text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ಬೆಂಗಳೂರಿನಲ್ಲಿ ಅತ್ಯಾಧುನಿಕ ಸಮಾವೇಶ ಕೇಂದ್ರ, ಬಿಝಿನೆಸ್ ಪಾರ್ಕ್‍ಗೆ ಶಂಕುಸ್ಥಾಪನೆ | CM will laying foundation for International Convention Center, Business Park - Kannada Oneindia ಬೆಂಗಳೂರಿನಲ್ಲಿ ಅತ್ಯಾಧುನಿಕ ಸಮಾವೇಶ ಕೇಂದ್ರ, ಬಿಝಿನೆಸ್ ಪಾರ್ಕ್‍ಗೆ ಶಂಕುಸ್ಥಾಪನೆ ಬೆಂಗಳೂರು, ಫೆ. 22: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ತಲೆಯೆತ್ತಲಿರುವ ಬಹುನಿರೀಕ್ಷಿತ ಬೆಂಗಳೂರು ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ (ಬಿಐಸಿಸಿ- ಬೆಂಗಳೂರು ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್) ಮತ್ತು ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ (ಬಿಎಸ್‍ಬಿಪಿ)ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಭುವನಹಳ್ಳಿಯಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಶ್ರೀ ಆರ್.ವಿ.ದೇಶಪಾಂಡೆ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಿ : ದೇಶಪಾಂಡೆ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಈ ಸಮಾರಂಭದಲ್ಲಿ ಸಚಿವ ಕೃಷ್ಣ ಬೈರೇಗೌಡ, ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ಸಂಸದ ವೀರಪ್ಪ ಮೊಯಿಲಿ, ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಮುಂತಾದವರು ಉಪಸ್ಥಿತರಿರಲಿದ್ದಾರೆ. "ಉದ್ಯಮಲೋಕದವರು ಸಭೆ, ಸಮಾರಂಭ, ಸಮಾಲೋಚನೆ, ಸಮಾವೇಶ, ವಸ್ತುಪ್ರದರ್ಶನ ನಡೆಸಲು ಅನುಕೂಲವಾಗಲೆಂಬ ಉದ್ದೇಶದಿಂದ ಸಮಾವೇಶ ಕೇಂದ್ರ ಮತ್ತು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಕ್ರಮವಾಗಿ 35 ಎಕರೆ ಮತ್ತು 407 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿದೆ,'' ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. 'ಮಹತ್ವಾಕಾಂಕ್ಷಿ ಸಿಗ್ನೇಚರ್ ಬಿಝಿನೆಸ್ ಪಾರ್ಕ್, ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಉದ್ಯಾನನಗರಿ ಮತ್ತು ಗ್ರೀನ್‍ಹೌಸ್ ಪರಿಕಲ್ಪನೆಯಡಿ ನಿರ್ಮಿಸಲಿರುವ ಈ ಎರಡೂ ಯೋಜನೆಗಳಿಗೆ ಅಂದಾಜು 935 ಕೋಟಿ ರೂ. ವೆಚ್ಚವಾಗಲಿದೆ," ಎಂದು ಅವರು ಮಾಹಿತಿ ನೀಡಿದ್ದಾರೆ. ವಿದ್ಯುತ್‍ಚಾಲಿತ ವಾಹನಗಳಿಗೆ ಸಿಎಂ, ಸಚಿವ ದೇಶಪಾಂಡೆ ಚಾಲನೆ "ಸಿಗ್ನೇಚರ್ ಬಿಝಿನೆಸ್ ಪಾರ್ಕ್‍ನಲ್ಲಿ 8,000 ಆಸನ ಸಾಮರ್ಥ್ಯದ ಸಮಾವೇಶ ಕೇಂದ್ರ, 6,500 ಚದರ ಮೀಟರ್ ವಿಸ್ತೀರ್ಣದ ವಸ್ತುಪ್ರದರ್ಶನಾಲಯ, ಕನಿಷ್ಠ 20 ಜನರಿಂದ ಹಿಡಿದು ಗರಿಷ್ಠ 1,000 ಜನ ಪಾಳ್ಗೊಳ್ಳಬಹುದಾದ ಸಭಾಂಗಣಗಳು, ಪಂಚತಾರಾ ಮತ್ತು ತ್ರಿತಾರಾ ಹೋಟೆಲುಗಳು, ಸರ್ವೀಸ್ ಅಪಾರ್ಟ್‍ಮೆಂಟ್‍ಗಳು ಇರಲಿವೆ,'' ಎಂದು ದೇಶಪಾಂಡೆ ವಿವರ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು "ಐಟಿ, ಬಿಟಿ, ಬಿಪಿಓ, ಔಷಧೋದ್ಯಮ ಮುಂತಾದ ಕ್ಷೇತ್ರಗಳ ದೇಶದ ಕೇಂದ್ರ ಸ್ಥಾನವಾಗಿರುವ ಬೆಂಗಳೂರಿನ ಉದ್ಯಮಿಗಳಿಗೆ ಇಂಥದೊಂದು ಸಮಾವೇಶ ಕೇಂದ್ರ ಮತ್ತು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ತುಂಬಾ ಅಗತ್ಯವಾಗಿತ್ತು. ಇದರಿಂದ ಇಲ್ಲಿನ ಉದ್ಯಮ ಪರಿಸರ ಮತ್ತಷ್ಟು ಬೆಳೆಯಲಿದೆ," ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ (ಐಡಿಡಿ) ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‍ಐಐಡಿಸಿ) ಜತೆಗೂಡಿ ಈ ಕಾರ್ಯಕ್ರಮ ಹಮ್ಮಿಕೊಂಡಿವೆ. rv deshpande siddaramaiah bengaluru karnataka ಆರ್ ವಿ ದೇಶಪಾಂಡೆ ಸಿದ್ದರಾಮಯ್ಯ ಬೆಂಗಳೂರು ಕರ್ನಾಟಕ Bengaluru International Convention Center (BICC) and Bengaluru Signature Business Park (BSBP) will be constructed near Kempegowda International Airport. Today, the Chief Minister Siddaramaiah will laying the foundation stone for this project.
2019/10/19 21:22:40
https://kannada.oneindia.com/news/bengaluru/cm-will-laying-foundation-for-international-convention-center-business-park-135478.html
mC4
ಅತೀ ಹೆಚ್ಚು ಸಂಭಾವನೆ ಲಿಸ್ಟ್ ನಲ್ಲಿ ಅಕ್ಷಯ್ ಕುಮಾರ್ ನಂ.4 ಶುಕ್ರವಾರ, 23 ಆಗಸ್ಟ್ 2019 (10:51 IST) ಮುಂಬೈ: ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಅತೀ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಸೆಲೆಬ್ರಿಟಿಗಳ ಪೈಕಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಟಾಪ್ 10 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. 2018 ರ ಜೂನ್ ನಿಂದ 2019 ರ ಜೂನ್ ವರೆಗಿನ ಅವಧಿಯಲ್ಲಿ ಪಡೆದ ಸಂಭಾವನೆ ಆಧಾರದಲ್ಲಿ ಪಟ್ಟಿ ತಯಾರಿಸಲಾಗಿದೆ. ಅದರ ಪ್ರಕಾರ ಹಾಲಿವುಡ್ ನ ಡ್ವೈನ್ ಜಾನ್ಸನ್ 640 ಕೋಟಿ ರೂ. ಸಂಭಾವನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ 466 ಕೋಟಿ ರೂ. ಗಳಿಕೆಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
2022/05/26 11:12:52
https://m-kannada.webdunia.com/article/bollywood-news-in-kannada/akshay-kumar-in-4th-place-on-forbes-list-119082300023_1.html
mC4
ಜಲಮಂಡಳಿ: ಒಳಚರಂಡಿ ಸ್ವಚ್ಛಗೊಳಿಸಲು ಯಂತ್ರ ಬಳಕೆ ಕಡ್ಡಾಯ | Vartha Bharati- ವಾರ್ತಾ ಭಾರತಿ ಬೆಂಗಳೂರು, ಫೆ.27: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಸ್‍ಟಿಪಿ ಟ್ಯಾಂಕ್, ಒಳಚರಂಡಿ ಸ್ವಚ್ಛಗೊಳಿಸಲು ಸಕ್ಕಿಂಗ್-ಜೆಟ್ಟಿಂಗ್ ಯಂತ್ರ ಬಳಕೆ ಕಡ್ಡಾಯವೆಂದು ಜಲ ಮಂಡಳಿ ತಿಳಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಲಮಂಡಳಿ, ಮ್ಯಾನ್ಯುಯಲ್ ಸ್ಕ್ಯಾವೇಂಜಿಂಗ್ ನಾಗರಿಕ ಜಗತ್ತಿಗೆ ಕಪ್ಪು ಚುಕ್ಕೆ. ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳು ಎಲ್ಲರಿಗೂ ಸಮಾನವಾಗಿವೆ. ಹೀಗಾಗಿ ಮಲದ ಗುಂಡಿಗಳನ್ನು ವ್ಯಕ್ತಿಗಳ ಮೂಲಕ ಮಾಡಿಸುವುದು ಅಮಾನವೀಯ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಎಚ್ಚರಿಕೆ ನೀಡಿದೆ. ಯುಜಿಡಿ ಮೆಷಿನ್ ಹೋಲ್‍ಗಳನ್ನು ಹಾಗೂ ಸೆಪ್ಟಿಕ್ ಟ್ಯಾಂಕ್‍ಗಳನ್ನು ಕೆಲಸಗಾರರ ಮೂಲಕ ನೇರವಾಗಿ ಸ್ವಚ್ಛಗೊಳಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಹೀಗಾಗಿ ಸಾರ್ವಜನಿಕರು ಮೆಷಿನ್‍ಹೋಲ್ ಹಾಗೂ ಎಸ್‍ಟಿಪಿಗಳ ಸ್ವಚ್ಛತೆಯನ್ನು ಸಕ್ಕಿಂಗ್, ಜೆಟಿಂಗ್ ಯಂತ್ರಗಳ ಮೂಲಕ ಮಾಡಬೇಕು. ಸಕ್ಕಿಂಗ್, ಜೆಟ್ಟಿಂಗ್ ಯಂತ್ರಗಳ ಮೂಲಕ ಸೆಪ್ಟಿಕ್ ಟ್ಯಾಂಕ್‍ಗಳ ಸ್ವಚ್ಛಗೊಳಿಸಲು ಸಾರ್ವಜನಿಕರು ಸಹಾಯವಾಣಿ 14420ಕ್ಕೆ ಕರೆ ಮಾಡಬಹುದೆಂದು ಜಲಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
2021/04/19 06:41:11
https://www.varthabharati.in/article/bengaluru/280865
mC4
ಮಾಡಿಫೈ ವೀಲ್ಹ್ ಸೌಲಭ್ಯದೊಂದಿಗೆ ಮಿಂಚಿದ ನ್ಯೂ ಜನರೇಷನ್ ಥಾರ್ ಎಸ್‌ಯುವಿ - Kannada DriveSpark 1 min ago ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಫೇಸ್‌ಲಿಫ್ಟ್ ವರ್ಷನ್ Published: Wednesday, December 2, 2020, 10:58 [IST] ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಥಾರ್ ಎಸ್‌ಯುವಿ ಕಾರು ಮಾದರಿಯ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಆಫ್ ರೋಡ್ ಎಸ್‌ಯುವಿ ಮಾದರಿಯ ಕಾರು ಮಾರಾಟದಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ. ಇದರೊಂದಿಗೆ ವಿವಿಧ ಮಾಡಿಫೈ ಕಂಪನಿಗಳು ಕೂಡಾ ಥಾರ್ ಗ್ರಾಹಕರು ಆಸಕ್ತಿಗೆ ಅನುಗುಣವಾಗಿ ವಿವಿಧ ಮಾದರಿಯ ಮಾಡಿಫೈ ಸೌಲಭ್ಯಗಳನ್ನು ಆಕರ್ಷಕ ಬೆಲೆಗಳೊಂದಿಗೆ ಮಾರಾಟ ಮಾಡುತ್ತಿದ್ದು, ವೆಲೊಸಿಟಿ ಟೈರ್ ಎನ್ನುವ ಮಾಡಿಫೈ ಕಂಪನಿಯು ಕೂಡಾ ಹೊಸ ಥಾರ್ ಕಾರು ಮಾದರಿಗಾಗಿ ಐಷಾರಾಮಿ ಮಾದರಿಯ 22 ಇಂಚಿನ ಅಯಾಲ್ ವೀಲ್ಹ್ ಸಿದ್ದಪಡಿಸಿದೆ. ಮಹೀಂದ್ರಾ ಕಂಪನಿಯು ಸ್ಟ್ಯಾಂಡರ್ಡ್ ಆಗಿ 18-ಇಂಚಿನ ಅಲಾಯ್ ವೀಲ್ಹ್ ಜೊತೆಗೆ ಆಲ್ ಟೆರೆನ್ ಟೈರ್ಸ್ ನೀಡುತ್ತಿದ್ದು, ಎಂಜಿನ್ ಸಾಮಾರ್ಥ್ಯ ಮತ್ತು ಕಾರಿನ ಗಾತ್ರಕ್ಕೆ ಪೂರಕವಾಗಿ ಆಸಕ್ತ ಗ್ರಾಹಕರು ಮಾಡಿಫೈ ಚಕ್ರಗಳ ಜೊತೆಗೆ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಬದಲಾವಣೆ ಮಾಡಿಮಾಡುತ್ತಿದ್ದಾರೆ. ಮಾಡಿಫೈ ವಾಹನ ಪಟ್ಟಿಯಲ್ಲಿ ಥಾರ್ ಕಾರು ಮಾದರಿಯು ಅಗ್ರಸ್ಥಾನದಲ್ಲಿದ್ದು, ಥಾರ್ ಖರೀದಿ ಮಾಡುವ ಶೇ. 80ಕ್ಕಿಂತಲೂ ಹೆಚ್ಚು ಗ್ರಾಹಕರು ತಮ್ಮ ಇಷ್ಟದಂತೆ ಮಾಡಿಫೈ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ ಹಲವಾರು ಮಾಡಿಫೈ ಕಂಪನಿಗಳು ಥಾರ್ ಕಾರು ಮಾದರಿಗಾಗಿ ಹಲವಾರು ಮಾಡಿಫೈ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಿದ್ದು, ವೆಲೊಸಿಟಿ ಟೈರ್ಸ್ ಕಂಪನಿಯು ಥಾರ್ ಕಾರಿಗೆ ಜೋಡಣೆ ಮಾಡಿರುವ ಹೊಸ ವೀಲ್ಹ್ ಆಕರ್ಷಕವಾಗಿರುವುದರ ಜೊತೆಗೆ ಕಾರಿನ ಖದರ್ ಹೆಚ್ಚಿಸಿದೆ. ಆದರೆ ಕಾರು ಮಾಲೀಕರು ಕೇವಲ ಆಕರ್ಷಕಣೆಯ ಉದ್ದೇಶದಿಂದ ಮಾಡಿಫೈ ಮಾಡಿಸುವ ಮೊದಲು ಯಾವೆಲ್ಲಾ ಮಾಡಿಫೈ ಸೌಲಭ್ಯಗಳು ಕಾನೂನಾತ್ಮಕವಾಗಿವೆ ಮತ್ತು ಯಾವೆಲ್ಲಾ ಮಾಡಿಫೈ ಸೌಲಭ್ಯಗಳು ಕಾನೂನುಬಾಹಿರವಾಗಿವೆ ಎಂಬುವುದನ್ನು ಅರಿತು ಮಾಡಿಫೈ ಸೌಲಭ್ಯ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯವಾದ ವಿಚಾರ. ಇಲ್ಲವಾದರೆ ಮಾಡಿಫೈ ಸೌಲಭ್ಯಗಳಿಗಾಗಿ ಲಕ್ಷಾಂತರ ಖರ್ಚು ಮಾಡುವುದಲ್ಲದೆ ಅದು ಸಾರಿಗೆ ನಿಯಮಗಳಿಗೆ ವಿರುದ್ಧವಾಗಿದ್ದಲ್ಲಿ ದಂಡ ಕೂಡಾ ಪಾವತಿಸಿಬಹುದಾದ ಪರಿಸ್ಥಿತಿ ಎದುರಾಗಬಹುದು. ಅದಕ್ಕಾಗಿ ಮಾಡಿಫೈ ಸೌಲಭ್ಯಗಳನ್ನು ಪಡೆದುಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ವಹಿಸಿಬೇಕಿದ್ದು, ಆದಷ್ಟು ಸ್ಟ್ಯಾಂಡರ್ಡ್ ಮಾಡಿಫೈ ಸೌಲಭ್ಯಗಳನ್ನು ಮಾತ್ರ ಬಳಕೆಗೆ ಮಾಡಿ. ಇನ್ನು ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.
2021/01/27 06:20:20
https://kannada.drivespark.com/four-wheelers/2020/mahindra-thar-suv-modification-with-22-inch-alloy-wheels-022709.html
mC4
ಇರಾನ್ ರಾಷ್ಟ್ರಾಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದಾಗ ಅಂಕಿತ ಹಾಕಲಾದ ತಿಳುವಳಿಕಾ ಒಡಂಬಡಿಕೆಗಳು/ ಒಪ್ಪಂದಗಳ ಪಟ್ಟಿ. (ಫೆಬ್ರವರಿ 17, 2018.) ತಿಳುವಳಿಕಾ ಒಡಂಬಡಿಕೆ/ಒಪ್ಪಂದಗಳ ಹೆಸರು. ತಿಳುವಳಿಕಾ ಒಡಂಬಡಿಕೆ/ ಒಪ್ಪಂದದ ವಿವರಣೆ ಭಾರತದ ಪರ ತಂಡದಲ್ಲಿ ಇರಾನಿಯನ ಪರ ತಂಡದಲ್ಲಿ ದ್ವಿತೆರಿಗೆ ತಡೆ ಮತ್ತು ಆದಾಯದ ಮೇಲಣ ತೆರಿಗೆ ಗೆ ಸಂಬಂಧಿಸಿ ಹಣಕಾಸು ವಂಚನೆ ತಡೆ ಒಪ್ಪಂದ ಹೂಡಿಕೆ ಮತ್ತು ಸೇವೆಗಳನ್ನು ಉತ್ತೇಜಿಸಲು ಎರಡು ರಾಷ್ಟ್ರಗಳ ನಡುವೆ ದ್ವಿತೆರಿಗೆಯ ಹೊರೆಯನ್ನು ನಿವಾರಿಸುವುದಕ್ಕಾಗಿ. ಶ್ರೀಮತಿ ಸುಷ್ಮಾ ಸ್ವರಾಜ್,ವಿದೇಶಾಂಗ ವ್ಯವಹಾರಗಳ ಸಚಿವರು. ಡಾ. ಮಸೂದ್ ಕರ್ಬಾಸಿಯನ್, ಆರ್ಥಿಕ ವ್ಯವಹಾರಗಳು ಮತ್ತು ಹಣಕಾಸು ಸಚಿವರು. ರಾಜತಾಂತ್ರಿಕ ಪಾಸ್ ಪೋರ್ಟ ಹೊಂದಿದವರಿಗೆ ವೀಸಾ ಅಗತ್ಯದಿಂದ ವಿನಾಯತಿ ನೀಡುವ ತಿಳುವಳಿಕಾ ಒಪ್ಪಂದ. ಪರಸ್ಪರ ರಾಜತಾಂತ್ರಿಕ ಪಾಸ್ ಪೋರ್ಟ್ಹೊಂದಿರುವವರಿಗೆ ಪ್ರಯಾಣಿಸಲು ವೀಸಾ ಅಗತ್ಯದಿಂದ ವಿನಾಯತಿ. ಡಾ. ಮಹಮೂದ್ ಜಾವೇದ್ ಝರೀಫ್ , ವಿದೇಶಾಂಗ ವ್ಯವಹಾರಗಳ ಸಚಿವರು. ಗಡೀಪಾರು ಒಪ್ಪಂದದ ದೃಢೀಕೃತ ದಾಖಲೆಗಳ ವಿನಿಮಯ. ಇದರಿಂದ 2008 ರಲ್ಲಿ ಭಾರತ ಮತ್ತು ಇರಾನ್ ನಡುವೆ ಅಂಕಿತ ಹಾಕಲಾದ ಗಡೀಪಾರು ಒಪ್ಪಂದ ಜಾರಿಗೆ ಬರುತ್ತದೆ. ಡಾ. ಮಹಮ್ಮದ್ ಜಾವೇದ್ ಝರೀಫ್, ವಿದೇಶಾಂಗ ವ್ಯವಹಾರಗಳ ಸಚಿವರು. ಚಬಹಾರ್ ನ ಶಹೀದ್ ಬೆಹೆಸ್ತಿ ಬಂದರಿನ ಹಂತ 1 ರ ಮಧ್ಯಂತರ ಅವಧಿಯ ಲೀಸ್ ಗುತ್ತಿಗೆಗೆ ಸಂಬಂಧಿಸಿ ಇರಾನಿನ ಬಂದರು ಮತ್ತು ಸಾಗರೋತ್ತರ ಸಂಘಟನೆ(ಪಿ.ಎಂ.ಒ.) , ಮತ್ತು ಭಾರತದ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್(ಐ.ಪಿ.ಗಿ.ಎಲ್.) ನಡುವೆ ಒಡಂಬಡಿಕೆ. ಬಹು ಉದ್ದೇಶಿತ ಮತ್ತು ಕಂಟೈನರ್ ಟರ್ಮಿನಲ್ ನ ಒಂದು ಬಾಗದಲ್ಲಿ ಈಗಿರುವ ಬಂದರು ಸೌಲಭ್ಯಗಳೊಂದಿಗೆ ಒಂದೂವರೆ ವರ್ಷ (18 ತಿಂಗಳು) ಕಾರ್ಯ ನಿರ್ವಹಣೆ ಮಾಡಲು ಗುತ್ತಿಗೆ ನೀಡಿಕೆ.. ಶ್ರೀ ನಿತಿನ್ ಗಡ್ಕರಿ,ನೌಕಾಯಾನ ಸಚಿವರು. ಡಾ. ಅಬ್ಬಾಸ್ ಅಖುಂಡಿ, ರಸ್ತೆ ಮತ್ತು ನಗರಾಭಿವೃದ್ಧಿ ಸಚಿವರು. ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದ. ಸಾಂಪ್ರದಾಯಿಕ ವೈದ್ಯಪದ್ದತಿಯ ಶಿಕ್ಷಣ ಕ್ರಮದ ಬೋಧನೆ ನಿಯಮಾವಳಿ,ಕಾರ್ಯಾನುಷ್ಟಾನ, ಔಷಧಿ ಮತ್ತು ಔಷಧಿರಹಿತ ಚಿಕಿತ್ಸೆಗಳು; ಎಲ್ಲ ರೀತಿಯ ಔಷಧೀಯ ಸಾಮಗ್ರಿ ಮತ್ತು ದಾಖಲೆಗಳ ಪುರೈಕೆ ಅನುಕೂಲತೆ, ವೈದ್ಯ ವೃತ್ತಿ ಯಲ್ಲಿ ತರಬೇತಿಗಾಗಿ ತಜ್ಞರ ವಿನಿಮಯ, ಪ್ಯಾರಾ ಮೆಡಿಕೋಗಳು, ವಿಜ್ಞಾನಿಗಳು, ಬೋಧಕರು,ಮತ್ತು ವಿದ್ಯಾರ್ಥಿಗಳಿಗೆ ಸಂಶೋಧನೆ, ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಅವಕಾಶ ಒದಗಿಸುವಿಕೆ, ಪ್ರಯೋಗ ಕ್ರಮ ಸಹಿತವಾದ ಔಷಧ ವಸ್ತು ಮತ್ತು ಅವುಗಳ ತಯಾರಿಕಾ ಸೂತ್ರಗಳ ಪರಸ್ಪರ ಮಾನ್ಯತೆ ಹಾಗು ಅಕಾಡೆಮಿಕ್ ಪೀಠಗಳ ಸ್ಥಾಪನೆ, ಶಿಷ್ಯ ವೇತನಗಳ ಅವಕಾಶ, ಪರಸ್ಪರ ಸಾಂಪ್ರ್ದಾಯಿಕ ತಯಾರಿಕೆಗಳಿಗೆ ಮಾನ್ಯತೆ,ಪರಸ್ಪರ ವಿನಿಮಯ ಆಧಾರದ ಮೇಲೆ ವೈದ್ಯ ಪದ್ಧತಿಯ ಪ್ರಾಕ್ಟೀಸಿಗೆ ಅನುಮತಿ. ಶ್ರೀ ವಿಜಯ ಗೋಖಲೆ,ವಿದೇಶಾಂಗ ಕಾರ್ಯದರ್ಶಿ ಗೌರವಾನ್ವಿತ ಘೋಲಮರೇಜಾ ಅನ್ಸಾರಿ,ಇರಾನ್ ರಾಯಭಾರಿ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರ ವರ್ಧನೆಗೆತಜ್ಞರನ್ನು ಒಳಗೊಂಡ ವ್ಯಾಪಾರ ಪರಿಹಾರ ತಂಡ ರಚನೆಗೆ ತಿಳುವಳಿಕಾ ಒಡಂಬಡಿಕೆ. ವ್ಯಾಪಾರ ಪರಿಹಾರ ಕ್ರಮಗಳಾದ ತಂದು ಬಿಸಾಕುವ ನೀತಿ ವಿರುದ್ಧ ಮತ್ತು ಸುಂಕ ತಪ್ಪಿಸುವಿಕೆಯಂತಹ ಕ್ಷೇತ್ರಗಳಲ್ಲಿ ಸಹಕಾರದ ಚೌಕಟ್ಟನ್ನು ಸ್ಥಾಪಿಸುವ ಇರಾದೆಯನ್ನು ಇದು ಹೊಂದಿದೆ. ಶ್ರೀಮತಿ ರೀಟಾ , ಕಾರ್ಯದರ್ಶಿ(ವಾಣಿಜ್ಯ.) ಡಾ. ಮಹಮ್ಮದ್ ಖಝಾಯಿ,ಆರ್ಥಿಕ ವ್ಯ್ವಹಾರಗಳು ಮತ್ತು ಹಣಕಾಸು ಉಪಸಚಿವರು. ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ ಕೃಷಿ ಮತ್ತು ಆ ಸಂಬಂಧಿ ವಲಯಗಳಲ್ಲಿ ಜಂಟಿ ಕಾರ್ಯಚಟುವಟಿಕೆಗಳು, ಕಾರ್ಯಕ್ರಮ ಕುರಿತ ಮಾಹಿತಿ, ಸಿಬಂದಿ ವಿನಿಮಯವೂ ಸೇರಿದಂತೆ,ಕೃಷಿ ಬೆಳೆಗಳು, ಕೃಷಿ ವಿಸ್ತರಣೆ,ತೋಟಗಾರಿಕೆ, ಯಾಂತ್ರೀಕರಣ,ಕೊಯಿಲೋತ್ತರ ತಂತ್ರಜ್ಞಾನ , ಬೆಳೆ ಕಾಪಿಡುವ ಕ್ರಮಗಳು , ಸಾಲ ಮತ್ತು ಸಹಕಾರ,ಮಣ್ಣು ಸಂರಕ್ಷಣೆ , ಬೀಜ ತಂತ್ರಜ್ಞಾನ, ಪಶುಪಾಲನಾ ಕ್ಷೇತ್ರದಲ್ಲಿ ಸುಧಾರಣೆ, ಡೈರಿ ಅಭಿವೃದ್ಧಿಯಲ್ಲಿ ದ್ವಿಪಕ್ಷೀಯ ಸಹಕಾರ, ಶ್ರೀ ಎಸ್.ಕೆ.ಪಟ್ಟನಾಯಕ್,ಕಾರ್ಯದರ್ಶಿ (ಕೃಷಿ) ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ. ತಾಂತ್ರಿಕ, ವೈಜ್ಞಾನಿಕ, ಹಣಕಾಸು, ಮತ್ತು ಮಾನವ ಸಂಪನ್ಮೂಲ , ಗುಣಮಟ್ಟ ಉನ್ನತೀಕರಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾನವ ,ಸಲಕರಣೆ ಮತ್ತು ಹಣಕಾಸು ಸಂಪನ್ಮೂಲ ಸಾಧಿಸಿಕೊಳ್ಳಲು, ವೈದ್ಯಕೀಯ ಶಿಕ್ಷಣ, ಸಂಶೋಧನೆ, ಮತ್ತು ತರಬೇತಿ,ವೈದ್ಯಕೀಯ ಕ್ಷೇತ್ರದ ವೈದ್ಯರ ತರಬೇತಿಯಲ್ಲಿ ಮತ್ತು ಆ ಸಂಬಂಧಿ ಕ್ಷೇತ್ರದಲ್ಲಿ ವೃತ್ತಿಪರರ ತರಬೇತಿಗೆ ಸಂಬಂಧಿಸಿ ಅನುಭವ ವಿನಿಮಯ,ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಆರೋಗ್ಯ ರಕ್ಷಣಾ ಸೌಲಭ್ಯಗಳ ಸ್ಥಾಪನೆಗೆ ನೆರವು, ಔಷಧಿಗಳ , ವೈದ್ಯಕೀಯ ಸಲಕರಣೆಗಳ, ಸೌಂದರ್ಯ ವರ್ಧಕಗಳ ನಿಯಂತ್ರಣ,ಮತ್ತು ಆ ಸಂಬಂಧಿ ಮಾಹಿತಿ ವಿನಿಮಯ, ವೈದ್ಯಕೀಯ ಕ್ಷೇತ್ರದ ಸಂಶೋಧನೆಯಲ್ಲಿ ಸಹಕಾರ, ಸಾರ್ವಜನಿಕ ಆರೋಗ್ಯ, ಸಹ್ಯ ಅಭಿವೃದ್ಧಿಯ ಗುರಿಗಳ (ಎಸ್.ಡಿ.ಜಿ.) ಸಾಧನೆ ಮತ್ತು ಅಂತಾರಾಷ್ಟ್ರೀಯ ಆರೋಗ್ಯದಲ್ಲಿ ಸಹಕಾರ. ಅಂಚೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ. ಎರಡೂ ದೇಶಗಳ ಅಂಚೆ ಇಲಾಖೆಯ ಅನುಭವ, ಪರಿಣಿತಿಯ ವಿನಿಮಯ ,ಮಾಹಿತಿ,ಜ್ಞಾನ,ಮತ್ತು ಇ-ಕಾಮರ್ಸ್, ಸರಕು ಸಾಗಾಣಿಕೆ ಸೇವೆಯಲ್ಲಿ ತಂತ್ರಜ್ಞಾನ ವಿನಿಮಯ, ಅಂಚೆ ಚೀಟಿಗಳಲ್ಲಿ ಸಹಕಾರ,ತಜ್ಞರ ಕಾರ್ಯಪಡೆಯ ರಚನೆ; ಉಭಯ ದೇಶಗಳ ನಡುವೆ ವಾಯು ಮತ್ತು ಭೂಸಾರಿಗೆ ಮೂಲಕ ಸರಕು ವರ್ಗಾವಣೆ ಸಾಧ್ಯತೆ ಬಗ್ಗೆ ಕಾರ್ಯ ಸಾಧ್ಯತಾ ಅಧ್ಯಯನ ಇದರಲ್ಲಿ ಸೇರಿದೆ. ಶ್ರೀ ಅಂತನಾರಾಯಣ ನಂದಾ,ಕಾರ್ಯದರ್ಶಿ (ಅಂಚೆ)) ಈ ಕೆಳಗಿನ ತಿಳುವಳಿಕಾ ಒಡಂಬಡಿಕೆಗಳನ್ನು ವ್ಯಾಪಾರೋದ್ಯಮ ಸಂಘಟನೆಗಳ ಜತೆ ಮಾಡಿಕೊಳ್ಳಲಾಗಿದ್ದು ಈ ಭೇಟಿಯ ಸಂಧರ್ಭದಲ್ಲಿ ಸಹಿಹಾಕಲಾಗಿದೆ. (1) ಭಾರತದ ಇ.ಇ.ಪಿ.ಸಿ. ಮತ್ತು ಇರಾನಿನ ವ್ಯಾಪಾರ ಉತ್ತೇಜನ ಸಂಘಟನೆ ನಡುವೆ ತಿಳುವಳಿಕಾ ಒಡಂಬಡಿಕೆ. (2) ಭಾರತೀಯ ವಾಣಿಜ್ಯೋದ್ಯಮ ಮಂಡಳಿಗಳ ಒಕ್ಕೂಟ (ಎಫ್.ಐ.ಸಿ.ಸಿ.ಐ.) ಮತ್ತು ಇರಾನಿನ ವಾಣಿಜ್ಯೋದ್ಯಮ, ಕೈಗಾರಿಕೆ, ಗಣಿ ಮತ್ತು ಕೃಷಿ ಮಂಡಳಿ(ಐ.ಸಿ.ಸಿ.ಐ.ಎಂ.ಎ.) ಜತೆ ತಿಳುವಳಿಕಾ ಒಡಂಬಡಿಕೆ. (3) (3) ಭಾರತೀಯ ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (ಎ.ಎಸ್.ಎಸ್.ಒ.ಸಿ.ಎಚ್.ಎ.ಎಂ.) ಮತ್ತು ಇರಾನಿನ ವಾಣಿಜ್ಯೋದ್ಯಮ,ಕೈಗಾರಿಕೆ, ಗಣಿ ಮತ್ತು ಕೃಷಿ ಮಂಡಳಿ (ಐ.ಸಿ.ಸಿ.ಐ.ಎಂ.ಎ.) ಜತೆ ತಿಳುವಳಿಕಾ ಒಡಂಬಡಿಕೆ. (4) ಪಿ.ಎಚ್.ಡಿ ವಾಣಿಜ್ಯೋದ್ಯಮ ಮಂಡಳಿ (ಪಿ.ಎಚ್.ಡಿ.ಸಿ.ಸಿ.ಐ.) ಮತ್ತು ಇರಾನಿನ ವಾಣಿಜ್ಯೋದ್ಯಮ, , ಗಣಿ ಮತ್ತು ಕೃಷಿ ಮಂಡಳಿ (ಐ.ಸಿ.ಸಿ.ಐ.ಎಂ.ಎ.) ಜತೆ ತಿಳುವಳಿಕಾ ಒಡಂಬಡಿಕೆ.
2021/12/03 10:16:55
https://www.narendramodi.in/ka/list-of-mous-agreements-signed-during-the-visit-of-president-of-iran-to-india-february-17-2018--538980
mC4
ಪ್ರಧಾನಿ ಮೋದಿ ಸೋಲಿಗೆ ಪೇಜಾವರ ಸಲಹೆ ಏನು..? | Digital Kannada Home ರಾಜಕೀಯ ಪ್ರಧಾನಿ ಮೋದಿ ಸೋಲಿಗೆ ಪೇಜಾವರ ಸಲಹೆ ಏನು..? ಪ್ರಧಾನಿ ಮೋದಿ ಸೋಲಿಗೆ ಪೇಜಾವರ ಸಲಹೆ ಏನು..? HH Sri Vishvesha Tirtha Swamiji of Pejawar Mutt calls on the Prime Minister, Shri Narendra Modi, in New Delhi on July 22, 2014. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ಬಿಜೆಪಿ ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲುಂಡಿದೆ. ಪ್ರಧಾನಿ ಮೋದಿ, ಅಮಿತ್​ ಶಾ ಜೋಡಿ ಕಡೆಗೆ ಎಲ್ಲರೂ ಬೆರಳು ಮಾಡ್ತಿದ್ದಾರೆ. ಇದೀಗ ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ಕೃಷ್ಣ ಮಠದ ಹಿರಿಯ ಯತಿ ವಿಶ್ವೇಶತೀರ್ಥರೂ ಕೂಡ ಪ್ರಧಾನಿ ಮೋದಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅದರಲ್ಲೂ ಪಕ್ಕದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ವಿರೋಧ ಕಟ್ಟಿಕೊಂಡರೆ ಬಿಜೆಪಿಗೆ ನಷ್ಟವಾಗಲಿದೆ ಎಂದಿರುವ ಶ್ರೀಗಳು, ಚಂದ್ರಬಾಬು ನಾಯ್ಡು ಬಿಜೆಪಿಯನ್ನು ಬಗ್ಗುಬಡಿಯಲು ಹಠ ಹಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್​ ಬಿಹಾರಿ ವಾಜಪೇಯಿ ಅವರ ನೀತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ. ಮೋದಿ ಕೆಲವು ದಿಟ್ಟ ನಿರ್ಧಾರ ಮಾಡಿದ್ದಾರೆ ಆದ್ರೆ ಅವು ಜನರನ್ನು ತಲುಪಿಲ್ಲ. ಈ ಮೊದಲು ಪ್ರಧಾನಿ ಮೋದಿ ಬಗ್ಗೆ ಜನರಿಗಿದ್ದ ನಿರೀಕ್ಷೆ ಈಗ ಇಲ್ಲ. ದೇಶದ ಜನರು ನಿರೀಕ್ಷೆ ಇಟ್ಟ ಪ್ರಮಾಣದಲ್ಲಿ ದೇಶದಲ್ಲಿ ಕೆಲಸ ಆಗಿಲ್ಲ ಎಂದಿರುವ ಪೇಜಾವರ ಶ್ರೀಗಳು, 'ಜನಸಾಮಾನ್ಯರಿಗೆ ನೋಟ್ ಬ್ಯಾನ್ ಫಲ ಮುಟ್ಟಿಲ್ಲ. ಹೀಗಾಗಿ ಆರ್ಥಿಕ ಸುಧಾರಣೆ, ರಾಮಮಂದಿರಕ್ಕೆ ಆದ್ಯತೆ ಕೊಡಲಿ. ರಾಮ ಮಂದಿರ ನಿರ್ಮಾಣ ಹಿಂದೂ ಮತದಾರರ ಉತ್ಸಾಹವನ್ನು ಹೆಚ್ಚಿಸಬಹುದು' ಎಂದು ಸಲಹೆಯನ್ನೂ ನೀಡಿದ್ದಾರೆ. ಇನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ವಿಚಾರದಲ್ಲಿ ಪೇಜಾವರ ಶ್ರೀಗಳು ಮಾತನಾಡಿದ್ದು, ದೇಶಕ್ಕೆ ಮೋದಿಯೇ ಮುಂದಿನ ಪ್ರಧಾನಿ ಅಭ್ಯರ್ಥಿ ಯೋಗಿ ಆದಿತ್ಯನಾಥ್ ಮೋದಿಯಷ್ಟು ಸಮರ್ಥ ನಾಯಕ ಅಲ್ಲ. ಆದಿತ್ಯನಾಥ ರಾಜಕಾರಣಿಯಲ್ಲ ಅವರು ಸಂತ. ಉತ್ತರಪ್ರದೇಶದಲ್ಲಿ ಇಷ್ಟು ಮಾಡೋದೇ ವಿಶೇಷವಾಗಿದೆ ಎಂದಿದ್ದು, ಪಂಚರಾಜ್ಯ ಫಲಿತಾಂಶ ಮೋದಿಗೆ ಎಚ್ಚರಿಕೆ ಗಂಟೆಯಾಗಿದ್ದು, ಎನ್​ಡಿಎ ಮೈತ್ರಿಕೂಟ ಉಳಿಸಲು ಮಂದಿರ ನಿರ್ಮಾಣ ಮಾಡಬೇಕು. ಈ ಮೂಲಕ ಇತರೆ ಮಿತ್ರ ಪಕ್ಷಗಳ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು ಎಂದಿದ್ದಾರೆ.
2021/10/19 17:45:16
https://digitalkannada.com/2018/12/14/pejavara-shree-suggestion-to-modi/
mC4
ಜನರ ಸೇವಕನಾಗಿ ದುಡಿಯುತ್ತೇನೆ: ಪ್ರಮೋದ್ ಮಧ್ವರಾಜ್ | Vartha Bharati- ವಾರ್ತಾ ಭಾರತಿ ಹೆಬ್ರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಜನರ ಸೇವಕನಾಗಿ ದುಡಿಯುತ್ತೇನೆ: ಪ್ರಮೋದ್ ಮಧ್ವರಾಜ್ ವಾರ್ತಾ ಭಾರತಿ Mar 27, 2019, 9:51 PM IST ಹೆಬ್ರಿ, ಮಾ. 27: ಕೆಲಸ ಮಾಡುವ ಪ್ರಮೋದ್ ಬೇಕಾ...ಅಥವಾ... ಕೆಲಸ ಮಾಡದ ಶೋಭಾ ಕರಂದ್ಲಾಜೆ ಬೇಕಾ ಎಂದು ನೀವೆಲ್ಲ ಯೋಚಿಸಿ, ನನ್ನನ್ನು ಗೆಲ್ಲಿಸಿ. ಮುಂದಿನ 5 ವರ್ಷಗಳ ಕಾಲ ಜನರ ಸೇವಕನಾಗಿ ದುಡಿಯುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸಂ ಹಾಗೂ ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸಿರುವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಬುಧವಾರ ಹೆಬ್ರಿ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು. ನಾನು ಸಚಿವನಾಗಿದ್ದಾಗ ಉಡುಪಿ ಕ್ಷೇತ್ರದ ಮಟ್ಟಿಗೆ ಸ್ವಾರ್ಥಿಯಾಗಿದ್ದೆ. ಮುಂದೆ ಲೋಕಸಭಾ ಕ್ಷೇತ್ರದ ಮಟ್ಟಿಗೆ ಸ್ವಾರ್ಥಿಯಾಗಿ ಜನಸೇವೆ ಮುಂದು ವರಿಸುವೆ ಎಂದು ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು. ಸತ್ಯ ಹೇಳುವ, ಪ್ರಾಮಾಣಿಕ ರಾಜಕಾರಣಿ ಇದ್ದರೆ ದೇಶದಲ್ಲಿ ನಾನು ಮಾತ್ರ ಎಂದ ಮಧ್ವರಾಜ್, ಈ ತನಕ ಜನರ ಸೇವೆಯನ್ನು ಮಾಡಿದ್ದೇನೆ. ಓಟಿಗೋಸ್ಕರ ಸುಳ್ಳು ಹೇಳುವ ಅನಿವಾರ್ಯತೆ ಇಲ್ಲ. ಜನರೊಂದಿಗೆ ನಿರಂತರ ಇರುವ ಸಂಸದರು ನಿಮಗೆ ಬೇಕಾ ಅಪರೂಪಕ್ಕೆ ಬಂದು ಹೋಗುವ ಸಂಸದರು ಬೇಕಾ ಯೋಚಿಸಿ ಎಂದು ಅವರು ನುಡಿದರು. ಉಡುಪಿ ಜಿಲ್ಲೆಯ ಮರಳು ಲೋಡಿಗೆ ಒಂದು ಲಕ್ಷದಂತೆ ಬೆಂಗಳೂರಿಗೆ ಹೋಗುತ್ತಿತ್ತು. ನಮ್ಮ ಜಿಲ್ಲೆಯ ಮರಳು ನಮ್ಮ ಜಿಲ್ಲೆಗೆ ದೊರೆಯಬೇಕು ಎಂದು ಕಾನೂನು ತಂದು ನಮ್ಮ ಜನರಿಗೆ ಮರಳು ದೊರೆಯುವಂತೆ ಮಾಡಿದೆ. ಈಗಿನ ಮರಳು ಸಮಸ್ಯೆಗೆ ಪ್ರಮೋದ್ ಮಧ್ವರಾಜ್ ಕಾರಣ ಎಂದು ಈಗ ಅಪಪ್ರಚಾರ ಮಾಡಲಾಗುತ್ತಿದೆ ಎಂವರು ಬೇಸರ ವ್ಯಕ್ತಪಡಿಸಿದರು. ಉಡುಪಿ ಜಿಲ್ಲೆಯ ಮರಳು ಸಮಸ್ಯೆಗೆ ಸಂಸದೆ ಶೋಭಾ ಕರಂದ್ಲಾಜೆ ವೈಫಲ್ಯವೇ ಕಾರಣ. ಕೇಂದ್ರ ಸರಕಾರದ ಕಠಿಣ ಮರಳು ನೀತಿಯಿಂದ ನಮ್ಮ ಜಿಲ್ಲೆಗೆ ಸಮಸ್ಯೆಯಾಗಿದೆ. ಇದರ ಬಗ್ಗೆ ಸಂಸದರು ತುಟಿ ಬಿಚ್ಚುತ್ತಿಲ್ಲ ಎಂದು ಪ್ರಮೋದ್ ಟೀಕಿಸಿದರು. ಹುಲಿ ಯೋಜನೆ ಜಾರಿ; ಶೋಭಾ ಮೌನ: ಕೇಂದ್ರ ಅರಣ್ಯ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ಕುದುರೆಮುಖ ಸೇರಿ ದೇಶದಲ್ಲಿ 45 ಹುಲಿ ಕಡೆಗಳಲ್ಲಿ ಯೋಜನೆ ಜಾರಿಗೊಳಿಸುವಾಗ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ನಳಿನ್‌ ಕುಮಾರ್ ಮೌನವಾಗಿದ್ದರಿಂದ ಹುಲಿ ಯೋಜನೆ ಜಾರಿ ಯಾಗಿದೆ. ಕರ್ನಾಟಕದಲ್ಲಿ ಕಸ್ತೂರಿರಂಗನ್ ವರದಿಯ ಅನುಷ್ಠಾನ ಆಗಬಾರದು ಎಂದು ಮೂರು ಸಲ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ವರದಿ ನೀಡಿದ್ದರೂ ನರೇಂದ್ರ ಮೋದಿಯ ಕೇಂದ್ರ ನಮ್ಮ ವರದಿಗೆ ಕಿವಿಗೊಡುತ್ತಿಲ್ಲ. ಪರಿಣಾಮ ಕಸ್ತೂರಿ ರಂಗನ್ ವರದಿ ಜಾರಿಯ ತೂಗುಕತ್ತಿ ನಮ್ಮ ಮೇಲಿದೆ ಎಂದು ಕಾರ್ಕಳದ ಮಾಜಿ ಶಾಸಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋಪಾಲ ಭಂಡಾರಿ ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಪಕ್ಷದ ಪ್ರಮುಖರಾದ ಎಚ್.ಶೀನ ಪೂಜಾರಿ, ರಾಘವ ದೇವಾಡಿಗ, ಜೆಡಿಎಸ್ ಕಾರ್ಕಳ ಕ್ಷೇತ್ರದ ಕಾರ್ಯಧ್ಯಕ್ಷ ಹೆಬ್ರಿ ಶ್ರೀಕಾಂತ್ ಪೂಜಾರಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಉಡುಪಿ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಉಪಸ್ಥಿತರಿದ್ದರು.
2019/07/23 05:42:07
http://www.varthabharati.in/article/karavali/184155
mC4
ನಮ್ಮನ್ನು ಉಗ್ರರೆಂದ ಸಿಎಂ ಈ ಕೂಡಲೇ ಕ್ಷಮೆ ಕೇಳಲಿ: ಸಂಸದೆ ಶೋಭಾ – Bunts Info Media ಬೆಂಗಳೂರು: ಬಿಜೆಪಿ, ಆರ್​ಎಸ್​ಎಸ್​ ನವರನ್ನು ಉಗ್ರಗಾಮಿಗಳೆಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ದಿನೇಶ್ ಗುಂಡೂರಾವ್ ಅವರು ಈ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನಾಳೆಯಿಂದ ರಾಜ್ಯಾದ್ಯಂತ ಜೈಲ್ ಭರೋ ಚಳುವಳಿ ಆರಂಭಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ದೇಶದಲ್ಲಿ ಉಗ್ರರನ್ನು ಬೆಳೆಸಿರೋ ಕಾಂಗ್ರೆಸ್ ಇದೀಗ ರಾಜ್ಯದಲ್ಲಿಯೂ ದೇಶದ್ರೋಹಿ ಸಂಘಟನೆಗಳ ಜೊತೆ ಸೇರಿ ಉಗ್ರವಾದವನ್ನು ಬೆಳೆಸುತ್ತಿದೆ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಅಲ್ಲದೇ ನಮ್ಮನ್ನು ಉಗ್ರರೆಂದಿರುವ ರಾಜ್ಯ ಸರ್ಕಾರ ಈ ಕೂಡಲೇ ಬಂಧಿಸಲಿ ಎಂದು ಸವಾಲು ಹಾಕಿದರು.
2018/01/20 12:51:48
https://buntsinfomedia.com/archives/6674
mC4
23 | ನವೆಂಬರ್ | 2010 | ಅವಧಿ 'ದಿಟ ನಾಗರ ಕಂಡರೆ'… ಕ್ಯಾಮರಾ ಕಣ್ ಚಳಕ… ಬಿ ಸುರೇಶ ನಿರ್ದೇಶಿಸುತ್ತಿರುವ ನಾಗತಿಹಳ್ಳಿ ಚಂದ್ರಶೇಕರ್ ಕಥೆ ಆಧಾರಿತ 'ಪುಟ್ಟಕ್ಕನ ಹೈವೇ' ಸಿನೆಮಾದ ಸೊಗಸು ಇಲ್ಲಿದೆ. ಛಾಯಾಗ್ರಾಹಕ ಎಚ್ .ಎಂ.ರಾಮಚಂದ್ರ ಅವರು ಸಿನಿಮಾದ ದೃಶ್ಯಗಳನ್ನು ಚಿತ್ರೀಕರಿಸುತ್ತಿರುವ ದೃಶ್ಯಗಳ ಒಂದು ಜ್ಹಲಕ್ ಇನ್ನಷ್ಟು ಫೋಟೋಗಳು : ಮ್ಯಾಜಿಕ್ ಕಾರ್ಪೆಟ್ ಜಯಶ್ರೀ ಕಾಲಂ:ಭಾವನ ಅಂದ್ರೆ ಸುಮ್ನೆನಾ… @@@ ಕನ್ನಡದ ತುಂಬಾ ಮುದ್ದು ಮುದ್ದಾದ ಚೆಲುವೆ ಭಾವನ ಉದಯ ವಾಹಿನಿಯಲ್ಲಿ ನಡೆಸಿ ಕೊಡುವಂತಹ ಕಾರ್ಯಕ್ರಮದಂತೆ ಜೆಮಿನಿಯಲ್ಲೂ ಪ್ರಸಾರ ಆಗುತ್ತದೆ. ನಮ್ಮಲ್ಲಿ ಶನಿವಾರ ,ಅವರು ಭಾನುವಾರ.ಬೆಳಿಗ್ಗೆ ಎದ್ದಾಗಲೇ ನಿರ್ಧರಿಸಿದ್ದೆ ಏನಾದ್ರೂ ಸರಿಯೇ ನಾನು ಭಾವನ ಬಗ್ಗೆ ಬರೀಲೇ ಬೇಕೂಂತ..! ನಮ್ಮ ಹುಡುಗರು ಆಕೆಯ ನಗು ನೋಡಿದ್ರೆ ಕರೆಂಟು ಹೊಡೆಸಿ ಕೊಳ್ತಾರೆ ಎನ್ನುವ ವಾಕ್ಯ ಶುರು ಮಾಡಿದೆ ಛೇ ಕರೆಂಟು ಹೊರಟೆ ಹೋಯ್ತು ಕಣ್ರೀ … ಭಾವನ ಅಂದ್ರೆ ಸುಮ್ನೆನಾ ಏನೆ ಹೇಳಿ ಜೆಮಿನಿಯಲ್ಲಿ ಸಹ ಇಂತಹ ಕಾರ್ಯಕ್ರಮ ಬಂದರೂ ಸಹ ನಮ್ ಭಾವನ ಮುಂದೆ ಆ ಹುಡುಗಿ ಡಲ್ಲೋ ಡಲ್ಲು..! ಆಹಾ ಆಹಾ! ಭಾವನ ನೀವು ನಿರೂಪಣೆ ಅಷ್ಟಕಷ್ಟೇ ಇದ್ರೂ, ಅಹಹಹಹಹಹಹಹ ಭಾವನಾ… ಅ… ಅ… ! ..ಸಂದರ್ಶನವೊಂದರಲ್ಲಿ ಭಾವನಾ ತಮಗೆ ಗಂಡು ಸಿಗ್ತಾ ಇಲ್ಲ ಅಂಥ ತುಂಬಾ ಫೀಲ್ ಮಾಡಿಕೊಂಡು ಹೇಳಿದ್ದಾರೆ !, ವರಿ ನಾಟ್ ಮಾ ನಿಮ್ಮಂತಹವರಿಗೆ ಸಿಗದೇ ಗಂಡು. 'ಚಿತ್ರಸಮೂಹ' ಆಯೋಜಿಸಿರುವ *'ಚಿತ್ರವರ್ಷ'* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ 'ಮುಖಪುಟ'.
2022/06/26 07:54:45
https://avadhi.wordpress.com/2010/11/23/
mC4
ಯೋಗ ಪದವಿ ಇದ್ದರೆ ಕೈತುಂಬಾ ದುಡಿಮೆ ಗ್ಯಾರಂಟಿ! | Yoga Science graduates can get good jobs with handsome salary Bengaluru, First Published Mar 31, 2021, 1:35 PM IST ಈಗ ಯೋಗ ಕೇವಲ ಭಾರತೀಯ ಕಾಲದ ಒಂದು ವೈದ್ಯಕೀಯ ಪದ್ಧತಿಯಾಗಿ ಅಥವಾ ಆಧ್ಯಾತ್ಮ ಧ್ಯಾನದ ಪದ್ಧತಿಯಾಗಿ ಉಳಿದಿಲ್ಲ. ಅದು ಅಧ್ಯಾತ್ಮದ ಪರದಿಯನ್ನು ದಾಟಿ ದೆ ಮತ್ತು ಅದಕ್ಕೆ ವೃತ್ತಿಪರತೆ ಜನಪ್ರಿಯತೆ ಸಿಕ್ಕಿದೆ. ಅಂದರೆ, ನೀವು ಯೋಗ ವಿಜ್ಞಾನ ಪದವೀಧರರಾಗಿದ್ದರೆ ಕೈ ತುಂಬ ಸಂಬಳ ನೀಡುವ ಹಲವು ಉದ್ಯೋಗಗಳು ನಿಮಗಾಗಿ ಕಾಯುತ್ತಿವೆ ಎಂಬುದನ್ನು ಮರೆಯಬೇಡಿ. ಯೋಗ ಎಂಬುದು ಈಗ ಕೇವಲ ನಿಮ್ಮ ಆರೋಗ್ಯವನ್ನು ವೃದ್ಧಿಸುವ ಭಾರತೀಯ ಕಲೆಯಾಗಿ ಉಳಿದಿಲ್ಲ. ಯೋಗಕ್ಕೀಗ ವಾಣಿಜ್ಯ ಆಯಾ ದಕ್ಕಿದೆ. ಅದರಲ್ಲೂ ವೃತ್ತಿಪರತೆ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಯೋಗಾಭ್ಯಾಸವನ್ನು ವೃತ್ತಿಯನ್ನಾಗಿ ಸ್ವೀಕರಿಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ. School on Scooty: ಈ ಶಿಕ್ಷಕನಿಗೆ ನೀವು ಸೆಲ್ಯೂಟ್ ಹೊಡೆಯಲೇಬೇಕು! ನಿಜ. ನೀವು ಯೋಗವನ್ನ ಚೆನ್ನಾಗಿ ಕಲಿತವರು ಎಂಬುದು ಗೊತ್ತಾದರೆ ನಿಮಗೆ ಎಲ್ಲಿಲ್ಲದ ಬೇಡಿಕೆ ಇದೆ. ಯೋಗ ಇನ್ಸ್‌ಟ್ರಕ್ಟರ್ ಆಗಿ ಕೆಲಸ ಮಾಡಬಹುದು ಮತ್ತು ಕೈ ತುಂಬ ಸಂಬಳ ಎಣಿಸಬಹುದು. ಇಲ್ಲವೇ ನಿಮ್ಮದೇ ಸ್ವಂತಃ ಯೋಗ ಕ್ಲಾಸ್‌ಗಳನ್ನು ಶುರು ಮಾಡಿ ಆ ಮೂಲಕವೂ ಹಣ ಸಂಪಾದನೆ ಮಾಡಬಹುದು. ಹಾಗಾಗಿ, ಕೆಲವೊಬ್ಬರು ಹವ್ಯಾಸಕ್ಕೆ ಕಲಿತ ಯೋಗದಿಂದಲೇ ಈಗ ತಮ್ಮ ಜೀವನವನ್ನು ಸಾಗಿಸುವ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿಗಳರೆಡೂ ಯೋಗವೇ ಆಗುತ್ತಿದೆ. ಈ ನೀವು ಯೋಗವನ್ನು ಅಕಡೆಮಿಕ್ ಆಗಿ ಕಲಿತು, ಇತರ ಪದವಿಗಳಂತೆ ನೀವು ಕೂಡ ಯೋಗದಲ್ಲಿ ಪದವಿಯನ್ನು ಪಡೆದುಕೊಳ್ಳಬಹುದು. ಇದು ನಿಮ್ಮ ವೃತ್ತಿಪರತೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಯೋಗ ಶಿಕ್ಷಕ ವೃತ್ತಿಗೆ ಈಗ ತುಂಬ ಬೇಡಿಕೆ ಇದೆ. ಯೋಗ ಮತ್ತ ಧ್ಯಾನದ ವೈಜ್ಞಾನಿಕ ಕ್ರಮದ ಬಗ್ಗೆ ಯಾರು ಜ್ಞಾನವನ್ನು ಹೊಂದಿದ್ದಾರೋ ಅವರನ್ನು ಯೋಗ ಗುರುಗಳು ಅಥವಾ ಯೋಗ ಶಿಕ್ಷಕರು ಎಂದು ಕರೆಯಲಾಗುತ್ತದೆ. ವೈದ್ಯಕೀಯ ಉಪಚಾರಕ್ಕೆ ಪರ್ಯಾಯವಾಗಿ ಯೋಗ ಜನಪ್ರಿಯವಾಗ ತೊಡಗಿದ ಬೆನ್ನಲ್ಲೇ, ಯೋಗ ಶಿಕ್ಷಕರು ಅಥವಾ ಗುರುಗಳಾಗುವುದು ಬಹುದೊಡ್ಡ ವೃತ್ತಿಪರ ಆಯ್ಕೆ ಎನಿಸಿಕೊಳ್ಳುತ್ತಿದೆ ಇತ್ತೀಚಿನ ದಿನಗಳಲ್ಲಿ. ಜೊತೆಗೆ ನಿಮಗೆ ಒಳ್ಳೆಯ ವೇತನವೂ ದೊರೆಯುತ್ತದೆ. ನೀವು ಯೋಗ ಟೀಚರ್ ಅಥವಾ ಇನ್ಸ್‌ಟ್ರಕ್ಟರ್ ಆಗಲು ಯೋಗ ಥೆರಪಿಯಲ್ಲಿ ಬಿ.ಎ ಅಥವಾ ಬಿ.ಎಸ್ಸಿ ಪದವಿ ಪಡೆಯಬಹುದು. ಪದವಿ ಪ್ರವೇಶ ಪಡೆಯಲು ಅಭ್ಯರ್ಥಿಗಳು ಶೇ.50ರಷ್ಟು ಅಂಕಗಳೊಂದಿಗೆ ಇದಕ್ಕೆ 10 ಪ್ಲಸ್ 2 ಪಾಸಾಗಿರಬೇಕು. ಹಾಗೆಯೇ ಯೋಗ ಥೆರಪಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳಬಹುದು. ಯೋಗ ಥೆರಪಿಯಲ್ಲಿ ಎಂಎ/ಎಂಎಸ್‌ಸಿ ಮಾಡಲು ಅಭ್ಯರ್ಥಿಗಳು ಪದವಿ ಹಂತದಲ್ಲಿ ಯೋಗ ಥೆರಪಿಯನ್ನು ಓದಿರಬೇಕು. ಏನೆಲ್ಲ ಅವಕಾಶಗಳಿವೆ? ಯೋಗ ಮತ್ತು ನ್ಯಾಚುರಪಥಿಯಲ್ಲಿ ಸಂಶೋಧನಾಧಿಕಾರಿ, ಯೋಗಾ ಏರೋಬಿಕ್ ಇನ್ಸ್‌ಟ್ರಕ್ಟರ್, ಅಸಿಸ್ಟಂಟ್ ಆಯುರ್ವೇದಿಕ್ ಡಾಕ್ಟರ್, ಕ್ಲಿನಿಕಲ್ ಸೈಕಾಲಿಜಿಸ್ಟ್, ಯೋಗ ಥೆರಪಿಸ್ಟ್, ಯೋಗ ಟೀಚರ್, ಥೆರಪಿಸ್ಟ್ ಮತ್ತು ನ್ಯಾಚುರೋಪಾಥ್ಸ್, ಹೆಲ್ತ್ ಕ್ಲಬ್‌ ಟ್ರೈನರ್/ಇನ್ಸಟ್ರಕ್ಟರ್... ಹೀಗೆ ಹಲವು ರೀತಿಯಲ್ಲಿ ನೀವು ಉದ್ಯೋಗಾವಕಾಶಗಳನ್ನು ಹುಡುಕಿಕೊಳ್ಳಬಹುದು. ಇಷ್ಟು ಮಾತ್ರವಲ್ಲದೇ ಇನ್ನೂ ಹಲವು ಮಾದರಿಯ ಯೋಗ ಪದವಿಯಿಂದಲೇ ಜಾಬ್ ಪಡೆಯಬಹುದಾಗಿದೆ. ಯೋಗ ಪದವೀಧರ ಫ್ರೆಶರ್‌ಗೆ ಕನಿಷ್ಠ ತಿಂಗಳಿಗೆ 10,000 ರೂ.ನಿಂದ 50,000 ರೂ. ದೊರೆಯಲಿದೆ. ಈ ಕ್ಷೇತ್ರದಲ್ಲಿ ಅನುಭವ ಹೆಚ್ಚಾದಂತೆ ವೇತನದ ಗ್ರಾಫ್ ಕೂಡ ಏರಿಕೆಯಾಗುತ್ತಾ ಹೋಗುತ್ತದೆ. ಆದಾಗ್ಯೂ, ಇತರ ವೃತ್ತಿಗಳಿಗೆ ಹೋಲಿಸಿದಾಗ ಯೋಗ ಬೋಧನೆ ಕಡಿಮೆ ಲಾಭದಾಯಕವಾಗಿದೆ. ಆದರೆ ಇದು ವೃತ್ತಿಯೊಂದಿಗೆ ಮಾನಸಿಕ ತೃಪ್ತಿಯನ್ನು ಒದಗಿಸುತ್ತದೆ. ಹಾಗೂ ಇತರರನ್ನು ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಆದರೆ ನೀವು ಈ ಕ್ಷೇತ್ರದಲ್ಲಿ ಎಕ್ಸಲೆಂಟ್ ಪ್ರದರ್ಶನ ತೋರಿಸುವ ಬಯಕೆ ಇದ್ದರೆ ಚಾಲೆಂಜ್ ಆಗಿ ತೆಗೆದುಕೊಳ್ಳಬಹುದು. ಹಾಗಾಗಿ, ಇತ್ತೀಜಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚುತ್ತದೆ. ಮತ್ತು ಭಾರತೀಯ ಪುರಾತನ ಕಲೆಯಾದ ಯೋಗದ ಬಗ್ಗೆ ಎಲ್ಲಿಲ್ಲದ ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ, ಯೋಗ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಒಳ್ಳೆಯ ಉದ್ಯೋಗಾವಕಾಶಗಳು ಮತ್ತು ಕೈ ತುಂಬ ಸಂಬಳ ಸಿಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ. ಯೋಗ ವಿಜ್ಞಾನ ಕಲಿಸುವ ಕಾಲೇಜ್‌ಗಳಾವವು? ಹಲವು ಸರ್ಕಾರಿ ಮತ್ತು ಖಾಸಗಿ ಕಾಲೇಜ್‌ಗಳಲ್ಲಿ ಯೋಗ ಪದವಿಯನ್ನು ಕಲಿಸಲಾಗುತ್ತಿದೆ. ಈ ಪೈಕಿ ಹೈದ್ರಾಬಾದ್‌ನ ಗವರ್ನ್‌ಮೆಂಟ್ ನ್ಯಾಚುರೋಪಥಿಕ್ ಮೆಡಿಕಲ್ ಕಾಲೇಜ್, ನಮ್ಮ ರಾಜ್ಯದ ಉಜಿರೆಯಲ್ಲಿರುವ ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಥಿ ಯೋಗಿಕ್ ಸೈನ್ಸಸ್, ಮೂಡುಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸಸ್, ಬೆಳಗಾವಿಯ ಕೆಎಲ್‌ಇ ಕಾಲೇಜ್ ಆಫ್ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸಸ್, ಮೈಸೂರಿನ ಪಿಕೆಆಟಿಆರ್ ಹಾಸ್ಪಿಟಲ್‌ನ ಗವರ್ನ್‌ಮೆಂಟ್ ನೇಚರ್ ಕ್ಯುರ್ ಮತ್ತು ಯೋಗ ಕಾಲೇಜ್‌ಗಳಲ್ಲಿ ಯೋಗ ಪದವಿಗಳನ್ನ ಕಲಿಸಲಾಗುತ್ತದೆ. ಆಸಕ್ತರು ಈ ಕಾಲೇಜ್‌ಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
2021/06/18 18:41:40
https://kannada.asianetnews.com/education/yoga-science-graduates-can-get-good-jobs-with-handsome-salary-qqtqhh
mC4
'ಭಾನುವಾರ ಇಡೀ ದೇಶಕ್ಕೇ ಮದ್ದು ಸಿಂಪಡಿಸ್ತಾರಂತೆ ಮೋದಿ'..! | Rumors In mangalore about modi to spray chemicals to kill coronavirus Bangalore, First Published 21, Mar 2020, 7:51 AM IST ಭಾನುವಾರ ಜನತಾ ಕರ್ಫ್ಯೂ ಹೇರಿದ್ದು ಅಂದು ಮೋದಿ ದೇಶಾದ್ಯಂತ ಕೊರೋನಾ ವೈರಸ್ ನಾಶಪಡಿಸಲು ರಾಸಾಯನಿಕ ಔಷಧಿ ಸಿಂಪಡಿಸ್ತಾರಂತೆ. ಹೀಗೊಂದು ಸುದ್ದಿ ಕೇಳಿ ಬಂದಿದ್ದು ಮಂಗಳೂರಲ್ಲಿ. ಭಾನುವಾರದ ಜನತಾ ಕರ್ಫ್ಯೂ ಬಗ್ಗೆ ಜನ ಏನ್ ಹೇಳ್ತಾರೆ ಇಲ್ಲಿ ಓದಿ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಾಲ್‌, ಶಾಲೆ ಕಾಲೇಜುಗಳು, ಕಾರ್ಯಕ್ರಮಗಳೆಲ್ಲವೂ ಬಂದ್‌ ಆಗಿರವುದರಿಂದ ನಗರದಲ್ಲಿ ಜನಸಂಚಾರ ವಿರಳವಾಗಿತ್ತು. ಬ್ಯಾಂಕ್‌ಗಳು, ಬಸ್ಸು- ರೈಲು ನಿಲ್ದಾಣಗಳು, ಮಾರುಕಟ್ಟೆಪ್ರದೇಶಗಳಲ್ಲಿ ಜನರ ಸಂಖ್ಯೆ ಎಂದಿನಂತಿರಲಿಲ್ಲ. ರಾಜ್ಯದಲ್ಲಿ ನಿರ್ಬಂಧ ಹೇರಿ ಒಂದು ವಾರ ಕಳೆದಿದ್ದು, ನಗರ ಸಂಪೂರ್ಣವಾಗಿ ಟ್ರಾಫಿಕ್‌ ಜ್ಯಾಂನಿಂದ ಮುಕ್ತವಾಗಿರುವುದು ಒಂದೆಡೆಯಾದರೆ ವ್ಯಾಪಾರ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಕುರಿತು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
2020/04/05 17:35:41
https://kannada.asianetnews.com/karnataka-districts/rumors-in-mangalore-about-modi-to-spray-chemicals-to-kill-coronavirus-q7iuji
mC4
ಹೇರಿಕೆ ಸರಿಯಲ್ಲ | Prajavani Published: 23 ಜೂನ್ 2014, 01:00 IST Updated: 23 ಜೂನ್ 2014, 01:00 IST ಗುಜರಾತಿ ಭಾಷಿಕ ಪ್ರಧಾನಿಯ ಆಡಳಿತದಲ್ಲಿಯೇ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಸವಾರಿಗೆ ಉತ್ತೇಜನ ಕೊಡುವ ಈ ನೀತಿ ಎಳ್ಳಷ್ಟೂ ಸರಿಯಲ್ಲ. ಏಕೆಂದರೆ ಸಂವಿಧಾನದಲ್ಲಿ ಹಿಂದಿಗೆ ವಿಶೇಷ ಸ್ಥಾನಮಾನವೇನೂ ಇಲ್ಲ. ಕನ್ನಡ, ತಮಿಳು, ಅಸ್ಸಾಮಿ ಹೀಗೆ ಇತರೆಲ್ಲ ಅಧಿಕೃತ ಭಾರತೀಯ ಭಾಷೆಗಳಂತೆ ಅದೂ ಒಂದು ಭಾಷೆಯಷ್ಟೆ. ಆದರೂ ಅಗ್ರಪೂಜೆಗೆ ಅದೊಂದೇ ಅರ್ಹ ಎಂಬ ಮನೋಭಾವ ಈ ಸುತ್ತೋಲೆಯ ಹಿಂದೆ ಕಾಣುತ್ತದೆ. ಈ ಮೂಲಕ ಹಿಂದಿಯೇತರ ಭಾಷಿಕರ ಮೇಲೆ ಹಿಂದಿ ಹೇರುವ ಯತ್ನ ಮತ್ತೆ ಪ್ರಾರಂಭವಾಗಿದೆ ಎಂಬ ಭಾವನೆ ಮೂಡು­ವಂತಾಗಿದೆ. ಈ ಸುತ್ತೋಲೆ ಹಿಂದಿಯೇತರ ಭಾಷಿಕ ರಾಜ್ಯಗಳಿಗೆ ಅನ್ವಯಿ­ಸುವುದಿಲ್ಲ ಎಂದು ಪ್ರಧಾನಿ ಕಚೇರಿ ಸ್ಪಷ್ಟನೆ ನೀಡಿದ್ದರೂ ಅನುಮಾನ­ವಂತೂ ಪೂರ್ಣ ಪರಿಹಾರವಾಗಿಲ್ಲ. ಏಕೆಂದರೆ ಹಿಂದಿ ಭಾಷಿಕರ ಯಜಮಾನಿಕೆ ಮನೋಭಾವ, ಇದುವರೆಗಿನ ಅನುಭವಗಳು ನಮ್ಮ ಕಣ್ಣ ಮುಂದಿವೆ. ಭಾಷೆ ಮತ್ತು ಧರ್ಮ ಅತ್ಯಂತ ಬೇಗ ಭಾವೋದ್ವೇಗಕ್ಕೆ ಕಾರಣವಾಗುವ ಸಂಗತಿ­ಗಳು. ಇವೆರಡರ ಬಗ್ಗೆಯೂ ವ್ಯವಹರಿಸುವಾಗ ತುಂಬ ಜಾಗರೂಕತೆ ಅವಶ್ಯ. ಅದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ದೇಶದ ಮುಂದೆ ಅನೇಕ ಪ್ರಮುಖ ಸಮಸ್ಯೆಗಳಿವೆ. ಅವುಗಳ ಕಡೆ ತುರ್ತು ಗಮನ ಹರಿಸಬೇಕು. ಆದರೆ ಅದೆಲ್ಲವನ್ನೂ ಬಿಟ್ಟು ಹಿಂದಿ ಭಾಷೆಗೆ ಅಗ್ರಪಟ್ಟ ಕಟ್ಟುವ ಹುನ್ನಾರ ಸರಿಯಲ್ಲ. 2001ರ ಜನಗಣತಿ ಪ್ರಕಾರ ನಮ್ಮ ದೇಶದಲ್ಲಿ ಹಿಂದಿ ಮಾತೃಭಾಷಿಕರ ಪ್ರಮಾಣ ಶೇ 40ರ ಆಸುಪಾಸಿನಲ್ಲಿದೆ. ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿ ಉತ್ತರದ ಕೈಬೆರಳೆಣಿಕೆಯಷ್ಟು ರಾಜ್ಯಗಳಿಗೆ ಸೀಮಿತ­ವಾದ ಭಾಷೆಯೊಂದನ್ನು ಇಡೀ ದೇಶದ ಮೇಲೆ ಹೇರುವುದು ಸರಿಯಲ್ಲ. ಹಾಗೆ ನೋಡಿದರೆ ದಕ್ಷಿಣದ ರಾಜ್ಯಗಳೂ ಸೇರಿದಂತೆ ಹಿಂದೀಯೇತರ ಪ್ರದೇಶಗಳಲ್ಲಿ ಹಿಂದಿ ಭಾಷೆಗೆ ವಿರೋಧ ಇತ್ತೀಚಿನ ದಶಕಗಳಲ್ಲಿ ಕಡಿಮೆ­ಯಾಗುತ್ತ ಬಂದಿತ್ತು. ಹತ್ತಾರು ಇತರ ಭಾಷೆಯಂತೆ ಹಿಂದಿಯನ್ನೂ ಜನ ಸ್ವೀಕರಿಸಿದ್ದರು. ಹಿಂದಿ ಸಿನಿಮಾಗಳು, ಟಿ.ವಿ. ವಾಹಿನಿಗಳು ಈ ದಿಸೆಯಲ್ಲಿ ನಮಗೆ ಅರಿವಿಲ್ಲದಂತೆಯೇ ನಮ್ಮಲ್ಲಿ ಹಿಂದಿ ವಿರೋಧಿ ಭಾವನೆ ತಗ್ಗಿಸಿದ್ದವು. ಬದ­ಲಾಗಿ ಹಿಂದಿ ಪ್ರೇಮ ಹೆಚ್ಚಿಸಿದ್ದವು. ಹಿಂದಿ ಭಾಷೆಗೂ ಸಮಾನ ಸ್ಥಾನಮಾನವುಳ್ಳ ತ್ರಿಭಾಷಾ ಸೂತ್ರ ಒಪ್ಪಿಕೊಂಡು ಬಹಳ ಹಿಂದೆಯೇ ದಕ್ಷಿಣದ ರಾಜ್ಯಗಳು ಔದಾರ್ಯ ಪ್ರದರ್ಶಿಸಿದ್ದವು. ಆದರೂ ಈ ಸಜ್ಜನಿಕೆ­ಯನ್ನು ಕಡೆಗಣಿಸಿ ಹಿಂದಿಗೆ ಪಟ್ಟ ಕಟ್ಟುವ ಸುತ್ತೋಲೆ ಹೊರಡಿಸಿರುವುದು ಭಾಷಾ ವಿವಾದದ ಭೂತವನ್ನು ನಿದ್ದೆಯಿಂದ ಬಡಿದೆಬ್ಬಿಸಿದಂತಾಗಿದೆ. ಈ ಸಂದರ್ಭದಲ್ಲಿ ಇದೊಂದು ಅನಗತ್ಯ ದುಸ್ಸಾಹಸ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಧಾನಿಯವರ ಅಭಿಲಾಷೆಗೆ ವಿರುದ್ಧ. ಹೇರಿಕೆ ಪ್ರವೃತ್ತಿ ಇಲ್ಲಿಗೇ ನಿಲ್ಲಬೇಕು.
2019/07/19 01:47:27
https://www.prajavani.net/article/%E0%B2%B9%E0%B3%87%E0%B2%B0%E0%B2%BF%E0%B2%95%E0%B3%86-%E0%B2%B8%E0%B2%B0%E0%B2%BF%E0%B2%AF%E0%B2%B2%E0%B3%8D%E0%B2%B2
mC4
ಮಳೆಗಾಗಿ ಚೌಡೇಶ್ವರಿ ದೇವಿಗೆ ಅದ್ಧೂರಿ ಜಾತ್ರೆ | Prajavani ಮಳೆಗಾಗಿ ಚೌಡೇಶ್ವರಿ ದೇವಿಗೆ ಅದ್ಧೂರಿ ಜಾತ್ರೆ ಬಾಗೇಪಲ್ಲಿ: ತಾಲ್ಲೂಕಿನ ಪೋತೇಪಲ್ಲಿ ಗ್ರಾಮದಲ್ಲಿ ಬುಧವಾರ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದೇವತೆ ಚೌಡೇಶ್ವರಿ ದೇವಿ ಸೇರಿದಂತೆ ಗ್ರಾಮದ ಎಲ್ಲ ದೇವರಿಗೆ ಪೂಜೆ ನಡೆಯಿತು. ಮುನಿಸಿಕೊಂಡಿರುವ ಮಳೆರಾಯನ ಮನವೊಲಿಕೆಗಾಗಿ ಎಲ್ಲ ದೇವರಿಗೆ ಅಲಂಕಾರ, ತಂಬಿಟ್ಟಿನ ದೀಪದ ಆರತಿ ಮೆರವಣಿಗೆ ಅದ್ಧೂರಿಯಿಂದ ಜರುಗಿತು. ಗ್ರಾಮ ದೇವತೆ ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕಾರ್ಯಗಳಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ನಂತರ ಗ್ರಾಮದ ಆಂಜನೇಯಸ್ವಾಮಿ, ಸಪ್ಪಲಮ್ಮ, ಗೊಡ್ಡಮ್ಮ, ಚೌಡೇಶ್ವರಿ, ಗಂಗಮ್ಮದೇವಿ, ಸಲ್ಲಾಪುರಮ್ಮ, ಮೊತ್ತತ್ತರಾಯನಗುಡಿ ದೇವರಿಗೆ ಮಹಿಳೆಯರು ತಂಬಿಟ್ಟು, ದೀಪದ ಆರತಿ ಬೆಳಗಿದರು. ಶಕ್ತಿ ದೇವಿ ಹೆಸರಿನಲ್ಲಿ ಕುರಿ, ಕೋಳಿಗಳನ್ನು ಬಲಿ ಕೊಡಲಾಯಿತು. ತಮಟೆಗಳ ಶಬ್ದಕ್ಕೆ ಗ್ರಾಮದ ಯುವಕರು ಹೆಜ್ಜೆ ಹಾಕುತ್ತಾ ಸಂಭ್ರಮ ಪಟ್ಟರು. ತಾಲ್ಲೂಕಿನ ಪೋತೇಪಲ್ಲಿ, ರಾಯ ದುರ್ಗಂಪಲ್ಲಿ, ನಲ್ಲಪರೆಡ್ಡಿಪಲ್ಲಿ ಹಾಗೂ ಪಾತಬಾಗೇಪಲ್ಲಿ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ತಮ್ಮ ಮನದ ಹರಕೆ ತಿರಿಸಿದರು. ಕಳೆದ 10 ವರ್ಷಗಳ ಹಿಂದೆ ಗ್ರಾಮದ ಮುಖಂಡರು ರಾಜಕೀಯ ಪ್ರಭಾವದಿಂದ ಎರಡು ಗುಂಪುಗಳಾಗಿದ್ದರು. ಅದರಿಂದ ಊರು ಜಾತ್ರೆ ನಡೆದಿರಲಿಲ್ಲ. ಇದೀಗ ಗ್ರಾಮದ ಹಿರಿಯರು ಹಾಗೂ ಯುವಕರು ಸೇರಿಕೊಂಡು ಗ್ರಾಮ ದೇವತೆ ಚೌಡೇಶ್ವರಿ ದೇವಿ ಮಳೆ-ಬೆಳೆಗಳಿಗೆ ಊರ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪೂಜಾರಿ ಚೌಡಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
2019/07/18 13:55:45
https://www.prajavani.net/article/%E0%B2%AE%E0%B2%B3%E0%B3%86%E0%B2%97%E0%B2%BE%E0%B2%97%E0%B2%BF-%E0%B2%9A%E0%B3%8C%E0%B2%A1%E0%B3%87%E0%B2%B6%E0%B3%8D%E0%B2%B5%E0%B2%B0%E0%B2%BF-%E0%B2%A6%E0%B3%87%E0%B2%B5%E0%B2%BF%E0%B2%97%E0%B3%86-%E0%B2%85%E0%B2%A6%E0%B3%8D%E0%B2%A7%E0%B3%82%E0%B2%B0%E0%B2%BF-%E0%B2%9C%E0%B2%BE%E0%B2%A4%E0%B3%8D%E0%B2%B0%E0%B3%86
mC4
ವಿದೇಶಿ ಪತ್ನಿ ಇರುವವರಿಗೆ ನೊಬೆಲ್ ಪ್ರಶಸ್ತಿ ಎಂದ ಬಿಜೆಪಿಯ ರಾಹುಲ್ ಸಿನ್ಹಾ » Kannadanet.com Home ಈ ಕ್ಷಣದ ಸುದ್ದಿ ವಿದೇಶಿ ಪತ್ನಿ ಇರುವವರಿಗೆ ನೊಬೆಲ್ ಪ್ರಶಸ್ತಿ ಎಂದ ಬಿಜೆಪಿಯ ರಾಹುಲ್ ಸಿನ್ಹಾ ವಿದೇಶಿ ಪತ್ನಿ ಇರುವವರಿಗೆ ನೊಬೆಲ್ ಪ್ರಶಸ್ತಿ ಎಂದ ಬಿಜೆಪಿಯ ರಾಹುಲ್ ಸಿನ್ಹಾ ಕೋಲ್ಕತ್ತಾ, : "ವಿದೇಶಿ ದ್ವಿತೀಯ ಪತ್ನಿ ಇರುವವರು ಹೆಚ್ಚಾಗಿ ನೊಬೆಲ್ ಪ್ರಶಸ್ತಿ ಪಡೆಯುತ್ತಿದ್ದಾರೆ. ಇದು ನೊಬೆಲ್ ಪ್ರಶಸ್ತಿ ಪಡೆಯುವುದಕ್ಕೆ ಇರುವ ಪದವಿ ಎಂದು ನನಗೆ ಗೊತ್ತಿಲ್ಲ" ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಪಕ್ಷದ ಪಶ್ಚಿಮಬಂಗಾಳದ ಘಟಕಾಧ್ಯಕ್ಷ ರಾಹುಲ್ ಸಿನ್ಹಾ ಶನಿವಾರ ಹೇಳಿದ್ದಾರೆ. ಭಾರತೀಯ ಮೂಲದ ಅಮೆರಿಕ ಪ್ರಜೆ ಅಭಿಜಿತ್ ಬ್ಯಾನರ್ಜಿ ಅವರು ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದ ಬಳಿಕ ರಾಹುಲ್ ಸಿನ್ಹಾ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಭಿಜಿತ್ ಬ್ಯಾನರ್ಜಿ ಅವರ ಚಿಂತನೆ ಅಥವಾ ನ್ಯಾಯ್ ಅನ್ನು ದೇಶದ ಜನರು ತಿರಸ್ಕರಿಸಿದ್ದಾರೆ ಎಂಬ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿನ್ಹಾ, ವಿದೇಶಿ ದ್ವಿತೀಯ ಪತ್ನಿ ಇರುವ ವ್ಯಕ್ತಿ ಹೆಚ್ಚಾಗಿ ನೊಬೆಲ್ ಪ್ರಶಸ್ತಿ ಪಡೆಯುತ್ತಾರೆ ಎಂದಿದ್ದಾರೆ. 2019ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಮಹತ್ವಾಕಾಂಕ್ಷೆಯ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ನ್ಯೂಂತಮ್ ಆಯ್ ಯೋಜನೆ (ಕನಿಷ್ಠ ಆದಾಯ ಖಾತರಿ ಕಾರ್ಯಕ್ರಮ) ರೂಪಿಸಲು ಅಭಿಜಿತ್ ಬ್ಯಾನರ್ಜಿ ನೆರವು ನೀಡಿದ್ದರು. ಈ ಯೋಜನೆ ಬಡವರಲ್ಲಿ ಬಡವರಾಗಿರುವ ಶೇ. 20 ಕುಟುಂಬಗಳಿಗೆ ತಲಾ 72 ಸಾವಿರ ರೂಪಾಯಿ ಒದಗಿಸುವ ಭರವಸೆ ನೀಡಿತ್ತು. ಆದರೆ, ಕಾಂಗ್ರೆಸ್ ಈ ಚುನಾವಣೆಯಲ್ಲಿ ಸೋತಿತ್ತು. ಪಿಯೂಷ್ ಗೋಯಲ್ ಸರಿಯಾಗಿಯೇ ಹೇಳಿದ್ದಾರೆ. ಯಾಕೆಂದರೆ, ಈ ಜನರು ಆರ್ಥಿಕತೆಗೆ ಎಡಪಂಥೀಯ ನೀತಿಯ ಬಣ್ಣ ಬಳಿಯುತ್ತಿದ್ದಾರೆ. ಆರ್ಥಿಕತೆ ಎಡಪಂಥೀಯ ಮಾರ್ಗದಲ್ಲಿ ಸಾಗಲು ಅವರು ಬಯಸುತ್ತಿದ್ದಾರೆ. ಆದರೆ, ದೇಶಕ್ಕೆ ಈಗ ಎಡಪಂಥೀಯ ಚಿಂತನೆ ಅಗತ್ಯ ಇಲ್ಲ ಎಂದು ಸಿನ್ಹಾ ಹೇಳಿದ್ದಾರೆ.
