ಎದುರಾಗುತ್ತದೆಂದು ವೈದ್ಯಕೀಯ ಲೋಕದ ಅಂಬೋಣ. ಮಲಬದ್ಧತೆಯಿಂದಲೂ ಬಳಲುವ ಸಂಭವ. ಮಠಾಧೀಶರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಸಮಯದ ಒತ್ತಡ, ಕಾರ್ಯಬಾಹುಳ್ಯದ ಒತ್ತಡ, ಲೋಕಾಪವಾದದ ಒತ್ತಡ ಇತ್ಯಾದಿ. ಸಮಾಜದ ಒಳಿತಿಗಾಗಿಯೂ ತನ್ನ ಬದುಕಿನ ಉದ್ಧಾರ ಕ್ಕಾಗಿಯೂ ಒಬ್ಬ ಸ್ವಾಮಿ ಮನೆ ಮ ತ್ತು ಹೆತ್ತವರನ್ನು ತೊರೆದು – ಸಮಾಜವೇ ನೀನೇ ನನಗೆ ಗತಿ ಮತಿ ಯೆಂದು ಭಾವಿಸಿ, ಕ ಟ್ಟಿಕೊಂಡಿದ್ದ ಉಡು ದಾರವನ್ನು ಹರಿದು ಬರುತ್ತಾನೆ. ಉಡು ದಾರ ಸಂಸಾರದ ಸಂಕೇತ; ಶಿವದಾರ ಮತ್ತು ಜನಿವಾರ ಪರಮಾರ್ಥ ಸಾಧನೆಯ ಸಂಕೇತ. ಆ ದಿಶೆಯಲ್ಲಿ ಸ್ವಾಮಿಗಳು, ಶರಣರು, ಮಠಾಧೀಶರು ತ್ಯಾಗಮೂರ್ತಿಗಳು. ಸ್ವಾಮಿತ್ವದಲ್ಲಿ ತ್ಯಾಗತ್ವ ಇದೆ. ಸಾರ್ವಜನಿಕರಿಂದ ಪೂಜೆಗೊಳ್ಳುವುದು ಸ್ವಾಮಿಗಳಿಗಿರುವ ಅವಕಾಶ. ತ್ಯಾಗಮಯವಾದ ಬದುಕಿಗೆ ಗೌರವ-ಘನತೆ ಮತ್ತು ಪೂಜ್ಯತೆ. ಆ ಸ್ಥಾನದ ಪೂಜ್ಯತೆ ಮತ್ತು ಘನತೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಪೂಜ್ಯತೆ ಹೆಚ್ಚದಿದ್ದರು ತೊಂದರೆಯಿಲ್ಲ ಅದಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕಾಗುತ್ತದೆ. ಸಿಂಹಾಸನ ಇರಬಹುದು, ಮತ್ಯಾವ ಅಧಿಕಾರದ ಗದ್ದುಗೆ ಹಿಡಿದವರೇ ಇರಬಹುದು, ಅವರೆಲ್ಲ ಸದಾ ಸಿಂಹಾವಲೋಕನ ಮಾಡಿಕೊಳ್ಳ ಬೇಕಾಗುತ್ತದೆ. ತನ್ಮೂಲಕ ತಪ್ಪು-ಒಪ್ಪುಗಳ ಪರಾಮರ್ಶೆ. ಬದುಕಿನಲ್ಲಿ ಧ್ಯಾನ, ಮೌನ ಮತ್ತು ಸುಜ್ಞಾನದ ಮೂಲಕ ಅಂತರೀಕ್ಷಣೆ ಮಾಡಿಕೊಳ್ಳದಿದ್ದಲ್ಲಿ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ಪಟ್ಟಾಧಿಕಾರವೆಂದರೆ ಕೆಲವರು ಮಠಾಧಿಕಾರವೆಂದು ಭ್ರಮಿಸಿದಂತಿದೆ. ಭ್ರಮೆಗೆ ಒಳಗಾದಲ್ಲಿ ಕಣ್ಣು ಕುರುಡಾಗುತ್ತವೆ; ನೆತ್ತಿಗೇರುತ್ತವೆ. ಇಂದ್ರಿಯ ನಿಯಂತ್ರಣ ಬಹುಮುಖ್ಯ. ಬುದ್ಧಿ ಹೇಳಿದಂತೆ ಅವು ಕೇಳಿದರೆ ಚೆನ್ನ. ಅವು ಹೇಳಿದಂತೆ ಬುದ್ಧಿ ಕೇಳಬಾರದು. ಮಠಗಳು ಮತ ಬ್ಯಾಂಕ್‌ ಆಗುತ್ತಿವೆ ಎಂಬ ಸಂದೇಹವು ಇತ್ತೀಚೆಗೆ ವ್ಯಾಪಕವಾಗಿದೆ. ಮಠಗಳು ಶ್ರದ್ಧಾಕೇಂದ್ರಗಳು, ಸಾಂತ್ವನ ಕೇಂದ್ರಗಳು. ಅವು ಶ್ರದ್ಧಾಕೇಂದ್ರ ಮತ್ತು ಸಾಂತ್ವನ ಕೇಂದ್ರಗಳಾದರೆ ಯಾವ ತೊಂದರೆ ಇಲ್ಲ. ಅವು ಶಕ್ತಿ ಕೇಂದ್ರಗಳಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣ ಆಗುತ್ತಿದೆ. ಮಠಾಧೀಶನ ಮೇಲೆ ಆ ಜನಾಂಗದ ಭಕ್ತಿ-ಶ್ರದ್ಧೆ ಇದ್ದೇ ಇರುತ್ತದೆ. ಜನರು ಜಮಾಯಿಸುತ್ತಲೆ ಗದ್ದುಗೆ ಮೇಲೆ ಕುಳಿತವರ ಪಿತ್ತ ನೆತ್ತಿಗೇರಿ ಸಮತೋಲನ ಕಳೆದುಹೋಗುತ್ತದೆ. ಜನಬಲದೊಟ್ಟಿಗೆ ಧನಬಲ ಸೇರಿಬಿಟ್ಟರೆ, ಅಂಥವರನ್ನು ಮಾತನಾಡಿಸುವುದು ಎಲ್ಲಿಲ್ಲದ ಕಷ್ಟ. ತಮ್ಮ ಜನಾಂಗದ ಬಗೆಗೆ ಒಲವು ಇರಲಿ; ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯ ಮಾಡಲಿ. ಆದರೆ ಅದು ದರ್ಪ ಆಗಬಾರದು ತಮ್ಮ ಸಮುದಾಯದ ಬೇಡಿಕೆಗಳನ್ನು ಅಧಿಕಾರಸ್ಥರಿಗೆ ಸಾತ್ವಿಕವಾಗಿ ಹೇಳಿಕೊಳ್ಳಬಹುದು. ಪ್ರಜಾಪ್ರಭುತ್ವ ಅಥವಾ ಜನತಂತ್ರಕ್ಕೆ ಅಪಮಾನ ಆಗದಂತೆ ನಡೆದುಕೊಳ್ಳಬೇಕಾದುದು ಎಲ್ಲ ಧಾರ್ಮಿಕರ ಕರ್ತವ್ಯ. ಮುಖ್ಯಮಂತ್ರಿಗಳನ್ನು ಸಭಿಕರ ಮುಂದೆ ಅವಮಾನ ಮಾಡುವುದು ಯಾವುದೇ ಪೀಠಕ್ಕೂ ಶೋಭಾಯಮಾನ ಅಲ್ಲ. ದರ್ಪ ತೋರಿಸಿದವರಿಗಿಂತಲೂ ಅವರನ್ನು ಪ್ರಚೋದಿಸಿದವರು ಹೆಚ್ಚು ಹೊಣೆಗಾರರಾಗುತ್ತಾರೆ. ಇಂಥ ಶಕ್ತಿಗಳ ಬಗೆಗೆ ಧಾರ್ಮಿಕರು ಸದಾ ಜಾಗರೂಕರಾಗಿ ಇರಬೇಕಾಗುತ್ತದೆ. ಮಠಾಧೀಶರು ಮಾತನಾಡಿ ನಿಷ್ಠುರರಾಗಿಬಿಡುತ್ತಾರೆ. ಅಂಥವರ ಅಮಾಯಕ ಸ್ಥಿತಿಗೆ ಮರುಕ ಪಡಬೇಕಾಗುತ್ತದೆ. ಪಟ್ಟಭದ್ರ ಹಿತಾಸಕ್ತಿಗೆ ಮಠಾಧೀಶರು ಒಳಗಾದರೆ ಏನೆಲ್ಲ ಅನಾಹುತಕ್ಕೆ ಆಮಂತ್ರಣ ನೀಡಿದಂತಾಗುತ್ತದೆ. ಮಠಗಳು ಮತಬ್ಯಾಂಕ್‌ ಆಗುವುದರಿಂದ ಆಗುವ ದುಷ್ಪರಿಣಾಮಗಳನ್ನು ತಪ್ಪಿಸುವ ದಿಸೆಯಲ್ಲಿ ರಾಜಕಾರಣ ಮತ್ತು ಧರ್ಮದ ನಡುವೆ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ..
2020/04/07 20:45:49
https://www.udayavani.com/articles/chinthane/religion-and-politics
mC4
ಅಂಬರೀಶ್ ಸ್ಥಾನ ಅಭಿಷೇಕ್ ತುಂಬಲಿ' - ಉಮಾಶ್ರೀ ಭಾವುಕ ಮಾತು | umashree's emotional talk about ambareesh - Kannada Filmibeat | Published: Friday, November 30, 2018, 15:56 [IST] ರೆಬಲ್ ಸ್ಟಾರ್ ಅಂಬರೀಶ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಇಂದು ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಿನಿಮಾ ಹಾಗೂ ರಾಜಕೀಯದ ಅನೇಕ ಗಣ್ಯರು ಭಾಗಿಯಾಗಿ ಅಂಬರೀಶ್ ಅವರಿಗೆ ನುಡಿ ನಮನ ಸಲ್ಲಿಸಿದರು. ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಕೂಡ ಕಾರ್ಯಕ್ರಮದ ಭಾಗಿಯಾಗಿದ್ದರು. ಅಂಬರೀಶ್ ಅವರ ಸಿನಿಮಾ ಹಾಗೂ ರಾಜಕೀಯ ಜೀವನ ಎರಡನ್ನು ಬಲ್ಲ ಅವರು ಅಂಬಿಯ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡರು. ದುಃಖದಲ್ಲಿ ಇರುವ ಅಂಬರೀಶ್ ಕುಟುಂಬಕ್ಕೆ ಧೈರ್ಯ ತುಂಬಿದ ಅವರು 'ಅಂಬರೀಶ್ ಅವರ ಸ್ಥಾನ ಅಭಿಷೇಕ್ ತುಂಬಲಿ' ಎಂದು ಆಶೀರ್ವಾದ ಮಾಡಿದರು. ಅಂದಹಾಗೆ, ಉಮಾಶ್ರೀ ಅವರ ಪೂರ್ಣ ಮಾತುಗಳು ಮುಂದಿವೆ ನೋಡಿ... ಸದಾ ಉಳಿಯುವ ನೆನಪುಗಳು ''ಸಂಪೂರ್ಣ ಮನುಷ್ಯನಾಗಿ ಬದುಕಿ ಹೋದವರು ಅಂಬರೀಶ್. ಎಲ್ಲರ ರೀತಿ ಅವರ ಜೊತೆಗೂ ನಾನು ಸಿನಿಮಾ ಮಾಡಿದ್ದೇನೆ. ಆದರೆ, ಅವರು ಸದಾ ಉಳಿಯುವ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಪ್ರೀತಿ ಎಂದರೆ ಹೇಗಿರಬೇಕು, ಪ್ರೀತಿಸುವ ಬಗೆ ಏನು, ಶಾಶ್ವತವಾಗಿ ಪ್ರೀತಿ ಹೇಗೆ ಗಳಿಸಬೇಕು ಎನ್ನುವುದನ್ನು ಅವರ ಬದುಕಿನ ಮೂಲಕ ಕಂಡುಕೊಳ್ಳಬೇಕು.'' - ಉಮಾಶ್ರೀ, ನಟಿ, ಮಾಜಿ ಸಚಿವೆ ಅವರಿದ್ದರೆ ಜಾಲಿ ಇರುತ್ತಿತ್ತು ''ದ್ವೇಷ, ಅಸೂಯೆ, ಪ್ರತಿಷ್ಟೆ ಇವು ಯಾವುದು ಬದುಕಿನಲ್ಲಿ ಮುಖ್ಯವಲ್ಲ ಎಂದು ತೋರಿಸಿಕೊಟ್ಟವರು ಅಂಬರೀಶ್. ನಾನು ಒಬ್ಬ ನಟ, ನಾನು ಬೇರೆಯವರಿಂದ ಅಂತರದಲ್ಲಿಯೇ ಇರಬೇಕು ಎನ್ನುವುದನ್ನು ಯಾವತ್ತು ಮಾಡಲಿಲ್ಲ. ಅವರ ಜೊತೆಗಿದ್ದರೆ ಜಾಲಿ ಇರುತ್ತಿತ್ತು.'' - ಉಮಾಶ್ರೀ, ನಟಿ, ಮಾಜಿ ಸಚಿವೆ ಬಡವಳ ಮನೆ ಊಟ ''ಅಂಬರೀಶ್ ಬಡವ, ಶ್ರೀಮಂತ ಎಂಬ ಭೇದ ಇಲ್ಲದೆ ಇದ್ದವರು. ಅವರಿಗೆ ಎಲ್ಲರೂ ಸಮಾನರೆ. ಆಗ ನಾವು ಸಣ್ಣ ಕಲಾವಿದರಾಗಿದರೂ ಬಹಳ ಚೆನ್ನಾಗಿ ನಮ್ಮನ್ನು ಮಾತನಾಡಿಸುತ್ತಿದ್ದರು. ನಾನು ಸಣ್ಣ ಮನೆಯಲ್ಲಿ ಇದೆ, ನಮ್ಮ ಮನೆಗೆ ಬಂದು ಊಟ ಮಾಡಿದ್ದರು. ಸಚಿವ ಆದಗಲೂ ಆ ಊಟದ ಬಗ್ಗೆ ಹೇಳುತ್ತಿದ್ದರು.'' - ಉಮಾಶ್ರೀ, ನಟಿ, ಮಾಜಿ ಸಚಿವೆ ಎಲ್ಲರಿಗೆ ಬಂಧುವಾಗಿದ್ದರು ''ಈ ರೀತಿಯ ಒಬ್ಬ ವ್ಯಕ್ತಿ ಸಿಗಲು ಸಾಧ್ಯವಿಲ್ಲ. ಈ ರೀತಿಯ ಒಬ್ಬ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ನೋವಾಗುತ್ತಿದೆ. ಎಲ್ಲರಿಗೆ ಬಂಧುವಾಗಿ ಏನೇ ಆದರೂ ಬಂದು ನಿಂತುಕೊಳ್ಳುತ್ತಿದ್ದರು. ಇದು ನಮ್ಮ ಅಂಬರೀಶನಿಗೆ ಮಾತ್ರ ಸಾಧ್ಯ. - ಉಮಾಶ್ರೀ, ನಟಿ, ಮಾಜಿ ಸಚಿವೆ ಅವಮಾನ ನೋವು ದುಃಖ ಎಲ್ಲವೂ ಇತ್ತು ''ಅವರಿಗೆ ಅವಮಾನ, ನೋವು ದುಃಖ ಎಲ್ಲವೂ ಇತ್ತು. ಆದರೆ, ಅವುಗಳನ್ನು ಅಂಬರೀಶ್ ಸುಲಭವಾಗಿ ತೆಗೆದುಕೊಳ್ಳುತ್ತಿದ್ದರು. ಬದುಕನ್ನು ಸಹಜವಾಗಿ ನಿರ್ವಹಿಸಿದರು. ಹೀಗೆ ಬದುಕಿ ಎಂಬ ಪಾಠವನ್ನು ನಮಗೆ ತಿಳಿಸಿ ಹೋಗಿದ್ದಾರೆ.'' - ಉಮಾಶ್ರೀ, ನಟಿ, ಮಾಜಿ ಸಚಿವೆ ಅಪ್ಪನ ಸ್ಥಾನ ಅಲಂಕಾರ ಮಾಡಲಿ ''ಅಂಬರೀಶ್ ಅಂಬರದ ಎತ್ತರಕ್ಕೆ ಬೆಳೆದಿದ್ದಾರೆ. ಸುಮಲತಾ ಅವರ ಜೊತೆಗೆ ಯಾವಾಗಲು ಅಂಬರೀಶ್ ಇರುತ್ತಾರೆ. ಅಭಿಷೇಕ್ ಚಿತ್ರರಂಗಕ್ಕೆ ಬಂದಿದ್ದಾನೆ. ಅವರಿಗೆ ಒಳ್ಳೆಯದಾಗಲಿ. ಅಪ್ಪನ ಸ್ಥಾನವನ್ನ ಅವನು ಅಲಂಕಾರ ಮಾಡಲಿ. ಆ ಪುಣ್ಯವಂತನನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬೆಳಯಲಿ.'' - ಉಮಾಶ್ರೀ, ನಟಿ, ಮಾಜಿ ಸಚಿವೆ Read more about: umashree ambareesh sumalatha death hospital sandalwood ಉಮಾಶ್ರೀ ಅಂಬರೀಶ್ ಸಾವು ಸುಮಲತಾ ನಿಧನ ಸ್ಯಾಂಡಲ್ ವುಡ್ Actress and ex minister Umashree's emotional talk about Ambareesh. Actor Ambareesh (66) passed away on November 24th in Bengaluru.
2021/08/01 23:29:20
https://kannada.filmibeat.com/news/umashree-s-emotional-talk-about-ambareesh-034665.html?ref_medium=Desktop&ref_source=FB-KN&ref_campaign=Deep-Links
mC4
ಲಾರ್ಡ್‌ ಕಾರ್ನ್‌ವಾಲಿಸ್ ಮತ್ತು ಕ್ವೀನ್ ಎಲಿಜಬೆತ್ (ಇಬುಕ್) – MyLang (Overseas Store) ಲಾರ್ಡ್‌ ಕಾರ್ನ್‌ವಾಲಿಸ್ ಮತ್ತು ಕ್ವೀನ್ ಎಲಿಜಬೆತ್ (ಇಬುಕ್) ಕಾಲದ ಫ್ರೇಮುಗಳನ್ನು ಕಳಚಿಟ್ಟು ಅಲೆಮಾರಿಯಂತೆ ಚಲಿಸುತ್ತಿರುವುದು ಎಷ್ಟು ಸರಳವೆನಿಸುತ್ತದೆಯೋ ಅದು ಅಷ್ಟೇ ಗಹನವಾದ ಸಂಗತಿಯೂ ಆಗಿಬಿಡುತ್ತದೆ. ಏಕೆಂದರೆ ನಿಶ್ಚಿತ ನೋಟಕ್ರಮಗಳು ಆಭ್ಯಾಸವಾದ ನಮಗೆ ಅದನ್ನು ಮೀರಿ ಸದಾ ಧುಮ್ಮಿಕ್ಕಿ ಹರಿಯುವ ಚೈತನ್ಯವನ್ನು ಅರಿಯುವುದು ಸವಾಲು. ಅದರ ಸಂಗಡ ಸುಮ್ಮನೇ ಹರಿಯುತ್ತಾ ಹೋಗುವುದು ಚಂದ. ಹೊಸನೋಟಗಳು ಮಾತ್ರ ನಮ್ಮನ್ನು ರೋಮಾಂಚಿತಗೊಳಿಸುತ್ತವೆ. ಕಥನಕ್ಕೆ ಅಂಥ ಬೆರಗಿನ ಕಂಪನ ವಿಸ್ತಾರ ಬೇಕು. ಈ ಗುಟ್ಟನ್ನು ರಶೀದರ ಕತೆಗಳು ಹೊಟ್ಟೆಯೊಳಗಿಟ್ಟುಕೊಂಡಿವೆ. ಗೀತಾ ವಸಂತ ಹಿಡಿಯ ಹೊರಟರೆ ಬೆರಳ ಮಧ್ಯದಿಂದ ಜಾರಿಹೋಗುವಂಥ ಒಂದು ಭಾವವಲಯವು ಈ ಕತೆಗಾರಿಕೆಯ ವಸ್ತುವಾಗಿದೆ. ಇದು ಘಟನೆಯಾಗಿ ಬರಬೇಕೆಂದಿಲ್ಲ. ಹಿಂದೂಸ್ತಾನಿ ಸಂಗೀತದ ಬಹುಪಾಲು 'ಸಾಹಿತ್ಯ'ವಿಲ್ಲದೆ ಸಮಗ್ರ ಭಾವನಾ ಲೋಕವನ್ನು ವಿಹರಿಸುವಂತೆ ಈ ಕತೆಗಳಲ್ಲಿ ಕೂಡ ಸೂಕ್ಷ್ಮವಾದ, ಮಾತಿನ ಆಚೆಗೆ, ಹಿಂದೆ ಇರುವ ಭಾವನೆಗಳಿವೆ. ನಮ್ಮ ಗ್ರಹೀತಗಳಿಗೆ, ಪೂರ್ವಗ್ರಹಗಳಿಗೆ ಸವಾಲು ಒಡ್ಡುತ್ತ ವಿಭಿನ್ನ ಲೋಕದೊಳಗೆ ಕರೆದೊಯ್ಯುವ ರಶೀದರ ಕತೆಗಳನ್ನು ಓದಿದಾಗ ದೊರಕುವ ಆನಂದ, ಕಳವಳ, ಉದ್ವೇಗ, ಚಿಂತನೆಗಳನ್ನು ಸುಮ್ಮನೇ ಪಡೆಯಬೇಕಲ್ಲದೇ ಯಾವ ಸಾಹಿತ್ಯಿಕ ಹತಾರಗಳಿಂದಲೂ ದಕ್ಕಿಸಿಕೊಳ್ಳಲಾಗದು. ಸಾಮಾನ್ಯ ಎನಿಸಿಬಿಡಬಲ್ಲ ಸಣ್ಣ ವಿವರವೂ ಕೂಡ ಅಗಾಧ ಭಾವಕೋಶಗಳ ಬ್ರಹ್ಮಾಂಡ ಎಂಬುದನ್ನು ಮನನ ಮಾಡಿಸುವ ಕಥೆಗಳಿವು. ರಶೀದ್ ಮೂಲತಃ ಕಥೆಗಾರ ಮತ್ತು ಅಲೆಮಾರಿ. ಒಂದು ಕಾದಂಬರಿ, ಮೂರು ಕಥಾಸಂಕಲನಗಳು, ಎರಡು ಕವಿತಾ ಸಂಕಲನಗಳು, ನಾಲ್ಕು ಅಂಕಣ ಬರಹಗಳ ಸಂಕಲನ ಪ್ರಕಟಿತ ಕೃತಿಗಳು. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ನಿಮಿತ್ತ ಮಂಗಳೂರು, ಮೇಘಾಲಯದ ರಾಜಧಾನಿ ಶಿಲ್ಲಾಂಗ್, ಗುಲ್ಬರ್ಗ, ಮಡಿಕೇರಿ, ಮೈಸೂರು ಮತ್ತು ಇದೀಗ ಲಕ್ಷದ್ವೀಪದ ಕವರತ್ತಿಯಲ್ಲಿ ಕೆಲಸ. ಕಳೆದ ಹದಿನಾಲ್ಕು ವರ್ಷಗಳಿಂದ ಪ್ರಕಟವಾಗುತ್ತಿರುವ ಕೆಂಡಸAಪಿಗೆ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಗೌರವ ಸಂಪಾದಕ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಮೊದಲಾದವು ಕೆಲವು ಮನ್ನಣೆಗಳು. ತಮ್ಮ ರೇಡಿಯೋ ಕಾರ್ಯಕ್ರಮಗಳಿಗಾಗಿ ಅಂತರಾಷ್ಟ್ರೀಯ ಮನ್ನಣೆಗೂ ಪಾತ್ರ. ರಶೀದ್ ಊರು ಕೊಡಗು. ಓದಿದ್ದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋಧ್ಯಮ, ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ ಎ. 'ಕಥೆಗಳನ್ನು ಕೇಳುವುದು ಮತ್ತು ಬರೆಯುವುದು, ಪ್ರೀತಿಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಮತ್ತು ಅದರಿಂದ ಹೊರಗೆ ಬರಲಾಗದೆ ಒದ್ದಾಡುವುದು, ತಿರುಗಾಡಲಾಗದಿರುವಾಗ ಒಂಟಿಯಾಗಿರುವುದು ನನ್ನ ಜೀವನದ ಮಹಾವ್ಯಸನಗಳಲ್ಲಿ ಕೆಲವು' ಎಂದು ಹೇಳುವ ರಶೀದ್, 'ಬರಹದಿಂದ ಸಿಗುವ ಖ್ಯಾತಿ, ಪ್ರಶಸ್ತಿ ಇತ್ಯಾದಿಗಳು ಕೇವಲ ಉಪ ಉತ್ಪನ್ನಗಳು ಮಾತ್ರ. ಬದುಕು ಮತ್ತು ಪ್ರಕೃತ್ತಿಯ ಬಣ್ಣಗಳಲ್ಲಿ ಕರಗಿ ಹೋಗುವ ಸುಖವೇ ಎಲ್ಲಕ್ಕಿಂತ ಮಿಗಿಲು' ಎನ್ನುತ್ತಾರೆ.
2022/06/28 08:44:26
https://mylangbooks.com/products/lord-cornwallis-mattu-queen-elizabeth-usd
mC4
ಹೆಚ್​.ವಿಶ್ವನಾಥ್ 'ಕಿಕ್​ ಬ್ಯಾಕ್ ಪ್ಲಾನ್' ಆರೋಪಕ್ಕೆ ಸರ್ಕಾರ ಕೊಟ್ಟ ಉತ್ತರವೇನು? – Savi Kannada News ಬೆಂಗಳೂರು: ರಾಜ್ಯದ ಜಲ ಸಂಪನ್ಮೂಲ ಇಲಾಖೆಯಲ್ಲಿನ ಎಲ್ಲಾ ಟೆಂಡರ್ ಪ್ರಕ್ರಿಯೆಗಳನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ನಡೆಸಲಾಗಿದೆ. ಅಲ್ಲದೆ, ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಹೆಚ್.ವಿಶ್ವನಾಥ್ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಲಕ್ಷ್ಮಣ್, ಭದ್ರಾ ಮೇಲ್ದಂಡೆ ಮತ್ತು ಕಾವೇರಿ ನೀರಾವರಿ ಯೋಜನೆಗಳಿಗೆ ಆರ್ಥಿಕ ಇಲಾಖೆಯ ಸಹಮತಿ ಹಾಗೂ ಸಮ್ಮತಿ ಇಲ್ಲದೆಯೇ 20 ಸಾವಿರ ಕೋಟಿ ರೂ. ಟೆಂಡರ್ ಆಹ್ವಾನಿಸಿರುವುದಾಗಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 21,473.67 ಕೋಟಿ ರೂಪಾಯಿ ಮೊತ್ತದ ಸಮಗ್ರ ಪರಿಷ್ಕತ ಯೋಜನಾ ವರದಿಯ ಶಿಫಾರಸಿನ ಅನ್ವಯ ಸರ್ಕಾರವು ದಿನಾಂಕ 16-12-2020 ರಂದು ಆರ್ಥಿಕ ಇಲಾಖೆ ಸಹಮತಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅಂತೆಯೇ, ದಿನಾಂಕ : 24-12-2020 ರಂದು ನಡೆದ ಕೇಂದ್ರ ಜಲಶಕ್ತಿ ಮಂತ್ರಾಲಯದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಈ ಯೋಜನೆಗೆ 16125.48 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಪ್ರಸ್ತಾವನೆ ಸಲ್ಲಿಕೆ ಹಂತದಲ್ಲಿ ಇದೆ ಭದ್ರಾ ಮೇಲ್ದಂಡೆ ಯೋಜನೆಯಡಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 5,57,022 ಎಕರೆ ಬರಪೀಡಿತ ಮಧ್ಯ ಕರ್ನಾಟಕದ ಬವಣೆ ನೀಗಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ದಿನಾಂಕ : 25-03-2021 ರಂದು ನಡೆದ ಸಭೆಯಲ್ಲಿ ಈ ಕಡತವನ್ನು ಕೇಂದ್ರ ಸರ್ಕಾರದ ಹೂಡಿಕೆ ತೀರುವಳಿ ಮಂಡಳಿ (ಇನ್‍ವೆಸ್ಟ್ಮೆಂಟ್ ಕ್ಲಿಯರೆನ್ಸ್ ಬೋರ್ಡ್)ಗೆ ನೀಡಲಾಗಿದೆ. ಪ್ರಸ್ತುತ ಉನ್ನತಾಧಿಕಾರ ಸಮಿತಿಯ ಮುಂದೆ ತಿರುವಳಿಗಾಗಿ ಪ್ರಸ್ತಾವನೆ ಸಲ್ಲಿಕೆ ಹಂತದಲ್ಲಿ ಇದೆ ಎಂದು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಪೇಶ್ವೆ ಅವರು ಸ್ಪಷ್ಟನೆ ನೀಡಿದ್ದಾರೆ. ಆರ್ಥಿಕ ಸಂಪನ್ಮೂಲದ ಕೊರತೆ ಇಲ್ಲ ಈ ಯೋಜನೆಗೆ ಸಂಬಂಧಿಸಿದಂತೆ 02-12-2020 ರಲ್ಲಿ ನಡೆದ ನಿರ್ದೇಶಕ ಮಂಡಳಿಯ 16 ನೇ ಸಭೆಯಲ್ಲಿ ಮಂಜೂರಾತಿ ಪಡೆಯಲಾಗಿದೆ. ಅಲ್ಲದೆ, 21,473 ಕೋಟಿ ರೂ. ಯೋಜನೆಗೆ ಸರ್ಕಾರದಲ್ಲಿ ಅನುದಾನವಿಲ್ಲ ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿರುವ ಅವರು ಈ ಯೋಜನೆಯು ಆರ್ಥಿಕ ಇಲಾಖೆಯ ಸಹಮತಿ ಮತ್ತು ಸಮ್ಮತಿಯೊಂದಿಗೆ ಅನುಮೋದಿತವಾಗಿದೆ. ಈ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನೆಯಡಿ 16,125.4 ಕೋಟಿ ರೂ. ಗಳನ್ನು ಭರಿಸಲಿದೆ. ಈ ಯೋಜನೆಯನ್ನು 2023-24 ರೊಳಗೆ ಪೂರ್ಣಗೊಳಿಸುವ ಷರತ್ತಿನೊಂದಿಗೆ ಕೇಂದ್ರ ಸರ್ಕಾರವು ಅನುದಾನ ಮಂಜೂರು ಮಾಡಿದೆ. ಹೀಗಾಗಿ ಈ ಯೋಜನೆಯ ಜಾರಿಗೆ ಆರ್ಥಿಕ ಸಂಪನ್ಮೂಲದ ಕೊರತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಏಳು ಪ್ಯಾಕೇಜ್‍ಗಳಲ್ಲಿ ಟೆಂಡರ್ ಆಹ್ವಾನ ಇಪ್ಪತ್ತು ಸಾವಿರ ಕೋಟಿ ರೂ. ಟೆಂಡರ್ ಕರೆದಿದ್ದು ಇದಕ್ಕೆ ಅನುಮತಿ ಇಲ್ಲ ಎಂಬ ಆರೋಪಕ್ಕೆ ಉತ್ತರಿಸಿರುವ ಶ್ರೀ ಲಕ್ಷ್ಮಣ ರಾವ್ ಪೇಶ್ವೆ ಅವರು, 25-03-2021 ರಂದು ಜರುಗಿದ ಸಭೆಯಲ್ಲಿ ಕೇಂದ್ರ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಅನುಮೋದನೆ ನೀಡಲಾಗಿದೆ. ಎಲ್ಲಾ ಕಾಮಗಾರಿಗಳನ್ನು 2023-24 ನೇ ಸಾಲಿನ ಒಳಗೆ ಪೂರ್ಣ ಗೊಳಿಸಬೇಕಿರುವುದರಿಂದ ಡ್ರಿಪ್ ಕಾಮಗಾರಿ ಅಂದಾಜು ಪಟ್ಟಿಗಳನ್ನು ಡ್ರಿಪ್ ಸಮಿತಿಯ ಐದು ಸಭೆಗಳಲ್ಲಿ ಸವಿವರವಾಗಿ ಚರ್ಚಿಸಿ ಹಾಗೂ ನಿಗಮದ ಅಂದಾಜು ಪರಿಶೀಲನಾ ಸಮಿತಿಯಿಂದ ಅನುಮತಿ ಪಡೆದು ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿನ ಖರೀದಿಗಳಲ್ಲಿ ಪಾರದರ್ಶಕತಾ ಅಧಿನಿಯಮದಲ್ಲಿನ ನಿಯಮಾನುಸಾರ 4026.60 ಕೋಟಿ ಮೊತ್ತಕ್ಕೆ ಏಳು ಪ್ಯಾಕೇಜ್‍ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. ಇದು ಪ್ರಕ್ರಿಯೆಯ ವಿವಿಧ ಹಂತಗಳಲಿವೆ. ಕೋವಿಡ್-19 ರ ಹಿನ್ನೆಲೆಯಲ್ಲಿ ಕಳೆದ ವರ್ಷ ಟೆಂಡರ್ ಪ್ರಕ್ರಿಯೆ ಮಾಡಲಾಗಿಲ್ಲ. ಹೀಗಾಗಿ ಪ್ರಸ್ತುತ ಟೆಂಡರ್ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಈ ಯೋಜನೆಯ ಜಾರಿಗೆ ಸಚಿವ ಸಂಪುಟದ ಅನುಮೋದನೆಯನ್ನು ಪಡೆಯಲಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಪೇಶ್ವೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: '₹20,000 ಕೋಟಿಯ ಟೆಂಡರ್​​ನಿಂದ ವಿಜಯೇಂದ್ರ ಕಿಕ್ ಬ್ಯಾಕ್ ಪ್ಲ್ಯಾನ್'- ಹೆಚ್​​.ವಿಶ್ವನಾಥ್ ಗಂಭೀರ ಆರೋಪ The post ಹೆಚ್​.ವಿಶ್ವನಾಥ್ 'ಕಿಕ್​ ಬ್ಯಾಕ್ ಪ್ಲಾನ್' ಆರೋಪಕ್ಕೆ ಸರ್ಕಾರ ಕೊಟ್ಟ ಉತ್ತರವೇನು? appeared first on News First Kannada.
2021/07/24 07:06:03
https://savikannada.in/%E0%B2%B9%E0%B3%86%E0%B2%9A%E0%B3%8D%E2%80%8B-%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%A8%E0%B2%BE%E0%B2%A5%E0%B3%8D-%E0%B2%95%E0%B2%BF%E0%B2%95%E0%B3%8D%E2%80%8B-%E0%B2%AC/
mC4
'ಕಿಡ್ನಿ ಕೊಟ್ಟ 2 ದಿನ ಆದ್ಮೇಲೆ ಪ್ರಜ್ಞೆ ಬಂತು': 'ತೂಗುದೀಪ' ಕೊನೆಯ ಕ್ಷಣ ನೆನೆದು ಭಾವುಕರಾದ ದರ್ಶನ್ ತಾಯಿ | Darshan Mother Meena Remembered About thoogudeepa Srinivas Kidney Failure - Kannada Filmibeat | Updated: Saturday, May 15, 2021, 21:15 [IST] ಈ ಲಿಂಕ್ ಕ್ಲಿಕ್ ಮಾಡಿಕನ್ನಡ ಚಿತ್ರರಂಗದ ಖ್ಯಾತ ಕಲಾವಿದ ತೂಗುದೀಪ ಶ್ರೀನಿವಾಸ್ ಅವರಿಗೆ ಕಿಡ್ನಿ ಸಮಸ್ಯೆಯಿತ್ತು. ಎರಡು ಕಿಡ್ನಿಗಳು ವೈಫಲ್ಯವಾಗಿ ಸಾವು-ಬದುಕಿಗಾಗಿ ಹೋರಾಡುತ್ತಿದ್ದರು. ಈ ಸಂದರ್ಭದಲ್ಲಿ ಪತ್ನಿ ಮೀನಾ ತೂಗುದೀಪ ಅವರೇ ದರ್ಶನ್ ತಂದೆಗೆ ಒಂದು ಕಿಡ್ನಿ ದಾನ ಮಾಡಿ ಗಂಡನ್ನು ಉಳಿಸಿಕೊಂಡರು. ಕಿಡ್ನಿ ಕೊಟ್ಟ ಮೇಲೆ ತೂಗುದೀಪ ಶ್ರೀನಿವಾಸ ಮೊದಲಿನಂತೆ ಆಗ್ತಾರೆ ಎಂಬ ಬಹುದೊಡ್ಡ ಆಸೆ ಮನೆಯವರಲ್ಲಿತ್ತು. ಆ ಆಸೆ ಹೆಚ್ಚು ಕಾಲ ಉಳಿಯಲಿಲ್ಲ ಎನ್ನುವುದು ತೀರಾ ನೋವಿನ ಸಂಗತಿ. 52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಖ್ಯಾತ ಕಲಾವಿದ ಶ್ರೀನಿವಾಸ ನಿಧನರಾದರು. ಪತಿಗೆ ಕಿಡ್ನಿ ಕೊಟ್ಟ ನೋವನ್ನು ಹೇಳಿಕೊಂಡ ದರ್ಶನ್ ತಾಯಿ | Oneindia Kannada ತೂಗುದೀಪ ಶ್ರೀನಿವಾಸ ಅವರ ಕೊನೆಯ ದಿನಗಳು, ಕಿಡ್ನಿ ಸಮಸ್ಯೆಯಿಂದ ಉಂಟಾದ ಪರಿಸ್ಥಿತಿ, ಕಿಡ್ನಿ ದಾನ ಮಾಡಲು ಮೀನಾ ಅವರು ನಿರ್ಧರಿಸಿದ್ದೇಕೆ ಎಂಬ ವಿಚಾರಗಳ ಬಗ್ಗೆ ದರ್ಶನ ತಾಯಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈ ಸಂದರ್ಶನದ ವಿಡಿಯೋ ತುಣುಕನ್ನು ನಿರ್ದೇಶಕ ರಘುರಾಮ್ ಈಗ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿ ಮ್ಯೂಸಿಯಂ ಆಯ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಳೆ ಮನೆ? ಡಿ ಬಾಸ್ ಅವರ ತಂದೆ, ಕನ್ನಡ ಚಿತ್ರರಂಗದ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಅವರ ಕೊನೆಯ ಕ್ಷಣಗಳು ಹೇಗಿತ್ತು ಎನ್ನುವುದನ್ನು ಮೀನಾ ಅವರೇ ಹೇಳಿರುವ ಮಾತುಗಳು? ಮುಂದೆ ಓದಿ... ಎರಡ್ಮೂರು ದಿನದ ನಂತರ ಪ್ರಜ್ಞೆ ಬಂತು ''ನನ್ನ ಒಂದು ಕಿಡ್ನಿ ಕೊಡಲು ನಿರ್ಧರಿಸಿದೆ. ಒಂದೇ ಬೆಡ್‌ನಲ್ಲಿ ನಮ್ಮಿಬ್ಬರನ್ನು ಮಲಗಿಸಿದ್ದರು. ಆಮೇಲೆ ನನ್ನನ್ನು ಅಲ್ಲಿಂದ ಕರೆದುಕೊಂಡು ಹೋದರು. ಹೋಗುವಾಗ ಮಕ್ಕಳಿಗೆ ಟಾಟಾ ಮಾಡಿದೆ. ಅಪ್ಪ-ಅಮ್ಮ ಇಬ್ಬರು ಹೋಗ್ತಿದ್ದಾರೆ, ನಾವು ಹೇಗಿರುವುದು ಎಂದು ನನ್ನ ಮೂವರು ಮಕ್ಕಳು ಬಹಳ ಬೇಸರ ಮಾಡಿಕೊಂಡಿದ್ದರು. ಆಪರೇಷನ್ ಆದ್ಮೇಲೆ ನನಗೆ ಪ್ರಜ್ಞೆ ಬಂದಿದ್ದೇ ಮೂರು ದಿನದ ನಂತರ. ತೂಗುದೀಪ ಅವರಿಗೆ ಕೂಡಲೇ ಪ್ರಜ್ಞೆ ಬಂದಿದೆ. ನನಗೆ ಎರಡ್ಮೂರು ದಿನ ಆಯ್ತು. ಒಂದೇ ಆಸ್ಪತ್ರೆಯಲ್ಲಿದ್ದರೂ ನನಗೆ ಪತ್ರ ಬರೆದು, 'ಮೀನಾ, ನಾನು ಚೆನ್ನಾಗಿದ್ದೇನೆ, ನಿನಗೆ ಪ್ರಜ್ಞೆ ಬಂತಾ' ಎಂದು ಕೇಳಿದ್ದರು' ಎಂದು ಈ ಸಂದರ್ಶನದಲ್ಲಿ ಸ್ಮರಿಸಿಕೊಂಡಿದ್ದರು. ಯಜಮಾನ್ರು ಚೆನ್ನಾಗಿ ಆಗಬೇಕು ಅಂತ ನಿರ್ಧರಿಸಿಬಿಟ್ಟಿದ್ದೆ ''ನಮ್ಮ ಯಜಮಾನರ ಆರೋಗ್ಯ ಚೆನ್ನಾಗಿ ಆಗ್ಬೇಕು ಅಂತ ನಾನು ನಿರ್ಧರಿಸಿಬಿಟ್ಟಿದ್ದೆ. ಮೀನಾ ಎನ್ನುವವರು ಬಹಳಷ್ಟು ಜನ ಇದ್ದಾರೆ. ಆದರೆ, ತೂಗುದೀಪ ಶ್ರೀನಿವಾಸ್ ಒಬ್ಬರೆ. ನಾನು ಕಿಡ್ನಿ ಕೊಡುವುದರಿಂದ ಅವರು ಇನ್ನೊಂದಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ಇರ್ತಾರೆ ಎಂಬ ಆಸೆ ಇತ್ತು. ವಿಧಿಲಿಖಿತ ಆಗಿದ್ದೇ ಬೇರೆ. ಒಂದು ವರ್ಷ ಚೆನ್ನಾಗಿದ್ದರು ಅಷ್ಟೇ'' ಎಂದು ಭಾವುಕರಾದರು. ಮಕ್ಕಳಿಗೆ ತಂದೆ ಬೇಕಿತ್ತು ''ಮಕ್ಕಳಿಗೆ ತಂದೆ-ತಾಯಿ ಇಬ್ಬರು ಇರಬೇಕು. ತಂದೆ ಪ್ರೀತಿನೇ ಬೇರೆ ತಾಯಿ ಪ್ರೀತಿನೇ ಬೇರೆ. ನಾನಾದರೂ ಮಕ್ಕಳ ಜೊತೆ ಹೆಚ್ಚು ಸಮಯ ಕಳೆದಿದ್ದೆ. ಆದರೆ, ತೂಗುದೀಪ ಅವರು ಹೆಚ್ಚು ಸಮಯ ಮನೆಯಲ್ಲಿ ಇರ್ತಿರಲಿಲ್ಲ. ನನಗೆ ಏನಾದರೂ ಪರವಾಗಿಲ್ಲ, ನನ್ನ ಮಕ್ಕಳಿಗೆ ತಂದೆ ಇರಬೇಕು ಅಂತ ನನಗೆ ತುಂಬಾ ಆಸೆ ಇತ್ತು. ಆದರೆ ಅದು ಆಗಲಿಲ್ಲ'' ಎಂದು ನೋವಿನಿಂದ ನುಡಿದರು. ನನಗೆ ಪುನರ್ಜನ್ಮ ಕೊಟ್ಟ ದೇವತೆ ಅಂತಿದ್ದರು ''ಕಿಡ್ನಿ ಆಪರೇಷನ್ ಆದ್ಮೇಲೆ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ಕಲಾವಿದರು ಮನೆಗೆ ಬಂದಿದ್ದರು. ಅವರ ಎದುರು ''ನನಗೆ ಪುನರ್ಜನ್ಮ ಕೊಟ್ಟ ದೇವತೆ ಈಕೆ, ಸತಿ ಸಾವಿತ್ರಿ'' ಅಂತಿದ್ದರು. ರಾಜ್ ಕುಮಾರ್ ಅವರು ಏಳೆಂಟು ಸಲ ಬಂದಿದ್ದರು. ಶ್ರೀನಾಥ್ ಅವರು ನನಗೆ ನಮಸ್ಕಾರ ಮಾಡಿ ''ಏನಮ್ಮಾ ಮೀನಮ್ಮ, ಕಿಡ್ನಿ ಕೊಟ್ಟು ಸೀನಣ್ಣನ ಉಳಿಸಿಕೊಂಡು ಬಿಟ್ಟೆ'' ಅಂತ ಹೇಳಿದರು. ಆಮೇಲೆ ಏನೂ ಮಾಡೋಕೆ ಆಗಿಲ್ಲ'' ಎಂದು ಬೇಸರದಿಂದ ಮಾತನಾಡಿದ್ದಾರೆ.
2021/06/16 11:11:16
https://kannada.filmibeat.com/features/darshan-mother-meena-remembered-about-thoogudeepa-srinivas-kidney-failure-050620.html
mC4
ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಗೆ ನೀಡಿದ ದುಬಾರಿ ಗಿಫ್ಟ್‌ಗಳೇನು ಗೊತ್ತಾ? | Raj Kundras expensive gifts for Shilpa shetty First Published Jun 9, 2020, 6:17 PM IST ತಮ್ಮ 45ನೇ ಹುಟ್ಟುಹಬ್ಬವನ್ನು (ಜೂನ್ 8) ಆಚರಿಸಿಕೊಂಡ ಬಾಲಿವುಡ್‌ನ ಫಿಟ್‌ ನಟಿ ಶಿಲ್ವಾ ಶೆಟ್ಟಿಗೆ ಈ ವರ್ಷದ ಬರ್ಥ್‌ಡೇ ಸ್ಪೆಷಲ್‌ ಕಾರಣ ಮಗಳು ಸಮಿಷಾ. ಶಿಲ್ಪಾ ಶೆಟ್ಟಿ ತನ್ನ 45ನೇ ಹುಟ್ಟುಹಬ್ಬವನ್ನು ಹಿಂದಿನ ದಿನವೇ ಆಚರಿಸಿದರು. ಮಗಳು ಸಮಿಷಾ ಜೊತೆ ಆಚರಿಸಿರುವ ನಟಿಯ ಫಸ್ಟ್‌ ಹುಟ್ಟಿದ ಹಬ್ಬವಾಗಿದೆ. ಈ ಸೆಲೆಬ್ರೆಷನ್‌ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಶಿಲ್ಪಾ ಶೆಟ್ಟಿ ತಮ್ಮ ಜನ್ಮದಿನಾಚರಣೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಪತಿ ರಾಜ್ ಕುಂದ್ರಾ ಮತ್ತು ಇಬ್ಬರು ಮಕ್ಕಳು ಇದ್ದಾರೆ ಜೊತೆಗೆ. ಲಾಕ್‌ಡೌನ್‌ನಲ್ಲಿ, ಮನೆಯಲ್ಲಿ ಕುಟುಂಬದೊಂದಿಗೆ ಆಚರಿಸಿದ ಬರ್ತ್‌ಡೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಗ ವಿಯಾನ್ ಮಮ್ಮಿಯ ಹುಟ್ಟುಹಬ್ಬದ ಕೇಕ್ ಕಟ್‌ ಮಾಡುತ್ತಿದ್ದಾನೆ ಹಾಗೂ ಶಿಲ್ಪಾ ಹಂಚಿಕೊಂಡ ಎರಡನೇ ಫೋಟೋದಲ್ಲಿ, ತಂಗಿ ಶಮಿತಾ ಶೆಟ್ಟಿ ಸೇರಿದಂತೆ ತನ್ನ ಇಡೀ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದಾಳೆ ಶಿಲ್ಪಾ. ಬಾಲಿವುಡ್‌ನ ಆಡೋರಬಲ್‌ ದಂಪತಿಗಳಲ್ಲಿ ಶಿಲ್ಪಾ ಮತ್ತು ರಾಜ್ ಕುಂದ್ರಾ ಒಬ್ಬರು. ಮದುವೆಯಾದಾಗಿನಿಂದಲೂ ತನ್ನ ಲೇಡಿಲವ್‌ಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಲೇ ಇದ್ದಾರೆ ಉದ್ಯಮಿ ರಾಜ್ ಕುಂದ್ರಾ. ರಾಜ್‌ ಹೆಂಡತಿಗೆ ನೀಡಿದ ಕೆಲವು ದುಬಾರಿ ಉಡುಗೊರೆಗಳ ಬಗ್ಗೆ ಕೇಳಿದರೆ ದಂಗಾಗುವುದು ಗ್ಯಾರಂಟಿ. 20 ಕ್ಯಾರೆಟ್ ಡೈಮಂಡ್ ರಿಂಗ್ ರಾಜ್ ನೀಡಿದ ಮೊದಲ ದುಬಾರಿ ಉಡುಗೊರೆ. ಶಿಲ್ಪಾಗೆ ಎಂಗೇಜ್ಮೆಂಟ್‌ಗೆ 3 ಕೋಟಿ ರೂ.ಗಳ ಮೌಲ್ಯದ 20 ಕ್ಯಾರೆಟ್ ಹೃದಯ ಆಕಾರದ ನೈಸರ್ಗಿಕ ಬಿಳಿ ವಜ್ರದ ಉಂಗುರ ತೋಡಿಸಿದ್ದ ರಾಜ್‌. ರಾಜ್‌ ತನ್ನ ಮಡದಿಗೆ ಆ್ಯನಿವರ್ಸರಿಗೆ ನೀಡಿದ ಬುರ್ಜ್ ಖಲೀಫಾದಲ್ಲಿನ ಅಪಾರ್ಟ್ಮೆಂಟ್ ಬಾಲಿವುಡ್ ಇತಿಹಾಸದಲ್ಲಿನ ಅತ್ಯಂತ ದುಬಾರಿ ಉಡುಗೊರೆ. ವಿಶ್ವದ ಅತಿ ಎತ್ತರದ ಗೋಪುರ ದುಬೈನ ಬುರ್ಜ್ ಖಲೀಫಾದ, 19ನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಚನ್ನು 2016ರಲ್ಲಿ ಗಿಫ್ಟ್‌ ಆಗಿ ಪಡೆದಿದ್ದರು ಶಿಲ್ಪಾ ಶೆಟ್ಟಿ. ಆದರೆ ತಮ್ಮ ಕುಟುಂಬಕ್ಕೆ ತುಂಬಾ ಚಿಕ್ಕದಾಗಿದ್ದರಿಂದ ಆಸ್ತಿಯನ್ನು ಮಾರಿದರು. ಯುಕೆಯ 7 ಬೆಡ್ ರೂಮ್ ವಿಲ್ಲಾ - ಯುನೈಟೆಡ್ ಕಿಂಗ್ಡಮ್‌ನ ವೇಬ್ರಿಡ್ಜ್‌ನಲ್ಲಿರುವ 'ರಾಜ್ ಮಹಲ್' ಎಂಬ ಭವ್ಯವಾದ 7 ಬೆಡ್ ರೂಮ್ ಬಂಗ್ಲೆ ರಾಜ್ ತನ್ನ ಹೆಂಡತಿಗಾಗಿ ಖರೀದಿಸಿದ ಮತ್ತೊಂದು ದುಬಾರಿ ಆಸ್ತಿ. ಮುಂಬೈನಲ್ಲಿ ಸೀ ಫೇಸಿಂಗ್‌ ವಿಲ್ಲಾ ಹೊಂದುವುದು ಶಿಲ್ಪಾಳ ಕನಸಾಗಿತ್ತು. ಸಮುದ್ರದ ಕಡೆ ಮುಖ ಮಾಡಿರುವ ವಿಲ್ಲಾ ಕಿನಾರಾವನ್ನು ಖರೀದಿಸುವ ಮೂಲಕ ನಟಿಯ ಆಸೆಯನ್ನು ಪೂರೈಸಿದ್ದಾರೆ ಹಬ್ಬಿ. ಕುಟುಂಬವು ತಮ್ಮ ಹೆಚ್ಚಿನ ಸಮಯವನ್ನು ಕಳೆಯುವುದು ಈ ಬಂಗ್ಲೆಯಲ್ಲೇ. BMW Z4 ಸೇರಿದಂತೆ ಅನೇಕ ಐಷಾರಾಮಿ ಕಾರುಗಳನ್ನು ಶಿಲ್ಪಾಗೆ ಉಡುಗೊರೆಯಾಗಿ ನೀಡಿದ್ದಾರೆ ಆದರೆ ಆಕೆಯ ನೀಲಿ ಲಂಬೋರ್ಘಿನಿ ಕಾರು ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡಿತ್ತು.
2021/06/24 19:39:31
https://kannada.asianetnews.com/gallery/cine-world/raj-kundras-expensive-gifts-for-shilpa-shetty-qbnsvm
mC4
ಗೂಗಲ್ ಪೋರಿಗೆ 20 ರ ಹರೆಯವಂತೆ, ವಿಶ್ ಮಾಡಿದ್ದೀರಾ?! | 20th birthday for search engine Google - Kannada Oneindia | Updated: Wednesday, September 5, 2018, 13:13 [IST] 20 ವರ್ಷಗಳ ಹಿಂದೆ ಗೂಗಲ್ ಅಸ್ತಿತ್ವವೇ ಇಲ್ಲದ ಕಾಲವೊಂದಿತ್ತು ಎಂದರೆ ಈ ತಲೆಮಾರಿನ ಜನರು ನಂಬಬಹುದಾ? ಗೂಗಲ್ ಇಲ್ಲದ ಬದುಕನ್ನು ಅವರಿಂದ ಊಹಿಸಿಕೊಳ್ಳುವುದಕ್ಕಾದರೂ ಸಾಧ್ಯವಿದೆಯಾ? ಕಲಿಯುಗದ ಕಾಮಧೇನು ಅಂದ್ರೆ 'ಗೂಗಲ್' ಅನ್ನಬಹುದೇನೋ! ಕೇಳಿದ್ದನ್ನೆಲ್ಲ ಕೈಗಿಡದಿದ್ದರೂ, ಅಗತ್ಯ ಮಾಹಿತಿಯನ್ನಂತೂ ಧಾರಾಳವಾಗಿ ನೀಡುತ್ತದೆ. ಇಂಥ ಗೂಗಲ್ ಗೆ ಈಗ 20 ರ ಹರೆಯವಂತೆ. ಸೆಪ್ಟೆಂಬರ್ 4, 1998 ರಂದು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದ ಪಿಎಚ್ ಡಿ ವಿದ್ಯಾರ್ಥಿಗಳಾದ ಲಾರಿ ಪೇಜ್ ಮತ್ತು ಸೆರ್ಜೆ ಬ್ರಿನ್ ಮೊಟ್ಟ ಮೊದಲ ಬಾರಿಗೆ ಗೂಗಲ್ ಎಂಬ ಸರ್ಜ್ ಇಂಜಿನ್ ಅನ್ನು ಪರಿಚಯಿಸಿದರು. ಮುಂದೊಮ್ಮೆ ಇದು ಕೋಟಿ ಕೋಟಿ ಜನರ ಅತ್ಯಗತ್ಯವಾಗುತ್ತದೆ ಎಂದು ಆಗ ಅವರೂ ಊಹಿಸಿರಲಿಕ್ಕಿಲ್ಲ. ಸದ್ಯಕ್ಕೆ ಜಗತ್ತಿನ ಅಗ್ರ ಮಾಹಿತಿ ಕಣಜವಾಗಿ ಮುಂಚೂಣಿಯಲ್ಲಿರುವ ಗೂಗಲ್ ಅನ್ನು ಪ್ರತಿ ತಿಂಗಳು ಶತಕೋಟಿಗೂ ಹೆಚ್ಚು ಜನ ಬಳಕೆ ಮಾಡುತ್ತಾರೆ. ಇಂತಿಪ್ಪ ಗೂಗಲ್ ಗೆ ಈಗ 20 ವರ್ಷ ವಯಸ್ಸು! ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ, ಆಧುನಿಕ ತಲೆಮಾರಿಗೆ ತಕ್ಕಂತೆ ಸೂಕ್ತ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತ, ಹೊಸ ಪೀಳಿಗೆಯ ಅಗತ್ಯಕ್ಕಾಗಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತ ಗೂಗಲ್ ಪ್ರಸಿದ್ಧಿ ಪಡೆದಿದೆ. ಗೂಗಲ್ ಆವಿಷ್ಕಾರವಾದ ದಿನ ಸೆಪ್ಟೆಂಬರ್ 4 ಆದರೂ, ಸೆಪ್ಟೆಂಬರ್ 27 ರಂದು ಗೂಗಲ್ ಡೂಡಲ್ ಮೂಲಕ 'ತನಗೆ ತಾನೇ ಬರ್ಥಡೇ ವಿಶಸ್ ಹೇಳಿಕೊಳ್ಳಲಿದೆ ಗೂಗಲ್!' ಇಂಥ ಗೂಗಲ್ ಗೆ ನಮ್ಮ ಕಡೆಯಿಂದ ಹ್ಯಾಪಿ ಬರ್ಥಡೇ! google birthday international news search engine technology ಗೂಗಲ್ ಜನ್ಮದಿನ ತಂತ್ರಜ್ಞಾನ ಅಂತಾರಾಷ್ಟ್ರೀಯ ಸುದ್ದಿ Most famous search engine Google has celebrated its 20th birthday on September 04. Google was invented by 2 Americal PhD students in 1998.
2019/05/26 14:22:01
https://kannada.oneindia.com/news/international/20th-birthday-for-search-engine-google-149147.html
mC4
ನೇರನೋಟ: ಅಡಿಗಲ್ಲಾಗುವವರಿಗೆ ಗೋಪುರದ ಗೀಳೇಕೆ? – Vishwa Samvada Kendra ನೇರನೋಟ: ಅಡಿಗಲ್ಲಾಗುವವರಿಗೆ ಗೋಪುರದ ಗೀಳೇಕೆ? ರಾಜಕೀಯ ಕ್ಷೇತ್ರದ ಅಡಿಗಲ್ಲುಗಳಾಗಿ ಪ್ರಜಾಪ್ರಭುತ್ವದ ಸೌಧಕ್ಕೆ ಭದ್ರ ತಳಪಾಯವಾಗಬೇಕಾದವರು ಅದನ್ನೊಲ್ಲದೆ, ತಾವು ಗೋಪುರಗಳಾಗಿಯೇ ಇರುತ್ತೇವೆ ಎಂದರೆ ಅದೆಂತಹ ವೈರುಧ್ಯ? ಅಡಿಗಲ್ಲುಗಳಾಗಬೇಕಾದವರೆಲ್ಲ ಗೋಪುರಗಳಾಗಲು ಹೊರಟರೆ ಪ್ರಜಾಪ್ರಭುತ್ವದ ಕಟ್ಟಡ ಕುಸಿಯದೆ ಇದ್ದೀತೆ? Jaffer Shareeff ಇನ್ನು ಎರಡೂವರೆ ತಿಂಗಳು ದೇಶಕ್ಕೆ ಚುನಾವಣಾ ಜ್ವರ. ಮುಂದಿನ ಮೇ ೧೬ರಂದು ಹೊಸ ಸರ್ಕಾರದ ನೊಗಕ್ಕೆ ಯಾರು ಹೆಗಲು ಕೊಡುತ್ತಾರೆ ಎಂಬುದು ಗೊತ್ತಾಗುವವರೆಗೆ ಈ ಜ್ವರಕ್ಕೆ ಪರಿಹಾರವಿಲ್ಲ. ಅದಾದ ಬಳಿಕ ಹೊಸ ಸರ್ಕಾರ ರಚನೆಯ ಇನ್ನೊಂದು ಕಸರತ್ತು ಆರಂಭ. ಯಾವುದೇ ಒಂದು ನಿರ್ದಿಷ್ಟ ಪಕ್ಷಕ್ಕೆ ಅಥವಾ ಒಕ್ಕೂಟಕ್ಕೆ ಪೂರ್ಣ ಬಹುಮತ ಪ್ರಾಪ್ತವಾಗದಿದ್ದರೆ ಆ ಕಸರತ್ತು ನಾನಾ ಆಯಾಮಗಳನ್ನು ಪಡೆಯುವುದೂ ಎಲ್ಲರಿಗೂ ತಿಳಿದಿರುವ ಸಂಗತಿಯೇ. ಹೀಗಾಗಿ ಹೆಚ್ಚುಕಮ್ಮಿ ಇನ್ನು ಮೂರು ತಿಂಗಳು ದೇಶದೆಲ್ಲೆಡೆ ರಾಜಕೀಯz ಕಾರುಬಾರು. ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವವರ ಸಂಖ್ಯೆಯೇ ಸುಮಾರು ೮೧ ಕೋಟಿ. ಇಡೀ ಯುರೋಪ್ ಖಂಡದ ೫೦ ದೇಶಗಳ ಒಟ್ಟು ಜನಸಂಖ್ಯೆ ಎಷ್ಟಾಗುತ್ತದೆಯೋ ಅದಕ್ಕಿಂತ ಹೆಚ್ಚು ಜನರು ಈ ಬಾರಿ ಭಾರತದಲ್ಲಿ ಮತದಾನ ಮಾಡಲಿದ್ದಾರೆ. ಇವರಲ್ಲಿ ಶೇ. ೫೦ಕ್ಕಿಂತ ಹೆಚ್ಚಿನವರು ೨೫ ವರ್ಷದ ಒಳಗಿನವರು. ಕಳೆದ ಬಾರಿಗಿಂತ ೧೦ ಕೋಟಿ ಹೆಚ್ಚು ಜನ ಈ ಬಾರಿ ಮತ ಚಲಾಯಿಸಲಿದ್ದಾರೆ. ಒಂದರ್ಥದಲ್ಲಿ ಈ ಸಲದ ಚುನಾವಣೆಯಲ್ಲಿ ಯುವಕರೇ ನಿರ್ಣಾಯಕ ಶಕ್ತಿ. ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ ಎಂಬ ನಂಬಿಕೆಗೆ ಈ ಚುನಾವಣೆ ಸಾಕ್ಷಿಯಾಗಲಿದೆ. ಚುನಾವಣೆಯ ರಣಾಂಗಣಕ್ಕೆ ಈ ಬಾರಿ ಧುಮುಕುವವರು ಯಾರ‍್ಯಾರು ಎನ್ನುವ ಸ್ಪಷ್ಟ ಚಿತ್ರಣ ಇನ್ನು ಕೆಲವೇ ದಿನಗಳಲ್ಲಿ ತಿಳಿಯಬಹುದು. ಆದರೂ ಕೆಲವು ವ್ಯಕ್ತಿಗಳ ಸ್ಪರ್ಧೆ ಈಗಾಗಲೇ ಖಾತರಿಯಾಗಿರುವ ಸಂಗತಿ. ಈ ಸಲದ ಚುನಾವಣೆಯಲ್ಲಿ ಯುವಕರೇ ನಿರ್ಣಾಯಕ ಶಕ್ತಿ ಆಗಿದ್ದರೂ ಕೆಲವು ವಯೋವೃದ್ಧರು ಮತ್ತೆ ಸ್ಪರ್ಧೆಗಿಳಿಯುತ್ತಿರುವುದು ಮಾತ್ರ ವಿಪರ್ಯಾಸ. ಅವರೆಲ್ಲ ಯುವಕರಿಗೆ ದಾರಿ ಮಾಡಿಕೊಟ್ಟು ತಾವು ಮಾರ್ಗದರ್ಶಕರಾಗಿ ಬದಿಗೆ ಸರಿಯಬೇಕಾಗಿತ್ತು. ಗೋಪುರವಾಗದೆ ಅಡಿಗಲ್ಲುಗಳಾಗುವ ಹಿರಿತನ ಮೆರೆಯಬೇಕಾಗಿತ್ತು. ಹಾಗಾಗಿಲ್ಲ ಎನ್ನುವುದು ಸದ್ಯದ ಕ್ರೂರ ವ್ಯಂಗ್ಯ. ಬಿಜೆಪಿಯ ಅತೀ ಹಿರಿಯ ಮುಖಂಡ, ವಯೋವೃದ್ಧ ಲಾಲ್‌ಕೃಷ್ಣ ಆಡ್ವಾಣಿ ಈ ಬಾರಿಯೂ ಲೋಕಸಭೆಗೆ ಸ್ಪರ್ಧಿಸುವುದಾಗಿ ಖಡಕ್ ಆಗಿ ಹೇಳಿದ್ದಾರೆ. ಗುಜರಾತಿನ ಗಾಂಧಿ ನಗರದಿಂದಲೇ ತನ್ನ ಸ್ಪರ್ಧೆ ಎಂಬುದನ್ನೂ ಒತ್ತಿ ಹೇಳಿದ್ದಾರೆ. ಆಡ್ವಾಣಿಯವರಿಗೆ ಈಗ ಬರೋಬ್ಬರಿ ೮೭ ವರ್ಷ (ಹುಟ್ಟಿದ್ದು ನವೆಂಬರ್ ೮, ೧೯೨೭). ಈ ವಯಸ್ಸಿನಲ್ಲೂ ಅವರ ಆರೋಗ್ಯ ಚೆನ್ನಾಗಿದೆ (ದೇವರು ಅವರನ್ನು ಹೀಗೆಯೇ ಚೆನ್ನಾಗಿಟ್ಟಿರಲಿ). ಆದರೆ ಆರೋಗ್ಯ ಚೆನ್ನಾಗಿದೆ ಎಂದ ಮಾತ್ರಕ್ಕೆ ಈ ಇಳಿವಯಸ್ಸಿನಲ್ಲೂ ಅವರು ಸ್ಪರ್ಧಿಸುವ ಅಗತ್ಯವಿತ್ತೆ? ೫ ಬಾರಿ ಲೋಕಸಭಾ ಸದಸ್ಯ, ೪ ಬಾರಿ ರಾಜ್ಯಸಭಾ ಸದಸ್ಯ, ಕೇಂದ್ರದಲ್ಲಿ ವಾರ್ತಾ ಸಚಿವ, ಗೃಹ ಸಚಿವ ಹಾಗೂ ಉಪ ಪ್ರಧಾನಿಯಾಗಿ, ಅನೇಕ ಸರ್ಕಾರಿ ಸಮಿತಿಗಳ ಅಧ್ಯಕ್ಷರಾಗಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ… ಹೀಗೆ ಹಲವಾರು ಸರ್ಕಾರಿ ಹುದ್ದೆಗಳನ್ನು ಯಥೇಚ್ಛವಾಗಿ ಅನುಭವಿಸಿದವರು. ಈ ಎಲ್ಲಾ ಹುದ್ದೆಗಳನ್ನು ಅವರು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಅದೇನೋ ಸರಿ. ಆದರೆ ೮೭ರ ಈ ಇಳಿ ವಯಸ್ಸಿನಲ್ಲೂ ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಬಯಕೆ ಏಕೆ? ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ ಆಡ್ವಾಣಿ ಗರಂ ಆಗಿದ್ದು ನಿಮಗೆ ಗೊತ್ತೇ ಇದೆ. ಆಗ ತಮ್ಮ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿ ಪ್ರತಿಭಟಿಸಿದ್ದರು. ಅವರ ಪ್ರತಿಭಟನೆಯ ಹಿಂದಿನ ಉzಶವಾದರೂ ಏನಿತ್ತು? ಈ ಬಾರಿ ಎನ್‌ಡಿಎ ಗದ್ದುಗೆ ಹಿಡಿದರೆ ಪ್ರಧಾನಿ ತಾನೇ ಆಗಬೇಕು ಎಂಬ ಬಯಕೆಯಲ್ಲದೆ ಮತ್ತೇನು? ಆಡ್ವಾಣಿ ಇಷ್ಟೆಲ್ಲ ಅಧಿಕಾರ, ಹುದ್ದೆಗಳನ್ನು ಅನುಭವಿಸಿದ ಬಳಿಕ ತಾವಾಗಿಯೇ ಹಿಂದೆ ಸರಿದು ಪಕ್ಷದಲ್ಲಿನ ಉತ್ಸಾಹೀ ಯುವಕರಿಗೆ ದಾರಿ ಮಾಡಿಕೊಡಬೇಕಾಗಿತ್ತು. ಮಾರ್ಗದರ್ಶಕರಾಗಿ ನೇಪಥ್ಯದಲ್ಲಿದ್ದು ಪಕ್ಷವನ್ನು ಮುನ್ನಡೆಸಬೇಕಾಗಿತ್ತು. ಆದರೆ..? ನಮ್ಮ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಈಗ ೮೧ ವರ್ಷ (ಹುಟ್ಟಿದ್ದು ೧೮.೦೫.೧೯೩೩). ದೇವೇಗೌಡರ ರಾಜಕೀಯ ಬದುಕು ಕೂಡ ವರ್ಣರಂಜಿತ. ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಅನಂತರ ರಾಜ್ಯಸಭಾ ಸದಸ್ಯರಾಗಿ, ಕೊನೆಗೊಮ್ಮೆ ಪ್ರಧಾನಿಯೂ ಆಗಿ (೧೯೯೬-೯೭) ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದವರು. ದೇಶದ ೧೧ನೇ ಪ್ರಧಾನಿಯಾಗಿ ಗೌಡರು ಆಯ್ಕೆಯಾಗಿದ್ದಂತೂ ಅವರ ಬದುಕಿನ ಬಲುದೊಡ್ಡ ರಾಜಕೀಯ ಅದೃಷ್ಟವೇ ಸರಿ. ೫ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರೂ ಮತ್ತೆ ಈ ಬಾರಿ ಹಾಸನದಿಂದ ಸ್ಪರ್ಧಿಸುತ್ತಿರುವುದು ಏನನ್ನು ಸೂಚಿಸುತ್ತದೆ? ದೇಶದ ಪ್ರಧಾನಿಯೇ ಆದ ಬಳಿಕ ಮತ್ತೆ ಲೋಕಸಭೆಯಲ್ಲಿ ಹಿಂಬದಿಯ ಸೀಟಿನಲ್ಲಿ ಕುಳಿತು ಇವರು ಕಡಿದು ಕಟ್ಟೆ ಹಾಕುವುದಾದರೂ ಏನು? ಆರೋಗ್ಯ ಕೂಡ ಅಷ್ಟಕ್ಕಷ್ಟೆ. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ 'ಇದೇ ನನ್ನ ಕೊನೆಯ ಚುನಾವಣೆ' ಎಂದು ಹೇಳುತ್ತಲೇ ಇರುತ್ತಾರೆ. ಬದುಕಿದ್ದರೆ ಬಹುಶಃ ೨೦೧೯ರ ಚುನಾವಣೆಯಲ್ಲೂ ಅವರು ಇದೇ ಡೈಲಾಗ್ ಹೇಳುತ್ತಾ ಮತ್ತೆ ಕಣಕ್ಕೆ ಇಳಿಯಬಹುದು! ಈ ಬಾರಿ ಸ್ಪರ್ಧಿಸದೆ, ಅವರು ಇನ್ನೊಬ್ಬ ಯುವ ಸ್ಪರ್ಧಿಗೆ ಅವಕಾಶ ಒದಗಿಸಬಹುದಿತ್ತು (ಕುಮಾರ ಸ್ವಾಮಿ, ಅನಿತಾ ಅಥವಾ ರೇವಣ್ಣ ಅವರನ್ನು ಹೊರತುಪಡಿಸಿ!). ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ಸಚಿವರಾಗಿ ಮೆರೆದ ಕಾಂಗ್ರೆಸ್‌ನ ಜಾಫರ್ ಷರೀಫ್ ಈ ಬಾರಿ ಮತ್ತೆ ಸ್ಪರ್ಧಿಸುತ್ತಿದ್ದಾರಂತೆ. ಅವರಿಗೂ ಈಗ ೮೧ ವರ್ಷ (ಹುಟ್ಟಿದ್ದು ೧೯೩೩). ನಿಜಲಿಂಗಪ್ಪನವರ ಕಾಲದಲ್ಲೇ ರಾಜ್ಯ ವಿಧಾನಸಭೆಯಲ್ಲಿ ಸಚಿವರಾಗಿ ಅನಂತರ ಕೇಂದ್ರದಲ್ಲಿ ಸಚಿವರಾಗಿ, ರೈಲ್ವೇ ಸಚಿವರಾಗಿ ಅಧಿಕಾರ ಚಲಾಯಿಸಿದವರು. ಈಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೊಂದಿಗೆ ಸಮಕಾಲೀನ ರಾಜಕೀಯ ನಡೆಸಿದವರು. ೮ ಬಾರಿ ಲೋಕಸಭೆಗೆ ಆಯ್ಕೆಯಾದ ಖ್ಯಾತಿ. ಹೀಗಿದ್ದರೂ ಷರೀಫರಿಗೆ ಮತ್ತೆ ಸ್ಪರ್ಧಿಸುವ ಉಮೇದು. ಯಾಕೆಂದು ಕಾಂಗ್ರೆಸ್‌ನಲ್ಲಿ ಯಾರಿಗೂ ಕೇಳುವ ಧೈರ್ಯವಿಲ್ಲ. ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಮಾನವಸಂಪನ್ಮೂಲ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಡಾ.ಮುರಳಿ ಮನೋಹರ ಜೋಶಿ ಅವರಿಗೀಗ ೮೦ ವರ್ಷ (ಹುಟ್ಟಿದ್ದು ೧೯೩೪). ಒಟ್ಟು ೪ ಬಾರಿ ಲೋಕಸಭಾ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯರಾಗಿಯೂ ಅಧಿಕಾರ ಅನುಭವಿಸಿದವರು. ಈ ಬಾರಿ ಮತ್ತೆ ವಾರಾಣಸಿಯಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ. ನರೇಂದ್ರ ಮೋದಿಯವರಿಗೆ ಆ ಕ್ಷೇತ್ರವನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಮೋದಿ ಅದೇ ಕ್ಷೇತ್ರದಿಂದಲೇ ಸ್ಪರ್ಧಿಸಲು ಬಯಸಿದ್ದಾರೋ ಇಲ್ಲವೋ ಇನ್ನೂ ನಿಕ್ಕಿಯಾಗಿಲ್ಲ. ಆದರೆ ಡಾ. ಜೋಶಿ ಮಾತ್ರ ಈ ಬಾರಿ ಸ್ಪರ್ಧಿಸದಿರುವ ಮಾತು ಆಡಿಯೇ ಇಲ್ಲ. ರಾಜಕೀಯಕ್ಕೆ ಬರುವ ಮುನ್ನ ಅವರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟಿದ್ದರು. ಈಗಲೂ ಬಿಜೆಪಿಯ ಯುವ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗುವ ಅವಕಾಶ ಅವರಿಗಿತ್ತು. ಆದರೆ ಆ ಅವಕಾಶವನ್ನು ಅವರಾಗಿಯೇ ದೂರ ತಳ್ಳಿದ್ದಾರೆ. mallikarjun_kharge_ ಯುಪಿಎ – ೨ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ನಮ್ಮವರೇ ಆದ ಎಸ್.ಎಂ.ಕೃಷ್ಣ ಅವರು ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಾರೋ ಇಲ್ಲವೋ ಇನ್ನೂ ತಿಳಿದಿಲ್ಲ. ಅವರಿಗೂ ಕೂಡ ೮೨ ವರ್ಷ (ಹುಟ್ಟಿದ್ದು ೧೯೩೨). ೪ ಬಾರಿ ಸಂಸದರಾಗಿದ್ದರು. ಕೇಂದ್ರದಲ್ಲಿ ಸಚಿವರೂ ಆಗಿದ್ದರು. ೨ ಬಾರಿ ರಾಜ್ಯಸಭಾ ಸದಸ್ಯರು ಅಲ್ಲದೆ ರಾಜ್ಯ ವಿಧಾನಸಭೆಯಲ್ಲಿ ಸ್ಪೀಕರ್, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸಿದವರು. ಅದಾದ ಮೇಲೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಅಧಿಕಾರ ಅನುಭವಿಸಿದರು. ಈ ಬಾರಿ ಪಕ್ಷವೇ ಅವರಿಗೆ ಬಹುಶಃ ಸೀಟು ನೀಡುವುದಿಲ್ಲ ಎನಿಸುತ್ತದೆ. ಆದರೆ ಅವರಾಗಿಯೇ ತಾನು ಈ ಬಾರಿ ಸ್ಪರ್ಧಿಸುವುದಿಲ್ಲ ಎಂದಿದ್ದರೆ ಅವರ ಕಿಮ್ಮತ್ತು ಇನ್ನಷ್ಟು ಹೆಚ್ಚುತ್ತಿತ್ತು. ಉತ್ತರ ಪ್ರದೇಶದಲ್ಲಿ ೩ ಬಾರಿ ಮುಖ್ಯ ಮಂತ್ರಿಯಾಗಿ, ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರ ಚಲಾಯಿಸಿದ ಮುಲಾಯಂ ಸಿಂಗ್ ಯಾದವ್ ಅವರಿಗೀಗ ೭೫ (ಹುಟ್ಟಿದ್ದು ೨೨.೧೧.೧೯೩೯). ಈ ಬಾರಿಯೂ ಮತ್ತೆ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಕಳೆದ ವರ್ಷ ಉ.ಪ್ರ. ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷ ಮತ್ತೆ ಬಹುಮತ ಪಡೆದಾಗ ತಾವೇ ಮುಖ್ಯಮಂತ್ರಿಯಾಗಬೇಕೆಂಬ ಹಂಬಲವಿತ್ತು. ಆದರೆ ಪಕ್ಷದ ಪ್ರಮುಖರ ಒತ್ತಾಸೆಯಿಂದಾಗಿ ತನ್ನ ಮಗ ಅಖಿಲೇಶ್‌ಗೆ ಆ ಸ್ಥಾನವನ್ನು ದಾನವಾಗಿತ್ತರು. ಒಮ್ಮೆ ಈ ದೇಶದ ಪ್ರಧಾನಿ ಪಟ್ಟಕ್ಕೇರಬೇಕೆಂಬ ಹಂಬಲವಂತೂ ಮುಲಾಯಂ ಅವರಿಗಿದೆ. ಈ ಬಾರಿ ತೃತೀಯ ರಂಗಕ್ಕೇನಾದರೂ ಬಹುಮತ ಬಂದರೆ ತನ್ನ ಕನಸು ನನಸಾಗಬಹುದೆಂಬ ದೂರದ ಆಸೆ. ಆದರೆ ತೃತೀಯ ರಂಗ ದಿನಗಳೆದಂತೆ ದಿಕ್ಕೆಟ್ಟು ಚಿತ್ರಾನ್ನವಾಗುತ್ತಿರುವಾಗ ಮುಲಾಯಂ ಅವರ ಕನಸು ಕನಸಾಗಿಯೇ ಉಳಿಯಬಹುದು. ಯುಪಿಎ – ೨ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದ , ನಮ್ಮವರೇ ಆದ ಮಲ್ಲಿಕಾರ್ಜುನ ಖರ್ಗೆ ಇವರಿಗೆ ಈಗ ೭೨ (ಹುಟ್ಟಿದ್ದು ೧೯೪೨). ಬೇರೆ ಹಿರಿಯ ರಾಜಕಾರಣಿಗಳಿಗೆ ಹೋಲಿಸಿದರೆ ಖರ್ಗೆಯವರದು ಅಂತಹ ವಯಸ್ಸೇನಲ್ಲ! ೯ ಬಾರಿ ನಿರಂತರ ಶಾಸಕರಾಗಿದ್ದರು. ಸಚಿವರೂ ಆಗಿದ್ದರು. ಕಳೆದ ಬಾರಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದು ರೈಲ್ವೇ ಖಾತೆಯಂತಹ ಪ್ರಮುಖ ಖಾತೆಯ ಸಚಿವರೂ ಆಗಿದ್ದರು. ದಕ್ಷ ರಾಜಕಾರಣಿ ಎಂದು ಹೆಸರಾಗಿರುವ ಖರ್ಗೆಯವರಿಗೆ ಅವರ ಶರೀರದ ವಿಪರೀತ ಭಾರಕ್ಕೋ ಏನೋ ನಿಂತರೆ ತಕ್ಷಣ ಕುಂತುಕೊಳ್ಳಲಾಗುತ್ತಿಲ್ಲ. ಕುಂತರೆ ತಕ್ಷಣ ಮೇಲೆದ್ದು ನಿಂತುಕೊಳ್ಳಲಾಗುತ್ತಿಲ್ಲ. ಅತ್ತಿತ್ತ ಓಡಾಡಬೇಕಾದರೆ ಅಕ್ಕಪಕ್ಕ ಹೆಗಲು ಕೊಡುವ ಇಬ್ಬರು ಸಾಥಿಗಳು ಬೇಕೇ ಬೇಕು. ಬುದ್ಧಾಯ ನಮೋ ನಮಃ ಎಂದು ಮನೆಯಲ್ಲಿ ಹಾಯಾಗಿರಬಾರದೆ? ಇಂಥವರು ಮತ್ತೆ ಲೋಕಸಭೆಗೆ ಸ್ಪರ್ಧಿಸುವುದು ಪಕ್ಷದ ಒಬ್ಬ ಯುವ ಅಭ್ಯರ್ಥಿಗೆ ವಂಚಿಸಿದಂತೆ ಆಗುವುದಿಲ್ಲವೆ? Murli-Manohar-Joshi ಇವೆಲ್ಲ ಕೆಲವು ಸ್ಯಾಂಪಲ್‌ಗಳಷ್ಟೆ. ಇಳಿ ವಯಸ್ಸಿನ, ಈಗಲೂ ಅಧಿಕಾರ ರಾಜಕೀಯದ ಗೀಳು ಬಿಡದ ಇನ್ನೂ ಕೆಲವು ಹಿರಿಯ ರಾಜಕಾರಣಿಗಳು ಇದ್ದಾರೆ. ಅವರನ್ನಿಲ್ಲಿ ಪಟ್ಟಿ ಮಾಡಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಹಿರಿಯ ಅನುಭವಸ್ಥರು ಬೇಕು, ನಿಜ. ಆದರೆ ಓಡಾಡಲಾಗದ, ವೃದ್ಧಾಪ್ಯ ಕಾಡುವ ರಾಜಕಾರಣಿಗಳು ಮತ್ತೆ ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕೆ? ಅಂಥವರು ಸ್ಪರ್ಧಿಸಿ ಗೆಲ್ಲಬಹುದು, ಗೆಲ್ಲುತ್ತಾರೆ ಎಂಬುದು ಬೇರೆ ವಿಚಾರ. ಆದರೆ ಹಾಗೆ ಗೆದ್ದ ಬಳಿಕ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಲು ಅವರಿಂದ ಸಾಧ್ಯವೆ ಎಂಬುದು ಇನ್ನೊಂದು ಪ್ರಶ್ನೆ. ಸರ್ಕಾರಿ ನೌಕರರಿಗೆ ೫೮ ಅಥವಾ ೬೦ ವರ್ಷಗಳಾದ ಬಳಿಕ ಕಡ್ಡಾಯವಾಗಿ ನಿವೃತ್ತಿ ಇದೆ. ರಾಜಕಾರಣಿಗಳಿಗೆ ಮಾತ್ರ ಈ ನಿಯಮ ಯಾಕಿಲ್ಲ ಎಂದು ಅನೇಕ ಯುವಕ-ಯುವತಿಯರು ಆಗಾಗ ಪ್ರಶ್ನಿಸುತ್ತಲೇ ಇರುತ್ತಾರೆ. ರಾಜಕೀಯ ಕ್ಷೇತ್ರದ ಅಡಿಗಲ್ಲುಗಳಾಗಿ ಪ್ರಜಾಪ್ರಭುತ್ವದ ಸೌಧಕ್ಕೆ ಭದ್ರ ತಳಪಾಯವಾಗಬೇಕಾದವರು ಅದನ್ನೊಲ್ಲದೆ, ತಾವು ಗೋಪುರಗಳಾಗಿಯೇ ಇರುತ್ತೇವೆ ಎಂದರೆ ಅದೆಂತಹ ವೈರುಧ್ಯ? ಅಡಿಗಲ್ಲುಗಳಾಗಬೇಕಾದವರೆಲ್ಲ ಗೋಪುರಗಳಾಗಲು ಹೊರಟರೆ ಪ್ರಜಾಪ್ರಭುತ್ವದ ಕಟ್ಟಡ ಕುಸಿಯದೆ ಇದ್ದೀತೆ? LK Advani- Posted in Articles, Nera Nota ಭರತನಾಟ್ಯದ ಕ್ರಿಸ್ತೀಕರಣ, ಭಾರತೀಕರಣದ ಹೆಸರಿನಲ್ಲಿ ನಡೆಯುತ್ತಿದೆ ಹಿಂದು ಸಂಸ್ಕೃತಿಯ ಅಪಹರಣ! Tue Mar 11 , 2014 By Pratap Simha (article published in Kannada Prabha dated March 08, 2014) ಆಕೆ ಮೂಲತಃ ಉಡುಪಿಯಾಕೆ. ಸಂಸ್ಕೃತ ಹಾಗೂ ವೇದಾಧ್ಯಯನ ಮಾಡುತ್ತಿದ್ದಳು. ನನ್ನ ಕಾಲಂನ ಕಾಯಂ ಓದುಗಳು. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಿಯಲು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಮೈಲಾಪುರಿಗೆ ಹೋಗಿದ್ದಳು. ಅದು 2006. ಅಲ್ಲಿಗೆ ಹೋದ ಹೊಸದರಲ್ಲೂ ಪ್ರತಿ ಶನಿವಾರ ನನಗೆ ಕರೆ ಮಾಡಿ, ಲೇಖನದ ಪಿಡಿಎಫ್ ತರಿಸಿಕೊಂಡು ಓದುತ್ತಿದ್ದಳು. ಹೀಗೇ ವರ್ಷ ಕಳೆಯಿತು. ಅಚಾನಕ್ […]
2021/10/20 04:00:39
https://samvada.org/2014/articles/neranota-march-10/
mC4
ಹೀಗೆ ಮಾಡಿದರೆ ಸಾಕು ಎಷ್ಟು ಭಯಾನಕ ಮೂಲವ್ಯಾದಿ Piles ಆದ್ರೂ ತಟ್ ಅಂತ ಹೋಗುತ್ತೆ ..! ಈ ಮೂಲವ್ಯಾಧಿ ಸಮಸ್ಯೆ ಅನ್ನೋದು ಹಿಂದಿನ ಕಾಲಗಳಲ್ಲಿ ನಲ್ವತ್ತೈದು ವರುಷಗಳಿಂದ ಅರವತ್ತ್ ಐದು ವರುಷಗಳ ಮಂದಿಯಲ್ಲಿ ತುಂಬಾ ಕಾಣಿಸಿಕೊಳ್ಳುತ್ತಾ ಇತ್ತು. ಆದರೆ ಇಂದಿನ ಜೀವನ ಶೈಲಿಯಿಂದ ಚಿಕ್ಕವರಿಗೂ ಕೂಡ ಮೂಲವ್ಯಾಧಿ ಅನ್ನುವ ಸಮಸ್ಯೆ ಕಾಡುತ್ತಾ ಇದೆ. ಇದಕ್ಕೆಲ್ಲ ಕಾರಣ ನಾವು ಪಾಲಿಸುವ ಆಹಾರ ಪದ್ಧತಿಗಳೇ ಇರಬಹುದು. ಆದರೆ ಯಾವಾಗ ನಾವು ಆಹಾರದಲ್ಲಿ ನಾರಿನಂಶ ಇರುವ ಪದಾರ್ಥಗಳನ್ನು ಬಳಕೆ ಮಾಡಿ ಅದನ್ನು ಸೇವಿಸುತ್ತಾ ಬರುತ್ತೆ ಆಗ ನಮಗೆ ಮಲಬದ್ಧತೆ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ. ಇನ್ನು ಕೆಲವರಿಗೆ ಮಲಬದ್ಧತೆಯಿಂದ ಮೂಲವ್ಯಾಧಿ ಉಂಟಾಗುತ್ತದೆ ಇನ್ನೂ ಕೆಲವರಿಗೆ ಹೆಚ್ಚು ಭಾರದ ಪದಾರ್ಥಗಳನ್ನು ಎತ್ತುವುದರಿಂದ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ ಅಂತ. ಈ ಮೂಲವ್ಯಾಧಿ ಸಮಸ್ಯೆಗೆ ಅನೇಕ ನಾಟಿ ಔಷಧಿಗಳು ಆಯುರ್ವೇದ ಔಷಧಿಗಳು ಇಂಗ್ಲಿಷ್ ಮೆಡಿಸಿನ್ ಗಳು ಕೂಡ ಇವೆ ಆದರೆ ಕೆಲವರು ಈ ಮೂಲವ್ಯಾಧಿ ಸಮಸ್ಯೆಯಿಂದ ಆಚೆ ಹೇಳಿಕೊಳ್ಳುವುದಕ್ಕೆ ಇಷ್ಟಪಡೋದಿಲ್ಲ, ಅವರಿಗೆ ಮುಜುಗರ ಆಗುತ್ತಾ ಇರುತ್ತದೆ. ಅಂತಹವರು ನೀವು ಸುಲಭವಾಗಿ ಈ ಪರಿಹಾರದಿಂದ ನಿಮ್ಮ ಮೂಲವ್ಯಾಧಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು. ಹಾಗೆಯೇ ಮೂಲವ್ಯಾಧಿಯಂತ ಅಲ್ಲಾ ಮಲಬದ್ಧತೆಯನ್ನು ಕೂಡ, ಇನ್ನೂ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಈ ಪರಿಹಾರದಿಂದ ನೀವು ಪರಿಹಾರ ಮಾಡಿಕೊಳ್ಳಬಹುದಾಗಿದೆ. ಪರಿಹಾರ ಏನು ಅಂದರೆ ಕಪ್ಪು ಒಣ ದ್ರಾಕ್ಷಿ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕೇಳಿದರೆ ಕಪ್ಪು ಒಣ ದ್ರಾಕ್ಷಿಯನ್ನು ಕೊಡುತ್ತಾರೆ ನೀವು ಅದನ್ನೇ ತೆಗೆದುಕೊಳ್ಳಬೇಕು ನಂತರ ಪ್ರತಿದಿನ ನಾಲ್ಕರಿಂದ ಐದು ಒಣ ದ್ರಾಕ್ಷಿಯನ್ನು ನೆನೆಸಿಡಬೇಕು ನಂತರ ಆತನ ಮಾರನೆ ದಿವಸ ಸೇವಿಸಬೇಕು ಈ ಕಪ್ಪು ಒಣದ್ರಾಕ್ಷಿಯಲ್ಲಿ ನಾರಿನಂಶ ಎಂಬುದು ಹೇರಳವಾಗಿ ಇರುತ್ತದೆ ನೀವು ಪ್ರತಿ ದಿನ ಈ ಪರಿಹಾರವನ್ನು ಮಾಡಿಕೊಳ್ಳಬೇಕು ಹಾಗೆ ನಿಮಗೆ ಒಳ್ಳೆಯ ಫಲಿತಾಂಶ ದೊರೆಯಿತು ಅಂದರೆ ನೀವು ಈ ಮನೆಮದ್ದನ್ನು ತಕ್ಷಣವೇ ಬಿಡಬಾರದು ಇನ್ನು 2ತಿಂಗಳುಗಳ ಕಾಲ ಹಾಗೇ ರೂಢಿಸಿಕೊಂಡು ಹೋಗಬೇಕು. ಆಗ ಮೂಲವ್ಯಾಧಿ ಅನ್ನುವ ಸಮಸ್ಯೆ ಪರಿಣಾಮಕಾರಿಯಾಗಿ ಪರಿಹಾರ ಆಗುತ್ತದೆ. ಈ ಪರಿಹಾರವನ್ನು ಮಾಡಿಕೊಳ್ಳುವುದರ ಜೊತೆಗೆ ನಾರಿನ ಅಂಶ ಹೇರಳವಾಗಿರುವ ಆಹಾರವನ್ನು ನಾವು ಸೇವಿಸಬೇಕು ಮತ್ತು ನಾರಿನಂಶ ಎಂಬುದು ತರಕಾರಿಗಳಲ್ಲಿ ಹೆಚ್ಚಾಗಿರುತ್ತದೆ, ಇದನ್ನು ನಾವು ಹಸಿಯಾಗಿ ತಿನ್ನುವ ತರಕಾರಿ ಅನ್ನು ಹಸಿಯಾಗಿ ಸೇವಿಸುವುದರಿಂದ ಮತ್ತು ಬೇಯಿಸಿ ತಿನ್ನುವ ತರಕಾರಿಗಳನ್ನು ಕೂಡ ಸೇವಿಸುವ ಮುಖಾಂತರ ಮೂಲವ್ಯಾಧಿ ಅನ್ನುವ ಸಮಸ್ಯೆಯನ್ನ ಬುಡದಿಂದ ಪರಿಹಾರ ಮಾಡಿಕೊಳ್ಳಬಹುದು. ನೀವು ಚಿಂತಿಸುವ ಅಗತ್ಯವಿಲ್ಲ ಮೂಲವ್ಯಾಧಿ ಸಮಸ್ಯೆಗೆ ಬೇಗ ಪರಿಹಾರ ಮಾಡಿಕೊಳ್ಳಬಹುದು ಹೆಚ್ಚು ಹೆಚ್ಚು ನೀರನ್ನು ಕುಡಿಯುವುದರಿಂದ ಮತ್ತು ಎಳನೀರಿನಂತಹ ಪಾನೀಯಗಳನ್ನು ಕುಡಿಯುತ್ತಾ ಬರುವುದರಿಂದ. ಮಜ್ಜಿಗೆ ಕೂಡ ಮೂಲವ್ಯಾಧಿಗೆ ಒಂದು ರಾಮಬಾಣ ಆದಕಾರಣ ನೀವು ಮಜ್ಜಿಗೆಯನ್ನು ಕೂಡ ಪ್ರತಿದಿನ ಊಟವಾದ ಬಳಿಕ ಸೇವಿಸಿ ಹಾಗೆ ಮೂಲವ್ಯಾಧಿಯಿಂದ ಬಳಲುತ್ತಾ ಇರುವವರು ಮೂಲಂಗಿಯನ್ನು ಹೆಚ್ಚಾಗಿ ಸೇವಿಸಬಹುದು. ಮೊಸರಿನೊಂದಿಗೆ ಮುಲಂಗಿನ ತಿನ್ನುವುದರಿಂದ ಒಳ್ಳೆಯದು ಇನ್ನೂ ಸಂಪೂರ್ಣವಾಗಿ ಆಹಾರ ಜೀರ್ಣವಾಗಲು ಬೇಕು ಅಂತಹ ಆಹಾರ ಪದಾರ್ಥಗಳ ನನಗೂ ಸೇವಿಸಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನಮಗೆ ಮೂಲವ್ಯಾಧಿ ಅನ್ನೋ ಸಮಸ್ಯೆ ಬೇಗ ಪರಿಹಾರ ಆಗುತ್ತದೆ ಇವತ್ತಿನ ಮಾಹಿತಿ ನಿಮಗೆ ಉಪಯುಕ್ತ ಆಯ್ತು ಅಂದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದ. ಮೂಲವ್ಯಾದಿ ಹೋಗಲಾಡಿಸಲು ಒಂದೇ ಒಂದು ಈ ಹಣ್ಣು ಸಾಕು ... ನೋಡಿ… ಮಜ್ಜಿಗೆ ಸಾರು ಹಳೇಕಾಲದ ಸಾಂಬಾರ್ ಆದ್ರೂ ಕಡೆದ ಗಟ್ಟಿ… ವಾರಕ್ಕೆರಡು ಬಾರಿ ಈ Juice ಕುಡಿಯೋದ್ರಿಂದ Piles ಖಂಡಿತಾ… ನಿಮಗೆ ರಕ್ತದ ಸಮಸ್ಸೆ ಇದ್ದರೆ ಹೀಗೆ ಮಾಡಿದರೆ ಸಾಕು ..! ಎಲ್ಲ… ಈ ತರದ ಬೀಜಗಳಿಂದ ಹೀಗೆ ಮಾಡಿ ತೆಗೆದುಕೊಂಡರೆ ಎಂತಹ ಥೈರಾಯ್ಡ್… ಕೆಲವು ನಿಮಿಷಗಳ ಕಾಲ ಹೀಗೆ ಮಾಡಿದರೆ ಎಂತಹ ಜೋತುಬಿದ್ದ… ಲೋಳೆರಸದ ಲೋಳೆಯಿಂದ ಹೀಗೆ ಮಾಡಿದರೆ ...! ನಿಮ್ಮನ್ನು… 1 ಸ್ಪೂನ್ ಮೆಂತ್ಯ ಕಾಳಿನಿಂದ ಹೀಗೆ ಮಾಡಿದರೆ ಎಂತಹ ಹೊಟ್ಟೆ… ಸ್ವಲ್ಪ ಸಮಯ ಹೀಗೆ ಮಾಡಿದರೆ ಎಂತಹ ಜೋತುಬಿದ್ದ ಹೊಟ್ಟೆ, ಸೊಂಟ,… ← ಪದಾರ್ಥಗಳನ್ನು ನೀರಿನಲ್ಲಿ ಬೆರೆಸಿ ಕುಡಿದರೆ ಸಾಕು 70 ವರ್ಷ ಬಂದರು ನರಗಳ ಸಮಸ್ಸೆ ಬರೋದೇ ಇಲ್ಲ .. → ನಿಮ್ಮ ಮುಖ ಕಪ್ಪಾಗಿ ಬಾಡಿ ಬತ್ತಿಕಾಯಿ ಆಗಿದೆಯೇ ..! ಒಂದು ಚಮಚ ಇದನ್ನು ಬೆರೆಸಿ ಹಚ್ಚಿ ನೋಡಿ
2020/11/28 20:15:38
https://governmentjobsinkarnataka.com/%E0%B2%B9%E0%B3%80%E0%B2%97%E0%B3%86-%E0%B2%AE%E0%B2%BE%E0%B2%A1%E0%B2%BF%E0%B2%A6%E0%B2%B0%E0%B3%86-%E0%B2%B8%E0%B2%BE%E0%B2%95%E0%B3%81-%E0%B2%8E%E0%B2%B7%E0%B3%8D%E0%B2%9F%E0%B3%81-%E0%B2%AD/
mC4
ಇದು ಅವೈಜ್ಞಾನಿಕ, ಅಸಮರ್ಪಕ ಪ್ಯಾಕೇಜ್, ಪ್ಯಾಕೇಜ್‌ ಹೆಸರಿನಲ್ಲಿ ಜನರಿಗೆ ಟೋಪಿ: ಎಚ್‌.ಡಿ. ಕುಮಾರಸ್ವಾಮಿ | ಜನತಾ ನ್ಯೂಸ್ | HD Kumaraswamy ಇದು ಅವೈಜ್ಞಾನಿಕ, ಅಸಮರ್ಪಕ ಪ್ಯಾಕೇಜ್, ಪ್ಯಾಕೇಜ್‌ ಹೆಸರಿನಲ್ಲಿ ಜನರಿಗೆ ಟೋಪಿ: ಎಚ್‌.ಡಿ. ಕುಮಾರಸ್ವಾಮಿ | ಜನತಾ ನ್ಯೂಸ್ ಬೆಂಗಳೂರು : ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ರಾಜ್ಯ ಸರ್ಕಾರದ ಘೋಷಿಸಿರುವ ಪ್ಯಾಕೇಜ್‌ ಸಮರ್ಪಕವಾಗಿಲ್ಲ. ಪ್ಯಾಕೇಜ್‌ ಹೆಸರಿನಲ್ಲಿ ಜನರಿಗೆ ಟೋಪಿ ಹಾಕುವ ಕೆಲಸ ನಡೆಯುತ್ತಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಲಾಕ್‌ಡೌನ್‌ ಮಾಡಿ ಎಂದು ನಾನು ಮಾರ್ಚ್‌ನಲ್ಲೇ ಹೇಳಿದ್ದೆ. ಆದರೆ, ಘೋಷಿಸಲಿಲ್ಲ. ನೆರೆಯ ಕೇರಳದಲ್ಲಿ ಮಾರ್ಚ್‌ನಲ್ಲೇ ಲಾಕ್‌ಡೌನ್‌ ಜಾರಿಯಾಯಿತು. 20,000 ಕೋಟಿ ರೂ. ಪ್ಯಾಕೇಜ್‌ಅನ್ನೂ ಘೋಷಿಸಲಾಯಿತು ಎಂದು ಅವರು ಹೇಳಿದ್ದಾರೆ. ಕರ್ನಾಕಟದ ಎದುರು ಕೇರಳ ಎಲ್ಲ ದೃಷ್ಟಿಯಿಂದಲೂ ಸಣ್ಣ ರಾಜ್ಯ. ಆದರೆ, ಅವರಿಗಿಂತ ದೊಡ್ಡ ರಾಜ್ಯವಾದ ಕರ್ನಾಟಕಕ್ಕೆ ಈ 1200 ಕೋಟಿ ರೂ. ಪರಿಹಾರ ಸಾಕೆ? ಎಂದಿದ್ದಾರೆ. ಆರ್ಥಿಕ ಸಂಕಷ್ಟದ ಮಧ್ಯೆ ಪ್ಯಾಕೇಜ್‌ ನೀಡುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ನನ್ನಿಂದ ಅಧಿಕಾರ ಕಸಿದಾಗ ಇದೇ ಬಿಎಸ್‌ವೈ ಅವರು ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದಿದ್ದರು. ಕೇವಲ 2 ವರ್ಷದಲ್ಲಿ ಆರ್ಥಿಕ ದುಸ್ಥಿತಿ ಬಂದಿದ್ದು ಹೇಗೆ? ರಾಜಕೀಯಕ್ಕಾಗಿ ಮಾಡಿಕೊಂಡ ನಿಗಮಗಳಿಗೆ ನೂರಾರು ಕೋಟಿ ಹಣವಿರುವಾಗ ಜನರ ಪರಿಹಾರಕ್ಕಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ. ಕಳೆದ ವರ್ಷವೂ ₹ 1,200 ಕೋಟಿ ಪ್ಯಾಕೇಜ್‌ ಘೋಷಿಸಲಾಗಿತ್ತು. ಆದರೆ, ಸರಿಯಾಗಿ ಅನುಷ್ಠಾನಕ್ಕೆ ತಂದಿರಲಿಲ್ಲ. ಈ ಬಾರಿಯೂ ₹ 1,200 ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಲಾಗಿದೆ. ರಾಜ್ಯದಲ್ಲಿ 55 ಲಕ್ಷ ಶ್ರಮಿಕ ಕುಟುಂಬಗಳಿವೆ. ಆದರೆ, ಅತ್ಯಲ್ಪ ಪ್ರಮಾಣದ ಜನರಿಗೆ ನೆರವು ಘೋಷಿಸಲಾಗಿದೆ. ಯಾವ ಆಧಾರದಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕಳೆದ ವರ್ಷ 7.5 ಲಕ್ಷ ಆಟೊ ಚಾಲಕರಿಗೆ ನೆರವು ಘೋಷಿಸಲಾಗಿತ್ತು. ಈ ಬಾರಿ 2.10 ಲಕ್ಷ ಚಾಲಕರಿಗೆ ಮಾತ್ರ ನೆರವು ಪ್ರಕಟಿಸಲಾಗಿದೆ. ನೆರವಿನ ಮೊತ್ತವನ್ನು ₹ 5,000ದಿಂದ ₹ 3,000ಕ್ಕೆ ಇಳಿಕೆ ಮಾಡಲಾಗಿದೆ. ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ನೀಡುತ್ತಿದ್ದ ಪರಿಹಾರವನ್ನು ₹ 25,000ದಿಂದ ₹ 10,000ಕ್ಕೆ ತಗ್ಗಿಸಲಾಗಿದೆ. ಈ ಪ್ಯಾಕೇಜ್‌ನಿಂದ ಯಾರಿಗೂ ಒಳಿತಾಗುವುದಿಲ್ಲ ಎಂದು ಟೀಕಿಸಿದ್ದಾರೆ. ರಾಜ್ಯ ಸರ್ಕಾರ ಹೊರಡಿಸಿರುವ ಪ್ಯಾಕೇಜ್ ಬಗ್ಗೆ ಸರಣಿ ಟ್ವೀಟ್ ನಲ್ಲಿ ಅಸಮಧಾನ ವ್ಯಕ್ತ ಪಡಿಸಿರುವ ಎಚ್ ಡಿ ಕೆ, ಜನಹಿತದ ಲಾಕ್‌ ಡೌನ್‌ ಘೋಷಿಸಬೇಕು, ಅದರಲ್ಲಿ ಜನರಿಗೆ ಉಪಯೋಗವಾಗುವ ಪ್ಯಾಕೇಜ್‌ ಇರಬೇಕು ಎಂಬ ಜೆಡಿಎಸ್‌ನ ಆಗ್ರಹದ ನಂತರ ರಾಜ್ಯ ಸರ್ಕಾರ ಪ್ಯಾಕೇಜ್‌ ಘೋಷಿಸಿದೆ. ಆದರೆ, 6.5 ಕೋಟಿ ಜನಸಂಖ್ಯೆ ಇರುವ, ದೇಶಕ್ಕಾಗಿ ಅಪಾರ ಅರ್ಥಿಕ ಕೊಡುಗೆ ನೀಡುವ ಕರ್ನಾಟಕದಂತ ದೊಡ್ಡ ರಾಜ್ಯಕ್ಕೆ ಈ ಪ್ಯಾಕೇಜ್‌ ಅತ್ಯಂತ ಕಡಿಮೆ. ಇದು ಅವೈಜ್ಞಾನಿ, ಅಸಮರ್ಪಕ ಎಂದಿದ್ದಾರೆ. ಮಾತ್ರವಲ್ಲದೇ, ವಾಲಕ ವರ್ಗದವರಿಗೆ ನೀಡಿದ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯಿಸಿದ ಅವರು, 2.10 ಲಕ್ಷ ಚಾಲಕ ವರ್ಗಕ್ಕೆ ₹3000 ಪರಿಹಾರ ನೀಡುವುದಾಗಿ ಹೇಳಲಾಗಿದೆ. ಕಳೆದ ಬಾರಿಯ ಲಾಕ್‌ಡೌನ್‌ನಲ್ಲಿ 7.50ಲಕ್ಷ ಇದ್ದ ಚಾಲಕರ ಸಂಖ್ಯೆ ಈ ಬಾರಿ 2.10ಲಕ್ಷಕ್ಕೆ ಇಳಿದಿದೆ. ಚಾಲಕರಿಗೆ ಈಗ ಪರಿಹಾರಕ್ಕಿಂತಲೂ ಮುಖ್ಯವಾಗಿ, ಆರ್‌ ಟಿ ಒ ಶುಲ್ಕಗಳು, ತೆರಿಗೆಯಿಂದ ವಿನಾಯಿತಿ ಸಿಗಬೇಕಿತ್ತು. ಈಗಿನ ಪರಿಹಾರದಿಂದ ಅವರ ಕುಟುಂಬ ನಡೆಯಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು, ಕೂಲಿ ಕಾರ್ಮಿಕರು ಸದ್ಯ ನಗರ ತೊರೆದು ಹಳ್ಳಿ ಸೇರಿದ್ದಾರೆ. ಅವರ ಅದಾಯ ವೃದ್ಧಿಗಾಗಿ ನರೇಗಾವನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಅವಕಾಶವಿತ್ತು. ನರೇಗಾಕ್ಕೆ ಹೆಚ್ಚಿನ ಅನುದಾನ ಒದಗಿಸಿ, ಗ್ರಾಮೀಣ ಮೂಲಸೌಕರ್ಯ ಹೆಚ್ಚಿಸಿ, ಕೂಲಿ ಕಾರ್ಮಿಕರ ಆದಾಯ ವೃದ್ಧಿಸಲು ಇದ್ದ ಅವಕಾಶವನ್ನು ಸರ್ಕಾರ ಕಳೆದುಕೊಂಡಿದೆ. ಈ ಸರ್ಕಾರಕ್ಕೆ ದೂರಾಲೋಚನೆಗಳೇ ಇಲ್ಲ ಎಂದು ಕಿಡಿ ಕಾರಿದ್ದಾರೆ.
2021/06/18 09:21:41
https://www.janata.news/Updates.php?id=13082%20&title=%E0%B2%87%E0%B2%A6%E0%B3%81%20%E0%B2%85%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95,%20%E0%B2%85%E0%B2%B8%E0%B2%AE%E0%B2%B0%E0%B3%8D%E0%B2%AA%E0%B2%95%20%E0%B2%AA%E0%B3%8D%E0%B2%AF%E0%B2%BE%E0%B2%95%E0%B3%87%E0%B2%9C%E0%B3%8D,%20%E0%B2%AA%E0%B3%8D%E0%B2%AF%E0%B2%BE%E0%B2%95%E0%B3%87%E0%B2%9C%E0%B3%8D%E2%80%8C%20%E0%B2%B9%E0%B3%86%E0%B2%B8%E0%B2%B0%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF%20%E0%B2%9C%E0%B2%A8%E0%B2%B0%E0%B2%BF%E0%B2%97%E0%B3%86%20%E0%B2%9F%E0%B3%8B%E0%B2%AA%E0%B2%BF:%20%E0%B2%8E%E0%B2%9A%E0%B3%8D%E2%80%8C.%E0%B2%A1%E0%B2%BF.%20%E0%B2%95%E0%B3%81%E0%B2%AE%E0%B2%BE%E0%B2%B0%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%20%20%7C%20%E0%B2%9C%E0%B2%A8%E0%B2%A4%E0%B2%BE%20%E0%B2%A8%E0%B3%8D%E0%B2%AF%E0%B3%82%E0%B2%B8%E0%B3%8D
mC4
ದಾಬೋಲ್ಕರ್‌, ಕಲಬುರ್ಗಿ, ಗೌರಿ ಕೊಂದ ಗುಂಪಿಗೆ ಸನಾತನ ಸಂಸ್ಥೆ ಜತೆಗಿನ ನಂಟು ಖಚಿತ ವಿಚಾರವಾದಿಗಳ ಹತ್ಯೆಗೂ ಸನಾತನ ಸಂಸ್ಥೆಗೂ ನಂಟಿರುವುದನ್ನು ಮಹಾರಾಷ್ಟ್ರ ಪೊಲೀಸರು ಖಚಿತ ಪಡಿಸಿದ್ದಾರೆ. ನರೇಂದ್ರ ದಾಬೋಲ್ಕರ್‌, ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಅವರ ಹತ್ಯೆಯ ಹಿಂದೆ ಒಂದೇ ಗುಂಪು ಕೆಲಸ ಮಾಡಿದ್ದು, ಈ ಗುಂಪಿನ ಸದಸ್ಯರಿಗೂ ಸನಾತನ ಸಂಸ್ಥೆಗೂ ನಂಟಿದೆ ಎಂದು ಮಹಾರಾಷ್ಟ್ರದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. "ದಾಬೋಲ್ಕರ್‌, ಕಲಬುರ್ಗಿ ಮತ್ತು ಗೌರಿ ಹತ್ಯೆ ಮಾಡಿರುವುದು ಒಂದೇ ಗುಂಪಿಗೆ ಸೇರಿದವರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಗುಂಪಿನ ಬಹುತೇಕ ಎಲ್ಲಾ ಸದಸ್ಯರೂ ಸನಾತನ ಸಂಸ್ಥೆ ಮತ್ತು ಹಿಂದು ಜನಜಾಗೃತಿ ಸಮಿತಿ ಜತೆಗೆ ನಂಟು ಹೊಂದಿರುವುದು ಖಚಿತವಾಗಿದೆ" ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. "ದಾಬೋಲ್ಕರ್‌, ಕಲಬುರ್ಗಿ ಮತ್ತು ಗೌರಿ ಹಿಂದು ಧರ್ಮದ ವಿರುದ್ಧವಾಗಿದ್ದಾರೆ ಎಂಬ ಕಾರಣಕ್ಕೆ ಇವರನ್ನು ಈ ಗುಂಪಿನ ಸದಸ್ಯರು ಹತ್ಯೆ ಮಾಡಿದ್ದಾರೆ. ಸ್ಫೋಟಕ ಸಾಮಗ್ರಿ ಸಂಗ್ರಹಣೆಯ ಆರೋಪದ ಮೇಲೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಬಂಧಿಸಿರುವ ಆರೋಪಿಗಳಿಗೂ ಈ ಹತ್ಯೆಗಳಿಗೂ ನಂಟಿರುವುದು ಗೊತ್ತಾಗಿದೆ" ಎಂದು ತನಿಖಾಧಿಕಾರಿ ಹೇಳಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ನಾಲಾಸೊಪಾರ ಪ್ರದೇಶದ ಮನೆಯಲ್ಲಿ ಸ್ಫೋಟಕ ಸಾಮಗ್ರಿ ಸಂಗ್ರಹಣೆಯ ಆರೋಪದ ಮೇಲೆ 'ಹಿಂದೂ ಗೋವಂಶ ರಕ್ಷಾ ಸಮಿತಿ' ಸದಸ್ಯ ವೈಭವ್ ರಾವತ್ ಹಾಗೂ ಇತರರನ್ನು ಎಟಿಎಸ್ ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು. ಈ ಆರೋಪಿಗಳು ಸನಾತನ ಸಂಸ್ಥೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಆದರೆ, ಸನಾತನ ಸಂಸ್ಥೆಯು ಬಂಧಿತರಿಗೂ ತಮಗೂ ಸಂಬಂಧವಿಲ್ಲ ಎಂದು ಹೇಳಿತ್ತು. ದಾಬೋಲ್ಕರ್‌, ಕಲಬುರ್ಗಿ ಮತ್ತು ಗೌರಿ ಹತ್ಯೆಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಈ ಹತ್ಯೆಗಳ ಹಿಂದೆ ಹಿಂದುತ್ವ ಸಂಘಟನೆಗಳ ಕೈವಾಡವಿರುವುದನ್ನು ಖಚಿತ ಪಡಿಸಿದ್ದಾರೆ. ಆದರೆ, ಗೋವಿಂದ ಪಾನ್ಸಾರೆ ಹತ್ಯೆ ಪ್ರಕರಣದಲ್ಲಿ ಈವರೆಗೂ ಸರಿಯಾದ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪಾನ್ಸಾರೆ ಹತ್ಯೆಯಲ್ಲಿ ಹಿಂದುತ್ವ ಸಂಘಟನೆಗಳ ಪಾತ್ರ ಇದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸಿರುವ ಪೊಲೀಸರಿಗೆ ಆ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಪಾನ್ಸಾರೆ ಅವರನ್ನು ಯಾರು ಕೊಂದರು, ಯಾಕೆ ಕೊಂದರು ಎಂಬ ಪ್ರಶ್ನೆ ಮುಂದುವರಿದಿದೆ. ಗೌರಿ ಲಂಕೇಶ್Gauri LankeshNarendra Dabholkarನರೇಂದ್ರ ದಾಬೋಲ್ಕರ್Sanatan Sansthaಸನಾತನ ಸಂಸ್ಥೆMM Kalaburgiಎಂಎಂ ಕಲಬುರ್ಗಿ
2019/04/24 00:00:08
https://www.samachara.com/news-in-brief/2018/09/16/dabholkar-kalburgi-gauri-lankesh-murder-linked-to-sanatan-sanstha
mC4
ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ | Bangalore to chitradurga by car - Kannada Nativeplanet »ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ Updated: Monday, December 22, 2014, 11:44 [IST] 77 days ago ಭಾರತದಲ್ಲಿ ಮಧುಚಂದ್ರಕ್ಕೆ ಯೋಗ್ಯವಾದಂತಹ ಸುಂದರ ತಾಣಗಳು 78 days ago ಕರೋನವೈರಸ್ ಲಾಕ್‌ಡೌನ್ ಸಮಯದಲ್ಲಿ ವೀಕ್ಷಿಸಬಹುದಾದ 9 ಅದ್ಭುತ ಪ್ರಯಾಣ ಚಲನಚಿತ್ರಗಳು 79 days ago ಲಾಕ್‌ಡೌನ್ ಮುಗಿದ ನಂತರ ಭೇಟಿ ನೀಡಬಹುದಾದ ರಜ ತಾಣಗಳು 80 days ago ಮೇ ತಿಂಗಳಿನಲ್ಲಿ ಭೇಟಿ ಕೊಡಬಹುದಾದಂತಹ ದಕ್ಷಿಣ ಭಾರತದ 14 ಅತ್ಯುತ್ತಮ ತಾಣಗಳು News ಬೆಂಗಳೂರಲ್ಲಿ 209 ಪ್ರದೇಶಗಳು ಪ್ರವಾಹ ಭೀತಿಯಲ್ಲಿವೆ: ಬಿಬಿಎಂಪಿ ಬೆಂಗಳೂರು ದಕ್ಷಿಣ ಭಾರತದ ಒಂದು ಮಹಾನಗರವಾಗಿದ್ದು ಈ ಭಾಗದ ಬಹುತೇಕ ಎಲ್ಲ ಪ್ರವಾಸಿ ಸ್ಥಳಗಳೊಂದಿಗೆ ಸುಲಲಿತವಾದ ಸಂಪರ್ಕವನ್ನು ಹೊಂದಿದೆ. ರಸ್ತೆಯಿಂದಾಗಲಿ, ರೈಲಿನಲ್ಲಾಗಲಿ ಇಲ್ಲವೆ ವಿಮಾನಗಳಿಂದಾಗಲಿ ಮೂರೂ ಪ್ರಮುಖ ಸಂಚಾರಿ ಮಾಧ್ಯಮಗಳು ಬೆಂಗಳೂರಿನಿಂದ ನಿರಾಯಾಸವಾಗಿ ಲಭಿಸುತ್ತವೆ. ಶುಭ ಶುಕ್ರವಾರ : ಪ್ರವಾಸ ಹಾಗೂ ವಿಮಾನ ಹಾರಾಟ ದರಗಳ ಮೇಲೆ 50% ರ ವರೆಗೆ ಕಡಿತ! ಬೆಂಗಳೂರಿನಿಂದ ಪ್ರವಾಸ ಹೊರಡಲು ಸಾಕಷ್ಟು ಆಯ್ಕೆಗಳು ಲಭ್ಯವಿರುವಾಗ ಅದನ್ನು ಸದುಪಯೋಗ ಪಡಿಸಿಕೊಳ್ಳುವುದೂ ಕೂಡ ಪ್ರವಾಸಿಗರ ಕರ್ತವ್ಯವೆಂದೇ ಹೇಳಬಹುದು. ನಿಮಗೆ ಬೆಂಗಳೂರಿನಿಂದ ಮೈಸೂರು, ಮಂಡ್ಯ, ಹಾಸನ, ನಂದಿ ಬೆಟ್ಟ, ಸಂಗಮ, ತಲಕಾಡು ಮುಂತಾದ ಸ್ಥಳಗಳಿಗೆ ಹೋಗಿ ಹೋಗಿ ಬೇಸರ ಮೂಡಿದ್ದರೆ, ಮತ್ತೊಂದು ವಿಶಿಷ್ಟ ಪ್ರವಾಸ ಮಾಡಬೇಕೆಂದಿದ್ದರೆ ಚಿತ್ರದುರ್ಗಕ್ಕೊಮ್ಮೆ ಭೇಟಿ ನೀಡಿ. ವಿಶೇಷ ಲೇಖನ : ಕ್ಯಾಸಲ್ ರಾಕ್‍ ನಿಂದ ದೂಧ್ ಸಾಗರ್ ಟ್ರೆಕ್ ಸಾಂದರ್ಭಿಕ ಚಿತ್ರ, ತುಮಕೂರು ಬಳಿಯ ಒಂದು ರಸ್ತೆ ಚಿತ್ರಕೃಪೆ: Subramanya Prasad ಚಿತ್ರದುರ್ಗವು ಬೆಂಗಳೂರಿನ ವಾಯವ್ಯಕ್ಕೆ ಸುಮಾರು 205 ಕಿ.ಮೀ ಗಳಷ್ಟು ದೂರದಲ್ಲಿದ್ದು ರಾಷ್ಟ್ರಿಯ ಹೆದ್ದಾರಿ ಸಂಖ್ಯೆ ನಾಲ್ಕರ ಮೇಲೆ ನೇರ ಸಂಪರ್ಕ ಹೊಂದಿದೆ. ಇನ್ನು ಈ ಹೆದ್ದಾರಿಯು ನಾಲ್ಕು ಪಥಗಳ ಅಗಲವಾದ ಹೆದ್ದಾರಿಯಾಗಿದ್ದು ವಾಹನಗಳನ್ನು ತಕ್ಕ ಮಟ್ಟಿಗೆ ವೇಗವಾಗಿಯೂ ಓಡಿಸಬಹುದು. ಘಂಟೆಗೆ 60 ಕಿ.ಮೀ ವೇಗವೆಂದರೂ ಸುಮಾರು ಮೂರುವರೆ ಘಂಟೆಗಳಲ್ಲಿ ನೀವು ಚಿತ್ರದುರ್ಗ ತಲುಪಬಹುದು. ಹೀಗಾಗಿ ಬೇಕಾದರೆ ಒಂದೇ ಒಂದು ದಿನದಲ್ಲಿ ನೀವು ಈ ಶೀಘ್ರ ಪ್ರವಾಸ ಮಾಡಿ ಆನಂದಿಸಬಹುದು. ಚಿತ್ರದುರ್ಗದಲ್ಲಿ ಕೇವಲ ಕೋಟೆಯಲ್ಲದೆ ಇತರೆ ಅನೇಕ ವಿಶೇಷತೆಗಳನ್ನು ಕಾಣಬಹುದು. ವಿಶೇಷ ಲೇಖನ : ರಸ್ತೆಯಿಂದ ಕೊಡಚಾದ್ರಿಗೆ ಹೀಗೂ ಪ್ರಯಾಣಿಸಿ ಚಿತ್ರದುರ್ಗದ ಭವ್ಯ ಕೋಟೆ ಚಿತ್ರಕೃಪೆ: veeresh.dandur ಚಿತ್ರದುರ್ಗದ ಕೋಟೆಯು ರಾಷ್ಟ್ರೀಯ ಮಹತ್ವ ಪಡೆದ ಕೋಟೆಯಾಗಿದ್ದು ಇಲ್ಲಿನ ಪರಿಸರವು ಒಂದು ರೀತಿಯ ವಿನೂತನ ಅನುಭವವನ್ನು ಕರುಣಿಸುತ್ತದೆ. ನಗರದ ಗೌಜು ಗದ್ದಲಗಳಿಗೆ ಸಲಾಂ ಹೇಳಿ ತಂಪಾದ ರಭಸಮಯ ಗಾಳಿಯ ನಡುವೆ ಸಮಯ ಕಳೆಯುವುದು ಹೆಚ್ಚಿನ ಹುಮ್ಮಸ್ಸನ್ನು ಕರುಣಿಸುತ್ತದೆ. ಇಲ್ಲಿ ಕೇವಲ ಕೋಟೆ ನೋಡಬೇಕೆಂದೇನಿಲ್ಲ. ಅದರ ಪ್ರಾಂಗಣದಲ್ಲಿರುವ ವಿವಿಧ ರಚನೆಗಳನ್ನು ನೋಡಬಹುದು, ಇವುಗಳು ಅಂದಿನ ಸಮಯದಲ್ಲಿ ತಮ್ಮದೆ ಆದ ವೈಶಿಷ್ಟ್ಯವನ್ನು ಹೊಂದಿದ್ದವು. ಇವುಗಳ ಕುರಿತು ತಿಳಿಯುವುದರಿಂದ ನಿಮ್ಮ ಜ್ಞಾನವೂ ಸಹ ವೃದ್ಧಿಯಾಗುತ್ತದೆ. ವಿಶೇಷ ಲೇಖನ : ಬೆಂಗಳೂರಿನಿಂದ ವರ್ಕಲಾ ಹೇಗೆ ಪ್ರಯಾಣ? ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ನೀವು ಬೆಂಗಳೂರಿನ ಯಾವುದೆ ಭಾಗದಿಂದ ಹೊರಟರೂ ಸಹ ಮೊದಲಿಗೆ ತುಮಕೂರಿನೆಡೆ ಹೋಗುವ ರಸ್ತೆ ಹಿಡಿದು ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ತಲುಪಬೇಕು. ಇಲ್ಲಿಂದ ಯಾವುದೆ ಅಡಚಣೆಗಳಿಲ್ಲದೆ ಹಾಯಾಗಿ ವಾಹನ ಚಲಾಯಿಸುತ್ತ ಹೊರಡಬಹುದು. ಅಲ್ಲಲ್ಲಿ ಟೊಲ್ ಗೇಟುಗಳಿವೆ. ನೆಲಮಂಗಲ, ತುಮಕೂರು ಹಾಗೂ ಹಿರಿಯೂರು ಮಾರ್ಗವಾಗಿ ಸುಮಾರು 200 ಕಿ.ಮೀ ಗಳಷ್ಟು ಕ್ರಮಿಸಿ ಚಿತ್ರದುರ್ಗವನ್ನು ತಲುಪಬಹುದು. ಮೊದಲು ನೆಲಮಂಗಲ ಮೂಲಕ ತುಮಕೂರಿನೆಡೆ ಸಾಗುವಾಗ ತುಮಕೂರು ಬಳಿಯಿರುವ ಕ್ಯಾತಸಂದ್ರಕ್ಕೆ ಭೇಟಿ ನೀಡಲು ಮರೆಯದಿರಿ. ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ತಟ್ಟೆ ಇಡ್ಲಿ ಚಿತ್ರಕೃಪೆ: Girionthenet ಕ್ಯಾತಸಂದ್ರವು ಬೆಂಗಳೂರಿಗರ ಅಥವಾ ಇಂದು ಬೆಂಗಳೂರಿನಲ್ಲಿ ನೆಲೆಸಿರುವ ಇತರೆ ಜನರ ನೆಚ್ಚಿನ ತಿಂಡಿಯಾದ ತಟ್ಟೆ ಇಡ್ಲಿಗಳ ಆವಿಷ್ಕಾರದ ಗ್ರಾಮವಾಗಿದೆ. ಹೌದು ಇಲ್ಲಿಂದಲೆ ಪ್ರವರ್ಧಮಾನಕ್ಕೆ ಬಂದ ತಟ್ಟೆ ಇಡ್ಲಿಯು ಸಾಕಷ್ಟು ಜನಪ್ರೀಯವಾಗಿದೆ. ಸಾಮಾನ್ಯವಾಗಿ ಬೆಂಗಳೂರಿನೆಲ್ಲೆಡೆ ತಟ್ಟೆ ಇಡ್ಲಿಗಳು ಲಭ್ಯವಿದ್ದರೂ ಕ್ಯಾತಸಂದ್ರದ ಇಡ್ಲಿಗಳಿಗೆ ವಿಶೇಷವಾದ ರುಚಿಯೇ ಇದೆ ಎಂದು ಹೇಳಬಹುದು. ನಿಮಗಿಷ್ಟವಿದ್ದಲ್ಲಿ ಕ್ಯಾತಸಂದ್ರದ ತಟ್ಟೆ ಇಡ್ಲಿ ಹಾಗೂ ಬಿಸಿ ಬಿಸಿ ಉದ್ದಿನ ವಡೆಗಳ ರುಚಿಯನ್ನು ಸವಿದು ಹಿರಿಯೂರಿನೆಡೆ ಧಾವಿಸಬಹುದು. ತುಮಕೂರಿನಿಂದ ಹಿರಿಯೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ 90 ಕಿ.ಮೀ ಗಳಷ್ಟು ದೂರದಲ್ಲಿದೆ. ಮಾರಿ ಕಣಿವೆ ಜಲಾಶಯ ಒಂದೊಮ್ಮೆ ಹಿರಿಯೂರು ತಲುಪಿದಾಗ ಮತ್ತೊಂದು ಚಿಕ್ಕ ಪ್ರಯಾಣವನ್ನು ನಿಮಗಿಷ್ಟವಿದ್ದಲ್ಲಿ ಮಾಡಬಹುದು. ಅದಕ್ಕಾಗಿ ನೀವು ಹಿರಿಯೂರಿನಿಂದ ತುಸು ಮುಂದೆ ಬಂದು ಎಡ ತಿರುವು ಪಡೆದು ಟಿ.ಹೆಚ್ ರಸ್ತೆಯ ಮೇಲೆ ಸುಮಾರು 30 ಕಿ.ಮೀ ಪ್ರಯಾಣಿಸಿ ಮಾರಿ ಕಣಿವೆಯನ್ನು ತಲುಪಬಹುದು. ವಾಣಿ ವಿಲಾಸ ಸಾಗರ ಎಂತಲೂ ಕರೆಯಲಾಗುವ ಈ ಜಲಾಶಯವು ರಾಜ್ಯದ ಅತಿ ಪುರಾತನ ಆಣೆಕಟ್ಟುಗಳ ಪೈಕಿ ಒಂದಾಗಿದೆ. ಸ್ವಾತಂತ್ರ್ಯಕ್ಕೂ ಮುಂಚೆ ಮೈಸೂರು ಅರಸರಿಂದ ಈ ಆಣಕಟ್ಟನ್ನು ವೇದವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದು ಚಿತ್ರದುರ್ಗ ಹಾಗೂ ಹಿರಿಯೂರಿಗೆ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ. ಗೋಪಾಲ ಸ್ವಾಮಿ ಹೊಂಡ ಜಲಾಶಯದ ಸುಂದರ ಅಂಗಳದಲ್ಲಿ ಸ್ವಲ್ಪ ಸಮಯ ಕಳೆದು ಮತ್ತೆ ಅದೇ ಮಾರ್ಗವಾಗಿ ಹಿಂತಿರುಗಿ ರಾಷ್ಟ್ರೀಯ ಹೆದ್ದಾರಿ ತಲುಪಿ ಅಲ್ಲಿಂದ ನಿಮ್ಮ ಪ್ರಯಾಣವನ್ನು ಚಿತ್ರದುರ್ಗದೆಡೆ ಮುಂದುವರೆಸಬಹುದು. ಚಿತ್ರದುರ್ಗವು ಹಿರಿಯೂರಿನಿಂದ ಕೇವಲ 44 ಕಿ.ಮೀ ಗಳಷ್ಟು ದೂರದಲ್ಲಿದೆ. ಒಂದೊಮ್ಮೆ ಚಿತ್ರದುರ್ಗ ಪ್ರವೇಶಿಸಿದರೆ ಅಲ್ಲಿಂದ ನೇರವಾಗಿ ಕೋಟೆಯ ತಾಣಕ್ಕೆ ಧಾವಿಸಬಹುದು. ಇದು ರಾಷ್ಟ್ರೀಯ ಸಂರಕ್ಷಿಸಲ್ಪಟ್ಟ ಸ್ಮಾರಕವಾಗಿದ್ದು ಒಳ ಪ್ರವೇಶಿಸಲು ಸರ್ಕಾರದಿಂದ ನಿಗದಿಪಡಿಸಲಾದ ನಿರ್ದಿಷ್ಟ ಶುಲ್ಕವನ್ನು ಪಾವತಿಸಿ ಒಳ ನಡೆಯಬಹುದು. ಅಕ್ಕ ತಂಗಿಯರ ಹೊಂಡ ಏಳು ಸುತ್ತಿನ ಈ ಕೋಟೆಯಲ್ಲಿ ಹಲವಾರು ರಚನೆಗಳು, ಹೊಂಡಗಳು, ದೇವಾಲಯಗಳನ್ನು ಕಾಣಬಹುದಾಗಿದೆ. ಇಂದು ಕೇಳುತ್ತಿರುವ ಮಳೆ ನೀರಿನ ಕೊಯ್ಲು ಪದ್ಧತಿಯನ್ನು ಅಂದೆ ಕೋಟೆಯ ನೀರ್ಮಾಣದ ಸಮಯದಲ್ಲಿ ಅಳವಡಿಸಲಾಗಿತ್ತು ಎಂದರೆ ತಿಳಿಯಬಹುದು ಅಂದಿನ ಜನರ ಮುಂದಾಲೋಚನೆ ಹಾಗೂ ಜಾಣ್ಮೆಯನ್ನು. ಇಲ್ಲಿ ಸಂತೆ ಹೊಂಡ, ಸಿಹಿನೀರಿನ ಹೊಂಡ, ಗೋಪಾಲ ಸ್ವಾಮಿ ಹೊಂಡ, ತುಪ್ಪದ ಕೊಳ, ಅಕ್ಕ ತಂಗಿ ಹೊಂಡ ಹೀಗೆ ವಿವಿಧ ನೀರಿನ ಸಂಗ್ರಹಣಾ ಕೊಳಗಳನ್ನು ಕಾಣಬಹುದು. ವಿಶೇಷ ಲೇಖನ : ದುರ್ಗದ ಕೋಟೆಗೆ ಯಾವುದು ಸಾಟಿ? ಹಿಡಿಂಬೇಶ್ವರ ದೇವಸ್ಥಾನ, ಹಿಡಿಂಬಾ ವಾಸವಿದ್ದಳಂತಿಲ್ಲಿ! ಅಲ್ಲದೆ ಕೋಟೆಯ ಪರಿಸರದಲ್ಲಿ ಹಿಡಿಂಬೇಶ್ವರ ದೇವಸ್ಥಾನವನ್ನೂ ಸಹ ಕಾಣಬಹುದಾಗಿದೆ. ಸ್ಥಳ ಪುರಾಣದ ಪ್ರಕಾರ, ಹಿಂದೆ ಹಿಡಿಂಬಾಸುರನು ಒಬ್ಬ ದೈತ್ಯನಾಗಿದ್ದನು. ಈ ದೇವಸ್ಥಾನದಲ್ಲಿ ಹಿಡಿಂಬನ ದಂತವನ್ನು ಕಾಣಬಹುದಾಗಿದೆ. ಅಲ್ಲದೆ ಸಂಪಿಗೆ ಸಿದ್ದೇಶ್ವರ, ಏಕನಾಥಮ್ಮ, ಹಣುಮಂತ, ಸುಬ್ಬರಾಯ, ಗೋಪಾಲ ಕೃಷ್ಣ, ನಂದಿಯ ದೇವಾಲಯಗಳನ್ನು ನೋಡಬಹುದು. ಅಲ್ಲದೆ ಐತಿಹಾಸಿಕವಾಗಿ ಒಂದು ರೋಚಕ ಘಟನೆಯಾದ ಒನಕೆ ಒಬವ್ವನ ಖಿಂಡಿಯನ್ನೂ ಸಹ ಇಲ್ಲಿ ಕಾಣಬಹುದು. ಒಬವ್ವಳು ಈ ಖಿಂಡಿಯಿಂದ ತೂರಿ ಬರುತ್ತಿದ್ದ ಶತ್ರು ಸೈನಿಕರನ್ನು ತನ್ನ ಒನಕೆಯಿಂದ ಸೆದೆ ಬಡಿದಿದ್ದಳು. Read more about: bangalore chitradurga hiriyur karnataka road trip ರಸ್ತೆ ಪ್ರವಾಸ ಬೆಂಗಳೂರು ಚಿತ್ರದುರ್ಗ ಹಿರಿಯೂರು ಕರ್ನಾಟಕ
2020/08/08 08:49:21
https://kannada.nativeplanet.com/travel-guide/bangalore-chitradurga-car-000303.html
mC4
ನಿಖಿಲ್ ತಾನು ಮಾಜಿ ಪ್ರಧಾನಿ ಹಾಗು ಮುಖ್ಯಮಂತ್ರಿಯ ಮಗನೆಂದೇ ಮರೆತುಬಿಟ್ಟಿದ್ದರು...! - ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ - ವರ್ಷದ ಅತ್ಯಂತ ನಿರೀಕ್ಷಿತ ಚಿತ್ರವಾಗಿರುವ ನಿಖಿಲ್ ಕುಮಾರಸ್ವಾಮಿ ಅವರು ಅಭಿನಯಿಸಿರುವ 'ಸೀತಾರಾಮ ಕಲ್ಯಾಣ' ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಸಿನಿ ರಸಿಕರಿಗೆ ಹಬ್ಬದ ಉಡುಗರೆ ನೀಡಿದ್ದಾರೆ.ಈ ಟ್ರೇಲರ್ ಅನ್ನು ಬಿಡುಗಡೆ ಆದ ಕೇವಲ ಎರಡೇ ದಿನಗದಲ್ಲಿ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿರುವುದರಿಂದ, ಚಿತ್ರವು ಕನ್ನಡ ಚಿತ್ರರಂಗದಲ್ಲೇ ಹೊಸದೊಂದು ಧಾಖಲೆ ಕಡೆ ದಾಪುಗಾಲು ಇಡುತ್ತಿದೆ. ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಚಿತ್ರ ಯಶಸ್ವಿಯಾಗಲಿ ಎಂದು ಕೋರಿ ಮಾತನಾಡಿದ ಕುರುಕ್ಷೇತ್ರ ಚಿತ್ರದ ನಿರ್ಮಾಪಕ ಮುನಿರತ್ನ ಅವರು, ಕುರುಕ್ಷೇತ್ರ ಚಿತ್ರದ ಚಿತ್ರೀಕರಣದ ವೇಳೆ ತಾವು ಗಮನಿಸಿದ ನಿಖಿಲ್ ಅವರ ಕಾರ್ಯೆನಿಷ್ಠೆ ಬಗ್ಗೆ ಹಾಡಿ ಹೊಗಳಿದರು. ' ಕುರುಕ್ಷೇತ್ರದ ಕತೆ ಈಗಾಗಲೇ ಹಲವಾರು ಚಿತ್ರಗಳು, ಹಾಗು ಧಾರಾವಾಹಿಗಳಲ್ಲಿ ಬಂದಿದೆ. ಆದ್ದರಿಂದ ನನಗೆ ಇದು ನಮ್ಮ ಕುರುಕ್ಷೇತ್ರ ಎಂದು ಹೆಮ್ಮೆ ಪಡುವಂತಹ ಸಿನಿಮ ಮಾಡಬಯಸಿದೆ. ಇದೇ ಕಾರಣದಿಂದ ನಾನು ಚಿತ್ರಕ್ಕೆ ಬಹುತೇಕ ಕನ್ನಡದವರನ್ನೇ ಕಲಾವಿದರನ್ನಾಗಿ ಆಯ್ಕೆ ಮಾಡಿದ್ದೇನೆ. ಇನ್ನು ಕತೆಯಲ್ಲಿ ಅಭಿಮನ್ಯು ಪಾತ್ರ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ. ನಾನು ಆಗ ತಾನೇ ಜಾಗ್ವಾರ್ ಚಿತ್ರವನ್ನು ನೋಡಿದ್ದೆ. ನಿಖಿಲ್ ಅವರ ಚೊಚ್ಚಲ ಸಿನಿಮಾದಲ್ಲೇ ಅದ್ಭುತವಾಗಿ ನಟಿಸಿದ್ದನ್ನು ನೋಡಿ ಆಶ್ಚರ್ಯವಾಗಿತ್ತು. ಆಗ ನನಗೆ ಅಭಿಮನ್ಯು ಪಾತ್ರಕ್ಕೆ ನಿಖಿಲ್ ಅವರೇ ಸೂಕ್ತ ಎಂದು ಅನಿಸಿದರಿಂದ, ಕುಮಾರಸ್ವಾಮಿ ಅವರ ಮೂಲಕ ನಿಕಿಲ್ ರನ್ನು ಅಪ್ರೋಚ್ ಮಾಡಿದೆ. ಅವರು ಬಹಳ ಸಂತೋಷದಿಂದ ಒಪ್ಪಿಕೊಂಡರು. ಚಿತ್ರೆಕ್ಕೆ ನಿಖಿಲ್ ಅವರು ಎಷ್ಟು ಶ್ರಮಿಸಿದ್ದಾರೆ ಎಂದು ನನಗೇ ಗೊತ್ತು. ಒಂದು ತಿಂಗಳಿಗೂ ಹೆಚ್ಚು ಕತ್ತಿ ವರಸೆ, ಕುದುರೆ ಸವರಿ ತರಬೇತಿ ಪಡೆದರು. ಚಿತ್ರೀಕರಣದ ಸ್ಥಳಕ್ಕೆ, ನಿರ್ದೇಶಕರು 8 ಘಂಟೆಗೆ, ಸಾಹಸ ನಿರ್ದೇಶಕರು 8 .30 ಗೆ ಬರುತ್ತಿದ್ದರು. ಆದರೆ ನಿಖಿಲ್ ಮಾತ್ರ ಬೆಳಗಿನ ಜಾವ 7 ಘಂಟೆಗೆ ಕ್ಯಾರಾವ್ಯಾನ್ ನಲ್ಲಿ ಇರುತ್ತಿದ್ದರು. ಅವರು ಮಾಜಿ ಪ್ರಧಾನ ಮಂತ್ರಿಯ ಮೊಮ್ಮಗ, ಮುಖ್ಯ ಮಂತ್ರಿಯ ಮಗನೆಂದು ಮರೆತೇ ಬಿಟ್ಟಿದ್ದರು. ಪ್ರತಿಯೊಬ್ಬ ಪ್ರೇಕ್ಷಕನು ಚಿತ್ರಮಂದಿರದಿಂದ ಹೊರ ಬರುವಾಗ ಅಭಿಮನ್ಯು ಪಾತ್ರವನ್ನು ಮೆಲಕು ಹಾಕುವಂತೆ ನಿಖಿಲ್ ನಟಿಸಿದ್ದಾರೆ ' ಎಂದು ಹೇಳಿದರು.