2021/03/04 09:43:02
http://kannadanet.com/%E0%B2%88-%E0%B2%95%E0%B3%8D%E0%B2%B7%E0%B2%A3%E0%B2%A6-%E0%B2%B8%E0%B3%81%E0%B2%A6%E0%B3%8D%E0%B2%A6%E0%B2%BF/%E0%B2%B5%E0%B2%BF%E0%B2%A6%E0%B3%87%E0%B2%B6%E0%B2%BF-%E0%B2%AA%E0%B2%A4%E0%B3%8D%E0%B2%A8%E0%B2%BF-%E0%B2%87%E0%B2%B0%E0%B3%81%E0%B2%B5%E0%B2%B5%E0%B2%B0%E0%B2%BF%E0%B2%97%E0%B3%86-%E0%B2%A8/
mC4
ಹೊಸ ವರ್ಷದ ಸಂಭ್ರಮಾಚಾರಣೆ "ಕಲರವ -2021 ವನ್ನು ಯುವ ಸ್ಪಂದನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. #avintvcom – AVIN TV ಯುವ ಸ್ಪಂದನ, ಯುವ ಸಬಲೀಕರಣ ಕ್ರೀಡಾ ಇಲಾಖೆ,ನಿಮ್ಹಾನ್ಸ್ ಸಹಯೋಗದಲ್ಲಿ ಹೊಸ ವರ್ಷದ ಸಂಭ್ರಮಾಚಾರಣೆ "ಕಲರವ -2021 ವನ್ನು ಯುವ ಸ್ಪಂದನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ‌ ಮಾತನಾಡಿದ ಉಪ ಆರೋಗ್ಯ ಶಿಕ್ಷಣಾಧಿಕಾರಿ, ಜಿಲ್ಲಾಸ್ಪತ್ರೆ ಜಲಜಾಕ್ಷಿ ರವರು ಮಾನಸಿಕ ಆರೋಗ್ಯ ಸಂಭಂದಿಸಿದ ಈ ಯುವ ಸ್ಪಂದನ ಯೋಜನೆ ಯುವ ಜನತೆಗೆ ಉಪಯುಕ್ತಕಾರಿಯಾಗಿದೆ ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಯೋಜನೆಯ ಜೊತೆಗೆ ಒಡನಾಡಿಯಾಗಿ ಅರಿವು ಕಾರ್ಯಕ್ರಮ ಸಾಗಲಿ ಎಂದು ಆಶಿಸಿದರು. ಜಿಲ್ಲಾ ಸಮನ್ವಯಧಿಕಾರಿ ಅಭಿಷೇಕ್ ಚಾವರೆ ಅವರು ಮಾತನಾಡಿ ನಾವು ಸಾಮಾಜಿಕ ವಾತವರಣದಲಿ ನಾವು ಸಮಾಜಕ್ಕಾಗಿ ಹೇಗೆ ಪ್ರತಿಕ್ರಿಯೆ ನೀಡುತ್ತೆವೆಯೊ ಹಾಗೇ ನಮ್ಮ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ ಎಂದು ನುಡಿದರು. ಯುವ ಸಮಾಲೋಚಕಿ ಶಿಲ್ಪಾ ಮಾತನಾಡಿ ಈ ಹಿಂದಿನ ತಪ್ಪು -ಒಪ್ಪುಗಳಿಂದ ಕಲಿತ ಪಾಠದಿಂದ ಈ ಹೊಸ ವರ್ಷ ಬರಮಾಡಿಕೊಂಡು ಹುಮ್ಮಸಿನಿಂದ ಕಾರ್ಯ ನಿರ್ವಹಿಸುತ್ತಾ ಸಾಗೋಣ ಎಂದು ತಿಳಿಸಿದರು. ದೈಹಿಕ ಹಾಗೂ ಮಾನಸಿಕವಾಗಿ ಕೂಡಿದ್ದಂತಹ ಚಟುವಟಿಕೆ ನಡೆಸಿ ಸ್ಮರಣಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಯುವಪರಿವರ್ತಕರಾದ ಅಬ್ದುಲ್ ನಾಜೀಮ್,ವಿನೋದ್, ಶ್ರೀನಿವಾಸ್,ಗವಿರಂಗ,ಸಿದ್ದೇಶ್ ಉಪಸ್ಥಿತರಿದ್ದರು. – ಯುವ ಸ್ಪಂದನ ಯುವ ಸಬಲೀಕರಣ ಕ್ರೀಡಾ Previous Toll… Toll… Toll.. ಇಲ್ಲೇ ಹೊದರು ಅಲ್ಲಿ Toll.. ನಿಯಮಗಳನ್ನು ಗಾಳಿಗೆ ತೂರಿದದ್ದಾರೆ ಅಧಿಕಾರಿಗಳು #avintvcom Next We Provide Home Nursing agency | patient care Nursing providing services in bangalore | home nursing | Home Nursing Services in Bangalore
2021/10/20 01:45:46
http://avintv.com/4356/
mC4
ಎಗ್ಗಿಲ್ಲದೇ ಸಾಗಿದೆ ಅಕ್ರಮ ಮರಳು ದಂಧೆ | Prajavani ಬರಿದಾಗುತ್ತಿದೆ ಕೃಷ್ಣೆ- ಮಲಪ್ರಭಾ-ಘಟಪ್ರಭಾ ಒಡಲು ಬಸವರಾಜ್ ಸಂಪಳ್ಳಿ ಪ್ರಜಾವಾಣಿ ವಾರ್ತೆ Updated: 06 ಜೂನ್ 2013, 01:29 IST ಬಾಗಲಕೋಟೆ: ಜಿಲ್ಲೆಯ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ನದಿಗಳು ಮಳೆಗಾಲದಲ್ಲಿ ಹೊತ್ತು ತರುವ ಮರಳು, ಬೇಸಿಗೆಯಲ್ಲಿ ನೂರಾರು ಕೋಟಿ ಆದಾಯ ತರುತ್ತಿದೆ. ಆದರೆ ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ನದಿಗಳ ಒಡಲು ಬರಿದಾಗುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸ್ಥಳೀಯ ರಾಜಕಾರಣಿಗಳು ಮತ್ತು ಪೊಲೀಸರು ಬೆಂಗಾವಲಾಗಿ ನಿಂತಿರುವಂತಿದ್ದು, ಟಾಸ್ಕ್ ಪೋರ್ಸ್ (ಮರಳು ಉಸ್ತುವಾರಿ ಸಮಿತಿ) ಅಸಹಾಯಕವಾಗಿದೆ. `ಅಕ್ರಮ ಮರಳು ಗಣಿಗಾರಿಕೆಯಲ್ಲಿ ಪಕ್ಷಭೇದವಿಲ್ಲದೆ ಎಲ್ಲ ರಾಜಕೀಯ ಪಕ್ಷಗಳ ಹಿಂಬಾಲಕರು ತೊಡಗಿದ್ದಾರೆ. ತಡೆಯಲು ಹೋದರೆ ಜೀವ ಬೆದರಿಕೆ ಒಡ್ಡುತ್ತಾರೆ' ಎಂದು ಆರೋಪಿಸುವ ಅಧಿಕಾರಿಗಳು, ಈ ಬಗ್ಗೆ ದೂರು ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದರೆ `ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕಾದ ಪೊಲೀಸರೇ ಅಕ್ರಮದೊಂದಿಗೆ ಕೈಜೋಡಿಸಿದ್ದಾರೆ' ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. `ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯಿಂದ ವರ್ಷಕ್ಕೆ 100 ಕೋಟಿ ರೂಪಾಯಿ ರಾಜಧನ ಸಂಗ್ರಹಿಸುವ ಸಾಧ್ಯತೆ ಇದ್ದರೂ ಅಕ್ರಮ ಮರಳುಗಾರಿಕೆಯಿಂದ ಕೇವಲ 10 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು. `ಜಿಲ್ಲೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸುವುದನ್ನು ನಿರ್ಬಂಧಿಸಿಲ್ಲ. ಈ ಕಾರ್ಯಕ್ಕೆ ಟಾಸ್ಕ್ ಪೋರ್ಸ್ ಮುಂದಾದರೆ ಮರಳು ಸಾಗಿಸುವ ಟ್ರ್ಯಾಕ್ಟರ್‌ಗಳನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳಬಾರದು' ಎಂಬ ಮೌಖಿಕ ಒತ್ತಡ ಜನಪ್ರತಿನಿಧಿಗಳಿಂದ ಬರುತ್ತದೆ' ಎನ್ನುತ್ತಾರೆ. ಸ್ಥಳೀಯರು ಮನೆ, ದೇವಸ್ಥಾನ, ಕೆರೆಕಟ್ಟೆ ನಿರ್ಮಾಣಕ್ಕೆ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸಲು ಅವಕಾಶ ನೀಡಬೇಕು ಎಂಬ ಸಬೂಬು ನೀಡಿ ಮುಕ್ತಗೊಳಿಸಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಜಿಲ್ಲೆಯಲ್ಲಿ ದಿನವೊಂದಕ್ಕೆ ಸುಮಾರು 1,000 ಟ್ರ್ಯಾಕ್ಟರ್ ಲೋಡ್ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಜಿಲ್ಲೆಯಿಂದ ಹೊರಗಡೆ ಅಕ್ರಮವಾಗಿ ಮರಳು ಸಾಗಾಟವಾಗುವುದನ್ನು ನಿಯಂತ್ರಿಸಲು 40 ಚೆಕ್ ಪೋಸ್ಟ್‌ಗಳಲ್ಲಿ ಕಳೆದ ಜನವರಿಯಲ್ಲಿ ನಿಯೋಜಿಸಿದ್ದ ಗೃಹರಕ್ಷಕ ದಳದ 175 ಸಿಬ್ಬಂದಿ ಅಕ್ರಮ ತಡೆಯುವ ಬದಲು ತಾವೇ ಮಾಮೂಲು ವಸೂಲಿಗೆ ನಿಂತದ್ದನ್ನು ಕಂಡು ಟಾಸ್ಕ್ ಪೋರ್ಸ್ ಅಧಿಕಾರಿಗಳು ಅವರನ್ನು ಮೇ 31 ರಿಂದ ಕರ್ತವ್ಯದಿಂದ ತೆಗೆದು ಹಾಕಿದ್ದಾರೆ. ಎಲ್ಲೆಲ್ಲಿ ಅಕ್ರಮ: ಜಮಖಂಡಿ ತಾಲ್ಲೂಕಿನ ಹಿಪ್ಪರಗಿಯಿಂದ ಬಿದರಿ, ಜನವಾಡ, ಕೌಟಗಿವರೆಗೆ ಸುಮಾರು 40 ಕಿ.ಮೀ. ಉದ್ದದ ಕೃಷ್ಣಾ ನದಿ ಹರಿವಿನಲ್ಲಿ ಮರಳನ್ನು ಸಂಪೂರ್ಣ ಗುಡಿಸಿ ತೆಗೆಯಲಾಗಿದೆ. ನದಿಯಿಂದ ಅಕ್ರಮವಾಗಿ ತೆಗೆದ ಮರಳನ್ನು ಹೊಲಗಳಲ್ಲಿ ಸಂಗ್ರಹಿಸಿಟ್ಟುಕೊಂಡು ಕಾಗವಾಡದ ಮೂಲಕ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಸೊಲ್ಲಾಪುರ ಮತ್ತು ಜತ್ತ ಮತ್ತಿತರ ಕಡೆ ಸಾಗಿಸಲಾಗುತ್ತದೆ. ಮುಧೋಳ ತಾಲ್ಲೂಕಿನ ಅಕ್ಕಿಮರಡಿ, ನಂದಗಾಂವ, ಮಿರ್ಜಿ, ಒಂಟುಗೋಡಿ, ನಾಗರಾಳ, ಮಳಲಿ, ಇಂಗಳಗಿ, ಮಾಚಕನೂರು, ತಿಮ್ಮಾಪುರ, ಕೆ.ಡಿ.ಜಂಬಗಿ, ಢವಳೇಶ್ವರದಿಂದ ನೂರಾರು ಟ್ರಕ್‌ಗಳಲ್ಲಿ ಮರಳನ್ನು ಸಂಗ್ರಹಿಸಿ ಬೆಳಗಾವಿ, ನಿಪ್ಪಾಣಿ ಮೂಲಕ ಮಹಾರಾಷ್ಟ್ರಕ್ಕೆ ಪ್ರತಿನಿತ್ಯ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಬಾಗಲಕೋಟೆ ತಾಲ್ಲೂಕಿನ ಕಲಾದಗಿ, ಚಿಕ್ಕಸಂಶಿ, ಛಬ್ಬಿ, ಶಾರದಾಳ, ಯಡಹಳ್ಳಿ, ಆನದಿನ್ನಿ ಹಾಗೂ ಬೀಳಗಿ ತಾಲ್ಲೂಕಿನ ಕುವಳ್ಳಿ, ಬಾವಲತ್ತಿ, ಕಾತರಕಿ, ಕೊಪ್ಪ ವ್ಯಾಪ್ತಿಯಲ್ಲಿ ಘಟಪ್ರಭಾ ನದಿಯಿಂದ ಮರಳನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ. ಬಾದಾಮಿ ತಾಲ್ಲೂಕಿನ ಗೋವನಕೊಪ್ಪ, ಖ್ಯಾಡ, ಜಾಲಿಹಾಳ, ಚೊಳಚಗುಡ್ಡ, ಕಿತ್ತಲಿ, ಸುಳ್ಳ, ಹೆಬ್ಬಳ್ಳಿ ಮತ್ತು ಹಾಗೂ ಹುನಗುಂದ ತಾಲ್ಲೂಕಿನ ಹೂವನೂರು, ನಂದನೂರು, ಗಂಜಿಹಾಳ, ಚಿಕ್ಕಮಲಗಾವಿ, ಹಿರೇ ಮಳಗಾವಿಯಲ್ಲಿ ಮಲಪ್ರಭಾ ನದಿಯಲ್ಲಿ ಅವ್ಯಾಹತವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇಲ್ಲಿ ಸಂಗ್ರಹಿಸಿದ ಮರಳನ್ನು ರಾಯಚೂರು, ಗುಲ್ಬರ್ಗ, ಕೊಪ್ಪಳ, ವಿಜಾಪುರ, ಹುಬ್ಬಳ್ಳಿ ನಗರಗಳಿಗೆ ಸಾಗಿಸಲಾಗುತ್ತಿದೆ. ಬಾದಾಮಿ ತಾಲ್ಲೂಕಿನ ಜಾಲಿಹಾಳ ಗ್ರಾಮದ ಸಾಸ್ವೆಹಳ್ಳದಲ್ಲಿ ಅಂದಾಜು 10 ಕೋಟಿ ರೂಪಾಯಿ ಮೌಲ್ಯದ ಎರಡು ಲಕ್ಷ ಕ್ಯೂಬಿಕ್ ಮೀಟರ್ ಮರಳು ಸಂಗ್ರಹವಿದ್ದರೂ ಜಿಲ್ಲಾಡಳಿತ ಈ ಮರಳನ್ನು ಹರಾಜು ಮಾಡಲು ರಾಜಕೀಯ ಧುರೀಣರು ಬಿಡುತ್ತಿಲ್ಲ. ಸ್ಥಳೀಯರೇ ಅಕ್ರಮವಾಗಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. 32 ಲಕ್ಷ ದಂಡ ವಸೂಲಿ: `ಹೊಸ ಮರಳು ನೀತಿ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಇದುವರೆಗೆ 2,93,726 ಕ್ಯೂಬಿಕ್ ಮೀಟರ್ ಮರಳನ್ನು ಸಂಗ್ರಹಿಸಿ ಮಾರಾಟ ಮಾಡಲಾಗಿದ್ದು, 11.74 ಕೋಟಿ ರೂಪಾಯಿ ರಾಜಧನ ಸಂಗ್ರಹಿಸಲಾಗಿದೆ. ಇದೇ ಅವಧಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ನಡೆಸಿ 32 ಲಕ್ಷ ದಂಡ ವಸೂಲಿ ಮಾಡಲಾಗಿದೆ' ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮನೋಹರ ವಡ್ಡರ `ಪ್ರಜಾವಾಣಿ'ಗೆ ತಿಳಿಸಿದರು. `ಕಾರ್ಯಪಡೆಯಲ್ಲಿ ಸಮನ್ವಯದ ಕೊರತೆ' `ಮರಳು ಗಣಿಗಾರಿಕೆ ಉಸ್ತುವಾರಿಯನ್ನು ಮೊದಲಿನಿಂದಲೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಡಿಕೊಳ್ಳುತ್ತಿತ್ತು. ಹೊಸ ಮರಳು ನೀತಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳನ್ನು ಸೇರಿಸಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ (ಟಾಸ್ಕ್ ಪೋರ್ಸ್) ರಚಿಸಲಾಗಿದೆ. ಪ್ರತಿ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ದಾಳಿ ಸಂದರ್ಭದಲ್ಲಿ ಈ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯತೆ ಸಾಧ್ಯವಾಗುತ್ತಿಲ್ಲ' ಎಂದು ಅಧಿಕಾರಿಗಳು ವಿಷಾದಿಸುತ್ತಾರೆ. ಅಕ್ರಮ ಮರಳು ಗಣಿಗಾರಿಕೆ ತಡೆಯಲು ಒಂದು ಇಲಾಖೆ ಮುಂದಾದರೆ ಮತ್ತೆ ಕೆಲವು ಇಲಾಖೆ ಅಧಿಕಾರಿಗಳು ನಿರಾಸಕ್ತಿ ತೋರುತ್ತಾರೆ. ಇನ್ನು ಕೆಲವರು ದಾಳಿ ನಡೆಸುವ ಮುನ್ನವೇ ಅಕ್ರಮ ದಂಧೆಕೋರರಿಗೆ ಮಾಹಿತಿ ರವಾನಿಸುತ್ತಾರೆ. ಇದರಿಂದ ಅಕ್ರಮಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂಬುದು ಅವರ ಆಪಾದನೆ. `ಮರಳು ಗಣಿಗಾರಿಕೆ ನಿರ್ವಹಣೆಯನ್ನು ಯಾವುದಾದರೊಂದು ಇಲಾಖೆಗೆ ಸಂಪೂರ್ಣವಾಗಿ ವಹಿಸುವುದು ಉತ್ತಮ. ಆಗ ಮಾತ್ರ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬಹುದು' ಎನ್ನುತ್ತಾರೆ ಅವರು. '); $('#div-gpt-ad-162689-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-162689'); }); googletag.cmd.push(function() { googletag.display('gpt-text-700x20-ad2-162689'); }); },300); var x1 = $('#node-162689 .field-name-body .field-items div.field-item > p'); if(x1 != null && x1.length != 0) { $('#node-162689 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-162689').addClass('inartprocessed'); } else $('#in-article-162689').hide(); } else { _taboola.push({article:'auto', url:'https://www.prajavani.net/article/ಎಗ್ಗಿಲ್ಲದೇ-ಸಾಗಿದೆ-ಅಕ್ರಮ-ಮರಳು-ದಂಧೆ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-162689', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-162689'); }); googletag.cmd.push(function() { googletag.display('gpt-text-300x20-ad2-162689'); }); // Remove current Outbrain //$('#dk-art-outbrain-162689').remove(); //ad before trending $('#mob_rhs1_162689').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-162689 .field-name-body .field-items div.field-item > p'); if(x1 != null && x1.length != 0) { $('#node-162689 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-162689 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-162689'); }); } else { $('#in-article-mob-162689').hide(); $('#in-article-mob-3rd-162689').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-162689','#in-article-829673','#in-article-829672','#in-article-829671','#in-article-829647']; var twids = ['#twblock_162689','#twblock_829673','#twblock_829672','#twblock_829671','#twblock_829647']; var twdataids = ['#twdatablk_162689','#twdatablk_829673','#twdatablk_829672','#twdatablk_829671','#twdatablk_829647']; var obURLs = ['https://www.prajavani.net/article/ಎಗ್ಗಿಲ್ಲದೇ-ಸಾಗಿದೆ-ಅಕ್ರಮ-ಮರಳು-ದಂಧೆ','https://www.prajavani.net/karnataka-news/covid-19-coronavirus-120-tonnes-of-oxygen-reached-bangalore-829673.html','https://www.prajavani.net/karnataka-news/6-container-oxygen-yediyurappa-congratulates-union-government-829672.html','https://www.prajavani.net/karnataka-news/covid-19-coronavirus-2nd-wave-karnataka-lockdown-free-food-at-indira-canteen-829671.html','https://www.prajavani.net/karnataka-news/illegal-sale-of-remdesivir-injection-arrested-829647.html']; var vuukleIds = ['#vuukle-comments-162689','#vuukle-comments-829673','#vuukle-comments-829672','#vuukle-comments-829671','#vuukle-comments-829647']; // var nids = [162689,829673,829672,829671,829647]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2021/05/11 08:47:24
https://www.prajavani.net/article/%E0%B2%8E%E0%B2%97%E0%B3%8D%E0%B2%97%E0%B2%BF%E0%B2%B2%E0%B3%8D%E0%B2%B2%E0%B2%A6%E0%B3%87-%E0%B2%B8%E0%B2%BE%E0%B2%97%E0%B2%BF%E0%B2%A6%E0%B3%86-%E0%B2%85%E0%B2%95%E0%B3%8D%E0%B2%B0%E0%B2%AE-%E0%B2%AE%E0%B2%B0%E0%B2%B3%E0%B3%81-%E0%B2%A6%E0%B2%82%E0%B2%A7%E0%B3%86
mC4
ಏನಿದು ಪ್ರಧಾನಿ SPG ಸೆಕ್ಯೂರಿಟಿ...? - Torrent Spree ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ದುರಂತ ಅಂದ್ರೆ ದೇಶದ ಪ್ರಧಾನಮಂತ್ರಿಯ ಭದ್ರತೆ ವಿಚಾರವೂ ರಾಜಕೀಯ ಬಣ್ಣ ಪಡೆದುಕೊಂಡಿರುವುದು. ಇದನ್ನು ವಿಪರ್ಯಾಸ ಅನ್ನದೆ ವಿಧಿಯಿಲ್ಲ. ಪಾಕಿಸ್ತಾನದ ಗಡಿಗಿಂತ 10 ಕಿಮೀ ದೂರದಲ್ಲಿ ಅತ್ಯಂತ ಬಿಗಿ ಭದ್ರತೆ ಅತೀ ಗಣ್ಯರ ಪರಿಸ್ಥಿತಿ ಹೀಗಾಗಿದೆ ಅಂದ್ರೆ ಪಂಜಾಬ್ ಸರ್ಕಾರ ತಲೆ ತಗ್ಗಿಸಲೇಬೇಕು. ಅಂದ ಹಾಗೇ ಭಾರತದ ಪ್ರಧಾನಿಯ ಸಂಪೂರ್ಣ ರಕ್ಷಣೆಯ ಹೊಣೆ SPGಯದ್ದಾಗಿರುತ್ತದೆ. ವಿಶೇಷ ರೀತಿಯಲ್ಲಿ ತರಬೇತು ಪಡೆದ ಯೋಧರು ಇವರಾಗಿದ್ದು, Z+ ಭದ್ರತೆಯನ್ನು ಪ್ರಧಾನಿಯವರಿಗೆ ನೀಡಲಾಗುತ್ತದೆ. 36 ಮಂದಿ ಏಕಕಾಲಕ್ಕೆ ಪ್ರಧಾನಿಯವರಿಗೆ ಭದ್ರತೆ ನೀಡುತ್ತಾರೆ. ಇವರೊಂದಿಗೆ ಕೇಂದ್ರ ಮಟ್ಟದ ಕೆಳ ಭದ್ರತಾ ಪಡೆಗಳ ಸಿಬ್ಬಂದಿಯೂ ಕೈ ಜೋಡಿಸುತ್ತಾರೆ. ಇನ್ನು ಪ್ರಧಾನಿಯ ಭದ್ರತೆಗೆ ನಿಯೋಜಿತರಾಗಿರುವ ಈ SPG ಯೋಧರು ಶಾರ್ಪ್ ಶೂಟರ್ ಗಳಾಗಿದ್ದು, ಒಂದು ನಿಮಿಷಕ್ಕೆ 850 ಗುಂಡು ಹಾರಿಸುವ ರೈಫಲ್ ಗಳನ್ನು ಹೊಂದಿರುತ್ತೆ. 500 ಮೀಟರ್ ದೂರದ ತನಕವೂ ಗುಂಡು ಹಾರಿಸುವ ಸಾಮರ್ಥ್ಯ ಇವರಿಗಿರುತ್ತದೆ. ಇನ್ನು ಈ ಎಸ್ಪಿಜಿ ಸೇರುವ ಯೋಧರು ತಾವು ಯಾವುದೇ ವಿಧದಲ್ಲೂ ಟ್ರೇಡ್ ಯೂನಿಯನ್ ಆಗಲಿ, ಲೇಬರ್ ಯೂನಿಯನ್ ಆಗಲಿ ರಾಜಕೀಯ ಪಕ್ಷಗಳ ಜೊತೆ ಸಂಬಂಧ , ಸದಸ್ಯತ್ವ ಹೊಂದಿಲ್ಲ ಎಂದು ದೃಢೀಕರಿಸಬೇಕು. ಜೊತೆಗೆ ಸಾಮಾಜಿಕ ಸಂಘಟನೆ, ಸದಸ್ಯತ್ವ ಹೊಂದಿಲ್ಲ, ಮಾಧ್ಯಮಗಳ ಜೊತೆಗೆ ಸಂಪರ್ಕ ಹೊಂದುವುದಿಲ್ಲ, ಜೊತೆಗೆ ಯಾವುದೇ ಪುಸ್ತಕ ಬರೆಯೋದಿಲ್ಲ ಅನ್ನುವುದನ್ನು ಕೂಡಾ ಒಪ್ಪಿಕೊಳಬೇಕಾಗುತ್ತೆ. ಎಸ್ ಪಿ ಜಿ ಸದಸ್ಯರು ಯಾವುದೇ ಸಮಾರಂಭದಲ್ಲಿ ಭಾಗವಹಿಸುವ ಹಾಗಿಲ್ಲ. ಸಭೆ, ಸಮಾರಂಭ ಉದ್ದೇಶಿಸಿ ಮಾತನಾಡುವುದು, ಪ್ರತಿಭಟನೆಯಲ್ಲಿ ಇವರು ಪಾಲ್ಗೊಳ್ಳುವಂತಿಲ್ಲ.
2022/05/26 23:39:43
https://torrentspree.com/modi-spg-security-how-is-the-pms-security/
mC4
ಇ.ಬಿ.ಲೋಬೋ ನಿವೃತ್ತಿ ಸನ್ಮಾನ October 20, 2015 4:44 PM·0 commentsViews: 30 ಮೂಲ್ಕಿ: ಸರ್ವರಲ್ಲಿ ಆತ್ಮೀಯರಾಗಿ ಪ್ರಾಮಾಣಿಕವಾಗಿ ವೃತ್ತಿ ಜೀವನ ನಿರ್ವಹಿಸಿ ಸಂಸ್ಥೆಯ ಬೆಳವಣಿಯ ಸಾಧಕರನ್ನು ಸನ್ಮಾನಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದು ವಾಘ್ಮಿ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎನ್.ವಿದ್ಯಾದರ ಶೆಟ್ಟಿ ಹೇಳಿದರು. ಭಾರತೀಯ ಜೀವ ವಿಮಾ ನಿಗಮದ ಸ್ಪೋಟ್ಸ್ ಮತ್ತು ರಿಕ್ರಿಯೇಶನ್ ಕ್ಲಬ್ ಹಾಗೂ ಎಲ್‌ಐಸಿ ಎಒಐ ಮೂಲ್ಕಿ ಶಾಖೆಯ ಸಂಯೋಜನೆಯಲ್ಲಿ ನಿಗಮದ ಮೂಲ್ಕಿ ಶಾಖೆಯ ಹಿರಿಯ ಶಾಖಾಧಿಕಾರಿ ಇ.ಬಿ.ಲೋಬೋರವರು ನಿವೃತ್ತಿಗೊಳ್ಳುವ ಸಂದರ್ಭ ಅವರ ಸಾಧನೆಯನ್ನು ಗೌರವಿಸಿ ಮೂಲ್ಕಿ ಶ್ರೀರುಕ್ಕರಾಮ ಸಾಲ್ಯಾನ್ ಸಭಾಗ್ರಹದಲ್ಲಿನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಲೊಬೋರವರನ್ನು ಅಭಿನಂಧಿಸಿ ಮಾತನಾಡಿದರು. ಹೊಸ ಪ್ರವೃತ್ತಿ ಪಡೆಯಲು ಪೂರಕವಾಗಿ ವೃತ್ತಿ ಜೀವನದಲ್ಲಿ ನಿಶ್ಚಿತವಾದ ನಿವೃತ್ತಿಯಿಂದ ಜೀವನೋತ್ಸಾಹ ಇಮ್ಮಡಿಗೊಳಿಸಿ ಜ್ಞಾನ ಪ್ರವರ್ದನೆಗೆ ತಮ್ಮನ್ನು ತೊಡಿಸಿಕೊಂಡು ಯುವ ಸಮಾಜದ ಕಣ್ಮಣಿಯಾಗಿ ಬೆಳಗಬೇಕು.ಲೋಬೋರವರು ವೃತ್ತಿ ಜೀವನದಲ್ಲಿ ನೀಡಿದ ಉತ್ತಮ ಸೇವೆ ಹಾಗೂ ಭಾಂದವ್ಯ ಪ್ರವರ್ದನೆ ಮುಂದಿನ ಯುವ ಸಮಾಜಕ್ಕೆ ಮಾರ್ಗದರ್ಶಿ ಎಂದರು.ಈ ಸಂದರ್ಭ ಇ.ಬಿ.ಲೋಬೋ ರವರನ್ನು ಪತ್ನಿ ಎಲಿಜಬೆತ್ ಲೋಬೋರವರೊಂದಿಗೆ ಸನ್ಮಾನಿಸಲಾಯಿತು. ಜೀವ ವಿಮಾ ನಿಗಮದ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ವಿಶ್ವನಾಥ ಗೌಡ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್, ಮಾರ್ಕೆಟಿಂಗ್ ಮ್ಯಾನೇಜರ್ ರಾಜೇಶ್.ವಿ.ಮುಧೋಳ್, ಸೇಲ್ಸ್ ಮ್ಯಾನೇಜರ್ ಯು.ನಾರಾಯಣ ಗೌಡ ಮೂಲ್ಕಿ ಶಾಖೆಯ ಹಿರಿಯ ಶಾಖಾಧಿಕಾರಿ ಬಿ.ವಿಶ್ವನಾಥ್ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಲಿಯೋ ತಾವ್ರೋ ಸ್ವಾಗತಿಸಿದರು. ಮಮತಾ ಗಿರೀಶ್ ನಿರೂಪಿಸಿದರು.ರಮೇಶ್ ಕುಮಾರ್ ವಂದಿಸಿದರು. ಪುನರೂರು ಪೈಪ್ ಕಾಂಪೋಷ್ಟು ಕಿನ್ನಿಗೋಳಿ: ಮನೆಯಲ್ಲಿ ಉಳಿಕೆಯಾದ ಅಹಾರ ಪದಾರ್ಥಗಳು ತರಕಾರಿ ಮೀನು ಮಾಂಸ ತ್ಯಾಜ್ಯಗಳು ಚಾಹುಡಿ, ಒಲೆ ಭೂಧಿಯನ್ನು ಪೈಪ್ ಕಾಂಪೋಷ್ಟು ತಂತ್ರಜ್ಞಾನದಿಂದ ಉತ್ತಮ ಗೊಬ್ಬರವಾಗಿ ಪರಿವರ್ತಿಸಬಹುದು ಎಂದು ಜಿಲ್ಲಾ...
2017/11/23 02:03:39
http://nammakinnigoli.com/2015/10/20/mulki-bharath-jeeva-vima-27367/
mC4
ಪ್ರೀತಿಸಿ ಮದುವೆಯಾದ ಜೋಡಿಯಿಂದ ಜೀವ ರಕ್ಷಣೆಗೆ ಎಸ್​ಪಿ ಮೊರೆ! | KANNADIGA WORLD Home ಕನ್ನಡ ವಾರ್ತೆಗಳು ಕರ್ನಾಟಕ ಪ್ರೀತಿಸಿ ಮದುವೆಯಾದ ಜೋಡಿಯಿಂದ ಜೀವ ರಕ್ಷಣೆಗೆ ಎಸ್​ಪಿ ಮೊರೆ! ಪ್ರೀತಿಸಿ ಮದುವೆಯಾದ ಜೋಡಿಯಿಂದ ಜೀವ ರಕ್ಷಣೆಗೆ ಎಸ್​ಪಿ ಮೊರೆ! Posted By: Karnataka News BureauPosted date: May 05, 2019 In: ಕರ್ನಾಟಕ ಬಳ್ಳಾರಿ: ಇದು ಪ್ರೇಮಿಗಳಿಬ್ಬರ ಸಂಕಷ್ಟದ ಕತೆ. ಅವರಿಬ್ಬರು ಕಳೆದ ಒಂದು ವರ್ಷದಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಒಂದು ಕ್ಷಣ ಕೂಡ ಅವರಿಬ್ಬರು ಒಬ್ಬರೊಬ್ಬರನ್ನ ಬಿಟ್ಟು ಇರಲಾರರು. ಆದರೆ ಈ ಪ್ರೇಮಿಗಳಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ಯುವತಿಯ ಪೋಷಕರ ವಿರೋಧದ ನಡುವೆ ಈಗ ಮದುವೆಯನ್ನೂ ಆಗಿದ್ದಾರೆ. ಆದರೆ ಪ್ರೇಮಿಗಳಿಗೆ ಇದೀಗ ಪ್ರಾಣ ಬೆದರಿಕೆಯ ಭಯ ಶುರುವಾಗಿದೆ. ಯುವತಿ ಪೋಷಕರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳು ರಕ್ಷಣೆ ಕೋರಿ ಬಳ್ಳಾರಿಯ ಎಸ್​ಪಿ ಅವರ ಮೊರೆ ಹೋಗಿದ್ದಾರೆ. ತರಬೇತಿ ಕೇಂದ್ರದಲ್ಲಿ ಪರಿಚಯ ಈ ಪ್ರೇಮಿಗಳ ಹೆಸರು ಉಮೇಶ್ ಹಾಗೂ ವಾಣಿಶ್ರೀ. ಪ್ರಿಯಕರ ಉಮೇಶ್ ಬಳ್ಳಾರಿ ನಗರದ ವಾಸಿಯಾದ್ರೆ, ಪ್ರಿಯತಮೆ ವಾಣಿಶ್ರೀ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ನಿವಾಸಿ. ವಾಣಿಶ್ರೀ ಬ್ಯಾಂಕಿಂಗ್ ಕೋಚಿಂಗ್ ಪಡೆಯುವಾಗ ಉಮೇಶ್ ಪರಿಚಯವಾಗುತ್ತೆ. ಪರಿಚಯ ಆರಂಭದಲ್ಲಿದ್ದ ಸ್ನೇಹ ಕೊನೆಗೂ ಇಬ್ಬರ ನಡುವೆ ಪ್ರೀತಿಯಾಗಿ ಮಾರ್ಪಾಟಾಗುತ್ತೆ. ಕಳೆದೊಂದು ವರ್ಷದಿಂದಲೂ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ. ಇವರಿಬ್ಬರ ಪ್ರೀತಿ ವಿಚಾರ ಎರಡು ಕಡೆ ಪೋಷಕರಿಗೂ ಗೊತ್ತಾಗಿದೆ. ಆದ್ರೆ ಇಬ್ಬರ ಜಾತಿ ಬೇರೆ-ಬೇರೆಯಾಗಿದ್ದರಿಂದ ಯುವತಿಯ ಪೋಷಕರು ಇವರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇವರಿಗೆ ಮದುವೆಯಾಗದಂತೆ ಎಚ್ಚರಿಕೆಯನ್ನೂ ನೀಡಿದ್ಧಾರೆ. ಆದರೆ ಯುವತಿ ಪೋಷಕರ ವಿರೋಧದ ನಡುವೆಯೂ ಈ ಪ್ರೇಮಿಗಳು ಕಳೆದ ತಿಂಗಳು 27 ರಂದು ಮದುವೆಯಾಗಿದ್ದಾರೆ. ಮದುವೆಯಾಗಿ ಬಳ್ಳಾರಿಯಲ್ಲಿ ಉಮೇಶ್ ಪೋಷಕರನ್ನು ಒಪ್ಪಿಸಿ ಅವರ ಮನೆಯಲ್ಲಿ ವಾಸವಿರುವ ಈ ಪ್ರೇಮಿಗಳಿಗೆ ಯುವತಿಯ ಪೋಷಕರು ಸ್ಥಳೀಯರ ಮೂಲಕ ಜೀವ ಬೆದರಿಕೆ ಹಾಕುತ್ತಿದ್ದರಂತೆ. ಹೀಗಾಗಿ ಯುವತಿ ಪೋಷಕರ ಪ್ರಾಣಭಯದಿಂದ ರಕ್ಷಣೆ ಕೋರಿ ಪ್ರೇಮಿಗಳು ಈಗ ಎಸ್​ಪಿ ಮೊರೆ ಹೋಗಿದ್ದಾರೆ. ಯುವತಿ ಮನೆಯವರಿಂದ ಜೀವ ಬೆದರಿಕೆ: ಬಳ್ಳಾರಿಯಲ್ಲಿರುವ ಪ್ರಿಯತಮ ಉಮೇಶ್ ನಿವಾಸಕ್ಕೆ ಯುವತಿಯ ಪೋಷಕರ ಸಂಬಂಧಿಕರು ಸ್ಥಳೀಯರೊಂದಿಗೆ ತೆರಳಿ ಜೀವಬೆದರಿಕೆ ಹಾಕಿದ್ದರಂತೆ. ಕಳೆದ ಮೂರು ದಿನಗಳಿಂದ ಈ ಪ್ರೇಮಿಗಳಿಗೆ ಆತಂಕ ಶುರುವಾಗಿದೆ. ಈ ಇಬ್ಬರು ಪ್ರೇಮಿಗಳು ವಯಸ್ಕರಾಗಿದ್ದರಿಂದ ನಮಗೆ ಬದುಕಲು ಬಿಡಿ ಎಂದು ಯುವತಿಯ ಪೋಷಕರ ಬಳಿ ಕೇಳಿಕೊಳ್ಳುತ್ತಿದ್ದಾರೆ. ಆದ್ರೆ ಯುವತಿಯ ಪೋಷಕರು ರಾಜಕೀಯವಾಗಿ ಪ್ರಬಲವಾಗಿದ್ದರಿಂದ ಮುಂದೆ ಏನಾದ್ರೂ ಆಗಬಹುದು ಎನ್ನುವ ಭಯ ಪ್ರೇಮಿಗಳನ್ನು ಕಾಡುತ್ತಿದೆ. ಈ ಕಾರಣಕ್ಕಾಗಿಯೇ ಬಳ್ಳಾರಿ ಎಸ್​ಪಿ ಅವರನ್ನು ಭೇಟಿ ಮಾಡಿ ರಕ್ಷಣೆ ಕೇಳುತ್ತಿದ್ದಾರೆ. ಜಾತಿ ಬೇರೆ-ಬೇರೆಯಾಗಿದ್ದಕ್ಕೆ ಪ್ರೇಮಿಗಳು ಮದುವೆಯಾಗಿ ಸಂಸಾರ ಮಾಡಲು ಕಷ್ಟಪಡುತ್ತಿದ್ದು, ಇದೀಗ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ. ಈಗ ಪೊಲೀಸರು ಕೂಡ ಈ ಇಬ್ಬರು ಪ್ರೇಮಿಗಳಿಗೆ ರಕ್ಷಣೆ ನೀಡಲು ಮುಂದಾಗಿದ್ದಾರೆ. ಪೊಲೀಸರು ರಕ್ಷಣೆಗೆ ಬಂದಿದ್ದರಿಂದ ಸದ್ಯಕ್ಕೆ ಪ್ರೇಮಿಗಳು ಈಗ ನಿರಾಳರಾಗಿದ್ದರೂ, ಯುವಕನ ಪೋಷಕರಿಗೆ ಭಯ, ಆತಂಕ ಮಾತ್ರ ಮುಂದುವರೆದಿದೆ.
2022/05/25 04:28:29
https://www.kannadigaworld.com/kannada/karnataka-kn/381429.html
mC4
ಬಿಜೆಪಿಯವರಿಗೆ ಅನುಭವ ಕೊರತೆ ಇಷ್ಟಿದೆ ಎಂಬುದು ಗೊತ್ತಿರಲಿಲ್ಲ: ಖಾದರ್ | Minister U T Kahadar justified his statement on Mangaluru slaughterhouse - Kannada Oneindia » ಬಿಜೆಪಿಯವರಿಗೆ ಅನುಭವ ಕೊರತೆ ಇಷ್ಟಿದೆ ಎಂಬುದು ಗೊತ್ತಿರಲಿಲ್ಲ: ಖಾದರ್ Updated: Monday, October 8, 2018, 19:23 [IST] ಮಂಗಳೂರು, ಅಕ್ಟೋಬರ್ 8: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ 15 ಕೋಟಿ ರುಪಾಯಿ ಅನುದಾನವನ್ನು ಕಸಾಯಿಖಾನೆಗೆ ನೀಡುವ ಹೇಳಿಕೆ ನೀಡಿ, ವಿವಾದ ಸೃಷ್ಟಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುದ್ರೋಳಿಯಲ್ಲಿ ಇರುವ ಕಸಾಯಿಖಾನೆ ಬಹಳ ಹಳೆಯದಾಗಿದೆ. ಅದರ ಅಭಿವೃದ್ಧಿಗೆ ಜನರು ಬೇಡಿಕೆ ಇಟ್ಟಿದ್ದರು. ಈ ವಿಚಾರ ಬಿಜೆಪಿಯವರಿಗೂ ಗೊತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಸಮಗ್ರ ಅಭಿವೃದ್ಧಿ ಅಡಕವಾಗಿದೆ. ಅದಕ್ಕಾಗಿಯೇ ಹಣ ಬರುತ್ತದೆ. ಅದರಲ್ಲಿ ಸ್ವಚ್ಛತೆಯೂ ಒಂದು ಭಾಗ ಎಂದು ಹೇಳಿದರು. ನಗರದ ಘನ ತಾಜ್ಯ ನಿಯಂತ್ರಣಕ್ಕೆ ಬರಬೇಕಾದರೆ ಕಸಾಯಿಖಾನೆ ಅಭಿವೃದ್ಧಿ ಆಗಬೇಕಿದೆ. ಬಿಜೆಪಿಯವರು ಈ ವಿಚಾರದಲ್ಲಿ ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರಕ್ಕೆ ಪತ್ರ ಬರೆದು, ಅನುದಾನ ನಿಲ್ಲಿಸಲಿ ಎಂದು ಯು.ಟಿ. ಖಾದರ್ ಸವಾಲು ಹಾಕಿದರು. ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯವರೇ ಕಸಾಯಿಖಾನೆಯಲ್ಲಿ ಮೂಲಸೌಕರ್ಯ ಇಲ್ಲ ಎಂದು ಹೇಳಿದ್ದರು. ಒಂದು ವರ್ಷ ಕಸಾಯಿಖಾನೆಯ ಟೆಂಡರ್ ಬಿಜೆಪಿಯವರೇ ಪಡೆದಿದ್ದರು. ಆಗ ಎಲ್ಲವೂ ಸರಿ ಇತ್ತು. ಆದರೆ ಈಗ ಸರಿ ಇಲ್ಲ ಎನ್ನುವುದು ಬಿಜೆಪಿಯವರ ಇಬ್ಬಗೆ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘನತ್ಯಾಜ್ಯದ ವಿಲೇವಾರಿಗೆ ವ್ಯವಸ್ಥೆ ಇರಲಿಲ್ಲ ಮಂಗಳೂರಿನ ಸ್ವಚ್ಛತೆ ದೃಷ್ಟಿಯಿಂದ ಕಸಾಯಿಖಾನೆಗೆ 15 ಕೋಟಿ ರುಪಾಯಿ ನೀಡಲಾಗಿದೆ. ಕಸಾಯಿಖಾನೆಯಲ್ಲಿ ವೈದ್ಯರಿಗೆ ಕೂರುವ ವ್ಯವಸ್ಥೆ ಇಲ್ಲ. ಘನತ್ಯಾಜ್ಯದ ವಿಲೇವಾರಿಗೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಅದರ ಸಮಗ್ರ ಅಭಿವೃದ್ಧಿ ಹಾಗೂ ಸುಸಜ್ಜಿತ ಕಸಾಯಿಖಾನೆ ನಿರ್ಮಾಣಕ್ಕೆ 15 ಕೋಟಿ ರುಪಾಯಿ ನೀಡಲು ಪ್ರಸ್ತಾವ ಕಳುಹಿಸಲಾಗಿದೆ ಎಂದರು. ಬಿಜೆಪಿಯವರಿಗೆ ಆಡಳಿತ ಅನುಭವ ಇಷ್ಟು ಕಡಿಮೆ ಎಂದು ಗೊತ್ತಿರಲಿಲ್ಲ ಕಸಾಯಿಖಾನೆ ಆಭಿವೃದ್ಧಿ ಬಗ್ಗೆ ನಾನು ಕೊಟ್ಟಿದ್ದು ಸಲಹೆ ಮಾತ್ರ. ಅಧಿಕಾರಿಗಳು ಈ ಕುರಿತು ಯೋಜನೆ ತಯಾರಿಸಿ, ಕೇಂದ್ರಕ್ಕೆ ಕಳುಹಿಸಿದ್ದಾರೆ. ಬಿಜೆಪಿಯವರಿಗೆ ಆಡಳಿತದ ಅನುಭವ ಕಡಿಮೆ ಅಂದುಕೊಂಡಿದ್ದೆ. ಆದರೆ ಇಷ್ಟು ಕಡಿಮೆ ಎಂದು ಗೊತ್ತಿರಲಿಲ್ಲ ಎಂದು ಅವರು ವ್ಯಂಗ್ಯವಾಡಿದರು. ಬಿಜೆಪಿಯವರು ಆಗ ಏಕೆ ಚಕಾರ ಎತ್ತಲಿಲ್ಲ? ಸ್ಮಾರ್ಟ್ ಸಿಟಿಯಲ್ಲಿ 15 ಕೋಟಿ ರುಪಾಯಿ ಕಸಾಯಿಖಾನೆಗೆ ನೀಡಿದ ವಿಚಾರ ಬೋರ್ಡ್ ಮೀಟಿಂಗ್ ನಲ್ಲಿ ತೀರ್ಮಾನಿಸಿ, ನಿರ್ಧಾರ ಮಾಡಲಾಗಿದೆ. ಬೋರ್ಡ್ ಮೀಟಿಂಗ್ ನಲ್ಲಿ ಬಿಜೆಪಿಯವರೂ ಇದ್ದರು. ಆದರೆ ಸಭೆಯ್ಲಲಿ ಯಾಕೆ ಚಕಾರ ಎತ್ತಿಲ್ಲ? ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಪ್ರಶ್ನಿಸಿದರು. ಕಸಾಯಿಖಾನೆಗೆ ಹಣ ನೀಡಬೇಡಿ ಎಂದು ಕೇಂದ್ರಕ್ಕೆ ಮನವಿ ಮಾಡಲಿ ಸ್ಮಾರ್ಟ್ ಸಿಟಿ ಯೋಜನೆಯ ರೂಪು- ರೇಷೆ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಸ್ಚಚ್ಛ ಭಾರತ ಎಂದು ಬಾಯಲ್ಲಿ ಹೇಳಿದರೆ ಮಾತ್ರ ಸಾಲದು. ಪ್ರತಿ ಮನೆ, ಪರಿಸರ ಸ್ವಚ್ಛವಾಗಬೇಕು. ನಗರ, ಪಟ್ಟಣ, ಗ್ರಾಮಗಳು ಸ್ವಚ್ಛವಾದರೆ ಮಾತ್ರ ದೇಶ ಸ್ವಚ್ಛವಾಗಲಿದೆ. ಬಿಜೆಪಿಯವರು ಬೇಕಿದ್ದರೆ ಕಸಾಯಿಖಾನೆಯ ಅಭಿವೃದ್ಧಿಗೆ ಯೋಜನೆಯಿಂದ ಬರುವ ಹಣ ನೀಡುವುದು ಬೇಡ ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಲಿ ಎಂದು ಅವರು ಸವಾಲೆಸೆದರು. ut khader mangaluru dakshina kannada controversy congress bjp district news ಯುಟಿ ಖಾದರ್ ಮಂಗಳೂರು ದಕ್ಷಿಣ ಕನ್ನಡ ವಿವಾದ ಕಾಂಗ್ರೆಸ್ ಬಿಜೆಪಿ ಜಿಲ್ಲಾಸುದ್ದಿ Dakshina Kannada district incharge minister U T Khadar slams BJP leaders and justified his statement on Mangaluru slaughterhouse on Monday.
2018/12/13 19:27:09
https://kannada.oneindia.com/news/mangalore/minister-u-t-kahadar-justified-his-statement-on-mangaluru-slaughterhouse-151473.html
mC4
ಟ್ಯಾಂಕ್ ಸೋರಿಕೆ: ಕುಡಿಯುವ ನೀರಿನ ಸಮಸ್ಯೆಯ ಭೀತಿಯಲ್ಲಿ ಜನತೆ | News13 News13 > ಸುದ್ದಿಗಳು > ರಾಜ್ಯ > ಪ್ರಾದೇಶಿಕ > ಪುತ್ತೂರು > ಟ್ಯಾಂಕ್ ಸೋರಿಕೆ: ಕುಡಿಯುವ ನೀರಿನ ಸಮಸ್ಯೆಯ ಭೀತಿಯಲ್ಲಿ ಜನತೆ ಟ್ಯಾಂಕ್ ಸೋರಿಕೆ: ಕುಡಿಯುವ ನೀರಿನ ಸಮಸ್ಯೆಯ ಭೀತಿಯಲ್ಲಿ ಜನತೆ ಪುತ್ತೂರು: ಗ್ರಾಮೀಣ ಭಾಗದ ಜನತೆಯ ಮೂಲಭೂತ ಸೌಕರ್ಯಗಳ ಪೂರೈಕೆಗೆ ಸರಕಾರ ಎಷ್ಟೇ ಕ್ರಮ ಕೈಗೊಂಡರೂ ಅದು ಸರಿಯಾಗಿ ಜನತೆಗೆ ಸಿಗುವುದು ಕಷ್ಟ. ಇದಕ್ಕೆ ಉದಾಹರಣೆ ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ನ್ನು ನೋಡಿದಾಗ ತಿಳಿಯುತ್ತದೆ. ಈ ಭಾಗದ ಜನತೆಯ ನೀರಿನ ಭವಣೆಯನ್ನು ಮನಗಂಡು ಜ.27, 2013ರಂದು ಅಂದಿನ ಜಿ.ಪಂ.ಸದಸ್ಯರಾದ ದಿ.ಸಾವಿತ್ರಿ ಶಿವರಾಂ ಜಿ.ಪಂ.ನಿಂದ 8 ಲಕ್ಷ ರೂ. ಮಂಜೂರು ಮಾಡಿದ್ದರು. ಇದರ ಕಾಮಗಾರಿಗೆ ಶಿಲಾನ್ಯಾಸ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಅಂತೂ ಟ್ಯಾಂಕ್ ರಚನೆಯೂ ಆಯ್ತು. ಇನ್ನು ನೀರಿನ ಸಮಸ್ಯೆಯಿಲ್ಲ ಎಂದು ಜನರು ನಿಟ್ಟುಸಿರು ಬಿಟ್ಟರು. ಟ್ಯಾಂಕ್ ಸೋರುತ್ತಿದೆ: ಕೇವಲ ಹತ್ತು ತಿಂಗಳ ಹಿಂದೆ ಟ್ಯಾಂಕ್‌ನ ಕಾಮಗಾರಿ ಪೂರ್ಣಗೊಂಡು ಅದಕ್ಕೆ ನೀರು ತುಂಬಿಸಿದಾಗ ಟ್ಯಾಂಕ್‌ನ ಕಾಮಗಾರಿಯ ಸಾಚಾತನ ಬಯಲಾಯಿತು. ರಾತ್ರಿ ಟ್ಯಾಂಕ್‌ಗೆ ನೀರು ತುಂಬಿಸಿದರೆ ಬೆಳಿಗ್ಗೆ ನೋಡುವಾಗ ಟ್ಯಾಂಕ್‌ನಲ್ಲಿ ಕೇವಲ ಅರ್ಧದಷ್ಟು ಮಾತ್ರವೇ ನೀರು ಉಳಿಯುತ್ತಿತ್ತು. ಕಾರಣ ಹುಡುಕುವಾಗ ಕಂಡಿದ್ದು ಟ್ಯಾಂಕ್‌ನ ಕೆಳಗಿನಿಂದ ನೀರು ಸೋರುತ್ತಿರುವುದು. ಈ ಮೂಲಕ ಸರಕಾರದ ಯೋಜನೆಯು ಜನತೆಗೆ ಪೂರ್ಣ ಪ್ರಮಾಣದಲ್ಲಿ ದಕ್ಕದೆ ಹೋಯಿತು. ಈ ಟ್ಯಾಂಕ್‌ನಿಂದ ಸುಮಾರು 79 ಮನೆಗಳಿಗೆ ನೀರಿನ ಸಂಪರ್ಕವಿದೆ. ಟ್ಯಾಂಕ್‌ನ ಕಾಮಗಾರಿ ಕಳಪೆಯಾಗಿ ನೀರು ಸೋರುತ್ತಿದೆ. ಇನ್ನು ಅದಕ್ಕೆ ಅಳವಡಿಸಿರುವ ಪೈಪ್ ಜೋಡಣೆಯೂ ಸರಿಯಾಗಿಲ್ಲ. ಟ್ಯಾಂಕ್‌ನ ಕೆಳಗಡೆ ನಿಂತರೆ ಕಾರಂಜಿಯಂತೆ ನೀರು ಚಿಮ್ಮುತ್ತಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗಿ ವ್ಯರ್ಥವಾಗುತ್ತಿದೆ. ಆದರೆ ಜನಪ್ರತಿನಿಧಿಗಳಿಗೆ ಜನತೆಯ ಸಮಸ್ಯೆ ಅರಿಯುವುದಾದರೂ ಹೇಗೆ? ಕಾಮಗಾರಿ ಮುಗಿದ ಬಳಿಕ ಇದನ್ನು ಪಂಚಾಯತ್‌ಗೆ ಹಸ್ತಾಂತರಿಸಲು ಯಾರು ಗಮನಹರಿಸುತ್ತಿಲ್ಲ ಎಂಬುದು ನೀರಿನ ಬಳಕೆದಾರರ ಅಳಲು. ಈ ಟ್ಯಾಂಕ್ ನಿರ್ಮಾಣವನ್ನು ಗಮನಿಸುವಾಗ ಇದು ತೀರಾ ಕಳಪೆಯಾಗಿ ಕಾಣುತ್ತಿದೆ. ಟ್ಯಾಂಕ್‌ನ ಕೆಳಭಾಗವನ್ನು ನೋಡುವಾಗ ಇದರ ಅಸಲಿಯತ್ತು ಗೋಚರವಾಗುತ್ತದೆ. ಈಗಲೇ ಬಿರುಕು ಬಿಟ್ಟಿದ್ದು ಇನ್ನು ಏನಿದ್ದರೂ ಇದರ ಬಾಳಿಕೆ ಕೆಲವರ್ಷಗಳವರೆಗೆ ಮಾತ್ರ ಎಂಬುದಂತು ಸ್ಪಷ್ಟವಾಗಿದೆ. ಅಲ್ಲದೆ ಈ ಟ್ಯಾಂಕ್‌ಗೆ ಅಳವಡಿಸಿರುವ ಏಣಿಯನ್ನು ಏರಬೇಕಾದರೆ ಕೆಳಗೆ ಅಂಬ್ಯುಲೆನ್ಸ್ ತರಿಸಿ ಮುಂದುವರಿಯಬೇಕಾಗಿದೆ. ಅಷ್ಟೂ ಕಳಪೆ ಮಟ್ಟದ ಏಣಿಯನ್ನು ಅಳವಡಿಸಲಾಗಿದೆ. ಗಟ್ಟಿ ಏಣಿ ಅಳವಡಿಸಿದರೆ ಯಾರಾದರೂ ಹತ್ತಿ ಪರಿಶೀಲಿಸಬಹುದೆಂಬ ಭಯದಿಂದ ಈ ರೀತಿಯ ಏಣಿ ಅಳವಡಿಸಲಾಗಿದೆ ಎಂಬ ಕುಹಕದ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಸಮಸ್ಯೆಗಳು ಏನೇ ಇದ್ದರು ಸಾರ್ವಜನಿಕ ಬಳಕೆಯ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಯೋಜನೆಚಿi ಸದುಪಯೋಗವಾಗುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸುವುದು ಅಗತ್ಯ. ವಿದ್ಯುತ್ ಕೈ ಕೊಟ್ಟರೆ ನೀರಿಲ್ಲ: ವಿದ್ಯುತ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆ ದಿನ ಈ ಭಾಗದ ಜನತೆಯ ಪಾಡು ಹೇಳತೀರದು. ವಿದ್ಯುತ್ ಬರುವ ತನಕ ಚಾತಕ ಪಕ್ಷಿಯಂತೆ ಕಾಯಬೇಕಾಗುತ್ತದೆ. ಟ್ಯಾಂಕ್‌ನೊಳಗಿರುವ ನೀರು, ಇದರ ದುರವಸ್ಥೆಯಿಂದ ಪೋಲಾಗುತ್ತಿರುವುದರಿಂದ ದೂರದ ಕಡೆಗಳಿಗೆ ನೀರು ತಲುಪುತ್ತಿಲ್ಲ. ಟ್ಯಾಂಕ್ ಸಮರ್ಪಕವಾಗಿದ್ದರೆ ವಿದ್ಯುತ್ ಇಲ್ಲದಿದ್ದರೂ ಈ ಭಾಗದ ಜನತೆಗೆ ಎರಡು ದಿನಗಳ ಮಟ್ಟಿಗಾದರೂ ನೀರಿನ ಸಮಸ್ಯೆಯಾಗುತ್ತಿರಲಿಲ್ಲ. ಈ ಟ್ಯಾಂಕ್‌ನ ಕಾಮಗಾರಿ ಸಮರ್ಪಕವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನು ಸಮರ್ಪಕವಾಗಿ ಮಾಡಿ ಜನರಿಗೆ ಉಪಯೋಗವಾಗುವಂತಾಗಬೇಕು. ಪಂಚಾಯತ್‌ಗೆ ಶೀಘ್ರವಾಗಿ ಹಸ್ತಾಂತರ ಮಾಡುವಂತೆ ಸಂಬಂಧಪಟ್ಟವರು ಗಮನ ಹರಿಸಬೇಕೆಂದು ಎಂದು ಅಂಕತ್ತಡ್ಕ ಕುಡಿಯುವ ನೀರಿನ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹೇಳಿದರು.
2020/07/15 02:35:37
https://news13.in/archives/6694
mC4
ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಜಯ ಗಳಿಸಿದ ಭಾರತ | Vartha Bharati- ವಾರ್ತಾ ಭಾರತಿ ರಿಶಭ್‌ ಪಂತ್‌ ಅತ್ಯುತ್ತಮ ಪ್ರದರ್ಶನ ವಾರ್ತಾ ಭಾರತಿ Jan 19, 2021, 1:09 PM IST ಬ್ರಿಸ್ಬೇನ್,ಜ.19: ಆಸ್ಟ್ರೇಲಿಯಾದ ಬ್ರಿಸ್ಬೇನ್ ನ ಗಾಬಾ ಕ್ರೀಡಾಂಗಾಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕನೇ ಟೆಸ್‍ ಪಂದ್ಯಾಟದಲ್ಲಿ ಭಾರತ ತಂಡವು ರೋಮಾಂಚಕ ಮತ್ತು ಐತಿಹಾಸಿಕ ಜಯ ಸಾಧಿಸಿದೆ. ಒಟ್ಟು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸುವ ಮೂಲಕ ಭಾರತ ತಂಡವು ಈ ಐತಿಹಾಸಿಕ ಸಾಧನೆಗೈದಿದೆ. ಆರಂಭಿಕ ಬ್ಯಾಟ್ಸ್ ಮನ್ ಆಗಿ ಆಗಮಿಸಿದ್ದ ರೋಹಿತ್ ಶರ್ಮಾ 7 ರನ್ ಗಳಿಸಿ ಪೆವಿಲಿಯನ್ ಸೇರಿದರೂ, ಶುಭ್ ಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ 114 ರನ್ ಗಳ ಜೊತೆಯಾಟ ಆಡಿದರು. ಗೋಡೆಯಂತೆ ಕ್ರೀಸ್ ನಲ್ಲಿ ನಿಂತು ಆಸೀಸ್ ಬೌಲರ್ ಗಳ ಬೆವರಿಳಿಸಿದ ಚೇತೇಶ್ವರ ಪೂಜಾರ 211 ಎಸೆತಗಳಲ್ಲಿ 56 ರನ್ ಗಳಿಸಿದರು. ಶುಭ್ ಮನ್ ಗಿಲ್ 146 ಎಸೆತಗಳಲ್ಲಿ 91 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 29 ಎಸೆತಗಳಲ್ಲಿ 22 ರನ್ ಗಳಿಸಿ ನಥನ್‌ ಲಿಯೋನ್‌ ಗೆ ವಿಕೆಟ್‌ ಒಪ್ಪಿಸಿದರು. ಕೊನೆಯ ಕ್ಷಣದಲ್ಲಿ ಅದ್ಭುತ ಪ್ರದರ್ಶನ ತೋರಿದ ರಿಶಭ್‌ ಪಂತ್‌ 138 ಎಸೆತಗಳಲ್ಲಿ 89 ರನ್‌ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. Congratulations #TeamIndia Absolute superstars all of you A proud and historic moment for Indian cricket! Battered, bruised, but champions as well
2021/02/28 19:06:53
https://www.varthabharati.in/article/kreede/275641
mC4
ರಾಮಾಯಣ | ಹಿಂದೂ ಪುರಾಣಗಳು | ಹಿಂದೂ ಧರ್ಮ ರಾಮಾಯಣ ಹಿಂದೂಗಳ ಪವಿತ್ರಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹತ್ಕಾವ್ಯವು ವಾಲ್ಮೀಕಿ ಋಷಿಯಿಂದ ರಚಿಸಲ್ಪಟ್ಟಿದೆ. ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಆಯಣ=ರಾಮಾಯಣ) "ರಾಮನ ಕಥೆ" ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದುಂಟಾದ ೭ ಕಾಂಡಗಳಿಂದ ಕೂಡಿದೆ. ರಾಮಾಯಣದ ಕಥೆಯ ಮುಖ್ಯವಾಗಿ ಅಯೋಧ್ಯೆಯ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಕುರಿತಾಗಿದೆ. ವಾಲ್ಮೀಕಿಯಿಂದ ರಚಿತವಾದ ಈ ಕಾವ್ಯ ರಾಮನ ಮಕ್ಕಳಾದ ಲವ-ಕುಶರಿಂದ ಪ್ರಚಲಿತವಾಯಿತು. ರಾಮಾಯಣದ ರಚನೆ ರಾಮಾಯಣಗಳಲ್ಲೆಲ್ಲ ಹಳೆಯದೂ ಹೆಚ್ಚು ಜನರು ಓದುವಂಥದೂ ಆದ ವಾಲ್ಮೀಕಿಯ 'ರಾಮಾಯಣ'ವು ಅನೇಕ ಸಂಸ್ಕೃತಿಗಳಲ್ಲಿ ಬಳಕೆಯಲ್ಲಿರುವ ಅನೇಕ ರಾಮಾಯಣದ ಆವೃತ್ತಿಗಳಿಗೆ ಆಧಾರವಾಗಿದೆ. ಈ ಕೃತಿಯು ಅನೇಕ ಪೂರ್ಣ ಮತ್ತು ಅಪೂರ್ಣ ಹಸ್ತಪ್ರತಿಗಳಲ್ಲಿ ಉಳಿದುಕೊಂಡು ಬಂದಿದೆ. ಅವುಗಳಲ್ಲಿ ಅತ್ಯಂತ ಹಳೆಯದು ೧೧ನೆಯ ಶತಮಾನದ್ದು. ವಾಲ್ಮೀಕಿ ರಾಮಾಯಣದ ಪ್ರಸ್ತುತ ಪ್ರತಿಯು ಉತ್ತರ ಭಾರತದ ಹಾಗೂ ದಕ್ಷಿಣ ಭಾರತದ ಎರಡು ಪ್ರಾದೇಶಿಕ ಆವೃತ್ತಿಗಳ ರೂಪದಲ್ಲಿ ನಮಗೆ ಲಭ್ಯವಾಗಿದೆ . ವಾಲ್ಮೀಕಿ ರಾಮಾಯಣವನ್ನು ರಾಮನ ಜನ್ಮದಿಂದ ಹಿಡಿದು ಅವನ ಅವತಾರ ಸಮಾಪ್ತಿಯವರೆಗಿನ ಜೀವನವನ್ನು ಸಾಮಾನ್ಯವಾಗಿ ಏಳು ಕಾಂಡಗಳಾಗಿ ವಿಭಜಿಸಲಾಗುತ್ತದೆ . ಬಾಲ ಕಾಂಡ – ರಾಮನ ಜನನ, ಬಾಲ್ಯ, ವನವಾಸಕ್ಕೆ ಹೋಗುವ ಮುನ್ನ ಅಯೋಧ್ಯೆಯಲ್ಲಿ ರಾಮ ಕಳೆದ ದಿನಗಳು, ವಿಶ್ವಾಮಿತ್ರನ ಕೋರಿಕೆಯಂತೆ ರಾಕ್ಷಸರನ್ನು ಸಂಹರಿಸಲು ಅವನೊಡನೆ ಅರಣ್ಯಕ್ಕೆ ತೆರಳುವುದು, ಸೀತಾ ಸ್ವಯಂವರ- ಈ ಘಟನೆಗಳನ್ನು ಬಾಲಕಾಂಡ ಒಳಗೊಂಡಿದೆ. ಅಯೋಧ್ಯಾ ಕಾಂಡ – ಈ ಭಾಗದಲ್ಲಿ ಕೈಕೇಯಿಯು ದಶರಥನಲ್ಲಿ ಕೇಳಿಕೊಂಡಿದ್ದ ಮೂರು ವರಗಳಿಂದ ರಾಮನಿಗೆ ವನವಾಸವಾಗುತ್ತದೆ. ದಶರಥನು ಪುತ್ರಶೋಕವನ್ನು ತಾಳಲಾರದೆ ಮರಣಹೊಂದುತ್ತಾನೆ. ಕಿಷ್ಕಿಂಧಾ ಕಾಂಡ – ಸೀತೆಯನ್ನು ಅರಸುತ್ತಾ ರಾಮ ಕಿಷ್ಕಿಂಧೆಯಲ್ಲಿ ಎಂಬ ವಾನರ ಸಾಮ್ರಾಜ್ಯಕ್ಕೆ ಬರುತ್ತಾನೆ. ಅಲ್ಲಿ ಅವನಿಗೆ ಸುಗ್ರೀವ, ಹನುಮಂತ ಮುಂತಾದ ಕಪಿವೀರರ ಗೆಳೆತನವಾಗುತ್ತದೆ. ವಾನರಸೈನ್ಯವು ಸೀತೆಯನ್ನು ಹುಡುಕಲು ಪ್ರಾರಂಭಿಸುತ್ತದೆ. ಸುಂದರ ಕಾಂಡ – ಹನುಮಂತನ ಬಗೆಗಿನ ವಿವರಗಳಿವೆ. ಹನುಮಂತನ ಇನ್ನೊಂದು ಹೆಸರು ಸುಂದರೆ ಎಂದಿರುವುದರಿಂದ ಈ ಭಾಗಕ್ಕೆ ಸುಂದರ ಕಾಂಡ ಎಂಬ ಹೆಸರು ಬಂದಿದೆ. ಹನುಮಂತ ಸಮುದ್ರ ಲಂಘನ ಮಾಡಿ ಲಂಕೆಯನ್ನು ಪ್ರವೇಶಿಸುತ್ತಾನೆ. ಸೀತೆಯು ರಾವಣನ ರಾಜ್ಯದಲ್ಲಿರುವ ಅಶೋಕವನದಲ್ಲಿ ಇರುವ ವಿಷಯವನ್ನುರಾಮನಿಗೆ ತಿಳಿಸುತ್ತಾನೆ. ಉತ್ತರ ಕಾಂಡ – ರಾಮ,ಸೀತೆಯರು ವನವಾಸದ ನಂತರ ಅಯೋಧ್ಯೆಯಲ್ಲಿ ಕಳೆದ ದಿನಗಳು. ಅಗಸನ ಮಾತಿನ ಕಾರಣದಿಂದಾಗಿ ಸೀತೆಯನ್ನು ರಾಮ ಕಾಡಿಗಟ್ಟುವುದು, ಕಾಲಾಂತರದಲ್ಲಿ ರಾಮಾವತಾರ ಸಮಾಪ್ತಿಗೊಂಡ ವಿವರಗಳಿವೆ. ವಾಲ್ಮೀಕಿ ರಾಮಾಯಣದ ಮೊದಲ ಮತ್ತು ಕಡೆಯ ಕಾಂಡಗಳನ್ನು ವಾಲ್ಮೀಕಿಯೇ ಬರೆದಿರುವದರ ಬಗ್ಗೆ ಸಂದೇಹಗಳಿವೆ . ಈ ಎರಡು ಅಧ್ಯಾಯಗಳು ಮತ್ತು ಉಳಿದ ಭಾಗದ ನಡುವೆ ಶೈಲಿಯಲ್ಲಿ ವ್ಯತ್ಯಾಸ ಮತ್ತು ಕಥೆಯಲ್ಲಿ ಅನೇಕ ವಿರೋಧಾಭಾಸಗಳಿದ್ದರೂ ಈ ಎರಡು ಅಧ್ಯಾಯಗಳು ಕೃತಿಯ ಬೇರ್ಪಡಿಸಲಾಗದ ಅಂಗ ಎಂದು ಅನೇಕ ತಜ್ಞರ ಅಭಿಪ್ರಾಯವಾಗಿದೆ. ರಾಮಾಯಣದಲ್ಲಿ ಕಂಡುಬರುವ ರಾಮನ ಜನ್ಮ, ಅವನ ದೈವೀ ಅಂಶ ಮತ್ತು ರಾವಣನನ್ನು ಕುರಿತಾದ ದಂತಕಥೆಗಳಂಥ ಅನೇಕ ಪೌರಾಣಿಕ ಅಂಶಗಳ ಬಹುಭಾಗ ಈ ಎರಡು ಅಧ್ಯಾಯಗಳಲ್ಲೇ ಕಂಡುಬರುತ್ತದೆ . ರಾಮಾಯಣದ ಮುಖ್ಯ ಪಾತ್ರಗಳು ರಾಮ - ರಾಮ ರಾಮಾಯಣದ ನಾಯಕ. ರಾಮನನ್ನು ದೇವರ ಅವತಾರವೆಂದು ಚಿತ್ರಿಸಲಾಗಿದೆ. ರಾಮನು ಅಯೋಧ್ಯೆಯ ರಾಜನಾದ ದಶರಥನ ಹಿರಿಯ ಮಗ. ದಶರಥನಿಗೆ ಬಹಳ ಪ್ರೀತಿಪಾತ್ರನಾದ ಮಗ. ಅಯೋಧ್ಯೆಯ ಪ್ರಜೆಗಳಿಗೆಲ್ಲ ರಾಮನನ್ನು ಕಂಡರೆ ಬಹಳ ಪ್ರೀತಿ. ರಾಮ ಸದ್ಗುಣಗಳ ಸಾಕಾರ ರೂಪವಾಗಿದ್ದನು. ದಶರಥನ ಮೂವರು ಪತ್ನಿಯರಲ್ಲಿ ಒಬ್ಬಳಾದ ಕೈಕೇಯಿಯು ತನ್ನ ವರಗಳ ಮೂಲಕ ರಾಮನ ವನವಾಸಕ್ಕೆ ಕಾರಣಳಾಗುತ್ತಾಳೆ. ರಾಮನು ರಾಜನಾಗುವ ಅವಕಾಶವನ್ನು ಬಿಟ್ಟುಕೊಟ್ಟು, ತಂದೆಯಿಂದ ದೂರವಾಗಿ ಅರಣ್ಯಕ್ಕೆ ಹೋಗಬೇಕಾಗುತ್ತದೆ. ವನವಾಸದಲ್ಲಿದ್ದಾಗ ರಾಕ್ಷಸನಾದ ರಾವಣನು ರಾಮನಿಂದ ಕೊಲ್ಲಲ್ಪಡುತ್ತಾನೆ. ಸೀತಾ - ಸೀತೆಯು ರಾಮನ ಹೆಂಡತಿ ಮತ್ತು ಮಿಥಿಲೆಯ ರಾಜನಾದ ಜನಕನ ಮಗಳು. ಸೀತೆಯು ಸ್ತ್ರೀ ಸಚ್ಚಾರಿತ್ರ್ಯದ ಪ್ರತಿರೂಪವಾಗಿದ್ದವಳು. ಸೀತೆಯು ರಾಮನನ್ನು ಹಿಂಬಾಲಿಸಿ ವನವಾಸಕ್ಕೆ ಹೊರಡುತ್ತಾಳೆ. ಅಲ್ಲಿ ರಾವಣನಿಂದ ಅಪಹರಣಕ್ಕೆ ಒಳಗಾಗುತ್ತಾಳೆ. ರಾವಣನು ಸೀತೆಯನ್ನು ಲಂಕೆಯಲ್ಲಿ ಬಂಧನದಲ್ಲಿರಿಸಿರುತ್ತ್ತಾನೆ. ಮುಂದೆ ರಾಮ ರಾವಣನನ್ನು ಕೊಂದು ಅವನ ಸೆರೆಯಲ್ಲಿದ್ದ ಸೀತೆಯನ್ನು ಕರೆದೊಯ್ಯುತ್ತಾನೆ. ಲಕ್ಷ್ಮಣ - ಲಕ್ಷ್ಮಣನ ರಾಮನ ತಮ್ಮ. ರಾಮ ವನವಾಸಕ್ಕೆಂದು ಹೊರಟಾಗ ಲಕ್ಶ್ಮಣನೂ ಅವನನ್ನು ಹಿಂಬಾಲಿಸುತ್ತಾನೆ. ಕಾಡಿನಲ್ಲಿದ್ದಷ್ಟೂ ದಿನ ತನ್ನ ಅಣ್ಣ, ಅತ್ತಿಗೆಯರಾದ ರಾಮ ಮತ್ತು ಸೀತೆಯ ಸೇವೆ ಮಾಡುತ್ತಿರುತ್ತಾನೆ. ರಾವಣನಿಂದ ಪ್ರೇರಿತನಾದ ಮಾರೀಚ ಚಿನ್ನದ ಜಿಂಕೆಯ ವೇಷದಲ್ಲಿ ಸುಳಿದಾಡಿದಾಗ ಸೀತೆ ಆ ಜಿಂಕೆಯನ್ನು ನೋಡಿ ಆಸೆ ಪಡುತ್ತಾಳೆ. ಲಕ್ಷ್ಮಣ ಅದನ್ನು ಹಿಡಿದು ತರಲೆಂದು ಹೋದಾಗ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ. ರಾವಣ - ರಾವಣನು ಲಂಕೆಯ ರಾಜನಾಗಿದ್ದು ಲಂಕಾಧಿಪತಿ ಎನಿಸಿಕೊಂಡಿದ್ದವನು. ರಾವಣನು ಬ್ರಹ್ಮನನ್ನು ಕುರಿತು ಹತ್ತು ಸಾವಿರ ವರ್ಷಗಳು ತಪಸ್ಸು ಮಾಡಿ, ಒಂದು ವಿಶಿಷ್ಟವಾದ ವರವನ್ನು ಪಡೆದಿರುತ್ತಾನೆ. "ದೇವತೆಗಳಿಂದಲೂ, ರಾಕ್ಷಸರಿಂದಲೂ, ಅಥವಾ ಯಕ್ಷಕಿನ್ನರರಿಂದಲೂ" ಎಂಬುದೇ ಆ ವರ. ರಾವಣನಿಗೆ ಹತ್ತು ತಲೆಗಳು, ಇಪ್ಪತ್ತು ಕೈಗಳು. ಬ್ರಹ್ಮನಿಂದ ಚಿರಂಜೀವಿಯಾಗುವ ವರ ಪಡೆದ ರಾವಣ ಲೋಕಕಂಟಕನಾಗಿ ಪರಿಣಮಿಸುತ್ತಾನೆ. ದುಷ್ಟತನದಿಂದ ಮೆರೆಯುತ್ತಿದ್ದ ರಾವಣನನ್ನು ಸಂಹರಿಸಲು ರಾಮ ಭೂಲೋಕದಲ್ಲಿ ಜನ್ಮ ತಾಳುತ್ತಾನೆ. ದಶರಥ - ದಶರಥ ಅಯೋಧ್ಯೆಯ ರಾಜ. ಶ್ರೀರಾಮನ ತಂದೆ. ದಶರಥನಿಗೆ ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ರಾಮನು ಕೌಸಲ್ಯೆಯ ಮಗ. ಲಕ್ಷ್ನಣನು ಸುಮಿತ್ರೆಯ ಮಗ. ಭರತ ಮತ್ತು ಶತ್ರುಘ್ನರು ಕಿರಿಯ ರಾಣಿಯಾದ ಕೈಕೇಯಿಯ ಮಕ್ಕಳು. ಕೈಕೇಯಿ ದಶರಥನ ಪ್ರೀತಿಯ ಹೆಂಡತಿ. ದಶರಥನಲ್ಲಿ ಮೂರು ವರಗಳನ್ನು ಕೇಳಿಕೊಂಡು ರಾಮನನ್ನು ದಶರಥನಿಂದ ದೂರ ಮಾಡುತ್ತಾಳೆ. ಪ್ರಿಯಪುತ್ರನಾದ ರಾಮನ ವಿರಹವನ್ನು ಸಹಿಸದೆ ದಶರಥ ಎದೆಯೊಡೆದುಕೊಂಡು ಸಾಯುತ್ತಾನೆ. ಭರತ - ಭರತನು ದಶರಥನ ಎರಡನೆಯ ಮಗ. ರಾಮನು ಸೀತಾ,ಲಕ್ಶ್ಮಣರೊಡನೆ ವನವಾಸ ಹೊರಟಾಗ ಭರತ ಇರುವುದಿಲ್ಲ. ತನ್ನ ತಾಯಿಯೇ ರಾಮನನ್ನು ವನವಾಸಕ್ಕೆ ಕಳಿಸುವುದರ ಮೂಲಕ, ತನ್ನ ತಂದೆ ದಶರಥನ ಸಾವಿಗೆ ಕಾರಣಳಾದ ವಿಷಯ ಭರತನಿಗೆ ನಂತರ ತಿಳಿಯುತ್ತದೆ. ಕೂಡಲೇ ತಾಯಿಯ ಮೇಲೆ ಕೋಪಗೊಂಡು ರಾಮನನ್ನು ಹುಡುಕಲು ಹೊರಡುತ್ತಾನೆ. ಭರತ ಎಷ್ಟೇ ವಿನಂತಿಸಿಕೊಂಡರೂ, ತನ್ನ ತಂದೆಗೆ ಕೊಟ್ಟ ಮಾತಿಗೆ ತಪ್ಪ್ಪಲು ಒಪ್ಪದ ರಾಮ ಭರತನೊಡನೆ ಹಿಂತಿರುಗಲು ಒಪ್ಪುವುದಿಲ್ಲ. ಆಗ ಭರತ ರಾಮನ ಪಾದುಕೆಗಳನ್ನು ಪಡೆದುಕೊಂಡು ಹಿಂತಿರುಗುತ್ತಾನೆ. ತಾನು ಸಿಂಹಾಸನದ ಮೇಲೆ ಕುಳಿತುಕೊಳ್ಳದೆ, ಅಣ್ಣನ ಪಾದುಕೆಗಳನ್ನೇ ಸಿಂಹಾಸನದ ಮೇಲಿಟ್ಟು, ರಾಮನ ಪರವಾಗಿ ರಾಜ್ಯದ ಆಡಳಿತವನ್ನು ನಿರ್ವಹಿಸುತ್ತಿರುತ್ತಾನೆ. ವಿಶ್ವಾಮಿತ್ರ - ವಿಶ್ವಾಮಿತ್ರ ಒಬ್ಬ ಋಷಿ. ಅರಣ್ಯದಲ್ಲಿ ತನ್ನ ಹೋಮ,ಹವನಾದಿಗಳಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸರನ್ನು ಸಂಹರಿಸಲು ರಾಮ, ಲಕ್ಷ್ಮಣರನ್ನು ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಾನೆ. ಮಾರ್ಗಮಧ್ಯದಲ್ಲಿ ವಿಶ್ವಾಮಿತ್ರ ರಾಮನನ್ನು ಮಿಥಿಲಾನಗರಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಜನಕರಾಜನು ಸೀತಾ ಸ್ವಯಂವರ ಏರ್ಪಡಿಸಿರುತ್ತಾನೆ. ಅಲ್ಲಿ ರಾಮನು ಶಿವ ಧನುಸ್ಸನ್ನು ಮುರಿದು ಸೀತೆಯನ್ನು ವಿವಾಹವಾಗುತ್ತಾನೆ. ರಾಮಾಯಣದ ನಾಯಕನಾದ ರಾಮ ಹಿಂದೂಗಳಿಂದ ಪೂಜಿಸಲ್ಪಡುವ ಜನಪ್ರಿಯ ದೇವರುಗಳಲ್ಲಿ ಒಬ್ಬ. ರಾಮ ನಡೆದ ದಾರಿಯೆಂದು ಹೇಳಲಾದ ಸ್ಥಳಗಳಿಗೆ ತೀರ್ಥಯಾತ್ರಿಗಳು ಭೇಟಿ ಕೊಡುವುದುಂಟು. ರಾಮಾಯಣ ಕೇವಲ ಸಾಹಿತ್ಯ ಕೃತಿಯಾಗಿರದೆ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ. ಹಿಂದೂ ಧರ್ಮದಲ್ಲಿ ಅದಕ್ಕೆ ಸಲ್ಲುವ ಗೌರವ ಎಷ್ಟೆಂದರೆ ರಾಮಾಯಣ ಅಥವಾ ಅದರ ಕೆಲವು ಭಾಗಗಳನ್ನು ನಿಷ್ಠೆಯಿಂದ ಓದಿ ಅಥವಾ ಕೇಳಿದಲ್ಲಿ ಪಾಪಗಳಿಂದ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯೂ ಇದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ರಾಮ, ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಅವತಾರ. ರಾಮನ ಅವತಾರದ ಉದ್ದೇಶ ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸುವುದು. ರಾಮನ ಯೌವನ ವಿಶ್ವದ ಸೃಷ್ಟಿಕರ್ತನಾದ ಬ್ರಹ್ಮನು ರಾಕ್ಷಸರರ ರಾಜ ರಾವಣನ ಘೋರ ತಪಸ್ಸಿಗೆ ಮೆಚ್ಚಿ ಅವನನ್ನು ದೇವತೆಗಳು, ರಾಕ್ಷಸರು, ಅಥವಾ ಯಕ್ಷಕಿನ್ನರರು ಕೊಲ್ಲಲಾಗದೆಂಬ ವರವನ್ನು ಕೊಟ್ಟಿದ್ದನು .