2021/07/25 13:51:50
https://suddisamachaara.com/2019/01/22/kurukshetra-producer-about-nikhil-kumarswamy-as-abhimanyu/
mC4
ಸಿಂಪಲ್ ಹೇರ್ ಪ್ಯಾಕ್: ಈಗ ಮನೆಯಲ್ಲಿಯೇ ಕೂದಲನ್ನು ನೇರಗೊಳಿಸಿ! | Does Milk Help In Straightening Your Hair? - Kannada BoldSky ಸಿಂಪಲ್ ಹೇರ್ ಪ್ಯಾಕ್: ಈಗ ಮನೆಯಲ್ಲಿಯೇ ಕೂದಲನ್ನು ನೇರಗೊಳಿಸಿ! | Updated: Wednesday, June 6, 2018, 12:42 [IST] ನೇರವಾಗಿರುವ ಕೂದಲು ಅಂದ್ರೆ ಈಗಿನವರಿಗೆ ಒಂದು ಟ್ರೆಂಡ್. ಹಾಗಾಗಿ ಅದೆಷ್ಟೋ ಮಂದಿ ದುಬಾರಿ ಚಿಕಿತ್ಸೆಗಳ ಮೊರೆ ಹೋಗಿ ಕೂದಲನ್ನು ನೇರವಾಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಸಾಕಷ್ಟು ಪ್ರೊಡಕ್ಟ್ ಇಂದಿನ ದಿನಗಳಲ್ಲಿ ಮಾರ್ಕೆಟ್ ನಲ್ಲಿ ಲಭ್ಯವಿದ್ದು, ಅವುಗಳು ನಿಮ್ಮ ಕೂದಲಿನ ಸ್ವರೂಪದ ಬದಲಾವಣೆಯನ್ನು ಭಾರೀ ಮಟ್ಟದಲ್ಲಿ ಮಾಡುತ್ತವೆ ಎಂದು ಹೇಳಲಾಗುತ್ತೆ ಇಂತಹ ಪ್ರೊಡಕ್ಟ್ ಗಳ ಒಂದು ದೊಡ್ಡ ಸಮಸ್ಯೆಯೆಂದರೆ ಅವುಗಳಲ್ಲಿ ಅತಿಯಾಗಿ ರಾಸಾಯನಿಕ ಪದಾರ್ಥಗಳನ್ನು ಒಳಗೊಂಡಿದ್ದು ಅವು ನಿಮ್ಮ ಕೂದಲಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತವೆ. ಕೆಲವೇ ದಿನದಲ್ಲಿ ನೀವು ಸಲೂನ್ ನಲ್ಲಿ ಸ್ಟ್ರೈಟ್ ಮಾಡಿಸಿಕೊಂಡ ಕೂದಲು ಅನಾರೋಗ್ಯಕ್ಕೆ ತುತ್ತಾಗಬಹುದು. ಹೀಗೆ ಕೂದಲನ್ನು ನೇರವಾಗಿಸಲು ಕೆಲವು ರಾಸಾಯನಿಕ ರಹಿತ ನೈಸರ್ಗಿಕ ಮಾರ್ಗಗಳಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವಾ? ಎಸ್ , ಇಂತಹ ಕೆಲವು ಮಾರ್ಗಗಳಿವೆ.... ಹಾಲು ... ಹಾಲು ಕೂದಲನ್ನು ಮೃದುವಾಗಿ ಮತ್ತು ಗಂಟುಗಂಟಾಗದಂತೆ ನೋಡಿಕೊಳ್ಳುತ್ತೆ. ಯಾಕೆಂದರೆ ಇದರಲ್ಲಿ ಪ್ರೋಟೀನ್ ಅಂಶವಿರುತ್ತೆ. ಇದು ನಿಮ್ಮ ಕರ್ಲಿ ಹೇರನ್ನು ನೇರವಾಗಿಸಲು ಸಹಾಯ ಮಾಡುತ್ತೆ. 1. ಒಂದು ಕಪ್ ಹಾಲು ಮತ್ತು ನೀರನ್ನು ಮಿಕ್ಸ್ ಮಾಡಿಕೊಳ್ಳಿ. ಒಂದು ಸ್ಪ್ರೇ ಬಾಟಲ್ ನಲ್ಲಿ ಅದನ್ನು ಸ್ಟೋರ್ ಮಾಡಿ. ಇದನ್ನು ಅಪ್ಲೈ ಮಾಡಿಕೊಳ್ಳುವ ಮುನ್ನ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ ಮತ್ತು ಸಿಕ್ಕುಗಳಿದ್ದಲ್ಲಿ ಬಿಡಿಸಿಕೊಳ್ಳಿ. ನಂತರ ನಿಮ್ಮ ಕೂದಲಿಗೆ ಅಪ್ಲೈ ಮಾಡಿ..ಮತ್ತೆ ಕೂದಲನ್ನು ಬಾಚಿಕೊಳ್ಳಿ 2. 30 ನಿಮಿಷ ಹಾಗೆಯೇ ಬಿಡಿ. ಹಾಲನ್ನು ನಿಮ್ಮ ಕೂದಲು ಹೀರಿಕೊಳ್ಳಲಿ. ನಂತರ ಕೂದಲನ್ನು ಶಾಂಪೂ ಮತ್ತು ಕಂಡೀಷನರ್ ಬಳಸಿ ವಾಷ್ ಮಾಡಿ. 2-3 ಟೇಬಲ್ ಸ್ಪೂನ್ ಜೇನುತುಪ್ಪ 2-3 ಟೇಬಲ್ ಸ್ಪೂನ್ ಬಾಳೆಹಣ್ಣು ಇದನ್ನು ಬಳಸುವ ವಿಧಾನ ಹೇಗೆ ? 1. ಒಂದು ಕಪ್ ನಷ್ಟು ಹಾಲಿಗೆ ಜೇನುತುಪ್ಪವನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. 2. ಅದಕ್ಕೆ ಬಾಳೆಹಣ್ಣನ್ನು ಸೇರಿಸಿ ಮತ್ತಷ್ಟು ಗಟ್ಟಿ ಪೇಸ್ಟ್ ತಯಾರಿಸಿ. ಬಾಳೆಹಣ್ಣು ಕೂದಲಿಗೆ ಉತ್ತಮ ಮಾಯ್ಚಿರೈಸರ್ ಆಗಬಲ್ಲವು 3. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ಒಂದು ಗಂಟೆ ಇಲ್ಲವೇ ಅದಕ್ಕಿಂತ ಹೆಚ್ಚು ಸಮಯ ಕೂದಲಿನಲ್ಲೇ ಬಿಡಿ. ಸರಿಯಾಗಿ ಒಣಗುವ ವರೆಗೆ ಕಾಯಿರಿ. 4. ನಂತರ ಶಾಂಪೂ ಬಳಸಿ ವಾಷ್ ಮಾಡಿ. ಆಲಿವ್ ಆಯಿಲ್ ಮತ್ತು ಮೊಟ್ಟೆ ಆಲಿವ್ ಆಯಿಲ್ ಕೂದಲನ್ನು ಮಾಯ್ಚಿರೈಸ್ ಆಗಿರುವಂತೆ ನೋಡಿಕೊಳ್ಳುತ್ತೆ ಮತ್ತು ಮೊಟ್ಟೆಯು ನಿಮ್ಮ ಕೂದಲನ್ನು ಸ್ಟ್ರಾಂಗ್ ಆಗಿ ಮತ್ತು ಹೊಳೆಯುವಂತೆ ಮಾಡಲು ನೆರವಾಗುತ್ತೆ. ಬೇಕಾಗುವ ಸಾಮಗ್ರಿಗಳು - ಎರಡು ಮೊಟ್ಟೆಗಳು 4 ಟೇಬಲ್ ಸ್ಪೂನ್ ಆಲಿವ್ ಆಯಿಲ್ 1. ಎರಡು ಮೊಟ್ಟೆಯನ್ನು ಚೆನ್ನಾಗಿ ಬೀಟ್ ಮಾಡಿ ಅದನ್ನು ಆಲಿವ್ ಆಯಿಲ್ ನೊಂದಿಗೆ ಮಿಕ್ಸ್ ಮಾಡಿ 2. ಇದನ್ನು ನಿಮ್ಮ ಕೂದಲಿಗೆ ಅಪ್ಲೈ ಮಾಡಿ, ನಂತರ ನಿಮ್ಮ ಕೂದಲನ್ನು ಬಾಚಿಕೊಳ್ಳಿ 3. ನಂತರ ಶವರ್ ಕ್ಯಾಪ್ ಧರಿಸಿ. ಸುಮಾರು 30 ರಿಂದ 45 ನಿಮಿಷ ಹಾಗೆಯೇ ಇರಲಿ. ನಂತರ ಕೂದಲನ್ನು ಮೃದುವಾದ ಶಾಂಪೂ ಬಳಸಿ ತೊಳೆಯಿರಿ ಮಾಡುವ ವಿಧಾನ ಹೇಗೆ ಗೊತ್ತಾ? 1. ಒಂದು ಕಪ್ ಮುಲ್ತಾನಿ ಮಿಟ್ಟಿ,ಒಂದು ಮೊಟ್ಟೆಯ ಬಿಳಿಭಾಗ ಮತ್ತು ಎರಡು ಟೇಬಲ್ ಸ್ಪೂನ್ ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಗಟ್ಟಿ ಪೇಸ್ಟ್ ನಂತಾಗಲು ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ 2. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ ಮತ್ತು ನಂತರ ದಪ್ಪ ಹಲ್ಲಿನ ಬಾಚಣಿಗೆ ಬಳಸಿ ಕೂದಲನ್ನು ಬಾಚಿಕೊಳ್ಳಿ 3. ಒಂದು ಗಂಟೆ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಿಂದ ತೊಳೆಯರಿ.ನಂತರ ಹಾಲನ್ನು ನಿಮ್ಮ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಿ. 4. 15 ನಿಮಿಷ ಹಾಗೆಯೇ ಬಿಟ್ಟು ನಂತರ ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲನ್ನು ತೊಳೆಯಿರಿ. ಹಾಟ್ ಆಯಿಲ್ ಮಸಾಜ್ ಹೇಗೆ ಬಳಸುವುದು ಗೊತ್ತಾ? 1. ಸ್ವಲ್ಪ ಹದ ಬೆಚ್ಚಗಿರುವ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನೀವು ಯಾವುದೇ ನಿಮ್ಮ ಇಚ್ಛೆಯ ಎಣ್ಣೆಯನ್ನು ಆಯ್ದುಕೊಳ್ಳಬಹುದು. 2. ಎಣ್ಣೆಯು ಪ್ರತಿ ಕೂದಲಿನ ಬುಡಕ್ಕೂ ಸಮನಾಗಿ ಹಂಚಿಕೆಯಾಗಬೇಕು ಎಂದರೆ ನೀವು ದಪ್ಪ ಹಲ್ಲಿನ ಬಾಚಣಿಗೆ ತೆಗೆದುಕೊಂಡು ಕೂದಲನ್ನು ಬಾಚಿಕೊಳ್ಳಬೇಕು. ಇದು ನೀವು ಕೂದಲು ತೊಳೆಯುವಾಗ ಆಗುವ ಬ್ರೇಕೇಜನ್ನು ಕೂಡ ನಿವಾರಿಸುತ್ತೆ. 3. ನಂತ್ರ ಬಿಸಿಯಾದ, ಮತ್ತು ಒದ್ದೆಯಾದ ಟವೆಲ್ ನಿಂದ 30 ರಿಂದ 40 ನಿಮಿಷ ನಿಮ್ಮ ಕೂದಲನ್ನು ಸುತ್ತಿಕೊಳ್ಳಿ. 4. 40 ನಿಮಿಷದ ನಂತರ ಕೂದಲನ್ನು ಮೃದುವಾದ ಶಾಂಪೂ ಬಳಸಿ ವಾಷ್ ಮಾಡಿ. ನಂತರ ನಿಮ್ಮ ಕೂದಲನ್ನು ಒದ್ದೆ ಇರುವಾಗಲೇ ಬಾಚಿಕೊಳ್ಳಿ.ನಂತರ ಡ್ರೈ ಆಗಲು ಬಿಡಿ. ಹರಳೆಣ್ಣೆಯು ನಿಮ್ಮ ಕೂದಲನ್ನು ಸ್ಟ್ರೈಟ್ ಮಾಡುವಲ್ಲಿ ಭಾರೀ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತೆ. 1. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ. ನಿಮ್ಮ ಕೂದಲಿಗೆ ಅದರಿಂದ ಮಸಾಜ್ ಮಾಡಿ. 2. ಸ್ವಲ್ಪ ಬಿಸಿಯಾಗಿರುವ ಟಬೆಲ್ ಬಳಸಿ ಕೂದಲನ್ನು ಕವರ್ ಮಾಡಿ ಮುಚ್ಚಿಕೊಳ್ಳಿ. ಸುಮಾರು 30 ನಿಮಿಷ ಹಾಗೆಯೇ ಇರಲಿ 3. ನಂತರ, ಕೂದಲನ್ನು ಮೃದುವಾದ ಶಾಂಪೂ ಬಳಸಿ ತೊಳೆಯಿರಿ. 4. ಇದನ್ನು ನೀವು ವಾರಕ್ಕೆ ಎರಡು ಬಾರಿ ಮಾಡುವುದರಿಂದ ಉತ್ತಮವಾದ ಮತ್ತು ವೇಗವಾದ ಫಲಿತಾಂಶ ಪಡೆಯಲು ಸಾಧ್ಯವಿದೆ. ವಿನೆಗರ್ ನಿಮ್ಮ ಕೂದಲಿಗೆ ರೇಷ್ಮೆಯಂತ ಕಾಂತಿ ಮತ್ತು ಹೊಳಪು ನೀಡಲು ನೆರವಾಗುತ್ತೆ 1. ಕೂದಲಿಗೆ ಶಾಂಪೂ, ಕಂಡೀಷನರ್ ಹಾಕಿ ಮೊದಲು ತೊಳೆದು ತೆಗೆಯಿರಿ 2. ಕೊನೆಯಲ್ಲಿ ಒಂದು ಚೊಂಬು ನೀರಿಗೆ ಒಂದಷ್ಟು ಹನಿ ವಿನೆಗರ್ ನ್ನು ಸೇರಿಸಿ. ಅದರಿಂದ ನಿಮ್ಮ ಕೂದಲನ್ನು ಕೊನೆಯ ಬಾರಿ ತೊಳೆಯಿರಿ, ಬಾಳೆಹಣ್ಣು ಮತ್ತು ಜೇನುತುಪ್ಪ ಈ ಮಿಶ್ರಣದ ಹೇರ್ ಮಾಸ್ಕ್ ಕೇವಲ ನಿಮ್ಮ ಕೂದಲನ್ನು ಸ್ಟ್ರೈಟ್ ಮಾಡುವುದು ಮಾತ್ರವಲ್ಲ ಬದಲಾಗಿ ಸ್ಕಾಲ್ಪ್ ಭಾಗವನ್ನು ಹೈಡ್ರೇಟ್ ಮಾಡುವಂತೆಯೂ ನೋಡಿಕೊಳ್ಳುತ್ತೆ. 2 ಟೇಬಲ್ ಸ್ಪೂನ್ ಜೇನು ತುಪ್ಪ 2 ಟೇಬಲ್ ಸ್ಪೂನ್ ಮೊಸರು 2 ಟೇಬಲ್ ಸ್ಪೂನ್ ಆಲಿವ್ ಆಯಿಲ್ 1. ಎರಡು ಸಿಪ್ಪೆ ತೆಗೆದ ಬಾಳೆಹಣ್ಣನ್ನು ತೆಗೆದುಕೊಳ್ಳಿ. ಅದಕ್ಕೆ ಎರಡು ಟೇಬಲ್ ಸ್ಪೂನ್ ಹನಿಯನ್ನು ಸೇರಿಸಿ, ಆಲಿವ್ ಆಯಿಲ್ ಮತ್ತು ಮೊಸರನ್ನೂ ಸೇರಿಸಿ.. ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. 2. ಇದನ್ನು ನಿಮ್ಮ ಕೂದಲಿಗೆ ಹಚ್ಚಿ ಮಾಸ್ಕ್ ಮಾಡಿ. ಶವರ್ ಕ್ಯಾಪ್ ಬಳಸಿ ಸೋರದಂತೆ ಜಾಗೃತೆ ವಹಿಸಬಹುದು. 3. ಅರ್ಧ ಗಂಟೆ ಬಿಟ್ಟು ಕೂದಲನ್ನು ಚೆನ್ನಾಗಿ ತೊಳೆಯಿರಿ. Straight hair has always been a trend. Nowadays, people go for expensive treatments to straighten their hair. Also, there are many products available today that could change the texture of your hair to a great extent. People who are not blessed with naturally straight hair often turn to chemical treatments to get rid of unruly waves and curls. there are some natural ways to straighten your hair without undergoing the harsh effects of chemical treatments. Let us see what they are.
2019/03/19 17:13:01
https://kannada.boldsky.com/beauty/hair-care/2018/does-milk-help-straightening-your-hair-017486.html
mC4
ಬೆಳ್ಳಿ ಬಾಚಿಕೊಂಡ ಬಿಲ್ಲುಗಾರ್ತಿ ದೀಪಿಕಾ | Vartha Bharati- ವಾರ್ತಾ ಭಾರತಿ ಟೋಕಿಯೊ ಒಲಿಂಪಿಕ್ಸ್ ಟೆಸ್ಟ್ ಇವೆಂಟ್ ವಾರ್ತಾ ಭಾರತಿ Jul 18, 2019, 12:23 AM IST ಟೋಕಿಯೊ, ಜು.17: ಭಾರತದ ಅಗ್ರ-ರ್ಯಾಂಕಿನ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಬುಧವಾರ ನಡೆದ 2020ರ ಟೋಕಿಯೋ ಒಲಿಂಪಿಕ್ ಗೇಮ್ಸ್ ಟೆಸ್ಟ್ ಇವೆಂಟ್‌ನಲ್ಲಿ ಕೊರಿಯಾದ ಅನ್ ಸ್ಯಾನ್‌ರನ್ನು ನೇರ ಸೆಟ್‌ಗಳಿಂದ ಮಣಿಸುವುದರೊಂದಿಗೆ ಬೆಳ್ಳಿ ಪದಕವನ್ನು ಬಾಚಿಕೊಂಡರು. ಕ್ವಾಲಿಫಿಕೇಶನ್ ರೌಂಡ್‌ನಲ್ಲಿ ನಾಲ್ಕನೇ ರ್ಯಾಂಕಿನಲ್ಲಿದ್ದ ದೀಪಿಕಾ ಎರಡನೇ ಶ್ರೇಯಾಂಕದ ಸ್ಯಾನ್ ವಿರುದ್ಧ ಕಠಿಣ ಸವಾಲು ಎದುರಿಸಿದರೂ ಅಂತಿಮವಾಗಿ 6-0 ಅಂತರದಿಂದ ಪಂದ್ಯವನ್ನು ಜಯಿಸಿದರು. ''ಇತ್ತೀಚೆಗಷ್ಟೇ ನಾನು ನನ್ನ ಟೆಕ್ನಿಕ್‌ನ್ನು ಬದಲಿಸಿಕೊಂಡಿದ್ದೇನೆ. ನಾನು ಇಲ್ಲಿ ಸಾಕಷ್ಟು ಕಲಿತಿದ್ದೇನೆ. ಇದೀಗ ಪ್ರಗತಿಯಾಗಿರುವೆ.ಪಂದ್ಯ ಸೋತ ಸಂದರ್ಭದಲ್ಲಿ ನಾನು ನನ್ನ ಶೂಟಿಂಗ್‌ನ್ನು ಸಂಪೂರ್ಣವಾಗಿ ಮರೆಯುವೆ.ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುತ್ತೇನೆ'' ಎಂದು ದೀಪಿಕಾ ಹೇಳಿದರು. ಭಾರತೀಯ ಮಹಿಳಾ ಆರ್ಚರಿ ತಂಡ ಇನ್ನಷ್ಟೇ ಮುಂದಿನವರ್ಷದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕಾಗಿದೆ. 2018ರ ಜೂನ್‌ನಲ್ಲಿ ಸಾಲ್ಟ್‌ಲೇಕ್ ಸಿಟಿಯಲ್ಲಿ ನಡೆದ ಮೂರನೇ ಹಂತದ ವಿಶ್ವಕಪ್‌ನಲ್ಲಿ ಚಿನ್ನ ಜಯಿಸಿದ ಬಳಿಕ ಇದೇ ಮೊದಲ ಬಾರಿ ದೀಪಿಕಾ ವಿಶ್ವಮಟ್ಟದ ಸ್ಪರ್ಧೆಯಲ್ಲಿ ವೈಯಕ್ತಿಕ ಪದಕ ಜಯಿಸಿದರು. ಟೋಕಿಯೋ ಗೇಮ್ಸ್‌ಗೆ ಒಲಿಂಪಿಕ್ಸ್ ಕೋಟಾದಿಂದ ವಂಚಿತವಾಗಿರುವ ಭಾರತೀಯ ಮಹಿಳಾ ಆರ್ಚರಿ ತಂಡಕ್ಕೆ ದೀಪಿಕಾ ಅವರ ಬೆಳ್ಳಿ ಪದಕದ ಸಾಧನೆ ನೈತಿಕ ಸ್ಥೈರ್ಯ ತುಂಬಿದೆ.
2019/11/18 03:13:23
http://www.varthabharati.in/article/kreede/200986
mC4
ಕನಿಷ್ಠ ವೇತನಕ್ಕಾಗಿ ಬೀದಿಗಿಳಿದ ಕಾರ್ಮಿಕರು | Prajavani ಕನಿಷ್ಠ ವೇತನಕ್ಕಾಗಿ ಬೀದಿಗಿಳಿದ ಕಾರ್ಮಿಕರು Published: 15 ಫೆಬ್ರವರಿ 2011, 16:05 IST Updated: 15 ಫೆಬ್ರವರಿ 2011, 16:05 IST ಮಧುಗಿರಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದ್ದು ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸ ಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ತಾಲ್ಲೂಕು ಕಚೇರಿ ಮುಂದೆ ಸಮಾವೇಶಗೊಂಡರು. ಈ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್.ಡಿ ಪಾರ್ವತಮ್ಮ, ದಿನಬಳಕೆ ವಸ್ತುಗಳನ್ನು ರಿಯಾ ಯಿತಿ ದರದಲ್ಲಿ ಪಡಿತರ ಅಂಗಡಿಗಳ ಮೂಲಕ ವಿತರಣೆ ಆಗಬೇಕು ಎಂದು ಆಗ್ರಹಿಸಿದರು. ಕಾರ್ಯದರ್ಶಿ ಮಲ್ಲಮ್ಮ ಮಾತನಾಡಿ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಜೀವವಿಮೆ ಆಧಾರಿತ ಪಿಂಚಣಿ ಜಾರಿ ಮಾಡುವಂತೆ ಒತ್ತಾಯಿಸಿದರು. ಎಲ್.ಎಸ್.ಸುಕನ್ಯಾ, ಜಯಲಕ್ಷ್ಮಿ, ಶಕುಂತಲಾ, ಶೋಭ, ತಾಯಿಮುದ್ದಮ್ಮ, ಜಿ.ಕಮಲಮ್ಮ, ಲಕ್ಷ್ಮಿನರಸಮ್ಮ, ಪುಟ್ಟರಂಗಮ್ಮ, ಸರೋಜಾ, ಗಂಗಮ್ಮ, ನಾಗಲಕ್ಷ್ಮಿ, ಗಂಗಾದೇವಿ, ಬಿ.ಎನ್,ಪಾರ್ವತಮ್ಮ ನೇತೃತ್ವ ವಹಿಸಿದ್ದರು. ಕೊರಟಗೆರೆ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ಕೂಲಿ, ಹಮಾಲಿ ನೌಕರರ ಸೇವಾಶಾಸನ ಹಾಗೂ ಕಲ್ಯಾಣಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸುವಂತೆ ಕಾರ್ಮಿಕರು ಒತ್ತಾಯಿಸಿದರು. ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಂಘಟನೆಗೊಂಡ ಕಾರ್ಮಿಕರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ, ತಾಲ್ಲೂಕು ಕಚೇರಿ ಎದರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ನೌಷಾದ್ ಶೆವಾಗನ್, ಆದಿಲಕ್ಷ್ಮಿ, ಮಹಮದ್ ಭಾಷಾ, ಲಲಿತಮ್ಮ, ವಿಜಯಲಕ್ಷ್ಮಿ, ತಿಮ್ಮಕ್ಕ, ಷಡಾಕ್ಷರರಾಧ್ಯ, ಪಾಂಡು, ನಾಗಭೂಷಣ್ ಮತ್ತಿತರರು ಭಾಗವಹಿಸಿದ್ದರು ತುರುವೇಕೆರೆ ವರದಿ: ಪಟ್ಟಣದಲ್ಲಿ ಸೋಮ ವಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ನಡೆಸಿದ ಪ್ರತಿಭಟನೆ ನಡೆಸಿದರು. ಸಂಘಟನೆಯ ಮುಖಂಡರಾದ ಸತೀಶ್, ಸಿಐಟಿಸಿ ತಾಲ್ಲೂಕು ಸಮಿತಿಯ ಅಧ್ಯಕ್ಷೆ ವಸಂತಮ್ಮ, ಶೋಭಾ, ಕೆಂಪದೇವಮ್ಮ, ರಂಗ ಲಕ್ಷ್ಮೀ, ತುಂಗಭದ್ರಮ್ಮ, ರಂಗನಾಥ್ ಮೊದಲಾದವರು ನೇತೃತ್ವ ವಹಿಸಿದ್ದರು.
2018/12/17 17:45:04
https://www.prajavani.net/article/%E0%B2%95%E0%B2%A8%E0%B2%BF%E0%B2%B7%E0%B3%8D%E0%B2%A0-%E0%B2%B5%E0%B3%87%E0%B2%A4%E0%B2%A8%E0%B2%95%E0%B3%8D%E0%B2%95%E0%B2%BE%E0%B2%97%E0%B2%BF-%E0%B2%AC%E0%B3%80%E0%B2%A6%E0%B2%BF%E0%B2%97%E0%B2%BF%E0%B2%B3%E0%B2%BF%E0%B2%A6-%E0%B2%95%E0%B2%BE%E0%B2%B0%E0%B3%8D%E0%B2%AE%E0%B2%BF%E0%B2%95%E0%B2%B0%E0%B3%81
mC4
ತಮಿಳುನಾಡಿಗೆ ಕಾವೇರಿ ನೀರು: ಪ್ರತಿಭಟನೆ | Prajavani ತಮಿಳುನಾಡಿಗೆ ಕಾವೇರಿ ನೀರು: ಪ್ರತಿಭಟನೆ Published: 05 ಅಕ್ಟೋಬರ್ 2012, 13:15 IST Updated: 05 ಅಕ್ಟೋಬರ್ 2012, 13:15 IST ಬಸವನಬಾಗೇವಾಡಿ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆಯಲ್ಲಿ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ ಮಹಾ ದೇವಪ್ಪ ಮುರಗಿ ಅವರಿಗೆ ಮನವಿ ಸಲ್ಲಿಸಿದರು. ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪು ಗಬ್ಬೂರ ಮಾತನಾಡಿ, ಕಾವೇರಿ ನದಿ ನೀರು ತಮಿಳುನಾಡಿಗೆ ಬಿಟ್ಟಿರುವ ಕ್ರಮವನ್ನು ಸಂಘಟನೆ ಖಂಡಿಸುತ್ತದೆ. ಕಾವೇರಿ ನೀರು ಬಿಡುವುದನ್ನು ತಕ್ಷಣವೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಬರಗಾಲ ಬಿದ್ದಿರುವುದರಿಂದ ರಾಜ್ಯದ ರೈತರು ತೊಂದರೆ ಅನುಭವಿ ಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳಿಗೆ ನೀರು ಬಿಡುವುದು ಸರಿಯಲ್ಲ. ಶೀಘ್ರವೇ ಕಾವೇರಿ ನೀರು ಬಿಡುವುದನ್ನು ನಿಲ್ಲಿಸದೇ ಹೋದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮಂಜು ಗಬ್ಬೂರ, ದಾದಾಗೌಡ ಬಿರಾದಾರ, ಪ್ರವೀಣ ಚಿಕ್ಕೊಂಡ, ಬಿ.ಬಿ.ಇಂಗಳಗಿ, ಪರಶು ರಾಮ ಗಂಜಾಳ, ಬಸು ಕಂಚ್ಯಾಣಿ, ಸುರೇಶ ರಾಯಗೊಂಡ, ಶಂಕರಗೌಡ ಪಾಟೀಲ, ಶಾಂತಗೌಡ ಸಾಸನೂರ, ವಿಕಾಸ ಜೋಗಿ, ಸಿದ್ಧನಗೌಡ ಪಾಟೀಲ, ಶರಣು ಹೂಗಾರ ಮುಂತಾದವರು ಭಾಗವಹಿಸಿದ್ದರು.
2019/01/23 07:31:56
https://www.prajavani.net/article/%E0%B2%A4%E0%B2%AE%E0%B2%BF%E0%B2%B3%E0%B3%81%E0%B2%A8%E0%B2%BE%E0%B2%A1%E0%B2%BF%E0%B2%97%E0%B3%86-%E0%B2%95%E0%B2%BE%E0%B2%B5%E0%B3%87%E0%B2%B0%E0%B2%BF-%E0%B2%A8%E0%B3%80%E0%B2%B0%E0%B3%81-%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%AD%E0%B2%9F%E0%B2%A8%E0%B3%86-0
mC4
ಪೌರತ್ವ ಕಾಯ್ದೆ ಕಿಚ್ಚು: ಸಿಎಂ ನಿವಾಸಕ್ಕೆ ಅಧಿಕಾರಿಗಳ ಸಾಲುಸಾಲು ಭೇಟಿ | CM BS.Yadiyurappa Collect The Report From Senior Officers Of Situation - Kannada Oneindia 17 min ago ಅಂಗೈ ತೋರಿಸಿ ಹಣ ಪಾವತಿಸಿ: ಅಮೆಜಾನ್‌ನಿಂದ ಹೊಸ ತಂತ್ರಜ್ಞಾನದ ಬಳಕೆ 50 min ago ಮುಂಬೈನ ಚೆಂಬೂರ್ ರೈಲ್ವೆ ನಿಲ್ದಾಣದ ಬಳಿ ಅಗ್ನಿ ಅವಘಡ ಪೌರತ್ವ ಕಾಯ್ದೆ ಕಿಚ್ಚು: ಸಿಎಂ ನಿವಾಸಕ್ಕೆ ಅಧಿಕಾರಿಗಳ ಸಾಲುಸಾಲು ಭೇಟಿ | Published: Thursday, December 19, 2019, 19:23 [IST] ಬೆಂಗಳೂರು, ಡಿಸೆಂಬರ್.19: ರಾಜ್ಯದಲ್ಲೂ ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿ ಗಂಟೆ ಗಂಟೆಗೂ ಆತಂಕ ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಮಂಗಳೂರು, ಬೆಂಗಳೂರಿನಲ್ಲಿ ಹೋರಾಟ ತೀವ್ರತೆ ಪಡೆದುಕೊಳ್ಳುತ್ತಿದ್ದು, ಪರಿಸ್ಥಿತಿ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಸಿಎಂ ನಿವಾಸಕ್ಕೆ ಧಾವಿಸಿ ಬರುತ್ತಿದ್ದಾರೆ. ಪೌರತ್ವ ಕಾಯ್ದೆ: ಬಂಧಿತರಿಗೆ ಬಿರಿಯಾನಿ, ಪ್ರತಿಭಟಿಸಿದವರಿಗೆ ಕಡಲೆಪುರಿ ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾಗೆ ಗುಪ್ತಚರ ಇಲಾಖೆ ಎಡಿಜಿಪಿ ಕಮಲ್ ಪಂಥ್ ಬೆಳಗ್ಗೆಯಿಂದ ಮೂರು ಬಾರಿ ಭೇಟಿ ನೀಡಿದರು. ರಾಜ್ಯದಲ್ಲಿ ಆಗುತ್ತಿರುವ ಪ್ರತಿಯೊಂದು ಬೆಳವಣಿಗೆ, ಸ್ಥಿತಿಗತಿಯ ಬಗ್ಗೆ ಮುಖ್ಯಮಂತ್ರಿಯವರಿಗೆ ಸಂಪೂರ್ಣ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಕ್ಷಣಕ್ಷಣದ ಮಾಹಿತಿ ಸಂಗ್ರಹಿಸುತ್ತಿರುವ ಸಿಎಂ: ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಯ ಬಿಸಿ ಹೇಗಿದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಯಾವ ರೀತಿ ಕ್ರಮ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ವರದಿ ತಯಾರಿಸಿ ಸಿಎಂಗೆ ನೀಡಲಾಗುತ್ತಿದೆ. ಇನ್ನು, ಕಮಲ್ ಪಂತ್ ಬೆನ್ನೆಲ್ಲೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತೆರಳಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂನ್ನು ಭೇಟಿ ಮಾಡಿದ ಹಿರಿಯ ಅಧಿಕಾರಿ ಬೆಂಗಳೂರು ಪ್ರತಿಭಟನೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಕೇಂದ್ರ ಸರ್ಕಾರದ 'ಪೌರ','ತತ್ವ'ದ ವಿರುದ್ಧ ಕೆರಳಿದ್ದಕ್ಕೆ ಖಾಕಿಪ್ರಹಾರ ಇದರ ಮಧ್ಯೆ ರಾಜ್ಯದ ಮುಸ್ಲಿಂ ಧರ್ಮಗುರುಗಳ ನಿಯೋಗವೂ ಕೂಡಾ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದರು. ಕರ್ನಾಟಕ ಮುಸ್ಲಿಂ ಜಮಾತ್ ನ ಸದಸ್ಯರಿಂದ ಬಿಎಸ್ ವೈರನ್ನು ಭೇಟಿ ಮಾಡಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚಿಸಿದರು. ರಾಜ್ಯದಲ್ಲಿ ಕಾಯ್ದೆ ಜಾರಿಗೊಳಿಸುವ ಮುನ್ನ ಕಾಯ್ದೆಯಲ್ಲಿರುವ ಸಂಶಯಗಳನ್ನು ನಿವಾರಿಸುವಂತೆ ಮನವಿ ಮಾಡಿಕೊಂಡರು. citizenship amendment act protest students curfew central government karnataka ಪ್ರತಿಭಟನೆ ವಿದ್ಯಾರ್ಥಿಗಳು ನಿಷೇಧಾಜ್ಞೆ ಕೇಂದ್ರ ಸರ್ಕಾರ ಕರ್ನಾಟಕ Protest Against Citizenship Amendment Act In Karnataka. CM B.S.Yadiyurappa Collect The Report From Senior Officers Of Situation.
2020/10/01 02:50:21
https://kannada.oneindia.com/news/bengaluru/cm-bs-yadiyurappa-collect-the-report-from-senior-officers-of-situation-181541.html
mC4
ನಡುವೆ ಸಭೆಯಲ್ಲಿ ಹಿರಿಯ ನಡುವೆ ಸಭೆಯಲ್ಲಿ ಹಿರಿಯ Posted on 08.03.2019, 15:10 By Goodsite ಏಕೆ ನಡುವೆ ಸಭೆಯಲ್ಲಿ ಹಿರಿಯ ನಾಗರಿಕರಿಗೆ: ಇದು ಏನು ಎಂದು ಸೆಟ್ ನಮಗೆ ಹೊರತುಪಡಿಸಿ ಇತರ ಡೇಟಿಂಗ್ ಸೈಟ್ಗಳು? ನಡುವೆ ಸಭೆಯಲ್ಲಿ ಹಿರಿಯ ಔಟ್ ನಿಂತಿದೆ ಮೂಲಕ ತನ್ನ ವ್ಯವಸ್ಥೆ ಸಭೆಯಲ್ಲಿ, ಕೇವಲ ಪೂರೈಸಲು ಸಾಹಸ, ಆದರೆ ನೀವು ಒಂದು ಸ್ನೇಹಿತ (ಇ) ಎಸ್. ಏಕೆಂದರೆ ಮಹಾನ್ ಪ್ರೀತಿ ಕಥೆಗಳು ಪ್ರಾರಂಭಿಸಿದ ಒಂದು ಸುಂದರ ಕಥೆ ಸ್ನೇಹ!' ನೀವು ಮಾಡಬಹುದು: — ನೋಡಿ ಪ್ರೊಫೈಲ್ ವಿರುದ್ಧ ಲೈಂಗಿಕ, ಆದರೆ ಅದೇ ಲಿಂಗದ. ನಡುವೆ ಹಿರಿಯ ನಾಗರಿಕರಿಗೆ ವಿಸ್ತರಿಸಿತು ನಿಮ್ಮ ಪದರುಗಳು, ಮತ್ತು ಮಾಡಲು ಅನುಮತಿಸುತ್ತದೆ ಸಭೆಗಳು ಯುರೋಪಿಯನ್ ಯೂನಿಯನ್ — ಮಾಡಲು ಬಯಸುವ ಒಂದು ಟ್ರಿಪ್, ಆದರೆ ನೀವು ಕೊರತೆ ಪ್ರೇರಣೆ ಮಾತ್ರ ಅದನ್ನು (ಇ)? ಹೇಗೆ ಒಬ್ಬ ವ್ಯಕ್ತಿ ಷೇರುಗಳನ್ನು ಅದೇ ಆಸಕ್ತಿಗಳು ನಿಮ್ಮದೇ! ರಚಿಸಲು ನಿಮ್ಮ ಬ್ಲಾಗ್: ನೀವು ನಿಮ್ಮ ಜಾಹೀರಾತುಗಳು ನಿರ್ವಹಿಸಿ, ಪಾಲು, ನಿಮ್ಮ ಭಾವನೆಗಳನ್ನು ರಚಿಸುವ ಮೂಲಕ ನಿಮ್ಮ ಸ್ವಂತ ಬ್ಲಾಗ್! ನಡುವೆ ಸಭೆಯಲ್ಲಿ ಹಿರಿಯ ಹೋಗುತ್ತದೆ ಮತ್ತಷ್ಟು! ಇದು ಅನುಮತಿಸುತ್ತದೆ ವಿಸ್ತರಿಸಲು ನಿಮ್ಮ ವ್ಯಾಪ್ತಿ ಅವಕಾಶ, ನೀವು ನಿಮ್ಮನ್ನು ವ್ಯಕ್ತಪಡಿಸಲು ಮೀರಿ ಒಂದು ಸರಳ 'ನನ್ನ ಬಗ್ಗೆ'! — ಬರೆಯಲು ಒಂದು ವಿಷಯವನ್ನು ನಿಮ್ಮ ಭಾವನೆಗಳನ್ನು ಉದಾ: ನನ್ನ ಪ್ರಯಾಣ, ನನ್ನ ಕಲಾಕೃತಿಗಳನ್ನು, ನನ್ನ ಪ್ರವಾಸ. ಸಹಾಯಕ ನಿಮ್ಮ ವಿಷಯವನ್ನು ಫೋಟೋಗಳನ್ನು ಖಾಸಗಿ, ಏಕ (ರು) ನಿಮ್ಮ ಸ್ನೇಹಿತ (ಗಳು) ಸಂಪರ್ಕಿಸಿ ಇರಬಹುದು, ಅಥವಾ ಇದು ಸಾರ್ವಜನಿಕ ಮತ್ತು ಹಂಚಿಕೊಳ್ಳಲು ಆಯ್ಕೆ ಅವುಗಳನ್ನು ಎಲ್ಲಾ ಸದಸ್ಯರು. ನಿರ್ಲಕ್ಷಿಸದಿರಿ ಈ ಶಕ್ತಿಶಾಲಿ ಸಾಧನ — ಬ್ಲಾಗ್ ಬರೆಯುವ ಬೆಳವಣಿಗೆ ಮೇಲೆ ನಿಮ್ಮ ಪ್ರೊಫೈಲ್ ಮತ್ತು ಮಹತ್ತರವಾಗಿ ಯಶಸ್ಸಿನ ನಿಮ್ಮ ಅವಕಾಶಗಳನ್ನು ಹೆಚ್ಚಿಸುವ. ಒಂದು ಬ್ಲಾಗ್ ನಿರ್ವಹಿಸಲು ಅನುಮತಿಸುತ್ತದೆ ನಿಮ್ಮ ಸ್ನೇಹಿ ಸಂಬಂಧಗಳು, ಆದರೆ ಅವಕಾಶ ನಿಮ್ಮ ಸಂಪರ್ಕಗಳನ್ನು ನೋಡಿ 'ನಿಮ್ಮ ಪರಿಸರ'. ಪರಿಸರವನ್ನು ಇದು ಮೂಲಕ, ಮೋಡಿ ಆಗಿದೆ ಅನುಮತಿಸುತ್ತದೆ ಏಕೆಂದರೆ ನೀವು ಬಹಿರಂಗಪಡಿಸಲು ಒಂದು ಭಾಗ, ನಿಮ್ಮ 'ಸೀಕ್ರೆಟ್ ಗಾರ್ಡನ್'. ಇತರ ಸದಸ್ಯರು ಓದಬಹುದು ಬರಹಗಳು, ನಿಮ್ಮ ಬ್ಲಾಗ್ ಮತ್ತು ಭಾಗವಹಿಸಲು ಕಾಮೆಂಟ್ ಅಥವಾ ವ್ಯಕ್ತಪಡಿಸಿ ತಮ್ಮ ಸ್ವಂತ ಅಭಿಪ್ರಾಯಗಳನ್ನು ವಿಷಯದ ಮೇಲೆ, ಪ್ರೇರೇಪಿಸಿತು ಸಾಮಾನ್ಯವಾಗಿ ಬಿಸಿ ಚರ್ಚೆಗಳು. ಇದು ನಿಮ್ಮ ಸ್ವಂತ ಮಿನಿ ವೇದಿಕೆ ಅಲ್ಲಿ ನೀವು ಪೂರ್ಣ ನಿಯಂತ್ರಣ ನಿಮ್ಮ ವಿಷಯಗಳ ಸೇರಿದಂತೆ, ಮಿತವಾಗಿ, ಅಳಿಸಲಾಗುತ್ತಿದೆ ಕಾಮೆಂಟ್ಗಳನ್ನು ಸೂಕ್ತವಲ್ಲದ. ನಡುವೆ ಸಭೆಯಲ್ಲಿ ಹಿರಿಯ ನಾಗರಿಕರು, ವಾಸ್ತವವಾಗಿ ಸಹ ನೀವು: ಸಂವಹನ ಇಲ್ಲದೆ ಮಿತವಾಗಿ ಮತ್ತು ನಿಮ್ಮ ಫೋಟೋಗಳನ್ನು ಹಂಚಿಕೊಳ್ಳಲು ಮೂಲಕ ಚಾಟ್ ಸಮಗ್ರ ಮತ್ತು ಅರ್ಥಗರ್ಭಿತ! — ನಿಮ್ಮ ಸ್ವಂತ ರಚಿಸಲು ಸಲೊನ್ಸ್ನಲ್ಲಿನ, ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ ನಿಮ್ಮ ಸ್ನೇಹಿತರ ಗುಂಪು (ಇ) ಎಸ್. ನಿಮ್ಮ ಫೋಟೋಗಳನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ಯಾವುದೇ ಮಿತಿಗಳನ್ನು ರಚಿಸಿ ಮತ್ತು ಪ್ರಕಟಣೆಗಳು ಕಳುಹಿಸಲು ಪ್ರಸಾರ ಸಂಪರ್ಕ ಸದಸ್ಯರು ಅಥವಾ ಪ್ರಕಾರ ಪಟ್ಟಿ, ನೀವು ಹೊಂದಿರುವ ಈ ಹಿಂದೆ ಆಯ್ಕೆ ಮಾಡಲಾದ! ಭದ್ರತೆ: ನಾವು ಬಯಸುವ ಎಂದು, ನೀವು ಸಂಪೂರ್ಣವಾಗಿ ಆನಂದಿಸಿ ನಿಮ್ಮ ಅನುಭವವನ್ನು ನಮ್ಮ ಸೈಟ್ನಲ್ಲಿ ನಡುವೆ ಸಭೆಯಲ್ಲಿ ಹಿರಿಯ. ಈ ಏಕೆ ನಾವು ಒಂದು ನೀತಿಸಂಹಿತೆಗಳನ್ನು ಮತ್ತು ಪ್ರೋತ್ಸಾಹಿಸಲು ಎಲ್ಲಾ ನಮ್ಮ ಸದಸ್ಯರು ಗೌರವ ಇದು. ನಡುವೆ ಸಭೆಯಲ್ಲಿ ಹಿರಿಯ ಸುರಕ್ಷಿತ ವಾತಾವರಣವನ್ನು ಒದಗಿಸುತ್ತದೆ ಮತ್ತು ಮಧ್ಯಮ ಲೈವ್ ಪ್ರತಿ ನೋಂದಣಿ ಮೌಲ್ಯಾಂಕನ ನಮ್ಮ ತಂಡವು ಮೊದಲು ತಲುಪಬಹುದಾಗಿದೆ ಆನ್ಲೈನ್! ಹಾಗೆಯೇ ಫೋಟೋಗಳನ್ನು, ಬ್ಲಾಗ್, ಕಾಮೆಂಟ್ಗಳನ್ನು. '
2019/12/11 17:33:36
https://kn.videochat.cafe/%E0%B2%A8%E0%B2%A1%E0%B3%81%E0%B2%B5%E0%B3%86-%E0%B2%B8%E0%B2%AD%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B9%E0%B2%BF%E0%B2%B0%E0%B2%BF%E0%B2%AF-%E0%B2%A8%E0%B2%A1%E0%B3%81
mC4
ಕೊಪ್ಪಳ; ತನ್ನ ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಮಾಜಿ ಸಿಎಂ ಅಭಿಮಾನಿ! | Former CM fan who named his child Siddaramaiah– News18 Kannada ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮಾಡಿರುವ ಜನರ ಕಲ್ಯಾಣ ಯೋಜನೆಗಳಿಂದ ಅವರ ಅಭಿಮಾನಿಗಳು ಹಲವರು ಇದ್ದಾರೆ. ಸಿದ್ದರಾಮಯ್ಯ ನವರ ಮೇಲಿನ ಅಭಿಮಾನವನ್ನು ಈ ರೀತಿಯಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಂಜುನಾಥನ ಸ್ನೇಹಿತರು ಹೇಳಿದ್ದಾರೆ. ಮಗುವಿನ ನಾಮಕರಣ ಕಾರ್ಯಕ್ರಮ. Last Updated : June 24, 2021, 07:20 IST ಕೊಪ್ಪಳ: ಕಾಂಗ್ರೆಸ್ ಪಕ್ಷದಲ್ಲಿ ಈಗ ಮುಂದಿನ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ತಾರೆ ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ನಾಡಿನ ಜನತೆ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ನವರನ್ನು ಆರಾಧಿಸುತ್ತಿದ್ದಾರೆ. ತಮ್ಮ ನಾಯಕರಾದ ಸಿದ್ದರಾಮಯ್ಯ ಹೆಸರನ್ನು ತಮ್ಮ ಮಗನಿಗೆ ನಾಮಕರಣ ಮಾಡಿ ಅಭಿಮಾನ ಮೆರೆದಿದ್ದಾರೆ. ಸಿದ್ದರಾಮಯ್ಯ ನಾಡಿನ ಜನ ಸಾಮಾನ್ಯರಲ್ಲಿ ಮನೆ ಮಾತಾಗಿರುವುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಸಂಭ್ರಮ ಮನೆ ಮಾಡಿತ್ತು, ಹುಟ್ಟಿದ ಮಗನಿಗೆ ನಾಮಕರಣ ಮಾಡುವ ಸಂದರ್ಭ, ತೊಟ್ಟಿಲಿನಲ್ಲಿ 21 ದಿನದ ಮಗನನ್ನು ಹಾಕಿ ಮಗುವಿನ ಅತ್ತೆ ಮಗುವಿನ ಕಿವಿಯಲ್ಲಿ ಮೂರು ಬಾರಿ ಸಿದ್ದರಾಮಯ್ಯ, ಸಿದ್ದರಾಮಯ್ಯ, ಸಿದ್ದರಾಮಯ್ಯ ಎಂದು ಹೇಳಿ ನಾಮಕರಣ ಮಾಡಿದ್ದು, ಇಡೀ ಜೀವನ ಈ ಮಗು ಇದೇ ಹೆಸರಿನಿಂದ ಕರೆಸಿಕೊಳ್ಳುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟ್ಟಾಭಿಮಾನಿಯಾಗಿರುವ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರದ ರೈತ ಮಂಜುನಾಥ ಹಾಗು ಪತ್ನಿ ನೇತ್ರಾವತಿಯವರ ಮೊದಲು ಮಗುವಿಗೆ ಸಿದ್ದರಾಮಯ್ಯ ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದರು. ಮಂಜುನಾಥನಿಗೆ ಸಿದ್ದರಾಮಯ್ಯ ಬಗ್ಗೆ ಎಲ್ಲಿಲ್ಲದ ಅಭಿಮಾನ, ಅವರ ಅನ್ನಭಾಗ್ಯ, ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳಿಂದಾಗಿ ಅವರ ಅಭಿಮಾನಿಯಾಗಿರುವ ಅವರು ತಮಗೆ ಮಗನಿಗೆ ಸಿದ್ದರಾಮಯ್ಯ ಎಂಬ ಹೆಸರಿಡಬೇಕೆಂದು ನಿಶ್ಚಿಯಿಸಿಕೊಂಡಿದ್ದು, ಅದರಂತೆ ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ. ಸಿದ್ದರಾಮಯ್ಯ ಎಂಬ ಹೆಸರನ್ನು ನಾಮಕರಣ ಮಾಡಿದ ಮಂಜುನಾಥ ದಂಪತಿಗಳು ಇಂದು ಬಂದು ಭಾಂದವರಿಗೆ ಭರ್ಜರಿ ಊಟ ಹಾಕಿಸಿದರು, ಸಾಮಾನ್ಯವಾಗಿ ಬಹುತೇಕರು ತಮ್ಮ ಮಕ್ಕಳಿಗೆ ದೇವರು ಹೆಸರಿಡುತ್ತಾರೆ. ಇನ್ನೂ ಕೆಲವರು ಮಾತಿಗೆ ಇಂಥವರ ಹೆಸರು ನಮ್ಮ ಮಕ್ಕಳಿಗೆ ಹೆಸರಿಡಬೇಕು ಎನ್ನುತ್ತಾರೆ ಅದೇ ರೀತಿ ಮಂಜುನಾಥ ತಮ್ಮ ಮೊದಲು ಮಗನಿಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ. ಸಿದ್ದರಾಮಯ್ಯಗೂ ಕೊಪ್ಪಳ ಜಿಲ್ಲೆಗೆ ಮೊದಲಿನಿಂದಲೂ ಬಾಂಧವ್ಯವಿದೆ, 1991 ರಲ್ಲಿ ಜನತಾದಳದಿಂದ ಕೊಪ್ಪಳ ಲೋಕಸಭೆಗೆ ಸ್ಪರ್ಧಿಸಿದ್ದರು, ಆದರೆ ಆಗ ಅವರು ಇಲ್ಲಿ ಸೋಲು ಅನುಭವಿಸಿದರೂ ಆಗಾಗ ಕೊಪ್ಪಳಕ್ಕೆ ಬರುವ ಸಿದ್ದರಾಮಯ್ಯ ಮೊದಲಿ ನಿಂದಲೂ ಜಿಲ್ಲೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಲೆ ಇದ್ದಾರೆ. ಈ ಭಾಗಕ್ಕೆ ಬಂದಾಗ ತಾವು ಇಲ್ಲಿ ಸ್ಪರ್ಧಿಸಿದ್ದರ ಬಗ್ಗೆ ಹೇಳುತ್ತಲೆ ಇರುತ್ತಾರೆ. ಅಲ್ಲದೆ ಸಿದ್ದರಾಮಯ್ಯ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಯೂ ಹಿಂದೆ ನಡೆದಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೀಡಿದ ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್, ಕ್ಷೀರಭಾಗ್ಯ, ಶಾದಿ ಭಾಗ್ಯಗಳಿಂದ ಸಾಕಷ್ಟು ಬಡವರ ಪರ ಯೋಜನೆ ರೂಪಿಸಿದ್ದಾರೆ ಎನ್ನುವ ಕಾರಣಕ್ಕೆ ನಾಡಿನಲ್ಲಿ ಅವರದೇ ಆದ ಫ್ಯಾನ ಫಾಲೋವರ್ ಇದೆ, ಇಂಥ ಫಾಲೋವರ್ ಗಳಲ್ಲೊಬ್ಬರಾದ ಮಂಜುನಾಥ ತಮ್ಮ ಅಭಿಮಾನಕ್ಕಾಗಿ ಮಗನಿಗೆ ಸಿದ್ದರಾಮಯ್ಯ ಹೆಸರಿಟ್ಟಿದ್ದಾರೆ. ನಾಮಕರಣಗೊಂಡ ಮಗ ಮುಂದಿನ ಸಿದ್ದರಾಮಯ್ಯ ಹೆಸರು ಮುಂದುವರಿಯುವಂತೆ ಮಾಡಿದೆ.
2021/10/21 22:01:34
https://kannada.news18.com/news/district/former-cm-fan-who-named-his-child-siddaramaiah-sbr-mak-583269.html
mC4
ವ್ಯಾಲೆಂಟೆನ್ಸ್ ಡೇ ಸೆಲೆಬ್ರೇಷನ್‍ಗೆ ಜೋಡಿಯಿಲ್ಲದ ಒಂಟಿ ಜೀವಿಗಳೇ ಸ್ಟ್ರಾಂಗ್ ಕಣ್ರೀ | Being single has many health benefits Bangalore, First Published 14, Feb 2020, 3:31 PM ಪ್ರೇಮಿಗಳ ದಿನದಂದು ಒಂಟಿ ಒಂಟಿಯಾಗಿರೋದು ಬೋರೋ ಬೋರೋ ಎಂದು ಹಾಡುತ್ತ,ಜಂಟಿ ಖಾತೆ ಒಪನ್ ಮಾಡ್ತಿರೋ ಸ್ನೇಹಿತರನ್ನು ಕಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿರುವ ಒಂಟಿ ಜೀವ ನೀವಾಗಿದ್ರೆ, ಖುಷಿಪಡಲು ಇಲ್ಲೊಂದು ಕಾರಣವಿದೆ. ಸಿಂಗಲ್ ಆಗಿರೋದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಕಣ್ರೀ ಎನ್ನುತ್ತೆ ಮನೋವಿಜ್ಞಾನ. ಎಷ್ಟ್ ಕಾಳ್ ಹಾಕಿದ್ರೂ ಒಂದ್ ಹಕ್ಕಿನೂ ಬುಟ್ಟಿಗೆ ಬಿದ್ದಿಲ್ಲ ಎಂದು ನೊಂದುಕೊಳ್ಳುತ್ತ, ವ್ಯಾಲೆಂಟೆನ್ಸ್ ಡೇ ಮತ್ತಿನಲ್ಲಿ ತೇಲಾಡುತ್ತಿರುವ ಸಿಂಗಲ್‍ನಿಂದ ಡಬಲ್‍ಗೆ ಪ್ರಮೋಷನ್ ಪಡೆದ ಸ್ನೇಹಿತರನ್ನು ನೋಡಿ ಹೊಟ್ಟೆಯುರಿ ಪಟ್ಟುಕೊಳ್ಳುತ್ತಿದ್ದೀರಾ? ಡೋಂಟ್ ವರಿ, ಬಿಟ್ಹಾಕಿ.ಒಂಟಿಯಾಗಿರೋದು ಬೋರ್ ಆದ್ರೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತೆ ವೈದ್ಯವಿಜ್ಞಾನ. ಅರೇ,ಒಂಟಿಯಾಗಿರುವುದಕ್ಕೂ,ಆರೋಗ್ಯಕ್ಕೂ ಏನ್ ಸಂಬಂಧ ಅಂತೀರಾ? ಸಂಬಂಧವಿದೆ ಎನ್ನುತ್ತಾರೆ ತಜ್ಞರು.ಸಿಂಗಲ್ ಆಗಿರೋದ್ರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆಯಂತೆ. ಕೆಲವರು ಬಟ್ಟೆ ಬದಲಾಯಿಸಿದಷ್ಟೇ ಸುಲಭವಾಗಿ ಸಂಗಾತಿಯನ್ನು ಬದಲಾಯಿಸುತ್ತ ಪ್ರತಿ ವ್ಯಾಲೆಂಟೆನ್ಸ್ ಡೇಯನ್ನು ಹೊಸ ಪ್ರೇಮಿಯೊಂದಿಗೆ ಸಂಭ್ರಮಿಸುತ್ತಾರೆ.ಇವರು ಒಂದು ದಿನವೂ ಒಂಟಿಯಾಗಿ ಇರುವುದಿಲ್ಲ.ಇಂಥವರನ್ನು ರಸಿಕರ ರಾಜ,ರೊಮ್ಯಾಂಟಿಕ್ ಹೀರೋ, ಫ್ಲರ್ಟ್ ಎಂದೆಲ್ಲ ಕರೆಯುತ್ತೇವೆ. ಅಷ್ಟೇ ಅಲ್ಲ,ಈ ರೀತಿ ಹೊಸ ಹೊಸ ಹಕ್ಕಿಯನ್ನು ಬುಟ್ಟಿಗೆ ಹಾಕಿಕೊಳ್ಳುವ ಇವರ ಟ್ಯಾಲೆಂಟ್ ನೋಡಿ ಹೊಟ್ಟೆಕಿಚ್ಚು ಪಡುತ್ತೇವೆ. ಆದರೆ,ಮನೋತಜ್ಞರ ಪ್ರಕಾರ ಇಂಥವರ ಹಕೀಕತ್ ಬೇರೆಯೇ ಇದೆ.ಇವರಿಗೆ ಒಂಟಿ ಒಂಟಿ ಆಗಿರುವುದು ಬೋರ್ ಮಾತ್ರವಲ್ಲ,ಸಿಕ್ಕಾಪಟ್ಟೆ ಭಯ ಹುಟ್ಟಿಸುವ ಸಂಗತಿಯೂ ಆಗಿದೆಯಂತೆ. ಒಂಟಿಯಾಗಿರುವುದು ತಮ್ಮ ಜೀವನದ ಅತ್ಯಂತ ಕೆಟ್ಟ ಘಳಿಗೆಯೆಂದೇ ಭಾವಿಸುವ ಇವರು, ಸದಾ ಸಂಗಾತಿಯೊಂದಿಗಿರಲು ಬಯಸುತ್ತಾರೆ. ಸಂಗಾತಿ ಜೊತೆಗಿದ್ರೇನೆ ಇಂಥವರ ಮನಸ್ಸಿಗೆ ನೆಮ್ಮದಿ.ಇದೇ ಕಾರಣಕ್ಕೆ ಇವರು ಮಕರಂಧ ಹೀರಲು ಹೂವಿನಿಂದ ಹೂವಿಗೆ ಹಾರುವ ದುಂಬಿಯಂತೆ ಒಂದು ಸಂಬಂಧದಿಂದ ಮತ್ತೊಂದು ಸಂಬಂಧಕ್ಕೆ ಜಂಪ್ ಮಾಡುತ್ತಲೇ ಇರುತ್ತಾರೆ.ಇವರಿಗೆ ಯಾರಾದರೂ ನನ್ನನ್ನು ಬಯಸಬೇಕು,ನನಗಾಗಿಯೇ ಅವರ ಹೃದಯ ಮಿಡಿಯುತ್ತಿರಬೇಕು ಎಂಬ ಬಯಕೆ. ಇವರು ಸಂಗಾತಿ ದಿನದ 24 ಗಂಟೆಯೂ ತನ್ನನ್ನು ಪ್ರೀತಿಸುವ ಜೊತೆಗೆ ಇಷ್ಟಕಷ್ಟಕ್ಕೆ ಗಮನ ನೀಡಬೇಕು ಎಂದು ಆಶಿಸುತ್ತಾರೆ.ಇಂಥ ಆಲೋಚನೆ, ವರ್ತನೆ ಮನೋವಿಜ್ಞಾನದ ಪ್ರಕಾರ ಅತ್ಯಂತ ಅಪಾಯಕಾರಿ.ಇಂಥ ಮನಸ್ಥಿತಿಯಿಂದಾಗಿ ವ್ಯಕ್ತಿ ತನ್ನ ಅಭಿರುಚಿಗೆ ಹೊಂದದ ರಾಂಗ್ ಪರ್ಸನ್ ಜೊತೆಗೆ ಸಂಬಂಧ ಬೆಳೆಸುವ ಸಾಧ್ಯತೆಯಿದೆ.ಇನ್ನು ಇಂಥ ವ್ಯಕ್ತಿಗಳ ಈ ವೀಕ್‍ನೆಸ್ ಅನ್ನೇ ಕೆಲವರು ಬಂಡವಾಳ ಮಾಡಿಕೊಂಡು ಅವರ ಭಾವನೆಗಳ ಜೊತೆಗೆ ಆಟವಾಡಬಹುದು.ಇಕ್ಕಟ್ಟಿಗೆ ಅಥವಾ ತೊಂದರೆಗೆ ಸಿಲುಕಿಸುವ ಸಾಧ್ಯತೆಯೂ ಇದೆ. ಇಂಥ ವ್ಯಕ್ತಿಗಳಿಗೆ ತಾವು ಮಾಡುವ ಪ್ರತಿ ಕೆಲಸಕ್ಕೂ ಸಂಗಾತಿಯ ಸಮ್ಮತಿ ಮುದ್ರೆ ಅಗತ್ಯ. ಅವರು ಧರಿಸುವ ಬಟ್ಟೆಯಿಂದ ಹಿಡಿದು ಸಿದ್ಧಪಡಿಸುವ ಅಡುಗೆ ತನಕ ಪ್ರತಿಯೊಂದನ್ನು ಸಂಗಾತಿ ಹಾಡಿ ಹೊಗಳಿದರೇನೆ ಇವರಿಗೆ ನೆಮ್ಮದಿ. ಇಂದು ಯಾವ ಡ್ರೆಸ್ ಹಾಕೋದು ಎಂಬಲ್ಲಿಂದ ಹಿಡಿದು ಹೋಟೆಲ್‍ನಲ್ಲಿ ಫುಡ್ ಆರ್ಡರ್ ಮಾಡುವ ತನಕ ಪ್ರತಿ ವಿಷಯಕ್ಕೂ ಇವರು ಸಂಗಾತಿಯನ್ನು ಅವಲಂಬಿಸುತ್ತಾರೆ. ಈ ರೀತಿ ಚಿಕ್ಕಪುಟ್ಟ ವಿಷಯಗಳಿಗೆ ಸಂಬಂಧಿಸಿ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಇನ್ನೊಬ್ಬರ ಸಮ್ಮತಿಯನ್ನು ನಿರೀಕ್ಷಿಸುವ ಗುಣ ಅತ್ಯಂತ ಅಪಾಯಕಾರಿ ಎನ್ನುತ್ತಾರೆ ಮನೋವೈದ್ಯರು. ಇಂಥ ಪರಾವಲಂಬನೆ ಗುಣದ ಕಾರಣಕ್ಕೇ ಸಂಗಾತಿ ತೊರೆದು ಹೋಗಬಹುದು.ಅಲ್ಲದೆ, ಒಂದು ಸಂಬಂಧವನ್ನು ಅತಿಯಾಗಿ ಅವಲಂಬಿಸುವುದರಿಂದ ಸಂಗಾತಿ ಬಿಟ್ಟು ದೂರವಾದ ತಕ್ಷಣ ಸ್ವತಂತ್ರವಾಗಿ ಬದುಕಲು ಕಷ್ಟವಾಗಬಹುದು. ಬದುಕಿನಲ್ಲಿ ಸದಾ ಜೋಡಿಯೊಂದನ್ನು ಬಯಸುವ ವ್ಯಕ್ತಿಗಳಿಗೆ ಎಷ್ಟೆಲ್ಲ ತಾಪತ್ರಯಗಳು ಎದುರಾಗಬಹುದು ಎಂಬುದು ಗೊತ್ತಾಯ್ತಲ್ಲ. ಅದೇ ಸಿಂಗಲ್ ಆಗಿದ್ರೆ ಇಂಥ ಯಾವುದೇ ತಲೆನೋವು ಇಲ್ಲ ಎನ್ನುತ್ತಾರೆ ಮನೋತಜ್ಞರು.ಸಿಂಗಲ್ ಆಗಿರೋದ್ರಿಂದ ಎಲ್ಲ ಕೆಲಸಗಳನ್ನು ಅವರೇ ಸ್ವತಂತ್ರವಾಗಿ ಮಾಡುತ್ತಾರೆ.ನಿರ್ಧಾರಗಳನ್ನು ಕೈಗೊಳ್ಳುವಾಗಲು ಸ್ವತಂತ್ರವಾಗಿ ಯೋಚಿಸಿ ಮುಂದುವರಿಯುತ್ತಾರೆ.ಇದರಿಂದ ಸಹಜವಾಗಿಯೇ ಇವರಲ್ಲಿ ಪ್ರೌಢಿಮೆ,ಆತ್ಮವಿಶ್ವಾಸ,ಛಲ ಎಲ್ಲವೂ ಬೆಳೆಯುತ್ತದೆ.ಜೀವನದಲ್ಲಿ ಕಷ್ಟಗಳು ಎದುರಾದಾಗ ಹೇಗೆ ಫೇಸ್ ಮಾಡ್ಬೇಕು ಎಂಬುದು ಇವರಿಗೆ ತಿಳಿದಿರುತ್ತದೆ. ಒಟ್ಟಾರೆ ಹೇಳೋದಾದ್ರೆ ಇವರು ಭಾವನಾತ್ಮಕವಾಗಿ ಸ್ವತಂತ್ರರು ಹಾಗೂ ಬಲಿಷ್ಠರೂ ಆಗಿರುತ್ತಾರೆ. ಅಷ್ಟೇ ಅಲ್ಲ, ಸಿಂಗಲ್ ಆಗಿರೋದ್ರಿಂದ ನಿಮ್ಮನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೆಚುರಿಟಿ ಭವಿಷ್ಯದಲ್ಲಿ ನಿಮಗೆ ಒಳ್ಳೆಯ ಸಂಗಾತಿಯನ್ನು ಆರಿಸಿಕೊಳ್ಳಲು ನೆರವು ನೀಡುತ್ತದೆ. ನಿಮ್ಮನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಾಗ ಮಾತ್ರ ಇನ್ನೊಬ್ಬರನ್ನು ಸಮರ್ಥವಾಗಿ ಜಡ್ಜ್ ಮಾಡಲು ಸಾಧ್ಯವಾಗುತ್ತದೆ.ನಿಮ್ಮ ಅಗತ್ಯ ಹಾಗೂ ನಿರೀಕ್ಷೆಗಳ ಬಗ್ಗೆ ನಿಮಗೆ ಸ್ಪಷ್ಟತೆಯಿದ್ದಾಗ ಇನ್ನೊಬ್ಬ ವ್ಯಕ್ತಿಯನ್ನು,ಆತನ ವರ್ತನೆಯ ಹಿಂದಿನ ಕಾರಣವನ್ನು ನೀವು ಸರಿಯಾಗಿ ಗ್ರಹಿಸುತ್ತೀರಿ. ಸೋ, ಸಿಂಗಲ್ ಆಗಿರುವ ಜೀವಗಳೇ, ವ್ಯಾಲೆಂಟೆನ್ಸ್ ಡೇ ಸಂಭ್ರಮಾಚರಣೆಗೆ ಜೋಡಿಹಕ್ಕಿಯಿಲ್ಲವೆಂದು ರೋಧಿಸಬೇಡಿ,ಭವಿಷ್ಯದಲ್ಲಿ ನಿಮ್ಮ ಯೋಗ್ಯತೆ ತಕ್ಕ ಹಕ್ಕಿಯೊಂದು ಗೂಡು ಸೇರುತ್ತದೆ.ಆ ಭರವಸೆಯಲ್ಲೇ ಸಿಂಗಲ್ ಆದ್ರೂ ಎಲ್ಲರೊಂದಿಗೂ ಮಿಂಗಲ್ ಆಗಿ ಪ್ರೇಮಿಗಳ ದಿನ ಆಚರಿಸಿ.
2020/07/15 10:58:35
https://kannada.asianetnews.com/relationship/benefits-of-being-single-in-life-q5orth
mC4
ಮೂಕ ವೇದನೆ; ತಾಳಲಾರೆ ಯಾತನೆ | Prajavani ಮೂಕ ವೇದನೆ; ತಾಳಲಾರೆ ಯಾತನೆ Published: 05 ಫೆಬ್ರವರಿ 2011, 15:40 IST Updated: 05 ಫೆಬ್ರವರಿ 2011, 15:40 IST ಶಿವಮೊಗ್ಗ: 'ಅಬ್ಬಾ ಅಸಾಧ್ಯ ನೋವು, ತಾಳಲಾರೆ. ಕುಳಿತಕೊಳ್ಳಲು ಆಗುತ್ತಿಲ್ಲ, ನಿಲ್ಲಲು ಆಗುತ್ತಿಲ್ಲ, ನಾನೇನು ಮಾಡ್ಲಿ?' 'ನಾನ್ಯಾರು ಗೊತ್ತೆ? ನನ್ನ ಹೆಸರು 'ಕಾವೇರಿ'. ಸಕ್ರೆಬೈಲು ಆನೆ ಬಿಡಾರದ ಹಿರಿಯರಲ್ಲಿ ನಾನೂ ಒಬ್ಬಳು. ನನಗೀಗ 75 ವರ್ಷ. ಇಲ್ಲಿಗೆ ಬಂದಿದ್ದು, ಸರಿಯಾಗಿ ನೆನಪಿಲ್ಲ. ಆದರೆ, 1968ರಲ್ಲಿ ನಾನು ಕಾಕನಕೋಟೆಯಲ್ಲಿ ಮನುಷ್ಯರ ಕೈಗೆ ಸಿಕ್ಕಿಬಿದ್ದೆ. ಅಂದಿನಿಂದ ದುಬಾರೆ ಅರಣ್ಯಕ್ಕೆ ಹೋಗಿ, ನಂತರ ಸಕ್ರೆಬೈಲಿಗೆ ಬಂದಿದ್ದೇನೆ'. 'ಈಗ ನನಗಾದ ಗಾಯದ ಬಗ್ಗೆ ಹೇಳುತ್ತೇನೆ' 'ಎಂದಿನಂತೆ ಬುಧವಾರವೂ ಮಾವುತರು ನಮ್ಮನ್ನು ಮೇಯಲು ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಬಿಟ್ಟು ಹೋದರು. ಹಗಲೆಲ್ಲಾ ಮೇಯ್ದು ರಾತ್ರಿಯಾಗಿತ್ತು. ಒಬ್ಬಳೇ ಬಳ್ಳಾರಿ ಕೆರೆ ಬಳಿ ನಿಂತಿದ್ದೆ. ಅಲ್ಲಿದ್ದ ಪುಂಡ (ಅವನೂ ಗೊತ್ತಿದ್ದವನೆ) ನನ್ನೊಂದಿಗೆ ಸ್ನೇಹಕ್ಕೆ ಹಾತೊರೆದ. ವಯಸ್ಸಾಗಿದೆ; ನನ್ನನ್ನು ಬಿಟ್ಟುಬಿಡಪ್ಪ ಎಂದರೂ ಬಿಡಲಿಲ್ಲ. ಮೈಮೇಲೆ ಎರಗಿದ. ನಾನು ಆಯತಪ್ಪಿ ಕೆಳಗೆ ಬಿದ್ದೆ. ಬಿದ್ದವನ ಮೇಲೆ ಆ ಪುಂಡ ದಂತದಿಂದ ಮೈಮೇಲೆ ಚುಚ್ಚಿದ. ಪ್ರತಿಭಟಿಸಿದೆ; ನಂತರ, ಕುತ್ತಿಗೆಗೆ ಬಲವಾಗಿ ಗುದ್ದಿದ. ನನಗೆ ಜೀವಹೋದ ಹಾಗಾಯಿತು. ಅಲ್ಲೇ ಬಿದ್ದೆ. ಅವನು, ಅಲ್ಲಿಂದ ಕಾಲ್ಕಿತ್ತ'. 'ಬೆಳಿಗ್ಗೆವರೆಗೂ ನೋವಿನಲ್ಲೇ ಒದ್ದಾಡಿದೆ. ಗುರುವಾರ ಮುಂಜಾನೆ ಮಾವುತರು ನಮ್ಮನ್ನೆಲ್ಲಾ ಕರೆಯಲು ಬಂದರು. ನನಗೆ ಒಂದು ಹೆಜ್ಜೆ ಇಡುವುದಕ್ಕೂ ಆಗಲಿಲ್ಲ. ಹತ್ತಿರ ಬಂದ ಮಾವುತರು ಮೈಮೇಲಿನ ಗಾಯಗಳನ್ನು ಕಂಡು ಬೆಚ್ಚಿಬಿದ್ದರು; ಪ್ರೀತಿಯಿಂದ ಮೈದಡಿವಿದರು. ನಿಧಾನಕ್ಕೆ ಸ್ವಲ್ಪ ದೂರಕ್ಕೆ ಹಾಗೇ ಕರೆದು ತಂದರು'. ಅಷ್ಟು ಹೊತ್ತಿಗೆ ಮೇಲಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು ಅಂತ ಕಾಣುತ್ತೆ, ಡಾಕ್ಟರ್ ಜತೆ ಅವರೂ ಬಂದರು. ನಮ್ಮ ಮಾಮೂಲಿ ಡಾಕ್ಟರ್ ಕಾಣಲಿಲ್ಲ; ಬೇರೆ ಯಾರೋ ಇಂಜೆಕ್ಷನ್ ಚುಚ್ಚಿದರು. ಬೆಳಿಗ್ಗೆ ಅನ್ನುವಷ್ಟರಲ್ಲಿ ನನ್ನ ಇಡೀ ಮೈ ಊದಿಕೊಂಡಿತ್ತು. ಮಾವುತರಿಗೇ ಗುರುತು ಸಿಗದಷ್ಟು ಬದಲಾಗಿದ್ದೆ. ಕಣ್ಣುಮುಚ್ಚಿ ಹೋಗಿದ್ದವು. ವಿಪರೀತ ನೋವು; ಆಯಾಸ. ಔಷಧಿ ಹಚ್ಚುತ್ತಿದ್ದಂತೆ ಸ್ವಲ್ಪ ಆರಾಮ ಅನಿಸಿತು. ಅನ್ನ ಹಾಕಿ ಕೊಟ್ಟರು, ಸ್ವಲ್ಪ ತಿಂದೆ. ಮಧ್ಯೆ, ಮಧ್ಯೆ ಮಾವುತರು ಔಷಧಿ ಹಚ್ಚುತ್ತಿದ್ದರು. ಇಡೀ ರಾತ್ರಿ ನಿಂತೇ ಕಾಲ ಕಳೆದೆ. ಶುಕ್ರವಾರ ಊದಿಕೊಂಡಿದ್ದ ಮೈ, ಸ್ವಲ್ಪವೇ ಸ್ವಲ್ಪ ಇಳಿದಿತ್ತು. ಆದರೆ, ಗಾಯ ಆದ ಕಡೆಯಲೆಲ್ಲ ಅಸಾಧ್ಯದ ಉರಿ. ನೋವು ತಡೆದುಕೊಳ್ಳಲಾರದೆ ಡಾಕ್ಟರ್ ಬರುವ ತನಕ ಗಾಯದ ಮೇಲೆ ಮಣ್ಣು ಎರಚಿಕೊಳ್ಳುತ್ತಲೇ ಇದ್ದೆ. ಮಾವುತರು ಬಾಳೆ ದಿಂಡು, ಅನ್ನ ತಂದುಕೊಟ್ಟರು, ಹಸಿವು ಆಗಿತ್ತು. ಸ್ವಲ್ಪ ತಿಂದೆ. ಬೆಳಿಗ್ಗೆನೇ ಮಾಧ್ಯಮದ ಗುಂಪೇ ನೆರೆದಿತ್ತು. ಹಲವರು ತಮಗೆ ತೋಚಿದಂತೆ ನನ್ನ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ನನಗೆ ನೋವಿನಲ್ಲೂ ನಗು ಬರುತ್ತಿತ್ತು. ಕೆಲವರು ನನ್ನ ಸುತ್ತಸುಮಾರು ಒಂದು ಗಂಟೆ ಕ್ಯಾಮೆರಾಇಟ್ಟು ಪದೇ ಪದೇ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಅಧಿಕಾರಿಗಳು, ಡಾಕ್ಟರ್ ಬಂದರು. ಡಾಕ್ಟರ್, ಔಷಧಿ ಹಚ್ಚಿ, ಇಂಜೆಕ್ಷನ್ ನೀಡಿದರು. ತಕ್ಷಣಕ್ಕೆ ಸ್ವಲ್ಪ ಆರಾಮ ಅನಿಸಿತು. ಆದರೆ, ನೋವು ಇದೆ. ಉಸಿರಾಟ ಕಷ್ಟವಾಗುತ್ತಿದೆ. ನನ್ನ ಮುಂದೆ ನಿಂತ ಡಾಕ್ಟರ್, ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು. ನನ್ನ ಕಣ್ಣು ಮಂಜಾಯಿತು. ಸಕ್ರೆಬೈಲು ಸಾಕಾನೆ ಮೇಲೆ ಕಾಡಾನೆ ದಾಳಿ ಶಿವಮೊಗ್ಗ: ಸಕ್ರೆಬೈಲು ಬಿಡಾರದ ಆನೆಯ ಮೇಲೆ ಕಾಡಾನೆಯೊಂದು ಬುಧವಾರ ರಾತ್ರಿ ತೀವ್ರವಾಗಿ ದಾಳಿ ಮಾಡಿದ್ದು, ಸಾಕಾನೆಯ ಸ್ಥಿತಿ ಚಿಂತಾಜನಕವಾಗಿದೆ. ಸಕ್ರೆಬೈಲು ಬಿಡಾರದ 75 ವರ್ಷದ ಕಾವೇರಿ ಕಾಡಾನೆ ದಾಳಿಗೆ ಒಳಗಾಗಿದ್ದು, ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿರುವ ಗಂಡಾನೆ ತನ್ನ ದಂತದಿಂದ ದಾಳಿ ನಡೆಸಿದೆ. ಪ್ರತಿ ನಿತ್ಯದಂತೆ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಸಕ್ರೆಬೈಲಿನ ಆನೆಗಳನ್ನು ಮೇಯಲು ಬಿಟ್ಟಾಗ ಅಲ್ಲಿಗೆ ಬಂದ ಕಾಡಾನೆ, ಕಾವೇರಿ ಮೇಲೆ ಎರಗಿ ತೀವ್ರತರವಾದ ಗಾಯಗಳನ್ನು ಮಾಡಿದೆ. ಈ ವಿಷಯ ಮರುದಿನ ಮಾವುತರಿಗೆ ಆನೆಗಳನ್ನು ಹಿಂದಕ್ಕೆ ತರುವ ವೇಳೆ ತಿಳಿದಿದ್ದು, ಕಾವೇರಿಗೆ ಈಗ ಹಗಲು-ರಾತ್ರಿ ಕಾಡಿನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. 'ಮೇಯಲು ಬಿಟ್ಟಾಗ ಕಾಡಾನೆ ಜತೆ ಹೊಂದಾಣಿಕೆ ಬರದಿದ್ದಾಗ ಈ ದಾಳಿ ನಡೆದಿರಬಹುದು. ಕಾವೇರಿಗೆ ಕುತ್ತಿಗೆ ಬಳಿ ಬಲವಾದ ಗಾಯವಾಗಿದ್ದು, ಉಸಿರಾಟಕ್ಕೆ ತೊಂದರೆಯಾಗಿದೆ. ಈ ಹಿಂದೆ ಕೂಡ ಸಕ್ರೆಬೈಲು ಆನೆಗಳ ಮೇಲೆ ಸಣ್ಣಪುಟ್ಟ ದಾಳಿಗಳು ನಡೆದಿದ್ದವು' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಟಿ.ಜೆ. ರವಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.'ನೋವಿನಿಂದ ಆನೆಗೆ ಬಾವು ಬಂದಿದೆ. ಉಸಿರಾಟದ ನಾಳಕ್ಕೆ ತೀವ್ರ ಏಟು ಬಿದ್ದಿರುವುದರಿಂದ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಚಿಕಿತ್ಸೆ ನೀಡಿದ ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಆದರೂ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ' ಎಂದು ಆನೆಗೆ ಚಿಕಿತ್ಸೆ ನೀಡಿದ ಪಶುವೈದ್ಯಕೀಯ ಕಾಲೇಜಿನ ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಸುದರ್ಶನ್, ವಲಯ ಅರಣ್ಯಾಧಿಕಾರಿ ಹರೀಶ್, ಇಲಾಖೆ ವೈದ್ಯ ಸಂಕದ್ ಉಪಸ್ಥಿತರಿದ್ದರು.
2018/12/12 05:24:25
https://www.prajavani.net/article/%E0%B2%AE%E0%B3%82%E0%B2%95-%E0%B2%B5%E0%B3%87%E0%B2%A6%E0%B2%A8%E0%B3%86-%E0%B2%A4%E0%B2%BE%E0%B2%B3%E0%B2%B2%E0%B2%BE%E0%B2%B0%E0%B3%86-%E0%B2%AF%E0%B2%BE%E0%B2%A4%E0%B2%A8%E0%B3%86
mC4
ತ್ವರಿತ ವಿಚಾರಣೆಗೆ ಪ್ರತ್ಯೇಕ ಕೋರ್ಟ್ ಅಗತ್ಯ: ವಿಶೇಷ ಅಭಿಯೋಜಕ ಎಸ್.ಬಾಲನ್ | Vartha Bharati- ವಾರ್ತಾ ಭಾರತಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ 4 ವರ್ಷ ವಾರ್ತಾ ಭಾರತಿ Sep 05, 2021, 11:51 AM IST ►► ವಿಶೇಷ ಸಂದರ್ಶನ ಬೆಂಗಳೂರು, ಸೆ.5: 'ಪತ್ರಕರ್ತೆ, ಸಾಮಾಜಿಕ ಹೋರಾಟ ಗಾರ್ತಿ ಹಾಗೂ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಸಂಬಂಧ ರಾಜ್ಯ ಸರಕಾರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಕೋಕಾ)ಯಡಿ ಪ್ರತ್ಯೇಕ ವಿಶೇಷ ನ್ಯಾಯಾಲಯ ಸ್ಥಾಪಿಸುವ ಅಗತ್ಯವಿದೆ' ಎಂದು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸರಕಾರದ ಪರ ವಿಶೇಷ ಅಭಿಯೋಜಕ ಹಾಗೂ ಹೈಕೋರ್ಟ್‌ನ ಹಿರಿಯ ವಕೀಲ ಎಸ್.ಬಾಲನ್ ಪ್ರತಿಪಾದಿಸಿದ್ದಾರೆ. ಶನಿವಾರ 'ವಾರ್ತಾಭಾರತಿ' ಪತ್ರಿಕೆ ಹಾಗೂ ಯೂಟ್ಯೂಬ್ ಚಾನೆಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ಗೌರಿ ಲಂಕೇಶ್, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಗಳು ಹಾಗೂ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅವರ ಮೇಲಿನ ಹತ್ಯೆ ಯತ್ನದ ಪ್ರಕರಣದ ವಿಚಾರಣೆಗೆ ರಾಜ್ಯ ಸರಕಾರ ಒಂದು ಪ್ರತ್ಯೇಕ ಕೋರ್ಟ್ ಸ್ಥಾಪಿಸುವ ಅಗತ್ಯವಿದೆ. ಇದರಿಂದ ಪ್ರಕರಣಗಳ ತ್ವರಿತ ವಿಲೇವಾರಿಗೆ ಅನುಕೂಲವಾಗಲಿದೆ' ಎಂದು ಹೇಳಿದರು. ವಾರ್ತಾಭಾರತಿ: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಈವರೆಗೆ ಆಗಿರುವ ಬೆಳವಣಿಗೆಗಳು ಏನು (ಬಂಧಿತರು ಎಷ್ಟು, ಅವರ ಹಿನ್ನೆಲೆ, ತಲೆಮರೆಸಿಕೊಂಡ ಆರೋಪಿಗಳ ವಿವರ ಇತ್ಯಾದಿ)? ಎಸ್.ಬಾಲನ್: 'ಗೌರಿ ಲಂಕೇಶ್ ಹತ್ಯೆ ಪ್ರಕರಣ ದಲ್ಲಿ ಒಟ್ಟು 18 ಮಂದಿ ಆರೋಪಿಗಳಿದ್ದು, ಈಗಾ ಗಲೇ 16 ಮಂದಿಯನ್ನು ಎಸ್‌ಐಟಿ(ಸಿಟ್) ತಂಡ ಸಮಗ್ರ ಹಾಗೂ ಕೂಲಂಕಶವಾಗಿ ತನಿಖೆ ನಡೆಸಿ ಪ್ರಕರಣಕ್ಕೆ ಸಂಬಂಧಪಟ್ಟ ಎಫ್‌ಐಆರ್ ಆದ ಬಳಿಕ ಹತ್ತು ಸಾವಿರ ಪುಟಗಳ ಸುದೀರ್ಘವಾದ ದೋಷಾರೋಪ(ಚಾರ್ಜ್‌ಶೀಟ್) ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇನ್ನೂ ಕೆಲವರು ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಿದ ಬಳಿಕ ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಕೆಯಾಗಲಿದೆ. ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ 10 ಮಂದಿ ಆರೋಪಿಗಳು ಮಹಾರಾಷ್ಟ್ರ ರಾಜ್ಯದವರು. ಉಳಿದ ಎಂಟು ಮಂದಿ ಕರ್ನಾಟಕ ರಾಜ್ಯದ ಬೆಳಗಾವಿ ಮತ್ತು ಮಡಿಕೇರಿ ಮೂಲದವರು ಎಂದು ಗೊತ್ತಾಗಿದೆ. ಗೌರಿ ಲಂಕೇಶ್ ಅವರಿಗೆ ಗುಂಡಿಕ್ಕಿ ಹತ್ಯೆಗೈದಿರುವುದು ಪರುಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್ ಬೈಕ್ ಓಡಿಸುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಕೃತ್ಯದಲ್ಲಿ ಪ್ರತಿಯೊಬ್ಬರ ಪಾತ್ರದ ಬಗ್ಗೆಯೂ 'ಸಿಟ್' ಪರಾಮರ್ಶೆ ನಡೆಸಿದ್ದು, ದೋಷಾರೋಪ ಪಟ್ಟಿಯಲ್ಲಿ ಎಲ್ಲರ ಪಾತ್ರದ ಬಗ್ಗೆಯೂ ತಿಳಿಸಿದೆ' ಎಂದು ಉಲ್ಲೇಖಿಸಿದರು. ವಾರ್ತಾಭಾರತಿ: ಪ್ರಕರಣದ ವಿಚಾರಣೆ, ಸಾಕ್ಷ್ಯ ಸಂಗ್ರಹ, ದೋಷಾರೋಪ ಪಟ್ಟಿ ಸಲ್ಲಿಕೆ, ಎಷ್ಟು ಪರಿಣಾಮಕಾರಿಯಾಗಿ ನಡೆದಿದೆ? ಎಸ್.ಬಾಲನ್: ಗೌರಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳೆಲ್ಲರೂ ಒಟ್ಟಿಗೆ ಸೇರಿ ಒಳಸಂಚು ರೂಪಿಸಿ ಕೃತ್ಯ ನಡೆಸಿದ್ದಾರೆಂಬುದು ಎಸ್‌ಐಟಿ ತನಿಖೆಯಿಂದ ಸ್ಪಷ್ಟವಾಗಿದೆ. ವಿಶೇಷ ತನಿಖಾ ತಂಡ ಹತ್ಯೆ ನಡೆದ ಸ್ಥಳದಲ್ಲಿ ದೊರೆತ ಪ್ರತಿಯೊಂದು ಸಾಕ್ಷ್ಯಾಧಾರಗಳನ್ನು ಕೂಲಂಕಷ ವಿಶ್ಲೇಷಣೆ ನಡೆಸಿದ್ದು, ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ನಡೆಸಿದೆ. ಜೊತೆಗೆ ಆರೋಪಿಗಳ ಮೊಬೈಲ್ ಕರೆಗಳ ಸಂಭಾಷಣೆಯನ್ನು ಪರಿಶೀಲಿಸಿದೆ. ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಕೋಕಾ)ಯ ಕಲಂ 164ರ ಅನ್ವಯ ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆಯನ್ನು ದಾಖಲಿಸಲಾಗಿದೆ. ವಾರ್ತಾಭಾರತಿ: ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಡಾ.ಎಂ.ಎಂ.ಕಲಬುರ್ಗಿ ಹತ್ಯೆಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಇರುವ ಸಂಬಂಧದ ಬಗ್ಗೆ ಏನಾದರೂ ಮಾಹಿತಿ ಇದೆಯೇ? ಎಸ್.ಬಾಲನ್: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತ ರಾಗಿರುವ ಕೆಲವರು ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ದಲ್ಲಿಯೂ ಆರೋಪಿಗಳಾಗಿದ್ದಾರೆ. ಇನ್ನು ಮಹಾರಾಷ್ಟ್ರ ರಾಜ್ಯದ ದಾಬೋಲ್ಕರ್, ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿಯೂ ಇವರ ಪಾತ್ರವಿರುವುದು ಗೊತ್ತಾಗಿದೆ. ಇವರೆಲ್ಲರೂ ಒಂದೇ ಗುಂಪಿಗೆ ಸೇರಿದವರು. ಸಂಘಟಿತರಾಗಿಯೇ ಕೃತ್ಯಗಳನ್ನು ನಡೆಸಿದ್ದಾರೆಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಆದರೆ, ಇವರೆಲ್ಲರೂ ಬೇರೆ ಬೇರೆ ರೂಪದಲ್ಲಿ ಅದಲು-ಬದಲಾಗಿ ಕೃತ್ಯಗಳನ್ನು ನಡೆಸಿದ್ದಾರೆಂಬುದನ್ನು ಪೊಲೀಸರು ತನಿಖೆ ನಡೆಸಿ ಗುರುತಿಸಿದ್ದಾರೆ. ವಾರ್ತಾಭಾರತಿ: ನ್ಯಾಯಾಲಯದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ಈಗ ಯಾವ ಹಂತದಲ್ಲಿದೆ? ಎಸ್.ಬಾಲನ್: ಗೌರಿ ಹತ್ಯೆ ಪ್ರಕರಣ 2017ರ ಸೆಪ್ಟಂಬರ್ 5ಕ್ಕೆ ನಡೆದಿದ್ದು, ಸೆ.5ಕ್ಕೆ ನಾಲ್ಕು ವರ್ಷಗಳು ಪೂರ್ಣಗೊಳ್ಳಲಿವೆ. ವಿಶೇಷ ತನಿಖಾ ತಂಡ ಪ್ರಕರಣದ ವಿಚಾರಣೆ ನಡೆಸಿ 180 ದಿನ ಅಂದರೆ ಕನಿಷ್ಠ ಆರು ತಿಂಗಳ ಒಳಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಬೇಕು. ಆ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಆದರೆ, ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಆರೋಪಿಗಳಿಗೆ ಒಂದು ನ್ಯಾಯಾಲಯದಿಂದ ಮತ್ತೊಂದು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ವಿಚಾರಣೆಯ ಹಂತದಲ್ಲಿದೆ. ಬಂಧಿತ ಎಲ್ಲ ಆರೋಪಿಗಳು ಪ್ರತ್ಯೇಕವಾಗಿ ವಕೀಲರನ್ನು ನೇಮಕ ಮಾಡಿಕೊಂಡಿದ್ದು, ಆ ವಕೀಲರೆಲ್ಲರೂ ವಿವಿಧ ರೀತಿಯಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅದು ಅವರ ಹಕ್ಕು. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಪ್ರಕರಣ ತ್ವರಿತ ವಿಲೇವಾರಿ ಆಗಬೇಕು. ವಾರ್ತಾಭಾರತಿ: ಹತ್ಯೆ ಪ್ರಕರಣದ ವಿಚಾರಣೆ ಯಾವಾಗ ಮುಗಿಯುವ ನಿರೀಕ್ಷೆ ಇದೆ? ಎಸ್.ಬಾಲನ್: ಕೋರ್ಟ್ ಮತ್ತು ಕಾನೂನು ಚೌಕಟ್ಟಿನಲ್ಲಿ ಹೀಗೆ ಆಗಬೇಕು ಎಂದು ಊಹೆ ಮಾಡಲು ಸಾಧ್ಯವಿಲ್ಲ. ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಗೌರಿ ಲಂಕೇಶ್, ಕಲಬುರ್ಗಿ ಪ್ರಕರಣದ ಬಗ್ಗೆ ವಿಚಾರಣೆಗೆ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯವನ್ನು ಸ್ಥಾಪಿಸಬೇಕು. ಆ ಮೂಲಕ ಈ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ ತಪ್ಪಿತಸ್ಥರೆಂದು ಕಂಡು ಬಂದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆರೋಪಿಗಳು ನಾಲ್ಕು ವರ್ಷಗಳಿಂದ ಕಾರಾಗೃಹದಲ್ಲಿದ್ದು, ವಿಳಂಬ ನೀತಿ ಸರಿಯಲ್ಲ. ವಾರ್ತಾಭಾರತಿ: ಪ್ರಕರಣದ ವಿಚಾರಣೆ ಮುಗಿದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಇನ್ನು ಏನೇನು ಆಗಬೇಕು? ನಿಮ್ಮ ಬೇಡಿಕೆ ಏನು? ಎಸ್.ಬಾಲನ್: ನಾನು ಈಗಾಗಲೇ ತಿಳಿಸಿದಂತೆ ಪ್ರಕರಣದ ತ್ವರಿತ ವಿಚಾರಣೆ ಪೂರ್ಣಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆ ದೃಷ್ಟಿಯಿಂದ ಸರಕಾರ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಿದರೆ ಒಳ್ಳೆಯದು. ಈ ಪ್ರಕರಣ ಕೊನೆಗಾಣಬೇಕು. ಪತ್ರಕರ್ತೆ ಗೌರಿ ಹತ್ಯೆ ಕತ್ತಲೆಯಲ್ಲಿ ನಡೆದಂತೆ ಪ್ರಕರಣದ ವಿಚಾರಣೆಯಲ್ಲಿಯೂ ಕತ್ತಲೆ ಆವರಿಸಿದ್ದು ಬೆಳಕು ಕಾಣಿಸುತ್ತಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಆ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ, ನರಹತ್ಯೆ ಕ್ರೂರ ಮತ್ತು ಕೌರ್ಯ. ಹೀಗಾಗಿ ಪ್ರಕರಣದ ತ್ವರಿತ ವಿಚಾರಣೆ ಆಗಬೇಕು. ಅಂತಿಮವಾಗಿ ಕೋರ್ಟ್ ಎಲ್ಲವನ್ನು ತೀರ್ಮಾನ ಮಾಡಲಿದೆ. ಆದರೆ, ಯಾವ ಶಿಕ್ಷೆ ವಿಧಿಸಬೇಕು ಎಂಬುದನ್ನು ಕೋರ್ಟ್ ನಿರ್ಧರಿಸಲಿದೆ.
2021/10/23 11:26:30
https://www.varthabharati.in/article/vishesha-varadigalu/305377
mC4
ಶಿವಮೊಗ್ಗದಲ್ಲಿ ಬಿಜೆಪಿ ಈಗ ಕೇವಲ 52 ಸಾವಿರ ಮತಗಳ ಅಂತರದಿಂದ ಗೆದ್ದಿದೆ: ಮಧು ಬಂಗಾರಪ್ಪ | Madhu Bangarappa says, BJP's margin now just 52k in Shimoga | Kannadaprabha.com Saturday, January 19, 2019 11:42 PM IST ಪ್ರತಿಪಕ್ಷಗಳ ಗುರಿ ಒಂದೆಯಾಗಿರಬೇಕು, ಅದು ಬಿಜೆಪಿಯನ್ನು ಕಿತ್ತೊಗೆಯಬೇಕು: ಅರುಣ್ ಶೌರಿ ಶಿವಮೊಗ್ಗದಲ್ಲಿ ಬಿಜೆಪಿ ಈಗ ಕೇವಲ 52 ಸಾವಿರ ಮತಗಳ ಅಂತರದಿಂದ ಗೆದ್ದಿದೆ: ಮಧು ಬಂಗಾರಪ್ಪ Published: 06 Nov 2018 04:13 PM IST | Updated: 06 Nov 2018 04:17 PM IST ಮಧು ಬಂಗಾರಪ್ಪ ಶಿವಮೊಗ್ಗ: ಈ ಹಿಂದೆ ಸುಮಾರು 3 ಲಕ್ಷ ಮತಗಳ ಅಂತರಿಂದ ಗೆದ್ದಿದ ಬಿಜೆಪಿ ಈಗ ಕೇವಲ 52 ಸಾವಿರ ಮತಗಳ ಅಂತರದಿಂದ ಗೆದ್ದಿದೆ. ಮತದಾರರು ನನ್ನನ್ನು ತಿರಸ್ಕರಿಸಿಲ್ಲ ಎಂದು ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯ ಪರಾಜಿತ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಮಂಗಳವಾರ ಹೇಳಿದ್ದಾರೆ. ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು, ಗೆಲುವು ನೀಡದಿದ್ದರೂ ಉತ್ತಮ ಮತ ನೀಡಿದ ಮತದಾರರಿಗೆ ಧನ್ಯವಾದ ಅರ್ಪಿಸಿದರು. ಈ ಹಿಂದೆ 2014ರ ಲೋಕಸಭೆ ಚುನಾವಣೆಯಲ್ಲಿ ಬಿ ಎಸ್ ಯಡಿಯೂರಪ್ಪ ಅವರು 3,63,305 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈಗ ಅವರ ಮಗ ಬಿವೈ ರಾಘವೇಂದ್ರ ಅವರು ಕೇವಲ 52,148 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿ ಶಿವಮೊಗ್ಗದಲ್ಲಿ ಬಿಜೆಪಿಯ ಮೇಲೆ ನಾವು ಹಿಡಿತ ಸಾಧಿಸಿದ್ದೇವೆ ಎಂದರು. ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಲೋಕಸಭೆ ಚುನಾವಣೆ ಇದೆ. ಹಾಗ ನಾವು ಉತ್ತಮ ರೀತಿಯಲ್ಲಿ ಹೋರಾಡುತ್ತೇವೆ. ಇನ್ನು ನಾಲ್ಕು ದಿನ ನನಗೆ ಸಮಯ ಸಿಕ್ಕಿದ್ದರೆ ನಾನು ಗೆಲ್ಲುತ್ತಿದ್ದೆ. ಮತದಾನ ಪ್ರಮಾಣ ಹೆಚ್ಚಾಗಿದ್ದರೆ ಫಲಿತಾಂಶ ಬೇರೆಯೇ ಆಗುತ್ತಿತ್ತು ಎಂದು ಮಧು ಹೇಳಿದ್ದಾರೆ. ಮತದಾರರು ನನ್ನನ್ನು ತಿರಸ್ಕರಿಸಿಲ್ಲ ಎಂಬುದನ್ನು ಈ ಚುನಾವಣೆ ಸಾಬೀತು ಮಾಡಿದೆ. ಸರ್ಕಾರವನ್ನು ಬೀಳಿಸುವ ಅವರ ಸುಳ್ಳಿನ ಮಾತಿಗೆ ಈ ಚುನಾವಣೆ ಉತ್ತರ ಕೊಟ್ಟಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
2019/01/19 18:12:19
https://www.kannadaprabha.com/politics/madhu-bangarappa-says-bjps-margin-now-just-52k-in-shimoga/327675.html
mC4
ಚೀನಾ ಮುಳುಗುವ ಒಳಚರಂಡಿ ಪಂಪ್ (0.75-7.5 ಕಿ.ವ್ಯಾ) ತಯಾರಕರು ಮತ್ತು ಪೂರೈಕೆದಾರರು | ಕೈಕ್ವಾನ್ ಹರಿವು: 5-150 ಮೀ 3 / ಗಂ ● ತಲೆ: 42 ಮೀ ವರೆಗೆ Iqu ದ್ರವ ತಾಪಮಾನ: 40º ಸಿ ದ್ರವ ಸಾಂದ್ರತೆ: 1050 ಕೆಜಿ / ಮೀ 3 ● PH ಮೌಲ್ಯ: 4 ~ 10 WQ / EC ಸರಣಿ ಸಣ್ಣ ಮುಳುಗುವ ಒಳಚರಂಡಿ ಪಂಪ್ WQ / EC ಸಣ್ಣ ಮುಳುಗುವ ಒಳಚರಂಡಿ ಪಂಪ್ ಪ್ರಯೋಜನಗಳು: 1. ಆಯ್ದ ಪಂಪ್ ಬಾಡಿ ಮತ್ತು ಇಂಪೆಲ್ಲರ್ ವಿನ್ಯಾಸವನ್ನು ಪದೇ ಪದೇ ಮಾರ್ಪಡಿಸಲು ಸಿಎಡಿ ತಂತ್ರಜ್ಞಾನವನ್ನು ಬಳಸಲಾಗುತ್ತದೆ, ಇದರಿಂದಾಗಿ ಪಂಪ್ ಬಾಡಿ ಮತ್ತು ಇಂಪೆಲ್ಲರ್ ಸೂಕ್ತವಾಗಿ ಹೊಂದಿಕೆಯಾಗುತ್ತದೆ, ಮತ್ತು ಫೈಬರ್ಗಳು ಮತ್ತು ಭಗ್ನಾವಶೇಷಗಳು ಸಿಕ್ಕಿಹಾಕಿಕೊಳ್ಳದೆ ಮತ್ತು ನಿರ್ಬಂಧಿಸದೆ ಹಾದುಹೋಗುವುದು ಸುಲಭ. ಪ್ರಚೋದಕವು ಕಟ್ಟುನಿಟ್ಟಾಗಿ ಸಮತೋಲಿತವಾಗಿದೆ, ಇದರಿಂದಾಗಿ ಪಂಪ್ ಕಡಿಮೆ ಕಂಪನ ಮತ್ತು ಸ್ಥಿರ ಕಾರ್ಯಾಚರಣೆಯನ್ನು ಹೊಂದಿರುತ್ತದೆ. 2. ಹೆಚ್ಚು ವಿಶ್ವಾಸಾರ್ಹ ಮುಳುಗುವ ಮೋಟಾರ್ ವಿಶೇಷವಾಗಿ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ಸಬ್‌ಮರ್ಸಿಬಲ್ ಮೋಟರ್ ಐಪಿ 68 ರ ರಕ್ಷಣೆಯ ಮಟ್ಟವನ್ನು ಹೊಂದಿದೆ ಮತ್ತು ಸ್ಟೇಟರ್ ವಿಂಡಿಂಗ್ ಎಫ್-ಕ್ಲಾಸ್ ನಿರೋಧನವಾಗಿದೆ. ಮುಳುಗುವ ಕಾರ್ಯಾಚರಣೆಯ ಉತ್ತಮ ತಂಪಾಗಿಸುವಿಕೆಯ ಪರಿಣಾಮ ಮತ್ತು ಅಂಕುಡೊಂಕಾದ ಕಡಿಮೆ ನೈಜ ತಾಪಮಾನ ಏರಿಕೆಯಿಂದಾಗಿ, ಮೋಟಾರ್ ಹೆಚ್ಚು ಬಾಳಿಕೆ ಬರುತ್ತದೆ. 3. ಮೋಟರ್ ಬಿಗಿಯಾದ ಸೀಲಿಂಗ್ ಮತ್ತು ಕಟ್ಟುನಿಟ್ಟಾದ ತಪಾಸಣೆ ಹೊಂದಿದೆ 4. ವಿಶ್ವಾಸಾರ್ಹ ಬೇರಿಂಗ್ ಸಂರಚನೆ ಪ್ರಸಿದ್ಧ ಬ್ರ್ಯಾಂಡ್‌ನ ಆಳವಾದ ಗ್ರೂವ್ ಬಾಲ್ ಬೇರಿಂಗ್‌ಗಳನ್ನು ಆಯ್ಕೆ ಮಾಡಲಾಗುತ್ತದೆ, ಇದು ಉತ್ಪನ್ನಗಳ ವಿಶ್ವಾಸಾರ್ಹ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಲೋಡ್ ಅಂಚುಗಳನ್ನು ಹೊಂದಿರುತ್ತದೆ. 5. ಜೆಟ್ ಮಿಕ್ಸಿಂಗ್ ಕಾರ್ಯ ಪಂಪ್ ದೇಹದ ಮೇಲೆ ಜೆಟ್ ಮಿಕ್ಸಿಂಗ್ ರಂಧ್ರವನ್ನು ತೆರೆಯಲಾಗುತ್ತದೆ. ಪಂಪ್ ಚಾಲನೆಯಲ್ಲಿರುವಾಗ, ಪಂಪ್‌ನಲ್ಲಿನ ಒತ್ತಡದ ನೀರು ಶಕ್ತಿಯುತ ಸ್ಫೂರ್ತಿದಾಯಕಕ್ಕಾಗಿ ಜೆಟ್ ರಂಧ್ರದ ಮೂಲಕ ಹೆಚ್ಚಿನ ವೇಗದ ಜೆಟ್ ಅನ್ನು ರೂಪಿಸುತ್ತದೆ, ಇದರಿಂದಾಗಿ ದೊಡ್ಡ ಪ್ರಮಾಣದ ಕಲ್ಮಶಗಳನ್ನು ಅಮಾನತುಗೊಳಿಸಲಾಗುತ್ತದೆ, ಪಂಪ್‌ನಿಂದ ಹೀರಿಕೊಳ್ಳುತ್ತದೆ ಮತ್ತು ಹೊರಹಾಕಲಾಗುತ್ತದೆ. ದೊಡ್ಡ ಪ್ರದೇಶದಲ್ಲಿ ಯಾವುದೇ ಮಳೆಯಾಗುವುದಿಲ್ಲ, ಇದು ಪಂಪ್ ಹೀರುವ ಬಂದರಿನಲ್ಲಿ ಯಾಂತ್ರಿಕ ಸ್ಫೂರ್ತಿದಾಯಕಕ್ಕಿಂತ ಉತ್ತಮವಾಗಿರುತ್ತದೆ. 6. ರಕ್ಷಣಾ ಸಾಧನ ಮೋಟಾರ್ ವಿಂಡಿಂಗ್‌ಗಳಲ್ಲಿ ಅತಿಯಾದ ತಾಪನ ಸಂರಕ್ಷಣಾ ಅಂಶವನ್ನು ಸ್ಥಾಪಿಸಲಾಗಿದೆ. ಅಂಕುಡೊಂಕಾದ ತಾಪಮಾನವು ನಿಗದಿತ ತಾಪಮಾನವನ್ನು ಮೀರಿದಾಗ, ಅಧಿಕ ತಾಪನ ಸಂರಕ್ಷಣಾ ಅಂಶವು ವಿದ್ಯುತ್ ನಿಯಂತ್ರಣ ಕ್ಯಾಬಿನೆಟ್ ಮೂಲಕ "ಅಧಿಕ ತಾಪನ" ಸೂಚಕ ಬೆಳಕನ್ನು ಆನ್ ಮಾಡುತ್ತದೆ ಮತ್ತು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ಮೋಟಾರು ಅಧಿಕ ತಾಪದ ಕಾರಣವನ್ನು ಕಂಡುಹಿಡಿಯಲು ಪರೀಕ್ಷಿಸಲು ಆಪರೇಟರ್‌ಗೆ ನೆನಪಿಸಿ. ಅಂಕುಡೊಂಕಾದ ತಾಪಮಾನದ ನಂತರ, ಅತಿಯಾದ ತಾಪನ ಸಂರಕ್ಷಣಾ ಅಂಶವು ಸ್ವಯಂಚಾಲಿತವಾಗಿ ಮರುಹೊಂದಿಸುತ್ತದೆ, ಮತ್ತು ಮೋಟರ್ ಅನ್ನು ಆನ್ ಮಾಡಬಹುದು. ಆದಾಗ್ಯೂ, ಅಂಕುಡೊಂಕಾದ ಅಧಿಕ ತಾಪವನ್ನು ತೆಗೆದುಹಾಕುವವರೆಗೆ ಅದನ್ನು ಆನ್ ಮಾಡಬಾರದು.
2021/04/15 02:03:08
http://kn.kaiquanglobal.com/submersible-sewage-pump0-75-7-5kw-product/
mC4
ಪ್ರಯಾಣಿಕ: Latest ಪ್ರಯಾಣಿಕ News & Updates, Photos & Images, Videos | Vijaya Karnataka August,18,2019, 05:46:36 15 ವರ್ಷ ಪೂರೈಸಿದ ವಾಹನಗಳಿಗೆ ಪರವಾನಿಗೆ ಇಲ್ಲ ಧಾರವಾಡ : ಸರಕಾರದ ಆದೇಶದನ್ವಯ ಪ್ರಯಾಣಿಕ ವಾಹನಗಳಿಗೆ ವಿಶೇಷವಾಗಿ ಸಾರ್ವಜನಿಕರು ಸಂಚರಿಸುವ ಮಜಲು ವಾಹನಗಳು ಹಾಗೂ ಒಪ್ಪಂದ ವಾಹನಗಳಿಗೆ ರಹದಾರಿ ನೀಡುವ ಸಮಯದಲ್ಲಿ ಮೂಲ ನೋಂದಣಿ ದಿನಾಂಕದಿಂದ 15 ವರ್ಷದವರೆಗೆ ವಯೋಮಿತಿ ವಿಧಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ವಿ.ಕವಲಿ ತಿಳಿಸಿದ್ದಾರೆ. Aug 09, 2019, 03.23 PM ಭಾರಿ/ಹಗರ ಪ್ರಯಾಣಿಕ ವಾಹನ ಅಥವಾ ಭಾರಿ/ಹಗುರ ಗೂಡ್ಸ್‌ ವಾಹನ ಚಾಲನ ಪರವಾನಿಗೆ ಹೊಂದಿರಬೇಕು. ಕನಿಷ್ಠ 3 ವರ್ಷ ಚಾಲನಾ ಅನುಭವ ಹೊಂದಿರಬೇಕು. ಕೆಎಸ್ಸಾರ್ಟಿಸಿ ಸಿಬ್ಬಂದಿ ಪ್ರಯಾಣಿಕರ ಪ್ರೀತಿ ಗಳಿಸಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸಾರ್ವಜನಿಕರಲ್ಲಿ ಪ್ರೀತಿಯಿಂದ ವರ್ತಿಸಬೇಕು. ಕರ್ತವ್ಯದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಂಡಲ್ಲಿ ಸಂಸ್ಥೆ ಅಭಿವೃದ್ಧಿಯಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್‌ ಮುಖ್ಯಾಧಿಕಾರಿ ಶೃತಿ ಹೇಳಿದರು. ಮೈಸೂರು ರೈಲ್ವೆ ವಿಭಾಗಕ್ಕೆ 656 ಕೋಟಿ ರೂ. ಆದಾಯ 2018-19 ಸಾಲಿನಲ್ಲಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು 656.01 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷಕ್ಕಿಂತ ಶೇ.6.50 ಹೆಚ್ಚಳವಾಗಿದ್ದು, ಇದರಲ್ಲಿ 5.5 ಕೋಟಿ ರೂ., ಟಿಕೆಟ್‌ ರಹಿತ ಪ್ರಯಾಣಿಕರಿಂದ ವಸೂಲಿ ಮಾಡಿದ ದಂಡದ ಮೊತ್ತವಾಗಿದೆ ಎಂದು ಮೈಸೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅರ್ಪಣಾ ಗಾರ್ಗ್‌ ತಿಳಿಸಿದರು. ಜನರಲ್‌ ಬೋಗಿಯ ನೂಕುನುಗ್ಗಲು ತಪ್ಪಿಸಲು ಬಯೋಮೆಟ್ರಿಕ್‌ ಪರಿಹಾರ ಮುಂಚಿತವಾಗಿಯೇ ರೈಲು ನಿಲ್ದಾಣ ತಲುಪಿ, ರೈಲಿನಲ್ಲಿ ಕರ್ಚಿಫ್‌ ಹಾಕಿ, ಬಳಿಕ ಹತ್ತಿಕೊಂಡು ಸಹ ಪ್ರಯಾಣಿಕರೊಂದಿಗೆ ಜಗಳ ಕಾಯ್ದು ಸೀಟಿನಲ್ಲಿ ಕೂತುಕೊಳ್ಳುವ ಜಂಜಾಟಕ್ಕೆ ರೈಲ್ವೆ ಇಲಾಖೆ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿ ಮೂಲಕ ಅನುಕೂಲ ಕಲ್ಪಿಸಲು ಸಿದ್ಧತೆ ನಡೆಸಿದೆ. ಅಮೆರಿಕದ ಬೇಹುಗಾರರಿಗೆ ಇರಾನ್‌ನಲ್ಲಿ ಗಲ್ಲು ಶಿಕ್ಷೆ ಅಮೆರಿಕ ಮತ್ತು ಇರಾನ್‌ ಸಂಘರ್ಷ ಇದೇ ಮೊದಲಲ್ಲ. ಸಾಗರ ಮತ್ತು ಆಗಸಗಳಲ್ಲಿ ಉಭಯ ದೇಶಗಳ ನಡುವೆ ಆಗಾಗ ಯುದ್ಧ ಸನ್ನಿವೇಶಗಳು ಉದ್ಭವಿಸುತ್ತಲೇ ಇವೆ. ಕಣ್ಣೂರು ವಿಮಾನ ನಿಲ್ದಾಣದಿಂದ 2.8 ಕೆಜಿ ಚಿನ್ನ ವಶ ಕತ್ತಾರ್‌ನಿಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕನೊಬ್ಬನಿಂದ 2.8 ಕೆಜಿ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸರಕಾರಿ ಬಸ್‌ ನಿಲ್ದಾಣ ಚಾವಣಿ ಕುಸಿತ: ತಪ್ಪಿದ ಅನಾಹುತ ಮಡಿಕೇರಿಯ ಸರಕಾರಿ ಬಸ್‌ ನಿಲ್ದಾಣದಲ್ಲಿ ಚಾವಣಿ ಕುಸಿದು ಬಿದ್ದಿದೆ. ಟಂ ಟಂ ಚಾಲಕನಿಗೆ ದಂಡ, ಒಂದು ವರ್ಷ ಜೈಲು Jul 06, 2019, 10.28 PM ನಿರ್ಲಕ್ಷ ್ಯದಿಂದ ಟಂ ಟಂ ಚಲಾಯಿಸಿ, ಒಬ್ಬ ಪ್ರಯಾಣಿಕನ ಸಾವಿಗೆ ಕಾರಣನಾಗಿದ್ದ ಶಹಾಪುರ ತಾಲೂಕಿನ ದೊಡ್ಡ ಸಗರ ಗ್ರಾಮದ ಅಬೂಬಕರ್‌ ಅಹ್ಮದ್‌ ಹುಸೇನ್‌ಗೆ ಇಲ್ಲಿಯ ನ್ಯಾಯಾಲಯ 13,000 ರೂ. ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಏರ್‌ಪೋರ್ಟ್‌ನಲ್ಲಿ ತಪಾಸಣೆಗೆ ಬರಲಿದೆ ಬಾಡಿ ಸ್ಕ್ಯಾ‌ನರ್‌ ಬಾಡಿ ಸ್ಕ್ಯಾ‌ನರ್‌ನ ಕಾರ್ಯ ನಿರ್ವಹಣೆ, ಜಾರಿ ಮಾಡುವ ಕುರಿತು ಜುಲೈ 1ರಿಂದ ಪರೀಕ್ಷೆಗಳು ಆರಂಭವಾಗಿವೆ. 2020ರ ಏಪ್ರಿಲ್‌ ಒಳಗಾಗಿ ಕೆಐಎನಲ್ಲಿ ಭದ್ರತಾ ತಪಾಸಣೆಯನ್ನು ಬಾಡಿ ಸ್ಕ್ಯಾ‌ನರ್‌ ಮೂಲಕ ನಡೆಸಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಗಡುವು ನೀಡಿದೆ. ಹೀಗಾಗಿ, ಅಳವಡಿಸಲು ಸಿದ್ಧತೆಗಳು ಆರಂಭವಾಗಿವೆ. ಅಪಘಾತದಿಂದ ಎಚ್ಚೆತ್ತ ಸಾರಿಗೆ ಅಧಿಕಾರಿಗಳು ಮುರಗಮಲ್ಲ ರಸ್ತೆಯ ಬಾರ್ಲಹಳ್ಳಿ ಗೇಟ್‌ ಬಳಿ ನಡೆದ ಭೀಕರ ಅಪಘಾತದಿಂದ 11 ಜನ ಮೃತಪಟ್ಟ ಘಟನೆ ನಡೆಯುತ್ತಿದಂತೆ ಎಚ್ಚೆತ್ತುಕೊಂಡ ಸಾರಿಗೆ ಅಧಿಕಾರಿಗಳು ಪ್ರತ್ಯೇಕವಾಗಿ ನಾಲ್ಕು ತಂಡ ರಚಿಸಿಕೊಂಡು ತಾಲೂಕಿನಾದ್ಯಂತ ಪರವಾನಗಿ ಇಲ್ಲದೆ ಸಂಚರಿಸುತ್ತಿದ್ದ ಖಾಸಗಿ ಬಸ್‌ ಮತ್ತು ಶೇರಿಂಗ್‌ ಆಟೋ, ಟಾಟಾ ಏಸ್‌ ವಾಹನಗಳನ್ನು ತಪಾಸಣೆಗೆ ಮುಂದಾಗಿದ್ದಾರೆ.
2019/08/18 00:16:37
https://vijaykarnataka.indiatimes.com/topics/%E0%B2%AA%E0%B3%8D%E0%B2%B0%E0%B2%AF%E0%B2%BE%E0%B2%A3%E0%B2%BF%E0%B2%95
mC4
ಕಾಣೆಯಾಗಿದ್ದಾಳೆ ರಘು ದೀಕ್ಷಿತ್ ಅಚ್ಚುಮೆಚ್ಚಿನ 'ತುಂಟಿ': ಹುಡುಕಿಕೊಡಿ ಪ್ಲೀಸ್.! | Raghu Dixit pet Thunti is missing since 5 days - Kannada Filmibeat ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ರವರ ಅಚ್ಚುಮೆಚ್ಚಿನ 'ತುಂಟಿ' ಕಾಣೆಯಾಗಿದ್ದಾಳೆ.! ಅರೇ.. ಯಾರೀ ತುಂಟಿ ಅಂತ ಕಣ್ಣು-ಬಾಯಿ ಬಿಡುತ್ತಿದ್ದೀರಾ... ತುಂಟಿ ಬೇರೆ ಯಾರೂ ಅಲ್ಲ ಕಣ್ರೀ. ರಘು ದೀಕ್ಷಿತ್ ರವರ ಮುದ್ದಿನ ನಾಯಿ. ತಮ್ಮ ಮುದ್ದಿನ ನಾಯಿಗೆ ರಘು ದೀಕ್ಷಿತ್ 'ತುಂಟಿ' ಅಂತ ನಾಮಕರಣ ಮಾಡಿದ್ದರು. ಹೆಸರಿಗೆ ಆ ಶ್ವಾನ 'ತುಂಟಿ' ಆಗಿದ್ದರೂ, ತುಂಬಾ ಫ್ರೆಂಡ್ಲಿ. ಹೆಚ್ಚಾಗಿ ಬೊಗಳುತ್ತಿರಲಿಲ್ಲ. ಯಾರನ್ನೂ ಕಚ್ಚುತ್ತಿರಲಿಲ್ಲ. ಇಂತಿಪ್ಪ ತುಂಟಿ 5 ದಿನಗಳಿಂದ ಕಾಣೆಯಾಗಿದ್ದಾಳೆ. ಮೈಸೂರಿನ ಕೆ.ಆರ್.ಮೊಹಲ್ಲಾದಿಂದ 'ತುಂಟಿ' ನಾಪತ್ತೆಯಾಗಿದ್ದಾಳೆ. 'ತುಂಟಿ' ಅಂತ ಯಾರೇ ಕರೆದರೂ ಆಕೆ ಪ್ರತಿಕ್ರಿಯೆ ನೀಡುತ್ತಾಳೆ. ಹೀಗಾಗಿ, ''ತುಂಟಿ' ಏನಾದರೂ ನಿಮ್ಮ ಕಣ್ಣಿಗೆ ಬಿದ್ದರೆ, ದಯವಿಟ್ಟು ತಿಳಿಸಿ'' ಎಂದು ಫೋನ್ ನಂಬರ್ ಸಮೇತ ರಘು ದೀಕ್ಷಿತ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಎಲ್ಲರಲ್ಲಿ ಕೇಳಿಕೊಂಡಿದ್ದಾರೆ. 'ತುಂಟಿ'ಯನ್ನ ಕಂಡು ಹಿಡಿಯಲು ಗುರುತಿಗಾಗಿ ಕುತ್ತಿಗೆಗೆ ಬೆಲ್ಟ್ ಹಾಕಲಾಗಿದ್ಯಾ ಎಂದು ಕೇಳಿದರೆ ರಘು ದೀಕ್ಷಿತ್ ರಿಂದ ಬರುವ ಉತ್ತರ ''ಇಲ್ಲ''. ತುಂಟಿಯನ್ನ ರಘು ದೀಕ್ಷಿತ್ ಯಾವತ್ತೂ ಕಟ್ಟಿ ಹಾಕಿ ಬೆಳೆಸಿರಲಿಲ್ಲ. ರಘು ದೀಕ್ಷಿತ್ ಗೆ ತುಂಟಿ ಸ್ವಾತಂತ್ರ್ಯವಾಗಿ ಓಡಾಡುವುದು ಇಷ್ಟವಿತ್ತು. ಇಷ್ಟು ದಿನ ಫ್ರೀಯಾಗಿ ಓಡಾಡಿಕೊಂಡಿದ್ದ ತುಂಟಿ ಈಗ ಕಳೆದು ಹೋಗಿದ್ದಾಳೆ. ತುಂಟಿಯನ್ನ ಮತ್ತೆ ಆಕೆಯ ಒಡೆಯನೊಂದಿಗೆ ಸೇರಿಸಲು ನೀವೂ ಸಹಾಯ ಮಾಡಿ.. ಗೋಲ್ಡನ್ ಬ್ರೌನ್ ಬಣ್ಣದ ಮಿಡಲ್ ಸೈಜ್ ಇಂಡಿಯನ್ ಮಾಂಗ್ರೆಲ್ ಶ್ವಾನ ನಿಮ್ಮ ಕಣ್ಣೆದುರಿಗೆ ಬಂದ್ರೆ, ಕೂಡಲೆ ರಘು ದೀಕ್ಷಿತ್ ಇನ್ಸ್ಟಾಗ್ರಾಮ್ ಅಕೌಂಟ್ ಗೆ ಭೇಟಿ ಕೊಟ್ಟು ಫೋನ್ ಮಾಡಿ...
2021/06/21 10:32:22
https://kannada.filmibeat.com/news/raghu-dixit-pet-thunti-is-missing-since-5-days-041012.html
mC4
ಜನವರಿಯಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್, ಸಚಿವ ಸಂಪುಟದಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳೇನು? | Digital Kannada Home ಸುದ್ದಿಸಂತೆ ಜನವರಿಯಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್, ಸಚಿವ ಸಂಪುಟದಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳೇನು? ಬಡವರು ಮತ್ತು ದುಡಿಯುವ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಉಪಹಾರ ಹಾಗೂ ಊಟ ಒದಗಿಸುವ ಇಂದಿರಾ ಕ್ಯಾಂಟೀನ್ ಮಹತ್ವಾಕಾಂಕ್ಷಿ ಯೋಜನೆಯನ್ನು ಹೊಸ ವರ್ಷದ ದಿನದಿಂದ ಇಡೀ ರಾಜ್ಯಾದ್ಯಂತ ಆರಂಭಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಹೇಳಿದಿಷ್ಟು… 'ರಾಜ್ಯದ ಎಲ್ಲಾ ಜಿಲ್ಲಾ ತಾಲ್ಲೂಕು ಕೇಂದ್ರಗಳ ಆಸ್ಪತ್ರೆ, ಬಸ್ ನಿಲ್ದಾಣಗಳ ಸಮೀಪ ಇಂದಿರಾ ಕ್ಯಾಂಟೀನ್‍ಗಳನ್ನು ಆರಂಭಿಸಲು ₹ 185 ಕೋಟಿ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 171 ಪ್ರದೇಶಗಳ 246 ಕೇಂದ್ರಗಳಲ್ಲಿ ಜನವರಿ 1, 2018ರಿಂದಲೇ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ. ಕ್ಯಾಂಟೀನ್ ಮೂಲಕ ಪ್ರತಿನಿತ್ಯ ಒಂದು ಲಕ್ಷ ಮಂದಿ ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ, ಇದಕ್ಕಾಗಿ ಸರ್ಕಾರ ಮಾಸಿಕ ₹ 9 ಕೋಟಿ ವೆಚ್ಚ ಮಾಡಲಿದೆ. ಇಂದಿರಾ ಕ್ಯಾಂಟೀನ್‍ಗಳನ್ನು ಸ್ಥಾಪಿಸಲು ನವೆಂಬರ್ 17 ರೊಳಗೆ ಸ್ಥಳ ಗುರುತಿಸಬೇಕು. ಡಿಸೆಂಬರ್ 17 ರೊಳಗೆ ಕಟ್ಟಡ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.' ಉಳಿದಂತೆ ಸಚಿವ ಸಂಪುಟಸಭೆಯಲ್ಲಿ ತೆಗೆದುಕೊಂಡ ಇತರೆ ಪ್ರಮುಖ ನಿರ್ಧಾರಗಳ ಬಗ್ಗೆ ಸಚಿವರು ಹೇಳಿದಿಷ್ಟು ಹೀಗಿವೆ… ಚಳಿಗಾಲದ ವಿಧಾನಮಂಡಲ ಅಧಿವೇಶನವನ್ನು ನವೆಂಬರ್ 13ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ 10 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ವಿಧಾನಸೌಧದ ವಜ್ರ ಮಹೋತ್ಸವ ಆಚರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 25 ರಂದು ವಿಶೇಷ ಅಧಿವೇಶನ ನಡೆಸಲಾಗುವುದು. ಈ ಸಂಬಂಧ ವಿಧಾನಮಂಡಲದ ಕಾರ್ಯಾಲಯದಿಂದ ಮಾಹಿತಿ ಬಂದ ನಂತರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಅಧಿವೇಶನ ಕರೆಯುವ ತೀರ್ಮಾನ ಕೈಗೊಳ್ಳಲಾಗುವುದು. ಡಿಸೆಂಬರ್ ತಿಂಗಳಿನಿಂದ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಉಚಿತವಾಗಿ ಎರಡು ಗ್ಯಾಸ್ ಸಿಲಿಂಡರ್, ಸ್ಟೌ, ಎರಡು ರೀಫಿಲ್ ಹಾಗೂ ಎರಡು ಬರ್ನರ್ ಗಳನ್ನು ಒದಗಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ 1137 ಕೋಟಿ ರೂ ವೆಚ್ಚವಾಗಲಿದೆ. ರಾಜ್ಯದಲ್ಲಿ ಅನಿಲ ಸಂಪರ್ಕ ಪಡೆಯದ ಕುಟುಂಬಗಳ ಸಂಖ್ಯೆ 28 ಲಕ್ಷವಿದೆ ಎಂದು ಅಂದಾಜಿಸಲಾಗಿದ್ದು ಈ ಪೈಕಿ ಎಂಟು ಲಕ್ಷ ಕುಟುಂಬಗಳು ಕೇಂದ್ರದ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಗಳನ್ನು ಪಡೆಯಲಿವೆ. ಅವುಗಳನ್ನು ಹೊರತುಪಡಿಸಿ ಇಪ್ಪತ್ತು ಲಕ್ಷ ಕುಟುಂಬಗಳಿಗೆ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಅನುಕೂಲ ಮಾಡಿಕೊಡಲು ನಿರ್ಧರಿಸಲಾಗಿದೆ. ಮುಂಬರುವ ಮಾರ್ಚ್ ಒಳಗಾಗಿ ಹತ್ತು ಲಕ್ಷ ಕುಟುಂಬಗಳಿಗೆ ಯೋಜನೆಯ ಅನುಕೂಲ ಮಾಡಿಕೊಡಲಾಗುವುದು ಎಂದರು. ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ಲೀಟರ್ ಸೀಮೆಎಣ್ಣೆ ಪಡೆಯುತ್ತಿರುವವರು ಆ ಸೌಲಭ್ಯವನ್ನು ಹಿಂತಿರುಗಿಸಿದರೆ ಅವರಿಗೆ ಪುನರ್ ಬೆಳಕು ಯೋಜನೆಯಡಿ ಎಲ್‍ಇಡಿ ಬಲ್ಬ್ ನೀಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು 10 ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಪ್ಲೊಮಾ ಇನ್ ನ್ಯಾಷನಲ್ ಬೋರ್ಡ್ ಕೋರ್ಸ್‍ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಚಿತ್ರದುರ್ಗ, ಕೋಲಾರ, ತುಮಕೂರು, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಕಲಬುರಗಿ ಹಾಗೂ ವಿಜಯಪುರ ಜಿಲ್ಲಾಸ್ಪತ್ರೆಗಳಲ್ಲಿ ಮತ್ತು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂ.ಬಿ.ಬಿ.ಎಸ್. ವೈದ್ಯರಿಗೆ ಡಿ.ಎನ್.ಬಿ (ಡಿಪ್ಲೋಮಾ ಇನ್ ನ್ಯಾಷನಲ್ ಬೋರ್ಡ್) ಕೋರ್ಸ್‍ಗಳನ್ನು ಅಧ್ಯಯನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು. ಆರೋಗ್ಯ ಕವಚ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ 108 ಅಂಬುಲೆನ್ಸ್ ಗಳು ಸುಸ್ಥಿತಿಯಲ್ಲಿಲ್ಲದೇ ಇರುವುದರಿಂದ 95 ವೆಂಟಿಲೇಟರ್ ಸೌಲಭ್ಯ ಇರುವ ಅಂಬುಲೆನ್ಸ್‍ಗಳು ಹಾಗೂ 276 ಜೀವರಕ್ಷಕ ಆಂಬುಲೆನ್ಸ್ ಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸುಮಾರು ₹ 61 ಕೋಟಿ ವೆಚ್ಚ ಮಾಡಲಾಗುವುದು, ಆ ಮೂಲಕ 108 ಸೇವೆಯನ್ನು ಉತ್ತಮಪಡಿಸಲಾಗುವುದು ಎಂದರು.
2021/05/11 08:17:47
https://digitalkannada.com/2017/10/11/indira-canteen-all-districts-and-cabinet-meeting-decisions/
mC4
ರೈತರು-ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ ಸಸ್ಯ ಸಂತೆ | Udayavani – ಉದಯವಾಣಿ Team Udayavani, Jun 13, 2019, 4:04 PM IST ಕೊಪ್ಪಳ: ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಸಸ್ಯ ಸಂತೆ. ಕೊಪ್ಪಳ: ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್‌ ಆಯೋಜಿಸಿರುವ ಸಸ್ಯ ಸಂತೆ ರೈತರನ್ನು ಹಾಗೂ ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ. ತೋಟಗಾರಿಕೆ ಸಸ್ಯಗಾರಗಳಲ್ಲಿ ವೈಜ್ಞಾನಿಕವಾಗಿ ಉತ್ಪಾದಿಸಿದ ಮತ್ತು ನುರಿತ ಅಧಿಕಾರಿಗಳಿಂದ ದೃಢೀಕರಿಸಿದ ಅನೇಕ ಸಸಿ, ಕಸಿಗಳ-ಹಣ್ಣಿನ ಸಸಿಗಳು, ಹೂವು, ತರಕಾರಿ ಅಷ್ಟೇ ಅಲ್ಲದೇ ಅಲಂಕಾರಿಕ ಸಸಿಗಳು, ತೆಂಗಿನ ಸಸಿಗಳು ಅಲ್ಲದೇ ತೋಟಗಾರಿಕೆಯಲ್ಲಿ ಬಳಸಲ್ಪಡುವ ಜೈವಿಕ ಗೊಬ್ಬರಗಳು, ಸಾವಯವ ಗೊಬ್ಬರಗಳು ಮತ್ತು ಕೃಷಿ ಸಲಕರಣೆ, ಬೀಜಗಳು, ಇಲಾಖೆಯ ಯೋಗ್ಯ ದರದಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಸುವುದು. ಅಲ್ಲದೇ ರೈತರಿಗೆ ತೋಟಗಾರಿಕೆ ಬಗ್ಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಸಸ್ಯಸಂತೆಯನ್ನು ಆಯೋಜಿಸಲಾಗಿದೆ. ಹವ್ಯಾಸಿ ತೋಟಗಾರರಿಗೆ ಮತ್ತು ತೋಟಗಾರಿಕೆಯಲ್ಲಿ ಆಸಕ್ತಿಯುಳ್ಳವರಿಗೆ ಮತ್ತು ವಿಷಮುಕ್ತ ಆಹಾರ ಉತ್ಪಾದಿಸುವ ಬಗ್ಗೆ ಕೈ ತೋಟ, ತಾರಸಿ ತೋಟ ಅಲ್ಲದೇ ತೋಟಗಾರಿಕೆಗೆ ಸಂಬಂಧಿಸಿದ ಉಪಕಸುಬುಗಳಾದ ಜೇನು ಸಾಕಾಣೆ, ಅಣಬೆ ಕೃಷಿಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ತಜ್ಞರಿಂದ ಮಾಹಿತಿ ನೀಡಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನಗಳಾದ ಜಲಕೃಷಿ, ಹನಿ ನೀರಾವರಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಪರಿಸರ ಸ್ವಚ್ಛಗೊಳಿಸುವ ಹಾಗೂ ನೀರಿನ ಸದ್ಬಳಕೆ ಮಾಡುವುದರ ಮೂಲಕ ರೋಗಗಳನ್ನು ತಡೆಗಟ್ಟುವ ವಿಧಾನಗಳನ್ನು ಸಸ್ಯ ಸಂತೆಯಲ್ಲಿ ಪ್ರಾತ್ಯಕ್ಷಿತೆ ಮೂಲಕ ತೋರಿಸಲಾಗುತ್ತಿದೆ. ಸಸ್ಯ ಸಂತೆಯಲ್ಲಿ ಹಣ್ಣಿನ ಬೆಳೆಗಳಾದ ವಿವಿಧ ತಳಿ ಮಾವು, ನಿಂಬೆ, ಪೇರಲ, ಅಂಜೂರ, ನೇರಳೆ, ಕರಿಬೇವು, ನುಗ್ಗೆ, ತೆಂಗು ಅಲ್ಲದೇ ಹೂವಿನ ಬೆಳೆಗಳಾದ ಅನೇಕ ಬಣ್ಣ ಬಣ್ಣದ ಗುಲಾಬಿ, ದಾಸವಾಳ, ಮಲ್ಲಿಗೆ, ಪಾರಿಜಾತ ಮತ್ತು ಅಲಂಕಾರಿಕ ಗಿಡಗಳಾದ ಕ್ರೋಟನ್ಸ್‌, ಸೈಪ್ರಸ್‌, ಕ್ಯಾಕ್ಟಸ್‌, ಬೋನ್ಸಾಯ್‌ ಮಾದರಿ ಗಿಡಗಳು ಯೋಗ್ಯ ದರದಲ್ಲಿ ದೊರೆಯುತ್ತವೆ. ಇದಲ್ಲದೇ ಕೊಳವೆ ಬಾವಿ ಜಲ ಮರುಪೂರಣದ ಮಾದರಿ, ನಿರಂತರ ಆದಾಯಕ್ಕೆ ತೋಟಗಾರಿಕೆ ಬಗ್ಗೆ ಮಾಹಿತಿ ಅಲ್ಲದೇ ರೈತರಿಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ರೈತರಿಗೆ ತೋಟಗಾರಿಕೆಗೆ ಸಂಬಂಧಿಸಿದ ಅನೇಕ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸಸ್ಯ ಸಂತೆಯಲ್ಲಿ 3 ದಿನಗಳಿಂದ 4ರಿಂದ 05 ಲಕ್ಷದಷ್ಟು ವಹಿವಾಟು ಆಗಿದೆ. ತೆಂಗಿನ ಸಸಿಗಳು ಸುಮಾರು 1.50 ಲಕ್ಷದಷ್ಟು ಮಾರಾಟವಾಗಿವೆ. ರೈತರು, ಸಾರ್ವಜನಿಕರು ತಮಗೆ ಬೇಕಾದ ಅನೇಕ ಹಣ್ಣಿನ ಸಸಿಗಳು, ಹೂವಿನ ಸಸಿಗಳು, ಅಲಂಕಾರಿಕ ಗಿಡಗಳನ್ನು ಕಡಿಮೆ ದರದಲ್ಲಿ ಖರೀದಿಸಿರುತ್ತಾರೆ. ಈಗಾಗಲೇ 5 ಲಕ್ಷಕ್ಕೂ ಮೀರಿ ಮುಂಗಡವಾಗಿ ವಿವಿಧ ಸಸಿಗಳನ್ನು ಕಾಯ್ದಿರಿಸಿದ್ದಾರೆ. ಒಟ್ಟು 10 ಲಕ್ಷದಷ್ಟು ತರಕಾರಿ, ಹೂವಿನ ಮತ್ತು ಇತರೆ ಸಸಿಗಳನ್ನು ಉತ್ಪಾದಿಸಿ ಪೂರೈಸಲು ರೈತರು ಮತ್ತು ಗ್ರಾಹಕರು ಬೇಡಿಕೆ ಸಲ್ಲಿಸಿದ್ದು, ಇಲಾಖೆಯು ಅವುಗಳ ಪೂರೈಸುವ ಜವಾಬ್ದಾರಿ ವಹಿಸಿಕೊಂಡಿದೆ.
2020/04/01 18:51:46
https://www.udayavani.com/district-news/kkoppala-department-of-horticulture
mC4
ಕಾನೂನು ತಜ್ಞರ ವರದಿ ಮೇರೆಗೆ ಅಂಗಡಿ ಇ ಹರಾಜು | Udayavani – ಉದಯವಾಣಿ Sunday, 28 Feb 2021 | UPDATED: 06:07 PM IST ಕಾನೂನು ತಜ್ಞರ ವರದಿ ಮೇರೆಗೆ ಅಂಗಡಿ ಇ ಹರಾಜು Team Udayavani, Feb 23, 2021, 3:34 PM IST ಕೆಜಿಎಫ್: ರಾಬರ್ಟಸನ್‌ಪೇಟೆ ನಗರಸಭೆಗೆ ಸೇರಿದ ಅಂಗಡಿಗಳನ್ನು ಇ ಹರಾಜು ಮಾಡುವ ಬಗ್ಗೆಸ್ಥಳದಲ್ಲಿಯೇ ತೀರ್ಮಾನ ತೆಗೆದುಕೊಳ್ಳು ವುದಿಲ್ಲ. ಜನಪ್ರತಿನಿಧಿಗಳ ಮತ್ತು ಕಾನೂನು ತಜ್ಞರ ವರದಿ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಹೇಳಿದರು. ನಗರಕ್ಕೆ ಸೋಮವಾರ ಭೇಟಿ ನೀಡಿದ ಅವರು, ಎಂ.ಜಿ.ಮಾರುಕಟ್ಟೆ ಮತ್ತು ಆಂಡರಸನ್‌ಪೇಟೆಯ ಮಾರುಕಟ್ಟೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ ವರ್ತಕರ ಜೊತೆ ಮಾತನಾಡಿದರು. ಏನಾದರೂ ಆಗಬಹುದು: ನಂತರ ನಗರಸಭೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಎರಡು ಗಂಟೆ ಮಾರುಕಟ್ಟೆಯಲ್ಲಿ ಓಡಾಡಿಕೊಂಡು ಬಂದಿದ್ದೇನೆ. ಅವರ ಮಾತುಗಳನ್ನು ಆಲಿಸಿದ್ದೇನೆ. ಮಾನವೀಯತೆ ದೃಷ್ಟಿ ಯಿಂದ ನೋಡಬೇಕಾಗಿದೆ.ಆದರೆ ಈಗಲೇ ಏನು ಆಶ್ವಾಸನೆ ನೀಡುವುದಕ್ಕೆ ಆಗುವುದಿಲ್ಲ. ಸಂಸದರು, ಶಾಸಕರು ಮತ್ತು ಕಾನೂನು ತಜ್ಞರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು. ಇ ಹರಾಜಿನಲ್ಲಿ ಈಗಾಗಲೇ ಅಂಗಡಿಯಲ್ಲಿ ಇರುವವರು ಶೇ.3 ರಿಂದ 5 ರಷ್ಟು ಹಣ ಹೆಚ್ಚುವರಿ ಕಟ್ಟಿ, ಅಂಗಡಿಗಳನ್ನು ಮರಳಿ ಪಡೆಯುವ ಅವಕಾಶ ಇದೆ ಎಂದರು. ಕಳಪೆ ಕಾಮಗಾರಿ: ನಂತರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಗರಸಭೆ ಕಾಮಗಾರಿ ಗುಣಮಟ್ಟ ಕೆಟ್ಟದಾಗಿದೆ. ಅಮೃತ ಸಿಟಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳಲ್ಲಿ ಜಲಮಂಡಳಿ ಮತ್ತು ನಗರಸಭೆ ನಡೆಸಿರುವ ಕಾಮಗಾರಿ ಬಗ್ಗೆ ತನಿಖೆ ನಡೆಸುತ್ತೇನೆ ಎಂದರು. ಇಲ್ಲಿನವರಿಗೆ ನೀಡಿ: ಎಂ.ಜಿ.ಮಾರುಕಟ್ಟೆಯ ವರ್ತಕರ ಬಗ್ಗೆ ಮಾತನಾಡಿದ ಅವರು, ಕೋಲಾರದಲ್ಲಿ ನಡೆದ ಹರಾಜು ಪ್ರಕ್ರಿಯೆ ಇಲ್ಲಿ ಆಗಬಾರದು. ಇಲ್ಲಿನ ಮಾರುಕಟ್ಟೆಯಲ್ಲಿರುವ ವರ್ತಕರಿಗೆ ಅಂಗಡಿ ನೀಡಬೇಕು ಎಂದು ಮನವಿ ಮಾಡಿದರು. ವಿಶೇಷ ಪ್ರಕರಣವಾಗಿ ಪರಿಗಣಿಸಿ: ಶಾಸಕಿ ಎಂ. ರೂಪಕಲಾ ಕೂಡ ಮನವಿ ಮಾಡಿ, ವರ್ತಕರು ಸ್ವಂತಖರ್ಚಿನಿಂದ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ವಿಶೇಷ ಪ್ರಕರಣ ಎಂದು ಭಾವಿಸಿ ಅಂಗಡಿಗಳನ್ನು ನೀಡಬೇಕು ಎಂದರು. ವಿಧಾನಪರಿಷತ್‌ ಸದಸ್ಯ ನಜೀರ್‌ ಅಹ್ಮದ್‌, ಸದಸ್ಯರುಗಳಾದ ಎಸ್‌.ರಾಜೇಂದ್ರನ, ರಮೇಶ್‌ ಕುಮಾರ್‌ ಮಾತನಾಡಿದರು. ಯೋಜನಾಧಿಕಾರಿ ರಂಗಸ್ವಾಮಿ ಮತ್ತು ನಗರಸಭೆ ಆಯುಕ್ತೆ ಸರ್ವರ್‌ ಮರ್ಚೆಂಟ್‌ ಮಾಹಿತಿ ನೀಡಿದರು. 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ನಗರಸಭೆ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿಕಾವೇರಿ ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ, ಉಪಾಧ್ಯಕ್ಷೆ ದೇವಿ ಗಣೇಶ್‌, ಉಪ ವಿಭಾಗಾಧಿಕಾರಿ ಸೋಮಶೇಖರ್‌, ತಹಶೀಲ್ದಾರ್‌ ಕೆ.ಎನ್‌.ಸುಜಾತ ಇದ್ದರು. ಪೊಲಿಸರಿಗೆ ತರಾಟೆ : ಸಚಿವ ಎಂಟಿಬಿ ನಾಗರಾಜ್‌ ಅವರನ್ನು ಸ್ವಾಗತಿಸುವ ನೆಪದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಬಲಾಬಲ ಪ್ರದರ್ಶನ ಮಾಡಿದವು. ತಳ್ಳಾಟ ಮತ್ತು ನೂಕಾಟ ನಡೆಯಿತು. ಮಾರುಕಟ್ಟೆ ಪ್ರವೇಶ ಮಾಡಲು ಯತ್ನಿಸಿದ ಶಾಸಕಿ ರೂಪಕಲಾ ಅವರನ್ನು ತಳ್ಳಾಡಲಾಯಿತು. ಇದರಿಂದ ಕುಪಿತಗೊಂಡ ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಚಿವರೇ ಸಮಾಧಾನ ಮಾಡಿದರು.
2021/02/28 12:39:28
https://www.udayavani.com/district-news/kolar-news/store-e-auction-on-legal-experts-report
mC4
ಕಂಬಳ: ಸುಗ್ರೀವಾಜ್ಞೆ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ | Prajavani ಕಂಬಳ: ಸುಗ್ರೀವಾಜ್ಞೆ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ ನವದೆಹಲಿ: ರಾಜ್ಯದ ಕರಾವಳಿ ಭಾಗದ ಜನಪ್ರಿಯ ಕ್ರೀಡೆಯಾದ ಕಂಬಳಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಸ್ವಯಂ ಸೇವಾ ಸಂಸ್ಥೆ ಪೆಟಾ ಇಂಡಿಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಸೋಮವಾರ ಇತ್ಯರ್ಥಪಡಿಸಿತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಪ್ರಕರಣವನ್ನು ಇತ್ಯರ್ಥಪಡಿಸಿ ಆದೇಶ ನೀಡಿತು. ಅಲ್ಲದೆ, ಕಂಬಳಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಸರ್ಕಾರ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ್ದನ್ನೇ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ಇದೆ ಎಂದೂ ನ್ಯಾಯಪೀಠ ತಿಳಿಸಿತು. ಕಂಬಳಕ್ಕೆ ಅನುಮತಿ ನೀಡಲು ರಾಜ್ಯ ಸರ್ಕಾರ ಕರ್ನಾಟಕ ಪ್ರಾಣಿ ಹಿಂಸೆ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರಾಷ್ಟ್ರಪತಿ ಅಂಕಿತ ದೊರೆತಿದೆ. ಈ ತಿದ್ದುಪಡಿ ಕಾಯ್ದೆ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಕಂಬಳಕ್ಕೆ ಅವಕಾಶ ನೀಡಿದ್ದ ಸುಗ್ರೀವಾಜ್ಞೆ ಈಗಾಗಲೇ ಅನೂರ್ಜಿತವಾಗಿದ್ದು, ಅದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಮಹತ್ವ ಕಳೆದುಕೊಂಡಿದೆ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ದೇವದತ್ತ ಕಾಮತ್ ವಿವರಿಸಿದರು.
2019/01/21 04:09:19
https://www.prajavani.net/news/article/2018/03/12/559111.html
mC4
ಪ್ರೇಮತಾಣ: 2014 ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ. ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ ಒಂದೆರಡು ಮಾತಾಡಿ ಕಿಟಕಿಯತ್ತ ತಿರುಗಿದೆ. ಕಂಡಕ್ಟರ್ ಎಲ್ಲರ ಟಿಕೆಟ್ ಪರಿಶೀಲಿಸಿ ದೀಪಗಳನ್ನು ಆರಿಸುವ ಹೊತ್ತಿಗೆ ಮುಕ್ಕಾಲು ಗಂಟೆ ಕಳೆದುಹೋಗಿ ದಿಂಡಿವನಂ ಬಂದಾಗಿತ್ತು. ಅಲ್ಲಿ ಎರಡು ನಿಮಿಷ ನಿಂತ ಶಾಸ್ತ್ರ ಮಾಡಿ ಹೊರಟ ಬಸ್ಸು ಮತ್ತೆ ಕತ್ತಲುಗಟ್ಟಿದಂತೆ ನಾನು ಸೀಟನ್ನು ಹಿಂದಕ್ಕೆ ವಾಲಿಸಿ ಕಣ್ಣುಮುಚ್ಚಿದೆ. ಎಚ್ಚರವಾದದ್ದು ಊತಂಗರೈ ತಲುಪಿದಾಗಲೇ. ಗಡಿಯಾರ ನೋಡಿದೆ. ಒಂದೂಮುಕ್ಕಾಲಾಗಿತ್ತು. ಕೆಳಗಿಳಿದು ಹೋಗಿ ಟೀ ಕುಡಿದು ಬಂದು ಮತ್ತೆ ಕಣ್ಣು ಮುಚ್ಚಿದೆ. ಪಕ್ಕದ ಸೀಟಿನವನು ಅದ್ಯಾವಾಗ ಬಂದು ಕೂತನೋ ಗೊತ್ತಾಗಲಿಲ್ಲ. ನನಗೆ ಮತ್ತೆ ನಿದ್ದೆ ಆವರಿಸಿತ್ತು. ಇದ್ದಕ್ಕಿದ್ದಂತೆ ಮುಖಕ್ಕೆ ಬಿಸಿಗಾಳಿ ರಾಚಿದಂತಾಗಿ ಗಕ್ಕನೆ ಕಣ್ಣುಬಿಟ್ಟೆ. ಬಸ್ಸು ನಿಂತಿತ್ತು. ದೀಪಗಳಿಲ್ಲದ ಕತ್ತಲು. ಜತೆಗೇ ಬಸ್ಸಿಡೀ ಮಂಜು ಮುಸುಕಿದಂತಿದ್ದು ಏನೂ ಸರಿಯಾಗಿ ಕಾಣುತ್ತಿರಲಿಲ್ಲ. ಬಸ್ಸಿನ ಮುಂಭಾಗದಿಂದ ಕ್ಷೀಣವಾಗಿ "ಭೊಸ್" ಎಂಬ ಶಬ್ಧ ಕೇಳಿಬರುತ್ತಿತ್ತು. ಏನಾಗಿದೆಯೆಂದು ಗೊತ್ತಾಗದೇ ಗಾಬರಿಯಾಯಿತು. ಪಕ್ಕ ತಿರುಗಿದರೆ ಸೀಟು ಖಾಲಿ. ಏಳಲು ಹೋದರೆ ಮುಂದುಗಡೆಯ ಸೀಟು ನನ್ನ ಎದೆಯ ಮೇಲೆ ಇದ್ದಂತೆನಿಸಿ ಮತ್ತೆ ಹಿಂದಕ್ಕೆ ಕುಸಿದೆ. "ಸೀಟನ್ನ ಸ್ವಲ್ಪ ಮುಂದಕ್ಕೆ ಮಾಡ್ಕೊಳ್ರೀ" ಎಂದು ಮುಂದಿದ್ದವರಿಗೆ ಹೇಳಿದೆ. ಯಾವ ಉತ್ತರವೂ ಬರಲಿಲ್ಲ. ಸೀಟೂ ಅಲುಗಲಿಲ್ಲ. ಅವಯಾರೋ ಇನ್ನೂ ಮಲಗಿಯೇ ಇದ್ದಾರೇನೋ, ಎಬ್ಬಿಸೋಣ ಎಂದುಕೊಂಡು ಮುಂದೆ ಕೈಚಾಚಿದೆ. ಸೀಟು ಖಾಲಿಯಾಗಿತ್ತು. ಅಲ್ಲಿದ್ದ ಮಹಾಶಯ ಸೀಟನ್ನು ಹಾಗೇ ಬಿಟ್ಟು ಎದ್ದು ಓಡಿಹೋಗಿದ್ದ. ನನ್ನ ಸೀಟಿಗೆ ಅಂಟಿದಂತೇ ಮೆಲ್ಲಮೆಲ್ಲಗೆ ಪಕ್ಕಕ್ಕೆ ಜರುಗಿ ಕಷ್ಟಪಟ್ಟು ಹೊರಬಂದೆ. "ದಾರಿ ಬಿಡಪ್ಪ. ಎಲ್ಲಾ ಇಳಿದಾಯ್ತು" ಎಂಬ ಹೆಣ್ಣುದನಿ ಕೇಳಿ ಹಿಂದೆ ತಿರುಗಿದರೆ ಒಬ್ಬಳು ದಪ್ಪ ದೇಹದ ಹೆಂಗಸು ನನ್ನ ಹಿಂದೆ ನಿಂತಿದ್ದಳು. "ಏನಾಗಿದೆಯಮ್ಮ?" ಎಂದು ಕೇಳುತ್ತಲೇ ಬಾಗಿಲತ್ತ ನಡೆದೆ. "ಅದೇನೋ ಗೊತ್ತಿಲ್ಲ ಕಣಪ್ಪ. ಇದ್ದಕ್ಕಿದ್ದ ಹಾಗೆ ಮುಂದುಗಡೆಯಿಂದ `ಬೊಸ್ಸೋ' ಅನ್ನೋ ಸದ್ದು ಬಂದು ಬಸ್ಸು ನಿಂತುಬಿಡ್ತು. ಮುಖದ ಮೇಲೆಲ್ಲಾ ಯಾರೋ ಬಿಸಿ ಹಬೆ ಊದಿದ ಹಾಗಾಯ್ತು. ಬಸ್ ನಿಂತದ್ದೇ ಎಲ್ಲರೂ ಧಡಧಡನೆ ಇಳಿದುಟ್ರು. ಈ ಸೀಟುಗಳ ಮಧ್ಯೆ ಸಿಕ್ಕು ತಕ್ಷಣ ಹೊರಕ್ಕೆ ಬರೋದಿಕ್ಕೆ ಆಗ್ಲಿಲ್ಲ" ಅಂದರು ಆಕೆ. ಎಂಜಿನ್ ಪಕ್ಕದಲ್ಲಿದ್ದ ಬಾಗಿಲು ಸಮೀಪಿಸಿದಂತೇ ಅಲ್ಲಿ ಬಿಸಿಹಬೆ ದಟ್ಟವಾಗಿದ್ದಂತೆ ಕಂಡಿತು. ಕೆಳಗಿಳಿದೆ. ನನ್ನ ಹಿಂದೆ ಆಕೆಯೂ "ಉಸ್ಸಪ್ಪಾ" ಎನ್ನುತ್ತಾ ಇಳಿದರು. ಹಿಂದೆ ಇನ್ನೂ ಒಂದಿಬ್ಬರು ಗೊಣಗಾಡುತ್ತಾ ಇಳಿದರು. ಸಹಪ್ರಯಾಣಿಕರೆಲ್ಲರೂ ಗುಂಪುಗಟ್ಟಿ ನಿಂತು ಮಾತಾಡಿಕೊಳ್ಳುತ್ತಿದ್ದರು. ಕನ್ನಡ ತಮಿಳು ಇಂಗ್ಲೀಷ್ ಮೂರೂ ಬೆರೆತು ಗೊಂದಲವೋ ಗೊಂದಲ. ನನ್ನ ಪಕ್ಕದ ಸೀಟಿನವ ಗುಂಪಿನಂಚಿನಲ್ಲಿ ಸೈಂಧವನಂತೆ ಎತ್ತರಕ್ಕೆ ನಿಂತಿದ್ದ. ನನ್ನನ್ನು ನೋಡಿದವನೇ "ಎದ್ ಬಂದ್ರಾ? ಅದೇನೋ ರೇಡಿಯೇಟರ್ ಹಾಳಾಗಿದೆಯಂತೆ. ಏನೋ ಲೀಕೇಜ್ ಅಂತೆ. ಮುಂದುಗಡೆಯಿಂದ `ಡಬ್' ಅನ್ನೋ ಸದ್ದು ಬಂತು. ತಕ್ಷಣ ಯಾರೋ ಮುಖದ ಮೇಲೇ ಬಿಸಿನೀರು ಎರಚಿದ ಹಾಗೆ ಆಗಿಬಿಡ್ತು" ಅಂದ. "ನಿಮ್ಮನ್ನ ಎಬ್ಬಿಸ್ದೆ. ನೀವು ಏಳಲೇ ಇಲ್ಲ" ಎಂದೂ ಸೇರಿಸಿದ. ಗಡಿಯಾರ ನೋಡಿದೆ. ಎರಡೂಮುಕ್ಕಾಲಾಗುತ್ತಿತ್ತು. ಬಸ್ಸು ಮುಂದೆ ಹೋಗುವುದಿಲ್ಲವೆಂದು ಮುಂದಿನ ಐದು ನಿಮಿಷಗಳಲ್ಲಿ ತಿಳಿದುಬಂತು. "ಬೆಂಗಳೂರು ಡಿಪೋದಿಂದ ಸ್ಪೇರ್ ಬಸ್ ತರಿಸೋಕೆ ಆಗೋಲ್ಲ. ಎಲ್ಲರೂ ಸಿಕ್ಕಿದ ಬಸ್ಸುಗಳಲ್ಲಿ ಹತ್ತಿ ಹೊರಟುಬಿಡಿ. ಸ್ವಲ್ಪ ಹಣ ರಿಫಂಡ್ ಸಿಗುತ್ತೆ. ಅದನ್ನ ಅಲ್ಲೇ ಬೆಂಗ್ಳೂರಲ್ಲೇ ತಗೋಬೋದು. ನಿಮ್ ನಿಮ್ಮ ಟಿಕೇಟ್‌ಗಳನ್ನ ಭದ್ರವಾಗಿ ಇಟ್ಕೊಳ್ಳಿ. ಅಲ್ಲಿ ಬೆಂಗ್ಳೂಲಿ ತೋರಿಸ್ಬೇಕಾಗುತ್ತೆ. ಇಲ್ಲಾಂದ್ರೆ ರಿಫಂಡ್ ಕಷ್ಟ" ಅಂದ ಕಂಡಕ್ಟರ್ ರಸ್ತೆ ದಾಟಿ ಪೊದೆಗಳತ್ತ ಸರಿದುಹೋದ. ಒಂದಷ್ಟು ಜನ ಅವನಿಗೂ, ಸಾರಿಗೆ ಸಂಸ್ಥೆಗೂ ಶಾಪ ಹಾಕಿದರು. ಒಬ್ಬ "ಕರಾರಸಾನಿ ಅಂದರೆ ಕಡೇವರೆಗೂ ರಾದ್ಧಾಂತ ರಗಳೆಗಳೊಡನೆ ಸಾಗಿಸೋ ನಿಗಮ" ಅಂದ. ಇನ್ನೊಬ್ಬ ಪೈಪೋಟಿಯಲ್ಲಿ "ಸುವರ್ಣ ಕರ್ನಾಟಕ ಸಾರಿಗೆ! ಸಾರಿಗೆ ಉಪ್ಪೇ ಇಲ್ಲ!" ಎಂದು ಹೇಳಿ ನಕ್ಕ. ಮತ್ತಾರೂ ನಗಲಿಲ್ಲ. "ಈ ನನ್ ಮಕ್ಳನ್ನ ಹಿಡಕೊಂಡು ಬಡಿಬೇಕು, ಇವರ್ ಹೆಂಡ್ರನ್ನ. ಥೂ!" ಮತ್ತೊಬ್ಬ ಕ್ಯಾಕರಿಸಿ ಉಗಿದ. ವಾಹನವೊಂದರ ಪ್ರಖರ ಬೆಳಕು ಹತ್ತಿರಾಯಿತು. ಒಂದು ಪಕ್ಕದಲ್ಲಿ ಕೈಕಟ್ಟಿಕೊಂಡು ನಿಂತಿದ್ದ ನಮ್ಮ ಡ್ರೈವರ್ ರಸ್ತೆಯ ಮಧ್ಯಕ್ಕೆ ಓಡಿಹೋಗಿ ಬಸ್ಸನ್ನು ನಿಲ್ಲಿಸಿದ. ಅಷ್ಟರಲ್ಲಾಗಲೇ ಏಳೆಂಟು ಜನ ಧಡಬಡನೆ ನಮ್ಮ ಬಸ್ಸಿನೊಳಗೆ ನುಗ್ಗಿ ತಮ್ಮ ಸಾಮಾನುಗಳನ್ನೆತ್ತಿಕೊಂಡು ಅತ್ತ ದೌಡಾಯಿಸಿದರು. ಗುಂಪು ಕಾಲುಭಾಗದಷ್ಟು ಕರಗಿತು. ನಾನೂ ಒಳಗೆ ಹೋಗಿ ನನ್ನ ಚೀಲವನ್ನೆತ್ತಿಕೊಂಡು ಬಂದೆ. ನಂತರ ಬಂದ ಎರಡು ಬಸ್ಸುಗಳಲ್ಲೂ ನಿಲ್ಲಲು ಮಾತ್ರ ಸ್ಥಳವಿತ್ತು. ಆದರೂ ಒಂದಿಬ್ಬರು ಹತ್ತಿಕೊಂಡರು. ಹೊಸೂನಲ್ಲಿ ಸೀಟ್ ಸಿಗತ್ತೆ ಬನ್ನಿ ಎಂದು ಕಂಡಕ್ಟರ್ ಕರೆದಾಗ ಹತ್ತಿಬಿಡೋಣ ಎಂದು ಒಂದುಕ್ಷಣ ಅನಿಸಿದರೂ ಒಂದೂವರೆ ಗಂಟೆ ತೂಕಡಿಸುತ್ತಾ ನಿಲ್ಲುವುದು ಕಷ್ಟ ಎನಿಸಿ ಸುಮ್ಮನಾದೆ. ವೇಗವಾಗಿ ತೂರಿಬರುತ್ತಿದ್ದ ಟಾಟಾ ಸುಮೋವೊಂದನ್ನು ನಾಕೈದು ಜನ ಅಡ್ಡಗಟ್ಟಿ ನಿಲ್ಲಿಸಿದರು. ಡ್ರೈವರ್ ಜತೆ ದರದ ಚೌಕಾಶಿಯ ನಂತರ ಮೂರು ಜನ ಅದರೊಳಗೆ ಸೇರಿಕೊಂಡರು. ಹಿಂದೆಯೇ ಬಸ್ಸೊಂದು ಬಂತು. ಅದರಲ್ಲಿ ಕೂರಲು ಸ್ಥಳವೇನೋ ಇತ್ತು. ಆದರೆ ಏಳೆಂಟು ಜನ ಯುವಕರು ನನ್ನನ್ನು ಅತ್ತ ನೂಕಿ ಒಳತೂರಿಕೊಂಡರು. ಬೇಸರದಲ್ಲಿ ಹಿಂದಕ್ಕೆ ಬಂದು ನಿಂತೆ. ನಿಟ್ಟುಸಿರೊಂದು ಕೇಳಿ ಪಕ್ಕಕ್ಕೆ ತಿರುಗಿದೆ. ಹೆಗಲಲ್ಲಿ ತೆಳುವಾದ ಚೀಲ, ಬಲಗೈಯಲ್ಲಿ ಪುಟ್ಟ ಸೂಟ್‌ಕೇಸ್ ಹಿಡಿದುಕೊಂಡು ಒಬ್ಬಾಕೆ ನಿಂತಿದ್ದಳು. "ಇದೇನ್ ಸಾರ್ ಹಿಂಗಾಯ್ತಲ್ಲಾ" ಅಂದಳು. "ನೀವು ಬೆಂಗಳೂರಿಗೋ?" ಎಂದೂ ಕೇಳಿದಳು. "ಹೌದು. ನೀವು?" ಅಂದೆ. "ನಾನಾ? ನಾನೂ ಅಲ್ಲಿಗೇ ಹೋಗ್ತಾ ಇದೀನಿ. ಕೊನೇತಂಗಿಗೆ ಮಗು ಹುಟ್ಟಿದೆ. ನೋಡೋದಿಕ್ಕೆ ಹೋಗ್ತಿದೀನಿ" ಎಂದು ಹೇಳಿದಾಕೆ ಸರಳ ಸ್ನೇಹಪರಳಂತೆ ಕಂಡಳು. ಅವಳತ್ತಲೇ ನೋಡಿದೆ. ಚಂದ್ರನ ನಸುಬೆಳಕಿನಲ್ಲಿ ಕಂಡದ್ದು ನಲವತ್ತರ ಅಸುಪಾಸಿನ ದುಂಡನೆಯ ನಗುಮುಖ. ತಲೆಗೆ ಒತ್ತಿದಂತೆ ಬಿಗಿದು ಬಾಚಿದ ಕೂದಲು. ಹಸಿರು ರೇಶಿಮೆ ಸೀರೆ ರವಿಕೆ. ಅಗಲ ಕಣ್ಣುಗಳು ನಿದ್ದೆಯಲ್ಲಿ ತೇಲುತ್ತಿದ್ದವು. "ಏನೂ ಹೆದರೋದು ಬೇಡ. ಸ್ವಲ್ಪ ಹೊತ್ತು ಕಾಯೋಣ. ತಮಿಳುನಾಡಲ್ಲೇನು ರಾತ್ರಿಯೆಲ್ಲಾ ಬಸ್ಸುಗಳು ಸಿಗ್ತವೆ" ಅಂದೆ ಆಕೆಯಲ್ಲಿ ಧೈರ್ಯ ತುಂಬುವ ಉದ್ದೇಶದಿಂದ. ಅದೇ ಗಳಿಗೆಗೆ ಸರಿಯಾಗಿ ಖಾಲಿ ಟ್ಯಾಕ್ಸಿಯೊಂದು ಬಂದು ಗಕ್ಕನೆ ನಿಂತಿತು. "ಬೆಂಗ್ಳೂರ್?" ಕೇಳಿದ ಡ್ರೈವರ್. ಹಸಿರು ರೇಶಿಮೆ ಸೀರೆಯ ಹೆಂಗಸು ನನ್ನತ್ತ ನೋಡಿದಳು. ಹೆಗಲಲ್ಲೊಂದು ಸ್ಯಾಮ್‌ಸೊನೈಟ್ ಚೀಲ, ಕೈಯಲ್ಲಿ ಲ್ಯಾಪ್‌ಟಾಪ್ ಹಿಡಿದ ಜೀನ್ಸ್‌ಧಾರಿ ಯುವಕನೊಬ್ಬ ಅದೆಲ್ಲಿಂದಲೋ ಓಡಿಬಂದು "ಹೌದೂರೀ, ಎಷ್ಟು ತಗೋತೀರಿ?" ಅಂದ. ದನಿಯಲ್ಲಿ ಆತುರವಿತ್ತು. "ಎಷ್ಟು ಜನ ಇದ್ದೀರಿ?" ಡ್ರೈವನ ಪ್ರಶ್ನೆ. ಯುವಕ ಈಗ ನನ್ನತ್ತ ತಿರುಗಿದ. ನಾನು ಹೆಂಗಸಿನತ್ತ ತಿರುಗಿದೆ. ಅವಳ ಮುಖದ ತುಂಬಾ ಅನುಮಾನದ ನೆರಳುಗಳು. "ಸ್ವಲ್ಪ ಜಾಸ್ತಿ ಹಣ ತಗೋಬೋದು. ಪರವಾಗಿಲ್ಲ, ನೆಮ್ಮದಿಯಾಗಿ ಊರು ಸೇಕೋಬೋದು ಆಂಟೀ" ಎಂದ ಯುವಕ. ಅವನ ಪುಸಲಾಯಿಸುವಿಕೆ ವ್ಯರ್ಥವಾಗಲಿಲ್ಲ. ಸಮ್ಮತಿಯಲ್ಲಿ ಆಕೆಯ ಮುಖದ ಗೆರೆಗಳು ಸಡಿಲಾದವು. ನಾನೂ ಹ್ಞೂಂಗುಟ್ಟಿ ಡ್ರೈವನತ್ತ ತಿರುಗಿದೆ: "ನಾವು ಮೂರು ಜನ ಕಣಪ್ಪ. ಎಷ್ಟು ತಗೋತೀಯ?" "ತಲೆಗೆ ಒಂದ್ ನೂರೈವತ್ತು ಕೊಟ್ಬಿಡಿ." ಮೆಲ್ಲಗೆ ಅಂದವನು "ಇನ್ನೊಂದಿಬ್ಬರು ಆಗಿದ್ರೆ ಚೆನ್ನಾಗಿತ್ತು" ಅಂದ ದನಿಯೆತ್ತರಿಸಿ. ಕುಳ್ಳನೆಯ ಕಟ್ಟುಮಸ್ತಾದ ದೇಹದ ಮನುಷ್ಯನೊಬ್ಬ ಕೈಯಾಡಿಸುತ್ತಾ ಓಡಿಬಂದ. "ಇನ್ನೊಂದಿಬ್ಬರಿಗೆ ಜಾಗ ಆಗುತ್ತೇನಪ್ಪ?" ಅಂದ. "ಆಗುತ್ತೆ ಬನ್ನಿ ಸಾರ್" ಎಂಬ ಉತ್ತರ ಬಂದದ್ದೇ ಹಿಂದೆ ತಿರುಗಿ "ಸೀಟಿದೆ. ಸೂಟ್‌ಕೇಸ್ ಎತ್ಕೊಂಡು ಬಾ" ಎಂದು ಕೂಗಿ ಹೇಳಿದ. ನಾವು ಐದು ಜನರಾದೆವು. ಇನ್ನೂ ಒಂದಿಬ್ಬರು ಹತ್ತಿರ ಬಂದರೂ ಮಾತಾಡದೇ ಹಿಂದೆ ಸರಿದರು. ಒಬ್ಬರಿಗೆ ನೂರಾ ಇಪ್ಪತ್ತೈದರಂತೆ ಮಾತಾಯಿತು. ಡ್ರೈವರ್ ನನಗೆ "ಅಮ್ಮಾವ್ರೂ ನೀವೂ ಮುಂದೆ ಬಂದ್ಬಿಡಿ ಸಾರ್" ಅಂದ. ನಾನು ಸಂಕೋಚದಲ್ಲಿ ಸಣ್ಣಗೆ ನಗುತ್ತಾ "ಇಲ್ಲಪ್ಪ, ಮೇಡಂ ಜತೆ ಮುಂದುಗಡೆ ಈ ಹುಡುಗ ಕೂರಲಿ" ಅಂದೆ. ಮುಖ ಪೆಚ್ಚಾಗಿಸಿಕೊಂಡ ಅವನು "ಗೊತ್ತಾಗ್ಲಿಲ್ಲ, ತಪ್ ತಿಳಕೋಬೇಡಿ" ಅಂದ ಆ ಹೆಂಗಸಿಗೆ. ಆಕೆ ಉತ್ತರಿಸದೇ ಮುಂದೆ ಹತ್ತಿಕೊಂಡಳು. ಅನುಮಾನಿಸುತ್ತಾ ನಿಂತ ಆ ಯುವಕನಿಗೆ "ಬಾಪ್ಪಾ ಬಾ ಕೂತ್ಕೋ. ನಂಗೆ ನಿನ್ನ ವಯಸ್ಸಿನ ಮಗ ಇದ್ದಾನೆ" ಅಂದಳು. ಕುಳ್ಳನೆಯ ಮನುಷ್ಯ ಮೊದಲು ಹತ್ತಿದ. ಆಕಡೆಯಿಂದ ಅವನ ಗೆಳೆಯ, ಈಕಡೆಯಿಂದ ನಾನು ಒಳಸೇರಿಕೊಂಡೆವು. "ಇನ್ನೊಂದು ಹತ್ತು ಕಿಲೋಮೀಟರಿಗೆ ಕೃಷ್ಣಗಿರಿ ಬರುತ್ತೆ. ಅಲ್ಲಿಂದಾಚೆಗೆ ಭರ್ಜರಿ ರೋಡು. ಐದಕ್ಕೆಲ್ಲಾ ಊರು ತಲುಪಿಸಿಬಿಡ್ತೀನಿ" ಎನ್ನುತ್ತಾ ಎಂಜಿನ್ ಗೊರಗುಟ್ಟಿಸಿದ ಡ್ರೈವರ್. "ಎಲ್ಲಿಂದ ಬರ್ತಿದೀಯಪ್ಪಾ?" ಎಂದು ನನ್ನ ಪಕ್ಕದಲ್ಲಿದ್ದ ಕುಳ್ಳಮನುಷ್ಯನ ಪ್ರಶ್ನೆಗೆ "ತಿರುವಣ್ಣಾಮಲೈಲಿ ಒಂದ್ ಫ್ಯಾಮಿಲೀನ ಬಿಟ್ಟು ಬರ್ತಾ ಇದೀನಿ ಸಾರ್" ಎಂದು ಉತ್ತರಿಸಿದ. "ನೀವು ಸಿಕ್ಕಿದ್ದು ಒಳ್ಳೇದಾಯ್ತು. ಕಾಫಿಗೆ ಕಾಸಾಯ್ತು" ಎಂದೂ ಸೇರಿಸಿದ. "ಅಂದರೆ ನೀನು ಕಾಫಿ ಕುಡಿಯೋದು ಬರೀ ತಾಜ್ ಕಾಂಟಿನೆಂಟಲ್, ಲೀಲಾ ಪೆಂಟಾ, ಒಬೆರಾಯ್ ಶೆರೆಟಾನ್‌ಗಳಲ್ಲೇ ಅನ್ನು" ಅಂದ ಕುಳ್ಳ. ಅವನ ಮಾತಿನ ಅರ್ಥ ಹೊಳೆದು ನಾನು ನಕ್ಕರೆ ಡ್ರೈವರ್ ನಾಚಿದಂತೆ ದನಿ ಮಾಡಿ "ಅಯ್ ಬಿಡಿ ಸಾರ್, ನೀವೊಬ್ರು" ಅನ್ನುತ್ತಾ ಎಂಜಿನ್ ಅನ್ನು ಕಿವಿ ಕಿತ್ತುಹೋಗುವಂತೆ ರೊಂಯ್ಯೋ ಅನ್ನಿಸಿದ. ಮುಂದೆ ಕುಳಿತಿದ್ದ ಹೆಂಗಸಿಗೂ ಯುವಕನಿಗೂ ಇದಾವುದರ ಕಡೆಗೂ ಗಮನವಿರಲಿಲ್ಲ. ಹೆಂಗಸು ಪ್ರಶ್ನೆ ಕೇಳುವುದು, ಅವನು ಉತ್ತರಿಸುವುದು ನಡೆದಿತ್ತು. ಅವರ ಸಂಭಾಷಣೆಯತ್ತ ಗಮನ ಹರಿಸಿದ ನನಗೆ ತಿಳಿದದ್ದು ಆ ಯುವಕ ಪಾಂಡಿಚೆರಿಯವನೇ. ಇಪ್ಪತ್ತೆರಡರ ಅವನು ಐದಾರು ತಿಂಗಳಿಂದ ಬೆಂಗಳೂರಿನ ಸಾಫ್ಟ್‌ವೇರ್ ಸಂಸ್ಥೆಯೊಂದರ ಉದ್ಯೋಗಿ. ಅಪ್ಪ ಅಮ್ಮ ಇರುವುದು ಪಾಂಡಿಚೆರಿಯಲ್ಲೇ. ಇಬ್ಬರು ಅಕ್ಕಂದಿರಿಗೂ ಮದುವೆಯಾಗಿದೆ, ತಮ್ಮ ಪ್ಲಸ್ ಟೂನಲ್ಲಿದ್ದಾನೆ. ಹಾಗೇ ಪಕ್ಕದವರ ಪರಿಚಯವೂ ಆಯಿತು. ಅವರಿಬ್ಬರೂ ಸಣ್ಣಪುಟ್ಟ ಯಂತ್ರಗಳ ಬಿಡಿಭಾಗಗಳ ಮಾರಾಟಗಾರರು. ಕಡಲೂರಿನಲ್ಲಿ ಅಂಗಡಿಯಿದೆ. ವಹಿವಾಟು ಚೆನ್ನಾಗಿಯೇ ನಡೆಯುತ್ತಿದೆ. ಈಗ ಬೆಂಗಳೂರಿಗೆ ಹೋಗುತ್ತಿರುವುದೂ ವ್ಯವಹಾರದ ಮೇಲೇ. ನನ್ನ ಬಗ್ಗೆ ಕೇಳಿದಾಗ "ನಾನೊಬ್ಬ ಮೇಷ್ಟ್ರು" ಅಂದೆ. "ಎಲ್ಲಿ? ಪಾಂಡೀನಲ್ಲೇನಾ? ಪೆಟಿಟ್ ಸೆಮಿನಾನಲ್ಲೋ, ಪ್ಯಾಟ್ರಿಕ್ಸ್‌ನಲ್ಲೋ" ಅಂದ. "ಪಾಂಡಿಚೆರಿ ಯೂನಿವರ್ಸಿಟೀನಲ್ಲಿ" ಎಂದುತ್ತರಿಸಿದೆ. ನಿಮಿಷದವರೆಗೆ ಮೌನವಾದ ಅವನು ಒಮ್ಮೆ ಕೆಮ್ಮಿ ಕೇಕರಿಸಿ ದನಿ ತೆಗೆದ: "ನನ್ನ ಮೊದಲ ಮಗಳೂ ಅಲ್ಲೇ ಓದ್ತಾ ಇದಾಳೆ. ಗಾಂದಿಮದಿ ಅಂತ. ಎಮ್ಮೆಸ್ಸೀ ಬಯೋಕೆಮಿಸ್ಟ್ರಿ. ನೀವು ನೋಡಿರಬೇಕು. ಬೆಳ್ಳಗಿದ್ದಾಳೆ, ಅವರಮ್ಮನ ಹಾಗೇ. ಆದ್ರೆ ಸ್ವಲ್ಪ ಕುಳ್ಳಿ. ಇನ್ನೂ ಹೈಸ್ಕೂರ್ ಹುಡುಗಿ ಥರಾ ಕಾಣಿಸ್ತಾಳೆ. ನೋಡಿದ್ದೀರಾ?" "ಇಲ್ಲ ನೋಡಿಲ್ಲ. ಅದು ಬೇರೇ ಡಿಪಾರ್ಟ್‌ಮೆಂಟು. ನಾನು ಆ ಕಡೆ ಹೋಗೋದಿಲ್ಲ" ಅಂದೆ. "ನಿಮ್ಮದು ಯಾವ ಡಿಪಾರ್ಟ್‌ಮೆಂಟೂ?" "ಇಂಟನ್ಯಾಷನಲ್ ಸ್ಟಡೀಸ್." "ಹಂಗಂದ್ರೆ?" ವಿವರಿಸುವುದಕ್ಕೆ ನನಗೆ ಮನಸ್ಸಿರಲಿಲ್ಲ. "ಅದೇ... ಬೇರೆ ಬೇರೆ ದೇಶಗಳ ಬಗ್ಗೆ." ಚುಟುಕಾಗಿ ಹೇಳಿದೆ. ಅವನು ಅರ್ಥವಾದಂತೆ ತಲೆದೂಗಿದ. "ಅಂದ್ರೆ ಈ ಅಮೆರಿಕಾ, ಬುಶ್ಶೂ, ಇರಾಕೂ, ಸತ್ತೋದ್ಲಲ್ಲ ಆಯಮ್ಮ... ಬೆನಜಿರ್! ಅಂಥಾದ್ದು ತಾನೆ?" "ಹ್ಞೂ." "ಅಲ್ಲಾ ಸಾರ್, ಆಯಮ್ಮನ್ನ ಆ ಥರಾ ಹೊಡೆದು ಹಾಕಿಬಿಟ್ರಲ್ಲಾ... ಹೆಣ್ ಹೆಂಗ್ಸನ್ನ... ಚುಚುಚು. ತಪ್ಪು ಸಾರ್. ಅವಳ ಗಂಡ ಬಲೇ ಕೊರಮ ಅಂತೆ ಸಾರ್. ಅವಳನ್ನ ಹಿಡಕಂಡು ಹೊಡೀತಿದ್ನಂತೆ. ಅವನೇ ಮಾಡಿಸಿರಬೋದಲ್ವಾ ಸಾರ್ ಈ ಕೊಲೇನ?" ಅಂದವನು ನಾನು ಬಾಯಿ ತೆರೆಯುವ ಮೊದಲೇ "ಹ್ಞೂ ಇಲಿ ಬಿಡಿ, ನಮಗ್ಯಾಕೆ ಅವರ ರಗಳೆ. ಅಂದಹಾಗೆ ನಿಮಗೆ ತಿಂಗಳಿಗೆ ಎಷ್ಟು ಸಾರ್ ಸಂಬಳ?" ಅಂದ. ಹೇಳಿದೆ. ಅವನ ಮುಖದಲ್ಲಿ ತೆಳುವಾಗಿ ನಗೆ ಹರಡಿಕೊಂಡಂತೆ ಕಂಡಿತು. "ಯೂನಿವರ್ಸಿಟೀಲಿ ಪ್ರೊಫೆಸರ್ ಆಗಬೇಕು ಅಂದ್ರೆ ತುಂಬಾ ಓದಿರಬೇಕು ಅಲ್ವಾ ಸಾರ್? ಅದೇನೋ ಎಂಫಿಲ್ಲು, ಪಿಹೆಚ್‌ಡಿ ಅಂತೆಲ್ಲಾ ಭಾಳಾ ವರ್ಷ ಓದಬೇಕು ಅಲ್ವಾ? ಅದನ್ನೆಲ್ಲಾ ಓದಿ ಕೆಲಸಕ್ಕೆ ಸೇರಬೇಕು ಅಂದ್ರೆ ತುಂಬಾನೇ ವಯಸ್ಸಾಗಿಹೋಗಿರ್ತದೆ ಅನ್ನೀ. ಅಂದಹಾಗೆ ಕೆಲಸಕ್ಕೆ ಸೇರಿದಾಗ ಎಷ್ಟಾಗಿತ್ತು ಸಾರ್ ನಿಮಗೆ ವಯಸ್ಸು?" "ಮೂವತ್ತು." ಹಿಂದಕ್ಕೆ ಒರಗಿದೆ. ನಿಮಿಷಗಳ ಲೆಕ್ಕಾಚಾರ ನಡೆಸಿ ಅವನು ಬಾಯಿ ತೆರೆದ: "ನಾ ಓದಿದ್ದು ಎಸೆಸೆಲ್ಸಿ ಅಷ್ಟೇ. ಅದೂ ಫೇಲು. ಮತ್ತೆ ಕಟ್ಲೇ ಇಲ್ಲ. ಬಿಸಿನೆಸ್ ಶುರು ಮಾಡ್ದೆ. ನೀವು ಈಗ ತಗೋತಾ ಇರೋವಷ್ಟು ಸಂಬಳವನ್ನ ನಾನು ಇಪ್ಪತ್ತೈದನೇ ವಯಸ್ನಲ್ಲೇ ಅಂದ್ರೆ ನಿಮಗೆ ಕೆಲಸ ಸಿಗೋದಕ್ಕೂ ಐದ್ ವರ್ಷ ಮೊದ್ಲೇ ಸಂಪಾದಿಸ್ತಿದ್ದೆ." ಇದೇ ಅರ್ಥದ ಮಾತನ್ನು ನನ್ನ ಹೆಂಡತಿಯ ಸೋದರಮಾವ ಮದುವೆಯೊಂದರಲ್ಲಿ ಹತ್ತಾರು ಜನರೆದುರಿಗೇ ಹೇಳಿದ್ದ. ಉತ್ತರಿಸದೇ ಕಣ್ಣುಮುಚ್ಚಿದೆ. ಅವನು ನನ್ನ ಪಾಡಿಗೆ ನನ್ನನ್ನು ಬಿಟ್ಟ. ಅವನ ಗೆಳೆಯನಂತೂ ಬಾಯಿ ತೆರೆದಿರಲೇ ಇಲ್ಲ. ಐದಾರು ನಿಮಿಷಗಳಲ್ಲಿ ಕೃಷ್ಣಗಿರಿ ಬಂತು. ರಸ್ತೆ ಬದಿಯ ಟೀ ಅಂಗಡಿಯೊಂದರ ಮುಂದೆ ಕಾರ್ ನಿಲ್ಲಿಸಲು ಡ್ರೈವಗೆ ಹೇಳಿದ ಕುಳ್ಳ ವಾಹನ ನಿಲುಗಡೆಗೆ ಬರುವ ಮೊದಲೇ ಅಂಗಡಿಯನಿಗೆ "ಆರು ಟೀ" ಎಂದು ಕೂಗಿ ಹೇಳಿದ. ಯುವಕ ತನಗೆ ಬೇಡ ಅಂದ. ಹೆಂಗಸು ಹೆಗಲಚೀಲದಿಂದ ನೀರಿನ ಬಾಟಲ್ ಹೊರತೆಗೆದು ಬಾಯಿ ಮುಕ್ಕಳಿಸಿ ರಸ್ತೆಬದಿಯ ಮೋರಿಯಂಚಿಗೆ ಉಗಿದು ಟೀ ಲೋಟಕ್ಕೆ ಕೈಯೊಡ್ಡಿದಳು. ಟೀ ಅಂಗಡಿಯವನಿಂದ ನೀರಿನ ಲೋಟ ತೆಗೆದುಕೊಳ್ಳುತ್ತಿದ್ದ ಕುಳ್ಳ ಥಟಕ್ಕನೆ ಕೈ ಹಿಂತೆಗೆದು ಹೆಂಗಸಿನ ವಾಟರ್ ಬಾಟಲಿನತ್ತ ಚಾಚಿದ. ಒಂದೇ ಗುಟುಕಿಗೆ ನೀರನ್ನು ತಳ ಕಾಣಿಸಿದ. "ಆಕ್ವಾಫಿನಾ ನೀರು! ಟೇಸ್ಟ್ ಒಂಥರಾ ಚಂದ. ನೀನೂ ಕುಡಿತೀಯ ರಾಜಪ್ಪಾ?" ಎಂದು ಗೆಳೆಯನನ್ನು ಕೇಳಿದ. ಆ ಮಹರಾಯ ಬಾಟಲನ್ನು ಸೆಳೆದುಕೊಂಡು ಇದ್ದ ನಾಕು ಗುಟುಕನ್ನೂ ಬಾಯಿಗೆ ಸುರಿದುಕೊಂಡ. ಖಾಲಿ ಬಾಟಲನ್ನು ಬೆರಳಿನಿಂದ ಬಡಿಯುತ್ತಾ "ನಿಮ್ ನೀರನ್ನೆಲ್ಲಾ ಖಾಲಿ ಮಾಡಿಬಿಟ್ವಿ ಕಣಮ್ಮ! ಬೇಕು ಅಂದ್ರೆ ಹೇಳಿ. ತುಂಬಿದ ಬಾಟಲ್ ತೆಗೆದುಕೊಡ್ತೀನಿ" ಅಂದ. ಅವನ ಬಾಯಿಂದ ಹೊರಟ ಮೊತ್ತಮೊದಲ ಮಾತು ಅದು. ಹೆಂಗಸು ನಗಾಡುತ್ತಾ "ಹೋಗ್ಲಿ ಬಿಡಿ ಇವರೇ. ಎರಡುಮೂರು ಗಂಟೇನಲ್ಲಿ ತಂಗೀ ಮನೇಲಿರ್ತೀನಿ. ಅಲ್ಲೇ ಕುಡಿದರಾಯ್ತು" ಅಂದಳು. ಟೀ ಚೆನ್ನಾಗಿತ್ತು. "ಟೀ ಜೊತೆ ನೆಂಜ್ಕೊಳ್ಳಿ, ಚೆನ್ನಾಗಿರುತ್ತೆ" ಎನ್ನುತ್ತಾ ಕುಳ್ಳನ ಗೆಳೆಯ ಅಲ್ಲೇ ಪಾತ್ರೆಯಿಂದ ಒಂದೊಂದು ತಣ್ಣಗಿನ ವಡೆ ತೆಗೆದು ಎಲ್ಲರಿಗೂ ಕೊಟ್ಟ. ನನ್ನನ್ನು ತಡೆದು ಅವನೇ ಅಂಗಡಿಯವನಿಗೆ ಹಣ ತೆತ್ತ. ಈಗ ಬೆಳಕಿನಲ್ಲಿ ಅವನನ್ನು ಸರಿಯಾಗಿ ನೋಡಿದೆ. ಅವನ ಹೆಸರು ಅದೇನೇ ಇರಲಿ, ಕರಿಯ ಎಂದು ಧಾರಾಳವಾಗಿ ಕರೆಯಬಹುದಾದಷ್ಟು ಕಡುಗಪ್ಪನೆಯ ದೇಹ, ಕೋಲುಮುಖ, ಕಡುಗಪ್ಪು ತುಂಡುಗೂದಲು. ಕೈಕಾಲುಗಳು ಕರೀಗೊಬ್ಬಳಿಮರದಲ್ಲಿ ಅಳತೆ ನೋಡಿಕೊಂಡು ಅಚ್ಚುಕಟ್ಟಾಗಿ ಕೆತ್ತಿದಂತಿದ್ದವು. ಟೀ ಕುಡಿದು ಮತ್ತೆ ಹೊರಟೆವು. ಎರಡುನಿಮಿಷದಲ್ಲಿ ರಸ್ತೆ ಎರಡೂ ಬದಿಗೆ ವಿಶಾಲವಾಗಿ ಹರಡಿಕೊಂಡು ಬೆಳಕಿನಲ್ಲಿ ಮೀಯುತ್ತಿದ್ದ ಟೋಲ್‌ಗೇಟ್ ಎದುರಾಯಿತು. ಸಂಜೆ ಇತ್ತ ಬರುವಾಗಲೇ ಪಾವತಿಸಿದ್ದ ರಶೀದಿಯನ್ನು ಕಿಟಕಿಯಲ್ಲಿ ಕೂತು ಕೈಚಾಚಿದ ಹದ್ದುಗಣ್ಣಿನವನ ಮುಖಕ್ಕೆ ಹಿಡಿದು ಡ್ರೈವರ್ ಸುಂಯ್ಯನೆ ವಾಹನ ಚಲಾಯಿಸಿದ. ಬೆಟ್ಟದ ಸೀಮೆಯಲ್ಲಿ ಮೇಲೇರಿ ಕೆಳಗಿಳಿದು ಸಾಗುವ ಸುವಿಶಾಲ ಹೆದ್ದಾರಿ. ಗಾಡಿ ತೂಗಿದಂತಾಗಿ ಮಂಪರುಗಟ್ಟಿತು. ಹೆಂಗಸೂ ಹುಡುಗನೂ ಮಾತಾಡುತ್ತಲೇ ಇದ್ದರು. ಬಡಿದು ಎಬ್ಬಿಸಿದಂತೆ ಗಕ್ಕನೆ ಎಚ್ಚರವಾಯಿತು. ಕಣ್ಣುಬಿಟ್ಟರೆ ಏನೊಂದೂ ತಿಳಿಯಲಿಲ್ಲ. ಗಾಡಿ ನಿಂತಿತ್ತು. ಒಳಗೆ ಹೊರಗೆ ಪೂರ್ತಿ ಕತ್ತಲೆ. ಏನಾಯಿತೆಂದು ಪಕ್ಕದ ಕುಳ್ಳನನ್ನು ಕೇಳಲು ಬಾಯಿ ತೆರೆಯುವಷ್ಟರಲ್ಲಿ ಕತ್ತಲೇ ನರಳಿದಂತೆ ಡ್ರೈವರನ ಗೋಗರೆಯುವ ದನಿ ಕಿವಿಗೆ ಬಿತ್ತು: ""ಸಾರ್, ಗಾಡಿ ನಂದಲ್ಲಾ ಸಾರ್. ನಮ್ ಸಾವ್ಕಾರಿ ಶ್ಯಾನೇ ಖಡಕ್ಕು. ನನ್ ಹೊಟ್ಟೆ ಮೇಲೆ ಹೊಡೀಬೇಡಿ ಸಾರ್. ನಾನು ಮಕ್ಕಳೊಂದಿಗ." ಹಿಂದೆಯೇ ಕರಿಯನ ದನಿ ಕತ್ತಲನ್ನು ಸೀಳಿಕೊಂಡು ಬಂತು: "ಹಾಗೇ ಮುಂದೆ ಹೋಗಿ ಎಡಕ್ಕೆ ತಗೋ. ಹೆಚ್ಚು ಮಾತಾಡಬೇಡ." ಸರಕ್ಕನೆ ಅತ್ತ ತಿರುಗಿದೆ. ಅವನು ಸೀಟಿನಂಚಿನಲ್ಲಿ ಅರ್ಧ ಎದ್ದವನಂತೆ ಮುಂದಕ್ಕೆ ನಿಗುರಿಕೊಂಡಿದ್ದ. ಅವನ ಕೈ ಡ್ರೈವ ಸೀಟಿನ ಮೇಲಿತ್ತು. ಅಲ್ಲೇನೋ ಬೆಳ್ಳಗೆ ಮಿಂಚಿದಂತಾಯಿತು. ಕಣ್ಣರಳಿಸಿ ನೋಡಿದರೆ ಕಂಡದ್ದು ಕತ್ತಲಿನಲ್ಲೂ ಹೊಳೆಯುತ್ತಿದ್ದ ಚಾಕು. ಗಾಬರಿಯಲ್ಲಿ "ಇದೇನ್ರೀ ಇದೂ? ಇದೇನು ಮಾಡ್ತಿದೀರಿ ನೀವು?" ಎಂದರಚಿದೆ. ಕುಳ್ಳ ನನ್ನ ಪಕ್ಕೆಗೆ ತಿವಿದ. "ತೆಪ್ಪಗೆ ಕೂರು ಮುದಿಯ." ನನ್ನ ಕಣ್ಣ ಮುಂದೆ ಚಾಕು ಆಡಿಸಿದ. ಅವನ ಕೈಯಲ್ಲೂ ಚಾಕು ಕಂಡು ನನಗೆ ಉಸಿರು ಸಿಕ್ಕಿಕೊಂಡಿತು. ಮುಂದೆ ಹೆಂಗಸು ಕುಸುಕಿದಳು. "ಯಾಕ್ರಣ್ಣಾ ಹೀಗೆ ಮಾಡ್ತಿದಿರೀ? ಒಳ್ಳೇವ್ರು ಅಂತ ಜತೆಲಿ ಬಂದ್ರೆ ನೀವು..." ಕುಳ್ಳ ಅವಳ ಮಾತನ್ನು ಅಲ್ಲಿಗೇ ಕತ್ತರಿಸಿದ: "ನಾವು ಒಳ್ಳೇವ್ರೇ ಕಣಮ್ಮ. ನಮಗಿಲ್ಲಿ ಒಂದೆರಡು ನಿಮಿಷದ ಕೆಲಸ ಇದೆ ಅಷ್ಟೇ. ಅದಾದ ಕೂಡ್ಲೇ ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ." ಕರಿಯ ಡ್ರೈವನ ಕುತ್ತಿಗೆಯ ಮೇಲೆ ಚಾಕು ಒತ್ತಿದ. "ನಡಿ ಮುಂದಕ್ಕೆ. ಹ್ಞೂ." ಅಬ್ಬರಿಸಿದ. ಮೋಡಗಳ ಮರೆಯಿಂದ ಹೊರಬರುತ್ತಿದ್ದ ಚಂದ್ರನ ಮಾಸಲು ಬೆಳಕಿನಲ್ಲಿ ಚಾಕು ಹಿಡಿದ ಬೆರಳುಗಳು ಬೆಳ್ಳಗೆ ಬಿಳಿಚಿಕೊಂಡಿದ್ದವು. ಡ್ರೈವರ್ ಸಣ್ಣಗೆ ನರಳಿದ. ಮತ್ತೊಮ್ಮೆ "ಹ್ಞೂಂ" ಎಂಬ ಅಬ್ಬರದ ಆಣತಿ ಕಿವಿಗೆ ಬೀಳುತ್ತಿದ್ದಂತೇ ಕಾರು ನಿಧಾನವಾಗಿ ಮುಂದೆ ಸರಿಯಿತು. ನಾನು ದಿಗ್ಭ್ರಮೆಯಲ್ಲಿ ಕುಸಿಯುತ್ತಿದ್ದಂತೇ ಮತ್ತೊಂದು ಆಜ್ಞೆ: "ಇಲ್ಲಿ ಎಡಕ್ಕೆ ತಿರುಗಿಸು. ಹೆಡ್‌ಲೈಟ್ ಆಫ್ ಮಾಡು." ವಾಹನ ಮುಖ್ಯರಸ್ತೆ ಬಿಟ್ಟು ಎಡಕ್ಕೆ ಹೊರಳಿತು. ಭಾರಿಭಾರಿ ಹೆಬ್ಬಂಡೆಗಳು ಗಿಡಿದು ಕೂತಿದ್ದ ಕಲ್ಲುಬೆಟ್ಟಗಳೆರಡರ ನಡುವಿನ ಇರುಕಿನಂತಹ ಏರುಹಾದಿಯಲ್ಲಿ ಚಲಿಸಿತು. "ನಿಮಗೆ ಹಣ ಬೇಕಿದ್ರೆ ತಗೊಳ್ಳಿ. ಅದಕ್ಕಾಗಿ ನೀವು ನಮಗ್ಯಾರಿಗೂ ತೊಂದರೆ ಕೊಡೋದು ಬೇಡ." ಸಾವರಿಸಿಕೊಂಡು ಮತ್ತೆ ಬಾಯಿ ತೆರೆದೆ. ಮರುಕ್ಷಣ ಕುಳ್ಳನ ಎಡಗೈ ನನ್ನ ಹಣೆಗೆ ಛಟ್ಟನೆ ಬಾರಿಸಿತು. "ಬಾಯಿ ಮುಚ್ಚೋ ಮುದುಕಾ. ಹೇಳಿದ್ದು ಅರ್ಥ ಆಗ್ಲಿಲ್ವಾ? ಬೀಜ ಚಚ್‌ಹಾಕಿಬಿಡ್ತೀನಿ ನೋಡು." ಅರಚಿದ. "ಅವರನ್ಯಾಕ್ರಣ್ಣಾ ಹೊಡಿತಿದ್ದೀರಾ? ಅಯ್ಯೋ ದೇವ್ರೇ ಎಂಥಾ ಕಷ್ಟಕ್ಕೆ ಸಿಕ್ಕೊಂಡ್ವಪ್ಪಾ." ಹೆಂಗಸು ದನಿಯೆತ್ತಿ ಅಳತೊಡಗಿದಳು. ಕುಳ್ಳನ ದನಿ ತಕ್ಷಣ ಮೃದುವಾಯಿತು: "ನಿಮಗೇನೋ ಆಗೋದಿಲ್ಲ ಸುಮ್ನಿರಮ್ಮ. ಈ ತರಲೆ ಮೇಷ್ಟ್ರು ಮತ್ತೆ ಮತ್ತೆ ಬಾಲ ಬಿಚ್ತಾ ಇದಾನೆ. ಅದಕ್ಕೇ ಒಂದು ಬಾರಿಸಬೇಕಾಯ್ತು." ಮತ್ತೆ ಉಸಿರೆತ್ತಿದರೆ ಅದು ಅರ್ಥಹೀನ ಹುಚ್ಚುಸಾಹಸವಾಗುತ್ತದೆ ಎಂದರಿವಾಯಿತು. ಇವರ ಉದ್ದೇಶವೇನೆಂದು ಸ್ಪಷ್ಟವಾಗದೇ ಆತಂಕ ನೆರೆಯ ನೀರಿನಂತೆ ಏರತೊಡಗಿತು. ಹೆದ್ದಾರಿಯಲ್ಲಿ ಸುಳಿದಾಡುವ ವಾಹನಗಳಿಗೆ ಹೆದರಿ ಅಲ್ಲಿ ನಮ್ಮನ್ನು ದರೋಡೆ ಮಾಡದೇ ಗುಡ್ಡಗಳಿಂದ ಮರೆಯಾದ ನಿರ್ಜನ ಸ್ಥಳಕ್ಕೆ ಕರೆದೊಯ್ಯುತ್ತಿರಬಹುದೆಂಬ ಊಹೆಯೊಂದನ್ನು ಬಿಟ್ಟರೆ ಮತ್ತೇನೂ ಹೊಳೆಯಲಿಲ್ಲ. ಯಾವುದನ್ನೂ ಕಾದು ನೋಡುವಾ ಎಂದುಕೊಂಡು ಸುಮ್ಮನೆ ಕುಳಿತೆ. ನಾನು ಮತ್ತೆ ಬಾಯಿ ತೆರೆಯದಂತೆ ಕುಳ್ಳನ ಚಾಕು ನನ್ನ ಭುಜದ ಮೇಲಿತ್ತು. ಕರಿಯ ಡ್ರೈವನ ಕುತ್ತಿಗೆಗೆ ಚಾಕು ಹಿಡಿದೇ ಇದ್ದ. ಹೆಂಗಸಿನ ಅಳು ನಿಂತಿತ್ತು. ಯುವಕನ ಒಂದು ಮಾತೂ ಇದುವರೆಗೆ ನನ್ನ ಕಿವಿಗೆ ಬಿದ್ದಿರಲಿಲ್ಲ. ಎಡಬಲಕ್ಕೆ ಕುಲುಕುತ್ತಾ ಹಿಂದುಮುಂದಕ್ಕೆ ಮುಗ್ಗರಿಸುತ್ತಾ ಐದಾರು ನಿಮಿಷ ಸಾಗಿದ ನಂತರ ದಾರಿ ಇಳಿಜಾರಾಗಿ ಎಡಕ್ಕೆ ಹೊರಳಿದಂತೆ ಕಂಡಿತು. ವಾಹನದ ಕುಲುಕಾಟ ಮತ್ತೂ ಹೆಚ್ಚಿತು. ತಲೆಯನ್ನು ಅಲುಗಿಸದೇ ಕಣ್ಣುಗಳನ್ನು ಓರೆಯಾಗಿಸಿ ಎಡಕ್ಕೆ ಕಿಟಕಿಯಾಚೆ ನೋಡಿದೆ. ಕಿಟಕಿಗೆ ಅಂಟಿದಂತೇ ಇದ್ದ ಬೆಟ್ಟದ ಕಪ್ಪು ಗೋಡೆಯ ಹೊರತಾಗಿ ಬೇರೇನೂ ಕಾಣಲಿಲ್ಲ. ವಾಹನ ಒಮ್ಮೆ ಧಡ್ಡನೆ ಎಗರಿ ಬಲಕ್ಕೆ ವಾಲಿಕೊಂಡಿತು. ನಾನು ಕುಳ್ಳನ ಮೈಮೇಲೆ ಬಿದ್ದೆ. ಅವನ ಕೈಯಲ್ಲಿದ್ದ ಚಾಕು ನನ್ನ ಕತ್ತಿನಲ್ಲಿ ಸರಕ್ಕನೆ ಇಳಿಯಿತು. "ಹ್ಞಾ" ಎಂಬ ಚೀತ್ಕಾರ ನನ್ನ ನಿಯಂತ್ರಣವನ್ನೂ ಮೀರಿ ಹೊರಬಂತು. ಹೆಂಗಸು ಛಕ್ಕನೆ ಹಿಂದೆ ತಿರುಗಿದಳು. ಕುಳ್ಳ ನನ್ನನ್ನು ಅಸಡ್ಡೆಯಿಂದ ನೂಕಿ ಕಾರ್ ನಿಲ್ಲಿಸಲು ಡ್ರೈವಗೆ ಹೇಳಿದ. ಕಾರು ಗಕ್ಕನೆ ನಿಲುಗಡೆಗೆ ಬಂತು. ಎಡಗೈಯನ್ನು ಬಲ ಕತ್ತಿನ ಮೇಲೆ ಆಡಿಸಿದೆ. ರಕ್ತ ಬೆರಳುಗಳಿಗೆ ಅಂಟಿಕೊಂಡಿತು. ಗಾಯವೇನೂ ಆಳವಾಗಿದ್ದಂತೆ ಕಾಣಲಿಲ್ಲ. ಆದರೆ ಉರಿಯುತ್ತಿತ್ತು. ಕುಳ್ಳ ನನ್ನ ಭುಜ ಒತ್ತಿ ಬಾಗಿಲು ತೆರೆಯುವಂತೆ ಸೂಚಿಸಿದ. ಕರಿಯ ಛಟ್ಟನೆ ತನ್ನ ಕಡೆಯ ಬಾಗಿಲು ತೆರೆದು ಹೊರಗೆ ಹಾರಿ ಡ್ರೈವರ್ ಕಡೆಯ ಬಾಗಿಲನ್ನು ತೆರೆದ. ಎಡಗೈಯನ್ನು ಕುತ್ತಿಗೆಯ ಗಾಯದ ಮೇಲೆ ಒತ್ತಿಕೊಂಡೇ ಬಲಗೈಯಿಂದ ಬಾಗಿಲ ಹಿಡಿಕೆಗಾಗಿ ತಡಕಾಡಿದೆ. ಮುಂದಿನ ಸೀಟಿನಲ್ಲಿ ಆತುರದ ಚಲನೆಗಳು ಕಂಡುಬಂದವು. ಆ ಯುವಕ ಛಕ್ಕನೆ ಬಾಗಿಲು ತೆರೆದು ಮಿಂಚಿನಂತೆ ಹೊರಗೆ ಹಾರಿದ. "ರಾಜಪ್ಪಾ, ಹಿಡೀ ಅವನನ್ನ" ಎಂದು ಕುಳ್ಳ ಚೀರುತ್ತಿದ್ದಂತೆ ಯುವಕ ಕಲ್ಲುಬಂಡೆಗಳ ನಡುವೆ ಜಿಗಿಜಿಗಿದು ಓಡಿಬಿಟ್ಟ. ನಾನು ಕೆಳಗಿಳಿದು ನಿಲ್ಲುವ ಹೊತ್ತಿಗೆ ಅವನು ತನ್ನ ಜಾಡಿನ ಗುರುತೂ ಇಲ್ಲದಂತೆ ಅದೆಲ್ಲೋ ಮಾಯವಾಗಿಹೋಗಿದ್ದ. ಒಂದು ಕೈಯಲ್ಲಿ ಚಾಕು, ಮತ್ತೊಂದರಲ್ಲಿ ಡ್ರೈವನ ಕೊರಳಪಟ್ಟಿ ಹಿಡಿದಂತೇ ಯುವಕ ಓಡಿದ ದಿಕ್ಕಿಗೆ ನಾಕು ಹೆಜ್ಜೆ ಹಾಕಿದ ಕರಿಯ ಅಸಹನೆಯಲ್ಲಿ ಗೊಣಗುತ್ತಾ ನಿಂತ. ಡ್ರೈವನ ಕೊರಳಪಟ್ಟಿಯಿಂದ ಕೈ ತೆಗೆದು ತನ್ನ ಹಣೆಯ ಮೇಲಿಟ್ಟುಕೊಂಡ. ಆ ಗಳಿಗೆಗೆ ಸರಿಯಾಗಿ "ಅಲ್ಲಿದ್ದಾನೆ ಕಣ್ರೀ. ನಿಮಗೆ ಕಾಣ್ತಾ ಇಲ್ವಾ? ಇರಿ ನಾ ಹಿಡಕಂಡು ಬರ್ತೀನಿ ಬೋಳಿಮಗನ್ನ" ಎಂದರಚಿದ ಡ್ರೈವರ್ ಯುವಕ ಓಡಿದ ದಿಕ್ಕಿನಲ್ಲಿ ಬೀಳುವುದನ್ನೂ ಲೆಕ್ಕಿಸದೇ ಎಗರಿ ಎಗರಿ ಓಡಿದ. "ಅರೆ ಮಾದರಚೋತ್! ಚಾಲಾಕಿ ಸೂಳೆಮಗ." ಇದುವರೆಗೂ ಡ್ರೈವನನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಕೇಡಿ ಬೈದುಕೊಂಡ. ನನ್ನನ್ನು ಒಂದು ಪಕ್ಕಕ್ಕೆ ನೂಕಿ ಅವನತ್ತ ನಡೆದ ಕುಳ್ಳ ಏನೋ ಗೊಣಗಿ "ಹೋದ್ರೆ ಹೋಗ್ಲಿ ನಾಯಿಕುನ್ನಿಗಳು. ಒಳ್ಳೇದೇ ಆಯ್ತು ಬಿಡು. ನಮ್ಮ ಕೆಲಸ ಬೇಗ ಮುಗಿಸಿ ಜಾಗ ಖಾಲಿಮಾಡೋಣ" ಎನ್ನುತ್ತಾ ಕಾರಿನ ಮುಂದಿನ ಸೀಟಿನತ್ತ ತಿರುಗಿದ. ಯುವಕನ ಲ್ಯಾಪ್‌ಟಾಪ್ ಸೀಟಿನ ಮೇಲೇ ಬಿದ್ದುಕೊಂಡಿತ್ತು. ಅವನದನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದ. ಅವನ ಚೀಲವೂ ಅಲ್ಲೇ ಇರಬೇಕು. ಓಡುವ ಆತುರದಲ್ಲಿ ಅವನು ಏನನ್ನಾದರೂ ತೆಗೆದುಕೊಂಡು ಹೋದಂತೆ ಕಂಡಿರಲಿಲ್ಲ. ನಾನು ಗಮನಿಸಿದ ಹಾಗೆ ಡ್ರೈವರ್ ಸಹಾ ಬರಿಗೈಯಲ್ಲೇ ಓಟ ಕಿತ್ತಿದ್ದ. ಅವರಿಬ್ಬರ ಸಾಮಾನುಗಳೆಲ್ಲವೂ ಈಗ ಈ ಕೇಡಿಗಳ ವಶ. ನನ್ನ ಹಾಗೂ ಆ ಹೆಂಗಸಿನ ಸಾಮಾನುಗಳೂ ಈ ಗಳಿಗೆಯಲ್ಲಿ ಅವರವೇ ಆಗಿದ್ದವು. ಕೈಯಲ್ಲಿದ್ದ ವಾಚು, ಉಂಗುರಗಳನ್ನು ತೆಗೆದು ನನ್ನನ್ನು ಸಮೀಪಿಸಿದ ಕರಿಯನತ್ತ ಹಿಡಿದೆ. ಅವನು ಪಕಪಕನೆ ನಕ್ಕುಬಿಟ್ಟ. "ಇಲ್ನೋಡೋ ಕುಪ್ಪಣ್ಣಾ, ಈವಯ್ಯ ಹೆದಕೊಂಡು ವಾಚು ಉಂಗ್ರ ಬಿಚ್ಚಿ ಕೊಡ್ತಿದಾನೆ." ಕುಳ್ಳನತ್ತ ತಿರುಗಿ ಹೇಳಿ ಮತ್ತೊಮ್ಮೆ ನಕ್ಕ. "ಅದನ್ನೆಲ್ಲ ಅವನ ಮೂತಿಗೇ ಎಸೆದು ಕಾನೊಳಕ್ಕೆ ದಬ್ಬು. ಅವನಿಗೇನ್ ಕೆಲ್ಸ ಇದೆ ಇಲ್ಲಿ?" ಕುಳ್ಳನ ಉತ್ತರ ಬಂತು. ತಿಳಿಯಾಗುತ್ತಿದ್ದ ಗೊಂದಲ ಒಮ್ಮೆಲೆ ಅಧಿಕವಾಯಿತು. ನಕ್ಕು ಅಪಹಾಸ್ಯ ಮಾಡುತ್ತಿದ್ದ ಕರಿಯನನ್ನೇ ಮಿಕಿಮಿಕಿ ನೋಡಿದೆ. "ನಿನಗೇನೂ ಕೆಲಸ ಇಲ್ಲ. ಒಳಗೆ ತೆಪ್ಪಗೆ ಕೂರು" ಎನ್ನುತ್ತಾ ತೆರೆದಿದ್ದ ಬಾಗಿಲತ್ತ ನನ್ನನ್ನು ನೂಕಿದ ಅವನು. ನೂಕಿದ ರಭಸಕ್ಕೆ ಸೀಟಿನಲ್ಲಿ ಕುಸಿದೆ. "ಕಾಲು ಒಳಗೆ ತಗೋ." ಹೇಳುತ್ತಾ ನನ್ನ ಮಂಡಿಯ ಮೇಲೆ ಬಲವಾಗಿ ಒದ್ದ. ನನ್ನ ಪ್ರಯತ್ನವನ್ನೂ ಮೀರಿ ನರಳಿಕೆ ಗಂಟಲಿನಿಂದ ಹೊರಬಂತು. ಹಿಂದೆಯೇ ಅವನು ಧಡ್ಡನೆ ಬಾಗಿಲು ಮುಚ್ಚಿದ. ಅರೆತೆರೆದಿದ್ದ ಕಿಟಕಿಯ ಮೂಲಕ ಎಚ್ಚರಿಸಿದ: "ತಿಕ ಬಾಯಿ ಎರಡನ್ನೂ ಮುಚ್ಕೊಂಡು ಕೂರು. ಬಾಲ ಬಿಚ್ಚಿದ್ರೆ ಹೆಣ ಆಗ್ತಿಯ." ಇವರಿಗೆ ಬೇಕಾಗಿರುವುದೇನು? "ಅದೇನೋ ಅವರು ಹೇಳಿದ ಹಾಗೇ ಕೇಳಿಬಿಡಿ ಸಾರ್. ಸುಮ್ನೆ ಯಾಕೆ ನೋವು ಅನುಭವಿಸ್ತೀರಾ." ಹೆಂಗಸು ಹಿಂದೆ ತಿರುಗಿ ಮರುಕದ ದನಿಯಲ್ಲಿ ಹೇಳಿದಳು. ಕುಳ್ಳ ಗಹಗಹಿಸಿದ. "ಸರಿಯಾಗಿ ಹೇಳಿದೆ ಕಣಮ್ಮ. ಜಾಣರು ಮಾಡೋ ಕೆಲಸ ಇದು. ಈಗ ಸ್ವಲ್ಪ ನಾವು ಹೇಳಿದ ಹಾಗೆ ಕೇಳಿಬಿಡಮ್ಮ. ಜಾಣೆ ನೀನು." ದನಿಯಲ್ಲಿ ಅಣಕವಿತ್ತು. "ಹಂಗಂದ್ರೇನ್ರಿ?" ಹೆಂಗಸಿನ ದನಿಯಲ್ಲಿ ಗಾಬರಿ. ನನಗೂ ಗಾಬರಿಯಾಯಿತು. ಇದುವರೆಗೂ ಇವರು ನನ್ನನ್ನಷ್ಟೇ ಗುರಿಯಾಗಿಸಿಕೊಂಡಿದ್ದರು. ಹೆಂಗಸಿಗೆ ಹಾನಿಯೆಸಗುವಂಥ ಯಾವ ಸೂಚನೆಯನ್ನೂ ಅವರು ನೀಡಿರಲಿಲ್ಲ. ಈಗೇಕೋ ನನಗೆ ಅನುಮಾನವಾಗತೊಡಗಿತು. ಕುಳ್ಳನತ್ತ ತಿರುಗಿದೆ. ಅವನು ಹೆಂಗಸಿನ ಪಕ್ಕದಲ್ಲಿದ್ದ ಸಾಫ್ಟ್‌ವೇರ್ ಹುಡುಗನ ಲ್ಯಾಪ್‌ಟಾಪನ್ನು ಎಡಗೈಯಿಂದ ಎತ್ತಿ ಹಿಂದಿನ ಸೀಟಿನತ್ತ ಅಸಡ್ಡೆಯಿಂದ ಎಸೆದ. ಅದು ನನ್ನ ಭುಜಕ್ಕೆ ಬಡಿದು ನನ್ನ ಕಾಲಬಳಿ ಉರುಳಿಬಿತ್ತು. ನನ್ನ ಆತಂಕ ಎಲ್ಲೆ ಮೀರುತ್ತಿದ್ದಂತೇ ಕುಳ್ಳ ಹೆಂಗಸಿನ ಭುಜಕ್ಕೆ ಕೈ ಹಾಕಿದ. "ಜಾಣಮರೀ, ಸ್ವಲ್ಪ ಕೆಳಗೆ ಇಳಿಯಮ್ಮ. ಒಂಚೂರು ಕೆಲ್ಸಾ ಇದೆ." "ಇದೇನಪ್ಪ ಇದೂ. ತೆಗೀ ಕೈನ." ಹೆಂಗಸು ಗಾಬರಿ ಅಸಹನೆಯಲ್ಲಿ ಅರಚಿದಂತೇ ಕುಳ್ಳ "ಅಯ್ ಇಳಿಯೇ ಕೆಳಗೇ" ಎನ್ನುತ್ತಾ ಅವಳ ರಟ್ಟೆಗೆ ಕೈಹಾಕಿ ಹೊರಗೆಳೆದ. ಹೆಂಗಸು "ಅಯ್ಯಮ್ಮಾ" ಎಂದು ಚೀರುತ್ತಿದ್ದಂತೇ ನನ್ನ ತಲೆಗೆ ಹೊಡೆತ ಬಿತ್ತು. "ಮುಂದುಗಡೆ ಸೀಟಿಗೆ ಹಣೆ ಅಂಟಿಸ್ಕೊಂಡು ಕೂರು." ಕರಿಯ ಗದರಿದ. ಸೀಟಿಗೆ ನನ್ನ ತಲೆಯನ್ನು ಒತ್ತಿಹಿಡಿದ. ಕುತ್ತಿಗೆಯ ಮೇಲೇನೋ ತಣ್ಣಗೆ ಹರಿಯಿತು. "ಕತ್ತು ಮೇಲೆತ್ತಿದರೆ ಕತ್ತರಿಸಿಬಿಡ್ತೀನಿ." ಸೀಳುಕಂಠದಲ್ಲಿ ಅರಚಿದ. ಬಾಗಿಲು ತೆರೆದು ಕಿಟಕಿಯ ಗಾಜನ್ನು ಸರ್ರನೆ ಮೇಲೆತ್ತಿದ. ಧಡ್ಡನೆ ಬಾಗಿಲು ಮುಚ್ಚಿದ. ದೈಹಿಕವಾಗಿ ನಾನು ಅವನಿಗೇನೂ ಕಡಿಮೆ ಇರಲಿಲ್ಲ. ಆದರೆ ಅವನಲ್ಲಿದ್ದ ಚಾಕು ನಮ್ಮಿಬ್ಬರ ಶಕ್ತಿಯ ಸಮತೋಲನವನ್ನು ಏರುಪೇರಾಗಿಸಿ ನನ್ನನ್ನು ನಿಸ್ಸಹಾಯಕಗೊಳಿಸಿತ್ತು. ಮುಂದಿನ ಸೀಟಿನಲ್ಲಿ ಧಡಭಡ ಸದ್ದುಗಳು. ಹೆಂಗಸಿನ ಅಳು ಚೀರಾಟ... ಎರಡು ಕ್ಷಣದಲ್ಲಿ ಅವಳು ಕಾರಿಂದ ಹೊರಗೆ ನೆಲದ ಮೇಲೆ ಧೊಪ್ಪನೆ ಬಿದ್ದ ಶಬ್ಧ. ಮರುಕ್ಷಣ ಧಡ್ಡನೆ ಮುಚ್ಚಿಕೊಂಡ ಬಾಗಿಲು. ಕ್ಷೀಣಗೊಂಡ ಆಕ್ರಂದನ... ತಲೆ ಮೇಲೆತ್ತಿದೆ. ಕರಿಯ ಕಿಟಕಿಗೆ ಚಾಕು ಒತ್ತಿದ. ಮುಖದ ಸ್ನಾಯುಗಳನ್ನು ಪೈಶಾಚಿಕವಾಗಿ ವಕ್ರಗೊಳಿಸಿದ... ಕೇವಲ ಒಂದೆರಡು ನೂರು ಗ್ರಾಂಗಳ ಕಬ್ಬಿಣ ಕೇಡಿಗಳಲ್ಲಿ ತುಂಬಿದ ಪಾಶವೀ ಆತ್ಮವಿಶ್ವಾಸ... ನನ್ನ ನಿಸ್ಸಹಾಯಕತೆ... ಆ ಹೆಂಗಸಿನ ದುರ್ದೆಶೆ... ಇಡೀ ಬದುಕು ಅರ್ಥ ಕಳೆದುಕೊಂಡಿತ್ತು. ಅತ್ಯಾಚಾರ ಉಂಟುಮಾಡುವ ದೈಹಿಕ ಯಾತನೆ ಹಾಗೂ ಮಾನಸಿಕ ಆಘಾತ, ನಿಸ್ಸಹಾಯಕನಾಗಿ ಅತ್ಯಾಚಾರಕ್ಕೆ ಮೂಕ ಪ್ರೇಕ್ಷಕನಾಗುವ ಪಾಪಪ್ರಜ್ಞೆ- ಎರಡರಲ್ಲಿ ಯಾವುದು ಹೆಚ್ಚು ಕ್ಲೇಶಕರ? ನನ್ನಲ್ಲಿ ಈಗಲೂ ಉತ್ತರವಿಲ್ಲ. ಮತ್ತೆ ಬಾಗಿಲ ಹಿಡಿಕೆಗೆ ಕೈಹಾಕಿದೆ. ಹತ್ತುಮಾರು ದೂರದ ಪುಟ್ಟಮರವೊಂದರ ಕೆಳಗಿನ ಕತ್ತಲ ನೆಲದ ಮೇಲೆ ನಿಶ್ಶಬ್ದ ಚಲನೆಗಳು ಕಂಡುಬಂದವು. ಮುಂದಿನ ಕ್ಷಣದಲ್ಲಿ ಕಿಟಕಿಯ ಗಾಜಿನ ಮೇಲೆ ನೀಳ ಚಾಕು ಹರಿದಾಡಿತು. ಈಗ ಅದರ ಹಿಂದಿದ್ದ ಮುಖ ಕುಳ್ಳನದು... ಮತ್ತೆರಡು ಭಯಾನಕ ನಿಮಿಷಗಳು... ಧಡಾರನೆ ತೆರೆದುಕೊಂಡ ಬಲಪಕ್ಕದ ಬಾಗಿಲು. ಕುಳ್ಳನ ದನಿ ಕಿವಿಗೆ ಅಪ್ಪಳಿಸಿತು: "ನಮ್ಮ ಭೋಜನ ಆಯ್ತು. ಎಲೇಲಿ ನಿಂಗೂ ಒಂಚೂರು ಉಳಿಸಿದ್ದೀವಿ. ಹೋಗಿ ನೆಕ್ಕು." ಸೀಟಿನ ಮೇಲಿದ್ದ ತನ್ನ ಹಾಗು ಕರಿಯನ ಚೀಲಗಳನ್ನು ಹೊರಗೆಳೆದುಕೊಂಡ. ತೆರೆದ ಬಾಗಿಲನ್ನು ಹಾಗೇ ಬಿಟ್ಟು ಪಕ್ಕಕ್ಕೆ ಸರಿದುಹೋದ. ಕರಿಯ ಡಿಕ್ಕಿ ತೆರೆದು ಸೂಟ್‌ಕೇಸ್ ಎತ್ತಿಕೊಂಡ. ಡಿಕ್ಕಿಯನ್ನು ಮುಚ್ಚದೇ ತಗ್ಗಿನತ್ತ ಹೆಜ್ಜೆ ಹಾಕಿದ. ಮರಗಟ್ಟಿದ್ದ ಬೆರಳುಗಳನ್ನು ಬಾಗಿಲ ಮೇಲೆ ಪರಪರ ಹರಿದಾಡಿಸಿ ಪಿಡಿ ಹಿಡಿದು ತಿರುವಿದೆ. ಕಾಲುಗಳನ್ನು ಎಳೆದುಹಾಕಿ ಹೊರಗಿಳಿದೆ. ಎಡಮಂಡಿ ಚಳಕ್ ಎಂದಿತು. ಕಾರಿನ ಆ ಬದಿಯಲ್ಲಿ ಅವರಿಬ್ಬರ ಬೆನ್ನುಗಳು ಕಂಡವು. ನಿಶ್ಶಬ್ಧವಾಗಿ, ನಿರ್ವಿಕಾರವಾಗಿ, ನಿರ್ದಾಕ್ಷಿಣ್ಯವಾಗಿ ಅವು ನಡೆದುಹೋಗುತ್ತಿದ್ದವು. ಮರದ ಕೆಳಗಿನ ಕತ್ತಲಿನತ್ತ ತಿರುಗಿದೆ. ಹೆಂಗಸಿನ ಅಸ್ಪಷ್ಟ ವಿನ್ಯಾಸ ಕಣ್ಣಿಗೆ ಬಿತ್ತು. ಅತ್ತ ನಡೆಯಲು ಹೆಜ್ಜೆ ಕಿತ್ತೆ. ಯಾರೋ ಎದೆಗೆ ಗುದ್ದಿದಂತಾಯಿತು. ಗಕ್ಕನೆ ನಿಂತೆ. ಆಗಬಾರದ್ದು ಆಗಿಹೋದ ಮೇಲೆ ಹೋಗಿ ಮಾಡುವುದಾದರೂ ಏನನ್ನು? ಈಗ ಮುಖ ತೋರಿಸುವ ನನ್ನ ಬಗ್ಗೆ ಅವಳಲ್ಲಿ ಅದೆಷ್ಟು ಅಸಹ್ಯ ಉಕ್ಕಬಹುದು! ಕಾಲುಗಳು ಹೂತ ಕಂಬದಂತೆ ನಿಂತುಬಿಟ್ಟವು. ಕತ್ತು ಅಯಾಚಿತವಾಗಿ ಸುತ್ತಲೂ ಹೊರಳಾಡಿತು. ಕೇಡಿಗಳು ಹೋದೆಡೆ ಕಲ್ಲುಗಳು ತುಂಬಿದ ಇಳಿಜಾರು ಹಾದಿ ಮಸುಕುಬೆಳದಿಂಗಳಲ್ಲಿ ಅಸ್ಪಷ್ಟವಾಗಿ ಕಂಡಿತು. ಎಡಕ್ಕೆ ತಗ್ಗಿನಲ್ಲಿ ಬೆಳ್ಳಿಯ ತಗಡಿನಂತೆ ಹೊಳೆಯುತ್ತಿರುವುದು ಕೊಳವಿರಬೇಕು. ಅದರಾಚೆ ಕಡುಗಪ್ಪನೆಯ ಮರಗಳ ಗುಂಪು. ಬಲಕ್ಕೆ ಗೋಡೆಯಂತೆ ಎತ್ತರಕ್ಕೆ ಏರಿನಿಂತ ಕಲ್ಲುಗುಡ್ಡ. ಬೆನ್ನ ಹಿಂದೆ ದೂರದಲ್ಲಿ ಯಾವುದೋ ವಾಹನದ ಕ್ಷೀಣ ಮೊರೆತ... ಮರದ ಕೆಳಗೆ ಮಡುಗಟ್ಟಿದ್ದ ಕತ್ತಲೆ ಒಮ್ಮೆ ನರಳಿ ಬಿಕ್ಕಿತು. ನನ್ನ ಮೈಯಿಡೀ ನಡುಗಿಹೋಯಿತು. ಅತ್ತ ಕಾಲೆಳೆದೆ. ಅವಳು ಎದ್ದು ಕುಳಿತಿದ್ದಳು. ಬಾಯಿಯೊಳಗೆ ಕೈಹಾಕಿ ಏನನ್ನೋ ಹೊರಗೆಳೆಯುತ್ತಿದ್ದಳು. ಮೂರು ನಾಲ್ಕು ಕರವಸ್ತ್ರಗಳು ಒಂದೊಂದಾಗಿ ಹೊರಬಂದವು. ಕೊನೆಯದರ ಹಿಂದೆಯೇ "ವ್ಯಾಕ್" ಎಂಬ ಶಬ್ಧವೂ ಹೊರಬಂತು. ಶರೀರವನ್ನು ಹಿಂದಕ್ಕೆ ಮುಂದಕ್ಕೆ ತೂಗಾಡಿಸುತ್ತಾ ಮಡಿಲಿಗೇ ವಾಂತಿ ಮಾಡಿಕೊಂಡಳು. ಮಾತಿಲ್ಲದೇ ಹಿಂತಿರುಗಿದೆ. ಕಾರಿನ ಬಾಗಿಲು ತೆರೆದೇ ಇತ್ತು. ನನ್ನ ಬ್ಯಾಗ್ ತೆರೆದು ನೀರಿನ ಬಾಟಲಿ ಹೊರಗೆಳೆದೆ. ತೆಗೆದುಕೊಂಡು ಹೋಗಿ ಅವಳ ಮುಂದೆ ಹಿಡಿದೆ. ಅವಳು ನನ್ನನ್ನೊಮ್ಮೆ ನೇರವಾಗಿ ನೋಡಿದಳು. ಮರುಕ್ಷಣ ಕೈಗಳಲ್ಲಿ ಮುಖ ಮುಚ್ಚಿಕೊಂಡಳು. ತಲೆಯನ್ನು ಮುಂದಕ್ಕೆ ಬಾಗಿಸಿ ತೊಡೆಗಳ ಮೇಲಿಟ್ಟು ಬಿಕ್ಕಿದಳು. ಅತ್ತ ನೋಡಿದ ನನಗೆ ಕಂಡದ್ದು ಪೂರ್ಣವಾಗಿ ಬತ್ತಲಾಗಿದ್ದ ತೊಡೆಗಳು. ಅವಳ ಸೀರೆ ಮೈಮೇಲಿರಲಿಲ್ಲ. ಲಂಗ ಕತ್ತರಿಯಲ್ಲಿ ಕತ್ತರಿಸಿದಂತ ನಡುಮಧ್ಯಕ್ಕೆ ಸೀಳಿಹೋಗಿ ತೊಡೆಗಳ ಕೆಳಗೆ ನೆಲದ ಮೇಲೆ ಮುದುರಿಬಿದ್ದಿತ್ತು. ಅದನ್ನು ಇನ್ನೂ ಅವಳ ಮೈಗೆ ಕಟ್ಟಿಹಾಕಿದ್ದ ಲಾಡಿ ಹೊಟ್ಟೆಯ ನಡುಮಧ್ಯದಲ್ಲಿ ಆಳವಾಗಿ ಒಳಗಿಳಿದಿತ್ತು. ಇಡಿಯಾಗಿ ಮೈಮೇಲಿದ್ದುದು ರವಿಕೆ ಮಾತ್ರ. ಅದರ ಒಂದು ಹುಕ್ಕೂ ಅಲುಗಿರಲಿಲ್ಲ. ಅವಳ ಸೀರೆಗಾಗಿ ಸುತ್ತಲೂ ಕಣ್ಣಾಡಿಸಿದೆ. ಅದೆಲ್ಲೂ ಕಾಣಲಿಲ್ಲ. ಅವಳ ಇಡೀ ಮೈ ಮುಚ್ಚುವಂತಹ ದೊಡ್ಡ ಬಟ್ಟೆ ಯಾವುದೂ ನನ್ನಲ್ಲಿರಲಿಲ್ಲ. ಟವಲ್ ಸಹಾ ಇರಲಿಲ್ಲ. ನನ್ನ ಕೆಲವು ಬಟ್ಟೆಗಳು, ಒಂದು ಬಾತ್ ಟವಲ್ ಬೆಂಗಳೂರಿನ ಅಕ್ಕನ ಮನೆಯಲ್ಲಿ ಯಾವಾಗಲೂ ಇರುತ್ತಿದ್ದುದರಿಂದ ಪ್ರತೀ ಪ್ರಯಾಣದಲ್ಲೂ ಅವನ್ನು ತೆಗೆದುಕೊಂಡು ಹೋಗುವ ಅಗತ್ಯ ನನಗಿರಲಿಲ್ಲ. ನನ್ನ ಬ್ಯಾಗಿನಲ್ಲಿದ್ದದ್ದು ಮಾಮೂಲಿನಂತೆ ಒಂದೆರಡು ಪುಸ್ತಕಗಳು, ನೋಟುಬುಕ್ಕುಗಳು ಮತ್ತು ಟ್ರ್ಯಾನ್ಸಿಸ್ಟರ್ ಮಾತ್ರ. ನಾನು ಮತ್ತೊಮ್ಮೆ ನಿಸ್ಸಹಾಯಕನಾಗಿದ್ದೆ. "ಬಾಯಿ ತೊಳಕೊಂಡು ನೀರು ಕುಡೀರಿ." ನನ್ನ ದನಿ ನನಗೇ ಅಪರಿಚಿತವಾಗಿತ್ತು. ನೀರಿನ ಬಾಟಲನ್ನು ಬಲವಂತವಾಗಿ ಅವಳ ಕೈಗೆ ಹಿಡಿಸಿದೆ. ಅವಳ ಬಿಕ್ಕುವಿಕೆ ಅಧಿಕವಾಯಿತು. "ನನ್ ಜೊತೆ ಬನ್ನೀ ಅಂತ ಇವರನ್ನ ಗೋಗರೆದೆ. ರಜಾ ಇಲ್ಲಾ, ನೀನೊಬ್ಳೇ ಹೋಗು ಅಂದ್ಬಿಟ್ರೂ" ಎನ್ನುತ್ತಾ ಗಟ್ಟಿಯಾಗಿ ಅಳತೊಡಗಿದಳು. ನೀರಿನ ಬಾಟಲ್ ಅವಳ ಕೈಯಿಂದ ಜಾರಿ ಕೆಳಗೆ ಬಿತ್ತು. ಅಲ್ಲಿ ನನ್ನ ಉಪಸ್ಥಿತಿಯ ನಿರುಪಯುಕ್ತತೆ ಮೇಲೆಗರಿ ಎದೆಗೆ ಜಾಡಿಸಿ ಒದೆಯಿತು. ಅವಳು ಮತ್ತೆ ಬಿಕ್ಕಿದಳು. "ನೀನು ಒಬ್ಳೇ ಬರೋಕೆ ಹೋಗಬೇಡಾ. ಕಾಲ ಒಳ್ಳೇದಲ್ಲಾ. ಭಾವಂಗೆ ರಜಾ ಆದಾಗಲೇ ಬಾ, ನಿಧಾನವಾದ್ರೂ ಪರವಾಗಿಲ್ಲ ಅಂತ ರಾಜಿ ಹತ್ತು ಸಲವಾದ್ರೂ ಹೇಳಿದ್ಲು. ಅವಳ ಮಾತನ್ನ ನಾನೇ ಕೇಳ್ಲಿಲ್ಲಾ." ಕಟ್ಟೆಯೊಡೆದಂತೆ ಮತ್ತೆ ಭೋರ್ಗರೆದ ಅಳು. ನಾನು ಮಾತಿಲ್ಲದೇ ನಿಂತೆ. ನಿಮಿಷದ ನಂತರ ಅವಳು ಚಕ್ಕನೆ ಅಳು ನಿಲ್ಲಿಸಿದಳು. ತಲೆಯೆತ್ತಿ ನನ್ನನ್ನೇ ದಿಟ್ಟಿಸಿದಳು. ಸರ್ರನೆ ಮುಂದೆ ಬಾಗಿ ನನ್ನ ಕಾಲುಗಳನ್ನು ತಬ್ಬಿಕೊಂಡಳು. "ಸಾರ್ ಸಾರ್... ಇದನ್ನ ಯಾರಿಗೂ ಹೇಳಬೇಡಿ ಸಾರ್... ನಿಮ್ ದಮ್ಮಯ್ಯಾ ಅಂತೀನಿ..." ನಾನು ಬೆಚ್ಚಿದೆ. "ಇಲ್ಲಾ ಇಲ್ಲಾ ಹೇಳೋದಿಲ್ಲಾ..." ಎನ್ನುತ್ತಾ ಗಕ್ಕನೆ ಬಾಗಿ ಅವಳ ಭುಜ ಹಿಡಿದೆ. "ಕಾಲು ಹಿಡೀಬೇಡಿ..." ಎಡಗಡೆ ಸದ್ದಾಯಿತು. ಬಾಗಿದಂತೇ ಅತ್ತ ಹೊರಳಿದೆ. ಆ ಯುವಕ ನಿಂತಿದ್ದ. ಅಚ್ಚರಿಯಲ್ಲಿ ನೆಟ್ಟಗೆ ನಿಂತೆ. ಅವನು ಸಣ್ಣಗೆ ತುಟಿಯರಳಿಸಿದ. "ನಾನು ಓಡಿಹೋದೆ ಅಂದ್ಕೊಂಡ್ರಾ? ಇಲ್ಲಾ ಸರ್. ನನ್ನ ಕರ್ತವ್ಯಾನ ನಾನು ಮರೆತು ಓಡಿಹೋಗೋದು! ಹೌ ಕ್ಯಾನ್ ಐ ಎವರ್ ಡೂ ದಟ್? ಇಲ್ಲೇ ಆ ಬಂಡೆ ಹಿಂದೆ ಅವಿತಿದ್ದೆ." ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ಅವನ ಮುಖವನ್ನೇ ಶೂನ್ಯವಾಗಿ ದಿಟ್ಟಿಸಿದೆ. ಹೆಂಗಸು ನನ್ನ ಕಾಲು ಬಿಟ್ಟು ಹಿಂದೆ ಸರಿದಳು. ಹರಿದ ಲಂಗವನ್ನು ಹಿಡಿದೆಳೆದು ತೊಡೆಗಳನ್ನು ಮುಚ್ಚಿಕೊಂಡು ಮುದುರಿ ಕೂತು ಅವನ ಮುಖವನ್ನೇ ನೇರವಾಗಿ ನೋಡಿದಳು. "ನನ್ನ ಸಾಮಾಜಿಕ ಜವಾಬ್ದಾರಿಯ ಅರಿವು ನಂಗೂ ಇದೆ ಸರ್. ಇಂಥಾ ಒಂದು ಕ್ರೈಮ್, ದಟ್ ಟೂ ಎಗೈನ್‌ಸ್ಟ್ ಎ ವುಮನ್, ನಡೀತಿರೋವಾಗ ನಾನು ಸುಮ್ನಿರೋಕೆ ಹ್ಯಾಗೆ ಸಾಧ್ಯ?" ನನಗೆ ಏನೊಂದೂ ಅರ್ಥವಾಗಲಿಲ್ಲ. ಅವನ ಮಾತುಗಳು ತೀರಾ ಅಪರಿಚಿತವೆನಿಸಿದವು. "ಕೇಡಿಗಳಿಗೆ ಏನಾದ್ರೂ ಮಾಡಿದೆಯಾ?" ನಾಲಿಗೆಗೆ ಬಂದ ಪ್ರಶ್ನೆ ಅಯಾಚಿತವಾಗಿ ಹೊರಹಾರಿತು. "ನಾಟ್ ದಟ್ ಸರ್. ಇಡೀ ಘಟನೇನ ನಾನು ಫ್ರೇಂ ಟು ಫ್ರೇಂ ಗಮನಿಸಿದ್ದೀನಿ. ಒಂದು ಡೀಟೇಲ್ಡ್ ರಿಪೋರ್ಟ್ ತಯಾರಿಸೋದಿಕ್ಕೆ ಅರ್ಧ ಗಂಟೆ ಸಾಕು. ನನ್ನ ಲ್ಯಾಪ್‌ಟಾಪ್ ಇಲ್ಲೇ ಇದೆಯಲ್ಲ. ಕೇಡಿಗಳು ಅದನ್ನ ಎತ್ಕೊಂಡು ಹೋಗ್ಲಿಲ್ಲ ಅನ್ನೋದನ್ನ ಗಮನಿಸಿದ್ದೀನಿ. ಅದನ್ನ ಇಲ್ಲೇ ಬಿಟ್ಟು ಅವರು ಒಳ್ಳೇ ಕೆಲಸ ಮಾಡಿದ್ದಾರೆ. ಐ ~ಆಮ್ ಥ್ಯಾಂಕ್‌ಫುಲ್ ಟು ದೆಮ್." ನನ್ನ ದಿಗಿಲು ಹತ್ತಿದ ನೋಟವನ್ನು ನಿರ್ಲಕ್ಷಿಸಿ ಮುಂದುವರೆಸಿದ: "ರಿಪೋರ್ಟ್ ತಯಾರಾದ ಕೂಡ್ಲೆ ಅದನ್ನ ನ್ಯೂಸ್ ಚಾನಲ್‌ಗಳಲ್ಲಿರೋ ನನ್ ಫ್ರೆಂಡ್ಸ್‌ಗೆಲ್ಲಾ ಇ ಮೇಲ್ ಮಾಡ್ತೀನಿ. ಬ್ರೇಕ್‌ಫಾಸ್ಟ್ ನ್ಯೂಸ್‌ನಲ್ಲಿ ಮೆಯಿನ್ ಐಟೆಂ ಮಾಡಿ ಅಂತ ಹೇಳ್ತೀನಿ. ಈ ರೋಗ್ಸ್ ಮಾಡಿರೋ ಅತ್ಯಾಚಾರ ಇಡೀ ದೇಶಕ್ಕೆ ತಿಳಿದುಹೋಗುತ್ತೆ. ರಾಷ್ಟ್ರದ ಅಂತಃಸಾಕ್ಷಿಯನ್ನೇ ಕಲಕಿಬಿಡತ್ತೆ." ನಾನು ಪ್ರತಿಕ್ರಿಯಿಸಲಾರದಷ್ಟು ದಿಗ್ಭ್ರಮೆಗೊಳಗಾಗಿದ್ದೆ. ನನ್ನ ಸೋತ ಕಣ್ಣುಗಳು ಹೆಂಗಸಿನತ್ತ ಇಳಿದವು. ಅವಳು ಮತ್ತಷ್ಟು ಮುದುರಿಕೊಂಡಳು. ಹರಿದ ಲಂಗದ ಒಂದಂಚು ಕೈಜಾರಿ ಒಂದು ತೊಡೆ ಬತ್ತಲಾಯಿತು. ಆತುರಾತುರವಾಗಿ ಅದನ್ನೆಳೆದು ಬಿಗಿಯಾಗಿ ಹಿಡಿದುಕೊಂಡಳು. "ನಿಮ್ಮ ಸೂಟ್‌ಕೇಸಿನಲ್ಲಿ ಬೇರೆ ಬಟ್ಟೆಗಳಿವೆಯೇ? ಇರಿ, ಅದನ್ನೇ ಇಲ್ಲಿಗೆ ತರ್ತೀನಿ. ಎದ್ದು ಬೇರೆ ಸೀರೆ ಉಟ್ಕೊಳ್ಳಿ." ಆಕೆಗೆ ಹೇಳಿ ಕಾನತ್ತ ಎರಡು ಹೆಜ್ಜೆ ಹಾಕಿದೆ. ಹಿಂದೆ ತಿರುಗಿ ಆ ಯುವಕನಿಗೆ "ನೀನು ಈ ಕಡೆ ಬಾ" ಅಂದೆ. ಅವನು ನನ್ನ ಹಿಂದೆಯೇ ಬಂದು ನನ್ನನ್ನು ದಾಟಿ ಧಾಪುಗಾಲಿಟ್ಟು ಮುಂದೆ ಹೋದ. ನಾನು ಕಾರ್ ಸಮೀಪಿಸುವಷ್ಟರರಲ್ಲಿ ಅವನು ಮುಂದಿನ ಸೀಟಿನಲ್ಲಿದ್ದ ತನ್ನ ಬ್ಯಾಗನ್ನು ಹೊರಗೆಳೆದುಕೊಂಡಾಗಿತ್ತು. ಅವಳು ಕುಳಿತಿದ್ದ ಸೀಟಿನಲ್ಲಿ ಅವಳ ಹೆಗಲ ಚೀಲ ಮಾತ್ರ ಸಿಕ್ಕಿತು. ಕೇಡಿಗಳು ಎತ್ತಿ ನಿಲ್ಲಿಸಿಯೇ ಹೋಗಿದ್ದ ಡಿಕ್ಕಿಯಲ್ಲಿ ಬಗ್ಗಿ ನೋಡಿದಾಗ ಅಲ್ಲಿ ಸೂಟ್‌ಕೇಸ್ ಕಂಡಿತು. ಎರಡನ್ನೂ ಎತ್ತಿಕೊಂಡು ನಾನು ಮರದತ್ತ ತಿರುಗಿದಾಗ ಅವನು ಅವಳ ಮುಂದೆ ಕುಕ್ಕರಗಾಲಿನಲ್ಲಿ ಕುಳಿತಿರುವುದು ಕಂಡಿತು. "...ನಿಮಗೆ ನ್ಯಾಯ ಸಿಗುತ್ತೆ ಆಂಟೀ. ಅದಕ್ಕಾಗಿ ನಾನು ಹೋರಾಡ್ತೀನಿ. ನನ್ನ ಕರ್ತವ್ಯ ಅದು. ನಾಳೆ ಬೆಳಿಗ್ಗೆ ಇಡೀ ದೇಶಕ್ಕೆ ಸುದ್ದಿ ಹರಡುತ್ತೆ. ಇಡೀ ದೇಶ ಆ ರೇಪಿಸ್ಟ್‌ಗಳನ್ನ ಬೇಟೆಯಾಡುತ್ತೆ. ಅವರಿಬ್ರಿಗೂ ಶಿಕ್ಷೆ ಗ್ಯಾರಂಟಿ. ಇನ್ಯಾವತ್ತೂ ಇನ್ಯಾವ ಹೆಣ್ಣಿಗೂ ಈ ರೀತಿ ಅನ್ಯಾಯ ಆಗೋದಿಲ್ಲ. ಇದೆಲ್ಲಾ ಆಗಬೇಕಾದ್ರೆ ನೀವು ಸ್ವಲ್ಪ ಕೋಆಪರೇಟ್ ಮಾಡ್ಬೇಕು. ನನ್ನ ರಿಪೋರ್ಟ್ ಅಥೆಂಟಿಕ್ ಆಗಬೇಕಾದ್ರೆ, ಎಫೆಕ್ಟಿವ್ ಆಗಬೇಕಾದ್ರೆ ನಿಮ್ಮದು ಒಂದೆರಡು ಫೋಟೋ ಬೇಕು ನಂಗೆ. ನೀವು ಬೇರೆ ಥರಾ ಪೋಸ್ ಕೊಡೋದೇನೂ ಬೇಡ. ಈ ಪೋಸೇ ಇರಲಿ" ಅವಳು ಮುಖವನ್ನು ಮಂಡಿಗಳ ನಡುವೆ ಹುದುಗಿಸಿ ಮತ್ತಷ್ಟು ಮದುರಿಕೊಂಡಳು. ಎರಡೂ ಕೈಗಳಲ್ಲಿ ಬಿಗಿಯಾಗಿ ಹಿಡಿದಿದ್ದ ಹರಿದ ಲಂಗದ ಅಂಚುಗಳನ್ನು ಮತ್ತಷ್ಟು ಬಲವಾಗಿ ಎಳೆದು ತೊಡೆಗಳನ್ನು ಮುಚ್ಚಿಕೊಳ್ಳಲು ಹೆಣಗಿದಳು. ಯುವಕನ ಕೈಯಲ್ಲಿದ್ದ ಡಿಜಿಟಲ್ ಕ್ಯಾಮೆರಾ ಒಂದೆರಡು ಸಲ ಮಿನುಗಾಡಿತು. "ಅದೆಲ್ಲಾ ಏನೂ ಬೇಡಾ." ನಾನು ಗಾಬರಿಯಲ್ಲಿ ಕೂಗಿದೆ. ಅವನು ನನ್ನತ್ತ ಅಲಕ್ಷದಿಂದ ಕೈ ಒದರಿದ: "ನೀವು ಸುಮ್ಮನಿರಿ. ನಿಮಗೆ ಗೊತ್ತಾಗೋದಿಲ್ಲ. ನೀವು ಹಳೇಕಾಲದೋರು." ಅವಳತ್ತ ತಿರುಗಿದ. "ಥ್ಯಾಂಕ್ಸ್ ಆಂಟಿ. ನಿಮ್ಮ ಮುಖದ್ದೊಂದು ಫೋಟೋ ತಗೋತೀನಿ. ಎಲ್ಲೀ ಸ್ವಲ್ಪ ತಲೆಯೆತ್ತಿ." ಅವಳು ತಲೆಯೆತ್ತಿದಳು. ನಾನು ದಂಗುಬಡಿದುಹೋದೆ. ನನ್ನ ಕೈಗಳಲ್ಲಿದ್ದ ಅವಳ ಸೂಟ್‌ಕೇಸ್ ಮತ್ತು ಹೆಗಲಚೀಲಗಳು ಧೊಪ್ಪನೆ ಕೆಳಗೆ ಬಿದ್ದವು. ಅದರತ್ತ ಅವಳ ಗಮನವೇ ಇಲ್ಲ. ತಲೆ ಮೇಲೆತ್ತಿ ಆ ಯುವಕನನ್ನೇ ನೇರವಾಗಿ ನೋಡಿದಳು. ತೊಡೆಗಳನ್ನು ಮುಚ್ಚಿದ್ದ ಲಂಗದ ಅಂಚುಗಳನ್ನು ಕೆಳಗೆ ಬಿಟ್ಟಳು. ಬತ್ತಲು ಕಾಲುಗಳನ್ನು ಮಡಿಚಿ ದೇಹವನ್ನು ಹಿಂದಕ್ಕೆ ವಾಲಿಸಿ ಕೈಗಳನ್ನೂ ಹಿಂದೆ ಕೊಂಡೊಯ್ದು ನೆಲದ ಮೇಲೆ ಊರಿದಳು. ಅವಳ ಕಣ್ಣುಗಳು ಅವನ ಕ್ಯಾಮರಾದ ಮೇಲೇ ನೆಟ್ಟಿದ್ದವು. "ಸೂಪರ್ ಆಂಟೀ! ಹೀಗೆ ಇರಿ... ಫ್ಯಾಂಟಾಸ್ಟಿಕ್..." ಕಣ್ಣಿಗೆ ಕ್ಯಾಮರಾ ಹೂಡಿದ ಯುವಕ ಪ್ರೋತ್ಸಾಹದ ಉದ್ಗಾರಗಳನ್ನು ತೆಗೆಯುತ್ತಿದ್ದಂತೇ ಅವಳು ಎರಡೂ ಕಾಲುಗಳಿಂದ ಅವನ ಮುಖಕ್ಕೇ ಜಾಡಿಸಿ ಒದ್ದಳು. ಒದೆತದ ರಭಸ ಅದೆಷ್ಟು ಜೋರಾಗಿತ್ತೆಂದರೆ ಆ ಯುವಕ ಚೀತ್ಕರಿಸುವುದಕ್ಕೂ ಸಮಯ ಸಿಗದೇ ಎರಡು ಮಾರು ದೂರಕ್ಕೆ ಎಗರಿಬಿದ್ದ. ಅವನ ಕೈಯಿಂದ ಹಾರಿದ ಕ್ಯಾಮರಾ "ಚಟ್ ಡಟ್ ಟಟ್‌ಡಟ್" ಎಂದು ಇಳಿಜಾರಿನ ಕಲ್ಲುಗಳಿಗೆ ಬಡಿಯುತ್ತಾ ಸಾಗಿತು. ಕೊನೆಯಲ್ಲಿ ಕೇಳಿಬಂದದ್ದು "ಬುಳಕ್" ಎಂಬ ಶಬ್ದ. ಅವಳು ಚಿರತೆಯಂತೆ ಮೇಲೆ ಹಾರಿದಳು. ಒಂದೇ ನೆಗೆತಕ್ಕೆ ಅವನ ಬಳಿಸಾರಿ ಮೇಲೇಳುತ್ತಿದ್ದ ಅವನ ಎದೆಗೆ ಆವೇಶದಿಂದ ಒದ್ದಳು. ಉರುಳಿದ ಅವನ ಪಕ್ಕೆಗೆ ಮತ್ತೊಂದು ಒದೆತ... ಬತ್ತಲೆ ಕಾಲುಗಳು ಯುವಕನ ಮೈಮೇಲೆ ಸಿಕ್ಕಿದಲ್ಲಿ ಎರಗಿದವು... "ಓ ಬೇಡಾ. ಪ್ಲೀಸ್" ಎಂದು ಅರ್ತನಾಗಿ ಕೂಗಿದವನ ತಲೆಯ ಮೇಲೆ ಬೊಗಸೆಯಲ್ಲಿ ಮಣ್ಣು ಎತ್ತಿ ಎತ್ತಿ ಸುರಿದಳು... ಸುಸ್ತಾಗಿ ನಿಂತಳು. ಅವನು ಎದ್ದ. ಅವಳತ್ತ ಭೀತಿಯ ನೋಟ ಹೂಡಿದ. ಬುಸುಗುಟ್ಟಿದ ಅವಳು ಕಲ್ಲೊಂದನ್ನೆತ್ತಿ ಅವನತ್ತ ನುಗ್ಗಿದಳು. ಅವನು "ಓ ನೋ" ಎಂದು ಚೀರುತ್ತಾ ಓಡತೊಡಗಿದ. ಎರಡು ಕ್ಷಣದಲ್ಲಿ ಗುಡ್ಡದ ಕಲ್ಲುಗೋಡೆಯ ಹಿಂದೆ ಮರೆಯಾಗಿಹೋದ. ಅವಳತ್ತ ತಿರುಗಿದೆ. ಕಲ್ಲನ್ನು ಎರಡೂ ಕೈಗಳಲ್ಲಿ ಮೇಲೆತ್ತಿ ನೆಟ್ಟಗೆ ನಿಂತಿದ್ದಳು. ಹರಿದ ಲಂಗದ ಅಂಚುಗಳು ಗಾಳಿಯಲ್ಲಿ ಪಟಪಟ ಬಡಿದುಕೊಳ್ಳುತ್ತಿದ್ದವು. ಎದೆ ಏರಿಳಿಯುತ್ತಿತ್ತು. ನೋಟ ಅವನು ಹೋದ ದಿಕ್ಕಿಗೇ ಕೀಲಿಸಿತ್ತು. ನಿಬ್ಬೆರಗಾಗಿ ನಿಂತೆ. ಏಕಾಏಕಿ ಯೋಚನೆ ಬಂತು. ಅವನ ಕೈಯಲ್ಲೂ ಚಾಕು ಅಥವಾ ಅದಕ್ಕಿಂತ ಹೆಚ್ಚಿನ ಗನ್ ಅಂಥದೇನಾದರೂ ಇದ್ದಿದ್ದರೆ...! ಛಿಲ್ಲನೆ ಬೆವತುಹೋದೆ. ನಿಮಿಷದ ನಂತರ ಅವಳ ಎದೆ ಒಮ್ಮೆ ಏರಿಳಿಯಿತು. ಕಲ್ಲು ಕೆಳಗೆ ಬಿದ್ದು ತಗ್ಗಿನಲ್ಲಿ ಸಶಬ್ಧವಾಗಿ ಉರುಳಿಹೋಯಿತು. ಅವಳ ಕೈಗಳು ಸೋತಂತೆ ಕೆಳಗಿಳಿದವು. ಮರುಕ್ಷಣ ಅವಳು ಕೆಳಗೆ ಕುಸಿದಳು. ಬಿಕ್ಕಿ ಬಿಕ್ಕಿ ಅಳತೊಡಗಿದಳು. ಮರದ ಕೆಳಗಿದ್ದ ಅವಳ ಸೂಟ್‌ಕೇಸ್ ಮತ್ತು ಕೈಚೀಲಗಳನ್ನು ಎತ್ತಿಕೊಂಡು ಅವಳತ್ತ ನಡೆದೆ. ಭುಜದ ಮೇಲೆ ಮೃದುವಾಗಿ ಕೈಯಾಡಿಸಿದೆ. "ಬಟ್ಟೆ ಹಾಕ್ಕೊಳ್ಳಿ." ಮೆಲ್ಲನೆ ಹೇಳಿದೆ. ಹಿಂದೆ ತಿರುಗಿ ನನ್ನ ನೀರಿನ ಬಾಟಲಿಗಾಗಿ ಹುಡುಕಾಡಿದೆ. ಸ್ವಲ್ಪ ದೂರ ಉರುಳಿಹೋಗಿದ್ದ ಅದು ಕುರುಚಲು ಗಿಡವೊಂದಕ್ಕೆ ತಾಗಿ ನಿಂತಿತ್ತು. ಎತ್ತಿಕೊಂಡೆ. ಬಿರಟೆ ಸಡಿಲಾಗಿತ್ತೋ ಏನೋ ನೀರೆಲ್ಲಾ ಸುರಿದುಹೋಗಿ ತಳದಲ್ಲಿ ಎರಡು ಗುಟುಕಿನಷ್ಟು ಮಾತ್ರ ಉಳಿದಿತ್ತು.