ಅದನ್ನು ಅವನು ಹಿಂತೆಗೆದುಕೊಳ್ಳುವದು ಸಾಧ್ಯವಿರಲಿಲ್ಲ. ಅಂಥ ವರವನ್ನು ಪಡೆದು ರಾವಣನು ತನ್ನ ಸಹಚರ ರಾಕ್ಷಸರೊಡಗೂಡಿ ಭೂಸಂಹಾರಕ್ಕೆ ತೊಡಗಿ , ಶಿಷ್ಟಜನರಿಗೆ ಅದರಲ್ಲೂ ಬ್ರಾಹ್ಮಣರಿಗೆ ಅವರ ಜಪತಪಗಳಿಗೆ ಉಪದ್ರವ ಕೊಡಲಾರಂಭಿಸಿದನು . ಇದನ್ನು ನೋಡಿ ಎಲ್ಲ ದೇವತೆಗಳು ಭೂಮಿಯನ್ನೂ ತಮ್ಮನ್ನು ಈ ದುಷ್ಟನಿಂದ ಕಾಪಾಡು ಎಂದು ಬ್ರಹ್ಮನ ಮೊರೆ ಹೊಕ್ಕರು . ಬ್ರಹ್ಮನು ವಿಷ್ಣುವಿನ ಬಳಿಸಾರಿ ದೇವತೆಗಳ ಚಿಂತೆಯನ್ನು ಅರುಹಿ , ರಾವಣನು ಮನುಷ್ಯರಿಂದ ಅಥವಾ ಪ್ರಾಣಿಗಳಿಂದ ಮರಣಹೊಂದದ ವರವನ್ನು ಪಡೆದಿಲ್ಲದಿರುವದರಿಂದ ವಿಷ್ಣುವೇ ಮಾನವನಾಗಿ ಅವತಾರವೆತ್ತಿ ರಾವಣನನ್ನು ಸಂಹರಿಸಬೇಕೆಂದು ಕೇಳಿಕೊಂಡನು. ಈ ಮಧ್ಯೆ ಕೋಸಲವನ್ನು ಆಳುತ್ತಿದ್ದ ಅಯೋಧ್ಯೆಯ ರಾಜ ದಶರಥನಿಗೆ ಮಕ್ಕಳಿಲ್ಲದ್ದರಿಂದ ತನ್ನ ಉತ್ತರಾಧಿಕಾರಿಯ ಬಗ್ಗೆ ಚಿಂತೆಯಲ್ಲಿದ್ದನು . ಮಂತ್ರಿಗಳು ಹಾಗೂ ಪುರೋಹಿತರ ಸಲಹೆಯ ಮೇರೆಗೆ ಪುತ್ರಸಂತಾನಕ್ಕಾಆಗಿ ಪುತ್ರಕಾಮೇಷ್ಟಿ ಯಜ್ಞವನ್ನು ಮಾಡಿದನು. ವಿಷ್ಣು ದಶರಥನ ಜ್ಯೇಷ್ಠ ಪುತ್ರನಾಗಿ ಜನಿಸಲು ನಿರ್ಧರಿಸಿ ದೈವೀ ಪುರುಷನೊಬ್ಬನನ್ನು ಯಜ್ಞಕುಂಡದಲ್ಲಿ ಹುಟ್ಟುವಂತೆ ಮಾಡಿದನು. ಈ ದೈವೀ ಪುರುಷ ದಶರಥನಿಗೆ ಅಮೃತವಿದ್ದ ಚಿನ್ನದ ಕಲಶವೊಂದನ್ನು ನೀಡಿ ತನ್ನ ರಾಣಿಯರಿಗೆ ಅದನ್ನು ನೀಡುವಂತೆ ಹೇಳಿದನು. ದಶರಥನು ಅದನ್ನು ತನ್ನ ಮೂವರು ರಾ‍ಣಿಯರಾದ ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿ ಇವರ ನಡುವೆ ಹಂಚಿದನು. ಕಾಲಕ್ರಮೇಣ ಅವರು ಗರ್ಭಿಣಿಯರಾಗಿ ನಾಲ್ಕು ಮಕ್ಕಳಿಗೆ ಜನ್ಮವಿತ್ತರು. ರಾಣಿ ಕೌಸಲ್ಯೆಗೆ ಹಿರಿಯ ಮಗನಾಗಿ ರಾಮನೂ , ಕೈಕೇಯಿಗೆ ಭರತನೂ ಮತ್ತು ಲಕ್ಷ್ಮಣ ಮತ್ತು ಶತ್ರುಘ್ನರು ಸುಮಿತ್ರೆಗೂ ಜನಿಸಿದರು. ಈ ಬಾಲಕರು ವಸಿಷ್ಠರಿಂದ ಶಾಸ್ತ್ರಗಳನ್ನೂ ಬಿಲ್ಲುವಿದ್ಯೆಯನ್ನೂ ಕಲಿಯುತ್ತ ಬೆಳೆದರು. ಒಂದು ದಿನ ವಿಶ್ವಾಮಿತ್ರರು ರಾಜ್ಯಕ್ಕೆ ಬಂದು ದಶರಥನಲ್ಲಿ ತಮ್ಮ ಯಜ್ಞಯಾಗಾದಿಗಳಿಗೆ ಭಂಗತರುತ್ತಿರುವ ರಾಕ್ಷಸರಿಂದ ತಮ್ಮನ್ನು ಕಾಪಾಡಲು ರಾಮನನ್ನು ಕಳಿಸಬೇಕೆಂದು ಕೋರಿದರು. ಒಲ್ಲದ ಮನ್ಸಸ್ಸಿನಿಂದ ವಿಶ್ವಾಮಿತ್ರರೊಡನೆ ರಾಮಲಕ್ಷ್ಮಣರನ್ನು ಕಳಿಸಿಕೊಡಲು ಅವನು ಒಪ್ಪಿದನು. ಈ ಸೋದರರು ತಮ್ಮ ಕರ್ತವ್ಯವನ್ನು ಪೂರೈಸಲು ವಿಶ್ವಾಮಿತ್ರನು ಸಂತೋಷಪಟ್ಟು ಅವರಿಗೆ ಅನೇಕ ದಿವ್ಯಾಸ್ತ್ರಗಳನ್ನು ಅನುಗ್ರಹಿಸಿದನು. ವಿಶ್ವಾಮಿತ್ರರೊಡನೆಯ ಪ್ರಯಾಣದ ಕೊನೆಯಲ್ಲಿ ರಾಮನು ಮಿಥಿಲಾ ರಾಜ್ಯಕ್ಕೆ ಬಂದನು. ಅಲ್ಲಿ ಜನಕ ಮಹಾರಾಜನು ತನ್ನ ಮಗಳು ಅಪ್ರತಿಮ ಸುಂದರಿ ಸೀತೆಯನ್ನು ತನ್ನ ಆಸ್ಥಾನದಲ್ಲಿದ್ದ ಶಿವನ ಬಹಳ ಬಲಿಷ್ಠವಾದ ಧನುಸ್ಸನ್ನು ಹೆದೆಯೀರಿಸಿದವನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲಿರುವದನ್ನು ಅರಿತನು. ಅನೇಕ ವಿವಾಹೇಚ್ಛುಗಳು ಪ್ರಯತ್ನಿಸಿ ಸೋತಿದ್ದ ಈ ಕಾರ್ಯವನ್ನು ಸಾಧಿಸಲು ರಾಮನು ನಿಶ್ಚಯಿಸಿದನು. ಅವನು ಜನಕನ ಆಸ್ಥಾನಕ್ಕೆ ಬಂದಾಗ ಜನಕನು ಅವನ ಲಾವಣ್ಯಕ್ಕೆ ಮಾರುಹೋದನು. ಐದು ಸಾವಿರ ಜನರು ಆ ಬಿಲ್ಲನ್ನು ಎಂಟು ಗಾಲಿಗಳ ರಥದಲ್ಲಿ ಆಸ್ಥಾನಕ್ಕೆ ಎಳೆದು ತಂದರು. ರಾಮನು ಬಹಳ ಸುಲಭವಾಗಿ ಅದನ್ನು ಮುರಿಯುವಷ್ಟು ಬಗ್ಗಿಸಿದನು. ಜನಕನು ಸಂತಸದಿಂದ ತನ್ನ ಲಾವಣ್ಯವತಿ ಮಗಳನ್ನು ರಾಮನಿಗೆ ಮದುವೆ ಮಾಡಿಕೊಟ್ಟನು. ಭವ್ಯವದ ಮದುವೆ ಸಮಾರಂಭದ ನಂತರ ನವಜೋಡಿಯು ಅಯೋಧ್ಯೆಗೆ ಪ್ರಯಾಣ ಬೆಳೆಸಿತು. ರಾಮನ ವನವಾಸ ರಾಜ ದಶರಥನು ತನ್ನ ಹಿರಿಯ ಮಗ ಹಾಗೂ ಪದ್ಧತಿಯಂತೆ ಉತ್ತರಾಧಿಕಾರಿಯಾದ ರಾಮನನ್ನು ಯುವರಾಜನನ್ನಾಗಿ ಮಾಡಲು ನಿರ್ಧರಿಸಿದನು. ಅವನ ಪ್ರಜೆಗಳು ಈ ಘೋಷಣೆಯನ್ನು ಸಂತಸದಿಂದ ಸ್ವಾಗತಿಸಿದರು. ಇಡೀ ನಗರವು ಈ ಸಂಬಂಧದ ಉತ್ಸವವನ್ನೂ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳಲ್ಲಿ ತೊಡಗಿತು. ದಶರಥನು ಈ ಆಚರಣೆಗಳ ಸಂಬಂಧ ಚರ್ಚಿಸಲು ತನ್ನ ಪತ್ನಿ ಕೈಕೇಯಿ ಇದ್ದಲ್ಲಿಗೆ ಹೋದನು. ಆದರೆ ದುಷ್ಟದಾಸಿಯಾದ ಮಂಥರೆಯಿಂದ ದುರ್ಬೋಧನೆಗೊಳಗಾಗಿ 'ಯುವರಾಜನಾಗುತ್ತಿರುವದು ಪ್ರವಾಸದಲ್ಲಿರುವ ತನ್ನ ಮಗ ಭರತನಲ್ಲ, ಆದರೆ ಕೌಸಲ್ಯೆಯ ಮಗ ರಾಮ' ಎಂದು ಅಸೂಯೆಪಟ್ಟು ದುಃಖಿಸಿದಳು. ದಶರಥನು ಬಂದಾಗ ಅವಳು ಅಂತಃಪುರದಲ್ಲಿ ಕಣ್ಣೀರುಗರೆಯುತ್ತಿದ್ದಳು. ಚಿಂತಿತನಾದ ದಶರಥನ ಪ್ರಶ್ನೆಗಳಿಗೆ ಉತ್ತರವಾಗಿ ಕೈಕೇಯಿ, ಅನೇಕ ವರ್ಷಗಳ ಹಿಂದೆ ದಶರಥ ತನಗಿತ್ತಿದ್ದ ಎರಡು ವರಗಳನ್ನು ನೆನಪಿಸಿದಳು. ಈ ವರಗಳನ್ನು ಪೂರೈಸಿದರೆ ಪ್ರಸನ್ನಳಾಗುವುದಾಗಿ ಹೇಳಿದಳು. ಇದಕ್ಕೆ ಪೂರಕವಾಗಿ ಅವಳು, ಮೊದಲನೆಯದಾಗಿ, ತನ್ನ ಮಗ ಭರತನನ್ನು ಯುವರಾಜನಾಗಿ ನೇಮಿಸಬೇಕೆಂದೂ, ಎರಡನೆಯದಾಗಿ, ರಾಮನನ್ನು ಹದಿನಾಲ್ಕು ವರ್ಷಕಾಲ ಘೋರವಾದ ದಂಡಕಾರಣ್ಯಕ್ಕೆ ವನವಾಸಕ್ಕೆ ಕಳಿಸಬೇಕೆಂದೂ ಕೇಳಿದಳು. ದುಃಖಿತನಾದ ದಶರಥ, ಆದಾಗ್ಯೂ ತನ್ನ ವಚನವನ್ನು ಪರಿಪಾಲಿಸಿಕೊಳ್ಳಲು ನಿರ್ಧರಿಸಿದನು. ಆದರ್ಶ ಪುತ್ರನಾದ ರಾಮ, ಸಿಂಹಾಸನದ ಮೇಲೆ ತನಗಿದ್ದ ಹಕ್ಕನ್ನು ಬಿಟ್ಟುಕೊಟ್ಟು ವನವಾಸಕ್ಕೆ ಹೊರಡಲು ಸಿದ್ಧನಾದನು. ಅವನ ನಿಷ್ಠಾವಂತ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣ, ರಾಮನ ಜೊತೆ ಹೊರಡಲು ನಿರ್ಧರಿಸಿದರು. ದಶರಥ ದುಃಖದಲ್ಲಿದ್ದಂತೆ ರಾಮ, ಅಯೋಧ್ಯೆಯ ಪರಿತಪ್ತ ಜನರಿಂದ ಹಿಂಬಾಲಿಸಲ್ಪಟ್ಟು ವನವಾಸಕ್ಕೆ ತೆರಳಿದನು. ಸ್ವಲ್ಪ ಕಾಲಾನಂತರ ದಶರಥ ದುಃಖದಿಂದ ಮರಣವನ್ನಪ್ಪಿದನು. ರಾಮ, ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆ ಮತ್ತು ಅಲ್ಲಿನ ಜನರನ್ನು ಬಿಟ್ಟು ಗಂಗಾ ನದಿಯನ್ನು ದಾಟಿ ಕಾಡಿನೊಳಕ್ಕೆ ಹೋದರು. ಚಿತ್ರಕೂಟ ಎಂಬ ಸುಂದರ ಸ್ಥಳವನ್ನು ಹುಡುಕಿ ಅಲ್ಲಿ ತಮ್ಮ ಕುಟೀರವನ್ನು ಸ್ಥಾಪಿಸಿದರು. ಅತ್ಯಂತ ಸುಂದರವಾಗಿದ್ದ ಈ ಸ್ಥಳದಲ್ಲಿ ಎಲ್ಲ ರೀತಿಯ ಫಲಪುಷ್ಪಗಳಿದ್ದು ಸಂಪೂರ್ಣ ಪ್ರೇಮದಿಂದ ಕೂಡಿದ್ದ ಕುಟೀರ ಭೂಮಿಯ ಮೇಲಿದ್ದ ಸ್ವರ್ಗವೇ ಆಯಿತು. ಕಾಡಿನಲ್ಲಿ ರಾಮ ಗರುಡರಾಜನಾದ ಜಟಾಯುವಿನೊಂದಿಗೆ ಮಿತ್ರತ್ವವನ್ನು ಸ್ಥಾಪಿಸಿದ. ಇಷ್ಟರಲ್ಲಿ ಅಯೋಧ್ಯೆಗೆ ಮರಳಿ ಬಂದ ಭರತ, ನಡೆದ ವಿಷಯವನ್ನು ಕೇಳಿ, ರಾಮನನ್ನು ವನವಾಸಕ್ಕೆ ಕಳಿಸುವಲ್ಲಿ ತನ್ನ ತಾಯಿ ಕೈಕೇಯಿ ವಹಿಸಿದ ಪಾತ್ರದ ಬಗ್ಗೆ ಕೋಪಗೊಂಡನು. ರಾಮನನ್ನು ಹಿಂದಕ್ಕೆ ತರುವ ಉದ್ದೇಶದಿಂದ ಕಾಡಿಗೆ ಬಂದು ರಾಮನನ್ನು ಹಿಂದಕ್ಕೆ ಬರುವಂತೆ ಬೇಡಿಕೊಂಡನು. ತಂದೆಯ ವಚನದಿಂದ ಬದ್ಧನಾದ ರಾಮ ಇದಕ್ಕೆ ನಿರಾಕರಿಸಿದಾಗ ರಾಮನ ಪಾದುಕೆಗಳನ್ನು ಅಯೋಧ್ಯೆಗೆ ಒಯ್ದು ಸಿಂಹಾಸನದ ಮೇಲೆ ಸ್ಥಾಪಿಸಿ ರಾಮನ ಹೆಸರಿನಲ್ಲಿ ನಂದಿಗ್ರಾಮದಿಂದ ಭರತ ರಾಜ್ಯವನ್ನು ಆಳುತ್ತಿದ್ದನು. ಹದಿನಾಲ್ಕು ವರ್ಷಗಳಲ್ಲಿ ರಾಮ ಮರಳಿ ಬರದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನೂ ಭರತ ತೆಗೆದುಕೊಂಡನು. ಒಂದು ದಿನ, ರಾವಣನ ತಂಗಿಯಾದ ಶೂರ್ಪನಖಿ ಎಂಬ ರಾಕ್ಷಸಿ ಚಿತ್ರಕೂಟದಲ್ಲಿ ರಾಮನನ್ನು ಕಂಡು ಅವನನ್ನು ಪ್ರೇಮಿಸಿದಳು. ಸುಂದರ ಹುಡುಗಿಯ ವೇಷ ಧರಿಸಿ ರಾಮನನ್ನು ಆಕರ್ಷಿಸಲು ಪ್ರಯತ್ನಿಸಿದಳು. ತನ್ನ ಪತ್ನಿಯತ್ತ ನಿಷ್ಠಾವಂತನಾದ ರಾಮ ಪ್ರತಿಕ್ರಿಯೆ ತೋರಿಸಲಿಲ್ಲ. ಶೂರ್ಪನಖಿಯ ವರ್ತನೆಯಿಂದ ಕುಪಿತನಾದ ಲಕ್ಷ್ಮಣ ಅವಳ ಮೂಗು ಮತ್ತು ಕಿವಿಗಳನ್ನು ಕತ್ತರಿಸಿಬಿಟ್ಟನು. ರಾವಣನತ್ತ ಮರಳಿ ಶೂರ್ಪನಖಿ ಇದರ ಬಗ್ಗೆ ದೂರಿತ್ತಳು. ಅವಳಿಂದ ಸೀತೆಯ ಸೌಂದರ್ಯದ ಬಗ್ಗೆ ಕೇಳಿದ ರಾವಣ, ರಾಮನನ್ನು ಕೊಂದು ಸೀತೆಯನ್ನು ಹೊತ್ತೊಯ್ಯುವ ನಿರ್ಧಾರವನ್ನು ಮಾಡಿದನು. ರಾವಣನ ಸಹಾಯಕ್ಕೆ ಬಂದ ಮಾರೀಚ ರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಕುಟೀರದಲ್ಲಿ ಬಿಟ್ಟು ದೂರ ಬರುವಂತೆ ಮಾಡಿದನು. ಹೊರಡುವ ಮುನ್ನ, ಲಕ್ಷ್ಮಣ ಮಣ್ಣಿನಲ್ಲಿ ಒಂದು ಗೆರೆಯನ್ನು ಎಳೆದು ಅದರ ಒಳಗೆ ಇರುವವರೆಗೂ ಸೀತೆ ಸುರಕ್ಷಿತಳಾಗಿ ಇರುವಳೆಂದು ತಿಳಿಸಿ ಹೋದನು. ಮುದುಕನ ವೇಷ ಧರಿಸಿ ಬಂದ ರಾವಣ ಅನ್ನದಾನ ಮಾಡುವಂತೆ ಸೀತೆಯನ್ನು ಕೇಳಿಕೊಂಡನು. ಗೆರೆಯನ್ನು ದಾಟಲು ಹೆದರಿದರೂ, ಅವನಿಗೆ ದಾನ ಮಾಡಲು ಸೀತೆ ಮುಂದೆ ಬಂದಾಗ ರಾವಣ ಅವಳನ್ನು ಹೊತ್ತುಕೊಂಡು ತನ್ನ ಪುಷ್ಪಕ ವಿಮಾನದಲ್ಲಿ ಹಾರಿದನು. ಇದನ್ನು ಕಂಡ ಜಟಾಯು ಸೀತೆಯ ರಕ್ಷಣೆಗೆ ಬಂದಾಗ ರಾವಣ ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿ ಹೋದನು. ಹಿಂದಕ್ಕೆ ಮರಳಿದ ರಾಮ-ಲಕ್ಷ್ಮಣರು ಸೀತೆಯನ್ನು ಕಾಣದೆ ಹುಡುಕುತ್ತಿದ್ದಾಗ ಜಟಾಯುವಿನಿಂದ ಸೀತಾಪಹರನದ ವಿಷಯವನ್ನು ತಿಳಿದರು. ವಾನರ ಸಾಮ್ರಾಜ್ಯ ತಮ್ಮ ಹುಡುಕಾಟವನ್ನು ಮುಂದುವರೆಸಿ ರಾಮ ಲಕ್ಷ್ಮಣರು ಕಿಷ್ಕಿಂದೆಯ ವಾನರ ರಾಜನಾದ ಸುಗ್ರೀವ ಹಾಗೂ ಹನುಮಂತನನ್ನು ಭೇಟಿಯಾಗುತ್ತಾರೆ. ಹನುಮಂತ ಸುಗ್ರೀವನ ಸೈನ್ಯಕ್ಕೆ ಸೇನಾಧಿಪತಿ. ಸೀತೆ ರಾವಣನ ರಥದಿಂದ ಎಸೆದ ಆಭರಣಗಳು ವಾನರರಿಗೆ ದೊರೆತಿರುತ್ತದೆ. ತನ್ನ ಅಣ್ಣ ವಾಲಿಯಿಂದ ಸಾಮ್ರಾಜ್ಯದಿಂದ ಹೊರಗಟ್ಟಲ್ಪಟ್ಟ ಸುಗ್ರೀವ ರಾಮನ ಸಹಾಯ ಪಡೆಯುತ್ತಾನೆ. ಪರಸ್ಪರ ಕಾಳಗದಲ್ಲಿ ರಾಮನ ಸಹಾಯ ಪಡೆದ ಸುಗ್ರೀವನಿಂದ ವಾಲಿ ಮಡಿಯುತ್ತಾನೆ. ಸಹಾಯ ಮಾಡಿದ ರಾಮನೊಂದಿಗೆ ಸುಗ್ರೀವ ತನ್ನ ಸೈನ್ಯವನ್ನು ಕೂಡಿ ಲಂಕೆಯೆಡೆಗೆ ಹೊರಡುತ್ತಾನೆ. ರಾಮ, ಸುಗ್ರೀವರು ಸೀತೆಯನ್ನು ಹುಡುಕಲು ತಮ್ಮ ವಾನರಸೇನೆಯನ್ನು ನಾನಾದಿಕ್ಕಿಗೆ ಕಳಿಸಿದರು .ಅವರು ರಾವಣನಿಂದ ಹತನಾದ ಜಟಾಯುವಿನ ಸೋದರ, ಸಂಪಾತಿಯನ್ನು ಭೇಟಿಯಾಗುವವರೆಗೆ ಅವರ ಪ್ರಯತ್ನಗಳಿಗೆ ವಿಶೇಷ ಫಲ ದೊರೆಯಲಿಲ್ಲ . ಸಂಪಾತಿಯು ಅಂಗವೈಕಲ್ಯದಿಂದಾಗಿ ಹಾರಲು ಅಸಮರ್ಥನಾಗಿದ್ದನು . ಅವನು ಸೂರ್ಯನ ಅತಿ ಸಮೀಪಕ್ಕೆ ಹಾರಿದ್ದರಿಂದ ಅವನ ರೆಕ್ಕೆಗಳು ಸುಟ್ಟುಹೋಗಿದ್ದವು . ಬಲಶಾಲಿಯಾದ ಜಟಾಯುವು ಅವನನ್ನು ಸಾವಿನಿಂದ ರಕ್ಷಿಸಿದ್ದನು. ಇಬ್ಬರಲ್ಲಿ ಜಟಾಯು ದೇಹಬಲದಿಂದ ಗಟ್ಟಿಗನಾದರೂ ಸಂಪಾತಿಗೆ ಕಣ್ಣಿನ ಹೆಚ್ಚಿನ ದೃಷ್ಟಿಯಿದ್ದು ನೂರಾರು ಯೋಜನಗಳಷ್ಟು ದೂರ ನೋಡಬಲ್ಲವನಾಗಿದ್ದನು . ರಾವಣನು ತನ್ನ ಸೋದರನನ್ನು ಕೊಂದದ್ದನ್ನು ಕೇಳಿ ಅವನು ವಾನರರಿಗೆ ಸಹಾಯ ಮಾಡಲು ಒಪ್ಪಿದನು . ಅನತಿಕಾಲದಲ್ಲೇ ಅವನು ಸೀತೆಯನ್ನು ದಕ್ಷಿಣದಿಕ್ಕಿನಲ್ಲಿರುವದಾಗಿ ಪತ್ತೆಹಚ್ಚಿದನು. ಅವಳು ದಕ್ಷಿಣದಲ್ಲಿ ಸಮುದ್ರದಾಚೆಗಿನ ಲಂಕಾದ್ವೀಪದಲ್ಲಿನ ಅಶೋಕವನವೊಂದರಲ್ಲಿ ಸೆರೆಯಾಗಿರುವದನ್ನು ನೋಡಿ ಹೇಳಿದನು . ಲಂಕೆಯಲ್ಲಿ ಹನುಮಂತ ಸುಗ್ರೀವನು ತನ್ನ ವಾನರಸೈನ್ಯವನ್ನು ಅಂಗದನ ನೇತೃತ್ವದಲ್ಲಿ ದಕ್ಷಿಣಕ್ಕೆ ಕಳಿಸಿದನು. ಹನುಮಂತನು ಅಂಗದನ ಸೇನಾಪತಿಯಾಗಿ ತೆರಳಿದನು. ಅವರು ದಕ್ಷಿಣದಲ್ಲಿ ಬಹುದೂರ ಹೋದಮೇಲೆ ತಮ್ಮ ಮತ್ತು ಲಂಕಾದ್ವೀಪದ ನಡುವೆ ಮಹಾಸಾಗರವನ್ನು ಕಂಡರು. ಆ ಸಮುದ್ರವನ್ನು ದಾಟುವ ಬಗೆ ಹೇಗೆಂದು ತಿಳಿಯದಾದರು .ತನ್ನ ಸೈನಿಕರಿಗೆ ಅಲ್ಲಿಯೇ ಇರಹೇಳಿ ಹನುಮಂತನು ತನ್ನದೇಹವನ್ನು ಹಿಗ್ಗಿಸಿ ಮಹಾರೂಪ ತಾಳಿ ಅಪಾರ ಜಲರಾಶಿಯನ್ನು ಜಿಗಿದು ದಾಟಿ ತ್ರಿಕೂಟಪರ್ವತದ ಮೇಲೆ ಇಳಿದು ಲಂಕಾಪಟ್ಟಣದತ್ತನೋಡಿದನು. ನಗರಕ್ಕೆ ಭಾರೀ ಪಹರೆ ಇದ್ದದ್ದರಿಂದ ಬೆಕ್ಕಿನ ರೂಪತಾಳಿ ನಗರವನ್ನು ನುಸುಳಿ ನಗರವನ್ನು ವೀಕ್ಷಿಸಿದನು. ರಾವಣನು ತನ್ನ ಅಂತಃಪುರದಲ್ಲಿ ಸುಂದರಸ್ತ್ರೀಯರಿಂದ ಸುತ್ತುವರಿಯಲ್ಪಟ್ಟಿದ್ದನು. ಆದರೆ ಅಲ್ಲಿ ಸೀತೆ ಇರಲಿಲ್ಲ. ತನ್ನ ಅನ್ವೇಷಣೆಯನ್ನು ಮುಂದುವರಿಸಿ ಕೊನೆಗೆ ಆಶೋಕವನದಲ್ಲಿ ಮರದ ಕೆಳಗೆ ರಾಕ್ಷಸಿಯರಿಂದ ಸುತ್ತುವರೆಯಲ್ಪಟ್ಟು ದುಃಖದಿಂದ ಕಳೆಗುಂದಿದ ಸೌಂದರ್ಯವುಳ್ಳ ಸೀತೆಯನ್ನು ನೋಡಿದನು. ಸಣ್ಣ ಕಪಿಯೊಂದರ ವೇಷ ತಾಳಿ ಹನುಮಂತನು ಮರದಿಂದ ಕೆಳಗೆ ಜಿಗಿದು ಅವಳಿಗೆ ರಾಮನ ಉಂಗುರವನ್ನು ಕೊಟ್ಟು ಅವಳಿಂದ ಒಂದು ಉಂಗುರವನ್ನು ತೆಗೆದುಕೊಂಡನು. ಅವಳನ್ನು ತನ್ನೊಡನೆ ಕೊಂಡೊಯ್ಯಲು ಸಿದ್ಧವಾಗಲು, ರಾಮನೇ ತನ್ನನ್ನು ರಕ್ಷಿಸಲು ಬರಬೇಕೆಂದು ಹೇಳಿ ತನ್ನನ್ನು ಹುಡುಕಿದ್ದಕ್ಕೆ ಸಾಕ್ಷಿಯಾಗಿ ಒಂದು ಬೆಲೆಯುಳ್ಳ ವಜ್ರವನ್ನು ರಾಮನಿಗೆ ಕೊಡುವದಕ್ಕಾಗಿ ಹನುಮಂತನಿಗೆ ಕೊಟ್ಟಳು. ಅವರು ಮಾತನಾಡುತ್ತಿರುವಾಗ ಅಲ್ಲಿ ಬಂದ ರಾವಣನು ಅವಳ ಮನವೊಲಿಸಲು ವ್ಯರ್ಥ ಪ್ರಯತ್ನ ಮಾಡಿ ಅವಳು ಇನ್ನೆರಡು ತಿಂಗಳಲ್ಲಿ ತನ್ನ ವಶವಾಗದಿದ್ದರೆ ತನ್ನ ಬೆಳಗಿನ ಉಪಾಹಾರಕ್ಕಾಗಿ ಅವಳ ಅಂಗಾಂಗಗಳನ್ನು ತುಂಡರಿಸುವದಾಗಿ ಬೆದರಿಸಿದನು. ಸಿಟ್ಟಿಗೆದ್ದ ಹನುಮಂತನು ಮಾವಿನ ತೋಟವನ್ನು ಹಾಳುಮಾಡಿದನು. ಅವನನ್ನು ರಾಕ್ಷಸರು ಬಂಧಿಸಿ ರಾವಣನ ಮುಂದೆ ಕೊಂಡೊಯ್ದರು. ಹನುಮಂತನು ತಾನು ರಾಮನ ದೂತನೆಂದು ಹೇಳಿ , ಸೀತೆಯನ್ನು ರಾಮನಿಗೆ ಒಪ್ಪಿಸು ಇಲ್ಲವೆ ರಾಮನ ಕ್ರೋಧಕ್ಕೆ ಬಲಿಯಾಗು ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿ ಸಿಟ್ಟಿಗೆದ್ದ ರಾವಣನು ಅವನನ್ನು ಕೊಲ್ಲಲು ಆಜ್ಞೆ ಮಾಡಿದನು. ಆಗ ರಾವಣನ ನ್ಯಾಯಪರ ತಮ್ಮನಾದ ವಿಭೀಷಣನು ಮಧ್ಯಪ್ರವೇಶಿಸಿ ರಾವಣನಿಗೆ ಶಾಸ್ತ್ರಗಳಲ್ಲಿ ಹೇಳಿದ ಪ್ರಕಾರ ದೂತನನ್ನು ಕೊಲ್ಲುವದು ಅನುಚಿತ ಎಂದು ಹೇಳಿ ಅವನ ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸಲು ಸಲಹೆ ಮಾಡಿದನು. ರಾವಣನು ಒಪ್ಪಿ ತನ್ನ ರಾಕ್ಷಸ ಸೇವಕರಿಗೆ ಹನುಮಂತನ ಬಾಲಕೆ ಬೆಂಕಿಹಚ್ಚಲು ಆಜ್ಞೆ ಮಾಡಿದನು. ಬಾಲಕ್ಕೆ ಬೆಂಕಿ ಹತ್ತಿದ ನಂತರ ಹನುಮಂತನು ತನ್ನ ಶರೀರವನ್ನು ಸಣ್ಣದಾಗಿ ಮಾಡಿಕೊಂಡು ಕಟ್ಟುಗಳಿಂದ ಪಾರಾಗಿ ಮನೆಗಳ ಮೇಲೆಲ್ಲ ಜಿಗಿಯುತ್ತ ಹೋಗಿ ಲಂಕೆಯಲ್ಲೆಲ್ಲ ಬೆಂಕಿಯನ್ನು ಹರಡಿದನು. ಅವನು ರಾಮ, ಸುಗ್ರೀವರಿದ್ದಲ್ಲಿಗೆ ಮರಳಿ ಬಂದು ಸೀತೆಯು ಬಂಧನದಲ್ಲಿರುವದನ್ನು ತಿಳಿಸಿ ಯುದ್ಧಸಿದ್ಧತೆಗೆ ತೊಡಗಿದನು. ಲಂಕೆಯಲ್ಲಿ ಯುದ್ಧ ಸಮುದ್ರಕ್ಕೆ ಸೇತುವೆಯನ್ನು ಕಟ್ಟದ ಹೊರತು ಹನುಮಂತನ ಹೊರತು ಬೇರಾರೂ ಅದನ್ನು ದಾಟಲಾರರು ಎಂದು ರಾಮನು ನಿರ್ಣಯಿಸಿದನು. ವ್ಯರ್ಥವಾಗಿ ಮೂರು ದಿನ ಕಾದರೂ ತನ್ನನ್ನು ಅಲಕ್ಷಿಸಿದ್ದಕ್ಕಾಗಿ ಸಿಟ್ಟಿಗೆದ್ದ ರಾಮನು ತನ್ನ ಬಾಣಗಳನ್ನು ಸಮುದ್ರಕ್ಕೆ ಗುರಿಯಿಡಲು ವರುಣನು ಪ್ರತ್ಯಕ್ಷವಾದನು . ಸಮುದ್ರದೇವತೆಯಾದ ಅವನು 'ಸೇತುವೆಯನ್ನು ಕಟ್ಟುವದಾದರೆ ನೆಲದ ಮೇಲೇ ಕಟ್ಟಿದಷ್ಟು ದೃಢವಾಗಿರುವಂತೆ ಸೇತುವೆಗೆ ಅಲೆಗಳು ಅನುಕೂಲವಾಗಿರುವಂತೆ ಏರ್ಪಡಿಸುವದಾಗಿ' ಮಾತು ಕೊಟ್ಟನು. ರಾಮನು ಸೈನ್ಯದೊಂದಿಗೆ ಬರುವ ವಾರ್ತೆಯಿಂದ ಲಂಕೆಯಲ್ಲಿ ಭೀತಿಯ ವಾತಾವರಣ ಉಂಟಾಯಿತು. ರಾವಣನ ತಮ್ಮನಾದ ವಿಭೀಷಣನು, ರಾಮನೊಂದಿಗೆ ಸಂಧಿ ಮಾಡಿಕೊಳ್ಳಲು ರಾವಣನಿಗೆ ಸಲಹೆಯಿತ್ತಾಗ ರಾವಣನು ಅತೀವ ಸಿಟ್ಟಿಗೆದ್ದದ್ದರಿಂದ, ರಾಮನನ್ನು ಸೇರಿಕೊಂಡನು. ನಂತರ ನಡೆದ ಘನಘೋರ ಯುದ್ಧದಲ್ಲಿ ದೇವತೆಗಳೂ ಭಾಗವಹಿಸಿದರು. ವಿಷ್ಣು ಮತ್ತು ಇಂದ್ರ, ರಾಮನ ಪಕ್ಷವನ್ನೂ ಅಸುರರು ರಾವಣನ ಪಕ್ಷವನ್ನೂ ವಹಿಸಿದರು. ಎರಡೂ ಪಕ್ಷಗಳಿಗೆ ಮಿಶ್ರಫಲಗಳೊಡನೆ ಯುದ್ಧ ಸ್ವಲ್ಪ ಕಾಲ ನಡೆದ ನಂತರ ರಾಮ-ರಾವಣರ ನಡುವೆ ನೇರ ಹೋರಾಟದ ಮೂಲಕ ಯುದ್ಧದ ಫಲಿತಾಂಶವನ್ನು ಘೋಷಿಸುವುದೆಂದು ತೀರ್ಮಾನಿಸಲಾಯಿತು. ಈ ಕಾಳಗದ ತೀವ್ರತೆಯಿಂದ ದೇವ-ದೇವತೆಗಳೂ ಭೀತರಾದರು. ರಾಮನ ಪ್ರತಿಯೊಂದು ಬಾಣವೂ ರಾವಣನ ಒಂದು ತಲೆ ಕತ್ತರಿಸಿದರೂ ಅದು ಮತ್ತೆ ಬೆಳೆಯುತ್ತಿತ್ತು. ಏನು ಮಾಡಬೇಕೆಂದು ತೋಚದೆ ಇದ್ದ ರಾಮನಿಗೆ ರಾವಣನ ದೇಹದತ್ತ ಗುರಿಯಿಡುವಂತೆ ವಿಭೀಷಣ ತಿಳಿಸಿಕೊಟ್ಟ. ಈ ಉಪಾಯ ಫಲಿಸಿ ರಾವಣ ಉರುಳಿ ಬಿದ್ದಂತೆ, ಆಕಾಶದಿಂದ ಪುಷ್ಪಗಳು ರಾಮನ ಮೇಲೆ ಮಳೆಗರೆದವು. ಅವನ ಕಿವಿಗಳಲ್ಲಿ ದೈವೀ ಸಂಗೀತ ಅನುರಣಿಸಿತು. ರಾವಣನ ಪತ್ನಿ ಮಂಡೋದರಿಯ ವಿಲಾಪವನ್ನು ಕೇಳಿದ ರಾಮ ರಾವಣನಿಗೆ ಶಾಸ್ತ್ರೋಕ್ತ ಅಂತ್ಯಸಂಸ್ಕಾರವನ್ನು ಮಾಡಿ ಲಂಕೆಯನ್ನು ಪ್ರವೇಶಿಸಿದನು. ಸಂತೋಷದಿಂದ ಬೀಗುತ್ತಿದ್ದ ಸೀತೆ ರಾಮನ ಜೊತೆಗೂಡಿದಳು. ಆದರೆ ಅವಳ ಸಂತೋಷ ತಾತ್ಕಾಲಿಕವಾಗಿತ್ತು. ತಲೆ ತಗ್ಗಿಸಿ ಅವಳನ್ನು ಬರಮಾಡಿಕೊಂಡ ರಾಮ, ರಾವಣನ ಮನೆಯಲ್ಲಿ ಅವಳು ಇದ್ದದ್ದರಿಂದ ತನ್ನ ಪತ್ನಿಯಾಗಲು ಅವಳು ತಕ್ಕವಳಾಗಿ ಉಳಿದಿಲ್ಲವೆಂದು ಹೇಳಿದ. ತನ್ನ ಪಾತಿವ್ರತ್ಯದ ಬಗ್ಗೆ ಅವನಿಗೆ ಭರವಸೆಯಿತ್ತಳು ಸೀತೆ. ಆದರು ರಾಮನ ಅನುಮಾನ ಮುಂದುವರೆದಿದ್ದರಿಂದ ಸೀತೆ ಆತ್ಮಹತ್ಯೆ ಮಾಡುವ ನಿರ್ಧಾರ ಮಾಡಿ ತನ್ನ ಚಿತೆಯನ್ನು ನಿರ್ಮಿಸಬೇಕೆಂದು ಹೇಳಿದಳು. ಎಲ್ಲ ಪ್ರೇಕ್ಷಕರ ಅಂತಃಕರಣವೂ ಸೀತೆಯ ಕಡೆಗಿದ್ದಿತು. ಸೀತೆ ಚಿತೆಯನ್ನೇರಿ ಕೆಲ ಕ್ಷಣಗಳಲ್ಲಿಯೇ ಅಗ್ನಿ ಆಕೆಯನ್ನು ತನ್ನ ಬಾಹುಗಳಲ್ಲಿ ಎತ್ತಿ ತಂದು ಬಿಟ್ಟನು. ಅಗ್ನಿಪರೀಕ್ಷೆಯಲ್ಲಿ ತನ್ನ ನಿರಪರಾಧವನ್ನು ತೋರಿಸಿದ ಸೀತೆಯನ್ನು ರಾಮ ಸ್ವಾಗತಿಸಿದನು. ರಾಮನ ನಡತೆಯನ್ನು ಸೀತೆ ಕ್ಷಮಿಸಿದಳು. ಯುದ್ಧವನ್ನು ಗೆದ್ದು, ರಾವಣನನ್ನು ಸೋಲಿಸಿ, ಸೀತೆಯನ್ನು ಮರಳಿ ಪಡೆದು, ರಾಮ ವಿಜೃಂಭಣೆಯಿಂದ ಅಯೋಧ್ಯೆಗೆ ಮರಳಿ ಭರತ ಮತ್ತು ಅಯೋಧ್ಯೆಯ ಜನರ ಅಪಾರ ಸಂತೋಷಕ್ಕೆ ರಾಜ್ಯಭಾರವನ್ನು ವಹಿಸಿಕೊಂಡನು. ಸೀತಾ ಪರಿತ್ಯಾಗ ಶ್ರೀರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯಲ್ಲಿ ಸುಖ,ಸಮೃದ್ಧಿಗಳು ನೆಲಸಿದ್ದವು. ಪ್ರಜೆಗಳು ಆನಂದದಿಂದಿದ್ದರು. ಆದರೆ ಈ ನೆಮ್ಮದಿ ಶಾಶ್ವತವಾಗಿ ಉಳಿಯಲಿಲ್ಲ. ರಾವಣನ ಸೆರೆಯಲ್ಲಿ ಬಹಳ ಕಾಲವಿದ್ದ ಸೀತೆಯ ಪಾವಿತ್ರ್ಯದ ಬಗೆಗೆ ಜನರು ಅನುಮಾನದಿಂದ ಮಾತಾಡತೊಡಗಿದರು. ಈ ವಿಷಯ ಗೂಢಚಾರರಿಂದ ರಾಮನಿಗೂ ತಿಳಿದು ಬಂದಿತು. ರಾಜ್ಯದಲ್ಲಿ ಉಂಟಾದ ಬರಗಾಲಕ್ಕೂ ಸೀತೆಯಿಂದಾಗಿರುವ ತಪ್ಪೇ ಕಾರಣವೆಂದು ಜನ ಗುಸುಗುಸು ಮಾಡತೊಡಗಿದರು. ತನ್ನ ಪ್ರಜೆಗಳನ್ನು ಸಂತೋಷಡಿಸಲು ರಾಮ ಸೀತೆಯನ್ನು ತ್ಯಜಿಸಲು ನಿರ್ಧರಿಸಿದನು. ಸೀತೆಯು ವನವಾಸ ಕಾಲದಲ್ಲಿ ರಾಮನೊಡನೆ ಸಂತೋಷದಿಂದ ಕಾಲಕಳೆದ ಅರಣ್ಯಕ್ಕೆ ಮತ್ತೊಮ್ಮೆ ಹೋಗಬೇಕಾಯಿತು. ಸೀತೆ ಸ್ವಲ್ಪಮಾತ್ರವೂ ಗೊಣಗದೆ ಕಾಡಿಗೆ ಹೊರಟಳು. ದು:ಖತಪ್ತಳಾದ ಸೀತೆಗೆ ವಾಲ್ಮೀಕಿ ಮುನಿಯು ತನ್ನ ಆಶ್ರಮದಲ್ಲಿ ಆಶ್ರಯ ನೀಡಿದನು. ಸೀತೆ ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಲವ ಮತ್ತು ಕುಶ ಎಂಬ ಅವಳಿಜವಳಿ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಸೀತೆಯು ವಾಲ್ಮೀಕಿ ಮುನಿಯ ಸಹಾಯದಿಂದ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುತ್ತಾಳೆ. ವಾಲ್ಮೀಕಿ ಲವ,ಕುಶರಿಗೆ ಗುರುವಾಗಿ ಸಕಲ ವಿದ್ಯೆಗಳನ್ನು ಹೇಳಿಕೊಡುತ್ತಾನೆ. ಲವ, ಕುಶರು ಇಬ್ಬರು ಬೆಳೆದು ಇಪ್ಪತ್ತು ವರ್ಷದ ಯುವಕರಾಗಿದ್ದರು. ಅದೇ ಸಮಯದಲ್ಲಿ ರಾಮನನ್ನು ಒಂದು ಚಿಂತೆ ಕಾಡುತ್ತಿತ್ತು. ಬ್ರಾಹ್ಮಣನ ಮಗನಾಗಿದ್ದ ರಾವಣನನ್ನು ಕೊಂದಿರುವುದರಿಂದ ತನಗೆ ಬಂದಿರಬಹುದಾದ ಬ್ರಹ್ಮಹತ್ಯೆ ಎಂಬ ಪಾಪವನ್ನು ಕಳೆದುಕೊಳ್ಳಲು ನಿಶ್ಚಯಿಸಿದನು. ಅದಕ್ಕಾಗಿ ಅಶ್ವಮೇಧ ಯಾಗ ಮಾಡಬೇಕೆಂದು ನಿರ್ಧರಿಸಿದನು. ಈ ಯಾಗಕ್ಕೆ ತನ್ನ ದೇಶದ ಎಲ್ಲಾ ಪ್ರಜೆಗಳನ್ನೂ, ಋಷಿ ಮುನಿಗಳಿಗೂ ಆಹ್ವಾನವಿರುತ್ತದೆ. ವಾಲ್ಮೀಕಿ ಮುನಿಗಳು ಲವ, ಕುಶರೊಡನೆ ಈ ಯಾಗಕ್ಕೆ ಹೋಗಿರುತ್ತಾರೆ. ಯಾಗದ ದಿನ ಲವಕುಶರಿಬ್ಬರು ರಾಮನ ಎದುರು ವಾಲ್ಮೀಕಿ ಋಷಿಗಳಿಂದ ರಾಮಾಯಣವನ್ನು ಹಾಡುತ್ತಾರೆ. ರಾಮನಿಗೆ ಆ ಗಾಯನದ ಮೂಲಕ ತನ್ನದೇ ಕಥೆಯನ್ನು ಕೇಳಿ ಸೋಜಿಗವಾಗುತ್ತದೆ. ವಾಲ್ಮೀಕಿಯಿಂದ ರಾಮನಿಗೆ ಲವ, ಕುಶರು ತನ್ನ ಮಕ್ಕಳೆಂದು ತಿಳಿಯುತ್ತದೆ. ಸೀತೆಯು ವಾಲ್ಮೀಕಿ ಮುನಿಗಳ ಆಶ್ರಮದಲ್ಲಿರುವ ವಿಷಯ ತಿಳಿದು, ಅವಳನ್ನು ತಾನಿರುವಲ್ಲಿಗೆ ಬರುವಂತೆ ಹೇಳಿಕಳಿಸುತ್ತಾನೆ. ವಾಲ್ಮೀಕಿ ಮುನಿಯು ಸೀತೆಯನ್ನು ಆಶ್ರಮದಿಂದ ಕರೆದುಕೊಂಡು ಬರುತ್ತಾನೆ. ಆಗ ರಾಮ ಸೀತೆಯು ಮತ್ತೊಂದು ಪರೀಕ್ಷೆಯ ಮೂಲಕ ತನ್ನ ಮೇಲಿರುವ ಮೇಲಿರುವ ಕಳಂಕದಿಂದ ದೂರಾಗಬೇಕೆಂದು ಹೇಳುತ್ತಾನೆ. ರಾಮನ ಮಾತುಗಳನ್ನು ಕೇಳಿ ಸೀತೆಯನ್ನು ದು:ಖ ಆವರಿಸುತ್ತದೆ. ಆಗ ಸೀತೆಯು ತನ್ನ ತಾಯಿಯಾದ ಭೂದೇವಿಯಲ್ಲಿ ಹೀಗೆ ಕೇಳಿಕೊಳ್ಳುತ್ತಾಳೆ - ತಾನು ಪತಿವ್ರತೆಯೇ ಆಗಿದ್ದಲ್ಲಿ, ಭೂಮಿ ಬಾಯಿ ಬಿರಿದು ನನ್ನನ್ನು ನಿನ್ನ ಬಳಿ ಕರೆದುಕೊಂಡು ಹೋಗು ಎಂದು ಕೇಳಿಕೊಳ್ಳುತ್ತಾಳೆ. ಎಲ್ಲರೂ ನೋಡುತ್ತಿರುವಂತೆಯೇ ಭೂಮಿ ದೊಡ್ಡ ಸದ್ದಿನೊಂದಿಗೆ ಬಾಯಿ ಬಿಡುತ್ತದೆ. ಅಲ್ಲಿ ಸೀತೆಗಾಗಿ ಸಿಂಹಾಸನವೊಂದು ಪ್ರತ್ಯಕ್ಷವಾಗುತ್ತದೆ. ಸೀತೆಯ ತಾಯಿಯಾದ ಭೂದೇವಿಯನ್ನು ತನ್ನ ಮಗಳನ್ನು ಅಪ್ಪಿಕೊಂಡು ಭೂಮಿ ಒಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಭೂಮಿ ಮುಚ್ಚಿಕೊಳ್ಳುತ್ತದೆ. ಈ ದೃಶ್ಯವನ್ನು ಕಂಡು ರಾಮ ಸೀತೆಯನ್ನು ಅನುಮಾನಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ಮುನಿಗಳು ರಾವಣನ ಸಂಹಾರದ ನಿಮಿತ್ತಕ್ಕಾಗಿ ಸೀತೆಯ ಅವತಾರವಾಗಿತ್ತು. ತನ್ನ ಕಾರ್ಯ ಮುಗಿದಿದ್ದರಿಂದ ಅವಳು ಹೋಗಿದ್ದಾಳೆ. ನೀನು ದುಃಖಿಸಬೇಡ ಎಂದು ರಾಮನನ್ನು ಸಮಾಧಾನಿಸುತ್ತಾರೆ. ರಾಮಾಯಣದ ನೀತಿಪಾಠ ವಾಲ್ಮೀಕಿಯು ತನ್ನ ರಾಮಾಯಣದಲ್ಲಿ ರಾಮನ ಮೂಲಕ ಮಾನವನ ಬಾಳುವೆಯ ರೀತಿಯ ಕುರಿತು ತನ್ನ ನೀತಿಯನ್ನು ವ್ಯಕ್ತಪಡಿಸುತ್ತಾನೆ . ಜೀವನವು ಕ್ಷಣಭಂಗುರವಾಗಿದ್ದು ಭೋಗಲಾಲಸೆಯ ನೀತಿಯು ಅರ್ಥಹೀನವಾದದ್ದು . ಆದರೆ ಹಾಗೆಂದು ಯಾವದೇ ವ್ಯಕ್ತಿಯು ಪುರಾತನ ಶಾಸ್ತ್ರಗಳಲ್ಲಿ ಹೇಳಿದ ಹಕ್ಕುಬಾಧ್ಯತೆಗಳಿಗೆ ವಿಮುಖನಾಗಬಾರದು. ವೇದದಲ್ಲಿ ಉಕ್ತವಾದದ್ದೇ ಧರ್ಮ, ವ್ಯಕ್ತಿಯು ಧರ್ಮವನ್ನು ಧರ್ಮಕ್ಕಾಗಿ ಪಾಲಿಸಬೇಕೇ ಹೊರತು ಅದರಿಂದ ಉಂಟಾಗುವ ಲಾಭ, ನಷ್ಟಗಳಿಗಾಗಿ ಅಲ್ಲ ಎಂಬುದು ಅವನ ಅಭಿಪ್ರಾಯ. ಇಂಥ ಧರ್ಮಪಾಲನೆಯಿಂದ ಇಹಲೋಕದಲ್ಲೂ ಪರಲೋಕದಲ್ಲೂ ವ್ಯಕ್ತಿಯ ಕಲ್ಯಾಣವಾಗುವದು ಅಷ್ಟೇ ಅಲ್ಲದೆ , ಯಾವುದೇ ಮಾತು ಕೊಡುವ ಮೊದಲೇ ಪರಿಣಾಮಗಳನ್ನು ಕುರಿತು ಯೋಚಿಸಬೇಕು ಮತ್ತು ಒಮ್ಮೆ ಮಾತು ಕೊಟ್ಟ ಮೇಲೆ ಎಷ್ಟೇ ಕಷ್ಟವಾಗಲಿ ಅದನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ರಾಮಾಯಣವು ಒತ್ತು ಕೊಡುತ್ತದೆ. ನಾರದ ಮುನಿಯು ಇಡೀ ರಾಮಾಯಣವನ್ನು ಸ್ವಲ್ಪದರಲ್ಲಿ ವಾಲ್ಮೀಕಿಗೆ ಹೇಳಿದ ಸಂಕ್ಷೇಪ ರಾಮಾಯಣವು ವಾಲ್ಮೀಕಿರಾಮಾಯಣದ ಮೊದಲ ಸರ್ಗವಾಗಿದೆ. ನಾರದನು ಆದರ್ಶಮನುಷ್ಯನ ೧೬ ಗುಣಗಳನ್ನು ಪಟ್ಟಿ ಮಾಡಿ ರಾಮನು ಈ ಎಲ್ಲ ೧೬ ಗುಣಗಳನ್ನು ಹೊಂದಿದ ಸಂಪೂರ್ಣ ಮಾನವ ಎಂದು ಹೇಳುತ್ತಾನೆ ರಾಮನೇ ಸ್ವತಃ ತಾನು ಮನುಷ್ಯಮಾತ್ರನೆಂದು ಹೇಳಿದರೂ, ಒಮ್ಮೆ ಕೂಡ ತಾನು ದೈವಾಂಶವುಳ್ಳವನೆಂದು ಹೇಳದಿದ್ದರೂ, ಹಿಂದುಗಳು ಅವನನ್ನು ಆದರ್ಶವ್ಯಕ್ತಿಯೆಂದೂ ವಿಷ್ಣು ದೇವರ ಪ್ರಮುಖ ಅವತಾರಗಳಲ್ಲೊಬ್ಬ ಎಂದೂ ಪರಿಗಣಿಸುತ್ತಾರೆ. ವಾಲ್ಮೀಕಿಯು ಅವನನ್ನು ತನ್ನ ಕಥೆಯಲ್ಲಿ ಒಬ್ಬ ಅತಿಮಾನವ ಎಂದು ಚಿತ್ರಿಸದೆ, ಎಲ್ಲ ಗುಣದೋಷಗಳಿಂದ ಕೂಡಿ, ನೈತಿಕ ಸಂದಿಗ್ಧಗಳನ್ನೆದುರಿಸಿ ಅವುಗಳನ್ನು ಧರ್ಮ (ಸರಿಯಾದ ಮಾರ್ಗ)ವನ್ನು ಅನುಸರಿಸುವುದರಿಂದ ಗೆದ್ದ ಒಬ್ಬ ಸಹಜಮಾನವನನ್ನಾಗಿ ಚಿತ್ರಿಸಿದ್ದಾನೆ. ವಾಲ್ಮೀಕಿ ರಾಮಾಯಣದಲ್ಲಿ ಕಥಾನಾಯಕನ ಪರಿಶುದ್ಧ ಚಾರಿತ್ರ್ಯದ ಬಗ್ಗೆ ಸಂಶಯವನ್ನುಂಟುಮಾಡುವ ಅನೇಕ ಸಂದರ್ಭಗಳಿವೆ. ತನ್ನ ರಾಜ್ಯವನ್ನು ಮರಳಿ ಪಡೆಯಲು ಸುಗ್ರೀವನಿಗೆ ಸಹಾಯಮಾಡಲು ವಾಲಿಯನ್ನು ಮರದ ಮರೆಯಿಂದ ರಾಮನು ಕೊಲ್ಲುವದು ಯುದ್ಧದ ನಿಯಮಗಳಿಗೆ ವಿರೋಧವಾಗಿತ್ತು. ಸೀತೆಯು ರಾವಣನ ಸೆರೆಯಿಂದ ಬಿಡುಗಡೆ ಹೊಂದಿದಾಗ ಅಗ್ನಿಯನ್ನು ಪ್ರವೇಶಿಸಿ ತನ್ನ ಪರಿಶುದ್ಧತೆಯನ್ನು ಸಿದ್ಧ ಮಾಡುವಂತೆ ರಾಮನು ಅವಳನ್ನು ಬಲವಂತಪಡಿಸುತ್ತಾನೆ. ನಂತರ ಶೂದ್ರ ಶಂಬೂಕನನ್ನು ಸಮಾಜದ ಕೆಳವರ್ಗದಲ್ಲಿದ್ದು ಯೋಗಿಗಳಂತೆ ತಪಸ್ಸನ್ನು ಮಾಡಿದ್ದಕ್ಕಾಗಿ ರಾಮನು ಕೊಲ್ಲುವನು. ಇವು ಮತ್ತು ಉಳಿದ ಅನೇಕ ಇಂಥ ರಾಮಾಯಣದಲ್ಲಿನ ಪ್ರಸಂಗಗಳು ಕಥಾನಾಯಕನಾದ ರಾಮನ ಮನುಷ್ಯ ಸಹಜ ಗುಣವನ್ನೆತ್ತಿ ತೋರಿಸಿ ಕಥೆಯ ಮೂಲನೀತಿಯಾಗಿರುವ 'ಮನುಷ್ಯನು ಸತ್ಯಮಾರ್ಗವನ್ನು ಅನುಸರಿಸಲು ಅತಿಮಾನವನಿರುವದು ಅವಶ್ಯವಿಲ್ಲ' ಎಂಬುದನ್ನು ಸಮರ್ಥಿಸುತ್ತವೆ. ಪಠ್ಯದ ಚರಿತ್ರೆ ಸಾಂಪ್ರದಾಯಿಕ ನಂಬುಗೆಯಂತೆ ಈ ಕಾವ್ಯವು ಹಿಂದೂ ಕಾಲಗಣನೆಯ ನಾಲ್ಕು ಯುಗಗಳಲ್ಲೊಂದಾದ ತ್ರೇತಾಯುಗಕ್ಕೆ ಸೇರಿದ್ದು , ವಾಲ್ಮೀಕಿಯು ರಚಿಸಿದ್ದು . ವಾಲ್ಮೀಕಿಯೂ ಈ ಕಥೆಯಲ್ಲಿ ಸಕ್ರಿಯ ಪಾತ್ರವಹಿಸುತ್ತಾನೆ. ರಾಮಾಯಣದ ಭಾಷೆ ಪಾಣಿನಿಯ ಕಾಲಕ್ಕಿಂತಲೂ ಹಳೆಯದಾದ ಸಂಸ್ಕೃತ. ಮಹಾಭಾರತ ಮತ್ತು ರಾಮಾಯಣಗಳೆರಡರಲ್ಲೂ ಸಂಸ್ಕೃತದ ಈ ಪ್ರಭೇದ ಕಂಡುಬರುತ್ತದೆ. ರಾಮಾಯಣದ ಮೂಲ ಕೃತಿಯ ರಚನೆ ಕ್ರಿ.ಪೂ. ಐದನೆ ಶತಮಾನದಲ್ಲಿ ಆದದ್ದಿರಬಹುದು. ಅನೇಕ ಶತಮಾನಗಳ ಕಾಲ ಬಾಯಿಂದ ಬಾಯಿಗೆ, ಹಾಗೂ ಲಿಖಿತ ರೂಪದಲ್ಲೂ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆ ಹೊಂದುತ್ತಾ, ಮಧ್ಯೆಮಧ್ಯೆ ಅನೇಕ ಮಾರ್ಪಾಟುಗಳನ್ನು ಹೊಂದುತ್ತ ಇಂದಿನ ರೂಪವನ್ನು ಪಡೆದಿದೆ. ಹೀಗಾಗಿ ರಾಮಾಯಣದ ರಚನಾಕಾಲವನ್ನು ಕೇವಲ ಭಾಷಾ ವಿಶ್ಲೇಷಣೆಯಿಂದ ಕಂಡುಹಿಡಿಯಲಾಗದು. ದೀರ್ಘವಾದ ಪ್ರಕ್ರಿಯೆಯ ಮೂಲಕ ಇಂದಿನ ರೂಪವನ್ನು ರಾಮಾಯಣ ಪಡೆದಿದ್ದು, ಈ ಪ್ರಕ್ರಿಯೆ ಸುಮಾರು ಕ್ರಿ.ಪೂ. ಐದನೆ ಶತಮಾನದಲ್ಲಿ ಆರಂಭಗೊಂಡು ಕ್ರಿ.ಶ. ನಾಲ್ಕನೆಯ ಶತಮಾನದ ಹೊತ್ತಿಗೆ ಪೂರ್ಣವಾಯಿತು ಎಂದು ಪರಿಗಣಿಸಲಾಗಿದೆ. ರಾಮಾಯಣದ ಕಥೆಯ ಕಾಲ ಇನ್ನೂ ಹಳೆಯದಿರಬಹುದು. ರಾಮಾಯಣದಲ್ಲಿ ಬರುವ ಪಾತ್ರಗಳ ಹೆಸರುಗಳು - ರಾಮ, ಸೀತೆ, ದಶರಥ, ಜನಕ, ವಸಿಷ್ಠ, ವಿಶ್ವಾಮಿತ್ರ - ಈ ಎಲ್ಲ ಹೆಸರುಗಳೂ ವಾಲ್ಮೀಕಿ ರಾಮಾಯಣಕ್ಕಿಂತ ಹಳೆಯದಾದ ವೇದಬ್ರಾಹ್ಮಣಗಳಲ್ಲಿ ಕಂಡುಬರುತ್ತವೆ. ಆದರೆ ವೇದಗಳಲ್ಲೆಲ್ಲೂ ವಾಲ್ಮೀಕಿಯ ರಾಮಾಯಣದ ಕಥೆಯನ್ನು ಹೋಲುವ ಯಾವ ಕಥೆಯೂ ಕಂಡುಬರುವುದಿಲ್ಲ. ರಾಮಾಯಣದಲ್ಲಿ ಮುಖ್ಯ ಪಾತ್ರ ವಹಿಸುವ ಬ್ರಹ್ಮ ಮತ್ತು ವಿಷ್ಣು ವೇದೋಕ್ತ ದೇವತೆಗಳಲ್ಲ. ಮಹಾಭಾರತ-ರಾಮಾಯಣಗಳ ಮತ್ತು ಪುರಾಣಗಳ ರಚನಾನಂತರವೇ ಈ ದೇವರುಗಳ ಜನಪ್ರಿಯತೆ ಹೆಚ್ಚಿರುವುದು ಕಂಡುಬರುತ್ತದೆ. ಸಾಮಾನ್ಯವಾಗಿ, ರಾಮಾಯಣದ ಎರಡನೆ ಕಾಂಡದಿಂದ ಆರನೆ ಕಾಂಡದವರೆಗಿನ ಭಾಗಗಳು ಈ ಕಾವ್ಯದ ಅತಿ ಪ್ರಾಚೀನ ಭಾಗಗಳೆಂದು ಪರಿಗಣಿಸಲಾಗುತ್ತದೆ. ಮೊದಲ ಕಾಂಡವಾದ ಬಾಲಕಾಂಡ ಮತ್ತು ಕೊನೆಯದಾದ ಉತ್ತರಕಾಂಡ ನಂತರ ಸೇರಿಸಲ್ಪಟ್ಟ ಭಾಗಗಳೆಂದು ಪರಿಗಣಿತವಾಗಿವೆ. ಬಾಲಕಾಂಡ ಮತ್ತು ಅಯೋಧ್ಯಾಕಾಂಡದ ಕರ್ತೃ ಅಥವಾ ಕರ್ತೃಗಳು ಗಂಗಾ ಜಲಾನಯನ ಪ್ರದೇಶ ಹಾಗೂ ಪ್ರಾಚೀನ ಭಾರತದ "ಹದಿನಾರು ಜನಪದ"ಗಳ ಕಾಲದಲ್ಲಿನ ಮಗಧ ಹಾಗೂ ಕೋಸಲ ಪ್ರದೇಶಗಳ ನಿಕಟ ಪರಿಚಯ ಪಡೆದಿದ್ದರೆನ್ನುವುದು ಕಂಡುಬರುತ್ತದೆ. ಇದಕ್ಕೆ ಕಾರಣ ರಾಮಾಯಣದ ಈ ಭಾಗಗಳಲ್ಲಿನ ರಾಜಕೀಯ ಹಾಗೂ ಭೌಗೋಳಿಕ ವರ್ಣನೆಗಳು "ಹದಿನಾರು ಜನಪದ"ಗಳ ಕಾಲದ ಸ್ಥಿತಿಗತಿಗಳನ್ನು ಬಿಂಬಿಸುತ್ತವೆ. ಆದರೆ ರಾಮಾಯಣದ ಅರಣ್ಯಕಾಂಡವನ್ನು ಗಮನಿಸಿದರೆ, ರಾಕ್ಷಸರು, ವಿಚಿತ್ರ ಪ್ರಾಣಿಗಳು, ಮೊದಲಾದವುಗಳನ್ನೊಳಗೊಂಡ ಕಲ್ಪನಾಲೋಕದತ್ತ ವರ್ಣನೆಗಳು ಸರಿಯುತ್ತವೆ. ಮಧ್ಯ ಹಾಗೂ ದಕ್ಷಿಣ ಭಾರತದ ಭೌಗೋಳಿಕ ವರ್ಣನೆಗಳು ವಾಸ್ತವದಿಂದ ಸಾಕಷ್ಟು ದೂರವಿರುವುದು ಕಂಡುಬರುತ್ತದೆ. ಶ್ರೀಲಂಕಾ ದ್ವೀಪದ ಸರಿಯಾದ ಸ್ಥಳದ ಬಗ್ಗೆ ವಿವರಗಳು ಅಸ್ಪಷ್ಟವಾಗಿರುವುದು ಸಹ ಕಂಡುಬರುತ್ತದೆ. ಈ ಅಂಶಗಳ ಆಧಾರದ ಮೇಲೆ, ಚರಿತ್ರಜ್ಞ ಎಚ್.ಡಿ.ಸಂಕಾಲಿಯಾ ಅವರು ರಾಮಾಯಣದ ಕಾಲ ಸುಮಾರು ಕ್ರಿ.ಪೂ. ನಾಲ್ಕನೆಯ ಶತಮಾನ ಇದ್ದಿರಬಹುದೆಂದು ಪ್ರತಿಪಾದಿಸಿದ್ದಾರೆ. ಆದರೆ ಇನ್ನೊಬ್ಬ ಚರಿತ್ರಕಾರರಾದ ಎ.ಎಲ್.ಬಾಷಮ್ ಅವರು ರಾಮನು ಕ್ರಿ.ಪೂ. ೭ ನೆಯ ಅಥವಾ ೮ ನೆಯ ಶತಮಾನದಲ್ಲಿ ಇದ್ದಿರಬಹುದಾದ ಸಣ್ಣ ರಾಜ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ರಾಮಾಯಣದ ಕಥೆಯ ಕಾಲ ಕ್ರಿ.ಪೂ. ೬೦೦೦ ದಷ್ಟು ಹಳೆಯದಿರಬಹುದೆಂದು ಪ್ರತಿಪಾದಿಸಿದ್ದಾರೆ. ವಿಭಿನ್ನ ರೂಪಾಂತರಗಳು ಅನೇಕ ಜಾನಪದ ಕಥೆಗಳಂತೆ, ರಾಮಾಯಣದ ಕಥೆಯ ವಿವಿಧ ರೂಪಾಂತರಗಳು ಅಸ್ತಿತ್ವದಲ್ಲಿವೆ. ಮುಖ್ಯವಾಗಿ, ಉತ್ತರ ಭಾರತದಲ್ಲಿ ಪ್ರಚಲಿತವಾಗಿರುವ ರಾಮಾಯಣದ ಕಥೆ ದಕ್ಷಿಣ ಭಾರತ ಮತ್ತು ದಕ್ಷಿಣಪೂರ್ವ ಏಷ್ಯಾದಲ್ಲಿ ಪ್ರಚಲಿತವಾಗಿರುವ ರೂಪಾಂತರಕ್ಕಿಂತ ಕೆಲವು ಅಂಶಗಳಲ್ಲಿ ಭಿನ್ನವಾಗಿದೆ. ರಾಮಾಯಣದ ಕಥಾಸಂಪ್ರದಾಯ ಥೈಲೆಂಡ್, ಕಾಂಬೋಡಿಯ, ಮಲೇಷಿಯ, ಲಾಓಸ್, ವಿಯೆಟ್ನಾಮ್ ಮತ್ತು ಇಂಡೊನೇಷ್ಯಾ ದೇಶಗಳಲ್ಲೂ ಪ್ರಚಲಿತವಾಗಿದೆ. ಮಲೇಷಿಯಾದ ಕೆಲವು ರೂಪಾಂತರಗಳಲ್ಲಿ ಲಕ್ಷ್ಮಣನಿಗೆ ರಾಮನ ಪಾತ್ರಕ್ಕಿಂತ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು, ರಾಮನ ಪಾತ್ರವನ್ನು ದುರ್ಬಲ ಎಂದು ಪರಿಗಣಿಸಲಾಗುತ್ತದೆ. ಭಾರತೀಯ ರೂಪಾಂತರಗಳು ಭಾರತದಲ್ಲಿ ವಿವಿಧ ಕಾಲಗಳಲ್ಲಿ ಅನೇಕ ಬರಹಗಾರರು ಬರೆದ ರಾಮಾಯಣದ ರೂಪಾಂತರಗಳಿವೆ. ಈ ವಿವಿಧ ರೂಪಾಂತರಗಳು ಒಂದರಿಂದ ಇನ್ನೊಂದು ಸಾಕಷ್ಟು ಭಿನ್ನವಾಗಿಯೂ ಇವೆ. ೧೪-೧೫ ನೆಯ ಶತಮಾನಗಳಲ್ಲಿ, ಕುಮಾರ ವಾಲ್ಮೀಕಿ ಕನ್ನಡಲ್ಲಿ ತೊರವೆ ರಾಮಾಯಣ ಎಂಬ ರೂಪಾಂತರದ ಕರ್ತೃ. ಕನ್ನಡದ ಇತರ ಮುಖ್ಯ ರಾಮಾಯಣಗಳೆಂದರೆ ರಾಷ್ಟ್ರಕವಿ ಕುವೆಂಪು ಅವರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ "ಶ್ರೀ ರಾಮಾಯಣ ದರ್ಶನಂ" ಮತ್ತು ರಂಗನಾಥ ಶರ್ಮಾ ಅವರ "ಕನ್ನಡ ವಾಲ್ಮೀಕಿ ರಾಮಾಯಣ." ೧೨ ನೆಯ ಶತಮಾನದಲ್ಲಿ ತಮಿಳು ಕವಿ ಕಂಬ "ರಾಮಾವತಾರಮ್" ಅಥವಾ ಕಂಬರಾಮಾಯಣ ರಚಿಸಿದ. ಹಿಂದಿ ಭಾಷೆಯ ಪ್ರಸಿದ್ಧ ರಾಮಾಯಣ ೧೫೭೬ ರಲ್ಲಿ ತುಲಸೀದಾಸರು ರಚಿಸಿದ ಶ್ರೀ ರಾಮಚರಿತ ಮಾನಸ. ಇದಲ್ಲದೆ ಗುಜರಾತಿ ಕವಿ ಪ್ರೇಮಾನಂದರು ೧೭ ನೆಯ ಶತಮಾನದಲ್ಲಿ, ಬಂಗಾಲಿ ಕವಿ ಕೃತ್ತಿವಾಸರು ೧೪ ನೆಯ ಶತಮಾನದಲ್ಲಿ, ಒರಿಯಾ ಕವಿ ಬಲರಾಮದಾಸರು ೧೬ ನೆಯ ಶತಮಾನದಲ್ಲಿ, ಮರಾಠಿ ಕವಿ ಶ್ರೀಧರ ೧೮ ನೆಯ ಶತಮಾನದಲ್ಲಿ, ತೆಲುಗು ಕವಿ ರಂಗನಾಥರು ೧೫ ನೆಯ ಶತಮಾನದಲ್ಲಿ ರಾಮಾಯಣದ ಆವೃತ್ತಿಗಳನ್ನು ರಚಿಸಿದ್ದಾರೆ. "ಮಾಪಿಳ್ಳೆ ರಾಮಾಯಣ" ಎಂದು ಕರೆಯಲ್ಪಡುವ ಈ ರೂಪಾಂತರ ಮಾಪಿಳ್ಳೆಗಳ ಜಾನಪದ ಹಾಡುಗಳ ಗುಂಪಿನಲ್ಲಿ ಸೇರಿದೆ. ಮುಸಲ್ಮಾನ ಸಂಪ್ರದಾಯದಲ್ಲಿ ಸೇರಿರುವ ಈ ರೂಪಾಂತರದಲ್ಲಿ ರಾಮಾಯಣದ ನಾಯಕ ಒಬ್ಬ ಮುಸ್ಲಿಮ್ ಸುಲ್ತಾನ. ರಾಮನ ಹೆಸರನ್ನು "ಲಾಮನ್" ಎಂದು ಬದಲಾಯಿಸಿರುವುದನ್ನು ಬಿಟ್ಟರೆ ಬೇರೆಲ್ಲ ಪಾತ್ರಗಳೂ ರಾಮಾಯಣದಲ್ಲಿ ಇರುವಂತೆಯೇ ಇವೆ. ಮುಸ್ಲಿಮ್ ಸಾಮಾಜಿಕ ರೀತಿನೀತಿಗಳಿಗೆ ಹೊಂದಿಕೊಳ್ಳುವಂತೆ ಕಥೆಯಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಲಾಗಿದೆ. ದಕ್ಷಿಣಪೂರ್ವ ಏಷ್ಯಾದ ರೂಪಾಂತರಗಳು ಏಷ್ಯಾದ ಇನ್ನೂ ಅನೇಕ ಸಂಸ್ಕೃತಿಗಳು ರಾಮಾಯಣವನ್ನು ಆಮದು ಪಡೆದಿದ್ದು, ಕೆಲವು ದೇಶಗಳ ರಾಷ್ಟ್ರೀಯ ಮಹಾಕಾವ್ಯಗಳು ರಾಮಾಯಣದಿಂದಲೇ ಸ್ಫೂರ್ತಿ ಪಡೆದಿವೆ. ಚೀನಾ ದೇಶದ ಮಹಾಕಾವ್ಯ "ಪಶ್ಚಿಮದತ್ತ ಪಯಣ" ದ ಕೆಲವು ಭಾಗಗಳು ರಾಮಾಯಣವನ್ನು ಆಧರಿಸಿದವು. ಪ್ರಮುಖವಾಗಿ ಈ ಕಾವ್ಯದ "ಸುನ್ ವುಕಾಂಗ್" ಪಾತ್ರ ಹನುಮಂತನನ್ನು ಆಧರಿಸಿದ ಪಾತ್ರ ಎಂದು ನಂಬಲಾಗಿದೆ. ಇಂಡೊನೇಷ್ಯಾದ ಜಾವಾ ಪ್ರದೇಶದಲ್ಲಿ ಒಂಬತ್ತನೆ ಶತಮಾನದ ಸುಮಾರಿನಲ್ಲಿ ರಾಮಾಯಣದ ಒಂದು ರೂಪಾಂತರವಾದ "ಕಾಕಾವಿನ್ ರಾಮಾಯಣ" ಜನ್ಮತಾಳಿತು. ಇದು ಸಂಸ್ಕೃತ ರಾಮಾಯಣವನ್ನು ಹೆಚ್ಚು ಬದಲಿಸದೆ ಮಾಡಿದ ಭಾಷಾಂತರವಾಗಿದೆ. ಲಾಓಸ್ ದೇಶದ ಕಾವ್ಯ "ಫ್ರಾ ಲಕ್ ಫ್ರಾ ಲಾಮ್" ರಾಮಾಯಣದ ರೂಪಾಂತರ; ಇದರ ಹೆಸರಿನಲ್ಲಿರುವ "ಲಕ್" ಮತ್ತು "ಲಾಮ್" ಲಕ್ಷ್ಮಣ ಮತ್ತು ರಾಮರ ಹೆಸರಿನ ಲಾಓ ರೂಪಾಂತರಗಳು. ಇದರಲ್ಲಿ ರಾಮನ ಜೀವನವನ್ನು ಬುದ್ಧನ ಹಿಂದಿನ ಅವತಾರಗಳಲ್ಲಿ ಒಂದೆಂದು ಚಿತ್ರಿಸಲಾಗಿದೆ. ಮಲೇಷ್ಯಾದ "ಹಿಕಾಯತ್ ಸೆರಿ ರಾಮ" ಕಾವ್ಯದಲ್ಲಿ ದಶರಥ ಪ್ರವಾದಿ ಆದಮನ ಮೊಮ್ಮಗ ಎಂದು ಚಿತ್ರಿಸಲಾಗಿದೆಯಲ್ಲದೆ, ರಾವಣ ಬ್ರಹ್ಮನಿಂದ ವರ ಪಡೆಯುವುದರ ಬದಲು ಅಲ್ಲಾನಿಂದ ವರ ಪಡೆಯುತ್ತಾನೆ. ಥೈಲೆಂಡಿನ ಕಾವ್ಯವಾದ "ರಾಮಕಿಯೆನ್" ಸಹ ರಾಮಾಯಣವನ್ನು ಆಧರಿಸಿದೆ. ಇದರಲ್ಲಿ ಸೀತೆಯನ್ನು ರಾವಣ ಮತ್ತು ಮಂಡೋದರಿಯರ ಮಗಳೆಂದು ಚಿತ್ರಿಸಲಾಗಿದೆ. ಜ್ಯೋತಿಷಿಯಾದ ವಿಭೀಷಣನು ಸೀತೆಯ ಜಾತಕವನ್ನು ನೋಡಿ ಅಪಶಕುನವನ್ನು ಮುನ್ನುಡಿಯುತ್ತಾನೆ. ಹಾಗಾಗಿ ರಾವಣ ಅವಳನ್ನು ನೀರಿಗೆ ಎಸೆಯಿಸುತ್ತಾನೆ, ಮತ್ತು ನಂತರ ಜನಕ ಸೀತೆಯನ್ನು ಪಡೆಯುತ್ತಾನೆ. ಮುಖ್ಯ ಕಥೆ ರಾಮಾಯಣದ ಕಥೆಯಂತಿದ್ದರೂ ಸಾಮಾಜಿಕ ಸಂಪ್ರದಾಯಗಳನ್ನು ಥಾಯಿ ಸಮಾಜದ ಸಂಪ್ರದಾಯಗಳಿಗೆ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಹನುಮಂತನ ಪಾತ್ರ ಬಹಳ ಮುಖ್ಯವಾಗಿದೆ. ಈ ಕಾವ್ಯದ ವರ್ಣಚಿತ್ರಗಳು ಬ್ಯಾ೦ಗ್‍ಕಾಕ್ ನಲ್ಲಿರುವ "ವಾತ್ ಫ್ರಾ ಕಯೆವ್" ದೇವಸ್ಥಾನದಲ್ಲಿ ಕಂಡುಬರುತ್ತವೆ. ಇತರ ದಕ್ಷಿಣಪೂರ್ವ ಏಷ್ಯಾದ ರೂಪಾಂತರಗಳಲ್ಲಿ ಬಾಲಿಯ "ರಾಮಕವಚ", ಫಿಲಿಪ್ಪೀನ್ಸ್ ನ "ಮರಡಿಯ ಲಾವಣ", ಕಾಂಬೋಡಿಯದ "ರೀಮ್‍ಕರ್" ಮತ್ತು ಮ್ಯಾನ್‍ಮಾರ್ ನ "ಯಾಮ ಜಾತ್‍ದವ್" ಗಳನ್ನು ಹೆಸರಿಸಬಹುದು. ವರ್ತಮಾನದಲ್ಲಿ ರಾಮಾಯಣ ಕನ್ನಡದ ರಾಷ್ಟ್ರಕವಿಯಾಗಿದ್ದ ಕುವೆಂಪು ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ರಾಮಾಯಣ ದರ್ಶನಂ ಎಂಬ ಕೃತಿಯನ್ನು ರಚಿಸಿದ್ದಾರೆ. ತೆಲುಗು ಕವಿಯಾದ ವಿಶ್ವನಾಥ ಸತ್ಯನಾರಾಯಣ ಎಂಬುವವರು ರಾಮಾಯಣ ಕಲ್ಪವೃಕ್ಷಮು ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಇಬ್ಬರು ಕವಿಗಳಿಗೂ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು. ಅಶೋಕ್ ಬ್ಯಾಂಕರ್ ಎಂಬ ಆಂಗ್ಲ ಲೇಖಕರು ರಾಮಾಯಣವನ್ನು ಆಧರಿಸಿ ಆರು ಸರಣಿ ಕಾದಂಬರಿಗಳನ್ನು ಹೊರತಂದಿದ್ದಾರೆ. ಕಂಚೀಪುರಂನ ಗೇಟಿ ರೈಲ್ವೇ ಥಿಯೇಟರ್ ಕಂಪನಿಯು ದ್ರವಿಡರ ಸ್ವಾಭಿಮಾನವನ್ನು ಪುನರ್ಸ್ಥಾಪಿಸುವ ಉದ್ದೇಶದಿಂದ ಈ ಕಾವ್ಯದ ಪರಿಷ್ಕೃತ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ. ರಾವಣನನ್ನು ವಿದ್ವಾಂಸನೆಂದೂ, ರಾಜನೀತಿಜ್ಞನೆಂದೂ, ಸೀತೆ ಅವನಿಗೆ ಮರುಳಾದಳೆಂದೂ , ರಾಮನು ನೀತಿನಿಯಮ, ನಯನಾಜೂಕುಗಳಿಲ್ಲದ ಲಂಪಟ ರಾಜಕುಮಾರನೆಂದೂ, ಕುಡಿದು ಉನ್ಮತ್ತಸ್ಥಿತಿಯಲ್ಲಿ ಭಾರೀ ಮಾರಣಹೋಮಕ್ಕೆ ಆಜ್ನೆ ನೀಡಿದನೆಂದೂ ಚಿತ್ರಿಸುವ ರಾಮಾಯಣದ ಈ ಆವೃತ್ತಿಗಳು ಸಾಂಪ್ರದಾಯಿಕ ಪ್ರಸ್ತುತಿಗಳಿಂದ ಬಹಳಷ್ಟು ದೂರ ಇವೆ. ಈ ರೀತಿಯ ಪಾತ್ರಚಿತ್ರಣಗಳು ತನ್ನ ಸಂಸ್ಕೃತಿ ಮತ್ತು ಸ್ವಾತಂತ್ರ್ಯವನ್ನು ಪುನರ್ ಸ್ಥಾಪಿಸುವ ದ್ರಾವಿಡ ಚಳುವಳಿಯ ಹೆಚ್ಚುತ್ತಿರುವ ಗುಪ್ತಪ್ರಯತ್ನದ ಅಂಗಗಳಾಗಿವೆ.
2020/03/29 00:25:52
http://www.nammakannadanaadu.com/purana/ramayana.php
mC4
ಭಾರತದಲ್ಲಿ ಬಿಡುಗಡೆಗೊಂಡಿದೆ "ಟಾಟಾ ಆಲ್ಟ್ರೊಜ್ ಐಟರ್ಬೊ" | Udayavani – ಉದಯವಾಣಿ Friday, 05 Mar 2021 | UPDATED: 11:37 AM IST 2021 ರಲ್ಲಿ ಹೊಸದಾಗಿ ಪರಿಚಯಿಸಲಾದ ಈ ಕಾರಿನ 73 7.73 ಲಕ್ಷದಿಂದ 85 8.85 ಲಕ್ಷ Team Udayavani, Jan 23, 2021, 1:42 PM IST ನವದೆಹಲಿ : 2021 ರಲ್ಲಿ ಹೊಸದಾಗಿ ಪರಿಚಯಿಸಲಾದ 73 7.73 ಲಕ್ಷದಿಂದ 85 8.85 ಲಕ್ಷ (ಎಕ್ಸ್ ಶೋ ರೂಂ, ದೆಹಲಿ) ಬೆಲೆಯುಳ್ಳ ಟಾಟಾ ಆಲ್ಟ್ರೊಜ್ ಐಟರ್ಬೊ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಸಾಮಾನ್ಯ ಪೆಟ್ರೋಲ್ ಇಂಜಿನ್ ಕಾರುಗಳಿಗೆ ಹೋಲಿಸಿದರೇ ಐಟರ್ಬೊ ₹ 60,000 ಹೆಚ್ಚು ದುಬಾರಿಯಾಗಿದೆ. ಇದು ಪ್ರೀಮಿಯಂ ಹ್ಯಾಚ್‌ ಬ್ಯಾಕ್‌ನ ಹೊಸ ಟರ್ಬೊ ಪೆಟ್ರೋಲ್ ಆವೃತ್ತಿಯಾಗಿದ್ದು, ಟಾಟಾ ಹೊಸ ಐಟರ್ಬೊ ಆಯ್ಕೆಯನ್ನು ಎಕ್ಸ್‌ ಟಿ, ಎಕ್ಸ್‌ ಝಡ್ ಮತ್ತು ಹೊಸದಾಗಿ ಪರಿಚಯಿಸಿದ ಎಕ್ಸ್‌ ಝಡ್ + ಟ್ರಿಮ್ ಎಂಬ ಮೂರು ರೂಪಾಂತರಗಳಲ್ಲಿ ನೀಡಲಿದೆ. ಇದನ್ನೂ ಓದಿ : 3ನೇ ಅವಧಿಗೆ ಸ್ಪರ್ಧೆ ಇಲ್ಲ; ಮೋದಿ ಬದಲು ಮುಂದಿನ ಪ್ರಧಾನಿ ಹುದ್ದೆಗೆ ಯಾರು ಅರ್ಹ?ಸಮೀಕ್ಷೆ ಟಾಟಾ ನಿಯಮಿತ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಾಗಿ ಎಕ್ಸ್‌ ಝಡ್ + ಮಾಡೆಲ್ ನ್ನು ಪರಿಚಯಿಸಿದೆ, ಇವುಗಳ ಬೆಲೆ ಕ್ರಮವಾಗಿ 25 8.25 ಲಕ್ಷ ಮತ್ತು ₹ 9.45 ಲಕ್ಷ (ಎಕ್ಸ್ ಶೋರೂಮ್, ದೆಹಲಿ) ಆಗಿದೆ. ಟಾಟಾ ಕಂಪೆನಿಯ ಇತರೆ ಮಾಡೆಲ್ ಕಾರುಗಳಿಗೆ ಹೋಲಿಸಿದರೇ, ಐಟರ್ಬೊ ಹೊಸ ಸ್ಪೋರ್ಟ್ ಮೋಡ್ ಒಳಗೊಂಡಂತೆ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರಲಿವೆ. ಹೊಸ ಮಾದರಿಯೊಂದಿಗೆ, ಕಂಪನಿಯು ಈಗ ಆಲ್ಟ್ರೊಜ್ ಶ್ರೇಣಿಗಾಗಿ ತನ್ನ ಸಂಪರ್ಕಿತ ಕಾರ್ ಸಿಸ್ಟಮ್ ಐ ಆರ್ ಎ ಅನ್ನು ಪರಿಚಯಿಸಿದೆ, ಇದನ್ನು ಟಾಪ್-ಎಂಡ್ ಎಕ್ಸ್‌ ಜೆಡ್ + ಮಾಡೆಲ್ ನೊಂದಿಗೆ ಪ್ರತ್ಯೇಕವಾಗಿ ನೀಡಲಿದೆ. ಹೊಸ ಆಲ್ಟ್ರೊಜ್ ಐಟರ್ಬೊದ ಪ್ರಮುಖ ಮುಖ್ಯಾಂಶವೆಂದರೆ 1.2-ಲೀಟರ್, ಮೂರು-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಆದಾಗ್ಯೂ, ಕಂಪನಿಯು ಆಲ್ಟ್ರೊಜ್‌ ಗೆ ಎಂಜಿನ್‌ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಐಟರ್ಬೊದಲ್ಲಿನ 'ಐ' ಇಂಟೆಲಿಜೆಂಟ್ ಅನ್ನು ಸೂಚಿಸುತ್ತದೆ. 5,500 ಆರ್‌ಪಿಎಂನಲ್ಲಿ 108 ಬಿಹೆಚ್‌ಪಿ ಉತ್ಪಾದಿಸಲು ಎಂಜಿನ್ ಟ್ಯೂನ್ ಮಾಡಲಾಗಿದೆ ಮತ್ತು 1,500-5,500 ಆರ್‌ಪಿಎಂ ನಡುವೆ 140 ಎನ್‌ಎಮ್‌ನ ಗರಿಷ್ಠ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ, ಮತ್ತು ಸಾಮಾನ್ಯ ಆಲ್ಟ್ರೊಜ್‌ ನಂತೆ, ಇಲ್ಲಿಯೂ ಸಹ ಮೋಟಾರ್ 5-ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್‌ ಗೆ ಉತ್ತಮವಾಗಿ ಹೊಂದಿಕೆಯಾಗಿದೆ. ಆಲ್ಟ್ರೊಜ್ ಐಟರ್ಬೊ 11.9 ಸೆಕೆಂಡುಗಳಲ್ಲಿ 0-100 ಕಿಲೋಮೀಟರ್ ವೇಗವನ್ನು ಹೊಂದುವ ಸಾಮರ್ಥ್ಯ ಹೊಂದಿದೆ ಎಂದು ಟಾಟಾ ಕಂಪೆನಿ ಹೇಳಿಕೊಂಡಿದೆ. ಇದನ್ನೂ ಓದಿ : ಗಣರಾಜ್ಯೋತ್ಸವ ಪರೇಡ್ ಪೂರ್ವಾಭ್ಯಾಸ, ಬದಲಿ ಮಾರ್ಗ ಕಂಡುಕೊಳ್ಳಿ : ಸಂಚಾರಿ ಪೋಲಿಸರು ಈ ಕಾರಿನ ವಿನ್ಯಾಸದ ವಿಷಯದಲ್ಲಿ, ಹೊಸ ಟಾಟಾ ಆಲ್ಟ್ರೊಜ್ ಐಟರ್ಬೊ ಸಾಮಾನ್ಯ ಮಾದರಿಗೆ ಹೋಲುತ್ತದೆ, ಆದಾಗ್ಯೂ, ಹಾರ್ಬರ್ ಬ್ಲೂ ಬಣ್ಣವನ್ನು ಹೊಂದಿದೆ. ಆಲ್ಟ್ರೊಜ್ ಐಟರ್ಬೋದ ಎಕ್ಸ್ ಝಡ್ ಮತ್ತು ಎಕ್ಸ್ ಝಡ್ + ಟ್ರಿಮ್‌ಗಳು ಕಾಂಟ್ರಾಸ್ಟ್ ಕಪ್ಪು ರೂಫ್ ಬಣ್ಣದಲ್ಲಿ ಲಭ್ಯವಿದೆ. ಪ್ರೊಜೆಕ್ಟರ್ ಹೆಡ್‌ ಲ್ಯಾಂಪ್‌ಗಳು, ಎಲ್‌ ಇ ಡಿ ಡಿಆರ್‌ ಎಲ್‌ ಗಳು, ಕಪ್ಪು ಹೊಳಪಿನ ಗ್ರಿಲ್, ಎಲ್‌ ಇ ಡಿ ಟೈಲ್‌ ಲ್ಯಾಂಪ್‌ಗಳು ಮತ್ತು ಡ್ಯುಯಲ್-ಟೋನ್ ಅಲಾಯ್ ವೀಲ್‌ ಗಳಂತಹ ವೈಶಿಷ್ಟ್ಯಗಳು ಇವೆ. 2021 ರ ಟಾಟಾ ಆಲ್ಟ್ರೊಜ್‌ ನ ಎಲ್ಲಾ ಮಾಡೆಲ್ ಗಳು (ಹೊಸ ಐಟರ್ಬೊ ಸೇರಿದಂತೆ) ಹಳೆಯ ಆಲ್-ಬ್ಲ್ಯಾಕ್ ಬದಲು ಹೊಸ ಕಪ್ಪು ಮತ್ತು ತಿಳಿ ಬೂದು ಒಳಾಂಗಣವನ್ನು ಸಹ ಹೊಂದಿವೆ. ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಆಲ್ಟ್ರೊಜ್ ಐಟರ್ಬೊ ಎಕ್ಸ್‌ ಪ್ರೆಸ್ ಕೂಲ್ ಫಂಕ್ಷನ್ ಮತ್ತು 'ವಾಟ್ 3 ವರ್ಡ್ಸ್' ನ್ಯಾವಿಗೇಷನ್‌ ನಂತಹ ಕೆಲವು ಹೊಸ ತಂತ್ರಜ್ಞಾನವನ್ನು ಹೊಂದಿವೆ. 7 ಇಂಚಿನ ಸ್ಟಿಕ್- ಡಿಸ್ ಪ್ಲೇ, ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್, ಸ್ವಯಂಚಾಲಿತ ಎಸಿ, ಪಾರ್ಕಿಂಗ್ ಕ್ಯಾಮೆರಾ, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್, ಕ್ರೂಸ್ ಕಂಟ್ರೋಲ್, ಫಾಸ್ಟ್ ಚಾರ್ಜಿಂಗ್, ಯುಎಸ್ ಬಿ ಪೋರ್ಟ್ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
2021/03/05 06:10:24
https://www.udayavani.com/tech-world/2021-tata-altroz-iturbo-launched-in-india-prices-start-at-%E2%82%B9-7-73-lakh
mC4
ಭರತ ಖಂಡದ ಶ್ರೇಷ್ಠ ಸಂತ ಪೇಜಾವರ ವಿಶ್ವೇಶ ತೀರ್ಥಯತಿವರ್ಯರು Posted by admin | Jan 3, 2020 | ಸುದ್ದಿ, ಕೊಪ್ಪಳ, ಜಿಲ್ಲಾವಾರು ಸುದ್ದಿ, ಹೋಮ್ ಸ್ಲೈಡರ್ | 0 | ಕೆ.ಎನ್.ಪಿ.ವಾರ್ತೆ,ನವಲಿ.ಜ.03; ಭಾರತ ಸಂತ ಮಹಾಂತ ಶರಣರ ನಾಡಲ್ಲಿ ಉದಯಿಸಿದ ಕ್ರಾಂತಿಕಾರಿ ಸಂತ ಸಮಾಜದ ಓರೆಗಳನ್ನ ತಿದ್ದುವಲ್ಲಿ ಪರಿವರ್ತನೆಯ ಹಾದಿ ಸವಿಸಿದ ಮಹಾನ್ ಚೇತನ ಪೇಜಾವರ ಶ್ರೀ. ಇಂತ ಬೆಳಕನ್ನು ನಾವು ಕಳೆದುಕೊಂಡಿದ್ದು ನಾಡಿಗೆ ತುಂಬಲಾರದ ನಷ್ಟ ತಂದಿದೆ ಎಂದು ಉಪನ್ಯಾಸಕ ಸೋಮನಾಥಯ್ಯ ಸ್ವಾಮಿ ಹೀರೆಮಠ ಹಣವಾಳ ತಿಳಿಸಿದರು. ಸರಕಾರಿ ಪದವಿ ಪೂರ್ವ ಕಾಲೇಜ್ ನವಲಿ, ಪ್ರಕೃತಿ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಲಿಂಗೈಕ್ಯ ವಿಶ್ವೇಶ ತೀರ್ಥ ಪೇಜಾವರ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು. ಭಾರತ ಪರಂಪರೆಯ ಶ್ರೇಷ್ಠ ಸಂತರ ಸಾಲಿನಲ್ಲಿ ಪೇಜಾವರದ ಗುರುಗಳು ಒಬ್ಬರು. ಅವರು ಧೀನ, ದಲಿತರ ಏಳ್ಗೆಗಾಗಿ ಸಮಾಜದ ಪರಿವರ್ತನೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಅಗಮ್ಯ ಚೇತನ ಎಂದರು. ನಂತರ ಮಾತನಾಡಿದ ಉರ್ದು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಇಬ್ರಾಹಿಂ, ಪೇಜಾವರ ಶ್ರೀಗಳು ಕೋಟ್ಯಂತರ ಭಕ್ತರ ಮನ ಮಂದಿರದಲ್ಲಿ ಶಾಶ್ವತವಾಗಿ ನೆಲೆ ನಿಂತರು. ಅಷ್ಟಮಠಗಳಲ್ಲೇ ಅತ್ಯಂತ ಹಿರಿಯ‌ ಯತಿಗಳಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗೆ 88 ವರ್ಷ ವಯಸ್ಸಾಗಿತ್ತು. ದೇಶದ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಸವ್ಯಸಾಚಿ ಸ್ವಾಮೀಜಿಯವರು, ಪಕ್ಷ, ಜಾತಿ, ಮತ, ಲಿಂಗ, ಪಂಥ, ಧರ್ಮಗಳ ಎಲ್ಲೆಯನ್ನು ಮೀರಿ ಸರ್ವಜನಾದರಣೀಯರೆನಿಸಿಕೊಂಡಿದ್ದರು. ಸಮಸ್ತ ಮನುಕುಲವನ್ನು ಸಮಾನವಾಗಿ ಕಂಡವರು, ದಲಿತರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿದವರು ಒಬ್ಬ ದಲಿತ ಅಧಿಕಾರಿಯನ್ನು ಹಿಂದೂ ಮಹಾಸಭಾದ ಸರ್ವ ಗುರುಗಳ ಸಮಾವೇಶದ ಅಧ್ಯಕ್ಷರನ್ನಾಗಿಸಿ ದಿಟ್ಟ ನಿಲುವನ್ನ ಸಾಧಿಸಿದವರು, ಎಲ್ಲರಿಂದಲೂ ಸಮಾನವಾಗಿ ಗೌರವಕ್ಕೆ ಭಾಜನರಾಗಿದ್ದರು ಎಂದರು ನುಡಿನಮನ ಕಾರ್ಯಕ್ರಮದಲ್ಲಿ ಪ್ರಕೃತಿ ಪೌಂಡೇಶನ್ ಅಧ್ಯಕ್ಷರಾದ ವೀರುಪಣ್ಣ ಕಲ್ಲೂರ ನವಲಿ, ಸರಕಾರಿ ಫ್ರೌಢ ಶಾಲೆಯ ಶಿಕ್ಷಕರಾದ ಹನುಮಂತಯ್ಯ , ತಿರುಪತಿಪ್ಪ ಸಂಕನಾಳ, ನಿವೃತ್ತ ಶಿಕ್ಷಕರಾದ ವೇಂಕಟೇಶ ಆಚಾರ್, ಕಾಲೇಜನ ಉಪನ್ಯಾಸಕರಾದ ನಿಂಗಪ್ಪ, ಲಕ್ಷ್ಮಣ, ಶ್ರೀಮತಿ ಮಲ್ಲಮ್ಮ ಆದಾಪೂರ, ಕುಮಾರಿ ಐಶ್ವರ್ಯ ಕಾರಟಗಿ ಕಾಲೇಜ್ ಹಾಗೂ ಫ್ರೌಢ ಶಾಲೆಯ ವಿದ್ಯಾರ್ಥಿಗಳು ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮೌನಾಚರಣೆ, ಶ್ರದ್ದಾಂಜಲಿ ಸಲ್ಲಿಸಿದರು.
2020/08/14 02:39:00
http://karnatakanewsportal.com/bharatha-khandada-shresta-santha-pejawara-vishvesha-theerthayathivaryaru/
mC4
ಷಡಕ್ಷರ ದೇವ – ಕಣಜ ಷಡಕ್ಷರ ದೇವ Home/ವ್ಯಕ್ತಿ ಪರಿಚಯ/ಷಡಕ್ಷರ ದೇವ ಒಂದು ಊರು. ಕೋಳೂರು ಎಂದು ಅದರ ಹೆಸರು. ಅಲ್ಲಿ ಒಬ್ಬ ಭಕ್ತ. ಅವನ ಹೆಸರು ಶಿವದೇವ. ಅವನಿಗೊಬ್ಬ ಮಗಳು. ಅವಳಿಗೆ ಕೊಡಗೂಸು ಎಂದು ಹೆಸರು. ಶಿವದೇವ ಪ್ರತಿದಿನ ತನ್ನ ಇಷ್ಡದೈವ ಶಿವಲಿಂಗಕ್ಕೆ ಭಕ್ತಿ ಯಿಂದ ಪೂಜೆ ಮಾಡಿ ಹಾಲನ್ನು ನೈವೇದ್ಯ ಮಾಡುವನು. ಒಂದು ದಿನ ಶಿವದೇವ ದೇವತಾಕಾರ್ಯಕ್ಕಾಗಿ ನೆರೆ ಊರಿಗೆ ಹೋಗಬೇಕಾಯಿತು. ಹೋಗುವಾಗ ತನ್ನ ಹೆಂಡತಿ ಯನ್ನೂ ಕರೆದುಕೊಂಡು ಹೋದ. ಮನೆಯಲ್ಲಿ ತನ್ನ ಮಗಳನ್ನು ಕರೆದು ಪ್ರಿತಿಯಿಂದ ಗಲ್ಲವನ್ನು ಹಿಡಿದು ಮುದ್ದಿಸಿದ. ಅವಳಿಗೆ, "ಮಗಳೇ, ನೀನು ಮನೆ ಬಿಟ್ಟು ಎಲ್ಲಿಗೂ ಹೋಗ ಬೇಡ. ನಾನು ಬರುವಾಗ ನಿನಗೆ ಬಣ್ಣದ ಗೊಂಬೆ, ಹೊಸ ವಸ್ತ್ರಗಳನ್ನು ತಂದುಕೊಡುವೆನು" ಎಂದು ಹೇಳಿದ. "ಆದರೆ ನಾನು ಬರುವವರೆಗೆ ಶಿವಲಿಂಗ ವ್ರತವನ್ನು ನಡೆಸಬೇಕು, ಪ್ರತಿ ದಿನ ಒಂದು ಒಳ್ಳ ಹಾಲನ್ನು ನೈವೇದ್ಯ ಮಾಡಬೇಕು, ಖಂಡಿತ ತಪ್ಪಿಸಬಾರದು" ಎಂದು ತಿಳಿಹೇಳಿದ. ತಪ್ಪದೆ ಅವನ ಮಾತನ್ನು ನಡೆಸುವುದಾಗಿ ಭರವಸೆ ಕೊಟ್ಟಳು ಮಗಳು. ತಂದೆ ಊರಿಗೆ ಹೋದ. ನೀನು ಹಾಲು ಕುಡಿಯದಿದ್ದರೆ- ಮರುದಿನ ಕೊಡಗೂಸು ಸ್ನಾನಮಾಡಿ ಮಡಿಬಟ್ಟೆಯನ್ನು ಧರಿಸಿಕೊಂಡಳು. ಮನೆಯ ಆಕಳಿನ ಹಾಲನ್ನು ತೆಗೆದುಕೊಂಡು ಸಡಗರದಿಂದ ಶಿವಾಲಯಕ್ಕೆ ಹೋದಳು. ಅಲ್ಲಿ ಭಕ್ತಿಪೂರ್ವಕ ಶಿವನ ಪೂಜೆಯನ್ನು ಮಾಡಿದಳು. ಅನಂತರ ನೈವೇದ್ಯಕ್ಕೆ ತಂದ ಹಾಲಿನ ಬಟ್ಟಲನ್ನು ವಿಗ್ರಹದ ಮುಂದೆ ಇಟ್ಟಳು. "ದೇವಾ, ಹಸಿದಿರುವೆ, ಹಾಲನ್ನು ಕುಡಿ" ಎಂದು ಹೇಳಿ ಕಂಬದ ಮರೆಗೆ ಹೋಗಿ ನಿಂತಳು. ಆದರೆ ದೇವರು ಬರಲಿಲ್ಲ. ಹಾಲನ್ನು ಕುಡಿಯಲಿಲ್ಲ. ಹುಡುಗಿಗೆ ಬಹಳ ಕಳವಳವಾಯಿತು. "ಶಂಕರ, ಯಾವ ಕಾರಣದಿಂದ ನೀನು ಹಾಲು ಕುಡಿಯದೆ ಸುಮ್ಮನೆ ಇರುವೆ? ನಾನು ಮನೆಯಿಂದ ಬಂದದ್ದು ತಡವಾಯಿತೆ? ಹಾಲು ಕಾದದ್ದು ಸಾಲದೆ? ಅಥವಾ ಆರಿಹೋಯಿತೋ? ಏನಾಯಿತು ಹೇಳು" ಎಂದು ಕೇಳಿದಳು, ಬೇಡಿದಳು, ಕಣ್ಣೀರು ಸುರಿಸಿದಳು. "ಈ ಹಾಲು ಬಿಸಿಯಾಗಿದೆ, ಸಿಹಿಯಾಗಿದೆ, ಬೇಗ ಕುಡಿ" ಎಂದು ತಿಳಿಹೇಳಿದಳು. ಶಿವ ಮಾತನಾಡಲಿಲ್ಲ, ಹಾಲನ್ನು ಕುಡಿಯಲಿಲ್ಲ. ಕೊಡಗೂಸು, "ನೀನು ಕುಡಿಯಲು ಒಪ್ಪಿದರೆ ಮನೆಯಲ್ಲಿ ಇರುವ ಇನ್ನುಳಿದ ಸವಿ ತಿನಿಸುಗಳನ್ನು ತರುತ್ತೇನೆ" ಎಂದು ಒಲಿಸಲು ಪ್ರಯತ್ನಿಸಿದಳು. ಉಹುಂ, ಎಷ್ಟು ಹೇಳಿದರೂ ಶಿವ ಹಾಲನ್ನು ಕುಡಿಯಲಿಲ್ಲ, ಮಾತನಾಡಲಿಲ್ಲ. 'ಶಿವನು ಹಾಲು ಕುಡಿಯದೆ ಹೋದರೆ ತಂದೆಗೆ ಏನು ಹೇಳಲಿ?' ಕೊಡಗೂಸಿಗೆ ಕೋಪ ಬಂದಿತು. ದುಃಖವಾಯಿತು. 'ಶಿವ ಹಾಲು ಕುಡಿಯದೆ ಹೋದರೆ ತಂದೆಗೆ ತಾನು ಏನು ಹೇಳಬೇಕು? ತಂದೆ ಸಿಟ್ಟಾಗುವನಲ್ಲ!' ಎಂದು ಚಡಪಡಿಸಿದಳು ಏನೂ ಅರಿಯದ ಹುಡುಗಿ. ತನ್ನ ತಂದೆ ಹಾಲನ್ನು ತಂದಾಗ ಶಿವನೇ ಅದನ್ನು ಕುಡಿಯುತ್ತಿದ್ದ ಎಂದು ಆ ಹುಡುಗಿಯ ನಂಬಿಕೆ. ಕೊನೆಗೆ ಅವಳು ಯಾವ ದಾರಿಯೂ ಕಾಣದೆ ಶಿವನಿಗೆ ಹೇಳಿದಳು; "ನೀನು ಹಾಲು ಕುಡಿಯದಿದ್ದರೆ ನಾನು ಈ ಕಂಬಕ್ಕೆ ತಲೆ ಚಚ್ಚಿಕೊಳ್ಳುತ್ತೇನೆ!" ಉಹುಂ, ಶಿವ ಅಲ್ಲಾಡಲಿಲ್ಲ, ಹಾಲು ಕುಡಿಯಲಿಲ್ಲ. ಕೊಡಗೂಸು ಕಲ್ಲಿಗೆ ತಲೆ ಕೊಟ್ಟಳು. ಶಿವನಿಗೆ 'ಅಯ್ಯೋ' ಎನ್ನಿಸಿತು. ಇವಳ ಮುಗ್ಧ ಭಕ್ತಿಗೆ ಮೆಚ್ಚಿದ. ಪ್ರತ್ಯಕ್ಷನಾದ. ಹಾಲನ್ನು ಕುಡಿದ, ಅವಳಿಗೆ ಆಶೀರ್ವದಿಸಿ ಮತ್ತೆ ಮೊದಲಿನಂತಾದ. ಕುಡಿದನಲ್ಲಾ ಎಂಬ ಸಂತೋಷ. ಆಗಲೂ, "ತಂದೆ ಬಂದಮೇಲೆ ಇದೆಲ್ಲವನ್ನೂ ಹೇಳುತ್ತೇನೆ, ನೋಡುತ್ತಿರು" ಎಂದು ಶಿವನಿಗೆ ಎಚ್ಚರಕೊಟ್ಟೇ ಹೊರಟಳು. ಈ ಕಥೆಯನ್ನು ಹೇಳಿರುವವನು ಕವಿ ಷಡಕ್ಷರದೇವ. ಕೋಳೂರು ಕೊಡಗೂಸಿನ ಮುಗ್ಧ ಸ್ವಭಾವ, ಶಿವನ ದೇವಾಲಯಕ್ಕೆ ಹೊರಡುವಾಗ ಅವಳ ಸಡಗರ, ಶಿವನು ಹಾಲನ್ನು ಕುಡಿಯದಿದ್ದಾಗ ಅವಳ ದುಗುಡ, ಕಡೆಯಲ್ಲಿ ಅವಳ ಸಂತೋಷ-ಇದನ್ನೆಲ್ಲ ಕಣ್ಣಿಗೆ ಕಟ್ಟುವಂತೆ, ಹೃದಯಕ್ಕೆ ಮುಟ್ಟುವಂತೆ ವರ್ಣಿಸುತ್ತಾನೆ. ಇಂತಹ ಹಲವು ಕಥೆಗಳನ್ನು ಹೇಳಿದ್ದಾನೆ ಈ ಕವಿ. ಕನ್ನಡ ಸಾಹಿತ್ಯಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಹದಿನೇಳನೆಯ ಶತಮಾನದಲ್ಲಿ ಷಡಕ್ಷರ ದೇವನು ಹಿರಿಯ ಕವಿಗಳ ಸಾಲಿನಲ್ಲಿ ಬರುತ್ತಾನೆ. ಮುಪ್ಪಿನ ಷಡಕ್ಷರಿ, ದೊಡ್ಡ ಷಡಕ್ಷರಸ್ವಾಮಿ, ಷಡಕ್ಷರದೇವ, ವಿರಕ್ತ ಷಡಕ್ಷರಿ, ಷಡಕ್ಷರಾಮಾತ್ಯ ಎಂಬ ಐವರು ಕವಿಗಳು ಕನ್ನಡ ಸಾಹಿತ್ಯದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರಲ್ಲಿ ಷಡಕ್ಷರದೇವನು ಕನ್ನಡ-ಸಂಸ್ಕೃತ ಭಾಷೆಗಳೆರಡರಲ್ಲಿಯೂ ಅನೇಕ ಗ್ರಂಥಗಳನ್ನು ರಚಿಸಿ, ಉಭಯಭಾಷಾವಿಶಾರದ ಎನಿಸಿಕೊಂಡಿದ್ದಾನೆ. ಇವನು ಸುಮಾರು ೧೬೩೬ರಲ್ಲಿ ಜನಿಸಿದನು. ಇವನ ತಂದೆ-ತಾಯಿ ಯಾರು ಎಂದು ತಿಳಿದುಬಂದಿಲ್ಲ. ಈತನ ಜನನಸ್ಥಳ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದನಗೂರು. ಆದರೆ ಈತನು ಎಳಂದೂರಿನ ಷಡಕ್ಷರದೇವನೆಂದೇ ಹೆಸರುವಾಸಿ ಆಗಿದ್ದಾನೆ. ಷಡಕ್ಷರದೇವನು ತನ್ನ ಬಾಲ್ಯ ಶಿಕ್ಷಣವನ್ನು ಎಳಂದೂರಿನಲ್ಲಿಯೇ ಮುಗಿಸಿದ. ಇವನು ತನ್ನ ಎಳೆಯ ವಯಸ್ಸಿನಲ್ಲಿಯೇ ಕಾವ್ಯ ರಚಿಸು ತ್ತಿದ್ದುದರಿಂದ ಆತನ ಸಹ ಅಧ್ಯಾಯಿಗಳು ಆತನನ್ನು 'ಕವಿಶೇಖರ' ಎಂದು ಕರೆಯುತ್ತಿದ್ದರು. ಈತನ ಅಂಕಿತ 'ಶಿವಲಿಂಗ'. ಷಡಕ್ಷರದೇವನು ದನಗೂರಿನ ಹಿರೇಮಠದ ಸ್ವಾಮಿ ಯಾಗಿದ್ದ. ಅಲ್ಲಿ ಈಗಲೂ ಆತನ ಮಠವಿದೆ, ತಪೋಭೂಮಿ ಯಿದೆ. ಷಡಕ್ಷರದೇವನ ಪುಣ್ಯಾಶ್ರಮವಿದೆ. ಆತನಿಗೆ ಪ್ರಿಯ ವಾದ ಶಿವಲಿಂಗೇಶ್ವರ ದೇವಾಲಯವನ್ನು ನಾವು ಈಗಲೂ ಕಾಣಬಹುದು. ಷಡಕ್ಷರದೇವ ಶಾಸ್ತ್ರಾಭ್ಯಾಸ ಮಾಡಿ ಹೆಚ್ಚಿನ ಪಾಂಡಿತ್ಯ ಹೊಂದಿದ. ಅನಂತರ ಎಳಂದೂರಿನಲ್ಲಿ ರಾಜಗುರುವಾಗಿ ತನ್ನ ಜೀವನದ ಬಹುಭಾಗವನ್ನೆಲ್ಲ ಅಲ್ಲಿಯೇ ಕಳೆದ. ಈಗಲೂ ಎಳಂದೂರಿನಲ್ಲಿರುವ 'ದನಗೂರು' ದೇವರ ಗದ್ದುಗೆಯು ಈತನ ಮಠವೆಂದು ಹೇಳುತ್ತಾರೆ. ಮಠದಲ್ಲಿರುವ ಸಮಾಧಿಯೇ ಕವಿ ಸಮಾಧಿ ಎಂದು ಹೇಳುತ್ತಾರೆ. ಆತನಿಗೆ ರಾಜಾಶ್ರಯವಿರಲಿಲ್ಲ. ಆದರೆ ರಾಜ ಮನೆತನಗಳು ಆತನಿಗೆ ಭಕ್ತಿ-ವಿಶ್ವಾಸ-ಆದರಗಳನ್ನು ತೋರಿ ಗೌರವಿಸಿದವು. ಷಡಕ್ಷರದೇವನು ಆಜನ್ಮ ಬ್ರಹ್ಮಚಾರಿಯಾಗಿ ಉಳಿದು, ತನ್ನ ಇಡೀ ಜೀವನವನ್ನು ಸಮಾಜಸೇವೆಗಾಗಿ ಮುಡಿಪಾಗಿರಿಸಿದ. ಶಿವನಂ ತದೀಯ ಶರಣವ್ರಜಮಂ ಷಡಕ್ಷರದೇವನು ತನ್ನ ವಂಶ ಪರಂಪರೆಯನ್ನು ವೀರಶೈವ ಪೂರ್ವಾಚಾರ್ಯರಾದ ರೇಣುಕಾಚಾರ್ಯರಿಂದ ಪ್ರಾರಂಭಿಸಿದ್ದಾನೆ. ತಾನು ರೇಣುಕರ ಗುರುಪರಂಪರೆಯವ ನೆಂದು ಹೇಳಿಕೊಂಡಿದ್ದಾನೆ. ತನ್ನ ಎಲ್ಲ ಕಾವ್ಯಗಳಲ್ಲಿಯೂ ಶಿವಪಾರ್ವತಿ, ಗಣಪತಿ, ಷಣ್ಮುಖ, ವೀರಭದ್ರ ಮುಂತಾದ ದೇವತೆಗಳನ್ನು ಭಕ್ತಿಯಿಂದ ವರ್ಣಿಸಿದ್ದಾನೆ. ಆತನು ದೇವತೆ ಗಳನ್ನು ಸ್ಮರಿಸುವುದರೊಂದಿಗೆ ಪೂರ್ವದ ಶರಣ ಕವಿಗಳನ್ನು ಭಕ್ತಿಯಿಂದ ನೆನೆದಿದ್ದಾನೆ. ಹರಿಹರ ಎಂಬುವನು ಹಿರಿಯ ಕವಿ. ಷಡಕ್ಷರದೇವನು ಹರಿಹರನು ನಡೆದ ಮಾರ್ಗದಲ್ಲಿಯೇ ತಾನೂ ನಡೆಯುವೆನೆಂದು ಹೇಳಿ ಕೊಂಡಿದ್ದಾನೆ. ಈ ಭೂ ಮಂಡಲದಲ್ಲಿ ಇರುವ ಅನೇಕ ರಾಜಮಹಾರಾಜರನ್ನು ಮತ್ತು ಶ್ರೀಮಂತರನ್ನು ಕವಿಗಳಾದವರು ಹೊಗಳಿದರು. ಅವರಿಗೆ ಇಂದ್ರಚಂದ್ರನೆಂದು ಇಲ್ಲಸಲ್ಲದ ವಿಶೇಷಣಗಳನ್ನು ಉಪ ಯೋಗಿಸಿದರು. ಆದರೆ ಅವರೋ ಇತರರಂತೆಯೇ ಹುಟ್ಟು-ಸಾವುಗಳಿಗೆ ಸಿಕ್ಕವರು. ಇಂಥ ವ್ಯಕ್ತಿಗಳ ಮೇಲೆ ಕಾವ್ಯವನ್ನು ಬರೆದು ಅನೇಕ ಕವಿಗಳು ಕೂಡಾ ಕೆಟ್ಟು ಹೋದರು. ಹರಿಹರನು ಹಂಪಿಯ ವಿರೂಪಾಕ್ಷನಿಗೆ ತನ್ನ ನಾಲಗೆ ಯನ್ನು ಮಾರಿಕೊಂಡೆ ಎಂದು ಹೇಳಿದ್ದಾನೆ. ಹಾಗೆಯೆ ಷಡಕ್ಷರ ದೇವನೂ ಶಿವಸ್ತುತಿಗಾಗಿ ತನ್ನನ್ನು ಮಾರಿಕೊಂಡನು. 'ಮಹಿತ ಮಹಿಮಾ ಸ್ವದನಂ ಶಿವನಂ ತದೀಯ ಶರಣವ್ರಜಮಂ ಪದೆದು ಮುದ ಮೊದವೆ ಬಲ್ಲಂ ದದೆ ನುತಿಪೆಂ ನುತಿಸೆನುಳಿದ ಸುರರಂ ನರರಂ' ಎಂದ. 'ಶಿವನನ್ನೂ ಅವನ ಶರಣರನ್ನೂ ನನಗೆ ತಿಳಿದಂತೆ ಸ್ತುತಿಸುತ್ತೇನೆ. ಇತರ ದೇವತೆಗಳನ್ನೂ ಮನುಷ್ಯರನ್ನೂ ಸ್ತುತಿಸು ವುದಿಲ್ಲ' ಎಂದು ಘೋಷಿಸಿದ. 'ಸರಸಜನಮಾನಿಗ', 'ಉಭಯ ಕವಿತಾವಿಶಾರದ', 'ಯೋಗಿಜನಮಂಡಿತ' ಎಂಬ ಬಿರುದುಗಳು ಈತನಿಗೆ ಇದ್ದವು. ಅಲ್ಲದೆ ಈತನಿಗೆ ವೀರಶೈವ ಶಾಸ್ತ್ರಗಳಲ್ಲಿ ಅಪಾರ ಜ್ಞಾನ ವಿದ್ದುದರಿಂದ ಪಂಡಿತರು ಈತನನ್ನು 'ಷಟ್‌ಸ್ಥಲ ಶಾಸ್ತ್ರದರ್ಶನಾಂಕ' ಎಂದು ಕರೆಯುತ್ತಿದ್ದರು. ಪ್ರತಿಭೆ, ಪಾಂಡಿತ್ಯ ಮತ್ತು ಕಲ್ಪನೆ ಈ ಮೂರರ ಮುಪ್ಪರಿಯು ಈತನ ಕಾವ್ಯಗಳಿಂದ ತಿಳಿಯುತ್ತದೆ. ಚಂಪು ಕೃತಿಗಳಾದ 'ರಾಜಶೇಖರ ವಿಳಾಸ', 'ವೃಷಭೇಂದ್ರ ವಿಜಯ' (ಬಸವರಾಜ ವಿಜಯ) ಮತ್ತು 'ಶಬರ ಶಂಕರ ವಿಳಾಸ' ಎಂಬ ಮೂರು ಕಾವ್ಯಗಳನ್ನು ರಚಿಸಿದ್ದಾನೆ. ಸಂಸ್ಕೃತದಲ್ಲಿ 'ಕವಿಕರ್ಣರಸಾಯನ' ಎಂಬ ಕಾವ್ಯವನ್ನೂ ರಚಿಸಿದ್ದಾನೆ. ಅಲ್ಲದೆ ಅನೇಕ ಸಂಸ್ಕೃತ ಲಘು ಕಾವ್ಯಗಳನ್ನು ಬರೆ ದಿದ್ದಾನೆ. ಷಡಕ್ಷರದೇವನು ತನ್ನ ಕಾವ್ಯಗಳಲ್ಲಿ ವರ್ಣನೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದ್ದಾನೆ. ಚಂಪು ಕೃತಿಗೆ ಸೀಮಾಪುರುಷ ನೀತನು. (ಗದ್ಯ, ಪದ್ಯ ಎರಡನ್ನೂ ಬಳಸುವ ಕೃತಿಗೆ 'ಚಂಪು ಕೃತಿ' ಎಂದು ಹೆಸರು.) ಮಹಾಕವಿಗಳಾದ ಪಂಪ, ರನ್ನ, ನಾಗಚಂದ್ರ, ಹರಿಹರ ಈ ಕವಿಗಳ ಸಾಲಿನಲ್ಲಿ ನಿಲ್ಲತಕ್ಕವನು. ಕನ್ನಡ ಚಂಪು ಸಂಪ್ರದಾಯದ ಮಹಾಕವಿಗಳಲ್ಲಿ ಪಂಪನು ಆದಿ, ಷಡಕ್ಷರದೇವನು ಕೊನೆ. ಕವಿಯ ಹೊಣೆ ಪ್ರತಿಭೆಯಲ್ಲದೇ ಕಾವ್ಯದೃಷ್ಟಿ ಸಾಧ್ಯವಿಲ್ಲ. ಕವಿತ್ವ ಕಲಿಸಿದರೆ ಬರುವ ಕಸುಬಲ್ಲ. ಅದು ದೈವದತ್ತವಾದ ಉಡುಗೊರೆ. ಸುಂದರವಾದ ಕಾವ್ಯ ಬರೆಯಲು ದೇವರ ಅನುಗ್ರಹ ಬೇಕು. ಶಾಸ್ತ್ರಗಳನ್ನು ಕಷ್ಟಪಟ್ಟು ಅಭ್ಯಾಸ ಮಾಡಿ ಯಾರಾದರೂ ಚೆನ್ನಾಗಿ ತಿಳಿದುಕೊಳ್ಳಬಹುದು. ಆದರೆ ಕಾವ್ಯವನ್ನು ಪ್ರಯತ್ನ ದಿಂದ ಅಥವಾ ಅಭ್ಯಾಸದಿಂದ ಮಾತ್ರವೇ ರಚಿಸಲು ಸಾಧ್ಯ ವಿಲ್ಲ. ನವಕವಿತೆ ಎಂಬ ಚಿಂತಾರತ್ನವು ಶಿವನ ಕೃಪೆಯಿಲ್ಲದವನಿಗೆ, ಪೂರ್ವಾರ್ಜಿತ ಪುಣ್ಯ ದೊರೆಯ ಲಾರದು ಎನ್ನುತ್ತಾನೆ ಷಡಕ್ಷರದೇವ. ಹೀಗೆಂದರೆ ಇನ್ನೊಂದು ವಿಷಯವನ್ನು ಹೇಳಿದ ಹಾಗಾಯಿತು. ಕಾವ್ಯ ಬರೆಯುವ ಶಕ್ತಿ ಇದ್ದವನು ಅದನ್ನು ಎಚ್ಚರಿಕೆಯಿಂದ, ಸಾರ್ಥಕವಾಗಿ ಬಳಸಬೇಕು. ಹಣಕ್ಕಾಗಿ ಅಥವಾ ಕೀರ್ತಿಗಾಗಿ ಅಥವಾ ಯಾರೋ ರಾಜನನ್ನೋ ಶ್ರೀಮಂತನನ್ನೋ ಸಂತೋಷಪಡಿಸುವುದಕ್ಕೆ ಬಳಸಿ ವ್ಯರ್ಥ ಮಾಡಬಾರದು. ಹಾಗಾದರೆ ಒಳ್ಳೆಯ ಕಾವ್ಯ ಹೇಗಿರಬೇಕು? ಅದನ್ನು ಹೇಳುತ್ತಾನೆ ಷಡಕ್ಷರದೇವ. ಮೊಟ್ಟಮೊದಲು ಕಾವ್ಯ ಮನಸ್ಸಿಗೆ ಸಂತೋಷವನ್ನು ಕೊಡ ಬೇಕು. ತಂಪಾದ ಗಾಳಿಯಂತೆ, ಭ್ರಮರದ ನಿನಾದದಂತೆ, ನಂದನವನದಂತೆ ತನ್ನ ಕಾವ್ಯ ಚಿತ್ತಾಕರ್ಷಕವಾಗಿದೆ ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾನೆ. ಒಳ್ಳೆಯ ಕವಿ ಯಾರು? ಮೋಡಗಳಿಗೆ ಹೆದರಿ ಸೂರ್ಯನು ತನ್ನ ಕಿರಣಗಳನ್ನು ಪಸರಿಸದೆ ಇರುವನೇ? ಹಾಗೆಯೇ ಸತ್ಕವಿಯಾದವನು ಕೆಟ್ಟ ವರಿಗೆ ಹೆದರಿ ಕಾವ್ಯ ರಚಿಸದೇ ಇರುವುದಿಲ್ಲ. ಕಾಗೆಯು ಸಿಹಿಯಾದ ಮಾವಿನಹಣ್ಣನ್ನು ಬಿಟ್ಟು ಬೇವಿನಕಾಯಿಯನ್ನೇ ತಿಂದು ಅದರಲ್ಲಿಯೇ ಸಂತೋಷಪಡುತ್ತದೆ. ಹಾಗೆಯೇ ಕುಕವಿಯಾದವನು ಕಾವ್ಯದಲ್ಲಿರುವ ಒಳಿತನ್ನು ನೋಡದೆ ದೋಷವನ್ನೇ ಹುಡುಕುವನು. ತಪ್ಪುಗಳನ್ನು ಹುಡುಕುವುದ ರಲ್ಲಿಯೇ ಅವನಿಗೆ ಸಂತೋಷ. ಸಜ್ಜನರು ಮಾತ್ರ ಕಾವ್ಯದಲ್ಲಿ ಒಳಿತನ್ನು ಕಾಣುವರು. ದುಂಬಿಗೆ ಪುಷ್ಪದ ಪರಾಗ ಬೇಕು. ಪಕ್ವವಾದ ಹಣ್ಣೆಂದರೆ ಗಿಳಿಗೆ ಪ್ರೀತಿ. ಎಳೆಯ ಚಿಗುರು ಕೋಗಿಲೆಗೆ ಇಷ್ಟ. ಹೀಗೆ ಒಂದೇ ವೃಕ್ಷದ ಪುಷ್ಪ, ಫಲ, ಪಲ್ಲವಗಳಲ್ಲಿ ಒಂದೊಂದು, ಒಂದೊಂದು ಪಕ್ಷಿಗೆ ಪ್ರಿಯವೆನಿಸುತ್ತದೆ. ಹಾಗೆಯೇ ಕಾವ್ಯ ದಲ್ಲಿಯ ಶಬ್ದ, ಅರ್ಥ, ಅಲಂಕಾರ, ರಸ, ಭಾವಗಳಲ್ಲಿ ಒಂದೊಂದನ್ನು ಒಂದೊಂದು ಬಗೆಯ ಜನರು ಅಪೇಕ್ಷಿ ಸುವರು. ಆದ್ದರಿಂದ ನನ್ನ ಕಾವ್ಯದಲ್ಲಿ ಎಲ್ಲವನ್ನೂ ತರಲು ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಾನೆ ಷಡಕ್ಷರದೇವ. 'ರಾಜಶೇಖರ ವಿಳಾಸ'ವು ಷಡಕ್ಷರಿಯು ರಚಿಸಿದ ಮೊದಲನೆಯ ಕಾವ್ಯ. ಪಂಚಾಕ್ಷರಿ ಮಂತ್ರದ ಹಿರಿಮೆಯನ್ನು ಹೇಳುವುದು ಈ ಕಾವ್ಯದ ಉದ್ದೇಶವಾಗಿದೆ. 'ನಮಃ ಶಿವಾಯ' ಎಂಬುದೇ ಪಂಚಾಕ್ಷರಿ ಮಂತ್ರ. ನಮಃ ಶಿವಾಯ ಎಂಬ ಸಂಸ್ಕೃತ ಪದದಲ್ಲಿ ಐದು ಅಕ್ಷರಗಳಿವೆ. ಅಂತೆಯೇ ಅದಕ್ಕೆ ಪಂಚಾಕ್ಷರಿ ಮಂತ್ರವೆಂಬ ಹೆಸರು ಬಂದಿದೆ. 'ಶಿವನಿಗೆ ವಂದಿಸುತ್ತೇನೆ' ಎಂದು ಅದರ ಅರ್ಥ. 'ಓಂ ನಮಃ ಶಿವಾಯ' ಎಂಬ ಪದದಲ್ಲಿ ಆರು ಅಕ್ಷರ ಗಳಿರುವುದರಿಂದ ಅದನ್ನು 'ಷಡಕ್ಷರಿ'ಯೆಂದು ಹೇಳುತ್ತಾರೆ. ಈ ಕವಿಯ ಹೆಸರೂ ಅದೇ. ಷಡಕ್ಷರದೇನವನು 'ರಾಜಶೇಖರ ವಿಳಾಸ'ವನ್ನು ಬರೆದ ದ್ದನ್ನು ಕುರಿತು ಒಂದು ಕಥೆಯನ್ನು ಹೇಳುತ್ತಾರೆ. ನೇಮಿಚಂದ್ರ ಎಂಬುವನು ಒಬ್ಬ ಕವಿ. ಅವನ ಒಂದು ಕೃತಿ 'ಲೀಲಾವತಿ'. ಅದು ಬಹು ಜನಪ್ರಿಯವಾದ ಕಾವ್ಯ. ಎಳಂದೂರಿನಲ್ಲಿ ಒಂದು ದಿನ 'ಲೀಲಾವತಿ' ಗ್ರಂಥ ಮೆರವಣಿಗೆ ನಡೆಯಿತು. ಷಡಕ್ಷರದೇವನು ಇದಕ್ಕಿಂತಲೂ ಹೆಚ್ಚು ರಸಭರಿತವಾದ, ಸರ್ವಮಾನ್ಯವಾದ ಕಾವ್ಯ ಬರೆಯು ವುದಾಗಿ ಹೇಳಿದನು. ಈ ವಿಷಯ ನಿರ್ಣಯ ಆಗುವವರೆಗೆ ಮೆರವಣಿಗೆ ನಿಲ್ಲಿಸಲು ತಿಳಿಸಿದನು. ಅನಂತರ ಒಂದು ವರ್ಷ ದೊಳಗಾಗಿ 'ರಾಜಶೇಖರ ವಿಳಾಸ' ಎಂಬ ಮಹಾಕಾವ್ಯವನ್ನು ರಚಿಸಿದನು. ಪಂಡಿತರಿಂದ 'ಲೀಲಾವತಿ' ಗ್ರಂಥಕ್ಕಿಂತಲೂ ಹೆಚ್ಚು ರಸಭರಿತವಾಗಿದೆ ಎಂದು ಪ್ರಶಂಸೆ ಪಡೆದನು. ಕೊನೆಗೆ ಈ ಗ್ರಂಥದ ಮೆರವಣಿಗೆ ನಡೆಯಿತು. ರಾಜಶೇಖರ ವಿಳಾಸದ ಕಥೆ ತಮಿಳು ನಾಡಿನಲ್ಲಿ ಧರ್ಮವತಿ ಎಂಬ ಊರು. ಅಲ್ಲಿ ಸತ್ಯೇಂದ್ರಚೋಳ ಭೂಪಾಲನೆಂಬ ರಾಜನು ಆಳುತ್ತಿದ್ದನು. ಆತನು ಕಟ್ಟುನಿಟ್ಟಾಗಿ ನ್ಯಾಯದಿಂದಲೇ ನಡೆಯುವವನು. ಅವನ ಹೆಂಡತಿ ಅಮೃತಮತಿ, ಶಿವಭಕ್ತ ಶ್ರೇಷ್ಠನಾದ ರಾಜಶೇಖರ ರಾಜನ ಮಗ. ಮಂತ್ರಿಯ ಮಗ ಮಿತವಚನನು ರಾಜಶೇಖರನಿಗೆ ಆತ್ಮೀಯ ಮಿತ್ರ. ಒಂದು ದಿನ ಸಾಮಂತರಾಜರು ಎರಡು ಪಳಗದ ಕುದುರೆ ಗಳನ್ನು ತಂದುಕೊಟ್ಟರು. ಕುದುರೆಗಳನ್ನು ನೋಡಿ ರಾಜ ಶೇಖರನಿಗೆ ಅವನ್ನು ಹತ್ತಿ ಸವಾರಿ ಮಾಡಬೇಕು, ವಿಹಾರಕ್ಕೆ ಹೋಗಬೇಕು ಎನ್ನಿಸಿತು. ಮಿತವಚನನನ್ನು ತನ್ನ ಜೊತೆಗೆ ಕರೆದ. ಮಿತವಚನನು, "ಈ ಕುದುರೆಗಳು ಪಳಗಿಲ್ಲ. ಇವನ್ನು ಹತ್ತಿಕೊಂಡು ಜನ ತುಂಬಿದ ಊರಿನಲ್ಲಿ ಹೋಗುವುದು ವಿವೇಕವಲ್ಲ. ಅನಾಹುತವಾಗಬಹುದು. ಯಾರಿಗಾದರೂ ಕೆಡುಕಾದರೆ ಸತ್ಯೇಂದ್ರಚೋಳ ಮಹಾರಾಜನು ಕೆಡಕು ಮಾಡಿದ ವರಿಗೆ ಶಿಕ್ಷೆ ಮಾಡುತ್ತಾನೆ. ಅವನಿಗೆ ಪ್ರಜೆಗಳೆಂದರೆ ಬಹಳ ಆದರ" ಎಂದು ಎಚ್ಚರಿಸಿದ. ಆದರೆ ರಾಜಕುಮಾರ ಕೇಳಲಿಲ್ಲ., ಚರ್ಚೆ ನಡೆಯಿತು. ಕಡೆಗೆ ರಾಜಶೇಖರನು ಮಿತವಚನನಿಗೆ, "ಇದರ ಹೊಣೆಯೆಲ್ಲ ನನ್ನದು. ಏನಾದರೂ ಕೆಟ್ಟದಾದರೆ ನಾನೇ ಹೊಣೆ ಹೊರುತ್ತೇನೆ. ಹೋಗೋಣ ಬಾ" ಎಂದ. ಮಿತವಚನನೂ ಎಷ್ಟೋ ವಾದಿಸುತ್ತಾನೆ! 'ದೇವರ ಇಚ್ಛೆ ಯಂತಾಗಲಿ' ಎಂದು ಸ್ನೇಹಿತನೊಡನೆ ಹೊರಡಲು ಒಪ್ಪಿದ. ಇಬ್ಬರೂ ಹೊರಟರು. ಈ ಊರಿನಲ್ಲಿ ತಿರುಕೊಳವಿನಾಚಿ ಎಂಬವಳೊಬ್ಬಳು ಶಿವಭಕ್ತೆ. ಅವಳ ಮಗ ಶಂಕರ. ಸ್ನೇಹಿತರು ಬರುವಾಗ ಮಿತ ವಚನನ ಕುದುರೆಯ ಕಾಲಿಗೆ ಸಿಕ್ಕಿ ಶಂಕರನು ಸತ್ತಹೋದ! ಹುಡುಗನ ತಲೆ ಕತ್ತರಿಸಿ ಬಿತ್ತು. 'ಶಿವಶಿವಾ, ಶಿವಭಕ್ತೆಯ ಮಗ ಸತ್ತ' ಎಂದು ಜನ ಸೇರಿದರು. ತಾಯಿಯೂ ಓಡಿ ಬಂದಳು. ಕಲ್ಲು ಕರಗುವಂತೆ ಅತ್ತಳು. "ಅರಗಿಳಿಯ ಕತ್ತು ಮುರಿದಂತೆ ನನ್ನ ಮುದ್ದುಮಗನ ತಲೆಯನ್ನು ಕತ್ತರಿಸಿದವರು ಯಾರು?" ಎಂದು ಜನರನ್ನು ಕೇಳಿದಳು. ಸಂಗತಿ ತಿಳಿಯಿತು. ತನ್ನ ಮಗನ ರುಂಡ-ಮುಂಡಗಳನ್ನು ಉಡಿಯಲ್ಲಿ ಇಟ್ಟುಕೊಂಡು ಅರಮನೆಗೆ ಬಂದಳು. ರಾಜನಲ್ಲಿ ಮೊರೆ ಇಟ್ಟಳು. ರಾಜನಿಗೆ ಪ್ರಜೆಗಳಲ್ಲಿ ತುಂಬಾ ಪ್ರೀತಿ. ಅಲ್ಲದೆ ಅವನು ಶಿವಭಕ್ತ. ಶಿವಭಕ್ತರಿಗೆ ಕೆಡಕು ಮಾಡುವುದು ಶಿವನಿಗೆ ದ್ರೋಹ ಮಾಡುವುದಕ್ಕಿಂತ ದೊಡ್ಡ ಅಪರಾಧ ಎಂದು ಅವನು ನಂಬಿ ದವನು. ತಿರುಕೊಳವಿನಾಚಿಯ ದುಃಖವನ್ನು ಕಂಡು ಅವನು ತಳಮಳಿಸಿದ. 'ಯಾರು ಈ ಹುಡುಗನನ್ನು ಕೊಂದರೋ ಅವರಿಗೂ ಮರಣದಂಡನೆಯಾಗಬೇಕು' ಎಂದು ನಿರ್ಧರಿಸಿದ. ಸರಿ, ರಾಜಶೇಖರ ಮತ್ತು ಮಿತವಚನರ ವಿಚಾರಣೆ ಆಯಿತು. "ಹುಡುಗ ನನ್ನ ಕುದುರೆಯ ಕಾಲಿಗೆ ಸಿಕ್ಕಿ ಸತ್ತ. ಅವನ ಸಾವಿಗೆ ನಾನೇ ಕಾರಣ" ಎಂದ ಮಿತವಚನ. "ಹೋಗುವುದು ಬೇಡ ಎಂದು ಅವನು ಹೇಳಿದ. ಇದರಿಂದ ಏನಾದರೂ ಅನಾಹುತವಾದರೆ ಹೊಣೆ ನನ್ನದು ಎಂದು ನಾನು ಹೇಳಿದೆ. ಹೊಣೆ ನನ್ನದು" ಎಂದು ರಾಜಶೇಖರ ಹೇಳಿದ. ರಾಜನು ಇಬ್ಬರ ಮಾತನ್ನೂ ಕೇಳಿದ. ತನ್ನ ಮಗ ರಾಜಶೇಖರನೇ ಅಪರಾಧಿ ಎಂದು ತೀರ್ಮಾನಿಸಿದ. ರಾಜಶೇಖರನನ್ನು ಕೊಂದು ಅವನ ತಲೆಯನ್ನು ಶಂಕರನ ತಲೆಗೆ ಪ್ರತಿಯಾಗಿ ಒಪ್ಪಿಸಬೇಕೆಂದು ಮಂತ್ರಿಗೆ ರಾಜ ಆಜ್ಞೆ ಮಾಡಿದ. ಮಂತ್ರಿಗೆ ಈಗ ಕಷ್ಟವಾಯಿತು. ರಾಜಪುತ್ರನನ್ನು ಕೊಲ್ಲಲಾರ, ರಾಜಾಜ್ಞೆಯನ್ನು ಮೀರಲಾರ. ಕಡೆಗೆ ಮಂತ್ರಿಯು ತಾನೇ ತಲೆಯನ್ನು ಕತ್ತರಿಸಿಕೊಂಡ. ದೊರೆ ಸಂದಾಯಿ ಎಂಬ ಸೇವಕನಿಗೆ "ರಾಜಶೇಖರನ ತಲೆಯನ್ನು ಕತ್ತರಿಸು" ಎಂದು ಅಪ್ಪಣೆ ಮಾಡಿದ. ತಾನು ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಿದ್ದರೆ ಸಂದಾಯಿ ತನ್ನನ್ನು ಕೊಲ್ಲಲಾರ ಎಂದು ತಿಳಿದ ರಾಜಶೇಖರ, ಮಂತ್ರವನ್ನು ಜಪಿಸುತ್ತ ತನ್ನ ತಲೆಯನ್ನು ಕತ್ತರಿಸಿಕೊಂಡ. ಸಂದಾಯಿಯೂ ಹಾಗೆಯೇ ಪ್ರಾಣ ಬಿಟ್ಟ. ತನ್ನ ಮಗನ ತಲೆಗೆ ಬದಲು ಎರಡು ತಲೆಗಳನ್ನು ಕೊಟ್ಟ ರಾಜನ ನಿಷ್ಠೆಗೆ ತಲೆಬಾಗಿ ತಿರುಕೊಳ ವಿನಾಚಿಯು ತಲೆ ಕತ್ತರಿಸಿಕೊಂಡಳು. ಹೀಗೆಯೇ ಕಥೆ ಮುಂದುವರಿಯುತ್ತದೆ. ದುಃಖದಿಂದ ಅನೇಕರು ಸಾಯುತ್ತಾರೆ. ರಾಜನೂ ಸಾಯುತ್ತಾನೆ. ಕಡೆಗೆ ಈಶ್ವರನು ಪ್ರತ್ಯಕ್ಷನಾಗಿ, ಮಹಾರಾಣಿ ಅಮೃತ ಮತಿಗೆ, "ಒಂದು ವರವನ್ನು ಕೇಳು, ಕೊಡುತ್ತೇನೆ" ಎಂದ. ಗಂಡನೂ ಸತ್ತುಬಿದ್ದಿದ್ದಾನೆ, ಮಗನೂ ಸತ್ತು ಬಿದ್ದಿದ್ದಾನೆ. 'ಒಂದು ವರವನ್ನು ಕೇಳು' ಎನ್ನುತ್ತಾನೆ ಈಶ್ವರ. ಅಮೃತಮತಿ ವರವನ್ನು ಕೇಳಿದಳು: "ತಿರುಕೊಳ ವಿನಾಚಿಯ ಮಗ ಶಂಕರ ಬದುಕಲಿ!" ಕವಿ ಷಡಕ್ಷರದೇವ ಅವಳ ಔದಾರ್ಯಕ್ಕೆ ಶಿವನೂ ತಲೆದೂಗಿದ. "ಇನ್ನೊಂದು ವರವನ್ನು ಬೇಡು" ಎಂದ. "ತಿರುಕೊಳವಿನಾಚಿ ಬದುಕಲಿ" ಎಂದು ಬೇಡಿದಳು ಅಮೃತಮತಿ. ಗಂಡನನ್ನು ಬದುಕಿಸಿಕೊಳ್ಳಲಿಲ್ಲ. ಮಗನನ್ನು ಬದುಕಿಸಿ ಕೊಳ್ಳಲಿಲ್ಲ, ಬಡ ಶಿವಭಕ್ತೆ-ಅವಳ ಮಗನನ್ನು ಬದುಕಿಸಿ ಕೊಂಡಳು ಅಮೃತಮತಿ. ಅವಳ ಬುದ್ಧಿ ನಿಜವಾಗಿ ಅಮೃತವೇ. ಈಶ್ವರನು ಅವಳ ನಿರ್ಮಲ ಮನಸ್ಸನ್ನು ಮೆಚ್ಚಿ ಎಲ್ಲರನ್ನೂ ಬದುಕಿಸಿದ. ಎಲ್ಲರನ್ನೂ ಕೈಲಾಸಕ್ಕೆ ಕರೆದೊಯ್ದ. ಇದು 'ರಾಜಶೇಖರ ವಿಳಾಸ'ದ ಕಥೆ. ತಿರುಕೊಳವಿನಾಚಿಯ ದುಃಖ 'ಶಿವನಂ ತದೀಯ ಶರಣ ವ್ರಜಮಂ' ಸ್ತುತಿಸುವುದು ತನ್ನ ಉದ್ದೇಶ ಎಂದು ಹೇಳಿದ ಕವಿ, ಈ ಕಾವ್ಯದಲ್ಲಿ ಶಿವಭಕ್ತಿಯ ಹಿರಿಮೆಯನ್ನು ಸಾರಿದ್ದಾನೆ. ಪಂಚಾಕ್ಷರಿ ಮಂತ್ರದ ಶಕ್ತಿಯನ್ನು ಸಾರಿದ್ದಾನೆ. ಇಷ್ಟೇ ಅಲ್ಲ. ಕಥೆಯನ್ನು ಹೇಳುವಾಗ ಸಂತೋಷ-ದುಃಖ ಗಳನ್ನು ಸಹಜವಾಗಿ ನಿರೂಪಿಸುತ್ತಾನೆ. ಅವರ ಸುಖದುಃಖ ನಮ್ಮವು ಎನ್ನಿಸುವಂತೆ ಮಾಡುತ್ತಾನೆ. ಇದಕ್ಕೆ ಒಂದು ಉದಾಹರಣೆ ಶಂಕರನ ಸಾವಿನಿಂದ ತಿರುಕೊಳವಿನಾಚಿಯ ದುಃಖದ ನಿರೂಪಣೆ. ಐದು ವರ್ಷದ ಬಾಲಕ ಶಂಕರನು ಜನಸಂದಣಿಯಲ್ಲಿ ಸಿಕ್ಕಿಕೊಂಡು ದಾರಿಕಾಣದೇ ತೊಳಲುತ್ತಿರುತ್ತಾನೆ. ಅಷ್ಟರಲ್ಲಿಯೇ ಕುದುರೆಗಳು ವಾಯವೇಗದಿಂದ ಧಾವಿಸಿ ಬರುತ್ತವೆ. ರಾಜ ಶೇಖರನ ಕುದುರೆಯಿಂದ ಪಾರಾದ ಮಗು ಮಿತವಚನನ ಕುದುರೆಯ ಕಾಲಿಗೆ ಸಿಕ್ಕು ತಲೆಯು ಕತ್ತರಿಸಿ ಬೀಳುವುದು. ರಕ್ತ ಧಾರೆಯಾಗಿ ಹರಿಯಹತ್ತಿತು. ಅತ್ತ ನೀರಿಗೆ ಹೋಗಿ ಮನೆಗೆ ಬಂದ ತಾಯಿಯು ಶಂಕರನನ್ನು ಕಾಣದೆ ಗಾಬರಿಗೊಂಡಳು. ಅವನನ್ನು ಹುಡುಕುವುದಕ್ಕಾಗಿ ಬೀದಿಗೆ ಬಂದಳು. ಆನೆಯ ಕಾಲಿಗೆ ಸಿಕ್ಕನೋ ರಥದ ಗಾಲಿಗೆ ಸಿಕ್ಕನೋ ಇಲ್ಲವೆ ಕುದುರೆಯ ಕಾಲಿಗೆ ಸಿಕ್ಕನೋ ಎಂದು ಬಾಯಿಬಿಡುತ್ತಿರುವಾಗಲೇ ಮಗನು ಸತ್ತ ಸುದ್ದಿಯನ್ನು ಕೇಳಿ ಒಮ್ಮೆಲೆ ಆಕಾಶವೇ ಕಳಚಿ ಬಿದ್ದಂತಾಯಿತು. 'ಎಳೆ ಗಿಳಿಯ ಕೊರಳನ್ನು ಯಾರು ಮುರಿದರು? ಮರಿ ಹಂಸದ ರೆಕ್ಕೆಯನ್ನು ಯಾರು ಮುರಿದರು?' ಎಂದು ಪರಿಪರಿ ಯಾಗಿ ದುಃಖಿಸಿದಳು. ತನ್ನ ಮಗ ಚಿರ ಆಯುಷಿ ಆಗುತ್ತಾನೆ, ಅಷ್ಟೈಶ್ವಯ ಉಳ್ಳವನಾಗುತ್ತಾನೆ ಎಂದು ತಿಳಿದಿದ್ದಳು. ಆದರೇನು! 'ತಿಳಿವಿಲ್ಲದೇ ಮಗನೇ ತುರಗ ಹತಿಯಿಂ ಮಡಿದೈ!' ಎಂದು ತನ್ನ ಆಸೆಯು ಮಣ್ಣುಗೂಡಿದುದನ್ನು ನೆನೆದು ಕೊಳ್ಳುತ್ತಾಳೆ. 'ಕುದುರೆಯ ಕಾಲಿಗೆ ಸಿಕ್ಕಾಗ ಅಮ್ಮಾ ಎಂದು ಕರೆದೆಯಾ' ಎಂದು ಕೇಳುತ್ತಾಳೆ. ತಿರುಕೊಳವಿನಾಚಿಯು ತನ್ನ ಎಳೆಯ ಮಗನ ದೇಹವನ್ನು ಎತ್ತಿಕೊಂಡು ಅಪ್ಪಿ ಅಲ್ಲಿಂದ ಎದ್ದು ತನ್ನ ಮನೆಗೆ ಬಂದಳು. ರುಂಡ-ಮುಂಡವನ್ನು ಕೂಡಿಸಿ, "ಓರಗೆಯ ಮಕ್ಕಳು ಶಂಕರ ನೆಲ್ಲಿ ಎಂದು ಬಂದು ಕೇಳಿದರೆ ಅರಸನ ಕುದುರೆಯಿಂದ ಮಡಿದನೆಂದು ಹೇಳಲೇ? ನಿನ್ನನ್ನು ನೋಡುವ ಕಣ್ಣು ಒಡೆದಿದೆ. ನಿನ್ನ ಜೊತೆ ಮಾತನಾಡುವ ನಾಲಗೆಯು ಮುದುಡಿದೆ. ನಿನ್ನನ್ನು ಎತ್ತಿ ಆಡಿಸುವ ನನ್ನ ಕೈಗಳು ನಿಸ್ಸತ್ವವಾಗಿವೆ. ನಿನ್ನ ಗುಣಗಾನ ಮಾಡುವ ನನ್ನ ಬಾಯಿಯು ಬೆಂದುಹೋಗಿದೆ" ಎಂದು ಮಗನು ಆಡಿದ ಸ್ಥಾನವನ್ನು ಆತನು ಮಲಗಿದ ಹಾಸಿಗೆ ಯನ್ನು, ಉಂಡ ತಾಣವನ್ನು ಇನ್ನೆಂತು ನೋಡಲಿ ಎಂದು ನುಡಿವಲ್ಲಿ ಕವಿಯು ತಾಯಿಯ ಕರುಳನ್ನೇ ಎತ್ತಿ ಕಾವ್ಯ ದಲ್ಲಿಟ್ಟಂತಿದೆ. ಹಿರಿಮೆಯ ಚಿತ್ರ ಮನುಷ್ಯರು ಎಷ್ಟು ಎತ್ತರ ಏರಬಹುದು, ಎಂತಹ ಘನತೆ ಯನ್ನು ಪಡೆಯಬಹುದು ಎಂಬುದನ್ನು ಈ ಕಾವ್ಯದಲ್ಲಿ ಷಡಕ್ಷರದೇವ ಚಿತ್ರಿಸಿದ್ದಾನೆ. ರಾಜನಿಗೆ ಒಬ್ಬನೇ ಮಗ; ಬಹು ದಿನಗಳು ಮಕ್ಕಳಿಲ್ಲದೆ, ದುಃಖಿಸಿ, ಗುರು ಕೃಪೆಯಿಂದ ಪಡೆದ ಮಗ. ಆದರೂ ರಾಜ, ಶಿವಭಕ್ತೆಯ ಮಗನ ಮರಣಕ್ಕೆ ಕಾರಣನಾದ ಎಂದು ಅವನಿಗೆ ಮರಣದಂಡನೆ ವಿಧಿಸುತ್ತಾನೆ. ಎಂತಹ ನ್ಯಾಯನಿಷ್ಠೆ! ಅಧಿಕಾರದಲ್ಲಿರುವವರಿಗೆ ಮಾದರಿ ಇವನು. ರಾಜ ಒಂದು ರೀತಿಯಲ್ಲಿ ದೊಡ್ಡವನೆನಿಸಿದರೆ ರಾಣಿ ಮತ್ತೊಂದು ರೀತಿಯಲ್ಲಿ ದೊಡ್ಡವಳೆನಿಸುತ್ತಾಳೆ, ಗಂಡನೂ ಮಗನೂ ಸತ್ತಿರುವಾಗ ಶಿವನೇ ಪ್ರತ್ಯಕ್ಷನಾಗಿ 'ವರಗಳನ್ನು ಬೇಡು' ಎಂದರೆ, ತಿರುಕೊಳವಿನಾಚಿಯನ್ನೂ ಅವಳ ಮಗ ನನ್ನೂ ಬದುಕಿಸುವಂತೆ ಪ್ರಾರ್ಥಿಸುತ್ತಾಳೆ. ಇವರಲ್ಲದೆ, ಅಪ ರಾಧ ಎನ್ನದು ಎಂದು ಧೈರ್ಯದಿಂದ ಸತ್ಯವಚನವನ್ನು ನುಡಿದು ತಾನೇ ಶಿಕ್ಷೆಯನ್ನು ಅನುಭವಿಸಲು ಮುಂದಾಗುವ ರಾಜಶೇಖರ, ರಾಜಾಜ್ಞೆಯನ್ನು ಪಾಲಿಸಲು ಹೋಗಿ ಒಬ್ಬ ಶಿವ ಶರಣನಾದ ಯುವರಾಜನನ್ನು ಕೊಲ್ಲುವುದು ಹೇಗೆ ಎಂದು ತೊಳಲಾಟದಲ್ಲಿ ಬಿದ್ದು ಕೊನೆಯಲ್ಲಿ ತಾನೇ ಮರಣವನ್ನಪ್ಪಿದ ಮಂತ್ರಿ, ರಾಜಾಜ್ಞೆಯನ್ನು ಪಾಲಿಸಿ ಸೇವಕನಿಷ್ಠೆಯನ್ನು ತೋರಿಸಿ ಕೊನೆಗೆ ತಾನು ಹತನಾದ ಸಂದಾಯಿ, ಸೇವಕನಿಷ್ಠೆಗೆ ಪ್ರತಿ ನಿಷ್ಠೆಯನ್ನು ತೋರಿಸಿದ ತಿರುಕೊಳವಿನಾಚಿ ಎಲ್ಲರೂ ಒಂದೊಂದು ತತ್ವಕ್ಕಾಗಿ ಪ್ರಾಣಾರ್ಪಣೆಯನ್ನು ಮಾಡಿದ ಆದರ್ಶ ಜೀವಿಗಳು. ಇವರೆಲ್ಲ ತಮಗಿಂತ ದೊಡ್ಡದಾದ ತತ್ವ ಕ್ಕಾಗಿ, ಆದರ್ಶಕ್ಕಾಗಿ ಬದುಕುವವರು, ಪ್ರಾಣವನ್ನೇ ಕೊಡಲು ಸಿದ್ಧರಾದವರು. ಈ ಕಾವ್ಯದಲ್ಲಿ ಮಾನವ ಸ್ವಭಾವದ ಸಹಜತೆ ಇದೆ. ರಸಿಕತೆಯ ಮಡುವಿದೆ. ವರ್ಣನೆಗಳ ಸೊಗಸಿದೆ. ಈ ಕಾವ್ಯದ ಶೃಂಗಾರ ಹಾಗೂ ಕರುಣರಸಗಳಂತೂ ಕನ್ನಡ ಸಾಹಿತ್ಯ ಪ್ರಪಂಚದಲ್ಲಿಯೇ ಹೆಸರು ಪಡೆದಿದೆ. ಈ ಕಾವ್ಯದಲ್ಲಿ ಬರುವ ವ್ಯಕ್ತಿಗಳು ಸತ್ಯನಿಷ್ಠೆ, ಶಿವಭಕ್ತಿಗಳಿಂದ ಕೂಡಿದ ಶ್ರೇಷ್ಠ ಮಾನವ ರಾಗಿದ್ದಾರೆ. ಕಾವ್ಯವು ವೀರಶೈವ ಧರ್ಮದ ಬೆಳಕನ್ನು ನೀಡು ತ್ತಿದ್ದರೂ ಆ ಬೆಳಕಿನಲ್ಲಿ ಎಲ್ಲರಿಗೂ ಜ್ಞಾನೋದಯವಾಗುವಂತೆ ಕವಿಯು ಹೇಳಿದ್ದಾನೆ. 'ಬಸವರಾಜ ವಿಜಯ' ಈ ಕವಿಯ ಇನ್ನೊಂದು ಕೃತಿ. ೪೨ ಆಶ್ವಾಸಗಳಿವೆ. ಈ ಕಾವ್ಯದಲ್ಲಿ ಒಟ್ಟು ಮೂರುಸಾವಿರದ ನಾಲ್ಕು ನೂರ ಐವತ್ತೈದು ಪದ್ಯಗಳಿವೆ. ಅಲ್ಲಲ್ಲಿ ಗದ್ಯಭಾಗವೂ ಇದೆ. ಭಕ್ತಿರಸ ಪ್ರಧಾನವಾದ ಕಾವ್ಯವಿದು. ಈ ಕಾವ್ಯದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರ ಚರಿತ್ರೆ ಹಾಗೂ ಅವರ ಪವಾಡ ಗಳನ್ನು ಹೇಳಲಾಗಿದೆ. ತಮಿಳುನಾಡಿನ ೬೩ ಪುರಾತನ ಚರಿತ್ರೆ ಇದೆ. ಕಾಶ್ಮೀರದ ಮೋಳಿಗೆಯ ಮಾರಯ್ಯ, ಗುಜರಾತಿನ ಓಹಿಲಯ್ಯ, ಆಂಧ್ರದ ಉರಿಲಿಂಗಪೆದ್ದಿ, ಕರ್ನಾಟಕದ ಶರಣಶ್ರೇಷ್ಠರಾದ ದೇವರ ದಾಸಿಮಯ್ಯ, ಏಕಾಂತ ರಾಮಯ್ಯ, ಶಂಕರ ದಾಸಿಮಯ್ಯ, ಕಿನ್ನರಿ ಬ್ರಹ್ಮಯ್ಯ, ಮಡಿವಾಳ ಮಾಚಯ್ಯ ಮತ್ತು ಅಕ್ಕಮಹಾದೇವಿ ಮೊದಲಾದವರ ಕಥೆಗಳು ಇವೆ. ವೀರಶೈವಧರ್ಮ ತತ್ವಗಳ ನಿರೂಪಣೆಯೂ ಅಲ್ಲಲ್ಲಿ ಬಂದಿದೆ. ಸಾಹಿತ್ಯ ಮತ್ತು ಧರ್ಮ ಅದರಲ್ಲಿ ಅಡಕವಾಗಿವೆ. ಈ ಕಾವ್ಯ ಬಸವಣ್ಣನವರ ಜೀವನದ ಕಥೆ ಮಾತ್ರವಲ್ಲ. ಅವರ ಭಕ್ತಿಯ ಭವ್ಯ ಚಿತ್ರವಿದೆ. ಬಸವಣ್ಣನವರು ಮಾದರಸ-ಮಾದಲಾಂಬಿಕೆ ಎಂಬ ಶಿವಭಕ್ತರ ಮಗ. ತಂದೆತಾಯಿ ಸಂಪ್ರದಾಯದಂತೆ ಉಪನಯನ ಮಾಡಲು ನಿರ್ಧರಿಸಿದಾಗ ಒಪ್ಪಲಿಲ್ಲ. ಮುಂದೆ ಅವರು ಅಕ್ಕ ನಾಗಲಾಂಬಿಕೆಯ ಜೊತೆ ಕೂಡಲಸಂಗಮಕ್ಕೆ ಬಂದರು. ಕಲ್ಯಾಣದಲ್ಲಿ ಬಿಜ್ಜಳ ಎಂಬ ರಾಜ. ಅವನ ಮಂತ್ರಿ ಬಲದೇವನು ನಿಷ್ಠ ಶಿವಭಕ್ತ. ಅವನ ಮಗಳು ಗಂಗಾಂಬಿಕೆಯನ್ನು ಕೊಟ್ಟು ಬಸವಣ್ಣವನವರಿಗೆ ಮದುವೆಯಾಯಿತು. ಬಲದೇವನು ತೀರಿಕೊಂಡನಂತರ ಬಿಜ್ಜಳನ ಕೋರಿಕೆಯಂತೆ ಬಸವಣ್ಣನವರು ಮಂತ್ರಿಯಾದರು. ಬಸವೇಶ್ವರರು ಮಂತ್ರಿಯಾಗಿ ಪ್ರಜಾರಕ್ಷಣೆ ಮಾಡುವುದರ ಜೊತೆಗೆ ಭಕ್ತರಗಾಗಿ ಧರ್ಮರಕ್ಷಣೆಯ ಕಾರ್ಯವನ್ನೂ ಕೈಗೊಂಡರು. ಶಿವನನ್ನೂ ಶಿವಶರಣರನ್ನೂ ಪೂಜಿಸಿದರು. ನುಡಿದಂತೆ ನಡೆದರು. ವೈರಾಗ್ಯಮೂರ್ತಿ ಅಲ್ಲಮಪ್ರಭು ಭಕ್ತರ ಉದ್ಧಾರ ಮಾಡುತ್ತ ಕಲ್ಯಾಣಕ್ಕೆ ಬರುವರು. ನಿತ್ಯವೂ ಸಾವಿರಾರು ಜಂಗಮರಿಗೆ ಪ್ರಸಾದವು ಸಲ್ಲುತ್ತಿತ್ತು. ಪ್ರಭುವಿಗೆ ನಮಸ್ಕರಿಸಿ ಬವಣ್ಣನವರು ಪ್ರಸಾದ ಸ್ವೀಕರಿಸಲು ವಿನಂತಿಸಿಕೊಂಡರು. ಎಲ್ಲರಿಗೂ ತಯಾರಿಸಿದ ಪ್ರಸಾದವು ಪ್ರಭುದೇವರೊಬ್ಬರಿಗೆ ಸಾಲದಾದಾಗ ಬಸವಣ್ಣನವರು ತಮ್ಮನ್ನೇ ಅರ್ಪಿಸಲು ಸಿದ್ಧರಾದರು. ಆಗ ಪ್ರಭು ಈತನ ಭಕ್ತಿಗೆ ಮೆಚ್ಚಿ ಆಶೀರ್ವದಿಸಿದರು. ಹರಳಯ್ಯ, ಮಧುವಯ್ಯರೆಂಬ ಶಿವಭಕ್ತರು ಬಸವಣ್ಣನವರ ಅನುಮತಿ ಯನ್ನು ಪಡೆದು ಶರೀರಸಂಬಂಧವನ್ನು ಬೆಳೆಸಿದರು. ಇದೇ ಸಮಯವನ್ನು ಸಾಧಿಸಿ ಕೆಲವು ದುಷ್ಟರು ಬಿಜ್ಜಳನ ಎದುರಿಗೆ ಚಾಡಿ ಹೇಳುವರು. ಅವರಿಗೆ ದಿನದಿನಕ್ಕೆ ಹಬ್ಬುತ್ತಿರುವ ಬಸವಣ್ಣನವರ ಕೀರ್ತಿಯನ್ನು ಸಹಿಸಲಾಗಲಿಲ್ಲ. ಚಾಡಿಯ ಮಾತಿಗೆ ಮರುಳಾದ ಬಿಜ್ಜಳನು ಹರಳಯ್ಯ, ಮಧುವಯ್ಯರ ಕಣ್ಣು ಕೀಳಿಸಿದ. ಇದು ಶಿವದ್ರೋಹವಾಯಿತೆಂದು ಬಸವಣ್ಣ ಕೆಲವು ಶರಣರಿಂದೊಡಗೂಡಿ ಕಲ್ಯಾಣ ಬಿಟ್ಟು ಕೂಡಲ ಸಂಗಮನಾಥನ ಬಳಿಗೆ ಬಂದರು. ಅಲ್ಲಿ 'ಬೆಳಗಿನೊಳು ಬೆಳಗು ಬೆರೆದಂತೆ' ಬಸವಣ್ಣ ಸಂಗಮೇಶ್ವರನಲ್ಲಿ ಐಕ್ಯವಾದರು. ನಿತ್ಯ ಸುಖದ ಮಾರ್ಗ 'ಬಸವರಾಜ ವಿಜಯ'ವು ಒಂದು ಕಥಾಗುಚ್ಛ. ಅನೇಕ ಮಂದಿ ಶಿವಶರಣರ ಮತ್ತು ಶರಣೆಯರ ಕಥೆಗಳು ಈ ಕಾವ್ಯದಲ್ಲಿ ಸೇರಿವೆ. ಕೋಳೂರು ಕೊಡಗೂಸಿನ ಕಥೆ ಬರುವುದು ಈ ಕಾವ್ಯದಲ್ಲೇ. ಬಿಜ್ಜಮಹಾದೇವಿ ಇನ್ನೊಬ್ಬ ಮುಗ್ಧ ಶರಣೆ. ಅವಳು ಪುರಾಣದಲ್ಲಿ ಶಿವನ ವಿಷಯ ಕೇಳು ತ್ತಾಳೆ. ಅವನಿಗೆ ತಾಯಿ ಇಲ್ಲ ಎಂದು ಕೇಳಿ, ಅವನನ್ನು ಆರೈಕೆ ಮಾಡುವವರು ಯಾರೂ ಇಲ್ಲ ಎಂದು ಮರಗುತ್ತಾಳೆ. ತಾನೇ ಶಿವನಿಗೆ ತಾಯಿಯಾಗಬೇಕೆಂದು ಸಂಕಲ್ಪ ಮಾಡುತ್ತಾಳೆ. ಅನನ್ಯ ಭಕ್ತಿಯಿಂದ ಭಜಿಸಿ ಶಿವನನ್ನು ಪ್ರತ್ಯಕ್ಷ ಮಾಡಿಕೊಳ್ಳುತ್ತಾಳೆ. ಶಿವಶಿಶುವನ್ನು ತೊಟ್ಟಿಲಲ್ಲಿ ಇಟ್ಟು ತೂಗಿದ ಮಹಾಮಾತೆ ಇವಳು. ಶಿರಿಯಾಳ ಎಂಬ ಉಗ್ರ ಶಿವಭಕ್ತನ ಕಥೆಯೂ ಈ ಕಾವ್ಯದಲ್ಲಿ ಬರುತ್ತದೆ. ಷಡಕ್ಷರದೇವನ ಕಥನಕಲೆ ಅತ್ಯಂತ ಪ್ರಶಂಸನೀಯ ಈ ಕಾವ್ಯವು ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನ ಧಾರ್ಮಿಕ, ಸಾಮಾಜಿಕ ಕ್ರಾಂತಿಕಾರಕ ಶರಣರ ಕಥೆಗಳಂತೆ ಕೂಡಿದೆ. ಈ ಕಾವ್ಯ ಬರೆಯುವಾಗ ಕವಿಯ ಮನಸ್ಸು ಪರಿಪಕ್ವ ಹೊಂದಿರುವುದು. ಆದ್ದರಿಂದ ಕಾವ್ಯಸಿದ್ಧಿ ಯನ್ನು ಪಡೆದಿದೆ. ಈ ಕಾವ್ಯದಲ್ಲಿ ಬರುವ ಕಥಾವಸ್ತುವು ಈ ಮೊದಲು ಪಾಲ್ಕುರಿಕೆಯ ಸೋಮನಾಥನ ತೆಲುಗು ಕೃತಿಯಲ್ಲಿ ಬಂದಿದೆ. ಕಂಚಿಯ ಶಂಕರಾಧ್ಯ, ಭೀಮಕವಿಯ ಬಸವ ಪುರಾಣದಲ್ಲಿಯೂ ಬಂದಿದೆ. ಅವುಗಳಲ್ಲಿಯ ವಸ್ತುವನ್ನು ಬಳಸಿಕೊಂಡರೂ ದೃಷ್ಟಿಕೋನ ಮಾತ್ರ ಹೊಸದಾಗಿದೆ. ಬಸವಣ್ಣನವರ ಭಕ್ತಿಗೆ ಕವಿ ಮಾರುಹೋಗಿದ್ದಾನೆ. ಲೌಕಿಕ ಮಾನವರ ಸ್ವಭಾವವನ್ನು ಕವಿಯು ಚೆನ್ನಾಗಿ ಬಲ್ಲವನಾಗಿದ್ದಾನೆ. ಅಲೌಕಿಕ ಗುಣವುಳ್ಳ ಶರಣ ಶರಣೆಯರ ಚಿತ್ರಗಳನ್ನು ಚಿತ್ರಿಸಿದ್ದರೂ ಅವುಗಳಲ್ಲಿ ಸಹಜತೆ ಇದೆ. ನಮ್ಮ ಸುತ್ತಮುತ್ತ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಜೀವನದಲ್ಲಿ ಸುಖವೂ ಉಂಟು, ಕಷ್ಟವೂ ಉಂಟು. ಇಂತಹ ಲೌಕಿಕ ಜೀವನದಲ್ಲಿ ಮನುಷ್ಯರು ಸದಾ ಚರಣೆಯಿಂದ ಇದ್ದು ನಿತ್ಯಸುಖವನ್ನು ಪಡೆಯುವ ಮಾರ್ಗವನ್ನು ಕವಿ ತೋರಿಸಿಕೊಟ್ಟಿದ್ದಾನೆ. ಈ ಕಾವ್ಯದಿಂದ ಮನಸ್ಸಿಗೆ ನೆಮ್ಮದಿ ಸಿಕ್ಕುತ್ತದೆ, ಬಾಳು ಬಂಗಾರವಾಗುತ್ತದೆ. ಶಬರ ಶಂಕರ ವಿಳಾಸ ಶಬರ ಶಂಕರ ವಿಳಾಸವು ಒಂದು ಸುಂದರ ಕಾವ್ಯ. ಮಹಾ ಭಾರತದಿಂದ ಈ ಕಥೆಯನ್ನು ಆಯ್ದುಕೊಳ್ಳಲಾಗಿದೆ. ಶಿವನ ಇಪ್ಪತ್ತೈದು ಲೀಲೆಗಳಲ್ಲಿ ಶಬರ ಶಂಕರ ಲೀಲೆಯೂ ಒಂದು. ಶಬರ ಶಂಕರ ವಿಳಾಸದಲ್ಲಿ ಐದು ಆಶ್ವಾಸಗಳಿವೆ. ಇದರಲ್ಲಿ ಕಥೆಗಿಂತಲೂ ವರ್ಣನೆಯೇ ಅಧಿಕವಾಗಿದೆ. ಇಲ್ಲಿಯ ಕಥಾ ನಾಯಕ ಶಿವ. ಅರ್ಜುನನು ತನ್ನ ಶಿವಭಕ್ತಿಯಿಂದ, ಸಾಹಸ ದಿಂದ ಪಾಶುಪತಾಸ್ತ್ರವನ್ನು ಪಡೆಯುವುದೇ ಮೂಲ ಕಥೆ. ಸಂಸ್ಕೃತದ ಭಾರವಿಯು ಕಿರಾತಾರ್ಜುನೀಯ ಎಂಬ ಕಾವ್ಯ ಬರೆದಿದ್ದಾನೆ. ಕನ್ನಡದಲ್ಲಿ ಪಂಪನು ವಿಕ್ರಮಾರ್ಜುನ ವಿಜಯ ಎಂಬ ಕಾವ್ಯವನ್ನು ಬರೆದಿದ್ದಾನೆ. ಕುಮಾರವ್ಯಾಸನು ಮಹಾ ಭಾರತವನ್ನು ಬರೆದಿದ್ದಾನೆ. ಇವೆಲ್ಲವುಗಳಲ್ಲಿ ಕಿರಾತ ಲೀಲೆಯು ಬಂದಿದೆ. ಶಬರ ಶಂಕರ ವಿಳಾಸವೆಂದರೆ ಶಂಕರನು ಶಬರ (ಬೇಡ)ನ ವೇಷ ಧರಿಸಿ ಲೀಲೆಯನ್ನು ಮೆರೆದದ್ದು ಎಂದು ಅರ್ಥ. 'ಶಂಕರ' ಎಂದರೆ ಕಲ್ಯಾಣ ಮಾಡುವವನು. ಕೃಪಾಸಾಗರನಾದ ಶಿವನು ಅರ್ಜುನನ ಭಕ್ತಿ ಹಾಗೂ ಸಾಹಸಗಳನ್ನು ಪರೀಕ್ಷಿಸಿ ಆತನಿಗೆ ವರದಾನ ಮಾಡಿದ ಸನ್ನಿವೇಶವು ಇಲ್ಲಿ ಬಂದಿದೆ. ಭಕ್ತಿ ವೀರರಸಗಳು ಇದರಲ್ಲಿ ರಸವತ್ತಾಗಿ ಮೂಡಿ ಬಂದಿದೆ. ಪಾಂಡವರಲ್ಲಿ ಅರ್ಜುನ ಒಬ್ಬ. ಅವನು ಶಿವನನ್ನು ಮೆಚ್ಚಿಸಿ ಪಾಶುಪತ ಎಂಬ ಅಸ್ತ್ರವನ್ನು ಪಡೆಯಲು ಇಂದ್ರಕೀಲ ಪರ್ವತದ ಪ್ರದೇಶಕ್ಕೆ ಬರುತ್ತಾನೆ. ಉಗ್ರವಾದ ತಪಸ್ಸನ್ನು ಮಾಡುತ್ತಾನೆ. ಅವನನ್ನು ಅಲ್ಲಿಂದ ಬೇರೆಡೆಗೆ ಕಳುಹಿಸಬೇಕು, ಇಲ್ಲವೇ ತಮಗೆ ಬೇರೆ ಶಾಂತವಾದ ಸ್ಥಳವನ್ನು ಕೊಡಿಸಬೇಕು ಎಂದು ಆ ಪ್ರದೇಶದ ಋಷಿಗಳು ಶಿವನ ಬಳಿಗೆ ಬರುತ್ತಾರೆ. ಅವರಿಗೆ ಸಮಾಧಾನ ಮಾಡಿ ಕಳುಹಿಸಿ, ಅರ್ಜುನನ್ನು ಪರೀಕ್ಷಿಸಲು ಶಿವನು ಇಂದ್ರಕೀಲ ಪರ್ವತಕ್ಕೆ ಪಾರ್ವತಿಯೊಡನೆ ಹೋಗಲು ನಿರ್ಧರಿಸುತ್ತಾನೆ. ಶಿವ ಪಾರ್ವತಿಯರು ಕಿರಾತ ಕಿರಾತಿಯರ ವೇಷದಲ್ಲಿ ಭಕ್ತರ ಹಿತಕ್ಕಾಗಿ ಶಿವನು ಶಬರ ಶಂಕರ ಲೀಲೆಯನ್ನು ತೋರಿಸಿದರನು. ಶಿವ ಶಬರನಾಗಿ, ಪಾರ್ವತಿ ಶಬರಿಯಾಗಿ ವೇಷ ಬದಲಿಸಿಕೊಂಡರು. ತಲೆಯಲ್ಲಿಯ ಸರ್ಪವು ಸುತ್ತಿದ ಬಳ್ಳಿಯಾಯಿತು. ಗಂಗೆಯು ಹೂವಿನ ಮಾಲೆಯಾದಳು. ಪಾರ್ವತಿಯು ಕಿರಾತೆಯ ವೇಷದಲ್ಲಿ ಕಾಣಿಸಿಕೊಂಡಳು. ಆಕೆಯ ಸಂಜೆಗೆಂಪಿನಂತಹ ಕಾಂತಿಯು ಚಿಗುರೆಲೆಯ ಉಡುಪಾಯಿತು. ನಕ್ಷತ್ರಗಳು ಕೊರಳ ಹಾರವಾದವು. ಶುಕ್ರ ಮಂಡಲವು ಮೂಗುತಿಯಾಯಿತು. ಇದೇ ರೀತಿ ಶಿವನ ಪರಿವಾರದವರೂ ಬೇಡ ಬೇಡತಿಯರಾಗಿ ವೇಷ ಧರಿಸಿದರು. ವಿಧವಿಧದ ಆಯುಧಗಳನ್ನು ಹಿಡಿದುಕೊಂಡರು. ಬೇಟೆಯ ನಾಯಿಗಳನ್ನು ಕರೆದುಕೊಂಡು ಇಂದ್ರಕೀಲ ಪರ್ವತಕ್ಕೆ ತೆರಳಿದರು. ಶಬರನು ತನ್ನ ಪರಿವಾರದೊಂದಿಗೆ ಧ್ವನಿಮಾಡುತ್ತ ಬರು ತ್ತಿರುವಾಗ ಒಂದು ಕಾಡುಹಂದಿಯು ಅವರ ಮುಂದೆ ಹಾಯ್ದು ಹೋಯಿತು. ಆಗ ಅದನ್ನು ಬೆನ್ನಟ್ಟಿ, ಬಡಿ, ಹೊಡೆ, ಚುಚ್ಚು, ಬಾಣಬಿಡು, ಬಲೆ ಬೀಸು ಎಂದು ಒಬ್ಬರಿಗೊಬ್ಬರು ಚೀರುತ್ತ ಅದರ ಮೇಲೆ ಹೋದರು. ಆ ಕಾಡುಪ್ರಾಣಿಯು ಅನೇಕರನ್ನು ಕೆಡಹುತ್ತ, ಗಾಯಗೊಳಿಸುತ್ತ ಮುಂದೆ ಸಾಗಿತ್ತು. ಆಗ ಶಬರನ ವೇಷದಲ್ಲಿದ್ದ ಶಿವನು ಬೇಟೆಗಾರರನ್ನು ರಕ್ಷಿಸಲು ತಾನೇ ಮುಂದೆ ಬಂದನು. ಆ ಕಾಡುಹಂದಿಯು ಶಬರ(ಶಿವ)ನ ಹೊಡೆತದ ನೋವಿನಿಂದ ಬೇಕಾದತ್ತ ಓಡುವಾಗ ಅರ್ಜುನನು ತಪಸ್ಸಿಗೆ ಕುಳಿತ ಕಡೆಗೇ ಬಂದಿತು. ಆ ಕರ್ಕಶ ಧ್ವನಿಯನ್ನು ಕೇಳಿದ ಅರ್ಜುನನು ತಪಸ್ಸಿನಿಂದ ಎಚ್ಚೆತ್ತು ಅದರ ಉಪಟಳ ವನ್ನು ತಡೆಯುವುದಕ್ಕಾಗಿ ಅದರ ಮೇಲೆ ಬಾಣ ಪ್ರಯೋಗಿಸಿ ದನು. ಆ ಹೊಡೆತದಿಂದ ಹಂದಿಯು ನೆಲಕ್ಕುರುಳಿ ಬಿದ್ದಿತು. ಆ ಹಂದಿಯನ್ನು ಅಟ್ಟಿಕೊಂಡು ಶಬರನೂ ಕೂಡ ಆ ಸ್ಥಳಕ್ಕೆ ಧಾವಿಸಿ ಬಂದನು. ಇಲ್ಲಿಂದ ಮುಂದೆ ಶಿವನಿಗೂ ಅರ್ಜುನನಿಗೂ ವಾಗ್ವಾದವಾಗುತ್ತದೆ. ಬೇಡನ ವೇಷದ ಶಿವ, ಹಂದಿ ತನ್ನದು ಎನ್ನುತ್ತಾನೆ. ಅರ್ಜುನ, "ಹಂದಿಯನ್ನು ಕೊಂದವನು ನಾನು, ಅದು ನನಗೆ ಸೇರಬೇಕು" ಎನ್ನುತ್ತಾನೆ. ಜೊತೆಗೆ, "ನಿನ್ನ ಶೌರ್ಯವನ್ನು ಕಾಡಿನ ನರಿ, ಜಿಂಕೆಗಳಲ್ಲಿ ತೋರಿಸು. ನನ್ನನ್ನು ಕೆಣಕಬೇಡ. ನಿನ್ನ ಸ್ಥಿತಿ ಆನೆಯು ಸಿಂಹವನ್ನು ಕೆಣಕಿ ದಂತಾದೀತು" ಎಂದು ಎಚ್ಚರಿಸುತ್ತಾನೆ. ಶಿವ ಅವನನ್ನು ಹಾಸ್ಯ ಮಾಡುತ್ತಾನೆ. "ಖಡ್ಗ, ಬಿಲ್ಲು ಬಾಣ ಹಿಡಿದಿದ್ದೀಯೆ, ನೀನೆಂತಹ ತಪಸ್ವಿ?" ಎನ್ನುತ್ತಾನೆ. ಒಳಗೊಳಗೇ ಅವನಿಗೆ ಅರ್ಜುನನನ್ನು ಕಂಡು ಸಂತೋಷ. "ನೋಡು ನಾಲ್ಕು ತಿಂಗಳು ತರಗೆಲೆಗಳನ್ನು ತಿಂದುಕೊಂಡಿದ್ದ. ಇನ್ನು ನಾಲ್ಕು ತಿಂಗಳು ಗಾಳಿಯೇ ಇವನ ಆಹಾರ. ದೇಹವನ್ನು ಹೇಗೆ ನಿಗ್ರಹಿಸಿದ್ದಾನೆ!" ಎಂದು ಮೆಚ್ಚುಗೆಯಿಂದ ಪಾರ್ವತಿಗೆ ಹೇಳುತ್ತಾನೆ. ಕಡೆಗೆ ಇಬ್ಬರಿಗೂ ಯುದ್ಧವೇ ನಡೆಯುತ್ತದೆ. ಅರ್ಜುನನು ಕೋಪದಿಂದ ಶಬರನ ಮೇಲೆ ಬಾಣ ಬಿಡ ತೊಡಗುವನು. ಶಿವನು ಅವನ್ನೆಲ್ಲ ಮಧ್ಯದಲ್ಲಿಯೇ ಕತ್ತರಿಸು ತ್ತಾನೆ. ಆಗ ಅರ್ಜುನನು, "ಎಲೈ ಶಬರಾ, ನಿನ್ನ ಬಿಲ್ಲಾಳುತನ ಹೊಗಳತಕ್ಕುದು" ಎಂದು ಹೊಗಳಿ ಮತ್ತೆ ಬಾಣಗಳನ್ನು ಪ್ರಯೋಗಿಸುವನು. ಅವುಗಳನ್ನು ಶಿವನು ಮತ್ತೆ ಕತ್ತರಿಸ ತೊಡಗುವನು. ಅಷ್ಟರಲ್ಲಿಯೇ ಅರ್ಜುನನ ಬತ್ತಳಿಕೆ ಯಲ್ಲಿಯ ಬಾಣಗಳೆಲ್ಲ ತೀರಿಹೋಗುತ್ತವೆ. ಮಲ್ಲಯುದ್ಧ ನಡೆಯುತ್ತದೆ. ನೋಡುವವರು ನಡುಗುವಂತಹ ಭಯಂಕರ ಮಲ್ಲಯುದ್ಧ ಅದು. ಒಬ್ಬರು ಇನ್ನೊಬ್ಬರ ತೊಡೆ, ಭುಜ, ಎದೆ, ತಲೆಗಳಿಗೆ ಹೊಡೆಯುತ್ತಾರೆ. ಅವರಿಬ್ಬರ ಕಾಳಗ ನೋಡಿದ ಶಿವಗಣವು ಆಶ್ಚರ್ಯಪಡುತ್ತದೆ. ಅರ್ಜುನನ ಸಾಹಸವನ್ನು ಶಿವನು ಮನ ದಲ್ಲಿಯೇ ಮೆಚ್ಚುತ್ತಾನೆ. ಶಿವನು ಪಾರ್ಥನನ್ನು ತುಳಿದು ಮೆಟ್ಟುತ್ತಾನೆ. ಅರ್ಜುನನ ಬಾಯಿ ಮೂಗುಗಳಿಂದ ರಕ್ತ ಚಿಮ್ಮತೊಡಗುವುದು. ಭಕ್ತನ ಸ್ಥಿತಿಯನ್ನು ನೋಡಿ ಪರಮೇಶ್ವರ ಮರುಗುತ್ತಾನೆ. ನೆಲಕ್ಕೆ ಬಿದ್ದ ಅರ್ಜುನನ ಬಿಂಕ ಮಾಯವಾಗುವುದು. ಸೋತೆನೆಂಬ ಭಾವ ಅವನ ಮನಸ್ಸನ್ನು ಆವರಿಸುವುದು. 'ಒಬ್ಬ ಸಾಮಾನ್ಯ ಬೇಡನಿಂದ ನಾನು ಸೋತೆನೇ' ಎಂದು ಅವಮಾನದಿಂದ ನೊಂದುಕೊಳ್ಳುತ್ತಾನೆ. ಈಗ ಅರ್ಜುನನಿಗೆ ಇನ್ನೊಂದು ಯೋಚನೆ ಬರುತ್ತದೆ. 'ಜಗತ್ತಿಗೆ ಏಕೈಕ ವೀರನೆಂದು ಹೆಸರುಗಳಿಸಿದ ನಾನು ಈ ಬೇಡನಿಂದ ಸೋಲುವುದೆಂದರೆ ನಗೆಗೇಡೇ ಸರಿ. ಶಿವಭಕ್ತನಾದ ನನಗೇಕೆ ಸೋಲು? ನಾನು ಶಿವನನ್ನು ಮರೆತದ್ದರಿಂದ ಸೋಲಾಗಿರಬಹುದೆ?' ಎಂದು ಯೋಚಿಸುತ್ತಾನೆ. ಮಳಲಿನ ಲಿಂಗ ಮಾಡಿ ಕಾಡು ಹೂಗಳನ್ನು ಏರಿಸಿ ಲಿಂಗಪೂಜೆ ಮಾಡುತ್ತಾನೆ. 'ನನಗೆ ಜಯವಾಗಲಿ' ಎಂದು ಬೇಡಿ ಕೊಳ್ಳುತ್ತಾನೆ. ತನಗೇ ಯುಶಸ್ಸು ಎಂದು ಭಾವಿಸಿ, ಭುಜಗಳನ್ನು ತಟ್ಟಿ ಬೇಡನ ಕಡೆ ತಿರುಗುತ್ತಾನೆ. ಮಳಲಿನ ಲಿಂಗದ ಮೇಲೆ ಏರಿಸಿದ ಹೂಗಳು ಬೇಡನ ತಲೆಯ ಮೇಲಿವೆ! ಅರ್ಜುನ ಬೆರಗಾಗುತ್ತಾನೆ. ಸತ್ಯ ಹೊಳೆಯುತ್ತದೆ-ಬೇಡ ಶಿವನೇ! ಪಶ್ಚಾತ್ತಾಪದಿಂದ ಅರ್ಜುನ ಕರಗಿ ನೀರಾಗುತ್ತಾನೆ. 'ಅಯ್ಯೋ, ಎಂತಹ ಕೆಲಸ ಮಾಡಿದೆ! ನನ್ನ ದೇವರಿಗೇ ಅಪಮಾನದ ಮಾತುಗಳನ್ನಾಡಿ, ಅವನೊಡನೆ ಯುದ್ಧ ಮಾಡಿದೆನಲ್ಲ!' ಎಂದು ಬೇಯುತ್ತಾನೆ. ಭಕ್ತಿಯಿಂದ ಶಿವನಿಗೆ ನಮಸ್ಕರಿಸುತ್ತಾನೆ. ತಿಳಿಯದೆ ಮಾಡಿದ ತಪ್ಪನ್ನು ಕ್ಷಮಿಸಲು ಬೇಡಿಕೊಳ್ಳುತ್ತಾನೆ. ಆಗ ಶಿವನು ಆತನನ್ನು ಸಂತೈಸುತ್ತಾನೆ. ಆತನನ್ನು ಅಪ್ಪಿಕೊಳ್ಳುತ್ತಾನೆ, ತನ್ನ ನಿಜರೂಪದ ದರ್ಶನವನ್ನು ತೋರಿಸುತ್ತಾನೆ. ಲಿಂಣದ ಮೇಲೆ ಏರಿಸಿದ ಹೂಗಳು ಬೇಡನ ತಲೆಯ ಮೇಲಿವೆ ! ಅರ್ಜುನನು ಶಿವನನ್ನು ಅಡಿಯಿಂದ ಮುಡಿಯವರೆಗೆ ಕಣ್ಣಿಟ್ಟು ನೋಡಿ ಆನಂದಿತನಾದನು. ಆನಂದದ ಭರದಲ್ಲಿ ಶಿವನಾಮವನ್ನು ಪಠಿಸಿದನು. ತಾನು ಮಾಡಿದ ಅಪರಾಧಕ್ಕೆ ಕ್ಷಮೆ ಕೇಳಿಕೊಂಡನು. ಶಿವ ಹೇಳಿದ: "ಅರ್ಜುನಾ, ನಿನ್ನ ಕಟು ನುಡಿಗಳೇ ನನಗೆ ಮಂತ್ರ. ನೀನು ನನ್ನ ಮೇಲೆ ಬಿಟ್ಟ ಬಾಣಗಳೇ ನನಗೆ ಹೂಗಳು. ನಿನ್ನ ಮುಷ್ಠಿ ಯುದ್ಧವೇ ನನಗೆ ಪಾದಪೂಜೆ. ನಾನು ನಿನ್ನ ಭಕ್ತಿಗೆ ಸಂತುಷ್ಟನಾಗಿದ್ದೇನೆ. ನಿನ್ನ ಸಾಹಸವನ್ನು ಮೆಚ್ಚಿ ಕೊಂಡಿದ್ದೇನೆ." ಶಿವನು ಅರ್ಜುನನ ಮಹಿಮೆಯನ್ನು ಗಿರಿಜೆಗೆ ವರ್ಣಿಸಿ ದನು. ಅರ್ಜುನನು ಪಾರ್ವತಿಗೆ ವಂದಿಸಿ ಅವಳನ್ನು ಸ್ತುತಿಸಿ ದನು. ಇಬ್ಬರೂ ಅವನನ್ನು ಆಶೀರ್ವದಿಸಿದರು. ಶಿವನು ಅರ್ಜುನನಿಗೆ ಪಾಶುಪತಾಸ್ತ್ರವನ್ನು ಕೊಟ್ಟರೆ, ಪಾರ್ವತಿಯು ಅಂಜನಾಸ್ತ್ರವನ್ನು ಕೊಟ್ಟಳು. ಅರ್ಜುನನ ತಪಸ್ಸು ಫಲಿಸಿತು. ಆತನನ್ನು ಬೀಳ್ಕೊಟ್ಟು ತನ್ನ ಪರಿವಾರದೊಂದಿಗೆ ಶಿವ ಪಾರ್ವತಿಯರು ಕೈಲಾಸ ಪರ್ವತಕ್ಕೆ ಮರುಳುವುದರೊಂದಿಗೆ ಕಾವ್ಯಕ್ಕೆ ಮಂಗಳವಾಗುತ್ತದೆ. 'ಕವಿ ಕರ್ಣ ರಸಾಯನಂ' ಇದೂ ಷಡಕ್ಷರದೇವನ ಕಾವ್ಯ. ಇದು ಸಂಸ್ಕೃತದಲ್ಲಿದೆ. ಇದು ಅಲಂಕಾರ ಪ್ರಧಾನವಾಗಿದ್ದು ಇದರಲ್ಲಿ ವರ್ಣನೆಗಳು ಹೇರಳವಾಗಿವೆ. ಪೂರ್ಣ ಪ್ರತಿ ಈವರೆಗೂ ದೊರೆತಿಲ್ಲ. ದೊರೆತ ಪ್ರತಿಯಲ್ಲಿ ಕಥೆ ಪೂರ್ಣವಾಗಿಲ್ಲ. ಷಡಕ್ಷರನ ಕಾವ್ಯದ ಅಗ್ಗಳಿಕೆ ಮಹಾಕವಿ ಷಡಕ್ಷರದೇವನು ತನ್ನ ಕಾವ್ಯದ ಮಹತ್ವವನ್ನು ಹೇಳಿದ್ದಾನೆ. ನನ್ನ ಕಾವ್ಯವು ಚಿಂತಾಮಣಿಯಂತೆ ಇದೆ. ನವಕಲ್ಪ ವೇದದಂತೆ ಪಂಡಿತರಿಗೆ ಮಂಗಳಪ್ರದವಾಗಿದೆ. ಇದರ ಶ್ರೇಷ್ಠತೆಯನ್ನು ಬಲ್ಲವರು ಮೆಚ್ಚುವರು. ಮಂಗಳಪ್ರದನೂ ಮೃತೃಂಜಯನೂ ಆದ ಶಿವನಂತೆ ತನ್ನ ಕಾವ್ಯಗಳು ಶಾಶ್ವತ. ಇಂತಹ ಸತ್ಕೃತಿಯನ್ನು ಆಲಿಸಿದವರಿಗೆ ಸದ್ಗತಿ ಪ್ರಾಪ್ತ ವಾಗುತ್ತದೆಂದು ಕವಿ ವಿಶ್ವಾಸದಿಂದ ಹೇಳಿದ್ದಾನೆ. ಕಾವ್ಯದ ಉದ್ದೇಶ, ಕಾವ್ಯದಲ್ಲಿ ಕವಿ ಏನು ಹೇಳುತ್ತಾನೆ ಎಂಬುದಷ್ಟೇ ಮುಖ್ಯವಲ್ಲ, ಅಲ್ಲವೆ? ಹೇಳುವುದನ್ನು ಹೇಗೆ ಹೇಳುತ್ತಾನೆ ಎಂಬುದೂ ಮುಖ್ಯ. ಮನಸ್ಸಿನಲ್ಲಿ ಬಹುಕಾಲ ನಿಲ್ಲುವಂತೆ, ಕಣ್ಣಿಗೆ ಕಟ್ಟುವಂತೆ, ಹೃದಯವನ್ನು ಒಲಿಸುವಂತೆ ಹೇಳಬೇಕು. ಷಡಕ್ಷರದೇವ ದೊಡ್ಡ ವಿದ್ವಾಂಸ. ಸಂಸ್ಕೃತವನ್ನು ಬಲ್ಲವನು. ಒಮ್ಮೊಮ್ಮೆ ಬಹು ಪಾಂಡಿತ್ಯಪೂರ್ಣವಾಗಿ ಬರೆಯಬಲ್ಲ. ಅವನದೊಂದು ಪ್ರಸಿದ್ಧ ಪದ್ಯ ಇದೆ. ಆಂಭಃ ಕುಂಭೀನ ಕುಂಭೀನ ಸಮಕರ ಮಹಾ ಕೂರ್ಮಕೀರ್ಣೋರ್ಮಿಮಾಲಾ ಜೃಂಭದ್ಧಂಬೋಳಿ ಹಸ್ತಾಹತಚಕಿತಗತಕ್ಷ್ಮಾಧ್ರ ವಿಸ್ಫಾರವಿದ್ಯು ತ್ಸಂಭಿನ್ನಾಂ ಭೋಭೃದುದ್ಯತ್ತಟಚಿಟುಳನ್ಮೀನ ಫೇನ ಪ್ರತಾನಂ ಶುಂಭದ್ಗಂಭೀರಮಂ ರಂಜಿಸಿದುಮಮ ದತ್ತೇಂದ್ರಭದ್ರಂ ಸಮುದ್ರಂ ಓದುವುದೇ ಕಷ್ಟ, ಅಲ್ಲವೆ? ಕಷ್ಟಪಟ್ಟು ಓದಿದರೂ ಅರ್ಥವಾಗುವುದಿಲ್ಲ. ಇದೇನು ಕನ್ನಡವೋ ಸಂಸ್ಕೃತವೋ ಎಂದು ಅನುಮಾನ ಬರುತ್ತದೆ-ಅಷ್ಟೊಂದು ಸಂಸ್ಕೃತ ಶಬ್ದಗಳು. ಆದರೆ ಸುಲಭವಾದ ಶಬ್ದಗಳಲ್ಲಿಯೂ ಈತ ಬರೆಯಬಲ್ಲ. 'ರಾಜಶೇಖರ ವಿಳಾಸ'ದಲ್ಲಿ ಅಲ್ಲಿ ಮಾಮರದಲ್ಲಿ ಮಲ್ಲಿಕಾಲತೆಯಲ್ಲಿ ಎಳೆಯಸುಗೆ ಮರದಲ್ಲಿ ಜಳುರುಹಾಕರದಲ್ಲಿ ಸಂಪಗೆಯ ತರುಗಳೊಳ್ ಸೊಂಪಿಡಿದ ಸುರಯಿಯೊಳ್ ಪಾದರಿಯ ಮರದಲ್ಲಿ ಮಾಧವಿಯ ಲತೆಯಲ್ಲಿ | ಎಂದು ಪ್ರಾರಂಭವಾಗುವ ದೀರ್ಘ ವರ್ಣನೆಯನ್ನು ಓದಬೇಕು; ಭಾಷೆ ಸುಲಭ, ಶಬ್ದಗಳು ಕಿವಿಗೆ ಮಧುರ, ಇಡೀ ದೃಶ್ಯ ಕಣ್ಣಿಗೆ ಕಟ್ಟುತ್ತದೆ. ಒಂದು ಕಡೆ ಮಾಗಿಯನ್ನು ಕವಿ ವರ್ಣಿಸುತ್ತಾನೆ: ಚಳಿಗಾಲದೆ ಪೇರಾಲದ ಕೆಳಗಿರ್ಪನಿತರೊಳೆ ಚಪಲಕಪಿ ನಿಡುಗೋಡಂ ಸೆಳೆದಲುಗೆ ಸೂಸುವೆಲೆವನಿ ಗಳಿನೊರ್ವಂ ನೆನೆದು ನಡುಗಿ ಸಿಡಿಮಿಡಿಗೊಂಡಂ | ಚಳಿ, ಮೈ ಗಡಗಡ ನಡುಗುತ್ತಿದೆ. ದಾರಿಗನೊಬ್ಬ ಚಳಿಯನ್ನು ಸಹಿಸಲಾರದೆ ದೊಡ್ಡ ಆಲದಮರದ ಕೆಳಗೆ ನಿಂತಿದ್ದಾನೆ. ಕೋತಿಯೊಂದು ರೆಂಬೆಯಿಂದ ರೆಂಬೆಗೆ ಹಾರಿದೆ. ಮಂಜಿನ ನೀರು ಎಲೆಗಳಿಂದ ದಾರಿಗನ ಮೇಲೆ ಸುರಿಯುತ್ತದೆ. ಮೊದಲೇ ಚಳಿಯಿಂದ ಹಲ್ಲು ಕಡಿಯುತ್ತಿದ್ದ ದಾರಿಗನಿಗೆ ಸಿಟ್ಟು ಬಂದಿತಂತೆ! ಎಂತಹ ಚಿತ್ರ! ಕೋಳೂರು ಕೊಡಗೂಸು ಈಶ್ವರನನ್ನು ಬೇಡುವುದು, ಕಾಡುವುದು, ಒಲಿಸುವುದು ಬಹು ಸುಂದರವಾಗಿ ನಿರೂಪಿತವಾಗಿದೆ. 'ಎಲೆ ದೇವಾ, ಪಸಿವು ನಿನಗೆ ಏಂ ಆಗದೋ, ಪಾಲೆ ಏಂ ಕಾಯದೋ, ಪೊತ್ತಿತೋ, ಬಿಸುವಾರಿರ್ದುದೋ, ಕಮ್ಮನಾಗದೋ, ಇಂಪೇರದೋ, ಕಣ್ಗೆ ರಂಜಿಸದೋ' ಎಂದು ಕಳವಳಿಸುತ್ತಾಳೆ. 'ಮಹೇಶಂ ನುಡಿಯಂ, ಪಾಲ್ಗುಡಿಯಂ, ಅಕಟಕಟಾ ಇನ್ನೇಂ ಗೆಯ್ವೆಂ' ಎಂದು ಹಲಬುತ್ತಾಳೆ. ಕಡೆಗೆ ಕರುಣೆ ತೋರಿ ಶಿವನು ಹಾಲು ಕುಡಿದನಂತರ, 'ಜನಕಂ ಬಂದೊಡೆ ಪೇಳ್ದಪೆಂ ಇನಿತೆಲ್ಲವಂ ಅಯ್ಯಾ ಮರೆಯದಿರ್' ಎಂದು ಅವನನ್ನು ಎಚ್ಚರಿಸುತ್ತಾಳೆ!