2022/07/01 17:19:22
https://premashekhara.blogspot.com/2014/
mC4
ಚಾರ್ಲ್ಸ್‌‌ ಮ್ಯಾನ್ಸನ್‌‌‌ - ವಿಕಿಪೀಡಿಯ ಚಾರ್ಲ್ಸ್‌ ಮಿಲ್ಲೆಸ್‌ ಮ್ಯಾನ್ಸನ್ (ಜನನ: 1934ರ ನವೆಂಬರ್ 12ರಂದು - died 19 November 2017) ಅಮೆರಿಕಾದ ಓರ್ವ ಅಪರಾಧಿಯಾಗಿದ್ದು, ಮ್ಯಾನ್ಸನ್‌‌ ಕುಟುಂಬ ಎಂದೇ ಹೆಸರಾದ ಒಂದು ಮೇಲ್ನೋಟದ-ಸಮುದಾಯದ ನೇತೃತ್ವವನ್ನು ವಹಿಸಿದ; ಈ ಸಮುದಾಯವು 1960ರ ದಶಕದ ಅಂತ್ಯಭಾಗದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಪ್ರವರ್ಧಮಾನಕ್ಕೆ ಬಂದಿತು.[೧][೨]:163-4, 313[೩] ಅವನ ಸೂಚನೆಯ ಅನುಸಾರ, ಅವನ ಗುಂಪಿನ ಸದಸ್ಯರಿಂದ ಮಾಡಲ್ಪಟ್ಟ ಟೇಟ್‌/ಲೇಬಿಯಾಂಕಾ ಕೊಲೆಗಳನ್ನು ಎಸಗಲು ಒಳಸಂಚು ಹೂಡಿದ್ದಕ್ಕೆ ಅವನನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗಿತ್ತು. ಜಂಟಿ-ಹೊಣೆಗಾರಿಕೆಯ ನಿಯಮದ ಮೂಲಕ ಅವನು ತಪ್ಪಿತಸ್ಥನೆಂದು ರುಜುವಾತು ಪಡಿಸಲ್ಪಟ್ಟ; ಒಳಸಂಚಿನ ಉದ್ದೇಶದ ಮುಂದುವರಿಕೆಯಲ್ಲಿ, ಅವನ ಸಹವರ್ತಿ ಪಿತೂರಿಗಾರರು ಎಸಗುವ ಅಪರಾಧಗಳಿಗೆ ಸಂಬಂಧಿಸಿದಂತೆ ಒಳಸಂಚೊಂದರ ಪ್ರತಿಯೋರ್ವ ಸದಸ್ಯವನ್ನು ತಪ್ಪಿತಸ್ಥನನ್ನಾಗಿಸುವುದು ಈ ಜಂಟಿ-ಹೊಣೆಗಾರಿಕೆಯ ನಿಯಮದ ವೈಶಿಷ್ಟ್ಯ.[೪][೫] (೧೯೩೪-೧೧-೧೨)೧೨ ನವೆಂಬರ್ ೧೯೩೪ ಪೋಷಕರುu Charles Milles Manson, Jr. (mother Rosalie Jean Willis), Charles Luther Manson (mother Leona), Valentine Michael "Pooh Bear" Manson (mother Mary Brunner) "ಹೆಲ್ಟರ್‌ ಸ್ಕೆಲ್ಟರ್‌‌" ಎಂಬ ಶಬ್ದದೊಂದಿಗೆ ಮ್ಯಾನ್ಸನ್‌‌ ಗುರುತಿಸಿಕೊಂಡಿದ್ದಾನೆ; ಬೀಟಲ್ಸ್‌‌ ತಂಡದಿಂದ ಬರೆಯಲ್ಪಟ್ಟ ಮತ್ತು ಧ್ವನಿಮುದ್ರಿಸಲ್ಪಟ್ಟ ಹೆಲ್ಟರ್‌ ಸ್ಕೆಲ್ಟರ್‌‌ ಎಂಬ ಹಾಡಿನಿಂದ ಅವನು ಈ ಶಬ್ದವನ್ನು ಹೆಕ್ಕಿಕೊಂಡ. ಹಾಡಿನ ಸಾಹಿತ್ಯವು ತಾನು ನಂಬಿದ ಒಂದು ಭೀಕರವಾದ ಜನಾಂಗೀಯ ಯುದ್ಧದ ಕುರಿತಾಗಿದೆ ಎಂಬುದಾಗಿ ತಪ್ಪಾಗಿ ಗ್ರಹಿಸಿದ್ದ ಮ್ಯಾನ್ಸನ್‌‌, ಸದರಿ ಕೊಲೆಗಳು ಅದನ್ನು ತ್ವರಿತಗೊಳಿಸುವ ಉದ್ದೇಶವನ್ನು ಹೊಂದಿವೆ ಎಂದು ಭಾವಿಸಿದ್ದ. ಅವನ ಕುಪ್ರಸಿದ್ಧಿಯ ಆರಂಭದಿಂದಲೂ ರಾಕ್‌ ಸಂಗೀತದೊಂದಿಗಿನ ಈ ಸಂಬಂಧವು, ಒಂದು ಪಾಪ್‌ ಸಂಸ್ಕೃತಿಯ ಜೊತೆಯಲ್ಲಿ ಅವನನ್ನು ತಳುಕುಹಾಕಿತು; ಈ ಸಂಸ್ಕೃತಿಯಲ್ಲಿ ಅವನು ಅಂತಿಮವಾಗಿ ಹುಚ್ಚುತನ, ಹಿಂಸೆ, ಮತ್ತು ಮೃತ್ಯುಸೂಚಕದ ಒಂದು ಲಾಂಛನವೇ ಆಗಿಹೋದ. ಮ್ಯಾನ್ಸನ್‌‌ನ ಅಭಿಯೋಜಕನಾದ ವಿನ್ಸೆಂಟ್‌ ಬುಗ್ಲಿಯೊಸಿ ಎಂಬಾತ, ಮ್ಯಾನ್ಸನ್‌‌ ಕೊಲೆಗಳ ಕುರಿತಾಗಿ ಬರೆದ ಪುಸ್ತಕದ ಶೀರ್ಷಿಕೆಯಾಗಿ ಈ ಶಬ್ದವನ್ನು ನಂತರದಲ್ಲಿ ಬಳಸಿಕೊಂಡ. ಅವನ ಸಮುದಾಯವು ರೂಪುಗೊಳ್ಳುತ್ತಿದ್ದ ಪ್ರಾರಂಭಿಕ ಹಂತದಲ್ಲಿ ಮ್ಯಾನ್ಸನ್‌ ಓರ್ವ ನಿರುದ್ಯೋಗಿ ಮಾಜಿ-ಸೆರೆಯಾಳಾಗಿದ್ದ; ತಾನು ಎಸಗಿದ್ದ ಬಗೆಬಗೆಯ ಅಪರಾಧಗಳಿಗೆ ಸಂಬಂಧಿಸಿದಂತೆ ಆತ ತನ್ನ ಜೀವನದ ಅರ್ಧಭಾಗವನ್ನು ಶಿಕ್ಷಾಗೃಹಗಳಲ್ಲಿ ಕಳೆದಿದ್ದ. ಸದರಿ ಕೊಲೆಗಳು ಸಂಭವಿಸುವುದಕ್ಕೆ ಮುಂಚಿನ ಅವಧಿಯಲ್ಲಿ, ಲಾಸ್‌ ಏಂಜಲೀಸ್‌‌‌‌ನ ಸಂಗೀತ ಉದ್ಯಮದ ಹೊರ ಎಲ್ಲೆಯಲ್ಲಿ ಅವನೊಬ್ಬ ಗಾಯಕ-ಗೀತರಚನೆಕಾರನಾಗಿದ್ದ; ದಿ ಬೀಚ್‌ ಬಾಯ್ಸ್‌‌ ತಂಡದ ಓರ್ವ ಸದಸ್ಯನಾಗಿದ್ದ ಡೆನ್ನಿಸ್‌ ವಿಲ್ಸನ್‌‌ ಜೊತೆಯಲ್ಲಿ ಅಕಸ್ಮಾತ್ತಾಗಿ ಸಿಕ್ಕ ಸಹಯೋಗದ ಮೂಲಕ ಅವನಿಗೆ ಈ ಅವಕಾಶವು ಮುಖ್ಯವಾಗಿ ದೊರಕಿತ್ತು ಎನ್ನಬಹುದು. ನಂತರದಲ್ಲಿ ಅವನು ತಪ್ಪಿತಸ್ಥನೆಂದು ರುಜುವಾತು ಪಡಿಸಲ್ಪಟ್ಟ ಅಪರಾಧಗಳೊಂದಿಗೆ ಮ್ಯಾನ್ಸನ್‌ ಆರೋಪಿಸಲ್ಪಟ್ಟ ನಂತರ, ಅವನಿಂದ ಬರೆಯಲ್ಪಟ್ಟ ಮತ್ತು ಪ್ರಸ್ತುತಪಡಿಸಲ್ಪಟ್ಟ ಹಾಡುಗಳ ಧ್ವನಿಮುದ್ರಣಗಳು ವ್ಯಾಪಾರೀ ಸ್ವರೂಪದಲ್ಲಿ ಬಿಡುಗಡೆಯಾಗಿದ್ದವು. ಗನ್ಸ್‌‌ N' ರೋಸಸ್‌‌ ಮತ್ತು ಮೆರಿಲಿನ್‌‌ ಮ್ಯಾನ್ಸನ್‌‌‌ರನ್ನು ಒಳಗೊಂಡಂತೆ ಅನೇಕ ಕಲಾವಿದರು, ಅಲ್ಲಿಂದೀಚೆಯ ದಶಕಗಳಲ್ಲಿ ಅವನ ಹಾಡುಗಳನ್ನು ನಿರೂಪಿಸಿದ್ದಾರೆ. ಸಂಸ್ಥಾನ‌ದ ನ್ಯಾಯಾಲಯವು ನೀಡಿದ ಮರಣದಂಡನೆಯನ್ನು ಕ್ಯಾಲಿಫೋರ್ನಿಯಾದ ಸರ್ವೋಚ್ಚ ನ್ಯಾಯಾಲಯದಿಂದ 1972ರಲ್ಲಿ ನೀಡಲ್ಪಟ್ಟ ಒಂದು ತೀರ್ಮಾನವು ತೆಗೆದುಹಾಕಿದಾಗ, ಮ್ಯಾನ್ಸನ್‌‌ನ ಮರಣ ದಂಡನೆಯ ಶಿಕ್ಷೆಯು ಜೀವಾವಧಿ ಶಿಕ್ಷೆಯಾಗಿ ತಾನೇತಾನಾಗಿ ಬದಲಾಯಿಸಲ್ಪಟ್ಟಿತು.[೬] ಕ್ಯಾಲಿಫೋರ್ನಿಯಾದ ಗುರುತರವಾದ ಶಿಕ್ಷೆಯ ಸಂಭಾವ್ಯ ಪುನಃಸ್ಥಾಪನೆಯು ಮ್ಯಾನ್ಸನ್‌ ಮೇಲೆ ಪರಿಣಾಮವನ್ನುಂಟುಮಾಡಲಿಲ್ಲ; ಹೀಗಾಗಿ ಅವನು ಸದ್ಯಕ್ಕೆ ಕೊರ್ಕೊರಾನ್‌ ಸಂಸ್ಥಾನದ ಸೆರೆಮನೆಯ ಓರ್ವ ನಿವಾಸಿಯಾಗಿದ್ದಾನೆ. ೧.೨ ಮೊದಲ ಅಪರಾಧಗಳು ೧.೩ ಮೊದಲ ಸೆರೆವಾಸ ೧.೪ ಎರಡನೇ ಸೆರೆವಾಸ ೨ ಮ್ಯಾನ್ಸನ್‌‌ ಕುಟುಂಬ ೨.೧ ವಿಲ್ಸನ್‌‌, ಮೆಲ್ಚರ್‌, ಮತ್ತು ಇತರರೊಂದಿಗಿನ ತೊಡಗಿಸಿಕೊಳ್ಳುವಿಕೆ ೨.೨ ಸ್ಪಾಹ್ನ್‌‌ ಜಾನುವಾರು ಕ್ಷೇತ್ರ ೨.೩ ಹೆಲ್ಟರ್‌ ಸ್ಕೆಲ್ಟರ್‌‌ ೨.೪ ಟೇಟ್‌ ಜೊತೆಗಿನ ಮುಖಾಮುಖಿ ೩ ಸಮುದಾಯದ ಅಪರಾಧಗಳು ೩.೧ ಕ್ರೋವೆಗೆ ಗುಂಡಿಕ್ಕುವಿಕೆ ೩.೨ ಹಿನ್ಮನ್‌‌ ಕೊಲೆ ೩.೩ ಟೇಟ್‌ ಕೊಲೆಗಳು ೩.೩.೧ ಹತ್ಯೆ ೩.೪ ಲೇಬಿಯಾಂಕಾ ಕೊಲೆಗಳು ೩.೪.೧ ಹತ್ಯೆಗಳು ೪ ನ್ಯಾಯ ವ್ಯವಸ್ಥೆ ೪.೧ ತನಿಖೆ ೪.೧.೧ ಪ್ರಮುಖ ಪ್ರಗತಿ ೪.೧.೨ ದಸ್ತಗಿರಿ ೪.೨ ವಿಚಾರಣೆ ೪.೨.೧ ಮುಂದುವರಿಯುತ್ತಿರುವ ಭಿನ್ನಾಭಿಪ್ರಾಯಗಳು ೪.೨.೨ ಸ್ಥಗಿತಗೊಂಡ ಪ್ರತಿವಾದ ೪.೨.೩ ಅಪರಾಧ ನಿರ್ಣಯ ಮತ್ತು ದಂಡನೆಯ ಹಂತ ೫.೧ ನೋಟದಲ್ಲಿ ಉಳಿದಿರುವುದು ೫.೨ ನಂತರದ ಘಟನೆಗಳು ೫.೩ ಇತ್ತೀಚಿನ ಬೆಳವಣಿಗೆಗಳು ೫.೪ ಪೆರೋಲು ವಿಚಾರಣೆಗಳು ೬ ಮ್ಯಾನ್ಸನ್‌‌ ಮತ್ತು ಸಂಸ್ಕೃತಿ ೬.೧ ಧ್ವನಿಮುದ್ರಣಗಳು ೬.೨ ಸಾಂಸ್ಕೃತಿಕ ಪರಿಣಾಮ ೬.೩ ಸಾಕ್ಷ್ಯಚಿತ್ರಗಳು ೭.೨ ಉಲ್ಲೇಖಿಸಲ್ಪಟ್ಟ ಕೃತಿಗಳು ಓಹಿಯೋದ ಸಿನ್‌‌ಸಿನಾಟಿಯಲ್ಲಿರುವ ಸಿನ್‌‌ಸಿನಾಟಿ ಸಾರ್ವಜನಿಕ ಆಸ್ಪತ್ರೆಯಲ್ಲಿ, ಕ್ಯಾಥ್ಲೀನ್‌‌ ಮೆಡಾಕ್ಸ್ ಎಂಬ ಹೆಸರಿನ 16-ವರ್ಷ-ವಯಸ್ಸಿನ ಓರ್ವ ಅವಿವಾಹಿತೆಗೆ ಜನಿಸಿದ ಮ್ಯಾನ್ಸನ್‌‌ಗೆ ಮೊದಲಿಗೆ "ನೋ ನೇಮ್‌ ಮೆಡಾಕ್ಸ್‌‌" ಎಂಬ ಅಡ್ಡಹೆಸರಿಡಲಾಗಿತ್ತು.[೨]:136-7[೭][೮] ಕೆಲವೇ ವಾರಗಳೊಳಗಾಗಿ ಅವನಿಗೆ ಚಾರ್ಲ್ಸ್‌‌ ಮಿಲ್ಲೆಸ್‌‌ ಮೆಡಾಕ್ಸ್‌‌ ಎಂಬ ಹೆಸರನ್ನಿಡಲಾಯಿತು.[೨]:136-7[೯][೧೦] ಅವನ ಜನನವಾದ ನಂತರದ ಒಂದಷ್ಟು ಅವಧಿಯವರೆಗೆ ವಿಲಿಯಂ ಮ್ಯಾನ್ಸನ್‌‌[೧೦] ಎಂಬ ಹೆಸರಿನ ಓರ್ವ ಕಾರ್ಮಿಕನನ್ನು ಅವನ ತಾಯಿಯು ಮದುವೆಯಾಗಿದ್ದಳು; ಈತನ ಹೆಸರಿನ ಕೊನೆಯಭಾಗವನ್ನೇ ಈ ಹುಡುಗನಿಗೆ ನೀಡಲಾಯಿತು. ಈ ಹುಡುಗನ ಜೈವಿಕ ತಂದೆಯು ಓರ್ವ "ಕರ್ನಲ್‌ ಸ್ಕಾಟ್‌" ಆಗಿದ್ದ ಎಂದು ತೋರುತ್ತದೆ; ಅವನ ವಿರುದ್ಧವಾಗಿ ಒಂದು ವಿವಾಹೇತರ ಜನನದ ದಾವೆಯನ್ನು ಕ್ಯಾಥ್ಲೀನ್‌‌ ಮೆಡಾಕ್ಸ್‌‌ ಹೂಡಿದ ಪರಿಣಾಮವಾಗಿ, 1937ರಲ್ಲಿ ಒಂದು ಸರ್ವಸಮ್ಮತವಾದ ತೀರ್ಪು ದೊರೆಯಿತು.[೨]:136-7 ಪ್ರಾಯಶಃ, ಈ ಹುಡುಗ ಅವನನ್ನು ಎಂದಿಗೂ ನಿಜವಾಗಿ ಅರಿಯಲಾಗಲಿಲ್ಲ ಅಥವಾ ಒಡನಾಟವನ್ನು ಅನುಭವಿಸಲಾಗಲಿಲ್ಲ.[೨]:136-7[೮] ನಂತರದಲ್ಲಿ ವಾಷಿಂಗ್ಟನ್‌‌, D.C.ಯಲ್ಲಿರುವ ಹುಡುಗರಿಗೆ ಮೀಸಲಾದ ರಾಷ್ಟ್ರೀಯ ತರಬೇತಿ ಶಾಲೆಯಲ್ಲಿ ಮ್ಯಾನ್ಸನ್‌ ಕಳೆದ ಏಳು ತಿಂಗಳುಗಳ ಅವಧಿಗೆ ಸಂಬಂಧಿಸಿದಂತೆ, ಅವನ 1951ರ ಪ್ರಕರಣದ ಕಡತದಲ್ಲಿ ಇರುವ ಹಲವಾರು ಹೇಳಿಕೆಗಳು, "ಕರ್ನಲ್‌ ಸ್ಕಾಟ್‌" ಅಮೆರಿಕಾದ ನೀಗ್ರೋ ಆಗಿರುವ ಸಾಧ್ಯತೆಯನ್ನು ಪರೋಕ್ಷವಾಗಿ ಸೂಚಿಸುತ್ತವೆ.[೨]:555 ಅವನ ಕುಟುಂಬದ ಹಿನ್ನೆಲೆಯ ವಿಭಾಗಕ್ಕೆ ಸಂಬಂಧಿಸಿದ ಮೊದಲ ಎರಡು ವಾಕ್ಯಗಳನ್ನು ಇವು ಒಳಗೊಂಡಿದ್ದು, ಅದರಲ್ಲಿರುವ ವಿವರಗಳು ಹೀಗಿವೆ: "ತಂದೆ: ಅಜ್ಞಾತ. ಆತ ಸ್ಕಾಟ್ ಎಂಬ ಹೆಸರನ್ನು ಹೊಂದಿದ್ದ ಓರ್ವ ಮಿಶ್ರವರ್ಣೀಯ ಅಡುಗೆಯವ ಎಂದು ಹೇಳಲಾಗುತ್ತದೆ; ಅವನೊಂದಿಗೆ ಹುಡುಗನ ತಾಯಿಯು ಗರ್ಭಾವಸ್ಥೆಯ ಸಮಯದಲ್ಲಿ ಸ್ವಚ್ಛಂದ ಲೈಂಗಿಕ ಸಂಪರ್ಕವನ್ನು ಹೊಂದಿದ್ದಳು."[೨]:556 1971ರಲ್ಲಿ, ನ್ಯಾಯವಾದಿ ವಿನ್ಸೆಂಟ್‌ ಬುಗ್ಲಿಯೊಸಿ ಈ ಅಧಿಕೃತ ದಾಖಲೆಗಳ ಕುರಿತಾಗಿ ಮ್ಯಾನ್ಸನ್‌‌ನ್ನು ಕೇಳಿದಾಗ, ತನ್ನ ಜೈವಿಕ ತಂದೆಯು ಅಮೆರಿಕಾದ ನೀಗ್ರೋ ಪೀಳಿಗೆಯನ್ನು ಹೊಂದಿದ್ದ ಎಂಬ ಅಂಶವನ್ನು ಅವನು ನಿಶ್ಚಿತವಾಗಿ ನಿರಾಕರಿಸಿದ.[೨]:588 ಮೇಲ್ನೋಟಕ್ಕೆ-ಆತ್ಮಕಥೆಯ ರೀತಿಯಲ್ಲಿರುವ ಮ್ಯಾನ್ಸನ್‌‌ ಇನ್‌ ಹಿಸ್‌ ಓನ್‌ ವರ್ಡ್ಸ್‌ ಎಂಬ ಕೃತಿಯಲ್ಲಿ ವ್ಯಕ್ತವಾಗಿರುವಂತೆ, ಕರ್ನಲ್‌ ಸ್ಕಾಟ್‌ ಔಷಧಿಗಳ ಅಂಗಡಿಯಲ್ಲಿದ್ದ ಓರ್ವ ಕಿರಿಯ ಲಫಂಗನಾಗಿದ್ದ... ಸನಿಹದಲ್ಲಿರುವ ಒಂದು ಅಣೆಕಟ್ಟು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಹಂಗಾಮಿ ಕಾರ್ಮಿಕನಾಗಿದ್ದ." "ಸನಿಹದಲ್ಲಿರುವ" ಎಂಬುದರ ಅರ್ಥವೇನು ಎಂಬುದು ಇಲ್ಲಿ ಸ್ಪಷ್ಟವಾಗಿಲ್ಲ. ಈ ವಿವರಣೆಯು ಒಂದು ಪ್ಯಾರದಲ್ಲಿದ್ದು, ಅದು ಸೂಚಿಸುವ ಪ್ರಕಾರ, ಕ್ಯಾಥ್ಲೀನ್‌‌ ಮೆಡಾಕ್ಸ್‌‌ ಕೆಂಟುಕಿಯ ಆಶ್‌‌ಲ್ಯಾಂಡ್‌‌ನಲ್ಲಿರುವ ತನ್ನ ಸ್ವಂತದ ಮನೆಯಿಂದ ಓಡಿಬಂದ ನಂತರ, "ಸಿನ್‌‌ಸಿನಾಟಿಯಲ್ಲಿ ವಾಸಿಸುತ್ತಿರುವಾಗ ಮ್ಯಾನ್ಸನ್‌‌ಗೆ ಜನ್ಮ ನೀಡಿದಳು."[೧೧] ಮ್ಯಾನ್ಸನ್‌‌ನ ತಾಯಿಯು ಓರ್ವ ಭಾರೀ ಕುಡುಕಿಯಾಗಿದ್ದಳು ಎಂದು ಹೇಳಲಾಗುತ್ತದೆ.[೨]:136-7 ಕುಟುಂಬದ ಸದಸ್ಯನೋರ್ವನು ಹೇಳುವ ಪ್ರಕಾರ, ಒಂದು ಮರಿಗೆಯಷ್ಟು ಬಿಯರ್‌ನ್ನು ಪಡೆಯುವುದಕ್ಕೋಸ್ಕರ ಅವಳು ತನ್ನ ಮಗನನ್ನು ಮಕ್ಕಳಿಲ್ಲದ ಪರಿಚಾರಕಿಯೊಬ್ಬಳಿಗೆ ಒಮ್ಮೆ ಮಾರಿದ್ದಳು; ಕೆಲ ದಿನಗಳ ನಂತರ ಅವಳಿಂದ ಮ್ಯಾನ್ಸನ್‌ನ್ನು ಅವನ ಚಿಕ್ಕಪ್ಪ ಮರುವಶಮಾಡಿಕೊಂಡ.[೧೨] 1939ರಲ್ಲಿ ಪಶ್ಚಿಮ ವರ್ಜೀನಿಯಾದ ಚಾರ್ಲ್ಸ್‌ಟನ್‌‌‌ನಲ್ಲಿರುವ ಸೇವಾ ಕೇಂದ್ರವೊಂದನ್ನು ದರೋಡೆ ಮಾಡಿದ್ದಕ್ಕಾಗಿ, ಮ್ಯಾನ್ಸನ್‌‌ನ ತಾಯಿ ಮತ್ತು ಅವಳ ಸೋದರನಿಗೆ ಐದು ವರ್ಷಗಳ ಸೆರೆವಾಸದ ದಂಡನೆಯು ವಿಧಿಸಲ್ಪಟ್ಟಾಗ, ಪಶ್ಚಿಮ ವರ್ಜೀನಿಯಾದ ಮೆಕ್‌ಮೆಚೆನ್‌‌‌‌ನಲ್ಲಿರುವ ಓರ್ವ ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಮನೆಯಲ್ಲಿ ಮ್ಯಾನ್ಸನ್‌‌ನ್ನು ಇರಿಸಲಾಗಿತ್ತು. 1942ರಲ್ಲಿ ಕ್ಯಾಥ್ಲೀನ್‌ಗೆ ಪೆರೋಲು ದೊರೆತಾಗ, ಅವಳು ಮಗನನ್ನು ಮತ್ತೊಮ್ಮೆ ತನ್ನ ವಶಕ್ಕೆ ತೆಗೆದುಕೊಂಡಳು ಹಾಗೂ ಅವನತಿಗೆ-ಇಳಿದಿರುವ ಹೊಟೇಲು ಕೋಣೆಗಳಲ್ಲಿ ಅವನೊಂದಿಗೆ ವಾಸಿಸಿದಳು.[೨]:136-7 ಅವಳು ಸೆರೆಮನೆಯಿಂದ ಹಿಂದಿರುಗಿದ ದಿನದಂದು ಅವಳ ಶಾರೀರಿಕ ಅಪ್ಪುಗೆಯನ್ನು ಪಡೆದುದು, ತನ್ನ ಬಾಲ್ಯದ ಏಕಮಾತ್ರ ಸಂತೋಷದ ನೆನಪಾಗಿತ್ತು ಎಂಬುದಾಗಿ ಮ್ಯಾನ್ಸನ್‌‌ ಸ್ವತಃ ನಂತರದಲ್ಲಿ ವಿವರಿಸಿದ್ದಾನೆ.[೧೨] 1947ರಲ್ಲಿ, ತನ್ನ ಮಗನನ್ನು ಅನಾಥಾಲಯವೊಂದರಲ್ಲಿ ಇರಿಸಲು ಕ್ಯಾಥ್ಲೀನ್‌‌ ಮೆಡಾಕ್ಸ್‌‌ ಪ್ರಯತ್ನಿಸಿದಳು, ಆದರೆ ಅಂಥ ಯಾವ ಮನೆಯೂ ಲಭ್ಯವಿಲ್ಲದ ಕಾರಣದಿಂದ ಅವಳು ಈ ಪ್ರಯತ್ನದಲ್ಲಿ ವಿಫಲಗೊಳ್ಳಬೇಕಾಯಿತು.[೨]:136-7 ಇಂಡಿಯಾನಾದ ಟೆರ್ರೆ ಹೌಟ್ ಎಂಬಲ್ಲಿರುವ, ಹುಡುಗರಿಗಾಗಿ ಮೀಸಲಾದ ಗಿಬೌಲ್ಟ್‌ ಶಾಲೆಯಲ್ಲಿ ಮ್ಯಾನ್ಸನ್‌ನ್ನು ನ್ಯಾಯಾಲಯವು ಇರಿಸಿತು. 10 ತಿಂಗಳುಗಳ ನಂತರ, ಅಲ್ಲಿಂದ ಅವನು ತನ್ನ ತಾಯಿಯೆಡೆಗೆ ಓಡಿಬಂದನಾದರೂ, ಅವಳು ಅವನನ್ನು ತಿರಸ್ಕರಿಸಿದಳು.[೨]:136-7 ಮೊದಲ ಅಪರಾಧಗಳುಸಂಪಾದಿಸಿ ಕಿರಾಣಿ ಅಂಗಡಿಯೊಂದಕ್ಕೆ ಕನ್ನಹಾಕುವ ಮೂಲಕ ಮ್ಯಾನ್ಸನ್‌ ನಗದು ಹಣವನ್ನು ಗಳಿಸಿದ; ಒಂದು ಕೋಣೆಯನ್ನು ಬಾಡಿಗೆಗೆ ಹಿಡಿಯುವಲ್ಲಿ ಈ ಹಣವು ಅವನಿಗೆ ನೆರವಾಯಿತು.[೨]:136-7 ಇತರ ಅಂಗಡಿಗಳ ಕನ್ನಗಳ್ಳತನಗಳನ್ನು ಮಾಡುವ ಸಂದರ್ಭದಲ್ಲಿ ಬೈಸಿಕಲ್ ಒಂದನ್ನು ಕದಿಯುವಾಗ ಅವನು ಹಿಡಿಯಲ್ಪಟ್ಟಿದ್ದರಿಂದ, ಅವನ ಕಳ್ಳತನಗಳ ಸರಣಿಯು ಅಂತ್ಯವಾದಂತಾಯಿತು. ಇಂಡಿಯಾನಾಪೊಲಿಸ್‌‌‌ನಲ್ಲಿರುವ ಎಳೆಯರ ಕೇಂದ್ರವೊಂದಕ್ಕೆ ಅವನನ್ನು ಕಳಿಸಲಾಯಿತು. ಒಂದು ದಿನದ ನಂತರ ಅಲ್ಲಿಂದ ಆತ ತಪ್ಪಿಸಿಕೊಂಡಿದ್ದು ಅವನು ಮತ್ತೊಮ್ಮೆ ಹಿಡಿಯಲ್ಪಡಲು ಕಾರಣವಾಯಿತು ಮತ್ತು ಬಾಯ್ಸ್‌ ಟೌನ್‌‌ ಎಂಬಲ್ಲಿ ಅವನನ್ನು ಇರಿಸಲಾಯಿತು. ಅಲ್ಲಿಗೆ ಅವನು ಆಗಮಿಸಿದ ನಾಲ್ಕು ದಿನಗಳ ನಂತರ, ಮತ್ತೋರ್ವ ಹುಡುಗನೊಂದಿಗೆ ಅವನು ತಪ್ಪಿಸಿಕೊಂಡ. ಆ ಮತ್ತೋರ್ವ ಹುಡುಗನ ಚಿಕ್ಕಪ್ಪನ ಮನೆಗೆ ಅವರಿಬ್ಬರೂ ಸಾಗುವ ದಾರಿಯಲ್ಲಿ, ಎರಡು ಸಶಸ್ತ್ರ ದರೋಡೆಗಳನ್ನು ಆ ಜೋಡಿಯು ಎಸಗಿತು.[೨]:137-146 ತರುವಾಯದಲ್ಲಿ, ಅನುಕ್ರಮವಾಗಿ ಎರಡು ಕಿರಾಣಿ ಅಂಗಡಿಗಳ ಬಾಗಿಲನ್ನು ಮುರಿದು ನುಗ್ಗಿ ಕಳ್ಳತನ ಮಾಡಿದ್ದರ ಪೈಕಿ, ಎರಡನೇ ಪ್ರಕರಣದ ಸಂದರ್ಭದಲ್ಲಿ ಹಿಡಿಯಲ್ಪಟ್ಟ ಮ್ಯಾನ್ಸನ್‌‌ನ್ನು ಅವನ 13ನೇ ವಯಸ್ಸಿನಲ್ಲಿ ಹುಡುಗರಿಗಾಗಿ ಮೀಸಲಾದ ಇಂಡಿಯಾನಾ ಶಾಲೆಗೆ ಕಳಿಸಲಾಯಿತು; ಅಲ್ಲಿ, ಅವನು ನಂತರ ಒತ್ತಿಹೇಳಿದಂತೆ, ಅವನು ಲೈಂಗಿಕವಾಗಿ ಶೋಷಿಸಲ್ಪಟ್ಟ ಹಾಗೂ ಇನ್ನೂ ಅನೇಕ ಪಾಶವೀಕೃತ್ಯಗಳ ಬಲಿಪಶುವಾದ.[೧೨] ಅನೇಕ ವಿಫಲ ಪ್ರಯತ್ನಗಳ ನಂತರ, 1951ರಲ್ಲಿ ಎರಡು ಇಬ್ಬರು ಹುಡುಗರ ಜೊತೆಯಲ್ಲಿ ಅವನು ತಪ್ಪಿಸಿಕೊಂಡ.[೨]:137-146 ತಾವು ಕಳವುಮಾಡಿದ್ದ ಕಾರುಗಳನ್ನು ಆ ಮೂವರೂ ಚಾಲನೆ ಮಾಡಿಕೊಂಡು ಕ್ಯಾಲಿಫೋರ್ನಿಯಾಗೆ ಸಾಗುತ್ತಿದ್ದಾಗ, ಅಟಾಹ್‌‌‌ನಲ್ಲಿ ಅವರು ಹಿಡಿಯಲ್ಪಟ್ಟರು. ಹೀಗೆ ಸಾಗುವಾಗ ಹಾದಿಯುದ್ದಕ್ಕೂ ಅವರು ಹಲವಾರು ಅನಿಲ ಕೇಂದ್ರಗಳನ್ನು ದರೋಡೆ ಮಾಡಿದ್ದರು. ಕಳವುಮಾಡಿದ್ದ ಕಾರೊಂದನ್ನು ಸಂಸ್ಥಾನದ ಮಾರ್ಗವೊಂದರ ಉದ್ದಕ್ಕೂ ತೆಗೆದುಕೊಂಡು ಹೋಗಿದ್ದರ ಒಕ್ಕೂಟದ ಅಪರಾಧಕ್ಕೆ ಸಂಬಂಧಿಸಿದಂತೆ, ಮ್ಯಾನ್ಸನ್‌‌ನ್ನು ವಾಷಿಂಗ್ಟನ್‌‌, D.C.ಯಲ್ಲಿರುವ ಹುಡುಗರಿಗಾಗಿ ಮೀಸಲಾದ ರಾಷ್ಟ್ರೀಯ ತರಬೇತಿ ಶಾಲೆಗೆ ಕಳಿಸಲಾಯಿತು. ನಾಲ್ಕು ವರ್ಷಗಳ ಶಾಲಾವಧಿ ಹಾಗೂ 109ರಷ್ಟಿದ್ದ ಒಂದು I.Q.ನ ಹೊರತಾಗಿಯೂ (ನಂತರ ಪರೀಕ್ಷಿಸಿದಾಗ ಇದು 121ರಷ್ಟಿತ್ತು),[೨]:137-146 ಆತ ಅನಕ್ಷರಸ್ಥನಾಗಿದ್ದ. ಆತ ಆಕ್ರಮಣಕಾರಿಯಾಗಿರುವ ರೀತಿಯಲ್ಲಿ ಸಮಾಜವಿರೋಧಿಯಾಗಿದ್ದಾನೆ ಎಂಬುದಾಗಿ ಓರ್ವ ಸಾಮಾಜಿಕ ಅಧ್ಯಯನ ಮಾಡುವವ ಅವನನ್ನು ಪರಿಗಣಿಸಿದ.[೨]:137-146 ಮೊದಲ ಸೆರೆವಾಸಸಂಪಾದಿಸಿ 1951ರ ಅಕ್ಟೋಬರ್‌ನಲ್ಲಿ, ಮನೋವೈದ್ಯರೊಬ್ಬರ ಶಿಫಾರಸಿನ ಮೇರೆಗೆ, ನ್ಯಾಚುರಲ್‌ ಬ್ರಿಜ್‌ ಆನರ್‌‌ ಕ್ಯಾಂಪ್ ಎಂಬ ಒಂದು ಕನಿಷ್ಟ ಭದ್ರತಾ ಸಂಸ್ಥೆಗೆ ಮ್ಯಾನ್ಸನ್‌‌ ವರ್ಗಾಯಿಸಲ್ಪಟ್ಟ. 1952ರ ಫೆಬ್ರುವರಿಯಲ್ಲಿ ನಿಗದಿಯಾಗಿದ್ದ ಒಂದು ಪೆರೋಲು ವಿಚಾರಣೆಗೆ ಒಂದು ತಿಂಗಳಿಗೂ ಕಡಿಮೆಯಿರುವ ಅವಧಿಗೆ ಮುಂಚೆಯೇ, ಅವನು "ಒಂದು ರೇಜರ್‌‌ ಬ್ಲೇಡನ್ನು ಕೈಗೆತ್ತಿಕೊಂಡು ಮತ್ತೋರ್ವ ಹುಡುಗನ ಗಂಟಲಿಗೆ ಚುಚ್ಚಿಹಿಡಿದುಕೊಂಡು ಅವನೊಂದಿಗೆ ಗುದಮೈಥುನ ನಡೆಸಿದ."[೨]:137-146[೧೨] ವರ್ಜೀನಿಯಾದ ಪೀಟರ್ಸ್‌ಬರ್ಗ್‌‌‌ನಲ್ಲಿರುವ ಒಕ್ಕೂಟದ ಸುಧಾರಣಾ ಮಂದಿರಕ್ಕೆ (ಫೆಡರಲ್‌ ರಿಫಾರ್ಮೇಟರಿ) ಅವನು ವರ್ಗಾಯಿಸಲ್ಪಟ್ಟ; ಅಲ್ಲಿ ಅವನನ್ನು "ಅಪಾಯಕಾರಿ" ಎಂಬುದಾಗಿ ಪರಿಗಣಿಸಲಾಯಿತು.[೨]:137-146 1952ರ ಸೆಪ್ಟೆಂಬರ್‌ನಲ್ಲಿ, ಶಿಸ್ತುಪಾಲನೆಗೆ ಸಂಬಂಧಿಸಿದ ಇತರ ಅನೇಕ ಗಂಭೀರಸ್ವರೂಪದ ಅಪರಾಧಗಳನ್ನು ಅವನು ಎಸಗಿದ್ದರಿಂದ, ಓಹಿಯೋದ ಚಿಲಿಕೋಥ್‌ ಎಂಬಲ್ಲಿರುವ ಒಂದು ಹೆಚ್ಚು ಸುಭದ್ರ ಸಂಸ್ಥೆಯಾದ ಒಕ್ಕೂಟದ ಸುಧಾರಣಾ ಮಂದಿರಕ್ಕೆ ಅವನನ್ನು ವರ್ಗಾಯಿಸಲಾಯಿತು.[೨]:137-146 ವರ್ಗಾವಣೆಯ ಒಂದು ತಿಂಗಳ ನಂತರ, ಅವನು ಹೆಚ್ಚೂಕಮ್ಮಿ ಓರ್ವ ಮಾದರಿ ನಿವಾಸಿಯಾಗಿ ಮಾರ್ಪಟ್ಟ. ಉತ್ತಮ ಕೆಲಸದ ಅಭ್ಯಾಸಗಳನ್ನು ಅವನು ರೂಢಿಸಿಕೊಂಡಿದ್ದರಿಂದ ಹಾಗೂ ಕೆಳಗಿನ ನಾಲ್ಕನೇ ದರ್ಜೆಯಿಂದ ಮೇಲಿನ ಏಳನೇ ದರ್ಜೆಗೆ ಅವನ ಶೈಕ್ಷಣಿಕ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದರಿಂದ, 1954ರ ಮೇ ತಿಂಗಳಿನಲ್ಲಿ ಅವನಿಗೆ ಪೆರೋಲು ದೊರಕಿತು.[೨]:137-146 ಪಶ್ಚಿಮ ವರ್ಜೀನಿಯಾದಲ್ಲಿರುವ ಅವನ ಚಿಕ್ಕಮ್ಮ ಮತ್ತು ಚಿಕ್ಕಪ್ಪನೊಂದಿಗೆ ಅವನು ವಾಸಿಸಬೇಕು ಎಂಬ ಪೆರೋಲು ಷರತ್ತೊಂದನ್ನು ತಾತ್ಕಾಲಿಕವಾಗಿ ಪುರಸ್ಕರಿಸಿದ ನಂತರ, ಮ್ಯಾನ್ಸನ್‌ ಅದೇ ಸ್ಥಿತಿಯಲ್ಲಿ ತನ್ನ ತಾಯಿಯೊಂದಿಗೆ ಅಲ್ಲಿಗೆ ತೆರಳಿದ. 1955ರ ಜನವರಿಯಲ್ಲಿ, ರೊಸಾಲೀ ಜೀನ್‌ ವಿಲ್ಲಿಸ್‌ ಎಂಬ ಹೆಸರಿನ ಓರ್ವ ಆಸ್ಪತ್ರೆ ಪರಿಚಾರಕಿಯನ್ನು ಅವನು ಮದುವೆಯಾದ; ಅವನದೇ ದೃಷ್ಟಿಕೋನದಲ್ಲಿ ಹೇಳುವುದಾದರೆ, ಅಲ್ಪಕಾಲಿಕವಾಗಿದ್ದರೂ ಅಪ್ಪಟವಾದ ದಾಂಪತ್ಯ ಸುಖವನ್ನು ಅವನು ಅವಳೊಂದಿಗೆ ಕಂಡುಕೊಂಡ.[೧೨] ಅಲ್ಪಾವಧಿಯ ಉದ್ಯೋಗಗಳು ಮತ್ತು ವಾಹನ ಕಳ್ಳತನಗಳ ಮೂಲಕ ತಮ್ಮ ವೈವಾಹಿಕ ಜೀವನಕ್ಕೆ ಅವನು ಆಧಾರವನ್ನು ಒದಗಿಸಿದ.[೨]:137-146 ಅಕ್ಟೋಬರ್‌‌ ತಿಂಗಳ ಆಸುಪಾಸಿನಲ್ಲಿ, ಸುಮಾರು ಮೂರು ತಿಂಗಳುಗಳ ನಂತರ, ಓಹಿಯೋದಲ್ಲಿ ತಾನೇ ಕಳವುಮಾಡಿದ್ದ ಕಾರೊಂದರಲ್ಲಿ ಅವನು ತನ್ನ ಗರ್ಭಿಣಿ ಪತ್ನಿಯೊಂದಿಗೆ ಲಾಸ್‌ ಏಂಜಲೀಸ್‌‌‌ಗೆ ಬಂದಿಳಿದ; ವಾಹನವನ್ನು ಅಂತರ-ಸಂಸ್ಥಾನ‌ದ ವ್ಯಾಪ್ತಿಯಲ್ಲಿ ತಂದಿದ್ದಕ್ಕೆ ಸಂಬಂಧಿಸಿದ ಒಕ್ಕೂಟ ವ್ಯವಸ್ಥೆಯ ಅಪರಾಧದ ಆರೋಪವು ಮತ್ತೊಮ್ಮೆ ಅವನ ತಲೆಗೆ ಸುತ್ತಿಕೊಂಡಿತು. ಒಂದು ಮನೋವೈದ್ಯಕೀಯ ಅವಲೋಕನದ ನಂತರ, ಅವನಿಗೆ ಐದು ವರ್ಷಗಳ ಅವಧಿಯ ಬಂಧವಿಮೋಚನೆಯನ್ನು ನೀಡಲಾಯಿತು. ಫ್ಲೋರಿಡಾದಲ್ಲಿ ಸಲ್ಲಿಸಲಾಗಿದ್ದ ಇದೇ ರೀತಿಯ ಆರೋಪವೊಂದಕ್ಕೆ ಸಂಬಂಧಿಸಿದಂತೆ ಲಾಸ್‌ ಏಂಜಲೀಸ್‌ನಲ್ಲಿ ನಡೆದ ವಿಚಾರಣೆಯೊಂದಕ್ಕೆ ಹಾಜರಾಗಲು ತರುವಾಯದಲ್ಲಿ ಅವನು ವಿಫಲಗೊಂಡಿದ್ದರಿಂದ, 1956ರ ಮಾರ್ಚ್‌ನಲ್ಲಿ ಇಂಡಿಯಾನಾಪೊಲಿಸ್‌‌‌ನಲ್ಲಿ ಅವನನ್ನು ಬಂಧಿಸಲಾಯಿತು. ಅವನ ಬಂಧವಿಮೋಚನೆಯು ಹಿಂತೆಗೆದುಕೊಳ್ಳಲ್ಪಟ್ಟಿತು; ಕ್ಯಾಲಿಫೋರ್ನಿಯಾದ ಸ್ಯಾನ್‌ ಪೆಡ್ರೊ ಎಂಬಲ್ಲಿರುವ ಟರ್ಮಿನಲ್‌‌ ಐಲೆಂಡ್‌‌‌ನಲ್ಲಿ ಮೂರು ವರ್ಷಗಳ ಸೆರೆವಾಸವನ್ನು ಅನುಭವಿಸುವ ದಂಡನೆಯನ್ನು ಅವನಿಗೆ ವಿಧಿಸಲಾಯಿತು.[೨]:137-146 ಮ್ಯಾನ್ಸನ್‌‌ ಸೆರೆಮನೆಯಲ್ಲಿರುವಾಗ, ಅವರ ಮಗನಾದ ಚಾರ್ಲ್ಸ್‌‌ ಮ್ಯಾನ್ಸನ್‌‌‌ ಜೂನಿಯರ್‌ಗೆ ರೊಸಾಲೀ ಜನ್ಮವಿತ್ತಳು. ಟರ್ಮಿನಲ್‌‌ ಐಲೆಂಡ್‌ನಲ್ಲಿ ಕಾಲಕಳೆಯುತ್ತಿದ್ದ ಅವನ ಮೊದಲ ವರ್ಷದ ಅವಧಿಯಲ್ಲಿ, ರೊಸಾಲೀ ಮತ್ತು ಅವನ ತಾಯಿ ಮ್ಯಾನ್ಸನ್‌ನ್ನು ಭೇಟಿಯಾದರು; ರೊಸಾಲೀ ಮತ್ತು ಅವನ ತಾಯಿ ಈಗ ಒಟ್ಟಿಗೆ ಲಾಸ್‌ ಏಂಜಲೀಸ್‌‌‌ನಲ್ಲಿ ವಾಸಿಸುತ್ತಿದ್ದರು. 1957ರ ಮಾರ್ಚ್‌ನಲ್ಲಿ, ಅವನ ಪತ್ನಿಯು ಭೇಟಿಯಾಗುವುದನ್ನು ನಿಲ್ಲಿಸಿದಾಗ, ರೊಸಾಲೀಯು ಮತ್ತೋರ್ವ ವ್ಯಕ್ತಿಯ ಜೊತೆಗೆ ವಾಸಿಸುತ್ತಿರುವುದರ ಕುರಿತು ಮ್ಯಾನ್ಸನ್‌‌ನ ತಾಯಿಯು ಅವನಿಗೆ ಮಾಹಿತಿ ನೀಡಿದಳು. ನಿಗದಿತ ಪೆರೋಲು ವಿಚಾರಣೆಯೊಂದಕ್ಕೆ ಎರಡು ವಾರಗಳಿಗಿಂತಲೂ ಕಡಿಮೆಯಿದ್ದ ಅವಧಿಗೆ ಮುಂಚಿತವಾಗಿ, ಕಾರೊಂದನ್ನು ಕದಿಯುವ ಮೂಲಕ ತಪ್ಪಿಸಿಕೊಳ್ಳಲು ಮ್ಯಾನ್ಸನ್‌‌ ಪ್ರಯತ್ನಿಸಿದ. ತರುವಾಯದಲ್ಲಿ ಅವನಿಗೆ ಐದು ವರ್ಷಗಳ ಅವಧಿಯ ಬಂಧವಿಮೋಚನೆಯನ್ನು ನೀಡಲಾಯಿತು, ಮತ್ತು ಅವನ ಪೆರೋಲನ್ನು ನಿರಾಕರಿಸಲಾಯಿತು.[೨]:137-146 ಎರಡನೇ ಸೆರೆವಾಸಸಂಪಾದಿಸಿ 1958ರ ಸೆಪ್ಟೆಂಬರ್‌ನಲ್ಲಿ ಐದು ವರ್ಷಗಳ ಪೆರೋಲನ್ನು ಮ್ಯಾನ್ಸನ್‌‌ ಸ್ವೀಕರಿಸಿದ; ಅದೇ ವರ್ಷದಲ್ಲಿ ವಿಚ್ಛೇದನದ ಫೈಸಲಾತಿಯೊಂದನ್ನು ರೊಸಾಲೀ ಸ್ವೀಕರಿಸಿದಳು. ನವೆಂಬರ್ ಹೊತ್ತಿಗೆ, 16-ವರ್ಷ-ವಯಸ್ಸಿನ ಹುಡುಗಿಯೊಬ್ಬಳೊಂದಿಗೆ ಅವನು ತಲೆಹಿಡುಕತನ ನಡೆಸುತ್ತಿದ್ದ ಮತ್ತು ಶ್ರೀಮಂತ ತಂದೆ-ತಾಯಿಯ ಆಸರೆಯನ್ನು ಹೊಂದಿದ್ದ ಹುಡುಗಿಯೊಬ್ಬಳಿಂದ ಹೆಚ್ಚುವರಿ ಬೆಂಬಲವನ್ನು ಪಡೆಯುತ್ತಿದ್ದ. 1959ರ ಸೆಪ್ಟೆಂಬರ್‌‌ನಲ್ಲಿ, ಒಂದು ಖೋಟಾ ರುಜುಮಾಡಿದ U.S. ಸರ್ಕಾರಿ ಖಜಾನೆ ಚೆಕ್‌‌‌ ಬಳಸಿಕೊಂಡು ನಗದು ಹಣವನ್ನು ಲಪಟಾಯಿಸಲು ಪ್ರಯತ್ನಿಸಿದ್ದರ ಆರೋಪವೊಂದರಲ್ಲಿ ಅವನು ತಪ್ಪೊಪ್ಪಿಕೊಂಡ. ವೇಶ್ಯಾವೃತ್ತಿಗೆ ಸಂಬಂಧಿಸಿದಂತೆ ಒಂದು ಬಂಧನ ದಾಖಲೆಯನ್ನು ಹೊಂದಿದ್ದ ಕಿರಿಯ ಹೆಂಗಸೊಬ್ಬಳು ನ್ಯಾಯಾಲಯದ ಮುಂದೆ "ಕಣ್ಣೀರು ತುಂಬಿದ ಮನವಿ"ಯೊಂದನ್ನು ಸಲ್ಲಿಸುತ್ತಾ, ತಾನು ಮತ್ತು ಮ್ಯಾನ್ಸನ್‌‌ "ಆಳವಾಗಿ ಪ್ರೀತಿಸುತ್ತಿರುವುದಾಗಿಯೂ... ಮತ್ತು ಚಾರ್ಲೀಯನ್ನು ಬಿಡುಗಡೆ ಮಾಡಿದಲ್ಲಿ ಅವನನ್ನು ಮದುವೆಯಾಗುವುದಾಗಿಯೂ" ತಿಳಿಸಿದ ನಂತರ, 10-ವರ್ಷ ಅವಧಿಯ ಒಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಶಿಕ್ಷೆ ಮತ್ತು ಬಂಧವಿಮೋಚನೆಯನ್ನು ಅವನು ಸ್ವೀಕರಿಸಿದ.[೨]:137-146 ವರ್ಷದ ಅಂತ್ಯಕ್ಕೆ ಮುಂಚಿತವಾಗಿ, ಆ ಹೆಂಗಸು ವಾಸ್ತವವಾಗಿ ಮ್ಯಾನ್ಸನ್‌‌ನ್ನು ಮದುವೆಯಾದಳು; ಆದ್ದರಿಂದ ಪ್ರಾಯಶಃ ಅವಳ ಕುರಿತಾದ ಅವನ ವಿರುದ್ದದ ಸಾಕ್ಷ್ಯದ ಅಗತ್ಯವು ಕಂಡುಬರುವುದಿಲ್ಲ.[೨]:137-146 ಲಿಯೋನಾ ಎಂಬುದು ಆ ಹೆಂಗಸಿನ ಹೆಸರಾಗಿತ್ತು; ಓರ್ವ ವೇಶ್ಯೆಯಾಗಿ ಅವಳು ಕ್ಯಾಂಡಿ ಸ್ಟೀವನ್ಸ್‌ ಎಂಬ ಹೆಸರನ್ನು ಬಳಸುತ್ತಿದ್ದಳು. ವೇಶ್ಯಾವೃತ್ತಿಯ ಉದ್ದೇಶಗಳಿಗಾಗಿ ಅವಳನ್ನು ಹಾಗೂ ಮತ್ತೋರ್ವ ಹೆಂಗಸನ್ನು ಕ್ಯಾಲಿಫೋರ್ನಿಯಾದಿಂದ ನ್ಯೂಮೆಕ್ಸಿಕೋಗೆ ಮ್ಯಾನ್ಸನ್‌ ಕರೆತಂದ ನಂತರ, ಮಾನ್‌ ಕಾಯಿದೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಅವನನ್ನು ಹಿಡಿದು ಪ್ರಶ್ನಿಸಲಾಯಿತು. ಅವನು ಬಿಡುಗಡೆಗೊಂಡನಾದರೂ ಸಹ, ತನಿಖೆಯಿನ್ನೂ ಅಂತ್ಯಗೊಂಡಿಲ್ಲ ಎಂಬುದಾಗಿ ಅವನು ಸರಿಯಾಗಿ, ಸುಸ್ಪಷ್ಟವಾಗಿ ಶಂಕಿಸಿದ. ಅವನು ಕಣ್ಮರೆಯಾದಾಗ, ಅವನ ಬಂಧವಿಮೋಚನೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಒಂದು ಹಾಜರು ವಾರಂಟನ್ನು ಜಾರಿಮಾಡಲಾಯಿತು; 1960ರ ಏಪ್ರಿಲ್‌ನಲ್ಲಿ, ಮಾನ್‌ ಕಾಯಿದೆಯ ಉಲ್ಲಂಘನೆಗೆ ಸಂಬಂಧಿಸಿದ ಒಂದು ದೋಷಾರೋಪಣ ಪತ್ರವು ಇದನ್ನನುಸರಿಸಿಕೊಂಡು ಬಂದಿತು.[೨]:137-146 ವೇಶ್ಯಾವೃತ್ತಿಗೆ ಸಂಬಂಧಿಸಿದಂತೆ ಮಹಿಳೆಯರ ಪೈಕಿ ಒಬ್ಬಳು ಬಂಧನಕ್ಕೊಳಗಾದಾಗ, ಜೂನ್‌‌ನಲ್ಲಿ ಟೆಕ್ಸಾಸ್‌‌ನ ಲ್ಯಾರೆಡೊನಲ್ಲಿ ಬಂಧಿಸಲ್ಪಟ್ಟ ಮ್ಯಾನ್ಸನ್‌‌ನ್ನು, ಲಾಸ್‌ ಏಂಜಲೀಸ್‌ಗೆ ಹಿಂದಿರುಗಿಸಲಾಯಿತು. ಚೆಕ್‌ನ್ನು-ನಗದೀಕರಿಸಿದ ಆರೋಪದ ಮೇಲಿನ ಅವನ ಬಂಧವಿಮೋಚನೆಯ ಉಲ್ಲಂಘನೆಗೆ ಸಂಬಂಧಿಸಿದಂತೆ, ತನ್ನ 10-ವರ್ಷ ಅವಧಿಯ ದಂಡನೆಯನ್ನು ಪಾಲಿಸುವಂತೆ ಅವನಿಗೆ ಆದೇಶಿಸಲಾಯಿತು.[೨]:137-146 1961ರ ಜುಲೈನಲ್ಲಿ, ಬಂಧವಿಮೋಚನೆಯ ರದ್ದಿಯಾತಿಗಾಗಿ ಅವನು ಸಲ್ಲಿಸಿದ ಮನವಿಯು ವಿಫಲಗೊಂಡ ಪರಿಣಾಮವಾಗಿ ಒಂದು ವರ್ಷದ ಅವಧಿಯನ್ನು ಕಳೆದ ನಂತರ, ಲಾಸ್‌ ಏಂಜಲೀಸ್‌ ಜಿಲ್ಲಾ ಕಾರಾಗೃಹದಿಂದ ಮೆಕ್‌ನೀಲ್‌ ದ್ವೀಪದಲ್ಲಿರುವ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪ್ರಾಯಶ್ಚಿತ್ತಾಲಯಕ್ಕೆ ಮ್ಯಾನ್ಸನ್‌‌ನ್ನು ವರ್ಗಾಯಿಸಲಾಯಿತು. ಮಾನ್‌ ಕಾಯಿದೆಯ ಆರೋಪವನ್ನು ಕೈಬಿಡಲಾಗಿತ್ತಾದರೂ, ಸರ್ಕಾರಿ ಖಜಾನೆ ಚೆಕ್‌‌‌ನ್ನು ನಗದೀಕರಿಸುವ ಪ್ರಯತ್ನವು ಇನ್ನೂ ಒಕ್ಕೂಟ ವ್ಯವಸ್ಥೆಯಲ್ಲಿನ ಒಂದು ಅಪರಾಧವಾಗಿತ್ತು. 1961ರ ಸೆಪ್ಟೆಂಬರ್‌ನಲ್ಲಿ ಅವನ ಕುರಿತಾಗಿ ನಡೆದ ವಾರ್ಷಿಕ ಅವಲೋಕನವು ಸೂಚಿಸಿದ ಅನುಸಾರ, "ಸ್ವತಃ ತನ್ನೆಡೆಗೆ ಗಮನ ಸೆಳೆಯುವುದಕ್ಕೆ ಸಂಬಂಧಿಸಿದಂತೆ ಅವನು ಒಂದು ಪ್ರಚಂಡ ಪ್ರೇರಣೆಯನ್ನು" ಹೊಂದಿದ್ದ; ಈ ವೀಕ್ಷಣೆಯು 1964ರ ಸೆಪ್ಟೆಂಬರ್‌‌ನಲ್ಲಿ ಪ್ರತಿಧ್ವನಿಸಿತು.[೨]:137-146 1963ರಲ್ಲಿ, ಲಿಯೋನಾಗೆ ಒಂದು ವಿಚ್ಛೇದನವು ದೊರಕಿತು; ಇದರ ಅನುಸರಣೆಯಲ್ಲಿ ಅವಳು ಆರೋಪಿಸುತ್ತಾ, ತನ್ನ ಮತ್ತು ಮ್ಯಾನ್ಸನ್‌‌ ನಡುವಿನ ದಾಂಪತ್ಯ ಜೀವನದ ಫಲವಾಗಿ ಚಾರ್ಲ್ಸ್‌‌ ಲೂಥರ್ ಎಂಬ ಓರ್ವ ಮಗನನ್ನು ತಾವು ಹೊಂದಿದ್ದಾಗಿ ತಿಳಿಸಿದಳು.[೨]:137-146 1966ರ ಜೂನ್‌‌ನಲ್ಲಿ, ಮ್ಯಾನ್ಸನ್‌‌ನ್ನು ಅವನ ಜೀವನದಲ್ಲಿ ಎರಡನೇ ಬಾರಿಗೆ ಟರ್ಮಿನಲ್‌‌ ಐಲೆಂಡ್‌‌‌ಗೆ ಕಳಿಸಲಾಯಿತು; ಇದು ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದ ಸಿದ್ಧತೆಯಾಗಿತ್ತು. ಅವನ ಬಿಡುಗಡೆಯ ದಿನವಾದ 1967ರ ಮಾರ್ಚ್‌ 21ರ ವೇಳೆಗೆ, ಅವನು ತನ್ನ ಅದುವರೆಗಿನ 32 ವರ್ಷಗಳ ಜೀವನಕಾಲದಲ್ಲಿ ಅರ್ಧಕ್ಕಿಂತಲೂ ಹೆಚ್ಚುಭಾಗವನ್ನು ಸೆರೆಮನೆಗಳಲ್ಲಿ ಮತ್ತು ಇತರ ಶಿಕ್ಷಾಗೃಹಗಳಲ್ಲಿ ಕಳೆದಂತಾಗಿತ್ತು.[೨]:137-146 ಸೆರೆಮನೆಯೆಂಬುದು ತನ್ನ ಮನೆಯಾಗಿಬಿಟ್ಟಿದೆ ಎಂಬುದಾಗಿ ಅಧಿಕಾರಿ ವರ್ಗದವರಿಗೆ ಹೇಳುತ್ತಾ, ತನಗೆ ಉಳಿದುಕೊಳ್ಳಲು[೨]:137-146 ಅನುಮತಿ ನೀಡಬೇಕಾಗಿ ಅವರಲ್ಲಿ ಅವನು ಮನವಿ ಮಾಡಿಕೊಂಡಿದ್ದು ನಿಷ್ಫಲವಾಯಿತು; ಈ ಅಂಶವು 1981ರಲ್ಲಿ ಟಾಮ್‌ ಸ್ನೈಡರ್‌‌ ಜೊತೆಯಲ್ಲಿ ನಡೆಸಿದ ದೂರದರ್ಶನ ಸಂದರ್ಶನವೊಂದರಲ್ಲಿ ಸಂಕ್ಷೇಪವಾಗಿ ಪ್ರಸ್ತಾವಿಸಲ್ಪಟ್ಟಿತು.[೧೩] ಮ್ಯಾನ್ಸನ್‌‌ ಕುಟುಂಬಸಂಪಾದಿಸಿ ತನ್ನ ಬಿಡುಗಡೆಯ ದಿನದಂದು ಮ್ಯಾನ್ಸನ್‌‌ ಮಾಡಿಕೊಂಡ ಮನವಿಯ ಅನುಸಾರ, ಸ್ಯಾನ್‌ ಫ್ರಾನ್ಸಿಸ್ಕೊಗೆ ತೆರಳಲು ಅವನಿಗೆ ಅನುಮತಿ ನೀಡಲಾಯಿತು; ಅಲ್ಲಿ ಆತ ಸೆರೆಮನೆಯ ಓರ್ವ ಪರಿಚಯಸ್ಥನ ನೆರವಿನೊಂದಿಗೆ ಬರ್ಕಲಿಯಲ್ಲಿನ ವಾಸದ ಮಹಡಿಯೊಂದನ್ನು ಸೇರಿಕೊಂಡ. ಸೆರೆಮನೆಯಲ್ಲಿರುವಾಗ, ಆಲ್ವಿನ್‌ ಕಾರ್ಪಿಸ್‌ ಎಂಬ ಬ್ಯಾಂಕ್‌‌ ದರೋಡೆಕೋರ ಅವನಿಗೆ ಉಕ್ಕಿನ ಗಿಟಾರ್‌‌‌ನ್ನು ನುಡಿಸುವುದನ್ನು ಹೇಳಿಕೊಟ್ಟಿದ್ದ.[೨]:137-146[೧೨][೧೪] ಈಗ ಭಿಕ್ಷೆ ಬೇಡುವಿಕೆಯಿಂದಲೇ ಹೆಚ್ಚಿನಂಶ ಜೀವನ ಸಾಗಿಸಬೇಕಾಗಿ ಬಂದಿದ್ದ ಅವನಿಗೆ ಕೆಲವೇ ದಿನಗಳಲ್ಲಿ ಮೇರಿ ಬ್ರೂನರ್‌‌ ಎಂಬಾಕೆಯ ಪರಿಚಯವಾಯಿತು; 23-ವರ್ಷ-ವಯಸ್ಸಿನ ಈಕೆ ವಿಸ್ಕಾನ್ಸಿನ್‌-ಮ್ಯಾಡಿಸನ್ ವಿಶ್ವವಿದ್ಯಾಲಯದ ಓರ್ವ ಪದವೀಧರೆಯಾಗಿದ್ದಳು. UC ಬರ್ಕಲಿಯಲ್ಲಿ ಓರ್ವ ಸಹಾಯಕ ಗ್ರಂಥಪಾಲಕಿಯಾಗಿ ಬ್ರೂನರ್‌‌ ಕೆಲಸ ಮಾಡುತ್ತಿದ್ದಳು. ಮ್ಯಾನ್ಸನ್‌‌ ಅವಳೊಂದಿಗೆ ಹೊಸ ವಸತಿಯನ್ನು ಹಿಡಿದ. ಅನ್ಯಮೂಲದಿಂದ ದೊರೆತ ವಿವರಣೆಯ ಅನುಸಾರ, ತಮ್ಮೊಂದಿಗೆ ವಾಸಿಸಲು ಇತರ ಮಹಿಳೆಯರನ್ನು ಕರೆತರುತ್ತಿದ್ದ ಅವನ ವರ್ತನೆಗೆ ಅವಳು ಪ್ರತಿರೋಧವನ್ನು ತೋರಿಸಿದಾಗ ಅದಕ್ಕೆ ಸಂಬಂಧಿಸಿ ಅವನು ಮೇಲುಗೈ ಸಾಧಿಸಿದ. ಬಹಳ ಹಿಂದೆ ಅವರು ಬ್ರೂನರ್‌‌ಳ ನಿವಾಸವನ್ನು ಇತರ 18 ಮಹಿಳೆಯರೊಂದಿಗೆ ಹಂಚಿಕೊಂಡಿದ್ದರು.[೨]:163–174 ಸ್ಯಾನ್‌ ಫ್ರಾನ್ಸಿಸ್ಕೊವಿನ ಹಾಯ್ಟ್‌‌-ಆಶ್‌ಬರಿಯಲ್ಲಿ ತನ್ನನ್ನು ಓರ್ವ ಗುರುವಾಗಿ ಮ್ಯಾನ್ಸನ್‌‌ ನೆಲೆಗೊಳಿಸಿಕೊಂಡ; ಈ ಪ್ರದೇಶವು 1967ರ ದಶಕದ "ಸಮ್ಮರ್‌‌ ಆಫ್‌ ಲವ್‌‌" ಅವಧಿಯಲ್ಲಿ ವೈಲಕ್ಷಣ್ಯದಿಂದ ಕೂಡಿದ ಹಿಪ್ಪಿ ಪ್ರದೇಶವಾಗಿ ಹೊರಹೊಮ್ಮುತ್ತಿತ್ತು. ಸೆರೆಮನೆಯಲ್ಲಿ[೨]:163–164 ಇರುವಾಗ ಅವನು ಅಧ್ಯಯನಮಾಡಿದ್ದ ವೈಜ್ಞಾನಿಕ ಧರ್ಮವ್ಯವಸ್ಥೆಯ ಕೆಲವೊಂದು ಅಂಶಗಳನ್ನು ಒಳಗೊಂಡಿದ್ದ ತತ್ತ್ವವೊಂದನ್ನು ಪ್ರತಿಪಾದಿಸುವ ಮೂಲಕ, ಕೆಲವೇ ದಿನಗಳಲ್ಲಿ ಕಿರಿಯ ಅನುಯಾಯಿಗಳ ಗುಂಪೊಂದನ್ನು ಅವನು ಸಂಪಾದಿಸಿದ; ಅವರಲ್ಲಿ ಸ್ತ್ರೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.[೨]:137–146 ವಾಷಿಂಗ್ಟನ್‌‌‌‌ನ ಮೆಕ್‌ನೀಲ್‌ ದ್ವೀಪದಲ್ಲಿರುವ U.S. ಪ್ರಾಯಶ್ಚಿತ್ತಾಲಯದಲ್ಲಿ 1961ರ ಜುಲೈನಲ್ಲಿ ಮ್ಯಾನ್ಸನ್‌ ಸೆರೆಮನೆಯನ್ನು ಪ್ರವೇಶಿಸಿದಾಗ ಮಾಡಿದ ಸಿಬ್ಬಂದಿಯ ಅವಲೋಕನವೊಂದರ ನಂತರ, "ವೈಜ್ಞಾನಿಕ ಧರ್ಮದ ಪ್ರವರ್ತಕ" ಎಂಬ ಪರಿಕಲ್ಪನೆಯನ್ನು ತನ್ನ ಧರ್ಮವಾಗಿ ಮ್ಯಾನ್ಸನ್‌ ಪರಿಗಣಿಸಿದ.[೨]:143–144 ಬೇಸಿಗೆ ಕಾಲವು ಮುಗಿಯುವುದಕ್ಕೆ ಮುಂಚಿತವಾಗಿ, ಮ್ಯಾನ್ಸನ್‌‌ ಮತ್ತು ಅವನ ಎಂಟು ಅಥವಾ ಒಂಬತ್ತು ಮಂದಿ ಉತ್ಸಾಹಿ ಅನುಯಾಯಿಗಳು ಮರು-ಗೆಲಸ ಮಾಡಿ ಹಿಪ್ಪಿ ಶೈಲಿಯಲ್ಲಿ ರೂಪಿಸಿದ್ದ ಹಳೆಯ ಶಾಲಾ ಬಸ್ಸೊಂದರೊಳಗೆ ಜಮಾವಣೆಗೊಂಡು, ತಾವು ತೆಗೆದುಹಾಕಿದ್ದ ಅನೇಕ ಆಸನಗಳ ಜಾಗದಲ್ಲಿ ಬಣ್ಣದ ಕಂಬಳಿಗಳು ಮತ್ತು ದಿಂಬುಗಳನ್ನು ಪೇರಿಸಿದರು. ವಾಷಿಂಗ್ಟನ್‌‌ ಸಂಸ್ಥಾನ‌ದ ಉತ್ತರ ಭಾಗದಲ್ಲಿ ಸಾಧ್ಯವಿದ್ದಷ್ಟೂ ಅಲೆದಾಡಿದ ಅವರು ನಂತರ ಲಾಸ್‌ ಏಂಜಲೀಸ್‌, ಮೆಕ್ಸಿಕೋ, ಮತ್ತು ನೈಋತ್ಯ ಭಾಗದ ಮೂಲಕ ದಕ್ಷಿಣದೆಡೆಗೆ ಸಾಗಿದರು. ಲಾಸ್‌ ಏಂಜಲೀಸ್‌ ಪ್ರದೇಶಕ್ಕೆ ಹಿಂದಿರುಗುವಾಗ, ನಗರ ಮತ್ತು ಜಿಲ್ಲೆಯ ಪಶ್ಚಿಮದ ಭಾಗಗಳಾದ ಟೊಪಾಂಗಾ ಕ್ಯಾನಿಯನ್‌‌, ಮಾಲಿಬು, ಮತ್ತು ವೆನಿಸ್‌‌ನಲ್ಲಿ ಅವರು ಉಳಿದುಕೊಂಡಿದ್ದರು.[೨]:163–174 ಪರ್ಯಾಯ ವಿವರಣೆಯೊಂದರಲ್ಲಿ ತಿಳಿದುಬಂದಿರುವಂತೆ, ವೋಕ್ಸ್‌ವ್ಯಾಗನ್‌‌ ವ್ಯಾನೊಂದರಲ್ಲಿ ಭಾಗಶಃ ಕೈಗೊಳ್ಳಲಾದ ತಿಂಗಳುಗಟ್ಟಲೆ ಅವಧಿಯ ಪರ್ಯಟನೆಗಳ ಸಂದರ್ಭದಲ್ಲಿ, ಸಮುದಾಯದ ಸದಸ್ಯರನ್ನು ಮ್ಯಾನ್ಸನ್‌‌ ಒಟ್ಟುಗೂಡಿಸಿದ. ಅವನೊಂದಿಗೆ ಬ್ರೂನರ್ ತೋರಿಕೆಗಾಗಿ ಜೊತೆಗೂಡಿದಳು‌‌. ಹಿಗ್ಗಿಸಿದ ಗುಂಪಿನೊಂದಿಗೆ ಸ್ಯಾನ್‌ ಫ್ರಾನ್ಸಿಸ್ಕೊದಿಂದ ಶಾಲಾ ಬಸ್ಸು ಹೊರಟಾಗ ಅದು ನವೆಂಬರ್ ತಿಂಗಳಾಗಿತ್ತು.[೧೫] ವಿಲ್ಸನ್‌‌, ಮೆಲ್ಚರ್‌, ಮತ್ತು ಇತರರೊಂದಿಗಿನ ತೊಡಗಿಸಿಕೊಳ್ಳುವಿಕೆಸಂಪಾದಿಸಿ ಕೊಲೆಗಳಲ್ಲಿ ಪರ್ಯವಸಾನಗೊಂಡ ಘಟನೆಗಳು 1968ರ ವಸಂತ ಋತುವಿನ ಅಂತ್ಯಭಾಗದಲ್ಲಿ ಕಾರ್ಯರೂಪಕ್ಕೆ ಬಂದವು; ಕೆಲವೊಂದು ವಿವರಣೆಗಳು ತಿಳಿಸುವ ಪ್ರಕಾರ, ಈ ಅವಧಿಯಲ್ಲಿ ದಿ ಬೀಚ್‌ ಬಾಯ್ಸ್‌‌ ತಂಡದ ಡೆನ್ನಿಸ್‌ ವಿಲ್ಸನ್‌‌ ಎಂಬಾತ ಬಿಟ್ಟಿಪ್ರಯಾಣ ಮಾಡುವ ಇಬ್ಬರು ಮ್ಯಾನ್ಸನ್‌‌ ಮಹಿಳೆಯರನ್ನು ಜೊತೆಯಲ್ಲಿ ಹತ್ತಿಸಿಕೊಂಡ ಮತ್ತು ತನ್ನ ಪೆಸಿಫಿಕ್‌ ಪ್ಯಾಲಿಸೇಡ್‌‌ ಮನೆಗೆ ಕೆಲವು ಗಂಟೆಗಳಿಗಾಗಿ ಅವರನ್ನು ಕರೆತಂದ. ರಾತ್ರಿಯ ಧ್ವನಿಮುದ್ರಣ ಕಾರ್ಯವೊಂದರ ನಂತರ ಮಾರನೆಯ ದಿನ ಬೆಳಗ್ಗೆ ಬಹಳ ಮುಂಚಿತವಾಗಿಯೇ ಮನೆಗೆ ಹಿಂದಿರುಗುವಾಗ, ತನ್ನದೇ ನಿವಾಸದ ವಾಹನಪಥದಲ್ಲಿ ವಿಲ್ಸನ್‌‌ನ್ನು ಮ್ಯಾನ್ಸನ್‌‌ ಎದುರುಗೊಂಡ; ಆಗ ಮ್ಯಾನ್ಸನ್ ಮನೆಯಿಂದ ಹೊರಬರುತ್ತಿದ್ದ. ಮುಜುಗರಗೊಂಡ ವಿಲ್ಸನ್‌‌ ತನ್ನನ್ನು ನೋಯಿಸುವ ಉದ್ದೇಶ ಅವನಿಗಿತ್ತೇ ಎಂಬುದಾಗಿ ಆ ಅಪರಿಚಿತನನ್ನು ಪ್ರಶ್ನಿಸಿದ. ಆ ಬಗೆಯ ಯಾವುದೇ ಆಶಯವೂ ತನಗಿಲ್ಲವೆಂದು ಭರವಸೆ ನೀಡಿದ ಮ್ಯಾನ್ಸನ್‌‌, ವಿಲ್ಸನ್‌‌ನ ಪಾದಗಳನ್ನು ಚುಂಬಿಸಲು ಶುರುಮಾಡಿದ.[೨]:250-253[೧೬] ಮನೆಯ ಒಳಗಡೆ, 12 ಅಪರಿಚಿತರನ್ನು ವಿಲ್ಸನ್‌‌ ಪತ್ತೆಹಚ್ಚಿದ; ಅವರಲ್ಲಿ ಬಹುತೇಕ ಮಂದಿ ಮಹಿಳೆಯರಾಗಿದ್ದರು.[೨]:250-253[೧೬] ಮುಂದಿನ ಕೆಲವು ತಿಂಗಳುಗಳಲ್ಲಿ ಅವರ ಸಂಖ್ಯೆಯು ದ್ವಿಗುಣಗೊಂಡಂತೆ, ವಿಲ್ಸನ್‌‌ನ ಸನ್‌ಸೆಟ್‌ ಬೌಲೆವಾರ್ಡ್‌ ಬಳಗದ ಭಾಗವಾಗಿ ತಮ್ಮನ್ನು ಮುಂದುಮಾಡಿಕೊಂಡಿದ್ದ ಸಮುದಾಯದ ಸದಸ್ಯರು, ಅವನಿಗೆ ಸರಿಸುಮಾರಾಗಿ 100,000$ನಷ್ಟು ವೆಚ್ಚವನ್ನು ಉಂಟುಮಾಡಿದ್ದರು. ಅವರು ಹೊಂದಿದ್ದ ಗೊನೊರಿಯಾ ಕಾಯಿಲೆಗೆ ಮಾಡಲಾದ ಚಿಕಿತ್ಸೆಗೆ ಸಂಬಂಧಿಸಿದ ಒಂದು ದೊಡ್ಡ ಮೊತ್ತದ ವೈದ್ಯಕೀಯ ಬಿಲ್‌ ಹಾಗೂ ಅವರು ಎರವಲು ತಂದಿದ್ದ, ಅವನ ವಿಮೆ ಮಾಡಿಸದ ಕಾರಿನ ಅಕಸ್ಮಾತ್ತಾದ ನಾಶಕ್ಕೆ ಸಂಬಂಧಿಸಿದ 21,000$ನಷ್ಟು ಮೊತ್ತವನ್ನು ಈ ವೆಚ್ಚವು ಒಳಗೊಂಡಿತ್ತು.[೧೭] ಮ್ಯಾನ್ಸನ್‌‌ನೊಂದಿಗೆ ವಿಲ್ಸನ್‌‌ ಹಾಡಿನಲ್ಲಿ, ಮಾತಿನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೆ, ಮ್ಯಾನ್ಸನ್‌‌ನ ಮಹಿಳೆಯರಿಗೆ ಅವರಿಬ್ಬರ ಸೇವಕಿಯರ ಸ್ಥಾನವನ್ನು ನೀಡಲಾಗಿತ್ತು.[೨]:250-253 ಮ್ಯಾನ್ಸನ್‌ನಿಂದ ಬರೆಯಲ್ಪಟ್ಟ ಮತ್ತು ಪ್ರಸ್ತುತಪಡಿಸಲ್ಪಟ್ಟ ಹಾಡುಗಳನ್ನು ಧ್ವನಿಮುದ್ರಿಸಲು ಸ್ಟೂಡಿಯೋ ಅವಧಿಗಾಗಿ ವಿಲ್ಸನ್‌ ಹಣಪಾವತಿಸಿದ, ಮತ್ತು ಮನರಂಜನಾ ವ್ಯವಹಾರದಲ್ಲಿ ತಮ್ಮದೇ ಆದ ಪಾತ್ರಗಳನ್ನು ವಹಿಸಿರುವ ತನ್ನ ಪರಿಚಯಸ್ಥರಿಗೆ ಅವನು ಮ್ಯಾನ್ಸನ್‌‌ನ್ನು ಪರಿಚಯಿಸಿದ. ಇಂಥವರ ಪೈಕಿ ಗ್ರೆಗ್‌ ಜಾಕೋಬ್‌ಸನ್‌‌, ಟೆರ್ರಿ ಮೆಲ್ಚರ್‌, ಮತ್ತು ರೂಡಿ ಆಲ್ಟೊಬೆಲ್ಲಿ ಸೇರಿದ್ದರು (ಇವರ ಪೈಕಿ ರೂಡಿ ಆಲ್ಟೊಬೆಲ್ಲಿಗೆ ಸ್ವಂತ ಮನೆಯಿತ್ತು; ಅದನ್ನು ಆತ ನಟಿ ಶರೋನ್‌‌ ಟೇಟ್‌ ಮತ್ತು ಅವಳ ಪತಿ, ನಿರ್ದೇಶಕ ರೋಮನ್‌‌ ಪೋಲನ್ಸ್‌ಕಿ)ಗೆ ಬಾಡಿಗೆಗೆ ನೀಡಿದ).[೨]:250-253 ಕಲಾವಿದ/ಜೀವನಶೈಲಿಕಾರ/ದಾರ್ಶನಿಕನ "ಸಮಗ್ರವಾದ ಚಾರ್ಲೀ ಮ್ಯಾನ್ಸನ್‌‌ ಒಟ್ಟುರೂಪ"ದಿಂದ ಪ್ರಭಾವಿತನಾದ ಜಾಕೋಬ್‌ಸನ್ ಕೂಡಾ ಮ್ಯಾನ್ಸನ್‌ನ ಕೃತಿಯನ್ನು ಧ್ವನಿಮುದ್ರಿಸಲು ಹಣಪಾವತಿಸಿದ.[೨]:155-161, 185-188, 214-219[೧೮] ಮ್ಯಾನ್ಸನ್‌‌ ಇನ್‌ ಹಿಸ್‌ ಓನ್‌ ವರ್ಡ್ಸ್‌ ಕೃತಿಯಲ್ಲಿ ಇರುವ ವಿವರಣೆಯ ಪ್ರಕಾರ, ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಸ್ನೇಹಿತನೋರ್ವ ಹೊಂದಿದ್ದ ಮನೆಯಲ್ಲಿ ವಿಲ್ಸನ್‌‌ನ್ನು ಮ್ಯಾನ್ಸನ್‌‌ ಮೊದಲು ಭೇಟಿಮಾಡಿದ; ಗಾಂಜಾವನ್ನು ಪಡೆಯಲೆಂದು ಆಮನೆಗೆ ಮ್ಯಾನ್ಸನ್‌‌ ತೆರಳಿದ್ದ. ದಿ ಬೀಚ್‌ ಬಾಯ್‌ ತಂಡದ ಈತ ಸಾಮಾನ್ಯವಾಗಿ ಭಾವಿಸಿರುವಂತೆ ಮ್ಯಾನ್ಸನ್‌‌ಗೆ ತನ್ನ ಸನ್‌ಸೆಟ್‌ ಬೌಲೆವಾರ್ಡ್‌ ವಿಳಾಸವನ್ನು ನೀಡಿದ ಮತ್ತು ಆತ ಲಾಸ್‌ ಏಂಜಲೀಸ್‌ಗೆ ಬಂದಾಗಲೆಲ್ಲಾ ತನ್ನ ಮನೆಯಲ್ಲಿ ಉಳಿದುಕೊಳ್ಳುವಂತೆ ಅವನನ್ನು ಆಹ್ವಾನಿಸಿದ.[೧೨] ಸ್ಪಾಹ್ನ್‌‌ ಜಾನುವಾರು ಕ್ಷೇತ್ರಸಂಪಾದಿಸಿ ಟೊಪಾಂಗಾ ಕ್ಯಾನಿಯನ್‌‌ನಿಂದ ಅಷ್ಟೇನೂ ದೂರವಿರದ ಸ್ಪಾಹ್ನ್‌‌ನ ಚಲನಚಿತ್ರದ ಜಾನುವಾರು ಕ್ಷೇತ್ರದಲ್ಲಿ ತನ್ನ ಗುಂಪಿಗೆ ಸಂಬಂಧಿಸಿದ ಒಂದು ನೆಲೆಯನ್ನು 1968ರ ಆಗಸ್ಟ್‌‌ನಲ್ಲಿ ಮ್ಯಾನ್ಸನ್‌‌ ಸ್ಥಾಪಿಸಿದ; ವಿಲ್ಸನ್‌‌ನ ಮನೆಯಿಂದ ಹೊರನಡೆಯುವಂತೆ ಸಮುದಾಯಕ್ಕೆ ವಿಲ್ಸನ್‌‌ನ ವ್ಯವಸ್ಥಾಪಕನು ಹೇಳಿದ ನಂತರ ಮ್ಯಾನ್ಸನ್‌ ಈ ಕ್ರಮವನ್ನು ಕೈಗೊಂಡ.[೧೯][೨೦] ಸಮಗ್ರ ಸಮುದಾಯವು ನಂತರ ಸದರಿ ಜಾನುವಾರು ಕ್ಷೇತ್ರಕ್ಕೆ ವರ್ಗಾಯಿಸಲ್ಪಟ್ಟಿತು.[೨]:250-253 ಪಶ್ಚಿಮದ ಚಲನಚಿತ್ರ ನಿರ್ಮಾಣಗಳಿಗೆ ಸಂಬಂಧಿಸಿದಂತೆ ಈ ಜಾನುವಾರು ಕ್ಷೇತ್ರವು ದೂರದರ್ಶನ ಮತ್ತು ಚಲನಚಿತ್ರ ವಲಯದ ಒಂದು ಸಜ್ಜಿಕೆಯಾಗಿತ್ತು. ಆದಾಗ್ಯೂ, ಅರವತ್ತರ ದಶಕದ ಅಂತ್ಯದ ವೇಳೆಗೆ, ಇಲ್ಲಿನ ಕಟ್ಟಡಗಳು ಶಿಥಿಲಗೊಂಡಿದ್ದವು ಮತ್ತು ಇಲ್ಲಿ ಆಯೋಜಿಸಲಾಗುತ್ತಿದ್ದ ಕುದುರೆ ಸವಾರಿಗಳಿಗೆ ಶುಲ್ಕವನ್ನು ವಿಧಿಸುವ ಮೂಲಕ ಈ ಜಾನುವಾರು ಕ್ಷೇತ್ರವು ಪ್ರಧಾನವಾಗಿ ಹಣವನ್ನು ಗಳಿಸುತ್ತಿತ್ತು. ಸಮುದಾಯದ ಸದಸ್ಯರು ಇದರ ಮೈದಾನದ ಸುತ್ತಮುತ್ತಲಲ್ಲಿ ಪ್ರಯೋಜಕವಾಗುವಂಥ ಕೆಲಸಗಳನ್ನು ಮಾಡಿದರು. ಅಷ್ಟೇ ಅಲ್ಲ, ಹೆಚ್ಚೂಕಮ್ಮಿ ಕುರುಡನಾಗಿದ್ದ 80-ವರ್ಷ-ವಯಸ್ಸಿನ ಮಾಲೀಕನಾದ ಜಾರ್ಜ್‌ ಸ್ಪಾಹ್ನ್‌‌ ಎಂಬಾತನೊಂದಿಗೆ ಆಗೊಮ್ಮೆ ಈಗೊಮ್ಮೆ ಲೈಂಗಿಕ ಸಂಪರ್ಕದಲ್ಲಿ ತೊಡಗುವಂತೆ ತನ್ನ ಸಮುದಾಯದ ಮಹಿಳೆಯರಿಗೆ ಮ್ಯಾನ್ಸನ್‌‌ ಆದೇಶಿಸಿದ; ಹೀಗೆ ಆದೇಶಕ್ಕೆ ಒಳಗಾದವರಲ್ಲಿ ಲಿನೆಟ್‌ "ಸ್ಕ್ವೀಕಿ" ಫ್ರೋಮ್‌‌ ಕೂಡಾ ಸೇರಿದ್ದಳು. ಸ್ಪಾಹ್ನ್‌‌ಗೋಸ್ಕರ ವೀಕ್ಷಣಾ-ಕಣ್ಣಿನ ಮಾರ್ಗದರ್ಶಕಿಯರಾಗಿಯೂ ಆ ಮಹಿಳೆಯರು ಪಾತ್ರವಹಿಸಬೇಕಾಗಿ ಬಂತು. ಇದಕ್ಕೆ ಪ್ರತಿಯಾಗಿ, ಮ್ಯಾನ್ಸನ್‌‌ ಮತ್ತು ಅವನ ಗುಂಪು ಜಾನುವಾರು ಕ್ಷೇತ್ರದಲ್ಲಿ ಉಚಿತವಾಗಿ ತಂಗಲು ಸ್ಪಾಹ್ನ್‌ ಅವಕಾಶ ಕಲ್ಪಿಸಿದ್ದ.[೨]:99-113[೨೧] ಸ್ಪಾಹ್ನ್‌‌ ಅವಳ ತೊಡೆಯನ್ನು ಚಿವುಟಿದಾಗಲೆಲ್ಲಾ ಅವಳು ಕೀಚುಗುಟ್ಟುವಂಥ ಶಬ್ದವನ್ನು ಮಾಡುತ್ತಿದ್ದುದರಿಂದ, ಸ್ಕ್ವೀಕಿಗೆ ಅವಳ ಆ ಅಡ್ಡಹೆಸರು ಬಂದಿತ್ತು.[೨]:163-174[೧೭] ಸ್ಪಾಹ್ನ್‌‌ನ ಜಾನುವಾರು ಕ್ಷೇತ್ರದಲ್ಲಿ ಹೀಗೆ ನೆಲೆಗೊಂಡಿದ್ದ ಗುಂಪನ್ನು ಚಾರ್ಲ್ಸ್‌‌ ವ್ಯಾಟ್ಸನ್‌‌ ಶೀಘ್ರದಲ್ಲಿ ಸೇರಿಕೊಂಡ. ಸಣ್ಣ-ಪಟ್ಟಣವಾದ ಟೆಕ್ಸಾನ್‌ ನಿವಾಸಿಯಾಗಿದ್ದ ವ್ಯಾಟ್ಸನ್, ಕಾಲೇಜನ್ನು ಬಿಟ್ಟು ಕ್ಯಾಲಿಫೋರ್ನಿಯಾಗೆ[೨೨] ಬಂದಿದ್ದ ಹಾಗೂ ಡೆನ್ನಿಸ್‌ ವಿಲ್ಸನ್‌‌ನ ಮನೆಯಲ್ಲಿ ಅವನು ಮ್ಯಾನ್ಸನ್‌‌ನ್ನು ಭೇಟಿಯಾಗಿದ್ದ. ವಿಲ್ಸನ್‌‌ನ ಕಾರುಗಳು ಭಗ್ನಗೊಂಡಿದ್ದ ನಂತರ ಅವನು ಬಿಟ್ಟಿಪ್ರಯಾಣ ಮಾಡುವ ಅಭ್ಯಾಸವನ್ನು ಕೈಗೊಂಡಿದ್ದ ಸಂದರ್ಭದಲ್ಲಿ, ವ್ಯಾಟ್ಸನ್‌‌ ಅವನಿಗೊಮ್ಮೆ ತನ್ನೊಂದಿಗೆ ಸವಾರಿಮಾಡಲು ಅವಕಾಶ ನೀಡಿದ್ದ.[೧೯] ವ್ಯಾಟ್ಸನ್‌‌ನ್ನು "ಟೆಕ್ಸ್‌‌" ಎಂಬ ಅಡ್ಡಹೆಸರಿನಿಂದ ಸ್ಪಾಹ್ನ್‌‌ ಕರೆಯುತ್ತಿದ್ದ; ಟೆಕ್ಸಾನ್‌ ಎಂಬುದನ್ನು ಎಳೆದು ಉಚ್ಚರಿಸುತ್ತಿದ್ದ ಅವನ ಉಚ್ಚರಣಾ ಶೈಲಿ ಇದಕ್ಕೆ ಕಾರಣವಾಗಿತ್ತು.[೨೦] ಹೆಲ್ಟರ್‌ ಸ್ಕೆಲ್ಟರ್‌‌ಸಂಪಾದಿಸಿ 1968ರ ನವೆಂಬರ್‌ ತಿಂಗಳ ಮೊದಲ ದಿನಗಳಲ್ಲಿ, ಸಾವಿನ ಕಣಿವೆಯ ಪರಿಸರದಲ್ಲಿರುವ ಪರ್ಯಾಯ ಕೇಂದ್ರಕಚೇರಿಯಲ್ಲಿ ತನ್ನ ಸಮುದಾಯವನ್ನು ಮ್ಯಾನ್ಸನ್‌‌ ಸ್ಥಾಪಿಸಿದ; ಇಲ್ಲಿ ಮೈಯರ್ಸ್‌ ಮತ್ತು ಬಾರ್ಕರ್‌‌ ಎಂಬ ಬಳಸಲ್ಪಡದ ಅಥವಾ ಸ್ವಲ್ಪವೇ-ಬಳಸಿದ ಎರಡು ಜಾನುವಾರು ಕ್ಷೇತ್ರಗಳನ್ನು ಅವರು ಆಕ್ರಮಿಸಿದರು.[೧೮][೨೩] ಸದರಿ ಗುಂಪು ಆರಂಭದಲ್ಲಿ ಆಕ್ರಮಿಸಿಕೊಂಡ ಮೈಯರ್ಸ್‌‌ ಕ್ಷೇತ್ರಕ್ಕೆ, ಆ ಸಮುದಾಯದಲ್ಲಿನ ಹೊಸ ಹೆಂಗಸೋರ್ವಳ ಅಜ್ಜಿಯು ಮಾಲೀಕಳಾಗಿದ್ದಳು. ಬಾರ್ಕರ್‌ ಕ್ಷೇತ್ರಕ್ಕೆ ಓರ್ವ ವಯಸ್ಸಾದ ಸ್ಥಳೀಯ ಹೆಂಗಸು ಮಾಲೀಕಳಾಗಿದ್ದಳು; ಅವಳ ಮುಂದೆ ತನ್ನನ್ನು ಹಾಗೂ ಸಮುದಾಯದ ಓರ್ವ ಪುರುಷ ಸದಸ್ಯನನ್ನು ಸಂಗೀತಗಾರರು ಎಂಬುದಾಗಿ ಪರಿಚಯಿಸಿಕೊಂಡ ಮ್ಯಾನ್ಸನ್‌, ತಮ್ಮ ಕೆಲಸಕ್ಕೆ ಹೊಂದಿಕೆಯಾಗುವ ಜಾಗವೊಂದರ ಅಗತ್ಯ ತಮಗಿದೆ ಎಂದು ಹೇಳಿಕೊಂಡಿದ್ದ. ಒಂದು ವೇಳೆ ಅವರ ಬಳಿ ಠೇವಣಿಯಾಗಿಡುವಂಥ ಏನಾದರೂ ವಸ್ತುಗಳಿದ್ದಲ್ಲಿ ಅವರಿಗೆ ಅಲ್ಲಿ ಉಳಿದುಕೊಳ್ಳಲು ಅವಕಾಶಮಾಡಿಕೊಡುವುದಾಗಿ ಆ ಹೆಂಗಸು ತಿಳಿಸಿದಾಗ, ‌‌ಬೀಚ್‌ ಬಾಯ್ಸ್ ತಂಡದ ಬಂಗಾರದ ಧ್ವನಿಮುದ್ರಿಕೆಗಳ[೨೩] ಪೈಕಿ ಒಂದನ್ನು ಅವಳಿಗೆ ನೀಡುವ ಮೂಲಕ ಮ್ಯಾನ್ಸನ್‌ ಅವಳ ಮನವಿಯನ್ನು ಪುರಸ್ಕರಿಸಿದ; ಇಂಥ ಹಲವಾರು ಧ್ವನಿಮುದ್ರಿಕೆಗಳನ್ನು ಡೆನ್ನಿಸ್‌ ವಿಲ್ಸನ್‌‌ ಆತನಿಗೆ ನೀಡಿದ್ದ.[೨೪] ಡಿಸೆಂಬರ್ ತಿಂಗಳ ಆಸುಪಾಸಿನಲ್ಲಿ ಸ್ಪಾಹ್ನ್‌‌ ಜಾನುವಾರು ಕ್ಷೇತ್ರದಲ್ಲಿರುವಾಗ, ಟೊಪಾಂಗಾ ಕ್ಯಾನಿಯನ್‌‌ನ ಓರ್ವ ಪರಿಚಯಸ್ಥನನ್ನು ಮ್ಯಾನ್ಸನ್‌‌ ಮತ್ತು ವ್ಯಾಟ್ಸನ್‌‌ ಭೇಟಿಮಾಡಿದರು; ಆಗಷ್ಟೇ ಬಿಡುಗಡೆಯಾಗಿದ್ದ ಬೀಟಲ್ಸ್‌‌ ತಂಡದ ವೈಟ್‌ ಆಲ್ಬಮ್‌‌ ನ ಗೀತೆಗಳನ್ನು ಅವನು ಅವರಿಗಾಗಿ ನುಡಿಸಿದ.[೧೮][೨೫][೨೬] ಬೀಟಲ್ಸ್‌ ತಂಡವು 1964ರಲ್ಲಿ ಅಮೆರಿಕಾಕ್ಕೆ ಮೊದಲ ಬಾರಿಗೆ ಬಂದಿದ್ದಾಗ 29 ವರ್ಷ ವಯಸ್ಸಿನವನಾಗಿದ್ದು ಸೆರೆವಾಸದಲ್ಲಿದ್ದರೂ ಸಹ, ಈ ತಂಡವು ಮ್ಯಾನ್ಸನ್‌‌ನ್ನು ಎಡೆಬಿಡದೆ ಕಾಡುತ್ತಿತ್ತು.[೨೭] ಮೆಕ್‌ನೀಲ್‌‌‌ನಲ್ಲಿರುವಾಗ, ಆಲ್ವಿನ್‌ ಕಾರ್ಪಿನ್‌‌‌ನ್ನೂ ಒಳಗೊಂಡಂತೆ ತನ್ನ ಸಹವರ್ತಿ ನಿವಾಸಿಗಳೊಂದಿಗೆ ಅವನು ಮಾತನಾಡುತ್ತಾ, ಕೀರ್ತಿ ಸಂಪಾದನೆಯಲ್ಲಿ[೨]:200-202, 265[೨೮] ಈ ಗುಂಪನ್ನೂ ತಾನು ದಾಟಿಕೊಂಡು ಹೋಗಬಲ್ಲೆ ಎಂದು ತಿಳಿಸಿದ್ದ; ಇದೇ ರೀತಿಯಲ್ಲಿ ತನ್ನ ಸಮುದಾಯದೊಂದಿಗೆ ಅವನು ಮಾತನಾಡುತ್ತಾ, ಸದರಿ ಗುಂಪು "ಆತ್ಮ"ವಾಗಿದೆ ಮತ್ತು "ಅನಂತದಲ್ಲಿರುವ ರಂಧ್ರದ ಭಾಗವಾಗಿದೆ" ಎಂಬುದಾಗಿ ತಿಳಿಸಿದ್ದ.[೨೬][೨೬] ಒಮ್ಮೊಮ್ಮೆಯಂತೂ ಮ್ಯಾನ್ಸನ್‌‌ ಹೀಗೆಯೇ ಮಾತನಾಡುತ್ತಾ, ಕರಿಯರು ಮತ್ತು ಬಿಳಿಯರ ನಡುವಿನ ವರ್ಣಭೇದನೀತಿಯ ಬಿಕ್ಕಟ್ಟು ಬೆಳೆಯುತ್ತಲೇ ಇದ್ದು, ಅಮೆರಿಕಾದ ನಗರಗಳಲ್ಲಿ ಕರಿಯರು ಶೀಘ್ರದಲ್ಲಿಯೇ ದಂಗೆಯೇಳಲಿದ್ದಾರೆ ಎಂದು ಹೇಳುತ್ತಿದ್ದ.[೨೯][೩೦] 1968ರ ಏಪ್ರಿಲ್‌‌ 4ರಂದು ಸಂಭವಿಸಿದ ಮಾರ್ಟಿನ್‌‌ ಲೂಥರ್‌‌ ಕಿಂಗ್‌‌, ಜೂನಿಯರ್‌‌‌‌‌ನ ಹತ್ಯೆಯ ಕುರಿತಾಗಿ ಅವನು ಈ ನಿಟ್ಟಿನಲ್ಲಿ ಒತ್ತುನೀಡಿ ಹೇಳುತ್ತಿದ್ದ.[೨೩] ಮೈಯರ್ಸ್‌‌ ಜಾನುವಾರು ಕ್ಷೇತ್ರದಲ್ಲಿ, ತೀಕ್ಷ್ಣವಾದ ಚಳಿಯಿಂದ ಕೂಡಿದ್ದ ಹೊಸವರ್ಷದ ಮುನ್ನಾದಿನದಂದು ದೊಡ್ಡ ಬೆಂಕಿಯನ್ನು ಹಾಕಿಕೊಂಡು ಅದರ ಸುತ್ತ ಜಮಾವಣೆಗೊಂಡಿದ್ದ ಸಮುದಾಯದ ಸದಸ್ಯರು, ಮ್ಯಾನ್ಸನ್‌‌ನ ಮಾತುಗಳನ್ನು ಕೇಳುತ್ತಿದ್ದರು; ತಾನು ಊಹಿಸಿಕೊಂಡು ಮುನ್ನುಡಿಯುತ್ತಲೇ ಬಂದಿದ್ದ ಸಾಮಾಜಿಕ ತಲ್ಲಣಗಳನ್ನು ಬೀಟಲ್ಸ್ ತಂಡವೂ ಸಹ ಊಹಿಸಿಕೊಂಡು ಮುನ್ನುಡಿಯುತ್ತಾ ಬಂದಿದೆ ಎಂಬುದು ಅವನು ನೀಡುತ್ತಿದ್ದ ವಿವರಣೆಯಾಗಿತ್ತು.[೨೬] ವೈಟ್‌ ಆಲ್ಬಮ್‌‌ ಹಾಡುಗಳ ಕುರಿತು ಅವನು ಎಲ್ಲರಿಗೂ ವಿಷಯಗಳನ್ನು ಹೊರಗೆಹಿದನಾದರೂ ಅದು ಸಂಕೇತದ ರೂಪದಲ್ಲಿತ್ತು. ವಾಸ್ತವವಾಗಿ, ಸ್ವತಃ ತನ್ನ ಸಮುದಾಯದೆಡೆಗೆ ಈ ಗೀತಸಂಪುಟವು ಬೆಟ್ಟುಮಾಡಿ ತೋರಿಸುತ್ತಿದೆ ಎಂದು ಅವನು ಸಮರ್ಥಿಸಿದ (ಅಥವಾ ಸದ್ಯದಲ್ಲಿಯೇ ಸಮರ್ಥಿಸುವವನಿದ್ದ); ತನ್ನದು ಸನ್ನಿಹಿತವಾಗಿರುವ ವಿಪತ್ತಿನಿಂದ ಯೋಗ್ಯರಾದವರನ್ನು ಸಂರಕ್ಷಿಸುವುದಕ್ಕಾಗಿ ಸೂಚಿಸಲ್ಪಟ್ಟ ಒಂದು ಆಯ್ದು ತೆಗೆದ ಕೂಟ ಎಂಬುದು ಅವನ ಪ್ರತಿಪಾದನೆಯಾಗಿತ್ತು.[೨೯][೩೦] 1969ರ ಜನವರಿಯ ಆರಂಭದಲ್ಲಿ, ಮರುಭೂಮಿಯ ಶೀತವನ್ನು ತಪ್ಪಿಸಿಕೊಂಡ ಸಮುದಾಯವು, ಸ್ಪಾಹ್ನ್‌‌ ಜಾನುವಾರು ಕ್ಷೇತ್ರದಿಂದ ಅಷ್ಟೇನೂ ದೂರವಿರದ ಕ್ಯಾನೊಗಾ ಪಾರ್ಕ್‌‌‌ನಲ್ಲಿನ ಹಚ್ಚಹಳದಿ ಬಣ್ಣದ ಮನೆಯೊಂದಕ್ಕೆ ವರ್ಗಾವಣೆಗೊಳ್ಳುವ ಮೂಲಕ, L.A.ನ ಸಾಮಾನ್ಯವಾಗಿ ಭಾವಿಸಲ್ಪಟ್ಟ ಬಿಕ್ಕಟ್ಟನ್ನು ನಿಯಂತ್ರಿಸಲು ತನ್ನನ್ನು ನಿಯೋಜಿಸಿಕೊಂಡಿತು.[೨]:244-247[೨೬][೩೧] "ಹೊರಗಿನ ಪ್ರಪಂಚದ[೨]:244-247[೩೨] ಅರಿವಿಗೆ ಬಾರದೆಯೇ ಒಳಗೆ ಉಳಿದುಕೊಳ್ಳಲು ಗುಂಪಿಗೆ ಈ ಪ್ರದೇಶವು ಅವಕಾಶ ಮಾಡಿಕೊಡುವುದರಿಂದ, ಮ್ಯಾನ್ಸನ್‌ ಇದನ್ನು ಹಳದಿ ಜಲಾಂತರ್ಗಾಮಿ ಎಂದು ಕರೆದ; ಇದು ಮತ್ತೊಂದು ಬೀಟಲ್ಸ್‌‌ ಉಲ್ಲೇಖವಾಗಿತ್ತೆಂಬುದು ಗಮನಾರ್ಹ ಸಂಗತಿ. ಸನ್ನಿಹಿತವಾಗಿರುವ ಭೀಕರ ಘಟನೆಗೆ[೩೩][೩೪] ಸಂಬಂಧಿಸಿದಂತೆ ಸಮುದಾಯದ ಸದಸ್ಯರು ಅಲ್ಲಿ ಸಿದ್ಧತೆ ನಡೆಸಿದರು; ಶಿಬಿರಾಗ್ನಿಯ ಸುತ್ತಲೂ ಸಮುದಾಯದವರು ಸೇರಿದ್ದಾಗ ಈ ಭೀಕರ ಘಟನೆಯ ಕುರಿತು ಮ್ಯಾನ್ಸನ್‌ "ಹೆಲ್ಟರ್‌ ಸ್ಕೆಲ್ಟರ್‌‌" ಎಂಬುದಾಗಿ ಉಲ್ಲೇಖಿಸಿದ್ದ. ಇದು ಅದೇ ಹೆಸರಿನ ಹಾಡು ಬಂದ ನಂತರ ಮ್ಯಾನ್ಸನ್‌ ಮಾಡಿದ ಉಲ್ಲೇಖವಾಗಿತ್ತು. ಫೆಬ್ರುವರಿಯ ವೇಳೆಗೆ, ಮ್ಯಾನ್ಸನ್‌‌ನ ಕಲ್ಪನಾದೃಷ್ಟಿಯು ಸಂಪೂರ್ಣಗೊಂಡಿತ್ತು. ಈ ಸಂದರ್ಭದಲ್ಲಿ ಸಮುದಾಯವು ಗೀತಸಂಪುಟವೊಂದನ್ನು ಸೃಷ್ಟಿಸಿತು. ಇದರ ಹಾಡುಗಳು ಬೀಟಲ್ಸ್‌‌ ಗೀತೆಗಳ ರೀತಿಯಲ್ಲಿಯೇ, ಊಹಿಸಲ್ಪಟ್ಟ ಅವ್ಯವಸ್ಥಿತ ಸ್ಥಿತಿಯನ್ನು ಪ್ರಚೋದಿಸುವಂತಿದ್ದವು. ಬಿಳಿಯರು ಕರಿಯರಿಂದ ಭಯಂಕರವಾದ ರೀತಿಯಲ್ಲಿ ಕೊಲ್ಲಲ್ಪಡಬೇಕೆಂದಿದ್ದರೆ ಅದಕ್ಕೆ ಪ್ರತೀಕಾರದ ನೆರವು ಅಗತ್ಯವಾಗಿತ್ತು, ಮತ್ತು ವರ್ಣಭೇದ ನೀತಿವಾದಿಗಳು ಹಾಗೂ ವರ್ಣಭೇದ ನೀತಿವಾದಿಗಳಲ್ಲದ ಬಿಳಿಯರ ನಡುವಿನ ಒಂದು ಬಿರುಕು, ಬಿಳಿಯರ ಸ್ವಯಂ-ನಿರ್ಮೂಲನಕ್ಕೆ ಕಾರಣವಾಗಬಲ್ಲುದಾಗಿತ್ತು. ಕರಿಯರ ವಿಜಯವು ಅದಿದ್ದ ರೀತಿಯಲ್ಲಿಯೇ ಕೇವಲ ಸಮುದಾಯದ ಪ್ರಭುತ್ವಕ್ಕೊಳಗಾಗಿ ಅಗ್ರಗಾಮಿಯಾಗಿರುವಂತಿದ್ದು, ಸಾವಿನ ಕಣಿವೆಯ ಕೆಳಗಿನ ಒಂದು ರಹಸ್ಯ ನಗರವಾದ "ತಳಕಾಣದ ಕಮರಿ"ಯಲ್ಲಿನ ತಿಕ್ಕಾಟವನ್ನು ಅದು ಸುರಕ್ಷಿತವಾಗಿ ದಾಟಬಲ್ಲ ಸಾಮರ್ಥ್ಯವನ್ನು ಹೊಂದಿತ್ತು.[೩೫] ಕ್ಯಾನೊಗಾ ಪಾರ್ಕ್‌ ಮನೆಯಲ್ಲಿ ಸಮುದಾಯದ ಸದಸ್ಯರು ವಾಹನಗಳಲ್ಲಿ ಕೆಲಸ ಮಾಡಿಕೊಂಡು, ಮರುಭೂಮಿಯಿಂದ ತಾವು ತಪ್ಪಿಸಿಕೊಳ್ಳುವುದಕ್ಕೆ ಸಜ್ಜುಗೊಳ್ಳಲು ಮಾರ್ಗಸೂಚಿಗಳನ್ನು ಹಾಕುವಲ್ಲಿ ಆಳವಾಗಿ ಪರ್ಯಾಲೋಚಿಸುತ್ತಿದ್ದ ಸಮಯದಲ್ಲಿಯೇ, ಪ್ರಪಂಚವನ್ನು ಬದಲಾಯಿಸುವ ತಮ್ಮ ಗೀತಸಂಪುಟಕ್ಕೆ ಸಂಬಂಧಿಸಿದ ಹಾಡುಗಳ ಕುರಿತಾಗಿಯೂ ತೊಡಗಿಸಿಕೊಂಡಿದ್ದರು. ಗೀತಸಂಪುಟದ ಮೂಲದ್ರವ್ಯವನ್ನು ಕೇಳಿಸಿಕೊಳ್ಳಲು ಟೆರ್ರಿ ಮೆಲ್ಚರ್‌ ಆ ಮನೆಗೆ ಬರುತ್ತಿದ್ದಾನೆ ಎಂಬ ವಿಷಯವು ಅವರಿಗೆ ತಿಳಿಯುತ್ತಿದ್ದಂತೆಯೇ, ಮಹಿಳೆಯರು ಭೋಜನವನ್ನು ಸಿದ್ಧಪಡಿಸಿದರು ಹಾಗೂ ಆ ಪ್ರದೇಶವನ್ನು ಸ್ವಚ್ಛಗೊಳಿಸಿದರು; ಆದರೆ ಮೆಲ್ಚರ್‌ ಎಂದಿಗೂ ಬರಲೇ ಇಲ್ಲ.[೨೯][೩೩] ಟೇಟ್‌ ಜೊತೆಗಿನ ಮುಖಾಮುಖಿಸಂಪಾದಿಸಿ 1969ರ[೨]:228–233 ಮಾರ್ಚ್‌ 23ರಂದು ಆಹ್ವಾನವಿಲ್ಲದೆಯೇ 10050 ಸಿಯೆಲೊ ಡ್ರೈವ್‌‌‌‌ನ್ನು ಮ್ಯಾನ್ಸನ್‌‌ ಪ್ರವೇಶಿಸಿದ; ಅದು ಟೆರ್ರಿ ಮೆಲ್ಚರ್‌‌‌ನ ನಿವಾಸ ಎಂದು ಅವನು ತಿಳಿದುಕೊಂಡಿದ್ದ.[೨]:155-161 ಇದು ರೂಡಿ ಆಲ್ಟೊಬೆಲ್ಲಿ ಎಂಬಾತನ ಸ್ವತ್ತಾಗಿತ್ತು, ಮತ್ತು ಅಲ್ಲಿ ಮೆಲ್ಚರ್‌ ಬಹಳ ಸಮಯದವರೆಗೆ ಓರ್ವ ಬಾಡಿಗೆದಾರನಾಗಿರಲಿಲ್ಲ. ಆ ಫೆಬ್ರುವರಿಯ[೨]:28–38 ವೇಳೆಗೆ ಇದ್ದಂತೆ, ಶರೋನ್‌‌ ಟೇಟ್‌ ಮತ್ತು ರೋಮನ್‌‌ ಪೋಲನ್ಸ್‌ಕಿ ಎಂಬಿಬ್ಬರು ಅಲ್ಲಿನ ಬಾಡಿಗೆದಾರರಾಗಿದ್ದರು. ಓರ್ವ ಛಾಯಾಗ್ರಾಹಕ ಮತ್ತು ಟೇಟ್‌‌ಳ ಸ್ನೇಹಿತನಾಗಿದ್ದ ಶಾಹ್ರೋಖ್‌ ಹಟಾಮಿ ಎಂಬಾತ ಮ್ಯಾನ್ಸನ್‌‌ನ್ನು ಭೇಟಿಮಾಡಿದ. ಮಾರನೆಯ ದಿನ ಟೇಟ್‌ ರೋಮ್‌‌‌ಗೆ ತೆರಳುವವಳಿದ್ದರಿಂದ, ನಿರ್ಗಮನಕ್ಕೆ ಮುಂಚಿತವಾಗಿ ಅವಳ ಛಾಯಾಚಿತ್ರವನ್ನು ತೆಗೆಯಲೆಂದು ಹಟಾಮಿ ಅಲ್ಲಿಗೆ ಬಂದಿದ್ದ. ಪ್ರಧಾನಗೃಹವನ್ನು ಮ್ಯಾನ್ಸನ್‌‌ ಸಮೀಪಿಸುತ್ತಿದ್ದಂತೆ ಅವನನ್ನು ಕಿಟಕಿಯೊಂದರ ಮೂಲಕ ನೋಡಿದ್ದ ಹಟಾಮಿ, ಅವನಿಗೇನು ಬೇಕು ಎಂಬುದನ್ನು ಕೇಳಲೆಂದು ಮುಂಭಾಗದ ವರಾಂಡಕ್ಕೆ ಬಂದಿದ್ದ.[೨]:228–233 ಹಟಾಮಿಯಿಂದ ಗುರುತಿಸಲಾಗದ ಯಾವುದೋ ಹೆಸರನ್ನು ಹೇಳಿದ ಮ್ಯಾನ್ಸನ್‌ ಅವರನ್ನು ತಾನು ಹುಡುಕಿಕೊಂಡು ಬಂದಿರುವುದಾಗಿ ಹಟಾಮಿಗೆ ತಿಳಿಸಿದಾಗ, ಆ ಜಾಗವು ಪೋಲನ್ಸ್‌ಕಿಯ ನಿವಾಸ ಎಂಬುದಾಗಿ ಹಟಾಮಿ ಅವನಿಗೆ ತಿಳಿಸಿದ. "ಹಿಂಭಾಗದ ಓಣಿಯಲ್ಲಿರುವ" ಮನೆಯಲ್ಲಿ ಪ್ರಯತ್ನಿಸುವಂತೆ ಹಟಾಮಿ ಅವನಿಗೆ ಅಲಹೆ ನೀಡಿದ; ಪ್ರಧಾನಗೃಹದಿಂದ ಆಚೆಯಿದ್ದ ಅತಿಥಿಗೃಹದೆಡೆಗೆ ಇದ್ದ ಹಾದಿಯು ಅವನು ಸೂಚಿಸಿದ ದಾರಿಯಾಗಿತ್ತು.[೨]:228–233 ಸ್ವತ್ತಿನ ಪ್ರದೇಶದಲ್ಲಿ ಓರ್ವ ಅಪರಿಚಿತ ಬಂದುದಕ್ಕೆ ಕಳವಳಗೊಂಡ ಹಟಾಮಿಯು ಈಗ ಮುಂಭಾಗದ ಕಾಲುದಾರಿಯೆಡೆಗೆ ತೆರಳಿದ; ಮ್ಯಾನ್ಸನ್‌ಗೆ ಎದುರಾಗುವುದು ಅವನ ಉದ್ದೇಶವಾಗಿತ್ತು. ಹಟಾಮಿಯ ಹಿಂಭಾಗದಲ್ಲಿ, ಮನೆಯ ಮುಂಭಾಗದ ಬಾಗಿಲಲ್ಲಿ ಕಾಣಿಸಿಕೊಂಡ ಟೇಟ್‌, ಆತ ಯಾರೊಂದಿಗೆ ಮಾತನಾಡುತ್ತಿದ್ದುದು ಎಂದು ಕೇಳಿದಳು. ವ್ಯಕ್ತಿಯೋರ್ವ ಯಾರೋ ಒಬ್ಬನನ್ನು ಹುಡುಕಿಕೊಂಡು ಬಂದಿರುವುದಾಗಿ ಹಟಾಮಿ ಅವಳಿಗೆ ತಿಳಿಸಿದ. ಹಟಾಮಿ ಮತ್ತು ಟೇಟ್‌ ತಂತಮ್ಮ ಸ್ಥಾನಗಳಲ್ಲಿರುವಂತೆಯೇ, ಮ್ಯಾನ್ಸನ್‌‌ ಒಂದೂ ಮಾತನ್ನಾಡದೆಯೇ ಅತಿಥಿಗೃಹದೆಡೆಗೆ ತೆರಳಿದ, ಹಾಗೂ ಒಂದೆರಡು ನಿಮಿಷಗಳ ನಂತರ ಅಲ್ಲಿಂದ ಹಿಂದಿರುಗಿ, ಅಲ್ಲಿಂದ ಆಚೆಗೆ ತೆರಳಿದ.[೨]:228–233 ಅದೇ ದಿನದ ಸಂಜೆವೇಳೆಗೆ, ಸದರಿ ಸ್ವತ್ತಿನ ಪ್ರದೇಶಕ್ಕೆ ಹಿಂದಿರುಗಿದ ಮ್ಯಾನ್ಸನ್‌‌, ಮತ್ತೊಮ್ಮೆ ಅತಿಥಿಗೃಹದೆಡೆಗೆ ತೆರಳಿದ. ಸುತ್ತವರಿಯಲ್ಪಟ್ಟಿದ್ದ ವರಾಂಡವನ್ನು ಪ್ರವೇಶಿಸುವ ಧಾರ್ಷ್ಟ್ಯ ತೋರಿದ ಅವನು, ಆಗಷ್ಟೇ ಸ್ನಾನವನ್ನು ಮುಗಿಸಿಕೊಂಡು ಬರುತ್ತಿದ್ದ ರೂಡಿ ಆಲ್ಟೊಬೆಲ್ಲಿಯನ್ನು ಮಾತನಾಡಿಸಿದ. ಮೆಲ್ಚರ್‌ ಕುರಿತಾಗಿ ಮ್ಯಾನ್ಸನ್‌ ಅವನನ್ನು ಕೇಳಿದನಾದರೂ, ತನ್ನನ್ನು ನೋಡಲೆಂದು ಮ್ಯಾನ್ಸನ್‌ ಬಂದಿದ್ದಾನೆ ಎಂಬುದಾಗಿ ಆಲ್ಟೊಬೆಲ್ಲಿ ಭಾವಿಸಿದ.[೨]:226 ಆ ಪ್ರದೇಶದಿಂದ ಮೆಲ್ಚರ್ ನಿರ್ಗಮಿಸಿದ ನಂತರ, ಹಿಂದಿನ ಸಂದರ್ಭಗಳಲ್ಲಿ ಮ್ಯಾನ್ಸನ್‌‌ ತೋರಿಕೆಗಾಗಿ ಆ ಸ್ಥಳಕ್ಕೆ ಭೇಟಿನೀಡಿದ್ದ ಎಂಬ ಅಂಶವನ್ನು ಅಭಿಯೋಜಕ ವಿನ್ಸೆಂಟ್‌ ಬುಗ್ಲಿಯೊಸಿಯು ನಂತರದಲ್ಲಿ ಪತ್ತೆಮಾಡಿದ್ದಕ್ಕೆ ಇದು ಸುಸಂಗತವಾಗಿದೆ ಅಥವಾ ಹೊಂದಿಕೆಯಾಗುವಂತಿದೆ.[೨]:228–233, 369-377 ಆಲ್ಟೊಬೆಲ್ಲಿಯು ಒಳಭಾಗದ ಪರದೆ ಬಾಗಿಲಿನ ಮೂಲಕ ಮಾತನಾಡುತ್ತಾ, ಮೆಲ್ಚರ್‌ ಈಗಾಗಲೇ ಮಾಲಿಬು ಪ್ರದೇಶಕ್ಕೆ ತೆರಳಿದ್ದಾನೆ ಎಂದು ಮ್ಯಾನ್ಸನ್‌‌ಗೆ ತಿಳಿಸಿದ. ಮೆಲ್ಚರ್‌ನ ಹೊಸ ವಿಳಾಸವು ತನಗೆ ಗೊತ್ತಿಲ್ಲ ಎಂಬುದಾಗಿ ಆತ ಸುಳ್ಳುಹೇಳಿದ. ಮ್ಯಾನ್ಸನ್‌ನಿಂದ ಬಂದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ, ತಾನು ಸ್ವತಃ ಮನರಂಜನಾ ವ್ಯವಹಾರದಲ್ಲಿ ಇದ್ದುದಾಗಿ ತಿಳಿಸಿದ; ಡೆನ್ನಿಸ್‌ ವಿಲ್ಸನ್‌‌ನ ಮನೆಯಲ್ಲಿ ಹಿಂದಿನ ವರ್ಷ ಅವನು ಮ್ಯಾನ್ಸನ್‌ನ್ನು ಭೇಟಿಯಾಗಿದ್ದನಾದರೂ, ಅದಾಗಲೇ ಮ್ಯಾನ್ಸನ್‌‌ಗೆ ತಿಳಿದಿದೆ ಎಂಬ ಬಗ್ಗೆ ಅವನಿಗೆ ಖಾತ್ರಿಯಿತ್ತು. ವಿಲ್ಸನ್‌‌ ನುಡಿಸಿಕೊಂಡು ಬಂದಿದ್ದ ಮ್ಯಾನ್ಸನ್‌‌ನ ಒಂದಷ್ಟು ಸಂಗೀತದ ಧ್ವನಿಮುದ್ರಣಗಳ ಕುರಿತಾಗಿ ವಿಲ್ಸನ್‌‌ನ ಮನೆಯಲ್ಲಿ ಅವನಿಗೆ ಆಲ್ಟೊಬೆಲ್ಲಿಯು ನಿರುತ್ಸಾಹದ ಮೆಚ್ಚುಗೆಯನ್ನು ಸೂಚಿಸಿದ್ದ.[೨]:228–233 ಮಾರನೆಯ ದಿನ ತಾನು ದೇಶದಿಂದಾಚೆಗೆ ತೆರಳುತ್ತಿರುವುದಾಗಿ ಆಲ್ಟೊಬೆಲ್ಲಿಯು ಮ್ಯಾನ್ಸನ್‌‌ಗೆ ತಿಳಿಸಿದಾಗ, ಅವನು ಪ್ರವಾಸದಿಂದ ಹಿಂದಿರುಗಿದ ನಂತರ ಅವನೊಂದಿಗೆ ಮಾತನಾಡುವುದಾಗಿ ಮ್ಯಾನ್ಸನ್‌‌ ತಿಳಿಸಿದ; ತನ್ನ ಪ್ರವಾಸದ ಅವಧಿಯು ಒಂದು ವರ್ಷಕ್ಕಿಂತ ಹೆಚ್ಚಿನದಾಗಿದೆ ಎಂದು ಆಲ್ಟೊಬೆಲ್ಲಿ ಸುಳ್ಳುಹೇಳಿದ. ಆಲ್ಟೊಬೆಲ್ಲಿಯಿಂದ ಬಂದ ಒಂದು ನೇರ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ, ಪ್ರಧಾನಗೃಹದಲ್ಲಿರುವ ವ್ಯಕ್ತಿಗಳಿಂದ ನೀಡಲ್ಪಟ್ಟ ನಿರ್ದೇಶನದ ಅನುಸಾರ ತಾನು ಅತಿಥಿಗೃಹದೆಡೆಗೆ ತೆರಳಿದುದಾಗಿ ಮ್ಯಾನ್ಸನ್‌‌ ವಿವರಿಸಿದ; ಮ್ಯಾನ್ಸನ್‌‌ ಆಗಮನದಿಂದ ತನ್ನ ಬಾಡಿಗೆದಾರರಿಗೆ ತೊಂದರೆಯಾಗಬಾರದು ಎಂಬುದೇ ತನ್ನ ಬಯಕೆ ಎಂದು ಆಲ್ಟೊಬೆಲ್ಲಿ ವಿವರಿಸಿದ.[೨]:228–233 ಮ್ಯಾನ್ಸನ್‌‌ ಅಲ್ಲಿಂದ ತೆರಳಿದ. ಮಾರನೆಯ ದಿನ ಟೇಟ್‌ ಜೊತೆಯಲ್ಲಿ ಆಲ್ಟೊಬೆಲ್ಲಿಯು ರೋಮ್‌ಗೆ ತೆರಳುವಾಗ, "ತೆವಳುವಂತೆ-ಕಾಣುವ ಆ ವ್ಯಕ್ತಿಯು" ಹಿಂದಿನ ದಿನ ಅತಿಥಿಗೃಹಕ್ಕೆ ಮತ್ತೆ ಹೋಗಿದ್ದನೇ ಎಂದು ಆಲ್ಟೊಬೆಲ್ಲಿಯನ್ನು ಟೇಟ್‌ ಕೇಳಿದಳು.[೨]:228–233 ಸಮುದಾಯದ ಅಪರಾಧಗಳುಸಂಪಾದಿಸಿ ಕ್ರೋವೆಗೆ ಗುಂಡಿಕ್ಕುವಿಕೆಸಂಪಾದಿಸಿ ಮ್ಯಾನ್ಸನ್‌‌ ಮತ್ತು ಮಹಿಳೆಯರು ಹಾಡುವುದನ್ನು ಕೇಳಲೆಂದು, 1969ರ ಮೇ 18ರಂದು ಟೆರ್ರಿ ಮೆಲ್ಚರ್‌ ಸ್ಪಾಹ್ನ್‌‌ ಜಾನುವಾರು ಕ್ಷೇತ್ರಕ್ಕೆ ಭೇಟಿನೀಡಿದ. ನಂತರದ ಕೆಲವೇ ದಿನಗಳಲ್ಲಿ, ತರುವಾಯದ ಭೇಟಿಯೊಂದನ್ನು ಮೆಲ್ಚರ್‌ ವ್ಯವಸ್ಥೆಗೊಳಿಸಿದ. ಆ ಸಂದರ್ಭದಲ್ಲಿ ಸಂಚಾರಿ ಧ್ವನಿಮುದ್ರಣ ಘಟಕವೊಂದನ್ನು ಹೊಂದಿದ್ದ ಸ್ನೇಹಿತನೊಬ್ಬನನ್ನು ಅವನು ತನ್ನೊಂದಿಗೆ ಕರೆತಂದ; ಆದರೆ ಅವನು ಸ್ವತಃ ಗುಂಪಿನ ಗೀತೆಯನ್ನು ಧ್ವನಿಮುದ್ರಿಸಿಕೊಳ್ಳಲಿಲ್ಲ.[೨]:156,185[೩೬] "ಹೆಲ್ಟರ್‌ ಸ್ಕೆಲ್ಟರ್‌‌"ನ್ನು ಹೇಗೆ ಆರಂಭಿಸುವುದು ಎಂಬುದನ್ನು ತಾವು ಕರಿಯರಿಗೆ ತೋರಿಸಬೇಕಾಗಿ ಬರಬಹುದು ಎಂಬುದಾಗಿ ಜೂನ್‌‌ ವೇಳೆಗೆ ಸಮುದಾಯಕ್ಕೆ ಹೇಳಲು ಮ್ಯಾನ್ಸನ್‌ ಶುರುಮಾಡಿದ.[೨]:244-247[೩೪][೩೭] ಘರ್ಷಣೆಗೆ ಸಂಬಂಧಿಸಿದ ಸಿದ್ಧತೆಯನ್ನು ನಡೆಸಲು ಸಮುದಾಯಕ್ಕೆ ನೆರವಾಗಲೆಂದು ಉದ್ದೇಶಿಸಲಾದ ಹಣವನ್ನು ಗಳಿಸಿಕೊಂಡುಬರುವ ಕೆಲಸವನ್ನು ವ್ಯಾಟ್ಸನ್‌‌ಗೆ ಮ್ಯಾನ್ಸನ್‌ ವಹಿಸಿದಾಗ, ಬರ್ನಾರ್ಡ್‌ "ಲಾಟ್ಸಪೊಪ್ಪಾ" ಕ್ರೋವೆ ಎಂಬ ಹೆಸರಿನ ಓರ್ವ ಕರಿಯ ಮಾದಕವಸ್ತು ವ್ಯಾಪಾರಿಯನ್ನು ವ್ಯಾಟ್ಸನ್‌‌ ಮೋಸಗೊಳಿಸಿ ಅವನಿಂದ ಹಣವನ್ನು ಪಡೆದ. ಸ್ಪಾಹ್ನ್‌‌ ಜಾನುವಾರು ಕ್ಷೇತ್ರದಲ್ಲಿನ ಪ್ರತಿಯೊಬ್ಬರನ್ನೂ ನಾಶಮಾಡುವ ಒಂದು ಬೆದರಿಕೆಯೊಂದಿಗೆ ಕ್ರೋವೆ ಪ್ರತಿಕ್ರಿಯಿಸಿದ. 1969ರ ಜುಲೈ 1ರಂದು ಕ್ರೋವೆಗೆ ಅವನ ಹಾಲಿವುಡ್‌ ವಾಸದ ಮಹಡಿಯಲ್ಲಿ ಗುಂಡಿಕ್ಕುವ ಮೂಲಕ ಮ್ಯಾನ್ಸನ್ ಎದುರೇಟು ನೀಡಿದ.[೨]:99-113[೨]:91-96[೩೮][೩೯] ತಾನು ಕ್ರೋವೆಯನ್ನು ಕೊಂದಿರುವೆ ಎಂಬುದಾಗಿ ಮ್ಯಾನ್ಸನ್‌‌ ಹೊಂದಿದ್ದ ತಪ್ಪುಗ್ರಹಿಕೆಯ ನಂಬಿಕೆಯು, ಲಾಸ್‌ ಏಂಜಲೀಸ್‌ನಲ್ಲಿ ಎಸೆಯಲ್ಪಟ್ಟಿದ್ದ ಓರ್ವ ಬ್ಲಾಕ್‌ ಪ್ಯಾಂಥರ್‌‌ ಬಣದವನ ಶರೀರವು ಪತ್ತೆಯಾದುದರ ಕುರಿತಾದ ಒಂದು ಸುದ್ದಿ ವರದಿಯಿಂದಾಗಿ ತೋರಿಕೆಯಲ್ಲಿ ದೃಢಪಡಿಸಲ್ಪಟ್ಟಿತು. ಕ್ರೋವೆಯು ಬ್ಲಾಕ್‌ ಪ್ಯಾಂಥರ್‌ಗಳ ಬಣದ ಓರ್ವ ಸದಸ್ಯನಾಗಿರದಿದ್ದರೂ ಸಹ, ಅವನು ಆ ಬಣದ ಸದಸ್ಯನಾಗಿದ್ದ ಎಂಬ ತೀರ್ಮಾನಕ್ಕೆ ಬಂದ ಮ್ಯಾನ್ಸನ್, ಆ ಗುಂಪಿನಿಂದ ತನ್ನ ಮೇಲೆ ಪ್ರತೀಕಾರದ ದಾಳಿಯಾಗಬಹುದು ಎಂದು ನಿರೀಕ್ಷಿಸಿದ. ಸ್ಪಾಹ್ನ್‌‌ ಜಾನುವಾರು ಕ್ಷೇತ್ರವನ್ನು ಒಂದು ರಕ್ಷಣಾತ್ಮಕ ಶಿಬಿರವಾಗಿ ಪರಿವರ್ತಿಸಿದ ಅವನು, ಸಶಸ್ತ್ರ ರಕ್ಷಾಭಟರು ರಾತ್ರಿಯಲ್ಲಿ ಗಸ್ತು ತಿರುಗುವಂತೆ ವ್ಯವಸ್ಥೆಗೊಳಿಸಿದ.[೩೮][೪೦] ಈ ಕುರಿತು ಟೆಕ್ಸ್‌‌ ವ್ಯಾಟ್ಸನ್‌ ನಂತರದಲ್ಲಿ ಬರೆಯುತ್ತಾ, "ಒಂದು ವೇಳೆ ಹೆಲ್ಟರ್‌ ಸ್ಕೆಲ್ಟರ್‌‌ ಆದಷ್ಟು ಎರಗಲಿದೆ ಎಂಬುದಕ್ಕೆ ನಮಗೆ ಯಾವುದೇ ಹೆಚ್ಚಿನ ಸಾಕ್ಷ್ಯ ಬೇಕಿದ್ದರೆ, ಇದು ಅದೇ ಆಗಿತ್ತು; ಆಯ್ದುಕೊಂಡ ಗುರಿಗಳ ಮೇಲೆ ಕರಿಯರು ದಾಳಿಮಾಡಲು ಪ್ರಯತ್ನಿಸುತ್ತಿದ್ದರು."