2021/12/06 02:00:37
https://kanaja.karnataka.gov.in/%E0%B2%B7%E0%B2%A1%E0%B2%95%E0%B3%8D%E0%B2%B7%E0%B2%B0-%E0%B2%A6%E0%B3%87%E0%B2%B5/
mC4
ನನಗೆ ಸಿಗರೇಟ್ ಬಿಡಕ್ಕಾಗಲ್ಲ; ನಟ ರಜನಿಕಾಂತ್ | Super Star Rajinikanth | Haven't quit smoking | But you Should | ಸೂಪರ್ ಸ್ಟಾರ್ ರಜನಿಕಾಂತ್ | ಧೂಮಪಾನ | ಅಭಿಮಾನಿಗಳಿಗೆ ಸಂದೇಶ - Kannada Filmibeat | Updated: Monday, December 17, 2012, 13:05 [IST] ಸಿಗರೇಟನ್ನು ಮೇಲಕ್ಕೆ ಎಸೆದು ಲಬಕ್ ಎಂದು ತುಟಿಗೆ ಇಟ್ಟುಕೊಳ್ಳುವುದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಜನಪ್ರಿಯ ಸ್ಟೈಲ್ ಗಳಲ್ಲಿ ಒಂದು. ಈ ಒಂದು ಸ್ಟೈಲ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇನ್ನೂ ಯವಾಗ ಗುರು ಸಿಗರೇಟ್ ಸ್ಟೈಲ್ ಬರುವುದು ಎಂದು ಕಾಯುತ್ತಿರುತ್ತಾರೆ. ಸಿನಿಮಾ ರಂಗಕ್ಕೆ ಬರುವುದಕ್ಕೂ ಹಿಂದಿನಿಂದಲೂ ರಜನಿಕಾಂತ್ ಈ ಸ್ಟೈಲ್ ಮಾಡುತ್ತಿದ್ದರು. ಬೆಳ್ಳಿತೆರೆಗೆ ಅಡಿಯಿಟ್ಟ ಮೇಲೆ ಈ ಸ್ಟೈಲ್ ಜಗದ್ವಿಖ್ಯಾತವಾಯಿತು. ಈಗ ಸಿಗರೇಟ್ ಬಗ್ಗೆ ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ. ಈ ಸಿಗರೇಟ್ ನಿಂದ ನನ್ನ ಹೆಲ್ತ್ ಸಿಕ್ಕಾಪಟ್ಟೆ ಹಾಳಾಯಿತು ಎಂದಿದ್ದಾರೆ. ಆದರೂ ನಾನು ಅದನ್ನು ಬಿಡಲು ಸಾಧ್ಯವಾಗುತ್ತಿಲ್ಲ. ನನಗೇನೋ ಸಿಗರೇಟ್ ಚಟ ಬಿಡಲು ಸಾಧ್ಯವಾಗುತ್ತಿಲ್ಲ. ಆದರೆ ನೀವಂತೂ ಹಾಗೆ ದಯವಿಟ್ಟ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಕಿವಿಮಾತನ್ನು ಹೇಳಿದ್ದಾರೆ. ತಾನು ಕಿಡ್ನಿ ತೊಂದರೆಯಿಂದ ಬಳಲಿ ಆಸ್ಪತ್ರೆ ಪಾಲಾಗಿದ್ದೆ. ಇಂದು ಬದುಕು ಬಂದಿದ್ದೇನೆ ಎಂದರೆ ಅದು ದೇವರ ಆಶೀರ್ವಾದ ಮತ್ತು ಅಭಿಮಾನಿಗಳ ಪ್ರಾರ್ಥನೆಯ ಫಲ ಎಂದಿದ್ದಾರೆ. ತಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವ ಉದ್ದೇಶವಿಲ್ಲ. ಹಾಗೆಯೇ ನಾನೊಬ್ಬ ಪರಿಣಾಮಕಾರಿ ನಾಯಕ ಎನ್ನಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ತಾನು ಯಾವುದೇ ರಾಜಕೀಯ ಪಕ್ಷವನ್ನು ಕಟ್ಟುವ ಗೋಜಿಗೂ ಹೋಗುತ್ತಿಲ್ಲ. ನನಗೆ ಒಳ್ಳೆಯ ಜೀವನಾಧಾರಕ್ಕೆ ಅವಕಾಶಕೊಟ್ಟ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ. (ಏಜೆನ್ಸೀಸ್) Read more about: ರಜನಿಕಾಂತ್ ಸಿಗರೇಟು ಧೂಮಪಾನ rajinikanth cigarette smoking Super Star Rajinikanth said his illness had been caused by smoking, but admitted he was unable to give it up. "I haven't quit smoking, but you should do so" he said.
2021/07/26 13:09:56
https://kannada.filmibeat.com/news/super-star-rajinikanth-havent-quit-smoking-070335.html
mC4
ಮಾತು-ಮಂಥನ-ಮತಾಪು: ಆರೇ ತಿಂಗಳಲ್ಲಿ ಅಮರಾವತಿ ಧರೆಗಿಳಿದೀತೇ? ಈ ಘಟನೆ ಇತ್ತೀಚಿನದು. ಮೋದಿಯವರು ಆಸ್ಟ್ರೇಲಿಯಾ ದೇಶದ ಸಿಡ್ನಿ ನಗರಿಯಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರಲ್ಲ, ಅವತ್ತು ನಡೆದದ್ದು. ಅದನ್ನು ಹೇಳುವ ಮುನ್ನ ಒಂದಷ್ಟು ಪೀಠಿಕೆಯನ್ನೂ ಸೇರಿಸುವ ಅಗತ್ಯವಿದೆ. ಪ್ರತಿ ರಾತ್ರಿ ಒಂಭತ್ತಕ್ಕೆ ನಮ್ಮ ರಾಷ್ಟ್ರೀಯ ಸುದ್ದಿ ವಾಹಿನಿಗಳೆಲ್ಲಾ ಪೈಪೋಟಿಗೆ ಬಿದ್ದು ಚರ್ಚೆ ನಡೆಸುತ್ತವೆ. ನೀವು ಪ್ರಚಲಿತ ವಿದ್ಯಮಾನಗಳಲ್ಲಿ ಆಸಕ್ತಿಯುಳ್ಳವರಾಗಿದ್ದರೆ, ಇದು ನಿಮಗೆ ಈಗಾಗಲೇ ಗೊತ್ತಿರುತ್ತದೆ. ಪ್ರತಿ ಸುದ್ದಿ ವಾಹಿನಿಯನ್ನೂ ಐದು ನಿಮಿಷಗಳ ಕಾಲ ನೋಡಿದರೂ ಸಾಕು, ಅಂದಿನ ಹಗರಣ, ರಾಜಕಾರಣ, ಸುದ್ದಿಗಳ ಹೂರಣವೆಲ್ಲಾ ಸಿಕ್ಕಿಬಿಡುತ್ತದೆ. ಹಾಗೇ ಪುಕ್ಕಟೆ ಮನರಂಜನೆಯೂ! ಎಲ್ಲ ವಾಹಿನಿಗಳಲ್ಲೂ ಓರ್ವ ಸಂಪಾದಕ, ಅವನ ಸುತ್ತ ಏನಿಲ್ಲವೆಂದರೂ ಐದಾರು ಮಂದಿ ವಿಶ್ಲೇಷಕರು. ಎಲ್ಲರೂ ಸೇರಿ ಒಂದು ವಿಷಯದ ಹಗ್ಗವನ್ನು ಜಗ್ಗಾಡಲು ಶುರು ಮಾಡಿಕೊಂಡರೆ ಮುಗಿಯಿತು, ವಾದ-ವಿವಾದಗಳ ಕಾವು ಏರಿ, ಕೆಲವೊಮ್ಮೆ ಕಿವಿಯ ತಮಟೆ ಹರಿದು ಹೋಗುವಷ್ಟು ಜೋರಾದ ಕಿರುಚಾಟ. ಕೆಲವರದ್ದು ಕೀ ಕೊಟ್ಟ ಬೊಂಬೆಗಳಂತೆ ನಿರಂತರ ವಟವಟ. ಒಟ್ಟಿನಲ್ಲಿ ಟಿವಿ ಪರದೆಯ ಮೇಲೆ ನಿತ್ಯ ದೊಂಬರಾಟ! ಈಗ ಘಟನೆಗೆ ಬರೋಣ. ಇಂಥದ್ದೇ ಒಂದು ಚರ್ಚೆ ನಡೆದಿತ್ತು ಮೋದಿಯವರು ಸಿಡ್ನಿ ತಲುಪಿದ ದಿನ. ಖ್ಯಾತ ವಾಹಿನಿಯೊಂದರ ಸಂಪಾದಕ ಮಹಾಶಯರು ತಮ್ಮ ವಿಶ್ಲೇಷಕರ ತಂಡದಲ್ಲಿ ಆಸ್ಟ್ರೇಲಿಯಾದವನೊಬ್ಬನನ್ನು ಹಿಡಿದುಕೊಂಡು ಬಂದು ಕೂರಿಸಿಕೊಂಡಿದ್ದರು. ಅಂದು ಅವರು ಚರ್ಚಿಸುತ್ತಿದ್ದ ವಿಷಯ, 'ಮೋದಿಯವರ ಭೇಟಿಯಿಂದ ಆಸ್ಟ್ರೇಲಿಯಾ, ಭಾರತದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಲಿದೆಯಾ' ಎಂಬುದು. ಅವರ ಚರ್ಚೆಯ ಧಾಟಿಯನ್ನು ನೀವು ನೋಡಬೇಕಿತ್ತು. 'ಈಗ ಬರೀ ಹದಿನೈದು ಮಿಲಿಯನ್‍ಗಳಷ್ಟಿರುವ ಹೂಡಿಕೆ ಮೋದಿಯವರು ಹೋದ ಮಾತ್ರಕ್ಕೇ ಅದರ ದುಪ್ಪಟ್ಟಾಗಿಬಿಡಲು ಸಾಧ್ಯವೇ?' ಎಂದು ಇವರು ಅಬ್ಬರಿಸಿ ಕೇಳುವುದಕ್ಕೂ, ಆ ಪುಣ್ಯಾತ್ಮ 'ಸಾಧ್ಯವಿಲ್ಲ. ಮೋದಿಯವರ ಭೇಟಿಯಿಂದಾಗಿ ಹೂಡಿಕೆ ಹೆಚ್ಚಾಗುವುದೇ ಇಲ್ಲ' ಎನ್ನುವುದಕ್ಕೂ ಸರಿಯಾಗಿ ತಾಳೆಯಾಗುತ್ತಿತ್ತು. 'ನೋಡಿ, ಮೋದಿಯವರಿಂದಾಗಿ ಯಾವ ಪವಾಡವೂ ನಡೆಯುತ್ತಿಲ್ಲ' ಎನ್ನುತ್ತಿದ್ದ ಸಂಪಾದಕರ (ಸೆಕ್ಯುಲರ್ ಎಂದು ಬೇರೆ ಹೇಳಬೇಕೇ?) ಮುಖದ ಮೇಲೆ ವಿಜಯದ ನಗು. ಅಲ್ಲ, ಭರ್ತಿ 28 ವರ್ಷಗಳ ನಂತರ ನಮ್ಮ ದೇಶದ ಪ್ರಧಾನಿಯೊಬ್ಬರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ, ಈ ಭೇಟಿ ಮುಂದಿನ ಹೂಡಿಕೆಗಳಿಗೆ ಮುನ್ನುಡಿಯಾಗಲಿದೆ ಎಂಬ ಸಾಮಾನ್ಯ ಜ್ಞಾನ ನಮಗಿದೆ, ಆ ಸಂಪಾದಕರಿಗೆ ಬೇಡವೇ? ಪರಕೀಯನೊಬ್ಬನನ್ನು ಬಳಸಿಕೊಂಡು ನಮ್ಮ ಪ್ರಧಾನಿಯನ್ನು ಹೀಗಳೆಯುತ್ತಾರಲ್ಲ, ಅವರ ಬಗ್ಗೆ ಮಾತನಾಡಲು ಅವನು ಯಾವ ಊರಿನ ದಾಸಯ್ಯ? ಇಂಥ ಅವಕಾಶಗಳನ್ನು ಸೃಷ್ಟಿಸುವ ಪತ್ರಕರ್ತರ ಮನೋವಿಕೃತಿಗೆ ಏನೆನ್ನಬೇಕು? ಚರ್ಚೆ ಹಾಗಿರಲಿ, ನಮ್ಮವರ ತಿಕ್ಕಲುತನವನ್ನು ಕಂಡು ಆ ವಿದೇಶದವನು ಮನಸ್ಸಿನಲ್ಲೇ ಎಷ್ಟು ಮುಸಿ ಮುಸಿ ನಕ್ಕನೋ ದೇವರೇ ಬಲ್ಲ! ನಿಜವಾಗಿಯೂ ಹೇಸಿಗೆಯಾಯಿತು. ಆ ಸಂಪಾದಕರು ಯಾರೆಂದುಕೊಂಡಿರಿ? ಅಮೆರಿಕದ ಮ್ಯಾಡಿಸನ್ ಚೌಕದಲ್ಲಿ ಮೋದಿಯವರ ಅಭಿಮಾನಿಯೊಬ್ಬರನ್ನು ಕೆಣಕಿ ಅವರಿಂದ ಒದೆ ತಿಂದು ಬಂದವರು! ಇವರೊಬ್ಬರೇ ಅಲ್ಲ, ಒಂದು ವ್ಯವಸ್ಥಿತ ಜಾಲವೇ ಮೋದಿಯವರ ತಪ್ಪುಗಳ ಷರಾ ಬರೆಯಲು ತುದಿಗಾಲಲ್ಲಿ ನಿಂತಿದೆ. ಆರು ದಶಕಗಳಿಂದ ಇಲ್ಲದಿದ್ದ ಆತುರ ಈಗೇಕೆ? ಆರಿಸಿ ಕಳುಹಿಸಿದ ಜನರು ವಹಿಸಿದರೇ ಇವರಿಗೆ ಮಾಸ್ತರಿಕೆಯ ಉಸಾಬರಿಯನ್ನು? ನೀವೇ ಹೇಳಿ, ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ವ್ಯಕ್ತಿಯೋರ್ವ ಏನೇನು ತಾನೆ ಮಾಡಬಲ್ಲ? ಹೀಗೆ ಪ್ರತಿ ಕೆಲಸದಲ್ಲೂ ತಪ್ಪು ಹುಡುಕುವ ಧೋರಣೆ ಸರಿಯೇ? ಅಧಿಕಾರಕ್ಕೇರಿದ ತಕ್ಷಣ ನಮ್ಮ ಪ್ರಧಾನಿ ನೆರೆ ರಾಷ್ಟ್ರಗಳ ಭೇಟಿಗೆ ಹೊರಟಾಗಲೇ ಗೊಣಗಾಟ ಶುರುವಾಗಿತ್ತು. ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸದೆ ತಕ್ಷಣ ಹೊರಟಿದ್ದು ತಪ್ಪು ಎಂದು. ಆದರೆ ನೆರೆಯವರ ಹೃದಯ ಬೆಚ್ಚಗಾಗುವುದು, ಅವರೊಂದಿಗೆ ಕೈ ಕುಲುಕಿದಾಗ ಮಾತ್ರವೇ ಎಂಬುದು ಕಾಲೆಳೆಯುವ ಮಂದಿಗೆ ಹೇಗೆ ತಾನೆ ಅರ್ಥವಾದೀತು? ಆ ದೇಶಗಳಿಂದ ದೊರೆತ ಅಪೂರ್ವ ಪ್ರತಿಕ್ರಿಯೆಯನ್ನು ನೋಡಿದ ಮೇಲೆ ಸುಮ್ಮನಾದರು! ನಂತರ ಶುರುವಾಗಿದ್ದು 'ಮೋದಿಯವರು ನಮ್ಮನ್ನು ಹತ್ತಿರಕ್ಕೇ ಬಿಟ್ಟುಕೊಳ್ಳುವುದಿಲ್ಲ' ಎಂಬ, ಮಾಧ್ಯಮದವರ ಬೊಬ್ಬೆ. ಸರಿ, ದೀಪಾವಳಿಯ ಸಂದರ್ಭದಲ್ಲಿ ಇವರಿಗಾಗಿಯೇ ಮೋದಿಯವರು ಒಂದು ಕೂಟವನ್ನು ಏರ್ಪಡಿಸಿದ್ದರು. 'ಮೋದಿ' ಎಂಬ ಪದ ಕಿವಿಗೆ ಬಿದ್ದರೆ ಸಾಕು, ಮೈಮೇಲೆ ಉಗ್ರನರಸಿಂಹನನ್ನು ಆವಾಹಿಸಿಕೊಳ್ಳುತ್ತಿದ್ದ ಪ್ರತಾಪಿಗಳು ಅಂದು ಅವರ ಸೌಜನ್ಯ, ಪ್ರೀತಿಯ ಶಾಖಕ್ಕೆ ಬೆಣ್ಣೆಯಂತೆ ಕರಗಿದರು! ಪ್ರತಿಯೊಬ್ಬರನ್ನೂ ನಗುನಗುತ್ತಾ ಆತ್ಮೀಯತೆಯಿಂದ ಮಾತನಾಡಿಸಿದ ಅವರ ಜೊತೆ 'ಸೆಲ್ಫೀ'ಗಳನ್ನು ತೆಗೆಸಿಕೊಳ್ಳಲು ಹಾತೊರೆದದ್ದನ್ನು ನೋಡಿದಾಗ, ಇವರೇನಾ ಆ ಪತ್ರಕರ್ತರು ಎಂದು ನಿಜವಾಗಿಯೂ ಅನುಮಾನವುಂಟಾಯಿತು! 'ನನ್ನ ಮಗನಿಗೆ ತೋರಿಸಬೇಕು' ಎಂದೋ ಅಥವಾ 'ನನ್ನ ಗಂಡನಿಗೆ ಹೇಳಿ ಬಂದಿದ್ದೇನೆ, ಮೋದಿಯವರ ಜೊತೆ ಫೋಟೋ ತೆಗೆಸಿಕೊಂಡು ತೋರಿಸುತ್ತೇನೆ ಅಂತ' ಎಂದೋ ಇವರೆಲ್ಲಾ ಚಿಕ್ಕ ಮಕ್ಕಳಂತೆ ಸಂಭ್ರಮಿಸಿದ್ದನ್ನು ನೋಡಿ ನಾವು ಅವಾಕ್ಕಾದೆವು! ಮುಂದಿನ ತಪ್ಪು ಸ್ವಚ್ಛ ಭಾರತ ಅಭಿಯಾನಕ್ಕೆ ಗಾಂಧೀಜಿಯನ್ನು ಬಳಸಿಕೊಂಡಿದ್ದು! ಕಾಂಗ್ರೆಸ್ ಸರ್ಕಾರದ ಸ್ವಘೋಷಿತ ಆಸ್ತಿಯಾದ ಅವರನ್ನು ಹಾಗೆಲ್ಲ ಬೇರೆಯವರ ಪಾಲು ಮಾಡಲಾದೀತೇ? ಉಳಿದವರು ಹಾಗಿರಲಿ, ಇಂದಿರೆಯ ಕುಟುಂಬಕ್ಕೆ ಪರಮಾಪ್ತರಾಗಿದ್ದ ಅಮಿತಾಭ್‍ ಬಚ್ಚನ್‍ರಂಥ ಘಟಾನುಘಟಿಯೇ ಪೊರಕೆ ಹಿಡಿದು ಬೀದಿಗಿಳಿದರೆ ಕಾಂಗ್ರೆಸ್‍ಗೆ ತುರಿಕೆಯಾಗದೆ ಇದ್ದೀತೆ? ಸ್ವಚ್ಛತಾ ಅಭಿಯಾನದಲ್ಲಿ ರಾಜಕೀಯ ಸಲ್ಲ ಎಂದು ಹೇಳಿದವರೆಲ್ಲರನ್ನೂ ಕೆಕ್ಕರಿಸಿ ನೋಡಿತು ಅದು. ಸ್ವಚ್ಛತೆಯ ಅಮಲೇರಿಸಿಕೊಂಡು ಕೇರಳದ ಬೀದಿಗಳನ್ನು ಸುತ್ತಿದ ಶಶಿ ತರೂರ್‍ರನ್ನು ಪಕ್ಷದ ವಕ್ತಾರರ ಸ್ಥಾನದಿಂದ ಕೆಳಗಿಳಿಸಲು ಇದೂ ಒಂದು ಕಾರಣವೇ! ಅಕ್ಟೋಬರ್ 31ರಂದು ಮತ್ತೊಂದು ರಂಪ! ಆ ದಿನ ಇಂದಿರೆಯ ಹತ್ಯೆಯಾದದ್ದು ಎಂಬುದು ಮಾತ್ರ ನಮ್ಮ ಜನಕ್ಕೆ ಗೊತ್ತಿತ್ತು. ಅಂದೇ ಸರ್ದಾರ್ ಪಟೇಲ್‍ರ ಜನ್ಮ ದಿನ ಎಂಬುದು ಬಹುತೇಕರಿಗೆ ಗೊತ್ತಿರಲೇ ಇಲ್ಲ! ಆ ದಿನವನ್ನು ಪಟೇಲರ ಸ್ಮರಣೆಗೆ ಮೀಸಲಾಗಿಟ್ಟಿತು ಮೋದಿ ಸರ್ಕಾರ! ಛೆ, ಎಲ್ಲಾದರೂ ಉಂಟೇ? ದೇಶಕ್ಕಾಗಿ ಹುತಾತ್ಮರಾದವರನ್ನು (ಕಾಂಗ್ರೆಸ್‍ನ ಪ್ರಕಾರ!) ನೆನೆಯದೇ ಇರುವುದು ಅಕ್ಷಮ್ಯ ಅಪರಾಧವಲ್ಲವೇ? ತಮಾಷೆ ನೋಡಿ, ಇಂದಿರೆಯ ವಿಷಯದಲ್ಲಿ ಮಾಡಿದಂತೆ ಇನ್ನೆಲ್ಲಿ ನೆಹರೂ ಜನ್ಮದಿನವನ್ನೂ ಕಡೆಗಣಿಸುತ್ತಾರೋ ಎಂಬ ದಿಗಿಲಿನಲ್ಲಿ ತಾನೇ ತುರಾತುರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿತು ಕಾಂಗ್ರೆಸ್. ಆದರೆ ಕುಳಿತಲ್ಲಿಯೇ ತಣ್ಣಗೆ ನೆಹರೂರನ್ನು ಸ್ಮರಿಸಿಕೊಂಡು ಅದಕ್ಕೆ ಫಜೀತಿ ತಂದಿಟ್ಟರು ಮೋದಿ! ಹೀಗೆ, ಮಹಾರಾಷ್ಟ್ರ, ಹರಿಯಾಣದ ವಿಧಾನಸಭಾ ಚುನಾವಣೆಗಳಿಂದ ಹಿಡಿದು ಗಡಿಯಲ್ಲಿ ಪಾಕ್ ಸೈನಿಕರ ಜೊತೆಗಿನ ಗುಂಡಿನ ಚಕಮಕಿಯವರೆಗೂ ಎಲ್ಲದರಲ್ಲೂ ಮೋದಿಯವರದ್ದೇ ತಪ್ಪು ಎಂದು ಬಿಂಬಿಸುತ್ತಿದ್ದಾರೆ ಈ ಕಾಮಾಲೆ ಕಣ್ಣಿನವರು! ಆದರೆ ವಾಸ್ತವ ಬೇರೆಯೇ ಇದೆ. ಅಧಿಕಾರ ಹಿಡಿದ ಲಾಗಾಯ್ತು, ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡು ಓಡಾಡುತ್ತಿದ್ದಾರೆ ನಮ್ಮ ಪ್ರಧಾನಿ. ಆರು ದಶಕಗಳ ಕೊಳೆಯನ್ನು ಝಾಡಿಸಲು ಅವಿರತ ಶ್ರಮಿಸುತ್ತಿದ್ದಾರೆ. ದೇಶದ ಒಳಗಿನ ಹಾಗೂ ಹೊರಗಿನ ಆಗುಹೋಗುಗಳಿಗೆ ತಮ್ಮನ್ನು ಸಮನಾಗಿ ಒಡ್ಡಿಕೊಳ್ಳುತ್ತಿದ್ದಾರೆ. ಇತೀಚೆಗೆ ಆಸ್ಟ್ರೇಲಿಯಾ ದೇಶದ ಬ್ರಿಸ್ಬೇನ್ ನಗರದಲ್ಲಿ ಜಿ20 ರಾಷ್ಟ್ರಗಳ ಶೃಂಗ ಸಭೆ ನಡೆಯಿತಲ್ಲ, ಅಲ್ಲಿ ಮೋದಿಯವರನ್ನು ಕಂಡ ಒಬಾಮಾ 'ಯೂ ಆರ್ ಎ ಮ್ಯಾನ್ ಆಫ್ ಆಕ್ಷನ್' ಎಂದರು. ಇಂಥ ಮಾತುಗಳು ಓರ್ವ ಅಧ್ಯಕ್ಷನ ಬಾಯಿಂದ ಸುಮ್ಮನೇ ಬರುವುದಿಲ್ಲ! 'ಆಕ್ಟ್ ಈಸ್ಟ್' ಹಾಗೂ 'ಮೇಕ್ ಇನ್ ಇಂಡಿಯಾ' ಕರೆಗಳು ಜನಪ್ರಿಯವಾಗುತ್ತಿವೆ. ಮೋದಿಯವರ ವರ್ಚಸ್ಸು ಎಲ್ಲರನ್ನೂ ಸೆಳೆಯುತ್ತಿದೆ. ಹಾಗೆ ಹೊರಗಿನವರಿಗೆ ಕರೆ ಕೊಡುತ್ತಿರುವ ಮೋದಿ ದೇಶದ ಒಳಗೆ ಕೈಕಟ್ಟಿ ಕುಳಿತಿಲ್ಲ. ತುಕ್ಕು ಹಿಡಿದಿರುವ ವ್ಯವಸ್ಥೆಯ ರಿಪೇರಿ ಆರಂಭಿಸಿದ್ದಾರೆ. ಆಯಕಟ್ಟಿನ ಜಾಗಗಳಿಗೆ ಕಾರ್ಯದರ್ಶಿಗಳಾಗಿ ಅನಿಲ್ ಸ್ವರೂಪ್ ಹಾಗೂ ಅರವಿಂದ ಸುಬ್ರಮಣಿಯನ್‍ರಂಥ ಬುದ್ಧಿವಂತರನ್ನು ಆರಿಸಿದ್ದಾರೆ. ಶುದ್ಧಹಸ್ತರೂ, ದಕ್ಷರೂ, ಬುದ್ಧಿವಂತರೂ ಆದ ಮನೋಹರ್ ಪಾರಿಕ್ಕರ್‍, ಸುರೇಶ್ ಪ್ರಭು ಇವರುಗಳಿಗೆ ಕೆಲ ಮುಖ್ಯ ಜವಾಬ್ದಾರಿಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದವರನ್ನು ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕೆ ಸರಿಸಿದ್ದಾರೆ. ಪೆಟ್ರೋಲ್, ಡೀಸಲ್‍ಗಳ ದರ ಕಡಿತದಿಂದ ಹಿಡಿದು ಕಪ್ಪು ಹಣವನ್ನು ತರುವುದರವರೆಗೂ ಎಲ್ಲ ನಿರ್ಧಾರಗಳನ್ನೂ ಜನಪರವಾಗಿ ತೆಗೆದುಕೊಳ್ಳುತ್ತಿದ್ದಾರೆ. ರಾಜಕೀಯವೆಂದಮೇಲೆ ತಂತ್ರಗಾರಿಕೆ ಇಲ್ಲದಿರುತ್ತದೆಯೇ? ಮಹಾರಾಷ್ಟ್ರದಲ್ಲಿ ಬಹುಮತದ ಸಲುವಾಗಿ ರಾಜಿ ಮಾಡಿಕೊಳ್ಳಬಾರದೆಂಬ ನಿಲುವು ತಳೆಯಿತು ಪಕ್ಷ. ನೆರವಿಗೆ ಬಂದಿದ್ದು ಧ್ವನಿಮತವೆಂಬ ತಂತ್ರಗಾರಿಕೆ. ಮುಂಬರಲಿರುವ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಅಷ್ಟೇ. ಕಾಲೂರಲು ಮೊದಲು ನೆಲೆಯೊಂದು ಸಿಗಲಿ ಎಂದು ಹಲವು ದಿಕ್ಕಿನಲ್ಲಿ ಪ್ರಯತ್ನಗಳು ನಡೆದಿವೆ. ಅವಕಾಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸಬಲ್ಲ, 'ಅಮಿತ್ ಶಾ'ರಂಥ ಚಾಣಕ್ಯರು ಮುಖ್ಯರಾಗುವುದೇ ಇಲ್ಲಿ. ಅತ್ತ ಕಡೆ ತಮಿಳುನಾಡಿನಲ್ಲಿ ರಜನಿ 'ನನಗೆ ರಾಜಕೀಯವೆಂದರೆ ಭಯವೇನೂ ಇಲ್ಲ' ಎಂದು ತಮ್ಮದೇ ರೀತಿಯಲ್ಲಿ ಸಂದೇಶವನ್ನು ರವಾನಿಸುತ್ತಿದ್ದಾರೆ. ಆದರೆ ಒಂದಂತೂ ಸ್ಪಷ್ಟ. ಈ ಎಲ್ಲ ತಂತ್ರಗಾರಿಕೆಗಳೂ ನಡೆದಿರುವುದು ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು! ರಾಹುಲ್‍ರ ನಿಷ್ಕ್ರಿಯತೆಯಿಂದ ರೋಸಿಹೋಗಿರುವ ಕಾಂಗ್ರೆಸ್‍ ನಾಯಕರು ಪ್ರಿಯಾಂಕ ಬೇಕೆಂದು ರಚ್ಚೆ ಹಿಡಿದಿದ್ದಾರೆ. ಆದರೆ ವಾದ್ರಾನನ್ನು ಸುತ್ತುವರಿದಿರುವ ಅಕ್ರಮ ಅಸ್ತಿಯ ವಿಷವರ್ತುಲ ಪ್ರಿಯಾಂಕಳನ್ನು ಆಪೋಶನ ತೆಗೆದುಕೊಳ್ಳದೆ ಬಿಟ್ಟೀತೇ? ಒಟ್ಟಿನಲ್ಲಿ, ದಿನೇ ದಿನೇ ಹೆಚ್ಚುತ್ತಿರುವ ಮೋದಿಯವರ ಜನಪ್ರಿಯತೆ ಬಹಳಷ್ಟು ಮಂದಿಯ ನಿದ್ದೆಗೆಡಿಸಿದೆ! ಉದಾಹರಣೆಗೆ, ಮೊನ್ನೆ ಸಿಡ್ನಿಯ ಆಲ್‍ಫೋನ್ಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದಿದ್ದ ಜನಸ್ತೋಮವನ್ನು ಕಂಡು ಕಂಗಾಲಾದರು ಕಾಂಗ್ರೆಸ್‍ನ ಸಲ್ಮಾನ್ ಖುರ್ಷಿದ್. ಜನರನ್ನು ದುಡ್ಡು ಕೊಟ್ಟು ಕರೆದೊಯ್ಯಲಾಗುತ್ತಿದೆ ಎಂದು ಹುಯಿಲೆಬ್ಬಿಸಿದರು. ಹಾಗೆ ಜನರನ್ನು ಸೇರಿಸಲು ಇದೇನು ಕಾಂಗ್ರೆಸ್ ನಾಯಕರ, ಬರೆದಿದ್ದನ್ನು ಓದುವ ಭಾಷಣ ಕೆಟ್ಟುಹೋಯಿತೆ? ಮತ್ತೊಂದು ಆಸಕ್ತಿಕರ ಬೆಳವಣಿಗೆಯನ್ನೂ ನಿಮಗೆ ಹೇಳಲೇಬೇಕು. ಅರವಿಂದ್ ಕೇಜ್ರಿವಾಲ್ ನೆನಪಿದ್ದಾರೆ ತಾನೆ? ದೆಹಲಿಯ ಮುಖ್ಯಮಂತ್ರಿಯಾಗಿದ್ದೇ ತಡ, ಇನ್ನೇನು ಪ್ರಧಾನಿಯೂ ಆಗಿಬಿಡುತ್ತೇನೆಂಬ ಹುಮ್ಮಸ್ಸಿಗೆ ಬಿದ್ದು ದೆಹಲಿಯನ್ನು ಒದ್ದು ಓಡಿದ್ದರಲ್ಲ? ಆಮೇಲೆ 'ಕೈಸುಟ್ಟುಕೊಂಡು ತಪ್ಪು ಮಾಡಿಬಿಟ್ಟೆ' ಎಂದು ಹಪಹಪಿಸಿದ್ದು ಹಳೇ ಸುದ್ದಿ. ಈಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಎಕೆ-49 (49 ದಿನಗಳ ಆಡಳಿತ ನೀಡಿದ್ದಕ್ಕೆ) ಎಂದೇ ಖ್ಯಾತರು! ಬರಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಅವರು ಸಜ್ಜಾಗುತ್ತಿರುವುದು ಹೇಗೆ ಹೇಳಿ? ಮೋದಿಯವರ ಗುಣಗಾನ ಮಾಡುತ್ತಾ! ಹೀಗಾದರೂ ಜನ ತಮ್ಮನ್ನು ನಂಬುತ್ತಾರೇನೋ ಎಂಬ ಆಸೆ ಅವರಿಗೆ ಪಾಪ! ಇವ್ಯಾವುಗಳ ಪರಿವೆಯೂ ಇಲ್ಲದೆ, ದೇಶ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ ನಮ್ಮ ಪ್ರಧಾನಿ. ಅಭಿವೃದ್ಧಿ, ಸುಖ, ಶಾಂತಿಗಳನ್ನೊಳಗೊಂಡ ಸ್ವರ್ಗವನ್ನು ಧರೆಗಿಳಿಸುವುದು ಸುಲಭದ ಮಾತಲ್ಲ. ಆ ಸಾಹಸ ಎಲ್ಲರ ಕೈಗಳಿಗೆ ಎಟಕುವುದೂ ಇಲ್ಲ. ಅದಕ್ಕೆ ಕಠಿಣವಾದ ಇಚ್ಛಾಶಕ್ತಿ ಹಾಗೂ ಸಮಯ ಎರಡೂ ಬೇಕು. ದೇಶಕ್ಕೋಸ್ಕರ ತನ್ನ ಖಾಸಗಿ ಬದುಕನ್ನೇ ಮುದುರಿ ಮೂಲೆಗೆಸೆದ ಮನುಷ್ಯನ ಇಚ್ಛಾಶಕ್ತಿಯ ಬಗ್ಗೆ ಎರಡು ಮಾತಿಲ್ಲ! ಅದರೆ ಹೆಜ್ಜೆ ಹೆಜ್ಜೆಗೂ ಮುಳ್ಳಾಗದೆ ಆತನಿಗೆ ಬೇಕಾದ ಸಮಯ ಕೊಡಲು ನಾವು ಸಿದ್ಧರಿದ್ದೇವಾ?
2017/12/15 02:39:45
http://sahanavijay.blogspot.com/2014/11/blog-post_22.html
mC4
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 34 ನೇ ವಾರ ನಿಮ್ಮ ಮಗು ಈಗ ಹೊರ ಜಗತ್ತಿಗೆ ಬರಲು ಸಂಪೂರ್ಣವಾಗಿ ಸಿದ್ಧಗೊಂಡಿದೆ. ನಿಮ್ಮ ಗರ್ಭಾವಸ್ಥೆ ಪರಿಪೂರ್ಣವಾಗಿದೆ. ನಿಮ್ಮ ಮಗು ಈಗ 18 ಇಂಚು ಉದ್ದ ಮತ್ತು 2200 ಗ್ರಾಮ ತೂಕವನ್ನು ಹೊಂದಿದೆ. ಮಗುವಿನ ಶ್ವಾಸಕೋಶ ಮತ್ತು ಕೇಂದ್ರ ನರ ಮಂಡಲ ವ್ಯವಸ್ಥೆ ಬಹುತೇಕ ಪ್ರಬುದ್ಧವಾಗಿದೆ. ನಿಮ್ಮ ಮಗು 34-37 ನೇ ವಾರಗಳ ನಡುವೆ ಜನಿಸಿದರೂ ಸಹ ಅದು ಅಕಾಲಿಕ ಜನನವೆಂದೇ ಪರಿಗಣಿಸಲ್ಪಡುತ್ತದೆ. ಆದರೆ ಅತಿ ಹೆಚ್ಚು ಸಮಸ್ಯೆಗಳನ್ನು ಎದುರಿಸುವುದಿಲ್ಲ. ಆದಾಗ್ಯೂ ನೀವು ನಿಯೋನಾಟಲ್ ಇಂಟೆನ್ಸಿವ್ ಕೇರ್ ಯುನಿಟ್ (NICU) ನಲ್ಲಿ ಸ್ವಲ್ಪ ದಿನಗಳ ಕಾಲ ಇರಬೇಕಾಗಬಹುದು. ಮಾತ್ರತ್ವ ರಜೆಯನ್ನು ಯಾವಾಗ ತೆಗೆದುಕೊಳ್ಳಬೇಕು? ಇದಕ್ಕೆ ಸರಿಯಾದ ಸಮಯ ಯಾವುದು? ಎಂಬ ಚಿಂತೆ ನಿಮಗೆ ಕಾಡುತ್ತಿರುಬಹುದು. ನೀವು ಉದ್ಯೊಗಸ್ಥರಾಗಿದ್ದರೇ, ಕೆಲಸದಲ್ಲಿ ಮುಂದುವರೆಯಿರಿ. ನಿಮ್ಮ ವೈದ್ಯರು ನಿಮಗೆ ವಿಶ್ರಾಂತಿತೆಗೆದುಕೊಳ್ಳಿ ಎಂದು ಹೇಳುವರೆಗೂ ಮುಂದುವರೆಯಿರಿ. ನಿಮ್ಮ ಉದ್ಯೋಗವು ನಿಮಗೆ ಪ್ರಸವ ವೇದನೆಯ ಕುರಿತು ಹೆಚ್ಚು ಚಿಂತಿಸದಂತೇ ಮಾಡುತ್ತದೆ. ನೀವು ಇಲ್ಲಿ ಸಂಗ್ರಹಿಸುವ ರಜೆಗಳು ನಿಮ್ಮ ಪ್ರಸವದ ನಂತರ ಉಪಯೋಗಕ್ಕೆ ಬರುತ್ತವೆ ನೀವು ಕಾರ್ಡ್ ಬ್ಲಡ್ ಬ್ಯಾಂಕಿಂಗ್‌ಗೆ ಸಹಿ ಮಾಡಬೇಕೆಂದು ಇಚ್ಛಿಸುವಿರಾದರೇ, ಇದನ್ನು ಮಾರ್ಕ್ ಮಾಡಿ. ಈ ವಾರದ ನಿಮ್ಮ ಆಯ್ಕೆಗಳನ್ನು ಪರಿಶೀಲಿಸಲು ದಯವಿಟ್ಟು ನಿಮ್ಮ ಗರ್ಭಾವಸ್ಥೆಯಲ್ಲಿ ವಾರದಿಂದ ವಾರಕ್ಕೆ ಅದನ್ನು ಗುರುತಿಸಿ. ನೀವು ಆಯ್ಕೆ ಮಾಡುವ ಮೊದಲು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ ಮತ್ತು ಬೇಬಿಚಕ್ರದಲ್ಲಿ ವಿಮರ್ಶೆಗಳನ್ನು ಓದಿ. ಪ್ರಸ್ತುತ ಸಮಯದಲ್ಲಿ ನೀವು ಬ್ಯಾಂಕಗಳಿಗೆ ಯಾವ ಪ್ರಶ್ನೆಗಳನ್ನು ಕೇಳಬೇಕೆಂದು ನಿಮಗೆ ತಿಳಿದಿರಬೇಕು ಮತ್ತು ಅವರು ನೀಡುವ ಫ್ರಿಬೀಸ್‍ಗಳ ಮೇಲೆ ಆಕರ್ಷಿತರಾಗಬೇಡಿ. ನಿಮ್ಮ ಕಾರ್ಡ್ ಬ್ಲಡ್ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿರಬೇಕು ಮತ್ತು ಅಗತ್ಯ ಪ್ರಮಾಣಿಕರಣಗಳನ್ನು ಹೊಂದಿರಬೇಕು. ಈ ಸಮಯದಲ್ಲಿ ನಿಮಗೆ ರಾತ್ರಿ ಮಲಗುವುದು, ಹೊರಳುವುದು, ಮತ್ತು ಭಂಗಿಗಳನ್ನು ಬದಲಿಸುವುದು ಸಂಪೂರ್ಣವಾಗಿ ಕಷ್ಟವಾಗಬಹುದು. ನಿಮ್ಮ ಮಗು ವಾರದಿಂದ ವಾರಕ್ಕೆ ಬೆಳೆಯುತ್ತಿದೆ. ನಿಮಗೆ ಪದೇ ಪದೇ ಮೂತ್ರ ಮಾಡಬೇಕು ಎಂದೆನಿಸಬಹುದು. ಇದು ಸಹ ನಿಮ್ಮ ನಿದ್ರೆಗೆ ಭಂಗ ತರಲಿದೆ. ಇನ್ನೂ ಮುಂದೆ ನೀವು ನಿಮ್ಮ ಮಗುವಿಗಾಗಿ ನಿದ್ರೆಗಳೀಲ್ಲದ ರಾತ್ರಿ ಕಳೆಯಬೇಕಾಗಿದೆ. ಆದ್ದರಿಂದ ಪ್ರಕೃತಿ ನಿಮ್ಮನ್ನು ಬಹುಶಃ ಈಗಲೇ ಸಿದ್ಧಗೊಳಿಸುತ್ತಿದೆ. ಅತಿಯಾದ್ ದಣಿವು ನಿಮ್ಮನ್ನು ಕಾಡಬಹುದು. ನಿಮಗೆ ಮೇಲಿಂದ ದಣಿವು ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಕಿಬ್ಬೊಟ್ಟೆ ಕೆಳಗಿನ ನೋವು ನಿಮಗೆ ಆಲಾರಾಮ್ ಇದ್ದಂತೆ. ನಿಮಗೆ ಯಾವುದೇ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಳ್ಳಬಹುದು ಎಂಬುದನ್ನು ಇದು ಸೂಚಿಸುತ್ತದೆ. ಪ್ಯಾಂಟ್ ಮತ್ತು ಲೆಗ್ಗಿಂಗ್ ಧರಿಸುವುದು ನಿಮಗೆ ತೊಂದರೆ ಎನಿಸಿದರೇ, ಈಗ ನೀವು ಸರಳವಾದ ಸ್ಕರ್ಟ್ ಮತ್ತು ಡ್ರೆಸ್ಸುಗಳನ್ನು ಧರಿಸಿ. ನೀವು ನಿಮಗೆ ಆರಾಮದಾಯಕ ಎನಿಸಬೇಕು. ಈ ಸಮಯದಲ್ಲಿ ಹೆದರಿಕೆ ಮತ್ತು ಉತ್ಸಾಹ ಭಾವನೆಗಳು ಏಕ ಕಾಲದಲ್ಲಿ ಉಂಟಾಗಬಹುದು. ನಿಮ್ಮನ್ನು ಕ್ರೇಜಿಯನ್ನಾಗಿ ಮಾಡಬಹುದು. ನಿಮ್ಮ ಮಗುವನ್ನು ಸ್ವಾಗತಿಸಲು ನೀವು ಉತ್ಸಾಹವನ್ನು ಹೊಂದಿದ್ದೀರಿ. ನೀವು ಮೊದಲ ಬಾರಿಗೆ ತಾಯಿಯಾಗುತ್ತಿದ್ದರೇ ನಿಮಗೆ ಆತಂಕ ಕಾಡುತ್ತದೆ. ನಿಮಗೆ ಹೆರಿಗೆ ನೋವು ಅನುಭವವಾಗಿಲ್ಲ. ಇದು ನಿಮ್ಮಲ್ಲಿ ಹೆದರಿಕೆಯನ್ನು ಉಂಟು ಮಾಡುತ್ತದೆ. ಒಂದು ಹೊಸ ಮಗುವಿನೊಂದಿಗೆ ಮತ್ತು ಹೊಸ ಜವಾಬ್ದಾರಿಗಳನ್ನು ನಿಭಾಯಿಸುವ ಬಗ್ಗೆ ನೀವು ಆತಂಕ ವ್ಯಕ್ತಪಡಿಸಬಹುದು. ತಾಯಿಯ ಪ್ರವೃತ್ತಿಗಳು ನಿಮಗೆ ಸಹಾಯ ಮಾಡುತ್ತವೆ ಮತ್ತು ನೀವು ಚೆನ್ನಾಗಿಯೇ ಮಾಡುತ್ತೀರಿ ಎಂದು ನೆನಪಿಡಿ. ಕೆಲವು ಅಮ್ಮಂದಿರು ಹೊಟ್ಟೆ ಮತ್ತು ದೇಹದ ಇತರ ಭಾಗಗಳ ಮೇಲೆ ದದ್ದುಗಳು ಉಂಟಾಗಬಹುದು. ಇದು PUPPP (ಪ್ರುರಿಟಿಕ್ ಅರ್ಟಿಕೇರಿಯಲ್ ಪಾಪಲ್ ಮತ್ತು ಪ್ರೆಗ್ನೆನ್ಸಿ ಪ್ಲ್ಯಾಕ್ಸ್) ಎಂಬ ಸ್ಥಿತಿ. ಇದನ್ನು ಕೂಡ 'ಪ್ರೆಗ್ನೆನ್ಸಿ ಪ್ರೇರಿತ ದದ್ದು' ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಜನನದ ನಂತರ ಕಣ್ಮರೆಯಾಗುತ್ತದೆ ಆದರೆ ನಿಮ್ಮ ಯಕೃತ್ತಿನ ಕಾರ್ಯಚಟುವಟಿಕೆಯೊಂದಿಗೆ ಸಮಸ್ಯೆಯನ್ನು ಸೂಚಿಸುತ್ತದೆ ಮತ್ತು ಈಗ ನಿಮಗೆ ಕೆಲವು ಔಷಧಿಗಳು ಅಗತ್ಯವಾಗಬಹುದು. ಇದನ್ನು ವೈದ್ಯರಿಗೆ ವರದಿ ಮಾಡಬೇಕಾಗುತ್ತದೆ. ನಿಮಗೆ ಈ ವಾರದಲ್ಲಿ ನೆಲ ಒರೆಸಲು ಮತ್ತು ಗುಡಿಸಲು ಹೇಳಬಹುದು. ಇದರಿಂದ ನಿಮಗೆ ಹೆರಿಗೆ ಪ್ರಕ್ರಿಯೆ ಸಹಜವಾಗುತ್ತದೆ ಎಂಬ ನಂಬಿಕೆ ಅವರದಾಗಿದೆ. ನೆಲ ಒರೆಸುವುದು ಮತ್ತು ಗುಡಿಸುವುದರಿಂದ ನಿಮ್ಮ ಕಾಲುಗಳಿಗೆ ವ್ಯಾಯಾಮವಾಗಿ ಹೆರಿಗೆ ಪ್ರಕ್ರಿಯೆ ಸಹಜವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಇದು ನಿಜವಲ್ಲ. ಕೆಲಸ ಮಾಡುವುದು ಅನಿವಾರ್ಯವಲ್ಲ. ಇದರಿಂದ ನಿಮ್ಮ ಮಗುವಿನ ತಲೆಯನ್ನು ನಿಮ್ಮ ತೊಡೆಯಿಂದ ತಳ್ಳುವುದು ಕೊನೆಗೊಳ್ಳಬಹುದು ಮತ್ತು ಇದು ತಲೆಗೆ ತೊಡಗಿಕೊಳ್ಳುವುದರಿಂದ ತಡೆಯಬಹುದು.
2022/01/24 10:48:02
https://www.babychakra.com/learn/6475-nimmoage-nimma-magu-hge-beeyuttade-34-ne-vaara
mC4
ಚಿತ್ರದುರ್ಗದ ಆಡುಮಲ್ಲೇಶ್ವರ ಕಿರುಮೃಗಾಲಯದಲ್ಲಿದೆ ಉದ್ಯೋಗಾವಕಾಶ | Job Opportunities In Adumalleshwara Kiru Mrugalaya - Kannada Oneindia job chitradurga doctor ಉದ್ಯೋಗ ಚಿತ್ರದುರ್ಗ | Published: Friday, February 21, 2020, 11:31 [IST] ಚಿತ್ರದುರ್ಗ, ಫೆಬ್ರವರಿ 21: ಚಿತ್ರದುರ್ಗದ ಆಡುಮಲ್ಲೇಶ್ವರ ಕಿರುಮೃಗಾಲಯದಲ್ಲಿ ಖಾಲಿ ಇರುವ ಬಯಾಲಜಿಸ್ಟ್ ವೆಟರ್ನರಿಯನ್, ಪಶುವೈದ್ಯ ಮತ್ತು ಸಿವಿಲ್ ಇಂಜಿನಿಯರ್ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಯಾಲಜಿಸ್ಟ್ ಹುದ್ದೆಗೆ ಬಿಎಸ್ ‍ಸಿ ಪ್ರಾಣಿಶಾಸ್ತ್ರ ಅಥವಾ ಎಂಎಸ್ಸಿ ಪ್ರಾಣಿಶಾಸ್ತ್ರ ಪದವಿ ಪಡೆದಿರಬೇಕು. ವೇತನ ರೂ.10000/ ದಿಂದ 15000/ ಗಳ ವರೆಗೆ ನಿಗದಿಪಡಿಸಲಾಗಿದೆ. ವೆಟರ್ನರಿ ಅಸಿಸ್ಟೆಂಟ್ ಹುದ್ದೆಗೆ ಡಿಪ್ಲೊಮೋ ಇನ್ ವೆಟರ್ನರಿ ಪಡೆದಿರಬೇಕು. ಈ ಹುದ್ದೆಗೆ ವೇತನ ರೂ.10000/ ದಿಂದ 15000/ರೂ ನೀಡಲಾಗುವುದು. ಸಿವಿಲ್ ಇಂಜಿನಿಯರ್ ಹುದ್ದೆಗೆ ಬಿಇ ಸಿವಿಲ್ ಇಂಜಿನಿಯರ್ ಪದವಿ ಪಡೆದಿರಬೇಕು. ಈ ಹುದ್ದೆಗೆ ವೇತನ ರೂ. 15000/ದಿಂದ 20000 ರೂಪಾಯಿಗಳವರೆಗೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಇದೇ ಫೆ.25ರಂದು ಬೆಳಿಗ್ಗೆ 11 ಗಂಟೆಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಚಿತ್ರದುರ್ಗ ವಿಭಾಗ, ವಿ.ಪಿ.ಬಡಾವಣೆ, ಚಿತ್ರದುರ್ಗ ಕಚೇರಿ ಸಭಾಂಗಣದಲ್ಲಿ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುವುದು ಎಂದು ಚಿತ್ರದುರ್ಗ ಆಡುಮಲ್ಲೇಶ್ವರ ಕಿರುಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. Applications are invited from interested candidates for recruitment of vacant Biologist Veterinarian, Veterinary doctor and Civil Engineer posts at Adumalleswara kiru mrugalaya in Chitradurga,
2021/05/06 22:29:31
https://kannada.oneindia.com/news/chitradurga/job-opportunities-in-adumalleshwara-kiru-mrugalaya-185600.html
mC4
ಸುಳ್ಳುಹೇಳಿ ಬಿಜೆಪಿ ಜನರನ್ನು ವಂಚಿಸಿದೆ: ಮುಲಾಯಂ ಸಿಂಗ್ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Dec 28, 2016, 5:40 PM IST ಲಕ್ನೊ,ಡಿ. 28: ಕೇಂದ್ರ ಸರಕಾರದ ನೋಟು ಅಮಾನ್ಯ ಕ್ರಮ ಕುರಿತು ಸಮಾಜವಾದಿ ಪಾರ್ಟಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಬಿಜೆಪಿಯತ್ತ ಮತ್ತೊಮ್ಮೆ ಛಾಟಿ ಬೀಸಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿಯ ನೋಟು ಅಮಾನ್ಯ ಕ್ರಮದಿಂದಾಗಿ ರೈತರು, ವ್ಯಾಪಾರಿಗಳು, ಬಡವರು, ಕಾರ್ಮಿಕರು ಸರ್ವ ನಾಶವಾಗಿದ್ದಾರೆ. ರದ್ದಿ ಕಾಗದದಲ್ಲಿ ಈಗ ಹೊಸ ನೋಟುಗಳನ್ನು ತಯಾರಿಸಲಾಗಿದೆ. ಬಿಜೆಪಿ ಸುಳ್ಳು ಹೇಳಿ ಜನರನ್ನು ವಂಚಿಸಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ನೀಡಿದ ಯಾವ ಭರವಸೆಗಳು ಈವರೆಗೂ ಪೂರ್ಣಗೊಂಡಿಲ್ಲ. ಮೋದಿ ಘೋಷಿಸಿದ್ದ 15 ಲಕ್ಷ ರೂಪಾಯಿ ಯಾರ ಬ್ಯಾಂಕ್ ಖಾತೆಗೂ ಬಂದಿಲ್ಲ ಎಂದು ಲಕ್ನೊದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಯನ್ನು ಟೀಕಿಸಿದ್ದಾರೆ ಎಂದು ವರದಿ ತಿಳಿಸಿದೆ.
2020/01/21 05:42:28
http://www.varthabharati.in/article/raashtriya/54854
mC4
ಕಣ್ಣೆದುರಿಗಿನ ಸೋಲನ್ನು ಹೇಗೆ ಎದುರಿಸಬೇಕು ? | Vishweshwar Bhat 1/13/14 • ಅಂಕಣ: ಡೈಲಿ ಡೋಸ್ ಡೇಲಿ ಡೋಸ್ – ಇದು ಪ್ರತಿದಿನದ ಅಂಕಣ ಸೋಲು ನಮ್ಮ ಮುಂದೆ ನಿಂತು ಅಣಕಿಸುತ್ತಿರುತ್ತದೆ. ಇನ್ನು ಕೆಲವೇ ಕ್ಷಣಗಳಲ್ಲಿ ಸೋಲುವುದು ಗ್ಯಾರಂಟಿಯೆಂಬುದು ಮನವರಿಕೆಯಾಗಿ ಹೋಗಿರುತ್ತದೆ. ಅಂಥ ಸಂದರ್ಭದಲ್ಲಿ ಸೋಲನ್ನು ಎದುರಿಸುವುದು, ಸೋಲಿಗೆ ಮುಖಾಮುಖಿಯಾಗುವುದು ನಿಜಕ್ಕೂ ಸವಾಲು. ಇಂಥ ಕ್ಷಣದಲ್ಲಿ ನಾವು ಹೇಗೆ ವರ್ತಿಸುತ್ತೇವೆ ಎಂಬುದು ನಾವು ಸೋಲನ್ನು ಹೇಗೆ ನಿಭಾಯಿಸುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ಸೋಲಿಗಿಂತ ಆ ಸಂದರ್ಭದಲ್ಲಿ ನಮ್ಮ ಪ್ರತಿಕ್ರಿಯೆ, ವರ್ತನೆಯೇ ಬಹಳ ಮುಖ್ಯವಾಗುತ್ತದೆ. ನನಗೆ ಈ ಸಂದರ್ಭದಲ್ಲಿ ನೆನಪಾಗುವವನು ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ. ಇತ್ತೀಚೆಗೆ ನಾನು ಪತ್ರಿಕೆಯೊಂದರಲ್ಲಿ ಅವರ ಸಂದರ್ಶನ ಓದುತ್ತಿದ್ದೆ. ಅವರಿಗೆ ಮೂರೇ ಮೂರು ಪ್ರಶ್ನೆಗಳನ್ನು ಕೇಳಲಾಗಿತ್ತು. ನಿಮ್ಮ ಜೀವನದ ಅತ್ಯಂತ ಕಷ್ಟದಾಯಕವಾದ ಕ್ಷಣಗಳು ಯಾವುವು? ಅದನ್ನು ನೀವು ಹೇಗೆ ನಿಭಾಯಿಸಿದಿರಿ? ಹಾಗೂ ಆ ಘಟನೆಯಿಂದ ನೀವು ಕಲಿತ ಪಾಠವೇನು? ಈ ಮೂರು ಪ್ರಶ್ನೆಗಳಿಗೆ ವಿಶ್ವನಾಥನ್ ಆನಂದ ಹೇಗೆ ಉತ್ತರಿಸಬಹುದು ಎಂಬ ಕುತೂಹಲವಿತ್ತು. ಮೊದಲನೆಯ ಪ್ರಶ್ನೆಗೆ ಅವರು ಹೇಳಿದ್ದು: 'ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಒಂಭತ್ತನೇ ಗೇಮ್‌ನಲ್ಲಿ ಮ್ಯಾಗ್ನಸ್ ಕಾರ್ಲಸನ್ ವಿರುದ್ಧ ನಾನು ಸೋಲುವುದು ಖಚಿತವಾಗಿತ್ತು. ಇಷ್ಟು ದಿನಗಳವರೆಗೆ ನಾನು ಧರಿಸಿದ್ದ ವಿಶ್ವ ಚಾಂಪಿಯನ್ ಪಟ್ಟ ನನ್ನ ಕೈ ತಪ್ಪಿ ಹೋಗುತ್ತಿದೆಯೆಂಬುದು ನನಗೆ ಮನವರಿಕೆಯಾಯಿತು. ಆ ಚಾಂಪಿಯನ್ ಪಟ್ಟಕ್ಕೆ ಇಂದೇ ಕೊನೆಯ ದಿನ ಎಂಬುದು ಸಹ ಖಾತ್ರಿಯಾಯಿತು.' ಎರಡನೆಯ ಪ್ರಶ್ನೆಗೆ ಅವರು ಹೇಳಿದ್ದು: 'ನಾನು ಒಂದು ರೋಚಕ ಪಂದ್ಯವಾಡಿದೆ ಎಂಬ ಬಗ್ಗೆ ನನಗೆ ಅತೀವ ಹೆಮ್ಮೆ, ಅಭಿಮಾನವಿದೆ. ನಾನು ಈ ಪಂದ್ಯದಲ್ಲಿ ಸೋತಿರಬಹುದು, ಪರವಾಗಿಲ್ಲ, ಆದರೆ ನನ್ನ ಸ್ಟೈಲಿನಲ್ಲಿ, ಎಂದಿನ ಸಹಜ ರೀತಿಯಲ್ಲಿ ಆಡಿದೆ ಎಂಬ ಬಗ್ಗೆ ಸಮಾಧಾನವಿದೆ.' ಮೂರನೆಯ ಪ್ರಶ್ನೆಗೆ ಅವರು ಹೇಳಿದ್ದು: 'ಜೀವನದಲ್ಲಿ ಸವಾಲುಗಳು ಎದುರಾದಾಗ ಅದನ್ನು ಸಹಜವಾಗಿ ಸ್ವೀಕರಿಸುತ್ತಾ ಮಜಾ ಅನುಭವಿಸಬೇಕು ಎಂಬುದನ್ನು ಇದರಿಂದ ಕಲಿತೆ. ಚೆಸ್ ಆಟದಲ್ಲಿ ನೀವು ಒಂದು ತಪ್ಪನ್ನು ಮಾಡುತ್ತೀರಿ. ಆನಂತರ ಮತ್ತೊಂದನ್ನು ಮಾಡುತ್ತೀರಿ. ಮೊದಲ ತಪ್ಪನ್ನು ಸರಿಪಡಿಸಲು ಹೋಗಿ ಇನ್ನೊಂದು ತಪ್ಪೆಸಗುತ್ತೀರಿ. ಕೊನೆಗೆ ಆತ್ಮಹತ್ಯೆಯೊಂದೇ ದಾರಿ ಎಂಬ ನಿರ್ಧಾರಕ್ಕೆ ಬರುತ್ತೀರಿ. ಆದರೆ ನಾನು ಆ ದಿನ ಒಂದು ನಿರ್ಧಾರಕ್ಕೆ ಬಂದೆ. ನಾನು ಒಂದು ವೇಳೆ ಸೋತರೂ, ಜನ ನನ್ನನ್ನು ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದವ ಎಂಬುದನ್ನು ನೆನಪಿಟ್ಟುಕೊಳ್ಳುತ್ತಾರೆ. ಇಂಥ ಸಾಧನೆ ಮಾಡಿದವರು ಕೆಲವೇ ಕೆಲವು ಮಂದಿ. ಹೀಗಾಗಿ ಈ ಸೋಲನ್ನು ಬಹಳ ಗಂಭೀರವಾಗಿ ಪರಿಗಣಿಸಬಾರದು, ಆದರೆ ಅದರಿಂದ ಪಾಠ ಕಲಿಯಬೇಕೆಂದು ನಿರ್ಧರಿಸಿದೆ. Sometimes life is a bitch. But you have to put a Ctrl X and start again.
2017/09/24 05:04:19
http://vbhat.in/daily-dose/defeat_13011/
mC4
ಬಂಟ್ವಾಳ ತಾ.ಸರಕಾರಿ ಆಸ್ಪತ್ರೆ ರಾಜ್ಯದಲ್ಲಿ ಮೂರನೇ ಸ್ಥಾನ :ಶಾಸಕ ರಾಜೇಶ್ ನಾಯ್ಕ್ | Suddi9 |Kannada News | A news portal of Coastal Karnataka | Mangalore News | Bajpe | Suddi Nine ಬಂಟ್ವಾಳ ತಾ.ಸರಕಾರಿ ಆಸ್ಪತ್ರೆ ರಾಜ್ಯದಲ್ಲಿ ಮೂರನೇ ಸ್ಥಾನ :ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ: ತಾನು ಶಾಸಕನಾದ ಬಳಿಕ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಮೂಲಸೌಕರ್ಯ ಹೆಚ್ಚಿಸುವ ಕಾರ್ಯ ನಡೆಸಲಾಗಿದೆ, ಇದೀಗ ತಜ್ಞ ವೈದ್ಯರೊಂದಿಗೆ ಸಕಲ ಸೌಕರ್ಯದೊಂದಿಗೆ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆ ಸುಸಜ್ಜಿತ ಆಸ್ಪತ್ರೆಯಾಗಿ ಕಾರ್ಯಾಚರಿಸುತ್ತಿದ್ದು, ರಾಜ್ಯಮಟ್ಟದಲ್ಲಿ 3ನೇ ಸ್ಥಾನ ಪಡೆದಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು. ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಅಪರಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳಲ್ಲಿ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗಿದೆ. ಇದರ ಫಲವಾಗಿಯೇ ಪ್ರಸ್ತುತ ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿನ ಖಾಲಿ ಇದ್ದ ಎಲ್ಲಾ ತಜ್ಞ ವೈದ್ಯರು ಹುದ್ದೆಗಳನ್ನು ಭರ್ತಿಗೊಳಿಸಲಾಗಿದ್ದು, ಪ್ರಸ್ತುತ ಇವರು ರೋಗಿಗಳ ಚಿಕಿತ್ಸೆ ಆಸ್ಪತ್ರೆಯಲ್ಲಿ ಲಭ್ಯರಿರುತ್ತಾರೆ ಎಂದರು.ಯಾವುದೇ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲದಂತೆ ತಾಲೂಕು ಸರಕಾರಿ ಆಸ್ಪತ್ರೆ ಕಾರ್ಯಾಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕರು,ತಜ್ಞ ವೈದ್ಯರಿಂದ ರೋಗಿಗಳಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರಕಾರದ ಅನುದಾನದಡಿ, ವಿವಿಧ ಸಂಘ ಸಂಸ್ಥೆಗಳ, ದಾನಿಗಳ ಸಹಕಾರದಿಂದ ವಿವಿಧ ಆಧುನಿಕ ವೈದ್ಯಕೀಯ ಉಪಕರಣಗಳನ್ನು ಮತ್ತು ಇತರೆ ಸೌಲಭ್ಯಗಳನ್ನು ಈ ಆಸ್ಪತ್ರೆಗೆ ಕಳೆದ 2 ವರ್ಷಗಳಲ್ಲಿ ಪೂರೈಸಲಾಗಿದೆ. ಈಗಾಗಲೇ ಎಂ,ಆರ್,ಪಿ,ಎಲ್ ಸಂಸ್ಥೆಯಿಂದ ಒಂದು ಸುಸಜ್ಜ್ಜಿತ ಅಂಬ್ಯಲೆನ್ಸ್ , ಕ್ಯಾಡ್ ಸಂಸ್ಥೆ 5 ಇ.ಸಿ.ಜಿ. ಉಪಕರಗಳನ್ನು ನೀಡಿ ಸಹಕರಿಸಿದ್ದಾರೆ. ಮೃತದೇಹಗಳನ್ನು ಇರಿಸಲು ಅನುಕೂಲವಾಗುವಂತೆ 2 ಶೈತ್ಯಾಗಾರಗಳನ್ನು ಬಂಟ್ವಾಳ ಲಯನ್ಸ್ ಕ್ಲಬ್ ಮಂದಿನ ನವಂಬರ್ ನಲ್ಲಿ ಆಸ್ಪತ್ರೆಗೆ ಕೊಡುಗೆಯಾಗಿ ಒದಗಿಸಲಿದ್ದಾರೆ ಎಂದು ಅವರು ವಿವರಗಳನ್ನು ನೀಡಿದರು. ಕೋವಿಡ್ ಸಂದರ್ಭದಲ್ಲು ಆಸ್ಪತ್ರೆಯ ಎಲ್ಲಾ ವೈದ್ಯರು,ಸಿಬ್ಬಂದಿಗಳು ಯಾವುದೇ ದೂರುಗಳು ಬಾರದಂತೆ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚಗೆ ವ್ಯಕ್ತಪಡಿಸಿದ್ದಲ್ಲದೆ ಅಭಿನಂದನೆ ಸಲ್ಲಿಸಿದರು. ಪುಂಜಾಲಕಟ್ಟೆ ಮೇಲ್ದರ್ಜೆಗೆ: ಆಸ್ಪತ್ರೆಗಳ ಆಧುನೀಕರಣಕ್ಕೆ ಸಂಬಂಧಿಸಿದಂತೆ ಬಹುದಿನಗಳ ಬೇಡಿಕೆಯಾಗಿರುವ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಕುರಿತಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ. ಇದರ ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರ, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಗಳನ್ನು ಭರ್ತಿ ಮಾಡುವ ಕುರಿತಂತೆ ಸಚಿವರೊಂದಿಗೆ ಚರ್ಚಿಸಿದ್ದು, ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿರುತ್ತಾರೆ ಎಂದು ಶಾಸಕ ರಾಜೇಶ್ ನಾಯ್ಕ್ ಮಾಹಿತಿ ನೀಡಿದರು. ಕೋವಿಡ್ ಸಂದರ್ಭದಲ್ಲು ಈ ಆಸ್ಪತ್ರೆಯ ಡಿಜಿಟಲ್ ಎಕ್ಸ್ ರೇ ಟಿ ಎಲ್ ಡಿ ಬ್ಯಾಡ್ಜ್, ಅಲ್ಟ್ರಾ ಸೌಂಡ್ ಮೆಶಿನ್, ಇಎನ್ ಟಿ ವರ್ಕ್ ಸ್ಟೇಶನ್, ದಂತ ವೈದ್ಯಕೀಯ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ, ಸೋಲಾರ್ ಪ್ಲಾಂಟ್, ನವಜಾತ ಶಿಶುಗಳಿಗೆ ವ್ಯವಸ್ಥೆ, ಸಿಸಿ ಕ್ಯಾಮರಾ, ಕೋವಿಡ್ ಟೆಸ್ಟ್ ಗೆ ಆಧುನಿಕ ವ್ಯವಸ್ಥೆ, ಇಸಿಜಿ, ಐದು ವೆಂಟಿಲೇಟರ್ ಗಳನ್ನು ಕಳೆದ ಎರಡು ವರ್ಷಗಳಲ್ಲಿ ಒದಗಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾ ಮಾಹಿತಿ ನೀಡಿದರು. ತಾಲೂಕಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವೈದ್ಯಾಧಿಕಾರಿಗಳಿದ್ದು, ಹೆಚ್ಚುವರಿ ಸಿಬ್ಬಂದಿಯ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಬಂಟ್ವಾಳ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಷ್ಪಲತಾ,ಸಹಾಯಕ ಆಡಳಿತಾಧಿಕಾರಿ ಅನಿತಾ ಉಪಸ್ಥಿತರಿದ್ದರು.
2020/10/19 21:52:35
http://www.suddi9.com/archives/140828
mC4
ಬಹು ನಿರೀಕ್ಷಿತ ಸ್ಯಾಮ್‌ ಸಂಗ್‌ ಎ80 ಬಿಡುಗಡೆ | Udayavani – ಉದಯವಾಣಿ Team Udayavani, Aug 1, 2019, 7:34 PM IST ಮಣಿಪಾಲ: ಮೊಬೈಲ್ ತಯಾರಕ ದಿಗ್ಗಜ ಸ್ಯಾಮ್ಸಂಗ್ ಪರಿಚಯಿಸಿದ್ದ ಗ್ಯಾಲಕ್ಸಿಎ ಸರಣಿಯ ಮೊಬೈಲ್ಗಳು ವಿಶ್ವದಲ್ಲಿ ಬೇಡಿಕೆಯನ್ನು ಹೊಂದಿದೆ. ತನ್ನ ಎ ಸೀರೀಸ್ ನ ಮುಂದುವರಿದ ಭಾಗವಾಗಿ 'ಗ್ಯಾಲಕ್ಸಿ ಎ80' ಬಿಡುಗಡೆ ಮಾಡುವುದಾಗಿ ಸಂಸ್ಥೆ ಈ ಹಿಂದೆ ಘೊಷಿಸಿತ್ತು. ಅದರಂತೆ ಗುರುವಾರ ಸ್ಯಾಮ್ಸಂಗ್ ಎರಡೂ ಬದಿಯಲ್ಲೂ 48 ಮೆಗಾಪಿಕ್ಸೆಲ್ ಕ್ಯಾಮೆರಾ ಬಳಸಬಹುದಾದ ವಿಶ್ವದ ಮೊದಲ ರೊಟೇಟಿಂಗ್ ಕ್ಯಾಮೆರಾ ಸ್ಮಾರ್ಟ್ ಫೋನ್ 'ಗ್ಯಾಲಕ್ಸಿ ಎ80' ಅನ್ನು ಬಿಡುಗಡೆ ಮಾಡಿದೆ. ಹೇಗಿದೆ ಡಿಸ್ಪ್ಲೇ ಮತ್ತು ವಿನ್ಯಾಸ ಗ್ಯಾಲಕ್ಸಿ ಎ80′ ಸ್ಮಾರ್ಟ್ ಫೋನ್ 20:9 ಆಕಾರ ಅನುಪಾತದಲ್ಲಿ 6.7 ಇಂಚಿನ ಫುಲ್ HD + (2400×1080 ಪಿಕ್ಸೆಲ್ ಗಳು) ಸೂಪರ್ ಅಮೋಲೆಡ್ ನ್ಯೂ ಇನ್ಫಿನಿಟಿ ಡಿಸ್ಪ್ಲೇ ಹೊಂದಿದೆ. ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಹೊಂದಿರುವ ಈ ಸ್ಮಾರ್ಟ್ಫೋನ್ ಆಕರ್ಷಕ ಸ್ಲೈಡಿಂಗ್ ಕ್ಯಾಮೆರಾದೊಂದಿಗೆ ಅತ್ಯುನ್ನತ ಲುಕ್ ಹೊಂದಿದೆ. ಗ್ಯಾಲಕ್ಸಿ ಎ 80 1.7GH ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730 ಜಿ ಪ್ರೊಸೆಸರ್ ಹೊಂದಿದೆ. ಇದು 2 ಕೋರ್ ಗಳನ್ನು ಹೊಂದಿದ್ದು, 2.2GHz ಮತ್ತು 6 1.7GHz ನಲ್ಲಿ 8 ಜಿಬಿ ಜಿಬಿ RAM ನೊಂದಿಗೆ ಲಭ್ಯವಿದೆ. ಆಂಡ್ರಾಯ್ಡ್ 9.0 ಪೈ ಅನ್ನು ಚಾಲನೆ ಮಾಡುವ ಸ್ಮಾರ್ಟ್ ಫೋನಿನ ಆಂತರಿಕ ಮೆಮೊರಿ 128GB ಇದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ 80 ಸ್ಮಾರ್ಟ್ ಫೋನ್ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕೆಮರಾ ಹೊಂದಿದೆ. ಹಿಂದಿನ ಕ್ಯಾಮೆರಾ ಸೆಟಪ್ ಆಟೋಫೋಕಸ್ ಹೊಂದಿದೆ. ಸೆಲ್ಫಿ ತೆಗೆದುಕೊಳ್ಳುವಾಗ ಮುಂಭಾಗಕ್ಕೆ ರೊಟೇಟ್ ಆಗುತ್ತದೆ. ಕ್ಯಾಮೆರಾವನ್ನು ಬ್ಯಾಕಪ್ ಮಾಡುವ ಸೂಪರ್ ಸ್ಟೆಡಿ ಮೋಡ್, 3ಡಿ ದೃಶ್ಯಗಳನ್ನು ಗುರುತಿಸಬಹುದಾಗಿದೆ. 3ಡಿ ಡೆಪ್ತ್ ಕ್ಯಾಮೆರಾ ಜತೆಗೆ ಇನ್ಫ್ರಾರೆಡ್ ಸೆನ್ಸಾರ್ ಅನ್ನು ಹೊಂದಿದೆ. ಯು.ಎಸ್.ಬಿ. ಟೈಪ್-ಸಿ ಮತ್ತು 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 3,700 ಎಂಎಎಚ್ ಬ್ಯಾಟರಿ ಹೊಂದಿದೆ. ಮಾರುಕಟ್ಟೆಯಲ್ಲಿ ಈ ಹೊಸ ಫೋನಿನ ದರ ರೂ. 47,990 ಆಗಿರುತ್ತದೆ.
2020/02/20 09:32:50
https://www.udayavani.com/diversity/tech-world/samsung-galaxy-a80-launched
mC4
|ಸ್ಥಳ ಪರಿಶೀಲಿಸಿ ಸರಕಾರಕ್ಕೆ ಪ್ರಸ್ತಾವನೆಯ ಭರವಸೆ - yadagiri - News in kannada, vijaykarnataka ಸ್ಥಳ ಪರಿಶೀಲಿಸಿ ಸರಕಾರಕ್ಕೆ ಪ್ರಸ್ತಾವನೆಯ ಭರವಸೆ ವಿಕ ಸುದ್ದಿಲೋಕ | Updated: Apr 6, 2017, 05:08PM IST Keywords: ಸರಕಾರಕ್ಕೆ ಪ್ರಸ್ತಾವನೆ | Ydr news in kannad ಸುರಪುರ:ಸಮೀಪದ ರಂಗಂಪೇಟೆಯ ಜೆಸ್ಕಾಂ ಕಾರ್ಯಾಲಯಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗೌಡಗೇರಾ ಮತ್ತು ನಗನೂರ ಗ್ರಾಮಗಳ ರೈತರು ಬೀಗ ಮುದ್ರೆ ಹಾಕಿ ಪ್ರತಿಭಟಿಸಿದರು. ಅಧಿಕಾರಿಗಳ ನಿರ್ಲಕ್ಷ ್ಯಕ್ಕೆ ಆಕ್ರೋಶ ಹೊರ ಹಾಕಿದ ಘಟನೆ ಜರುಗಿತು. ಕೆಂಭಾವಿ ಹೋಬಳಿ ವ್ಯಾಪ್ತಿಯ ಗೌಡಗೇರಾ ಮತ್ತು ನಗನೂರ ಗ್ರಾಮಗಳ ಹೊಲಗಳಲ್ಲಿ ವಾಸ ಮಾಡುವ ರೈತರ ಮನೆಗಳಿಗೆ ವಿದ್ಯುತ್‌ ನೀಡಬೇಕು ಎಂದು ಒತ್ತಾಯಿಸಿ ಅಲ್ಲಿಯ ರೈತರು ಸೋಮವಾರ ಜೆಸ್ಕಾಂ ಕಾರಾರ‍ಯಲಯದ ಮುಂದೆ ಪ್ರತಿಭಟಿಸಿದ್ದರು. ಅಧಿಕಾರಿಗಳು ಸ್ಪಂದಿಸದೆ ಹೋದ ಹಿನ್ನೆಲೆಯಲ್ಲಿ ಮಂಗಳವಾರ ಕೂಡಾ ಧರಣಿ ಮುಂದುವರೆಸಿ ಕಚೇರಿಯ ಎಲ್ಲಾ ಕೋಣೆಗಳಿಗೆ ಬೀಗ ಜಡಿದರು. ಇದರಿಂದ ಇಲಾಖೆ ಅಧಿಕಾರಿಗಳು ಕಚೇರಿಯ ಹೊರಗಡೆ ನಿಲ್ಲಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು. ತಹಸೀಲ್ದಾರ್‌ ಸುರೇಶ ಅಂಕಲಗಿ, ಯಾದಗಿರಿಯ ಜೆಸ್ಕಾಂ ಇಇ ಬಿ.ವೆಂಕಟೇಶ, ಎಇಇ ರಾಘವೇಂದ್ರ ಜೆಸ್ಕಾಂ ಕೇಂದ್ರಕ್ಕೆ ಆಗಮಿಸಿ ರೈತರೊಂದಿಗೆ ಮಾತುಕತೆ ನಡೆಸಿದರೂ ರೈತರು ಜಗ್ಗಲಿಲ್ಲ. ಹೊಲಗಳಲ್ಲಿರುವ ಮನೆಗಳಿಗೆ ವಿದ್ಯುತ್‌ ಬೇಕು ಎಂದು ಪಟ್ಟುಹಿಡಿದರು. ಹೊಲದಲ್ಲಿರುವ ರೈತರ ಮನೆಗಳಲ್ಲಿವಿದ್ಯುತ್‌ ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುತ್ತಿದ್ದೇವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಹಾವು-ಚೇಳುಗಳ ಕಾಟ ಹೆಚ್ಚಾಗಿದೆ. ರಾತ್ರಿ ವೇಳೆ ಹಾವು ಕಡಿದು ಸತ್ತರೆ ಯಾರು ಜವಾಬ್ದಾರಿ ? ಎಂದು ಪ್ರಶ್ನಿಸಿದ ರೈತ ಹೋರಾಟಗಾರರು ನಮ್ಮ ಬೇಡಿಕೆ ಈಡೇರದಿದ್ದರೆ ಇಲ್ಲಿಯೇ ಕ್ರಿಮಿನಾಶಕ ಕುಡಿಯುತ್ತೇವೆ ಇದಕ್ಕೆ ಜೆಸ್ಕಾಂ ಅಧಿಕಾರಿಗಳೆ ಹೊಣೆ ಎಂದು ಎಚ್ಚರಿಸಿದರು. ಕಾನೂನು ಬದ್ಧವಾಗಿ ಹೊಲಗಳಲ್ಲಿ ಮನೆಗಳನ್ನು ಕಟ್ಟಲಾಗಿದೆ. ಗ್ರಾಮ ಪಂಚಾಯಿತಿ ಪರವಾನಿಗೆ ಇದೆ. ಎಲ್ಲಾ ಶುಲ್ಕ ಪಾವತಿಸಿದ್ದೇವೆ. ಅಲ್ಲಿ ಎರಡು ಶಾಲೆಗಳು ಕೂಡಾ ನಡೆಯುತ್ತಿವೆ. ಹೀಗಿದ್ದರೂ ಅಧಿಕಾರಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ದೂರಿದರು. ತಹಸೀಲ್ದಾರ್‌ ಮಧ್ಯಸ್ಥಿಕೆಯಲ್ಲಿ ಎರಡನೇ ಬಾರಿಗೆ ಜೆಸ್ಕಾಂ ಅಧಿಕಾರಿಗಳು ಮತ್ತು ರೈತರ ನಡುವೆ ಮಾತುಕತೆ ನಡೆಯಿತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ತಿಳಿಸಲಾಗುವುದು ಎಂದು ಜೆಸ್ಕಾಂ ಅಧಿಕಾರಿಗಳು ಆಶ್ವಾಸನೆ ನೀಡಿದಾಗ ರೈತರು ಧರಣಿ ನಿಲ್ಲಿಸಿದರು. ನಂತರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಗೆ ತೆರಳಿದರು. ಜೆಸ್ಕಾಂ ಎಇಇ ಈರಣ್ಣ ಹಳಿಚಂಡ್‌, ವಲಯ ಅಧಿಕಾರಿ ಶ್ರೀಶೈಲ್‌, ಕಪ್ರಾರೈ ಸಂಘದ ಗೌರವಾಧ್ಯಕ್ಷ ನಂದಣ್ಣ ವಾರಿ, ಅಧ್ಯಕ್ಷ ಧರ್ಮಣ್ಣ ದೊರೆ, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಚಿನ್ನಾಕಾರ, ಗೌಡಗೇರಾ ಮತ್ತು ನಗನೂರು ಗ್ರಾಮಗಳ ರೈತ ಮುಖಂಡರಾದ ಗುರಣ್ಣ ರಂಗಾ, ಹಣಮಂತ್ರಾಯ ಹವಲ್ದಾರ, ದೇವಿಂದ್ರಪ್ಪ ಹವಲ್ದಾರ, ಗೂಳಪ್ಪ ರಂಗಾ, ಭೀಮನಗೌಡ ಮಾಲಿ ಬಿರಾದಾರ್‌, ಶ್ರೀಶೈಲ ಅಂಗಡಿ, ಶಿವಣ್ಣ ಭುಪೂರ, ಬೈಲನಗೌಡ, ಬಸವರಾಜ ಸಾಹುಕಾರ, ಶರಣಪ್ಪ, ಹಣಮಂತ್ರಾಯ ಬೊಮ್ಮನಹಳ್ಳಿ, ಮಲ್ಲಣ್ಣ ಅಳತಂಗಿ, ಯಮನಪ್ಪ ರಂಗಾ, ಅಂಬ್ಲಪ್ಪ ಘಂಟಿ, ಶರಣಪ್ಪ ಹವಲ್ದಾರ, ಶಾಂತಪ್ಪ ಕಟ್ಟಿಮನಿ, ಶರಣಪ್ಪ ಹೆಳೆವರ್‌ ಸೇರಿದಂತೆ ರೈತರಿದ್ದರು. ಗೌಡಗೇರಾ ಮತ್ತು ನಗನೂರ ಗ್ರಾಮಗಳ ರೈತರು ತಮ್ಮ ಹೊಲಗಳಲ್ಲಿರುವ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್‌ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳ ಪರಿಶೀಲಿಸಿ ವಿವರವಾದ ವರದಿಯನ್ನು ಸರಕಾರ ಮತ್ತು ಮೇಲಾಧಿಕಾರಿಗಳಿಗೆ ಕ್ರಮಕ್ಕೆ ಸಲಿಸಲಾಗುವುದು.
2017/11/22 07:24:13
https://vijaykarnataka.indiatimes.com/district/yadagiri/-/articleshow/58012391.cms
mC4
ಶ್ರೀನಿವಾಸ್‌ ಆಸ್ಪತ್ರೆಯಲ್ಲಿ Duodenal Ulcer Perforation with Severe Respritory Distress ನ ಯಶಸ್ವೀ ಶಸ್ತ್ರಚಿಕಿತ್ಸೆ | V4News Tags:#shrinivashospital Previous : ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಕೊಡುವುದಕ್ಕೆ ಆಗಿಲ್ಲ: ಡಿ.ಕೆ. ಶಿವಕುಮಾರ್ Next : Successful Surgery of Duodenal Ulcer Perforation with Severe Respiratory Distress at Srinivas Hospital
2021/09/25 02:42:18
https://v4news.com/%E0%B2%95%E0%B2%B0%E0%B2%BE%E0%B2%B5%E0%B2%B3%E0%B2%BF/%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8%E0%B3%8D%E2%80%8C-%E0%B2%86%E0%B2%B8%E0%B3%8D%E0%B2%AA%E0%B2%A4%E0%B3%8D%E0%B2%B0%E0%B3%86%E0%B2%AF%E0%B2%B2%E0%B3%8D/
mC4
"ಕಾಂಗ್ರೆಸ್-ಜೆಡಿಎಸ್ ಕನಸು ಭಗ್ನವಾಗಲಿದೆ, ಬಿಜೆಪಿ ಸರ್ಕಾರ ಸುಭದ್ರವಾಗಲಿದೆ" – EESANJE / ಈ ಸಂಜೆ "ಕಾಂಗ್ರೆಸ್-ಜೆಡಿಎಸ್ ಕನಸು ಭಗ್ನವಾಗಲಿದೆ, ಬಿಜೆಪಿ ಸರ್ಕಾರ ಸುಭದ್ರವಾಗಲಿದೆ" December 2, 2019 Sunil Kumar #by elections, BJP, ST Somashekar ಬೆಂಗಳೂರು,ಡಿ.2- ಕಾಂಗ್ರೆಸ್-ಜೆಡಿಎಸ್ ನಾಯಕರ ಕನಸು ಕನಸಾಗಿಯೇ ಉಳಿಯಲಿದ್ದು, ಉಪಚುನಾವಣೆ ಫಲಿತಾಂಶ ಪ್ರಕಟವಾಗುವ ಡಿ.9ರಂದು ಬಿಜೆಪಿ ಸರ್ಕಾರ ಇನ್ನಷ್ಟು ಸುಭದ್ರವಾಗಲಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಭವಿಷ್ಯ ನುಡಿದರು. ಕ್ಷೇತ್ರದಲ್ಲಿ ಇಂದು ಬೆಳಗ್ಗಿನಿಂದಲೇ ಬಿರುಸಿನ ಪ್ರಚಾರ ನಡೆಸಿದ ಅವರು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗುವುದಿಲ್ಲ. ಎರಡು ಪಕ್ಷಗಳ ನಾಯಕರ ಕನಸು ಈಡೇರಲು ಮತದಾರರು ಬಿಡುವುದಿಲ್ಲ ಎಂದು ವ್ಯಂಗ್ಯವಾಡಿದರು. ಮುಂದಿನ ಮೂರು ವರ್ಷಗಳ ಅವಧಿಗೆ ಬಿಜೆಪಿ ಸರ್ಕಾರ ಇನ್ನಷ್ಟು ಭದ್ರವಾಗಲಿದೆ. ನಾವು 15ಕ್ಕೆ 15 ಕ್ಷೇತ್ರಗಳಲ್ಲಿ ಗೆಲ್ಲಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಇನ್ನಷ್ಟು ಭದ್ರವಾಗಲಿದೆ. ಯಾರೇ ಏನೇ ತಂತ್ರ ಮಾಡಿದರೂ ಬಿಜೆಪಿ ಸರ್ಕಾರ ಬಂಡೆಯಷ್ಟೇ ಗಟ್ಟಿಯಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಕುರ್ಚಿ ನೆನಪದಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಏನೇನೊ ಹಗಲುಗನಸು ಬೀಳುತ್ತದೆ. ಲೋಕಸಭೆ ಚುನಾವಣೆಯಲ್ಲೇ ಅವರಿಗೆ ಮತದಾರರು ಮುಟ್ಟಿನೋಡಿಕೊಳ್ಳುವ ಹಾಗೇ ಪಾಠ ಕಲಿಸಿದ್ದಾರೆ. ಆದರೂ ಇನ್ನೂ ಬುದ್ದಿ ಕಲಿತಿಲ್ಲ ಎಂದು ವ್ಯಂಗ್ಯವಾಡಿದರು. ಐದು ವರ್ಷದಲ್ಲಿ ಎಲ್ಲ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ಮಾಡಿದ್ದೇನೆ, ಅಮೃತ್‍ನಾರಾಯಣಸ್ವಾಮಿ ಜಾತ್ರ ಮಹೋತ್ಸಸಕ್ಕೆ ಒಂದು ಲಕ್ಷಕ್ಕೂ ಜನರ ಊಟದ ವ್ಯವಸ್ಥೆಗೆ ಸಮುದಾಯ ಭವನವನ್ನು ನಿರ್ಮಿಸಿಕೊಟ್ಟಿದ್ದೇನೆ ಎಂದು ಹೇಳಿದರು. ಶಾಸಕನಾಗಿದ್ದಾಗ ಕ್ಷೇತ್ರದಲ್ಲಿರುವ ದೇವಸ್ಥಾಗಳಿಗೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗಲೆಂದು ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇನೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಒಂದೇ ಒಂದೂ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಬಿಜೆಪಿಗೆ ಬಂದಿದ್ದೇನೆ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಸಮರ್ಥಿಸಿಕೊಂಡರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಕಂದಾಯ ಸಚಿವ ಆರ್. ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ಚಲನಚಿತ್ರ ನಟಿ ಶೃತಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಅರುಣ್ ಸೋಮಣ್ಣ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಬೆಳಗ್ಗಿನಿಂದಲೇ ಬಿರುಸಿನ ಪ್ರಚಾರ ನಡೆಸಿದರು. ರೋಡ್ ಶೋ, ಬೈಕ್ ರ್ಯಾಲಿ, ಕಾರ್ಯಕರ್ತರ ಸಮಾವೇಶ, ಶಕ್ತಿಕೇಂದ್ರದ ಮೂಲಕ ಕಾರ್ಯ ಕರ್ತರನ್ನು ಮನವೊಲಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಎಚ್.ಗೊಲ್ಲಹಳ್ಳಿ, ಹಂಪಾಪುರ, ತಿಪ್ಪೂರು, ಗೋಣಿಪುರ, ಗಂಗಸಂದ್ರ, ಹೆಮ್ಮಿಗೆ ಪುರ, ಅಗರ ದೊಡ್ಡಿಪಾಳ್ಯ, ಭೀಮನಕುಪ್ಪೆ, ಸುಬ್ಬರಾಯನಪಾಳ್ಯ ಸೇರಿದಂತೆ ನಾನಾ ಕಡೆ ಬಿಜೆಪಿ ಕಾರ್ಯಕರ್ತರು ಎಸ್.ಟಿ.ಸೋಮಶೇಖರ್ ಪರವಾಗಿ ಮತಯಾಚನೆ ಮಾಡಿದರು.
2020/08/15 10:49:11
https://www.eesanje.com/st-somashekar-6/
mC4
ಸರಕಾರ ನಡೆಸುವುದೆಂದರೆ ಮಕ್ಕಳಾಟವಲ್ಲ: ಸೋನಿಯಾ ಗಾಂಧಿ | Webdunia Kannada ದೆಹಲಿಯಲ್ಲಿ ನಡೆದ ಚುನಾವಣಾ ಪ್ರಚಾರವೊಂದರಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ರೇಜಿವಾಲರ ಹೆಸರನ್ನು ಬಳಸದೆ ಪರೋಕ್ಷವಾಗಿ ಅವರ ಮೇಲೆ ಟೀಕಾಸ್ತ್ರ ಪ್ರಯೋಗಿಸಿದರು." ಕೆಲವರು ಸರಕಾರ ನಡೆಸುವುದೆಂದರೆ ಮಕ್ಕಳಾಟ ಎಂದುಕೊಂಡಿದ್ದಾರೆ. ಆದರೆ ಇದು ತಪ್ಪು ಅಭಿಪ್ರಾಯ. ದೆಹಲಿಯಲ್ಲಿ ಇಂತಹ ಕೆಲವು ಜನ ಮೈದಾನವನ್ನು ಬಿಟ್ಟು ಓಡಿ ಹೋದರು" ಎಂದಿದ್ದಾರೆ. ನವದೆಹಲಿ | ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST) ಮೊದಲ ಬಾರಿ ಆಪ್ ನಾಯಕ ಅರವಿಂದ ಕ್ರೇಜಿವಾಲ್ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸರಕಾರ ನಡೆಸುವುದೆಂದರೆ ಮಕ್ಕಳಾಟವಲ್ಲ ಎಂದು ಚೇಡಿಸಿದ್ದಾರೆ. ಬಿಜೆಪಿ ಮೇಲೂ ವಾಗ್ದಾಳಿ ನಡೆಸಿದ ಅವರು "ಕೇಸರಿ ಪಕ್ಷದವರ ದೃಷ್ಟಿಯಲ್ಲಿ ದೇಶಭಕ್ತಿ ಎನ್ನುವುದು ಕೇವಲ ಘೋಷಣೆಗೆ ಸೀಮಿತವಾಗಿದೆ. ಈ ಚುನಾವಣೆಯಲ್ಲಿ ಎರಡು ಸಿದ್ಧಾಂತಗಳ ನಡುವೆ ಘರ್ಷಣೆಯಾಗಲಿದೆ. ಒಂದು ಸಿದ್ಧಾಂತ (ಬಿಜೆಪಿ) ಸಮಾಜದಲ್ಲಿ ಒಡಕುಂಟು ಮಾಡಲು ಹೊರಟರೆ, ಇನ್ನೊಂದು (ಕಾಂಗ್ರೆಸ್) ಸಮಾಜವನ್ನು ಸೇರಿಸುವ ಧ್ಯೇಯವನ್ನಿಟ್ಟು ಕೊಂಡಿದೆ" ಎಂದು ಹೇಳಿದ್ದಾರೆ.
2021/02/28 01:39:54
https://kannada.webdunia.com/news-in-kannada/%E0%B2%B8%E0%B2%B0%E0%B2%95%E0%B2%BE%E0%B2%B0-%E0%B2%A8%E0%B2%A1%E0%B3%86%E0%B2%B8%E0%B3%81%E0%B2%B5%E0%B3%81%E0%B2%A6%E0%B3%86%E0%B2%82%E0%B2%A6%E0%B2%B0%E0%B3%86-%E0%B2%AE%E0%B2%95%E0%B3%8D%E0%B2%95%E0%B2%B3%E0%B2%BE%E0%B2%9F%E0%B2%B5%E0%B2%B2%E0%B3%8D%E0%B2%B2-%E0%B2%B8%E0%B3%8B%E0%B2%A8%E0%B2%BF%E0%B2%AF%E0%B2%BE-%E0%B2%97%E0%B2%BE%E0%B2%82%E0%B2%A7%E0%B2%BF-114033100006_1.htm
mC4
ಕಾಲದ ಅನಂತತೆಯ ಸ್ಲೇಟಿನ ಮೇಲೆ... ಮಂಜಿನ ಮಳೆ ಸುರಿಯುತ್ತಿದೆ. ಏರ್ ಫ್ಲಾರಿಡಾ- 90 ವಿಮಾನ ರನ್ ವೇ ಮೇಲೆ ಸಾಗುತ್ತಿದೆ. ಅದರ ರೆಕ್ಕೆಗಳ ಮೇಲೆ ಭಾರಿ ಪ್ರಮಾಣದ ಮಂಜು ಬಿದ್ದಿದೆ. ಯಾವ ಎಚ್ಚರಿಕೆಯನ್ನೂ ಲೆಕ್ಕಿಸದ ಪೈಲಟ್ ಟೇಕಾಫ್ ಗೆ ಮುಂದಾಗುತ್ತಾನೆ. ಮಂಜಿನ ಭಾರಿ ಮಳೆಯ ನಡುವೆ ವಿಮಾನ ನೆಲ ಬಿಟ್ಟು ಮೇಲಕ್ಕೇಳುತ್ತದೆ. ಟೇಕಾಫ್ ಗೆ ಸ್ವಲ್ಪವೇ ಮುಂಚಿನ ಸಮಯದಲ್ಲಿ ಕೋ ಪೈಲಟ್ ಗೆ ಏನೋ ಸಂಶಯ. ಅವನು ಪೈಲಟ್ ಗೆ ಎಚ್ಚರಿಸುತ್ತಾನೆ. ಕೋ ಪೈಲಟ್: ಏನೋ ತೊಂದರೆ ಕಾಣಿಸ್ತಿದೆ. ಪೈಲಟ್: ರೀಡಿಂಗ್ಸ್ ಸರಿಯಾಗೇ ತೋರಿಸ್ತಿದೆ. ಕೋ ಪೈಲಟ್: ಆ ರೀಡಿಂಗ್ ಫಾಲ್ಸ್ ಸೆಕ್ಯುರಿಟಿ ಫೀಲಿಂಗ್ ತರಿಸ್ತಿರಬಹುದೇನೋ. (ಪೈಲಟ್ ಮತ್ತಷ್ಟು ಗುಂಡಿಗಳನ್ನು ಒತ್ತುತ್ತಾನೆ. ರೆಕ್ಕೆಯ ಮೇಲಿನ ಮಂಜು ತೆರವಿಗೆ ಯತ್ನಿಸುತ್ತಾನೆ. ಕೀ ಎಂಜಿನ್ ಸೆನ್ಸರೀಸ್ ಫ್ರೋಜನ್ ಆಗಿರುತ್ತದೆ. ವಿಂಗ್ ಆಂಟಿ ಐಸ್ ಸಿಸ್ಟಂ (anti ice system) ಆಫ್ ಆಗಿದ್ದನ್ನು ಮತ್ತೆ ಕೋ ಪೈಲಟ್ ಎಚ್ಚರಿಸುತ್ತಾನೆ). ಕೋ ಪೈಲಟ್: ಓ ಗಾಡ್! ಏನೋ ತೊಂದರೆ ಇದೆ. ನೋಡಿಲ್ಲಿ ಇದ್ಯಾಕೊ ಸರಿ ಕಾಣಿಸ್ತಿಲ್ಲ. ಇಲ್ಲ ಇದೇನೋ ಸರಿ ಇಲ್ಲ... (ಕೋ ಪೈಲಟ್ ಚಡಪಡಿಸುತ್ತಲೇ ಇರುತ್ತಾನೆ) ಪೈಲಟ್: ಹೌದು ಸರಿ ಇದೆ. ನೋಡಿಲ್ಲಿ ಎಕ್ಸಿಲರೇಷನ್ 80 ನಾಟ್ಸ್ ರೀಡಿಂಗ್ ತೋರಿಸ್ತಿದೆ. ಕೋ ಪೈಲಟ್: ಇಲ್ಲ ಖಂಡಿತ ಇದೇನೋ ಸರಿ ಇಲ್ಲ... (ಬ್ಲ್ಯಾಕ್ ಬಾಕ್ಸ್ ಪ್ರಕಾರ ಕಾಕ್ಪಿಟ್ ರೀಡಿಂಗ್ ಸೂಕ್ತ ಅಂಕಿಯನ್ನೇ ತೋರಿಸ್ತಿತ್ತು. ಎಂಜಿನ್ ಬೇಕಾದ ಪಾವರ್ ಕೊಡ್ತಿರಲೇ ಇಲ್ಲ. ಅದು ತಪ್ಪು ರೀಡಿಂಗ್ಸ್ ತೋರಿಸ್ತಿತ್ತು... ಕ್ಯಾಪ್ಟನ್ ಗೆ ಅನಿಸ್ತಿತ್ತು ಎಂಜಿನ್ ನಿಂದ ಅಗತ್ಯ ಪಾವರ್ ಲಭ್ಯವಾಗ್ತಿದೆ. ಟೇಕಾಫ್ ಮುಂದುವರಿಸಬಹುದು ಎಂದು...) ಪೈಲಟ್: ಕಮಾನ್ ಫಾರ್ವರ್ಡ್, ಫಾರ್ವರ್ಡ್... ಓಹ್ ಮೇಲಕ್ಕೇರುತ್ತಲೇ ಇಲ್ಲ... ಎಂಜಿನ್ ಸ್ಥಗಿತಗೊಳ್ಳುತ್ತಿದೆ.. ನಾವು ಕೆಳಕ್ಕೆ ಬೀಳುತ್ತಿದ್ದೇವೆ... ಕೋ ಪೈಲಟ್: ನಾವು ಕೆಳಕ್ಕೆ ಹೋಗುತ್ತಿದ್ದೇವೆ.. ಪೈಲಟ್: ನಂಗೊತ್ತು... ವಿಮಾನ ಕ್ಷಣಾರ್ಧದಲ್ಲೇ ಒಂದು ಸೇತುವೆಗೆ ಅಪ್ಪಳಿಸಿ, ತುಂಡು ತುಂಡಾಗಿ ಬೆಂಕಿಯುಂಡೆಯಂತಾಗಿ ಮಂಜುಗಡ್ಡೆಯಿಂದ ತುಂಬಿದ ನೀರಲ್ಲಿ ಬೀಳುತ್ತದೆ.. ಹೇಗಾಯ್ತು? : ಎಂಜಿನ್ ಗೆ ಮಂಜು ಹೊಕ್ಕು ಅಲ್ಲಿ ಗಾಳಿ ಚಲನೆಗೆ ಅಡ್ಡಿ ಮಾಡಿತ್ತು. ಅಲ್ಲಿನ ಸೆನ್ಸರಿಗೆ ಗರಬಡಿದಿತ್ತು. ಎಂಜಿನ್ ರೀಡಿಂಗ್ ಮೋಸ ಮಾಡಿತ್ತು. ಕೀ ಎಂಜಿನ್ ಸೆನ್ಸರೀಸ್ ಫ್ರೋಜನ್ ಆಗಿತ್ತು.. ಅಂಥ ಸಂದರ್ಭದಲ್ಲಿ ಟೇಕಾಫ್ ಮಾಡಲೇಬಾರದಾಗಿತ್ತು. ಆದರೂ ಕಡೆ ಘಳಿಗೆಯಲ್ಲಿ ಪೈಲಟ್ ಟೇಕಾಫ್ ಮಾಡಿಬಿಟ್ಟ. ವಿಮಾನ ಒಂದು ನಿರ್ಧಿಷ್ಟ ಎತ್ತರ ಬಿಟ್ಟು ಮೇಲಕ್ಕೆ ಹಾರುತ್ತಿಲ್ಲ. ಕೇವಲ 24 ಸೆಕೆಂಡುಗಳಲ್ಲಿ ಎಂಜಿನ್ ಫೇಲ್ ಆಯ್ತು. ವಿಮಾನ ಸೇತುವೆಯೊಂದಕ್ಕೆ ಅಪ್ಪಳಿಸಿತು. ಪರಿಣಾಮ: ಸೇತುವೆಯ ಮೇಲೆ ಕಾರಿನಲ್ಲಿ ಪಯಣಿಸುತ್ತಿದ್ದವರು ಸೇರಿದಂತೆ ಎಷ್ಟೊ ಜನ ಸತ್ತೇ ಹೋದರು. ಕೆಲವರು ಪವಾಡಸದೃಶ ಪಾರಾದರು. ಘಟನೆ ಸಂಭವಿಸಿದ ಕೆಲವೇ ಸಮಯದಲ್ಲಿ ರಕ್ಷಣಾ ಹೆಲಿಕಾಪ್ಟರ್ ಸ್ಥಳಕ್ಕೆ ಧಾವಿಸಿತು. ಮಂಜಿನಿಂದಾವೃತವಾದ ನೀರಿನಲ್ಲಿ ಕೆಲವರಿಗೆ ಕೈಕಾಲೇ ಆಡುತ್ತಿಲ್ಲ. ಒಬ್ಬ ಹೆಣ್ಣುಮಗಳಂತೂ ನಿತ್ರಾಣಳಾಗಿ ಮಂಜುಗಡ್ಡೆಗಳ ನಡುವೆ ಸಿಕ್ಹಾಕಿಕೊಂಡು ಅಂತಿಮ ಕ್ಷಣಗಳನ್ನು ಎದುರಿಸುತ್ತಿದ್ದಳು. ಅವಳನ್ನು ರಕ್ಷಣಾ ಸಿಬ್ಬಂದಿ ಅನಾಮತ್ತಾಗಿ ಎತ್ತಿಕೊಂಡಿತು. ಜೀವ ಉಳಿಸಿತು. ಕಲಿತ ಪಾಠ: ವಿಮಾನದ ಥ್ರಸ್ಟ್ ಸೆನ್ಸರ್ಸ ಮಂಜಿನಿಂದ ಬ್ಲಾಕ್ ಆಗದಂತೆ ನೋಡಿಕೊಳ್ಳುವುದು ಮೊದಲ ಆದ್ಯತೆಯಾಗಬೇಕೆಂದು ಎವಿಯೇಷನ್ ಅಥಾರಿಟಿ ತಾಕೀತು ಮಾಡಿತು. ಇದಷ್ಟನ್ನು ಯುಟ್ಯುಬ್ ವಿಡಿಯೊ ಹೇಳುತ್ತಿದುದನ್ನು ನೋಡಿ ತಂತ್ರಜ್ಞಾನದ ಕಣ್ಣಾಮುಚ್ಚಾಲೆ ಆಟ ದಂಗುಬಡಿಸಿತು. ವಿಮಾನ ಟೇಕಾಫ್ ಆಗುವ ಚಿತ್ರಣ... ಕಾಕ್ ಪಿಟ್ ನಲ್ಲಿ ಪೈಲಟ್, ಕೋ ಪೈಲಟ್ ಮಾತನಾಡುವುದು, ವಿಮಾನ ಚಾಲನೆಗೆ ಏನೆಲ್ಲ ಸಿಸ್ಟಂ ಇದೆ, ರೀಡಿಂಗ್ ಹೇಗೆ ತೋರಿಸುತ್ತದೆ, ಯಾವ ನಾಬ್ ಒತ್ತಿದರೆ ಯಾವ ಕೆಲಸ ಶುರುವಾಗುತ್ತೆ, ಮತ್ತು ಎಂಜಿನ್ ಫೇಲ್ ಆದಾಗ ಏನೆಲ್ಲ ಕಾಕ್ ಪಿಟ್ ನಲ್ಲಿ ನಡೆಯುತ್ತೆ ಎನ್ನುವುದನ್ನೆಲ್ಲಾ ವಿವರಿಸಿತು ವಿಡಿಯೊ... ಬ್ಲ್ಯಾಕ್ ಬಾಕ್ಸ್ ನಲ್ಲಿ ದಾಖಲಾಗುವ ಪ್ರತಿಯೊಂದು ಮಾಹಿತಿ, ವಾಯ್ಸ್ ರೆಕಾರ್ಡಿಂಗ್ ನಲ್ಲಿ ರೆಕಾರ್ಡ್ ಆದ ಪೈಲಟ್/ಕೊ ಪೈಲಟ್ ಸಂಭಾಷಣೆ, ಅಪಘಾತ ನಡೆದಿದ್ದಕ್ಕೆ ಎಲ್ಲ ಸಾಕ್ಷ್ಯಗಳನ್ನು ಹೇಗೆ ಉಪಕರಣ ಬಚ್ಚಿಟ್ಟುಕೊಳ್ಳುತ್ತೆ! ಅದರ ಆಧಾರದಲ್ಲಿ ಮತ್ತು ಏರೋನಾಟಿಕ್ಸ್ ತಂತ್ರಜ್ಞಾನದ ನೆರವಿನಿಂದ ಅಪಘಾತಕ್ಕೆ ಸ್ಪಷ್ಟವಾದ ತಾಂತ್ರಿಕ ದೋಷಗಳನ್ನು ತಜ್ಞರು ಏನೆಲ್ಲ ಜ್ಞಾನ ಬಳಸಿ ಕಂಡುಕೊಳ್ಳುತ್ತಾರೆ? ಎನ್ನುವ ಎಲ್ಲ ಕುತೂಹಲಗಳನ್ನು ಎಳೆ ಎಳೆಯಾಗಿ ವಿಡಿಯೊ ತೋರಿಸಿತು. ಇದು ಮುದ್ರಣ ಮಾಧ್ಯಮದಲ್ಲಿ ಸಾಧ್ಯವಾ? ಮುದ್ರಣ ಮಾಧ್ಯಮಕ್ಕೆ ಕೆಲ ಸಾಧ್ಯತೆಗಳ ಜತೆ ಮಿತಿಗಳೂ ಇವೆ. ತಂತ್ರಜ್ಞಾನದ ಹೊಸ ಆವಿಷ್ಕಾರಗಳೆಲ್ಲ ಮೀಡಿಯಾ ಜಮಾನಾದಲ್ಲಿ ಸಾಕಷ್ಟು ಸವಾಲುಗಳನ್ನು ಸೃಷ್ಟಿಸಿವೆ. ಮುದ್ರಣ ಮಾಧ್ಯಮಕ್ಕೆ ಹಿಂದೆಂದಿಗಿಂತ ಈಗ ತುಂಬ ಪೈಪೋಟಿ. ಬ್ರೇಕಿಂಗ್ ನ್ಯೂಸ್ ಎನ್ನುವ ಅದರ ಶಕ್ತಿಯನ್ನು ಚಾನೆಲ್, ವೆಬ್ ಜಮಾನಾ ಅನಾಮತ್ತಾಗಿ ಎತ್ತಿಕೊಂಡಿದೆ. ಮುದ್ರಣ ಮಾಧ್ಯಮದ ಪಾಲಿಗೆ ಇನ್ನೇನಿದ್ದರೂ ಘಟನೆಯ ವಿವರ ಅಥವಾ ಸುದ್ದಿ/ಘಟನೆಯ ಪೋಸ್ಟ್ ಮಾರ್ಟಂ ರಿಪೋರ್ಟ್ ನೀಡುವ ಕೆಲಸ. ಚಾನೆಲ್ ಗಳು ಪ್ಯಾನೆಲ್ ಡಿಸ್ಕಷನ್ ಮೂಲಕ ಇನ್ನೂ ಪೈಪೋಟಿ ನೀಡಲಾರಂಭಿಸಿವೆ. ಇನ್ನು ಇಂಥ ಅವಘಡಗಳ ತನಿಖೆಯ ವಿವರಗಳೂ ಕೂಡ ಚಾನೆಲ್ ಮತ್ತು ವೆಬ್ ಜಮಾನಾದಲ್ಲಿ ಆಗಲೇ ಬಂದುಬಿಡುತ್ತವೆ. ಯುಟ್ಯೂಬ್, ಮೆಟಾಕೆಫೆಯಂಥ ಹಲವಾರು ಪೊರ್ಟಲ್ ಗಳು ಫ್ರೀ ಆಗಿ ತನಿಖೆಯ ವಿವರಗಳನ್ನು ಗ್ರಾಫಿಕ್ಸ್ ಸಮೇತ ಇಲ್ಲವೇ ಅಂಥ ಕೆಲ ಮರುಸೃಷ್ಟಿಯ ವಿಡಿಯೋಗಳ ಮೂಲಕ ಅದರ ರೋಚಕತೆ, ಕುತೂಹಲದ ಮಾರ್ಕೆಟ್ ಮಾಡಿಬಿಡುತ್ತವೆ. ಏರ್ ಪೋರ್ಟ್ ಟಾವರ್ ಗಳ ಮೇಲೆ ಭಾರಿ ಫಿಕ್ಸೆಲ್ ನ ಕ್ಯಾಮೆರಾಗಳನ್ನು ಅಳವಡಿಸಿದಲ್ಲಿ (ಅದೂ ಎಲ್ಲಾ ಎಂಗಲ್ ಗಳಲ್ಲಿ), ಅಥವಾ ವಿಡಿಯೋಗ್ರಾಫಿ ಮಾಡುವ ಒಂದು ವಿಂಗ್ ಅನ್ನೇ ನಿಯೋಜಿಸಿದಲ್ಲಿ, ಪ್ರತಿ ವಿಮಾನ ಇಳಿಯುವ ಮತ್ತು ಹಾರುವ ಪ್ರತಿ ಹಂತದ ವಿಡಿಯೊ ಲಭ್ಯವಾಗಿ ಬಿಡುತ್ತದೆ. ರನ್ ವೇ ಗೆ ತುಂಬ ಕ್ಲೋಸ್ ಆಗಿ ಅಲ್ಲಲ್ಲಿ ಕ್ಯಾಮೆರಾಗಳನ್ನಿಟ್ಟಲ್ಲಿ ಅದರ ಒಟ್ಟಾರೆ ಸರಿ ತಪ್ಪು ಚಲನವಲನಗಳ ಮಾಹಿತಿಯನ್ನೆಲ್ಲ ಕ್ಯಾಮೆರಾ ಸೆರೆಹಿಡಿದುಕೊಳ್ಳಲು ಅನುಕೂಲವಾಗುತ್ತದೆ. ಇದು ಕೂಡ ತನಿಖೆಯ ಸಂದರ್ಭ ನೆರವಿಗೆ ಬರಬಹುದು. ಹೀಗೆ ಇಂಥದೊಂದು ವ್ಯವಸ್ಥೆ ಮಾರುಕಟ್ಟೆಯ ದೃಷ್ಟಿಯಿಂದಲೂ ಇಲ್ಲಿ ಸೃಷ್ಟಿಯಾಗುವ ಕಾಲ ದೂರವೇನಿಲ್ಲ... ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಚಲನವಲನಗಳ ಮೇಲೆ ನಿಗಾ ಇಡುವ ತಂತ್ರಜ್ಞಾನ ಶೇಖರಣೆ ಮತ್ತು ಅಳವಡಿಕೆಯಲ್ಲಿ ಮುಳುಗಿಹೋಗಿರುವ ಏವಿಯೇಷನ್ ಮಿನಿಸ್ಟ್ರಿಗಳೆಲ್ಲ, ವಿಮಾನಗಳ ಸುರಕ್ಷತೆ, ಪೈಲಟ್, ಮತ್ತಿತರ ಸಿಬ್ಬಂದಿಯ ಮನೋದೈಹಿಕ ಸ್ಥಿತಿ ಮತ್ತು ಕೆಲಸದ ಒತ್ತಡಗಳ ಬಗ್ಗೆ ಹಾಗೂ ಒಟ್ಟಾರೆ ಸುರಕ್ಷಿತ ಹಾರಾಟದ ಬಗ್ಗೆಯೂ ಯೋಚಿಸಬೇಕಲ್ಲ? ಪೈಲಟ್ ಗಳ ಇಂಟಿಗ್ರಿಟಿ: 9/11 ಸಂದರ್ಭದಲ್ಲಿ ಪೈಲಟ್ ಗಳು ನೇರ ಟಾವರ್ ಗೆಂದೇ ವಿಮಾನವನ್ನು ಡಿಕ್ಕಿ ಹೊಡೆಸಿದರು. ಆ ಸಾಹಸ ಪಕ್ಕಾ ಡಿಟರ್ಮೈನ್ಡ್ ಅಟ್ಯಾಕ್. ಸಾವಿಗೆಂದೇ ಹುಟ್ಟಿದ ಡಿಟರ್ಮೈನ್ಡ್ ಟೆರರಿಸ್ಟಗಳಿಂದ ಅದಾಗಿದ್ದು. ಅವರಿಗೆ ಸಾವಿನ ಜತೆಯಲ್ಲೇ ವ್ಯವಹಾರ. ಅದಕ್ಕೆ ಅವರ ಮನಸ್ಥಿತಿ ಸೀಮಿತಗೊಂಡಿರುತ್ತದೆ. ಮಾನಸಿಕ ಸಿದ್ಧತೆಯೇ ಆ ಮಟ್ಟಿನದ್ದಾಗಿರುತ್ತದೆ. ಜೀವಕೊಡುವುದು ಎಂದರೆ ಅವರಿಗೊಂದು ಭಾಗ್ಯ! ಆದರೆ, ಇಲ್ಲಿ ಪ್ರಯಾಣಿಕರ ಸಾಗಿಸುವ ಬೋಯಿಂಗ್, ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನಗಳಂಥ ಪೈಲಟ್ ಗಳ ಸ್ಥಿತಿ ಬೇರೆ. ಅವರು ತಾವು ಎಂಥದೇ ಸಾವಿನ ಸ್ಥಿತಿ ಎದುರಿಸುತ್ತಿದ್ದರೂ, ವಿಮಾನ ನೆಲಕ್ಕುರುಳದಂತೆ ತಡೆಯುವ ಮತ್ತು ತಮ್ಮನ್ನು ನಂಬಿದ ಅಷ್ಟು ಪ್ರಯಾಣಿಕರ ಜೀವ ಉಳಿಸುವ, ಜವಾಬ್ದಾರಿಯುತ ಕೆಲಸ ಮಾಡುತ್ತಿರುತ್ತಾರೆ. ಅವಘಡದ ಅಥವಾ ಅಪಾಯದ ಸಂದರ್ಭಗಳಲ್ಲಿ ಪೈಲಟ್ ಗಳು ಎಲ್ಲರಿಗಿಂತ ಸ್ವತಃ ತಾವೇ ಸಾವಿಗೆ ಹತ್ತಿರದಲ್ಲಿರುತ್ತಾರೆ. ಮನಸ್ಸು ಮಾಡಿದರೆ ಕಡೇ ಘಳಿಗೆಯಲ್ಲಿ ತಮ್ಮ ಸೀಟಿನ ಕೆಳಗುಂಡಿ ಒತ್ತಿ ಹೊರಕ್ಕೆ ನೆಗೆದು, ಪ್ಯಾರಾಚೂಟ್ ಮೂಲಕ ಜೀವ ಉಳಿಸಿಕೊಳ್ಳಬಹುದು... ಆದರೆ ಈತನಕದ ಬಹುತೇಕ ವಿಮಾನ ಅವಘಡಗಳಲ್ಲಿ ಪೈಲಟ್ ಗಳು ತಮ್ಮ ಜೀವ ಒತ್ತೆಯಿಟ್ಟು ಕೊನೆ ಕ್ಷಣದವರೆಗೂ ಹೋರಾಡಿದ ದೃಷ್ಟಾಂತಗಳೇ ಸಿಗುತ್ತವೆ. ಪೈಲಟ್ ಗಳ ಈ ಇಂಟಿಗ್ರಿಟಿ, ಸಮಷ್ಠಿ ಪ್ರಜ್ಞೆಯನ್ನು ನಾವು ಮರೆಯುವಂತಿಲ್ಲ. ನಾವು ನಿತ್ಯ ಬಳಸುವ ಎಷ್ಟೊ ಎಲೆಕ್ಟ್ರಾನಿಕ್ ಉಪಕರಣಗಳು ಯಾವಾಗ ಕೈಕೊಡುತ್ತವೆ ಎಂದು ಹೇಳೋದಕ್ಕೆ ಆಗಲ್ಲ. ನಮ್ಮ ಕಂಪ್ಯೂಟರ್ ಸಿಸ್ಟಂ ಉತ್ತಮವಾಗಿ ಕೆಲಸ ಮಾಡುತ್ತಲೇ ಏನೋ ಒಂದು ವಕ್ಕರಿಸಿ ಸಿಸ್ಟಂ ಹ್ಯಾಂಗ್ ಆಗಿಬಿಡುತ್ತದೆ. ಅದು ಒಮ್ಮೆ ಆಪರೇಷನಲ್ ಎರರ್ ನಿಂದ ಮತ್ತೆ ಕೆಲವೊಮ್ಮೆ ಅನ್ ಐಡೆಂಟಿಫೈಡ್ ಅಥವಾ ಅನ್ನೋನ್ ರೀಸನ್ ನಿಂದಾಗಿ ಸಿಸ್ಟಂ ಕೈಕೊಟ್ಟುಬಿಡುತ್ತದೆ. ಅದೂ ಕೆಲಸದ ಎಂಡ್ ರಿಸಲ್ಟ್ ನಿರೀಕ್ಷಿಸುವ ಅಂತಿಮ ಹಂತದಲ್ಲಿ. ಆಗ ಯಾವುದನ್ನು ದೂರೋದು? ಇವಕ್ಕೆಲ್ಲ ಹಣೆಬರಹ ಅನ್ನೋಕಾಗುತ್ತಾ? ಇಂಥ ಸಂದರ್ಭದಲ್ಲೇ ಈ ಹಣೆಬರಹ ಅನ್ನೋದಕ್ಕೆ ರೆಕ್ಕೆ ಪುಕ್ಕ ಬಂದುಬಿಡುತ್ತೆ. ಮನುಷ್ಯ ಯತ್ನಗಳು ಇದರ ಮುಂದೆ ಶರಣಾಗಿ ನಿಂತಂತೆ ಅನಿಸುತ್ತದೆ. ದೈವ, ದೇವತ್ವದ ಮೇಲೆ ನಂಬಿಕೆಗಳು ಇಲ್ಲಿಂದಲೇ ಶುರುವಾಗುತ್ತವೆ. ಭಯಂಕರ ಭಯವಾಗಿ ಅವು ನಮ್ಮೊಳಗೆ ನೆಲೆಗೊಂಡುಬಿಡುತ್ತವೆ. ಮಂಗಳೂರಿನ ದುರಂತದ ಬಗ್ಗೆ ನಾವು ರನ್ ವೇ ದೂರುವುದು, ಪೈಲಟ್ ಗಳ ತಪ್ಪು ನಿರ್ಧಾರ ಎಂದು ಹೇಳುವುದು ಶುರುವಾಗಿದೆ. ಇವೆರಡನ್ನೂ ಮೀರಿದ ಎಡವಟ್ಟು ಯಂತ್ರಗಳ ಮೂಲಕವೂ ಆಗಿರುತ್ತದೆ. ಅನ್ನೋನ್ ರೀಸನ್ ಅಲ್ಲೂ ಕೆಲಸ ಮಾಡಿರುತ್ತದೆ. ನಿತ್ಯ ತನಗೆ ಸೂಕ್ತ ಮತ್ತು ಸುರಕ್ಷಾತ್ಮಕ ಮಾಹಿತಿಯನ್ನೇ ನೀಡುತ್ತಿದ್ದ ರೀಡಿಂಗ್ ಆ ಕ್ಷಣದಲ್ಲೇ ಕೈಕೊಟ್ಟುಬಿಟ್ಟಿರುತ್ತದೆ. ಏನೋ ಒಂದು ಗುಂಡಿ ಆನ್ ಅಥವಾ ಆಫ್ ಮಾಡುವಾಗ ಮಾಡಬೇಕಾದ ಪರಿಣಾಮ ಆ ಕ್ಷಣದಲ್ಲಿ ಯಶಸ್ವಿಯಾಗೋದಿಲ್ಲ. ತಡಬಡಾಯಿಸುವಷ್ಟೊತ್ತಿ ಗೆ ಸೆಕೆಂಡುಗಳ ಲೆಕ್ಕ ಮೈಕ್ರೊ ಸೆಕೆಂಡ್ ಗೆ ಇಳಿದಿರುತ್ತದೆ. ಸಾವಿನ ಕೂಪದಲ್ಲೇ ಮನುಷ್ಯನ ಬದುಕುವ ಹಂಬಲದ ಯತ್ನಗಳು ಬಹುಶಃ ದೇವರ ಕಣ್ಣಲ್ಲೂ ನೀರು ಬರಿಸುತ್ತವೇನೋ! ಸಾವಿಗೆ ಹತ್ತಿರದಲ್ಲಿದ್ದ ಆ ಕ್ಷಣಗಳನ್ನು ನಾವು ಊಹಿಸಿಕೊಳ್ಳುವುದಕ್ಕೂ ಆಗಲ್ಲವಲ್ಲಾ...! ರನ್ ವೇ ಮೇಲೆ ಸಾವೇ ಮಲಗಿತ್ತು... ಆ ವ್ಯಾಲಿಯಲ್ಲಿ ಸಾವು ಕಾಯ್ದು ಕುಳಿತಿತ್ತು... ಡಲ್ ವೆದರ್... ವಿಮಾನ ಹಾರುವ ಮುಂಚೆಯೇ ಸಾವು ಅದರ ಗಾಲಿ ಹತ್ತಿಯಾಗಿತ್ತು... ಎಂದೆಲ್ಲ ಹಲುಬುವುದು ನಮ್ಮ ಸಮಾಧಾನಕ್ಕಷ್ಟೇ. ಪೈಲಟ್ ಗಳನ್ನು ಶಪಿಸುವುದು, ವಿಮಾನಗಳನ್ನು ದೂರೋದು, ತಂತ್ರಜ್ಞಾನವನ್ನೇ ಪ್ರಶ್ನಿಸುವುದು, ಹಣೆಬರಹ ಎಂದುಕೊಳ್ಳೋದು... ಆಗಿ ಹೋದ ಘಟನೆಯನ್ನು ಅಳಿಸಿಹಾಕಲ್ಲ ಅಥವಾ ಅದರ ಹಾನಿಯನ್ನು ತುಂಬಿಕೊಡುವುದಿಲ್ಲ... ವಿಮಾನಯಾನಕ್ಕೆ ಸಂಬಂಧಿಸಿದ ಪ್ರತಿ ಸಾವು ಮತ್ತು ಇಂಥ ಘಟನೆಗಳು ಹೆಚ್ಚು ಹೆಚ್ಚು ಹೊಸ ತಂತ್ರಜ್ಞಾನ ಆವಿಷ್ಕಾರಕ್ಕೆ ಪ್ರೇರಣೆ ನೀಡುತ್ತದೆ. ಆ ಮೂಲಕ ಮತ್ತೊಂದು ತಂತ್ರಜ್ಞಾನ ಆಳುವುದಕ್ಕೆ ದಾರಿಯಾಗುತ್ತದೆ. ಮತ್ತೆ ಅದರದೇ ಅವಘಡಗಳು ದುರಂತಗಳಿಗೆ ಕಾರಣವಾಗುತ್ತದೆ... ಮತ್ತೆ ಅದನ್ನು ಸರಿಪಡಿಸುವ ವಿಜ್ಞಾನ, ತಂತ್ರಜ್ಞಾನ... ಹೀಗೆ ಇಷ್ಟೇ ಆಗೋದು. ಇದು ನಿರಂತರ ಪ್ರಕ್ರಿಯೆ... ಮನುಷ್ಯನ ಹುಟ್ಟು ಸಾವಿನಂತೆ... ಜಪಾನ್ 123: ಜಪಾನ್ 123 ಅಪಘಾತ ನೆನಪಿರಬಹುದು. ವಿಮಾನ ತುಂಬ ಎತ್ತರದಲ್ಲಿದ್ದಾಗ ಅವಘಡಕ್ಕೆ ಈಡಾಗುತ್ತದೆ. ಅದು ದಿಕ್ಕುಗಾಣದೆ ಆಕಾಶದಲ್ಲೇ ಸುತ್ತಾಟ ನಡೆಸುತ್ತದೆ. ಏನೇನೋ ಎಡವಟ್ಟಾಗಿ ದೊಡ್ಡ ದೊಡ್ಡ ಪರ್ವತ ಮಾಲೆಗಳ ಮತ್ತು ಕಂದಕಗಳ ಪ್ರದೇಶಕ್ಕೆ ವಿಮಾನ ಪ್ರವೇಶ ಮಾಡುತ್ತದೆ. ಪೈಲಟ್ ಕಣ್ಣೆದುರಿಗೆ ಧುತ್ತನೇ ಭಾರಿ ಪರ್ವತ!... ವಿಮಾನ ಪರ್ವತಕ್ಕೆ ಅಪ್ಪಳಿಸುವುದನ್ನು ತಪ್ಪಿಸಲು ಪೈಲಟ್ ಗಳು ಆ ಕಡೆ ಈ ಕಡೆ ವಿಡಿಯೊ ಗೇಮ್ ಥರ ಏನೇನೋ ಗುಂಡಿಗಳನ್ನು ಒತ್ತುತ್ತಾ, ಸ್ಪೀಡ್ ಹೆಚ್ಚಿಸುತ್ತಲೇ ಹೋಗುತ್ತಾರೆ. ಭಾರೀ ಸ್ಪೀಡ್ ನಿಂದಾಗಿ ವಿಮಾನ ನಿಯಂತ್ರ ಣ ಕಳೆದುಕೊಂಡು ಅತ್ತ ಇತ್ತ, ಓಲಾಡತೊಡಗುತ್ತದೆ. ಕಂಟ್ರೋಲ್ ರೂಂನಿಂದ ಜಪಾನ್ ಮತ್ತು ಅಮೆರಿಕದ ತಜ್ಞರು ಮಾಹಿತಿ ನೀಡುತ್ತಾರೆ... ರೇಡಿಯೋ ಸಂಪರ್ಕ ಕಳೆದುಹೋಗುತ್ತದೆ. ಶತಪ್ರಯತ್ನದ ನಂತರ ದಕ್ಕುತ್ತದೆ.. ಆಕಾಶದಲ್ಲಿ ಹೀಗೆ ಮೇಲಕ್ಕು ಕೆಳಕ್ಕು ಹೊಯ್ದಾಡುತ್ತ ವಿಮಾನ ಕನಿಷ್ಠ 40 ನಿಮಿಷಗಳನ್ನು ಕಳೆದಿದೆ... ಕಂಟ್ರೋಲ್ ರೂಮಿನಿಂದ ಹತ್ತಿರದ ಒಂದು ವಿಮಾನ ನಿಲ್ದಾಣದ ಬಗ್ಗೆ ಮಾಹಿತಿ ಬರುತ್ತದೆ... ನಾರ್ತವೆಸ್ಟ್ ಆಫ್ ಮಹಾನದಾಗೆ 45 ಮೈಲ್ಸ್ ದೂರದಲ್ಲಿದೆ ಎಂದು ಮಾಹಿತಿ ರವಾನೆಯಾಗುತ್ತದೆ.... ಕಂಟ್ರೋಲರ್ ಟೆನ್ಷನ್ ನಲ್ಲಿ 55 ಮೈಲು ಎಂದು ಮೊದಲು ಹೇಳಿ ನಂತರ 45 ಮೈಲು ಎಂದು ಹೇಳುತ್ತಾನೆ... ಪೈಲಟ್ ಮತ್ತೆ ಕಂಟ್ರೋಲ್ ರೂಂ ಸಂಪರ್ಕಿಸುತ್ತಾನ... ಅದು ಸಾಧ್ಯವಾಗುವುದಿಲ್ಲ. 45 ಅಥವಾ 55 ಅನ್ನೋದು ಅವನಿಗೆ ಗೊಂದಲ... ಆಗಲೇ 5500 ಮೀಟರ್ ಪರ್ ಮಿನಿಟ್ ವೇಗದಲ್ಲಿ ವಿಮಾನ ಸೀ ಡೈವ್ ಮಾಡುತ್ತ ನೆಲ ನೋಡುತ್ತಿದೆ... ಪವರ್ ಪವರ್ ಎಂದು ಪೈಲಟ್ ಕೂಗುತ್ತಾನೆ... ಕೋ ಪೈಲಟ್ ಹೋ ಹೋ ಎಂದು ಗಾಬರಿಯಿಂದ ಏನೆಲ್ಲ ಮಾಡುತ್ತಾನೆ... ಮತ್ತೆ ಕಂಟ್ರೋಲ್ ರೂಂ ಸಂಪರ್ಕ ಮಾಡುತ್ತಾರೆ... ಅಷ್ಟೊತ್ತಿಗೆ ಪ್ಲೇನ್ ಹೈಡ್ರಾಲಿಕ್ ಸಿಸ್ಟಂ ಸಂಪೂರ್ಣ ವಿಫಲಗೊಂಡು ನಿಯಂತ್ರಣಕ್ಕೆ ಬರೋದೇ ಇಲ್ಲ... ಕೊನೆಯ ಎಲ್ಲ ಕಸರತ್ತುಗಳ ನಂತರ ವಿಮಾನ ಭಾರಿ ವೇಗದಲ್ಲಿ ಪರ್ವತಗಳ ನಡುವಿನ ದೊಡ್ಡ ಕಂದಕದ ನಡುವೆ ಒಂದು ಬಂಡೆಗಲ್ಲಿಗೆ ಅಪ್ಪಳಿಸುತ್ತದೆ.... ಆ ನಲವತ್ತು ನಿಮಿಷಗಳ ಕಾಲ ಸಾವಿನೊಂದಿಗೆ ಸೆಣಸಾಡಿದ ಆ ಎಲ್ಲ ಪ್ರಯಾಣಿಕರ ಗತಿ ಅಬ್ಬಾ!... ಅವರನ್ನೆಲ್ಲ ಉಳಿಸಲು ಕಡೆತನಕ ಯತ್ನಿಸಿದ ಆ ಪೈಲಟ್ ಗಳ ಎದೆ ಗುಂಡಿಗೆ!... ಜಪಾನ್ ಡಿಫೆನ್ಸ್ ಹೆಲಿಕಾಪ್ಟರ್ ಅಪಘಾತಕ್ಕೀಡಾದ ವಿಮಾನವನ್ನು ಪತ್ತೆ ಮಾಡೇ ಬಿಡುತ್ತದೆ. ಕ್ಯಾಪ್ಟನ್ ಸುಜುವೊಮೋರಿಯಾ ರಾತ್ರಿ ಇಡೀ ಸರ್ಚ್ ಮಾಡಿ ಕಡೆಗೂ ವಿಮಾನ ಪತ್ತೆ ಮಾಡುತ್ತಾರೆ. "ಸಿಕ್ಕಾಪಟ್ಟೆ ಹೊಗೆ, ಬೆಂಕಿಯ ಕೆನ್ನಾಲಗೆ ಎಲ್ಲೆಡೆ.. ಯಾರೂ ಬದುಕುಳಿಯುವ ಸಾಧ್ಯತೆಯೇ ಇಲ್ಲ" ಎಂದು ಮೆಸೇಜ್ ಕೊಡುತ್ತಾರೆ... 68 ಕಿಮೀ ದೂರದಲ್ಲಿದ್ದ ಘಟನಾ ಸ್ಥಳಕ್ಕೆ ಲಗುಬಗೆಯಿಂದ ರಕ್ಷಣಾ ಸಿಬ್ಬಂದಿ ತಲುಪುವಷ್ಟೊತ್ತಿಗೆ 14 ಗಂಟೆಯಾಗಿತ್ತು ಅಪಘಾತ ಸಂಭವಿಸಿ... ಧಗ ಧಗ ಉರಿಯುತ್ತಿದ್ದ ಅವಶೇಷಗಳ ನಡುವೆ ಎಲ್ಲೋ ಒಂದಷ್ಟು ಜೀವಗಳು ಇನ್ನೂ ಮಿಸುಕಾಡುತ್ತಲೇ ಇದ್ದವು. ಸ್ಟ್ಯಾಫ್ ಅಟೆಂಡೆಂಟ್ ಯುಮಿ ಒಚಿಯಾ ಇನ್ನೂ ಜೀವ ಹಿಡಕೊಂಡು ಅವಶೇಷಗಳ ಸಮೀಪ ಮಲಗಿದ್ದಾಳೆ. ಅನ್ ಕಾನ್ಶಿಯಸ್ ಆಗಿ. ಹಾಗೇ ಹುಡುಕುತ್ತ ಹೊರಟಂತೆ 12 ವರ್ಷದ ಬಾಲಕಿಯೊಬ್ಬಳೂ ಜೀವಂತ ಸಿಗುತ್ತಾಳೆ. ಒಬ್ಬ ಹೆಂಗಸು ಮತ್ತು ಆಕೆಯ ಎಂಟು ವರ್ಷದ ಮಗಳು ಕೂಡ ಬದುಕುಳಿದಿದ್ದಾರೆ!.. ಹೀಗೆ ಒಟ್ಟು ಬದುಕುಳಿದವರು ನಾಲ್ಕೇ ಮಂದಿ... ಅದೂ ಹೆಣ್ಣು ಜೀವಗಳು!... ಇಷ್ಟೆಲ್ಲವನ್ನು ರೀಅರೇಂಜ್ ಮಾಡಿದ ವಿಡಿಯೊ ಮತ್ತು ತಜ್ಞರ ಕಾಮೆಂಟ್ರಿ, ತಾಂತ್ರಿಕ ಮಾಹಿತಿಗಳು ಎಲ್ಲ ಘಟನೆ ಕಣ್ಮುಂದೆ ನಡೆದಂತೆ!.. ಸಾವನ್ನು ಕೂಡ ದೊಡ್ಡ ಸರಕಾಗಿಸುವ ಇಂಥ ತಂತ್ರಜ್ಞಾನ ಮಾರುಕಟ್ಟೆ ಮತ್ತು ಅದನ್ನು ಮಾಸ್ ಗೆ ತಲುಪಿಸುವ ಈ ಪರಿಯ ಮಾಧ್ಯಮ... ಓಹ್ ಗಾಡ್! ಈ ಬದುಕು ಅದೆಷ್ಟು .ಸರಳವೂ, ಸಹಜವೂ ಆಗಿದೆ... ನಾವ್ಯಾಕೆ ಹೀಗೆ ಹಾರಾಟದಲ್ಲೇ ಸುಖವನ್ನರಸುತ್ತ ಹೊರಟಿದ್ದೇವೋ? ಭೂಮಿಯೂ ಅಲ್ಲದ, ಆಕಾಶವೂ ಅಲ್ಲದ ನಡುವೆಲ್ಲೋ ಅಂತರಪಿಶಾಚಿಯಂತೆ ಹೀಗೆ ಕ್ಷಣಾರ್ಧದ ಅವಘಡಕ್ಕೆ ಸುಟ್ಟು ಹೋಗುತ್ತೇವೋ!...
2022/05/29 11:54:16
https://dilawarramadurg.blogspot.com/2010/05/blog-post_28.html
mC4
ಶಾಕಿಂಗ್: ಟಾಪ್ 5 ರೇಸ್ ನಿಂದ ಔಟ್ ಆದ ಜನಪ್ರಿಯ ಸೀರಿಯಲ್: ಹೊಸ ಸೀರಿಯಲ್ ಈ ರೇಸ್ ಗೆ ಎಂಟ್ರಿ!! – News9kannada ಶಾಕಿಂಗ್: ಟಾಪ್ 5 ರೇಸ್ ನಿಂದ ಔಟ್ ಆದ ಜನಪ್ರಿಯ ಸೀರಿಯಲ್: ಹೊಸ ಸೀರಿಯಲ್ ಈ ರೇಸ್ ಗೆ ಎಂಟ್ರಿ!! February 19, 2022 February 19, 2022 EditorLeave a Comment on ಶಾಕಿಂಗ್: ಟಾಪ್ 5 ರೇಸ್ ನಿಂದ ಔಟ್ ಆದ ಜನಪ್ರಿಯ ಸೀರಿಯಲ್: ಹೊಸ ಸೀರಿಯಲ್ ಈ ರೇಸ್ ಗೆ ಎಂಟ್ರಿ!! ಕನ್ನಡ ಕಿರುತೆರೆ ಎಂದ ಕೂಡಲೇ ಪ್ರೇಕ್ಷಕರಿಗೆ ನೆನಪಾಗುವ ಮೊದಲ ವಿಷಯ ಧಾರಾವಾಹಿಗಳು. ಏಕೆಂದರೆ ಕಿರುತೆರೆಯ ಲೋಕದಲ್ಲಿ ಈ ಧಾರಾವಾಹಿಗಳದ್ದೇ ಸಿಂಹ ಪಾಲು ಹಾಗೂ ಅವುಗಳನ್ನು ಮೆಚ್ಚಿ ನೋಡುವ ಪ್ರೇಕ್ಷಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲೇ ಇದೆ ಎನ್ನುವುದು ನಿಜ. ಆದ್ದರಿಂದಲೇ ಸೀರಿಯಲ್ ಗಳು ಮೆಗಾ ಸೀರಿಯಲ್ ಗಳ ರೂಪದಲ್ಲಿ ವರ್ಷಗಳ ಕಾಲ ಕಿರುತೆರೆಯಲ್ಲಿ ಮಿಂಚುತ್ತವೆ, ಕೆಲವು ಸೀರಿಯಲ್ ಗಳು ಜನರ ಅಪಾರ ಆದರ, ಅಭಿಮಾನ ಪಡೆದು ಟಾಪ್ ಸೀರಿಯಲ್ ಗಳಲ್ಲಿ ಸ್ಥಾನ ಪಡೆದು ಮಿಂಚುತ್ತವೆ. ಸಾಮಾನ್ಯವಾಗಿ ಕಳೆದ ಕೆಲವು ವರ್ಷಗಳಿಂದಲೂ ಟಾಪ್ ಸೀರಿಯಲ್ ಗಳ ರೇಸ್ ನಲ್ಲಿ ಜೀ ಕನ್ನಡ ವಾಹಿನಿಯ ಸೀರಿಯಲ್ ಗಳೇ ಟಾಪ್ ಐದರಲ್ಲಿ ಸ್ಥಾನ ವನ್ನು ಪಡೆದು ಬೀಗುತ್ತಿವೆ. ಅಲ್ಲದೇ ಈ ವಾಹಿನಿಯ ಸೀರಿಯಲ್ ಗಳು ಬಿಟ್ಟರೆ ಬೇರೆ ವಾಹಿನಿಯ ಸೀರಿಯಲ್ ಗಳು ಟಾಪ್ ಇದರಲ್ಲಿ ಸ್ಥಾನ ಪಡೆಯುವುದು ಅಪರೂಪಕ್ಕೊಮ್ಮೆ ಎನ್ನುವ ಹಾಗೆ ನಡೆಯುತ್ತಿತ್ತು, ಆದರೆ ಅದು ಕೂಡಾ ಬೆರಳೆಣಿಕೆಯಷ್ಟು ಸಂದರ್ಭಗಳಲ್ಲಿ ಮಾತ್ರವೇ ಎನ್ನುವುದು ವಾಸ್ತವ. ಕಳೆದ ವಾರವೂ ಸಹಾ ಟಾಪ್ ಐದರ ವಿಚಾರಕ್ಕೆ ಬಂದರೆ ಟಿ ಆರ್ ಪಿ ಆಧಾರವಾಗಿ ಟಾಪ್ ಐದರಲ್ಲಿ ಜೀ ವಾಹಿನಿಯ ಸೀರಿಯಲ್ ಗಳೇ ಇದ್ದವು. ಆದರೆ ಈಗ ಈ ವಾರದ ಟಿ ಆರ್ ಪಿ ಹೊರ ಬಂದ ಮೇಲೆ ಟಾಪ್ ಐದು ಧಾರಾವಾಹಿಗಳಲ್ಲಿ ಒಂದು ದೊಡ್ಡ ಬದಲಾವಣೆಯೇ ಆಗಿದೆ. ಹೌದು, ಈ ವಾರ ಟಾಪ್ ಐದರಲ್ಲಿ ಹೊಸ ಸೀರಿಯಲ್ ಒಂದು ಎಂಟ್ರಿ ನೀಡಿದ್ದು, ಈ ಮೂಲಕ ಜೀ ವಾಹಿನಿಯ ಒಂದು ಜನಪ್ರಿಯ ಸೀರಿಯಲ್ ಟಾಪ್ ಐದರಿಂದ ಹೊರ ಬಿದ್ದಿದೆ. ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಭಾರೀ ವೈಭವದಿಂದ, ಅದ್ದೂರಿಯಾಗಿ ಭಾರೀ ತಾರಾಗಣದೊಂದಿಗೆ ಆರಂಭವಾಗಿರುವ ಹೊಸ ಸೀರಿಯಲ್ ರಾಮಾಚಾರಿ ಆರಂಭವಾದ ಮೊದಲ ವಾರದಲ್ಲೇ ದೊಡ್ಡ ಮಟ್ಟದ ಯಶಸ್ಸನ್ನು ತನ್ನದಾಗಿಸಿಕೊಂಡಿದ್ದು, ಟಾಪ್ ಸೀರಿಯಲ್ ಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ. ಅದರ ಮೊದಲ ಭಾಗ ಎನ್ನುವಂತೆ ಈಗ ರಾಮಾಚಾರಿ ಇಷ್ಟು ದಿನ ಜನಪ್ರಿಯತೆ ಪಡೆದಿದ್ದ ಟಾಪ್ ಸೀರಿಯಲ್ ಒಂದನ್ನು ಹಿಂದಕ್ಕೆ ಹಾಕಿ ಆ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಕಿರುತೆರೆಯಲ್ಲಿ ಬೋಲ್ಡ್, ಬಿಂದಾಸ್ ಆಗಿ ಮನೆಯ ಜವಾಬ್ದಾರಿ ಹೊತ್ತ ಕೆಚ್ಚೆದೆಯ ಹೆಣ್ಣಾದ ಸತ್ಯ ಳ ಕಥೆ ಹೊತ್ತು ಜನರ ಅಪಾರ ಮೆಚ್ಚುಗೆ ಪಡೆದು ಆರಂಭದಲ್ಲಿ ಟಾಪ್ ಒಂದು ಸ್ಥಾನ ತನ್ನದಾಗಿಸಿಕೊಂಡು ಅನಂತರ ಒಂದೊಂದೇ ಸ್ಥಾನ ಕಳೆದುಕೊಂಡು, ಕಳೆದ ಕೆಲವು ಸಮಯದಿಂದ ಟಾಪ್ ಐದನೇ ಸ್ಥಾನದಲ್ಲಿ ತೃಪ್ತಿ ಪಟ್ಟುಕೊಂಡಿದ್ದ ಸತ್ಯ ಸೀರಿಯಲ್ ಈ ವಾರ ಟಾಪ್ ಐದರ ರೇಸ್ ನಿಂದ ಹೊರ ಬಿದ್ದಿದೆ, ಸತ್ಯ ಜಾಗಕ್ಕೆ ರಾಮಾಚಾರಿ ಆಗಮನವಾಗಿದೆ. ಇದು ನಿಜಕ್ಕೂ ಯಾರೂ ನಿರೀಕ್ಷೆ ಮಾಡಿರದ ಬೆಳೆವಣಿಗೆ ಆಗಿದೆ.. ಈ ವಾರ ಪುಟ್ಟಕ್ಕನ ಮಕ್ಕಳು ಎಂದಿನಂತೆ ಮೊದಲ ಸ್ಥಾನದಲ್ಲಿ ಇದ್ದು, ಎರಡನೇ ಸ್ಥಾನದಲ್ಲಿ ಗಟ್ಟಿಮೇಳ, ಮೂರರಲ್ಲಿ ಹಿಟ್ಲರ್ ಕಲ್ಯಾಣ, ನಾಲ್ಕನೇ ಸ್ಥಾನದಲ್ಲಿ ಜೊತೆ ಜೊತೆಯಲಿ ಇದ್ದರೆ ಐದನೇ ಸ್ಥಾನ ಹೊಸ ಧಾರಾವಾಹಿ ರಾಮಾಚಾರಿಯ ಪಾಲಾಗಿದ್ದು, ಸತ್ಯ ಸೀರಿಯಲ್ ಬಹಳ ದಿನಗಳ ನಂತರ ಟಾಪ್ ರೇಸ್ ನಿಂದ ಹೊರ ಬಿದ್ದಿದೆ.
2022/06/25 11:22:03
https://news9kannada.com/%E0%B2%B6%E0%B2%BE%E0%B2%95%E0%B2%BF%E0%B2%82%E0%B2%97%E0%B3%8D-%E0%B2%9F%E0%B2%BE%E0%B2%AA%E0%B3%8D-5-%E0%B2%B0%E0%B2%BF%E0%B2%82%E0%B2%A6-%E0%B2%B9%E0%B3%8A%E0%B2%B0%E0%B2%97%E0%B2%BF%E0%B2%A6/6065/
mC4
ಡೇಂಜರ್ ಸ್ಥಿತಿ: ಏರ್​ಪೋರ್ಟ್​ನಲ್ಲಿ ನಮ್ಮನ್ನು ತಪಾಸಣೆಯೇ ಮಾಡಲಿಲ್ಲ ಎಂದ 20 ಪ್ರಯಾಣಿಕರು | We 40 persons came in from abroad, but were not checked for coronavirus at airports says passengers– News18 Kannada ಡೇಂಜರ್ ಸ್ಥಿತಿ: ಏರ್​ಪೋರ್ಟ್​ನಲ್ಲಿ ನಮ್ಮನ್ನು ತಪಾಸಣೆಯೇ ಮಾಡಲಿಲ್ಲ ಎಂದ 20 ಪ್ರಯಾಣಿಕರು Corona14:25 PM March 04, 2020 ಬೆಂಗಳೂರು: ಕೊರೊನಾ ವೈರಸ್ ಬಹಳ ಬೇಗ ಹರಡುವ ಹೊಸ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇಡೀ ವಿಶ್ವವೇ ತತ್ತರಿಸುತ್ತಿದೆ. ರಾಜ್ಯದಲ್ಲೂ ಹೈ ಅಲರ್ಟ್ ಇದೆ. ವಿದೇಶದಿಂದ ಬಂದವರನ್ನು ತಪಾಸಣೆಗೆ ಕಡ್ಡಾಯವಾಗಿ ಒಳಪಡಿಸಬೇಕು. ಆದರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೊನಾ ವೈರಸ್ ತಪಾಸಣೆಯೇ ನಡೆಯುತ್ತಿಲ್ಲ ಎಂದು 40 ಪ್ರಯಾಣಿಕರು ಆರೋಪಿಸಿದ್ದಾರೆ. ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಈ ಪ್ರಯಾಣಿಕರು ತಾವು ವಿದೇಶದಿಂದ ಮುಂಬೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಆಗಮಿಸಿದೆವು. ಎಲ್ಲಿಯೂ ಕೂಡ ನಮ್ಮನ್ನು ತಪಾಸಣೆ ಮಾಡಲಿಲ್ಲ ಎಂದಿದ್ದಾರೆ.
2020/08/10 00:34:41
https://kannada.news18.com/videos/coronavirus-latest-news/we-40-persons-came-in-from-abroad-but-were-not-checked-for-coronavirus-at-airports-says-passengers-sgh-345945.html
mC4
ಪ್ರಶ್ನೆ: ಆದಿ ಶಂಕರರು ಒಬ್ಬ ರಾಜನ ಶರೀರದೊಳಗೆ ಪರಕಾಯ ಪ್ರವೇಶ ಮಾಡಿ ಅಲ್ಲಿ ಒಂದಷ್ಟು ಸಮಯವಿದ್ದರು ಎಂದು ಹೇಳಲಾಗುತ್ತದೆ. ಇದು ವಾಸ್ತವದಲ್ಲಿ ಸಾಧ್ಯವೇ? ಹೌದೆಂದರೆ, ಹೇಗೆ? ಯಾವ ರೀತಿಯ ಯೋಗದ ಪಾಂಡಿತ್ಯವು ಇಂತಹ ಚಮತ್ಕಾರವನ್ನು ಸಾಧ್ಯವಾಗಿಸುತ್ತದೆ? ಸದ್ಗುರು: ಆದಿ ಶಂಕರರು ಒಬ್ಬ ವ್ಯಕ್ತಿಯೊಂದಿಗೆ ವಾದಕ್ಕಿಳಿದು ಗೆದ್ದರು. ನಂತರ, ಆ ವ್ಯಕ್ತಿಯ ಹೆಂಡತಿ, ಆದಿ ಶಂಕರರಿಗೆ ತನ್ನ ಜೊತೆ ವಾದ ಮಾಡಿ ಎಂದಳು - ಮಹಿಳೆಯರ ವಿಷಯ ನಿಮಗೆ ಗೊತ್ತಲ್ಲವೇ! ಆದಿ ಶಂಕರರ ತರ್ಕ ಒಂದು ಮಟ್ಟದ್ದು; ಅಂತಹವರೊಂದಿಗೆ ನೀವು ವಾದಿಸಲು ಹೋಗಬಾರದು. ಹೀಗಿದ್ದರೂ, ಆಕೆ, "ನೀವು ನನ್ನ ಗಂಡನನ್ನು ಸೋಲಿಸಿದರಿ. ಆದರೆ, ಆತ ಪರಿಪೂರ್ಣನಲ್ಲ. ನಾವಿಬ್ಬರೂ ಒಂದರ ಎರಡು ಭಾಗಗಳು. ಹಾಗಾಗಿ, ನೀವು ನನ್ನೊಂದಿಗೂ ವಾದಿಸಬೇಕು." ಎಂದು ಹೇಳಿ ತನ್ನನ್ನು ವಾದದಲ್ಲಿ ಸೇರಿಸಿಕೊಂಡಳು. ಈ ತರ್ಕವನ್ನು ತಳ್ಳಿಹಾಕುವುದು ಹೇಗೆ? ಆದಿ ಶಂಕರರೊಂದಿಗೆ ಅವಳ ವಾದ ಆರಂಭವಾಯಿತು. ವಾದಿಸುತ್ತ, ವಾದಿಸುತ್ತ, ತಾನು ಸೋಲುತ್ತಿದ್ದೇನೆಂದು ಆಕೆಗೆ ಮನವರಿಕೆಯಾದಾಗ, ಅವಳು ಮಾನವ ಲೈಂಗಿಕತೆಯುನ್ನು ಕುರಿತು ಪ್ರಶ್ನೆಗಳನ್ನು ಕೇಳಲಾರಂಭಿಸಿದಳು. ಆದಿ ಶಂಕರರು ತಮಗೆ ತಿಳಿದಿದ್ದನ್ನು ಹೇಳಿದರು. ಅವಳಿನ್ನು ಹೆಚ್ಚಿನ ಆಳಕ್ಕಿಳಿದು, "ನಿಮ್ಮ ಅನುಭವದಿಂದ ನಿಮಗೇನು ತಿಳಿದಿದೆ?" ಎಂದು ಪ್ರಶ್ನಿಸಿದಳು. ಆದಿ ಶಂಕರರು ಬ್ರಹ್ಮಚಾರಿಗಳು. ತನ್ನನ್ನು ಸೋಲಿಸಲು ಇದೊಂದು ಉಪಾಯವೆಂದು ಅವರಿಗೆ ತಿಳಿದಿತ್ತು. ಅದಕ್ಕಾಗಿ, ಅವರು, "ನನಗೆ ಒಂದು ತಿಂಗಳ ಕಾಲಾವಕಾಶ ಬೇಕು. ಒಂದು ತಿಂಗಳಿನ ನಂತರ, ನಾವು ವಾದವನ್ನು ಎಲ್ಲಿ ಬಿಟ್ಟಿದ್ದೆವೋ, ಅಲ್ಲಿಂದಲೇ ಪುನಃ ಆರಂಭಿಸೋಣ." ಎಂದರು. ನಂತರ ಅವರು ಒಂದು ಗುಹೆಯೊಳಕ್ಕೆ ಹೋಗಿ, ತಮ್ಮ ಶಿಷ್ಯರುಗಳಿಗೆ ಹೀಗೆ ಹೇಳಿದರು, "ಏನೇ ಆಗಲಿ, ಈ ಗುಹೆಯೊಳಗೆ ಬರಲು ಯಾರಿಗೂ ಅನುಮತಿಸಬೇಡಿ, ಏಕೆಂದರೆ ನಾನು ನನ್ನ ದೇಹವನ್ನು ಬಿಟ್ಟು ಸ್ವಲ್ಪ ಸಮಯದವರೆಗೆ ಇನ್ನೊಂದು ಸಾಧ್ಯತೆಯನ್ನು ಹುಡುಕಿಕೊಂಡು ಹೋಗುತ್ತಿದ್ದೇನೆ." ಜೀವಶಕ್ತಿ ಅಥವಾ ಪ್ರಾಣವು ಐದು ಆಯಾಮಾಗಳಲ್ಲಿ ವ್ಯಕ್ತವಾಗುತ್ತದೆ: ಪ್ರಾಣ ವಾಯು, ಸಮಾನ, ಅಪಾನ, ಉದಾನ ಮತ್ತು ವ್ಯಾನ. ಪ್ರಾಣದ ಈ ಐದು ಅಭಿವ್ಯಕ್ತಿಗಳು ಪ್ರತ್ಯೇಕವಾದ ಕಾರ್ಯಗಳನ್ನು ಹೊಂದಿವೆ. ಪ್ರಾಣ ವಾಯು ಉಸಿರಾಟದ ಕ್ರಿಯೆಯ ಉಸ್ತುವಾರಿ, ಆಲೋಚನಾ ಪ್ರಕ್ರಿಯೆ ಮತ್ತು ಸ್ಪರ್ಶ ಸಂವೇದನೆಯ ಕಾರ್ಯವನ್ನು ನಿರ್ವಹಿಸುತ್ತದೆ. ಯಾರಾದರೂ ಜೀವಂತವಾಗಿದ್ದಾರೋ ಅಥವಾ ಸತ್ತಿದ್ದಾರೋ ಎಂದು ನೀವು ಹೇಗೆ ಪರೀಕ್ಷಿಸುತ್ತೀರಿ? ಅವರ ಉಸಿರಾಟವು ನಿಂತಿದ್ದರೆ, ಅವರು ಸತ್ತಿದ್ದಾರೆಂದು ಹೇಳಲಾಗುತ್ತದೆ. ಪ್ರಾಣ ವಾಯು ನಿರ್ಗಮಿಸಲು ಆರಂಭಿಸಿರುವ ಕಾರಣ ಉಸಿರು ನಿಂತುಹೋಗಿರುತ್ತದೆ. ಪ್ರಾಣ ವಾಯು ಸಂಪೂರ್ಣವಾಗಿ ನಿರ್ಗಮಿಸಲು ಒಂದೂವರೆ ಗಂಟೆಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ, ಸಾಂಪ್ರದಾಯಿಕವಾಗಿ ಈ ಪದ್ಧತಿಯು ರೂಢಿಯಲ್ಲಿತ್ತು: ಉಸಿರಾಟವು ನಿಂತ ಮೇಲೆ, ಆ ಶವವನ್ನು ಸುಡುವ ಮೊದಲು, ಕನಿಷ್ಠವೆಂದರೂ ಒಂದೂವರೆ ಗಂಟೆಗಳ ಕಾಲ ನೀವು ಕಾಯಬೇಕಿತ್ತು - ಏಕೆಂದರೆ ಅವರಿನ್ನೂ ಬೇರೆ ಅನೇಕ ರೀತಿಗಳಲ್ಲಿ ಬದುಕಿರುತ್ತಾರೆ. ಅವರ ಆಲೋಚನೆಯ ಪ್ರಕ್ರಿಯೆ, ಅವರ ಉಸಿರಾಟದ ಕ್ರಿಯೆ ಮತ್ತು ಅವರ ಸಂವೇದನೆಗಳು ನಿಂತುಹೋದಾಗ, ಅವರು ದೇಹ ಸುಡುವುದರ ವೇದನೆಯನ್ನು ಅನುಭವಿಸುವುದಿಲ್ಲ ಎಂಬ ಕಾರಣಕ್ಕೆ ನಾವು ಒಂದೂವರೆ ಗಂಟೆಗಳ ಕಾಲ ಕಾಯುತ್ತೇವೆ. ಪ್ರಾಣದ ಉಳಿದ ಭಾಗವು ಇನ್ನೂ ಇರುತ್ತದೆ. ಪ್ರಾಣದ ಕೊನೆಯ ಆಯಾಮವಾದ ವ್ಯಾನವು, ಹನ್ನೆರಡರಿಂದ ಹದಿನಾಲ್ಕು ದಿನಗಳವರೆಗೆ ಇರಬಹುದು. ನಮ್ಮ ದೇಹದ ರಕ್ಷಣೆ ಮತ್ತು ಸಮಗ್ರತೆಯು ಹೆಚ್ಚಾಗಿ ವ್ಯಾನ ಪ್ರಾಣವಾಯುವಿನ ಕಾರ್ಯಭಾರದಿಂದಾಗಿ ಆಗಿದೆ. ಆದಿ ಶಂಕರರು ತಮ್ಮ ದೇಹವನ್ನು ತೊರೆದಾಗ, ದೇಹವನ್ನು ಕಾಪಾಡಿಕೊಳ್ಳುವ ಸಲುವಾಗಿ ವ್ಯಾನ ವಾಯುವನ್ನು ಜೀವವ್ಯವಸ್ಥೆಯಲ್ಲಿ ಇರುವಂತೆ ನೋಡಿಕೊಂಡಿದ್ದರು. ಹೀಗಿರಬೇಕಾದರೆ, ಒಬ್ಬ ರಾಜನಿಗೆ ಹಾವು ಕಡಿದು ಅವನ ಸಾವಾಗಿತ್ತು. ನಾಗರಹಾವಿನ ವಿಷವು ನಿಮ್ಮ ಶರೀರದೊಳಗೆ ಸೇರಿದಾಗ, ರಕ್ತವು ಹೆಪ್ಪುಗಟ್ಟಿ, ಉಸಿರಾಟವು ಕಷ್ಟವಾಗುತ್ತದೆ, ಏಕೆಂದರೆ, ರಕ್ತಪರಿಚಲನೆಯು ತ್ರಾಸದಾಯಕವಾದಾಗ, ಉಸಿರಾಡಲು ಬಹಳ ಕಷ್ಟವಾಗುತ್ತದೆ. ನಿಮ್ಮ ಪ್ರಾಣ ವಾಯು ನಿರ್ಗಮಿಸುವ ಮುನ್ನವೇ ನಿಮ್ಮ ಉಸಿರಾಟವು ನಿಂತುಹೋಗುತ್ತದೆ. ಅನೇಕ ವಿಧದಲ್ಲಿ, ಪರಕಾಯ ಪ್ರವೇಶಕ್ಕೆ ಇದು ಸೂಕ್ತವಾದ ಪರಿಸ್ಥಿತಿ. ಸಾಮಾನ್ಯವಾಗಿ, ಒಬ್ಬ ವ್ಯಕ್ತಿ ಸತ್ತಾಗ ನಿಮಗೆ ಒಂದೂವರೆ ಗಂಟೆಯಷ್ಟು ಸಮಯಾವಕಾಶ ಸಿಗುತ್ತದೆ. ಆದರೆ, ಶರೀರದಲ್ಲಿ ನಾಗರಹಾವಿನ ವಿಷವಿದ್ದಾಗ, ನಿಮಗೆ ನಾಲ್ಕೂವರೆ ಗಂಟೆಯಷ್ಟು ಸಮಯ ದೊರೆಯುತ್ತದೆ. ಆದಿ ಶಂಕರರಿಗೆ ಈ ಅವಕಾಶ ದೊರೆಯಿತು, ಮತ್ತು ಅವರು ಬಹಳ ಸಲೀಸಾಗಿ ಮೃತ ರಾಜನ ಶರೀರವನ್ನು ಪ್ರವೇಶಿಸಿದರು. ಅನುಭವಾತ್ಮಕವಾಗಿ ಪ್ರಶ್ನೆಗಳಿಗೆ ಉತ್ತರಿಸಲು ಆ ಪ್ರಕ್ರಿಯೆಯನ್ನು ಸ್ವತಃ ಅನುಭವಿಸಿದರು. ರಾಜನ ವಲಯದಲ್ಲಿ ಕೆಲ ಬುದ್ಧಿವಂತರಿದ್ದರು. ಸತ್ತ ರಾಜ ಇದ್ದಕ್ಕಿದಂತೆ ಸಂಪೂರ್ಣ ಶಕ್ತಿಯಿಂದ ಎದ್ದು ಕುಳಿತಿದ್ದನ್ನು ಕಂಡ ಅವರು, ರಾಜನ ವರ್ತನೆಯನ್ನು ಗಮನಿಸಿ ಅವನು ರಾಜನಲ್ಲವೆಂದು, ಮತ್ತು ಅವನ ದೇಹದಲ್ಲಿ ಬೇರೆ ಯಾರೋ ಇದ್ದಾರೆ ಎನ್ನುವುದನ್ನು ಗುರುತಿಸಿದರು. ಆದ್ದರಿಂದ, ಅವರು ನಗರದಾದ್ಯಂತ ಸೈನಿಕರನ್ನು ಕಳುಹಿಸಿ, ಎಲ್ಲೆಲ್ಲಿ ಮೃತದೇಹವು ಕಾಣಸಿಗುತ್ತದೆಯೋ, ಅದನ್ನು ಅಲ್ಲಿಯೇ ತಕ್ಷಣ ಸುಟ್ಟುಹಾಕುವಂತೆ ಹೇಳಿದರು. ಹಾಗೆ ಮಾಡಿದರೆ, ಆ ಸುಟ್ಟ ಶವವು ರಾಜನ ಶರೀರವನ್ನು ಹೊಕ್ಕಿರುವ ವ್ಯಕ್ತಿಯದ್ದಾಗಿದ್ದರೆ, ಆತನಿಗೆ ಮರಳಿ ತನ್ನ ಶರೀರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಎಂಬುದು ಅವರ ಉಪಾಯವಾಗಿತ್ತು. ಬೇರೆ ವ್ಯಕ್ತಿಯಾದರೆ ಏನಂತೆ, ರಾಜ ಬದುಕಿ ಬಂದಿದ್ದಾನೆ ಮತ್ತವನು ರಾಜನ ಹಾಗೆಯೇ ಕಾಣುತ್ತಾನಲ್ಲವೆ ಎಂದು ಅವರ ಎಣಿಕೆ. ಆದರೆ ಅವರು ಅದರಲ್ಲಿ ಯಶಸ್ವಿಯಾಗಲಿಲ್ಲ, ಮತ್ತು ಆದಿ ಶಂಕರರು ತಮ್ಮ ಶರೀರಕ್ಕೆ ಹಿಂತಿರುಗಿದರು. ಇಂತಹದ್ದೊಂದು ಕ್ರಿಯೆ ಸಾಧ್ಯವೇ? ಹೌದು, ಇದು ಸಾಧ್ಯ. ಇದೊಂದು ಚಮತ್ಕಾರವೇ? ಇದೇನೂ ಅಂತಹ ಚಮತ್ಕಾರವಲ್ಲ. ನಿಮ್ಮೊಳಗಿನ ಜೀವಶಕ್ತಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಸ್ವಲ್ಪ ತಿಳಿವಳಿಕೆ ಬೇಕಾಗುತ್ತದೆಯಷ್ಟೆ. ಬದುಕಿರುವವರ ದೇಹದೊಳಕ್ಕೆ ಪರಕಾಯ ಪ್ರವೇಶ ಮಾಡುವುದು ಕಷ್ಟಸಾಧ್ಯವಾಗಬಹುದು. ಆಗ ತಾನೇ ಮರಣ ಹೊಂದಿದವರ ದೇಹವನ್ನು ಪ್ರವೇಶಿಸುವುದು ಬಹಳ ಸರಳ. ಇದನ್ನು ಮಾಡಲು ಮರಣಾನಂತರದ ಒಂದೂವರೆ ಗಂಟೆಗಳು ಸೂಕ್ತವಾದ ಸಮಯವಾಗಿರುತ್ತವೆ, ಏಕೆಂದರೆ, ಅಲ್ಲಿ ಅಗತ್ಯವಿರುವ ನಿರ್ವಾತವು ಏರ್ಪಟ್ಟಿರುತ್ತದೆ, ಮತ್ತು ಅದೇ ಸಮಯದಲ್ಲಿ ಬೇರೆಲ್ಲಾ ಕೆಲಸವು ನಡೆಯತ್ತಲೇ ಇರುತ್ತದೆ. ಇದೇ ಕಾರಣಕ್ಕಾಗಿ, ಭಾರತದಲ್ಲಿ, ಯಾರಾದರೂ ಸಾವಿನ ಅಂಚಿನಲ್ಲಿದ್ದರೆ, ಅವರನ್ನು ಮನೆಯ ಹೊರಗೆ ಮಲಗಿಸುತ್ತಿದ್ದರು. ಸಾಂಬ್ರಾಣಿಯನ್ನು ಹಚ್ಚಿ, ಮಂತ್ರವನ್ನು ಪಠಿಸುತ್ತಿದ್ದರು. ಕೊನೆಯುಸಿರು ಎಳೆಯುತ್ತಿರುವವರಿಗೆ ಸಾಂತ್ವನ ನೀಡಲು ಮತ್ತು ಇನ್ಯಾರೋ ದೇಹವನ್ನು ಆಕ್ರಮಿಸುವುದಿಲ್ಲವೆಂದು ಖಚಿತಪಡಿಸಿಕೊಳ್ಳಲು ಹಾಗೆ ಮಾಡಲಾಗುತ್ತಿತ್ತು. ಹಾಗಾಗಿ ಇಂತಹ ಸಂಗತಿಗಳು ನಡೆಯಬಾರದೆಂದು ಅನೇಕ ವಿಧಿಗಳು ಮತ್ತು ರಕ್ಷಣಾವಿಧಾನಗಳನ್ನು ಹಿಂದೆಲ್ಲಾ ರಚಿಸಲಾಗಿತ್ತು. ಆದರೆ, ಇಂದು, ಇದು ಎಂತಹ ಅಪರೂಪದ ಘಟನೆಯಾಗಿದೆ ಎಂದರೆ, ಜನರು ಇದನ್ನು ಅತ್ಯದ್ಭುತ ಚಮತ್ಕಾರವೆಂದು ಬಣ್ಣಿಸಲು ಆರಂಭಿಸಿದ್ದಾರೆ. mystic Death Mysticism ಶಂಕರಾಚಾರ್ಯ ಸದ್ಗುರು ಪರಕಾಯ ಪ್ರವೇಶ ಆದಿ ಶಂಕರ ಯೋಗ ಜೀವಶಕ್ತಿ ಪ್ರಾಣಶಕ್ತಿ ಪತಂಜಲಿ ಮುನಿಗಳು ಔಷಧ, ಭಾಷೆ ಮತ್ತು ವ್ಯಾಕರಣದ ಮೇಲೆ ಪಠ್ಯಗಳನ್ನು ಬರೆದಂತಹ ಬಹುಮುಖ ಪ್ರತಿಭೆಗಳುಳ್ಳ ವ್ಯಕ್ತಿಯಷ್ಟೇ ಅಲ್ಲ, ಅವರು 18 ಶಾಸ್ತ್ರೀಯ ತಮಿಳು ಸಿದ್ಧರುಗಳಲ್ಲಿ ಒಬ್ಬರಾಗಿ… ಆಧ್ಯಾತ್ಮಿಕ ಬೆಳಕು ಶ್ರೀ ಶಂಕರ ಅಸಾಧಾರಣ ವಿದ್ವತ್ತು. ಬಹುಭಾಷಾಭಿಜ್ಞತೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಭಾರತದ ಹೆಮ್ಮೆಯ ಅಧ್ಯಾತ್ಮಿಕ ಬೆಳಕೇ ಶ್ರೀ ಶಂಕರ ಭಗವತ್ಪಾದರು. ತೀರ ಚಿಕ್ಕ ವಯಸ್ಸಿನಲ್ಲಿಯೇ ಅವರು ತೋರಿದ ಜ್…
2019/08/21 22:52:55
https://isha.sadhguru.org/ca/kn/wisdom/article/Adi-shankaraacharyaru-mrutha-raajana-dehavannu-praveshavisiddu-hege
mC4
'ಎರಡನೇ ಹಂತದ ಚುನಾವಣೆ ಕಾರ್ಯಕ್ಕೆ ಸಿಬ್ಬಂದಿಗಳ ನಿಯೋಜನೆ' - Power TV News Home ಪವರ್ ಪಾಲಿಟಿಕ್ಸ್ 'ಎರಡನೇ ಹಂತದ ಚುನಾವಣೆ ಕಾರ್ಯಕ್ಕೆ ಸಿಬ್ಬಂದಿಗಳ ನಿಯೋಜನೆ' 'ಎರಡನೇ ಹಂತದ ಚುನಾವಣೆ ಕಾರ್ಯಕ್ಕೆ ಸಿಬ್ಬಂದಿಗಳ ನಿಯೋಜನೆ' ಹುಬ್ಬಳ್ಳಿ : ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಡಿ.27 ರಂದು ನಡೆಯಲಿರುವ ಮತದಾನಕ್ಕೆ ಸಿಬ್ಬಂದಿಗಳನ್ನು ನೇಮಿಸುವ ಮಸ್ಟರಿಂಗ್ ಕಾರ್ಯ ನಗರದ ಲ್ಯಾಮಿಂಗಟನ್ ಶಾಲೆಯಲ್ಲಿ ಜರುಗುತ್ತಿದೆ. ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯಿತಿಯ ಒಟ್ಟು 124 ಮತಕ್ಷೇತ್ರಳಿಂದ 348 ಗ್ರಾಮ ಪಂಚಾಯತಿ ಸದಸ್ಯರ ಆಯ್ಕೆಗೆ ಮತದಾನ ಜರುಗಲಿದೆ. 1036 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. 159 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 26 ಚುನಾವಣೆ ಅಧಿಕಾರಿ, 26 ಸಹಾಯಕ ಚುನಾವಣೆ ಅಧಿಕಾರಿ, 172 ಮತಗಟ್ಟೆ ಅಧ್ಯಕ್ಷಾಧಿಕಾರಿ, 176 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ 352 ಮತಗಟ್ಟೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ಒಂದು ಮತಕ್ಷೇತ್ರಕ್ಕೆ ಅವಿರೋಧವಾಗಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಮಲ್ಲಿಗವಾಡ ಗ್ರಾಮದ 2 ಮತಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ. 30 ಸೂಕ್ಷ್ಮ 17 ಅತಿ ಸೂಕ್ಷ್ಮ ಮತೆಗಟ್ಟೆಗಳನ್ನು ಗುರುತಿಸಲಾಗಿದೆ. 16‌ ಸೆಕ್ಟರ್, 38‌ ರೂಟ್ ಗಳನ್ನು ಗುರುತಿಸಲಾಗಿದ್ದು, ಚುನಾವಣೆ ಸಿಬ್ಬಂದಿ, ಮತಪತ್ರ, ಮತಪೆಟ್ಟೆಗಳನ್ನು ಆಯಾ ಮತಗಟ್ಟೆಗಳಿಗೆ ಕರೆದೊಯ್ಯಲು 25 ಸರ್ಕಾರಿ ಬಸ್, 6 ಶಾಲಾ ಬಸ್ ನಿಯೋಜಿಸಲಾಗಿದೆ. 57821 ಪುರುಷ, 55984 ಮಹಿಳೆ, 1 ಇತರೆ ಒಟ್ಟು 113806 ಮತದಾರರು ಇದ್ದಾರೆ. ಪೊಲೀಸ್ ಸಿಬ್ಬಂದಿ ನೇಮಕ: ಗ್ರಾ.ಪಂ. ಚುನಾವಣೆ ಮತದಾನಕ್ಕೆ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ತಾಲೂಕಿಗೆ ಸಂಬಂದ ಪಟ್ಟಂತೆ 300 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಒಬ್ಬ ಡಿ.ವೈ.ಎಸ್.ಪಿ, 4 ಸಿ.ಪಿ.ಐ, 4 ಪಿ.ಎಸ್.ಐ, 20 ಎ.ಎಸ್.ಐ, 150 ಪೊಲೀಸ್ ಕಾನಸ್ಟೇಬಲ್, 65 ಕಾರಾಗೃಹ ಭದ್ರತಾ ಸಿಬ್ಬಂದಿ, 34 ಹೋಮ್ ಗಾರ್ಡ್ ಗಳು ಮತದಾನ ಭದ್ರತೆ ಕಾರ್ಯನಿರ್ವಹಿಸುವರು. 2 ಕೆ.ಎಸ್.ಆರ್, 3 ಡಿ.ಎ.ಆರ್ ತುಕಡಿಗಳನ್ನು ಸನ್ನದ್ಧವಾಗಿರಿಸಲಾಗಿದೆ. ಆರೋಗ್ಯ ಸಿಬ್ಬಂದಿ ನೇಮಕ: ಕೋವಿಡ್-19 ಹಿನ್ನಲೆಯಲ್ಲಿ ಮತಗಟ್ಟೆಗಳಲ್ಲಿ ಅಗತ್ಯ ಮುಂಜಾಗೃತೆ. ಕ್ರಮಗಳನ್ನು ಕೈಗೊಳ್ಳಲಾಗಿದೆ. 162 ಆರೋಗ್ಯ ಸಿಬ್ಬಂದಿಗಳನ್ನು ಮತದಾನ ಜರುಗುವ ಬೂತ್ ಗಳಿಗೆ ನೇಮಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ಮತಗಟ್ಟೆಗಳಿಗೆ ವೈದ್ಯಾಧಿಕಾರಿಗಳನ್ನು ಚುನಾವಣೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಸಾಮಾಜಿ ಅಂತರ, ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸೈನಿಟೈಜರ್ ಕಡ್ಡಾಯ ಗೊಳಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ತಹಶಿಲ್ದಾರ ಪ್ರಕಾಶ್ ನಾಸಿ, ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ತಾಲೂಕು ವೈದ್ಯಾಧಿಕಾರಿ ಆರ್.ಎಸ್.ಹಿತ್ತಲಮನಿ, ಗ್ರಾಮೀಣ ಸಿ.ಪಿ.ಐ ಆರ್.ಬಿ.ಗೋಕಾಕ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು. ಚುನಾವಣೆ ನೇಮಿಸಲಾದ ಸಿಬ್ಬಂದಿ ಬೆಳಗ್ಗೆ 8 ಗಂಟೆಯಿಂದಲೇ ಕರ್ತವ್ಯಕ್ಕೆ ವರದಿ ಮಾಡಿಕೊಂಡರು
2021/01/26 10:04:06
https://www.powertvnews.in/assignment-of-personnel-for-the-second-phase-of-election-campaign/
mC4
ಪಾಳು ಬಿತ್ತು ಕುರಿ-ಮೇಕೆ ಮಾರುಕಟ್ಟೆ | Udayavani – ಉದಯವಾಣಿ Friday, 22 Oct 2021 | UPDATED: 10:21 AM IST ಪಾಳು ಬಿತ್ತು ಕುರಿ-ಮೇಕೆ ಮಾರುಕಟ್ಟೆ ಎಪಿಎಂಸಿಯಿಂದ ನಿರ್ಮಿಸಿದ ಕಟ್ಟಡದಲ್ಲಿ ನಡೀತಿಲ್ಲ ವ್ಯಾಪಾರ Team Udayavani, Oct 9, 2020, 6:01 PM IST ಹಾವೇರಿ: ಕುರಿ, ಮೇಕೆ, ಆಡುಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಿರ್ಮಿಸಿದ್ದ ಕಟ್ಟಡ ಸದ್ಬಳಕೆಯಾಗದೇ ಪಾಳು ಬಿದ್ದಿದ್ದು, ಇಲ್ಲಿ ವೈಜ್ಞಾನಿಕವಾಗಿ ವ್ಯಾಪಾರ ನಡೆಯದೇ ಕುರಿಗಾಹಿಗಳು ನಷ್ಟ ಅನುಭವಿಸುವಂತಾಗಿದೆ. ನಗರದ ಶ್ರೀ ಶಿವಲಿಂಗೇಶ್ವರ ಜಾನುವಾರು ಮಾರುಕಟ್ಟೆಯ ಆವರಣದಲ್ಲಿ ಕುರಿ ಹಾಗೂ ಮೇಕೆ ಮಾರಾಟ ಅಭಿವೃದ್ಧಿಗಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಲಕ್ಷಾಂತರ ರೂ. ವೆಚ್ಚ ಮಾಡಿ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದು, ಮಾರುಕಟ್ಟೆ ವ್ಯವಸ್ಥೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಿತ್ತು. ಆದರೆ, ಇಲ್ಲಿಯವರೆಗೂ ಈ ಕಟ್ಟಡದಲ್ಲಿ ವೈಜ್ಞಾನಿಕವಾಗಿ ಕುರಿಗಳ ವ್ಯಾಪಾರ ನಡೆದಿಲ್ಲ. ಹೀಗಾಗಿ, ಲಕ್ಷಾಂತರರೂ. ವೆಚ್ಚ ಮಾಡಿ ನಿರ್ಮಿಸಿದ್ದ ಕಟ್ಟಡ ಈಗ ಅವಸಾನದ ಅಂಚಿಗೆ ತಲುಪಿದ್ದು, ಹಂದಿ, ನಾಯಿ, ಬಿಡಾಡಿ ದನಗಳ ವಾಸಸ್ಥಳವಾಗಿದೆ. ಬೀದಿಯಲ್ಲೇ ವ್ಯಾಪಾರ: ಸ್ಥಳೀಯ ಜಾನುವಾರು ಮಾರುಕಟ್ಟೆಯ ಆವರಣದಲ್ಲಿಯೇ ಪ್ರತಿ ಗುರುವಾರ ಬೆಳಗ್ಗೆ ಕುರಿ, ಮೇಕೆಗಳ ವ್ಯಾಪಾರ ನಡೆಯುತ್ತಿದೆ. ಆದರೆ, ಈ ಕಟ್ಟಡ ಮಾತ್ರ ಸದ್ಬಳಕೆಯಾಗುತ್ತಿಲ್ಲ. ಕುರಿ, ಮೇಕೆಗಳ ಮಾರಾಟದ ಸಂದರ್ಭದಲ್ಲಿ ಕುರಿ, ಮೇಕೆಗಳ ನಡುವನ್ನು ಅಳತೆ ಮಾಡುವ ಪದ್ಧತಿಯಲ್ಲಿಯೇ ಆಧರಿಸಿ ವ್ಯಾಪಾರ ನಡೆಯುತ್ತಿದೆ. ಈ ಸಂದರ್ಭದಲ್ಲಿ ದಲ್ಲಾಳಿ ಹಾಗೂ ವ್ಯಾಪಾಸ್ಥರಿಂದ ಕುರಿ, ಮೇಕೆಗಳಿಗೆ ಸೂಕ್ತ ದರ ದೊರಕದೇ ಸಾಕಾಣಿಕೆದಾರರಿಗೆ ಮೋಸವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಕಾಣಿಕೆದಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಕುರಿ, ಮೇಕೆಗಳನ್ನು ತೂಕ ಮಾಡಿ ಬೆಲೆ ನಿಗದಿಗೊಳಿಸುವ ಉದ್ದೇಶದಿಂದ ಲಕ್ಷಾಂತರ ರೂ. ವೆಚ್ಚ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಇಲ್ಲಿಯವರೆಗೂ ಈ ಕಟ್ಟಡದಲ್ಲಿ ತೂಕದ ರೀತಿಯಲ್ಲಿ ವ್ಯಾಪಾರ ನಡೆಸದೇ ಕಟ್ಟಡದ ಉದ್ದೇಶ ಸಾಕಾರಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದೆ. ಕಟ್ಟಡ ಬಳಕೆಗೆ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ಸಾಕಷ್ಟು ಕುರಿಗಾಹಿಗಳು ಕುರಿಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಕುರಿ, ಮೇಕೆಗೆ ಯೋಗ್ಯ ಬೆಲೆ ದೊರಕದೇ ಸಾಕಾಣಿಕೆದಾರರು ನಷ್ಟಅನುಭವಿಸುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೂಕ್ತ ಕಟ್ಟಡ ನಿರ್ಮಿಸಿ ಕುರಿ ಮತ್ತುಉಣ್ಣೆ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಲಾಗಿದ್ದು,"ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ' ಎಂಬಂತಾಗಿದೆ. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕಟ್ಟಡವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಇನ್ನುಮುಂದಾದರೂ ತೂಕದ ಲೆಕ್ಕದಲ್ಲಿ ಮಾರುಕಟ್ಟೆ ವ್ಯವಸ್ಥೆ ಜಾರಿಗೊಳಿಸಬೇಕು. ಈ ಮೂಲಕ ಕುರಿ, ಮೇಕೆ ಮಾರಾಟಕ್ಕೆ ಸೂಕ್ತ ಮಾರುಕಟ್ಟೆಗೆ ವೇದಿಕೆ ಕಲ್ಪಿಸಬೇಕು ಎಂಬುದು ಕುರಿಗಾಹಿಗಳ ಆಗ್ರಹವಾಗಿದೆ. ವೈಜ್ಞಾನಿಕ ರೀತಿಯಲ್ಲಿ ಕುರಿ ಮಾರಾಟ ಮಾಡಿದರೆ ರೈತರಿಗೆ ಆಗುವ ನಷ್ಟ ತಪ್ಪಿಸಬೇಕು ಎಂಬ ಕಾರಣಕ್ಕೆಕುರಿ ಮಾರುಕಟ್ಟೆ ಕಟ್ಟಡ ಸ್ಥಾಪಿಸಲಾಗಿತ್ತು.ಈ ಕಟ್ಟಡ ನಿರ್ವಹಣೆ ಜವಾಬ್ದಾರಿಯನ್ನು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿದೆ. ಕುರಿಗಾಯಿಗಳಲ್ಲಿ ಇನ್ನೂ ಜಾಗೃತಿ ಮೂಡಿಲ್ಲ. ಮಧ್ಯವರ್ತಿಗಳು ಹೇಳಿದ್ದೇ ತೂಕ ಎಂಬಂತಾಗಿದೆ. –ಮಲ್ಲಿಕಾರ್ಜುನ ಹಾವೇರಿ, ಎಪಿಎಂಸಿ ಅಧ್ಯಕ್ಷ ಕುರಿ, ಮೇಕೆಗಳ ವ್ಯಾಪಾರಕ್ಕೆ ಸೂಕ್ತ ಮಾರುಕಟ್ಟೆ ಇಲ್ಲದೇ ನಷ್ಟ ಅನುಭವಿಸು ವಂತಾಗಿದೆ. ದಲ್ಲಾಳಿಗಳು, ವ್ಯಾಪಾರಸ್ಥರು ಬಾಯಿಗೆ ಬಂದಂತೆ ದರ ಕೇಳುತ್ತಾರೆ. ಮಾರುಕಟ್ಟೆಯಲ್ಲಿ ತೂಕದ ವ್ಯವಸ್ಥೆ ಕಲ್ಪಸಿದರೆ ಕುರಿ, ಮೇಕೆ ಸಾಕಾಣಿಕೆದಾರರಿಗೆ ಅನುಕೂಲವಾಗುತ್ತದೆ. –ಗುಡಪ್ಪ ಅಣ್ಣಿ, ಕುರಿ ಸಾಕಾಣಿಕೆದಾರ
2021/10/22 04:55:51
https://www.udayavani.com/district-news/haveri-news/ruined-sheep-goat-market
mC4
ಪಶ್ಚಿಮ ಬಂಗಾಳ: ಇಬ್ಬರು ಬಿಜೆಪಿ ಶಾಸಕರ ರಾಜೀನಾಮೆ-75ಕ್ಕೆ ಇಳಿದ ಸಂಖ್ಯಾಬಲ Homeಮುಖಪುಟಪಶ್ಚಿಮ ಬಂಗಾಳ: ಇಬ್ಬರು ಬಿಜೆಪಿ ಶಾಸಕರ ರಾಜೀನಾಮೆ-75ಕ್ಕೆ ಇಳಿದ ಸಂಖ್ಯಾಬಲ 13 May 2021, 5:25 PM ಬಿಜೆಪಿ ಲೋಕಸಭಾ ಸಂಸದರಾದ ಜಗನ್ನಾಥ ಸರ್ಕಾರ್ ಮತ್ತು ನಿಶಿತ್ ಪ್ರಮಾಣಿಕ್ ಪಶ್ಚಿಮ ಬಂಗಾಳ ವಿಧಾನಸಭೆಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಶಾಸಕರಾಗಿ ಆಯ್ಕೆಯಾಗಿದ್ದರು. ರಣಘಾಟ್ ಸಂಸದ ಜಗನ್ನಾಥ ಸರ್ಕಾರ್ ಮತ್ತು ಕೂಚ್ ಬೆಹಾರ್ ಸಂಸದ ನಿಶಿತ್ ಪ್ರಮಾಣಿಕ್ ಅವರು ವಿಧಾನಸಭೆಗೆ ತೆರಳಿ ತಮ್ಮ ರಾಜೀನಾಮೆ ಪತ್ರಗಳನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿಗೆ ಸಲ್ಲಿಸಿದ್ದಾರೆ. ಬಿಜೆಪಿ ಹೈಕಮಾಂಡ್ ನಿರ್ದೇಶನದ ಮೇರೆಗೆ ಅವರು ಶಾಸಕ ಸ್ಥಾನದಿಂದ ಹೊರಗುಳಿಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಬಂಗಾಳ ಚುನಾವಣೆಯಲ್ಲಿ ಈ ಇಬ್ಬರು ಸಂಸದರನ್ನಲ್ಲದೆ, ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮತ್ತು ಲಾಕೆಟ್ ಚಟರ್ಜಿ ಮತ್ತು ರಾಜ್ಯಸಭಾ ಸದಸ್ಯ ಸ್ವಾಪನ್ ದಾಸ್‌ಗುಪ್ತಾ ಅವರನ್ನು ಕಣಕ್ಕಿಳಿಸಿತ್ತು ಆದರೆ ಇವರೆಲ್ಲಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದ 77 ಬಿಜೆಪಿ ಶಾಸಕರಿಗೆ ಕೇಂದ್ರದ ಭದ್ರತಾ ಪಡೆಗಳಿಂದ ರಕ್ಷಣೆ "ಬಿಜೆಪಿ ಕೇವಲ ಮೂರು ಶಾಸಕರಿಂದ (2016 ರ ಚುನಾವಣೆಯಲ್ಲಿ) 77 ಶಾಸಕರಿಗೆ ಏರಿದೆ. ಸರ್ಕಾರವನ್ನು ನಡೆಸುವಾಗ ಅನುಭವಿಗಳು ಇರಲಿ ಎಂದು ಕೆಲವು ಸಂಸದರನ್ನು ಕಣಕ್ಕಿಳಿಸಲಾಗಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ರಚಿಸುವ ಗುರಿಯನ್ನು ಸಾಧಿಸಲು ಪಕ್ಷಕ್ಕೆ ಸಾಧ್ಯವವಾಗಲಿಲ್ಲ" ಎಂದು ಜಗನ್ನಾಥ ಸರ್ಕಾರ್ ಹೇಳಿದ್ದಾರೆ. ಸಂಸದರಾಗಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ನಂತರ ಗೆದ್ದ ನಂತರ ರಾಜೀನಾಮೆ ನೀಡುವುದು ಬಿಜೆಪಿಯ ಯಾವುದೇ ಸಾಂಸ್ಥಿಕ ದೌರ್ಬಲ್ಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸರ್ಕಾರ್ ಪ್ರತಿಪಾದಿಸಿದ್ದಾರೆ. ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯ ಸದಸ್ಯರಾಗಿ ಉಳಿಯಲು ಸಾಧ್ಯವಿಲ್ಲ ಎಂದು ಸಮಸದ ನಿಶಿತ್ ಪ್ರಮಾಣಿಕ್ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಿಶಿತ್ ಪ್ರಮಾಣಿಕ್ ಕೇವಲ 57 ಮತಗಳ ಅಂತರದಿಂದ ಟಿಎಂಸಿ ಅಭ್ಯರ್ಥಿ ಉದಯನ್ ಗುಹಾ ಅವರನ್ನು ದಿನ್ಹಾಟಾ ಸ್ಥಾನದಿಂದ ಸೋಲಿಸಿದ್ದರು. ಜಗನ್ನಾಥ ಸರ್ಕಾರ್ ಅವರು ಸಂತೀಪುರದಿಂದ 15,878 ಮತಗಳ ಅಂತರದಿಂದ ಜಯಗಳಿಸಿದ್ದರು. ದಿನ್ಹಾಟಾ ಮತ್ತು ಸಂತೀಪುರ ವಿಧಾನಸಭೆಗಳು ಪ್ರಮಾಣಿಕ್ ಮತ್ತು ಸರ್ಕಾರ್ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುತ್ತವೆ. ಬಿಜೆಪಿಯು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗಳಿಸಿದರೆ, ತೃಣಮೂಲ ಕಾಂಗ್ರೆಸ್ 292 ಕ್ಷೇತ್ರಗಳಲ್ಲಿ 213 ಜಯಗಳಿಸಿ ಭರ್ಜರಿ ಜಯ ಸಾಧಿಸಿ ಸರ್ಕಾರ ರಚಿಸಿದೆ. Previous articleಪತಂಜಲಿ ಬಾಬಾನ ಕೋವಿಡ್ ಕೇಂದ್ರದಲ್ಲಿ ಸೌಲಭ್ಯಗಳೇ ಇಲ್ಲ!: ಪ್ರತ್ಯಕ್ಷ ವರದಿ ತೆರೆದಿಟ್ಟ ನ್ಯೂಸ್‌ ಲಾಂಡ್ರಿ
2022/01/28 05:40:36
https://naanugauri.com/west-bengal-two-bjp-mps-resign-as-mlas-tally-down-77-to-75
mC4
ಅವನು HE, ಅವಳು SHE, ತೃತೀಯ ಲಿಂಗಿ "ZE"! – Karavali Kirana ಅವನು HE, ಅವಳು SHE, ತೃತೀಯ ಲಿಂಗಿ "ZE"! ಲಂಡನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಲಂಡನ್ ನ ಪ್ರತಿಷ್ಟಿತ ವಿಶ್ವವಿದ್ಯಾಲಯ ಆಕ್ಸ್ ಫರ್ಡ್ ತೃತೀಯ ಲಿಂಗಿಗಳಿಗೇ ಪ್ರತ್ಯೇಕ ಸರ್ವನಾಮ ಕಲ್ಪಿಸಿದ್ದು, ತೃತೀಯ ಲಿಂಗಿಗಳಿಗೆ He Or She ಬದಲಾಗಿ "ZE" ಪದವನ್ನು ಬಳಕೆ ಮಾಡಲು ಸೂಚಿಸಿದೆ. ಈ ಬಗ್ಗೆ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ವಿವಿ ಆವರಣದಲ್ಲಿ ತೃತೀಯಲಿಂಗಿಗಳನ್ನು ಸಂಬೋದಿಸುವಾಗ ಅವರನ್ನು "ZE" ಎಂಬ ನೂತನ ಸರ್ವನಾಮ ಪದದ ಮುಖಾಂತರ ಸಂಬೋದಿಸಬೇಕು ಎಂದು ಹೇಳಿದೆ. ಈ ಪದ ಬಳಕೆಯನ್ನು ವಿವಿಯ ಎಲ್ಲ ಕಾರ್ಯಕ್ರಮಗಳಲ್ಲೂ ಬಳಕೆ ಮಾಡಲು ನಿರ್ಧರಿಸಿದ್ದು, ಪ್ರಮುಖವಾಗಿ ವಿವಿಯ ಸೆಮಿನಾರ್ ಗಳು, ವಿಶೇಷ ಉಪನ್ಯಾಸಗಳಲ್ಲಿ ತೃತೀಯ ಲಿಂಗಿಗಳನ್ನು ಉದ್ದೇಶಿಸಿ ಮಾತನಾಡುವಾಗ ಕಡ್ಡಾಯವಾಗಿ "ZE" ಸರ್ವನಾಮವನ್ನು ಬಳಕೆ ಮಾಡುವಂತೆ ಸೂಚಿಸಿದೆ. ತೃತೀಯ ಲಿಂಗಿಗಳನ್ನು ಉದ್ದೇಶಿಸಿ ಮಾತನಾಡುವಾಗ ಅವರನ್ನು "he or she" ಎಂದು ಸಂಬೋದಿಸುವ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕೆಲ ತೃತೀಯ ಲಿಂಗಿ ಸಂಘಟನೆಗಳು "he or she" ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದವು. "he or she" ಪದ ಬಳಕೆ ತಮ್ಮನ್ನು ಅವಮಾನಿಸುವಂತಿದ್ದು, "he or she" ಪದಕ್ಕೆ ಬದಲಾಗಿ ಪ್ರತ್ಯೇಕ ಬದಲೀ ಪದ ಬಳಕೆಗೆ ಅನುವು ಮಾಡಿಕೊಡುವಂತೆ ಆಗ್ರಹಿಸಿದ್ದವು.ಈ ಬೆಳವಣಿಗೆ ಬೆನ್ನಲ್ಲೇ ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯ "he or she" ಪದಕ್ಕೆ ಬದಲಿಯಾಗಿ "ZE" ಪದ ಬಳಕೆ ಮಾಡುವಂತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇನ್ನು ತೃತೀಯ ಲಿಂಗಿಗಳಿಗೆ ಆಕ್ಸ್ ಫರ್ಡ್ ವಿವಿ ನೂತನ ಸರ್ವನಾಮ ಬಳಕೆಗೆ ಅನುವು ಮಾಡಿಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮತ್ತೊಂದು ಪ್ರತಿಷ್ಟಿತ ವಿಶ್ವ ವಿದ್ಯಾಲಯ ಕಿಂಗ್ಸ್ ವಿವಿ, ತೃತೀಯ ಲಿಂಗಿಗಳ ಕುರಿತ ತಟಸ್ಥ ಸರ್ವನಾಮ ಪದ ಬಳಕೆ ಉತ್ತಮವಾದ ನಡೆಯಾಗಿದ್ದು, ಇದನ್ನು ಎಲ್ಲ ಉಪನ್ಯಾಸಗಳಲ್ಲೂ ಬಳಕೆ ಮಾಡಬೇಕು ಎಂದು ಹೇಳಿದೆ.