[೩೮] ಹಿನ್ಮನ್‌‌ ಕೊಲೆಸಂಪಾದಿಸಿ 1969ರ ಜುಲೈ 25ರಂದು, ಹಿಂದೊಮ್ಮೆ ಸಮುದಾಯದ ಸದಸ್ಯನಾಗಿದ್ದ ಬಾಬ್ಬಿ ಬ್ಯೂಸೊಲೈಲ್‌ ಎಂಬಾತನನ್ನು ಮೇರಿ ಬ್ರೂನರ್‌‌ ಮತ್ತು ಸುಸಾನ್‌ ಅಟ್ಕಿನ್ಸ್‌ ಜೊತೆಯಲ್ಲಿ ಗ್ಯಾರಿ ಹಿನ್ಮನ್ ಎಂಬ ಪರಿಚಯಸ್ಥನ ಮನೆಗೆ ಮ್ಯಾನ್ಸನ್‌‌ ಕಳಿಸಿಕೊಟ್ಟ; ಹಿನ್ಮನ್‌ ಪಾರಂಪರ್ಯವಾಗಿ ಪಡೆದುಕೊಂಡಿದ್ದಾನೆ ಎಂಬುದಾಗಿ ಮ್ಯಾನ್ಸನ್‌‌ ಭಾವಿಸಿದ್ದ ಹಣವನ್ನು ವರ್ಗಾಯಿಸುವಂತೆ ಹಿನ್ಮನ್‌ನ ಮನವೊಲಿಸಲು ಇವರೆಲ್ಲರನ್ನೂ ಕಳಿಸಲಾಗಿತ್ತು.[೨]:75-77[೩೮][೪೧] ಅಸಹಕಾರಿಯಾಗಿ ನಡೆದುಕೊಂಡ ಹಿನ್ಮನ್‌‌ನ್ನು ಈ ಮೂವರೂ ಎರಡು ದಿನಗಳವರೆಗೆ ಒತ್ತೆಯಾಳಾಗಿ ಇರಿಸಿಕೊಂಡರು; ಈ ಅವಧಿಯಲ್ಲಿ ಹಾಜರಾದ ಮ್ಯಾನ್ಸನ್‌ ಕತ್ತಿಯೊಂದನ್ನು ತೋರಿಸಿ ಅವನ ಕಿವಿಯನ್ನು ಕತ್ತರಿಸುವುದಾಗಿ ತಿಳಿಸಿದ. ಅದಾದ ನಂತರ, ಮ್ಯಾನ್ಸನ್‌ನ ಸೂಚನೆಯ ಮೇರೆಗೆ ಕೇವಲ ತೋರಿಕೆಗಾಗಿ ಬ್ಯೂಸೊಲೈಲ್‌ ಹಿನ್ಮನ್‌‌ನ್ನು ಇರಿದು ಸಾಯಿಸಿದ. ಟೊಪಾಂಗಾ ಕ್ಯಾನಿಯನ್‌‌ ನಿವಾಸವನ್ನು ಬಿಡುವುದಕ್ಕೆ ಮುಂಚಿತವಾಗಿ, ಬ್ಯೂಸೊಲೈಲ್‌, ಅಥವಾ ಮಹಿಳೆಯರ ಪೈಕಿ ಒಬ್ಬಳು, ಹಿನ್ಮನ್‌‌ನ ರಕ್ತವನ್ನು ಬಳಸಿಕೊಂಡು ಗೋಡೆಯ ಮೇಲೆ "ರಾಜಕೀಯ ಹಂದಿಮರಿ" ಎಂದು ಬರೆದರು ಮತ್ತು ಬ್ಲಾಕ್‌ ಪ್ಯಾಂಥರ್‌ ಬಣದ ಒಂದು ಸಂಕೇತವಾದ ಚಿರತೆಯ ಒಂದು ಪಂಜವನ್ನು ಬರೆದರು.[೨]:33, 91-96, 99-113[೪೨] 1981ರಲ್ಲಿ ಮತ್ತು 1998–99ರಲ್ಲಿ[೪೩][೪೪] ನಡೆದ ನಿಯತಕಾಲಿಕದ ಸಂದರ್ಶನಗಳಲ್ಲಿ ಬ್ಯೂಸೊಲೈಲ್‌ ಮಾತನಾಡುತ್ತಾ, ಸಾಮಾನ್ಯವಾಗಿ ಭಾವಿಸಿರುವಂತೆ ಕಳಪೆ ಗುಣಮಟ್ಟವನ್ನು ಹೊಂದಿದ್ದ ಮಾದಕವಸ್ತುಗಳಿಗೆ ಸಂಬಂಧಿಸಿದಂತೆ ಹಿನ್ಮನ್‌‌ಗೆ ಪಾವತಿಸಲಾಗಿದ್ದ ಹಣವನ್ನು ವಸೂಲುಮಾಡಲು ತಾನು ಹಿನ್ಮನ್‌‌ ಇದ್ದ ಸ್ಥಳಕ್ಕೆ ತೆರಳಿದುದಾಗಿ ತಿಳಿಸಿದ; ತನ್ನ ಆಶಯದ ಅರಿವಿಲ್ಲದ ಬ್ರೂನರ್‌‌ ಮತ್ತು ಅಟ್ಕಿನ್ಸ್, ವ್ಯರ್ಥವಾಗಿ ಕೇವಲ ಹಿನ್ಮನ್‌‌ನ್ನು ಭೇಟಿಮಾಡಲು ತನ್ನ ಜೊತೆ ತೆರಳಿದ್ದರು ಎಂಬ ಮಾತನ್ನೂ ಅವನು ಈ ಸಂದರ್ಭದಲ್ಲಿ ಸೇರಿಸಿದ. ಮತ್ತೊಂದೆಡೆ, ಅಟ್ಕಿನ್ಸ್‌ 1977ರಲ್ಲಿ ಬಂದ ತನ್ನ ಆತ್ಮಚರಿತ್ರೆಯಲ್ಲಿ ಬರೆಯುತ್ತಾ, ಹಿನ್ಮನ್ ಬಳಿಗೆ ಹೋಗಲು ಬ್ಯೂಸೊಲೈಲ್‌, ಬ್ರೂನರ್‌‌, ಮತ್ತು ತನಗೆ ಮ್ಯಾನ್ಸನ್‌‌ ನೇರವಾಗಿ ತಿಳಿಸಿದನೆಂದೂ ಮತ್ತು ಅವನ ಬಳಿ ಪಿತ್ರಾರ್ಜಿತವಾಗಿ ಇದೆಯೆಂದು ಭಾವಿಸಲಾಗಿದ್ದ 21,000 $ನಷ್ಟು ಮೊತ್ತವನ್ನು ಪಡೆದುಕೊಂಡು ಬರಲು ಹೇಳಿದ್ದನೆಂದೂ ತಿಳಿಸಿದಳು. ಅವಳು ತನ್ನ ಮಾತುಗಳನ್ನು ಮುಂದುವರಿಸುತ್ತಾ, ಎರಡು ದಿನಗಳು ಮುಂಚಿತವಾಗಿ ತನ್ನೊಂದಿಗೆ ಖಾಸಗಿಯಾಗಿ ಮಾತನಾಡಿದ ಮ್ಯಾನ್ಸನ್‌, "ಮುಖ್ಯವಾದುದನ್ನೇನಾದರೂ ಮಾಡಲು" ಅವಳು ಬಯಸಿದ್ದಲ್ಲಿ, ‌ಹಿನ್ಮನ್‌‌ನ್ನು ಸಾಯಿಸಿ ಅವನ ಹಣವನ್ನು ಪಡೆಯಬಹುದೆಂದು ತಿಳಿಸಿದ್ದ ಎಂಬ ಅಂಶವನ್ನು ಹೊರಗೆಡಹಿದಳು.[೪೧] ಟೇಟ್‌ ಕೊಲೆಗಳುಸಂಪಾದಿಸಿ ಹಿನ್ಮನ್‌‌ನ ಕಾರನ್ನು ಬ್ಯೂಸೊಲೈಲ್‌ ಓಡಿಸುತ್ತಿರುವಾಗ ಅವನನ್ನು ಹಿಡಿದ ನಂತರ, 1969ರ ಆಗಸ್ಟ್‌‌ 6ರಂದು ಬ್ಯೂಸೊಲೈಲ್‌ ಬಂಧಿಸಲ್ಪಟ್ಟ. ಟೈರಿನ ಬಾವಿಯಲ್ಲಿ ಆರಕ್ಷಕರಿಗೆ ಕೊಲೆಯ ಆಯುಧವು ಸಿಕ್ಕಿತು.[೨]:28–38 ಎರಡು ದಿನಗಳು ನಂತರ, ಸ್ಪಾಹ್ನ್‌‌ ಜಾನುವಾರು ಕ್ಷೇತ್ರದಲ್ಲಿನ ತನ್ನ ಸಮುದಾಯದ ಸದಸ್ಯರೊಂದಿಗೆ ಮ್ಯಾನ್ಸನ್‌‌ ಮಾತನಾಡುತ್ತಾ, "ಹೆಲ್ಟರ್‌ ಸ್ಕೆಲ್ಟರ್‌ಗೆ ಈಗ ಕಾಲಕೂಡಿಬಂದಿದೆ" ಎಂದು ತಿಳಿಸಿದ.[೨]:258-269[೩೮][೪೫] ಆಗಸ್ಟ್‌‌ 8ರಂದು ರಾತ್ರಿ, "ಮೆಲ್ಚರ್‌ ವಾಸಿಸುತ್ತಿದ್ದನೆನ್ನಲಾದ ಮನೆಗೆ" ಅಟ್ಕಿನ್ಸ್‌, ಲಿಂಡಾ ಕಸಾಬಿಯನ್‌‌, ಮತ್ತು ಪ್ಯಾಟ್ರೀಷಿಯಾ ಕ್ರೆನ್‌ವಿಂಕೆಲ್‌‌‌‌‌‌ರನ್ನು ಕರೆದುಕೊಂಡು ಹೋಗುವಂತೆ ವ್ಯಾಟ್ಸನ್‌‌ಗೆ ಮ್ಯಾನ್ಸನ್‌‌ ನಿರ್ದೇಶನವನ್ನು ನೀಡಿದ; ಅಷ್ಟೇ ಅಲ್ಲ, "ನಿನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಭಯಂಕರವಾಗಿ ಅಲ್ಲಿರುವ ಪ್ರತಿಯೊಬ್ಬರನ್ನೂ ಸಂಪೂರ್ಣವಾಗಿ ನಾಶಮಾಡು" ಎಂಬ ಸೂಚನೆಯನ್ನೂ ಅವನಿಗೆ ನೀಡಿದ.[೨]:463-468[೪೬] ವ್ಯಾಟ್ಸನ್‌‌ ಯಾವ ರೀತಿಯಲ್ಲಿ ಸೂಚನೆಗಳನ್ನು ನೀಡುತ್ತಾನೋ ಅದನ್ನು ಅನುಸರಿಸುವಂತೆ ಅವನು ಮಹಿಳೆಯರಿಗೆ ತಿಳಿಸಿದ.[೨]:176-184, 258-269 ಸಮುದಾಯದ ಆರಂಭಿಕ ಸದಸ್ಯರಲ್ಲಿ ಒಬ್ಬಳಾಗಿದ್ದ ಕ್ರೆನ್‌ವಿಂಕೆಲ್‌‌ ಬಿಟ್ಟಿಪ್ರಯಾಣ ಮಾಡುವವರ ಪೈಕಿಯೂ ಒಬ್ಬಳಾಗಿದ್ದು, ಅವಳನ್ನು ಡೆನ್ನಿಸ್‌ ವಿಲ್ಸನ್‌‌ ಹಾರಿಸಿಕೊಂಡು ಬಂದಿದ್ದ ಎಂಬರ್ಥದಲ್ಲಿ ಆರೋಪಿಸಲಾಗುತ್ತಿತ್ತು.[೨]:250-253 ಸಿಯೆಲೊ ಡ್ರೈವ್‌‌ ಸ್ವತ್ತಿನ ಪ್ರವೇಶದ್ವಾರದ ಬಳಿಗೆ ಈ ನಾಲ್ವರೂ ಆಗಮಿಸಿದಾಗ, ದ್ವಾರದ ಸಮೀಪವಿರುವ ದೂರವಾಣಿ ಕಂಬವೊಂದನ್ನು ಹತ್ತಿದ ವ್ಯಾಟ್ಸನ್‌, ದೂರವಾಣಿಯ ಮಾರ್ಗವನ್ನು ಕತ್ತರಿಸಿಹಾಕಿದ. ಸಮುದಾಯದ ವಿಷಯಗಳಿಗೆ ಸಂಬಂಧಿಸಿದಂತೆ ಅವನು ಹಿಂದೆ ಆ ಮನೆಗೆ ಹೋಗಿದ್ದ.[೧೮] ಅಷ್ಟು ಹೊತ್ತಿಗಾಗಲೇ ಮಧ್ಯರಾತ್ರಿಯಾಗಿತ್ತು ಮತ್ತು 1969ರ ಆಗಸ್ಟ್‌‌ 9ರ ದಿನವು ಪ್ರಾರಂಭವಾಗುವುದರಲ್ಲಿತ್ತು. ತಮ್ಮ ಕಾರನ್ನು ಬೆಟ್ಟದ ಕೆಳಭಾಗಕ್ಕೆ ಕೊಂಡೊಯ್ದು ಅಲ್ಲಿ ಅದನ್ನು ನಿಲುಗಡೆ ಮಾಡಿದ ಆ ಗುಂಪು, ಮತ್ತೆ ಮನೆಯೆಡೆಗೆ ನಡೆಯಲು ಶುರುಮಾಡಿತು. ದ್ವಾರಕ್ಕೆ ವಿದ್ಯುತ್‌ ಸಂಪರ್ಕವನ್ನು ನೀಡಿರಬಹುದು ಅಥವಾ ಅದು ಒಂದು ಎಚ್ಚರಿಕೆಯ ಗಂಟೆಯೊಂದಿಗೆ[೨]:176-184 ಸಜ್ಜುಗೊಂಡಿರಬಹುದು ಎಂದು ಆಲೋಚಿಸಿದ ಅವರು, ಅದರ ಬಲಭಾಗದಲ್ಲಿದ್ದುಕೊಂಡು ನೆಲದ ಮೇಲೆ ಇಳಿಬಿದ್ದಿದ್ದ ಒಂದು ಪೊದೆಪೊದೆಯಾಗಿರುವ ಕಟ್ಟೆಯನ್ನು ಹತ್ತಿದರು. ಆ ಹೊತ್ತಿಗೆ ಸರಿಯಾಗಿ, ಕೋನೀಯವಾಗಿರುವ ಸ್ವತ್ತಿನ ವ್ಯಾಪ್ತಿಯೊಳಗೆ ದೂರದಲ್ಲಿರುವ ಮುಂದೀಪಗಳು ಅವರಿಗೆ ಎದುರಾದವು. ಪೊದೆಗಳಲ್ಲಿಯೇ ಉಳಿಯುವಂತೆ ಮಹಿಳೆಯರಿಗೆ ತಿಳಿಸಿದ ವ್ಯಾಟ್ಸನ್‌ ಅಲ್ಲಿಂದ ಹೊರಗೆ ಹೆಜ್ಜೆಯಿಟ್ಟ, ನಿಲ್ಲಲು ಒಂದು ಆದೇಶವನ್ನು ಕೊಟ್ಟ, ಮತ್ತು ಅವನನ್ನು ಸಮೀಪಿಸುತ್ತಿದ್ದ ಸ್ಟೀವನ್‌ ಪೇರೆಂಟ್‌ ಎಂಬ 18-ವರ್ಷ-ವಯಸ್ಸಿನ ಚಾಲಕನನ್ನು ಗುಂಡಿಟ್ಟು ಸಾಯಿಸಿದ.[೨]:22-25[೪೬] ಪ್ರಧಾನಗೃಹದ ತೆರೆದ ಕಿಟಕಿಯೊಂದರ ಪರದೆಯನ್ನು ವ್ಯಾಟ್ಸನ್‌ ಕತ್ತರಿಸಿದ ನಂತರ, ದ್ವಾರದ ಕೆಳಭಾಗದಲ್ಲಿ ನಿಗಾ ಇಟ್ಟಿರುವಂತೆ ಕಸಾಬಿಯನ್‌ಗೆ ತಿಳಿಸಿದ.[೨]:258-269[೨]:176-184[೪೬] ಪರದೆಯನ್ನು ತೆಗೆದುಹಾಕಿದ ಅವನು ಕಿಟಕಿಯ ಮೂಲಕ ಪ್ರವೇಶಿಸಿದ, ಮತ್ತು ಮುಂಭಾಗದ ಬಾಗಿಲ ಮೂಲಕ ಒಳಗೆ ಬರಲು ಅಟ್ಕಿನ್ಸ್‌ ಮತ್ತು ಕ್ರೆನ್‌ವಿಂಕೆಲ್‌‌ಗೆ ಅವಕಾಶ ಕಲ್ಪಿಸಿದ.[೨]:176-184 ಅಟ್ಕಿನ್ಸ್‌ ಕಿವಿಯಲ್ಲಿ ವ್ಯಾಟ್ಸನ್‌‌ ಪಿಸುಗುಟ್ಟುತ್ತಿರುವಂತೆ, ವಾಸದ-ಕೊಠಡಿಯ ಒರಗುಮಂಚದ ಮೇಲಿದ್ದ ಪೋಲನ್ಸ್‌ಕಿಯ ಸ್ನೇಹಿತನಾದ ವೋಜ್‌ಸೀಕ್‌ ಫ್ರೈಕೊವ್ಸ್‌ಕಿ ಎಚ್ಚರಗೊಂಡ; ವ್ಯಾಟ್ಸನ್‌‌ ಅವನ ತಲೆಗೆ ಬಲವಾದ ಹೊಡೆತವನ್ನು ಕೊಟ್ಟ.[೪೬] "ನೀನ್ಯಾರು? ಇಲ್ಲೇನು ಮಾಡುತ್ತಿರುವೆ?" ಎಂದು ಅವನನ್ನು ಫ್ರೈಕೊವ್ಸ್‌ಕಿ ಕೇಳಿದಾಗ, "ನಾನೊಂದು ಭೂತ; ಭೂತದ ಕೆಲಸವನ್ನು ಮಾಡಲು ನಾನಿಲ್ಲಿ ಬಂದಿರುವೆ" ಎಂದು ವ್ಯಾಟ್ಸನ್‌‌ ಉತ್ತರಿಸಿದ.[೨]:176-184[೪೬] ವ್ಯಾಟ್ಸನ್‌‌ನ ನಿರ್ದೇಶನದ ಅನುಸಾರ, ಆ ಮನೆಯ ಇತರ ಮೂವರು ನಿವಾಸಿಗಳನ್ನು ಅಟ್ಕಿನ್ಸ್‌ ಪತ್ತೆಹಚ್ಚಿದಳು, ಮತ್ತು ಕ್ರೆನ್‌ವಿಂಕೆಲ್‌‌ಳ ನೆರವಿನೊಂದಿಗೆ[೨]:176-184, 297-300 ಅವರನ್ನು ವಾಸದ ಕೊಠಡಿಗೆ ಕರೆತಂದಳು. ಎಂಟೂವರೆ ತಿಂಗಳುಗಳ ಗರ್ಭಿಣಿಯಾಗಿದ್ದ ಟೇಟ್‌, ಅವಳ ಸ್ನೇಹಿತ ಮತ್ತು ಹಿಂದಿನ ಪ್ರೇಮಿಯಾಗಿದ್ದ ಜೇ ಸೆಬ್ರಿಂಗ್‌‌ ಎಂಬ ಹೆಸರಿನ ಓರ್ವ ಪ್ರಸಿದ್ಧ ಕೇಶವಿನ್ಯಾಸಕಾರ, ಹಾಗೂ ಅಬಿಗೇಲ್‌‌ ಫೋಲ್ಜರ್‌‌ ಎಂಬ ಹೆಸರಿನ ಫ್ರೈಕೊವ್ಸ್‌ಕಿಯ ಪ್ರೇಮಿ ಹಾಗೂ ಫೋಲ್ಜರ್‌‌ ಕಾಫಿ ಸಂಪತ್ತಿನ ವಾರಸುದಾರಿಣಿ ಇವರೇ ಆ ಮೂವರಲ್ಲಿ ಸೇರಿದ್ದರು.[೨]:28–38 ಟೇಟ್‌ಳ ಪತಿಯಾದ ಪೋಲನ್ಸ್‌ಕಿ, ಚಲನಚಿತ್ರವೊಂದರ ಯೋಜನೆಯ ಮೇರೆಗೆ ಲಂಡನ್‌‌‌ನಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ.[೨]:10-14 ತಾನು ತಂದಿದ್ದ ಹಗ್ಗದಿಂದ ಟೇಟ್‌ ಮತ್ತು ಸೆಬ್ರಿಂಗ್‌‌ ಇಬ್ಬರ ಕುತ್ತಿಗೆಗೂ ಒಟ್ಟಿಗೆಯಾಗಿ ಬಿಗಿಯಲು ಆರಂಭಿಸಿದ ವ್ಯಾಟ್ಸನ್‌‌, ನಂತರ ಅವರನ್ನು ತೊಲೆಯೊಂದಕ್ಕೆ ನೇತುಹಾಕಿದ. ಟೇಟ್‌ ಜೊತೆಯಲ್ಲಿ ಅವನು ಒರಟಾಗಿ ನಡೆದುಕೊಳ್ಳುತ್ತಿರುವುದನ್ನು ಕಂಡು ಸೆಬ್ರಿಂಗ್‌‌ ಪ್ರತಿಭಟಿಸಿದಾಗ, ಅದರಿಂದ ಪ್ರಚೋದಿತನಾದ ವ್ಯಾಟ್ಸನ್‌ ಅವನಿಗೆ ಗುಂಡಿಕ್ಕಿದ. ಫೋಲ್ಜರ್‌‌ಳನ್ನು ಅವಳ ಹಣದ ಚೀಲಕ್ಕಾಗಿ ಅಲ್ಪಕಾಲಿಕವಾಗಿ ಅವಳ ಶಯ್ಯಾಗೃಹಕ್ಕೆ ಕರೆದೊಯ್ಯಲಾಯಿತು; ಅದರಿಂದ 70$ ಮೊತ್ತದ ಹಣವನ್ನು ತೆಗೆದು ಸದರಿ ಆಕ್ರಮಣಕಾರರಿಗೆ ಅವಳು ನೀಡಿದಳು. ಅದಾದ ನಂತರ, ನರಳುತ್ತಿದ್ದ ಸೆಬ್ರಿಂಗ್‌ಗೆ ವ್ಯಾಟ್ಸನ್‌ ಏಳು ಬಾರಿ ಇರಿದ.[೨]:28–38[೪೬] ಫ್ರೈಕೊವ್ಸ್‌ಕಿಯ ಕೈಗಳನ್ನು ಒಂದು ಅಂಗವಸ್ತ್ರದಿಂದ ಬಿಗಿಯಲಾಗಿತ್ತು. ಸ್ವತಃ ಅದರಿಂದ ತಾನೇ ಬಿಡಿಸಿಕೊಂಡ ಫ್ರೈಕೊವ್ಸ್‌ಕಿ ಅಟ್ಕಿನ್ಸ್ ಜೊತೆಯಲ್ಲಿ ಸೆಣಸಾಡಲು ಶುರುಮಾಡಿದ; ಅವನನ್ನು ಕಾವಲು ಕಾಯಲೆಂದು ಇಟ್ಟುಕೊಂಡಿದ್ದ ಚಾಕುವಿನಿಂದಲೇ ಅವಳು ಅವನ ಕಾಲುಗಳಿಗೆ ಇರಿದಳು.[೪೬] ಮುಂಭಾಗದ ಬಾಗಿಲ ಕಡೆಗೆ ಮತ್ತು ಅದರಾಚೆಗಿನ ವರಾಂಡಕ್ಕೆ ಸಾಗಲು ಅವನು ಹೆಣಗಾಡುತ್ತಿದ್ದಂತೆ, ಅವನಿಗೆ ಎದುರಾಗಿ ವ್ಯಾಟ್ಸನ್‌‌ ಸೇರಿಕೊಂಡ. ತನ್ನ ಬಳಿಯಿದ್ದ ಬಂದೂಕಿನಿಂದ ಅವನ ತಲೆಯ ಮೇಲೆ ಅನೇಕ ಬಾರಿ ಪ್ರಹಾರವನ್ನು ಮಾಡಿದ ವ್ಯಾಟ್ಸನ್‌‌, ಅವನನ್ನು ಪದೇಪದೇ ಇರಿದ ಹಾಗೂ ಅವನಿಗೆ ಎರಡುಬಾರಿ ಗುಂಡಿಕ್ಕಿದ.[೪೬] ಈ ಪ್ರಕ್ರಿಯೆಯಲ್ಲಿ ವ್ಯಾಟ್ಸನ್‌ ಬಂದೂಕಿನ ಸರಿಯಾದ ಹಿಡಿತವನ್ನು ಕಳೆದುಕೊಂಡ. ಇದೇ ಸಮಯದ ಆಸುಪಾಸಿನಲ್ಲಿ, "ಭಯಹುಟ್ಟಿಸುವ ಧ್ವನಿಗಳನ್ನು" ಕೇಳಿಸಿಕೊಂಡ ಕಸಾಬಿಯನ್‌‌ ವಾಹನಪಥದಿಂದ ಮೇಲಕ್ಕೆ ಬಂದಳು. ಅವಳು ಬಾಗಿಲಿನ ಹೊರಭಾಗಕ್ಕೆ ಬಂದಳು. ಹತ್ಯಾಕಾಂಡವನ್ನು ನಿಲ್ಲಿಸುವ ಒಂದು ವ್ಯರ್ಥ ಪ್ರಯತ್ನದಲ್ಲಿ, ಯಾರೋ ಬರುತ್ತಿದ್ದಾರೆ ಎಂಬುದಾಗಿ ಅವಳು ಅಟ್ಕಿನ್ಸ್‌ಗೆ ಸುಳ್ಳು ಹೇಳಿದಳು.[೨]:258-269[೪೬] ಮನೆಯೊಳಗಡೆ ಕ್ರೆನ್‌ವಿಂಕೆಲ್‌ಳಿಂದ ತಪ್ಪಿಸಿಕೊಂಡಿದ್ದ ಫೋಲ್ಜರ್‌‌, ಶಯ್ಯಾಗೃಹದ ಬಾಗಿಲೊಂದರಿಂದ ಹೊರಕ್ಕೆ ಹಾರಿ ಹೊಂಡದ ಪ್ರದೇಶಕ್ಕೆ ಬಂದು ಬಿದ್ದಳು.[೨]:341-344, 356-361 ಫೋಲ್ಜರ್‌‌ಳನ್ನು ಮುಂಭಾಗದ ಹುಲ್ಲುಹಾಸಿನವರೆಗೆ ಬೆನ್ನಟ್ಟಿಕೊಂಡು ಬಂದ ಕ್ರೆನ್‌ವಿಂಕೆಲ್, ಅವಳನ್ನು ಇರಿದಳು– ಮತ್ತು ಅಂತಿಮವಾಗಿ, ಅವಳೊಡನೆ ಸೆಣಸಾಡಿ ನಿಭಾಯಿಸಿದಳು. ವ್ಯಾಟ್ಸನ್ ಅವಳನ್ನು ಸಾಯಿಸಿದ; ಅವಳ ಮೇಲೆ ಆಕ್ರಮಣ ಮಾಡಿದ ಇಬ್ಬರೂ ಅವಳಿಗೆ ಇಪ್ಪತ್ತೆಂಟು ಬಾರಿ ಇರಿದಿದ್ದರು.[೨]:28–38[೪೬] ಹುಲ್ಲುಹಾಸಿನ ಮೇಲೆ ಫ್ರೈಕೊವ್ಸ್‌ಕಿಯು ಹೆಣಗಾಡುತ್ತಿರುವಾಗ, ರಭಸದಿಂದ ಇರಿಯುವ ಮೂಲಕ ವ್ಯಾಟ್ಸನ್‌ ಅವನನ್ನು ಕೊಂದ. ಫ್ರೈಕೊವ್ಸ್‌ಕಿಯು ಒಟ್ಟು ಐವತ್ತೊಂದು ಬಾರಿ ಇರಿತಕ್ಕೆ ಒಳಗಾದ.[೨]:28–38, 258-269[೪೬] ಇತ್ತ ಮನೆಯೊಳಗಡೆ, ಅಟ್ಕಿನ್ಸ್‌ ಅಥವಾ ವ್ಯಾಟ್ಸನ್‌‌, ಅಥವಾ ಇಬ್ಬರೂ ಸೇರಿಕೊಂಡು ಟೇಟ್‌ಳನ್ನು ಸಾಯಿಸಿದರು; ಅವಳಿಗೆ ಹದಿನಾರು ಬಾರಿ ಇರಿಯಲಾಗಿತ್ತು.[೨]:28–38 ತನ್ನ ಮಗುವನ್ನು ಪಡೆಯುವವರೆಗಾದರೂ ತನ್ನ ಜೀವವನ್ನು ಉಳಿಸುವಂತೆ ಟೇಟ್‌ ಕೇಳಿಕೊಂಡಳು; ಅವಳು ಸಾವನ್ನಪ್ಪುವವರೆಗೂ "ಅಮ್ಮಾ... ಅಮ್ಮಾ..." ಎಂಬುದಾಗಿ ಅಳುತ್ತಲೇ ಇದ್ದಳು.[೪೬] ಇದಕ್ಕೂ ಮುಂಚಿತವಾಗಿ, ಸ್ಪಾಹ್ನ್‌‌ ಜಾನುವಾರು ಕ್ಷೇತ್ರದಿಂದ ಸಮುದಾಯದ ಈ ನಾಲ್ಕೂ ಮಂದಿ ಹೊರಡುವಾಗ, "ಒಂದು ರೀತಿಯಲ್ಲಿ ಕುರೂಪದ್ದಾಗಿರುವ ಚಿಹ್ನೆಯೊಂದನ್ನು ಉಳಿಸಿ ಬರುವಂತೆ" ಮ್ಯಾನ್ಸನ್‌‌ ಮಹಿಳೆಯರಿಗೆ ತಿಳಿಸಿದ್ದ.[೪೬] ಫ್ರೈಕೊವ್ಸ್‌ಕಿಯ ಕೈಗಳನ್ನು ಕಟ್ಟಿಹಾಕಿದ್ದ ಅಂಗವಸ್ತ್ರವನ್ನು ಬಳಸಿಕೊಂಡು, ಮನೆಯ ಮುಂಭಾಗದ ಬಾಗಿಲಿನ ಮೇಲೆ ಟೇಟ್‌ಳ ರಕ್ತದಲ್ಲಿ ಅಟ್ಕಿನ್ಸ್‌ "ಹಂದಿ"ಯನ್ನು ಬರೆದಳು. ಮನೆಗೆ ಹೋಗುವಾಗ ಮಾರ್ಗಮಧ್ಯದಲ್ಲಿ, ಕೊಲೆಗಾರರು ರಕ್ತಸಿಕ್ತವಾದ ಬಟ್ಟೆಗಳನ್ನು ಬದಲಾಯಿಸಿದರು; ಇವು ಅವರ ಆಯುಧಗಳ ಜೊತೆಯಲ್ಲಿ ಬೆಟ್ಟಗಳಲ್ಲಿ ಎಸೆಯಲ್ಪಟ್ಟವು.[೨]:84-90, 176-184[೪೬] ಸಿಬಿಲ್‌ ಬ್ರಾಂಡ್‌ ಇನ್‌‌ಸ್ಟಿಟ್ಯೂಟ್‌‌‌ನಲ್ಲಿನ ತನ್ನ ಸೆರೆಕೋಣೆಯ ಒಡನಾಡಿಗಳ ಬಳಿಯಲ್ಲಿ ಆರಂಭದಲ್ಲಿ ತಪ್ಪೊಪ್ಪಿಕೊಳ್ಳುವಾಗ, ಟೇಟ್‌ಳನ್ನು ತಾನೇ ಸಾಯಿಸಿದ್ದಾಗಿ ಅಟ್ಕಿನ್ಸ್‌ ಹೇಳಿದಳು.[೨]:84-90 ತನ್ನ ನ್ಯಾಯವಾದಿಗೆ, ಅಭಿಯೋಜಕ ವಿನ್ಸೆಂಟ್‌ ಬುಗ್ಲಿಯೊಸಿಗೆ ಮತ್ತು ನ್ಯಾಯದರ್ಶಿಗಳ ಮಹಾಮಂಡಲಿಯೊಂದರ ಸಮ್ಮುಖದಲ್ಲಿ ನಂತರದಲ್ಲಿ ಅಟ್ಕಿನ್ಸ್‌ ನೀಡಿದ ಹೇಳಿಕೆಗಳಲ್ಲಿ, ಟೆಕ್ಸ್‌‌ ವ್ಯಾಟ್ಸನ್‌‌ನಿಂದ ಟೇಟ್‌ ಇರಿತಕ್ಕೊಳಗಾದಳು ಎಂಬುದಾಗಿ ಸೂಚಿಸಿದಳು‌.[೨]:163-174, 176-184 1978ರಲ್ಲಿ ಬಂದ ತನ್ನ ಆತ್ಮಚರಿತ್ರೆಯಲ್ಲಿ ಈ ಕುರಿತಾಗಿ ಬರೆದ ವ್ಯಾಟ್ಸನ್‌‌, ತಾನು ಟೇಟ್‌ಳನ್ನು ಇರಿದುದಾಗಿಯೂ, ಅಟ್ಕಿನ್ಸ್‌ ಇರಿಯಲಿಲ್ಲ ಎಂಬುದಾಗಿಯೂ ಸ್ವತಃ ತಿಳಿಸಿದ.[೪೬] ಅಭಿಯೋಜಕನಾದ ಬಗ್ಲಿಯೋಸಿ, ಮತ್ತು ಇತರ ಟೇಟ್‌-ಲೇಬಿಯಾಂಕಾ ಪ್ರತಿವಾದಿಗಳನ್ನು ಪ್ರಯತ್ನಿಸಿದ ನ್ಯಾಯದರ್ಶಿ ಮಂಡಲಿಗೆ ಟೇಟ್‌ಳನ್ನು ಅಟ್ಕಿನ್ಸ್‌ಳೇ ಇರಿದಳು ಎಂಬುದು ಮನವರಿಕೆಯಾಗಿದೆ ಎಂಬುದನ್ನು ಅವನು ಅರಿತಿದ್ದರಿಂದ, ಅವಳನ್ನು ತಾನು ಇರಿಯಲಿಲ್ಲ ಎಂಬುದಾಗಿ ಆತ ತಪ್ಪಾಗಿ ಸಾಕ್ಷ್ಯ ನೀಡಿದ.[೪೭] ಲೇಬಿಯಾಂಕಾ ಕೊಲೆಗಳುಸಂಪಾದಿಸಿ ಮಾರನೆಯ ರಾತ್ರಿ, ಸಮುದಾಯದ ಆರು ಮಂದಿ ಸದಸ್ಯರು ಮ್ಯಾನ್ಸನ್‌‌ನ ಸೂಚನೆಯ ಅನುಸಾರ ಹೊರಗೆ ಸವಾರಿ ಹೊರಟರು; ಲೆಸ್ಲಿ ವಾನ್‌ ಹೌಟನ್‌, ಸ್ಟೀವ್‌‌ "ಕ್ಲೆಮ್‌‌" ಗ್ರೋಗನ್‌‌ ಇವರುಗಳ ಜೊತೆಯಲ್ಲಿ ಹಿಂದಿನ ರಾತ್ರಿ ಸೇರಿದ್ದ ನಾಲ್ವರೂ ಜೊತೆಗೂಡಿದರು. ಸಿಯೆಲೊ ಡ್ರೈವ್‌ನಲ್ಲಿದ್ದ ಬಲಿಪಶುಗಳ ಕಂಗಾಲಿನಿಂದ ಅಸಂತುಷ್ಟನಾಗಿದ್ದ ಮ್ಯಾನ್ಸನ್‌‌, ಈ ಆರುಮಂದಿಯ ಜೊತೆಗೂಡಿದ; "ಇಂಥ ಕೃತ್ಯವನ್ನು ಹೇಗೆ ಎಸಗಬೇಕು ಎಂಬುದನ್ನು ಅವರಿಗೆ ತೋರಿಸುವುದು ಅವನ ಉದ್ದೇಶವಾಗಿತ್ತು."[೨]:176-184, 258-269[೪೮] ಅನೇಕ ಕೊಲೆಗಳ ಕುರಿತು ಅವನು ಲೆಕ್ಕಾಚಾರ ಹಾಕಿದ್ದನ್ನು ಮತ್ತು ಅವುಗಳ ಪೈಕಿ ಒಂದಕ್ಕೆ[೨]:258-269[೪೮] ಅವನು ಪ್ರಯತ್ನವನ್ನು ಪಟ್ಟಿದ್ದನ್ನೂ ಒಳಗೊಂಡಿದ್ದ ಕೆಲ ಗಂಟೆಗಳ ಸವಾರಿಯ ನಂತರ, ಆತ ಕಸಾಬಿಯನ್‌‌ಳಿಗೆ ಸೂಚನೆಗಳನ್ನು ನೀಡಿದ ಪರಿಣಾಮವಾಗಿ, 3301 ವೇವರ್ಲಿ ಡ್ರೈವ್‌ ತಾಣಕ್ಕೆ ಆ ಗುಂಪು ಬಂದಿತು. ಸೂಪರ್‌‌ಮಾರ್ಕೆಟ್‌ನಲ್ಲಿ ಕಾರ್ಯನಿರ್ವಾಹಕನಾಗಿರುವ ಲೆನೊ ಲೇಬಿಯಾಂಕಾ ಹಾಗೂ ದಿರಿಸುಗಳ ಅಂಗಡಿಯ ಸಹ-ಮಾಲೀಕಳಾಗಿರುವ ಅವನ ಪತ್ನಿ ರೋಸ್‌ಮೆರಿ ಎಂಬುವರಿಗೆ ಸೇರಿದ ಮನೆ ಇದಾಗಿತ್ತು.[೨]:22-25, 42-48 ಲಾಸ್‌ ಏಂಜಲೀಸ್‌ನ ಲಾಸ್‌ ಫೆಲಿಜ್‌‌ ವಿಭಾಗದಲ್ಲಿ ನೆಲೆಗೊಂಡಿದ್ದ ಈ ಮನೆಯು, ಹಿಂದಿನ ವರ್ಷದಲ್ಲಿ ಮ್ಯಾನ್ಸನ್‌‌ ಮತ್ತು ಅವನ ಸಮುದಾಯದ ಸದಸ್ಯರು ಸಂತೋಷಕೂಟವೊಂದರಲ್ಲಿ ಭಾಗವಹಿಸಿದ್ದ ಮನೆಯೊಂದರ ಪಕ್ಕದಲ್ಲಿದ್ದ ಮನೆಯಾಗಿತ್ತು.[೨]:176-184, 204-210 ಅಟ್ಕಿನ್ಸ್‌ ಮತ್ತು ಕಸಾಬಿಯನ್‌‌ ಹೇಳಿದ ಅನುಸಾರ, ವಾಹನಪಥದ ಮೇಲ್ಭಾಗದಲ್ಲಿ ಕಣ್ಮರೆಯಾದ ಮ್ಯಾನ್ಸನ್‌‌, ಮತ್ತೆ ಹಿಂದಿರುಗಿ ಬಂದು ಮನೆಯ ನಿವಾಸಿಗಳನ್ನು ತಾನು ಕಟ್ಟಿಹಾಕಿರುವುದಾಗಿ ತಿಳಿಸಿದ; ನಂತರ ಆತ, ಕ್ರೆನ್‌ವಿಂಕೆಲ್‌‌ ಮತ್ತು ವ್ಯಾನ್‌ ಹೌಟನ್‌ ಜೊತೆಯಲ್ಲಿ ವ್ಯಾಟ್ಸನ್‌‌ನ್ನು ಮೇಲಕ್ಕೆ ಕಳಿಸಿದ.[೨]:176-184, 258-269 ಮತ್ತೊಂದೆಡೆ, ತನ್ನ ಆತ್ಮಚರಿತ್ರೆಯಲ್ಲಿ ವ್ಯಾಟ್ಸನ್‌‌ ವಿವರಿಸಿದ ಪ್ರಕಾರ, ಮೇಲ್ಭಾಗಕ್ಕೆ ಒಬ್ಬನೇ ಹೋದ ಮ್ಯಾನ್ಸನ್‌‌ ತನ್ನೊಂದಿಗೆ ಮನೆಯ ಮೇಲ್ಭಾಗಕ್ಕೆ ವ್ಯಾಟ್ಸನ್‌ನ್ನು ಕರೆದೊಯ್ಯಲೆಂದು ಹಿಂದಿರುಗಿದ. ವ್ಯಕ್ತಿಯೋರ್ವ ಮಲಗಿರುವುದನ್ನು ಕಿಟಕಿಯೊಂದರ ಮೂಲಕ ಮ್ಯಾನ್ಸನ್‌‌ ತೋರಿಸಿದ ಮೇಲೆ, ಈ ಇಬ್ಬರೂ ಸಹ ಬೀಗಹಾಕಿರದ ಹಿಂಬಾಗಿಲ ಮೂಲಕ ಒಳಪ್ರವೇಶಿಸಿದರು.[೪೮] ವಿಚಾರಣೆಯ ಸಮಯದಲ್ಲಿ ಇದಕ್ಕೆ ಮತ್ತಷ್ಟು ಅಂಶಗಳನ್ನು ಸೇರಿಸಿದ ವ್ಯಾಟ್ಸನ್‌‌, ಅವನು ಮಹಿಳೆಯರ ಪರಿಗಣನೆಯ ಜೊತೆಗೆ ಹೋದ; ಈ ಕ್ರಮವು ಹೆಚ್ಚು ಜವಾಬ್ದಾರಿಯನ್ನು ಹೊಂದಿಲ್ಲದವರನ್ನು ಅವನು ನೋಡುವಂತೆ ಮಾಡಿತು" ಎಂದು ತಿಳಿಸಿದ.[೪೭] ಈ ಕುರಿತು ವ್ಯಾಟ್ಸನ್‌ ಹೇಳುವಂತೆ, ಕೋವಿ ತೋರಿಸಿ ಬೆದರಿಸುವ ಮೂಲಕ, ಮಲಗಿದ್ದ ಲೆನೊ ಲೇಬಿಯಾಂಕಾನನ್ನು ಒರಗುಮಂಚದಿಂದ ಎಬ್ಬಿಸಿದ ಮ್ಯಾನ್ಸನ್‌‌, ಒಂದು ಚರ್ಮದ ಪಟ್ಟಿಯಿಂದ ಅವನ ಕೈಗಳನ್ನು ಕಟ್ಟುವಂತೆ ವ್ಯಾಟ್ಸನ್‌‌ಗೆ ಅವಕಾಶ ನೀಡಿದ್ದ. ರೋಸ್‌ಮೆರಿ ಲೇಬಿಯಾಂಕಾಳನ್ನು ಶಯ್ಯಾಗೃಹದಿಂದ ವಾಸದ ಕೊಠಡಿಯೊಳಕ್ಕೆ ತಂದ ನಂತರ, ಮ್ಯಾನ್ಸನ್‌‌ನ ಸೂಚನೆಗಳ ಅನುಸಾರ ಆ ಜೋಡಿಯ ತಲೆಗಳನ್ನು ದಿಂಬಿನ ಚೀಲಗಳಿಂದ ವ್ಯಾಟ್ಸನ್‌ ಮುಚ್ಚಿದ. ದೀಪದ ಹುರಿಗಳಿಂದ ಅವನ್ನು ಆತ ಕಟ್ಟಿಹಾಕಿದ. ಆ ಜೋಡಿಯನ್ನು ಸಾಯಿಸಬೇಕು ಎಂಬ ಸೂಚನೆಗಳನ್ನು ನೀಡುವುದರೊಂದಿಗೆ ಕ್ರೆನ್‌ವಿಂಕೆಲ್‌‌ ಮತ್ತು ಲೆಸ್ಲಿ ವಾನ್‌ ಹೌಟನ್‌‌‌ರನ್ನು ಮನೆಯೊಳಗೆ ಕಳಿಸಿದ ಮ್ಯಾನ್ಸನ್‌‌ ಅಲ್ಲಿಂದ ತೆರಳಿದ.[೨]:176-184, 258-269[೪೮] ಹತ್ಯೆಗಳುಸಂಪಾದಿಸಿ ಸ್ಪಾಹ್ನ್‌‌ ಜಾನುವಾರು ಕ್ಷೇತ್ರವನ್ನು ಬಿಡುವುದಕ್ಕೆ ಮುಂಚಿತವಾಗಿ, ಹಿಂದಿನ ರಾತ್ರಿ ಆಯುಧಗಳ ಕೊರತೆ ಕಂಡುಬಂದಿದ್ದರ ಕುರಿತಾಗಿ ಮ್ಯಾನ್ಸನ್‌‌ನಲ್ಲಿ ವ್ಯಾಟ್ಸನ್‌‌ ದೂರಿದ್ದ.[೨]:258-269 ರೋಸ್‌ಮೆರಿ ಲೇಬಿಯಾಂಕಾ ಹಿಂದಿರುಗಿದ್ದ ಶಯ್ಯಾಗೃಹಕ್ಕೆ ಈಗ ಅಡುಗೆಮನೆಯಿಂದ ಮಹಿಳೆಯರನ್ನು ಕಳಿಸಿದ ಆತ, ವಾಸದ ಕೊಠಡಿಗೆ ತೆರಳಿದ ಮತ್ತು ಕ್ರೋಮ್‌-ಲೇಪಿತವಾಗಿದ್ದ ಒಂದು ತಿವಿಯುವ ಅಲಗನ್ನು ಬಳಸಿಕೊಂಡು ಲೆನೊ ಲೇಬಿಯಾಂಕಾನನ್ನು ಇರಿಯಲು ಶುರುಮಾಡಿದ. ಮೊದಲ ಹೊಡೆತವು ಆ ವ್ಯಕ್ತಿಯ ಗಂಟಲೊಳಗೆ ಇಳಿಯಿತು.[೪೮] ಶಯ್ಯಾಗೃಹದಲ್ಲಿ ತಳ್ಳಾಟದ ಕಾದಾಟವೊಂದರ ಧ್ವನಿಗಳನ್ನು ಕೇಳಿಸಿಕೊಂಡ ವ್ಯಾಟ್ಸನ್‌‌ ಅಲ್ಲಿಗೆ ಧಾವಿಸಿದ; ಅಲ್ಲಿ ಶ್ರೀಮತಿ ಲೇಬಿಯಾಂಕಾಳು ತನ್ನ ಕುತ್ತಿಗೆಗೆ ಕಟ್ಟಲಾಗಿದ್ದ ದೀಪವನ್ನು ತೂಗಾಡಿಸುವ ಮೂಲಕ ಅಲ್ಲಿನ ಮಹಿಳೆಯರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿರುವುದನ್ನು ಅವನು ಕಂಡುಕೊಂಡ. ತಿವಿಯುವ ಅಲಗನ್ನು ಬಳಸಿಕೊಂಡು ಹಲವಾರು ಬಾರಿ ಇರಿಯುವ ಮೂಲಕ ಅವಳನ್ನು ನಿಗ್ರಹಿಸಿದ ನಂತರ ವಾಸದ ಕೊಠಡಿಗೆ ಹಿಂದಿರುಗಿದ ಆತ, ಲೆನೊವಿನ ಮೇಲೆ ಮತ್ತೆ ದಾಳಿಯನ್ನು ಶುರುಮಾಡಿದ; ಅಷ್ಟೇ ಅಲ್ಲ, ತಿವಿಯುವ ಅಲಗಿನಿಂದ ಅವನನ್ನು ಉಳಿದ ಹನ್ನೆರಡು ಬಾರಿಯವರೆಗೆ ಇರಿದ. ತನ್ನ ಕೃತ್ಯವನ್ನು ಮುಗಿಸಿದ ನಂತರ, ಆ ವ್ಯಕ್ತಿಯ ತೆರೆದುಕೊಂಡಿದ್ದ ಕಿಬ್ಬೊಟ್ಟೆಯ ಮೇಲೆ "WAR" ಎಂಬುದಾಗಿ ವ್ಯಾಟ್ಸನ್‌‌ ಕೆತ್ತಿದ. ಇದನ್ನು ಅವನು ತನ್ನ ಆತ್ಮಚರಿತ್ರೆಯಲ್ಲಿ ವಿವರಿಸಿದ್ದಾನೆ.[೪೮] ನ್ಯಾಯದರ್ಶಿಗಳ ಮಹಾಮಂಡಲಿಯ ಸಮ್ಮುಖದಲ್ಲಿ ತಾನು ನೀಡಿದ ಕಟ್ಟಕಡೆಯ ಸಾಕ್ಷ್ಯದ ಒಂದು ಅಸ್ಪಷ್ಟ ಭಾಗದಲ್ಲಿ, ಲೇಬಿಯಾಂಕಾ ಮನೆಯನ್ನು ಪ್ರವೇಶಿಸದ ಅಟ್ಕಿನ್ಸ್‌, ಆ ಪದವನ್ನು ಕ್ರೆನ್‌ವಿಂಕೆಲ್‌ ಕೆತ್ತಿರಬೇಕು ಎಂದು ತಾನು ನಂಬಿದುದಾಗಿ ಪ್ರಾಯಶಃ ಹೇಳಿದಳು.[೨]:176-184[೪೯] ಅನಾಮಿಕವಾಗಿ ಬರೆಯಲ್ಪಟ್ಟ ವೃತ್ತಪತ್ರಿಕೆಯ ವರದಿಯೊಂದು, ತನ್ನ ನ್ಯಾಯವಾದಿಗೆ[೨]:160,193 ಈ ಹಿಂದೆ ಅವಳು ನೀಡಿದ್ದ ಒಂದು ಹೇಳಿಕೆಯನ್ನು ಆಧರಿಸಿತ್ತು; ಆ ಪದವನ್ನು ವ್ಯಾಟ್ಸನ್‌ ಕೆತ್ತಿದ ಎಂಬುದಾಗಿ ಹಿಂದೆ ಅವಳು ಹೇಳಿದ್ದಳು.[೫೦] ಶಯ್ಯಾಗೃಹಕ್ಕೆ ಹಿಂದಿರುಗುತ್ತಿದ್ದ ವ್ಯಾಟ್ಸನ್‌, ಲೇಬಿಯಾಂಕಾಳ ಅಡುಗೆಮನೆಯಿಂದ ತೆಗೆದುಕೊಂಡ ಒಂದು ಚಾಕುವಿನಿಂದ ರೋಸ್‌ಮೆರಿ ಲೇಬಿಯಾಂಕಾಳನ್ನು ಕ್ರೆನ್‌ವಿಂಕೆಲ್‌ ಇರಿಯುತ್ತಿದ್ದುದನ್ನು ಕಂಡ. ಗುಂಪಿನ ಪ್ರತಿಯೊಬ್ಬ ಮಹಿಳೆಯೂ ತನ್ನದೇ ಆದ ಒಂದು ಪಾತ್ರವನ್ನು ವಹಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂಬುದಾಗಿ ಮ್ಯಾನ್ಸನ್‌‌ನಿಂದ ದೊರಕಿದ್ದ ಸೂಚನೆಯ ಕುರಿತು ಎಚ್ಚರಿಕೆಯಿಂದಿದ್ದ ವ್ಯಾಟ್ಸನ್‌‌, ಶ್ರೀಮತಿ ಲೇಬಿಯಾಂಕಾಳನ್ನೂ ಸಹ ಇರಿಯುವಂತೆ ವ್ಯಾನ್‌ ಹೌಟನ್‌ಳಿಗೆ ತಿಳಿಸಿದ.[೪೮] ಅವಳ ಬೆನ್ನಿನ ಭಾಗ ಮತ್ತು ತೆರೆದುಕೊಂಡಿದ್ದ ಪೃಷ್ಟಗಳಲ್ಲಿ ಸರಿಸುಮಾರಾಗಿ 16 ಬಾರಿ ಇರಿಯುವ ಮೂಲಕ, ಅವಳು ಅವನ ಸೂಚನೆಯನ್ನು ಪಾಲಿಸಿದಳು.[೨]:204-210, 297-300, 341-344 ರೋಸ್‌ಮೆರಿ ಲೇಬಿಯಾಂಕಾಳನ್ನು ಅವಳು ಇರಿದಾಗ, ಅವಳಾಗಲೇ ಸತ್ತಿದ್ದಳು ಎಂಬುದಾಗಿ ವಿಚಾರಣೆಯ ಸಮಯದಲ್ಲಿ ವ್ಯಾನ್‌ ಹೌಟನ್‌ ಅನಿಶ್ಚಿತವಾಗಿ[೨]:433 ಸಮರ್ಥಿಸಿಕೊಂಡಳು. ಇದಕ್ಕೆ ಸಂಬಂಧಿಸಿದ ಪುರಾವೆಯು ತೋರಿಸಿದ ಪ್ರಕಾರ, ಶ್ರೀಮತಿ ಲೇಬಿಯಾಂಕಾಳ ದೇಹದ ಮೇಲೆ ಆಗಿದ್ದ ನಲವತ್ತೊಂದು ಇರಿತದ ಗಾಯಗಳ ಪೈಕಿ ಅನೇಕವು ವಾಸ್ತವವಾಗಿ ಮರಣೋತ್ತರವಾಗಿ ಉಂಟುಮಾಡಲ್ಪಟ್ಟ ಗಾಯಗಳಾಗಿದ್ದವು ಎಂದು ತಿಳಿದುಬಂತು.[೨]:44, 206, 297, 341–42, 380, 404, 406–07, 433 ತಿವಿಯುವ ಅಲಗನ್ನು ಸ್ವಚ್ಛಗೊಳಿಸಿ ನೀರಿನ ಧಾರೆಯಿಂದ ಅದನ್ನು ತೊಳೆಯಲು ವ್ಯಾಟ್ಸನ್‌ ಮುಂದಾದರೆ, ಲೇಬಿಯಾಂಕಾಳ ರಕ್ತವನ್ನು ಬಳಸಿಕೊಂಡು ಗೋಡೆಗಳ ಮೇಲೆ "ಉದಯ" ಮತ್ತು "ಹಂದಿಗಳಿಗಾದ ಸಾವು" ಎಂಬುದಾಗಿಯೂ, ರೆಫ್ರಿಜರೇಟರ್‌‌ ಬಾಗಿಲಿನ ಮೇಲೆ "ಹೀಲ್ಟರ್‌‌ [ಈ ರೀತಿ] ಸ್ಕೆಲ್ಟರ್‌‌" ಎಂಬುದಾಗಿಯೂ ಕ್ರೆನ್‌ವಿಂಕೆಲ್‌ ಬರೆದಳು. ದಂತದ-ಹಿಡಿಕೆಯ, ಎರಡು-ಮೊನೆಯುಳ್ಳ ಒಂದು ಕೆತ್ತುವ ಕವಲುಗೋಲಿನಿಂದ ಲೆನೊ ಲೇಬಿಯಾಂಕಾಗೆ ಹದಿನಾಲ್ಕು ಚುಚ್ಚು ಗಾಯಗಳನ್ನು ಉಂಟುಮಾಡಿದ ಅವಳು, ಅವನ ಹೊಟ್ಟೆಯಿಂದ ಹೊರಕ್ಕೆ ಅದು ಮುಂಚಾಚಿಕೊಂಡಿರುವ ರೀತಿಯಲ್ಲಿ ಅಲ್ಲಿಯೇ ಉಳಿಸಿದಳು. ಅವನ ಗಂಟಲಿನಲ್ಲಿ ಒಂದು ಹರಿತವಾದ ಹಲ್ಲಿನ ಚಾಕುವನ್ನೂ ಸಹ ಅವಳು ನೆಟ್ಟಳು.[೨]:176-184, 258-269[೪೮] ಒಂದು ಜೋಡಿ ಅಪರಾಧದ ಭರವಸೆಯೊಂದಿಗೆ, ಕಸಾಬಿಯನ್‌‌ಳಿಗೆ ನಿರ್ದೇಶನವನ್ನು ನೀಡಲು ಮ್ಯಾನ್ಸನ್‌‌ ಹೋಗಿದ್ದ; ಮತ್ತೊಂದು "ಹಂದಿಮರಿ" ಎಂದು ಪರಿಗಣಿಸಲ್ಪಟ್ಟಿದ್ದ, ಅವಳ ಓರ್ವ ಪರಿಚಯಸ್ಥ ನಟನ ವೆನಿಸ್‌ ಮನೆಗೆ ಸಾಗುವಂತೆ ಕಸಾಬಿಯನ್‌‌ಳಿಗೆ ನಿರ್ದೇಶನ ನೀಡುವುದು ಅವನ ಉದ್ದೇಶವಾಗಿತ್ತು. ಆ ವ್ಯಕ್ತಿಯ ವಾಸದ ಮಹಡಿಯ ಕಟ್ಟಡದ ಬಳಿ ಸಮುದಾಯದ ಸದಸ್ಯರ ಎರಡನೇ ತ್ರಯರ ಗುಂಪನ್ನು ಒಟ್ಟುಗೂಡಿಸಿದ ಅವನು, ಸ್ಪಾಹ್ನ್‌‌ ಜಾನುವಾರು ಕ್ಷೇತ್ರಕ್ಕೆ ವಾಹನವನ್ನು ಚಾಲಿಸಿಕೊಂಡು ಹೊರಟು, ಅವರನ್ನು ಮತ್ತು ಲೇಬಿಯಾಂಕಾ ಕೊಲೆಗಾರನ್ನು ಬಿಟ್ಟಿ ಪ್ರಯಾಣ ಮನೆಗೆ ಸೇರಿಸಿದ.[೨]:176-184, 258-269 ತಪ್ಪಾದ ವಾಸದ ಮಹಡಿಮನೆಯ ಬಾಗಿಲನ್ನು ಉದ್ದೇಶಪೂರ್ವಕವಾಗಿ ಬಡಿದು ಅಪರಿಚಿತನೋರ್ವನನ್ನು ಎಬ್ಬಿಸುವ ಮೂಲಕ, ಕಸಾಬಿಯನ್‌‌ ಈ ಕೊಲೆಗೆ ಅಡ್ಡಿಯಾದಳು. ಕೊಲೆ ಯೋಜನೆಯನ್ನು ಕೈಬಿಟ್ಟ ಗುಂಪು ಆ ಜಾಗವನ್ನು ಖಾಲಿಮಾಡುತ್ತಿದ್ದಂತೆ, ಸುಸಾನ್‌ ಅಟ್ಕಿನ್ಸ್‌ ಮೆಟ್ಟಿಲಬಾವಿಯಲ್ಲಿ ಮಲವಿಸರ್ಜನೆ ಮಾಡಿಕೊಂಡಳು.[೨]:270-273 1969ರ ಆಗಸ್ಟ್‌‌ 9ರಂದು ಟೇಟ್‌ ಕೊಲೆಗಳು ಸುದ್ದಿಯಾಗಿ ಮಾರ್ಪಟ್ಟವು. ಪೋಲನ್ಸ್‌ಕಿ ದಂಪತಿಗಳ ಮನೆವಾರ್ತೆಯವಳಾದ ವಿನಿಫ್ರೆಡ್‌ ಚಾಪ್‌ಮನ್ ತನ್ನ ಕೆಲಸಕ್ಕಾಗಿ ಅಂದು ಬೆಳಗ್ಗೆ ಬಂದಾಗ, ಕೊಲೆ ದೃಶ್ಯವನ್ನು ಕಂಡಳು.[೨]:5-6, 11-15 ಆಗಸ್ಟ್‌‌ 10ರಂದು, ಹಿನ್ಮನ್‌‌ ಪ್ರಕರಣದಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದ ಲಾಸ್‌ ಏಂಜಲೀಸ್‌ ಜಿಲ್ಲೆಯ ಶಾಂತಿಪಾಲನಾ ಇಲಾಖೆಯ ಪತ್ತೆದಾರರು, ಟೇಟ್‌ ಪ್ರಕರಣದ ಕುರಿತು ತನಿಖೆ ನಡೆಸಲು ನಿಯೋಜಿಸಲ್ಪಟ್ಟಿದ್ದ ಲಾಸ್‌ ಏಂಜಲೀಸ್‌ ಆರಕ್ಷಕ ಇಲಾಖೆಯ (ಲಾಸ್‌ ಏಂಜಲೀಸ್‌ ಪೊಲೀಸ್‌ ಡಿಪಾರ್ಟ್‌ಮೆಂಟ್‌-LAPD) ಪತ್ತೆದಾರರಿಗೆ ಹಿನ್ಮನ್‌‌ ಮನೆಯಲ್ಲಿ ಕಂಡುಬಂದ ರಕ್ತಸಿಕ್ತವಾದ ಬರಹದ ಕುರಿತು ಮಾಹಿತಿ ನೀಡಿದರು. ಮಾದಕವಸ್ತುವಿಗೆ ಸಂಬಂಧಿಸಿದ ವ್ಯವಹಾರವೊಂದರ ಪರಿಣಾಮವಾಗಿ ಟೇಟ್‌ ಕೊಲೆಗಳು ನಡೆದಿವೆ ಎಂಬ ಆಲೋಚನಾಲಹರಿಯನ್ನು ಹೊಂದಿದ್ದ ಟೇಟ್‌ ತಂಡವು ಇದನ್ನು ಹಾಗೂ ಅಪರಾಧಗಳ ಇತರ ಹೋಲಿಕೆಗಳನ್ನು ಉಪೇಕ್ಷಿಸಿತು.[೨]:28–38[೫೧] ಟೇಟ್‌ ಶವಪರೀಕ್ಷೆಗಳು ಪ್ರಗತಿಯಲ್ಲಿದ್ದವು ಮತ್ತು ಲೇಬಿಯಾಂಕಾ ದೇಹಗಳನ್ನು ಇನ್ನೂ ಪತ್ತೆಹಚ್ಚುವುದು ಬಾಕಿಯಿತ್ತು. ಟೇಟ್‌ ವಾಹನಪಥದಲ್ಲಿ ಗುಂಡಿಕ್ಕುವಿಕೆಗೆ ಬಲಿಯಾದ ಸ್ಟೀವನ್‌ ಪೇರೆಂಟ್‌, ಅತಿಥಿಗೃಹದಲ್ಲಿ ವಾಸಿಸುತ್ತಿದ್ದ ವಿಲಿಯಂ ಗ್ಯಾರೆಸ್ಟನ್‌‌ನ ಓರ್ವ ಪರಿಚಯಸ್ಥನಾಗಿದ್ದ ಎಂಬುದಾಗಿ ನಿರ್ಣಯಿಸಲ್ಪಟ್ಟ. ಗ್ಯಾರೆಸ್ಟನ್‌‌ ಓರ್ವ ಯುವಕನಾಗಿದ್ದು ಅವನನ್ನು ರೂಡಿ ಆಲ್ಟೊಬೆಲ್ಲಿಯು ಎರವಲು ಸೇವೆಗೆ ನೇಮಿಸಿಕೊಂಡಿದ್ದ; ಆಲ್ಟೊಬೆಲ್ಲಿಯು ಸ್ವತಃ ಸ್ಥಳದಿಂದ ಆಚೆಯಿದ್ದಾಗ ಅವನ ಸ್ವತ್ತಿನ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವುದು ಗ್ಯಾರೆಸ್ಟನ್‌‌ಗೆ ವಹಿಸಿದ ಕೆಲಸವಾಗಿತ್ತು.[೨]:28–38 ಕೊಲೆಗಾರರು ಆಗಮಿಸಿದ ಸಂದರ್ಭದಲ್ಲಿ, ಗ್ಯಾರೆಸ್ಟನ್‌‌ನೊಂದಿಗಿನ ಒಂದು ಭೇಟಿಯ ನಂತರ ಪೇರೆಂಟ್‌ ಸಿಯೆಲೊ ಡ್ರೈವ್‌ನ್ನು ಬಿಟ್ಟು ತೆರಳುತ್ತಿದ್ದ‌‌.[೨]:28–38 ಟೇಟ್‌ ಕೊಲೆಯ ಓರ್ವ ಶಂಕಿತನಾಗಿ ಸಂಕ್ಷಿಪ್ತ ಅವಧಿಗೆ ವಶಕ್ಕೆ ತೆಗೆದುಕೊಳ್ಳಲ್ಪಟ್ಟ ಗ್ಯಾರೆಸ್ಟನ್‌ ಆರಕ್ಷಕರೊಂದಿಗೆ ಮಾತನಾಡುತ್ತಾ, ಕೊಲೆ ನಡೆದ ರಾತ್ರಿಯಂದು ತಾನು ಏನನ್ನೂ ನೋಡಲಿಲ್ಲ, ಏನನ್ನೂ ಕೇಳಿಸಿಕೊಳ್ಳಲಿಲ್ಲ ಎಂದು ತಿಳಿಸಿದ. ಆತ ಸದರಿ ಅಪರಾಧಗಳಲ್ಲಿ ತೊಡಗಿಸಿಕೊಂಡಿರಲಿಲ್ಲ ಎಂಬುದಾಗಿ ಸೂಚಿಸಿದ ಸುಳ್ಳು ಪತ್ತೆಕಾರಕ ಪರೀಕ್ಷೆಯೊಂದರಲ್ಲಿ ಅವನು ಭಾಗಿಯಾದ ನಂತರ, 1969ರ ಆಗಸ್ಟ್‌‌ 11ರಂದು ಅವನು ಬಿಡುಗಡೆಯಾದ.[೨]:28–38, 42-48 ದಶಕಗಳ ನಂತರದಲ್ಲಿ ಅವನನ್ನು ಸಂದರ್ಶಿಸಿದಾಗ, ಪರೀಕ್ಷೆಯು ಸೂಚಿಸಿದಂತೆ ತಾನು ವಾಸ್ತವವಾಗಿ ಕೊಲೆಗಳ ಒಂದು ಭಾಗಕ್ಕೆ ಸಾಕ್ಷಿಯಾಗಿದ್ದುದನ್ನು ಅವನು ಹೇಳಿಕೊಂಡ. (ಕೆಳಗೆ ನೀಡಿರುವ "ನಂತರದ ಘಟನೆಗಳು" ವಿಭಾಗವನ್ನು ನೋಡಿ.)[೫೨] ಕೊಲೆಗಳು ನಡೆದ ಸರಿಸುಮಾರು 19 ಗಂಟೆಗಳ ನಂತರ, ಆಗಸ್ಟ್‌‌ 10ರಂದು ಬೆಳಗ್ಗೆ ಸುಮಾರು 10:30ರ ವೇಳೆಗೆ, ಲೇಬಿಯಾಂಕಾ ಅಪರಾಧದ ದೃಶ್ಯವು ಪತ್ತೆಹಚ್ಚಲ್ಪಟ್ಟಿತು. ಹಿಂದೆ ನಡೆದಿದ್ದ ಒಂದು ಮದುವೆಯಿಂದ ರೋಸ್‌ಮೆರಿಯು ಪಡೆದಿದ್ದ ಮಗನಾದ ಹಾಗೂ ಲೆನೊನ ಮಲಮಗನಾದ ಹದಿನೈದು-ವರ್ಷ-ವಯಸ್ಸಿನ ಫ್ರಾಂಕ್‌‌ ಸ್ಟ್ರೂಥರ್ಸ್‌, ಒಂದು ಶಿಬಿರಸಂಬಂಧಿ ಪ್ರವಾಸದಿಂದ ಹಿಂದಿರುಗಿದ ಹಾಗೂ ಮನೆಯ ಹೊರಗಿನ ಸ್ಥಿತಗತಿಯನ್ನು ಕಂಡು ಅವನು ಘಾಸಿಗೊಂಡ. ತನ್ನ ಹಿರಿಯ ಸೋದರಿ ಮತ್ತು ಅವಳ ಸಂಗಾತಿಯನ್ನು ಅವನು ಕರೆಸಿಕೊಂಡ. ಹಿರಿಯ ಸೋದರಿಯ ಸಂಗಾತಿಯಾದ ಜೋ ಡೋರ್ಗಾನ್‌‌, ಫ್ರಾಂಕ್‌ ಸ್ಟ್ರೂಥರ್ಸ್‌ ಜೊತೆಗೂಡಿ ಮನೆಯೊಳಗೆ ಹೋದ ಮತ್ತು ಲೆನೊನ ಶರೀರವನ್ನು ಅಲ್ಲಿ ಕಂಡುಕೊಂಡ. ತನಿಖೆ ನಡೆಸುತ್ತಿರುವ ಆರಕ್ಷಕ ಅಧಿಕಾರಿಗಳು ರೋಸ್‌ಮೆರಿಯ ಶರೀರವನ್ನು ಪತ್ತೆಹಚ್ಚಿದರು.[೨]:38 1969ರ ಆಗಸ್ಟ್‌‌ 12ರಂದು LAPD ತಂಡವು ಪತ್ರಿಕೆಯವರೊಂದಿಗೆ ಮಾತನಾಡುತ್ತಾ, ಟೇಟ್‌ ಮತ್ತು ಲೇಬಿಯಾಂಕಾ ನರಹತ್ಯೆಗಳ ನಡುವೆ ಯಾವುದೇ ಸಂಬಂಧವಿರುವುದನ್ನು ತಾನು ತಳ್ಳಿಹಾಕಿರುವುದಾಗಿ ತಿಳಿಸಿತು.[೨]:42-48 ಆಗಸ್ಟ್‌‌ 16ರಂದು, ಸ್ಪಾಹ್ನ್‌‌ ಜಾನುವಾರು ಕ್ಷೇತ್ರದ ಮೇಲೆ ದಾಳಿನಡೆಸಿದ ಶಾಂತಿಪಾಲನಾ ಕಚೇರಿಯ ಸಿಬ್ಬಂದಿಗಳು ಮ್ಯಾನ್ಸನ್‌‌ ಮತ್ತು ಇತರ 25 ಮಂದಿಯನ್ನು ಬಂಧಿಸಿದರು; ವೋಕ್ಸ್‌ವ್ಯಾಗನ್‌‌ ವಾಹನಗಳನ್ನು ಕದಿಯುವ ಹಾಗೂ ಅವನ್ನು ಮರಳರಾಶಿ ಸಾಗಿಸುವ ಹಗುರ-ಗಾಡಿಗಳಾಗಿ ಪರಿವರ್ತಿಸುವ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ "ಒಂದು ಪ್ರಮುಖವಾದ ವಾಹನ ಕಳ್ಳತನದ ವರ್ತುಲದಲ್ಲಿನ ಶಂಕಿತರನ್ನಾಗಿ" ಅವರನ್ನು ಸೆರೆಹಿಡಿಯಲಾಯಿತು. ಆಯುಧಗಳನ್ನು ವಶಪಡಿಸಿಕೊಳ್ಳಲಾಯಿತಾದರೂ, ಬಂಧನದ ವಾರಂಟಿನಲ್ಲಿ ದಿನಾಂಕವನ್ನು ತಪ್ಪಾಗಿ ನಮೂದಿಸಿದ ಕಾರಣದಿಂದಾಗಿ, ಕೆಲವೇ ದಿನಗಳ ನಂತರ ಸದರಿ ಗುಂಪನ್ನು ಬಿಡುಗಡೆಮಾಡಲಾಯಿತು.[೨]:56 ಲೇಬಿಯಾಂಕಾ ಕೊಲೆಯ ಪತ್ತೆದಾರರು ಟೇಟ್‌ ಕೊಲೆಯ ಪತ್ತೆಯ ತಂಡದಲ್ಲಿದ್ದವರಿಗಿಂತ ಸಾಮಾನ್ಯವಾಗಿ ಕಿರಿಯ ವಯಸ್ಸಿನವರಾಗಿದ್ದರು. ವಸ್ತುತಃ ಎಲ್ಲಾ ಸುಳಿವುಗಳೂ ಇಲ್ಲವಾಗಿದ್ದ ಸಂದರ್ಭದಲ್ಲಿ, ಆಗಸ್ಟ್ ತಿಂಗಳ ಅಂತ್ಯದಲ್ಲಿ ಸಲ್ಲಿಸಲಾದ ವರದಿಯೊಂದರಲ್ಲಿ, ಲೇಬಿಯಾಂಕಾ ಮನೆಯಲ್ಲಿ ಕಂಡುಬಂದ ರಕ್ತಸಿಕ್ತವಾದ ಬರಹಗಳು ಹಾಗೂ "ಹಾಡುವ ತಂಡವಾಗಿರುವ ಬೀಟಲ್ಸ್‌‌ನ ತೀರಾ ಇತ್ತೀಚಿನ ಗೀತಸಂಪುಟ"ದ ನಡುವೆ ಒಂದು ಸಂಭವನೀಯ ಸಂಬಂಧವಿರುವುದನ್ನು ಅವರು ಗಮನಿಸಿದರು.[೨]:65 ಪ್ರಮುಖ ಪ್ರಗತಿಸಂಪಾದಿಸಿ ಟೇಟ್‌ ತಂಡದಿಂದ ಇನ್ನೂ ಪ್ರತ್ಯೇಕವಾಗಿಯೇ ಕೆಲಸ ಮಾಡುತ್ತಿದ್ದ ಲೇಬಿಯಾಂಕಾ ತಂಡವು, ಇದೇ ರೀತಿಯ ಸಂಭವನೀಯ ಅಪರಾಧಗಳ ಕುರಿತಾಗಿ ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ಶಾಂತಿಪಾಲನಾ ಕಚೇರಿಯ ನೆರವಿನೊಂದಿಗೆ ತಪಾಸಣೆ ನಡೆಸಿತು. ಹಿನ್ಮನ್‌‌ ಪ್ರಕರಣದ ಕುರಿತು ಈ ಸಂದರ್ಭದಲ್ಲಿ ಅವರಿಗೆ ಮಾಹಿತಿ ಸಿಕ್ಕಿತು. ಬ್ಯೂಸೊಲೈಲ್‌ನ ಗೆಳತಿಯಾದ ಕಿಟ್ಟಿ ಲ್ಯೂಟ್‌ಸಿಂಗರ್ ಜೊತೆಯಲ್ಲಿ ಹಿನ್ಮನ್‌‌ ಪತ್ತೆದಾರರು ಮಾತನಾಡಿದ್ದರು ಎಂಬ ಅಂಶವನ್ನೂ ಸಹ ಅವರು ಅರಿತುಕೊಂಡರು. "ಮ್ಯಾನ್ಸನ್‌‌ ಸಮುದಾಯದ" ಸದಸ್ಯರ ಜೊತೆಯಲ್ಲಿ ಕೆಲವು ದಿನಗಳ ಹಿಂದೆ ಅವಳು ಬಂಧನಕ್ಕೊಳಗಾಗಿದ್ದಳು.[೨]:75-77 ಮರುಭೂಮಿಯಲ್ಲಿನ ಜಾನುವಾರು ಕ್ಷೇತ್ರಗಳಲ್ಲಿ ಈ ಬಂಧನಗಳನ್ನು ಕೈಗೊಳ್ಳಲಾಗಿತ್ತು; ಇಲ್ಲಿಗೆ ಸಮುದಾಯವು ವರ್ಗಾಯಿಸಲ್ಪಟ್ಟಿತ್ತು ಮತ್ತು ಅಧಿಕಾರಿ ವರ್ಗದವರಿಗೆ ಅದರ ಮೂಲವು ಅಜ್ಞಾತವಾಗಿತ್ತು; ಅದರ ಸದಸ್ಯರು ನೆಲದಲ್ಲಿನ ಒಂದು ರಂಧ್ರಕ್ಕಾಗಿ-ತಳಕಾಣದ ಕಮರಿಗಿದ್ದ ಪ್ರವೇಶಾವಕಾಶಕ್ಕಾಗಿ- ಸಾವಿನ ಕಣಿವೆಯನ್ನು ಹುಡುಕುತ್ತಿದ್ದರು.[೨]:228–233[೫೩][೫೪] ರಾಷ್ಟ್ರೋದ್ಯಾನ ಪಾಲಕರು ಮತ್ತು ಕ್ಯಾಲಿಫೋರ್ನಿಯಾದ ಹೆದ್ದಾರಿ ಗಸ್ತು ತಿರುಗುವಿಕೆ ವಿಭಾಗದ ಅಧಿಕಾರಿಗಳು ಹಾಗೂ ಇನ್ಯೋ ಜಿಲ್ಲೆಯ ಶಾಂತಿಪಾಲನಾ ಕಚೇರಿಯ—ಒಕ್ಕೂಟ, ಸಂಸ್ಥಾನ‌, ಮತ್ತು ಜಿಲ್ಲೆಯ ಸಿಬ್ಬಂದಿ ವರ್ಗದವರ- ಒಂದು ಜಂಟಿ ಪಡೆಯು, ಮೈಯರ್ಸ್‌‌ ಮತ್ತು ಬಾರ್ಕರ್‌‌‌ ಜಾನುವಾರು ಕ್ಷೇತ್ರಗಳೆರಡರ ಮೇಲೂ ದಾಳಿ ನಡೆಸಿತು; ಸಾವಿನ ಕಣಿವೆಯ ರಾಷ್ಟ್ರೀಯ ಸ್ಮಾರಕದ ಸ್ವಾಮ್ಯತ್ವದಲ್ಲಿದ್ದ ಒಂದು ಮೃಚ್ಚಾಲಕವನ್ನು (ಅರ್ತ್‌ಮೂವರ್‌) ಸಮುದಾಯದ ಸದಸ್ಯರು ಸುಟ್ಟನಂತರ, ಅದರ ಸುಳುಹುಗಳನ್ನು ಅರಿಯದೆಯೇ ಬಿಟ್ಟಿದ್ದರಿಂದಾಗಿ, ಅದನ್ನು ಅನುಸರಿಸಿಕೊಂಡು ದಾಳಿಗಳನ್ನು ನಡೆಸಲು ಈ ಜಂಟಿಪಡೆಗೆ ಸಾಧ್ಯವಾಯಿತು.[೨]:125-127[೫೫][೫೬] ದಾಳಿಯನ್ನು ನಡೆಸಿದ ಅಧಿಕಾರಿಗಳಿಗೆ ಕಳವುಮಾಡಿದ್ದ ಮರಳರಾಶಿಯ ಹಗುರ-ಗಾಡಿಗಳು ಮತ್ತು ಇತರ ವಾಹನಗಳು ಕಂಡುಬಂದವು; ಮ್ಯಾನ್ಸನ್‌ನ್ನು ಒಳಗೊಂಡಂತೆ ಎರಡು ಡಜನ್‌‌ ಜನರು ಅವರಿಂದ ಬಂಧಿಸಲ್ಪಟ್ಟರು. ಹೆದ್ದಾರಿ ಗಸ್ತು ತಿರುಗುವಿಕೆಯ ವಿಭಾಗದ ಓರ್ವ ಅಧಿಕಾರಿಯು, ಬಾರ್ಕರ್‌‌‌ನ ಬಚ್ಚಲಮನೆಯ ತೊಟ್ಟಿ ಕೆಳಗಿನ ಕಪಾಟೊಂದರಲ್ಲಿ ಅಡಗಿಕೊಂಡಿದ್ದ ಮ್ಯಾನ್ಸನ್‌‌ನ್ನು ಪತ್ತೆಹಚ್ಚಿದ.[೨]:75-77, 125-127 ಒಂದು ತಿಂಗಳ ನಂತರ ಅವರೂ ಸಹ ಲ್ಯೂಟ್‌ಸಿಂಗರ್ ಜೊತೆಯಲ್ಲಿ ಮಾತನಾಡಿದ್ದರು; ಸಮುದಾಯವು ಸ್ಪಾಹ್ನ್‌‌ ಜಾನುವಾರು ಕ್ಷೇತ್ರದಲ್ಲಿದ್ದಾಗ, ಮ್ಯಾನ್ಸನ್‌ ತನ್ನ ಅಂಗರಕ್ಷಕರನ್ನಾಗಿ ಸೇರಿಸಲು ಪ್ರಯತ್ನಿಸಿದ್ದ ಎಂಬುದಾಗಿ ಅವಳು ಹೇಳಿದ್ದ ಮೋಟಾರ್‌ಸೈಕಲ್‌ ತಂಡವೊಂದರ ಸದಸ್ಯರನ್ನು ಲೇಬಿಯಾಂಕಾ ಪತ್ತೆದಾರರು ಸಂಪರ್ಕಿಸಿದರು.[೨]:75-77 ಮ್ಯಾನ್ಸನ್‌‌ ಮತ್ತು ಸದರಿ ಕೊಲೆಗಳ[೨]:84-90, 99-113 ನಡುವಿನ ಒಂದು ಕೊಂಡಿಯನ್ನು ಸೂಚಿಸಿದ ಮಾಹಿತಿಯನ್ನು ತಂಡದ ಸದಸ್ಯರು ಒದಗಿಸುತ್ತಿದ್ದ ಸಮಯದಲ್ಲಿಯೇ, ವಿಶ್ರಾಂತಿಧಾಮಕ್ಕೆ ಸೇರಿದ್ದ ಸುಸಾನ್‌ ಅಟ್ಕಿನ್ಸ್‌‌‌ಳ ಓರ್ವ ಸಂಗಾತಿಯು ಅಪರಾಧಗಳಲ್ಲಿನ ಸಮುದಾಯದ ತೊಡಗಿಸಿಕೊಳ್ಳುವಿಕೆಯ ಕುರಿತಾಗಿ LAPD ತಂಡಕ್ಕೆ ಮಾಹಿತಿ ನೀಡುವಲ್ಲಿ ಯಶಸ್ವಿಯಾದ.[೨]:99-113 ಬಾರ್ಕರ್‌‌‌ನಲ್ಲಿ ಬಂಧಿಸಲ್ಪಟ್ಟವರಲ್ಲಿ ಒಬ್ಬಳಾಗಿದ್ದ ಅಟ್ಕಿನ್ಸ್‌ಳ ಮೇಲೆ ಹಿನ್ಮನ್‌‌ ಕೊಲೆಗೆ ಸಂಬಂಧಿಸಿದಂತೆ ಆರೋಪವನ್ನು ದಾಖಲಿಸಲಾಯಿತು; ಲ್ಯೂಟ್‌ಸಿಂಗರ್‌ ತಿಳಿಸಿದ್ದ ರೀತಿಯಲ್ಲಿಯೇ, ಹಿನ್ಮನ್‌‌ ಕೊಲೆಯಲ್ಲಿ ತಾನು ತೊಡಗಿಸಿಕೊಂಡಿದ್ದನ್ನು ಅವಳು ಶಾಂತಿಪಾಲನಾ ಕಚೇರಿಯ ಪತ್ತೆದಾರರಿಗೆ ದೃಢಪಡಿಸಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಯಿತು.[೨]:75-77[೫೭] ಲಾಸ್‌ ಏಂಜಲೀಸ್‌ನಲ್ಲಿನ ಒಂದು ಸ್ಥಾನಬದ್ಧತಾ ಕೇಂದ್ರವಾದ ಸಿಬಿಲ್‌ ಬ್ರಾಂಡ್‌ ಇನ್‌‌ಸ್ಟಿಟ್ಯೂಟ್‌‌ಗೆ ವರ್ಗಾಯಿಸಲ್ಪಟ್ಟ ಅವಳು, ಅಟ್ಟಶಯ್ಯೆಯ ಸಹವರ್ತಿಗಳಾದ ರೋನೀ ಹೋವರ್ಡ್‌ ಮತ್ತು ವರ್ಜೀನಿಯಾ ಗ್ರಹಾಮ್‌ ಜೊತೆಯಲ್ಲಿ ಮಾತನಾಡಲು ಶುರುಮಾಡಿದ್ದಳು; ತಾನು ತೊಡಗಿಸಿಕೊಂಡಿದ್ದ ಘಟನೆಗಳ ಕುರಿತಾದ ವಿವರಗಳನ್ನು ಈ ಸಹವರ್ತಿಗಳೊಂದಿಗೆ ಅವಳು ಹಂಚಿಕೊಂಡಳು.[೨]:91-96 ದಸ್ತಗಿರಿಸಂಪಾದಿಸಿ 1969ರ ಡಿಸೆಂಬರ್‌‌ 1ರಂದು, ಈ ಮೂಲಗಳಿಂದ ಪಡೆಯಲಾದ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಕ್ರಮಕೈಗೊಳ್ಳಲು ಮುಂದಾದ LAPDಯು, ಟೇಟ್‌ ಪ್ರಕರಣದಲ್ಲಿ ವ್ಯಾಟ್ಸನ್‌‌, ಕ್ರೆನ್‌ವಿಂಕೆಲ್‌‌, ಮತ್ತು ಕಸಾಬಿಯನ್‌ರನ್ನು ಬಂಧಿಸುವುದಕ್ಕೆ ಸಂಬಂಧಿಸಿದ ವಾರಂಟುಗಳನ್ನು ಘೋಷಿಸಿತು; ಲೇಬಿಯಾಂಕಾ ಕೊಲೆಗಳಲ್ಲಿನ ಶಂಕಿತರ ತೊಡಗಿಸಿಕೊಳ್ಳುವಿಕೆಯು ಪರಿಗಣಿಸಲ್ಪಟ್ಟಿತು. ಅಷ್ಟುಹೊತ್ತಿಗಾಗಲೇ ಬಂಧನದಲ್ಲಿದ್ದ ಮ್ಯಾನ್ಸನ್‌‌ ಮತ್ತು ಅಟ್ಕಿನ್ಸ್‌ ಉಲ್ಲೇಖಿಸಲ್ಪಡಲಿಲ್ಲ; ಸಾವಿನ ಕಣಿವೆಯ ಸಮೀಪದಲ್ಲಿ ಬಂಧಿಸಲ್ಪಟ್ಟವರಲ್ಲಿ ಒಬ್ಬಳಾಗಿದ್ದ ವ್ಯಾನ್‌ ಹೌಟನ್‌ ಮತ್ತು ಲೇಬಿಯಾಂಕಾ ಪ್ರಕರಣದ ನಡುವಿನ ಸಂಬಂಧವು ಇನ್ನೂ ಗುರುತಿಸಲ್ಪಟ್ಟಿರಲಿಲ್ಲ.[೨]:125-127, 155-161, 176-184 ವ್ಯಾಟ್ಸನ್‌‌ ಮತ್ತು ಕ್ರೆನ್‌ವಿಂಕೆಲ್‌‌ ಕೂಡಾ ಅಷ್ಟುಹೊತ್ತಿಗೆ ಬಂಧನಕ್ಕೊಳಗಾಗಿದ್ದರು; LAPDಯಿಂದ ಬಂದ ಸೂಚನೆಯ ಅನುಸಾರ ಮೆಕ್‌ಕಿನ್ನೆ, ಟೆಕ್ಸಾಸ್‌‌ ಮತ್ತು ಮೊಬಿಲ್‌‌, ಅಲಬಾಮಾಗಳಲ್ಲಿನ ಅಧಿಕಾರಿ ವರ್ಗದವರು ಅವರನ್ನು ಹಿಡಿದು ತಂದಿದ್ದರು.[೨]:155-161 ತನ್ನ ಬಂಧನಕ್ಕೆ ಸಂಬಂಧಿಸಿದ ವಾರಂಟೊಂದು ಸಿದ್ಧವಾಗಿದೆ ಎಂಬ ಮಾಹಿತಿಯು ದೊರೆಯುತ್ತಿದ್ದಂತೆಯೇ, ಡಿಸೆಂಬರ್‌‌ 2ರಂದು ನ್ಯೂ ಹ್ಯಾಂಪ್‌ಷೈರ್‌‌ನ ಕನ್‌ಕಾರ್ಡ್‌‌‌‌‌ನಲ್ಲಿನ ಅಧಿಕಾರಿ ವರ್ಗದವರಿಗೆ ಕಸಾಬಿಯನ್‌ ಸ್ವಪ್ರೇರಣೆಯಿಂದ ಶರಣಾದಳು.[೨]:155-161 ಸಿಯೆಲೊ ಡ್ರೈವ್‌‌ನಲ್ಲಿ[೨]:15, 156, 273, and photographs between 340–41 LAPDಯಿಂದ ಸಂಗ್ರಹಿಸಲ್ಪಟ್ಟ ಕ್ರೆನ್‌ವಿಂಕೆಲ್‌‌ಳ ಮತ್ತು ವ್ಯಾಟ್ಸನ್‌‌ನ ಕೈಬೆರಳ ಗುರುತುಗಳಂಥ ಶಾರೀರಿಕ ಪುರಾವೆಗೆ ಸಾರ್ವಜನಿಕರಿಂದ ಪಡೆದುಕೊಳ್ಳಲಾದ ಪುರಾವೆಯಿಂದ ಮತ್ತಷ್ಟು ಪುಷ್ಟಿ ಸಿಕ್ಕಂತಾಯಿತು. ಪೇರೆಂಟ್‌, ಸೆಬ್ರಿಂಗ್‌‌, ಮತ್ತು ಫ್ರೈಕೊವ್ಸ್‌ಕಿ ಇವರುಗಳ ಮೇಲೆ ವ್ಯಾಟ್ಸನ್‌‌ ಬಳಸಿದ್ದ, ವೈಶಿಷ್ಟ್ಯಪೂರ್ಣವಾದ .22-ಒಳವ್ಯಾಸದ ಉನ್ನತ ದರ್ಜೆಯ "ಬಂಟ್‌ಲೈನ್‌ ಸ್ಪೆಷಲ್‌‌" ರಿವಾಲ್ವರ್‌‌‌ 1969ರ ಸೆಪ್ಟೆಂಬರ್‌‌ 1ರಂದು ಪತ್ತೆಯಾಯಿತು; ಟೇಟ್‌ ನಿವಾಸದ ಸಮೀಪದಲ್ಲಿ ವಾಸಿಸುತ್ತಿದ್ದ ಸ್ಟೀವನ್‌ ವೇಸ್‌ ಎಂಬ ಹೆಸರಿನ ಓರ್ವ ಹತ್ತು-ವರ್ಷ-ವಯಸ್ಸಿನ ಹುಡುಗ ಇದನ್ನು ಆರಕ್ಷಕರಿಗೆ ನೀಡಿದ.[೨]:66 ಸುಸಾನ್‌ ಅಟ್ಕಿನ್ಸ್‌ ತನ್ನ ನ್ಯಾಯವಾದಿಗೆ[೨]:160,193 ನೀಡಿದ ಮಾಹಿತಿಯನ್ನು ಆಧರಿಸಿ ಲಾಸ್‌ ಏಂಜಲೀಸ್‌ ಟೈಮ್ಸ್‌‌ ಪತ್ರಿಕೆಯು ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಅಪರಾಧ-ಸಂಬಂಧಿ ವರದಿಯೊಂದನ್ನು ಪ್ರಕಟಿಸಿದಾಗ, ವೇಸ್‌ನ ತಂದೆಯು ಹಲವಾರು ಫೋನ್‌ ಕರೆಗಳನ್ನು ಮಾಡಿದ; ಇದು ಬಂದೂಕನ್ನು ಅದರ ಪುರಾವೆ ಕಡತದಲ್ಲಿ ಪತ್ತೆಮಾಡಲು LAPDಯನ್ನು ಅಂತಿಮವಾಗಿ ಪ್ರಚೋದಿಸಿತು ಹಾಗೂ ಕ್ಷಿಪಣಿಶಾಸ್ತ್ರ ಪರೀಕ್ಷೆಗಳ ಮೂಲಕ ಇದನ್ನು ಕೊಲೆಗಳೊಂದಿಗೆ ಸಂಬಂಧ ಕಲ್ಪಿಸಲು ತನ್ಮೂಲಕ ಸಾಧ್ಯವಾಯಿತು.[೨]:198-199 ಅದೇ ವೃತ್ತಪತ್ರಿಕೆಯ ವರದಿಯನ್ನು ಆಧಾರವಾಗಿಟ್ಟುಕೊಂಡು ಕಾರ್ಯಪ್ರವೃತ್ತರಾದ ಸ್ಥಳೀಯ ABC ದೂರದರ್ಶನ ಸಿಬ್ಬಂದಿವರ್ಗದವರು, ಟೇಟ್‌ ಕೊಲೆಗಾರರಿಂದ ಎಸೆಯಲ್ಪಟ್ಟಿದ್ದ ರಕ್ತಸಿಕ್ತವಾದ ಬಟ್ಟೆಬರೆಗಳನ್ನು ಕ್ಷಿಪ್ರವಾಗಿ ಪತ್ತೆಹಚ್ಚಿದರು ಮತ್ತು ವಶಪಡಿಸಿಕೊಂಡರು.[೨]:197-198 ಟೇಟ್‌ ನಿವಾಸದಿಂದ ತೆರಳುವಾಗ ಮಾರ್ಗಮಧ್ಯದಲ್ಲಿ ಎಸೆಯಲ್ಪಟ್ಟಿದ್ದ ಚಾಕುಗಳು ಎಂದಿಗೂ ಸಿಗಲಿಲ್ಲ; ಅದೇ ತಂಡಕ್ಕೆ ಸೇರಿದ್ದ ಕೆಲವೊಂದು ಸಿಬ್ಬಂದಿಗಳಿಂದ, ಮತ್ತು ನಂತರದ ತಿಂಗಳುಗಳಲ್ಲಿ LAPD ವತಿಯಿಂದ ಒಂದು ಶೋಧಕಾರ್ಯವು ನಡೆಯಿತಾದರೂ ಅವು ದಕ್ಕಲಿಲ್ಲ.[೨]:198, 273 ಟೇಟ್‌ ಗೃಹದ ವಾಸದ ಕೊಠಡಿಯಲ್ಲಿನ ಕುರ್ಚಿಯೊಂದರ ಮೆತ್ತೆಯ ಹಿಂಭಾಗದಲ್ಲಿ ಪತ್ತೆಯಾದ ಒಂದು ಚಾಕುವು, ಸ್ಪಷ್ಟವಾಗಿ ಗೋಚರಿಸುವಂತೆ ಸುಸಾನ್‌ ಅಟ್ಕಿನ್ಸ್‌ಳದಾಗಿತ್ತು; ದಾಳಿಯು ನಡೆದ ಸಂದರ್ಭದಲ್ಲಿ ಅವಳು ತನ್ನ ಚಾಕುವನ್ನು ಅಲ್ಲಿ ಕಳೆದುಕೊಂಡಿದ್ದಳು.[೨]:17, 180, 262[೫೮] 1970ರ ಜೂನ್‌‌ 15ರಂದು ವಿಚಾರಣೆಯು ಪ್ರಾರಂಭವಾಯಿತು.[೨]:297-300 ಕಸಾಬಿಯನ್ ಫಿರ್ಯಾದಿ ಪಕ್ಷದ ಮುಖ್ಯ ಸಾಕ್ಷಿಯಾಗಿದ್ದಳು; ಮ್ಯಾನ್ಸನ್‌‌, ಅಟ್ಕಿನ್ಸ್‌, ಮತ್ತು ಕ್ರೆನ್‌ವಿಂಕೆಲ್ ಜೊತೆಯಲ್ಲಿ ಅವಳನ್ನೂ ಸೇರಿಸಿ ಏಳು ಕೊಲೆಯ ಆಪಾದನೆಗಳು ಹಾಗೂ ಒಳಸಂಚಿನ ಪೈಕಿ ಒಂದರ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿತ್ತು.[೨]:185-188 ಹತ್ಯೆಗಳಲ್ಲಿ ತೊಡಗಿಸಿಕೊಂಡಿರದಿದ್ದ ಅವಳಿಗೆ ವಿನಾಯಿತಿ ನೀಡಲಾಯಿತು; ಇದಕ್ಕೆ ಪ್ರತಿಯಾಗಿ ಅವಳು ಅಪರಾಧಗಳು ನಡೆದ ರಾತ್ರಿಗಳ ಕುರಿತಾಗಿ ವಿವರಿಸುವ ಸಾಕ್ಷ್ಯವನ್ನು ನೀಡಬೇಕಾಗಿ ಬಂತು.[೨]:214-219, 250-253, 330-332 ಮೂಲತಃ, ಅಟ್ಕಿನ್ಸ್‌ಳೊಂದಿಗೆ ಒಂದು ವ್ಯವಹಾರವನ್ನು ಕುದುರಿಸಲಾಗಿತ್ತು. ಇದರ ಅನುಸಾರ ಅವಳಿಗೆ ಮರಣದಂಡನೆಯನ್ನು ವಿಧಿಸುವಂತೆ ತಾನು ಕೇಳಿಕೊಳ್ಳುವುದಿಲ್ಲವೆಂದು ಸಮ್ಮತಿಸಿದ ಫಿರ್ಯಾದಿ ಪಕ್ಷವು, ಇದಕ್ಕೆ ಪ್ರತಿಯಾಗಿ ದೋಷಾರೋಪಣ ಪತ್ರಗಳನ್ನು ಗಳಿಸಲು ಕಾರಣವಾಗಿದ್ದ ನ್ಯಾಯದರ್ಶಿಗಳ ಮಹಾಮಂಡಲಿಯ ಸಾಕ್ಷ್ಯದ ಕುರಿತು ಅವಳಿಗೆ ಕರಾರು ಹಾಕಿತ್ತು; ಆ ಸಾಕ್ಷ್ಯವನ್ನು ಅಟ್ಕಿನ್ಸ್‌ ನಿರಾಕರಿಸುತ್ತಿದ್ದಂತೆ ಸದರಿ ವ್ಯವಹಾರವು ಹಿಂತೆಗೆದುಕೊಳ್ಳಲ್ಪಟ್ಟಿತು.[೨]:169, 173-184, 188, 292 ಲೇಬಿಯಾಂಕಾ ಹತ್ಯೆಗಳಲ್ಲಿ ವ್ಯಾನ್‌ ಹೌಟನ್‌ ಕೇವಲ ತೊಡಗಿಸಿಕೊಂಡಿದ್ದ ಕಾರಣದಿಂದಾಗಿ, ಎರಡು ಕೊಲೆಯ ಆಪಾದನೆಗಳು ಹಾಗೂ ಒಳಸಂಚಿನ ಪೈಕಿ ಒಂದರ ಆರೋಪಗಳನ್ನು ಅವಳ ಮೇಲೆ ಹೊರಿಸಲಾಯಿತು. ಮೂಲತಃ, ಸ್ವತಃ ತಾನೇ ನ್ಯಾಯವಾದಿಯ ಪಾತ್ರವನ್ನು ವಹಿಸಲು ಮ್ಯಾನ್ಸನ್‌ಗೆ ನ್ಯಾಯಾಧೀಶ ವಿಲಿಯಂ ಕೀನ್‌ ಇಷ್ಟವಿಲ್ಲದೆ ಅನುಮತಿ ನೀಡಿದ್ದ. ಒಂದು ವಂಚನೆಯ ಆದೇಶದ ಉಲ್ಲಂಘನೆಗಳು ಮತ್ತು "ತೀರಾ ವಿಲಕ್ಷಣವಾದ" ಹಾಗೂ "ಅಸಂಬದ್ಧವಾದ" ವಿಚಾರಣಾ-ಪೂರ್ವ ಅರ್ಜಿಗಳ ನಿವೇದನೆಯನ್ನು ಒಳಗೊಂಡಿದ್ದ ಮ್ಯಾನ್ಸನ್‌‌ನ ನಡತೆಯ ಕಾರಣದಿಂದಾಗಿ, ವಿಚಾರಣೆಯು ಆರಂಭವಾಗುವುದಕ್ಕೆ ಮುಂಚಿತವಾಗಿಯೇ ಅವನಿಗೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಳ್ಳಲಾಯಿತು.[೨]:200-202, 265 ಕೀನ್ ವಿರುದ್ಧವಾಗಿ ಪೂರ್ವಗ್ರಹದ ಒಂದು ಪ್ರಮಾಣಪತ್ರವನ್ನು ಮ್ಯಾನ್ಸನ್‌‌ ಸಲ್ಲಿಸಿದ ಕಾರಣದಿಂದ, ಕೀನ್ ಜಾಗದಲ್ಲಿ ಚಾರ್ಲ್ಸ್‌‌ H. ಓಲ್ಡರ್‌‌ ಎಂಬ ನ್ಯಾಯಾಧೀಶ ಆಗಮಿಸಿದ.[೨]:290 ಸಾಕ್ಷ್ಯದ ಮೊದಲ ದಿನವಾದ ಜುಲೈ 24ರ ಶುಕ್ರವಾರದಂದು, ತನ್ನ ಹಣೆಯ ಮೇಲೆ X ಗುರುತನ್ನು ಕೆತ್ತಿಕೊಂಡು ನ್ಯಾಯಾಲಯದಲ್ಲಿ ಮ್ಯಾನ್ಸನ್‌‌ ಕಾಣಿಸಿಕೊಂಡ. ಅವನು ಈ ಕುರಿತು ಹೇಳಿಕೆಯೊಂದನ್ನು ನೀಡುತ್ತಾ, "ಸ್ವತಃ ತನ್ನ ಕುರಿತು ಮಾತನಾಡಲು ಅಥವಾ ಸಮರ್ಥಿಸಿಕೊಳ್ಳಲು ತನ್ನನ್ನು ಅಸಮರ್ಥ ಮತ್ತು ಅನರ್ಹ ಎಂಬುದಾಗಿ ಪರಿಗಣಿಸಲ್ಪಟ್ಟಿರುವುದರಿಂದ ತಾನು ಸ್ಥಾಪಿತವ್ಯವಸ್ಥೆಯ ಪ್ರಪಂಚದಿಂದ ತನ್ನನ್ನು ಹೊರಗಿಟ್ಟುಕೊಂಡಿರುವುದನ್ನು ಈ ಗುರುತು ಸೂಚಿಸುತ್ತದೆ" ಎಂದು ನುಡಿದ.[೨]:310[೫೯] ಇದನ್ನನುಸರಿಸಿಕೊಂಡು ಬಂದ ವಾರಾಂತ್ಯದ ನಂತರ, ಸಮುದಾಯದ ಸದಸ್ಯರು ಮತ್ತೊಂದು ದಿನದೊಳಗಾಗಿ ಮಾಡಿದ ರೀತಿಯಲ್ಲಿಯೇ, ಸ್ತ್ರೀ ಪ್ರತಿವಾದಿಗಳು ತಮ್ಮ ಹಣೆಗಳ ಮೇಲೆ ಆ ಗುರುತನ್ನು ನಕಲುಮಾಡಿಕೊಂಡರು.[೨]:316 (ಮ್ಯಾನ್ಸನ್‌‌ನ X ಗುರುತು ಅಂತಿಮವಾಗಿ ಒಂದು ಸ್ವಸ್ತಿಕದಿಂದ ಬದಲಾಯಿಸಲ್ಪಟ್ಟಿತು. ಕೆಳಗೆ ನೀಡಿರುವ "ನೋಟದಲ್ಲಿ ಉಳಿದಿರುವುದು" ಎಂಬ ವಿಭಾಗವನ್ನು ನೋಡಿ.) "ಹೆಲ್ಟರ್‌ ಸ್ಕೆಲ್ಟರ್‌‌"ನ ಪ್ರಚೋದಿಸುವಿಕೆಯನ್ನು ಫಿರ್ಯಾದಿ ಪಕ್ಷವು ಮುಖ್ಯ ಪ್ರೇರಕಶಕ್ತಿಯನ್ನಾಗಿ ಇರಿಸಿತು.[೬೦] ಅಪರಾಧ ದೃಶ್ಯಗಳಲ್ಲಿ ಕಂಡುಬಂದ ರಕ್ತಸಿಕ್ತ ವೈಟ್‌ ಆಲ್ಬಮ್‌‌ ಉಲ್ಲೇಖಗಳಾದ -ಹಂದಿ , ಉದಯ , ಹೆಲ್ಟರ್‌ ಸ್ಕೆಲ್ಟರ್‌‌ - ಮೊದಲಾದವುಗಳು ಮ್ಯಾನ್ಸನ್‌‌ ಊಹೆಗಳ ಕುರಿತಾದ ಸಾಕ್ಷ್ಯದೊಂದಿಗೆ ಪರಸ್ಪರ ಸಂಬಂಧಿಸಿದ್ದವು; ಅಂದರೆ, ಹೆಲ್ಟರ್‌ ಸ್ಕೆಲ್ಟರ್‌‌ನ ಮೊದಲಲ್ಲಿ ಕರಿಯರು ಎಸಗುವ ಕೊಲೆಗಳು, ಬಲಿಪಶುಗಳ ರಕ್ತದಲ್ಲಿ ಗೋಡೆಗಳ ಮೇಲೆ "ಹಂದಿಗಳು" ಎಂದು ಬರೆಯುವುದನ್ನು ಒಳಗೊಂಡಿರುತ್ತದೆ ಎಂಬುದೇ ಆ ಊಹೆಯಾಗಿತ್ತು.[೨]:244-247, 450-457 "ಹೆಲ್ಟರ್‌ ಸ್ಕೆಲ್ಟರ್‌ಗೆ ಈಗ ಕಾಲಕೂಡಿ ಬಂದಿದೆ" ಎಂಬುದಾಗಿ ಮ್ಯಾನ್ಸನ್‌‌ ಹೇಳಿದ್ದ ಸಾಕ್ಷ್ಯವು ಕಸಾಬಿಯನ್‌‌ ಹೇಳಿದ್ದ ಸಾಕ್ಷ್ಯದೊಂದಿಗೆ ಪೂರಕವಾಗಿತ್ತು; ಅಂದರೆ, ಲೇಬಿಯಾಂಕಾ ಕೊಲೆಗಳು ನಡೆದ ರಾತ್ರಿಯಂದು, ನೆರೆಹೊರೆಯಲ್ಲಿದ್ದ ಓರ್ವ ಕರಿಯನ ಬೀದಿಯಲ್ಲಿ ರೋಸ್‌ಮೆರಿ ಲೇಬಿಯಾಂಕಾಳ ಹಣದ ಚೀಲವನ್ನು ಎಸೆಯಬೇಕು ಎಂಬುದನ್ನು ಮ್ಯಾನ್ಸನ್‌‌ ಪರಿಗಣಿಸಿದ್ದ ಎಂಬುದೇ ಆ ಸಾಕ್ಷ್ಯವಾಗಿತ್ತು.[೨]:258-269 ಲೇಬಿಯಾಂಕಾ ಮನೆಯಲ್ಲಿ ಹಣದ ಚೀಲವನ್ನು ಪಡೆದುಕೊಂಡ ನಂತರ, "ಓರ್ವ ಕರಿಯ ವ್ಯಕ್ತಿಯು ಅದನ್ನು ಎತ್ತಿಕೊಳ್ಳಬೇಕು ಮತ್ತು ಅದರಲ್ಲಿನ ಕ್ರೆಡಿಟ್‌ ಕಾರ್ಡುಗಳನ್ನು ಅವನು ಬಳಸಬೇಕು ಎಂದು ಬಯಸಿದ್ದ; ಇದರಿಂದಾಗಿ, ಈ ಜನರ ಸಾವಿನ ಹಿಂದೆ ಒಂದು ರೀತಿಯ ಸಂಘಟಿತ ಗುಂಪೊಂದರ ಕೈವಾಡವಿದೆ ಎಂಬುದಾಗಿ ಜನರು, ತನಿಖಾ ಸಂಸ್ಥೆಗಳು ಭಾವಿಸಲು ಸಾಧ್ಯವಾಗುತ್ತದೆ" ಎಂಬುದು ಅವನ ಆಲೋಚನಾ ವಿಧಾನವಾಗಿತ್ತು.[೬೧] ಅವನ ನಿರ್ದೇಶನದ ಅನುಸಾರ, ಕರಿಯರು ಪ್ರದೇಶವೊಂದಕ್ಕೆ ಸಮೀಪವಿರುವ ಸೇವಾಕೇಂದ್ರವೊಂದರ ಮಹಿಳೆಯರ ವಿಶ್ರಾಂತಿಕೋಣೆಯಲ್ಲಿ ಆ ಹಣದ ಚೀಲವನ್ನು ಕಸಾಬಿಯನ್‌‌ ಅಡಗಿಸಿಟ್ಟಿದ್ದಳು.[೨]:176-184, 190-191, 258-269, 369-377 ಲೇಬಿಯಾಂಕಾ ಮನೆಯಿಂದ ನಿರ್ಗಮಿಸಿದ ನಂತರ, ಸಮುದಾಯದ ಸದಸ್ಯರು ವಾಹನವನ್ನು ಚಾಲಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ, "ಇದನ್ನು ಹೇಗೆ ಮಾಡಬೇಕು ಎಂಬುದನ್ನು ಕರಿಯರಿಗೆ ತೋರಿಸಲು ನಾನು ಬಯಸುತ್ತೇನೆ" ಎಂಬುದಾಗಿ ಮ್ಯಾನ್ಸನ್‌ ಅವರಿಗೆ ಹೇಳಿದ್ದ.[೬೧] ಮುಂದುವರಿಯುತ್ತಿರುವ ಭಿನ್ನಾಭಿಪ್ರಾಯಗಳುಸಂಪಾದಿಸಿ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯದ ಕಟ್ಟಡದ ಪ್ರವೇಶದ್ವಾರಗಳು ಮತ್ತು ಪಡಸಾಲೆಗಳ ಸಮೀಪದಲ್ಲಿ ಸಮುದಾಯದ ಸದಸ್ಯರು ಅಲ್ಲಲ್ಲೇ ಅಡ್ಡಾಡುತ್ತಾ ಕಾಲಕಳೆದರು. ನ್ಯಾಯಾಲಯದ ಕಟ್ಟಡದ ಆವರಣದಿಂದ ಅವರನ್ನು ಆಚೆಯಿರಿಸುವ ಸಲುವಾಗಿ, ಫಿರ್ಯಾದಿ ಪಕ್ಷದ ಕೋರ್ಟಿನ ಹಾಜರಿ ಕರೆಯು ಅವರನ್ನು ಭವಿಷ್ಯದ ಸಾಕ್ಷಿಗಳೆಂದು ಪರಿಗಣಿಸಿತು; ಇದರಿಂದಾಗಿ, ಇತರರು ಸಾಕ್ಷಿಯನ್ನು ಒದಗಿಸುತ್ತಿರುವ ಸಂದರ್ಭದಲ್ಲಿ ಅವರು ಒಳಪ್ರವೇಶಿಸಲು ಅಸಮರ್ಥರಾದರು.[೨]:309 ಪಾದಚಾರಿ ಹಾದಿಯ ಮೇಲೆಯೇ ಜಾಗರಣೆ ಮಾಡಲು ಆ ಗುಂಪು ಸ್ವತಃ ತನ್ನನ್ನು ಅಣಿಗೊಳಿಸಿಕೊಂಡಾಗ, ಅದರ ಪ್ರತಿಯೊಬ್ಬ "ಕಟ್ಟಾ" ಸದಸ್ಯನೂ ಒರೆಯಲ್ಲಿ ಹಾಕಿದ ಒಂದು ಬೇಟೆಯ ಚಾಕುವನ್ನು ಧರಿಸಿದ; ಸಾಧಾರಣ ರೂಪದಲ್ಲಿ ಕಾಣಿಸುತ್ತಿದ್ದ ಅದು ವಿಧ್ಯುಕ್ತವಾಗಿ ಒಯ್ಯಲ್ಪಟ್ಟಿತ್ತು. ಅವನ ಅಥವಾ ಅವಳ ಹಣೆಯ ಮೇಲೆ ಮೂಡಿದ್ದ X ಗುರುತಿನಿಂದಾಗಿಯೂ ಸಹ ಅವರಲ್ಲಿ ಪ್ರತಿಯೊಬ್ಬನೂ ಸಹ ಗುರುತಿಸಲ್ಪಡಬಲ್ಲವನಾಗಿದ್ದ.[೨]:339 ಸಮುದಾಯದ ಕೆಲವೊಂದು ಸದಸ್ಯರು ಸಾಕ್ಷಿ ಒದಗಿಸದಂತೆ ಸಾಕ್ಷಿಗಳನ್ನು ತಡೆಯಲು ಪ್ರಯತ್ನಿಸಿದರು. ಫಿರ್ಯಾದಿ ಪಕ್ಷದ ಸಾಕ್ಷಿಗಳಾದ ಪಾಲ್‌‌ ವ್ಯಾಟ್ಕಿನ್ಸ್‌‌ ಮತ್ತು ಜುವಾನ್‌ ಫ್ಲಿನ್‌ ಈ ಇಬ್ಬರೂ ಸಹ ಬೆದರಿಕೆಗೆ ಒಳಗಾದರು;[೨]:280, 332-335 ವ್ಯಾಟ್ಕಿನ್ಸ್‌‌ನ ವ್ಯಾನಿನಲ್ಲಿ ಕಂಡುಬಂದ ಒಂದು ಸಂದೇಹಾಸ್ಪದ ಬೆಂಕಿಯಲ್ಲಿ ಅವನು ಭೀಕರವಾಗಿ ಸುಡುವಿಕೆಗೆ ಒಳಗಾದ.[೨]:280 ಸಮುದಾಯದ ಸದಸ್ಯೆಯಾದ ರುಥ್‌‌ ಆನ್‌‌ ಮೂರ್‌ಹೌಸ್ ಎಂಬುವವಳಿಗೆ ಟೇಟ್‌ ಕೊಲೆಗಳ ಕುರಿತಾಗಿ ಸುಸಾನ್‌ ಅಟ್ಕಿನ್ಸ್‌ ವಿವರಿಸುತ್ತಿದ್ದುದನ್ನು ಕದ್ದುಕೇಳಿಸಿಕೊಂಡ ಸಮುದಾಯದ ಹಿಂದಿನ ಸದಸ್ಯಳಾದ ಬಾರ್ಬರಾ ಹಾಯ್ಟ್, ಹವಾಯಿಗೆ ಹೋಗುವಲ್ಲಿ ಮೂರ್‌ಹೌಸ್‌ಳ ಜತೆಗೂಡಲು ಸಮ್ಮತಿಸಿದಳು. ಆರೋಪಿಸಲ್ಪಟ್ಟಂತೆ, ಹಲವಾರು ಡೋಸುಗಳಷ್ಟು LSDಯನ್ನು ಬೆರೆಸಿದ ಒಂದು ಹ್ಯಾಂಬರ್ಗರ್‌ನ್ನು ಅಲ್ಲಿ ಮೂರ್‌ಹೌಸ್‌ ಅವಳಿಗೆ ನೀಡಿದಳು. ಹೊನಲುಲುವಿನ ಹೊರಭಾಗದಲ್ಲಿ, ಮಾದಕವಸ್ತುವನ್ನು ಸೇವಿಸಿದ ನಂತರದ ಒಂದು ಅರೆ-ಸಂವೇದನಾಶೂನ್ಯತೆಯಲ್ಲಿ ಚಾಚಿಕೊಂಡು ಬಿದ್ದುಕೊಂಡಂತೆ ಕಂಡುಬಂದಿದ್ದ ಹಾಯ್ಟ್‌ಳನ್ನು ಆಸ್ಪತ್ರೆಗೆ ಒಯ್ಯಲಾಯಿತು; ಅಲ್ಲಿ ಆಕೆ ಟೇಟ್‌-ಲೇಬಿಯಾಂಕಾ ಕೊಲೆ ವಿಚಾರಣೆಗೆ ಸಂಬಂಧಿಸಿದಂತೆ ತನ್ನನ್ನು ಓರ್ವ ಸಾಕ್ಷಿಯಾಗಿ ಕಂಡುಕೊಳ್ಳಲು ಬೇಕಾದ ಅತ್ಯುತ್ತಮ ಪ್ರಯತ್ನವನ್ನು ಮಾಡಿದಳು. ಈ ಘಟನೆಗೆ ಮುಂಚಿತವಾಗಿ, ಹಾಯ್ಟ್‌‌ ಓರ್ವ ಇಷ್ಟವಿಲ್ಲದ ಸಾಕ್ಷಿಯಾಗಿದ್ದಳು; ಅವಳನ್ನು ಮೌನವಾಗಿಸುವ ಪ್ರಯತ್ನದ ನಂತರ, ಅವಳ ಮೌನಪ್ರವೃತ್ತಿಯು ಕಣ್ಮರೆಯಾಯಿತು.[೨]:348-350, 361 ಆಗಸ್ಟ್‌‌ 4ರಂದು, ನ್ಯಾಯಾಲಯವು ತೆಗೆದುಕೊಂಡಿದ್ದ ಮುಂಜಾಗರೂಕತೆಗಳ ಹೊರತಾಗಿಯೂ, ಲಾಸ್‌ ಏಂಜಲೀಸ್‌ ಟೈಮ್ಸ್‌‌ ಪತ್ರಿಕೆಯೊಂದರ ಮುಖಪುಟವನ್ನು ನ್ಯಾಯದರ್ಶಿ ಮಂಡಲಿಯ ಮುಂದೆ ಮ್ಯಾನ್ಸನ್‌ ಪ್ರದರ್ಶಿಸಿದ; "ಮ್ಯಾನ್ಸನ್‌‌ ತಪ್ಪಿತಸ್ಥ ಎಂದು ನಿಕ್ಸನ್‌‌ ಘೋಷಿಸಿದ್ದಾನೆ" ಎಂಬ ತಲೆಬರಹವು ಆ ಮುಖಪುಟದಲ್ಲಿ ಕಾಣಿಸುತ್ತಿತ್ತು. ಮ್ಯಾನ್ಸನ್‌‌ನ್ನು ಮಾಧ್ಯಮಗಳು ಚಿತ್ತಾಕರ್ಷಕವಾಗಿಸುತ್ತಿವೆ ಅಥವಾ ವೈಭವೀಕರಿಸುತ್ತಿವೆ ಎಂದು ತನಗನ್ನಿಸುತ್ತಿದೆ ಎಂದು U.S. ಅಧ್ಯಕ್ಷ ರಿಚರ್ಡ್‌ ನಿಕ್ಸನ್‌‌ ತೆಗಳಿದ ಸಂದರ್ಭದಲ್ಲಿ ಹಿಂದಿನ ದಿನ ಮಾಡಲ್ಪಟ್ಟಿದ್ದ ಒಂದು ಹೇಳಿಕೆಗೆ ಒಂದು ಉಲ್ಲೇಖವಾಗಿ ಇದು ಪ್ರಕಟವಾಗಿತ್ತು. ನ್ಯಾಯಾಧೀಶ ಓಲ್ಡರ್‌‌‌‌ನಿಂದ ಸತ್ಯವಚನ ಶಪಥಕ್ಕೀಡಾದ ನ್ಯಾಯದರ್ಶಿಗಳು, ಸದರಿ ತಲೆಬರಹವು ತಮ್ಮ ಮೇಲೆ ಯಾವುದೇ ಪ್ರಭಾವವನ್ನು ಬೀರಿಲ್ಲ ಎಂದು ಒತ್ತಿಹೇಳಿದರು. ಮಾರನೆಯ ದಿನ, ಎದ್ದುನಿಂತ ಸ್ತ್ರೀ ಪ್ರತಿವಾದಿಗಳು ಒಕ್ಕೊರಲಿನಿಂದ ತಮ್ಮ ಮಾತನ್ನು ಪ್ರತಿಪಾದಿಸುತ್ತಾ, ನಿಕ್ಸನ್‌‌ನ ಹೇಳಿಕೆಯನ್ನು ಪರಿಗಣನೆಗೆ ತೆಗೆದುಕೊಂಡು ಹೇಳುವುದಾದರೆ ವಿಚಾರಣೆಯನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.[೨]:323-238 ಅಕ್ಟೋಬರ್‌‌ 5ರಂದು, ಪ್ರತಿವಾದದ ನ್ಯಾಯವಾದಿಗಳು ಪಾಟಿಸವಾಲು ನಡೆಸಲು ನಿರಾಕರಿಸಿದ್ದ ಫಿರ್ಯಾದಿ ಪಕ್ಷದ ಓರ್ವ ಸಾಕ್ಷಿಯನ್ನು ಪ್ರಶ್ನಿಸಲು ನ್ಯಾಯಾಲಯ ಅನುಮತಿಯನ್ನು ಕೇಳಿದ್ದ ಮ್ಯಾನ್ಸನ್‌‌ಗೆ ಆ ಕುರಿತು ನಿರಾಕರಿಸಲಾಯಿತು. ಪ್ರತಿವಾದ ಮೇಜಿನ ಮೇಲಿನಿಂದ ಹಾರಿದ ಮ್ಯಾನ್ಸನ್‌‌, ನ್ಯಾಯಾಧೀಶನ ಮೇಲೆ ದಾಳಿಮಾಡಲು ಪ್ರಯತ್ನಿಸಿದ. ಸಾಕಷ್ಟು ಹೆಣಗಾಡಿ ಅವನನ್ನು ನ್ಯಾಯದರ್ಶಿಗಳ ರಕ್ಷಣಾಧಿಕಾರಿಗಳು ಮಣಿಸಿದ ಮೇಲೆ, ತರುವಾಯದಲ್ಲಿ ಮೇಲೆದ್ದು ಲ್ಯಾಟಿನ್‌ ಭಾಷೆಯಲ್ಲಿ ಏನನ್ನೋ ಮಣಮಣಿಸಲು ಶುರುಮಾಡಿದ್ದ ಸ್ತ್ರೀ ಪ್ರತಿವಾದಿಗಳೊಂದಿಗೆ ಅವನನ್ನು ನ್ಯಾಯಾಲಯದ ಕೋಣೆಯಿಂದ ಹೊರದೂಡಲಾಯಿತು.[೨]:369-377 ಈ ಘಟನೆಯಾದ ನಂತರ, ಓಲ್ಡರ್‌‌ ತನ್ನ ನಿಲುವಂಗಿಗಳ ಒಳಗೆ ಒಂದು ರಿವಾಲ್ವರ್‌ನ್ನು ಇಟ್ಟುಕೊಳ್ಳಲು ಶುರುಮಾಡಿದ ಎಂದು ಹೇಳಲಾಯಿತು.[೨]:369-377 ಸ್ಥಗಿತಗೊಂಡ ಪ್ರತಿವಾದಸಂಪಾದಿಸಿ ನವೆಂಬರ್ 16ರಂದು, ಫಿರ್ಯಾದಿ ಪಕ್ಷವು ತನ್ನ ಪ್ರಕರಣಕ್ಕೆ ವಿಶ್ರಾಂತಿಯನ್ನು ನೀಡಿತು. ಮೂರು ದಿನಗಳು ನಂತರ, ಪ್ರಮಾಣಕ ಬರಖಾಸ್ತು ಅರ್ಜಿಗಳ ಕುರಿತು ವಾದ ಮಾಡಿದ ಮೇಲೆ, ಒಂದೇ ಒಂದು ಸಾಕ್ಷಿಯನ್ನು ಕರೆಯದೆಯೇ ಸ್ಥಗಿತಗೊಳ್ಳುವ ಮೂಲಕ ಪ್ರತಿವಾದದ ಪಕ್ಷವು ನ್ಯಾಯಾಲಯವನ್ನು ದಿಗ್ಭ್ರಾಂತಗೊಳಿಸಿತು. ಇದನ್ನು ಒಪ್ಪದೆ ಕೂಗಲು ಪ್ರಾರಂಭಿಸಿದ ಅಟ್ಕಿನ್ಸ್‌, ಕ್ರೆನ್‌ವಿಂಕೆಲ್‌‌, ಮತ್ತು ವ್ಯಾನ್‌‌ ಹೌಟನ್‌ ಮೊದಲಾದವರು, ಸಾಕ್ಷಿ ಒದಗಿಸುವುದಕ್ಕೆ ಸಂಬಂಧಿಸಿದ ತಮ್ಮ ಹಕ್ಕಿಗಾಗಿ ಬೇಡಿಕೆ ಸಲ್ಲಿಸಿದರು.[೨]:382-388 ನ್ಯಾಯಾಧಿಪತಿಯ ವಿಚಾರಣಾ ಕೊಠಡಿಯಲ್ಲಿ ನ್ಯಾಯಾಧೀಶನೊಂದಿಗೆ ಮಹಿಳೆಯರ ವಕೀಲರು ಮಾತನಾಡುತ್ತಾ, ತಮ್ಮ ಕಕ್ಷಿದಾರರು ಅಪರಾಧಗಳನ್ನು ಎಸಗಲು ಯೋಜಿಸಿದ್ದರ ಮತ್ತು ಅಪರಾಧಗಳನ್ನು ಎಸಗಿದ್ದರ ಕುರಿತಾಗಿ ಹಾಗೂ ಈ ಪ್ರಕರಣದಲ್ಲಿ ಮ್ಯಾನ್ಸನ್‌ ತೊಡಗಿಸಿಕೊಂಡಿರಲಿಲ್ಲ ಎಂಬುದಕ್ಕೆ ಸಾಕ್ಷಿ ಒದಗಿಸಲು ಬಯಸಿದ್ದಾರೆ ಎಂದು ತಿಳಿಸಿದರು.[೨]:382-388 ತಮ್ಮ ಪ್ರಕರಣವನ್ನು ಸ್ಥಗಿತಗೊಳಿಸುವ ಮೂಲಕ, ಪ್ರತಿವಾದಿ ವಕೀಲರು ಇದನ್ನು ನಿಲ್ಲಿಸಲು ಪ್ರಯತ್ನಿಸಿದ್ದರು; ವ್ಯಾನ್‌ ಹೌಟನ್‌ಳ ನ್ಯಾಯವಾದಿಯಾದ ರೊನಾಲ್ಡ್‌‌ ಹ್ಯೂಸ್‌ ಭಾವಾವೇಶದಿಂದ ಮಾತನಾಡುತ್ತಾ, "ಓರ್ವ ಕಕ್ಷಿದಾರನನ್ನು ಕಿಟಕಿಯಿಂದ ಆಚೆಗೆ ನೂಕಲು" ತಾನು ಅವಕಾಶಕೊಡುವುದಿಲ್ಲ ಎಂದು ಹೇಳಿದ. ಮ್ಯಾನ್ಸನ್‌‌ ತನ್ನನ್ನು ಉಳಿಸಿಕೊಳ್ಳುವ ಸಲುವಾಗಿ ಈ ವಿಧಾನದಲ್ಲಿ ಸಾಕ್ಷಿ ಒದಗಿಸುವಂತೆ ಮಹಿಳೆಯರಿಗೆ ಸಲಹೆ ನೀಡುತ್ತಿದ್ದ ಎಂಬುದು ಅಭಿಯೋಜಕನ ಅಭಿಪ್ರಾಯವಾಗಿತ್ತು.[೨]:382-388 1987ರಲ್ಲಿ ಬಂದ ಸಾಕ್ಷ್ಯಚಿತ್ರವೊಂದರಲ್ಲಿ ಸದರಿ ವಿಚಾರಣೆಯ ಕುರಿತು ಕ್ರೆನ್‌ವಿಂಕೆಲ್‌ ಮಾತನಾಡುತ್ತಾ, "ಸಮಗ್ರ ನಡಾವಳಿಗಳನ್ನು ಚಾರ್ಲೀಯು ರೂಪಿಸಿದ್ದ" ಎಂದು ತಿಳಿಸಿದಳು.[೬೨] ಮಾರನೆಯ ದಿನ, ಮ್ಯಾನ್ಸನ್‌‌ ಸಾಕ್ಷ್ಯ ನೀಡಿದ. ತನ್ನ ಸಹ-ಪ್ರತಿವಾದಿಗಳನ್ನು ಸಿಕ್ಕಿಹಾಕಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ, ಜನರು v. ಅರಾಂಡಾ ಪ್ರಕರಣದಲ್ಲಿನ ಕ್ಯಾಲಿಫೋರ್ನಿಯಾ ಸರ್ವೋಚ್ಚ ನ್ಯಾಯಾಲಯದ ತೀರ್ಮಾನವನ್ನು ಅವನು ಉಲ್ಲಂಘಿಸಲು ಆಗದ ಹಾಗೆ, ನ್ಯಾಯದರ್ಶಿ ಮಂಡಲಿಯನ್ನು ನ್ಯಾಯಾಲಯದ ಕೋಣೆಯಿಂದ ತೆಗೆದುಹಾಕಲಾಯಿತು.[೨]:134 ಒಂದು ಗಂಟೆಗೂ ಹೆಚ್ಚಿನ ಅವಧಿಯವರೆಗೆ ಮ್ಯಾನ್ಸನ್‌‌ ಮಾತನಾಡುತ್ತಾ, ಇತರ ವಿಷಯಗಳ ಪೈಕಿ, "ಸ್ಥಾಪಿತ ಪದ್ಧತಿಯ ವಿರುದ್ಧ ಎದ್ದು ನಿಲ್ಲುವಂತೆ ಯುವಜನಾಂಗಕ್ಕೆ ಸಂಗೀತವು ಹೇಳುತ್ತಿದೆ" ಎಂದು ತಿಳಿಸಿದ. ಆತ ತನ್ನ ಮಾತನ್ನು ಮುಂದುವರಿಸುತ್ತಾ, "ನನ್ನ ಮೇಲೆಯೇ ಏಕೆ ಆರೋಪ ಹೊರಿಸುತ್ತೀರಿ? ನಾನು ಸಂಗೀತವನ್ನು ಸಂಯೋಜಿಸಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, 'ಒಂದು ಚಾಕುವನ್ನು ತೆಗೆದುಕೋ, ಬಟ್ಟೆಗಳನ್ನು ಬದಲಾಯಿಸು, ಮತ್ತು ಟೆಕ್ಸ್‌‌ ಏನನ್ನು ಹೇಳುತ್ತಾನೋ ಅದನ್ನು ಮಾಡು' ಎಂಬುದಾಗಿ ನಾನೆಂದಾದರೂ ಹೇಳಿದ್ದು ನನಗೆ ನೆನಪಿಗೆ ಬರುತ್ತಿಲ್ಲ" ಎಂದು ನುಡಿದ.[೨][೨]:388-392 ವಿಚಾರಣೆಯ ಪ್ರಧಾನಭಾಗವು ಸಮಾಪ್ತವಾಗುತ್ತಿದ್ದಂತೆ ಮತ್ತು ಮುಕ್ತಾಯದ ವಾದಗಳು ಸನ್ನಿಹಿತವಾದಂತೆ, ವಾರಾಂತ್ಯ ಪ್ರವಾಸವೊಂದರ ಸಂದರ್ಭದಲ್ಲಿ ನ್ಯಾಯವಾದಿ ರೊನಾಲ್ಡ್‌‌ ಹ್ಯೂಸ್‌ ಕಣ್ಮರೆಯಾದ.[೨]:393-398 ಹ್ಯೂಸ್‌ನ ಗೈರುಹಾಜರಿಯಲ್ಲಿ ವ್ಯಾನ್‌ ಹೌಟನ್‌ಳನ್ನು ಪ್ರತಿನಿಧಿಸಲೆಂದು ಮ್ಯಾಕ್ಸ್‌‌ವೆಲ್‌‌ ಕೀತ್‌ ಎಂಬಾತ ನೇಮಿಸಲ್ಪಟ್ಟಾಗ, ಹಲವು ಸಂಪುಟಗಳುಳ್ಳ ವಿಚಾರಣೆ ಪ್ರತಿಲಿಪಿಗಳನ್ನು ತಾನು ಪರಿಚಯ ಮಾಡಿಕೊಳ್ಳಲು ಕೀತ್‌‌ಗೆ ಅನುವುಮಾಡಿಕೊಡಲು, ಎರಡು ವಾರಗಳಿಗಿಂತ ಹೆಚ್ಚಿನ ಒಂದು ವಿಳಂಬಿತ ಅವಧಿಯ ಅಗತ್ಯ ಕಂಡುಬಂತು.