2018/12/18 13:34:58
http://karavalikirana.com/83922
mC4
ಸೇವೆಯ ಮೂಲಕ ಸಂಘಟನೆ ಮಾಡೋಣ: ರಾಮದಾಸ್ ಬಂಟ್ವಾಳ - Akshara News http://aksharanews.in/archives/4360 ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಸರಕಾರದ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿ ಕೊಂಡು ಏಳು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸೇವಾ ಕಾರ್ಯ ನಡೆಸುವಂತೆ ಬಿಜೆಪಿ ರಾಷ್ಟ್ರಧ್ಯಕ್ಷರ ನೀಡಿದ ಕರೆಯನ್ವಯ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಹಾಗೂ ಬಂಟ್ವಾಳ ಕ್ಷೇತ್ರ ಹಿಂದುಳಿದ ವರ್ಗಗಳ ಮೋರ್ಚಾದ ಜಂಟಿ ಆಶ್ರಯದಲ್ಲಿ ಕರೋನಾ ಫ್ರಂಟ್‌ಲೈನ್ ವಾರಿಯರ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಆಹಾರದ ಪೊಟ್ಟಣ ನೀಡುವ ಕಾರ್ಯಕ್ರಮ ಭಾನುವಾರ ನಡೆಯಿತು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಸೈ ಪ್ರಸನ್ನ ಹಾಗೂ ಸಿಬ್ಬಂದಿಗಳಿಗೆ ಆಹಾರ ಪೊಟ್ಟಣ ನೀಡುವ ಮೂಲಕ ಈ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬಳಿಕ ವೃತ್ತ ನಿರೀಕ್ಷಕರ ಕಚೇರಿ, ನಗರ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿ, ಸಂಚಾರಿ ಪೊಲೀಸ್ ಠಾಣೆ ಸಹಿತ ಕಲ್ಲಡ್ಕ, ಮೆಲ್ಕಾರ್, ಬಿ.ಸಿ.ರೋಡು, ಕೈಕಂಬದಲ್ಲಿ ಕರ್ತವ್ಯ ನಿರತ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಆಹಾರ ಪೊಟ್ಟಣ ವಿತರಿಸಲಾಯಿತು. ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿ 7 ವರ್ಷ ಪೂರ್ಣಗೊಂಡಿದ್ದು ಅದರ ಸಂಭ್ರಮಾಚರಣೆಯ ಬದಲು ಸೇವಾ ಹೀ ಸಂಘಟನೆಯ ಮೂಲಕ ಸೇವಾ ಕಾರ್ಯಗಳನ್ನು ಮಾಡಲು ಪಕ್ಷ ತೀರ್ಮಾನಿದೆ. ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಸೇವಾ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಕರೋನಾ ಸಂದರ್ಭದಲ್ಲಿ ಜನರು ಮನೆಯಲ್ಲಿದ್ದಾಗ ಫ್ರಂಟ್ ಲೈನ್ ವಾರಿಯರ್ಸ್ ಗಳಾಗಿ ವೈದ್ಯರು, ದಾದಿಯರು, ಪೊಲೀಸರು, ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಇತರ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಮುಂಚೂಣಿಯಲ್ಲಿ ನಿಂತು ಕೆಲಸವನ್ನು ಮಾಡಿದ್ದಾರೆ. ಇಂತಹವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಹಾಗೂ ಮುಂದೆಯೂ ಇಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಮತ್ತು ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಪ್ರೀತಿಯನ್ನು ತೋರ್ಪಡಿಸುವ ಸಲುವಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ್ ಮಾತನಾಡಿ ಬಂಟ್ವಾಳದಲ್ಲಿ ಎಲ್ಲಾ ಕಾರ್ಯಕರ್ತರೂ ಸೇವಾ ಮನೋಭಾವನೆಯಿಂದ ಸೇವಾ ಕಾರ್ಯಕ್ರಮಗಳನ್ನು ಜೊತೆಯಾಗಿ ನಿಂತು ಮಾಡುತ್ತಿರುವುದು ಅಭಿನಂದನೀಯ ಎಂದರು. ದ.ಕ. ಜಿಲ್ಲೆಯಲ್ಲಿ ಸೋಂಕಿತರ ಜೊತೆ ನಿಂತು ಅವರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸವನ್ನು ಸಂಸದರು, ಸಚಿವರು ಹಾಗೂ ಜಿಲ್ಲೆಯ ಏಳು ಮಂದಿ ಶಾಸಕರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ 59 ಗ್ರಾಮಗಳ ಎಲ್ಲಾ ಬೂತ್‌ಗಳಲ್ಲಿ ಸೇವಾ ಕಾರ್ಯಗಳು ನಡೆಯುತ್ತಿದೆ. ಕ್ಷೇತ್ರ ಸಮಿತಿಯ ವತಿಯಿಂದ ಕ್ಷೇಮಾ ನಿಧಿಗೆ ಚಾಲನೇ ನೀಡುವ ಕಾರ್ಯಕ್ರಮವೂ ನಡೆಯಲಿದೆ ಎಂದರು. ಈ ಸಂದರ್ಭ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೋನಪ್ಪ ದೇವಸ್ಯ, ಮಹೇಶ್ ಜೋಗಿ, ಜಿಲ್ಲಾ ಓಬಿಸಿ ಕಾರ್ಯದರ್ಶಿ ಉದಯ ಕುಮಾರ್ ಕಾಂಜಿಲ, ಜಿಲ್ಲಾ ರೈತ ಮೋರ್ಚಾ ಸದಸ್ಯ ಪ್ರೇಮನಾಥ ಶೆಟ್ಟಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆನಂದ ಶಂಭೂರು, ಉಪಾಧ್ಯಕ್ಷ ಪುರುಷೋತ್ತಮ ಟೈಲರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಅರಳ , ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಎಸ್ಸಿ ಮೋರ್ಚಾದ ಕೇಶವ ದೈಪಲ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪಕ್ಷ ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್ , ಯಶೋಧರ ಕರ್ಬೆಟ್ಟು ಮನೋಜ್ ನಿರ್ಮಲ್, ಯುವ ಮೋರ್ಚಾ ಸದಸ್ಯ ರಾಜೇಶ್ ಬೋಳಂತೂರು, ಪಂಚಾಯತಿ ಸದಸ್ಯ ನಾರಾಯಣ ಪೂಜಾರಿ, ಬಿಜೆಪಿ ಕಾರ್ಮಿಕ ಪ್ರಕೋಷ್ಟದ ಸಂಚಾಲಕ ಜಯಪ್ರಕಾಶ್ ನಗ್ರಿ, ಪರಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.
2022/01/18 02:15:38
https://aksharanews.in/archives/4360
mC4
ಮಂಡ್ಯ: ನೀರು ಬಿಡುಗಡೆಗಾಗಿ ಮುಂದುವರೆದ ರೈತರ ಧರಣಿ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Jun 26, 2019, 11:34 PM IST ಮಂಡ್ಯ, ಜೂ.26: ಕೆಆರ್‍ಎಸ್ ಮತ್ತು ಹೇಮಾವತಿ ಜಲಾಶಯಗಳಿಂದ ಬೆಳೆಗಳಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಕೈಗೊಂಡಿರುವ ಅಹೋರಾತ್ರಿ ಧರಣಿ ಬುಧವಾರ ಐದನೇ ದಿನಕ್ಕೆ ಕಾಲಿಟ್ಟಿತು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನೀರು ಬಿಡುಗಡೆಗೆ ನಿರಾಕರಿಸಿದ್ದರೂ ರೈತರು ತಮ್ಮ ಧರಣಿ ಮುಂದುವರಿಸಿದ್ದು, ರಾಜ್ಯ ಸರಕಾರ ಕೂಡಲೇ ಒಂದುಕಟ್ಟು ನೀರು ಬಿಡುಗಡೆ ಮಾಡಿ ಬೆಳೆದಿರುವ ಬೆಳೆ ರಕ್ಷಿಸುವಂತೆ ಪಟ್ಟುಹಿಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಜಿಲ್ಲೆಯ ಯಾವ ಶಾಸಕರೂ ಧರಣಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಕೇಳದಿರುವ ಬಗ್ಗೆ ಧರಣಿ ನಿರತರು ಬ್ಯಾನರ್ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಮಂಗಳವಾರ ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಲು ಮುಂದಾದ ಅಪರ ಜಿಲ್ಲಾಧಿಕಾರಿ ಯೋಗೇಶ್ ಮತ್ತು ಕೆಆರ್‍ಎಸ್ ಎಇಇ ಧರ್ಮೇಂದ್ರ ಅವರಿಗೆ ದಿಗ್ಬಂಧನ ವಿಧಿಸಿದ ರೈತರು, ಸರಕಾರದ ಮುಖ್ಯ ಕಾರ್ಯದರ್ಶಿಗಳೇ ಸ್ಪಷ್ಟನೆ ನೀಡಬೇಕೆಂದು ತಾಕೀತು ಮಾಡಿದರು. ಬುಧವಾರ ಮುಂದುವರೆದ ಧರಣಿಗೆ ರೈತಸಂಘದ ನಾಯಕಿ ಸುನೀತಾ ಪಟ್ಟಣ್ಣಯ್ಯ, ಕೆ.ಎಸ್.ನಂಜುಂಡೇಗೌಡ ಬೆಂಬಲ ನೀಡಿದರು. ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ನಾಯಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಇತರ ಮುಖಂಡರು ಧರಣಿ ನೇತೃತ್ವ ವಹಿಸಿದ್ದಾರೆ.
2020/10/01 13:13:40
http://www.varthabharati.in/article/karnataka/197782
mC4
"ಅಪಧಮನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು - ವಿಕಿಪೀಡಿಯ "ಅಪಧಮನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು ಅಪಧಮನಿ (ಸಂಪಾದಿಸಿ) ೧೦:೧೭, ೯ ಜೂನ್ ೨೦೧೭ ನಂತೆ ಪರಿಷ್ಕರಣೆ ೭೧ bytes added , ೩ ವರ್ಷಗಳ ಹಿಂದೆ ೦೯:೦೭, ೯ ಜೂನ್ ೨೦೧೭ ನಂತೆ ಪರಿಷ್ಕರಣೆ (ಬದಲಾಯಿಸಿ) (ಹೊಸ ಪುಟ: thumb|200px '''ಅಪಧಮನಿ'''ಗಳು ಹೃದಯದಿಂದ ಬೇರೆಡೆ ರಕ್ತ ಸಾಗಿಸುವ ರಕ್...) ೧೦:೧೭, ೯ ಜೂನ್ ೨೦೧೭ ನಂತೆ ಪರಿಷ್ಕರಣೆ (ಬದಲಾಯಿಸಿ) (ರದ್ದುಗೊಳಿಸಿ) '''ಅಪಧಮನಿ'''ಗಳು [[ಹೃದಯ]]ದಿಂದ ಬೇರೆಡೆ ರಕ್ತ ಸಾಗಿಸುವ [[ರಕ್ತನಾಳ]]ಗಳು. ಬಹುತೇಕ ಅಪಧಮನಿಗಳು ಆಮ್ಲಜನಕಯುಕ್ತ ರಕ್ತವನ್ನು ಸಾಗಿಸುತ್ತವೆ, ಆದರೆ ಇದಕ್ಕೆ ಎರಡು ಅಪವಾದಗಳಿವೆ, ಶ್ವಾಸಕೋಶದ ಅಪಧಮನಿ ಮತ್ತು ನಾಭಿ ಅಪಧಮನಿಗಳು. ವಾಸ್ತವಿಕ ಅಪಧಮನೀಯ ರಕ್ತ ಪರಿಮಾಣವು ಅಪಧಮನೀಯ ವ್ಯವಸ್ಥೆಯನ್ನು ತುಂಬುವ ಬಾಹ್ಯಕೋಶ ದ್ರವ. ಅಪಧಮನಿಗಳು [[ರಕ್ತಪರಿಚಲನಾರಕ್ತಪರಿಚಲನೆಯ ವ್ಯವಸ್ಥೆ]]([[ಮಾನವನಲ್ಲಿ ರಕ್ತ ಪರಿಚಲನೆ]])ಯ ಭಾಗವಾಗಿವೆ. ರಕ್ತಪರಿಚಲನಾ ವ್ಯವಸ್ಥೆಯು ಎಲ್ಲ ಜೀವಕೋಶಗಳಿಗೆ [[ಆಮ್ಲಜನಕ]] ಮತ್ತು [[ಪೌಷ್ಟಿಕಾಂಶ]]ಗಳ ವಿತರಣೆ, ಜೊತೆಗೆ [[ಇಂಗಾಲದ ಡೈಆಕ್ಸೈಡ್]] ಹಾಗೂ ತ್ಯಾಜ್ಯ ಉತ್ಪನ್ನಗಳ ತೆಗೆಯುವಿಕೆ, ಅನುಕೂಲತಮ ಪಿಎಚ್ ಅನ್ನು ಕಾಪಾಡುವುದು, ಮತ್ತು ಪ್ರೋಟೀನುಗಳು ಹಾಗೂ [[ಪ್ರತಿರಕ್ಷಣಾ ವ್ಯವಸ್ಥೆ]]ಯ ಜೀವಕೋಶಗಳ ಪರಿಚಲನೆಗೆ ಜವಾಬ್ದಾರವಾಗಿದೆ. ಅಭಿವೃದ್ಧಿಹೊಂದಿದ ದೇಶಗಳಲ್ಲಿ, ಮರಣದ ಎರಡು ಪ್ರಮುಖ ಕಾರಣಗಳಾದ ಹೃದಯಾಘಾತ, ಮತ್ತು ಮಿದುಳಾಘಾತ, ಎರಡೂ ನೇರವಾಗಿ ಅಪಧಮನೀಯ ವ್ಯವಸ್ಥೆಯು ವರ್ಷಾನುಗಟ್ಟಲೆಯ ಹಾಳಾಗುವಿಕೆಯಿಂದ ನಿಧಾನವಾಗಿ ಹಾಗೂ ಕ್ರಮೇಣ ದುರ್ಬಲಗೊಳ್ಳುವುದರಿಂದ ಸಂಭವಿಸಬಹುದು. [[ಮಾನವ ಶರೀರ]]ದ ಅಪಧಮನೀಯ ವ್ಯವಸ್ಥೆಯನ್ನು ಹೃದಯದಿಂದ ಇಡೀ ಶರೀರಕ್ಕೆ ರಕ್ತವನ್ನು ಸಾಗಿಸುವ ಸಿಸ್ಟೆಮಿಕ್ ಅಪಧಮನಿಗಳು, ಮತ್ತು ಹೃದಯದಿಂದ [[ಶ್ವಾಸಕೋಶ]]ಗಳಿಗೆ ಆಮ್ಲಜನಕರಹಿತ ರಕ್ತವನ್ನು ಸಾಗಿಸುವ ಶ್ವಾಸಕೋಶದ ಅಪಧಮನಿಗಳು ಎಂದು ವಿಭಜಿಸಲಾಗುತ್ತದೆ.<ref>{{cite book
2020/10/28 06:35:28
https://kn.m.wikipedia.org/wiki/%E0%B2%B5%E0%B2%BF%E0%B2%B6%E0%B3%87%E0%B2%B7:MobileDiff/779915
mC4
ಡಿಕೆಶಿ ಸ್ವಾಗತ: ನಗರದಲ್ಲಿ ಸಂಚಾರ ದಟ್ಟಣೆ | Udayavani – ಉದಯವಾಣಿ Tuesday, 30 Nov 2021 | UPDATED: 02:54 PM IST ದೇವನಹಳ್ಳಿ: ನೆಚ್ಚಿನ ನಾಯಕನ ಕರೆದುಕೊಂಡು ಹೋಗಲು ಸೇಬಿನಿಂದ ಸಿಂಗಾರಗೊಂಡಿರೋ ಕಾರು. ವಿಮಾನ ನಿಲ್ದಾಣದ ಹೊರಗೆ ಬರುತ್ತಿದ್ದಂತೆ ಡಿಕೆಶಿಯನ್ನ ಕಂಡ ಕಾರ್ಯಕರ್ತರಿಂದ ಸ್ವಾಗ‌ತದ ಕಹಳೆ. ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್‌ ಅವರನ್ನು ಎತ್ತಿಕೊಂಡು ಕರೆತರುವ ಅಭಿಮಾನಿಗಳು. ಇವು ವೈಭವದ ಸ್ವಾಗತಕ್ಕೆ ಸಾಕ್ಷಿಯಾದವು. ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಮಾಡಿದರು. ಇಡಿ ಕುಣಿಕೆಯಲ್ಲಿ ಸಿಲುಕಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ಗೆ ದೆಹಲಿ ಹೈಕೊರ್ಟ್‌ ಬುಧವಾರ ಜಮೀನು ಮಂಜೂರು ಮಾಡಿತ್ತು. ಸುಮಾರು 50ಕ್ಕೂ ಹೆಚ್ಚು ದಿನ ಇಟಿ ವಿಚಾರಣೆಯನ್ನ ಎದುರಿಸಿ ಬಂಧನಕ್ಕೊಳಗಾಗಿ ಜಾಮೀನು ಪಡೆದ ಡಿ.ಕೆ. ಶಿವಕುಮಾರ್‌ ಇಂದು ಬೆಂಗಳೂರಿಗೆ ವಾಪಸ್ಸಾದರು. ಇನ್ನೂ ಡಿ.ಕೆ. ಶಿವಕುಮಾರ್‌ ಆಗಮನದ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರು ಡಿಕೆಶಿ ಪರ ಘೋಷಣೆಯಲ್ಲಿ ತೊಡಗಿದ್ದರು. ಮದ್ಯಾಹ್ನ 2.40 ಕ್ಕೆ ದೆಹಲಿಯಿಂದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಕೆಐಎಎಲ್‌ಗೆ ಬಂದಿಳಿದ ಡಿ.ಕೆ.ಶಿವಕುಮಾರ್‌ ಇನ್ನೂ ವಿಮಾನ ನಿಲ್ದಾಣದ ಒಳಗೆ ಬರುತ್ತಿದ್ದಂತೆ ಬೆಳಗಾವಿಗೆ ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಶಿವಕುಮಾರ್‌ ಬಳಿ ತೆರಳಿ ಗುಡ್‌ಲಕ್‌ ಹೇಳಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ನಂತರ ವಿಮಾನ ನಿಲ್ದಾಣದ ಹೊರಗೆ ಬರುತ್ತಿದ್ದಂತೆ ಕಾರ್ಯಕರ್ತರ ಘೋಷಣೆಗಳಿಂದ ವಿಮಾನ ನಿಲ್ದಾಣವೇ ಡಿ.ಕೆ. ಹೆಸರಿನಲ್ಲಿ ಮೊಳಗಿತ್ತು. ಅಲ್ಲದೆ ಡಿಕೆಶಿಯನ್ನ ಕರೆದುಕೊಂಡು ಹೋಗಲು ವೊಲ್ವೊ ಕಾರನ್ನ ಸುಮಾರು 200 ಕೆ.ಜಿ. ಸೇಬಿನಿಂದ ಅಲಂಕಾರ ಮಾಡಲಾಗಿತ್ತು. ಈ ವೇಳೆ ಡಿ.ಕೆ. ಶಿವಕುಮಾರ್‌ ಕಾರು ಬಳಿ ಬರಲು ಸಾಕಷ್ಟು ಹರಸಹಾಸವೇ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜತೆಗೆ ಪೊಲೀಸರಿಗೆ ಡಿಕೆಶಿ ಅಭಿಮಾನಿಗಳನ್ನ ನಿಯಂತ್ರಿಸಲು ದೊಡ್ಡ ಸಾಹಸವನ್ನೇ ಮಾಡಬೇಕಾಯಿತು. ಅಲ್ಲದೆ ಡಿ.ಕೆ.ಯವರ ಸ್ವಾಗತದ ವೇಳೆ ಹಲವಾರು ಜನ ತಮ್ಮ ಮೊಬೈಲ್‌ಗ‌ಳನ್ನು, ಚಪ್ಪಲಿಗಳನ್ನು ಕಳೆದುಕೊಂಡರು. ಡಿಕೆಶಿಗಾಗಿ ಮನೆಯಲ್ಲಿ ಪ್ರಾರ್ಥನೆಯನ್ನ ಸಲ್ಲಿಸುತ್ತಿದ್ದ ಅಭಿಮಾನಿಯೊಬ್ಬ ಡಿ.ಕೆ. ಶಿವಕುಮಾರ್‌ಗಾಗಿ ತಿರುಪತಿಯಲ್ಲಿ ವಿಶೇಷ ಪೂಜೆಯನ್ನ ಸಲ್ಲಿಸಿ ಲಾಡುಗಳನ್ನು ತಂದಿದ್ದು ವಿಶೇಷವಾಗಿತ್ತು. ಅಲ್ಲದೆ ಡಿ.ಕೆ.ಯವರನ್ನ ರಾಜಕೀಯ ದುರುದ್ದೇಶದಿಂದ ಬಂಧನ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾರ್ಯಕರ್ತರು ಕಿಡಿಕಾರಿದರು. ಶಾಸಕರಾದ ಕೃಷ್ಣ ಬೈರೇಗೌಡ, ವೆಂಕಟ ರಮಣಯ್ಯ ನಂಜೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್‌, ಮಾಜಿ ಸಂಸದ ಶಿವ ರಾಮೇಗೌಡ, ವಿಧಾನ ಪರಿಷತ್‌ ಸದಸ್ಯರಾದ ಎಸ್‌ ರವಿ, ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರಿದ್ದರು. ಪ್ರೀತಿಯನ್ನು ಅಳಿಯಲು ಸಾಧ್ಯವಿಲ್ಲ. ನಾನು ಯಾರಿಗೂ ದ್ರೋಹ ಮಾಡಿಲ್ಲ. ನನ್ನ ಜತೆ ಇಡೀ ರಾಜ್ಯದ ಜನರಿದ್ದಾರೆ. ಕಾನೂನಿಗೆ ಗೌರವ ನೀಡಿದ್ದೇನೆ. ಇಷ್ಟು ಜನರು ಬಂದಿರುವುದರಿಂದ ಅಭಿಮಾನಕ್ಕೆ ಚಿರಋಣಿ ಆಗಿರುತ್ತಾನೆ. ಮುಣದಿನ ದಿನಗಳಲ್ಲಿ ರಾಜ್ಯದ ಜನತೆಯ ಮುಂದೆ ಬಿಚ್ಚಿ ಇಡುತ್ತೇನೆ.
2021/11/30 09:28:55
https://www.udayavani.com/district-news/bangalore-city-news/welcome-to-dkshi-traffic-in-the-city
mC4
ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ವತಿಯಿಂದ ಆಹಾರ ಕಿಟ್ ವಿತರಣೆ | ಸುದ್ದಿ ಬೆಳ್ತಂಗಡಿ ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ವತಿಯಿಂದ ಆಹಾರ ಕಿಟ್ ವಿತರಣೆ ಉಜಿರೆ : ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಕೆಲಸವಿಲ್ಲದರಿಂದ ದಿನಗೂಲಿ ನೌಕರರು,ಬಡವರು ದಿನಬಳಕೆಯ ಅಗತ್ಯ ಸಾಮಾಗ್ರಿಗಳನ್ನು ದೈನಂದಿನ ಸಂಪಾದನೆ ಇಲ್ಲದಿರುವುದರಿಂದ ಖರೀದಿಸಲು ಆಗುತ್ತಿಲ್ಲ.ಇದರಿಂದ ಸಂಕಷ್ಟಕ್ಕೆ ಒಳಗಾದ ದಿನಗೂಲಿ ನೌಕರರಾದ ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ಸಮಿತಿಯ ಆಯ್ದ ಸದಸ್ಯರಿಗೆ ಕೆ.ಸಿ.ಎಫ್ ಹಾಗೂ ಸಂಘ ಕುಟುಂಬದ ನಾಯಕರ ಹಾಗೂ ದಾನಿಗಳ ಸಹಕಾರದಿಂದ ಮೇ.2 ರಂದು 19 ಸದಸ್ಯರಿಗೆ ಅಕ್ಕಿ ಹಾಗೂ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್.ಎಂ.ಕೋಯ ತಂಙಳ್,ಕೆ.ಸಿ.ಎಫ್ ನಾಯಕರಾದ ಸಲೀಂ ಕನ್ಯಾಡಿ, ಎಸ್‌ವೈ‌ಎಸ್ ಉಜಿರೆ ಸೆಂಟರ್ ಉಪಾಧ್ಯಕ್ಷ ಮುಹಿಯುದ್ದೀನ್ ಉಜಿರೆ, ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಮಾಜಿ ಅಧ್ಯಕ್ಷ ಎಸ್‌ವೈ‌ಎಸ್ ಉಜಿರೆ ಸೆಂಟರ್ ಕಾರ್ಯದರ್ಶಿ ಆದ ಕಾಸಿಂ ಮುಸ್ಲಿಯಾರ್ ಮಾಚಾರು, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸದಸ್ಯರಾದ ಇಕ್ಬಾಲ್ ಮಾಚಾರು, ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ಅಧ್ಯಕ್ಷರಾದ ಹಮೀದ್ ಸ‌ಅದಿ ಕುಕ್ಕಾವು, ಪ್ರ.ಕಾರ್ಯದರ್ಶಿ ಮುಬೀನ್ ಉಜಿರೆ ಮುಂತಾದವರು ಹಾಜರಿದ್ದರು.
2020/09/18 17:51:08
http://belthangady.suddinews.com/archives/368122
mC4
ವಯಸ್ಕರ, 56 ಸಿನೆಮಾ ಅನಿಮೆ ಹೆಂಟೈ ವೀಕ್ಷಿಸಲು ವಯಸ್ಕರ ಅವತಾರ್ ವಯಸ್ಕರಿಗೆ ಅವತಾರದ ಟೇಲ್: ಒಂದು ಅಸ್ಪಷ್ಟವಾದ ಚರಿತ್ರೆಯು ಸ್ವಲ್ಪ ಕೋಣೆಯಲ್ಲಿ ತೆರೆದುಕೊಳ್ಳುತ್ತದೆ ಅಲ್ಲಿ ಪಾತ್ರಗಳು ಪರಸ್ಪರ ಸಂತೋಷವನ್ನು ನೀಡುವ ಸಲುವಾಗಿ ಮರೆಯಾಗಿವೆ. ವಾರ್ಸಾದಿಂದ ವಿನ್ಯಾಸಕಾರರು ಚಿತ್ರದ ಮೇಲೆ ಕೆಲಸ ಮಾಡಿದರು, ಇದು ಅನಿಮೆ ಚಿತ್ರೀಕರಣದ ಆಧಾರದ ಮೇಲೆ ಕಾಮಪ್ರಚೋದಕ ಛಾಯಾಚಿತ್ರಗಳ ಹೊರಹೊಮ್ಮುವಿಕೆಗೆ ಸೃಜನಾತ್ಮಕ ಶಕ್ತಿ ಮತ್ತು ವೈಯಕ್ತಿಕ ಸೃಜನಶೀಲ ಶುಲ್ಕವನ್ನು ರೂಪಿಸಿತು. ಪೋರ್ಟಲ್ ಬಳಕೆದಾರರನ್ನು 49% ನಷ್ಟು ಜನರು ಪ್ರೌಢ ಪ್ರೌಢರಿಗೆ ಪ್ರಸ್ತುತಪಡಿಸಿದರು, ಅವರು ಕೆಲಸದಿಂದ ಮುಳುಗಿದ ಕೆಲಸದ ಸಮಯದಲ್ಲಿ ವೀಡಿಯೊಗಳನ್ನು ವೀಕ್ಷಿಸಲು ಅವಕಾಶವನ್ನು ಕಳೆದುಕೊಳ್ಳುವುದಿಲ್ಲ.
2018/08/18 09:57:46
http://kn.porno-multfilmy.ru/hentai/avatar-dlya-vzroslyh/
mC4
ಪುರಸಭೆಗೆ ಮುಖ್ಯಾಧಿಕಾರಿ ನಿಯೋಜನೆ | Prajapragathi Home ಜಿಲ್ಲೆಗಳು ಹಾವೇರಿ ಪುರಸಭೆಗೆ ಮುಖ್ಯಾಧಿಕಾರಿ ನಿಯೋಜನೆ ಪುರಸಭೆಗೆ ಮುಖ್ಯಾಧಿಕಾರಿ ನಿಯೋಜನೆ ಮಾನ್ಯ ಉಚ್ಚ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರುವುಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆಗೆ ವಿ.ಎಂ.ಪೂಜಾರ ಅವರನ್ನು ಮುಖ್ಯಾಧಿಕಾರಿಯಾಗಿ ಮುಂದುವರೆಯುವಂತೆ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಆದೇಶಿಸಿದ್ಧಾರೆ. ರಾಜ್ಯ ಸರ್ಕಾರ ಕಳೆದ ಸೆ.12 ರಂದು ಆದೇಶವೊಂದನ್ನು ಹೊರಡಿಸಿ ವಿ.ಎಂ.ಪೂಜಾರ ಅವರನ್ನು ವರ್ಗಾವಣೆ ಮೇರೆಗೆ ಸ್ಥಳೀಯ ಪುರಸಭೆಗೆ ಮುಖ್ಯಾಧಿಕಾರಿಯನ್ನಾಗಿ ನಿಯೋಜನೆ ಮಾಡಿತ್ತು, ಆದರೆ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಿ.ಎ.ನಾಗಲಾಪೂರ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು, ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಸೆ.18 ರಂದು ಪೂಜಾರ ಅವರ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ (ಸ್ಟೇ) ನೀಡಿತ್ತು. ಹೀಗಾಗಿ ಕಳೆದ ಸೆ.25 ರಂದು ಮತ್ತೆ ಮುಖ್ಯಾಧಿಕಾರಿಯಾಗಿ ಬಿ.ಎ.ನಾಗಲಾಪೂರ ಅಧಿಕಾರ ವಹಿಸಿಕೊಂಡಿದ್ದರು. ತಡೆಯಾಜ್ಞೆ ತೆರವು:ಕಳೆದ ಸೆ.25 ರಂದು ಮಾನ್ಯ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಬಿ.ಎ.ನಾಗಲಾಪೂರ ಅವರನ್ನು ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ ಹುದ್ದೆಯಿಂದ ತೆರವುಗೊಳಿಸಿ, ಮೊದಲಿದ್ದ ವಿ.ಎಂ.ಪೂಜಾರ ಅವರನ್ನು ಮುಖ್ಯಾಧಿಕಾರಿಯನ್ನಾಗಿ ನಿಯೋಜನೆ ಮಾಡಿ ಆದೇಶಿಸಿದ್ದಾರೆ. ಮತ್ತು ಮೊದಲಿದ್ದ ಬಿ.ಎ.ನಾಗಲಾಪೂರ ಅವರು ವಾರದೊಳಗಾಗಿ ಇಲಾಖೆಯ ಮುಖ್ಯಸ್ಥರಿಗೆ ವರದಿ ಮಾಡಿಕೊಳ್ಳಬೇಕು ಮತ್ತು ಒಂದೇ ವಾರದಲ್ಲಿ ನಾಗಲಾಪೂರ ಅವರಿಗೆ ಬೇರೊಂದು (ಪ್ಲೇಸ್‍ಮೆಂಟ್) ಸ್ಥಳಕ್ಕೆ ಮರು ವರ್ಗಾವಣೆ ಆದೇಶ ನೀಡುವಂತೆಯೂ ತಡೆಯಾಜ್ಞೆ ತೆರವು ಆದೇಶದಲ್ಲಿ ಸೂಚಿಸಿದೆ..
2019/05/21 21:06:35
https://prajapragathi.com/local-kannada-news-municipality-aministrative-officer-oppointed/
mC4
25 ವ್ಯಕ್ತಿ Xorlu ರೈಲು ದುರಂತದಲ್ಲಿ ಸತ್ತ ನಂತರ 25 Km ವೇಗ RayHaber ಮುಖಪುಟಟರ್ಕಿಮರ್ಮರ ಪ್ರದೇಶ59 ಟೆಕಿರ್ಡಾಗ್25 Km ಕಾರ್ಲು ರೈಲು ಅಪಘಾತದಲ್ಲಿ 25 ವ್ಯಕ್ತಿ ಸಾವಿನ ನಂತರ ವೇಗ 11 / 12 / 2018 ಲೆವೆಂಟ್ ಎಲ್ಮಾಸ್ತಸ್ 59 ಟೆಕಿರ್ಡಾಗ್, RAILWAY, ಸಾಮಾನ್ಯ, HEADLINE, ಮರ್ಮರ ಪ್ರದೇಶ, ಟರ್ಕಿ 0 ಪ್ರತಿ ವ್ಯಕ್ತಿಗೆ 25 ನಂತರ ಕಾರ್ವೆಟ್ XYUMX ಅಪಘಾತ ಸಂಭವಿಸಿದ 4 ಕಿಲೋಮೀಟರ್ ವೇಗವು 25 ಗಂಟೆಯನ್ನು ಮೀರಬಾರದು ಎಂಬ ಷರತ್ತಿನ ಮೇಲೆ ರೈಲು ದುರಂತ ಸಂಭವಿಸಿದ Çorlu ನಲ್ಲಿನ ರೈಲ್ವೆ ಸ್ಥಳವನ್ನು ಸಂಚಾರಕ್ಕೆ ತೆರೆಯಲಾಗಿದೆ ಎಂದು ಅದು ಬದಲಾಯಿತು. ತಜ್ಞರ ವರದಿಯ ಪ್ರಕಾರ, ಅಪಘಾತದ ಸಮಯದಲ್ಲಿ ಗಂಟೆಗೆ 25-388- ಕಿಲೋಮೀಟರ್ ರೈಲು ಈ ಸ್ಥಳದಿಂದ ಹಾದುಹೋಗುತ್ತಿತ್ತು, ಇದರಲ್ಲಿ 90 ಜನರು ಸಾವನ್ನಪ್ಪಿದರು ಮತ್ತು 110 ಜನರು ಗಾಯಗೊಂಡರು. ಸಾರಿಗೆ ಮತ್ತು ಮೂಲಸೌಕರ್ಯ ಸಚಿವಾಲಯದ ಚಲನೆಗೆ ಪ್ರತಿಕ್ರಿಯಿಸಿದ ಸಿಎಚ್‌ಪಿ ಟೆಕಿರ್‌ಡಾಗ್ ಉಪ ಇಲ್ಹಾಮಿ ಓಜ್ಕಾನ್ ಐಗುನ್, ರೈಲ್ವೆಗೆ ಹೊಸ ಫಿಲ್ಲರ್ ವಸ್ತುಗಳನ್ನು ಹಾಕಲಾಗಿದೆ, ಸಂಕೋಚನ ಪ್ರಕ್ರಿಯೆಯನ್ನು ಸಿಲಿಂಡರ್‌ಗಳಿಂದ ತಯಾರಿಸಲಾಯಿತು ಮತ್ತು ನೆಲವನ್ನು ಬಂಡೆಗಳಿಂದ ಬಲಪಡಿಸಲಾಯಿತು. "ರೈಲು ಸಂಚಾರವನ್ನು ಮುಂದುವರಿಸಲು ಅಗತ್ಯವಾದ ದುರಸ್ತಿ ಕಾರ್ಯದ ನಂತರ ಘಟನೆಯ ನಂತರ, ಅಗತ್ಯವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ರೈಲು ಸಂಚಾರದ ಗಂಟೆಯ ವೇಗ ಮಿತಿಯನ್ನು ಒದಗಿಸಲಾಗಿದೆ" ಎಂದು ಪ್ರತಿಕ್ರಿಯೆ ತಿಳಿಸಿದೆ. ಮೂಲ: İsmail Saymaz - ಸ್ವಾತಂತ್ರ್ಯ ಕಾರ್ಲ್ ರೈಲು ದುರಂತದ ಆರಂಭದ ಕಾರ್ಯದಲ್ಲಿ ಕಳೆದುಕೊಂಡ ಜನರ ಕುಟುಂಬಗಳು 19 / 04 / 2019 Corulu ರೈಲು ದುರಂತದಲ್ಲಿ 4 TCDD ಸಿಬ್ಬಂದಿ ವಿರುದ್ಧ ಮೊಕದ್ದಮೆಗೆ ಪ್ರತಿಕ್ರಿಯಿಸಿದ ತಮ್ಮ ಜೀವವನ್ನು ಕಳೆದುಕೊಂಡವರ ಸಂಬಂಧಿಗಳು ಕಾರ್ಲ್ ಕೋರ್ಟ್ಹೌಸ್ ಮುಂದೆ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದರು. 9 ವರ್ಷದ Oguz Arda ತಾಯಿ, ಅಪಘಾತದಲ್ಲಿ ತನ್ನ ಜೀವನದ ಕಳೆದುಕೊಂಡ ಮಿಶ್ರಾ ಓಜ್ ಸೆಲ್, ಹೇಳಿದರು, "ನಾವು ದೋಷಾರೋಪಣೆಯನ್ನು ನಿರಾಶೆಗೊಳಗಾದವು." 8 ಜುಲೈನಲ್ಲಿ 2018 ನಲ್ಲಿ 25, 9 4 ಕೊಲ್ಲಲ್ಪಟ್ಟಿತು ಮತ್ತು ನೂರಾರು ಜನರು ಗಾಯಗೊಂಡಿದ್ದ ರೈಲು ದುರಂತದ ಮೇಲೆ ಹಾದುಹೋಯಿತು. 3 TCDD ಸಿಬ್ಬಂದಿ ಜುಲೈ 2019 ನಲ್ಲಿ ನ್ಯಾಯಾಧೀಶರ ಮುಂದೆ ಕಾಣಿಸಿಕೊಳ್ಳುತ್ತಾರೆ ಮತ್ತು "ನಿರ್ಲಕ್ಷ್ಯದಿಂದ ಸಾವು ಮತ್ತು ಗಾಯವನ್ನು ಉಂಟುಮಾಡುತ್ತಾರೆ" ಎಂಬ ಆರೋಪದ ಮೇಲೆ. ರೈಲು ಅಪಘಾತದಲ್ಲಿ ತಮ್ಮ ಜೀವವನ್ನು ಕಳೆದುಕೊಂಡ ಜನರ ಕುಟುಂಬಗಳು, ಅಪಘಾತದಲ್ಲಿ ಜವಾಬ್ದಾರಿ ಹೊಂದಿರುವವರನ್ನು ಹೊರತುಪಡಿಸಿ ಮೊಕದ್ದಮೆ ಹೂಡಿದ 4 ಜನರು ... ಕಾರ್ಲ್ ರೈಲು ದುರಂತದ ಪ್ರಾಸಿಕ್ಯೂಷನ್ ಇಲ್ಲ ಪ್ಲೇಸ್ 26 / 04 / 2019 ಕಾರ್ಲೋ 2. ನ್ಯಾಯಾಧೀಶರ ನ್ಯಾಯಾಲಯವು ರಾಜಕಾರಣಿಗಳು, ಅಧಿಕಾರಿಗಳು ಮತ್ತು TCDD ಯ ಉನ್ನತ ನಿರ್ವಹಣೆಯನ್ನು ಸಾಕ್ಷ್ಯದ ಅನುಸಾರವಾಗಿ ಕರಾರಿಗೆ ಯಾವುದೇ ಪ್ರಾಸಿಕ್ಯೂಷನ್ ನೀಡಲಾಗುವುದಿಲ್ಲ ಎಂದು ನಿರ್ಧರಿಸಿದರು. Tekirdağ ಆಫ್ Corlu ಜಿಲ್ಲೆಯ ಕಳೆದ ವರ್ಷ 8 ಜುಲೈನಲ್ಲಿ, 25 ಜನರು Corlu ಮುಖ್ಯ ಸಾರ್ವಜನಿಕ ಪ್ರಾಸಿಕ್ಯೂಟರ್ ಕಚೇರಿ, ರಾಜಕಾರಣಿಗಳು, ಅಧಿಕಾರಿಗಳು, TCDD'nin ಹಿರಿಯ ನಿರ್ವಹಣೆಯ ಕಾನೂನು ಒಳಗೊಂಡಿರುವ ಜನರಿಗೆ ಬಿಡುಗಡೆ ರೈಲು ದುರಂತದಲ್ಲಿ ಗಾಯಗೊಂಡರು ನೂರಾರು ಜನರು ಕೊಲ್ಲಲ್ಪಟ್ಟರು. ತೀರ್ಮಾನಕ್ಕೆ ವಿತರಣೆ ನೀಡಲಾಗಿದೆ! ಕಾರ್ಲೋ 2. ನ್ಯಾಯಾಧೀಶರ ನ್ಯಾಯಾಲಯವು ಫಿರ್ಯಾದುದಾರನ ನಿರ್ಧಾರಕ್ಕೆ ದೂರುದಾರರಿಂದ ಮಾಡಿದ ಆಕ್ಷೇಪವನ್ನು ತಿರಸ್ಕರಿಸಿತು. ಪುರಾವೆಗಳಿಗೆ ಅನುಗುಣವಾಗಿ ಕಾನೂನು ಬಾಹಿರ ಸ್ಥಳವಿಲ್ಲ ಎಂದು ಹೇಳುವುದು, ಕ್ರಿಮಿನಲ್ ನ್ಯಾಯಾಧೀಶರು ಹೇಳಿದರು,
2019/10/22 22:42:56
https://kn.rayhaber.com/2018/12/%E0%B2%AA%E0%B3%8D%E0%B2%B0%E0%B2%A4%E0%B2%BF-%E0%B2%B5%E0%B3%8D%E0%B2%AF%E0%B2%95%E0%B3%8D%E0%B2%A4%E0%B2%BF%E0%B2%97%E0%B3%86-25-%E0%B2%A8%E0%B2%82%E0%B2%A4%E0%B2%B0-%E0%B2%95%E0%B2%BE%E0%B2%B0%E0%B3%8D%E0%B2%B5%E0%B3%86%E0%B2%9F%E0%B3%8D-XYUMX/
mC4
ಹರಕೆ ಹರಾಜು | Prajavani ಹರಕೆ ಹರಾಜು ಪ್ರಜಾವಾಣಿ ವಾರ್ತೆ Updated: 18 ಜನವರಿ 2011, 14:45 IST ಈಚಿನ ದಿನಗಳಲ್ಲಿ ಪತ್ರಿಕೆಯ ಮುಖಪುಟಗಳಲ್ಲೇ ಎರಡು ಸುದ್ದಿಗಳು ಕಾಣಿಸಿಕೊಂಡಿವೆ- ಒಂದು, ಸುಬ್ರಹ್ಮಣ್ಯದ ದೇವಾಲಯವೊಂದರಲ್ಲಿ ಕೆಲವು ಹರಕೆದಾರರು ಎಂಜಲೆಲೆಗಳ ಮೇಲೆ ಹೊರಳಾಡಿದ ಸುದ್ದಿ; ಇನ್ನೊಂದು, ನಮ್ಮ ಕ್ರಿಕೆಟ್ ಆಟಗಾರರನ್ನು ಎಮ್ಮೆದನಗಳ ಹಾಗೆ ಹರಾಜು ಹಾಕಿದ ಸುದ್ದಿ. 2011ರ ಭಾರತದಲ್ಲಿ ಬದುಕುತ್ತಿರುವ ನನ್ನಂಥವರಿಗೆ ಈ ಎರಡು ಸುದ್ದಿಗಳಲ್ಲಿ ಯಾವುದು ಹೆಚ್ಚು ಅವಮಾನಕರ? ನಾನು ಓದಿದ ಪತ್ರಿಕಾ ವರದಿಗಳನ್ನೇ ಆಧರಿಸಿ ಮಾತನಾಡುವುದಾದರೆ, ಇದರಲ್ಲಿ ಮೊದಲನೆಯದನ್ನು ಅವಮಾನಕರವೆಂದು ಹಲವರು ಗುರುತಿಸಿದ್ದಾರೆ. ಹಾಗೆ ನೋಡಿದರೆ, ಹರಾಜಿನ ಸುದ್ದಿಗೆ ಹೋಲಿಸಿದರೆ, ಹರಕೆಯ ಸುದ್ದಿಯು ಅದು ಸಂಭವಿಸಿದ ಭೌಗೋಲಿಕ ಸ್ಥಳದ ದೃಷ್ಟಿಯಿಂದಲೇ ಆಗಲಿ, ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಅಷ್ಟು ಮುಖ್ಯವಲ್ಲದ್ದೆಂಬಂತೆ ಕಾಣುತ್ತದೆ. ಆ ಸುದ್ದಿಯ ಪ್ರಕಾರ, ಯಾವುದೋ ಒಂದು ಪುಟ್ಟ ಊರಿನ ದೇವಾಲಯದಲ್ಲಿ, ಯಾರೋ ಒಂದಿಷ್ಟು ಜನ, ತಮ್ಮದೇ ಸ್ವಂತ ನಂಬಿಕೆಯಿಂದ ಪ್ರೇರಿತರಾಗಿ ನಮ್ಮಂಥ ಹಲವರಿಗೆ ಅಸಹ್ಯಕರವಾಗಿ ಕಾಣಬಹುದಾದ ಒಂದು ಕೆಲಸವನ್ನು ಮಾಡಿದರು. ನಮ್ಮ ಮಾಧ್ಯಮವರದಿಗಳು ಅಷ್ಟನ್ನು ಮಾತ್ರ ಹೇಳದೆ, ಇದು ಭಾರತದಲ್ಲಿ ಶತಶತಮಾನಗಳಿಂದ ಸತತವಾಗಿ ನಡೆದುಕೊಂಡು ಬಂದಿರುವ ಒಂದು ಮೂಢನಂಬಿಕೆಯೆಂಬ ಅರ್ಥದಲ್ಲಿ ಅದನ್ನು ಚಿತ್ರಿಸಿದವು. ಮಾತ್ರವಲ್ಲ, ನಗಣ್ಯವೆನ್ನಬಹುದಾದ ಪುಟ್ಟ ಊರಿನ ಈ ಒಂದು ಘಟನೆಯು ಮುಖಪುಟಗಳಲ್ಲಿ ವರದಿಯಾದ ರೀತಿಯಿಂದಲೇ, ಇದು ನಮ್ಮ ಸಮಾಜವನ್ನು ಕಾಡುತ್ತಿರುವ ಮುಖ್ಯವಾದ ಪಿಡುಗಿನ ಒಂದು ಉದಾಹರಣೆ- ಎಂಬ ಧ್ವನಿಯೂ ಈ ವರದಿಗಳ ಹಿಂದಿತ್ತು. ಅದಕ್ಕೆ ಹೋಲಿಸಿದರೆ, ಹರಾಜಿನ ಸುದ್ದಿಯು ವರದಿಯಾದ ವಿಧಾನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇದು ಭೌಗೋಲಿಕ ವ್ಯಾಪ್ತಿಯಲ್ಲಿಯೂ ಜನಪ್ರಿಯತೆಯಲ್ಲಿಯೂ ಹಾಗೂ ಹಣದ ವಹಿವಾಟಿನ ದೃಷ್ಟಿಯಿಂದ ಕೂಡಾ ಗಣನೀಯ ವಿದ್ಯಮಾನವಾದ್ದರಿಂದ ಇದು ಮುಖಪುಟಗಳಲ್ಲಿ ಹಲವು ದಿನ ಕಾಣಿಸಿಕೊಂಡಿದ್ದೇನೋ ಸಹಜವೇ ಸರಿ. ಆದರೆ, ಅಂಥ ಯಾವುದೇ ವರದಿಯಲ್ಲಾಗಲಿ- ಅಥವಾ ಅದಕ್ಕೆ ಪ್ರತಿಕ್ರಿಯೆಯಾಗಿಯಾಗಲಿ- ಇದು ನಮ್ಮ ಸಮಾಜಕ್ಕೆ ಅವಮಾನವನ್ನು ಸೃಷ್ಟಿಸುವ ಒಂದು ಘಟನೆ ಎಂಬ ಚಿತ್ರಣ ಇರಲಿಲ್ಲ. ಮಾತ್ರವಲ್ಲ, ಹರಕೆಯ ಘಟನೆಯನ್ನು ಕೆಲವು ವರದಿಗಳು 'ಮಧ್ಯಯುಗದ ಭಾರತದ ಅನಾಗರಿಕ ಮನಃಸ್ಥಿತಿಯು ಇನ್ನೂ ಮುಂದುವರೆಯುತ್ತಿರುವ ಸಂಕೇತ' ಎಂಬರ್ಥದಲ್ಲಿ ವರ್ಣಿಸಿದ್ದರೆ, ಹರಾಜಿನ ವಿಚಾರದಲ್ಲಿ ಈ ಬಗೆಯ ಇತಿಹಾಸದ ಉಲ್ಲೇಖವನ್ನು ಯಾರೂ ಮಾಡಲಿಲ್ಲ. ಮೇಲುಮೇಲಿನ ಇತಿಹಾಸವನ್ನಷ್ಟೇ ಗಮನಿಸಿದರೂ, ಈ ಬಗೆಯ ಹರಾಜುಗಳು ಪ್ರಾಚೀನ ರೋಮಿನಲ್ಲಿ ನಡೆಯುತ್ತಿದ್ದ ಕಥೆ ನಮಗೆ ಗೊತ್ತಿದೆ; ಅಲ್ಲಿ ಹೋರಿಕಾಳಗದ ಆಟಗಾರರನ್ನು ಮತ್ತು ಗುಲಾಮರನ್ನೂ ಸ್ತ್ರೀಯರನ್ನೂ ಇದೇ ಬಗೆಯಲ್ಲಿ ಹರಾಜು ಹಾಕುತ್ತಿದ್ದರೆಂದು ಪ್ರಾಥಮಿಕ ಇತಿಹಾಸದ ಪುಸ್ತಕಗಳೂ ಹೇಳುತ್ತವೆ. ಆದರೆ, ಹರಾಜಿನ ಘಟನೆಯನ್ನು ವರದಿ ಮಾಡಿದ ಯಾರೂ ಇದನ್ನು 'ಪ್ರಾಚೀನ ರೋಮಿನ ಅನಾಗರಿಕ ಮನಃಸ್ಥಿತಿಯು ಇನ್ನೂ ಮುಂದುವರೆದಿರುವ ಸಂಕೇತ'ವೆಂದು ವರ್ಣಿಸಲಿಲ್ಲ. ಅಂತೆಯೇ, ಹರಕೆಯ ಘಟನೆಯು ಆ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಮಾತ್ರವಲ್ಲ, ಅಂಥ ಸಮಾಜದಲ್ಲಿ ಬದುಕುತ್ತಿರುವ ನಮ್ಮೆಲ್ಲರಿಗೂ ಅವಮಾನಕರವೆಂದು ವರ್ಣಿತವಾದರೆ, ಈ ಆಟಗಾರರ ಹರಾಜಿನ ಕೆಲಸವು ನಮ್ಮೆಲ್ಲರಿಗೆ ಹಾಗಿರಲಿ, ಅಂಥ ಮಾರುಕಟ್ಟೆಯಲ್ಲಿ ಕುರಿಗಳ ಹಾಗೆ ಬೆಲೆಪಟ್ಟಿ ಹಚ್ಚಿಕೊಂಡು ನಿಂತ ಆಟಗಾರರಿಗೂ ಅವಮಾನ ಎಂದು ಯಾರೂ ವ್ಯಾಖ್ಯಾನಿಸಲಿಲ್ಲ. ಯಾತಕ್ಕೆ ಈ ವ್ಯತ್ಯಾಸ? ಇವೆರಡರಲ್ಲಿ ಯಾವುದು ನಿಜವಾಗಿ ಅವಮಾನ? ಇವೆರಡರಲ್ಲಿ ಪರಸ್ಪರ ಯಾವುದು ಹೆಚ್ಚು ಅವಮಾನಕರ? ಮತ್ತು ಇವೆರಡೂ ಬೇರೆಬೇರೆ ರೀತಿಯ ಅವಮಾನಗಳೇ ಹೌದು ಎನ್ನುವುದಾದರೆ, ನಮ್ಮ ಮಾಧ್ಯಮದ ಕಣ್ಣುಗಳಿಗೆ ಮತ್ತು ನಮ್ಮ ಹಲವು ವಿಚಾರವಂತರ ಮನಸ್ಸುಗಳಿಗೆ ಅದೇಕೆ ಹಾಗೆ ಕಾಣುತ್ತಿಲ್ಲ? ಯಾತಕ್ಕೆ ಇವೆರಡರ ವರದಿಗಳಲ್ಲಿ ಇಂಥ ಅಸಮಾನತೆ? ಇದಕ್ಕೆ ಕಾಣಿಸುವ ಒಂದು ಉತ್ತರವೆಂದರೆ, ಇವತ್ತಿನ ಕಾಲದ ಸಾಂಸ್ಕೃತಿಕ ಹವಾಮಾನದಲ್ಲಿ ಕೆಲವು ಬಗೆಯ ಅವಮಾನಗಳನ್ನು ನಾವು ಅವಮಾನವೆಂದು ಗುರುತಿಸುವುದನ್ನು ಕಲಿತುಕೊಂಡಿದ್ದೇವೆ; ಆದರೆ ಇನ್ನೂ ಕೆಲವು ಬಗೆಯ ಅವಮಾನಗಳಿಗೆ ನಾವು ಎಷ್ಟು ಒಗ್ಗಿಕೊಂಡಿದ್ದೇವೆಂದರೆ, ಅವು ಅವಮಾನಗಳೆಂದು ನಮಗೆ ಕಾಣುವುದೇ ಇಲ್ಲ. ಉದಾಹರಣೆಗೆ ಹಿಂದೊಂದು ಕಾಲದಲ್ಲಿ ಪ್ರಾಯಶಃ ಮೇಲೆ ಉಲ್ಲೇಖಿಸಿದ ಹರಕೆಯ ವಿದ್ಯಮಾನವು ಕೇವಲ ನಂಬಿಕೆಯ ಪ್ರಶ್ನೆಯಾಗಿ ಕಾಣುತ್ತಿತ್ತು, ಅದನ್ನು ಅವಮಾನವೆಂದು ಯಾರೂ ತಿಳಿಯುತ್ತಿರಲಿಲ್ಲ. ಆದರೆ, ಇವತ್ತಿನ ಕಾಲದಲ್ಲಿ ಅದು ಕೇವಲ ಹರಕೆ ಹೊತ್ತವರಿಗೆ ಮಾತ್ರವಲ್ಲ, ಇಡಿಯ ಸಮಾಜಕ್ಕೇ ಅವಮಾನವೆಂದು ನಮ್ಮಲ್ಲನೇಕರಿಗೆ ಕಾಣುತ್ತಿದೆ. ಅದೇ ಹರಾಜಿನ ವಿಷಯಕ್ಕೆ ಬಂದರೆ, ಇವತ್ತಿನ ಸಮಾಜದಲ್ಲಿ- ಅದರಲ್ಲೂ ಮುಖ್ಯವಾಗಿ ಮಧ್ಯಮ ಮತ್ತು ಮೇಲುವರ್ಗಗಳ ಕಣ್ಣಿಗೆ- ಇದೊಂದು ಬಗೆಯ ಜೀವನವಿಧಾನವೆಂದು ಕಾಣುತ್ತದೆಯೇ ಹೊರತು ಯಾವ ರೀತಿಯಿಂದಲೂ ಇದರಲ್ಲಿ ಅವಮಾನ ಗೋಚರಿಸುವುದಿಲ್ಲ. ಚಿತ್ರಕೃತಿಗಳನ್ನು ಹರಾಜು ಹಾಕುವ ಹಾಗೆಯೇ ಮನುಷ್ಯರ ನಿರ್ದಿಷ್ಟ ಕೌಶಲಗಳನ್ನೂ ಹರಾಜು ಹಾಕುವುದರಲ್ಲಿ ತಪ್ಪೇನಿದೆ?- ಎಂದು ನಮ್ಮಲ್ಲನೇಕರಿಗೆ ಕಾಣುತ್ತದೆ. ಇನ್ನು, ನಮ್ಮ ನವಮಧ್ಯಮವರ್ಗಗಳಿಗಂತೂ ಕ್ರಿಕೆಟ್ಟಿಗರ ಹರಾಜೇ ಆಗಲಿ ಅಥವಾ ಅದೇ ಬಗೆಯ ಸೌಂದರ್ಯಸ್ಪರ್ಧೆಯೇ ಆಗಲಿ, ಅದು ಸಹಜವಾದ ವ್ಯಾಪಾರ ವಹಿವಾಟಿನ ಚಟುವಟಿಕೆಯಾಗಿ ಕಾಣುತ್ತದೆ. ಮಾತ್ರವಲ್ಲ, ಕೆಲವರಿಗಂತೂ ಅದು 'ಊಳಿಗಮಾನ್ಯ ಮೌಲ್ಯಗಳಿಂದ' ನಮ್ಮ ಸಮಾಜ ಬಿಡುಗಡೆ ಪಡೆದುಕೊಂಡಿರುವುದರ ಪ್ರಗತಿಶೀಲ ಪ್ರತೀಕವಾಗಿಯೂ ಕಾಣಿಸಿಕೊಳ್ಳುತ್ತದೆ. ಅಂದರೆ, ಅರ್ಥ ಇಷ್ಟೇ- ಯಾವುದೇ ಸಮಾಜದಲ್ಲೇ ಆಗಲಿ, ಅವಮಾನವೆಂಬುದು ಒಂದು ಕಾಲದೇಶಾಧೀನ ಸಾಂಸ್ಕೃತಿಕ ಪರಿಕಲ್ಪನೆಯೇ ಹೊರತು ಅದು ಸಾರ್ವತ್ರಿಕವಾಗಿ ಮತ್ತು ಸಾರ್ವಕಾಲಿಕವಾಗಿ ನಿರ್ವಚಿತವಾದ ಒಂದು ಸ್ಥಿತಿಯಲ್ಲ. ಆದ್ದರಿಂದ, ಹರಕೆ ಮತ್ತು ಹರಾಜುಗಳಲ್ಲಿ ಒಂದು ಅವಮಾನವಾಗಿಯೂ ಇನ್ನೊಂದು ಸಹಜವಾಗಿಯೂ ಕಂಡರೆ, ಅದರ ಹಿಂದೆ ಐತಿಹಾಸಿಕವಾದ ಹಲವು ಕಾರಣಗಳಿವೆ; ನಮ್ಮ ವಸಾಹತುಶಾಹಿ ಗತಕಾಲವು ನಮ್ಮ ಗ್ರಹಿಕೆಯನ್ನು ನಿರೂಪಿಸಿದ ಒಂದು ವಿಶಾಲ ಕಥನವೇ ಅದರ ಹಿಂದಿದೆ. ಈ ಪುಟ್ಟ ಟಿಪ್ಪಣಿಯಲ್ಲಿ ಆ ವಿವರಗಳಿಗೆ ನಾನು ಹೋಗುವುದಿಲ್ಲ. ಆದರೆ, ಈ ಎಲ್ಲ ಪ್ರಶ್ನೆಗಳು ಇನ್ನೂ ಒಂದು ಮೂಲ ಪ್ರಶ್ನೆಯ ಕಡೆಗೆ ನಮ್ಮನ್ನು ಎಳೆದೊಯ್ಯುತ್ತವೆ- ಅವಮಾನ ಎಂದರೆ ಅದೇನು? ಯಾರಿಗಾದರೂ ಅವಮಾನವಾದರೆ ಅದನ್ನು ಗುರುತಿಸುವುದು ಹೇಗೆ? ಈ ಪ್ರಶ್ನೆಗೆ ಈಚಿನ ಹಲವು ಸಂಸ್ಕೃತಿ ಜಿಜ್ಞಾಸುಗಳು ಬಗೆಬಗೆಯಿಂದ ಉತ್ತರ ಹುಡುಕಲು ಹವಣಿಸಿದ್ದಾರೆ. ಭಾರತದ ಸಂದರ್ಭದಲ್ಲಿ ಇಂದು ನಡೆಯುತ್ತಿರುವ, ಸಾಮಾಜಿಕ ಅವಮಾನದ ಘಟನೆಗಳೆಂದು ಹೇಳಲಾಗುವ ಹಲವು ಬಗೆಯ ದೃಷ್ಟಾಂತಗಳನ್ನು ಅಂಥ ಚಿಂತಕರು ತುಂಬ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಆ ಎಲ್ಲ ವಿಶ್ಲೇಷಣೆಗಳ ಸಮೀಕ್ಷೆಗೆ ಹೋಗದೆ, ಅಂಥ ಹಲವು ಜಿಜ್ಞಾಸೆಗಳಲ್ಲಿ ವ್ಯಕ್ತವಾಗಿರುವ ಒಂದು ಕ್ಲಿಷ್ಟವಾದ ಪ್ರಶ್ನೆಯನ್ನು ನಾನಿಲ್ಲಿ ಒಂದು ರೂಪಕವಾಗಿ ರೂಪಾಂತರಿಸಿ ಪ್ರಸ್ತುತಪಡಿಸುತ್ತೇನೆ. ಆ ರೂಪಕ ಹೀಗಿದೆ: ಒಂದು ಕೋಣೆಯಲ್ಲಿ ಎತ್ತರವಾದ ಆಸನವೊಂದರ ಮೇಲೆ ಒಬ್ಬ ಕಾಲಿನ ಮೇಲೆ ಕಾಲು ಹಾಕಿ ಕೂತಿದ್ದಾನೆಂದು ಭಾವಿಸಿ; ಇನ್ನೊಬ್ಬ ಆತನ ಕಾಲಿನ ಕೆಳಗೆ ಬಾಗಿ ನಿಂತಿದ್ದಾನೆಂದು ಭಾವಿಸಿ; ಮತ್ತು ಇನ್ನೂ ಒಬ್ಬ ಆ ಕೋಣೆಯ ಬಾಗಿಲಿನಲ್ಲಿ ನಿಂತು ಇವರಿಬ್ಬರನ್ನೂ ನೋಡುತ್ತಿದ್ದಾನೆಂದು ಊಹಿಸಿಕೊಳ್ಳಿ. ಆಗ, ಮೇಲೆ ಕೂತವ ಕೆಳಗೆ ನಿಂತವನಿಗೆ ಅವಮಾನ ಮಾಡುತ್ತಿದ್ದಾನೆಂದು ಬಾಗಿಲಿನಲ್ಲಿ ನಿಂತವನಿಗೆ ಕಾಣಲಿಕ್ಕೆ ಸಾಧ್ಯವಿದೆ. ಆದರೆ, ಸ್ವತಃ ಬಾಗಿ ನಿಂತವನೇ ತನಗೆ ಅವಮಾನವಾಗುತ್ತಿಲ್ಲ; ತಾನು ಗೌರವದಿಂದ ಹೀಗೆ ನಿಂತಿದ್ದೇನೆಂದು ಹೇಳಿದರೆ, ಆಗೇನು ಮಾಡಬೇಕು? ಆದರೆ, ಬಾಗಿಲಲ್ಲಿ ನಿಂತವನು ಅಷ್ಟಕ್ಕೆ ಸಮಾಧಾನಗೊಳ್ಳುವುದಿಲ್ಲ ಅಂದುಕೊಳ್ಳೋಣ. ಆತ, ತನ್ನ ವಾದವನ್ನು ಸಮರ್ಥಿಸಿಕೊಳ್ಳಲಿಕ್ಕೆ ಹೀಗೆ ಹೇಳಿಯಾನು- 'ಕಾಲಿನ ಕೆಳಗೆ ಬಾಗಿ ನಿಂತಿರುವ ಆತನಿಗೆ ನಿಜವಾಗಿ ಅವಮಾನವಾಗುತ್ತಿದೆ; ಆದರೆ ದೀರ್ಘಕಾಲ ಹಾಗೇ ನಿಂತು ರೂಢಿಯಾಗಿರುವುದರಿಂದ ಅದನ್ನು ಆತ ಸಹಜವೆಂದು ಭಾವಿಸಿದ್ದಾನೆ, ಅದು ತನಗೆ ಅವಮಾನವೆಂದು ತಿಳಿದುಕೊಳ್ಳುತ್ತಿಲ್ಲ, ಅಷ್ಟೇ!'. ಇಂಥ ಒಂದು ಇಕ್ಕಟ್ಟಿನ ಸನ್ನಿವೇಶದಲ್ಲಿ ಯಾರು ಯಾರಿಗೆ ಅವಮಾನ ಮಾಡುತ್ತಿದ್ದಾರೆ ಎಂಬುದನ್ನಾಗಲಿ, ಅಥವಾ ನಿಜವಾಗಿಯೂ ಇಲ್ಲಿ ಯಾರಿಗಾದರೂ ಅವಮಾನ ಆಗುತ್ತಿದೆಯೋ ಎಂಬುದನ್ನೇ ಆಗಲಿ ಹೇಳುವುದು ಎಷ್ಟು ಕ್ಲಿಷ್ಟವೆಂಬುದನ್ನು ನಾವು ಹಲವು ನಿರ್ದಿಷ್ಟ ಉದಾಹರಣೆಗಳ ಮೂಲಕ ವಿವರಿಸಬಹುದು. ಒಂದೇ ಉದಾಹರಣೆ ಹೇಳುವುದಾದರೆ, ಕೋಣೆಯೊಳಗೆ ಕೂತವರಿಬ್ಬರೂ ಭಾರತದವರು ಮತ್ತು ಬಾಗಿಲಲ್ಲಿ ನಿಂತವನು ಪಾಶ್ಚಿಮಾತ್ಯ ಮೂಲದ ಒಬ್ಬ ಮಾನವಶಾಸ್ತ್ರಜ್ಞ ಎಂದೇನಾದರೂ ನೀವು ಭಾವಿಸಿಕೊಂಡರೆ, ಆಗ ಈ ಇಕ್ಕಟ್ಟಿಗೆ ಸಾಂಸ್ಕೃತಿಕ ರಾಜಕಾರಣದ ಹೊಸದೊಂದು ಆಯಾಮವೂ ಸೇರಿಕೊಳ್ಳುತ್ತದೆ. ಆದರೆ, ಈ ಪ್ರಶ್ನೆಯ ವ್ಯಾಪ್ತಿ-ವಿಸ್ತಾರಗಳೇನೇ ಇರಲಿ, ಒಂದನ್ನಂತೂ ನಾವು ಗಮನಿಸಬಹುದು- ಕಡೆಗೂ ಸ್ವತಃ ಅವಮಾನವನ್ನು ಅನುಭವಿಸುತ್ತಿದ್ದಾನೆಂದು ಹೇಳಲಾಗುವಾತನೇ ತನಗೆ ಅವಮಾನವಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳದೆಹೋದರೆ, ಅದನ್ನು ಅವಮಾನ ಎಂದು ಕರೆಯುವುದು ಕಷ್ಟವೇ ಸರಿ. ಹಾಗಂತ, ಇದನ್ನೆಲ್ಲ ನೋಡುವವನಿಗೆ ಇದೊಂದು ಅವಮಾನಕರ ಘಟನೆಯೆಂದು ನಿಜವಾಗಿಯೂ ಅನ್ನಿಸಿದ್ದೇ ಆದರೆ, ಆಗ ಆ 'ಅವಮಾನಿತ'ನೊಂದಿಗೆ ಈ ಬಾಗಿಲಿನಲ್ಲಿ ನಿಂತವ ಚರ್ಚೆ ಮಾಡಿ, ಅವನಿಗೆ 'ತಿಳಿವಳಿಕೆ' ಕೊಡಬಹುದು; ಆತನಿಗೆ ಅವಮಾನವಾಗುತ್ತಿದೆ ಎಂಬುದನ್ನು ಆತನಿಗೇ ಮನವರಿಕೆ ಮಾಡಲು ಪ್ರಯತ್ನಿಸಬಹುದು; ಅದೆಲ್ಲಕ್ಕೂ ಈ ನೋಡುಗನಿಗೆ ಸ್ವಾತಂತ್ರ್ಯ ಇದೆ. ಆದರೆ ಅದರ ಜತೆಗೇ, ಆತ್ಯಂತಿಕವಾಗಿ ತನಗೆ ಅವಮಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸುವಾತ ಸ್ವತಃ ಆ ಅವಮಾನಿತನೇ ಆಗಿರಬೇಕೆ ಹೊರತು, ಆತನ ಪರವಾಗಿ ಇನ್ನೊಬ್ಬರು 'ಅವನಿಗೆ ಅವಮಾನವಾಗುತ್ತಿದೆ' ಎಂದು ತೀರ್ಮಾನಿಸಲಾಗದು. ಇದನ್ನೇ ಬೇರೆ ರೀತಿಯಿಂದ ಹೇಳುವುದಾದರೆ, ಅವಮಾನ ಎಂದರೇನು ಎಂಬ ಪ್ರಶ್ನೆಯನ್ನು ಪ್ರತಿಯೊಂದು ಕಾಲದೇಶಗಳ ಸಂಸ್ಕೃತಿಯೂ ತನಗೆ ತಾನೇ ನಿರ್ವಚಿಸಿ ವಿವರಿಸಿಕೊಳ್ಳಬೇಕು. ಅದಕ್ಕೆ ಬೇಕಿದ್ದರೆ ಬೇರೆ ಸಂಸ್ಕೃತಿಗಳ ಅವಮಾನ ಕುರಿತ ಪರಿಕಲ್ಪನೆಗಳ ಸಹಾಯ ಪಡೆಯುವುದು ತಪ್ಪಲ್ಲವಾದರೂ ಇನ್ನೊಂದು ಸಂಸ್ಕೃತಿಯ ಮಾನ-ಅವಮಾನಗಳ ನಿರ್ವಚನೆಯನ್ನು ನಾವು ಸಾರಾಸಗಟಾಗಿ ಎರವಲು ಪಡೆದರೆ, ಅದರಿಂದ ಅಪಾರ್ಥಗಳೇ ಹುಟ್ಟುತ್ತವೆ. ಅಂಥ ಸಂದರ್ಭಗಳಲ್ಲಿಯೇ ಯಾವುದು ಸಹಜ ಮತ್ತು ಯಾವುದು ಅವಮಾನ ಎಂಬುದು ನಮಗೇ ಗೊತ್ತಾಗದೆಹೋಗುತ್ತದೆ- ಇದು ನಾನು ಉಲ್ಲೇಖಿಸಿರುವ ಎರಡು ವರದಿಗಳಲ್ಲಾಗಿರುವ ಸಮಸ್ಯೆ. ಆದ್ದರಿಂದ, ಈ ಹರಕೆ ಮತ್ತು ಹರಾಜುಗಳಲ್ಲಿ ಯಾವುದು ಸಹಜ ಮತ್ತು ಯಾವುದು ಅವಮಾನ ಎಂಬುದನ್ನು ಈ ಕೂಡಲೇ ಖಡಾಖಂಡಿತವಾಗಿ ತೀರ್ಮಾನಿಸುವ ತರಾತುರಿಯಿಂದ ನಾನು ಈ ಟಿಪ್ಪಣಿ ಬರೆದಿಲ್ಲ; ಅಥವಾ ಇವುಗಳಲ್ಲಿ ಯಾವುದೇ ಒಂದರ ಪರವಾಗಿ ವಕಾಲತ್ತು ಮಾಡುವುದೂ ನನ್ನ ಉದ್ದೇಶವಲ್ಲ. ಬದಲು, ನಮ್ಮ ಕಾಲದೇಶ ಸಂದರ್ಭಕ್ಕೆ ನಮ್ಮದೇ ಸ್ವಂತ ಮಾನಾವಮಾನಗಳ ಪರಿಕಲ್ಪನೆಯೇ ಇನ್ನೂ ಹುಟ್ಟಿಲ್ಲವೇನೋ ಎಂಬ ಅನುಮಾನದಿಂದ ಈ ಬರಹಕ್ಕೆ ತೊಡಗಿದ್ದೇನೆ. ಅದೇನಾದರೂ ನಿಜವಾಗಿದ್ದರೆ, ನಮ್ಮ ಸಮಾಜಕ್ಕೆ ಅದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ. '); $('#div-gpt-ad-1486-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-1486'); }); googletag.cmd.push(function() { googletag.display('gpt-text-700x20-ad2-1486'); }); },300); var x1 = $('#node-1486 .field-name-body .field-items div.field-item > p'); if(x1 != null && x1.length != 0) { $('#node-1486 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-1486').addClass('inartprocessed'); } else $('#in-article-1486').hide(); } else { _taboola.push({article:'auto', url:'https://www.prajavani.net/article/ಹರಕೆ-ಹರಾಜು'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-1486', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-1486'); }); googletag.cmd.push(function() { googletag.display('gpt-text-300x20-ad2-1486'); }); // Remove current Outbrain //$('#dk-art-outbrain-1486').remove(); //ad before trending $('#mob_rhs1_1486').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-1486 .field-name-body .field-items div.field-item > p'); if(x1 != null && x1.length != 0) { $('#node-1486 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-1486 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-1486'); }); } else { $('#in-article-mob-1486').hide(); $('#in-article-mob-3rd-1486').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-1486','#in-article-684576','#in-article-661737','#in-article-661720','#in-article-661656']; var twids = ['#twblock_1486','#twblock_684576','#twblock_661737','#twblock_661720','#twblock_661656']; var twdataids = ['#twdatablk_1486','#twdatablk_684576','#twdatablk_661737','#twdatablk_661720','#twdatablk_661656']; var obURLs = ['https://www.prajavani.net/article/ಹರಕೆ-ಹರಾಜು','https://www.prajavani.net/minugu-minchu-food-684576.html','https://www.prajavani.net/inetrview-661737.html','https://www.prajavani.net/ganesh-chaturthi-661720.html','https://www.prajavani.net/wodeyar-and-reservation-661656.html']; var vuukleIds = ['#vuukle-comments-1486','#vuukle-comments-684576','#vuukle-comments-661737','#vuukle-comments-661720','#vuukle-comments-661656']; // var nids = [1486,684576,661737,661720,661656]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2020/06/02 23:30:58
https://www.prajavani.net/article/%E0%B2%B9%E0%B2%B0%E0%B2%95%E0%B3%86-%E0%B2%B9%E0%B2%B0%E0%B2%BE%E0%B2%9C%E0%B3%81
mC4
ಶುದ್ಧ ನೀರಿನ ಘಟಕದಲ್ಲಿನ್ನು ನಾಣ್ಯ ನಡೆಯಲ್ಲ Bengaluru, First Published 7, Jun 2019, 8:57 AM IST ಇನ್ನು ಮುಂದೆ ಶುದ್ಧ ಕುಡಿಯುವ ನೀಡಿನ ಘಟಕಗಳಲ್ಲಿ ನಾಣ್ಯ ನಡೆಯುವುದಿಲ್ಲ. ಹಾಗಾದ್ರೆ ನೀರು ಪಡೆಯುವುದು ಹೇಗೆ..? ಬೆಂಗಳೂರು : ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿರುವ ರಾಜ್ಯ ಸರ್ಕಾರವು ನೀರು ಶುದ್ಧೀಕರಣ ಘಟಕಗಳ ಸಮರ್ಪಕ ನಿರ್ವಹಣೆಗಾಗಿ ಮಾರ್ಗಸೂಚಿ ರೂಪಿಸಿ ಪ್ರತಿ ತಾಲೂಕಿಗೆ ಒಂದರಂತೆ ನಿರ್ವಹಣಾ ಪ್ಯಾಕೇಜ್‌ ಅನ್ನು ಅರ್ಹ ಸಂಸ್ಥೆಗಳಿಗೆ ವಹಿಸಲು ನಿರ್ಧರಿಸಿದೆ. ಪ್ರಸ್ತುತ ಪ್ರತಿ ಲೀಟರ್‌ಗೆ 10 ಪೈಸೆ ದರದಂತೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಆದರೆ, ನಿರ್ವಹಣಾ ವೆಚ್ಚ 35 ಪೈಸೆ ಆಗಿದೆ. ಇದನ್ನು ಸರಿದೂಗಿಸಲು ಕಾಲಕಾಲಕ್ಕೆ ಪ್ರತಿ ಲೀಟರ್‌ಗೆ 25 ಪೈಸೆ ಏರಿಕೆ ಮಾಡುವ ಬಗ್ಗೆಯೂ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ, ಗ್ರಾಮೀಣ ಭಾಗದಲ್ಲಿ ಜನ ವಸತಿಗಳಲ್ಲಿ ಅನುಷ್ಠಾನಗೊಳಿಸಿರುವ ನೀರು ಶುದ್ಧೀಕರಣ ಘಟಕಗಳ ಪೈಕಿ ನಾಣ್ಯ ಬೂತ್‌ ಇರುವ ಕಡೆ ನಾನಾ ರೀತಿಯ ತಾಂತ್ರಿಕ ದೋಷಗಳು ಕಂಡು ಬರುತ್ತಿವೆ. ಹೀಗಾಗಿ ನಾಣ್ಯಗಳ ಬೂತ್‌ಗಳ ಬದಲಾಗಿ ಸ್ಮಾರ್ಟ್‌ಕಾರ್ಡ್‌ ಬೂತ್‌ಗಳನ್ನು ಅಳವಡಿಸಲು ಸಚಿವ ಸಂಪುಟ ಅನುಮೋದನೆ ಕೊಟ್ಟಿದೆ. ನೀರು ಶುದ್ಧೀಕರಣ ಘಟಕಗಳನ್ನು ಒಮ್ಮೆ ರಿಪೇರಿ ಮಾಡುವುದು ಸೇರಿದಂತೆ ಐದು ವರ್ಷಗಳ ಕಾಲ ನಿರ್ವಹಣೆಗಾಗಿ 233 ಕೋಟಿ ರು. ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಗ್ರಾಮ ಪಂಚಾಯತ್‌ಗಳೇ ಸಮರ್ಪಕವಾಗಿ ನಿರ್ವಹಣೆ ಮಾಡಲು ನಿರ್ಧರಿಸಿದರೆ ಅದಕ್ಕೂ ಅವಕಾಶವಿದ್ದು, ಯಾವುದೇ ಸಂಸ್ಥೆಗಳಿಗೆ ವಹಿಸುವುದಿಲ್ಲ ಎಂದು ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಅಲ್ಲದೇ ನಾಣ್ಯದ ಸ್ಮಾರ್ಟ್‌ಕಾರ್ಡ್‌ ಬೂತ್‌ ಅಳವಡಿಕೆಗೆ ಸಂಪುಟ ನಿರ್ಧಾರ ಮಾಡಿದೆ. 18,582 ನೀರು ಶುದ್ಧೀಕರಣ ಘಟಕ: ಗ್ರಾಮೀಣ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಒಟ್ಟು 18,582 ನೀರು ಶುದ್ಧೀಕರಣ ಘಟಕಗಳ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ 16 ಸಾವಿರ ಕುಡಿಯುವ ನೀರು ಘಟಕಗಳ ನಿರ್ವಹಣಾ ಅವಧಿ ಮುಗಿದಿದೆ. ಇವುಗಳ ಸಮರ್ಪಕ ನಿರ್ವಹಣೆಗಾಗಿ ಪ್ರತಿ ತಾಲೂಕಿಗೆ ಒಂದರಂತೆ ನಿರ್ವಹಣಾ ಪ್ಯಾಕೇಜ್‌ ಅನ್ನು ಟೆಂಡರ್‌ ಮೂಲಕ ಅರ್ಹ ಸಂಸ್ಥೆಗಳಿಗೆ ಒದಗಿಸಲು ಗ್ರಾಮ ಪಂಚಾಯತ್‌ಗೆ ಅಧಿಕಾರ ನೀಡಲು ನಿರ್ಧರಿಸಲಾಗಿದೆ. ಒಂದು ವೇಳೆ ಗ್ರಾಮ ಪಂಚಾಯತ್‌ಗಳೇ ನಿರ್ವಹಣೆ ಮಾಡಲು ತೀರ್ಮಾನಿಸಿದರೆ ಅವಕ್ಕೂ ಅವಕಾಶ ನೀಡಲಾಗುತ್ತದೆ. ಒಂದು ತಾಲೂಕಿನಲ್ಲಿ 100ಕ್ಕಿಂತ ಹೆಚ್ಚು ಘಟಕಗಳಿದ್ದಲ್ಲಿ ಹೆಚ್ಚುವರಿ ಪ್ಯಾಕೇಜ್‌ ಸಹ ನೀಡಲಾಗುವುದು ಎಂದು ಹೇಳಿದರು. ಗ್ರಾಮ ಪಂಚಾಯಿತಿಗೆ ನಿರ್ವಹಣೆಯ ಹೊಣೆಯನ್ನು ಹಸ್ತಾಂತರಿಸಿದ ಬಳಿಕ ಬಹಳ ಕಡೆಗಳಲ್ಲಿ ಸರಿಯಾಗಿ ನಿರ್ವಹಣೆ ಮಾಡದೆ ಯಂತ್ರ ಕೆಟ್ಟು ಹೋಗಿವೆ. ನಿರ್ವಹಣೆ ಮಾಡುವ ಕುರಿತು ಸರಿಯಾದ ಮಾರ್ಗಸೂಚಿ ಇಲ್ಲದ ಕಾರಣ 7-8 ತಿಂಗಳ ಕಾಲ ಅಧ್ಯಯನ ನಡೆಸಿ ಮಾರ್ಗಸೂಚಿ ರೂಪಿಸಿ, ಅದನ್ನು ಕಾರ್ಯರೂಪಕ್ಕೆ ತರಲಾಗುವುದು. ತಾಲೂಕು ಕೇಂದ್ರಗಳಲ್ಲಿ ಏಜೆನ್ಸಿಗಳಿಗೆ ಟೆಂಡರ್‌ ಮೂಲಕ ನಿರ್ವಹಣೆಯ ಜವಾಬ್ದಾರಿಯನ್ನು ನೀಡಲಾಗುವುದು. ಶುದ್ಧ ನೀರಿನ ಘಟಕ ಕೆಟ್ಟು ಹೋದರೆ ಇಂತಿಷ್ಟುದಿನದಲ್ಲಿ ರಿಪೇರಿ ಮಾಡಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ರಿಪೇರಿ ಮಾಡದಿದ್ದರೆ ದಂಡ ವಿಧಿಸಲಾಗುವುದು ಎಂದು ವಿವರಿಸಿದರು.