[೨]:393-398 ಕ್ರಿಸ್‌ಮಸ್ ಪ್ರಾರಂಭವಾಗುವುದಕ್ಕೆ ಸ್ವಲ್ಪವೇ ಮುಂಚಿತವಾಗಿ ವಿಚಾರಣೆ ಮತ್ತೆ ಶುರುವಾಗುತ್ತಿದ್ದಂತೆಯೇ, ಫಿರ್ಯಾದಿ ಪಕ್ಷದ ಮುಕ್ತಾಯದ ವಾದಕ್ಕೆ ಪ್ರತಿವಾದಿಗಳು ಉಂಟುಮಾಡಿದ ಅಡೆತಡೆಯ ಕಾರಣದಿಂದಾಗಿ, ಶಿಕ್ಷಾರ್ಹತೆಯ ಹಂತದ ಉಳಿದ ಭಾಗಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತಿವಾದಿಗಳನ್ನು ನ್ಯಾಯಾಲಯದ ಕೋಣೆಯಿಂದ ಓಲ್ಡರ್‌ ನಿಷೇಧಿಸಬೇಕಾಗಿ ಬಂತು. ಈ ಕುರಿತು ಓಲ್ಡರ್‌‌ ಮಾತನಾಡುತ್ತಾ, ಪ್ರತಿವಾದಿಗಳು ಪರಸ್ಪರರೊಂದಿಗೆ ಮಾಡಿಕೊಂಡ ಗುಟ್ಟಿನ ಒಪ್ಪಂದದ ಅನುಸಾರ ನಡೆದುಕೊಳ್ಳುತ್ತಿದ್ದರು ಹಾಗೂ ಅದನ್ನು ಕೇವಲ ಪ್ರಸ್ತುತ ಪಡಿಸುತ್ತಿದ್ದರು ಎಂಬುದು ಇಲ್ಲಿ ಸುಸ್ಪಷ್ಟವಾಗಿತ್ತು ಎಂದು ತಿಳಿಸಿದ.[೨]:399-407 ಅಪರಾಧ ನಿರ್ಣಯ ಮತ್ತು ದಂಡನೆಯ ಹಂತಸಂಪಾದಿಸಿ 1971ರ ಜನವರಿ 25ರಂದು, ನಾಲ್ಕು ಪ್ರತಿವಾದಿಗಳ ವಿರುದ್ಧವಾಗಿದ್ದ ತಲಾ ಇಪ್ಪತ್ತೇಳು ಪ್ರತ್ಯೇಕ ಆಪಾದನೆಗಳನ್ನು ಆಧರಿಸಿ, ಅವರು ತಪ್ಪಿತಸ್ಥರೆಂಬ ತೀರ್ಪುಗಳು ನೀಡಲ್ಪಟ್ಟವು.[೨]:411-419 ವಿಚಾರಣೆಯ ದಂಡನೆಯ ಹಂತದೊಳಗೆ ತೀರಾ ದೂರಕ್ಕೆ ಸಾಗದೆ, ಮ್ಯಾನ್ಸನ್‌‌ ಏನನ್ನು ಪ್ರಸ್ತುತಪಡಿಸಲು ಯೋಜಿಸಿದ್ದಾನೆ ಎಂಬುದನ್ನು ನ್ಯಾಯದರ್ಶಿಗಳು ಫಿರ್ಯಾದಿ ಪಕ್ಷದ ದೃಷ್ಟಿಕೋನದಲ್ಲಿ ಕೊನೆಗೂ ಕಂಡುಕೊಂಡರು.[೨]:455 ಅಟ್ಕಿನ್ಸ್‌ಗೆ ಈಗ ಹೆಸರು ಬರಲು ಕಾರಣವಾದ ಹಿನ್ಮನ್‌‌ ಕೊಲೆಯ "ಅಂಧಾನುಕರಣೆಯ" ಆವೃತ್ತಿಗಳಾಗಿ ಸದರಿ ಕೊಲೆಗಳು ಗ್ರಹಿಸಲ್ಪಟ್ಟಿವೆ ಎಂಬುದಾಗಿ ಅಟ್ಕಿನ್ಸ್‌, ಕ್ರೆನ್‌ವಿಂಕೆಲ್‌‌, ಮತ್ತು ವ್ಯಾನ್‌ ಹೌಟನ್‌ ಸಾಕ್ಷ್ಯ ನೀಡಿದರು. ಅವರು ಹೇಳಿದ ಪ್ರಕಾರ, ಬಾಬ್ಬಿ ಬ್ಯೂಸೊಲೈಲ್‌ಗೆ ಜೈಲುಶಿಕ್ಷೆಯು ವಿಧಿಸಲ್ಪಡಲು ಕಾರಣವಾಗಿದ್ದ ಅಪರಾಧವನ್ನು ಹೋಲುವ ಮೂಲಕ, ಅವನ ಮೇಲಿದ್ದ ಸಂದೇಹವನ್ನು ಹೊರಸೆಳೆಯುವ ಉದ್ದೇಶವನ್ನು ಈ ಹತ್ಯೆಗಳು ಹೊಂದಿದ್ದವು. ಸಾಮಾನ್ಯವಾಗಿ ಭಾವಿಸಲಾದಂತೆ, ಈ ಯೋಜನೆಯು ಮ್ಯಾನ್ಸನ್‌ನದಾಗಿರಲಿಲ್ಲ, ಮತ್ತು ಅವನ ಮಾರ್ಗದರ್ಶನದ ಅಡಿಯಲ್ಲಿ ಇದು ನಿರ್ವಹಿಸಲ್ಪಡಲಿಲ್ಲ; ಆದರೆ ಬ್ಯೂಸೊಲೈಲ್‌ ಜೊತೆಯಲ್ಲಿ ಪ್ರೇಮವ್ಯವಹಾರವನ್ನು ಇಟ್ಟುಕೊಂಡಿದ್ದಳು ಎಂದು ಹೇಳಲ್ಪಡುತ್ತಿದ್ದ ಲಿಂಡಾ ಕಸಾಬಿಯನ್‌‌ ಇದಕ್ಕೆ ಕಾರಣಲಾಗಿದ್ದಳು.[೨]:424-433 ತಾನು ಈ ಹಿಂದೆ ಸಮರ್ಥಿಸಿಕೊಳ್ಳುತ್ತಿದ್ದಂತೆ, ಹಿನ್ಮನ್‌‌ ಮನೆಯಲ್ಲಿನ ಮೊದಲ ಜಾಗದಲ್ಲಿ "ರಾಜಕೀಯ ಹಂದಿಮರಿ" ಎಂಬುದಾಗಿ ತಾನು ಬರೆದಿದ್ದೇಕೆ ಎಂಬುದನ್ನು ವಿವರಿಸಲು ಅಟ್ಕಿನ್ಸ್‌ ಅಸಮರ್ಥಳಾಗಿದ್ದುದು ನಿರೂಪಣಾ ತಂತ್ರದ ದುರ್ಬಲ ಅಂಶಗಳಲ್ಲಿ ಒಂದಾಗಿತ್ತು.[೨]:424-433, 450-457 ದಂಡನೆಯ ಹಂತದ ಮಾರ್ಗಮಧ್ಯದಲ್ಲಿ, ಮ್ಯಾನ್ಸನ್‌‌ ತನ್ನ ತಲೆಯನ್ನು ಬೋಳಿಸಿಕೊಂಡ, ಒಂದು ಕವಲುಗೋಲಿನ ರೀತಿಯಲ್ಲಿ ತನ್ನ ಗಡ್ಡವನ್ನು ಕತ್ತರಿಸಿ ಒಪ್ಪವಾಗಿಸಿಕೊಂಡ; ಈ ಕುರಿತು ಪತ್ರಿಕೆಯವರೊಂದಿಗೆ ಅವನು ಮಾತನಾಡುತ್ತಾ, "ನಾನೊಂದು ಭೂತ, ಭೂತವು ಯಾವಾಗಲೂ ಒಂದು ಬೋಳು ತಲೆಯನ್ನು ಹೊಂದಿರುತ್ತದೆ" ಎಂದು ತಿಳಿಸಿದ.[೨]:439 ಮ್ಯಾನ್ಸನ್‌‌ನ ಅನುಕರಣೆಯು ಮಾತ್ರವೇ ಅವನ ಪ್ರಾಬಲ್ಯವನ್ನು ಸಾಬೀತುಮಾಡಿದೆ ಎಂಬುದನ್ನು ತಡವಾದ ಗುರುತಿಸುವಿಕೆ ಎಂದು ಫಿರ್ಯಾದಿ ಪಕ್ಷವು ಪರಿಗಣಿಸಿದ ಸಂದರ್ಭದಲ್ಲಿ, ಮರಣದಂಡನೆಗೆ ಸಂಬಂಧಿಸಿದಂತೆ ಸಂಸ್ಥಾನ‌ವು ಮಾಡಿಕೊಂಡ ಮನವಿಯನ್ನು ತೂಗಿನೋಡಿ ಪರಾಮರ್ಶಿಸಲು ನ್ಯಾಯದರ್ಶಿಗಳು ಕಾಲಾವಕಾಶವನ್ನು ತೆಗೆದುಕೊಳ್ಳುವವರೆಗೆ, ಸ್ತ್ರೀ ಪ್ರತಿವಾದಿಗಳು ತಮ್ಮ ತಲೆಗಳನ್ನು ಬೋಳಿಸದೆ ಯಥಾಸ್ಥಿತಿಯನ್ನು ಕಾಯ್ದುಕೊಂಡರು.[೨]:439, 455 "ಅಂಧಾನುಕರಣೆಯ" ಸನ್ನಿವೇಶಗಳ ಮೂಲಕ ಮ್ಯಾನ್ಸನ್‌‌ನ್ನು ದೋಷಮುಕ್ತಗೊಳಿಸುವ ಪ್ರಯತ್ನವು ವಿಫಲವಾಯಿತು. 1971ರ ಮಾರ್ಚ್‌ 29ರಂದು, ಎಲ್ಲಾ ನಾಲ್ಕೂ ಪ್ರತಿವಾದಿಗಳ ವಿರುದ್ಧವಾಗಿದ್ದ ಆಪಾದನೆಗಳನ್ನು ಆಧರಿಸಿ, ನ್ಯಾಯದರ್ಶಿ ಮಂಡಲಿಯು ಅವರ ವಿರುದ್ಧ ಮರಣದಂಡನೆಯ ತೀರ್ಪು ನೀಡಿತು.[೨]:450-457 1971ರ ಏಪ್ರಿಲ್‌‌ 19ರಂದು, ನ್ಯಾಯಾಧೀಶ ಓಲ್ಡರ್‌‌ ಈ ನಾಲ್ಕೂ ಮಂದಿಗೆ ಮರಣದಂಡನೆಯನ್ನು ವಿಧಿಸಿದ.[೨]:458-459 ಮರಣದಂಡನೆಯನ್ನು ಶಿಫಾರಸು ಮಾಡುವ ತೀರ್ಪುಗಳು ಹೇಳಲ್ಪಟ್ಟ ದಿನದಂದು, ಮಿಂಚಿನ ಸುದ್ದಿಯೊಂದು ಚಲಾವಣೆಗೆ ಬಂದಿತು; ತೀರಾ ಶಿಥಿಲಗೊಂಡಿರುವ ರೊನಾಲ್ಡ್‌‌ ಹ್ಯೂಸ್‌ ಶರೀರವು ವೆಂಚುರಾ ಜಿಲ್ಲೆಯಲ್ಲಿನ ಎರಡು ದುಂಡಾದ ಬಂಡೆಗಳ ನಡುವೆ ಸಿಕ್ಕಿಕೊಂಡಿರುವುದು ಕಂಡುಬಂದಿದೆ ಎಂಬುದೇ ಆ ಸುದ್ದಿಯಾಗಿತ್ತು.[೨]:457 ಎಂದಿಗೂ ಸಾಬೀತಾಗದಿದ್ದರೂ ಹಬ್ಬಿಕೊಂಡ ಗಾಳಿಸುದ್ದಿಯ ಅನುಸಾರ, ಸಮುದಾಯದ ಸದಸ್ಯರಿಂದ ಹ್ಯೂಸ್‌ ಕೊಲೆಯು ನಡೆಯಿತು; ಅವನು ಮ್ಯಾನ್ಸನ್‌‌ನ ಮಟ್ಟದವರೆಗೆ ಎದ್ದುನಿಂತಿದ್ದು, ನಿಲುವನ್ನು ತೆಗೆದುಕೊಳ್ಳಲು ಹಾಗೂ ಅಪರಾಧಗಳಿಂದ ಮ್ಯಾನ್ಸನ್‌‌ನ್ನು ಮುಕ್ತಗೊಳಿಸಲು ವ್ಯಾನ್‌ ಹೌಟನ್‌ಗೆ ಅವಕಾಶ ಮಾಡಲು ನಿರಾಕರಿಸಿದ್ದು ಪ್ರಾಯಶಃ ಅವನ ಕೊಲೆಗೆ ಕಾರಣವಾಗಿತ್ತು.[೨]:387, 394, 481 ಪ್ರವಾಹದಲ್ಲಿ ಸಿಕ್ಕಿಕೊಂಡಿದ್ದರಿಂದ[೨]:393-394, 481[೬೩] ಅವನು ನಾಶವಾಗಿದ್ದಿರಲು ಸಾಧ್ಯವಿತ್ತಾದರೂ, ಸಮುದಾಯದ ಸದಸ್ಯನಾದ ಸ್ಯಾಂಡ್ರಾ ಗುಡ್‌ ವಿವರಿಸಿದ ಪ್ರಕಾರ, ಹ್ಯೂಸ್‌ "ಪ್ರತೀಕಾರ ಕೊಲೆಗಳ ಪೈಕಿ ಮೊದಲಿಗನಾಗಿದ್ದ."[೨]:481-482, 625 ತನ್ನ ಬಂಧನಕ್ಕೆ[೬೪] ಒಂದು ತಿಂಗಳು ಮುಂಚಿತವಾಗಿ, ತನ್ನ ಸ್ವಂತ ಊರಾದ ಟೆಕ್ಸಾಸ್‌‌ನಲ್ಲಿ[೨]:204-210, 356-361[೬೫] ಮತ್ತೆನೆಲೆಸಿದ್ದ ವ್ಯಾಟ್ಸನ್‌ನ್ನು ಅಲ್ಲಿಂದ ವಶಕ್ಕೆ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಲಂಬಿಸಲ್ಪಟ್ಟ ನಡಾವಳಿಗಳು, ಅವನು ಪ್ರತ್ಯೇಕವಾಗಿ ನ್ಯಾಯವಿಚಾರಣೆಗಾಗಿ ಒಳಪಡಿಸಲ್ಪಡುವುದಕ್ಕೆ ಕಾರಣವಾದವು. 1971ರ ಆಗಸ್ಟ್‌‌ನಲ್ಲಿ ವಿಚಾರಣೆಯು ಪ್ರಾರಂಭವಾಯಿತು; ಅಕ್ಟೋಬರ್‌‌ ವೇಳೆಗೆ, ಅವನೂ ಸಹ ಏಳು ಕೊಲೆಯ ಆಪಾದನೆಗಳು ಹಾಗೂ ಒಂದು ಒಳಸಂಚಿಗೆ ಸಂಬಂಧಿಸಿದಂತೆ ತಪ್ಪಿತಸ್ಥನಾಗಿ ಕಂಡುಬಂದಿದ್ದ. ಇತರರಿಗಿಂತ ಭಿನ್ನವಾಗಿ, ಒಂದು ಮನೋವೈದ್ಯಕೀಯ ಪ್ರತಿವಾದವನ್ನು ವ್ಯಾಟ್ಸನ್‌‌ ಸಾದರಪಡಿಸಿದ್ದ; ವ್ಯಾಟ್ಸನ್‌‌ನ ಹುಚ್ಚುತನದ ಸಮರ್ಥನೆಗಳ ಕುರಿತು ಅಭಿಯೋಜಕ ವಿನ್ಸೆಂಟ್‌ ಬುಗ್ಲಿಯೊಸಿ ಸಣ್ಣಪುಟ್ಟ ತಯಾರಿಯನ್ನು ಮಾಡಿಕೊಂಡಿದ್ದ. ಅವನ ಸಹ-ಪಿತೂರಿಗಾರರ ರೀತಿಯಲ್ಲಿ, ವ್ಯಾಟ್ಸನ್‌‌ಗೂ ಸಹ ಮರಣ ದಂಡನೆಯು ವಿಧಿಸಲ್ಪಟ್ಟಿತು.[೨]:463-468 1972ರ ಫೆಬ್ರುವರಿಯಲ್ಲಿ, ಎಲ್ಲಾ ಐದೂ ಸಹಭಾಗಿಗಳ ಮರಣ ದಂಡನೆಗಳು, ಕ್ಯಾಲಿಫೋರ್ನಿಯಾ v. ಆಂಡರ್‌ಸನ್‌‌ 493 ಪುಟ 2ನೇ 880, 6 ಕ್ಯಾಲಿಫೋರ್ನಿಯಾ 3ನೇ 628 (ಕ್ಯಾಲಿಫೋರ್ನಿಯಾ 1972) ದೆಸೆಯಿಂದಾಗಿ ಜೀವಾವಧಿ ಶಿಕ್ಷೆಯಾಗಿ ತಾನೇತಾನಾಗಿ ತಗ್ಗಿಸಲ್ಪಟ್ಟವು; ಇದರ ಅನುಸಾರ ಕ್ಯಾಲಿಫೋರ್ನಿಯಾದ ಸರ್ವೋಚ್ಚ ನ್ಯಾಯಾಲಯವು ಆ ಸಂಸ್ಥಾನದಲ್ಲಿ ಮರಣದಂಡನೆಯನ್ನು ರದ್ದುಮಾಡಿತು‌.[೨]:488-491 ಸೆರೆಮನೆಗೆ ಮ್ಯಾನ್ಸನ್ ಹಿಂದಿರುಗಿದ ನಂತರ, ಅವನ ಆಕರ್ಷಕ ಭಾಷಣಕಲೆ ಮತ್ತು ಹಿಪ್ಪಿ ಭಾಷಣಗಳು ಸ್ವೀಕರಿಸಲ್ಪಡಲಿಲ್ಲ.[who?] ಅಂತಿಮವಾಗಿ ಆತ ಆರ್ಯನ್‌ ಸೋದರಿಕೆಯಿಂದ ತಾತ್ಕಾಲಿಕ ಸ್ವೀಕೃತಿಯನ್ನು ಕಂಡುಕೊಂಡನಾದರೂ, ಸ್ಯಾನ್‌ ಕ್ವೆಂಟಿನ್‌‌‌‌ನಲ್ಲಿನ ಲೈಂಗಿಕವಾಗಿ ಆಕ್ರಮಣಶೀಲನಾಗಿರುವ ಗುಂಪಿನ ಸದಸ್ಯನಿಗೆ ಮಣಿಯಲು ಸಿದ್ಧನಾಗಿರುವುದು ಅವನ ಪಾತ್ರವಾಗಿತ್ತು.[೬೬] ಅವನ ಟೇಟ್‌/ಲೇಬಿಯಾಂಕಾ ಅಪರಾಧ ನಿರ್ಣಯಗಳ ನಂತರ 1971ರಲ್ಲಿ ನಡೆದ ಒಂದು ವಿಚಾರಣೆಯಲ್ಲಿ, ಗ್ಯಾರಿ ಹಿನ್ಮನ್‌‌ ಮತ್ತು ಡೊನಾಲ್ಡ್‌‌ "ಷಾರ್ಟಿ" ಷಿಯಾರ ಕೊಲೆಗಳಿಗೆ ಸಂಬಂಧಿಸಿದಂತೆ ಮ್ಯಾನ್ಸನ್‌‌ ತಪ್ಪಿತಸ್ಥನೆಂದು ನಿರ್ಣಯಿಸಲ್ಪಟ್ಟ ಹಾಗೂ ಅವನಿಗೆ ಜೀವಾವಧಿ ಶಿಕ್ಷೆಯೊಂದನ್ನು ನೀಡಲಾಯಿತು. ಸ್ಪಾಹ್ನ್‌‌ ಜಾನುವಾರು ಕ್ಷೇತ್ರದಲ್ಲಿ ಷಿಯಾ ಓರ್ವ ಸಾಹಸ-ಪ್ರದರ್ಶಕ ಮತ್ತು ಅಶ್ವಾರೋಹಿ ಗೋಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ; 1969ರ ಆಗಸ್ಟ್‌‌ 16ರಂದು ಜಾನುವಾರು ಕ್ಷೇತ್ರದ ಮೇಲೆ ಶಾಂತಿಪಾಲನಾ ಪಡೆಯ ದಾಳಿಯಾದ ಸರಿಸುಮಾರು ಹತ್ತು ದಿನಗಳ ನಂತರ, ಅವನು ಸಾಯಿಸಲ್ಪಟ್ಟ. ದಾಳಿಯಾಗುವಲ್ಲಿ ಷಿಯಾ ನೆರವು ನೀಡಿದ್ದಾನೆ ಎಂಬುದಾಗಿ ಶಂಕಿಸಿದ ಮ್ಯಾನ್ಸನ್, ಸಮುದಾಯವನ್ನು ಜಾನುವಾರು ಕ್ಷೇತ್ರದಿಂದ ಆಚೆಗೆ ಓಡಿಸುವಂತೆ ಸ್ಪಾಹ್ನ್‌ ಮೇಲೆ ಪ್ರಭಾವ ಬೀರಲು ಷಿಯಾ ಪ್ರಯತ್ನಿಸುತ್ತಿದ್ದಾನೆ ಎಂದು ಸ್ಪಷ್ಟವಾಗಿ ನಂಬಿದ್ದ. ಬಿಳಿಯ ಜನಾಂಗಕ್ಕೆ ಸೇರಿದ್ದ ಷಿಯಾ, ಓರ್ವ ಕರಿಯ ಜನಾಂಗದ ಹೆಂಗಸನ್ನು ಮದುವೆಯಾಗಿದ್ದ ಎಂಬ ಅಂಶವನ್ನು ಒಂದು "ಪಾಪ" ಎಂಬಂತೆ ಮ್ಯಾನ್ಸನ್‌ ಪರಿಗಣಿಬಹುದಾಗಿತ್ತು; ಮತ್ತು ಟೇಟ್‌/ಲೇಬಿಯಾಂಕಾ ಹತ್ಯೆಗಳ ಕುರಿತಾಗಿ ಷಿಯಾಗೆ ವಿಷಯಗಳು ಗೊತ್ತಿದ್ದ ಸಾಧ್ಯತೆಯಿತ್ತು.[೨]:99-113[೬೭] ಪ್ರತ್ಯೇಕ ವಿಚಾರಣೆಗಳಲ್ಲಿ, ಸಮುದಾಯದ ಸದಸ್ಯರಾದ ಬ್ರೂಸ್‌ ಡೇವಿಸ್‌‌ ಮತ್ತು ಸ್ಟೀವ್‌‌ "ಕ್ಲೆಮ್‌‌" ಗ್ರೋಗನ್‌‌ ಸಹ ಷಿಯಾನ ಕೊಲೆಯ ತಪ್ಪಿತಸ್ಥರೆಂದು ಕಂಡುಬಂತು.[೨]:99-113, 463-468[೬೮] ಟೇಟ್‌/ಲೇಬಿಯಾಂಕಾ ಕೊಲೆಗಳಿಗೆ ಸಂಬಂಧಿಸಿದಂತೆ ನಡೆಸಲಾದ ಮ್ಯಾನ್ಸನ್‌ನ ವಿಚಾರಣೆಯ ತೀರ್ಮಾನವು ಹೊರಬರುವುದಕ್ಕೆ ಮುಂಚಿತವಾಗಿ, ಲಾಸ್‌ ಏಂಜಲೀಸ್‌ ಟೈಮ್ಸ್‌‌ ಪತ್ರಿಕೆಯ ಓರ್ವ ವರದಿಗಾರನು, ಮರುಮದುವೆಯಾಗಿ ಪೆಸಿಫಿಕ್‌ ವಾಯವ್ಯ ಭಾಗದಲ್ಲಿ ವಾಸಿಸುತ್ತಿದ್ದ ಮ್ಯಾನ್ಸನ್‌‌ನ ತಾಯಿಯ ಸುಳಿವುಹಿಡಿದು ಬೆನ್ನಟ್ಟಿದ. ಹಿಂದಿನ ಕ್ಯಾಥ್ಲೀನ್‌‌ ಮೆಡಾಕ್ಸ್‌‌ ಒಂದಷ್ಟು ಸಮರ್ಥನೆಗಳನ್ನು ನೀಡುತ್ತಾ, ಬಾಲ್ಯದಲ್ಲಿ ತನ್ನ ಮಗನನ್ನು ಯಾವುದೇ ರೀತಿಯಲ್ಲಿ ಉಪೇಕ್ಷಿಸಲಿಲ್ಲ; ಅಷ್ಟೇ ಅಲ್ಲ, "ಅವನನ್ನು ಸುತ್ತುವರಿದಿದ್ದ ಎಲ್ಲಾ ಮಹಿಳೆಯರಿಂದ ಅವನು ಅತಿಯಾಗಿ ಮುದ್ದಿಸಲ್ಪಟ್ಟಿದ್ದ" ಎಂದು ತಿಳಿಸಿದಳು.[೮] ನೋಟದಲ್ಲಿ ಉಳಿದಿರುವುದುಸಂಪಾದಿಸಿ ಫಾಲ್ಸಾಮ್‌‌ ಸಂಸ್ಥಾನ‌ದ ಸೆರೆಮನೆಯು ಸೌಕರ್ಯಗಳಲ್ಲಿ ಒಂದಾಗಿದ್ದು ಇದರಲ್ಲಿ ಮ್ಯಾನ್ಸನ್‌‌ನ್ನು ಇರಿಸಲಾಗಿತ್ತು. 1975ರ ಸೆಪ್ಟೆಂಬರ್‌‌ 5ರಂದು, U.S. ಅಧ್ಯಕ್ಷ ಜೆರಾಲ್ಡ್‌ ಫೋರ್ಡ್‌ ಕೊಲೆಗೆ ಸ್ಕ್ವೀಕಿ ಫ್ರೋಮ್‌‌ ಪ್ರಯತ್ನಿಸಿದಾಗ, ಸಮುದಾಯವು ಮತ್ತೊಮ್ಮೆ ರಾಷ್ಟ್ರದ ಗಮನವನ್ನು ಸೆಳೆಯಿತು.[೨]:502-511 ಸ್ಯಾಕ್ರಮೆಂಟೊದಲ್ಲಿ ಈ ಪ್ರಯತ್ನವು ನಡೆಯಿತು; ಫಾಲ್ಸಾಮ್‌‌ ಸಂಸ್ಥಾನ‌ದ ಸೆರೆಮನೆಯಲ್ಲಿ ಮ್ಯಾನ್ಸನ್‌‌ನ್ನು ಸೆರೆಯಲ್ಲಿಟ್ಟಿದ್ದ ಸಂದರ್ಭದಲ್ಲಿ, ಅವನಿಗೆ ಹತ್ತಿರದಲ್ಲಿ ವಾಸಿಸಲು ಸ್ಯಾಕ್ರಮೆಂಟೊಗೆ ಸ್ಕ್ವೀಕಿ ಫ್ರೋಮ್ ಹಾಗೂ ಮ್ಯಾನ್ಸನ್‌‌ನ ಅನುಯಾಯಿಯಾದ ಸ್ಯಾಂಡ್ರಾ ಗುಡ್‌ ತೆರಳಿದಾಗ ಈ ಪ್ರಯತ್ನವು ನಡೆಯಿತು. ಫ್ರೋಮ್‌‌, ಗುಡ್‌, ಮತ್ತು ಸಮುದಾಯಕ್ಕೆ ಹೊಸದಾಗಿ ನೇಮಕಗೊಂಡ ಒಬ್ಬಳು ಸೇರಿಕೊಂಡು ಹಂಚಿಕೊಂಡಿದ್ದ ವಾಸದ ಮಹಡಿಯ ಶೋಧವೊಂದನ್ನು ತರುವಾಯದಲ್ಲಿ ಕೈಗೊಂಡಾಗ, ಪುರಾವೆಯೊಂದು ಹೊರಬಿದ್ದಿತು; ಸ್ಯಾಂಡ್ರಾ ಗುಡ್‌ ನಂತರದಲ್ಲಿ ಕೈಗೊಂಡ ಕ್ರಮಗಳನ್ನು ಪರಿಗಣಿಸಿದಾಗ, ಅವಳು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪತ್ರವ್ಯವಸ್ಥೆಯ ಮೂಲಕ ಬೆದರಿಕೆಯ ಸಂದೇಶಗಳನ್ನು ಕಳಿಸಲು ಸಂಚುಹೂಡಿದ್ದು, ಮತ್ತು ಅಂತರ-ಸಂಸ್ಥಾನ‌ದ ವ್ಯವಹಾರದ ಮೂಲಕ ಕೊಲೆಯ ಬೆದರಿಕೆಗಳನ್ನು ರವಾನಿಸಿದ್ದರ ಪುರಾವೆಯು ಲಭ್ಯವಾಗಿ, ಅವಳನ್ನು ಅಪರಾಧಿಯೆಂದು ನಿರ್ಣಯಿಸುವುದು ಸಾಧ್ಯವಾಯಿತು. (ಸಾಂಸ್ಥಿಕ ಕಾರ್ಯನಿರ್ವಾಹಕರು ಹಾಗೂ US ಸರ್ಕಾರಿ ಅಧಿಕಾರಿಗಳ ವಿರುದ್ಧವಾಗಿ ಬೆದರಿಕೆಗಳು ಬಂದಿದ್ದವು ಮತ್ತು ಹಾಗೆಂದು ಭಾವಿಸಲಾದ ಅವರ ಪರಿಸರೀಯ ಕರ್ತವ್ಯಲೋಪಕ್ಕೆ ಅವು ಸಂಬಂಧಿಸಿದ್ದವು.)[೨]:502-511 ಫ್ರೋಮ್‌‌ಗೆ 15 ವರ್ಷಗಳ ಅವಧಿಯ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು; ತನ್ಮೂಲಕ ಅವಳು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸಂಹಿತೆಯ ಶೀರ್ಷಿಕೆ 18, ಅಧ್ಯಾಯ 84 (1965)[೬೯] ಅಡಿಯಲ್ಲಿ ದಂಡನೆ ವಿಧಿಸಲ್ಪಟ್ಟ ಮೊದಲ ವ್ಯಕ್ತಿ ಎನಿಸಿಕೊಂಡಳು; ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರನ್ನು ಕೊಲ್ಲಲು ಮಾಡಿದ ಪ್ರಯತ್ನವು, ಇದರ ಅನುಸಾರ ಒಕ್ಕೂಟ ವ್ಯವಸ್ಥೆಯಲ್ಲಿನ ಒಂದು ಅಪರಾಧವಾಗಿತ್ತು. 1977ರಲ್ಲಿ, ಷಾರ್ಟಿ ಷಿಯಾನ ಅವಶೇಷಗಳ ಕರಾರುವಾಕ್ಕಾದ ತಾಣವನ್ನು ಅಧಿಕಾರಿ ವರ್ಗದವರು ಕಂಡುಕೊಂಡರು. ಅಲ್ಲಿ ಸಿಕ್ಕ ಸುಳುಹುಗಳು ಸಮುದಾಯದವರ ಸಮರ್ಥನೆಗಳಿಗೆ ವ್ಯತಿರಿಕ್ತವಾಗಿದ್ದವು; ಷಿಯಾನ ದೇಹದ ಅಂಗಚ್ಛೇದನವನ್ನು ಮಾಡಿರಲಿಲ್ಲ ಹಾಗೂ ಹಲವಾರು ಪ್ರದೇಶಗಳಲ್ಲಿ ಅವನ್ನು ಹೂತಿಡಲಾಗಿರಲಿಲ್ಲ ಎಂಬ ಅಂಶವೂ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿತು. ಅವನ ಪ್ರಕರಣದಲ್ಲಿ ಅಭಿಯೋಜಕನನ್ನು ಸಂಪರ್ಕಿಸಿದ ಸ್ಟೀವ್‌‌ ಗ್ರೋಗನ್‌‌, ಷಿಯಾನ ಕಳೇಬರವನ್ನು ಇಡಿಯಾಗಿ ಸಮಾಧಿ ಮಾಡಲಾಗಿದೆ ಎಂದು ಅವನಿಗೆ ತಿಳಿಸಿದ; ಶರೀರವನ್ನು ದಫನುಮಾಡಲಾಗಿದ್ದ ತಾಣವನ್ನು ಖಚಿತವಾಗಿ ತೋರಿಸುವ ಒಂದು ನಕಾಶೆಯನ್ನು ಅವನು ಬರೆದ. ಈ ನಕಾಶೆಯನ್ನು ಅವನಿಂದ ಪಡೆದುಕೊಳ್ಳಲಾಯಿತು. ಮ್ಯಾನ್ಸನ್‌‌-ಆದೇಶಿಸಿದ ಕೊಲೆಗಳನ್ನು ನಡೆಸಿದವರೆಂದು ರುಜುವಾತು ಪಡಿಸಲ್ಪಟ್ಟವರ ಪೈಕಿ, 1985ರಲ್ಲಿ ಗ್ರೋಗನ್‌‌ ಮೊದಲನೆಯವ ಎನಿಸಿಕೊಂಡ- ಮತ್ತು, as of 2009[update], ಪೆರೋಲು ಪಡೆದವರಲ್ಲಿ ಏಕೈಕ ವ್ಯಕ್ತಿಯೆನಿಸಿಕೊಂಡ.[೨]:509 1980ರ ದಶಕದಲ್ಲಿ, ಮ್ಯಾನ್ಸನ್‌‌ ಮೂರು ಗಮನಾರ್ಹ ಸಂದರ್ಶನಗಳನ್ನು ನೀಡಿದ. ಮೊದಲ ಸಂದರ್ಶನವು ಕ್ಯಾಲಿಫೋರ್ನಿಯಾ ಮೆಡಿಕಲ್‌ ಫೆಸಿಲಿಟಿಯಲ್ಲಿ ಧ್ವನಿಮುದ್ರಿಸಲ್ಪಟ್ಟಿತು ಮತ್ತು 1981ರ ಜೂನ್‌‌ 13ರಂದು ಬಿತ್ತರಗೊಂಡಿತು; NBC ವಾಹಿನಿಯ ದಿ ಟುಮಾರೊ ಷೋ ಎಂಬ ಕಾರ್ಯಕ್ರಮಕ್ಕಾಗಿ ಟಾಮ್‌ ಸ್ನೈಡರ್‌‌ ಈ ಸಂದರ್ಶನವನ್ನು ಮಾಡಿದ್ದ. ಎರಡನೇ ಸಂದರ್ಶನವು ಸ್ಯಾನ್‌ ಕ್ವೆಂಟಿನ್‌ ಸೆರೆಮನೆಯಲ್ಲಿ ಧ್ವನಿಮುದ್ರಿಸಲ್ಪಟ್ಟಿತು ಮತ್ತು 1986ರ ಮಾರ್ಚ್‌ 7ರಂದು ಬಿತ್ತರಗೊಂಡಿತು; CBS ನ್ಯೂಸ್‌ ನೈಟ್‌ವಾಚ್‌ ಕಾರ್ಯಕ್ರಮಕ್ಕಾಗಿ ಚಾರ್ಲೀ ರೋಸ್‌ ಎಂಬಾತ ಈ ಸಂದರ್ಶನವನ್ನು ನಡೆಸಿದ್ದ. "ಅತ್ಯುತ್ತಮ ಸಂದರ್ಶನ"ಕ್ಕೆ ಸಂಬಂಧಿಸಿದಂತಿರುವ ರಾಷ್ಟ್ರೀಯ ಸುದ್ದಿಯ ಎಮಿ ಪ್ರಶಸ್ತಿಯನ್ನು ಇದು 1987ರಲ್ಲಿ ಗೆದ್ದುಕೊಂಡಿತು.[೭೦] ಕೊನೆಯ ಸಂದರ್ಶನವು, 1988ರಲ್ಲಿ ಜೆರಾಲ್ಡೊ ರಿವೆರಾ ಜೊತೆಗೆ ನಡೆಯಿತು; ಸೈತಾನಾರಾಧನೆಯ ಕುರಿತಾಗಿ ಆ ಪತ್ರಕರ್ತನು ನಡೆಸಿಕೊಟ್ಟ, ಪರಮಾವಧಿ-ಕಾಲದ ವಿಶೇಷ ಕಾರ್ಯಕ್ರಮದ ಭಾಗ ಇದಾಗಿತ್ತು.[೭೧] ಕನಿಷ್ಟಪಕ್ಷ ಸ್ನೈಡರ್‌‌ ಸಂದರ್ಶನದವರೆಗೆ ಮ್ಯಾನ್ಸನ್‌‌ನ ಹಣೆಯಲ್ಲಿ ಒಂದು ಸ್ವಸ್ತಿಕವಿರುತ್ತಿತ್ತು; ಅವನ ವಿಚಾರಣೆಯು ನಡೆಯುತ್ತಿದ್ದಾಗ ಈ ಜಾಗದಲ್ಲಿ X ಎಂಬ ಗುರುತನ್ನು ಅವನು ಕೆತ್ತಿಕೊಂಡಿದ್ದ.[೭೨] ವ್ಯಾಕವಿಲ್ಲೆಯಲ್ಲಿರುವ ಕ್ಯಾಲಿಫೋರ್ನಿಯಾ ಮೆಡಿಕಲ್‌‌ ಫೆಸಿಲಿಟಿಯಲ್ಲಿ ಸೆರೆವಾಸದಲ್ಲಿದ್ದ ಸಂದರ್ಭದಲ್ಲಿ, 1984ರ ಸೆಪ್ಟೆಂಬರ್‌‌ 25ರಂದು ಮ್ಯಾನ್ಸನ್‌‌ಗೆ ತೀವ್ರವಾದ ಸುಟ್ಟಗಾಯಗಳಾದವು; ಓರ್ವ ಸಹವರ್ತಿ ನಿವಾಸಿಯು ಅವನ ಮೇಲೆ ಪೈಂಟ್‌ ತೆಳುಕಾರಕವನ್ನು ಸುರಿದು ಅವನಿಗೆ ಬೆಂಕಿಹಚ್ಚಿದಾಗ ಇದು ಸಂಭವಿಸಿತು. ಜಾನ್‌ ಹೋಲ್ಮ್‌ಸ್ಟ್ರೋಮ್ ಎಂಬ ಮತ್ತೋರ್ವ ಸೆರೆಯಾಳು ವಿವರಿಸಿದ ಪ್ರಕಾರ, ಅವನ ಹರೇ ಕೃಷ್ಣ ಮಂತ್ರಗಳ ಕುರಿತು ಮ್ಯಾನ್ಸನ್‌‌ ಆಕ್ಷೇಪಿಸಿದ್ದ ಮತ್ತು ಅವನಿಗೆ ಮಾತಿನ ಮೂಲಕ ಬೆದರಿಕೆಯೊಡ್ಡಿದ್ದ. ತನ್ನ ಶರೀರದ 20 ಪ್ರತಿಶತಕ್ಕೂ ಹೆಚ್ಚಿನ ಭಾಗವು ಎರಡನೇ- ಮತ್ತು ಮೂರನೇ- ಹಂತದ ಸುಟ್ಟಗಾಯಗಳಿಗೆ ಈಡಾದರೂ ಸಹ, ಮ್ಯಾನ್ಸನ್‌‌ ತನ್ನ ಗಾಯಗಳಿಂದ ಚೇತರಿಸಿಕೊಂಡ.[೨]:497 ಹತ್ಯಾ ಪ್ರಯತ್ನಕ್ಕೆ ಸಂಬಂಧಿಸಿದಂತೆ ಒಂದು ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಫ್ರೋಮ್‌,‌ 1987ರ ಡಿಸೆಂಬರ್‌ನಲ್ಲಿ ಪಶ್ಚಿಮ ವರ್ಜೀನಿಯಾದಲ್ಲಿನ ಆಲ್ಡರ್‌ಸನ್‌‌ ಒಕ್ಕೂಟ ಸೆರೆಮನೆ ಶಿಬಿರದಿಂದ ಸಂಕ್ಷೇಪವಾಗಿ ತಪ್ಪಿಸಿಕೊಂಡಳು. ಮ್ಯಾನ್ಸನ್ ವೃಷಣದ ಕ್ಯಾನ್ಸರ್‌‌ ಕಾಯಿಲೆಗೆ ಈಡಾಗಿದ್ದಾನೆ ಎಂಬುದನ್ನು ಕೇಳ್ಪಟ್ಟಿದ್ದ ಅವಳು, ಅವನನ್ನು ತಲುಪಲೆಂದು ಪ್ರಯತ್ನಿಸುತ್ತಿದ್ದಳು; ಕೆಲವೇ ದಿನಗಳಲ್ಲಿ ಅವಳನ್ನು ದಸ್ತಗಿರಿ ಮಾಡಲಾಯಿತು.[೨]:502-511 2009ರ ಆಗಸ್ಟ್‌‌ 14ರಂದು ಕಾರ್ಸ್‌ವೆಲ್‌‌ನ ಫೆಡರಲ್‌ ಮೆಡಿಕಲ್‌ ಸೆಂಟರ್‌‌ನಿಂದ ಅವಳು ಪೆರೋಲಿನ ಮೇಲೆ ಬಿಡುಗಡೆಯಾದಳು.[೭೩] ನಂತರದ ಘಟನೆಗಳುಸಂಪಾದಿಸಿ ಒಂದು-ಕಾಲಕ್ಕೆ ಮ್ಯಾನ್ಸನ್‌‌-ಅನುಯಾಯಿಯಾಗಿದ್ದ ಕ್ಯಾಥರೀನ್‌‌ ಶೇರ್‌‌ ಎಂಬಾಕೆಯು ಮ್ಯಾನ್ಸನ್‌ನ ಅಭಿಯೋಜಕನಾದ ವಿನ್ಸೆಂಟ್‌ ಬುಗ್ಲಿಯೊಸಿ ಜೊತೆಯಲ್ಲಿ 1994ರಲ್ಲಿ ನಡೆಸಿದ ಒಂದು ಸಂಭಾಷಣೆಯಲ್ಲಿ ಹೇಳಿದ ಅನುಸಾರ, ಮ್ಯಾನ್ಸನ್‌‌ನ ವಿಚಾರಣೆಯ ದಂಡನೆಯ ಹಂತದಲ್ಲಿ ಅವಳು ನೀಡಿದ ಸಾಕ್ಷ್ಯವು ಒಂದು ಕಟ್ಟುಕಥೆಯಾಗಿತ್ತು; ಕೈದಿಗಳನ್ನು ಕೊಲ್ಲುವ ಅನಿಲ ಕೋಣೆಯಿಂದ ಮ್ಯಾನ್ಸನ್‌‌ನ್ನು ಉಳಿಸುವ ಉದ್ದೇಶದೊಂದಿಗೆ ಈ ಸಾಕ್ಷ್ಯವನ್ನು ಹೆಣೆಯಲಾಗಿತ್ತು ಹಾಗೂ ಮ್ಯಾನ್ಸನ್‌‌ನ ಸುಸ್ಪಷ್ಟ ನಿರ್ದೇಶನದ ಅನುಸಾರ ಅದನ್ನು ನುಡಿಯಲಾಯಿತು.[೨]:502-511 ಅಂಧಾನುಕರಣೆಯ-ಪ್ರೇರಕಶಕ್ತಿಯ ಕಥೆಯನ್ನು ಶೇರ್‌‌ಳ ಸಾಕ್ಷ್ಯವು ಪರಿಚಯಿಸಿತ್ತು. ಇದರ ಅನ್ವಯ ಮೂರು ಸ್ತ್ರೀ ಪ್ರತಿವಾದಿಗಳ ಸಾಕ್ಷ್ಯವು ಪ್ರತಿಧ್ವನಿಸಿತು ಮತ್ತು ಟೇಟ್‌-ಲೇಬಿಯಾಂಕಾ ಕೊಲೆಗಳ ಹಿಂದೆ ಲಿಂಡಾ ಕಸಾಬಿಯನ್‌‌ಳ ಪರಿಕಲ್ಪನೆಯಿತ್ತು ಎಂಬುದನ್ನು ಅದು ಹೊರಹೊಮ್ಮಿಸಿತು.[೨]:424-433 ಹಾರ್ಡ್‌ ಕಾಪಿ ಎಂಬ ಟ್ಯಾಬ್ಲಾಯ್ಡ್‌‌ ದೂರದರ್ಶನ ಕಾರ್ಯಕ್ರಮದ 1997ರ ಒಂದು ವಿಭಾಗದಲ್ಲಿ ಮಾತನಾಡುತ್ತಾ, ಶಾರೀರಿಕ ಹಾನಿಯನ್ನು ಉಂಟುಮಾಡುವ ಕುರಿತು ಮ್ಯಾನ್ಸನ್‌ ಒಡ್ಡಿದ್ದ ಒಂದು ಬೆದರಿಕೆಯ ಕಾರಣದಿಂದ ತಾನು ಸಾಕ್ಷ್ಯನುಡಿಯಬೇಕಾಯಿತು ಎಂದು ಶೇರ್‌‌ ಸೂಚ್ಯವಾಗಿ ಹೇಳಿದಳು.[೭೪] 1971ರ ಆಗಸ್ಟ್‌‌ನಲ್ಲಿ, ಮ್ಯಾನ್ಸನ್‌‌ನ ವಿಚಾರಣೆ ಮತ್ತು ದಂಡನೆ ವಿಧಿಸುವಿಕೆಯ ನಡಾವಳಿಗಳ ನಂತರ, ಕ್ಯಾಲಿಫೋರ್ನಿಯಾದಲ್ಲಿನ ಒಂದು ಹಿಂಸಾತ್ಮಕ ಸ್ವರೂಪದ ಚಿಲ್ಲರೆ-ಅಂಗಡಿ ದರೋಡೆಯಲ್ಲಿ ಶೇರ್‌‌ ತೊಡಗಿಸಿಕೊಂಡಿದ್ದಳು; ಮ್ಯಾನ್ಸನ್‌‌ನ್ನು ಮುಕ್ತವಾಗಿಸಲೆಂದು ನೆರವು ನೀಡಲು ಆಯುಧಗಳನ್ನು ಗಳಿಸುವುದು ಈ ದರೋಡೆಯ ಉದ್ದೇಶವಾಗಿತ್ತು‌‌.[೨]:463-468 1996ರ ಜನವರಿಯಲ್ಲಿ, ಒಂದು ಮ್ಯಾನ್ಸನ್‌‌ ವೆಬ್‌ಸೈಟ್‌ ಅಸ್ತಿತ್ವಕ್ಕೆ ಬಂತು. ಮ್ಯಾನ್ಸನ್‌‌ನ ಇತ್ತೀಚಿನ-ದಿನದ ಅನುಯಾಯಿಯಾದ ಜಾರ್ಜ್‌ ಸ್ಟಿಮ್ಸನ್‌‌ ಎಂಬಾತ ಇದನ್ನು ಸ್ಥಾಪಿಸಿದರೆ, ಅವನಿಗೆ ಸ್ಯಾಂಡ್ರಾ ಗುಡ್‌ ನೆರವು ನೀಡಿದಳು. ಕೊಲೆಯ ಬೆದರಿಕೆಗಳನ್ನು ಒಡ್ಡಿದ್ದಕ್ಕೆ ಸಂಬಂಧಿಸಿದಂತೆ ಅವಳಿಗೆ ವಿಧಿಸಲಾಗಿದ್ದ 15-ವರ್ಷಗಳ ಜೀವಾವಧಿ ಶಿಕ್ಷೆಯ ಪೈಕಿ 10 ವರ್ಷಗಳ ಅವಧಿಯನ್ನು ಸೆರೆವಾಸದಲ್ಲಿ ಕಳೆದ ನಂತರ, 1985ರಲ್ಲಿ ಸ್ಯಾಂಡ್ರಾ ಗುಡ್‌ ಸೆರೆಮನೆಯಿಂದ ಬಿಡುಗಡೆಯಾಗಿದ್ದಳು.[೨]:502-511[೭೫] ATWA.com ಎಂದೇ ಪರಿಚಿತವಾಗಿದ್ದ ಮ್ಯಾನ್ಸನ್‌‌ ವೆಬ್‌ಸೈಟ್‌ 2001ರಲ್ಲಿ ಸ್ಥಗಿತಗೊಂಡಿತು. 1998–99ರ ಸಮಯದಲ್ಲಿ ಸೆಕೆಂಡ್ಸ್‌‌ ನಿಯತಕಾಲಿಕದಲ್ಲಿ ಪ್ರಕಟಗೊಂಡ ಸಂದರ್ಶನವೊಂದರಲ್ಲಿ ಬಾಬ್ಬಿ ಬ್ಯೂಸೊಲೈಲ್‌ ಮಾತನಾಡುತ್ತಾ, ಗ್ಯಾರಿ ಹಿನ್ಮನ್‌ನ್ನು ಸಾಯಿಸುವಂತೆ ತನಗೆ ಮ್ಯಾನ್ಸನ್‌‌ ಆದೇಶಿಸಿದ ಎಂಬ ಅಭಿಪ್ರಾಯವನ್ನು ತಿರಸ್ಕರಿಸಿದ.[೪೪] ಹಿನ್ಮನ್‌‌ನ ಮನೆಗೆ ಬಂದ ಮ್ಯಾನ್ಸನ್‌‌, ಹಿನ್ಮನ್‌‌ನ್ನು ಒಂದು ಕತ್ತಿಯಿಂದ ಕತ್ತರಿಸಿದ ಎಂದು ತಿಳಿಸಿದ. ಔವಿ ನಿಯತಕಾಲಿಕದೊಂದಿಗೆ 1981ರಲ್ಲಿ ನಡೆದ ಒಂದು ಸಂದರ್ಶನದಲ್ಲಿ ಇದನ್ನು ಅವನು ನಿರಾಕರಿಸಿದ. ಬ್ಯೂಸೊಲೈಲ್‌ ಈ ಕುರಿತು ವಿವರಗಳನ್ನು ನೀಡುತ್ತಾ, "ವೃತ್ತಪತ್ರಿಕೆಯಲ್ಲಿ ಟೇಟ್‌ ಕೊಲೆಗಳ ಕುರಿತಾಗಿ ನಾನು ಓದಿದಾಗ, ನಿಜವಾಗಿಯೂ ಆ ಘಟ್ಟದಲ್ಲಿ ನನಗೆ ಖಾತ್ರಿಯಾಗಿರಲಿಲ್ಲ, ಇದಕ್ಕೆ ಸಂಬಂಧಿಸಿದಂತೆ ಮ್ಯಾನ್ಸನ್‌‌ನ ಗುಂಪನ್ನು ಬಂಧಿಸುವವರೆಗೂ, ಈ ಕೃತ್ಯವನ್ನು ಎಸಗಿದ್ದು ಯಾರು ಎಂಬುದರ ಕುರಿತಾದ ಪರಿಕಲ್ಪನೆಯೂ ನನಗಿರಲಿಲ್ಲ. ಇದು ಕೇವಲ ನನ್ನ ಮನಸ್ಸನ್ನು ಹಾದುಹೋಗಿತ್ತು ಮತ್ತು ಪ್ರಾಯಶಃ ಇದರ ಒಂದು ಮುನ್ಸೂಚನೆಯು ನನಗಿತ್ತು ಎನಿಸುತ್ತದೆ. ಅವುಗಳೊಂದಿಗೆ ಈ ಹತ್ಯೆಗಳ ಸಂಬಂಧವನ್ನು ಕಲ್ಪಿಸಬಹುದು ಎಂಬ ಬಗ್ಗೆ ನನ್ನ ಮನಸ್ಸಿನಲ್ಲಿ ಒಂದಷ್ಟು ಸಣ್ಣಪುಟ್ಟ ತರಂಗಗಳು ಎದ್ದಿದ್ದವು..." ಎಂದು ನುಡಿದ. ಔವಿ ನಿಯತಕಾಲಿಕದೊಂದಿಗೆ ನಡೆದ ಸಂದರ್ಶನದಲ್ಲಿ ಅವನು ಮಾತನಾಡುತ್ತಾ, "ಟೇಟ್‌-ಲೇಬಿಯಾಂಕಾ ಕೊಲೆಗಳು ಸಂಭವಿಸಿದಾಗ, ಅದನ್ನು ಮಾಡಿದ್ದು ಯಾರು ಎಂಬುದು ನನಗೆ ಗೊತ್ತಿತ್ತು. ನನಗದು ಯಥೋಚಿತವಾಗಿ ಮನದಟ್ಟಾಗಿತ್ತು" ಎಂದು ತಿಳಿಸಿದ.[೪೩] 1999ರ ಜುಲೈನಲ್ಲಿ E! ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ, ಸಿಯೆಲೊ ಡ್ರೈವ್‌‌‌ನಲ್ಲಿ ಹಿಂದೊಮ್ಮೆ ಕಿರಿಯ ಗೃಹಪಾಲಕನಾಗಿದ್ದ ವಿಲಿಯಂ ಗ್ಯಾರೆಸ್ಟನ್ ಎಂಬಾತ ಮಾತನಾಡುತ್ತಾ, ಸದರಿ ಸ್ವತ್ತಿನ ಭಾಗದಲ್ಲಿರುವ ಅತಿಥಿಗೃಹದಲ್ಲಿನ ತನ್ನ ತಾಣದಿಂದ ಟೇಟ್‌ ಕೊಲೆಗಳ ಒಂದು ಭಾಗವನ್ನು ತಾನು ವಾಸ್ತವವಾಗಿ ನೋಡಿದ್ದಾಗಿ ಮತ್ತು ಕೇಳಿದ್ದಾಗಿ ಸೂಚ್ಯವಾಗಿ ಹೇಳಿದ. 1969ರ ಆಗಸ್ಟ್‌‌ 10ರಂದು ಗ್ಯಾರೆಸ್ಟನ್‌ಗೆ ನೀಡಲಾಗಿದ್ದ ಸುಳ್ಳು ಪತ್ತೆಕಾರಕ ಪರೀಕ್ಷೆಯ ಅನಧಿಕೃತ ಫಲಿತಾಂಶಗಳೊಂದಿಗೆ ಇದು ಹೊಂದುವಂತಿತ್ತು ಮತ್ತು ಓರ್ವ ಶಂಕಿತ ಎಂಬ ಹಣೆಪಟ್ಟಿಯನ್ನು ಅದು ಅವನಿಂದ ಪರಿಣಾಮಕಾರಿಯಾಗಿ ತೆಗೆದುಹಾಕಿತ್ತು.[೭೬] ಸದರಿ ಪರೀಕ್ಷೆಯನ್ನು ಕೈಗೊಂಡ LAPD ಅಧಿಕಾರಿಯು, ಅಪರಾಧಗಳಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಗ್ಯಾರೆಸ್ಟನ್‌‌ "ನಿಷ್ಕಳಂಕನಾಗಿದ್ದಾನೆ" ಎಂಬ ತೀರ್ಮಾನಕ್ಕೆ ಬಂದನಾದರೂ, ಏನನ್ನಾದರೂ ಕೇಳಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಅವನು "ಗೊಂದಲಗೊಂಡಿದ್ದಾನೆ" ಎಂದು ಭಾವಿಸಿದ.[೨]:28–38 ಸದರಿ ಘಟನೆಗಳ ಕುರಿತಾಗಿ ತಾನು ಹೊಂದಿದ್ದ ಜ್ಞಾನವನ್ನು ತಾನೇಕೆ ತಡೆಹಿಡಿದಿದ್ದ ಎಂಬುದನ್ನು ಗ್ಯಾರೆಸ್ಟನ್‌‌ ವಿವರಿಸಲಿಲ್ಲ.[೫೨] ಸುಸಾನ್‌ ಅಟ್ಕಿನ್ಸ್‌ ಮಿದುಳು ಕ್ಯಾನ್ಸರ್‌‌ ಕಾಯಿಲೆಯಿಂದ ನರಳುತ್ತಿದ್ದಾಳೆ ಎಂಬುದಾಗಿ 2008ರ ಆರಂಭದಲ್ಲಿ ಘೋಷಿಸಲಾಯಿತು.[೭೭] ಅವಳ ಆರೋಗ್ಯದ ಸ್ಥಿತಿಗತಿಯನ್ನು ಆಧರಿಸಿ ಸಹಾನುಭೂತಿಯುಳ್ಳ ಬಿಡುಗಡೆ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯೊಂದನ್ನು 2008ರ[೭೭] ಜುಲೈನಲ್ಲಿ ತಿರಸ್ಕರಿಸಲಾಯಿತು ಮತ್ತು 2009ರ ಸೆಪ್ಟೆಂಬರ್‌‌ 2ರಂದು ಅವಳಿಗೆ ಪೆರೋಲನ್ನು 18ನೇ ಮತ್ತು ಅಂತಿಮ ಬಾರಿಗೆ ನಿರಾಕರಿಸಲಾಯಿತು.[೭೮] 22 ದಿನಗಳ ನಂತರ 2009ರ ಸೆಪ್ಟೆಂಬರ್‌‌ 24ರಂದು, ಚೌಚಿಲ್ಲಾದಲ್ಲಿನ ಕೇಂದ್ರೀಯ ಕ್ಯಾಲಿಫೋರ್ನಿಯಾ ಮಹಿಳೆಯರ ಕೇಂದ್ರದಲ್ಲಿ ಸ್ವಾಭಾವಿಕ ಕಾರಣಗಳಿಂದಾಗಿ ಅಟ್ಕಿನ್ಸ್‌ ಮರಣ ಹೊಂದಿದಳು.[೭೯][೮೦] 2007ರ ಸೆಪ್ಟೆಂಬರ್‌‌ 5ರಂದು, ದಿ ಮೈಂಡ್‌ ಆಫ್‌ ಮ್ಯಾನ್ಸನ್‌‌ ಎಂಬ ಧ್ವನಿಮುದ್ರಿತ ಆವೃತ್ತಿಯನ್ನು MSNBC ವಾಹಿನಿಯು ಬಿತ್ತರಿಸಿತು; ಇದು ಕ್ಯಾಲಿಫೋರ್ನಿಯಾದ ಸ್ಯಾನ್‌ ಕ್ವೆಂಟಿನ್‌ ಸಂಸ್ಥಾನ‌ ಸೆರೆಮನೆಯಲ್ಲಿ 1987ರಲ್ಲಿ ನಡೆಸಲಾದ ಸಂದರ್ಶನವೊಂದರ ಒಂದು ಸಂಪೂರ್ಣ ಆವೃತ್ತಿಯಾಗಿತ್ತು. "ವಿಮುಕ್ತಗೊಳಿಸಿದ, ತಪ್ಪೊಪ್ಪಿಕೊಳ್ಳದ, ಮತ್ತು ಶಿಸ್ತಿಗೆ ಬಗ್ಗದ" ಮ್ಯಾನ್ಸನ್‌‌ನ ವ್ಯಕ್ತಿತ್ವದ ಈ ತುಣುಕು "ತೀರಾ ನಂಬಲಾಗದ" ಸ್ವರೂಪದ್ದು ಎಂದು ಪರಿಗಣಿಸಲ್ಪಟ್ಟಿತು; ಇದರ ತೀವ್ರತೆ ಎಷ್ಟಿತ್ತೆಂದರೆ, ಯಾವ ಕಾರ್ಯಕ್ರಮಕ್ಕಾಗಿ ಅದನ್ನು ಧ್ವನಿಮುದ್ರಿಸಲಾಗಿತ್ತೋ ದಿ ಟುಡೆ ಷೋ ಎಂಬ ಆ ಕಾರ್ಯಕ್ರಮದಲ್ಲಿ ಕೇವಲ ಏಳು ನಿಮಿಷಗಳವರೆಗೆ ಮಾತ್ರವೇ ಮೂಲತಃ ಅದನ್ನು ಪ್ರಸಾರಮಾಡಲಾಗಿತ್ತು.[೮೧] ಡಿಸ್ಕವರಿ ವಾಹಿನಿ‌‌ಯ ಮೋಸ್ಟ್‌ ಇವಿಲ್‌‌ ಕಾರ್ಯಕ್ರಮದ 2008ರ ಜನವರಿಯ ಒಂದು ವಿಭಾಗದಲ್ಲಿ ಬಾರ್ಬರಾ ಹಾಯ್ಟ್‌‌ ಮಾತನಾಡುತ್ತಾ, ಮ್ಯಾನ್ಸನ್‌‌ನ ವಿಚಾರಣೆಯ ಸಂದರ್ಭದಲ್ಲಿ ಕೇವಲ ಸಾಕ್ಷಿ ಒದಗಿಸುವುದನ್ನು ತಪ್ಪಿಸುವ ಸಲುವಾಗಿಯೇ ತಾನು ರುಥ್‌‌ ಆನ್‌‌ ಮೂರ್‌ಹೌಸ್‌‌ ಜೊತೆಗೂಡಿ ಹವಾಯಿಗೆ ತೆರಳಿದೆ ಎಂಬ ಅಭಿಪ್ರಾಯವು ದೋಷಯುತವಾಗಿದೆ ಎಂದು ತಿಳಿಸಿದಳು. ಸಮುದಾಯದ ಸದಸ್ಯರು ತನ್ನ ಕುಟುಂಬವನ್ನು ಕೊಲ್ಲದಂತೆ ನೋಡಿಕೊಳ್ಳಬೇಕು ಎಂದು ತಾನು ಪ್ರಯತ್ನಿಸುತ್ತಿದ್ದ ಕಾರಣದಿಂದಾಗಿಯೇ, ತಾನು ಸಮುದಾಯಕ್ಕೆ ಸಹಕರಿಸಿಕೊಂಡು ಬಂದುದಾಗಿ ಹಾಯ್ಟ್‌ ತಿಳಿಸಿದಳು. ವಿಚಾರಣೆಯ ಸಮಯದಲ್ಲಿ, ತಾನು ನಿರಂತರವಾಗಿ ಬೆದರಿಕೆಗೆ ಒಳಗಾಗಿದ್ದೆ ಎಂದು ತಿಳಿಸಿದ ಅವಳು, 'ನಿನ್ನ ಕುಟುಂಬದ ಜನರೆಲ್ಲ ಸಾಯಲಿದ್ದಾರೆ. ಕೊಲೆಗಳು ನಿನ್ನ ಮನೆಯಲ್ಲೂ ಪುನರಾವರ್ತನೆಗೊಳ್ಳಬಹುದು' ಎಂಬಂಥ ಬೆದರಿಕೆಯ ಕರೆಗಳು ತನಗೆ ಬರುತ್ತಿದ್ದವು ಎಂದು ನುಡಿದಳು.[೮೨][೮೨] 2008ರ ಮಾರ್ಚ್‌ 15ರಂದು ಅಸೋಸಿಯೇಟೆಡ್‌ ಪ್ರೆಸ್‌‌ ವರದಿಯೊಂದನ್ನು ಪ್ರಕಟಿಸಿ, ವಿಧಿವಿಜ್ಞಾನದ ತನಿಖೆಗಾರರು ಹಿಂದಿನ ತಿಂಗಳಲ್ಲಿ ಬಾರ್ಕರ್‌‌‌ ಜಾನುವಾರು ಕ್ಷೇತ್ರದಲ್ಲಿ ಮಾನವ ಅವಶೇಷಗಳಿಗಾಗಿ ಒಂದು ಶೋಧವನ್ನು ಕೈಗೊಂಡಿದ್ದರು ಎಂದು ತಿಳಿಸಿತು. ಸಮುದಾಯವು ಬಾರ್ಕರ್ ಜಾನುವಾರು ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ಸಂದರ್ಭದಲ್ಲಿ, ತಮ್ಮ ಕಕ್ಷೆಯೊಳಗೆ ಬಂದ ಬಿಟ್ಟಿಪ್ರಯಾಣ ಮಾಡುವವರು ಮತ್ತು ಪಲಾಯನ ಮಾಡುವವರನ್ನು ಸಮುದಾಯದ ಸದಸ್ಯರು ಕೊಂದಿದ್ದರು ಎಂಬಂಥ ದೀರ್ಘಕಾಲದ ಗಾಳಿಸುದ್ದಿಗಳನ್ನು ಅನುಸರಿಸಿಕೊಂಡು ಹೋದ ತನಿಖೆಗಾರರು, "ರಹಸ್ಯವಾದ ಸಮಾಧಿಯಂತೆ ಕಾಣುವ ಎರಡು ತಾಣಗಳು... ಮತ್ತು ಮುಂದಿನ ತನಿಖೆಗೆ ನೆರವಾಗಬಲ್ಲ ಒಂದು ಹೆಚ್ಚುವರಿ ತಾಣವನ್ನು" ಗುರುತಿಸಿದ್ದರು.[೮೩] ಅಗೆಯುವಿಕೆಗಾಗಿ ಅವರು ಶಿಫಾರಸು ಮಾಡಿದರಾದರೂ, ಶೋಧದ ನಾಯಿಗಳನ್ನು ಬಳಸಿಕೊಂಡಿರುವ ಅವರ ವಿಧಾನಗಳನ್ನು ಪ್ರಶ್ನಿಸಿದ ಇನ್ಯೋ ಜಿಲ್ಲೆಯ ಶಾಂತಿಪಾಲನಾಧಿಕಾರಿಯು, ಯಾವುದೇ ಉತ್ಖನನಕ್ಕೆ ಮುಂಚಿತವಾಗಿ ಹೆಚ್ಚುವರಿ ಪರೀಕ್ಷೆಗಳು ನಡೆಯಬೇಕೆಂದು ಆದೇಶಿಸಿದ್ದ ಎಂದು ಮಾರ್ಚ್‌ 28ರಂದು CNN ವರದಿಮಾಡಿತು.[೮೪] ಮೇ ತಿಂಗಳ 9ರಂದು, ಪರೀಕ್ಷಾ ಸಾಧನಕ್ಕೆ[೮೫] ಅದ ಹಾನಿಯ ಕಾರಣದಿಂದ ಉಂಟಾದ ಒಂದು ವಿಳಂಬದ ನಂತರ, ಸದರಿ ಪರೀಕ್ಷಾ ಫಲಿತಾಂಶಗಳು ಅನಿರ್ಣಾಯಕವಾಗಿವೆ ಮತ್ತು ಮೇ ತಿಂಗಳ 20ರಂದು "ಪರಿಶೋಧನಾತ್ಮಕ ಉತ್ಖನನ"ವು ಪ್ರಾರಂಭವಾಗಲಿದೆ ಎಂದು ಶಾಂತಿಪಾಲನಾಧಿಕಾರಿಯು ಘೋಷಿಸಿದ.[೮೬] ಈ ಮಧ್ಯೆ, ಟೆಕ್ಸ್‌‌ ವ್ಯಾಟ್ಸನ್‌‌ ಒಂದು ಬಹಿರಂಗ ವ್ಯಾಖ್ಯಾನವನ್ನು ನೀಡಿ, ಟೇಟ್‌-ಲೇಬಿಯಾಂಕಾ ಕೊಲೆಗಳು ನಡೆದ ನಂತರ ತಾನಿದ್ದ ಒಂದೂವರೆ ತಿಂಗಳ ಅವಧಿಯಲ್ಲಿ ಮರುಭೂಮಿ ಶಿಬಿರದಲ್ಲಿ "ಯಾರೊಬ್ಬರೂ ಕೊಲ್ಲಲ್ಪಟ್ಟಿಲ್ಲ" ಎಂದು ತಿಳಿಸಿದ.[೮೭][೮೮] ಮೇ ತಿಂಗಳ 21ರಂದು, ಎರಡು ದಿನಗಳ ಕೆಲಸದ ನಂತರ, ಶಾಂತಿಪಾಲನಾಧಿಕಾರಿಯು ಶೋಧಕ್ಕೆ ಅಂತ್ಯವನ್ನು ಹಾಡಿದ; ನಾಲ್ಕು ಸಂಭಾವ್ಯ ಸಮಾಧಿತಾಣಗಳನ್ನು ಅಗೆಯಲಾಗಿತ್ತು ಮತ್ತು ಅವುಗಳಲ್ಲಿ ಯಾವುದೇ ಮಾನವ ಅವಶೇಷಗಳು ಇದ್ದುದು ಕಂಡುಬಂದಿರಲಿಲ್ಲ.[೮೯][೯೦] ಚಿತ್ರ:Charlesmanson2009mug1.jpg 74ರ ವಯಸ್ಸಿನಲ್ಲಿ ಮ್ಯಾನ್ಸನ್‌ (ಮಾರ್ಚ್‌ 2009) ಒಂದು ತಗ್ಗುತ್ತಿರುವ ಕೇಶರೇಖೆ, ನರೆಗೂದಲಿನ ಕಂದು ಗಡ್ಡ ಮತ್ತು ಕೂದಲು ಹಾಗೂ ಅವನ ಹಣೆಯ ಮೇಲೆ ಈಗಲೂ ಎದ್ದುಕಾಣುವ ಸ್ವಸ್ತಿಕದ ಹಚ್ಚೆ ಇವುಗಳನ್ನು ತೋರಿಸುತ್ತಿರುವ, 74-ವರ್ಷ ವಯಸ್ಸಿನ ಮ್ಯಾನ್ಸನ್‌‌ನ ಒಂದು ಛಾಯಾಚಿತ್ರವನ್ನು ಕ್ಯಾಲಿಫೋರ್ನಿಯಾ ದಂಡನಾಧಿಕಾರಿಗಳು 2009ರ ಮಾರ್ಚ್‌ನಲ್ಲಿ ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದರು.[೯೧] 2009ರ ಸೆಪ್ಟೆಂಬರ್‌ನಲ್ಲಿ, ದಿ ಹಿಸ್ಟರಿ ವಾಹಿನಿಯು, ಸಮುದಾಯದ ಕಾರ್ಯಚಟುವಟಿಕೆಗಳು ಹಾಗೂ ಕೊಲೆಗಳನ್ನು ಒಳಗೊಂಡಿರುವ ಒಂದು ಸಾಕ್ಷ್ಯಚಿತ್ರರೂಪಕವನ್ನು ಪ್ರಸಾರಮಾಡಿತು; ಹತ್ಯೆಗಳ 40ನೇ ವಾರ್ಷಿಕಾಚರಣೆಯ ಸಂದರ್ಭದಲ್ಲಿ ಅದು ಮಾಡಿದ ಪ್ರಸಾರದ ಭಾಗವಾಗಿ ಇದು ಬಿತ್ತರವಾಯಿತು.[೯೨] ಲಿಂಡಾ ಕಸಾಬಿಯನ್‌‌ ಜೊತೆಯಲ್ಲಿ ನಡೆಸಲಾದ ಒಂದು ಸವಿವರವಾದ ಸಂದರ್ಶನವನ್ನು ಈ ಕಾರ್ಯಕ್ರಮವು ಒಳಗೊಂಡಿತ್ತು. ಎ ಕನ್‌ಕರೆಂಟ್‌ ಅಫೇರ್‌‌ ಎಂಬ ಹೆಸರಿನ ಅಮೆರಿಕಾದ ಒಂದು ದೂರದರ್ಶನ ಸುದ್ದಿ ನಿಯತಕಾಲಿಕದಲ್ಲಿ 1989ರಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ, ಲಿಂಡಾ ಕಸಾಬಿಯನ್ ಮೊಟ್ಟಮೊದಲ ಬಾರಿಗೆ ಈ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಮಾತನಾಡಿದಳು.[೯೨] ಹಿಸ್ಟರಿ ವಾಹಿನಿಯ ಈ ಕಾರ್ಯಕ್ರಮವು, ವಿನ್ಸೆಂಟ್‌ ಬುಗ್ಲಿಯೊಸಿ, ಕ್ಯಾಥರೀನ್‌‌ ಶೇರ್‌‌, ಮತ್ತು ಶರೋನ್‌‌ಳ ಸೋದರಿಯಾದ ಡೆಬ್ರಾ ಟೇಟ್‌ ಜೊತೆಯಲ್ಲಿ ನಡೆಸಲಾದ ಸಂದರ್ಶನಗಳನ್ನೂ ಒಳಗೊಂಡಿತ್ತು.[೯೩] ಟೇಟ್‌-ಲೇಬಿಯಾಂಕಾ ಕೊಲೆಗಳ ನಲವತ್ತನೇ ವಾರ್ಷಿಕಾಚರಣೆಯು ಸಮೀಪಿಸುತ್ತಿದ್ದಂತೆ, ಲಾಸ್‌ ಏಂಜಲೀಸ್‌ ನಿಯತಕಾಲಿಕವು 2009ರ ಜುಲೈನಲ್ಲಿ ಒಂದು "ಮೌಖಿಕ ಇತಿಹಾಸ"ವನ್ನು ಪ್ರಕಟಿಸಿತು; ಇದರಲ್ಲಿ ಸಮುದಾಯದ ಹಿಂದಿನ ಸದಸ್ಯರು, ಕಾನೂನು-ಜಾರಿಯ ಅಧಿಕಾರಿಗಳು, ಮತ್ತು ಮ್ಯಾನ್ಸನ್ ಜೊತೆಯಲ್ಲಿ ತೊಡಗಿಸಿಕೊಂಡಿದ್ದ ಇತರರು, ಬಂಧನಗಳು ಹಾಗೂ ವಿಚಾರಣೆಗಳ ವತಿಯಿಂದ ಮ್ಯಾನ್ಸನ್‌‌ ಕುಖ್ಯಾತನಾಗಲು ಕಾರಣವಾದ ಘಟನೆಗಳ ಕುರಿತಾದ ತಮ್ಮ ಸ್ಮರಣೆಗಳು ಮತ್ತು ವೀಕ್ಷಣೆಗಳನ್ನು ನೀಡಲ್ಪಟ್ಟವು. ಮ್ಯಾನ್ಸನ್‌‌ ಮತ್ತು ಅವನ ಸಮುದಾಯದೊಂದಿಗೆ ಹಿಂದೆ ಗುರುತಿಸಿಕೊಂಡಿದ್ದ, ಸ್ಪಾಹ್ನ್‌‌ ಜಾನುವಾರು ಕ್ಷೇತ್ರದ ಓರ್ವ ಕೆಲಸಗಾರನಾದ ಜುವಾನ್‌ ಫ್ಲಿನ್ ಎಂಬಾತ, ಈ ಲೇಖನದಲ್ಲಿ ತನ್ನ ಅಭಿಪ್ರಾಯವನ್ನು ಮಂಡಿಸಿದ್ದು ಹೀಗಿತ್ತು: " Charles Manson got away with everything. People will say, 'He's in jail.' But Charlie is exactly where he wants to be.[೯೪] " 2009ರ ನವೆಂಬರ್‌‌ನಲ್ಲಿ, Matthew Roberts ಎಂಬ ಹೆಸರಿನ ಲಾಸ್‌ ಏಂಜಲೀಸ್‌ನ ಓರ್ವ DJ ಮತ್ತು ಗೀತರಚನೆಕಾರನು, ಪತ್ರ ವ್ಯವಹಾರದ ಮತ್ತು ಇತರ ಪುರಾವೆಗಳನ್ನು ಬಿಡುಗಡೆಮಾಡಿ, ಮ್ಯಾನ್ಸನ್ ತನ್ನ ಜೈವಿಕ ತಂದೆ ಎಂಬುದನ್ನು ಸೂಚಿಸಿದ. ರಾಬರ್ಟ್ಸ್‌‌ನ ಜೈವಿಕ ತಾಯಿಯು ಮ್ಯಾನ್ಸನ್‌‌ ಸಮುದಾಯದ ಓರ್ವ ಸದಸ್ಯೆ ಎಂಬ ಸಮರ್ಥನೆಯು ಇಲ್ಲಿ ದೊರಕಿದ್ದು, ಮ್ಯಾನ್ಸನ್‌‌ನಿಂದ ಅತ್ಯಾಚಾರಕ್ಕೆ ಒಳಗಾದ ನಂತರ 1967ರ ಬೇಸಿಗೆಯಲ್ಲಿ ಅವಳು ಸಮುದಾಯವನ್ನು ಬಿಟ್ಟುಬಂದಿದ್ದಳು; ತನ್ನ ಗರ್ಭಾವಸ್ಥೆಯ ಸ್ಥಿತಿಗೆ ಪರಿಪೂರ್ಣತೆಯನ್ನು ಒದಗಿಸಲು ರಾಬರ್ಟ್ಸ್‌‌‌ನ ತಾಯಿಯು ತನ್ನ ಹೆತ್ತವರ ಮನೆಗೆ ಹಿಂದಿರುಗಿದಳು; 1968ರ ಮಾರ್ಚ್‌ 22ರಂದು ಮಗುವಿಗೆ ಜನ್ಮನೀಡಿದ ಅವಳು, ದತ್ತುಸ್ವೀಕಾರಕ್ಕಾಗಿ ರಾಬರ್ಟ್ಸ್‌ನನ್ನು ಬಿಟ್ಟಳು. ಈ ಕುರಿತು ಸ್ವತಃ ವಿವರಿಸಿದ ಮ್ಯಾನ್ಸನ್‌‌, ತಾನು ಅವನ ತಂದೆ "ಆಗಿರಬಹುದಾದ" ಸಾಧ್ಯತೆಯಿದೆ ಎಂದು ತಿಳಿಸಿ, ಆ ಜೈವಿಕ ತಾಯಿ ಹಾಗೂ 1967ರ ಸಮಯದಲ್ಲಿ ಅವಳೊಂದಿಗೆ ನಡೆಸಿದ ಒಂದು ಲೈಂಗಿಕ ಸಂಬಂಧದ ಕುರಿತು ಒಪ್ಪಿಕೊಂಡ; ಇದು, ಸಮುದಾಯವು ತನ್ನ ಕೊಲೆಪಾತಕ ಹಂತವನ್ನು ಪ್ರಾರಂಭಿಸಿದ್ದಕ್ಕೆ ಸರಿಸುಮಾರು ಎರಡು ವರ್ಷಗಳಷ್ಟು ಮುಂಚಿನ ಘಟನೆಯಾಗಿತ್ತು.[೯೫][೯೬] ಪೆರೋಲು ವಿಚಾರಣೆಗಳುಸಂಪಾದಿಸಿ ಕ್ಯಾಲಿಫೋರ್ನಿಯಾದ ಅಂದಿನ ಪ್ರಸಕ್ತ ಮರಣ ದಂಡನೆಗಳನ್ನು ತಟಸ್ಥಗೊಳಿಸಿದ 1972ರ ತೀರ್ಮಾನವಾದ, ಕ್ಯಾಲಿಫೋರ್ನಿಯಾ v. ಆಂಡರ್‌ಸನ್‌‌ ಪ್ರಕರಣದ ತೀರ್ಮಾನಕ್ಕೆ ಸಂಬಂಧಿಸಿದ ಒಂದು ಅಡಿಟಿಪ್ಪಣಿಯು ಹೀಗೆ ಹೇಳುತ್ತದೆ: "ಮರಣದಂಡನೆಯ ಶಿಕ್ಷೆಗೆ ಈಗ ಗುರಿಯಾಗಿರುವ ಯಾವುದೇ ಸೆರೆಯಾಳು, ಸರ್ವೋಚ್ಚ ನ್ಯಾಯಾಲಯದಲ್ಲಿ ಆಸಾಮಿ ಹಾಜರಿ ಹುಕುಂ‌ನ (ಹೇಬಿಯಸ್‌ ಕಾರ್ಪಸ್) ಆಜ್ಞಾಪತ್ರಕ್ಕೆ ಸಂಬಂಧಿಸಿದಂತೆ ಒಂದು ಮನವಿಯನ್ನು ಸಲ್ಲಿಸಿ, ತನ್ನ ತೀರ್ಪನ್ನು ಮಾರ್ಪಡಿಸಲು ಆ ನ್ಯಾಯಾಲಯವನ್ನು ಆಹ್ವಾನಿಸಬಹುದಾಗಿದೆ; ಯಾವ ಅಪರಾಧಕ್ಕಾಗಿ ಅವನಿಗೆ ಮರಣದಂಡನೆಯ ಶಿಕ್ಷೆಯು ವಿಧಿಸಲ್ಪಟ್ಟಿತೋ, ಆ ಅಪರಾಧಕ್ಕೆ ಸಂಬಂಧಿಸಿದಂತೆ ಶಾಸನದಿಂದ ನಿಗದಿಪಡಿಸಲಾದ ಜೀವಾವಧಿ ಶಿಕ್ಷೆಯ ಸೂಕ್ತ ಪರ್ಯಾಯ ಶಿಕ್ಷೆ ಅಥವಾ ಪೆರೋಲಿನ ಸಾಧ್ಯತೆಯಿಲ್ಲದ ಜೀವಾವಧಿ ಶಿಕ್ಷೆಯನ್ನು ಒದಗಿಸಲೆಂದು ಸೆರೆಯಾಳು ಈ ಮನವಿಯನ್ನು ಮಾಡಿಕೊಳ್ಳಬಹುದಾಗಿದೆ."[೯೭] ಏಳು ವರ್ಷಗಳ ಅವಧಿಯ ಕಾರಾಗೃಹವಾಸದ ನಂತರ ಪೆರೋಲಿಗಾಗಿ ಅರ್ಜಿಸಲ್ಲಿಸಲು ಇದು ಮ್ಯಾನ್ಸನ್‌‌ಗೆ ಅರ್ಹತೆಯನ್ನು ನೀಡಿತು.[೨]:488 ಅವನ ಮೊದಲ ಪೆರೋಲು ವಿಚಾರಣೆಯು 1978ರಲ್ಲಿ ನಡೆಯಿತು.[೨]:498 2007ರ ಮೇ 23ರಂದು, ಹನ್ನೊಂದನೇ ಬಾರಿಗೆ ಅವನಿಗೆ ಪೆರೋಲು ನಿರಾಕರಿಸಲ್ಪಟ್ಟಿತು.[೯೮] ಪೆರೋಲಿಗಾಗಿ ಮರು-ಅರ್ಜಿಸಲ್ಲಿಸಲು 2012ರಲ್ಲಿ ಮ್ಯಾನ್ಸನ್‌ ಅರ್ಹತೆಯನ್ನು ಪಡೆಯಲಿದ್ದಾನೆ. B33920 ಎಂಬುದು ಕೊರ್ಕೊರಾನ್‌ ಸಂಸ್ಥಾನದ ಸೆರೆಮನೆಯಲ್ಲಿನ ಅವನ ನಿವಾಸಿ ಸಂಖ್ಯೆಯಾಗಿದೆ.[೯೯] ಮ್ಯಾನ್ಸನ್‌‌ ಮತ್ತು ಸಂಸ್ಕೃತಿಸಂಪಾದಿಸಿ ಧ್ವನಿಮುದ್ರಣಗಳುಸಂಪಾದಿಸಿ ತನ್ನ ಪ್ರಕರಣಕ್ಕೆ ಸ್ವತಃ ತಾನೇ ನ್ಯಾಯವಾದಿಯಾಗಿ[೨]:258-269 ವಾದಿಸುವುದಕ್ಕೆ ಸಂಬಂಧಿಸಿದಂತೆ ಮ್ಯಾನ್ಸನ್‌‌ನ ಸ್ಥಾನಮಾನವನ್ನು ನ್ಯಾಯಾಲಯವು ರದ್ದುಗೊಳಿಸಿದ ದಿನವಾದ 1970ರ ಮಾರ್ಚ್‌ 6ರಂದು, ಮ್ಯಾನ್ಸನ್‌‌ ಸಂಗೀತವನ್ನು ಒಳಗೊಂಡಿದ್ದ LIE ಎಂಬ ಶೀರ್ಷಿಕೆಯ ಒಂದು ಗೀತಸಂಪುಟವು ಬಿಡುಗಡೆಯಾಯಿತು.[೧೦೦][೧೦೧][೧೦೨] "ಸೀಸ್‌ ಟು ಎಕ್ಸಿಸ್ಟ್‌" ಎಂಬ ಗೀತೆಯನ್ನು ಇದು ಒಳಗೊಂಡಿತ್ತು. ಇದೊಂದು ಮ್ಯಾನ್ಸನ್‌‌ ಸಂಯೋಜನೆಯಾಗಿದ್ದು, ರೂಪಾಂತರಿಸಿದ ಸಾಹಿತ್ಯದೊಂದಿಗೆ ಮತ್ತು "ನೆವರ್‌ ಲರ್ನ್‌ ನಾಟ್‌ ಟು ಲವ್‌" ಎಂಬ ಶೀರ್ಷಿಕೆಯೊಂದಿಗೆ ಇದನ್ನು ದಿ ಬೀಚ್‌ ಬಾಯ್ಸ್‌ ತಂಡವು ಧ್ವನಿಮುದ್ರಿಸಿತ್ತು.[೧೦೩][೧೦೪] ಮುಂದಿನ ಒಂದೆರಡು ತಿಂಗಳುಗಳಲ್ಲಿ, ಗೀತಸಂಪುಟದ ಎರಡು ಸಾವಿರ ಪ್ರತಿಗಳ ಪೈಕಿ, ಕೇವಲ 300ರಷ್ಟು ಪ್ರತಿಗಳು ಮಾತ್ರವೇ ಮಾರಾಟಗೊಂಡವು.[೧೦೫] ಆ ಸಮಯದಿಂದ ಮೊದಲ್ಗೊಂಡು, ಮ್ಯಾನ್ಸನ್‌‌ನ ಹಲವಾರು ಧ್ವನಿಮುದ್ರಣಗಳು ಬಿಡುಗಡೆಗೊಂಡಿದ್ದು, ಅವುಗಳಲ್ಲಿ ಸಂಗೀತದ ಮತ್ತು ಮಾತಿನ ಸ್ವರೂಪದ ಆವೃತ್ತಿಗಳೆರಡೂ ಸೇರಿವೆ.[೧೦೬] ದಿ ಫ್ಯಾಮಿಲಿ ಜ್ಯಾಮ್ಸ್ ಗೀತಸಂಪುಟವು ಮ್ಯಾನ್ಸನ್‌‌ನ ಹಾಡುಗಳ ಎರಡು ಅಡಕ ಮುದ್ರಿಕೆಗಳನ್ನು ಒಳಗೊಂಡಿದೆ; ಮ್ಯಾನ್ಸನ್‌‌ ಮತ್ತು ಇತರರು ಬಂಧಿಸಲ್ಪಟ್ಟ ನಂತರ 1970ರಲ್ಲಿ ಸಮುದಾಯದ ವತಿಯಿಂದ ಇವು ಧ್ವನಿಮುದ್ರಿಸಲ್ಪಟ್ಟವು. ಗಿಟಾರ್‌‌ ಮತ್ತು ಪ್ರಮುಖ ಗಾಯನಭಾಗಗಳನ್ನು ಸ್ಟೀವ್‌‌ ಗ್ರೋಗನ್‌‌[೨]:125-127 ಒದಗಿಸಿದ್ದರೆ, ಹೆಚ್ಚುವರಿ ಗಾಯನಭಾಗಗಳನ್ನು ಲಿನೆಟ್‌ ಫ್ರೋಮ್‌‌, ಸ್ಯಾಂಡ್ರಾ ಗುಡ್‌, ಕ್ಯಾಥರೀನ್‌‌ ಶೇರ್‌‌, ಮತ್ತು ಇತರರು ಒದಗಿಸಿದ್ದಾರೆ.[೧೦೬][೧೦೭] ಸಂಗೀತ, ಕವಿತೆ, ಮತ್ತು ಆಡುಮಾತುಗಳನ್ನು ಒಳಗೊಂಡಿದ್ದ ಒನ್‌ ಮೈಂಡ್ ಎಂಬ ಒಂದು ಗೀತಸಂಪುಟವು, 2005ರ[೧೦೬] ಏಪ್ರಿಲ್‌ನಲ್ಲಿ ಬಿಡುಗಡೆಯಾದ ಹೊಸ ಕೃತಿ ಎನಿಸಿತ್ತು; ಇದನ್ನು ಕ್ರಿಯೆಟಿವ್‌ ಕಾಮನ್ಸ್‌‌ ಪರವಾನಗಿಯೊಂದರ ಅಡಿಯಲ್ಲಿ ಇರಿಸಲಾಯಿತು.[೧೦೮][೧೦೯] ಅಮೆರಿಕಾದ ಗನ್ಸ್‌ N' ರೋಸಸ್‌ ರಾಕ್‌ ವಾದ್ಯವೃಂದವು ಮ್ಯಾನ್ಸನ್‌‌ನ "ಲುಕ್‌ ಅಟ್‌ ಯುವರ್‌ ಗೇಮ್‌, ಗರ್ಲ್‌‌"ನ್ನು ಧ್ವನಿಮುದ್ರಿಸಿ, 1993ರಲ್ಲಿ ಬಿಡುಗಡೆಯಾದ "ದಿ ಸ್ಪಾಘೆಟಿ ಇನ್ಸಿಡೆಂಟ್‌?" [೨]:488-491[೧೧೦][೧೧೧] ಎಂಬ ತನ್ನ ಗೀತಸಂಪುಟದಲ್ಲಿ, ಪಟ್ಟಿಮಾಡಲ್ಪಡದ ಒಂದು ಹದಿಮೂರನೇ ಧ್ವನಿಪಥವಾಗಿ ಸೇರಿಸಿತು. ಮೆರಿಲಿನ್‌‌ ಮ್ಯಾನ್ಸನ್‌‌ನಿಂದ (ಕೆಳಗೆ ವಿವರಿಸಲ್ಪಟ್ಟಂತೆ ಯಾವುದೇ ಸಂಬಂಧಿಯಲ್ಲ) ಪ್ರಸ್ತುತಪಡಿಸಲ್ಪಟ್ಟ ಪೋರ್ಟ್ರೇಟ್‌ ಆಫ್‌ ಆನ್‌ ಅಮೆರಿಕನ್‌ ಫ್ಯಾಮಿಲಿ ಯಲ್ಲಿ ಕಾಣಿಸಿಕೊಳ್ಳುವ "ಮೈ ಮಂಕಿ"ಯು ಒಳಗೊಂಡಿರುವ ಸಾಹಿತ್ಯವು ಹೀಗಿದೆ: "ಐ ಹ್ಯಾಡ್‌ ಎ ಲಿಟ್ಲ್‌ ಮಂಕಿ/ಐ ಸೆಂಟ್‌ ಹಿಮ್‌ ಟು ದಿ ಕಂಟ್ರಿ ಅಂಡ್‌ ಐ ಫೆಡ್‌ ಹಿಮ್‌ ಆನ್‌ ಜಿಂಜರ್‌ಬ್ರೆಡ್‌/ಅಲಾಂಗ್‌ ಕೇಮ್‌ ಎ ಚೂ-ಚೂ/ನಾಕ್‌ಡ್‌ ಮೈ ಮಂಕಿ ಕುಕೂ/ಅಂಡ್ ನೌ ಮೈ ಮಂಕಿ'ಸ್‌ ಡೆಡ್‌."[೧೧೨] ಮ್ಯಾನ್ಸನ್‌‌ನ "ಮೆಕ್ಯಾನಿಕಲ್‌ ಮ್ಯಾನ್‌"ನಿಂದ[೧೧೩] ಈ ಸಾಹಿತ್ಯಗಳನ್ನು ಆರಿಸಲಾಗಿದ್ದು, LIE ಗೀತಸಂಪುಟದಲ್ಲಿ ಅವನ್ನು ಕೇಳಬಹುದಾಗಿದೆ. ಮೆರಿಲಿನ್‌‌ ಮ್ಯಾನ್ಸನ್‌‌ ಕೂಡಾ ಹೋಲಿ ವುಡ್‌ ಗೀತಸಂಪುಟದಲ್ಲಿ ಸಿಕ್‌ ಸಿಟಿ ಎಂಬ ಹಾಡನ್ನು ಪ್ರಸ್ತುತಪಡಿಸಿದ್ದಾಳೆ. ನೆವರ್‌ ಸೇ 'ನೆವರ್‌' ಟು ಆಲ್ವೇಸ್‌ ಎಂಬ ಹಾಡನ್ನು ಕ್ರಿಸ್ಪಿನ್‌ ಗ್ಲೋವರ್ ತನ್ನ ದಿ ಬಿಗ್‌ ಪ್ರಾಬ್ಲಂ ≠ ದಿ ಸಲ್ಯೂಷನ್‌ ಎಂಬ ಗೀತಸಂಪುಟದಲ್ಲಿ ಪ್ರಸ್ತುತಪಡಿಸಿದ.ದಿ ಸಲ್ಯೂಷನ್‌ = ಲೆಟ್‌ ಇಟ್‌ ಬಿ ಗೀತಸಂಪುಟವು 1989ರಲ್ಲಿ ಬಿಡುಗಡೆಯಾಯಿತು.[೧೧೪] "ಐಯಾಮ್‌ ಸ್ಕ್ರಾಚಿಂಗ್‌ ಪೀಸ್‌ ಸಿಂಬಲ್ಸ್‌ ಆನ್‌ ಯುವರ್‌ ಟೂಂಬ್‌ಸ್ಟೋನ್‌‌‌" (ಈ ಹಾಡು "ಫಸ್ಟ್‌ ದೆ ಮೇಡ್‌ ಮಿ ಸ್ಲೀಪ್‌ ಇನ್‌ ದಿ ಕ್ಲೋಸೆಟ್" ಎಂಬ ಹೆಸರಿನಿಂದಲೂ ಪ್ರಸಿದ್ಧ), "ಗಾರ್ಬೇಜ್‌ ಡಂಪ್‌", ಮತ್ತು "ಐ ಕೆನಾಟ್‌ ರಿಮೆಂಬರ್‌ ವೆನ್‌‌" ಎಂಬ ಗೀತೆಗಳನ್ನು ಒಳಗೊಂಡಂತೆ ಮ್ಯಾನ್ಸನ್‌ನ ಹಲವಾರು ಹಾಡುಗಳು, 1976 ರಲ್ಲಿ ಬಂದ ಹೆಲ್ಟರ್‌ ಸ್ಕೆಲ್ಟರ್‌‌ ಎಂಬ TV-ಚಲನಚಿತ್ರದ ಧ್ವನಿಪಥದಲ್ಲಿ ಸೇರಿಸಲ್ಪಟ್ಟಿವೆ; ಇದರಲ್ಲಿ ಮ್ಯಾನ್ಸನ್ ಪಾತ್ರದಲ್ಲಿ ಅಭಿನಯಿಸಿರುವ ಸ್ಟೀವ್‌‌ ರೈಲ್ಸ್‌ಬ್ಯಾಕ್‌‌ನಿಂದ ಅವು ಪ್ರಸ್ತುತಪಡಿಸಲ್ಪಟ್ಟಿವೆ.[೧೧೫] ಜನಪ್ರಿಯವಾಗಿರುವ ನಗರ ಪ್ರದೇಶದ ಒಂದು ಐತಿಹ್ಯದ ಅನುಸಾರ, ಮಂಕೀಸ್‌ ಕೃತಿಗೆ ಸಂಬಂಧಿಸಿದಂತೆ 1965ರ ದಶಕದಲ್ಲಿ ಧ್ವನಿಪರೀಕ್ಷೆಗೊಳಗಾದ ಮ್ಯಾನ್ಸನ್‌‌ ಅದರಲ್ಲಿ ಯಶಸ್ಸು ಗಳಿಸಲಿಲ್ಲ; ಆ ಸಮಯದಲ್ಲಿ ಮೆಕ್‌ನೀಲ್‌ ದ್ವೀಪದಲ್ಲಿ ಮ್ಯಾನ್ಸನ್‌‌ ಇನ್ನೂ ಸೆರೆವಾಸವನ್ನು ಅನುಭವಿಸುತ್ತಿದ್ದ ಎಂಬ ವಾಸ್ತವಾಂಶದ ಆಧಾರದ ಮೇಲೆ ಈ ದಂತಕಥೆಯು ಅಲ್ಲಗಳೆಯಲ್ಪಟ್ಟಿದೆ.[೧೧೬] ಸಾಂಸ್ಕೃತಿಕ ಪರಿಣಾಮಸಂಪಾದಿಸಿ ಟೇಟ್‌-ಲೇಬಿಯಾಂಕಾ ಕೊಲೆಗಳಿಗೆ ಸಂಬಂಧಿಸಿದ ಬಂಧನಗಳು ನಡೆದ ತಿಂಗಳುಗಳೊಳಗಾಗಿ, 1960ರ ದಶಕದ ಪ್ರತಿಸಂಸ್ಕೃತಿಗೆ ಸೇರಿದ ಪ್ರಾಯೋಗಿಕ ವೃತ್ತಪತ್ರಿಕೆಗಳು ಮ್ಯಾನ್ಸನ್‌‌ನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡವು; ಇವುಗಳಿಂದಾಗಿಯೇ ಸಮುದಾಯವು ಹೊರಹೊಮ್ಮಲು ಸಾಧ್ಯವಾಯಿತು ಎನ್ನಬಹುದು.[೨]:221-222[೧೦೫] ರೋಲಿಂಗ್‌ ಸ್ಟೋನ್‌‌ ನಿಯತಕಾಲಿಕದ ಬರಹಗಾರನೊಬ್ಬ 1970ರ ಒಂದು ಮುಖಪುಟ ಲೇಖನಕ್ಕಾಗಿ[೧೧೭] ಲಾಸ್‌ ಏಂಜಲೀಸ್‌ ಜಿಲ್ಲಾ ನ್ಯಾಯವಾದಿಗಳ ಕಚೇರಿಗೆ ಭೇಟಿಯಿತ್ತಾಗ, ಮ್ಯಾನ್ಸನ್‌‌ನ್ನು ಜನಪ್ರಿಯ ಸಂಸ್ಕೃತಿಗೆ ಲಗತ್ತಿಸಲು ಕಾರಣವಾದ ರಕ್ತಸಿಕ್ತವಾದ "ಹೀಲ್ಟರ್‌‌ [ಈ ರೀತಿ ] ಸ್ಕೆಲ್ಟರ್‌‌" ಛಾಯಾಚಿತ್ರವೊಂದನ್ನು ಅಲ್ಲಿ ನೋಡಿ ದಿಗ್ಭ್ರಮೆಗೊಳಗಾದ.[೧೧೮] ಫ್ಯಾಷನ್‌,[೧೧೯][೧೨೦] ಗ್ರಾಫಿಕ್‌ ಕಲೆ,[೧೨೧][೧೨೨] ಸಂಗೀತ,[೧೨೩] ಮತ್ತು ಚಲನಚಿತ್ರಗಳು ಮಾತ್ರವೇ ಅಲ್ಲದೇ, ದೂರದರ್ಶನ ಮತ್ತು ರಂಗಭೂಮಿ ವಲಯಗಳಲ್ಲಿಯೂ ಮ್ಯಾನ್ಸನ್‌‌ ಒಂದು ಅಸ್ತಿತ್ವವನ್ನು ಹೊಂದಿದ್ದ. ಹೆಲ್ಟರ್‌ ಸ್ಕೆಲ್ಟರ್‌‌ ಅಕಲ್ಪಿತ-ಕೃತಿಯ 1994ರ ಆವೃತ್ತಿಗೆ ಸಂಬಂಧಿಸಿದಂತೆ, ನಂತರದಲ್ಲಿ ಸಂಯೋಜಿಸಲ್ಪಟ್ಟ ಭಾಗದಲ್ಲಿ, ಅಭಿಯೋಜಕ ವಿನ್ಸೆಂಟ್‌ ಬುಗ್ಲಿಯೊಸಿ BBC ನೌಕರನ ಒಂದು ಸಮರ್ಥನೆಯನ್ನು ಉಲ್ಲೇಖಿಸಿದ; ಯುರೋಪ್‌‌ನಲ್ಲಿ ಅಗ ಅಸ್ತಿತ್ವದಲ್ಲಿದ್ದ ಒಂದು "ನವ-ಮ್ಯಾನ್ಸನ್‌‌ ಪಂಥ"ವು, ಇತರ ವಿಷಯಗಳ ಪೈಕಿ, ಸರಿಸುಮಾರಾಗಿ 70 ರಾಕ್‌ ವಾದ್ಯವೃಂದಗಳಿಂದ ಪ್ರತಿನಿಧಿಸಲ್ಪಡುತ್ತಿತ್ತು. ಮ್ಯಾನ್ಸನ್‌‌ನಿಂದ ಬರೆಯಲ್ಪಟ್ಟ ಹಾಡುಗಳು ಮತ್ತು "ಅವನ ಬೆಂಬಲಕ್ಕಾಗಿ ಇರುವ ಹಾಡುಗಳನ್ನು" ಈ ವಾದ್ಯವೃಂದಗಳು ನುಡಿಸುತ್ತಿದ್ದವು ಎಂಬುದೇ ಆ ಸಮರ್ಥನೆಯಗಿತ್ತು.[೨]:488-491 ಮ್ಯಾನ್ಸನ್‌‌ ಉಲ್ಲೇಖಗಳೊಂದಿಗಿನ ಜನಪ್ರಿಯ ಸಂಗೀತದ ಕೇವಲ ಒಂದು ಮಾದರಿಯೆಂದರೆ, ಅದು ಆಲ್ಕಲೈನ್‌ ಟ್ರಯೋನ "ಸ್ಯಾಡೀ" ಆಗಿದೆ; ಇದರ ಸಾಹಿತ್ಯದಲ್ಲಿ "ಸ್ಯಾಡೀ G", "ಮಿಸ್‌. ಸುಸಾನ್‌ A", ಮತ್ತು "ಚಾರ್ಲೀ'ಸ್‌ ಬ್ರೋಕನ್‌‌ .22"ನಂಥ ಪದಗುಚ್ಛಗಳು ಸೇರಿಕೊಂಡಿವೆ.[೧೨೪] "ಸ್ಯಾಡೀ ಮೇ ಗ್ಲುಟ್ಜ್‌" ಎಂಬ ಹೆಸರಿನಿಂದ ಸುಸಾನ್‌ ಅಟ್ಕಿನ್ಸ್‌ ಸಮುದಾಯದ[೨]:75-77[೪೧] ವ್ಯಾಪ್ತಿಯೊಳಗೆ ಚಿರಪರಿಚಿತಳಾಗಿದ್ದಳು; ಮತ್ತು ಈ ಹಿಂದೆಯೇ ಉಲ್ಲೇಖಿಸಿದಂತೆ, ವೋಜ್‌ಸೀಕ್‌ ಫ್ರೈಕೊವ್ಸ್‌ಕಿಯನ್ನು ಸದೆಬಡಿಯಲು ಟೆಕ್ಸ್‌‌ ವ್ಯಾಟ್ಸನ್‌ ರಿವಾಲ್ವರ್‌ನ್ನು ಬಳಸಿದಾಗ ಚೂರುಚೂರಾಗಿ ಒಡೆದ ಅದರ ಹಿಡಿತವು, ಇಪ್ಪತ್ತೆರಡರಷ್ಟು ಒಳವ್ಯಾಸದ ಒಂದು ಮಾದರಿಯಾಗಿತ್ತು.[೪೬] ಮ್ಯಾನ್ಸನ್‌‌ ಮತ್ತು ಮಹಿಳೆಯರ ವಿಚಾರಣೆಯ ದಂಡನೆಯ ಹಂತದಲ್ಲಿನ ಅಟ್ಕಿನ್ಸ್‌ಳ ಸಾಕ್ಷ್ಯದಿಂದ ಜನ್ಯವಾದ ಒಂದು ಆಡುಮಾತಿನ ಉದ್ಧೃತಭಾಗವು "ಸ್ಯಾಡೀಯ‌" ಸಾಹಿತ್ಯಗಳನ್ನು ಅನುಸರಿಸುತ್ತದೆ.[೨]:428-429[೧೨೫] ಸ್ಪಾಹ್ನ್‌‌ ರ್ಯಾಂಚ್‌, ಕಸಾಬಿಯನ್‌‌, ಮತ್ತು ಮೆರಿಲಿನ್‌‌ ಮ್ಯಾನ್ಸನ್‌‌‌ನಂಥ ಸಂಗೀತದ ಪ್ರಸ್ತುತಿಕಾರರ ಹೆಸರುಗಳ ಮೇಲೂ ಸಹ ಮ್ಯಾನ್ಸನ್‌ ಪ್ರಭಾವ ಬೀರಿದ್ದಾನೆ; ಕೊನೆಯದು ಒಂದು ರಂಗನಾಮವಾಗಿದ್ದು, "ಚಾರ್ಲ್ಸ್‌‌ ಮ್ಯಾನ್ಸನ್‌‌‌" ಮತ್ತು "ಮೆರಿಲಿನ್‌‌ ಮನ್ರೋ" ಎಂಬ ಹೆಸರುಗಳಿಂದ ಅದನ್ನು ಜೋಡಿಸಲಾಗಿದೆ.[೧೨೬] ಸಮುದಾಯದ ಕಾರ್ಯಚಟುವಟಿಕೆಗಳ ಕಥೆಯು ಜಾನ್‌‌ ಮೊರಾನ್‌‌‌‌‌ನ ಗೀತನಾಟಕವಾದ ದಿ ಮ್ಯಾನ್ಸನ್‌‌ ಫ್ಯಾಮಿಲಿ ಮತ್ತು ಸ್ಟೀಫನ್‌‌ ಸೋಂಧೀಮ್‌‌‌‌ನ ಸಂಗೀತಮಯ ಕೃತಿಯಾದ ಅಸಾಸಿನ್ಸ್‌‌ ಮೇಲೆ ಪ್ರಭಾವ ಬೀರಿದೆ; ಅಸಾಸಿನ್ಸ್ ಕೃತಿಯು ಲಿನೆಟ್‌ ಫ್ರೋಮ್‌ ಎಂಬ ಒಂದು ಪಾತ್ರವನ್ನು ಒಳಗೊಂಡಿದೆ.[೧೨೭][೧೨೮] ಹೆಲ್ಟರ್‌ ಸ್ಕೆಲ್ಟರ್‌‌ ನ ಎರಡು ದೂರದರ್ಶನ ನಾಟಕೀಕರಣಗಳನ್ನು ಒಳಗೊಂಡಂತೆ, ಈ ಕಥೆಯು ಹಲವಾರು ಚಲನಚಿತ್ರಗಳಿಗೆ ವಿಷಯ-ವಷ್ತುವಾಗಿದೆ.[೧೨೯][೧೩೦] ಸೌತ್‌ ಪಾರ್ಕ್‌‌ನ ಮೆರ್ರಿ ಕ್ರಿಸ್‌ಮಸ್‌ ಚಾರ್ಲೀ ಮ್ಯಾನ್ಸನ್‌‌ ಸಂಚಿಕೆಯಲ್ಲಿ ಮ್ಯಾನ್ಸನ್‌‌ ಒಂದು ಹಾಸ್ಯ ಪಾತ್ರವಾಗಿದ್ದು, 06660 ಎಂಬ ಒಂದು ನಿವಾಸಿ ಸಂಖ್ಯೆಯನ್ನು ಅದು ಹೊಂದಿದೆ; ಇದು ಬೈಬಲಿನಲ್ಲಿರುವ "ಮೃಗದ ಸಂಖ್ಯೆ"ಯಾದ 666ಕ್ಕೆ ನೀಡಲಾದ ಒಂದು ಸ್ಪಷ್ಟ ಉಲ್ಲೇಖವಾಗಿದೆ.[೧೩೧][೧೩೨] ರಾಬರ್ಟ್‌ ಹೆಂಡ್ರಿಕ್‌ಸನ್‌ ಮತ್ತು ಲಾರೆನ್ಸ್‌‌ ಮೆರಿಕ್‌‌ರಿಂದ ನಿರ್ದೇಶಿಸಲ್ಪಟ್ಟ ಮ್ಯಾನ್ಸನ್‌‌ . 1973.[೧೩೩] ನಿಕೋಲಸ್‌‌ ಶ್ರೆಕ್‌‌ನಿಂದ ನಿರ್ದೇಶಿಸಲ್ಪಟ್ಟ ಚಾರ್ಲ್ಸ್‌‌ ಮ್ಯಾನ್ಸನ್‌‌‌ ಸೂಪರ್‌‌ಸ್ಟಾರ್‌‌ . 1989.[೧೩೪] ↑ ಲಿಂಡರ್‌, ಡೌಗ್‌. ದಿ ಚಾರ್ಲ್ಸ್‌‌ ಮ್ಯಾನ್ಸನ್‌‌‌ (ಟೇಟ್‌-ಲೇಬಿಯಾಂಕಾ ಮರ್ಡರ್‌‌) ಟ್ರಯಲ್‌‌ Archived 2007-12-08 at the Wayback Machine.. UMKC ಲಾ. 2002. 2007ರ ಏಪ್ರಿಲ್ 7ರಂದು ಮರುಸಂಪಾದಿಸಲಾಯಿತು. ↑ ೨.೦೦೦ ೨.೦೦೧ ೨.೦೦೨ ೨.೦೦೩ ೨.೦೦೪ ೨.೦೦೫ ೨.೦೦೬ ೨.೦೦೭ ೨.೦೦೮ ೨.೦೦೯ ೨.೦೧೦ ೨.೦೧೧ ೨.೦೧೨ ೨.೦೧೩ ೨.೦೧೪ ೨.೦೧೫ ೨.೦೧೬ ೨.೦೧೭ ೨.೦೧೮ ೨.೦೧೯ ೨.೦೨೦ ೨.೦೨೧ ೨.೦೨೨ ೨.೦೨೩ ೨.೦೨೪ ೨.೦೨೫ ೨.೦೨೬ ೨.೦೨೭ ೨.೦೨೮ ೨.೦೨೯ ೨.೦೩೦ ೨.೦೩೧ ೨.೦೩೨ ೨.೦೩೩ ೨.೦೩೪ ೨.೦೩೫ ೨.೦೩೬ ೨.೦೩೭ ೨.೦೩೮ ೨.೦೩೯ ೨.೦೪೦ ೨.೦೪೧ ೨.೦೪೨ ೨.೦೪೩ ೨.೦೪೪ ೨.೦೪೫ ೨.೦೪೬ ೨.೦೪೭ ೨.೦೪೮ ೨.೦೪೯ ೨.೦೫೦ ೨.೦೫೧ ೨.೦೫೨ ೨.೦೫೩ ೨.೦೫೪ ೨.೦೫೫ ೨.೦೫೬ ೨.೦೫೭ ೨.೦೫೮ ೨.೦೫೯ ೨.೦೬೦ ೨.೦೬೧ ೨.೦೬೨ ೨.೦೬೩ ೨.೦೬೪ ೨.೦೬೫ ೨.೦೬೬ ೨.೦೬೭ ೨.೦೬೮ ೨.೦೬೯ ೨.೦೭೦ ೨.೦೭೧ ೨.೦೭೨ ೨.೦೭೩ ೨.೦೭೪ ೨.೦೭೫ ೨.೦೭೬ ೨.೦೭೭ ೨.೦೭೮ ೨.೦೭೯ ೨.೦೮೦ ೨.೦೮೧ ೨.೦೮೨ ೨.೦೮೩ ೨.೦೮೪ ೨.೦೮೫ ೨.೦೮೬ ೨.೦೮೭ ೨.೦೮೮ ೨.೦೮೯ ೨.೦೯೦ ೨.೦೯೧ ೨.೦೯೨ ೨.೦೯೩ ೨.೦೯೪ ೨.೦೯೫ ೨.೦೯೬ ೨.೦೯೭ ೨.೦೯೮ ೨.೦೯೯ ೨.೧೦೦ ೨.೧೦೧ ೨.೧೦೨ ೨.೧೦೩ ೨.೧೦೪ ೨.೧೦೫ ೨.೧೦೬ ೨.೧೦೭ ೨.೧೦೮ ೨.೧೦೯ ೨.೧೧೦ ೨.೧೧೧ ೨.೧೧೨ ೨.೧೧೩ ೨.೧೧೪ ೨.೧೧೫ ೨.೧೧೬ ೨.೧೧೭ ೨.೧೧೮ ೨.೧೧೯ ೨.೧೨೦ ೨.೧೨೧ ೨.೧೨೨ ೨.೧೨೩ ೨.೧೨೪ ೨.೧೨೫ ೨.೧೨೬ ೨.೧೨೭ ೨.೧೨೮ ೨.೧೨೯ ೨.೧೩೦ ೨.೧೩೧ ೨.೧೩೨ ೨.೧೩೩ ೨.೧೩೪ ೨.೧೩೫ ೨.೧೩೬ ೨.೧೩೭ ೨.೧೩೮ ೨.೧೩೯ ೨.೧೪೦ ೨.೧೪೧ ೨.೧೪೨ ೨.೧೪೩ ೨.೧೪೪ ೨.೧೪೫ ೨.೧೪೬ ೨.೧೪೭ ೨.೧೪೮ ೨.೧೪೯ ೨.೧೫೦ ೨.೧೫೧ ೨.೧೫೨ ೨.೧೫೩ ೨.೧೫೪ ೨.೧೫೫ ೨.೧೫೬ ೨.೧೫೭ ೨.೧೫೮ ೨.೧೫೯ ೨.೧೬೦ ೨.೧೬೧ ೨.೧೬೨ ೨.೧೬೩ ೨.೧೬೪ ೨.೧೬೫ ೨.೧೬೬ ೨.೧೬೭ ೨.೧೬೮ ೨.೧೬೯ ೨.೧೭೦ ೨.೧೭೧ ೨.೧೭೨ ೨.೧೭೩ ೨.೧೭೪ ೨.೧೭೫ ೨.೧೭೬ ೨.೧೭೭ ೨.೧೭೮ ೨.೧೭೯ ೨.೧೮೦ ೨.೧೮೧ ೨.೧೮೨ ೨.೧೮೩ ೨.೧೮೪ ೨.೧೮೫ ೨.೧೮೬ ೨.೧೮೭ ೨.೧೮೮ ೨.೧೮೯ ೨.೧೯೦ ೨.೧೯೧ ೨.೧೯೨ ೨.೧೯೩ ೨.೧೯೪ ೨.೧೯೫ ಗೆಂಟ್ರಿ, ಕರ್ಟ್‌ ಜೊತೆಯಲ್ಲಿ ಬಗ್ಲಿಯೋಸಿ, ವಿನ್ಸೆಂಟ್‌‌. ಹೆಲ್ಟರ್‌ ಸ್ಕೆಲ್ಟರ್‌‌ — ದಿ ಟ್ರೂ ಸ್ಟೋರಿ ಆಫ್‌ ದಿ ಮ್ಯಾನ್ಸನ್‌‌ ಮರ್ಡರ್ಸ್‌‌ 25ತ್‌‌ ಆನಿವರ್ಸರಿ ಎಡಿಷನ್‌ , W.W. ನಾರ್ಟನ್‌‌‌ & ಕಂಪನಿ, 1994. ISBN 0-393-08700-X. ↑ Smith, David E. and Rose, Alan J. (1970). "A Case Study of the Charles Manson Group Marriage Commune". Journal of the American Society of Psychosomatic Dentistry and Medicine. 17 (3): 99–106. Archived from the original on November 27, 2007. CS1 maint: multiple names: authors list (link) ↑ ‌ಪ್ರಾಸಿಕ್ಯೂಷನ್‌‌'ಸ್‌ ಕ್ಲೋಸಿಂಗ್‌ ಆರ್ಗ್ಯುಮೆಂಟ್ ಬಹು-ಪುಟದ ಪ್ರತಿಲಿಪಿಯ ಪುಟ 1, 2ಹಿಂಸಾತ್ಮಕ.com. 2007ರ ಏಪ್ರಿಲ್ 16ರಂದು ಮರುಸಂಪಾದಿಸಲಾಯಿತು. ↑ ‌ಪ್ರಾಸಿಕ್ಯೂಷನ್‌'ಸ್‌ ಕ್ಲೋಸಿಂಗ್ ಆರ್ಗ್ಯುಮೆಂಟ್ ಬಹು-ಪುಟದ ಪ್ರತಿಲಿಪಿಯ ಪುಟ 37, 2ಹಿಂಸಾತ್ಮಕ.com. 2009ರ ಮಾರ್ಚ್‌ 28ರಂದು ಮರುಸಂಪಾದಿಸಲಾಯಿತು. ↑ ಹಿಸ್ಟರಿ ಆಫ್‌ ಕ್ಯಾಲಿಫೋರ್ನಿಯಾ'ಸ್‌ ಡೆತ್‌ ಪೆನಾಲ್ಟಿ Archived 2016-01-13 at the Wayback Machine. deathpenalty.org. 2009ರ ಮಾರ್ಚ್‌ 28ರಂದು ಮರುಸಂಪಾದಿಸಲಾಯಿತು. ↑ ಎಮ್ಮಾನ್ಸ್‌‌, ನ್ಯೂಯೆಲ್‌‌. [೧]ಮ್ಯಾನ್ಸನ್‌‌ ಇನ್‌ ಹಿಸ್‌ ಓನ್‌ ವರ್ಡ್ಸ್‌ . ಗ್ರೋವ್‌ ಪ್ರೆಸ್‌‌, ನ್ಯೂಯಾರ್ಕ್‌; 1988. ISBN 0-8021-3024-0. ಪುಟ 28. (ಒಂದು ವೇಳೆ ಕೊಂಡಿಯು ನೇರವಾಗಿ 28ನೇ ಪುಟಕ್ಕೆ ಹೋಗದಿದ್ದಲ್ಲಿ, ಇಲ್ಲಿಗೆ ಚಲಿಸಿ; "ನೋ ನೇಮ್‌ ಮೆಡಾಕ್ಸ್‌‌" ಎಂಬುದನ್ನು ಎದ್ದುಕಾಣುವಂತೆ ಮಾಡಲಾಗಿದೆ.) ↑ ೮.೦ ೮.೧ ೮.೨ ‌‌ಸ್ಮಿತ್, ಡೇವ್‌. ‌ಮದರ್‌ ಟೆಲ್ಸ್‌ ಲೈಫ್‌ ಆಫ್‌ ಮ್ಯಾನ್ಸನ್‌ ಆಸ್‌ ಬಾಯ್. 1971ರ ಲೇಖನ. 2007ರ ಜೂನ್ 5ರಂದು ಮರುಸಂಪಾದಿಸಲಾಯಿತು. ↑ ‌ರೀಟ್‌ವೈಸ್ನರ್, ವಿಲಿಯಂ ಆಡಮ್ಸ್‌‌. ‌ಪ್ರಾವಿಷನಲ್‌ ಆನ್ಸೆಸ್ಟ್ರಿ ಆಫ್ ಚಾರ್ಲ್ಸ್‌‌ ಮ್ಯಾನ್ಸನ್‌‌‌ . 2007ರ ಏಪ್ರಿಲ್ 26ರಂದು ಮರುಸಂಪಾದಿಸಲಾಯಿತು. ↑ ೧೦.೦ ೧೦.೧ ಮ್ಯಾನ್ಸನ್‌‌ ಜನನ ಪ್ರಮಾಣ ಪತ್ರದ ಛಾಯಾಪ್ರತಿ Archived 2013-08-17 at the Wayback Machine. MansonDirect.com. 2007ರ ಏಪ್ರಿಲ್ 26ರಂದು ಮರುಸಂಪಾದಿಸಲಾಯಿತು. ↑ ಎಮ್ಮಾನ್ಸ್‌‌, ನ್ಯೂಯೆಲ್‌‌. ಮ್ಯಾನ್ಸನ್‌‌ ಇನ್‌ ಹಿಸ್‌ ಓನ್‌ ವರ್ಡ್ಸ್‌ . ಗ್ರೋವ್‌ ಪ್ರೆಸ್‌‌, ನ್ಯೂಯಾರ್ಕ್‌; 1988. ISBN 0-8021-3024-0. ಪುಟಗಳು 28-29. ↑ ೧೨.೦ ೧೨.೧ ೧೨.೨ ೧೨.೩ ೧೨.೪ ೧೨.೫ ೧೨.೬ ಎಮ್ಮಾನ್ಸ್‌‌, ನ್ಯೂಯೆಲ್‌‌. ಮ್ಯಾನ್ಸನ್‌‌ ಇನ್‌ ಹಿಸ್‌ ಓನ್‌ ವರ್ಡ್ಸ್‌ . ಗ್ರೋವ್‌ ಪ್ರೆಸ್‌‌, ನ್ಯೂಯಾರ್ಕ್‌; 1988. ISBN 0-8021-3024-0 ↑ 1981ರ ಚಾರ್ಲ್ಸ್‌‌ ಮ್ಯಾನ್ಸನ್‌‌‌ ಜೊತೆಗಿನ ಟಾಮ್‌ ಸ್ನೈಡರ್‌‌ ಸಂದರ್ಶನ. ಆರನ್‌ ಬ್ರೆಡ್‌ಲೌನಿಂದ ಲಿಪ್ಯಂತರಿಸಲ್ಪಟ್ಟಿದ್ದು. CharlieManson.com. 2007ರ ಏಪ್ರಿಲ್ 26ರಂದು ಮರುಸಂಪಾದಿಸಲಾಯಿತು. ↑ ‌ರಾಬರ್ಟ್‌ ಲೈವ್‌ಸೆ ಜೊತೆಯಲ್ಲಿ ಕಾರ್ಪಿಸ್, ಆಲ್ವಿನ್‌‌. ‌ಆನ್‌ ದಿ ರಾಕ್‌: ಟ್ವೆಂಟಿ-ಫೈವ್‌ ಇಯರ್ಸ್‌ ಅಟ್‌ ಅಲ್‌ಕ್ಯಾಟ್ರಾಜ್ , 1980 ↑ ಸ್ಯಾಂಡರ್ಸ್‌‌, ಸಂಪಾದಿತ ದಿ ಫ್ಯಾಮಿಲಿ . ಥಂಡರ್‌'ಸ್‌ ಮೌತ್‌ ಪ್ರೆಸ್‌‌, ನ್ಯೂಯಾರ್ಕ್‌, 2002. ISBN 1-56025-396-7. ಪುಟಗಳು 13–20. ↑ ೧೬.೦ ೧೬.೧ ಸ್ಯಾಂಡರ್ಸ್, 2002, ಪುಟ 34. ↑ ೧೭.೦ ೧೭.೧ ಸೋಲ್‌ಡ್ಯಾಡ್‌, ಗಿಲ್ಲೆರ್ಮೊ ಜೊತೆಯಲ್ಲಿ ವ್ಯಾಟ್ಕಿನ್ಸ್‌‌, ಪಾಲ್‌‌. ಮೈ ಲೈಫ್‌ ವಿತ್‌ ಚಾರ್ಲ್ಸ್‌‌ ಮ್ಯಾನ್ಸನ್‌‌‌ , ಬಂಟಾಮ್‌‌, 1979. ISBN 0-553-12788-8. ಅಧ್ಯಾಯ 4. ↑ ೧೮.೦ ೧೮.೧ ೧೮.೨ ೧೮.೩ ರೇ ಹೋಕ್‌‌ಸ್ಟ್ರಾಗೆ ವ್ಯಾಟ್ಸನ್‌‌, ಚಾರ್ಲ್ಸ್‌ ಹೇಳಿದಂತೆ. ವಿಲ್‌ ಯು ಡೈ ಫಾರ್‌ ಮಿ? , ಅಧ್ಯಾಯ 9 ವ್ಯಾಟ್ಸನ್‌‌ ವೆಬ್‌ಸೈಟ್‌. 2007ರ ಮೇ 3ರಂದು ಮರುಸಂಪಾದಿಸಲಾಯಿತು. ↑ ೧೯.೦ ೧೯.೧ ವ್ಯಾಟ್ಸನ್‌‌, ಅಧ್ಯಾಯ 6 ↑ ೨೦.೦ ೨೦.೧ ವ್ಯಾಟ್ಸನ್‌‌, ಅಧ್ಯಾಯ 7 ↑ ವ್ಯಾಟ್ಕಿನ್ಸ್‌‌, ಪುಟಗಳು 34 & 40. ↑ ವ್ಯಾಟ್ಸನ್‌‌, ಅಧ್ಯಾಯ 4 ↑ ೨೩.೦ ೨೩.೧ ೨೩.೨ ವ್ಯಾಟ್ಕಿನ್ಸ್‌‌, ಅಧ್ಯಾಯ 10. ↑ ವ್ಯಾಟ್ಕಿನ್ಸ್‌‌, ಅಧ್ಯಾಯ 11 ↑ ಅಧ್ಯಾಯ 1, "ಮ್ಯಾನ್ಸನ್‌‌," ಮ್ಯಾನ್ಸನ್‌‌'ಸ್‌ ರೈಟ್‌-ಹ್ಯಾಂಡ್‌ ಮ್ಯಾನ್‌ ಸ್ಪೀಕ್ಸ್‌ ಔಟ್‌! . ISBN 0-9678519-1-2. 2007ರ ನವೆಂಬರ್‌ 21ರಂದು ಮರುಸಂಪಾದಿಸಲಾಯಿತು. ↑ ೨೬.೦ ೨೬.೧ ೨೬.೨ ೨೬.೩ ೨೬.೪ ವ್ಯಾಟ್ಕಿನ್ಸ್‌‌, ಅಧ್ಯಾಯ 12 ↑ "Larry King Interview with Paul Watkins", CNN Larry King Live: Interview with Paul Watkins ಬೀಟಲ್ಸ್‌ ಜೊತೆಗೆ ಮ್ಯಾನ್ಸನ್‌‌ ಹೊಂದಿದ್ದ ಗೀಳನ್ನು ಸಂದರ್ಶನದ ಕೊನೆಯ ಭಾಗದಲ್ಲಿ ಚರ್ಚಿಸಲಾಗಿದೆ. ↑ ಸ್ಯಾಂಡರ್ಸ್‌‌ 2002, 11. ↑ ೨೯.೦ ೨೯.೧ ೨೯.೨ ವ್ಯಾಟ್ಸನ್‌‌, ಅಧ್ಯಾಯ 11 ↑ ೩೦.೦ ೩೦.೧ ‌‌‌ದಿ ಇನ್‌ಫ್ಲುಯೆನ್ಸ್‌ ಆಫ್‌ ದಿ ಬೀಟಲ್ಸ್‌‌ ಆನ್‌‌ ಚಾರ್ಲ್ಸ್‌‌ ಮ್ಯಾನ್ಸನ್ . UMKC ಲಾ. 2006ರ ಏಪ್ರಿಲ್ 7ರಂದು ಮರುಸಂಪಾದಿಸಲಾಯಿತು. ↑ ಸ್ಯಾಂಡರ್ಸ್‌‌ 2002, 99–100. ↑ ವ್ಯಾಟ್ಕಿನ್ಸ್‌‌, ಪುಟ 137. ↑ ೩೩.೦ ೩೩.೧ ವ್ಯಾಟ್ಕಿನ್ಸ್‌‌, ಅಧ್ಯಾಯ 13 ↑ ೩೪.೦ ೩೪.೧ ವ್ಯಾಟ್ಸನ್‌‌, ಅಧ್ಯಾಯ 12. ↑ ಟೆಸ್ಟಿಮನಿ ಆಫ್‌ ಪಾಲ್‌‌ ವ್ಯಾಟ್ಕಿನ್ಸ್‌‌ ಇನ್‌ ದಿ ಚಾರ್ಲ್ಸ್‌‌ ಮ್ಯಾನ್ಸನ್‌‌‌ ಟ್ರಯಲ್‌‌ UMKC ಲಾ. 2007ರ ಏಪ್ರಿಲ್ 7ರಂದು ಮರುಸಂಪಾದಿಸಲಾಯಿತು. ↑ ಸ್ಯಾಂಡರ್ಸ್‌‌ 2002, 133–36. ↑ ವ್ಯಾಟ್ಕಿನ್ಸ್‌‌, ಅಧ್ಯಾಯ 15 ↑ ೩೮.೦ ೩೮.೧ ೩೮.೨ ೩೮.೩ ೩೮.೪ ವ್ಯಾಟ್ಸನ್‌‌, ಅಧ್ಯಾಯ 13 ↑ ಸ್ಯಾಂಡರ್ಸ್‌‌ 2002, 147–49. ↑ ಸ್ಯಾಂಡರ್ಸ್‌‌ 2002, 151. ↑ ೪೧.೦ ೪೧.೧ ೪೧.೨ ಬಾಬ್‌ ಸ್ಲೋಸ್ಸರ್‌‌ ಜೊತೆಯಲ್ಲಿ ಅಟ್ಕಿನ್ಸ್‌, ಸುಸಾನ್‌. ಚೈಲ್ಡ್‌ ಆಫ್‌ ಸತಾನ್‌, ಚೈಲ್ಡ್‌ ಆಫ್‌ ಗಾಡ್‌ ; ಲೋಗೊಸ್‌ ಇಂಟರ್‌‌ನ್ಯಾಷನಲ್‌‌, ಪ್ಲೇನ್‌ಫೀಲ್ಡ್‌‌, ನ್ಯೂಜರ್ಸಿ; 1977; ISBN 0-88270-276-9; ಪುಟಗಳು 94–120. ↑ ಸ್ಯಾಂಡರ್ಸ್‌‌ 2002, ಪುಟ 184. ↑ ೪೩.೦ ೪೩.೧ ಬ್ಯೂಸೊಲೈಲ್‌ ಕ್ವೀ ಸಂದರ್ಶನ Archived 2010-11-22 at the Wayback Machine.. Charlie Manson.com. ↑ ೪೪.೦ ೪೪.೧ ಬ್ಯೂಸೊಲೈಲ್‌ ಸೆಕೆಂಡ್ಸ್‌ ಸಂದರ್ಶನಗಳು Archived 2007-06-07 at the Wayback Machine.. beausoleil.net. ↑ ಪ್ರಾಸಿಕ್ಯೂಷನ್‌‌'ಸ್‌ ಕ್ಲೋಸಿಂಗ್‌ ಆರ್ಗ್ಯುಮೆಂಟ್‌ ಬಹು-ಪುಟದ ಪ್ರತಿಲಿಪಿಯ 6ನೇ ಪುಟ, 2ಹಿಂಸಾತ್ಮಕ.com. ↑ ೪೬.೦೦ ೪೬.೦೧ ೪೬.೦೨ ೪೬.೦೩ ೪೬.೦೪ ೪೬.೦೫ ೪೬.೦೬ ೪೬.೦೭ ೪೬.೦೮ ೪೬.೦೯ ೪೬.೧೦ ೪೬.೧೧ ೪೬.೧೨ ೪೬.೧೩ ೪೬.೧೪ ೪೬.೧೫ ವ್ಯಾಟ್ಸನ್‌‌, ಅಧ್ಯಾಯ 14 ↑ ೪೭.೦ ೪೭.೧ ವ್ಯಾಟ್ಸನ್‌‌, ಅಧ್ಯಾಯ 19. ↑ ೪೮.೦ ೪೮.೧ ೪೮.೨ ೪೮.೩ ೪೮.೪ ೪೮.೫ ೪೮.೬ ೪೮.೭ ವ್ಯಾಟ್ಸನ್‌‌, ಅಧ್ಯಾಯ 15 ↑ "Atkinson grand jury testimony", Afternoon grand-jury testimony of Susan Atkins, Los Angeles, California, December 5, 1969 ಅಟ್ಕಿನ್ಸ್‌ಗೆ ಸಂಬಂಧಿಸಿದ ಗೊಂದಲದ ಒಂದು ಕ್ಷಣದಲ್ಲಿ ಈ ಹೇಳಿಕೆಯು ಬರುತ್ತದೆ; "ಯುದ್ಧದ" ಸಿದ್ಧತೆಯ ಕುರಿತಾಗಿ ಅವಳಿಗೆ ಹೇಳಿದ ವ್ಯಕ್ತಿಯು ಕ್ರೆನ್‌ವಿಂಕೆಲ್‌ ಆಗಿದ್ದಳು ಎಂಬುದಾಗಿ ತಾನು ನಂಬಿರುವುದನ್ನು ಅವಳು ಹೇಳುತ್ತಿರುವ ಸಂಭವ ಇಲ್ಲಿ ಕಾಣುತ್ತದೆ. ↑ ಸುಸಾನ್‌ ಅಟ್ಕಿನ್ಸ್‌ ಸ್ಟೋರಿ ಆಫ್‌ 2 ನೈಟ್ಸ್‌ ಆಫ್‌ ಮರ್ಡರ್‌‌ ಲಾಸ್‌ ಏಂಜಲೀಸ್‌ ಟೈಮ್ಸ್‌‌ , ಭಾನುವಾರ, ಡಿಸೆಂಬರ್‌‌ 14, 1969. ↑ ಸ್ಯಾಂಡರ್ಸ್‌‌ 2002, 243–44. ↑ ೫೨.೦ ೫೨.೧ ಟ್ರಾನ್‌ಸ್ಕ್ರಿಪ್ಟ್‌ ಅಂಡ್‌ ಸಿನಾಪ್ಸಿಸ್‌ ಆಫ್‌ ವಿಲಿಯಂ ಗ್ಯಾರೆಸ್ಟನ್‌‌ ಕಾಮೆಂಟ್ಸ್‌‌. Archived 2013-08-18 at the Wayback Machine. "ದಿ ಲಾಸ್ಟ್‌ ಡೇಸ್‌ ಆಫ್‌ ಶರೋನ್‌‌ ಟೇಟ್‌," ದಿ E! ಟ್ರೂ ಹಾಲಿವುಡ್‌ ಸ್ಟೋರಿ . CharlieManson.com. 2007ರ ಜೂನ್ 10ರಂದು ಮರುಸಂಪಾದಿಸಲಾಯಿತು. ↑ ವ್ಯಾಟ್ಕಿನ್ಸ್‌‌, ಅಧ್ಯಾಯ 21. ↑ ವ್ಯಾಟ್ಸನ್‌‌, ಅಧ್ಯಾಯ 2 ↑ ಸ್ಯಾಂಡರ್ಸ್‌‌ 2002, 282–83. ↑ ವ್ಯಾಟ್ಕಿನ್ಸ್‌‌, ಅಧ್ಯಾಯ 22 ↑ ಲಾಸ್‌ ಏಂಜಲೀಸ್‌ನ ಶಾಂತಿಪಾಲನಾ ಅಧಿಕಾರಿಗಳಾದ ಪಾಲ್‌‌ ವೈಟ್ಲೆ ಮತ್ತು ಚಾರ್ಲ್ಸ್‌‌ ಗುಯೆಂಥರ್‌ರವರು 1969ರ ಅಕ್ಟೋಬರ್‌‌ 13ರಂದು ಕ್ಯಾಥರೀನ್‌‌ ಲ್ಯೂಟ್‌ಸಿಂಗರ್‌‌ ಮತ್ತು ಸುಸಾನ್‌ ಅಟ್ಕಿನ್ಸ್‌ರನ್ನು ಪ್ರಶ್ನಿಸಿದುದರ ಕುರಿತಾದ ವರದಿ. ↑ ಅಟ್ಕಿನ್ಸ್‌ 1977, 141. ↑ ಸ್ಯಾಂಡರ್ಸ್‌‌ 2002, 388. ↑ ಪ್ರಾಸಿಕ್ಯೂಷನ್‌‌'ಸ್‌ ಕ್ಲೋಸಿಂಗ್‌ ಆರ್ಗ್ಯುಮೆಂಟ್‌ ಬಹು-ಪುಟದ ಪ್ರತಿಲಿಪಿಯ 29ನೇ ಪುಟ, 2ಹಿಂಸಾತ್ಮಕ.com. ↑ ೬೧.೦ ೬೧.೧ ಪ್ರಾಸಿಕ್ಯೂಷನ್‌‌'ಸ್‌ ಕ್ಲೋಸಿಂಗ್‌ ಆರ್ಗ್ಯುಮೆಂಟ್‌ ಬಹು-ಪುಟದ ಪ್ರತಿಲಿಪಿಯ 22–23ನೇ ಪುಟಗಳು, 2ಹಿಂಸಾತ್ಮಕ.com. ↑ ಬಯಾಗ್ರಫಿ — "ಚಾರ್ಲ್ಸ್‌‌ ಮ್ಯಾನ್ಸನ್‌‌‌." A&E ನೆಟ್‌ವರ್ಕ್‌ ↑ ಸ್ಯಾಂಡರ್ಸ್‌‌ 2002, 436–38. ↑ ವ್ಯಾಟ್ಸನ್‌‌, ಅಧ್ಯಾಯ 16 ↑ ವ್ಯಾಟ್ಸನ್‌‌, ಅಧ್ಯಾಯ 18 ↑ George, Edward (1999). Taming the Beast: Charles Manson's Life Behind Bars. Macmillan. pp. 42–45. ISBN 9780312209704. Unknown parameter |coauthor= ignored (|author= suggested) (help) ↑ ಸ್ಯಾಂಡರ್ಸ್‌‌ 2002, 271–2. ↑ ಚಾರ್ಲ್ಸ್‌‌ ಮ್ಯಾನ್ಸನ್‌‌‌'ನ 1992ರ ಪೆರೋಲು ವಿಚಾರಣೆಯ ಪ್ರತಿಲಿಪಿ Archived 2002-08-04 at the Wayback Machine. ಮಿಸ್ಸೌರಿ-ಕಾನ್ಸಾಸ್‌ ವಿಶ್ವವಿದ್ಯಾಲಯ ಸಿಟಿ ಸ್ಕೂಲ್‌ ಆಫ್‌ ಲಾ. 2007ರ ಮೇ 24ರಂದು ಮರುಸಂಪಾದಿಸಲಾಯಿತು. ↑ 18 U.S.C. § 1751 ↑ ‌ಜೊಯಂಟ್, ಕರೋಲ್‌‌. ‌‌ಡೈರಿ ಆಫ್‌ ಎ ಮ್ಯಾಡ್‌ ಸಲೂನ್‌ ಓನರ್ Archived 2011-07-14 at the Wayback Machine.. ಏಪ್ರಿಲ್‌‌–ಮೇ 2005. ↑ ರಿವೆರಾ'ಸ್‌ 'ಡೆವಿಲ್‌ ವರ್ಷಿಪ್‌' ವಾಸ್‌ TV ಅಟ್‌ ಇಟ್ಸ್‌ ವರ್ಸ್ಟ್‌ . ಟಾಮ್‌ ಶೇಲ್ಸ್‌ಮಾಡಿರುವ ಅವಲೋಕನ. ‌ಸ್ಯಾನ್‌ ಜೋಸ್‌ ಮರ್ಕ್ಯುರಿ ನ್ಯೂಸ್, ಅಕ್ಟೋಬರ್‌‌ 31, 1988. ↑ ಕ್ಯಾಥರೀನ್‌‌ ಷೇರ್‌‌ ವಿತ್‌ ವಿನ್ಸೆಂಟ್‌ ಬುಗ್ಲಿಯೊಸಿ, ಹಾರ್ಡ್‌ ಕಾಪಿ , 1997 youtube.com. 2007ರ ಮೇ 30ರಂದು ಮರುಸಂಪಾದಿಸಲಾಯಿತು. ↑ ಮ್ಯಾನ್ಸನ್‌‌'ಸ್‌ ಫ್ಯಾಮಿಲಿ ಅಫೇರ್‌ ಲಿವಿಂಗ್‌ ಇನ್‌ ಸೈಬರ್‌ಸ್ಪೇಸ್‌. wired.com, ಏಪ್ರಿಲ್‌‌ 16, 1997. 2007ರ ಮೇ 29ರಂದು ಮರುಸಂಪಾದಿಸಲಾಯಿತು. ↑ ಟ್ರಾನ್‌ಸ್ಕ್ರಿಪ್ಟ್‌ ಆಫ್‌ ವಿಲಿಯಂ ಗ್ಯಾರೆಸ್ಟನ್‌‌ ಪಾಲಿಗ್ರಾಫ್‌ ಎಕ್ಸಾಮ್‌. Archived 2013-08-18 at the Wayback Machine. CharlieManson.com. 2007ರ ಜೂನ್ 10ರಂದು ಮರುಸಂಪಾದಿಸಲಾಯಿತು. ↑ ೭೭.೦ ೭೭.೧ "ಏಲಿಂಗ್‌ ಮ್ಯಾನ್ಸನ್‌‌ ಫಾಲೋಯರ್‌ ಡಿನೈಡ್‌ ರಿಲೀಸ್‌ ಫ್ರಂ ಪ್ರಿಸನ್‌" CNN , ಜುಲೈ 15, 2008. ↑ Netter, Sarah (September 2, 2009). "Dying Manson Murderer Denied Release". ABC News. Retrieved September 3, 2009. Unknown parameter |coauthors= ignored (|author= suggested) (help) ↑ Fox, Margalit (September 26, 2009). "Susan Atkins, Manson Follower, Dies at 61". New York Times. Retrieved September 26, 2009. ↑ Blankstein, Andrew (September 25, 2009). "Manson follower Susan Atkins dies at 61". Los Angeles Times. Unknown parameter |accessed= ignored (help)[permanent dead link] ↑ ಟ್ರಾನ್‌ಸ್ಕ್ರಿಪ್ಟ್‌, MSNBC ಲೈವ್‌‌ Archived 2007-11-11 at the Wayback Machine.. ಸೆಪ್ಟೆಂಬರ್ 5, 2007. 2007ರ ನವೆಂಬರ್‌ 21ರಂದು ಮರುಸಂಪಾದಿಸಲಾಯಿತು. ↑ ೮೨.೦ ೮೨.೧ "Charles Manson Murders". Most Evil. Season 3. Episode 1. 2008-01-31. Discovery Channel. http://investigation.discovery.com/tv/most-evil/ep-guide/most-evil-ep-guide.html. ↑ "AP ಎಕ್ಸ್‌ಕ್ಲುಸಿವ್‌: ಆನ್‌ ಮ್ಯಾನ್ಸನ್‌‌'ಸ್‌ ಟ್ರಯಲ್‌, ಫೋರೆನ್ಸಿಕ್‌ ಟೆಸ್ಟಿಂಗ್‌ ಸಜೆಸ್ಟ್ಸ್‌ ಪಾಸಿಬಲ್‌ ನ್ಯೂ ಗ್ರೇವ್‌ ಸೈಟ್ಸ್‌." ಅಸೋಸಿಯೇಟೆಡ್‌ ಪ್ರೆಸ್‌‌, ಇಂಟರ್‌‌ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌‌‌‌‌ ನಲ್ಲಿ ಪ್ರಕಟವಾಗಿರುವುದು. 2008ರ ಮಾರ್ಚ್‌ 16ರಂದು ಮರುಸಂಪಾದಿಸಲಾಯಿತು. ↑ ಮೋರ್‌ ಟೆಸ್ಟ್ಸ್‌ ಅಟ್‌ ಮ್ಯಾನ್ಸನ್‌‌ ರ್ಯಾಂಚ್‌ ಫಾರ್‌ ಬರೀಡ್‌ ಬಾಡೀಸ್‌ . CNN.com. 2008ರ ಮಾರ್ಚ್‌ 28ರಂದು ಮರುಸಂಪಾದಿಸಲಾಯಿತು. ↑ ಮ್ಯಾನ್ಸನ್‌ ರ್ಯಾಂಚ್‌ ಮನೆಯಲ್ಲಿ ಅಗೆಯುವುದರ ಕುರಿತಾದ ತೀರ್ಮಾನವನ್ನು ತಳೆಯಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ Archived 2011-07-27 at the Wayback Machine. ಅಸೋಸಿಯೇಟೆಡ್‌ ಪ್ರೆಸ್‌‌ ವರದಿ, mercurynews.com. 2008ರ ಏಪ್ರಿಲ್‌ 27ರಂದು ಮರುಸಂಪಾದಿಸಲಾಯಿತು. ↑ ಅಥಾರಿಟೀಸ್‌ ಟು ಡಿಗ್‌ ಅಟ್‌ ಓಲ್ಡ್‌ ಮ್ಯಾನ್ಸನ್‌‌ ಫ್ಯಾಮಿಲಿ ರ್ಯಾಂಚ್‌ cnn.com. 2008ರ ಮೇ 9ರಂದು ಮರುಸಂಪಾದಿಸಲಾಯಿತು. ↑ ಲೆಟರ್‌ ಫ್ರಮ್‌ ಮ್ಯಾನ್ಸನ್‌‌ ಲೆಫ್ಟಿನೆಂಟ್‌. CNN.com. 2008ರ ಮೇ 9ರಂದು ಮರುಸಂಪಾದಿಸಲಾಯಿತು. ↑ ಮಂಥ್ಲೀ ವ್ಯೂ -- ಮೇ 2008 . Aboundinglove.org. 2008ರ ಮೇ 9ರಂದು ಮರುಸಂಪಾದಿಸಲಾಯಿತು. ↑ ಫೋರ್‌ ಹೋಲ್ಸ್‌ ಡಗ್‌, ನೋ ಬಾಡೀಸ್‌ ಫೌಂಡ್‌... iht.com. 2008ರ ಮೇ 26ರಂದು ಮರುಸಂಪಾದಿಸಲಾಯಿತು. ↑ ಡಿಗ್‌ ಟರ್ನ್ಸ್‌ ಅಪ್‌ ನೋ ಬಾಡೀಸ್‌ ಅಟ್‌ ಮ್ಯಾನ್ಸನ್‌‌ ರ್ಯಾಂಚ್‌ ಸೈಟ್‌ CNN.com, ಮೇ 21, 2008. 2008ರ ಮೇ 26ರಂದು ಮರುಸಂಪಾದಿಸಲಾಯಿತು. ↑ ೯೨.೦ ೯೨.೧ "Manson Family member interviewed for special". Reuters. July 28, 2009. Retrieved October 27, 2009. ↑ "Manson, About the Show". History Channel. Retrieved October 27, 2009. ↑ Oney, Steve. "Last Words. In the end..." Los Angeles magazine. July 2009. Retrieved July 8, 2009. ↑ "ಮ್ಯಾನ್‌ ಫೈಂಡ್ಸ್‌ ಹಿಸ್‌ ಲಾಂಗ್‌-ಲಾಸ್ಟ್‌ ಡ್ಯಾಡ್‌ ಈಸ್‌ ಚಾರ್ಲ್ಸ್‌‌ ಮ್ಯಾನ್ಸನ್‌‌‌" - ಹುವ್‌ ಬೊರ್ಲ್ಯಾಂಡ್‌, ಸ್ಕೈ ನ್ಯೂಸ್‌ ಆನ್‌ಲೈನ್‌ , ನವೆಂಬರ್ 23, 2009 Archived 2009-11-26 at the Wayback Machine. ↑ "ಐ ಟ್ರೇಸ್ಡ್‌ ಮೈ ಡ್ಯಾಡ್‌... ಅಂಡ್‌ ಡಿಸ್ಕವರ್ಡ್‌ ಹೀ ಈಸ್‌ ಚಾರ್ಲ್ಸ್‌‌ ಮ್ಯಾನ್ಸನ್‌‌‌" - ಪೀಟರ್‌ ಸ್ಯಾಮ್ಸನ್‌‌, ದಿ ಸನ್‌‌ , ನವೆಂಬರ್ 23, 2009 ↑ ಪೀಪಲ್‌ v. ಆಂಡರ್‌ಸನ್‌‌, 493 ಪುಟ 2ನೇ 880, 6 ಕ್ಯಾಲಿಫೋರ್ನಿಯಾ 3ನೇ 628 (ಕ್ಯಾಲಿಫೋರ್ನಿಯಾ 1972), ಬಹುಮತಾಭಿಪ್ರಾಯದ ಅಂತಿಮ ವಾಕ್ಯಕ್ಕೆ ನೀಡಲಾದ ಅಡಿಟಿಪ್ಪಣಿ (45). 2008ರ ಏಪ್ರಿಲ್‌ 7ರಂದು ಮರುಸಂಪಾದಿಸಲಾಯಿತು. ↑ 72-ಇಯರ್‌-ಓಲ್ಡ್‌ ಚಾರ್ಲ್ಸ್‌‌ ಮ್ಯಾನ್ಸನ್‌‌‌ ಡಿನೈಡ್‌ ಪೆರೋಲ್‌‌ . ರಾಯಿಟರ್ಸ್‌‌, ಮೇ 24, 2007. ಡೈಲಿ ಟೆಲಿಗ್ರಾಫ್‌ (ಆಸ್ಟ್ರೇಲಿಯಾ). 2007ರ ಸೆಪ್ಟೆಂಬರ್ 6ರಂದು ಮರುಸಂಪಾದಿಸಲಾಯಿತು. ↑ "Life Prisoner Parole Consideration Hearings May 7, 2007 - June 2, 2007" (PDF). Archived from the original (PDF) on December 2, 2007. . ಪೆರೋಲು ವಿಚಾರಣೆಗಳ ಮಂಡಳಿ, ಕ್ಯಾಲಿಫೋರ್ನಿಯಾದ ತಿದ್ದುಪಡಿಗಳು ಮತ್ತು ಪುನರ್ವಸತಿ ಇಲಾಖೆ. ಪುಟ 261. 2007ರ ಮೇ 2ರಂದು ಮರುಸಂಪಾದಿಸಲಾಯಿತು. ↑ ಸ್ಯಾಂಡರ್ಸ್‌‌ 2002, 336. ↑ ಲೈ: ದಿ ಲವ್‌ ಅಂಡ್‌ ಟೆರರ್‌ ಕಲ್ಟ್‌ . ASIN: B000005X1J. Amazon.com. ಸಂಪರ್ಕಿಸಿದ ದಿನಾಂಕ: ನವೆಂಬರ್ 23, 2007. ↑ ಸಿಂಡಿಕೇಟೆಡ್‌ ಕಲಮ್‌ ರಿ ಲೈ ರಿಲೀಸ್‌ ಮೈಕ್‌ ಜಾನ್‌‌, ಆಗಸ್ಟ್‌‌ 1970. ↑ ಸ್ಯಾಂಡರ್ಸ್‌‌ 2002, 64–65. ↑ ಡೆನ್ನಿಸ್‌ ವಿಲ್ಸನ್‌‌ ಸಂದರ್ಶನ ಸರ್ಕಸ್‌ ನಿಯತಕಾಲಿಕ, ಅಕ್ಟೋಬರ್‌‌ 26, 1976. 2007ರ ಡಿಸೆಂಬರ್ 1ರಂದು ಮರುಸಂಪಾದಿಸಲಾಯಿತು. ↑ ೧೦೫.೦ ೧೦೫.೧ ರೋಲಿಂಗ್‌ ಸ್ಟೋನ್‌‌ ಸ್ಟೋರಿ ಆನ್‌‌ ಮ್ಯಾನ್ಸನ್‌‌, ಜೂನ್‌‌ 1970 Archived 2010-11-22 at the Wayback Machine. CharlieManson.com. 2007ರ ಮೇ 2ರಂದು ಮರುಸಂಪಾದಿಸಲಾಯಿತು. ↑ ೧೦೬.೦ ೧೦೬.೧ ೧೦೬.೨ ಮ್ಯಾನ್ಸನ್‌‌ ಧ್ವನಿಮುದ್ರಣಗಳ ಪಟ್ಟಿ mansondirect.com. 2007ರ ನವೆಂಬರ್‌ 24ರಂದು ಮರುಸಂಪಾದಿಸಲಾಯಿತು. ↑ ದಿ ಫ್ಯಾಮಿಲಿ ಜ್ಯಾಮ್ಸ್‌‌ . ASIN: B0002UXM2Q. 2004. Amazon.com. ↑ ಚಾರ್ಲ್ಸ್‌‌ ಮ್ಯಾನ್ಸನ್‌‌‌ ಇಷ್ಯೂಸ್‌ ಆಲ್ಬಮ್‌ ಅಂಡರ್‌ ಕ್ರಿಯೇಟಿವ್‌ ಕಾಮನ್ಸ್‌ Archived 2008-12-27 at the Wayback Machine. pcmag.com. 2008ರ ಏಪ್ರಿಲ್‌ 14ರಂದು ಮರುಸಂಪಾದಿಸಲಾಯಿತು. ↑ ಯೆಸ್‌ ಇಟ್‌ ಈಸ್‌ CC! Archived 2008-12-27 at the Wayback Machine. ಫೋಟೋ ವೆರಿಫೈಯಿಂಗ್‌ ಕ್ರಿಯೇಟಿವ್‌ ಕಾಮನ್ಸ್‌ ಲೈಸೆನ್ಸ್‌ ಆಫ್‌ ಒನ್‌ ಮೈಂಡ್‌ . blog.limewire.com. 2008ರ ಏಪ್ರಿಲ್‌ 13ರಂದು ಮರುಸಂಪಾದಿಸಲಾಯಿತು. ↑ ರಿವ್ಯೂ ಆಫ್‌ ದಿ ಸ್ಪಾಘೆಟಿ ಇನ್ಸಿಡೆಂಟ್‌? allmusic.com. 2007ರ ನವೆಂಬರ್ 23ರಂದು ಮರುಸಂಪಾದಿಸಲಾಯಿತು. ↑ ಗನ್ಸ್‌ ಎನ್‌ ರೋಸಸ್‌ ಬಯಾಗ್ರಫಿ Archived 2010-04-04 at the Wayback Machine. rollingstone.com. 2007ರ ನವೆಂಬರ್ 23ರಂದು ಮರುಸಂಪಾದಿಸಲಾಯಿತು. ↑ "ಮ್ಯಾನ್ಸನ್‌‌ ರಿಲೇಟೆಡ್‌ ಮ್ಯೂಸಿಕ್‌." Archived 2013-08-24 at the Wayback Machine. CharlieManson.com. 2009ರ ಜೂನ್‌ 3ರಂದು ಮರುಸಂಪಾದಿಸಲಾಯಿತು. ↑ ಲಿರಿಕ್ಸ್‌ ಆಫ್‌ "ಮೆಕ್ಯಾನಿಕಲ್‌ ಮ್ಯಾನ್‌" Archived 2013-08-18 at the Wayback Machine. CharlieManson.com. 2008ರ ಜನವರಿ 22ರಂದು ಮರುಸಂಪಾದಿಸಲಾಯಿತು. ↑ http://en.wikipedia.org/wiki/The_Big_Problem_%E2%89%A0_The_Solution._The_Solution_%3D_Let_It_Be ↑ ಸೌಂಡ್‌ಟ್ರಾಕ್‌, ಹೆಲ್ಟರ್‌ ಸ್ಕೆಲ್ಟರ್‌‌ (1976) ಸೆಕ್ಷನ್‌ ಆಫ್‌ ಸ್ಟೀವ್‌‌ ರೈಲ್ಸ್‌ಬ್ಯಾಕ್‌‌ ಎಂಟ್ರಿ, imdb.com. 2008ರ ಮಾರ್ಚ್‌ 25ರಂದು ಮರುಸಂಪಾದಿಸಲಾಯಿತು. ↑ "ದಿ ಮ್ಯೂಸಿಕ್‌ ಮ್ಯಾನ್ಸನ್‌‌." snopes.com. 2008ರ ಅಕ್ಟೋಬರ್ 5ರಂದು ಮರುಸಂಪಾದಿಸಲಾಯಿತು. ↑ ರೋಲಿಂಗ್‌ ಸ್ಟೋನ್‌‌ ಮುಖಪುಟದ ಮೇಲಿನ ಮ್ಯಾನ್ಸನ್‌‌ Archived 2009-04-10 at the Wayback Machine. rollingstone.com. 2007ರ ಮೇ 2ರಂದು ಮರುಸಂಪಾದಿಸಲಾಯಿತು. ↑ ಡಾಲ್ಟನ್‌‌, ಡೇವಿಡ್‌. ಇಫ್‌ ಕ್ರಿಸ್ಟ್‌ ಕೇಮ್‌ ಬ್ಯಾಕ್‌ ಆಸ್‌ ಎ ಕಾನ್‌ ಮ್ಯಾನ್‌ . gadflyonline.com. 2007ರ ಸೆಪ್ಟೆಂಬರ್ 30ರಂದು ಮರುಸಂಪಾದಿಸಲಾಯಿತು. ↑ "ಬ್ಯಾಂಟ್‌ ಷರ್ಟ್ಸ್‌ ಮ್ಯಾನ್ಸನ್‌‌ T-ಷರ್ಟ್‌". Archived from the original on 2014-02-23. Retrieved 2010-09-23. ↑ "ಪ್ರಾಂಕ್‌ ಪ್ಲೇಸ್‌ ಮ್ಯಾನ್ಸನ್‌‌ T-ಷರ್ಟ್‌". Archived from the original on 2011-07-15. Retrieved 2010-09-23. ↑ "ನೋ ನೇಮ್‌ ಮೆಡಾಕ್ಸ್‌‌" ಗಾಂಜಾ ಬೀಜಗಳಲ್ಲಿನ ಮ್ಯಾನ್ಸನ್‌‌ ಭಾವಚಿತ್ರ. 2007ರ ನವೆಂಬರ್‌ 23ರಂದು ಮರುಸಂಪಾದಿಸಲಾಯಿತು. ↑ "ರೋಲಿಂಗ್‌ ಸ್ಟೋನ್‌‌ ಮುಖಪುಟದ ಮೇಲಿನ ಮ್ಯಾನ್ಸನ್‌‌ ಚಿತ್ರ". Archived from the original on 2013-08-17. Retrieved 2010-09-23. ↑ ಮ್ಯಾನ್ಸನ್‌‌-ರಿಲೇಟೆಡ್‌ ಮ್ಯೂಸಿಕ್‌ Archived 2013-08-24 at the Wayback Machine. CharlieManson.com. 2008ರ ಫೆಬ್ರವರಿ 8ರಂದು ಮರುಸಂಪಾದಿಸಲಾಯಿತು. ↑ ಲಿರಿಕ್ಸ್‌ ಆಫ್‌ "ಸ್ಯಾಡೀ," ಬೈ ಆಲ್ಕಲೈನ್‌ ಟ್ರಯೋ Archived 2009-08-31 at the Wayback Machine. sing365.com. 2007ರ ನವೆಂಬರ್‌ 23ರಂದು ಮರುಸಂಪಾದಿಸಲಾಯಿತು. ↑ ಆಲ್ಕಲೈನ್‌ ಟ್ರಯೋ ಆನ್‌ ಮೈಸ್ಪೇಸ್‌ "ಸ್ಯಾಡೀ" ಕೃತಿಯ ಸಂಪೂರ್ಣ-ಶ್ರವಣ ಭಾಗವನ್ನು ಒಳಗೊಳ್ಳುತ್ತದೆ. 2007ರ ಡಿಸೆಂಬರ್ 2ರಂದು ಮರುಸಂಪಾದಿಸಲಾಯಿತು. ↑ ಬಯಾಗ್ರಫಿ ಫಾರ್‌ ಮೆರಿಲಿನ್‌‌ ಮ್ಯಾನ್ಸನ್‌‌ imdb.com. 2007ರ ನವೆಂಬರ್‌ 23ರಂದು ಮರುಸಂಪಾದಿಸಲಾಯಿತು. ↑ "ವಿಲ್‌ ದಿ ಮ್ಯಾನ್ಸನ್‌‌ ಸ್ಟೋರಿ ಪ್ಲೇ ಆಸ್‌ ಮಿಥ್‌, ಒಪೇರಾಟಿಕಲಿ ಅಟ್‌ ದಟ್‌?" ನ್ಯೂಯಾರ್ಕ್‌ ಟೈಮ್ಸ್ ಜುಲೈ 17, 1990. 2007ರ ನವೆಂಬರ್‌ 23ರಂದು ಮರುಸಂಪಾದಿಸಲಾಯಿತು. ↑ ಸೋಂಧೀಮ್‌.com ಅಸಾಸಿನ್ಸ್‌‌ ↑ Helter Skelter (2004) @ ಐ ಎಮ್ ಡಿ ಬಿ ↑ Helter Skelter (1976) @ ಐ ಎಮ್ ಡಿ ಬಿ ↑ ಮೆರ್ರಿ ಕ್ರಿಸ್‌ಮಸ್‌ ಚಾರ್ಲೀ ಮ್ಯಾನ್ಸನ್‌‌ Archived 2008-08-27 at the Wayback Machine. southpark.comedyಕೇಂದ್ರೀಯ.comನಲ್ಲಿನ ವಿಡಿಯೋ ತುಣುಕುಗಳು ↑ ಬೀಸ್ಟ್‌ ನಂಬರ್‌‌ ವೊಲ್‌ಫ್ರಾಮ್‌ಮಾತ್‌ವರ್ಲ್ಡ್‌. 2007ರ ನವೆಂಬರ್‌ 29ರಂದು ಮರುಸಂಪಾದಿಸಲಾಯಿತು. ↑ Manson @ ಐ ಎಮ್ ಡಿ ಬಿ ↑ Charles Manson Superstar @ ಐ ಎಮ್ ಡಿ ಬಿ ಬಾಬ್‌ ಸ್ಲೋಸ್ಸರ್‌‌ ಜೊತೆಯಲ್ಲಿ ಅಟ್ಕಿನ್ಸ್‌, ಸುಸಾನ್‌. ‌ಚೈಲ್ಡ್‌ ಆಫ್‌ ಸತಾನ್‌, ಚೈಲ್ಡ್‌ ಆಫ್‌ ಗಾಡ್ . ಲೋಗೊಸ್‌ ಇಂಟರ್‌‌ನ್ಯಾಷನಲ್‌‌; ಪ್ಲೇನ್‌ಫೀಲ್ಡ್‌‌, ನ್ಯೂಜರ್ಸಿ; 1977. ISBN 0-88270-276-9. ಕರ್ಟ್‌ ಗೆಂಟ್ರಿ ಜೊತೆಯಲ್ಲಿ ಬಗ್ಲಿಯೋಸಿ, ವಿನ್ಸೆಂಟ್‌‌. ಹೆಲ್ಟರ್‌ ಸ್ಕೆಲ್ಟರ್‌‌: ದಿ ಟ್ರೂ ಸ್ಟೋರಿ ಆಫ್‌ ದಿ ಮ್ಯಾನ್ಸನ್‌‌ ಮರ್ಡರ್ಸ್‌‌ . (ನಾರ್ಟನ್‌‌‌, 1974; ಆರೋ ಬುಕ್ಸ್‌‌, 1992ರ ಆವೃತ್ತಿ, ISBN 0-09-997500-9; W. W. ನಾರ್ಟನ್‌‌‌ & ಕಂಪನಿ, 2001, ISBN 0-393-32223-8) ಎಮ್ಮಾನ್ಸ್‌‌, ನ್ಯೂಯೆಲ್‌‌, ತಿಳಿಸಿದಂತೆ. ಮ್ಯಾನ್ಸನ್‌‌ ಇನ್‌ ಹಿಸ್‌ ಓನ್‌ ವರ್ಡ್ಸ್‌ . ಗ್ರೋವ್‌ ಪ್ರೆಸ್‌‌, 1988. ISBN 0-8021-3024-0. ‌‌ಸ್ಯಾಂಡರ್ಸ್, ಸಂಪಾದಿತ ದಿ ಫ್ಯಾಮಿಲಿ . ಥಂಡರ್‌'ಸ್‌ ಮೌತ್‌ ಪ್ರೆಸ್‌‌. ಪರಿಷ್ಕೃತ ಆವೃತ್ತಿ 2002. ISBN 1-56025-396-7. ‌‌ಗಿಲ್ಲೆರ್ಮೊ ಸೋಲ್‌ಡ್ಯಾಡ್‌ ಜೊತೆಯಲ್ಲಿ ವ್ಯಾಟ್ಕಿನ್ಸ್, ಪಾಲ್‌‌. ‌‌‌ಮೈ ಲೈಫ್‌ ವಿತ್‌ ಚಾರ್ಲ್ಸ್‌‌ ಮ್ಯಾನ್ಸನ್ . ಬಂಟಾಮ್‌‌, 1979. ISBN 0-553-12788-8. ವ್ಯಾಟ್ಸನ್‌‌, ಚಾರ್ಲ್ಸ್‌‌. ವಿಲ್‌ ಯು ಡೈ ಫಾರ್‌ ಮಿ? . F. H. ರೆವೆಲ್‌‌, 1978. ISBN 0-8007-0912-8. ಜಾರ್ಜ್‌, ಎಡ್ವರ್ಡ್‌ ಮತ್ತು ಡೇರಿ ಮಟೇರಾ. ‌‌ಟೇಮಿಂಗ್‌ ದಿ ಬೀಸ್ಟ್‌: ಚಾರ್ಲ್ಸ್‌‌ ಮ್ಯಾನ್ಸನ್‌‌‌'ಸ್‌ ಲೈಫ್‌ ಬಿಹೈಂಡ್‌ ಬಾರ್ಸ್ . ಸೇಂಟ್‌ ಮಾರ್ಟಿನ್‌'ಸ್‌ ಪ್ರೆಸ್‌, 1999. ISBN 0-312-20970-3. ‌‌ಗಿಲ್‌ಮೋರ್, ಜಾನ್‌‌. ಮ್ಯಾನ್ಸನ್‌‌: ದಿ ಅನ್‌ಹೋಲಿ ಟ್ರೈಲ್‌ ಆಫ್‌ ಚಾರ್ಲೀ ಅಂಡ್‌ ದಿ ಫ್ಯಾಮಿಲಿ . ಅಮೋಕ್‌ ಬುಕ್ಸ್‌‌, 2000. ISBN 1-878923-13-7. ಗಿಲ್‌ಮೋರ್‌‌, ಜಾನ್‌‌. ‌‌ದಿ ಗಾರ್ಬೇಜ್‌ ಪೀಪಲ್ . ಒಮೆಗಾ ಪ್ರೆಸ್‌‌, 1971. ಲೆಬ್ಲಾಂಕ್‌, ಜೆರ್ರಿ ಮತ್ತು ಐವರ್‌ ಡೇವಿಸ್‌‌. 5 ಟು ಡೈ . ಹಾಲೊವೇ ಹೌಸ್‌ ಪಬ್ಲಿಷಿಂಗ್‌, 1971. ISBN 0-87067-306-8. ಪೆಲ್ಲೋವ್ಸ್ಕಿ, ಮೈಕೇಲ್‌ J. ದಿ ಚಾರ್ಲ್ಸ್‌‌ ಮ್ಯಾನ್ಸನ್‌‌‌ ಕೊಲೆ ಟ್ರಯಲ್‌: ಎ ಹೆಡ್‌ಲೈನ್‌ ಕೋರ್ಟ್‌ ಕೇಸ್‌ . ಎನ್‌‌ಸ್ಲೋ ಪಬ್ಲಿಷರ್ಸ್‌‌, 2004. ISBN 0-7660-2167-X. ರೌಲೆಟ್‌‌, ಕರ್ಟ್‌. ಲೇಬಿರಿಂತ್‌‌13: ಟ್ರೂ ಟೇಲ್ಸ್‌ ಆಫ್‌ ದಿ ಅಕಲ್ಟ್‌, ಕ್ರೈಮ್‌ & ಕಾನ್ಸ್ಪಿರಸಿ , ಅಧ್ಯಾಯ 10, ಚಾರ್ಲ್ಸ್‌‌ ಮ್ಯಾನ್ಸನ್‌‌‌, ಸನ್‌ ಆಫ್‌ ಸ್ಯಾಮ್‌ ಅಂಡ್‌ ದಿ ಪ್ರೋಸೆಸ್‌ ಚರ್ಚ್‌ ಆಫ್‌ ದಿ ಫೈನಲ್‌ ಜಡ್ಜ್‌ಮೆಂಟ್‌: ಎಕ್ಸ್‌ಪ್ಲೋರಿಂಗ್‌ ದಿ ಅಲೆಜ್ಡ್‌ ಕನೆಕ್ಷನ್ಸ್‌ . ಲುಲು ಪ್ರೆಸ್‌‌, 2006. ISBN 1-4116-6083-8. ‌‌ಶ್ರೆಕ್, ನಿಕೋಲಸ್‌‌. ‌ದಿ ಮ್ಯಾನ್ಸನ್‌‌ ಫೈಲ್ ಅಮೋಕ್‌ ಪ್ರೆಸ್‌. 1988. ISBN 0-941693-04-X. ಉಡೊ, ಟಾಮಿ. ‌‌ಚಾರ್ಲ್ಸ್‌‌ ಮ್ಯಾನ್ಸನ್‌‌‌: ಮ್ಯೂಸಿಕ್‌, ಮೇಹೆಮ್‌, ಮರ್ಡರ್ . ಸ್ಯಾಂಕ್ಚುಯರಿ ರೆಕಾರ್ಡ್ಸ್‌, 2002. ISBN 1-86074-388-9. Find more about ಚಾರ್ಲ್ಸ್‌‌ ಮ್ಯಾನ್ಸನ್‌‌‌ at Wikipedia's sister projects ಬಾರ್ಡ್‌ಸ್ಲೆ, ಮೆರಿಲಿನ್‌‌. ಕ್ರೈಮ್‌ ಲೈಬ್ರರಿ - ಚಾರ್ಲ್ಸ್‌‌ ಮ್ಯಾನ್ಸನ್‌‌‌. ಕ್ರೈಮ್‌ ಲೈಬ್ರರಿ. ಕೋರ್ಟ್‌ರೂಮ್‌ ಟೆಲಿವಿಷನ್‌ ನೆಟ್‌ವರ್ಕ್‌, LLC. ಏಪ್ರಿಲ್‌‌ 7, 2006. ಡಾಲ್ಟನ್‌‌, ಡೇವಿಡ್‌. ‌ಇಫ್‌ ಕ್ರಿಸ್ಟ್‌ ಕೇಮ್‌ ಬ್ಯಾಕ್‌ ಆಸ್‌ ಎ ಕಾನ್‌ ಮ್ಯಾನ್ . ಮ್ಯಾನ್ಸನ್‌‌ ಕುರಿತಾಗಿ 1970ರ ರೋಲಿಂಗ್‌ ಸ್ಟೋನ್‌‌ ನಲ್ಲಿ ಕಥೆ ಬರೆದಿದ್ದ ಸಹ-ಲೇಖಕ ಬರೆದ 1998ರ ಲೇಖಕ‌. gadflyonline.com. 2007ರ ಸೆಪ್ಟೆಂಬರ್ 30ರಂದು ಮರುಸಂಪಾದಿಸಲಾಯಿತು. ಲಿಂಡರ್‌, ಡೌಗ್ಲಾಸ್‌. ‌ಫೇಮಸ್‌ ಟ್ರಯಲ್ಸ್‌ - ದಿ ಟ್ರಯಲ್‌ ಆಫ್ ಚಾರ್ಲ್ಸ್‌‌ ಮ್ಯಾನ್ಸನ್‌‌‌ Archived 2007-05-20 at the Wayback Machine.. ಕಾನ್ಸಾಸ್‌ನಲ್ಲಿನ ಮಿಸ್ಸೌರಿ ವಿಶ್ವವಿದ್ಯಾಲಯ ಸಿಟಿ ಲಾ ಸ್ಕೂಲ್‌. 2002. ಏಪ್ರಿಲ್‌ 7, 2007 ನೊಯೆ, ಡೆನಿಸ್‌. "ದಿ ಮ್ಯಾನ್ಸನ್‌‌ ಮಿಥ್‌" Archived 2008-09-07 at the Wayback Machine.. CrimeMagazine.com ಡಿಸೆಂಬರ್‌‌ 12, 2004. ಪ್ರಾಸಿಕ್ಯೂಷನ್‌'ಸ್‌ ಕ್ಲೋಸಿಂಗ್‌ ಆರ್ಗ್ಯುಮೆಂಟ್‌ ಇನ್‌ ಟ್ರಯಲ್‌ ಆಫ್‌ ಚಾರ್ಲ್ಸ್‌‌ ಮ್ಯಾನ್ಸನ್‌‌‌ 2ಹಿಂಸಾತ್ಮಕ.com. 2007ರ ಏಪ್ರಿಲ್ 16ರಂದು ಮರುಸಂಪಾದಿಸಲಾಯಿತು. ಆರ್ಟ್‌ ಬೈ ಚಾರ್ಲ್ಸ್‌‌ ಮ್ಯಾನ್ಸನ್‌‌‌ ಡಿಸಿಷನ್‌ ಇನ್‌ ಅಪೀಲ್‌ ಬೈ ಮ್ಯಾನ್ಸನ್‌‌, ಅಟ್ಕಿನ್ಸ್‌, ಕ್ರೆನ್‌ವಿಂಕೆಲ್‌‌, ಅಂಡ್‌ ವ್ಯಾನ್‌ ಹೌಟನ್‌ ಫ್ರಂ ಟೇಟ್‌-ಲೇಬಿಯಾಂಕಾ ಕನ್ವಿಕ್ಷನ್ಸ್‌ಪೀಪಲ್‌ v. ಮ್ಯಾನ್ಸನ್‌‌ , 61 ಕ್ಯಾಲಿಫೋರ್ನಿಯಾ ಮೇಲ್ಮನವಿ ನ್ಯಾಯಾಲಯ 3ನೇ 102 (ಕ್ಯಾಲಿಫೋರ್ನಿಯಾದ ಮೇಲ್ಮನವಿ ನ್ಯಾಯಾಲಯ, ಸೆಕೆಂಡ್‌ ಡಿಸ್ಟ್ರಿಕ್ಟ್‌, ಡಿಸ್ಟ್ರಿಕ್ಟ್‌ ಒನ್‌, ಆಗಸ್ಟ್‌‌ 13, 1976). 2007ರ ಜೂನ್ 19ರಂದು ಮರುಸಂಪಾದಿಸಲಾಯಿತು. ಡಿಸಿಷನ್‌ ಇನ್‌ ಅಪೀಲ್‌ ಬೈ ಮ್ಯಾನ್ಸನ್‌‌ ಫ್ರಮ್‌ ಹಿನ್ಮನ್‌‌-ಶಿಯಾ ಕನ್ವಿಕ್ಷನ್‌‌ ಪೀಪಲ್‌‌ v. ಮ್ಯಾನ್ಸನ್‌‌ , 71 ಕ್ಯಾಲಿಫೋರ್ನಿಯಾ ಮೇಲ್ಮನವಿ ನ್ಯಾಯಾಲಯ 3ನೇ 1 (ಕ್ಯಾಲಿಫೋರ್ನಿಯಾದ ಮೇಲ್ಮನವಿ ನ್ಯಾಯಾಲಯ, ಸೆಕೆಂಡ್‌ ಡಿಸ್ಟ್ರಿಕ್ಟ್‌, ಡಿಸ್ಟ್ರಿಕ್ಟ್‌ ಒನ್‌, ಜೂನ್‌‌ 23, 1977). 2007ರ ಜೂನ್ 19ರಂದು ಮರುಸಂಪಾದಿಸಲಾಯಿತು. ಹಾರಿಫಿಕ್‌ ಪಾಸ್ಟ್‌ ಹಾಂಟ್ಸ್‌ ಫಾರ್ಮರ್‌ ಕಲ್ಟ್‌ ಮೆಂಬರ್ಸ್‌ ಸ್ಯಾನ್‌ ಫ್ರಾನ್ಸಿಸ್ಕೊ ಕ್ರಾನಿಕಲ್‌‌ ಆಗಸ್ಟ್‌‌ 12, 2009 "https://kn.wikipedia.org/w/index.php?title=ಚಾರ್ಲ್ಸ್‌‌_ಮ್ಯಾನ್ಸನ್‌‌‌&oldid=1063716" ಇಂದ ಪಡೆಯಲ್ಪಟ್ಟಿದೆ
2022/05/20 11:39:36
https://kn.m.wikipedia.org/wiki/%E0%B2%9A%E0%B2%BE%E0%B2%B0%E0%B3%8D%E0%B2%B2%E0%B3%8D%E0%B2%B8%E0%B3%8D%E2%80%8C%E2%80%8C_%E0%B2%AE%E0%B3%8D%E0%B2%AF%E0%B2%BE%E0%B2%A8%E0%B3%8D%E0%B2%B8%E0%B2%A8%E0%B3%8D%E2%80%8C%E2%80%8C%E2%80%8C
mC4
ರಾಹುಲ್‌ ಮಾನಸ ಸರೋವರ ಯಾತ್ರೆ : ಹೆಜ್ಜೆ ಲೆಕ್ಕವಿಟ್ಟ ಕಾಂಗ್ರೆಸ್ First Published 8, Sep 2018, 12:40 PM IST ರಾಹುಲ್‌ ಗಾಂಧಿ ಅವರು ಮಾನಸ ಸರೋವರ ಯಾತ್ರೆ ವೇಳೆ 13 ತಾಸಿನಲ್ಲಿ ಕಾಲ್ನಡಿಗೆಯ ಮೂಲಕ ಮಾನಸ ಸರೋವರದ 18562 ಅಡಿ ಎತ್ತರದ ಪರ್ವತ ಶ್ರೇಣಿಯೊಂದನ್ನು ಹತ್ತಿದ್ದಾಗಿ ಅವರಿಗೆ ಹತ್ತಿರದ ಮೂಲಗಳು ಹೇಳಿವೆ. ಇದೀಗ ಈ ಸಂಬಂಧ ವಿಡಿಯೋ ವೈರಲ್ ಆಗಿದೆ. ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕೈಲಾಸ ಮಾನಸ ಸರೋವರ ಯಾತ್ರೆಯ ಫೋಟೋ ಹಾಗೂ ವಿಡಿಯೋಗಳು ಶುಕ್ರವಾರ ಬಿಡುಗಡೆಯಾಗಿದೆ. ರಾಹುಲ್‌ ಅವರು 13 ತಾಸಿನಲ್ಲಿ ಕಾಲ್ನಡಿಗೆಯ ಮೂಲಕ ಮಾನಸ ಸರೋವರದ 18562 ಅಡಿ ಎತ್ತರದ ಪರ್ವತ ಶ್ರೇಣಿಯೊಂದನ್ನು ಹತ್ತಿದ್ದಾಗಿ ಅವರಿಗೆ ಹತ್ತಿರದ ಮೂಲಗಳು ಹೇಳಿವೆ. ಇದೇ ವೇಳೆ, 'ಶಿವನೇ ಪ್ರಪಂಚ' ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ. ಸುಮಾರು 34 ಕಿ.ಮೀ. ಅಂತರವುಳ್ಳ ಈ ದೂರವನ್ನು ರಾಹುಲ್‌ ಅವರು ಇತರ ಯಾತ್ರಿಗಳಂತೆ ಕುದುರೆ ಮೇಲೆ ಕ್ರಮಿಸದೇ ಕಾಲ್ನಡಿಗೆಯಲ್ಲೇ ಕ್ರಮಿಸಿದರು. ಈ ಗುಡ್ಡವು ಸಮುದ್ರ ಮಟ್ಟದಿಂದ 18562 ಅಡಿ ಎತ್ತರವಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ. ಬೆಳಗ್ಗೆ 7ಕ್ಕೆ ಚಾರಣ ಆರಂಭಿಸಿದ ರಾಹುಲ್‌ ಕ್ಯಾಂಪ್‌ ತಲುಪಿದಾಗ ರಾತ್ರಿ 8 ಗಂಟೆಯಾಗಿತ್ತು. ಇದೇ ವೇಳೆ, ರಾಹುಲ್‌ ಅವರು ಇತರ ಯಾತ್ರಿಗಳೊಂದಿಗೆ ತೆಗೆಸಿಕೊಂಡ ಫೋಟೋಗಳು ಹಾಗೂ ವಿಡಿಯೋ ವೈರಲ್‌ ಆಗಿವೆ. ಹಲವು ಚಿತ್ರಗಳಲ್ಲಿ ರಾಹುಲ್‌ ಊರುಗೋಲು ಹಿಡಿದಿದ್ದು ಕಂಡುಬರುತ್ತದೆ. ಭಾರಿ ಚಳಿ ಇರುವ ಕಾರಣ ರಾಹುಲ್‌ ಸ್ವೆಟರ್‌, ಜೀನ್ಸ್‌, ಬೂಟು, ಜಾಕೆಟ್‌, ಗಾಗಲ್‌ ಧರಿಸಿದ್ದಾರೆ. ರಾಹುಲ್‌ ಅವರ ಯಾತ್ರೆ 15 ದಿನಗಳಾಗಿದ್ದು, ಈಗ 5 ದಿನದ ಯಾತ್ರೆ ಪೂರೈಸಿದ್ದಾರೆ. ವಿಶೇಷವೆಂದರೆ ರಾಹುಲ್‌ ಇರುವ ಯಾವುದೇ ಫೋಟೋಗಳನ್ನು ಸ್ವತಃ ಅವರೇ ಪ್ರಕಟಿಸಿಲ್ಲ. ಬದಲಾಗಿ ಅವರೊಂದಿಗೆ ಫೋಟೋ ತೆಗೆಸಿಕೊಂಡ ಜನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ನಕಲಿ ಫೋಟೋ: ಬಿಜೆಪಿ ಶಂಕೆ ಈ ನಡುವೆ, ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಟ್ವೀಟ್‌ ಮಾಡಿ, 'ರಾಹುಲ್‌ ಅವರ ಒಂದು ಛಾಯಾಚಿತ್ರದಲ್ಲಿ ಅವರು ಹಿಡಿದುಕೊಂಡ ಊರುಗೋಲಿನ ನೆರಳು ಗೋಚರಿಸಲ್ಲ. ಅವರು ಮಾನಸ ಸರೋವರಕ್ಕೆ ಹೋಗಿದ್ದು ಫೋಟೋಶಾಪ್‌ ಕರಾಮತ್ತು' ಎಂದು ರಾಹುಲ್‌ ಯಾತ್ರೆಯ ಅಸಲಿತನವನ್ನೇ ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್‌ ಪಕ್ಷ ತಿರುಗೇಟು ನೀಡಿದ್ದು, ಯಾತ್ರೆಯಲ್ಲಿ ರಾಹುಲ್‌ ಕ್ರಮಿಸಿದ ದೂರ, ಕ್ರಮಿಸಲು ತೆಗೆದುಕೊಂಡ ಸಮಯದ ಬಗ್ಗೆ ಟ್ವೀಟ್‌ ಮಾಡಿದೆ.
2019/02/24 05:25:34
https://kannada.asianetnews.com/news/rahul-gandhi-mansarovar-yatra-video-viral-peq6lu
mC4
ಮಾ.ಕೃ. ಮಂಜು ಕನ್ನಡ ಪ್ರಪಂಚ: March 2013 ವ್ಯಂಜನ: ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗೆ ಭಿನ್ನ.ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗೆ ಭಿನ್ನ. ನಾಮಪದ: ಭಾಷಾಶಾಸ್ತ್ರದಲ್ಲಿ, ಒಂದು ನಾಮಪದ ವು ಒಂದು ದೊಡ್ಡ, ಮುಕ್ತ ನಿಘಂಟಿನ ವರ್ಗದ ಒಂದು ಸದಸ್ಯನಾಗಿದ್ದು, ಸದರಿ ನಿಘಂಟಿನ ವರ್ಗದ ಸದಸ್ಯರು ವಾಕ್ಯಾಂಶವೊಂದರ ಕರ್ತೃಪದ, ಕ್ರಿಯಾಪದವೊಂದರ ಕರ್ಮ, ಅಥವಾ ಉಪಸರ್ಗವೊಂದರ ಕರ್ಮದಲ್ಲಿನ ಮುಖ್ಯ ಪದವಾಗಿ ಸಂಭವಿಸಲು ಸಾಧ್ಯವಿದೆ.ನಿಘಂಟಿನ ವರ್ಗಗಳ ಸದಸ್ಯರು, ಅಭಿವ್ಯಕ್ತಿಗಳ ಇತರ ಬಗೆಗಳೊಂದಿಗೆ ಹೇಗೆ ಬೆರೆಯುತ್ತವೆ ಎಂಬುದರ ಪರಿಭಾಷೆಯಲ್ಲಿ ನಿಘಂಟಿನ ವರ್ಗಗಳು ವ್ಯಾಖ್ಯಾನಿಸಲ್ಪಡುತ್ತವೆ. ನಾಮಪದಗಳಿಗೆ ಸಂಬಂಧಿಸಿದ ವಾಕ್ಯರಚನೆಯ ನಿಯಮಗಳು ಭಾಷೆಯಿಂದ ಭಾಷೆಗೆ ಬದಲಾಗುತ್ತವೆ. ಇಂಗ್ಲಿಷ್‌ ಭಾಷೆಯಲ್ಲಿ, ನಾಮಪದಗಳನ್ನು ವ್ಯಾಖ್ಯಾನಿಸುವಾಗ, ಗುಣವಾಚಿಗಳು ಹಾಗೂ ಗುಣವನ್ನು ಸೂಚಿಸುವ ಗುಣವಾಚಕಗಳೊಂದಿಗೆ ಸಂಭವಿಸಬಲ್ಲ ಮತ್ತು ನಾಮಪದದ ವಾಕ್ಯಾಂಗವೊಂದರ ಪ್ರಧಾನಭಾಗವಾಗಿ ಕಾರ್ಯನಿರ್ವಹಿಸಬಲ್ಲ ಪದಗಳಾಗಿ ನಾಮಪದಗಳು ವಿವರಿಸಲ್ಪಡುತ್ತವೆ. ಸರ್ವನಾಮ: ನಾಮಪದಕ್ಕೆ ಬದಲಾಗಿ ಬಳಿಸುವ ಪದಗಳು ಇದರಲಿ 4 ವಿಧ 1. ಪುರುಷಾರ್ಥಕ, 2ಆತ್ಮಾರ್ಥಕ 3ಪ್ರಶ್ನಾರ್ಥಕ 4. ನೆರ್ದೇಶನಾತ್ಮಕ/ ದರ್ಶಕಪುರುಷಾರ್ಥಕ: ಪುರುಷಗಲ ಹಿನ್ನೆಲೆಯಲ್ಲಿ ವರ್ಗೀಕರಣಕೊಂಡ ಸರ್ವನಾಮ ಪುರುಷ ಏಕವಚನ ಬಹುವಚನ, ಉತ್ತಮ ನಾನು ನಾವು, ಮದ್ಯಮ ನೀನು ನೀವು, ಪ್ರಥಮ ಪುಲಿಂಗ ಅವನು ಅವರು, ಸ್ತ್ರೀಲಿಂಗ ಅವಳು ಅವರು, ನ. ಲಿಂಗ ಅದು ಅವು. ಸಂಧಿ: ಸಂಧಿ/ಕೂಡಿಕೆ ಸಂಧಿಯೆಂದರೆ ಸಂಸ್ಕೃತದಲ್ಲಿ ಕೂಡಿಕೆ/ಕಲೆತ ಎಂದು ಅರ್ಥ. ವ್ಯಾಕರಣದಲ್ಲಿ ಎರಡು ಒರೆ(ಪದ)ಗಳನ್ನು ಕೂಡಿಸಿ/ಸೇರಿಸಿ/ಕಲೆಸಿ ಒಂದು ಒರೆ(ಪದ)ವನ್ನಾಗಿ ಮಾಡಿದರೆ ಅದು ಸಂಧಿ/ಕೂಡಿಕೆ ಯಾಗುವುದು. ಕನ್ನಡದಲ್ಲಿ ಅದನ್ನು "ಒರೆಗೂಡಿಕೆ" ಎಂದು ಕರೆಯಬಹುದು.ಒರೆಗೂಡಿಕೆಯಾಗುವಾಗ ಒಂದು ಸದ್ದಗೆ(ಅಕ್ಕರ) ಬಿಟ್ಟು ಹೋಗಬಹುದು, ಇಲ್ಲವೆ ಸೇರಬಹುದು, ಇಲ್ಲವೆ ಆ ಸದ್ದಗೆಯ ಜಾಗದಲ್ಲಿ ಬೇರೆ ಸದ್ದಗೆ ಬರಬಹುದು. ಉದಾ: 'ಕೆಂಪಾದ ತಾವರೆ' ಎಂಬಲ್ಲಿ, ಕೆಂಪು - ತಾವರೆ ಪದಗಳು ಕೂಡಿ, 'ಕೆಂದಾವರೆ' ಎಂಬ ಸಮಸ್ತ ಪದವಾಗುತ್ತದೆ.ವಿಗ್ರಹವಾಕ್ಯ: ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು 'ವಿಗ್ರಹ' ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ ಪದ ಸಮುಚ್ಚಯಕ್ಕೆ, 'ವಿಗ್ರಹವಾಕ್ಯ' ಎನ್ನಲಾಗುತ್ತದೆ. ಈ 7 ಸ್ತ್ರೀಯರನ್ನು ಪುರುಷ ಯಾವತ್ತೂ ಮರೆಯಲ್ಲ! (ಮರೆಯಬಾರದು ) ಹೆಣ್ಣಿನ ಬಗ್ಗೆ ವಿವರಿಸುವುದು ತುಂಬಾ ಕಷ್ಟದ ವಿಷಯ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಅನ್ನುತ್ತಾರೆ. ಒಬ್ಬ ವ್ಯಕ್ತಿಯ ನಾಶಕ್ಕೂ ಹೆಣ್ಣೆ ಕಾರಣಕರ್ತಳಾಗಿರುತ್ತಾಳೆ. ಒಮ್ಮೆ ಅಬಲೆ ಅನಿಸಿದರೂ, ಮತ್ತೊಮ್ಮೆ ವಿಶ್ವವನ್ನು ನಿಯಂತ್ರಿಸುವ ಶಕ್ತಿ ಹೆಣ್ಣಗಿದೆ ಎಂದು ಅನಿಸುತ್ತದೆಯಲ್ಲವೇ? ಒಬ್ಬ ಪುರುಷನಿಗೆ ತನ್ನ ಬಾಳಿನಲ್ಲಿ ಉತ್ತಮ ಸ್ತ್ರೀಯರು ದೊರಕಿದರೆ ಅವನೇ ಅದೃಷ್ಟ ಶಾಲಿ. ಆ ಸ್ತ್ರೀಯರಲ್ಲಿ ಅವನ ತಾಯಿ ಹಾಗೂ ಕೈ ಹಿಡಿದವಳು ಪುರುಷನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮಗನನ್ನು ಉತ್ತಮ ಹಾದಿಯಲ್ಲಿ ಬೆಳೆಸುವಲ್ಲಿ ತಾಯಿಯ ಮಾತ್ರ ಮಹತ್ವವಾದರೆ, ಅವನನ್ನು ಉತ್ತಮನಾಗಿಯೇ ಉಳಿಸಿಕೊಳ್ಳುವಲ್ಲಿ ಹೆಂಡತಿಯ ಪಾತ್ರ ಪ್ರಮುಖವಾಗಿರುತ್ತದೆ. ಮಾರ್ಚ್ 8. ಅಂತರಾಷ್ಟ್ರೀಯ ಮಹಿಳೆಯರ ದಿನ. ಮಹಿಳೆಯರ ದಿನದ ವಿಶೇಷವಾಗಿ ಪ್ರತೀಯೊಬ್ಬ ಪುರುಷನ ಜೀವನದಲ್ಲಿ ಬರುವ 7 ಪ್ರಮುಖ ಸ್ತ್ರೀಯರ ಬ್ಗಗೆ ಹೇಳಲಾಗಿದೆ 1) ಅಮ್ಮ:-ಅಮ್ಮನ ಪಾತ್ರವನ್ನು ಬೇರೆ ಯಾರಿಗೂ ತುಂಬಲು ಸಾಧ್ಯವಿಲ್ಲ. ನಾವು ಬೆಳೆದ ಒಂದೊಂದು ಹಂತದಲ್ಲಿ ಅಮ್ಮನ ಶ್ರಮವಿರುತ್ತದೆ, ತ್ಯಾಗವಿರುತ್ತದೆ. ಅದರಲ್ಲೂ ಸಾಮಾನ್ಯವಾಗಿ ಗಂಡು ಮಕ್ಕಳು ಅಪ್ಪನಿಗಿಂತ ಹೆಚ್ಚಾಗಿ ಅಮ್ಮನನ್ನು ಹಚ್ಚಿಕೊಂಡಿರುತ್ತಾರೆ. 2) ಅಕ್ಕ-ತಂಗಿ :-ಅಕ್ಕ-ತಂಗಿ ಇವರ ಜೊತೆ ಕಳೆದ ಯಾವುದೇ ನೆನಪನ್ನು ಮರೆಯಲು ಸಾಧ್ಯವಿಲ್ಲ. ಸ್ವಂತ ಅಕ್ಕ-ತಂಗಿ ಇಲ್ಲದಿದ್ದರೂ ಚಿಕ್ಕಪ್ಪನ-ದೊಡ್ಡಪ್ಪನ ಮಕ್ಕಳನ್ನು ಅಕ್ಕ -ತಂಗಿ ಎಂದು ಕರೆಯುತ್ತಾ ಅವರ ಜೊತೆ ಆಟ ಆಡಿ ಕಳೆದ ಕ್ಷಣಗಳು ನೆನಪಿನಲ್ಲಿ ಇದ್ದೇ ಇರುತ್ತದೆ. 3) ಅಜ್ಜಿ :-ಪ್ರೀತಿಯ ಅಜ್ಜಿಯನ್ನು ಮರೆಯಲು ಯಾರಿಗೆ ತಾನೇ ಸಾಧ್ಯ? ತನ್ನ ಬಾಲ್ಯದ ಬಗ್ಗೆ ನೆನೆಸುವಾಗ ಪ್ರತಿಯೊಬ್ಬರಿಗೂ ಅಜ್ಜಿ ನೆನೆಪಿಗೆ ಬಂದೇ ಬರುತ್ತಾಳೆ. 4) ಟೀಚರ್ :-ಯಾವುದೇ ಪುರುಷನನ್ನು ಕೇಳಿ ನೋಡಿ, ಅವರ ನೆನೆಪಿನಲ್ಲಿ ಒಂದಾದರೂ ಅವರ ಪ್ರೀತಿಯ ಟೀಚರ್ ನ ನೆನಪು ಇದ್ದೇ ಇರುತ್ತದೆ. 5) ಮೊದಲ ಪ್ರೇಮ :-ಪುರುಷ ತಾನು ಮೊದಲು ಇಷ್ಟಪಟ್ಟ ಹುಡುಗಿಯನ್ನು ತಮ್ಮ ಜೀವನದ ಕೊನೆಯವರೆಗೂ ನೆನೆಪಿನಲ್ಲಿಟ್ಟು ಕೊಳ್ಳುತ್ತಾರೆ. ಒಂದು ವೇಳೆ ತಾನು ಪ್ರೀತಿಸಿದ ಹುಡುಗಿ ಬಾಳಿನಲ್ಲಿ ದೊರಕದೇ ಹೋದರೆ ಅಥವಾ ಅವಳು ಮೋಸ ಮಾಡಿ ಹೋದರೂ ಕೂಡ ಅವಳನ್ನು ಅವನು ಯಾವತ್ತಿಗೂ ಮರೆಯುವುದಿಲ್ಲ. 6) ಹೆಂಡತಿ :-ಬೆಚ್ಚನೆಯಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಒಳ್ಳೆಯ ಹೆಂಡತಿ ಸಿಕ್ಕಿದರೆ ಜೀವನದಲ್ಲಿ ಎಂತಹ ಕಷ್ಟವನ್ನು ಎದುರಿಸುವ ಸಾಮರ್ಥ್ಯ ಪುರುಷನಿಗೆ ಬರುತ್ತದೆ. 7) ಮಗಳು :-ಪ್ರತಿಯೊಬ್ಬ ಉತ್ತಮ ತಂದೆಯೂ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಾನೆ. ಎಂತಹ ತ್ಯಾಗಕ್ಕೂ ಸಿದ್ಧನಿರುತ್ತಾನೆ. ಅಪ್ಪ-ಅಮ್ಮನ ಮರ್ಯಾದೆಗೆ ಕುಂದು ಬರದಂತೆ ನನ್ನ ಮಗಳು ನಡೆದುಕೊಳ್ಳಬೇಕೆನ್ನುವುದೇ ಪ್ರತಿಯೊಬ್ಬ ಹೆತ್ತವರ ಆಶಯ.
2018/03/21 16:35:45
http://makrumanju.blogspot.in/2013/03/
mC4
ಟ್ಯಾಗ್: ವೆಬ್‌ಟ್ರೆಂಡ್‌ಗಳು | Martech Zone ನಾವು ಇತ್ತೀಚೆಗೆ 25 ರ ಸಾಮಾಜಿಕ ಮಾಧ್ಯಮ ಕಾರ್ಯತಂತ್ರಗಳ ಶೃಂಗಸಭೆಯಿಂದ 2013 ಅದ್ಭುತ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಪರಿಕರಗಳನ್ನು ಹಂಚಿಕೊಂಡಿದ್ದೇವೆ. ಇದು ಸಮಗ್ರ ಪಟ್ಟಿಯಲ್ಲ, ನಿಮ್ಮ ಬ್ರ್ಯಾಂಡ್‌ನ ವಿಷಯ ಮಾರ್ಕೆಟಿಂಗ್ ಕಾರ್ಯತಂತ್ರವನ್ನು ಹೆಚ್ಚಿಸಲು ನೀವು ಬಳಸಬಹುದಾದ ಕೆಲವು ಸಾಧನಗಳು, ಐದು ವಿಭಾಗಗಳ ವಿಷಯ ಮಾರ್ಕೆಟಿಂಗ್‌ನ ಐದು ಪರಿಕರಗಳ ಎದ್ದುಕಾಣುವ ಉದಾಹರಣೆಗಳನ್ನು ಒಳಗೊಂಡಂತೆ: ಅವಧಿ - ಈ ಉಪಕರಣಗಳು ಕಂಡುಹಿಡಿಯುವ ಮತ್ತು ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ವೆಬ್ ವಿಷಯದ ಶ್ರೇಣಿ, ನಂತರ ಅದನ್ನು a ನಲ್ಲಿ ಪ್ರದರ್ಶಿಸುತ್ತದೆ ಎಂಟರ್‌ಪ್ರೈಸ್ ಮಾರ್ಕೆಟಿಂಗ್ ವೃತ್ತಿಪರರು ಆನ್‌ಲೈನ್‌ನಲ್ಲಿ ನಿರಂತರವಾಗಿ ಹೋರಾಡುತ್ತಿರುವ ಎರಡು ಸಮಸ್ಯೆಗಳು ತಮ್ಮ ಸೈಟ್‌ನ ಲೋಡ್ ಸಮಯವನ್ನು ಕಡಿಮೆ ಮಾಡುವ ಸಾಮರ್ಥ್ಯ ಮತ್ತು ಅವರ ವೆಬ್ ಗುಣಲಕ್ಷಣಗಳಲ್ಲಿ ಹೆಚ್ಚುವರಿ ಟ್ಯಾಗಿಂಗ್ ಆಯ್ಕೆಗಳನ್ನು ತ್ವರಿತವಾಗಿ ನಿಯೋಜಿಸುವ ಸಾಮರ್ಥ್ಯ. ವಿಶಿಷ್ಟ ಎಂಟರ್‌ಪ್ರೈಸ್ ಕಾರ್ಪೊರೇಷನ್ ನಿಯೋಜನಾ ವೇಳಾಪಟ್ಟಿಯನ್ನು ಹೊಂದಿರಬಹುದು ಅದು ಸೈಟ್‌ಗೆ ಬದಲಾವಣೆಗಳನ್ನು ಪಡೆಯಲು ವಾರಗಳು ಅಥವಾ ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ನಮ್ಮ ಎಂಟರ್‌ಪ್ರೈಸ್ ಕ್ಲೈಂಟ್‌ಗಳಲ್ಲಿ ಒಬ್ಬರು ತಮ್ಮ ಸೈಟ್‌ನಲ್ಲಿ ಬ್ರೈಟ್‌ಟ್ಯಾಗ್‌ನ ಎಂಟರ್‌ಪ್ರೈಸ್ ಟ್ಯಾಗ್ ನಿರ್ವಹಣೆಯನ್ನು ನಂಬಲಾಗದ ಫಲಿತಾಂಶಗಳೊಂದಿಗೆ ಸಂಯೋಜಿಸಿದ್ದಾರೆ. ಅವರ ಸೈಟ್ ಬಹು ವಿಶ್ಲೇಷಣೆಯನ್ನು ನಡೆಸುತ್ತಿದೆ
2021/07/24 20:02:25
https://kn.martech.zone/%E0%B2%9F%E0%B3%8D%E0%B2%AF%E0%B2%BE%E0%B2%97%E0%B3%8D/%E0%B2%B5%E0%B3%86%E0%B2%AC%E0%B3%8D%E2%80%8C%E0%B2%9F%E0%B3%8D%E0%B2%B0%E0%B3%86%E0%B2%82%E0%B2%A1%E0%B3%8D%E2%80%8C%E0%B2%97%E0%B2%B3%E0%B3%81/
mC4
'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ' | Siddaramaiah votes in Legislative Council polls - Kannada Oneindia » 'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ' 'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ' Updated: Monday, December 28, 2015, 9:53 [IST] ಮೈಸೂರು, ಡಿಸೆಂಬರ್ 28 : ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆ ಮೈಸೂರಿನಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಮೈಸೂರು-ಚಾಮರಾಜನಗರ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾನ ಮಾಡಿದರು. ನಗರಪಾಲಿಕೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಖಾಸಗಿ ಕಾರಿನಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾನ ಮಾಡಿದರು. ನಂತರ ಮಾತನಾಡಿದ ಅವರು, 'ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲಲಿದೆ' ಎಂದು ಹೇಳಿದರು. [ಎಂಎಲ್ಸಿ ಚುನಾವಣೆ ಶೇ 95 ಮತದಾನದ ಅಂದಾಜು] ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ ಅವರು, 'ಕಾಂಗ್ರೆಸ್ ಬಿಜೆಪಿಗಿಂತ ಒಂದು ಹೆಚ್ಚು ಸ್ಥಾನ ಪಡೆದರೆ ರಾಜಕೀಯ ಸನ್ಯಾಸತ್ವ ಪಡೆಯುತ್ತೇನೆ ಎಂದು ಸವಾಲು ಹಾಕಿರುವ ಈಶ್ವರಪ್ಪ ಅವರಿಗೆ ಡಿ.30ಕ್ಕೆ ಫಲಿತಾಂಶ ಉತ್ತರ ನೀಡಲಿದ್ದು, ಈಶ್ವರಪ್ಪ ಮಾತಿಗೆ ತಕ್ಕಂತೆ ಸನ್ಯಾಸ ಸ್ವೀಕರಿಸಲು ಸಿದ್ಧರಾಗಿರಲಿ' ಎಂದರು. [18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಜಗದೀಶ್ ಶೆಟ್ಟರ್ ವಿಶ್ವಾಸ] ಸಿದ್ದರಾಮಯ್ಯ ಅವರು ಮೈಸೂರಿಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತಗಟ್ಟೆ ಸೇರಿದಂತೆ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಕ್ರಮ ನಡೆಯದಂತೆ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಮತದಾನದ ಚಿತ್ರಗಳು ಇಲ್ಲಿವೆ.... ಖಾಸಗಿ ಕಾರಿನಲ್ಲಿ ಬಂದು ಮತ ಹಾಕಿದ ಸಿಎಂ ಮೈಸೂರು ನಗರಪಾಲಿಕೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಖಾಸಗಿ ಕಾರಿನಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು-ಚಾಮರಾಜನಗರ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಗೆ ಮತದಾನ ಮಾಡಿದರು. ಅವರಿಗೆ ಮಾಹಿತಿ ಕೊರತೆ ಇದೆ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಸಿದ್ದರಾಮಯ್ಯ ಅವರು ಮಾತನಾಡಿದರು. 'ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ' ಎಂದು ಯಡಿಯೂರಪ್ಪ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು 'ಯಡಿಯೂರಪ್ಪಗೆ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಮಾಹಿತಿ ಕೊರತೆಯಿದೆ' ಎಂದು ಹೇಳಿ ಮುಂದೆ ನಡೆದರು. ಸಂದೇಶ್ ನಾಗರಾಜ್ ಮತದಾನ ಮೈಸೂರು-ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂದೇಶ್ ನಾಗರಾಜ್, ಕಾಂಗ್ರೆಸ್ ಅಭ್ಯರ್ಥಿ ಆರ್.ಧರ್ಮಸೇನಾ, ಸಚಿವ ಎಚ್.ಸಿ.ಮಹದೇವಪ್ಪ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಮತದಾನ ಮಾಡಿದರು. ಗೋ.ಮಧುಸೂದನ್ ಮತದಾನ ಶಾಸಕರಾದ ಎಂ.ಕೆ.ಸೋಮಶೇಖರ್, ತನ್ವೀರ್ ಸೇಠ್, ವಾಸು, ಚಿಕ್ಕಮಾದು, ಗೋ.ಮಧುಸೂದನ್, ವಿಜಯ್‍ಶಂಕರ್, ಮರಿತಿಬ್ಬೇಗೌಡ, ಮೇಯರ್ ಭೈರಪ್ಪ ಮುಂತಾದವರು ಮತದಾನ ಮಾಡಿದರು. ವಾಟಾಳ್ ನಾಗರಾಜ್ ಮತದಾನ ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಚಾಮರಾಜನಗರದಲ್ಲಿ ಮತ ಚಲಾಯಿಸಿದರು. mysuru, legislative council, siddaramaiah, karnataka, election, mlc, district news, ಸಿದ್ದರಾಮಯ್ಯ, ಮೈಸೂರು, ಚುನಾವಣೆ, ವಿಧಾನಪರಿಷತ್, ಎಂಎಲ್ ಸಿ, ಕರ್ನಾಟಕ, ಜಿಲ್ಲಾಸುದ್ದಿ Karnataka Chief minister Siddaramaiah on Sunday, December 27th cast his vote in the Legislative Council elections at his native Mysuru.
2017/09/22 17:03:35
https://kannada.oneindia.com/news/mysore/siddaramaiah-votes-in-legislative-council-polls-099691.html
mC4
ಸಂಚಾರಕ್ಕೆ ಮುಕ್ತವಾಗದ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ, ಎಸಿಗೆ ಅಹವಾಲು – Kundapra.com ಕುಂದಾಪ್ರ ಡಾಟ್ ಕಾಂ 12/04/2021 ನ್ಯೂಸ್ ಬ್ಯೂರೋ ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತ್ವರಿತಗೊಳಿಸಿ ಶೀಘ್ರವೇ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಹೆದ್ದಾರಿ ಹೋರಾಟ ಸಮಿತಿಯು ಸೋಮವಾರ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಭೇಟಿ ಅಹವಾಲು ಸಲ್ಲಿಸಿತು. ಹೆದ್ದಾರಿ ಹೋರಾಟ ಸಮಿತಿ ಪರವಾಗಿ ಬಿ. ಕಿಶೋರ್ ಕುಮಾರ್ ಮಾತನಾಡಿ ಕುಂದಾಪುರ ಫ್ಲೈ ಓವರ್ ಸೇರಿದಂತೆ ಉಳಿದ ಕಾಮಗಾರಿ ಮಾರ್ಚ್ 31ರ ಒಳಗೆ ಪೂರ್ಣಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಭರವಸೆ ಇದೀಗ ಹುಸಿಯಾಗಿದ್ದು ಮತ್ತೊಮ್ಮೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇನ್ನೆಷ್ಟು ಕಾಲ ಕಳೆಯುವುದು? ಮಳೆಗಾಲ ಬಂತೆಂದರೆ ಮತ್ತೆ ಕಾಮಗಾರಿ ಇನ್ನೊಂದು 6 ತಿಂಗಳು ಮುಂದುವರಿಯುತ್ತದೆ. ಶೀಘ್ರ ಕ್ರಮ ಕೈಗೊಂಡು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉಪವಿಭಾಗಾಧಿಕಾರಿ ರಾಜು ಕೆ. ಪ್ರತಿಕ್ರಿಯಿಸಿ ಇನ್ನು 15 ದಿನಗಳ ಒಳಗೆ ಹೆದ್ದಾರಿ ಕಾಮಗಾರಿ ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ ಎಂಬ ಮಾಹಿತಿಯನ್ನು ನಮಗೆ ನೀಡಿದರು. ಉಪವಿಭಾಗಾಧಿಕಾರಿ ನೀಡಿರುವ ಈ ಗಡುವಿನ ಒಳಗೆ ಈ ಕಾಮಗಾರಿ ಮುಗಿದು ಫ್ಲೈ ಓವರು ಮತ್ತು ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳ್ಳದೆ ಇದ್ದರೆ ನಮ್ಮ ಮುಂದಿನ ಹೋರಾಟದ ಕುರಿತು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಮಿತಿಯು ತೀರ್ಮಾನಿಸಿದೆ. ಈ ಕುರಿತು ಚರ್ಚಿಸಲು ಏಪ್ರಿಲ್ 17ರ ಶನಿವಾರ ಸಂಜೆ ಕುಂದಾಪುರದ ಆರ್ಎನ್ ಶೆಟ್ಟಿ ಸಭಾಭವನದ ಮಿನಿಹಾಲ್ನಲ್ಲಿ ಸಭೆ ಕರೆಯಲಾಗಿದೆ. ಉಪವಿಭಾಗಾಧಿಕಾರಿ ಭೇಟಿ ವೇಳೆ ಈ ಸಂದರ್ಭದಲ್ಲಿ, ರಾಜೇಶ ಕಾವೇರಿ, ಶಶಿಧರ ಹೆಮ್ಮಾಡಿ, ವಿಕಾಸ್ ಹೆಗ್ಡೆ, ಶ್ಯಾಮಸುಂದರ ನಾಯರಿ, ಕೆಂಚನೂರು ಸೋಮಶೇಖರ ಶೆಟ್ಟಿ, ವಿವೇಕ್, ಗಣೇಶ ಮೆಂಡನ್, ಪ್ರತಾಪ ಶೆಟ್ಟಿ, ಭೋಜ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
2022/01/25 23:15:36
https://kundapraa.com/heddari-horata-samithi-appealed-kundapura-ac-to-complete-highway-project/
mC4
'ಬಿಬಿಎಂಪಿ ಮೇಯರ್‌ ಗೌತಮ್‌ಕುಮಾರ್‌ RSSನ ಅಜೆಂಡಾದಂತೆ ವರ್ತನೆ' | Members of the Opposition Held Protest in BBMP Bengaluru, First Published 4, Mar 2020, 8:25 AM IST ಟೌನ್‌ಹಾಲ್‌ ಮುಂದೆ ಪ್ರತಿಭಟನೆ ನಿಷೇಧಕ್ಕೆ ಕಿಡಿ| ಬಿಜೆಪಿ ನಿರ್ಣಯಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಕೆಂಡಾಮಂಡಲ| ಆಯುಕ್ತರ ಉತ್ತರಕ್ಕೂ ಬಗ್ಗದ ಪ್ರತಿಪಕ್ಷಗಳು| ಬೆಂಗಳೂರು(ಮಾ.04): ನಗರದ ಸರ್‌.ಪುಟ್ಟಣ್ಣ ಚೆಟ್ಟಿ ಪುರಭವನದ (ಟೌನ್‌ಹಾಲ್‌) ಮುಂಭಾಗ ಪ್ರತಿಭಟನೆ ನಿಷೇಧಿಸಿ ಬಿಬಿಎಂಪಿ ಆಡಳಿತ ಪಕ್ಷ ಬಿಜೆಪಿಯ ನಿರ್ಣಯ ವಿರೋಧಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಮಂಗಳವಾರ ಮೇಯರ್‌ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಸಾಮಾನ್ಯ ಸಭೆ ಆರಂಭವಾಗುತ್ತಿದಂತೆ ಸಭಾಂಗಣದ ಒಳಗೆ ಪ್ರತಿಪಕ್ಷಗಳ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸುತ್ತಾ ಮೇಯರ್‌ ಪೀಠದ ಮುಂದೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ಮೇಯರ್‌ ಎಂ.ಗೌತಮ್‌ಕುಮಾರ್‌ ಅವರು ಆರ್‌ಎಸ್‌ಎಸ್‌ನ ಅಜೆಂಡಾದಂತೆ ನಡೆದುಕೊಳ್ಳುತ್ತಿದ್ದಾರೆ. ಪ್ರತಿಭಟನೆ ಮಾಡುವವರನ್ನು ಹತ್ತಿಕ್ಕುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು. ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌ ಮಾತನಾಡಿ, ಪುರಭವನದ ಮುಂದೆ ಪ್ರತಿಭಟನೆ ಮಾಡಬಾರದು ಎಂದು ಸ್ವಯಂ ಪ್ರೇರಿತವಾಗಿ ನಿರ್ಣಯ ಅಂಗೀಕಾರ ಮಾಡಲಾಗಿದೆ. ಪೊಲೀಸ್‌ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಏನಿದೆ? ನಿರ್ಣಯದ ಬಗ್ಗೆ ಕಾನೂನು ಕೋಶದ ಅಧಿಕಾರಿಗಳಿಂದ ಉತ್ತರ ಕೊಡಿಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಎಂ.ಗೌತಮ್‌ಕುಮಾರ್‌, ಬಿಬಿಎಂಪಿ ಆಯುಕ್ತರು ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಎಂದರೂ, ವಿರೋಧ ಪಕ್ಷದ ಸದಸ್ಯರು ಸುಮ್ಮನಾಗಲಿಲ್ಲ. ಆಯುಕ್ತರಿಂದ ಉತ್ತರ ಬೇಡ, ಕಾನೂನು ಕೋಶದ ಮುಖ್ಯಸ್ಥರಿಂದಲೇ ಕೊಡಿಸಿ ಎಂದು ಆಗ್ರಹಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ಉಂಟಾಯಿತು. ಈ ನಡುವೆಯೇ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ನಿರ್ಣಯದ ಬಗ್ಗೆ ಸ್ಪಷ್ಟನೆ ನೀಡಿ, ಪುರಭವನದ ಮುಂದೆ ಪ್ರತಿಭಟನೆ ನಡೆಸುವುದರಿಂದ ಇಲ್ಲಿನ ಆಸ್ಪತ್ರೆಗಳಿಗೆ ಸಮಸ್ಯೆಯಾಗುತ್ತಿದೆ. ಪಾಲಿಕೆಯ ಆದಾಯವೂ ಕಡಿಮೆಯಾಗಿದೆ. ಪೊಲೀಸ್‌ ಆಯುಕ್ತರೊಂದಿಗೂ ಚರ್ಚೆ ಮಾಡಲಾಗಿದೆ. ಪ್ರತಿಭಟನೆಗೆ ಸ್ವಾತಂತ್ರ್ಯ ಉದ್ಯಾನ, ಮೌರ್ಯವೃತ್ತದಲ್ಲಿ ಅವಕಾಶವಿದೆ. ನಿರ್ಣಯ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು. ಆಯುಕ್ತರ ಉತ್ತರಕ್ಕೆ ಸಮಾಧಾನಗೊಳ್ಳದ ವಿರೋಧ ಪಕ್ಷದ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಈ ಹಿನ್ನೆಲೆಯಲ್ಲಿ ಮೇಯರ್‌ ಸಭೆಯನ್ನು ಭೋಜನ ವಿರಾಮಕ್ಕೆ ಮುಂದೂಡಿದರು. ನಿಲುವಳಿ ಮಂಡನೆ, ಚರ್ಚೆಗೆ ಅವಕಾಶ ನೀಡದ ಮೇಯರ್‌: ಮತ್ತೆ ಸಭೆ ಆರಂಭವಾಗುತ್ತಿದಂತೆ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಹಾಗೂ ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌ ಅವರು ಪುರಭವನದ ಮುಂದೆ ಪ್ರತಿಭಟನೆ ವಿಚಾರವಾಗಿ ನಿಲುವಳಿ ಮಂಡಿಸಿದರು. ಆದರೆ ಮೇಯರ್‌ ನಿಲುವಳಿಯನ್ನು ತಿರಸ್ಕರಿಸಿರುವುದಾಗಿ ಘೋಷಿಸಿದರು. ಮೇಯರ್‌ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯರು ನಿರ್ಣಯ ಪ್ರತಿಯನ್ನು ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ಸಭಾತ್ಯಾಗ ಮಾಡಿದರು. ಸಭಾಂಗಣದಲ್ಲಿ ಭಿತ್ತಿಪತ್ರ ಪ್ರದರ್ಶನ ಸರ್‌.ಪುಟ್ಟಣ್ಣಚೆಟ್ಟಿಪುರಭವನದ ಎದುರು ಪ್ರತಿಭಟನೆಗೆ ನಿಷೇಧ ಹೇರಿರುವುದನ್ನು ವಿರೋಧಿಸುವ ಬರಹವುಳ್ಳ ಭಿತ್ತಿಪತ್ರಗಳನ್ನು ಪ್ರತಿಪಕ್ಷದ ಸದಸ್ಯರು ಕೆಂಪೇಗೌಡ ಪೌರಸಭಾಂಗಣದ ಒಳಗೆ ತೆಗೆದುಕೊಂಡು ಬಂದಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ಹಾಗೂ ಮೇಯರ್‌ ಆಕ್ಷೇಪ ವ್ಯಕ್ತಪಡಿಸಿದರು. ಭಿತ್ತಿಪತ್ರ ಪ್ರದರ್ಶಿಸದಂತೆ ಮೇಯರ್‌ ಸೂಚನೆ ನೀಡಿದರೂ ವಿರೋಧ ಪಕ್ಷದ ಸದಸ್ಯರು ಕೇಳಲಿಲ್ಲ. ಹೀಗಾಗಿ, ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಭಿತ್ತಿಪತ್ರ ಕಿತ್ತುಕೊಳ್ಳುವಂತೆ ಕೌನ್ಸಿಲ್‌ ಅಧಿಕಾರಿ- ಸಿಬ್ಬಂದಿಗೆ ಸೂಚನೆ ನೀಡಿದರು. ಆದರೆ, ಕೌನ್ಸಿಲ್‌ ಅಧಿಕಾರಿಗಳು ಇದಕ್ಕೆ ಹಿಂದೇಟು ಹಾಕಿದರು.
2020/03/31 14:40:07
https://kannada.asianetnews.com/karnataka-districts/members-of-the-opposition-held-protest-in-bbmp-q6net2
mC4
ದೇಶಕ್ಕೆ 2ನೆ ಸ್ವಾತಂತ್ರ್ಯ ತಂದುಕೊಟ್ಟರು ಜಯಪ್ರಕಾಶ್ ನಾರಾಯಣ್ : ಎಚ್‍ಡಿಡಿ – EESANJE / ಈ ಸಂಜೆ ದೇಶಕ್ಕೆ 2ನೆ ಸ್ವಾತಂತ್ರ್ಯ ತಂದುಕೊಟ್ಟರು ಜಯಪ್ರಕಾಶ್ ನಾರಾಯಣ್ : ಎಚ್‍ಡಿಡಿ October 11, 2021 Sunil Kumar HD Deve Gowda, Jayaprakash Narayan ಬೆಂಗಳೂರು,ಅ.11- ಜಯಪ್ರಕಾಶ್ ನಾರಾಯಣ್ ಅವರು ದೇಶಕ್ಕೆ ಎರಡನೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡರು ತಿಳಿಸಿದರು. ಜೆಡಿಎಸ್ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಲೊಕ ನಾಯಕ ಜಯಪ್ರಕಾಶ್ ನಾರಾಯಣ್ ಅವರ 119 ನೇ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಾತ್ಮ ಗಾಂೀಧಿಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆ, ಜಯಪ್ರಕಾಶ್ ನಾರಾಯಣ್ ಅವರು ಎರಡನೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಅದು ಕೂಡ ಈಗ ನಶಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಮುಂದೇನಾಗುತ್ತದೆ ಎಂಬುದು ಗೊತ್ತಿಲ್ಲ. ಎಲ್ಲರೂ ಕೂಡ ಅಕಾರದ ಮಂತ್ರವನ್ನೇ ಜಪಿಸುತ್ತಿದ್ದಾರೆ. ಎಲ್ಲರೂ ಅಕಾರ ಅಕಾರ ಎನ್ನುತ್ತಿದ್ದಾರೆ. ಮಹಾತ್ಮ ಗಾಂೀಜಿ ಅವರ ಕಾಂಗ್ರೆಸ್ ಏನಾಗುತ್ತಿದೆ ಎಂದು ಪ್ರಶ್ನಿಸಿದರು. ಮಧ್ಯ ಪ್ರದೇಶದ ಛಂಬಲ್ ಕಣಿವೆಯಲ್ಲಿ ದರೋಡೆ ಮಾಡುತ್ತಿದ್ದ ಪೂಲನ್‍ದೇವಿ ಅವರ ಮನವೊಲಿಸಿ ಆಯುಧಗಳೊಂದಿಗೆ ಶರಣಾಗತಿ ಯಾಗುವಂತೆ ಮಾಡಿದ್ದವರು ಜೆಪಿ. ಆ ಕಾರಣಕ್ಕಾಗಿಯೇ ಜೆಡಿಎಸ್ ಕಚೇರಿಗೆ ಜೆಪಿ ಭವನ ಎಂದು ನಾಮಕರಣ ಮಾಡಲಾಗಿದೆ. 1957ರಲ್ಲಿ ವೈ.ವೀರಪ್ಪ ಎಂಬುವವರ ಪರವಾಗಿ ಭಾಷಣ ಮಾಡಲು ನಮ್ಮ ಊರಿಗೆ ಜೆಪಿ ಬಂದಿದ್ದರು. ನಮ್ಮ ಹಳ್ಳಿಗಾಡು ನೋಡಿ ನೊಂದುಕೊಂಡರು. ಮಹಾತ್ಮ ಗಾಂೀಜಿ ಅವರು ಅದ್ಧೂರಿ ಜೀವನ ನಡೆಸಲಿಲ್ಲ. ಈಗ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ಕರೆಸಿ ಭಾಷಣ ಮಾಡಿಸುತ್ತಾರೆ. ಈಗಿನ ರಾಜಕೀಯಕ್ಕೂ, ಆಗಿನ ರಾಜಕೀಯಕ್ಕೂ ಓಲೈಕೆ ಮಾಡಿದೆ ಅಷ್ಟೆ. ನಾನು ಬಿಜೆಪಿ ಅಥವಾ ಆರ್‍ಎಸ್‍ಎಸ್‍ಗೆ ಸೇರಿದವನಲ್ಲ. ಆರ್‍ಎಸ್‍ಎಸ್ ಬಗ್ಗೆ ಟೀಕೆ ಮಾಡುವುದಿಲ್ಲ. ವಾಸ್ತವಾಂಶ ಹೇಳುತ್ತೇನೆ. ಇನ್ನು ಮುಂದಾದರೂ ಶಕ್ತಿ ಮೀರಿ ನಮ್ಮ ಪಕ್ಷವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಯುವ ಪೀಳಿಗೆ ಜೆಪಿ ಹಾದಿಯಲ್ಲಿ ನಡೆಯುವಂತೆ ಕಾರ್ಯಕ್ರಮ ರೂಪಿಸಬೇಕು. ಈ ದೇಶದಲ್ಲಿ ಮತ್ತೊಬ್ಬ ಜಯ ಪ್ರಕಾಶ್ ಅವರನ್ನು ನೋಡಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ರೂತ್ ಮನೋರಮಾ, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
2022/05/20 10:31:37
https://www.eesanje.com/jayaprakash-narayanhd-deve-gowda/
mC4
ಭಾರ್ತಿ ಏರ್ಟೆಲ್ ಈಗ ಲಾವಾ ಮತ್ತು ಇಂಟೆಕ್ಸ್ ಜೊತೆ ಕೆಲಸ ಮಾಡಲಿದೆ. ಇದು 4G ಸ್ಮಾರ್ಟ್ಫೋನ್ಗಳನ್ನು ಕೇವಲ 1699 ಮತ್ತು 1399 ಅನುಕ್ರಮವಾಗಿ ನೀಡಲಿದೆ. | Digit Kannada ಭಾರ್ತಿ ಏರ್ಟೆಲ್ ಈಗ ಲಾವಾ ಮತ್ತು ಇಂಟೆಕ್ಸ್ ಜೊತೆ ಕೆಲಸ ಮಾಡಲಿದೆ. ಇದು 4G ಸ್ಮಾರ್ಟ್ಫೋನ್ಗಳನ್ನು ಕೇವಲ 1699 ಮತ್ತು 1399 ಅನುಕ್ರಮವಾಗಿ ನೀಡಲಿದೆ. ಇವರಿಂದ Ravi Rao | ಪ್ರಕಟಿಸಲಾಗಿದೆ 25 Oct 2017 ಈಗ ಭಾರತಿ ಏರ್ಟೆಲ್ ಇತ್ತೀಚೆಗೆ ಭಾರತ ದೇಶೀಯ ಹ್ಯಾಂಡ್ಸೆಟ್ ತಯಾರಕ ಕಾರ್ಬನ್ ಜೊತೆ ಪಾಲುದಾರಿಕೆಯನ್ನು ಹೊಂದಿದ್ದು ಅಲ್ಲದೆ ಇಂದು 4G ಸ್ಮಾರ್ಟ್ಫೋನ್ ಕಾರ್ಬನ್ A40 ಅನ್ನು ಕೇವಲ 1399 ರೂಗೆ ನೀಡುತ್ತಾ ಭವಿಷ್ಯದಲ್ಲಿ ಭಾರತೀಯ ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳೊಂದಿಗೆ ತಾನು ಪಾಲುದಾರರಾಗಲಿದೆ ಎಂದು ಏರ್ಟೆಲ್ ದೃಢಪಡಿಸಿದೆ. ಭಾರತದ ಮುಂಬರಲಿರುವ ದಿನಗಳಲ್ಲಿ ಲಾವಾ ಮತ್ತು ಇಂಟೆಕ್ಸ್ನಿಂದ ನಾವು ಏರ್ಟೆಲ್ನ ಬ್ರಾಂಡ್ ಸ್ಮಾರ್ಟ್ಫೋನ್ಗಳನ್ನು ನೋಡಬಹುದು. ಅಲ್ಲದೆ ಸದ್ಯಕ್ಕೆ 91 ಮೆಬೈಲ್ಗಳ ವರದಿಯ ಪ್ರಕಾರ ಏರ್ಟೆಲ್ ಲಾವಾದೊಂದಿಗೆ ಸಹಯೋಗಗೊಳ್ಳಲಿದೆ ಮತ್ತು ನಮ್ಮ ಮೂಲಗಳ ಪ್ರಕಾರ ಭಾರತೀಯ ಪ್ರಮುಖ ಟೆಲಿಕಾಂ ಆಪರೇಟರ್ಗಳು ಇಂಟೆಕ್ಸ್ನೊಂದಿಗೆ ಪಾಲುದಾರರಾಗಲಿವೆ. ಭಾರ್ತಿ ಏರ್ಟೆಲ್ ಮತ್ತು ಲಾವಾದ ಹೊಸ 4G ಸ್ಮಾರ್ಟ್ಫೋನ್ ಸುಮಾರು 3500 ರೂಗೆ ಮತ್ತು ಇಂಟೆಕ್ಸ್ ಹೊಸ 4G ಸ್ಮಾರ್ಟ್ಫೋನ್ ಸುಮಾರು 1699 ರೂ ಅನ್ವಯಿಸುತ್ತದೆ. ನಮ್ಮ ಮಾಹಿತಿಯ ಪ್ರಕಾರ ಏರ್ಟೆಲ್ ಈಗಾಗಲೇ ತನ್ನ ಸ್ಮಾರ್ಟ್ಫೋನ್ಗಳ ಪರಿಣಾಮಕಾರಿಯಾ 1399 ರೂನಲ್ಲಿ ಕಾರ್ಬನ್ A40 ಇಂಡಿಯನ್ನಂತೆ ಬಿಡುಗಡೆಗೊಳಿಸಿದೆ. ಇಂದು ಲಾವಾ ಮತ್ತು ಇಂಟೆಕ್ಸ್ ಸ್ಮಾರ್ಟ್ಫೋನ್ಗಳು ಈಗಾಗಲೇ ಮಾರಾಟವಾಗುತ್ತಿರುವ ಕಾರ್ಬನ್ A40 ಭಾರತೀಯ ಪ್ರಸ್ತಾಪವನ್ನು ಹೋಲುತ್ತದೆ. ಇದು 2500 ಆಗಿದ್ದು ಏರ್ಟೆಲ್ ಮೂರು ವರ್ಷಗಳವರೆಗೆ ಇದನ್ನು ಕ್ಯಾಶ್ ಬ್ಯಾಕಿನಲ್ಲಿ ನೀಡಲಿದೆ. ಅಲ್ಲದೆ ಕಾರ್ಬನ್ A40 ಇದು ಭಾರತೀಯ ಸ್ಮಾರ್ಟ್ಫೋನ್ ಜೊತೆ ಏರ್ಟೆಲ್ 1500 ರೂಗಳ ಪರಿಣಾಮಕಾರಿ ಬೆಲೆಯನ್ನು ನೀಡುತ್ತದೆ. ಮತ್ತು 1399 ರೂನ ಈ ಕಾರ್ಬನ್ A40 ಭಾರತೀಯರಿಗೆ ಕೇವಲ ರೂ. 2899 ರಂತೆ ಏರ್ಟೆಲ್ 169 ರೂಗಳ ರೇಟ್ ಪ್ಲಾನಿನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 500MB ಡೇಟಾವನ್ನು 28 ದಿನಗಳವರೆಗೆ ಒದಗಿಸುತ್ತದೆ. ಏರ್ಟೆಲ್ ಲಾವಾ ಮತ್ತು ಇಂಟೆಕ್ಸ್ ಸ್ಮಾರ್ಟ್ಫೋನ್ಗಳ ವಿಶೇಷಣಗಳ ಬಗ್ಗೆ ಯಾವುದೇ ವಿವರಗಳಿಲ್ಲ. 4.5 ಇಂಚಿನ FWVGA ಯಾ ಡಿಸ್ಪ್ಲೇ, ಕ್ವಾಡ್-ಕೋರ್ ಪ್ರೊಸೆಸರ್, 1GB ಯಾ ರಾಮ್, 8GB ಯಾ ಇಂಟರ್ನಲ್ ಸ್ಟೋರೇಜ್ ಸೇರಿದಂತೆ ಮೈಕ್ರೊ ಎಸ್ಡಿ ಕಾರ್ಡ್ನೊಂದಿಗೆ ವಿಸ್ತರಿಸಬಹುದಾದಂತಹ ಕಾರ್ಬನ್ A40 ಇಂಡಿಯನ್ನಂತ ವೈಶಿಷ್ಟ್ಯಗಳನ್ನು ನೀಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಅಲ್ಲದೆ ಏರ್ಟೆಲ್ VoLTE ಗೆ ಬೆಂಬಲ ನೀಡುತ್ತಾವೆ. ಮತ್ತು ಆಂಡ್ರಾಯ್ಡ್ 7.0 ನೌಗಾಟ್ ಬಾಕ್ಸ್ ಅನ್ನು ಸಹ ರನ್ ಮಾಡುತ್ತದೆ. 'ಮೇರಾ ಪೆಹ್ಲಾ 4G ಸ್ಮಾರ್ಟ್ಫೋನ್' ಕಾರ್ಯಾಚರಣೆಯಡಿಯಲ್ಲಿ ಏರ್ಟೆಲ್ ಈ ದೇಶೀಯ ಬ್ರ್ಯಾಂಡ್ಗಳೊಂದಿಗೆ ಪಾಲುದಾರಿಕೆ ಹೊಂದಲಿದೆ. PAN Card ಅಲ್ಲಿ ಯಾವುದೇ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಹೇಗೆ ಸರಿಪಡಿಸುವುದು ಸಂಪೂರ್ಣವಾಗಿ ತಿಳಿಯಿರಿ Oppo A94 ಅಮೋಲೆಡ್ ಡಿಸ್ಪ್ಲೇ ಮತ್ತು ಕ್ವಾಡ್ ಕ್ಯಾಮೆರಾದೊಂದಿಗೆ ಬಿಡುಗಡೆ; ಬೆಲೆ, ಸ್ಪೆಸಿಫಿಕೇಷನ್ ಮತ್ತು ಆಫರ್ ತಿಳಿಯಿರಿ ಶೀಘ್ರದಲ್ಲೇ WhatsApp ಬಳಕೆದಾರರಿಗೆ 24 ಗಂಟೆಗಳ ಮೆಸೇಜ್ಗಳನ್ನು ಡಿಸ್ಅಪಿಯರ್ ಮಾಡಲು ಅವಕಾಶ, ಹೇಗೆ ಕಾರ್ಯನಿರ್ವಹಿಸುತ್ತದೆ?
2021/03/09 05:00:52
https://www.digit.in/kn/news/telecom/airtel-lava-and-intex-launch-affordable-4g-smart-phones-at-rs-1699-rs1399-36772.html
mC4
ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ - ವಿಕಿಪೀಡಿಯ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ೧ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ೧.೧ ವೈಯುಕ್ತಿಕ ಮಾಹಿತಿ ೧.೨ ಶೈಕ್ಷಣಿಕ ಸೇವೆ ೧.೩ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಾಚರಣೆಗಳು ೧.೪ ಶಅರೇ ಮುಬಾರಕ್ ಗ್ರ್ಯಾಂಡ್ ಮಸ್ಜಿದ್ ೧.೫ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರಚಿಸಿದ ಕೃತಿಗಳು ೧.೬ ಅರಬಿಕ್ ಕೃತಿಗಳು ೧.೭ ಇಂಗ್ಲಿಷ್ ಕೃತಿಗಳು ೧.೮ ಗೌರವಗಳು, ಪ್ರಶಸ್ತಿಗಳು ಮತ್ತು ಅಂತರಾಷ್ಟ್ರೀಯ ಮನ್ನಣೆ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್[ಬದಲಾಯಿಸಿ] ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್[೧] ಇವರನ್ನು ಶೈಖ್ ಅಬೂಬಕ್ಕರ್ ಅಹ್ಮದ್, ಎ.ಪಿ ಉಸ್ತಾದ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಇವರು ಭಾರತದ ಎ. ಪಿ ಪಂಗಡ ಸುನ್ನಿಮುಸ್ಲಿಂ ಮುಖಂಡರಾಗಿದ್ದಾರೆ. ಭಾರತದ ಗ್ರಾಂಡ್ ಮುಫ್ತಿ ಎಂದು ಅನುಯಾಯಿಗಳಿಂದ ಕರೆಯಲ್ಪಡುತ್ತದೆ. (ಭಾರತೀಯ ಎ.ಪಿ ಸುನ್ನೀ ಮುಸ್ಲಿಮರ ಪರಮೋನ್ನತ ನಾಯಕ) ಅಖಿಲ ಭಾರತ ಮುಸ್ಲಿಂ ವಿದ್ವಾಂಸರ ಸಂಘದ ಪ್ರಧಾನ ಕಾರ್ಯದರ್ಶಿ (ಅಖಿಲ ಭಾರತ ಸುನ್ನಿ ಜಂ-ಇಯ್ಯತುಲ್ ಉಲಮಾ) ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಮತ್ತು ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್.ಎಸ್.ಎಫ್) ಇದರ ನಿರ್ದೇಕರು. ಎರಡು ಸಾವಿರದಷ್ಟು ಮದ್ರಸಗಳಿಗೆ ನೇತೃತ್ವ ನೀಡುವ ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾದ ಕೋಶಾಧಿಕಾರಿ ಹಾಗೂ ಕೇರಳದ ಕೋಯಿಕ್ಕೋಡಿನ ಕಾರಂದೂರಿನಲ್ಲಿರುವ ಮರ್ಕಝ್[೨] ವಿಶ್ವವಿದ್ಯಾನಿಲಯದ ಸ್ಥಾಪಕರು ಮತ್ತು ಕುಲಪತಿಯಾಗಿದ್ದಾರೆ. ವೈಯುಕ್ತಿಕ ಮಾಹಿತಿ[ಬದಲಾಯಿಸಿ] ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್[೩] ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕಾಂತಪುರಂ ಎಂಬಲ್ಲಿ 22 ಮಾರ್ಚ್ 1939ರಲ್ಲಿ ಜನಿಸಿದರು. ಇವರ ಪತ್ನಿ ಝೈನಬ. ಮಗ ಡಾ.ಎಪಿ ಅಬ್ದುಲ್ ಹಕೀಮ್ ಅಝ್ಹರಿ. ತಾಯಿಯ ಕುನ್ಹೀಮ ಹಜ್ಜುಮ್ಮ. ತಂದೆ ಮೌತರಯಿಲ್ ಅಹ್ಮದ್ ಹಾಜಿ. ತಮಿಳುನಾಡಿನ ವೆಲ್ಲೂರಿನ ಬಾಕಿಯಾತು ಸ್ವಾಲಿಯಾತು ಕಾಲೇಜಿನಿಂದ ಇಸ್ಲಾಮಿಕ್ ಅಧ್ಯಯನದಲ್ಲಿ ಇವರು ಬಾಖವಿ ಬಿರುದನ್ನು ಪಡೆದಿದ್ದಾರೆ. ಶೈಕ್ಷಣಿಕ ಸೇವೆ[ಬದಲಾಯಿಸಿ] ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಮರ್ಕಝ್[೪] ವಿಶ್ವವಿದ್ಯಾನಿಯ ಕೇಂದ್ರವಾಗಿಟ್ಟುಕೊಂಡು ದೇಶ-ವಿದೇಶಗಳಲ್ಲಿ ಶೈಕ್ಷಣಿಕ ಸೇವೆಯನ್ನು ಮಾಡುತ್ತಿದ್ದಾರೆ. ಮರ್ಕಝ್ ನಾಲೆಡ್ಜ್ ಸಿಟಿ[೫], ಮರ್ಕಝ್ ಯುನಾನಿ ವೈದ್ಯಕೀಯ ಕಾಲೇಜು, ಮರ್ಕಝ್ ಕಾನೂನು ಮಹಾ ವಿದ್ಯಾಲಯ ಇವರ ಪ್ರಮುಖ ಸಂಸ್ಥೆಗಳು. ದೇಶ-ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯೊಂದಿಗೆ ತೊಡಗಿಸಿಕೊಂಡಿದ್ದಾರೆ. ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಾಚರಣೆಗಳು[ಬದಲಾಯಿಸಿ] ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕೇರಳದ ಮುಸಲ್ಮಾನರ ಪ್ರಭಾವಿ ನಾಯಕ. ಅವರು ದೇಶ ಮತ್ತು ವಿದೇಶಗಳಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಕೇರಳದ ಕೋಯಿಕ್ಕೋಡಿನ ಕಾರಂದೂರ್ ಮರ್ಕಝ್ ಸಂಸ್ಥೆಯನ್ನು ಎಪಿ ಅಬೂಬಕ್ಕರ್ ಮುಸ್ಲಿಯಾರ್ ಸ್ಥಾಪಿಸಿದ್ದಾರೆ. ಮರ್ಕಝ್ ಸಂಸ್ಥೆಯಲ್ಲಿ 2,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ. ಮರ್ಕಝ್ ಅಧೀನದಲ್ಲಿ ದೇಶದ ಪ್ರಮುಖ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ, ಮಣಿಪುರ ಮತ್ತು ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ. ಮರ್ಕಝ್ ಅಧೀನದಲ್ಲಿ ಮರ್ಕಝ್ ಯುನಾನಿ ಮೆಡಿಕಲ್ ಕಾಲೇಜು[೬] (ಕೇರಳದ ಪ್ರಥಮ ಯುನಾನಿ ಮೆಡಿಕಲ್ ಕಾಲೇಜು) ಮರ್ಕಝ್ ಕಾನೂನು ಮಹಾ ವಿದ್ಯಾಲಯ ಕಾರ್ಯಾಚರಿಸುತ್ತಿದೆ. ಮರ್ಕಝ್ ಕಲ್ಯಾಣ ಸೇವೆಗಳಿಗೂ ಒತ್ತು ನೀಡುತ್ತಿದೆ. ವಿವಿಧ ರೀತಿಯಲ್ಲಿ ಜನರಿಗೆ ಸೇವೆಯನ್ನು ಒದಗಿಸುತ್ತದೆ. ಉನ್ನತ ಅಧ್ಯಯನಗಳಿಗಾಗಿ ಬಡ ವಿದ್ಯಾರ್ಥಿಗಳಿಗೆ ಮರ್ಕಝ್ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ದೇಶದಲ್ಲಿ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಂಸ್ಥೆಯಲ್ಲಿ ವಿಶೇಷ ನಿಧಿಯನ್ನು ಸ್ಥಾಪಿಸಲಾಗಿದೆ. ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಈಜಿಪ್ಟ್, ರಷ್ಯಾ ರಾಷ್ಟ್ರಗಳ ಉನ್ನತ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣವನ್ನು ಮುಂದುವರೆಸಲು ಮರ್ಕಝ್ ಧನ ಸಹಾಯವನ್ನು ಒದಗಿಸುತ್ತದೆ. ಕೇರಳ ಮತ್ತು ಇತರ ರಾಜ್ಯಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮರ್ಕಝ್ ಪ್ರಾಯೋಜಕತ್ವದಲ್ಲಿ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗಿದೆ. ಕರ್ನಾಟಕ, ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ಮರ್ಕಝ್ ವಿಶೇಷ ಸೇವಾ ಕೇಂದ್ರಗಳನ್ನು ತೆರೆದಿದೆ. ಇಸ್ಲಾಮಿಕ್ ಅಧ್ಯಯನದಲ್ಲಿ ಮರ್ಕಝ್ ಉನ್ನತ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಮೌಲವೀ ಫಾಝಿಲ್ ಸಖಾಫಿ ಮತ್ತು ಮೌಲವೀ ಫಾಝಿಲ್ ಖಾಮಿಲ್ ಸಖಾಫಿ ಎಂಬ ಬಿರುದನ್ನು ನೀಡುತ್ತಿದೆ. ಇದು ಇಸ್ಲಾಮಿಕ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಮರ್ಕಝ್ ಅಧೀನದಲ್ಲಿ ಇಸ್ಲಾಮಿಕ್ ಧಾರ್ಮಿಕ ಪದವಿಯನ್ನು ಪಡೆದ ಸುಮಾರು 15,000ದಷ್ಟು ಧಾರ್ಮಿಕ ವಿದ್ವಾಂಸರು ಜಗತ್ತಿನ ವಿವಿಧ ರಾಷ್ಟ್ರಗಳಾದ ಆಫ್ರಿಕಾ, ಯುಕೆ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಈಜಿಫ್ಟ್ ಮುಂತಾದ ಕಡೆಗಳಲ್ಲಿ ಸೇವೆಯಲ್ಲಿ ನಿರತರಾಗಿದ್ದಾರೆ. ಉದ್ದೇಶಿತ ಮರ್ಕಝ್ ನಾಲೆಡ್ಜ್ ಸಿಟಿ ಅಥವಾ ಜ್ಞಾನ ನಗರ ಕೇರಳದ ಕೋಝಿಕೋಡಿನಲ್ಲಿರುವ ಮರ್ಕಝ್ ವಿಶ್ವವಿದ್ಯಾನಿಲಯದ ಒಂದು ಯೋಜನೆಯಾಗಿದೆ. ಯೋಜನಾ ಅಡಿಪಾಯವನ್ನು ಡಿಸೆಂಬರ್ 24, 2012 ರಂದು ಸಮಸ್ತ ಕೇರಳ ಸುನ್ನಿ ಜಂ-ಇಯತುಲ್ ಉಲಮಾ ಅಧ್ಯಕ್ಷರಾಗಿದ್ದ ತಾಜುಲ್ ಉಲಮಾ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಹಾಕಿದರು. ಯೋಜನೆಯ ವೆಚ್ಚವು 10 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ 40 ಕೋಟಿ ಎಂದು ಅಂದಾಜಿಸಿ ದೇಶ ವಿದೇಶಗಳಿಂದ ವ್ಯಾಪಕವಾಗಿ ಹಣ ಸಂಗ್ರಹಿಸಲಾಗಿತ್ತು. ಶಅರೇ ಮುಬಾರಕ್ ಗ್ರ್ಯಾಂಡ್ ಮಸ್ಜಿದ್[ಬದಲಾಯಿಸಿ] ಶಅರೇ ಮುಬಾರಕ್ ಮಸೀದಿ[೭] ಅಥವಾ ಶಅರೇ ಮುಬಾರಕ್ ಗ್ರ್ಯಾಂಡ್ ಮಸ್ಜಿದ್. ಕೇರಳ ರಾಜ್ಯದ ಕ್ಯಾಲಿಕಟ್‍ನಲ್ಲಿ ಮರ್ಕಝ್ ಅಧೀನದಲ್ಲಿ ಕಾಂತಪುರಂ ಎಪಿ ಅಬೂಬಕ್ಕರ್ ಅಹ್ಮದ್ ಅವರು ಪ್ರಸ್ತಾಪಿಸಿದ ಮಸೀದಿಯಾಗಿದೆ. 12ಎಕರೆ ಭೂಮಿಯಲ್ಲಿ ನಾಲೆಡ್ಜ್ ಸಿಟಿ ಜೊತೆಗೆ ಇದನ್ನು ಪ್ರಸ್ತಾಪಿಸಲಾಗಿದೆ. ಸುಮಾರು 40 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಮಸೀದಿಯು ಭಾರತದ ಅತ್ಯಂತ ದೊಡ್ಡ ಮಸೀದಿಯಾಗಲಿದೆ. ಈ ಮಸೀದಿಯಲ್ಲಿ ಸುಮಾರು 25000 ಜನರು ಒಂದೇ ಸಮಯಕ್ಕೆ ನಮಾಝ್ ಮಾಡಬಹುದಾಗಿದೆ. ಮೊಘಲ್ ವಾಸ್ತುಶೈಲಿಯಲ್ಲಿ ಮಸೀದಿಯು ನಿರ್ಮಾಣಗೊಳ್ಳುತ್ತಿದೆ. ಮತ್ತು ಹಸಿರು ಕಟ್ಟಡದ ಪರಿಕಲ್ಪನೆಯನ್ನು ಅನುಸರಿಸಲಾಗುತ್ತಿದೆ. ವಿಶಾಲವಾದ ಪ್ರಾರ್ಥನಾ ಸಭಾಂಗಣದ ಜೊತೆಗೆ ಸೆಮಿನಾರ್ ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ವಿಶಾಲವಾದ ಸಭಾಂಗಣವನ್ನು ಹೊಂದಿದೆ. ಒಂದೇ ಸಮಯಕ್ಕೆ 1000 ಕ್ಕಿಂತಲೂ ಹೆಚ್ಚಿನ ಜನರಿಗೆ ಉಪಯೋಗಿಸಲು ಸಾಧ್ಯವಾಗುವ ಸ್ಥಳಾವಕಾಶವನ್ನು ಹೊಂದಿರುವ ದೊಡ್ಡ ಗ್ರಂಥಾಲಯ ಮತ್ತು ಇತರ ಸೌಲಭ್ಯಗಳು ಶಅರೇ ಮುಬಾರಕ್ ಮಸೀದಿಯಲ್ಲಿ ಇರಲಿದೆ. ಮಸೀದಿ ಕಟ್ಟಡವು ಎಂಟು ಎಕರೆಗಳನ್ನು ಒಳಗೊಂಡಿದೆ ಮತ್ತು ನಾಲ್ಕು ಎಕರೆ ಹಸಿರು ಬೆಲ್ಟ್ ಮತ್ತುತೋಟದಿಂದ ಸುತ್ತುವರಿದಿದೆ. ಶಅರೇ ಮುಬಾರಕ್ ಮಸೀದಿಯು ಮರ್ಕಝ್ ವಿದ್ಯಾಸಂಸ್ಥೆಯಲ್ಲಿರುವ ಪ್ರವಾದಿ ಮುಹಮ್ಮದರ ಕೇಶವೆಂದು ಆಧಾರ ರಹಿತವಾಗಿ ವಾದಿಸುವ ಕೇಶವನ್ನು ಸಂರಕ್ಷಿಸಿಡುವ ಸಲುವಾಗಿ ನಿರ್ಮಾಣವಾಗುತ್ತಿದೆ. ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರಚಿಸಿದ ಕೃತಿಗಳು[ಬದಲಾಯಿಸಿ] ಅರಬಿಕ್ ಕೃತಿಗಳು[ಬದಲಾಯಿಸಿ] • ಇಸ್ಮತುಲ್ ಅಂಬಿಯಾ • ಅಸ್ಸಿಯಾಸತುಲ್ ಇಸ್ಲಾಮಿಯ್ಯಾ • ಅಲ್-ವಹದತುಲ್ ಇಸ್ಲಾಮಿಯ್ಯಾ • ಅಲ್-ಇತಿಬಾಹು ವಲ್-ಇಬತಿದಾಹು • ರಿಯಾಲಹುತ್ತ್ವಾಲಿಬೀನ್ • ಇದ್ಹಾರುಲ್ ಫರ್ರ್ಹಾ ವಸುರ್ರೂರ್ ಬಿ ಮೀಲಾದಿನ್ನಬಿಯ್ಯಿ ಮಬ್ರೂರ್ • ಅಲ್-ಮೌಲಿದು ರವಿಯ್ಯ್ • ದಹ್‍ದೀಮುಲ್ ಅಖಾಬಿರ್ ವಹತಿರಾಮು ಶಾಹಿರ್ • ಫೈದಾನುಲ್ ಮುಸಾಲಾತ್ ಫೀ ಬಯಾನಿ ಇಜಾಝತ್ ಅಲ್-ಮತದಾವಿಲಿಯ್ಯಾ • ತರ್ಕೀಕತು ತಸವ್ವುಫ್ • ಅಲ್-ಬರಾಹಿನುಲ್ ಕ್ವತಿಯ್ಯಾ ಫಿರ್ ರಾದ್ದಿ ಅಲಲ್ ಖ್ವಾದಿಯಾನಿಯ್ಯಾ • ಅದೀಲತು ಸಲಾಲತಿ ತರಾವೀಹ್ • ಇಯಾಸುತ್ತವಾಬಿಲ್ ಇಂಕಾಝಿಲ್ ಮಿನ್ ಅಲ್ ಇಕಾಬ್ • ತಾಟ್ಸ್ ಆಫ್ ಮುಸ್ಲಿಂ ವರ್ಲ್ • ಆನ್ ಇಂಟ್ರಡಕ್ಷನ್ ಟು ದಿ ಸ್ಡಡೀ ಆಫ್ ಇಸ್ಲಾಂ • ದಿ ಹಜ್ಜ್ • ದಿ ಅಮೇರಿಕನ್ ಡೈರಿ • ದಿ ಹೋಲಿ ಪ್ರೊಫೆಟ್ಸ್ • ಕಾಂಗ್ರೆಗೇಶನಲ್ ಪ್ರೆಯರ್ ಇನ್ ಇಸ್ಲಾಂ • ಉಮೆನ್ ಅಂಡ್ ಫ್ರೈಡೇ ಪ್ರೆಯರ್ • ತರೀಕತ್- ಅ ಸ್ಟಡೀ ಗೌರವಗಳು, ಪ್ರಶಸ್ತಿಗಳು ಮತ್ತು ಅಂತರಾಷ್ಟ್ರೀಯ ಮನ್ನಣೆ[ಬದಲಾಯಿಸಿ] ಇಸ್ಲಾಮಿಕ್ ಪರಂಪರೆ ಮತ್ತು ಸಂಸ್ಕøತಿಯ ಸಂರಕ್ಷಣೆಯ ಸೇವೆಗಾಗಿ ಜಿದ್ದಾ ಮೂಲದ ಇಸ್ಲಾಮಿಕ್ ಪಾರಂಪರಿಕ ಸಂಸ್ಥೆ 2008 ಜನವರಿಯಲ್ಲಿ ಇಸ್ಲಾಮಿಕ್ ಪಾರಂಪರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜೋರ್ಡಾನಿನ ಓಐಸಿ ಟುಡೇ ಸಂಸ್ಥೆಯು 2016ರಲ್ಲಿ "ಜ್ಯುವೆಲ್ ಆಫ್ ಮುಸ್ಲಿಂ ವರ್ಲ್ ಬಿಝ್" ಪ್ರಶಸ್ತಿಯನ್ನು ನೀಡಿದೆ. ಜೋರ್ಡಾನಿನ ಪ್ರತಿಷ್ಠಿತ "ರೋಯಲ್ ಇಸ್ಲಾಮಿಕ್ ಸ್ಟ್ರಾಟಜಿಕ್ ಸ್ಟಡೀಸ್ ಸೆಂಟರ್" ಪ್ರಕಟಿಸಿದ ವಿಶ್ವದ ಐನೂರು ಪ್ರಭಾವಿ ಮುಸ್ಲಿಂ ನಾಯಕರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ. ↑ https://en.wikipedia.org/wiki/Markaz_Knowledge_City ↑ https://en.wikipedia.org/wiki/Shahre_Mubarak_Grand_Masjid "https://kn.wikipedia.org/w/index.php?title=ಕಾಂತಪುರಂ_ಎ_ಪಿ_ಅಬೂಬಕ್ಕರ್_ಮುಸ್ಲಿಯಾರ್&oldid=968017" ಇಂದ ಪಡೆಯಲ್ಪಟ್ಟಿದೆ
2020/02/26 14:42:27
https://kn.wikipedia.org/wiki/%E0%B2%95%E0%B2%BE%E0%B2%82%E0%B2%A4%E0%B2%AA%E0%B3%81%E0%B2%B0%E0%B2%82_%E0%B2%8E_%E0%B2%AA%E0%B2%BF_%E0%B2%85%E0%B2%AC%E0%B3%82%E0%B2%AC%E0%B2%95%E0%B3%8D%E0%B2%95%E0%B2%B0%E0%B3%8D_%E0%B2%AE%E0%B3%81%E0%B2%B8%E0%B3%8D%E0%B2%B2%E0%B2%BF%E0%B2%AF%E0%B2%BE%E0%B2%B0%E0%B3%8D
mC4
ಧರ್ಮೇಂದ್ರ - ಹೇಮಾ ಮಾಲಿನಿ ಮಾತುಕತೆ ಮುಗಿಯುವವರೆಗೆ ಕುಟುಂಬದವರ ಜೊತೆ ಕಾದು ಕೂತ ಮದುಮಗ ಜಿತೇಂದ್ರ ! | Vartha Bharati- ವಾರ್ತಾ ಭಾರತಿ ಸಿನಿಮೀಯ ಶೈಲಿಯ ಘಟನೆಯ ಕುರಿತು ಆತ್ಮಕಥೆಯಲ್ಲಿ ಉಲ್ಲೇಖ ವಾರ್ತಾ ಭಾರತಿ Feb 20, 2021, 7:40 PM IST ಮುಂಬೈ: ಬಾಲಿವುಡ್‍ನ ಡ್ರೀಮ್ ಗರ್ಲ್ ಹೇಮಾಮಾಲಿನಿ ತಾವು ತುಂಬಾ ಪ್ರೀತಿಸುತ್ತಿದ್ದ ಧರ್ಮೇಂದ್ರ ಅವರನ್ನು ವಿವಾಹವಾಗುವ ಮುನ್ನ ತಮ್ಮ ಜೀವನದಲ್ಲಿ ನಡೆದ ಕೆಲ ನಾಟಕೀಯ ಸನ್ನಿವೇಶಗಳನ್ನು ತಮ್ಮ ಆತ್ಮಕಥನ 'ಬಿಯಾಂಡ್ ದಿ ಡ್ರೀಮ್ ಗರ್ಲ್'ನಲ್ಲಿ ಬರೆದಿದ್ದಾರೆ. ಹೇಮಾಮಾಲಿನಿ ತಮ್ಮ ಕುಟುಂಬದ ಇಚ್ಛೆಯಂತೆ ಜೀತೇಂದ್ರ ಅವರನ್ನು ಇನ್ನೇನು ವಿವಾಹವಾಗಬೇಕೆನ್ನುವಷ್ಟರಲ್ಲಿ ಅವರ ಮನೆಬಾಗಿಲಿಗೆ ತುಸು ಮದ್ಯದ ನಶೆಯಲ್ಲಿದ್ದ ಧರ್ಮೇಂದ್ರ ಆಗಮಿಸಿ ನಂತರ ನಡೆದ ಚಕಮಕಿಯ ಕುರಿತು ಹೇಮಾ ತಮ್ಮ ಆತ್ಮಕಥನದಲ್ಲಿ ಉಲ್ಲೇಖಿಸಿದ್ದಾರೆ. ಅದಾಗಲೇ ವಿವಾಹವಾಗಿ ಮಕ್ಕಳನ್ನು ಹೊಂದಿದ್ದ ಧರ್ಮೇಂದ್ರ ಅವರನ್ನು ಹೇಮಾಮಾಲಿನಿ ವಿವಾಹವಾಗುವುದು ಆಕೆಯ ತಾಯಿಗೆ ಇಷ್ಟವಿರಲಿಲ್ಲ. ಆದರೆ ಧರ್ಮೇಂದ್ರ ಅವರನ್ನು ತುಂಬಾ ಪ್ರೀತಿಸುತ್ತಿದ್ದ ಹೇಮಾಮಾಲಿನಿ ಹೆಚ್ಚಾಗಿ ಸೆಟ್‍ನಲ್ಲಿ ಮಾತ್ರ ಅವರನ್ನು ಭೇಟಿಯಾಗುತ್ತಿದ್ದರು. ಈ ನಡುವೆ ಜೀತೇಂದ್ರ ಕೂಡ ಹೇಮಾಮಾಲಿನಿಯನ್ನು ಪ್ರೀತಿಸುತ್ತಿದ್ದರೂ ಆಕೆ ಅದಾಗಲೇ ಧರ್ಮೇಂದ್ರ ಅವರಿಗೆ ಮನಸೋತಿದ್ದಾರೆಂದು ತಿಳಿದು ಹೇಮಾರನ್ನು ತಮ್ಮ ಮನದಿಂದ ದೂರ ಸರಿಸಿ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಹೇಮಾ ಅವರ ತಾಯಿ ಹಾಗೂ ಕುಟುಂಬ ಅವರನ್ನು ಒತ್ತಾಯಪಡಿಸಿ ಜೀತೇಂದ್ರರನ್ನೇ ಮದುವೆಯಾಗುವಂತೆ ಸೂಚಿಸಿದ್ದರಿಂದ ಅನಿವಾರ್ಯವಾಗಿ ಒಪ್ಪಿದ್ದರು ಹೇಮಾ. ಹೀಗೆ ಅವಸವಸರವಾಗಿ ಮದುವೆಯ ಏರ್ಪಾಟೂ ನಡೆದು ಎರಡೂ ಕುಟುಂಬಗಳು ಮದುವೆ ನೆರವೇರಿಸಲು ಮದ್ರಾಸ್‍ಗೆ ತೆರಳಿದ್ದವು. ಆದರೆ ಸ್ಥಳೀಯ ಮಾಧ್ಯಮಕ್ಕೆ ಈ ಗುಟ್ಟು ತಿಳಿದು ವರದಿ ಮಾಡಿದಾಗ ಮುಂಬೈಯಲ್ಲಿದ್ದ ಧಮೇಂದ್ರಗೆ ದೊಡ್ಡ ಆಘಾತವಾಗಿತ್ತು. ಅವರು ತಡ ಮಾಡದೆ ಜೀತೇಂದ್ರ ಅವರ ಆಗಿನ ಸ್ನೇಹಿತೆ, ನಂತರ ಅವರನ್ನು ಮದುವೆಯಾಗಿದ್ದ ಶೋಭಾ ಸಿಪ್ಪಿಯ ಜತೆಗೆ ನೇರವಾಗಿ ಚೆನ್ನೈಗೆ ಬಂದು ಬಿಟ್ಟರು. ಚೆನ್ನೈಯಿಂದ ಸೀದಾ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಧರ್ಮೇಂದ್ರ ಆಗಮಿಸಿದ ವೇಳೆ ಮದುವೆ ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದು ಹೋಗಿತ್ತಲ್ಲದೆ ಹೇಮಾ ಅವರ ತಂದೆ ಧರ್ಮೇಂದ್ರರನ್ನು ಮನೆಯಿಂದ ಹೊರಗಟ್ಟಿದ್ದರಲ್ಲದೆ ಈಗಾಗಲೇ ವಿವಾಹವಾಗಿರುವ ನೀನು ನನ್ನ ಮಗಳನ್ನು ವಿವಾಹವಾಗಕೂಡದು ಎಂದಿದ್ದರು. ಆದರೆ ಧರ್ಮೇಂದ್ರ ಯಾವುದಕ್ಕೂ ಜಗ್ಗಲಿಲ್ಲ. ಕೊನೆಗೆ ಧರ್ಮೇಂದ್ರ ಮತ್ತು ಹೇಮಾ ಜತೆಯಾಗಿ ಒಂದು ಕೊಠಡಿಯಲ್ಲಿ ಮಾತನಾಡಿ ನಂತರ ಹೊರ ಬಂದ ಹೇಮಾ ತಾವು ಜೀತೇಂದ್ರ ಅವರನ್ನು ವಿವಾಹವಾಗುವುದಿಲ್ಲ ಎಂದಾಕ್ಷಣ ಜೀತೇಂದ್ರ ಕುಟುಂಬ ಅವಮಾನದಿಂದ ಅಲ್ಲಿಂದ ಹೊರನಡೆದಿತ್ತು. ನಂತರ ಹೇಮಾ ಧಮೇಂದ್ರ ಅವರನ್ನು ವಿವಾಹವಾಗಿದ್ದರು ಎಂದು ಆತ್ಮಕಥೆಯಲ್ಲಿ ಉಲ್ಲೇಖಿಸಲಾಗಿದೆ.
2021/12/06 19:59:15
https://www.varthabharati.in/article/cinema/279892
mC4
ರೈತ ಹೋರಾಟ ಬೆಂಬಲಿಸಿದ ಕೆನಡಾಕ್ಕೆ ಭಾರತದ ಎಚ್ಚರಿಕೆ! | Canadian PM Justin Trudeau reiterates stance on farmers protest amid diplomatic row with India pod Bangalore, First Published Dec 5, 2020, 12:57 PM IST ರೈತ ಹೋರಾಟ ಬೆಂಬಲಿಸಿದ ಕೆನಡಾಕ್ಕೆ ಭಾರತದ ಎಚ್ಚರಿಕೆ| ಕೃಷಿ ಕಾಯ್ದೆಗಳ ವಿರುದ್ಧದ ರೈತರ ಹೋರಾಟ ಆಂತರಿಕ ವಿಚಾರ| ಈ ವಿಚಾರದಲ್ಲಿ ಬಾಹ್ಯ ರಾಷ್ಟ್ರಗಳ ಹಸ್ತಕ್ಷೇಪ ಸಹಿಸಲಾಗಲ್ಲ| ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಭಾರತ ಸರ್ಕಾರದ ಸಂದೇಶ ನವದೆಹಲಿ(ಡಿ.05): ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆಗಿಳಿದ ಭಾರತೀಯ ರೈತರ ಪರ ಮಾತನಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ ಅವರ ನಡವಳಿಕೆ ಉಭಯ ದೇಶಗಳ ನಡುವಿನ ಬಾಂಧವ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು ಎಂದು ಭಾರತ ಎಚ್ಚರಿಸಿದೆ. ಟ್ರೂಡೋ ಹೇಳಿಕೆ ಸಂಬಂಧ, ಭಾರತದಲ್ಲಿನ ಕೆನಡಾ ರಾಯಭಾರಿಯನ್ನು ಕರೆಸಿಕೊಂಡಿದ್ದ ವಿದೇಶಾಂಗ ಸಚಿವಾಲಯ ಇಂಥದ್ದೊಂದು ಸಂದೇಶ ರವಾನಿಸಿದೆ. ಕೆನಡಾ ದೇಶದ ಸಚಿವರು, ಸಂಸದರು ಸೇರಿ ಇನ್ನಿತರ ಮುಖಂಡರ ಹೇಳಿಕೆಗಳು ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಬಳಿ ಉಗ್ರಗಾಮಿ ಚಟುವಟಿಕೆಗಳನ್ನು ಪ್ರಚೋದಿಸುತ್ತವೆ. ಇದರಿಂದ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಭದ್ರತೆ ಮತ್ತು ಸುರಕ್ಷತೆ ಪ್ರಶ್ನೆಗಳು ಉದ್ಭವಿಸಿವೆ. ಹೀಗಾಗಿ ಕೆನಡಾ ಸರ್ಕಾರ ಇಂಥ ಹೇಳಿಕೆಗಳಿಂದ ದೂರವಿರಬೇಕು. ಜೊತೆಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಕಚೇರಿಗಳಿಗೆ ಪೂರ್ಣ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದೆ. ಕೇಂದ್ರ ಸರ್ಕಾರ ಜಾರಿಗೆ ನಿರ್ಧರಿಸಿರುವ ವಿವಾದಿತ 3 ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರು ಕೈಗೊಂಡಿದ್ದ ಪ್ರತಿಭಟನೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ, ಶಾಂತಿಯುತ ಪ್ರತಿಭಟನೆಗಳ ಹಕ್ಕುಗಳನ್ನು ಕೆನಡಾ ಸರ್ಕಾರ ಸದಾ ಬೆಂಬಲಿಸಲಿದೆ. ಜೊತೆಗೆ ಭಾರತದಲ್ಲಿ ರೈತರ ಸ್ಥಿತಿ ಬಗ್ಗೆ ಕಳವಳಕಾರಿಯಾಗಿದೆ ಎಂದು ಹೇಳಿದ್ದರು. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
2021/01/17 19:08:58
https://kannada.asianetnews.com/india-news/canadian-pm-justin-trudeau-reiterates-stance-on-farmers-protest-amid-diplomatic-row-with-india-pod-qkuvdc
mC4
ವಿದ್ಯುತ್‌ ಪ್ರವಹಿಸಿ ಕಾರ್ಮಿಕ ಸಾವು | Prajavani ಬೆಂಗಳೂರು: ಕೆ.ಆರ್.ಪುರ ಸಮೀಪದ ಕೃಷ್ಣಾನಗರದಲ್ಲಿ ಕಟ್ಟಡದ ಕಾಮಗಾರಿ ವೇಳೆ ವಿದ್ಯುತ್‌ ಪ್ರವಹಿಸಿ ಚನ್ನಸಂದ್ರದ ವಿ.ನಾಗಭೂಷಣ್‌ (33) ಎಂಬುವರು ಮೃತಪಟ್ಟಿದ್ದಾರೆ. 'ಪುರುಷೋತ್ತಮ್‌ ಎಂಬುವರಿಗೆ ಸೇರಿದ ಕಟ್ಟಡದ ಮೂರನೇ ಮಹಡಿಯಲ್ಲಿ ಮೋಲ್ಡಿಂಗ್‌ಗಾಗಿ ಕಂಬಿ ಕಟ್ಟುವ ಕೆಲಸದಲ್ಲಿ ನಾಗಭೂಷಣ್‌ ಹಾಗೂ ಗಜೇಂದ್ರ ನಿರತರಾಗಿದ್ದರು. ಮನೆ ಮೇಲೆ ಹಾದು ಹೋಗಿರುವ ಹೈಟೆನ್ಷನ್‌ ತಂತಿಗೆ ಕಂಬಿಯು ತಗುಲಿದೆ. ಇದರಿಂದ ವಿದ್ಯುತ್‌ ಪ್ರವಹಿಸಿದ್ದು, ನಾಗಭೂಷಣ್‌ ಸುಟ್ಟು ಕರಕಲಾಗಿದ್ದಾರೆ. ಗಜೇಂದ್ರ ಅವರಿಗೂ ಸುಟ್ಟ ಗಾಯಗಳಾಗಿವೆ. ಪುರುಷೋತ್ತಮ್‌ ಹಾಗೂ ‌ಮೇಸ್ತ್ರಿ ರವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ' ಎಂದು ಪೊಲೀಸರು ತಿಳಿಸಿದರು.
2019/06/20 18:05:27
https://www.prajavani.net/news/article/2017/10/22/527645.html
mC4
ಪ್ರಸ್ತುತ ಟೂಲ್ ಕಿಟ್ ಪ್ರಸಂಗ – Prasthutha ಟೂಲ್ ಕಿಟ್ ಪ್ರಸಂಗ -ಫಯಾಝ್ ದೊಡ್ಡಮನೆ ಕಳೆದ ಕೆಲವು ದಿನಗಳಿಂದೀಚೆಗೆ ದೇಶದೆಲ್ಲೆಡೆ ಟೂಲ್‌ ಕಿಟ್‌ ನದ್ದೇ ಸುದ್ದಿ. ಟೂಲ್‌ ಕಿಟ್‌ಗಳನ್ನು ಬಳಸುವ ಆಂದೋಲನ ಜೀವಿಗಳು ದೇಶದ ಹೊಸ ಆಶಾಕಿರಣ ಜೀವಿಗಳಾಗಿ ಉದಯಿಸಿದ್ದಾರೆ. ಡಿಜಿಟಲ್ ಇಂಡಿಯಾದ ಮೂಲಕ ದೇಶವನ್ನೇ ಬದಲಾಯಿಸುತ್ತೇವೆ ಎಂದ ಪ್ರಧಾನಿ ಮತ್ತು ಪ್ರಭುತ್ವಗಳು ಟೂಲ್‌ ಕಿಟ್ ಎಂಬ ಡಿಜಿಟಲ್ ಆ್ಯಕ್ಟಿವಿಸಂಗೆ ತುಸು ಹೆಚ್ಚೇ ಹೆದರಿದಂತಿದೆ. ವಿಶ್ವದಾದ್ಯಂತ ಹೊಸ ಭಾಷ್ಯ ಬರೆಯುತ್ತಿರುವ ಡಿಜಿಟಲ್ ಆ್ಯಕ್ಟಿವಿಸಂ ನಮ್ಮ ನೆಲದಲ್ಲೂ ಸದ್ದು ಮಾಡಿ ಯುವ ಸಮೂಹವನ್ನು ಬಡಿದೆಬ್ಬಿಸುತ್ತಿದೆ. ಏನಿದು ಟೂಲ್‌ ಕಿಟ್? ಯಾವುದೇ ವಿಷಯವನ್ನು ಪ್ರಸ್ತುತಪಡಿಸಲು ಅಗತ್ಯವಾದ ಎಲ್ಲ ಮಾಹಿತಿಗಳನ್ನೊಳಗೊಂಡ ದಾಖಲೆಯೇ ಟೂಲ್‌ಕಿಟ್. ತಾವು ಪ್ರಸ್ತುತಪಡಿಸುವ ವಿಷಯಕ್ಕೆ ಅಗತ್ಯವಾದ ಅರ್ಜಿಗಳು, ಸಲಹೆಗಳು, ಸೂಚನೆಗಳು ಹಾಗೂ ತಮ್ಮ ಬೇಡಿಕೆಯ ಪೂರೈಕೆಗಾಗಿ ಯೋಜಿಸಿಟ್ಟಿರುವ ಕಾರ್ಯಕ್ರಮಗಳ ರೂಪುರೇಷೆಗಳೂ ಕೂಡಾ ಈ ಟೂಲ್‌ ಕಿಟ್ ಒಳಗೊಂಡಿರುತ್ತದೆ. ಪ್ರಸ್ತುತ ಡಿಜಿಟಲ್ ಆ್ಯಕ್ಟಿವಿಸಂ ಮೂಲಕ ಇಡೀ ಜಗತ್ತೇ ಒಂದಾಗಿ ಗಡಿ ದೇಶಗಳ ಎಲ್ಲೆಗಳನ್ನು ಮೀರಿದ ಆ್ಯಕ್ಟಿವಿಸಂಗೆ ಈ ಟೂಲ್‌ ಕಿಟ್‌ ಗಳು ತಕ್ಕುದಾದ ಮಾಹಿತಿಯನ್ನು ನೀಡುತ್ತಿವೆ. ಮತ್ತು ಇದರ ಮೂಲಕ ಕಾರ್ಯಕರ್ತರು ತಮಗೆ ಬೇಕಾದ ಜ್ಞಾನವನ್ನು ಸಂಪಾದಿಸಿ, ಆತ್ಮವಿಶ್ವಾಸದೊಂದಿಗೆ ತಮ್ಮ ವಿಷಯಕ್ಕನುಗುಣವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಗ್ರೇಟಾ ಥನ್‌ ಬರ್ಗ್ ಸ್ವಿಡಿಷ್ ಪ್ರಜೆಯಾದರೂ, ಜಗತ್ತಿನ ಹವಾಮಾನ ಬದಲಾವಣೆಯ ಹೋರಾಟದೊಂದಿಗೆ ಇಡೀ ಜಗತ್ತಿಗೆ ಬೇಕಾದವರು. ಸಣ್ಣ ವಯಸ್ಸಿನಲ್ಲಿಯೇ ಸ್ವಿಡಿಷ್ ಪಾರ್ಲಿಮೆಂಟ್ ಮುಂದೆ ಹವಾಮಾನ ಬದಲಾವಣೆಯ ತಡೆಯುವಿಕೆಗೆ ಸರಿಯಾದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದೇ ಶಾಲಾ ದಿನಗಳನ್ನು ತೊರೆದು ಕಟಿಬದ್ಧವಾಗಿಯೇ ನಿಂತವರು. ಫ್ರೈಡೆ ಫಾರ್ ಫ್ಯೂಚರ್ ಎಂಬ ಘೋಷಣೆಯೊಂದಿಗೆ ಮುಂದುವರಿದ ದೇಶಗಳ ವಿಲಾಸಿ ಜೀವನದ ವಿರುದ್ಧ ಬಲವಾಗಿಯೇ ದನಿಯೆತ್ತಿದವರು. ಜಗತ್ತಿನ ಇತರ ವಿಷಯಗಳಿಗೆ ಸ್ಪಂದಿಸುವಂತೆ, ಭಾರತೀಯ ರೈತರ ಹೋರಾಟದ ಬಗ್ಗೆಯೂ ಸಹಜವೆಂಬಂತೆ ಮಾತನಾಡಿದ್ದಾರೆ. ಗ್ರೇಟಾ ಬಳಸಿದ ಟೂಲ್‌ ಕಿಟ್ ದಾಖಲೆಗಳನ್ನು ಬದಲಾಯಿಸಿದ್ದೇ ಈಗ ದಿಶಾ ರವಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ದೆಹಲಿ ಪೊಲೀಸರು ನೀಡಿರುವ ಕಾರಣ. ಜೊತೆಗೆ ಮುಂಬೈ ವಕೀಲೆ ನಿಕಿತಾ ಜೇಕಬ್ ಮತ್ತು ಇಂಜಿನಿಯರ್ ಶಂತನು ಮಲಿಕ್ ವಿರುದ್ಧ ಕೂಡಾ ಪ್ರಕರಣ ದಾಖಲಿಸಿದ್ದಾರೆ. ಗ್ರೇಟಾ ಬಳಸಿದ ಟೂಲ್‌ಕಿಟ್ ಮೋದಿ ಸರಕಾರಕ್ಕೆ ಅಂತಾರಾಷ್ಟ್ರೀಯ ಪಿತೂರಿ ಎಂಬಂತೆ ಕಂಡಿರುವುದೇ ದುರಂತ. ಕಾಮಾಲೆ ಕಣ್ಣಿನ ಸರಕಾರಕ್ಕೆ ಭಿನ್ನದನಿಗಳೆಲ್ಲವೂ ಅಂತಾರಾಷ್ಟ್ರೀಯತೆ ಮಟ್ಟಕ್ಕೆ ತಲುಪುತ್ತಿವೆ. ಡಿಜಿಟಲ್ ಆ್ಯಕ್ಟಿವಿಸಂಗೆ ಬಳಸುವ ಟೂಲ್‌ ಕಿಟ್ ಕೂಡಾ ಸರಕಾರವನ್ನು ಈ ಮಟ್ಟಕ್ಕೆ ಬೆದರಿಸುತ್ತದೆ ಎಂದರೆ ರೈತರ ಹೋರಾಟದ ತೀವ್ರತೆಯ ಅರಿವಾಗಬಹುದು. ಜನವರಿ 26ರ ಹಿಂಸಾಚಾರಕ್ಕೆ ಪೂರ್ವಯೋಜಿತ ಸಂಚು ಮತ್ತು ಅದಕ್ಕಾಗಿಯೇ 1-8 ಕೋಟಿ ರೂಪಾಯಿಯನ್ನು ಸಿಖ್ ಫಾರ್ ಜಸ್ಟಿಸ್ ಸಂಘಟನೆಯು ನೀಡಿದೆ ಎಂದು ದೆಹಲಿ ಪೊಲೀಸರು ಎಫ್‌ ಐ ಆರ್‌ ನಲ್ಲಿ ಉಲ್ಲೇಖಿಸಿದ್ದಾರೆ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಎಂಬ ಸಂಘಟನೆಯ ವ್ಯಕ್ತಿಗಳ ಜೊತೆಗೂಡಿ ದಿಶಾ ಸಂಚು ರೂಪಿಸಿದ್ದಾಳೆ ಎಂದೂ ಎಫ್‌ ಐ ಆರ್ ಪ್ರತಿಪಾದಿಸುತ್ತಿದೆ. ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂಬುವುದು ನಿಷೇಧಿತ ಸಂಘಟನೆಯೇ ಮತ್ತು ಅವರ ಸ್ಥಾಪಕರ ಮೇಲೆ ಎಫ್‌ ಐ ಆರ್ ದಾಖಲಿಸಲಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂದೇ ಸರಕಾರದ ಪರ ವಕೀಲರು ಉತ್ತರಿಸಿದ್ದಾರೆ. ಕೇವಲ ಟ್ವೀಟ್‌ ಗಳ ಆಧಾರದ ಮೇಲೆ ಈ ನಿರ್ಣಯಕ್ಕೆ ಬರಲಾಗಿದೆ ಎಂಬ ಅವರ ಪೊಳ್ಳುವಾದವು ಸರಕಾರದ ನೇರ ಹಸ್ತಕ್ಷೇಪವನ್ನು ಎತ್ತಿ ತೋರಿಸುತ್ತದೆ ಮತ್ತು ಇದೊಂದು ಯೋಜಿತ ತನಿಖೆ ಎಂದು ಮತ್ತೊಮ್ಮೆ ನಿರೂಪಿಸುತ್ತದೆ. ಸೆಕ್ಷನ್ 124ಎ ಪ್ರಕಾರ, ಸರಕಾರದ ವಿರುದ್ಧ ಅಸಮಾಧಾನವನ್ನು ಪ್ರಚೋದಿಸುವುದೇ ದೇಶದ್ರೋಹ ಪ್ರಕರಣ ಎನಿಸಿಕೊಳ್ಳುತ್ತದೆ. ಈ ವ್ಯಾಖ್ಯೆಯಲ್ಲೇ ದೋಷವಿದೆ ಎಂದು ಲಾಗಾಯ್ತಿನಿಂದಲೂ ಸಂವಿಧಾನ ತಜ್ಞರು ವಾದಿಸುತ್ತಲೇ ಇದ್ದಾರೆ. ಆದರೆ ಬಿಜೆಪಿ ಸರಕಾರಕ್ಕೆ ಈ ಸೆಕ್ಷನ್ ವರವಾಗಿಯೇ ಪರಿಣಮಿಸಿದೆ. ಸರಕಾರದ ವಿರುದ್ಧ ಪರಿಣಾಮಕಾರಿ ಧ್ವನಿಗಳಾಗಿ ಜನಾಭಿಪ್ರಾಯಕ್ಕೆ ಕಾರಣವಾಗುವ ಪ್ರತಿ ಸಂದರ್ಭದಲ್ಲೂ ಈ ಸೆಕ್ಷನ್ ಮೂಲಕ ದೇಶದ್ರೋಹದ ಪಟ್ಟವನ್ನು ನೀಡುತ್ತಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ಭಿನ್ನಧ್ವನಿಗಳಿಂದ ಹಿಡಿದು ಪೌರತ್ವ ಹೋರಾಟ, ನಾಟಕಗಳ ಪ್ರದರ್ಶನ, ಕವನಗಳ ಭಿನ್ನ ಧ್ವನಿ, ಪ್ರಧಾನಿಗೆ ಬರೆದ ಪತ್ರಗಳೂ ಕೂಡಾ ದೇಶದ್ರೋಹಗಳಾಗುತ್ತಿವೆ. ಹತ್ರಾಸ್ ಅತ್ಯಾಚಾರದ ವಿರುದ್ಧ ಮಾತನಾಡಿದರೂ ದೇಶದ್ರೋಹವಾಗುತ್ತಿರುವುದು ಹೊಸ ಪರಿಭಾಷೆ. ದಶಕದ ಇತಿಹಾಸವನ್ನು ಅವಲೋಕಿಸಿದರೆ, ಯುಪಿಎ-2 ಅವಧಿಯಲ್ಲಿ 279 ಇದ್ದ ಪ್ರಕರಣಗಳ ಸಂಖ್ಯೆ ಎನ್‌ ಡಿಎ ಅವಧಿಯಲ್ಲಿ 519ಕ್ಕೇರಿದೆ. ಉ.ಪ್ರ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಮಾತನಾಡಿದ 144 ಪ್ರಕರಣಗಳಾದರೆ, ಪ್ರಧಾನಿ ವಿರುದ್ಧದ 149 ಧ್ವನಿಗಳಿಗೆ ಪ್ರಕರಣ ದಾಖಲಿಸಲಾಗಿದೆ; ಆರೋಪಿಗಳ ಒಟ್ಟು ಸಂಖ್ಯೆ 10 ಸಾವಿರಕ್ಕೂ ಹೆಚ್ಚು. ಟೂಲ್‌ ಕಿಟ್ ಪ್ರಕರಣ ಇದೀಗ ಹೊಸ ಸೇರ್ಪಡೆಯಾಗಿದೆ. 'ಆಂದೋಲನ ಜೀವಿ' ಇಂಡಿಯಾದ ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಿವಿಧ ಪಕ್ಷಗಳ ಮುಖಂಡರು ಪ್ರತಿಕ್ರಿಯಿಸಿದ ನಂತರ ಪ್ರಧಾನಿಗಳೂ ಕೂಡಾ ವಂದನೆಯರ್ಪಿಸುವುದು ವಾಡಿಕೆ. ಈ ಪ್ರಕ್ರಿಯೆಗೆ ಗಾಂಭೀರ್ಯದ ಸೊಬಗಿದೆ; ಹಾಗೂ ಸಂಸತ್ತಿನ ವಿಶಿಷ್ಟ ದಾಖಲೆಯಾಗಿ ಅಚ್ಚುಗೊಳ್ಳುತ್ತದೆ. ತೂರಿಬಂದ ವಿವಿಧ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ವಿಶ್ವಾಸಗಳಿಸಬೇಕಾದ ಪ್ರಧಾನಿ ಮೋದಿ, ರೈತರ ಹೋರಾಟ ಮತ್ತು ಇತರ ಚಳುವಳಿಗಳನ್ನು ಹೀಯಾಳಿಸುವ ಕೆಲಸಕ್ಕೆ ಇಳಿದದ್ದು ಘನತೆಗೆಟ್ಟ ಸ್ಥಿತಿಗಿರುವ ದ್ಯೋತಕ. ಹಲವಾರು ವಿಷಯಗಳಲ್ಲಿ ಜನರ ಧ್ವನಿಯಾಗುತ್ತಿರುವ ಹೋರಾಟಗಾರರನ್ನು 'ಆಂದೋಲನ ಜೀವಿ' ಎಂದೂ, ಇವರು ಹೋರಾಟಗಳನ್ನೇ ವೃತ್ತಿಯಾಗಿಸಿದ್ದಾರೆ ಎಂದು ಹೇಳುವ ಮೂಲಕ ಅವಮಾನ ಮಾಡುವ ಪ್ರಯತ್ನ ಮಾಡಿದ್ದಾರೆ. ತಾನೊಬ್ಬ ತುರ್ತುಪರಿಸ್ಥಿತಿಯ ವಿರುದ್ಧ ಆಂದೋಲನದಲ್ಲಿ ರಾಜಕೀಯಕ್ಕಿಳಿದ ಅಪ್ಪಟ ಹೋರಾಟಗಾರ ಎಂದು ತನ್ನನ್ನು ತಾನು ಬಿಂಬಿಸುವ ಪ್ರಧಾನಿ ಆಂದೋಲನಗಳಿಗೆ ಹೆದರುತ್ತಿರುವುದು ವಿಪರ್ಯಾಸ. ತುರ್ತುಪರಿಸ್ಥಿತಿಯ ದಿನಗಳನ್ನು ಮೆಲುಕು ಹಾಕುವ ಬಿಜೆಪಿಯ ಮೇರು ನಾಯಕತ್ವ, ರಥಯಾತ್ರೆಯ ಆಂದೋಲನದ ಮೂಲಕ ಕೋಮು ಸಂಘರ್ಷಗಳನ್ನು ಹುಟ್ಟಿಸಿ ಅಧಿಕಾರ ಹಿಡಿದ ಬಿಜೆಪಿ ಪಕ್ಷಕ್ಕೆ ನೈಜ ಜನಪರ ಆಂದೋಲನಗಳು ಈಗ ಕಹಿ ಅನುಭವ ನೀಡುತ್ತಿರುವಾಗ ಆಂದೋಲನ ಜೀವಿಗಳ ಬಗ್ಗೆ ಭಯಗೊಂಡಿರುವುದು ಸಹಜವಾಗಿಯೇ ಇದೆ. ತಮ್ಮ ವೈಫಲ್ಯದ ಬೆತ್ತಲೆ ಜಗತ್ತು ಮತ್ತಷ್ಟು ನಗ್ನಗೊಳ್ಳುತ್ತಿರುವಾಗ ಸ್ವಾಭಾವಿಕವಾದ ಆತಂಕ ಪ್ರಧಾನಿಗಳನ್ನು ಘನತೆ ಬಿಟ್ಟು ಮಾತನಾಡಿಸುವ ಹಂತಕ್ಕೆ ತಂದು ನಿಲ್ಲಿಸಿದೆ. ಆಂದೋಲನ ಜೀವಿಗಳೇ ಪ್ರಸಕ್ತ ಇಂಡಿಯಾದ ಭರವಸೆ. ಪ್ರಜಾಪ್ರಭುತ್ವವನ್ನು ಬುಡಮೇಲುಗೊಳಿಸಿ ಕಾರ್ಪೊರೇಟ್ ಕುಳಗಳನ್ನು ಬಹಿರಂಗವಾಗಿ ಪೋಷಿಸುತ್ತಿರುವ ಫ್ಯಾಶಿಸ್ಟ್ ಸರ್ವಾಧಿಕಾರ ಸರಕಾರವನ್ನು ಹೋರಾಟಗಾರರು ನಿರಂತರವಾಗಿ ವಿರೋಧಿಸುತ್ತಿದ್ದಾರೆ. ಈ ಮೂಲಕ ಅವರು ತಮ್ಮ ಅಮೂಲ್ಯ ಜೀವಗಳನ್ನು ಪಣಕ್ಕಿಟ್ಟಿರುವುದು ಸುಳ್ಳಲ್ಲ. ಇತರರಂತೆ ವೌನವಾಗಿ ಜೀವಿಸುವ ಆಯ್ಕೆ ತಮ್ಮ ಮುಂದಿದ್ದರೂ ಅದನ್ನು ಅಪ್ಪಿಕೊಳ್ಳದೆ ಕಷ್ಟದ ಹಾದಿಗಳನ್ನು ತುಳಿದು ನಿರಂತರ ಕೇಸುಗಳಿಗೆ ಬಲಿಯಾಗುತ್ತಿದ್ದರೂ ಜನಹಿತಕ್ಕಾಗಿ ತಮ್ಮ ಹೋರಾಟಗಳನ್ನು ಮತ್ತೆ ಮತ್ತೆ ಸಂಘಟಿಸುತ್ತಿದ್ದಾರೆ. ಅದರಲ್ಲಿ ಕೆಲವು ಭಾಗ ಅಧಿಕಾರದ ಲಾಲಸೆಗಳಿಗೆ ಬಲಿಯಾಗಿ ಆಂದೋಲನ ಜೀವಿ ಪಟ್ಟವನ್ನು ಕಳೆದುಕೊಂಡರೆ, ಇನ್ನೊಂದು ಭಾಗ ಕೇಂದ್ರ ಸರಕಾರ ವಿವಿಧ ಕೇಸುಗಳಿಗೆ ಹೆದರಿ ಆಂದೋಲನ ಜೀವಿಗಳಾಗಿ ಉಳಿದಿಲ್ಲ. ಆದರೆ ಗೊಡ್ಡು ಬೆದರಿಕೆಗಳಿಗಾಗಲೀ, ನೈಜ ಬೆದರಿಕೆಗಳಿಗಾಗಿ ಹೆದರದೆ ತಮ್ಮನ್ನು ತಾವು ಕಷ್ಟಕ್ಕೆ ದೂಡುತ್ತಿರುವ ನೈಜ ಆಂದೋಲನ ಜೀವಿಗಳೇ ಇಂಡಿಯಾದ ನಿಜವಾದ ವಿರೋಧ ಪಕ್ಷಗಳಾಗಿ ಕೆಲಸ ಮಾಡುತ್ತಿರುವುದು. ಸಂಸತ್ತಿನಲ್ಲಿ ವಿರೋಧ ಪಕ್ಷಗಳು ವೌನ ಪಕ್ಷಗಳಾಗಿವೆ; ನೈಜ ವಿರೋಧಗಳನ್ನು ದಾಖಲಿಸುತ್ತಿಲ್ಲ. ಅಥವಾ ವಿರೋಧ ದಾಖಲಿಸಿಕೊಳ್ಳುವಾಗ ನಾಟಕಗಳನ್ನು ಮಾಡುತ್ತಿವೆ. ಅದರಿಂದಾಗಿ ಸೃಷ್ಟಿಯಾದ ನಿರ್ವಾತಗಳನ್ನು ಆಂದೋಲನ ಜೀವಿಗಳು ತುಂಬ ಬೇಕಾಯಿತು. ಜೆಎನ್‌ ಯು, ಜಾಮಿಯಾ ಮಿಲ್ಲಿಯಾದ ಆಂದೋಲನ ಜೀವಿಗಳಿಂದ ರೋಹಿತ್ ವೇಮುಲ ಹೋರಾಟಗಳಾಗಿರಬಹುದು ಯಾ ನಿರ್ಭಯಾ ಪರ ನಿಂತ ಯುವ ಸಮೂಹಗಳಾಗಿರಬಹುದು, ಎಲ್ಲರೂ ಆಂದೋಲನ ಜೀವಿಗಳೇ ಆಗಿದ್ದಾರೆ. ಆಂದೋಲನ ಜೀವಿಗಳ ಸಂಖ್ಯೆ ಹಠಾತ್ ಏರಿಕೆಯಾದದ್ದು ಮತ್ತು ಆಂದೋಲನ ಜೀವಿಗಳಿಗೆ, ಆಂದೋಲನಗಳಿಗೆ ಹೊಸ ಭಾಷ್ಯ ಬರೆದದ್ದು ಸಿಎಎ ವಿರೋಧಿ ಹೋರಾಟಗಳು. 2014ರ ನಂತರ ಗೊಂದಲದಲ್ಲಿಯೇ ದಿನ ದೂಡುತ್ತಿದ್ದ ಇಂಡಿಯಾದ ನಾಗರಿಕರಿಗೆ ಸ್ಪಷ್ಟ ಬಹುಮತ ಇದ್ಯಾಗ್ಯೂ, ಬಿಜೆಪಿ ಸರಕಾರವನ್ನು ಅಲುಗಾಡಿಸಬಹುದು ಎಂದು ಧೈರ್ಯ ತುಂಬಿದ್ದು ಸಿಎಎ-ಎನ್‌ ಆರ್‌ ಸಿ ವಿರೋಧಿ ಚಳುವಳಿಗಳು. ಮುಸ್ಲಿಮರ ನಾಯಕತ್ವವಿದ್ದರೂ ಕೇವಲ ಮುಸ್ಲಿಮರಿಗೆ ಸೀಮಿತಗೊಳ್ಳದೆ ಇಡೀ ಇಂಡಿಯಾದ ಜನರನ್ನು ಒಳಗೊಳ್ಳುವಂತೆ ಮಾಡಿದ ಶ್ರೇಯಸ್ಸು ಇದಕ್ಕಿದೆ. ಆಗಿನ ಆಂದೋಲನ ಜೀವಿಗಳಿಗೆ ಆಹಾರಗಳನ್ನೊದಗಿಸಿದ ಪಂಜಾಬ್ ಆಂದೋಲನ ಜೀವಿಗಳು ಇಂದು ಸರಕಾರದ ವಿರುದ್ಧ, ಕೃಷಿ ಕಾನೂನುಗಳ ವಿರುದ್ಧ ಆಂದೋಲನಕ್ಕಿಳಿದಿದ್ದಾರೆ. ಈಗ ಅವರಿಗೆ ಸಕಲ ನೆರವುಗಳನ್ನು ನೀಡುತ್ತಿರುವ ಅಂದಿನ ಆಂದೋಲನ ಜೀವಿಗಳು. ವಾಕ್ಯುಪೈ ವಾಲ್ ಸ್ಟ್ರೀಟ್ ಮೂವ್ ಮೆಂಟ್ ಮೂಲಕ ಈಗಿನ ಪೀಳಿಗೆಗೆ ಹೊಸ ರೂಪದ ಚಳುವಳಿಯನ್ನು ಅಮೆರಿಕದ ಆಂದೋಲನ ಜೀವಿಗಳು ಕಲಿಸಿದರು. ಅದೇ ಪರಿಭಾಷೆಯು ಜಗತ್ತಿನ 82 ದೇಶಗಳ 951 ನಗರಗಳಿಗೂ ವ್ಯಾಪಿಸಿದಾಗ ಜಗತ್ತಿನ ಆಂದೋಲನ ಜೀವಿಗಳೆಲ್ಲರೂ ಒಂದೇ ಎಂದು ತೋರಿಸಿಕೊಟ್ಟಿದ್ದರು. ದೆಹಲಿಯ ಶಾಹೀನ್‌ ಬಾಗ್ ರೂಪದ ಆಂದೋಲನವು ಅದರಿಂದ ಸ್ಫೂರ್ತಿಗೊಂಡ ಮುಂದುವರಿದ ರೂಪವೇ ಆಗಿದೆ. ರಿಹಾನ್ನಾ, ಗ್ರೇಟಾ ಥನ್‌ ಬರ್ಗ್‌ ರಂತವರೂ ತಮ್ಮ ಭಾಷೆಯಲ್ಲಿಯೇ ಹೇಳುವುದಾದರೆ ಆಂದೋಲನ ಜೀವಿಗಳು. ರೈತ ಹೋರಾಟಗಳನ್ನು ನಡೆಸುತ್ತಿರುವವರೂ ಆಂದೋಲನ ಜೀವಿಗಳೇ ಆಗಿದ್ದಾರೆ. ಮಯನ್ಮಾರಿನ ರೋಹಿಂಗ್ಯಾ ಜನರು, ಹಾಂಕಾಂಗ್‌ ನ ಯುವ ಹೋರಾಟಗಾರರು, ಫೆಲೆಸ್ತೀನಿನ ಸ್ವಾತಂತ್ರ್ಯ ಸೇನಾನಿಗಳು, ಟಿಯೆನ್‌ ಮೆನ್ ಸ್ಕ್ವೇರ್ ಹೋರಾಟಗಾರರು, ಜಾರ್ಜ್‌ ಫ್ಲಾಯ್ಡ್ ಗಾಗಿ ಮಿಡಿದ ಮನಸುಗಳು, ಆಫ್ರಿಕಾದ ನೀಗ್ರೋ ಹೋರಾಟಗಾರರು, ಅರಬ್ ಜಗತ್ತಿನ ಪ್ರಜಾಪ್ರಭುತ್ವದ ಪರವಾಗಿ ಹೋರಾಡಿದವರು ಸೇರಿದಂತೆ ಎಲ್ಲರೂ ಆಂದೋಲನ ಜೀವಿಗಳೇ ಆಗಿದ್ದಾರೆ. ಹಾಗಾಗಿ ಪ್ರಧಾನಿ ಮೋದಿಗೆ ಅದು ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಜಿ (ಎಫ್ ಡಿಐ) ಎಂಬಂತೆ ಕಂಡಿದೆ. ಜಗತ್ತಿನ ಆಂದೋಲನ ಜೀವಿಗಳೆಲ್ಲರೂ ಒಂದೇ ಎಂಬಂತೆ ಇರುವಾಗ 'ಫಾರಿನ್' ಪದ ಬಳಕೆ ಉಚಿತವಲ್ಲ; ಎಲ್ಲರೂ ಜನರ ಮನಸ್ಸುಗಳಿಗೆ ಮಿಡಿಯುವ ಮನಗಳಾಗಿರುವುದರಿಂದ ಡಿಸ್ಟ್ರಕ್ಟಿವ್ ಆಗಿರದೆ ಕನ್‌ ಸ್ಟ್ರಕ್ಟಿವ್ ಎನಿಸಿಕೊಳ್ಳುತ್ತಾರೆ. ಎಲ್ಲರೂ ಜನಪರ ಐಡಿಯಾಲಜಿಯನ್ನೆ ಪ್ರಮುಖವಾಗಿಸಿದ್ದಾರೆ. ಹಾಗಾಗಿ ಮೋದಿಯ ಎಫ್ ಡಿಐ ತಂತ್ರವು ಟುಸ್ಸೆಂದಿರುವುದು ಸ್ವಾಭಾವಿಕವಾಗಿದೆ. ಪ್ರಧಾನಿಯ 'ಆಂದೋಲನ ಜೀವಿ' ಪದಬಳಕೆಯು ಹೋರಾಟಗಾರರಿಗೆ ಸ್ಫೂರ್ತಿಯನ್ನೇ ನೀಡಿದೆ. ಬಿಜೆಪಿ ಐಟಿ ಸೆಲ್‌ ಗೆ ಬೇಕಾಗಿ ಹೊಸ ಪದ ಪ್ರಯೋಗ ಮಾಡಿದ್ದಾರಾದರೂ, ಅದು ಹೋರಾಟಗಾರರಿಗೆ ಹೊಸ ಅಸ್ಮಿತೆಯಾಗಿ ಬದಲಾಗಿದೆ. ತಾವು ಉದುರಿಸಿದ ಮಂತ್ರ ತಮಗೆ ತಿರುಗುಮಂತ್ರವಾದಾಗ ಪ್ರಧಾನಿ ಮೋದಿಯೂ ಮೌನವಾಗಿದ್ದಾರೆ. ಜಗತ್ತಿನ ಆಂದೋಲನ ಜೀವಿಗಳೆಲ್ಲರೂ ಒಟ್ಟು ಸೇರುತ್ತಿರುವುದು ಈಗ ಡಿಜಿಟಲ್ ಆ್ಯಕ್ಟಿವಿಸಂ ಮೂಲಕ ಎಂದರೆ ತಪ್ಪಲ್ಲ. ಹಾಗಾಗಿ ಈ ರೂಪದ ಆ್ಯಕ್ಟಿವಿಸಂಗೆ ಟೂಲ್‌ ಕಿಟ್ ಬಹಳ ಅಗತ್ಯವೇ ಆಗಿದೆ. ರಿಹಾನ್ನಾಳ ಕೆಲವು ಪದದ ಟ್ವೀಟ್‌ ಗೆ ಇಂಡಿಯಾದ ಸಿನಿಮಾ, ಕ್ರಿಕೆಟ್ ಜಗತ್ತಿನ ಅಂಜುಬುರುಕರೆಲ್ಲರೂ ಬೆವರು ಸುರಿಸಬೇಕಾಗಿ ಬಂದಿರುವುದು ಡಿಜಿಟಲ್ ಆ್ಯಕ್ಟಿವಿಸಂಗೆ ಸಿಗುತ್ತಿರುವ ಯಶಸ್ಸುಗಳೇ ಆಗಿವೆ. ಹಾಗಾಗಿ ಒಕ್ಕೂಟ ಸರಕಾರ ಈ ರೀತಿಯಾಗಿ ಭಯಗೊಂಡಿರುವುದು. ಇದೀಗ ಐಟಿ ಕಾಯಿದೆಗಳನ್ನು ಇನ್ನಷ್ಟು ಬಿಗಿಗೊಳಿಸಲು ಪ್ರಯತ್ನಿಸಬಹುದು. ಟೂಲ್‌ ಕಿಟ್ ಪ್ರಕರಣ ಕೂಡ ಬೆದರಿಸುವ ಮತ್ತೊಂದು ತಂತ್ರವಷ್ಟೆ. ಯಾವುದೇ ಬೆದರಿಸುವ ಕಾಯಿದೆ ಬಂದರೂ ಆಂದೋಲನ ಜೀವಿಗಳಿಗೆ 'ಅದೇನು ಹೊಸದಲ್ಲ' ಎಂಬ ಸಿನಿಕತನ ಇದ್ದೇ ಇರುತ್ತದೆ.
2021/06/16 22:54:00
https://prasthutha.com/%E0%B2%9F%E0%B3%82%E0%B2%B2%E0%B3%8D-%E0%B2%95%E0%B2%BF%E0%B2%9F%E0%B3%8D-%E0%B2%AA%E0%B3%8D%E0%B2%B0%E0%B2%B8%E0%B2%82%E0%B2%97/
mC4
ಕುಡಿದ ಮತ್ತಿನಲ್ಲಿ ತನ್ನ ಕಣ್ಣಗುಡ್ಡೆಗಳನ್ನು ಕಳೆದುಕೊಂಡರೂ, ಆತನಿಗೆ ಗೊತ್ತೇ ಆಗಿಲ್ಲವಂತೆ!! | He Lost His Eyeball And Din't Realise! - Kannada BoldSky 36 min ago ಮೊಟ್ಟೆ ಬೇಯಿಸುವಾಗ ಈ ತಪ್ಪುಗಳನ್ನು ಮಾಡಬೇಡಿ | Updated: Wednesday, March 13, 2019, 11:17 [IST] ಮದ್ಯಪಾನದಿಂದಾಗಿ ಆರೋಗ್ಯ ಕೆಡುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಕೆಲವರು ವಿಪರೀತವಾಗಿ ಕುಡಿದು ಮೈಮೇಲೆ ಪರಿಜ್ಞಾನವೇ ಇರುವುದಿಲ್ಲ. ತಮ್ಮ ದೇಹ ಅಥವಾ ಸುತ್ತಮುತ್ತಲು ಏನಾಗುತ್ತಿದೆ ಎನ್ನುವುದೇ ತಿಳಿದಿರುವುದಿಲ್ಲ. ಕುಡಿಯುವುದರಿಂದ ಆಗುವಂತಹ ಅನಾಹುತಗಳ ಬಗ್ಗೆ ಆಗಾಗ ಸುದ್ದಿಯಾಗುತ್ತಿದ್ದರೂ ಕುಡಿಯುದನ್ನು ಮಾತ್ರ ಜನರು ಕಡಿಮೆ ಮಾಡುವುದಿಲ್ಲ. ಅದರಲ್ಲೂ ಕೆಲವರು ಮಿತಿಮೀರಿ ಕುಡಿಯುತ್ತಾರೆ. ಇದು ದೇಹಕ್ಕೆ ಮಾತ್ರವಲ್ಲದೆ, ಸುತ್ತಲಿನವರಿಗೂ ತುಂಬಾ ಅಪಾಯಕಾರಿ. ಕುಡಿತದಲ್ಲಿ ಮತ್ತಿನಲ್ಲಿ ತಮಗೆ ಏನಾಗುತ್ತಿದೆ ಎನ್ನುವುದೇ ಕೆಲವು ಜನರಿಗೆ ತಿಳಿದಿರುವುದಿಲ್ಲ. ಅಂತಹ ಒಂದು ಘಟನೆ ಬಗ್ಗೆ ಈ ಲೇಖನದಲ್ಲಿ ಹೇಳಲು ಹೊರಟಿರುವುದು. ಇಲ್ಲೊಬ್ಬ ವ್ಯಕ್ತಿ ವಿಪರೀತವಾಗಿ ಕುಡಿದು ಮಾಡಿಕೊಂಡಿರುವ ಅವಾಂತರವು ಇದಕ್ಕೆ ಸಾಕ್ಷಿಯಾಗಿದೆ. ವಿಪರೀತವಾಗಿ ಕುಡಿದಿದ್ದ ವ್ಯಕ್ತಿಯು ಅಪಘಾತಕ್ಕೆ ಸಿಲುಕಿ ಆತನ ಕಣ್ಣಗುಡ್ಡೆಗಳು ಹೊರಗೆ ಬಂದು ಗಂಟೆಗಳ ಕಾಲ ನೆಲದ ಮೇಲೆ ಬಿದ್ದಿದ್ದರೂ ಕುಡಿದ ಮತ್ತಿನಲ್ಲಿದ್ದ ಆತನಿಗೆ ಏನೂ ತಿಳಿದಿರಲಿಲ್ಲ. ಈ ವಿಚಿತ್ರ ಘಟನೆ ಬಗ್ಗೆ ನೀವು ಮುಂದಕ್ಕೆ ಓದಿಕೊಂಡು ಹೋಗಿ... ಈ ಘಟನೆ ನಡೆದಿರುವು ಚೀನಾದಲ್ಲಿ 26ರ ಹರೆಯದ ವ್ಯಕ್ತಿ(ಹೆಸರನ್ನು ಬಹಿರಂಗಪಡಿಸಲಾಗಿಲ್ಲ) ವಿಪರೀತವಾಗಿ ಕುಡಿದ ಮತ್ತಿನಲ್ಲಿ ಇದ್ದಾಗ ಆತ ಅಪಘಾತಕ್ಕೆ ಸಿಲುಕಿದ. ಚಿನಾದ ಶಾನ್ ಡಾಂಗ್ ಪ್ರಾಂತ್ಯದ ಜಿನಾಣ್ ನ ಲಿಕ್ಸಿಯಾ ಜಿಲ್ಲೆಯಲ್ಲಿ ವಾಸವಿದ್ದ ಈ ವ್ಯಕ್ತಿ ವಿಪರೀತ ಕುಡಿದ ಮತ್ತಿನಲ್ಲಿ ಜಾರಿ ಬಿದ್ದಿದ್ದ. Most Read: ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಮಹಿಳೆಗೆ ಶಾಕ್! ಆಹಾರದಲ್ಲಿ ಸಿಕ್ಕಿತ್ತು 40 ಜಿರಳೆ!! ಆತನ ಕುಟುಂಬವು ಆಸ್ಪತ್ರೆಗೆ ದಾಖಲಿಸಿತು ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ ಆತನ ಕುಟುಂಬ ಸದಸ್ಯರು ಇದನ್ನೆಉ ನೋಡಿ ಆಸ್ಪತ್ರೆಗೆ ದಾಖಲು ಮಾಡಿದರು. ಅಪಘಾತವಾದ ಆರು ಗಂಟೆಗಳ ಬಳಿಕ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವ್ಯಕ್ತಿಯ ಕಣ್ಣಗುಡ್ಡೆಯೇ ಇಲ್ಲವೆಂದು ವೈದ್ಯರು ತಿಳಿಸಿದರು! ವೈದ್ಯರು ಆ ವ್ಯಕ್ತಿಯನ್ನು ಪರೀಕ್ಷೆ ಮಾಡಿದಾಗ ಅವರಿಗೆ ಅಚ್ಚರಿ ಕಾದಿತ್ತು. ಅದೇನೆಂದರೆ ಆತನ ಕಣ್ಣ ಗುಡ್ಡೆಗಳೇ ಮಾಯವಾಗಿದ್ದವು. ಕೆಲವೇ ಸಮಯದ ಬಳಿಕ ವೈದ್ಯರಿಗೆ ಫೋನ್ ಕರೆಯೊಂದು ಬಂದಿದ್ದು, ಮನೆಯಲ್ಲಿ ಕಣ್ಣಗುಡ್ಡೆಯು ಪತ್ತೆಯಾಗಿದೆ ಎಂದು ಕುಟುಂಬದವರು ತಿಳಿಸಿದರು. ದೀರ್ಘಕಾಲ ತನಕ ಕಣ್ಣಗುಡ್ಡೆಯು ಬಿದ್ದುಕೊಂಡಿತ್ತು! ಕಣ್ಣಗುಡ್ಡೆಯು ದೀರ್ಘಕಾಲದ ತನಕ ನೆಲದ ಮೇಲೆ ಬಿದ್ದುಕೊಂಡಿದ್ದ ಕಾರಣದಿಂದಾಗಿ ಇದನ್ನು ಸರಿಪಡಿಸಲು ಸಾಧ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕೆಲವು ಗಂಟೆಗಳ ಕಾಲ ಕಣ್ಣಗುಡ್ಡೆಯು ನೆಲದ ಮೇಲಿದ್ದ ಕಾರಣದಿಂದಾಗಿ ಅದು ಕಲುಷಿತವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆ ವ್ಯಕ್ತಿ ಕಣ್ಣು ಕಳಕೊಂಡ ಆ ವ್ಯಕ್ತಿಯ ಸೂಕ್ಷ್ಮ ಸ್ನಾಯುಗಳು ಮತ್ತು ಆಪ್ಟಿಕ್ ನರಗಳು ಹೊರಗೆ ಬಂದಿದ್ದ ಕಾರಣದಿಂದಾಗಿ ಏನೂ ಮಾಡುವಂತೆ ಇರಲಿಲ್ಲ ಮತ್ತು ಇದರಿಂದ ಸೋಂಕು ಬರುವುದನ್ನು ತಪ್ಪಿಸಲು ಕೂಡ ಸಾಧ್ಯ ವಾಗಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ಗಾಯಕ್ಕೆ ಹೊಲಿಗೆ ಹಾಕಲಾಗಿದೆ. ಆಘಾತದಿಂದ ಆ ವ್ಯಕ್ತಿಯು ಈಗ ಚೇತರಿಸಿಕೊಳ್ಳುತ್ತಿದ್ದಾನೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.
2020/02/24 11:32:56
https://kannada.boldsky.com/insync/pulse/2019/he-lost-his-eyeball-din-t-realise-019704.html
mC4
ಮದಕರಿ ವಿವಾದದಲ್ಲಿ ದರ್ಶನ್ ಬಗ್ಗೆ ಹೇಳಿಕೆ ಕೊಟ್ಟ ಸುದೀಪ್ | ನಾಡ ಸುದ್ದಿ Home ಸಿನಿಮಾ ಮದಕರಿ ವಿವಾದದಲ್ಲಿ ದರ್ಶನ್ ಬಗ್ಗೆ ಹೇಳಿಕೆ ಕೊಟ್ಟ ಸುದೀಪ್ ಮದಕರಿ ನಾಯಕ ಚಿತ್ರ ಮೊನ್ನೆ ಅದ್ದೂರಿಯಾಗಿ ಸೆಟ್ಟೇರಿದೆ. ರಾಜ ವೀರ ಮದಕರಿ ನಾಯಕ ಎಂದು ಹೆಸರು ಇಡಲಾಗಿದೆ. ಈ ಮೊದಲು ಈ ಕತೆಯನ್ನು ಯಾರು ಮಾಡುತ್ತಾರೆ ಎಂದು ಸ್ವಲ್ಪ ಗೊಂದಲ ಮತ್ತು ವಿವಾದ ಉಂಟಾಯಿತು. ದರ್ಶನ್ ಮಾಡಬೇಕು ಮತ್ತು ಸುದೀಪ್ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪರಸ್ಪರ ಜಗಳ ಮಾಡುತ್ತಿದ್ದರು. ಸುದೀಪ್ ಪರ ಕೆಲವು ಸ್ವಾಮೀಜಿಗಳೂ ಸಪೋರ್ಟ್ ಮಾಡಿದ್ದನ್ನ ನಾವು ನೋಡಿದ್ದೇವೆ. ಆದರೆ ಸುದೀಪ್ ನಯವಾಗಿಯೇ ಈ ಕತೆಯನ್ನು ನಿರಾಕರಿಸಿದರು. ಈಗ ಈ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಾಗಿದೆ. ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರದಂತಹ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ದರ್ಶನ್ ಈ ಮದಕರಿ ನಾಯಕ ನನಗೇ ಸಿಗಬೇಕು ಎಂದು ಆಸೆ ಪಟ್ಟಿದ್ದರು. ಈಗ ರಾಜ ವೀರಮದಕರಿ ನಾಯಕ ಚಿತ್ರದ ಮುಹೂರ್ತ ನಡೆದು ಡಿಸೆಂಬರ್ 6 ರಂದು ಸೆಟ್ಟೇರಿದೆ. ಈ ಚಿತ್ರಕ್ಕೆ ಜನಪ್ರಿಯ ಕಾದಂಬರಿಗಾರ ಬಿಎಲ್ ವೇಣು ಕತೆ ಇದೆ. ನಿರ್ಮಾಪಕರು ರಾಕ್ ಲೈನ್ ವೆಂಕಟೇಶ್ , ನಿರ್ದೇಶನ ರಾಜೇಂದ್ರ ಸಿಂಗ್ ಪ್ರಸಾದ್ ರವರದ್ದು. ಸಾಹಿತ್ಯ ಮತ್ತು ಸಂಗೀತದ ಜವಾಬ್ದಾರಿ ಹಂಸಲೇಖ ಹೊತ್ತುಕೊಂಡಿದ್ದಾರೆ. ಟಿವಿ ಸಂದರ್ಶನದಲ್ಲಿ ಸುದೀಪ್'ಗೆ ಈ ಚಿತ್ರ ಕೈ ಬಿಟ್ಟಿರುವುದರ ಬಗ್ಗೆ ಕೇಳಿದ್ದಕ್ಕೆ ಅವರು ಹೇಳಿದ್ದಿಷ್ಟು. ನನ್ನ ಸ್ವಾರ್ಥಕ್ಕೆ ಒಳ್ಳೆಯ ಕತೆ ಬಲಿಯಾಗುವುದು ನನಗೆ ಇಷ್ಟವಿಲ್ಲ.ನಾನು ಕತೆ ಬಿಟ್ಟು ಕೊಟ್ಟಿದ್ದು ಕೇವಲ ರಾಕ್ ಲೈನ್ ವೆಂಕಟೇಶ್ ಗೆ ಮಾತ್ರ. ಅವರು ದೊಡ್ಡ ನಿರ್ಮಾಪಕರು. ಅವರು ಈ ಕತೆಯನ್ನು ಚೆನ್ನಾಗಿ ತೆರೆಗೆ ತರುತ್ತಾರೆ. ರಾಜೇಂದ್ರಸಿಂಗ್ ಕೂಡ ಹಿರಿಯ ನಿರ್ದೇಶಕರು. ನಾನು ಕತೆ ಮಾಡೊಕೆ ಬಹಳ ವರ್ಷ ತಗೊಂಡಿದ್ದೀನಿ. ಹಾಗಂತ ನಾನು ಮದಕರಿ , ನನಗೇ ಚಿತ್ರ ಸಿಗಬೇಕು ಎಂದು ಹೇಳುವುದಿಲ್ಲ. ಒಟ್ಟಾರೆ ನನಗೆ ನನ್ನ ಮದಕರಿ ಗೆಲ್ಲಬೇಕು ಅಷ್ಟೇ. ನನ್ನ ಸ್ವಾರ್ಥಕ್ಕೋಸ್ಕರ ಒಂದು ಒಳ್ಳೆಯ ಕತೆಗೆ ಅಡ್ಡಿಯಾಗಲಾರೆ ಎಂದು ಹೇಳುತ್ತಾರೆ. ಅಂದ ಹಾಗೇ ಈ ಚಿತ್ರದಲ್ಲಿ ದರ್ಶನ್ ಜೊತೆ ರಾಜ ಮಾತೆ ಯಾಗಿ ಸಂಸದೆ ಸುಮಲತಾ ಅಭಿನಯಿಸಲಿದ್ದಾರೆ. ಶ್ರೀನಿವಾಸ್ ಮೂರ್ತಿ, ದೊಡ್ಡಣ್ಣ ಕೂಡ ಸಾತ್ ನೀಡಲಿದ್ದಾರೆ. ಸುದೀಪ್ ಮಾತನಾಡಲಿರುವ ವೀಡಿಯೋ ಕೆಳಗೆ ಇದೆ ನೋಡಿ Previous articleಹೌದು ಹುಲಿಯಾ ಎಂದು ಹೇಳಿದವನು‌ ಇಂದು ಬಿಜೆಪಿ ಪರ ಬ್ಯಾಟಿಂಗ್ ! Next article11 ಬಿಲ್ವ ಪತ್ರೆಯಿಂದ ಪ್ರತಿ ಮಂಗಳವಾರ ಹೀಗೆ ಮಾಡಿದರೆ ನಿಮ್ಮ ಜೀವನದಿಂದ ದುಡ್ಡಿನ ಸಮಸ್ಯೆ ಮಂಗಮಾಯವಾಗುತ್ತದೆ!
2021/09/22 23:02:51
http://naadasuddi.com/archives/21058
mC4
'ಅಂಬಿ ನನ್ನ ಆಸ್ತಿ ಮತ್ತು ದೌರ್ಬಲ್ಯ-ವಿಷ್ಣು - Cinibuzz ಒಮ್ಮೆ ಅಂಬರೀಶ್ ವಿಷ್ಣು ಮನೆಗೆ ಬಂದಾಗ 'ಸೂಪರ್ ಸ್ಟಾರ್ ಮನೆಯಂತೆ ಇದು.. ಗುಂಡು-ತುಂಡು ಏನೂ ಇಲ್ಲ..' ಎಂದುಬಿಟ್ಟಿದ್ದರಂತೆ. ಅಂಬಿ ಹೀಗಂದ ಮರುದಿನವೇ ತಮ್ಮ ಮನೆಯಲ್ಲೇ ಬಾರ್ ನಿರ್ಮಿಸಿಬಿಟ್ಟರಂತೆ ವಿಷ್ಣು… ಎಷ್ಟೋ ಸಲ ವಿಷ್ಣುಗೆ ರಾತ್ರೋ ರಾತ್ರಿ ಫೋನು ಮಾಡುತ್ತಿದ್ದ ಅಂಬಿ, ಮಲಗಿದ್ದ ವಿಷ್ಣುವನ್ನು ಎಬ್ಬಿಸಿ 'ಲೇ ಕುಚುಕೂ, ಟೀವಿ ಆನ್ ಮಾಡೋ ನಿನ್ನ ಹಳೇ ಸಿನಿಮಾದ ಹಾಡು ಬರ‍್ತಾ ಇದೆ…' ಎನ್ನುತ್ತಿದ್ದರಂತೆ… ಹಾಗೆ ನೋಡಿದರೆ, ಸಿನಿಮಾಕ್ಕೆ ಬರುವ ಮೊದಲು ಅಂಬರೀಶ್ ಮತ್ತು ವಿಷ್ಣು ಅಂಥಾ ಪರಿಚಿತರೂ ಆಗಿರಲಿಲ್ಲ. ಮೈಸೂರಿನಲ್ಲಿ 'ನಾಗರಹಾವು' ಚಿತ್ರದ ಸ್ಕ್ರೀನ್ ಟೆಸ್ಟ್ ನಡೆದ ಸಂದರ್ಭದಲ್ಲಿ ಇವರಿಬ್ಬರೂ ಪರಸ್ಪರ ಭೇಟಿಯಾಗಿದ್ದರು. ನಂತರ 'ನಾಗರಹಾವು' ಚಿತ್ರದಲ್ಲಿ ವಿಷ್ಣು ರಾಮಾಚಾರಿಯಾಗಿ, ಅಂಬಿ ಜಲೀಲ್ ಆಗಿ ತೆರೆಯ ಮೇಲೆ ಮಾರಾಮಾರಿ ಗುದ್ದಾಡಿಕೊಂಡರು. ಆದರೆ ರಿಯಲ್ ಲೈಫ್‌ನಲ್ಲಿ ಮಾತ್ರ ಅಂಬಿ-ವಿಷ್ಣು ಪ್ರಾಣಮಿತ್ರರಾಗೇ ಉಳಿದವರು. 'ಕಡೇ ಪಕ್ಷ ದಿನಕ್ಕೆರಡು ಬಾರಿ ಅಂಬಿಯೊಂದಿಗೆ ಫೋನ್‌ನಲ್ಲಾದರೂ ಮಾತಾಡದೇ ಇದ್ದರೆ ಏನೋ ಕಳಕೊಂಡ ಹಾಗಾಗುತ್ತೆ. ನನ್ನ ಚೈತನ್ಯವೇ ಹುದುಗಿಹೋಗುತ್ತದೆ…' ನಾವಿಬ್ಬರೂ ಬೇರೆ ಬೇರೆ ಜಾತಿಯವರಿರಬಹುದು. ಆದರೂ ನಾವಿಬ್ಬರೂ ಒಂದೇ ತಾಯಿಯ ಮಕ್ಕಳಂತೆ ಬೆಳೆದಿದ್ದೇವೆ. ನನ್ನ ತಾಯಿಗಂತೂ ಅಂಬರೀಶ್ ಎಂದರೆ ಪಂಚಪ್ರಾಣ. ಆಕೆ ಗಂಭೀರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅಂಬರೀಶ್‌ನನ್ನು ನೋಡಬೇಕೆಂದು ಹಠ ಹಿಡಿದಿದ್ದಳು. ವಿಷ್ಯ ತಿಳಿದ ಅಂಬರೀಶ್ ದೂರದೂರಿನಲ್ಲಿದ್ದರೂ, ಶೂಟಿಂಗ್ ಅರ್ಧಕ್ಕೆ ಬಿಟ್ಟು ಓಡಿಬಂದು ಅಮ್ಮನನ್ನು ನೋಡಿಕೊಂಡು ಹೋಗಿದ್ದ; ನನ್ನ ಅಮ್ಮ ತೀರಿ ಹೋದಾಗಲೂ ಅಷ್ಟೇ…" ಅಂಬಿ ಬಗೆಗಿನ ಇಂಥ ಹತ್ತು ಹಲವು ವಿಷಯಗಳನ್ನು ಸ್ಮರಿಸಿಕೊಳ್ಳುತ್ತಿದ್ದರು. ವಿಷ್ಣು-ಅಂಬಿ ಸ್ನೇಹ-ಪ್ರೀತಿಯ ಉತ್ಕಟತೆ ಅದ್ಯಾವ ಮಟ್ಟದ್ದು ಎಂದರೆ "ನಾನು ಸತ್ತಾಗ ನನ್ನ ಹೆಣವನ್ನು ಹೊರಲು ಅಂಬರೀಶ್ ಖಂಡಿತಾ ಎಲ್ಲಿದ್ದರೂ ಬಂದೇ ಬರುತ್ತಾನೆ ಎಂಬ ವಿಶ್ವಾಸ ನನಗಿದೆ. ಅಂತಹ ದೊಡ್ಡ ವ್ಯಕ್ತಿತ್ವ ಅವನದು" ಎಂದು ವಿಷ್ಣು ತಮ್ಮ ಆಪ್ತರಲ್ಲಿ ಅನೇಕ ಬಾರಿ ಹೇಳಿಕೊಂಡಿದ್ದರು. ವಿಷ್ಣು ಅವರ ದೂರದೃಷ್ಟಿ, ಲೆಕ್ಕಾಚಾರ ಒಂದಿಷ್ಟೂ ಏರುಪೇರಾಗಲಿಲ್ಲ. ಸಾಹಸಸಿಂಹ ಕಣ್ಮುಚ್ಚಿದಾಗ ಓಡೋಡಿ ಬಂದ ಅಂಬಿ ಎಳೇ ಮಗುವಿನಂತೆ ಕಣ್ಣೀರಿಟ್ಟು, ಒಡಹುಟ್ಟಿದವರಿಗಿಂತಲೂ ಹೆಚ್ಚಾಗಿ ರೋಧಿಸಿದ್ದರು. ಆಗ "ತೀರಾ ಪ್ರಬುದ್ಧನಂತಿರುವ ಅಂಬಿ ಕೆಲವೊಮ್ಮೆ ಪುಟ್ಟ ಮಕ್ಕಳಂತೆ ವರ್ತಿಸುತ್ತಾನೆ…" ಎಂದು ಸ್ವತಃ ವಿಷ್ಣು ಹೇಳಿದ್ದ ಮಾತುಗಳು ಅಗೋಚರವಾಗಿ ಮಾರ್ದನಿಸಿದಂತಿತ್ತು. ನಿಜಕ್ಕೂ ಅಂಬರೀಶ್ ಇರದಿದ್ದರೆ, ಅವತ್ತು ವಿಷ್ಣು ದೇಹ ಬನಶಂಕರಿಯ ಚಿತಾಗಾರದಲ್ಲಿ ಕರಗಿಹೋಗುತ್ತಿತ್ತು. ತನ್ನ ಸ್ನೇಹಿತನ ಅಂತ್ಯಕ್ರಿಯೆ ಗೌರವಯುತವಾಗಿ ನಡೆಯಬೇಕು ಎಂದು ತೀರ್ಮಾನಿಸಿದ ಅಂಬಿ ತಕ್ಷಣ 'ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಲು ತೀರ್ಮಾನಿಸಿ, ಸರ್ಕಾರದ ಪ್ರತಿನಿಧಿಗಳು, ಬಾಲಣ್ಣನ ಮಗ ಗಣೇಶ್- ಎಲ್ಲರೊಂದಿಗೂ ಮಾತನಾಡಿ ಜಾಗದ ವ್ಯವಸ್ಥೆ ಮಾಡಿಕೊಟ್ಟರು. ಪ್ರಾಣ ಸ್ನೇಹಿತರು ಎಂದರೆ ಇವರೇ ಅಲ್ಲವೇ?
2021/09/18 23:18:35
https://cinibuzz.in/ambarish-vishnu/
mC4
ಸಂಸ್ಕಾರಭರಿತ & ಗುಣಮಟ್ಟದ ಶಿಕ್ಷಣಕ್ಕೆ ಹೆಸರುಮಾಡಿರುವ ಅಂಬಿಕಾ ಪಿಯು ಕಾಲೇಜು – ಆಧುನಿಕ ಶಿಕ್ಷಣದೊಂದಿಗೆ ಭಾರತೀಯ ಪರಂಪರೆ ಹಾಗೂ ಮೌಲ್ಯಗಳ ಪರಿಚಯ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 ಪುತ್ತೂರು: 2019-20ರಲ್ಲಿ ಶೇಕಡಾ 100 ಫಲಿತಾಂಶ, 2020-21ರಲ್ಲಿ 17 ಮಂದಿ ವಿದ್ಯಾರ್ಥಿಗಳಿಗೆ ಆರುನೂರಕ್ಕೆ ಆರುನೂರು ಅಂಕ, ಪರೀಕ್ಷೆ ಬರೆದ 288 ಜನ ವಿದ್ಯಾರ್ಥಿಗಳಲ್ಲಿ 198 ಜನಕ್ಕೆ ಡಿಸ್ಟಿಂಕ್ಷನ್, ಕಳದೆದ ಮೂರು ವರ್ಷಗಳಲ್ಲಿ ಒಂದು ಸಾವಿರ ರಾಂಕ್ ಒಳಗಡೆ ಸುಮಾರು 65 ಮಂದಿ ವಿದ್ಯಾರ್ಥಿಗಳಿಗೆ ಸ್ಥಾನ… ಹೀಗೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಹಾಗೂ ವಸತಿಯುತ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಸಾಧನೆಯ ಸಾಲು ಮುಂದುವರಿಯುತ್ತದೆ. ಈ ಶಿಕ್ಷಣ ಸಂಸ್ಥೆಯಲ್ಲಿ ತರಗತಿ ಆರಂಭಗೊಳ್ಳುವುದಕ್ಕೆ ಮೊದಲು ಯೋಗಾಭ್ಯಾಸ ನಡೆಯುತ್ತದೆ. ಸೂರ್ಯನಮಸ್ಕಾರ, ಧ್ಯಾನ, ಪ್ರಾಣಾಯಾಮ ಇಲ್ಲಿನ ನಿತ್ಯ ಕಾಯಕ. ಇದರ ಜತೆಗೆ ದೇಶದ ಔನ್ನತ್ಯ, ದೇಶದ ಕುರಿತು ಹೆಮ್ಮೆ ಪಡಬಹುದಾದ ನೂರಾರು ವಿಷಯಗಳು, ದೇಶ ಕಂಡ ಮಹಾನ್ ವ್ಯಕ್ತಿಗಳು ಈ ಎಲ್ಲ ಸಂಗತಿಗಳ ಬಗೆಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ. ನಮ್ಮ ದೇಸೀಯವಾದ ಆಚಾರ ವಿಚಾರಗಳನ್ನು ಹೇಳಿಕೊಡಲಾಗುತ್ತದೆ. ಶಿವರಾತ್ರಿ, ರಾಮನವಮಿ, ದೀಪಾವಳಿ, ಯುಗಾದಿಯೇ ಮೊದಲಾದ ನಮ್ಮ ಹಬ್ಬಗಳನ್ನು ವೈಭವದಿಂದ ಆಚರಿಸಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತದೆ. ಗುಣಮಟ್ಟಕ್ಕೆ ಇನ್ನೊಂದು ಹೆಸರಾಗಿರುವ ಅಂಬಿಕಾ ಸಂಸ್ಥೆಗಳ ಆವರಣದಲ್ಲಿ ಒಂದು ಸಿಬಿಎಸ್‌ಇ ವಿದ್ಯಾಲಯ, ಎರಡು ಪಿಯು ಶಿಕ್ಷಣ ಸಂಸ್ಥೆಗಳು ಹಾಗೂ ಒಂದು ಪದವಿ ಕಾಲೇಜು ಕಾರ್ಯ ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳ ಕನಸನ್ನು ನನಸಾಗಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿವೆ. ಪಿಯು ಶಿಕ್ಷಣ ಕ್ರಾಂತಿ : ನಟ್ಟೋಜ ಫೌಂಡೇಶನ್ ಟ್ರಸ್ಟ್ ಮೊದಲಿಗೆ ಆರಂಭಿಸಿದ್ದು ಪಿಯು ಶಿಕ್ಷಣವನ್ನು. ಭಾರತೀಯ ಸಂಸ್ಕಾರ, ದೇಶಪ್ರೇಮದ ಜತೆಗೆ ಆಧುನಿಕ ಶಿಕ್ಷಣದ ಕಲ್ಪನೆಯಲ್ಲಿ ಅಡಿಯಿಟ್ಟ ಪಿಯು ಶಿಕ್ಷಣ ಇಡಿಯ ರಾಜ್ಯದಲ್ಲೇ ಇಂದು ಹೆಸರುವಾಸಿಯಾಗಿದೆ. ದೈನಂದಿನ ಓಡಾಟ ನಡೆಸುವವರಿಗಾಗಿ ಹಾಗೂ ಹಾಸ್ಟೆಲಲ್ಲಿ ಉಳಿದು ಅಧ್ಯಯನ ನಡೆಸುವವರಿಗಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಎರಡು ಪಿಯು ಕಾಲೇಜುಗಳನ್ನು ಆರಂಭಿಸಿದ್ದು ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಹೆಚ್ಚುಗಾರಿಕೆ. ಅಂಬಿಕಾ ಪಿಯು ಸಂಸ್ಥೆಗಳು ಪ್ರತಿ ವರ್ಷ ಜೆಇಇ, ನೀಟ್ ಹಾಗೂ ಸಿಇಟಿ ಪರೀಕ್ಷೆಯಲ್ಲಿ ಅನೇಕ ರ್‍ಯಾಂಕ್‌ಗಳನ್ನು ತನ್ನದಾಗಿಸಿಕೊಳ್ಳುತ್ತಿವೆ. ಅತ್ಯುತ್ತಮ ಶಿಕ್ಷಕರಿಂದ ನಿಗದಿತ ಶಿಕ್ಷಣ ಒದಗಿಸುತ್ತಿರುವುದಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ತಜ್ಞರು ಆಗಮಿಸಿ ಜೆಇಇ, ನೀಟ್ ನಂತಹ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದಾರೆ. ದೇಶದ ಪ್ರತಿಷ್ಟಿತ ಸಂಸ್ಥೆಯಾದ ಆಕಾಶ್ ಕೋಚಿಂಗ್ ಇನ್‌ಸ್ಟಿಟ್ಯೂಟ್ ಜತೆಗೆ ಶೈಕ್ಷಣಿಕ ತರಬೇತಿ ಒಪ್ಪಂದ ಹೊಂದಿರುವ ಅಂಬಿಕಾ ಪಿಯು ಸಂಸ್ಥೆಗಳು ಇಂದು ಆಕಾಶ್ ವತಿಯಿಂದಲೂ ಕೋಚಿಂಗ್ ಒದಗಿಸಿಕೊಟ್ಟು ವಿದ್ಯಾರ್ಥಿಗಳ ರ್‍ಯಾಂಕಿಂಗ್ ಉತ್ತಮವಾಗುವಲ್ಲಿ ಶ್ರಮಿಸುತ್ತಿವೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಸುಮಾರು ಇಪ್ಪತ್ತಕ್ಕೂ ಅಧಿಕ ಮಂದಿ ಜೆಇಇ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವುದು, ಹಾಗೆಯೇ ಹದಿನೈದಕ್ಕೂ ಮಿಕ್ಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ತೇರ್ಗಡೆಗೊಂಡಿರುವುದು ಅಂಬಿಕಾ ಶಿಕ್ಷಣ ಸಂಸ್ಥೆಯ ಮುಕುಟಕ್ಕೇರಿದ ಹೆಮ್ಮೆಯ ಗರಿಗಳು. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳ ಬಗೆಗೆ ವಿಶೇಷ ನಿಗಾವಿರಿಸಿ ಅವರನ್ನು ಅತ್ಯುತ್ತಮ ಅಂಕಗಳಿಸುವಂತೆ ಮಾಡುತ್ತಿರುವುದು ಸಂಸ್ಥೆಯ ವಿಶೇಷತೆಯೆನಿಸಿದೆ. ಪ್ರಥಮ ಪಿಯುಸಿಯಿಂದ ದ್ವಿತೀಯ ಪಿಯುಸಿಗೆ ಬರುವ ಹೊತ್ತಿಗೆ ನಡೆಸುವ ಬ್ರಿಡ್ಜ್ ಕೋರ್ಸ್, ಜೆಇಇ, ನೀಟ್, ಸಿಇಟಿಗೆ ಸಂಬಂಧಿಸಿದಂತೆ ಹಿಂದಿನ ಪರೀಕ್ಷೆಗಳನ್ನು ಆಧರಿಸಿ, ಸಾಧ್ಯತೆಯನ್ನು ಗಮನಿಸಿ ಸಂಸ್ಥೆಯಲ್ಲೇ ರೂಪಿಸಿ ಒದಗಿಸಿಕೊಡಲಾಗುತ್ತಿರುವ ಅಧ್ಯಯನ ಪುಸ್ತಿಕೆಗಳು ವಿದ್ಯಾರ್ಥಿಗಳಿಗೆ ವರದಾನವೆನಿಸುತ್ತಿವೆ. ವಿದ್ಯಾರ್ಥಿಗಳ ಬೆಳವಣಿಗೆಗಳನ್ನು ಗಮನಿಸುವುದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಓರ್ವ ಮಾರ್ಗದರ್ಶೀ ಉಪನ್ಯಾಸಕರಿದ್ದು, ತಂತ್ರಜ್ಞಾನ ಆಧಾರಿತ ತರಗತಿಗಳು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಈ ಶಿಕ್ಷಣ ಸಂಸ್ಥೆಯಲ್ಲಿದೆ. ಮಾತ್ರವಲ್ಲದೆ ವಿಶಾಲವಾದ ಕ್ರೀಡಾಂಗಣ, ಉತ್ಕೃಷ್ಟ ಗ್ರಂಥಾಲಯ, ವ್ಯವಸ್ಥಿತ ಪ್ರಯೋಗಾಲಯಗಳು, ಹುಡುಗರು ಮತ್ತು ಹುಡುಗಿಯರಿಗಾಗಿ ಅತ್ಯುತ್ತಮ ಹಾಸ್ಟೆಲ್ ಹಾಗೂ ಗುಣಮಟ್ಟದ ಸಸ್ಯಾಹಾರಿ ಆಹಾರ ವ್ಯವಸ್ಥೆಯೇ ಮೊದಲಾದವುಗಳು ಸಂಸ್ಥೆಯನ್ನು ಮತ್ತಷ್ಟು ಆಪ್ತವೆನಿಸುವಂತೆ ಮಾಡಿವೆ. ಹಾಸ್ಟೆಲ್‌ನಲ್ಲೂ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕಾರಿಯಾಗುವ ಹಿನ್ನೆಲೆಯಲ್ಲಿ ಉಪನ್ಯಾಸಕರು ಲಭ್ಯರಿರುವುದು ವಿದ್ಯಾರ್ಥಿಗಳಿಗೆ ವರದಾನವೆನಿಸಿದೆ. ಅಂಬಿಕಾ ಸಂಸ್ಥೆಯಲ್ಲಿ ಪಿಯು ಕಾಮರ್ಸ್ ಶಿಕ್ಷಣವನ್ನೂ ಒದಗಿಸಿಕೊಡಲಾಗುತ್ತಿದೆ. ಪಿಯುಸಿಯಿಂದಲೇ ಸಿಎ, ಸಿ.ಎಸ್ ತರಬೇತಿಯನ್ನು ಕಾಮರ್ಸ್ ಶಿಕ್ಷಣದೊಂದಿಗೆ ಸೇರಿಸಲಾಗಿದೆ. ಮುಂದೆ ಬಿ.ಕಾಂ ಕೂಡ ಅಂಬಿಕಾ ಪದವಿ ಕಾಲೇಜಿನಲ್ಲಿ ಲಭ್ಯ ಇರುವುದರಿಂದ ಐದು ವರ್ಷಗಳ ಇಂಟಗ್ರೇಟೆಡ್ (ಸಿ.ಎ/ಸಿ.ಎಸ್ ಸಮೇತ) ಶಿಕ್ಷಣ ಪಡೆಯುವ ಅವಕಾಶವೂ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಇದರೊಂದಿಗೆ ಬ್ಯಾಂಕಿಂಗ್ ಉದ್ಯೋಗಕ್ಕೆ ಸಂಬಂಧಿಸಿದಂತೆ ಐಬಿಪಿಎಸ್ ಪರೀಕ್ಷಾ ತರಬೇತಿಯನ್ನೂ ಒದಗಿಸಿಕೊಡಲಾಗುತ್ತಿರುವುದು ವಿದ್ಯಾರ್ಥಿಗಳಿಗೆ ಉಪಯುಕ್ತವ ಎನಿಸಿದೆ. ಎಸಿ ಕ್ಲಾಸ್, ಈಜುಕೊಳದ ವ್ಯವಸ್ಥೆ: ದಕ್ಷಿಣ ಕನ್ನಡ ತುಸು ಸೆಕೆಯ ವಾತಾವರಣವನ್ನು ಹೊಂದಿದ ಪ್ರದೇಶವಾಗಿರುವುದರಿಂದ ಅಂಬಿಕಾ ಪಿಯು ಸಂಸ್ಥೆಗಳಲ್ಲಿ ಎ.ಸಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತುಂಬಾ ಆಹ್ಲಾದಕರ ವಾತಾವರಣದಲ್ಲಿ ಅಧ್ಯಯನ ನಡೆಸುವುದಕ್ಕೆ ಸಾಧ್ಯವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಎಸಿ ತರಗತಿ ರೂಪಿಸಿದ ಮೊದಲ ಶಿಕ್ಷಣ ಸಂಸ್ಥೆ ಎಂಬ ಖ್ಯಾತಿಗೂ ಅಂಬಿಕಾ ಪಿಯು ಸಂಸ್ಥೆಗಳು ಪಾತ್ರವಾಗಿವೆ. ಹಾಗೆಯೇ ಹಾಸ್ಟೆಲ್ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಒತ್ತಡ ನಿವಾರಣೆಗಾಗಿ ಈಜುಕೊಳವನ್ನು ನಿರ್ಮಿಸಿ ಈಜಾಟದ ಮೂಲಕ ಹೊಸಹುರುಪನ್ನು ಪಡೆಯುವಂತೆ ಮಾಡಿಕೊಡಲಾಗಿದೆ. ಎನ್‌ಡಿಎ ಕೋಚಿಂಗ್ : ಭಾರತೀಯ ಸೇನೆಗೆ ಆಯ್ಕೆಯಾಗುವುದು ಅನೇಕ ಯುವಜನರ ಕನಸು. ಅದರಲ್ಲೂ ಆಫೀಸರ್ ಆಗಿ ಆಯ್ಕೆಯಾಗುವುದೆಂದರೆ ಬಹುದೊಡ್ಡ ಹೆಮ್ಮೆಯ ವಿಚಾರವೂ ಹೌದು. ಹಾಗಾಗಿಯೇ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ವಿದ್ಯಾರ್ಥಿಗಳನ್ನು ಕಳುಹಿಸುವ ಬಗೆಗೆ ಅಂಬಿಕಾ ಪಿಯು ಕಾಲೇಜಿನಲ್ಲಿ ಸಿದ್ಧತೆ ನಡೆದಿದೆ. ಕಳೆದ ಶೈಕ್ಷಣಿಕ ವರ್ಷದಿಂದ ಎನ್ ಡಿ ಎ ಪರೀಕ್ಷೆಗಳಿಗೆ ಅಂಬಿಕಾ ಪಿಯು ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ. ಇಂತಹ ತರಬೇತಿ ನೀಡುತ್ತಿರುವ ದೇಶದ ಕೆಲವೇ ಕೆಲವು ಸಂಸ್ಥೆಗಳಲ್ಲಿ ಅಂಬಿಕಾ ಪಿಯು ಕಾಲೇಜೂ ಸೇರಿದೆ ಎಂಬುದು ಗಮನಾರ್ಹ ವಿಚಾರ. ಸೇನೆಯಲ್ಲಿ ವಿವಿಧ ಹುದ್ದೆಯಲ್ಲಿದ್ದವರು ಆಗಾಗ್ಗೆ ಬಂದು ತರಬೇತಿ ನೀಡುತ್ತಿರುವುದೂ ಉಲ್ಲೇಖಾರ್ಹ. ಆನ್‌ಲೈನ್ ದಾಖಲಾತಿ ಆರಂಭ : ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ೨೦೨೧-೨೨ರ ಶೈಕ್ಷಣಿಕ ವರ್ಷಕ್ಕೆ ಆನ್‌ಲೈನ್ ಹಾಗೂ ಆಫ್‌ಲೈನ್ ದಾಖಲಾತಿ ಆರಂಭಗೊಂಡಿದೆ. ಈಗಾಗಲೇ ಅನೇಕ ಮಂದಿ ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಂಡಿದ್ದಾರೆ. ಆನ್‌ಲೈನ್ ದಾಖಲಾತಿಗಾಗಿ www.ambikavidyalaya.com <http://www.ambikavidyalaya.com> ಈ ವೆಬ್‌ಸೈಟ್ ವಿಳಾಸವನ್ನು ಕ್ಲಿಕ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 9448835488 ಸಂಖ್ಯೆಯನ್ನು ಸಂಪರ್ಕಿಸಬಹುದು. ಸಂಸ್ಥೆಯ ವಿಶೇಷತೆಗಳು: ಅಂಬಿಕಾ ಸಂಸ್ಥೆಯ ಮೂಲಕ ಪುತ್ತೂರಿನಲ್ಲಿ ಅಮರ್ ಜವಾನ್ ಜ್ಯೋತಿ ನಿರ್ಮಿಸಲಾಗಿದೆ. ಇಡಿಯ ದೇಶದಲ್ಲೇ ಖಾಸಗಿ ಸಂಸ್ಥೆಯೊಂದು ಇಂತಹ ಸ್ಮಾರಕ ರೂಪಿಸಿರುವುದು ಇದೇ ಮೊದಲು.
2021/09/19 04:34:35
https://puttur.suddinews.com/archives/579830
mC4
ವಿಚಾರ ಕ್ರಾಂತಿಯ ಮೂಲಕ ಸಮಾಜ ಪರಿವರ್ತನೆ: ಎಚ್.ಎಸ್.ದೊರೆಸ್ವಾಮಿ | Vartha Bharati- ವಾರ್ತಾ ಭಾರತಿ ವಿಚಾರ ಕ್ರಾಂತಿಯ ಮೂಲಕ ಸಮಾಜ ಪರಿವರ್ತನೆ: ಎಚ್.ಎಸ್.ದೊರೆಸ್ವಾಮಿ ವಾರ್ತಾ ಭಾರತಿ Jun 30, 2019, 8:46 PM IST ಬೆಂಗಳೂರು, ಜೂ.30: ವಿಚಾರ ಕಾಂತ್ರಿಯಿಂದಲೇ ಸಮಾಜವನ್ನು ಪರಿವರ್ತನೆಗೊಳಿಸಲು ಸಾಧ್ಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ಜಯನಗರ ಜೆ.ಎಸ್.ಎಸ್ ಚಿಂತನ ಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಡಾ..ಗು.ಹಳಕಟ್ಟಿ ಜನ್ಮದಿನೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದು ಸಮಾಜದ ಬಗ್ಗೆ ಚಿಂತಿಸುವವರು ಕಡಿಮೆಯಾಗಿದ್ದಾರೆ. ಸಮಾಜದಲ್ಲಿ ಮಾನವೀಯ ಗುಣಕ್ಕೆ ಬೆಲೆ ಇಲ್ಲದಂತಾಗಿದೆ. ನಾವೆಲ್ಲರೂ ಮನುಷ್ಯ ಸಮಾಜವನ್ನು ಕಟ್ಟಬೇಕಾದರೆ ಎಲ್ಲರಲ್ಲೊಬ್ಬರಾಗಿ ಜಾತಿ, ಧರ್ಮ ಮರೆತು ಸಮಾಜವನ್ನು ಮುನ್ನಡೆಸಬೇಕಿದೆ ಎಂದರು. ಬಸವಣ್ಣನವರ ವಚನ ಸಾಹಿತ್ಯ ,ಕ್ರಾಂತಿ ವಿಚಾರಧಾರೆಗಳು ಇಂದಿನ ಪೀಳಿಗೆಗೆ ತಲುಪಬೇಕು. ವಿಚಾರ ಕ್ರಾಂತಿಯ ಮೂಲಕ ಸಮಾಜ ಪರಿವರ್ತನೆಗೊಳಿಸಬೇಕಿದೆ ಎಂದು ಹೇಳಿದರು. ವಚನ ಸಾಹಿತ್ಯದ ಮಹತ್ವವನ್ನು ಎಲ್ಲೆಡೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರನ್ನು ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತು ಗುರುತಿಸಿ ಗೌರವಿಸಬೇಕಿದೆ. ಡಾ..ಗು.ಹಳಹಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ ಎಲ್ಲೆಡೆ ಪ್ರಚುರ ಮಾಡಲು ಹಾಗೂ ಕರ್ನಾಟಕವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ಸಾಕಷ್ಟು ಶ್ರಮಿಸಿದ್ದಾರೆ. ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ ಎಂದರು. ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪರಾವ್ ಅಕ್ಕೋಣೆ ಮಾತನಾಡಿ, ಇಡೀ ಜಗತ್ತಿಗೆ ಕಾಯಕದ ಮಹತ್ವವನ್ನು ಸಾರಿದವರು ಬಸವಣ್ಣನವರು. ವಚನ ಸಾಹಿತ್ಯವನ್ನು ಸಂರಕ್ಷಿಸುವುದರಲ್ಲಿ ಡಾ..ಗು.ಹಳಹಟ್ಟಿ ಅವರ ಪಾತ್ರ ಮಹತ್ತರವಾದ್ದದ್ದು ಎಂದು ಹೇಳಿದರು. ಪ್ರೊ.ಎಂ.ಬಿ.ಶಿವಾನಂದ ಮಾತನಾಡಿ, ಸಮಾಜದಲ್ಲಿ ಇಂದು ಹಣಗಳಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸಾಹಿತ್ಯ ಆಸಕ್ತಿಗಳು ಯುವಪೀಳಿಗೆಯವರಲ್ಲಿ ಕಡಿಮೆಯಾಗುತ್ತಿದೆ. ನಾವು ನಮ್ಮ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ, ವಚನಕಾರರ ಬಗ್ಗೆ ಮಾಹಿತಿಗಳನ್ನು ತಿಳಿಸಿ ಅವರನ್ನು ಗೌರವಿಸುವ ಸಂಸ್ಕಾರವನ್ನು ಬೆಳಸಬೇಕಿದೆ. ನಿರ್ಗುಣವನ್ನ ಬಿಟ್ಟು ಸುಗುಣಗಳನ್ನು ಅಳವಡಿಸಿಕೊಂಡವರಲ್ಲಿ ಡಾ..ಗು.ಹಳಹಟ್ಟಿ ಕೂಡ ಒಬ್ಬರು. ಕನ್ನಡ ನಾಡಿನ ಯಶಸ್ಸಿಗಾಗಿ ಶ್ರಮಿಸಿದ ಅವರು ಎಲ್ಲರಿಗೂ ಸ್ಪೂರ್ತಿ ಎಂದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಎಸ್.ಕೆಂಡದಮಠ, ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
2020/05/25 21:55:10
http://www.varthabharati.in/article/bengaluru/198313
mC4
ಮತ್ತೆ ಮತ್ತೆ ಕಾಡುವ ಪೆದ್ದ ಮಾರಾ.... -ಭವಾನಿ ಲೋಕೇಶ್, ಮಂಡ್ಯ ಮಂಕುತಿಮ್ಮ ಅನ್ನುವ ಶಬ್ಧ ಕೇಳಿದಾಗಲೆಲ್ಲ ಕಗ್ಗ ಬರೆದ ಡಿ.ವಿ. ಗುಂಡಪ್ಪನವರ ನೆನಪಾಗುವುದು. ಒಬ್ಬ ಪತ್ರಕರ್ತರಾಗಿ ವೃತ್ತಿ ಜೀವನವನ್ನು ನಡೆಸಿದ ಡಿವಿಜಿ ಕೊಟ್ಟ ಕಗ್ಗದ ಗಂಟು ಮಾತ್ರ ಅತ್ಯಮೂಲ್ಯವಾದುದು. ಸರ್ವರೊಳಗೊಂದೊಂದು ನುಡಿ ಕಲಿತು ಸರ್ವಜ್ಞ ಕವಿ ಬದುಕಿನ ಎಲ್ಲ ದಿಕ್ಕುಗಳಿಂದಲೂ ಅನುಭವದ ಸಾರವನ್ನು ಹೆಕ್ಕಿ ತೆಗೆದು ತ್ರಿಪದಿಗಳಲ್ಲಿ ಇಟ್ಟ ಹಾಗೆ ಡಿ.ವಿ.ಜಿ. ತಮ್ಮದೇ ಧಾಟಿಯಲ್ಲಿ ಕಗ್ಗಗಳನ್ನು ಕೈಗಿತ್ತವರು. ಇವತ್ತು ಡಿ.ವಿ.ಜಿ.ಯವರನ್ನು ನೆನೆದು ಅವರ ಬಗ್ಗೆ ನಾಲ್ಕಾರು ಸಾಲು ಬರೆಯಲಿಕ್ಕೆ ಕಾರಣವಿದೆ. ಅದೆಂದರೆ ಡಿ.ವಿ.ಜಿ.ಯವರ ಕಗ್ಗಗಳೋಪಾದಿಯಲ್ಲಿ ಮಂಡ್ಯದ ನೆಲದೊಳಗೊಂದು ಪದ್ಯ ಪುಸ್ತಕ ಜಗತ್ತಿಗೆ ಕಣ್ತೆರೆದಿದೆ. ಅಲ್ಲಿ ಜಗತ್ತಿನ ಜನರಿಗೆ ಕಿವಿ ಹಿಂಡಿ ಉಪದೇಶ ಕೊಟ್ಟವನು ಮಂಕುತಿಮ್ಮನಾದರೆ ಇಲ್ಲಿವನು ಪೆದ್ದಮಾರ ಹೌದು! ಡಾ. ಪ್ರದೀಪಕುಮಾರ ಹೆಬ್ರಿ, ಯುಗಾವತಾರಿಯಂತಹ ಮಹಾಕಾವ್ಯವನ್ನು ತಮ್ಮ ಲೇಖನಿಯಿಂದ ಒಡಮೂಡಿಸುತ್ತಲೇ, ಕಗ್ಗದಂತಹ ೧೧೩೪ ಪದ್ಯಗಳನ್ನು ಪೆದ್ದಮಾರನ ಪದ್ಯವಾಗಿ ನಮ್ಮ ಕೈಗಿತ್ತಿದ್ದಾರೆ. ಬೇಸರವಾದಾಗಲೆಲ್ಲ ಪುಟತಿರುವಿ ಹಾಕಿ ಅಲ್ಲಿ ನಿಮಗೊಂದು ಸಾಂತ್ವನ ಸಿಗುತ್ತದೆ. ನೆನಪಾದಾಗಲೆಲ್ಲ ಕಣ್ಣಾಡಿಸಿ ನಿಮಗೊಂದು ಸಭ್ಯ ಓದಿನ ಅನುಭೂತಿ ಸಿಗುತ್ತದೆ. ಖಷಿಯಾದಾಗ ಒಮ್ಮೆ ಹಾಳೆ ತೆರೆದು ಓದಿ, ಆ ಖುಷಿಯ ಹಿಂದೆಯೇ ಬಂದೊದಗಲಿರುವ ದುಃಖಕ್ಕೆ ಒಂದು ಪರಿಹಾರ ಸಿಗುತ್ತದೆ. ಹೀಗೆ.... ಅಲ್ಲಿ ಯಾವುದುಂಟು ಯಾವುದಿಲ್ಲ ಅಂತ ಹೇಳುವ ಹಾಗಿಲ್ಲ. ಸುಮ್ಮನೇ ಕೇಳಿಸಿಕೊಳ್ಳಿ, 'ಬದುಕು ಸಾಯುವ ಮುನ್ನ ಗಮನಿಸುತ ಎಲ್ಲವನು ವ್ಯರ್ಥವೆನಿಸದ ರೀತಿ ಬದುಕ ಸಾಗಿಸಬೇಕು ಇಂದಿದ್ದು ಹೋದವನ ನೆನೆಯಲಾರರು ಜನರು ನಾಳೆಗಿರಬೇಕು ನೀನು-ಪೆದ್ದಮಾರಾ!' ಜಗತ್ತಿನಲ್ಲಿ ನಾವೆಲ್ಲರೂ ಜನ್ಮ ತಳೆದಿದ್ದಾಗಿದೆ. ಯಾವುದೋ ಪುಣ್ಯ, ಯಾರದೋ ಹರಕೆ ನಾವಿಲ್ಲಿ ಮನುಷ್ಯರಾಗಿ ಹುಟ್ಟಿದ್ದೇವೆ. ಆದರೆ ನಿಜ ಅರ್ಥದಲ್ಲಿ ಮನುಜರಾಗಿ ಬಾಳುವೆ ನಡೆಸಬೇಕಾಗಿದೆ. ಸಾಯುವ ಮೊದಲೊಮ್ಮೆ ಯೋಜಿಸಿ, ಯೋಚಿಸಿ ಜೀವನದ ಹಾದಿಯನ್ನು ನಾವೇ ನಿರ್ಮಿಸಿಕೊಳ್ಳಬೇಕಿದೆ. ಛೇ! ನಾವಿರೋದೇ ದಂಡ ಅಂತ ಯಾವತ್ತಿಗಾದರೂ ಯಾರಿಗಾದರೂ ಅನಿಸಬಾರದು. ಅಷ್ಟೇ ಯಾಕೆ ನಮಗೇ ಹಾಗನ್ನಿಸಕೂಡದು. ಬದುಕು ಮುಗಿದು ನಾವು ಮಣ್ಣು ಸೇರಿದರೂ ನಮ್ಮ ಕೆಲಸದಿಂದ ನಡೆಯಿಂದ, ನುಡಿಯಿಂದ, ಸತ್ವಪೂರ್ಣವಾಗಿ ಬದುಕಿದ ನೆನಪುಗಳಿಂದ ಎಷ್ಟು ವರ್ಷವಾದರೂ ನಾವು ಈ ಜಗತ್ತಿನಲ್ಲಿ ಉಳಿಯಬೇಕೆಂಬ ಸತ್ಯವನ್ನು ಹೆಬ್ರಿ ತಣ್ಣಗೆ ಬಿಚ್ಚಿಡುತ್ತಾ ಹೋಗುತ್ತಾರೆ. 'ಓದದಿದ್ದರೆ ನೀನು ಯಾವ ಫಲವಿದೆ ಹೇಳು? ಓದು ಒಯ್ಯುವುದು ದಿವ್ಯತೆಯ ಭಾವಕ್ಕೆ, ನೋವನೆಲ್ಲವ ಮರೆಸಿ ಹೊಸಲೋಕದನುಭಾವ ಓದೆಂಬುದನನ್ಯತೆಯು-ಪೆದ್ದಮಾರಾ!' ದೇಶ ಸುತ್ತು ಇಲ್ಲ ಕೋಶ ಓದು ಅನ್ನುವುದೊಂದು ಸೂಕ್ತಿಯಿದೆ. ನಾಲ್ಕು ಗೋಡೆಯ ಮಧ್ಯೆ ಕುಳಿತರೆ ಮೂರ್ಖರಾಗುವುದು ಹೇಗೋ ಹಾಗೆ, ನಮ್ಮದೇ ಲೋಕದಲ್ಲಿ ನಾವಿದ್ದು ಕೂಪಮಂಡೂಕಗಳಾಗುವುದಕ್ಕಿಂತ ದೇಶ ಸುತ್ತಿ ಅನುಭವ ಪಡೆಯಬೇಕು ಅಥವಾ ಓದಿನ ಮೂಲಕ ಜ್ಞಾನ ಪಡೆಯಬೇಕು. ಓದೆನ್ನುವುದು ನೀಡುವ ಸಂತಸವನ್ನು ವರ್ಣಿಸಲು ಅಸಾಧ್ಯ. ಏಕಾಂಗಿಯಾಗಿ ಕೂತವನ ಜೊತೆಗಾರನಾಗಿ ಬರುವುದೇ ಓದು. ಅದೊಂದು ಸಮ್ಮೋಹನ ಕ್ರಿಯೆ. ಓದಿಗೆ ಕೂತಾಗಲೆಲ್ಲ ಊಟ, ತಿಂಡಿ, ನಿದ್ರೆ ಮರೆತೇ ಹೋಗುವ ಹಾಗೆ ಓದು ನಮ್ಮ ಮೇಲೆ ಮಾಡುವ ಯಕ್ಷಿಣಿ ಅನನ್ಯವಾದುದು. ಅದೊಂದು ದಿವ್ಯ ಅನುಭೂತಿ. ಸಾವಿರ ಚಿಂತೆಯಿರಲಿ. ಅದನ್ನೆಲ್ಲ ಗಂಟು ಕಟ್ಟಿ ಬಿಸಾಕುವ ಹಾಗೆ ಒಂದು ಒಳ್ಳೆಯ ಓದು ನಮ್ಮ ಮನಸ್ಸನ್ನು ಪರಿವರ್ತನೆ ಮಾಡುತ್ತದೆ. ಅಂಥಾ ಓದನ್ನೇ ನಾವು ಕಡೆಗಣಿಸಿಬಿಟ್ಟರೆ ನಮಗ್ಯಾವ ಫಲವಿದೆ ಅನ್ನುತ್ತಾರೆ ಹೆಬ್ರಿ. ಅಂಥಾ ಅನನ್ಯವಾದ ಓದನ್ನು ಸಿದ್ದಿಸಿಕೊಂಡ ಮಾತ್ರಕ್ಕೇ ಅವರಿಲ್ಲಿ ನಮ್ಮ ಕೈಗೆ ಒಂದು ಸಿದ್ಧಪಾಕದಂತಿರುವ ಕೃತಿಯೊಂದನ್ನು ಕೈಗಿತ್ತಿದ್ದಾರೆ. ಇಂತಹ ಸಾವಿರಕ್ಕೂ ಹೆಚ್ಚು ಪದ್ಯಗಳು. ನಿಮ್ಮ ಮನ ತಣಿಸಲಿಕ್ಕೇ ಸನ್ನದ್ಧವಾಗಿ ಪುಸ್ತಕವಾಗಿ ಹೊರ ಬಂದಿದೆ. ಹೊಸ ವರ್ಷದ ಮೊದಲ ದಿನ ನಮ್ಮೆಲ್ಲರಿಗೊಂದು ಕೊಡುಗೆಯಾಗಿ ಸಿಕ್ಕಿದ್ದು ಪೆದ್ದಮಾರನ ಪದ್ಯ.
2020/07/02 18:49:42
http://amerikannada.org/html/latest_articles.php?artid=116
mC4