2019/10/21 20:03:55
https://kannada.asianetnews.com/news/water-tariff-hike-from-karnataka-govt-psplmd
mC4
ಹುಬ್ಬಳ್ಳಿ ಗಲಭೆಯ ಪುಂಡರಿಗೆ ಜಮೀರ್ ದುಡ್ಡು-ಫುಡ್ಡು ನೆರವು : ರೇಣುಕಾಚಾರ್ಯ ಕಿಡಿ – EESANJE / ಈ ಸಂಜೆ ಹುಬ್ಬಳ್ಳಿ ಗಲಭೆಯ ಪುಂಡರಿಗೆ ಜಮೀರ್ ದುಡ್ಡು-ಫುಡ್ಡು ನೆರವು : ರೇಣುಕಾಚಾರ್ಯ ಕಿಡಿ April 29, 2022 Sunil Kumar Hubli violence:, MLA, MP Renukacharya, Zameer ahmed ಬೆಂಗಳೂರು,ಏ.29- ಮಾನ್ಯ ಶಾಸಕರಾದ ಜಮೀರ್ ಅಹಮ್ಮದ್ ಅವರೇ ಹುಬ್ಬಳ್ಳಿಯಲ್ಲಿ ಕೋಮು ಗಲಭೆ ಸೃಷ್ಟಿಸಿದ ಗಲಭೆಕೋರರಿಗೆ ಆರ್ಥಿಕ ನೆರವು ಕೊಡಲು ಮುಂದಾಗಿರುವ ನೀವು ನಾಗರಿಕ ಸಮಾಜಕ್ಕೆ ಏನು ಸಂದೇಶ ಕೊಡಲು ಮುಂದಾಗಿದ್ದೀರಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಈ ಹಿಂದೆ ಡಿಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಹಾಗೂ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೂ ಇದೇ ರೀತಿ ಆರ್ಥಿಕ ನೆರವು ಕೊಟ್ಟಿದ್ದೀರಿ. ಪರಿಣಾಮ ಏನಾಯಿತು ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಯಾವುದೇ ಒಬ್ಬ ಶಂಕಿತ ಆರೋಪಿಯನ್ನು ಪೊಲೀಸರು ಆಧಾರರಹಿತವಾಗಿ ಇಲ್ಲವೇ ಸುಖಾಸುಮ್ಮನೇ ಬಂಧಿಸುವುದಿಲ್ಲ. ಹುಬ್ಬಳ್ಳಿಯಲ್ಲಿ ಹಾಡು ಹಾಗಲೇ ಬೀದಿಯಲ್ಲಿ ನಿಂತು ಬೆಂಕಿ ಹಚ್ಚಲು,ಕಲ್ಲಿ ತೂರಾಟ ನಡೆಸಲು ಕರೆ ಕೊಟ್ಟವರು ರಾಷ್ಟಪೀತ ಮಹಾತ್ಮ ಗಾಂೀಧಿಜಿಯವರ ಅನುಯಾಯಿಗಳೇ ಇಲ್ಲವೇ ಶಾಂತಿಧೂತರೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಕಿ ಹಚ್ಚುವವರು, ಕೊಲೆ ಮಾಡುವವರು, ಸಾರ್ವಜನಿಕರ ಆಸ್ತಿ ಪಾಸ್ತಿ, ಹಾಳು ಮಾಡುವವರು, ಠಾಣೆಗೆ ನುಗ್ಗಿ ಹಚ್ಚುವವರಿಗೆ ಉದಾರವಾಗಿ ನೀವು ಹಣಕಾಸಿನ ನೆರವು ಕೊಟ್ಟಿದ್ದರಿಂದಲೇ ಪ್ರೇರಣೆ ಪಡೆದ ದೇಶದ್ರೋಹಿಗಳೇ ಹುಬ್ಬಳ್ಳಿಯಲ್ಲೂ ಬೆಂಕಿ ಹಚ್ವಲು ಮುಂದಾದರು ಎಂಬುದನ್ನು ಮರೆಯಬೇಡಿ ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ಬಂಧಿತರಾಗಿರುವವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡ ಮಾಡಿದವರೇ, ಪಾಕಿಸ್ತಾನ ವಿರುದ್ದ ಗಡಿಯಲ್ಲಿ ನಿಂತು ಶತ್ರುಗಳ ಮೇಲೆ ತಾಯ್ನಾಡಿಗಾಗಿ ಹೋರಾಡಿ ಜೈಲಿಗೆ ಹೋಗಿದ್ದರೆ? ಯಾವ ಕಾರಣಕ್ಕಾಗಿ ಈ ದೇಶದ್ರೋಹಿಗಳಿಗೆ ಹಣದ ನೆರವು ಕೊಡುತ್ತಿದ್ದೀರಿ ಎಂದು ಜಮೀರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಕಷ್ಟದಲ್ಲಿದ್ದವರಿಗೆ ಹಣಕಾಸಿನ ನೆರವು ಕೊಟ್ಟರೆ ನಮ್ಮದೇನು ತಕರಾರು ಇಲ್ಲ. ಆದರೆ, ನಾಗರಿಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ , ಆಸ್ಪತ್ರೆ , ಹಿಂದೂ ದೇವಾಲಯಗಳ ಮೇಲೆ ಕಲ್ಲು ತೂರಿ,ಮನೆಗಳ ಮೇಲೆ ಕಲ್ಲು ತೂರಿದವರಿಗೆ ಆರ್ಥಿಕ ನೆರವು ನೀಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿದ್ದಾರೆ. ಈಗಲಾದರೂ ನಿಮ್ಮ ಓಲೈಕೆ ರಾಜಕಾರಣ ನಿಲ್ಲಿಸಿ.ಇನ್ನು ಎಷ್ಟು ದಿನ ಈ ಬೂಟಾಟಿಕೆ ಮಾಡುತ್ತೀರಿ. ನೀವು ಇಂತಹ ದೇಶದ್ರೋಹಿಗಳಿಗೆ ಮತ್ತೆ ಮತ್ತೆ ಬಿರಿಯಾನಿ, ಕಬಾಬ್ ಕೊಡಲು ಮುಂದಾದರೆ, ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದರಲ್ಲಿ ಸಂಶಯವೇ ಬೇಡ ಎಂದು ಎಚ್ಚರಿಸಿದ್ದಾರೆ.
2022/07/03 06:16:32
https://eesanje.com/hubli-violence-mla-zameer-ahmed-mp-renukacharya/
mC4
ಮತ್ತೆ ಬಂಧನಕ್ಕೊಳಗಾದ ಟ್ರ್ಯಾಕ್ಟರ್ ಜಾಥಾ ಗಲಭೆ ಆರೋಪಿ ದೀಪ್ ಸಿಧು! - CitizenLive News Home » ರಾಷ್ಟ್ರೀಯ » ಮತ್ತೆ ಬಂಧನಕ್ಕೊಳಗಾದ ಟ್ರ್ಯಾಕ್ಟರ್ ಜಾಥಾ ಗಲಭೆ ಆರೋಪಿ ದೀಪ್ ಸಿಧು! By News Editor 17/04/2021 : 7:04 PM 1 Comment1 Min Read ನವದೆಹಲಿ: ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಜಾಥಾ ವೇಳೆ ನಡೆದ ಗಲಭೆ ಪ್ರಕರಣದ ಆರೋಪಿ ನಟ ದೀಪ್ ಸಿಧುಗೆ ಜಾಮೀನು ದೊರೆತ ಕೆಲವೇ ಗಂಟೆಗಳಲ್ಲಿ ದೆಹಲಿ ಅಪರಾಧ ದಳದ ಪೊಲೀಸರು ಶನಿವಾರ ಮತ್ತೆ ಬಂಧಿಸಿದ್ದಾರೆ. ಶನಿವಾರ ಬೆಳಿಗ್ಗೆ ಜಾಮೀನು ದೊರೆತಿದ್ದು, ಭಾರತೀಯ ಪುರಾತತ್ವ ಇಲಾಖೆ ದಾಖಲಿಸಿದ್ದ ಪ್ರಕರಣದ ಆಧಾರದಲ್ಲಿ ದೀಪ್ ಸಿಧು ಅವರನ್ನು ಮತ್ತೆ ಬಂಧಿಸಲಾಗಿದೆ. ದೆಹಲಿಯ ಕೆಂಪು ಕೋಟೆಯ ಉಸ್ತುವಾರಿಯನ್ನು ಭಾರತೀಯ ಪುರಾತತ್ವ ಇಲಾಖೆ ವಹಿಸಿಕೊಂಡಿದ್ದು, ಗಣರಾಜ್ಯೋತ್ಸವದಂದು ನಡೆದ ಗಲಭೆಯಲ್ಲಿ ಕೆಂಪುಕೋಟೆಗೆ ಹಾನಿಯಾಗಿದೆ. ಕೆಂಪು ಕೋಟೆ ಗೋಡೆಗಳು ಹಾಗೂ ಅದರಲ್ಲಿನ ಕಚೇರಿಗಳಿಗೆ ಹಾನಿಯಾಗಿದೆ ಎಂದು ಪ್ರತ್ಯೇಕ ಪ್ರಕರಣ ದಾಖಲಿಸಿತ್ತು. 'ನಾನು ವಿಡಿಯೋವನ್ನು ಪೋಸ್ಟ್ ಮಾಡಿದ್ದೆ ಅಷ್ಟೇ, ಅದು ನನ್ನ ತಪ್ಪು. ಎಲ್ಲ ತಪ್ಪುಗಳೂ ಅಪರಾಧವಲ್ಲ. ನಾನು ವಿಡಿಯೋ ಹಂಚಿಕೊಂಡಿದ್ದೇನೆ ಎಂಬ ಕಾರಣಕ್ಕಾಗಿಯೇ ಮಾಧ್ಯಮಗಳು ನನ್ನನ್ನು ಮುಖ್ಯ ಆರೋಪಿ ಎಂದು ಬಿಂಬಿಸಿವೆ. ಮುಖ್ಯ ಸಂಚುಕೋರ ಎಂದು ನನ್ನನ್ನು ತೋರಿಸಿವೆ. ಇದು ಯಾಕೆಂದು ನನಗೆ ಗೊತ್ತಿಲ್ಲ' ಎಂದು ಜಾಮೀನು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಹೇಳಿದ್ದರು.
2021/05/07 12:44:44
https://citizenlive.news/national-india/deep-sidhu-accused-of-tractor-jatha-riot-again-arrested-by-police/
mC4
ಚಿಕ್ಕಮಗಳೂರು: ಹೊಯ್ಸಳರ ಕಾಲದ 4 ಸ್ಮಾರಕ ಸಂಶೋಧನೆ - Kannada Muhimmath News Portal ಈ ವೀರಗಲ್ಲಿನಲ್ಲಿ‌ ಹೊಯ್ಸಳ ಲಿಪಿ ಸಾದೃಶ್ಯದ ಹಳೆಗನ್ನಡ ಅಕ್ಷರಗಳಿದ್ದು ಅಸ್ಪಷ್ಟವಾಗಿವೆ. ಈ ವೀರಗಲ್ಲು ವಿಷ್ಣುವರ್ಧನನ ಆಡಳಿತದ ಆರಂಭಕಾಲದ (12ನೇ ಶತಮಾನದ ಆರಂಭ) 'ಹೊಯ್ಸಳ ಲಾಂಛನ ಸಹಿತ ದೊರೆತ ವೀರಗಲ್ಲು' ಎಂದು ಹೇಳಬಹುದಾಗಿದೆ. ಮಠದ ಎದುರು ಬಲಭಾಗದಲ್ಲಿ ನಾಲ್ಕನೇ ಸ್ಮಾರಕ ಸಂಗೀತಗಾರನ ವೀರಗಲ್ಲು ಇದೆ.ಸೊಂಟದಲ್ಲಿ ಕಠಾರಿ ಧರಿಸಿದ ವೀರನೊಬ್ಬ ಎತ್ತಿದ ಬಲಗೈನಲ್ಲಿ 'ಕಿನ್ನರಿ' ಸಂಗೀತವಾದ್ಯ ಹಿಡಿದಿದ್ದು ಎಡಗೈನಲ್ಲಿ 'ತಾಳಚಿಟಿಕೆ' ಹಿಡಿದ ಚಿತ್ರಣ ಇದೆ. ಸಂಗೀತಗಾರನ ಎಡಗಡೆ ಕಾಲಬುಡದಲ್ಲಿ ಕಾಡುಹಂದಿ ಬಿದ್ದಿರುವ ಚಿತ್ರಣ ಇದೆ. ಶಿಲ್ಪ ಚಿತ್ರಣದ ಆಧಾರದಲ್ಲಿ ಹಂದಿಬೇಟೆಯಲ್ಲಿ 'ಕಿನ್ನರಿ ವೀರ' ಮರಣಹೊಂದಿದಾಗ ಸ್ಥಾಪಿಸಿದ ವಿಶೇಷ ವೀರಗಲ್ಲು ಎನ್ನಬಹುದಾಗಿದೆ ಎಂದು ಪಾಂಡುರಂಗ ತಿಳಿಸಿದ್ದಾರೆ.
2022/05/28 03:14:28
https://kannada.muhimmathonline.com/2021/10/4.html
mC4
ಗೋವಾ ಸಿನಿಮೋತ್ಸವ : 50 ಚಲನಚಿತ್ರ ಪ್ರದರ್ಶನ Saturday, Jan 16 2021 | Time 07:59 Hrs(IST) EntertainmentPosted at: Jan 13 2021 2:30PM Share ಪಣಜಿ, ಜ 13 (ಯುಎನ್ಐ) ಗೋವಾದಲ್ಲಿ ನಡೆಯಲಿರುವ 51 ನೇ ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ವಿಶ್ವ ಪನೊರಮಾ ವಿಭಾಗದಲ್ಲಿ ಪ್ರದರ್ಶಿಸಲಾಗುವ ಸಿನಿಮಾಗಳ ಪಟ್ಟಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಪ್ರಕಟಿಸಿದೆ. ವಿಶ್ವ ಪನೊರಮಾ ವಿಭಾಗದಲ್ಲಿ 50 ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ವಿಶ್ವದ ವಿವಿಧ ದೇಶಗಳ ಸಿನಿಮಾಗಳು ಈ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿವೆ. ಅಮೆರಿಕ, ಬ್ರಿಟನ್, ಕೆನಡಾ, ಇರಾನ್, ಫ್ರಾನ್ಸ್‌, ಜರ್ಮನಿ, ಸ್ಪೇನ್, ಇಟಲಿ ಇನ್ನೂ ಅನೇಕ ಪ್ರಮುಖ ಸಿನಿಮಾ ನಿರ್ಮಾಣ ದೇಶಗಳ ಜೊತೆಗೆ ಬಾಂಗ್ಲಾದೇಶ, ಕಜಕಿಸ್ತಾನ, ಸ್ಲೊವೋಕಿಯಾ, ಲಿತೂನಿಯಾ, ರೊಮಾನಿಯಾ, ಅಂಡೊರ್ರಾ, ಮೆಸಿಡೋನಿಯಾ ಇನ್ನೂ ಹಲವು ದೇಶಗಳ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ 51 ನೇ ಅಂತರರಾಷ್ಟ್ರೀಯ ಸಿನಿಮಾ ಉತ್ಸವ ಜನವರಿ 16 ರಿಂದ ಪ್ರಾರಂಭವಾಗಲಿದ್ದು, 12 ದಿನ ನಡೆಯಲಿರುವ ಈ ಉತ್ಸವವು ಜನವರಿ 24 ರಂದು ಸಮಾರೋಪಗೊಳ್ಳಲಿದೆ. ಗೋವಾ ಸಿನಿಮಾಉತ್ಸವ ಎಂದು ಕರೆಯಲಾಗುವ ಈ ಉತ್ಸವವು ಏಷ್ಯಾದ ಹಳೆಯ ಮತ್ತು ಭಾರತದ ದೊಡ್ಡ ಸಿನಿಮಾ ಉತ್ಸವ ಆಗಿದೆ. ಈ ಬಾರಿಯ ಗೋವಾ ಸಿನಿಮೋತ್ಸವವನ್ನು ಒಟಿಟಿಯಲ್ಲಿ ಸಹ ನೋಡಬಹುದಾಗಿದೆ. ನೊಂದಾವಣಿ ಮಾಹಿತಿ ಮಾಹಿತಿ ಹಾಗೂ ಪ್ರಸಾರ ಇಲಾಖೆ (ಪಿಐಬಿ) ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
2021/01/16 02:29:55
http://unikannada.com/~/%E0%B2%97-%E0%B2%B5-%E0%B2%B8-%E0%B2%A8-%E0%B2%AE-%E0%B2%A4-%E0%B2%B8%E0%B2%B5--50-%E0%B2%9A%E0%B2%B2%E0%B2%A8%E0%B2%9A-%E0%B2%A4-%E0%B2%B0-%E0%B2%AA-%E0%B2%B0%E0%B2%A6%E0%B2%B0-%E0%B2%B6%E0%B2%A8/Entertainment/news/2291102.html
mC4
ಮೂರ್ಖರು ಕಿರುಚಾಡುತ್ತಾರೆ, ನಾಯಿಗಳು ಬೊಗಳುತ್ತವೆ! : ನಟಿ ಗೌತಮಿ ಬೈದದ್ದು ಯಾರಿಗೆ…? – Sudina Home / Film News / Kollywood / ಮೂರ್ಖರು ಕಿರುಚಾಡುತ್ತಾರೆ, ನಾಯಿಗಳು ಬೊಗಳುತ್ತವೆ! : ನಟಿ ಗೌತಮಿ ಬೈದದ್ದು ಯಾರಿಗೆ…? sudina August 24, 2017 Kollywood Leave a comment 244 Views ಚೆನ್ನೈ : ಸೂಪರ್​ ಸ್ಟಾರ್ ಕಮಲ್​ ಹಾಸನ್ ಮತ್ತು ಬಹುಭಾಷಾ ನಟಿ ಗೌತಮಿ ಪರಸ್ಪರ ದೂರವಾಗಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಸುಮಾರು 12 ವರ್ಷಗಳ ಬಾಂದವ್ಯವನ್ನು ಕಡಿದುಕೊಂಡು ಇವರಿಬ್ಬರು ಕಳೆದ ವರ್ಷವಷ್ಟೇ ದೂರವಾಗಿದ್ದರು. (read also : ಕಮಲ್​ ಹಾಸನ್​ ಬಾಳಿನಿಂದ ದೂರ ಸರಿದ ಗೌತಮಿ ) ಆದರೆ, ಇತ್ತೀಚಿಗೆ ಗೌತಮಿ ಮತ್ತೆ ಕಮಲ್ ಹಾಸನ್​ ಜೊತೆಯೇ ಬದುಕಲು ಬಯಲಿಸಿದ್ದಾರೆ ಎಂಬ ಸುದ್ದಿಯೊಂದು ಹಬ್ಬಿತ್ತು. (read also : ಕಮಲ್​ ಹಾಸನ್​ ಕುಟುಂಬದಲ್ಲಿ ಶೃತಿ ಹಾಸನ್​, ಗೌತಮಿ ಜಗಳ? ) ಈ ಸುದ್ದಿ ಸಖತ್​ ಹೈಪ್ ಕ್ರಿಯೇಟ್ ಮಾಡಿತ್ತು. ಇದೇ ಗೌತಮಿ ಸಿಟ್ಟಿಗೆ ಈಗ ಕಾರಣವಾಗಿದ್ದು… ಕಮಲ್ ಮತ್ತು ಗೌತಮಿ ಈಗ ಹಿಂದಿನಂತೆ ಆಪ್ತರಾಗುತ್ತಿದ್ದಾರೆ. ಮತ್ತೆ ಇವರಿಬ್ಬರು ಒಂದಾಗುತ್ತಿದ್ದಾರೆ ಎಂಬ ಸುದ್ದಿಗೆ ಸಖತ್​ ಕೆಂಡಾಮಂಡಲರಾಗಿರುವ ಗೌತಮಿ, ಮೂರ್ಖರು ಕಿರುಚಾಡುತ್ತಾರೆ, ನಾಯಿಗಳು ಬೊಗಳುತ್ತವೆ. ನಾನು ತುಂಬಾ ದೂರ ಬಂದಾಗಿದೆ. ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ಬದುಕುಗಳಿರುತ್ತವೆ ಎಂದು ಈ ಸುದ್ದಿಯನ್ನು ಅಳಗಳೆದಿದ್ದಾರೆ. ಮತ್ತು ಇನ್ನೊಂದು ಸಲ ಕಮಲ್ ಹಾಸನ್ ಜೊತೆ ಬದುಕಲು ಸಾಧ್ಯವೇ ಇಲ್ಲ ಎಂಬುದನ್ನೂ ಖಡಾಖಂಡಿತವಾಗಿ ಹೇಳಿದ್ದಾರೆ. Previous ಸ್ಕಾಟ್​ಲ್ಯೆಂಡ್​​​​ನಿಂದ ಮರಳಿದ ಅಂಜನೀಪುತ್ರ ಟೀಂ : ಪುನೀತ್​ ಜೊತೆ ರಶ್ಮಿಕಾ ಭರ್ಜರಿ ಸ್ಟೆಪ್ಸ್​​ Next ಒಂದಾದ ಕಿಚ್ಚ ಸುದೀಪ್​-ಪ್ರಿಯಾ ದಂಪತಿ : ವಿಚ್ಛೇದನ ಅರ್ಜಿ ವಾಪಸ್​​… ಭಾಸ್ಕರ್ ಶೆಟ್ಟಿ ಹತ್ಯೆ ಕೇಸ್‍ಗೂ ದೃಶ್ಯಂ ಸಿನೆಮಾಕ್ಕೂ ಸಂಬಂಧ…?!!! : ಹೋಮಕುಂಡದಲ್ಲಿ ಹೆಣ ಸುಟ್ಟಿದ್ದು ನಿಜನಾ? ಕತೆನಾ?
2018/10/20 09:53:17
http://sudina.in/2017/08/24/kamal-haasan-and-gautami/
mC4
ನಡೆಯೋಕೆ ಆಗೊಲ್ಲ, ಆದರೆ ಬದುಕಿನ ನಡಿಗೆ ನಿಂತಿಲ್ಲ... | Prajavani ನಡೆಯೋಕೆ ಆಗೊಲ್ಲ, ಆದರೆ ಬದುಕಿನ ನಡಿಗೆ ನಿಂತಿಲ್ಲ... ಪ್ರಜಾವಾಣಿ ವಾರ್ತೆ Updated: 03 ಡಿಸೆಂಬರ್ 2013, 11:59 IST 'ಎರಡೂ ಕಾಲು ಕಳೆದುಕೊಂಡ ನನಗೆ ಎಲ್ಲರಂತೆ ನಡೆಯಲಿಕ್ಕೆ ಆಗೊಲ್ಲ. ಹಾಗಂತ ಕೈ ಚೆಲ್ಲಿ ಕೂತಿಲ್ಲ. ಮಾನಸಿಕವಾಗಿ ಕುಗ್ಗಿಲ್ಲ. ಈ ಜಗತ್ತಿನಲ್ಲಿ ನನಗೂ ಬದುಕಲು ಅವಕಾಶ ಮತ್ತು ಹಕ್ಕಿದೆ. ಆದ್ದರಿಂದಲೇ ಆತ್ಮಬಲ, ಆತ್ಮವಿಶ್ವಾಸದಿಂದ ಬದುಕು ನಡೆಸಿಕೊಂಡು ಬರುತ್ತಿದ್ದೇನೆ. ಸಮಸ್ಯೆ, ಸವಾಲುಗಳು ಎದುರಾದರೂ ಗುರಿಯಿಂದ ವಿಮುಖಳಾಗಲ್ಲ' –ಹೀಗೆ ಗಟ್ಟಿದನಿಯಲ್ಲಿ ಹೇಳುವವರು ಬಾನೊತ್‌ ಉಷಾಕಿರಣ್‌. ಅವರು ಕರ್ನಾಟಕ ಅಂಗವಿಕಲರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ. ತಮ್ಮದಲ್ಲದ ಊರು ಮತ್ತು ರಾಜ್ಯದಲ್ಲಿ ಅಪರಿಚಿತ ಜನರ ಮಧ್ಯೆ ಬದುಕಿ ಇಲ್ಲಿನ ಭಾಷೆ, ಸಂಸ್ಕೃತಿ ಮತ್ತು ಜೀವನಶೈಲಿ ರೂಢಿಸಿಕೊಳ್ಳುತ್ತಿರುವ ಅವರು ಮಾತನಾಡತೊಡಗಿದರೆ ಅಂಗವಿಕಲರ ದಯನೀಯ ಸ್ಥಿತಿ ಒಂದೊಂದಾಗಿ ಬೆಳಕಿಗೆ ಬರುತ್ತದೆ. ಅಂಗವಿಕಲರ ಕಷ್ಟ–ಕಾರ್ಪಣ್ಯ ಮತ್ತು ಸಮಾಜ ಅವರನ್ನು ನೋಡುವ ರೀತಿ ಎಲ್ಲವನ್ನೂ ವಿವರಿಸುತ್ತಾರೆ. ಮನೆಯೊಳಗೆ ಮತ್ತು ಹೊರಗೆ ಸಮಾಜದಲ್ಲಿ ಅಂಗವಿಕಲರ ಮೇಲೆ ಆಗುತ್ತಿರುವ ಶೋಷಣೆ, ದೌರ್ಜನ್ಯದ ಬಗ್ಗೆ ಬಿಡಿಬಿಡಿಯಾಗಿ ಹೇಳುತ್ತಾರೆ. ನಾನೂ ಮಾನಸಿಕ ಹಿಂಸೆ, ಶೋಷಣೆ ಮತ್ತು ದೌರ್ಜನ್ಯವನ್ನು ದಿಟ್ಟವಾಗಿ ಎದುರಿಸಿಕೊಂಡು ಬಂದಿದ್ದೇನೆ ಎಂದು ಹೇಳುವಾಗ ಉಷಾಕಿರಣ್‌ ಅವರ ಕಣ್ಣಂಚಿನಲ್ಲಿ ನೀರು ಕಾಣಿಸಿಕೊಳ್ಳುತ್ತದೆ. ಆದರೆ ಅದನ್ನು ಗಟ್ಟಿಯಾಗಿ ಅದುಮಿಡುವ ಅವರು, 'ನಾನು ಈ ಜಗತ್ತಿನಲ್ಲಿ ಬದುಕಬೇಕೆಂದರೆ ಎಲ್ಲವನ್ನೂ ಮತ್ತು ಎಲ್ಲರನ್ನೂ ಸಹಿಸಿಕೊಳ್ಳಬೇಕು. ಸುಳ್ಳು ಮಾತನಾಡಬಾರದು, ಚಾಡಿ ಹೇಳಬಾರದು ಮತ್ತು ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ನನ್ನ ಹಿರಿಯರು ಮತ್ತು ಸ್ನೇಹಿತರು ತಿಳಿ ಹೇಳಿದ್ದಾರೆ. ಅದರಂತೆಯೇ ನಾನು ಬದುಕುತ್ತಿದ್ದೇನೆ. ಬದುಕುವ ಅದಮ್ಯ ವಿಶ್ವಾಸ ಹೊಂದಿದ್ದೇನೆ' ಎನ್ನುತ್ತಾರೆ. ಆಂಧ್ರಪ್ರದೇಶ ವಾರಂಗಲ್‌ ಸಮೀಪದ ನರಸನಪೇಟೆಯಲ್ಲಿ 1986ರ ಜನವರಿ 1ರಂದು ಜನಿಸಿದ ಆದಿವಾಸಿ ಲಂಬಾಣಿ ಸಮುದಾಯದ ಉಷಾಕಿರಣ್‌ ಜೀವನಗಾಥೆ ಸಾಮಾನ್ಯವಾದುದ್ದೇನಲ್ಲ. ಹೆಣ್ಣಾಗಿ ಜನಿಸಿದ ಅವರು ಲಿಂಗ ಪರಿವರ್ತನೆಗೊಂಡವರು. ಅಂಗವಿಕಲೆಯಾಗಿದ್ದೇ ಕಾರಣವಾಗಿಸಿಕೊಂಡು ಮನೆ ಮತ್ತು ಸಮಾಜದಲ್ಲಿ ಆಗುತ್ತಿದ್ದ ಹಿಂಸೆ, ಕಿರುಕುಳಕ್ಕೆ ತಕ್ಕ ಉತ್ತರ ನೀಡಬೇಕೆಂದು ಹೊಸ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಿದರು. 2007ರಲ್ಲಿ ಬೆಂಗಳೂರಿಗೆ ಬಂದ ಅವರು ಸ್ನೇಹಿತರನ್ನು ಗಳಿಸಿದರು. ಕಷ್ಟಪಟ್ಟು ಕನ್ನಡ ಕಲಿತರು. ಅಂಗವಿಕಲರ ಸಂಘಟನೆಯನ್ನು ಆರಂಭಿಸಿ, ಅವರ ಹಕ್ಕುಗಳಿಗಾಗಿ ಈಗ ಹೋರಾಟವನ್ನೇ ಕೈಗೊಂಡಿದ್ದಾರೆ. 'ಬಡ ಕುಟುಂಬದಲ್ಲಿ ಜನಿಸಿದ ನಾನು ಮೂರನೇ ವಯಸ್ಸಿನಲ್ಲೇ ಪೋಲಿಯೊದಿಂದಾಗಿ ಎರಡೂ ಕಾಲು ಸ್ವಾಧೀನ ಕಳೆದುಕೊಂಡು ಅಂಗವಿಕಲೆಯಾದೆ. ಶಸ್ತ್ರಚಿಕಿತ್ಸೆ ಮೂಲಕ ಕಾಲುಗಳನ್ನು ಗುಣಪಡಿಸಲು ತಂದೆ–ತಾಯಿ ಮನೆಯಲ್ಲಿನ ಹಸುಗಳನ್ನು ಮಾರಾಟ ಮಾಡಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಅಂಗವಿಕಲೆಯಾದ ಮಗಳಿಗೆ ಸಾಮಾಜಿಕ ಭದ್ರತೆ ನೀಡುವುದು ಕಷ್ಟ ಎಂಬ ಕಾರಣಕ್ಕೆ ತಂದೆ–ತಾಯಿ ನನ್ನನ್ನು ಮಗನಾಗಿ ಬೆಳೆಸಿದರು. ಬಾಲಕಿಯರು ತೊಡುವ ಉಡುಪುಗಳನ್ನು ಬಿಟ್ಟು ಬಾಲಕರು ತೊಡುವಂತಹ ಉಡುಪುಗಳನ್ನು ನೀಡಿದರು. ಮಗಳಲ್ಲ, ಮಗ ಎಂಬಂತೆ ನನ್ನನ್ನು ಬೆಳೆಸತೊಡಗಿದರು' ಎಂದು ಅವರು 'ಪ್ರಜಾವಾಣಿ'ಗೆ ತಿಳಿಸಿದರು. 'ಶಾಲೆಗೆ ಹೋಗುವುದನ್ನೇ ಬಿಡಿಸಿದರು. ಮನೆಯಲ್ಲೇ ಇರುವಂತೆ ನೋಡಿಕೊಂಡರು. ಆದರೆ ಇದೆಲ್ಲವನ್ನೂ ಗಮನಿಸಿದ ಶಾಲೆಯ ಶಿಕ್ಷಕ ಕೃಷ್ಣಮೂರ್ತಿಯವರು ನನ್ನ ಸಮಸ್ಯೆ ಅರಿತರು. ತಂದೆ–ತಾಯಿ ಅವರ ಮನವನ್ನು ಒಲಿಸಲು ಸಾಕಷ್ಟು ಪ್ರಯತ್ನಪಟ್ಟರು. ಶಾಲೆಗೆ ಕಳುಹಿಸುವುದು ಕಷ್ಟವೆಂದಾಗ, ಕೃಷ್ಣಮೂರ್ತಿಯವರೇ ನನ್ನನ್ನು ತಮ್ಮ ಸೈಕಲ್‌ನಲ್ಲಿ ಕೂರಿಸಿಕೊಂಡು ಶಾಲೆಗೆ ಕರೆತರುತ್ತಿದ್ದರು. 'ಹಾಗೂ–ಹೀಗೂ ಕಷ್ಟಪಟ್ಟು ಬಿ.ಎ.ವರೆಗೆ ಓದಿದೆ. ನಂತರ ಸರಿತಾ, ಭದ್ರಾನಾಯಕ್‌, ರಂಜಿತಾ, ಕುಮಾರ್‌ ಮತ್ತು ಶಂಕರ್‌ರಂತಹ ಸ್ನೇಹಿತರು ಸಿಕ್ಕರು. ಅಲ್ಲಿನ ಶಾಸಕರೊಬ್ಬರು ಅಂಗವಿಕಲರಿಗೆ ಸಂಬಂಧಿಸಿದಂತೆ ಮಾಹಿತಿಯೊಂದನ್ನು ನೀಡಲು ನಿರಾಕರಿಸಿದಾಗ, ಪ್ರತಿಭಟನೆಯ ರೂಪದಲ್ಲಿ 2003ರ ಡಿಸೆಂಬರ್‌ 3ರಂದು ವಾರಂಗಲ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಅಂಗವಿಕಲರನ್ನು ಒಂದೆಡೆ ಸೇರಿಸಿದ್ದೆವು. ಅಲ್ಲಿ ಶಾಸಕರು ಬರಲು ಇಷ್ಟಪಡಲಿಲ್ಲ. ಸ್ಥಳಕ್ಕೆ ಬರದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ಪೊಲೀಸರು ಹೇಳಿದಾಗ, ಶಾಸಕರು ಸ್ಥಳಕ್ಕೆ ಬಂದರು. ಅಂದೇ ಅಲ್ಲಿ ಪ್ರಜ್ವಲ ವಿಕಲಾಂಗ ಸಂಕ್ಷೇಮ ಸಂಘ ಅಸ್ತಿತ್ವಕ್ಕೆ ಬಂತು. ಆಗ ಆರಂಭಗೊಂಡ ಪಯಣ ಈಗ ಚಿಕ್ಕಬಳ್ಳಾಪುರದಲ್ಲಿ ಮುಂದುವರಿದಿದೆ' ಎಂದು ಅವರು ತಿಳಿಸಿದರು. 'ವೈಯಕ್ತಿಕ ಕಾರಣಗಳು ಮತ್ತು ಇನ್ನಿತರ ಸಮಸ್ಯೆಗಳಿಂದ ವಾರಂಗಲ್‌ ತೊರೆದು ಬೆಂಗಳೂರಿಗೆ ಬಂದ ನಾನು ಎಪಿಡಿ ಸಂಸ್ಥೆಯಲ್ಲಿ ಕಂಪ್ಯೂಟರ್‌ ಕಲಿತೆ. ಜೊತೆಗೆ ಕನ್ನಡವನ್ನೂ ಕಲಿತೆ. ಜೀವನದುದ್ದಕ್ಕೂ ಹಲವಾರು ಸಮಸ್ಯೆಗಳು ತಲೆದೋರಿದರೂ ನಾನು ದೃತಿಗೆಡಲಿಲ್ಲ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬಂದ ನಾನು 13 ಮಂದಿ ಸ್ನೇಹಿತರೊಂದಿಗೆ 2010ರ ಮಾರ್ಚ್‌ನಲ್ಲಿ ಕರ್ನಾಟಕ ಅಂಗವಿಕಲರ ಸಂಘಟನೆ ಆರಂಭಿಸಿದೆ. 13 ಮಂದಿ ಮಾತ್ರವಿದ್ದ ಈ ಸಂಘಟನೆಯಲ್ಲಿ ಈಗ 3000ಕ್ಕೂ ಹೆಚ್ಚು ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಅಂಗವಿಕಲರ ಬದುಕು ಮತ್ತು ಹಕ್ಕಿಗಾಗಿ ನಿರಂತರ ಹೋರಾಟ ಮುಂದುವರಿದಿದೆ' ಎಂದು ಉಷಾಕಿರಣ್ ತಿಳಿಸಿದರು. '); $('#div-gpt-ad-198406-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-198406'); }); googletag.cmd.push(function() { googletag.display('gpt-text-700x20-ad2-198406'); }); },300); var x1 = $('#node-198406 .field-name-body .field-items div.field-item > p'); if(x1 != null && x1.length != 0) { $('#node-198406 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-198406').addClass('inartprocessed'); } else $('#in-article-198406').hide(); } else { // Text ad googletag.cmd.push(function() { googletag.display('gpt-text-300x20-ad-198406'); }); googletag.cmd.push(function() { googletag.display('gpt-text-300x20-ad2-198406'); }); // Remove current Outbrain $('#dk-art-outbrain-198406').remove(); //ad before trending $('#mob_rhs1_198406').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-198406 .field-name-body .field-items div.field-item > p'); if(x1 != null && x1.length != 0) { $('#node-198406 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-198406').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-198406','#dk-art-outbrain-699459','#dk-art-outbrain-699447','#dk-art-outbrain-699430','#dk-art-outbrain-699399']; var obMobile = ['#mob-art-outbrain-198406','#mob-art-outbrain-699459','#mob-art-outbrain-699447','#mob-art-outbrain-699430','#mob-art-outbrain-699399']; var obMobile_below = ['#mob-art-outbrain-below-198406','#mob-art-outbrain-below-699459','#mob-art-outbrain-below-699447','#mob-art-outbrain-below-699430','#mob-art-outbrain-below-699399']; var in_art = ['#in-article-198406','#in-article-699459','#in-article-699447','#in-article-699430','#in-article-699399']; var twids = ['#twblock_198406','#twblock_699459','#twblock_699447','#twblock_699430','#twblock_699399']; var twdataids = ['#twdatablk_198406','#twdatablk_699459','#twdatablk_699447','#twdatablk_699430','#twdatablk_699399']; var obURLs = ['https://www.prajavani.net/article/ನಡೆಯೋಕೆ-ಆಗೊಲ್ಲ-ಆದರೆ-ಬದುಕಿನ-ನಡಿಗೆ-ನಿಂತಿಲ್ಲ','https://www.prajavani.net/district/chikkaballapur/build-a-bridge-over-the-pillars-699459.html','https://www.prajavani.net/district/chikkaballapur/fire-accident-assistance-for-victims-699447.html','https://www.prajavani.net/district/chikkaballapur/create-awareness-about-projects-699430.html','https://www.prajavani.net/district/chikkaballapur/kh-muniyappa-is-not-named-in-the-list-of-aspirants-says-v-muniyappa-699399.html']; var vuukleIds = ['#vuukle-comments-198406','#vuukle-comments-699459','#vuukle-comments-699447','#vuukle-comments-699430','#vuukle-comments-699399']; // var nids = [198406,699459,699447,699430,699399]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
2020/01/21 03:49:30
https://www.prajavani.net/article/%E0%B2%A8%E0%B2%A1%E0%B3%86%E0%B2%AF%E0%B3%8B%E0%B2%95%E0%B3%86-%E0%B2%86%E0%B2%97%E0%B3%8A%E0%B2%B2%E0%B3%8D%E0%B2%B2-%E0%B2%86%E0%B2%A6%E0%B2%B0%E0%B3%86-%E0%B2%AC%E0%B2%A6%E0%B3%81%E0%B2%95%E0%B2%BF%E0%B2%A8-%E0%B2%A8%E0%B2%A1%E0%B2%BF%E0%B2%97%E0%B3%86-%E0%B2%A8%E0%B2%BF%E0%B2%82%E0%B2%A4%E0%B2%BF%E0%B2%B2%E0%B3%8D%E0%B2%B2
mC4
ಬಿತ್ತನೆಯಿಂದ ಮಾರಾಟದವರೆಗೆ ರೈತರದೇ ಪಾರುಪತ್ಯ! | ಪ್ರಜಾವಾಣಿ ಬಿತ್ತನೆಯಿಂದ ಮಾರಾಟದವರೆಗೆ ರೈತರದೇ ಪಾರುಪತ್ಯ! ಸಿರಿಧಾನ್ಯ ಬೆಳೆಯಿರಿ' ಎಂದು ಕೃಷಿ ಸಚಿವರಾದಿಯಾಗಿ ವಿಜ್ಞಾನಿಗಳು, ಸಂಶೋಧಕರು ರೈತರಿಗೆ ರಂಗುರಂಗಿನ ವೇದಿಕೆಯಲ್ಲಿ ಕರೆ ನೀಡುತ್ತಿದ್ದ 'ಧಾರವಾಡ ಕೃಷಿ ಮೇಳ'ಕ್ಕೆ ಬರೀ ನಲವತ್ತು ಕಿಲೋ ಮೀಟರ್ ದೂರದ ಹಳ್ಳಿಗಳಲ್ಲಿ ಕೊರಲೆ ಕಟಾವು ನಡೆಯುತ್ತಿತ್ತು. ಕೊರಲೆಯ ಒಂದು ಬೀಜದಿಂದ ಮೊಳಕೆಯೊಡೆದ ಪೈರು ತೆನೆಗಳನ್ನು ಹೊತ್ತು ತೂಗಾಡುತ್ತಿತ್ತು. ಹನುಮನಹಳ್ಳಿಯ ಯಲ್ಲಪ್ಪ ರಾಮಜಿ ಎಣಿಸಿ ನೋಡಿದರು- ಒಂದು, ಎರಡು... ... ನೂರು... ನೂರೈವತ್ತು... ಇನ್ನೂರು... ಅಬ್ಬಾ! ಒಟ್ಟು ನೂರಾ ಎಂಬತ್ತೈದು ತೆನೆಗಳು!! ಇತ್ತ ಮತ್ತಿಘಟ್ಟಿಯ ಬಸನಗೌಡ ಪಾಟೀಲ ಹೊಲದಲ್ಲಿ ಬೆಳೆದ ಕೆಂಪು ನವಣೆಯನ್ನು ನೋಡುವುದೇ ಹಬ್ಬ! ಒಳ ಹೊಕ್ಕರೆ ಕಾಣದಷ್ಟು ಎತ್ತರದ ಪೈರು. ಸುತ್ತಲಿನ ಹೊಲಗಳ ರೈತರ ಕುತೂಹಲದ ಕೇಂದ್ರ ಬಿಂದುವಾಗಿರುವ ಇವರ ನವಣೆ ಬೆಳೆ, ಅಡಿಯುದ್ದದ ತೆನೆಗಳನ್ನೂ ಹೊತ್ತು ನಿಂತಿದೆ. ಗಂಗಾಧರ ಅಳಗವಾಡಿ ಅವರ ಹೊಲದಲ್ಲಿ ಬೆಳೆದಿರುವ ಊದಲು ಆ ರಸ್ತೆಯಲ್ಲಿ ಸಾಗುವವರನ್ನು ತಡೆದು ನಿಲ್ಲುವಂತೆ ಮಾಡುತ್ತಿದೆ. ಇನ್ನು ಬಸವರಾಜ ಹೊಲದ ಸಾಮೆಯು ತೆನೆಗಳ ಭಾರದಿಂದ ನೆಲಕ್ಕೊರಗಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ನಾಲ್ಕೈದು ಹಳ್ಳಿಗಳಲ್ಲಿ ಈಗ ಅರಳಿರುವ ಸಿರಿಧಾನ್ಯದ ಲೋಕ ಬಲು ವಿಶಿಷ್ಟ. ತೃಣಧಾನ್ಯಗಳೆಂದು ಮೂದಲಿಕೆಗೆ ಒಳಗಾಗಿದ್ದ ಧಾನ್ಯಗಳೆಲ್ಲ ಈಗ ತಮ್ಮ ಅಸ್ತಿತ್ವವನ್ನು ಸಾರುವಂತೆ ತೋರುತ್ತಿದೆ. ಹವಾಮಾನ ಬದಲಾವಣೆ ಬಿಕ್ಕಟ್ಟಿಗೆ ಉತ್ತರವೆಂದು ಸಾಬೀತಾಗಿರುವ ಸಿರಿಧಾನ್ಯ ಕೃಷಿಯತ್ತ ರೈತರನ್ನು ಪ್ರೇರೇಪಿಸುವ ಯತ್ನಗಳು ನಡೆಯುತ್ತಿವೆ. ಅದರ ಯಶಸ್ವಿ ಪ್ರಯೋಗ ನೋಡಬೇಕೆಂದರೆ ಇಲ್ಲಿಗೆ ಬರಬೇಕು. ನೂರಾರು ಎಕರೆ ವ್ಯಾಪ್ತಿಯಲ್ಲಿ ಬೆಳೆದಿರುವ ಸಿರಿಧಾನ್ಯಗಳು, ಬರ ಸಮನ್ವಯತೆಯ ಪಾಠ ಕಲಿಸುವಂತಿವೆ. ಒಂಬತ್ತು ಬಗೆಯ ಸಿರಿಧಾನ್ಯಗಳು ಒಂದೇ ಸುತ್ತಳತೆಯಲ್ಲಿ ಬೆಳೆದಿರುವುದು ಗೌಣವೇನಲ್ಲ; ಇಷ್ಟೊಂದು ವೈವಿಧ್ಯಮಯ ಸಿರಿಧಾನ್ಯಗಳು ಒಂದೇ ಕಡೆ ರಾಜ್ಯದ ಬೇರೆಲ್ಲೂ ಕಾಣಸಿಗಲಿಕ್ಕಿಲ್ಲ. ಬದಲಾವಣೆ ತಂದ ಬರಗು: ಹನುಮನಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಕೃಷಿ ಇಲಾಖೆಯ 'ಸಾವಯವ ಭಾಗ್ಯ' ಯೋಜನೆಯನ್ನು ಜಾರಿಗೊಳಿಸುವ ಹೊಣೆಯನ್ನು ಸಹಜ ಸಮೃದ್ಧ ಬಳಗವು ವಹಿಸಿಕೊಂಡಿತ್ತು. ಇಲ್ಲಿನ ನೂರು ಹೆಕ್ಟೇರ್ ಪ್ರದೇಶವನ್ನು ಸಾವಯವಕ್ಕೆ ಪರಿವರ್ತಿಸುವ ಜವಾಬ್ದಾರಿ ಬಳಗದ ಮೇಲಿತ್ತು. ಬರೀ ಸಾವಯವ ಒಂದೇ ಅಲ್ಲ; ದೇಸಿ ತಳಿಯತ್ತ ಪ್ರೇರೇಪಿಸುವುದೂ ಬಳಗದ ಆಶಯವಾಗಿತ್ತು. ಇದಕ್ಕೆ ಪೂರಕವಾಗಿ 79 ರೈತರನ್ನು ಒಳಗೊಂಡ 'ಸಂಜೀವಿನಿ ಸಾವಯವ ಕೃಷಿಕರ ಬಳಗ' ಸ್ಥಾಪನೆಯಾಯಿತು. ಸಾಮೆ, ನವಣೆ ಹಾಗೂ ಜೋಳ ಬಿಟ್ಟರೆ ಬೇರೆ ಕಿರುಧಾನ್ಯದ ಪರಿಚಯ ಇಲ್ಲಿನ ರೈತರಿಗೆ ಇರಲಿಲ್ಲ. ಸಾವಯವ ವಿಧಾನದ ಜತೆಗೆ ದೇಸಿ ತಳಿ ಜನಪ್ರಿಯಗೊಳಿಸಲು ಎರಡು ವರ್ಷಗಳ ಹಿಂದೆ ಮೊದಲು ಬರಗು ಸಿರಿಧಾನ್ಯವನ್ನು ಈ ಪ್ರದೇಶಕ್ಕೆ ಪರಿಚಯಿಸಲಾಯಿತು. 'ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ವಿಳಂಬವಾದರೂ ಅದು ಬೆಳೆದಿದ್ದು ನೋಡಿ ನಮಗೆ ಧೈರ್ಯ ಬಂತು. ಎರಡನೇ ವರ್ಷ ಹೆಚ್ಚು ಪ್ರದೇಶದಲ್ಲಿ ಬೆಳೆದೆ' ಎಂದು ನೆನಪಿಸಿಕೊಳ್ಳುವ ಯುವ ರೈತ ಈಶ್ವರಗೌಡ ಪಾಟೀಲ, ನೂರಾರು ಆಸಕ್ತ ಕೃಷಿಕರಿಗೆ ಬಿತ್ತನೆ ಬೀಜ ಒದಗಿಸಿ ಅದು ರಾಜ್ಯದಾದ್ಯಂತ ವ್ಯಾಪಿಸಲು ಕಾರಣರಾದರು. ಇದರ ಜತೆಗೆ ವೈವಿಧ್ಯ ತಾಕುಗಳಲ್ಲಿ ಹತ್ತಾರು ದೇಸಿ ತಳಿಯ ಊದಲು, ಕೊರಲೆ, ನವಣೆ, ರಾಗಿ ಬೆಳೆದು ನಿಂತವು. ಕಡಿಮೆ ಮಳೆಯಲ್ಲೂ ಸಿರಿಧಾನ್ಯಗಳು ಕೈಕೊಡದೇ ಇದ್ದುದು ರೈತರ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿತು. ಈ ವರ್ಷ ಮುಂಗಾರು ಹಂಗಾಮು ಶುರುವಾಗುತ್ತಲೇ, ಸಂಜೀವಿನಿ ಬಳಗವನ್ನು ಸುತ್ತಲಿನ ಹಳ್ಳಿಗಳ ರೈತರು ಸಂಪರ್ಕಿಸಲು ಶುರು ಮಾಡಿದರು. ಮಳೆಯ ವ್ಯತ್ಯಾಸದಲ್ಲೂ ಸಿರಿಧಾನ್ಯ ಬೆಳೆದಿದ್ದನ್ನು ಕಂಡಿದ್ದ ಹನುಮನಹಳ್ಳಿ, ಮತ್ತಿಘಟ್ಟ, ರಾಮಾಪುರ, ಬೆಳ್ಳಿಗಟ್ಟಿ, ಕುಂಕೂರ ಇತರ ಗ್ರಾಮಗಳ ರೈತರು ಬಳಗದ 'ಬೀಜ ಬ್ಯಾಂಕ್'ಗೆ ಭೇಟಿ ನೀಡಿ, ಅಗತ್ಯ ಪ್ರಮಾಣದ ಬಿತ್ತನೆ ಬೀಜ ಒಯ್ದು ಬಿತ್ತಿದರು. ಅಂದಹಾಗೆ, ಈ 'ಸಮುದಾಯ ಬೀಜ ಬ್ಯಾಂಕ್' ಕಾರ್ಯವೈಖರಿ ಒಂದಷ್ಟು ವಿಭಿನ್ನ. 'ಮಾರುಕಟ್ಟೆಯಲ್ಲಿ ಬಿತ್ತನೆ ಬೀಜಗಳು ಮಾರಾಟಕ್ಕೆ ಲಭ್ಯ. ಆದರೆ ನಾವು ರೈತರಿಗೆ ಬೀಜಗಳನ್ನು ಕೊಟ್ಟಾಗ, ಅವರು ಹಣ ಕೊಡಬೇಕಿಲ್ಲ; ಬದಲಾಗಿ ಬೆಳೆ ಕಟಾವಾದ ನಂತರ ಎರಡು ಪಟ್ಟು ಶುದ್ಧ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಾಪಸು ಕೊಡಬೇಕು. ಅದಕ್ಕೆ ಸಂಬಂಧಿಸಿದ ಒಪ್ಪಂದವನ್ನೂ ಮಾಡಿಕೊಂಡಿರುತ್ತೇವೆ' ಎನ್ನುತ್ತಾರೆ ಬ್ಯಾಂಕ್‌ನ ಸಂಯೋಜಕ ಫಕೀರೇಶ್ ಬಿ. ಕಾಗಿನೆಲೆ. ಹೀಗೆ ಈವರೆಗೆ ನೂರೈವತ್ತಕ್ಕೂ ಹೆಚ್ಚು ರೈತರು ಬ್ಯಾಂಕ್ ಮೂಲಕ ಬಿತ್ತನೆ ಬೀಜ ಪಡೆದಿದ್ದಾರಂತೆ. ಕೈಕೊಡದ ಧಾನ್ಯಗಳು: ಬರೀ ಬಿ.ಟಿ. ಹತ್ತಿ, ಸೋಯಾಬೀನ್, ಮೆಕ್ಕೆಜೋಳ ಬೆಳೆದು ಕೈಸುಟ್ಟುಕೊಳ್ಳುತ್ತಿದ್ದ ರೈತರ ಮೊಗದಲ್ಲಿ ಈ ಸಲ ನೆಮ್ಮದಿಯ ಮುಗುಳುನಗೆ ಕಾಣಿಸುತ್ತಿದೆ. ಮೂರು ವರ್ಷಗಳಿಂದ ಶೇಂಗಾ ಬಿತ್ತನೆ ಮಾಡಿ, ಕನಿಷ್ಠ ವ್ಯವಸಾಯದ ಖರ್ಚು ಕೂಡ ಗಿಟ್ಟದಂತೆ ನಷ್ಟ ಅನುಭವಿಸುತ್ತಿದ್ದ ಗಂಗಾಧರ ಅಳಗವಾಡಿ ಹೇಳುತ್ತಾರೆ: 'ಮೊದಲ ಬಾರಿಗೆ ನಾನು ಊದಲು ಬೆಳೆದಿದ್ದೇನೆ. ಇದರ ಬಗ್ಗೆ ಕೇಳಿದ್ದೆ, ಹೊರತು ಕೃಷಿ ವಿಧಾನ ಗೊತ್ತಿರಲಿಲ್ಲ. ಯಾವುದೋ ಭರವಸೆ ಮೇರೆಗೆ ಊದಲು ಹಾಗೂ ಸಾಮೆಯನ್ನು ತಲಾ ಒಂದು ಎಕರೆಯಲ್ಲಿ ಬಿತ್ತಿದೆ. ಸುತ್ತಲಿನ ಹೊಲಗಳಲ್ಲಿ ವಾಣಿಜ್ಯ ಬೆಳೆಗಳು ಮಳೆಕೊರತೆಯಿಂದ ಕೈಕೊಟ್ಟರೆ ಈ ಎರಡು ಸಿರಿಧಾನ್ಯಗಳು ಮಾತ್ರ ಕೈಬಿಡಲಿಲ್ಲ.' ಚೆನ್ನೈನಲ್ಲಿ ಜುಲೈ ತಿಂಗಳಲ್ಲಿ ನಡೆದಿದ್ದ ರಾಷ್ಟ್ರೀಯ ಬೀಜ ವೈವಿಧ್ಯ ಮೇಳದಿಂದ ತಂದಿದ್ದ ಆರು ತಳಿಯ ಸಾಮೆಯನ್ನು ಯಲ್ಲಪ್ಪ ರಾಮಜಿ ಬೆಳೆದಿದ್ದಾರೆ. ಅದರ ಜತೆಗೆ ಕೊರಲು, ಹಾಲುನವಣೆ ಕೂಡ ಇದೆ. ಬಿತ್ತಿದ ಬಳಿಕ ಹಲವು ದಿನಗಳ ಕಾಲ ಮಳೆ ಬರಲೇ ಇಲ್ಲ. ಇನ್ನೇನು ಎಲ್ಲ ಕೈಕೊಟ್ಟಿತು ಎಂದು ನಿರಾಶೆ ಮೂಡಿದ ಸಂದರ್ಭದಲ್ಲಿ ಮಳೆ ಬಂತು. ಅದಾದ ಬಳಿಕ ನಾಲ್ಕೈದು ಸಲ ಮಳೆ ಸುರಿಯಿತು. 'ಹತ್ತಿ, ಶೇಂಗಾ, ಮೆಕ್ಕೆಜೋಳಕ್ಕೆ ಇಷ್ಟು ಮಳೆ ಸಾಕಾಗುವುದೇ ಇಲ್ಲ. ಆದರೆ ಸಾಮೆ ಹಾಗೂ ಕೊರಲೆ ನೋಡಿದರೆ ದಂಗು ಬಡಿಸುವಂಥ ಬೆಳವಣಿಗೆ' ಎಂದು ಉದ್ಗರಿಸುತ್ತಾರೆ ರಾಮಜಿ. ಐದಾರು ಅಡಿ ಎತ್ತರ ಬೆಳೆಯುವ ಕೆಂಪು ನವಣೆ ತಳಿಯು ಒಳ್ಳೆಯ ಪ್ರಮಾಣದ ಮೇವು ಒದಗಿಸುತ್ತದೆ. ತಮ್ಮ ಹೊಲದಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿರುವ ಕೆಂಪು ನವಣೆಯನ್ನು ನೋಡುತ್ತ ಬಸನಗೌಡ ಹೇಳುತ್ತಾರೆ: 'ರಾಸಾಯನಿಕ ಹಾಕಿಲ್ಲ; ಕೀಟನಾಶಕ ಬಳಸಿಲ್ಲ. ಆದರೂ ನೋಡಿ ಹೇಗೆ ನನಗಿಂತ ಎತ್ತರ ಬೆಳೆದುನಿಂತಿದೆ!' 'ಇಡೀ ಕರ್ನಾಟಕ ಈ ವರ್ಷ ಬರಗಾಲಕ್ಕೆ ನಲುಗಿದೆ. ಉತ್ತರ ಕರ್ನಾಟಕದಲ್ಲಿ ಮುಂಗಾರು ಬಹುತೇಕ ಕೈಕೊಟ್ಟಿದೆ. ರೈತರು ಹಿಂಗಾರುಮಳೆಯನ್ನು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಆದರೆ ಹನುಮನಹಳ್ಳಿ ರೈತರಿಗೆ ಮುಂಗಾರಿನ ತುಂತುರು ಮಳೆಯಲ್ಲಿ ಬಂಪರ್ ಲಾಟರಿ ಗಿಟ್ಟಿಸಿದ ಅವಕಾಶ. ಹಲವಾರು ರೈತರು ಸಿರಿಧಾನ್ಯ ಕೃಷಿ ಅಪ್ಪಿಕೊಂಡು, ಬರ ಎದುರಿಸುವ ಸುಸ್ಥಿರ ಮಾದರಿಯೊಂದನ್ನು ಕಟ್ಟಿದ ಹೆಮ್ಮೆ ನಮ್ಮದು' ಎಂದು 'ಸಹಜ ಸಮೃದ್ಧ' ಬಳಗದ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಸಂತಸದಿಂದ ಹೇಳುತ್ತಾರೆ. ಮಾರುಕಟ್ಟೆ-ಸಂಸ್ಕರಣೆ ಸವಾಲು: ಬೆಳೆಗೆ ಮಾರುಕಟ್ಟೆ ಕಂಡು ಕೊಳ್ಳುವುದೇ ಒಂದು ಸವಾಲು. ಇದನ್ನು ಗಮನಿಸಿದ 'ಸಹಜ ಸಮೃದ್ಧ', ರೈತರೇ ಇರುವ 'ಸಂಜೀವಿನಿ ಸಾವಯವ ಕೃಷಿಕರ ಬಳಗ'ವನ್ನು ಸ್ಥಾಪಿಸಿ, ಅದರ ಮೂಲಕ ವಹಿವಾಟು ನಡೆಯುವಂತೆ ಮಾಡಿದೆ. ಈ ಗುಂಪು ಸಿರಿಧಾನ್ಯ ಮೇಳಗಳಲ್ಲಿ ಪಾಲ್ಗೊಳ್ಳುತ್ತದೆ. ಕಳೆದ ವರ್ಷದಿಂದ ಸಿರಿಧಾನ್ಯ ಖರೀದಿಸಿ, ಸಂಸ್ಕರಿಸಿ ಮಾರುಕಟ್ಟೆಗೆ ರವಾನಿಸುತ್ತಿರುವ ಆಂಧ್ರದ ಯುವ ಉದ್ಯಮಿ ದಿನೇಶ್ ಕದಿರಿ, 'ಇಲ್ಲಿನ ಧಾನ್ಯಗಳ ಗುಣಮಟ್ಟ ತಮಿಳುನಾಡು ಅಥವಾ ಆಂಧ್ರಕ್ಕಿಂತ ಚೆನ್ನಾಗಿದೆ. ಇದನ್ನೇ ಹೆಚ್ಚು ಖರೀದಿಸಿ, ರೈತ ಗುಂಪನ್ನು ಗಟ್ಟಿಗೊಳಿಸಲು ಯತ್ನಿಸುತ್ತಿದ್ದೇವೆ' ಎನ್ನುತ್ತಾರೆ. ಹನುಮನಹಳ್ಳಿಗೆ ಸಮೀಪದ ತಿಮ್ಮಾಪುರದಲ್ಲಿರುವ ಹಿಟ್ಟಿನ ಗಿರಣಿ ಮಾಲೀಕ ಮಂಜುನಾಥ್ ಕೂಡ ಸಿರಿಧಾನ್ಯಗಳ ಸಂಸ್ಕರಣೆಗೆ ಯಂತ್ರವನ್ನು ಒಗ್ಗಿಸಿಕೊಂಡು ಏನೇನೋ ತಂತ್ರೋಪಾಯ ಮಾಡುತ್ತ ರೈತರಿಗೆ ನೆರವಾಗುತ್ತಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಕಳೆದ ವರ್ಷ 50 ಟನ್ ಸಿರಿಧಾನ್ಯ ಇಲ್ಲಿಂದ ರವಾನೆಯಾಗಿವೆ. ಈ ಸಲವಂತೂ ಇದರ ಪ್ರಮಾಣ ಇನ್ನೂರು ಟನ್ ದಾಟುವ ನಿರೀಕ್ಷೆ ಇದೆ. ಒಂದೇ ಕಡೆಗೆ ಎಲ್ಲ ಬಗೆಯ ಸಿರಿಧಾನ್ಯಗಳನ್ನು ನೋಡುವ ಅವಕಾಶ ಅಪರೂಪ. ಅಂಥ ನೋಟವನ್ನು ಹನುಮನಹಳ್ಳಿ ಹಾಗೂ ಇತರ ಗ್ರಾಮಗಳು ಕೊಡುತ್ತಿವೆ. ಪ್ರಸ್ತುತ ಊದಲು, ಕೊರಲೆ, ಸಾಮೆ, ನವಣೆ, ಜೋಳ, ರಾಗಿ, ಸಜ್ಜೆ ಹೊಲಗಳಲ್ಲಿವೆ. ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಲು ಹಾರಕ ಹಾಗೂ ಬರಗು 'ಬೀಜ ಬ್ಯಾಂಕ್'ನಲ್ಲಿ ಇವೆ. ಕಚಡಾ ತಿನಿಸುಗಳಿಂದಾಗಿ (ಜಂಕ್ ಫುಡ್) ಕಾಯಿಲೆಗಳ ಗೂಡಾದ ದೇಹಕ್ಕೆ ಸಿರಿಧಾನ್ಯಗಳ ಸೇವನೆಯೇ ಚಿಕಿತ್ಸೆ ಎಂಬುದು ಜನರಿಗೆ ನಿಧಾನವಾಗಿ ಅರಿವಿಗೆ ಬರುತ್ತಿದೆ. ಇದುವೇ ಸಿರಿಧಾನ್ಯಗಳ ಬೆಲೆ ನಾಲ್ಕೈದು ಪಟ್ಟು ಏರಿಕೆಯಾಗಲು ಕಾರಣವಾಗಿದೆ. ಹಾಗೆಂದು ರೈತರಿಗೆ ಹೆಚ್ಚು ಲಾಭವೇನೂ ಸಿಗುತ್ತಿಲ್ಲ. ಮಧ್ಯವರ್ತಿಗಳೇ ಎಲ್ಲವನ್ನೂ ನುಂಗುವ ಪರಿಪಾಠ ಇದೆ. ಅದೆಲ್ಲ ಒಂದೆಡೆ ಇಟ್ಟು, ಹೊಸ ಸಾಧ್ಯತೆಯತ್ತ ನೋಡಲು ಅವಕಾಶ ಇಲ್ಲಿದೆ. ಈ ವರ್ಷ ನಾಲ್ಕೈದು ಹಳ್ಳಿಗಳ ಸುಮಾರು ಮುನ್ನೂರಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿರುವ ತರಹೇವಾರಿ ಸಿರಿಧಾನ್ಯಗಳು ಮುಂದಿನ ದಿನಗಳಲ್ಲಿ ಕೃಷಿಕರಿಗೆ ಹೊಸಬೆಳಕು ತೋರುತ್ತಿವೆ. ಕೃಷಿ ಬಿಕ್ಕಟ್ಟು ಹೆಚ್ಚುತ್ತಿರುವ ಈಗಿನ ದಿನಗಳಲ್ಲಿ ಹನುಮನಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ನಡೆದ ಪ್ರಯೋಗ ಸುಸ್ಥಿರ ಹಳ್ಳಿ ಕಟ್ಟಲು ಉತ್ತಮ ಮಾದರಿಯಂತೂ ಹೌದು. ಇದನ್ನು ಗಮನಿಸಿಯಾದರೂ, 'ಸಿರಿಧಾನ್ಯ ಬೆಳೆಯಿರಿ' ಎಂಬ ಕ್ಲೀಷೆಯ ಉಪದೇಶ ಕೊಡುವುದನ್ನು ಬಿಟ್ಟು, ಕೃಷಿ ಅಧಿಕಾರಿಗಳು- ವಿಜ್ಞಾನಿಗಳು ಈ ಹಳ್ಳಿಗಳಿಗೆ ಭೇಟಿ ನೀಡಬೇಕು. ರೈತರ ಜತೆ ಚರ್ಚಿಸಿದಾಗ ಮಾತ್ರ ಅವರಿಗೆ ಸಿರಿಧಾನ್ಯ ಕೃಷಿಯ ಹಲವು ಆಯಾಮಗಳು ಅರ್ಥವಾದಾವು. ನಾಗಮ್ಮ ಚಡಪಡಿಕೆ ಸೋಯಾಬೀನ್ ಮತ್ತು ಮೆಕ್ಕೆಜೋಳ ಬೆಳೆಯುತ್ತಿದ್ದ ನಾಗಮ್ಮ ವಿ. ಗವ್ವಣ್ಣವರ್ ಅವರದು ಹನುಮನಹಳ್ಳಿ ಗ್ರಾಮದ ಎದುರಿನ ಹೊಲ. ಯಾವುದಕ್ಕೂ ಇರಲಿ ಎಂದು ಕಾಲು ಎಕರೆ ನವಣೆ ಬಿತ್ತನೆ ಮಾಡಿದರು. 'ಇದು ಹೀಂಗ ಬೆಳೀತದ ಅಂತ ಗೊತ್ತಿದ್ರ ಎಲ್ಲ ಕಡೀಗೂ ಇದನ್ನ ಬಿತ್ನಿ ಬಿಡ್ತಿದ್ದೆ' ಎಂದು ಅವರು ಈಗ ಚಡಪಡಿಸುತ್ತಿದ್ದಾರೆ! ರಾಮಾಪುರದ ಬಸವಣ್ಣೆಪ್ಪ ಬೆನಕಣ್ಣವರ್ ಮೂರು ಎಕರೆಯಲ್ಲಿ ಸಾಮೆ, ಕೊರಲೆ ಹಾಗೂ ಊದಲು ಬೆಳೆದಿದ್ದು, ಮಳೆಯಾಶ್ರಿತ ಜಮೀನಿಗೆ ಸಿರಿಧಾನ್ಯಗಳೇ ವರದಾನ ಎಂಬ ಮಾತನ್ನು ಒಪ್ಪುತ್ತಾರೆ. ಬೆಂಡಿಗೇರಿಯ ವಿರೂಪಾಕ್ಷಗೌಡ ಪಾಟೀಲ, ತೀರ್ಥ ಗ್ರಾಮದ ಶಿವಪ್ಪ ಮುಂದಿನಮನಿ ಹಾಗೂ ಬೆಳ್ಳಿಗಟ್ಟಿಯ ಪರಶುರಾಮ ವಡ್ಡರ್ ಕೂಡ ಸಿರಿಧಾನ್ಯದ ಸವಿಯನ್ನು ಉಂಡವರೇ ಆಗಿದ್ದಾರೆ. ಪ್ರಯೋಗಗಳ ತಾಣ: ಬರೀ ಬೆಳೆಗೆ ಸೀಮಿತವಾಗದ ಈ ಹಳ್ಳಿಗಳ ರೈತರು, ವಿಶಿಷ್ಟ ಪ್ರಯೋಗಗಳ ಮೂಲಕವೂ ಕ್ರಿಯಾಶೀಲರಾಗಿದ್ದಾರೆ. ತೊಗರಿಯಲ್ಲಿ ಗುಳಿ ಪದ್ಧತಿಯನ್ನು ಈಶ್ವರಗೌಡ ಅಳವಡಿಸಿ ಕಳೆದ ವರ್ಷ ಯಶಸ್ಸು ಕಂಡಿದ್ದರು. ಎರಡು ಸಸಿಗಳ ಮಧ್ಯೆ ಅಂತರ ಬಿಟ್ಟು, ಕುಡಿ ಚಿವುಟುವ ಮೂಲಕ ಅಧಿಕ ಇಳುವರಿ ಪಡೆಯುವುದು ಈ ವಿಧಾನದಲ್ಲಿದೆ. ಈ ಸಲ ಅದನ್ನು ಇನ್ನಷ್ಟು ರೈತರು ಅನುಸರಿಸುತ್ತಿದ್ದಾರೆ. ಅದೇ ರೀತಿ ಗುಳಿ ರಾಗಿ ಪದ್ಧತಿಯನ್ನು ಅನೇಕ ರೈತರು ಅಳವಡಿಸಿಕೊಂಡಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ದೇಸಿ ಹತ್ತಿ, ಹಿಂಗಾರು ಜೋಳ ಹಾಗೂ ಹಾರಕ- ಬರಗು ಬೆಳೆಯಲು ಸಿದ್ಧತೆ ನಡೆಸಿದ್ದಾರೆ.
2018/02/18 20:11:34
http://m.prajavani.net/article/2017_10_03/523451
mC4
ರಾಜ್ಯದಲ್ಲಿ ಉಂಟಾದ ಅತಿವೃಷ್ಠಿಗೆ ಹೆಚ್ಚಿನ ಪರಿಹಾರ: ಯಡಿಯೂರಪ್ಪ | KANNADIGA WORLD Home ಕನ್ನಡ ವಾರ್ತೆಗಳು ಕರ್ನಾಟಕ ರಾಜ್ಯದಲ್ಲಿ ಉಂಟಾದ ಅತಿವೃಷ್ಠಿಗೆ ಹೆಚ್ಚಿನ ಪರಿಹಾರ: ಯಡಿಯೂರಪ್ಪ ಬೆಂಗಳೂರು: ರಾಜ್ಯದಲ್ಲಿ ಉಂಟಾದ ಅತಿವೃಷ್ಠಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು. ರೈತರ ಮತ್ತು ಜನಸಾಮಾನ್ಯರ ರಕ್ಷಣೆಗೆ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶುಕ್ರವಾರ ವಿಧಾನ ಸಭೆಯಲ್ಲಿ ಪ್ರಕಟಿಸಿದ್ದಾರೆ. ಅತಿವೃಷ್ಠಿ ಮತ್ತು ಅನಾವೃಷ್ಠಿ ಕುರಿತಂತೆ ಸಾರ್ವಜನಿಕ ಮಹತ್ವದ ವಿಷಯ ಕುರಿತು ನೆಡೆದ ಚೆರ್ಚೆಗೆ ಉತ್ತರಿಸಿದ ಸಿಎಂ, ರೈತರು ಹಾಗೂ ಜನರ ಹಿತ ಕಾಪಾಡಲು ಸರ್ಕಾರ ಮುಂದಾಗಿದ್ದು, ವಾಸ ಮಾಡಲು ಆಗದೆ ಇರುವ ಎ ಮತ್ತು ಬಿ ವರ್ಗದ 42,893 ಮನೆಗಳಿಗೆ ತಲಾ 5 ಲಕ್ಷ ರೂಪಾಯಿಯಂತೆ ಪರಿಹಾರ ನೀಡಲಾಗುವುದು. ಸಿ ವರ್ಗದ 77,513 ಮನೆಗಳಿಗೆ 25 ಸಾವಿರ ರೂ. ಬದಲು 50 ಸಾವಿರ ರೂ. ಪರಿಹಾರ ನೀಡುವುದಾಗಿ ಅವರು ಪ್ರಕಟಿಸಿದರು. ಬೆಳೆಹಾನಿಗೆ ಖುಷ್ಕಿ ಪ್ರತಿ ಹಕ್ಟೇರಿಗೆ 6800 ರೂ. ಜೊತೆಗೆ 10 ಸಾವಿರ ರೂ. ಸೇರಿ 16800 ರೂ. ನೀಡಲಾಗುವುದು. ನೀರಾವರಿ ಪ್ರದೇಶಕ್ಕೆ 13500ರೂ ಜೊತಗೆ ಹೆಚ್ಚುವರಿ 10 ಸಾವಿರ ರೂ ಹಾಗೂ ಶಾಶ್ವತ ನೀರಾವರಿಯ ಯೋಜನೆಗೆ ಪ್ರತಿ ಹೆಕ್ಟೇರ್ ಗೆ 18 ಸಾವಿರ ರೂ ಜೊತೆಗೆ ಹೆಚ್ಚುವರಿಯಾಗಿ 10 ಸಾವಿರ ರೂ ನೀಡಲಾಗುವುದು ಎಂದರು. ರೇಷ್ಮೆ ಬೆಳೆ ಹಾಗೂ ಅಡಿಕೆ ಬೆಳೆ ಹಾನಿಗೂ ಪರಿಹಾರವನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಅವರು ವಿವರಣೆ ನೀಡಿದರು. ಇದುವರೆಗೂ ನೆರೆ ಸಂತ್ರಸ್ಥರಿಗೆ 2950 ಕೋಟಿರೂಪಾಯಿ ಬಿಡುಗಡೆ ಮಾಡಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ಅನುಕೂಲ ಕಲ್ಪಿಸಲಾಗುವುದು ಎಂದರು. ಮಳೆಯಿಂದಾಗಿ ಅಂಗಡಿ ಮುಗ್ಗಟ್ಟುಗಳ ಹಾನಿಗೆ ತಲಾ 25 ಸಾವಿರ ರೂ ಹಾಗೂ ನೇಕಾರರ ಕೈ ಮಗ್ಗಗಳ ಹಾನಿಗೂ 25 ಸಾವಿರ ರೂ ಪರಿಹಾರ ನೀಡುವುದಾಗಿ ತಿಳಿಸಿದರು. ರಾಜ್ಯದಲ್ಲಿ ಇರುವ ಆರ್ಥಿಕ ಇತಿಮಿತಿಗಳ ಒಳಗೆ ಮಳೆ ಬಂದು ಮೂರು ದಿನಗಳಲ್ಲಿಯೇ 2,33,633 ಜನರಿಗೆ ತಲಾ 10 ಸಾವಿರ ರೂ ನಂತೆ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು. ರಾಜ್ಯದಲ್ಲಿ ಅಪಾರ ಪ್ರಮಾಣದ ಮಳೆಯಿಂದಾಗಿ ರಸ್ತೆ ಹಾನಿಯಾಗಿದ್ದು, ದುರಸ್ತಿಗೆ 8 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ 500 ಕೋಟಿರೂ ಹಣವನ್ನು ತುರ್ತು ಕಾಮಗಾರಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.
2021/05/12 11:57:58
https://www.kannadigaworld.com/kannada/karnataka-kn/401049.html
mC4
ಅವಕಾಶ ಅಪಾರ : ಒಂದೆರಡು ಮಾತು – ಕಣಜ ಅವಕಾಶ ಅಪಾರ : ಒಂದೆರಡು ಮಾತು Home/ವಿಜ್ಞಾನ/ಮಾಹಿತಿ ತಂತ್ರಜ್ಞಾನ/ಅವಕಾಶ ಅಪಾರ : ಒಂದೆರಡು ಮಾತು ಪ್ರಪಂಚದ ಭೂಪಟದಲ್ಲಿ ಭಾರತಕ್ಕೊಂದು ವಿಶಿಷ್ಟ ಸ್ಥಾನಮಾನ ತಂದುಕೊಟ್ಟದ್ದು ಮಾಹಿತಿ ತಂತ್ರಜ್ಞಾನ. ಕಳೆದ ಕೆಲ ವರ್ಷಗಳಲ್ಲಿ ಈ ಕ್ಷೇತ್ರ ಬೆಳೆದಿರುವ ವೇಗ ಅಗಾಧವಾದದ್ದು. ಈ ಬೆಳವಣಿಗೆಯ ಜೊತೆಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಉದ್ಯೋಗಾವಕಾಶಗಳೂ ಹೆಚ್ಚುತ್ತಿವೆ. ಬಿಸಿನೆಸ್ ಇಂಟೆಲಿಜೆನ್ಸ್, ಅನಿಮೇಷನ್, ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್, ಗೇಮಿಂಗ್, ಟೆಕ್ನಿಕಲ್ ರೈಟಿಂಗ್ ಮುಂತಾದ ಅನೇಕ ಹೊಸ ಅವಕಾಶಗಳು ಐಟಿ ಕ್ಷೇತ್ರದಲ್ಲಿ ಸೃಷ್ಟಿಯಾಗಿವೆ. ಇಂತಹ ಅವಕಾಶಗಳನ್ನು ಕನ್ನಡದ ಓದುಗರಿಗೆ ಪರಿಚಯಿಸಲು ನಾನು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಈ ಪುಸ್ತಕ. ಈ ಅಂಕಣದ ಹುಟ್ಟಿಗೆ ಕಾರಣಕರ್ತರಾದ ಗೆಳೆಯ ಶ್ರೀ ವಿನೋದ್ ಕುಮಾರ್ ನಾಯ್ಕ್, ಈ ಅಂಕಣದ ಮೂಲಕ ಓದುಗರನ್ನು ತಲುಪಲು ಅವಕಾಶ ಕೊಟ್ಟ ವಿಜಯ ಕರ್ನಾಟಕ ಪತ್ರಿಕೆ, ಅಂಕಣವನ್ನು ಓದಿ ಮೆಚ್ಚಿಕೊಂಡು ಬೆನ್ನುತಟ್ಟಿದ ಓದುಗರು, ಈ ಪುಸ್ತಕವನ್ನು ಪ್ರಕಟಿಸು ತ್ತಿರುವ ಭಾರತೀ ಪ್ರಕಾಶನದ ಶ್ರೀ ಬಿ. ಎನ್. ಶ್ರೀನಿವಾಸ್, ಮುನ್ನುಡಿ ಬರೆದುಕೊಟ್ಟ ಡಾ. ಯು. ಬಿ. ಪವನಜ, ಆಕರ್ಷಕ ಮುಖಪುಟ ರಚಿಸಿದ ಅಪಾರ – ಇವರೆಲ್ಲರಿಗೂ ನನ್ನ ಕೃತಜ್ಞತೆಗಳು.
2021/12/09 08:54:59
https://kanaja.karnataka.gov.in/%E0%B2%85%E0%B2%B5%E0%B2%95%E0%B2%BE%E0%B2%B6-%E0%B2%85%E0%B2%AA%E0%B2%BE%E0%B2%B0-%E0%B2%92%E0%B2%82%E0%B2%A6%E0%B3%86%E0%B2%B0%E0%B2%A1%E0%B3%81-%E0%B2%AE%E0%B2%BE%E0%B2%A4%E0%B3%81/
mC4
ಶಾಶ್ವತ ಕುಡಿಯುವ ನೀರು ಜಾರಿ | Prajavani ಶಾಶ್ವತ ಕುಡಿಯುವ ನೀರು ಜಾರಿ Published: 27 ಫೆಬ್ರವರಿ 2011, 00:25 IST Updated: 27 ಫೆಬ್ರವರಿ 2011, 00:25 IST ಬೆಂಗಳೂರು: ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಬೆಂ. ಗ್ರಾಮಾಂತರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಯೋಜನೆಯನ್ನು ಜಾರಿಗೊಳಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು. ನಗರದಲ್ಲಿ ಶನಿವಾರ ನಡೆದ ಚುನಾವಣೆ ನಂತರದ ಪ್ರಥಮ ಸರ್ವಸದಸ್ಯರ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಕೃಷ್ಣಪ್ಪ ಅವರು ಮಾತನಾಡಿ,'ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವುದನ್ನು ನಿರ್ಬಂಧಿಸಿರುವುದರಿಂದ ನೀರಿನ ಅಭಾವ ಹೆಚ್ಚಿದೆ. ಆದರೆ ಅಂತರ್ಜಲದ ಬಳಕೆ ಕಡಿಮೆಯಾಗಿಲ್ಲ. ಇದರಿಂದಾಗಿ ಅಸ್ತಿತ್ವದಲ್ಲಿರುವ ಬೋರ್‌ವೆಲ್‌ಗಳಲ್ಲಿ ನೀರು ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೊಳವೆ ಬಾವಿ ಕೊರೆಯುವುದರ ಮೇಲಿನ ನಿರ್ಬಂಧವನ್ನು ಕೂಡಲೇ ತೆರವುಗೊಳಿಸಬೇಕು' ಎಂದು ಆಗ್ರಹಿಸಿದರು. ಇದಕ್ಕೆ ಬೆಂಬಲ ಸೂಚಿಸಿದ ಬಿಜೆಪಿಯ ರಾಜಣ್ಣ ಹಾಗೂ ನಾರಾಯಣ ಸ್ವಾಮಿ 'ಕುಡಿಯುವ ನೀರಿನ ಸಮಸ್ಯೆ ಬಹು ಹಿಂದಿನಿಂದಲೂ ಜಿಲ್ಲೆಯನ್ನು ಕಾಡುತ್ತಿದೆ. ಅಂತರ್ಜಲ ವೃದ್ಧಿಗಾಗಿ ಕೇಂದ್ರದಿಂದ ಸಾಕಷ್ಟು ಪ್ರಮಾಣದಲ್ಲಿ ಅನುದಾನ ದೊರೆಯುತ್ತಿದೆ.ಆದರೂ ಬೋರ್‌ವೆಲ್‌ಗಳ ಮೇಲಿನ ವಿಪರೀತ ಅವಲಂಬನೆಯಿಂದಾಗಿ ನೀರಿನ ಕೊರತೆ ನೀಗುವುದು ಸಾಧ್ಯವಾಗುತ್ತಿಲ್ಲ' ಎಂದು ಹೇಳಿದರು. 'ಜಿಲ್ಲೆಯಲ್ಲಿ 128 ಬೋರ್‌ವೆಲ್‌ಗಳನ್ನು ಕೊರೆಯಲಾಗಿದ್ದರೂ ಅಧಿಕಾರಿಗಳು ಅವುಗಳಿಗೆ ಪಂಪ್‌ಸೆಟ್ ಅಳವಡಿಸದೇ ಇರುವುದರಿಂದ ನೀರಿನ ಸಮರ್ಪಕ ಬಳಕೆಯಾಗಿಲ್ಲ. ಒಂದು ವರ್ಷ ಕೊಳವೆ ಬಾವಿಗಳಿಗೆ ಪಂಪ್‌ಸೆಟ್ ಅಳವಡಿಸದೇ ಇರುವುದರಿಂದ ಅವುಗಳಲ್ಲಿ ನೀರು ಉಳಿದಿದೆಯೇ ಎಂಬುದೂ ಖಾತ್ರಿಯಾಗಿಲ್ಲ. ಇನ್ನು ರೂ 624.89 ಲಕ್ಷಗಳನ್ನು ಅನುದಾನವಾಗಿ ನೀಡಿದರೆ ಅದರ ಸದ್ಭಳಕೆಯಾಗುತ್ತದೆಯೇ' ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಸದಸ್ಯ ಹನುಮಂತೇಗೌಡ ಮಾತನಾಡಿ 'ಎಲ್ಲಿ ತುರ್ತು ಅವಶ್ಯಕತೆ ಇದೆಯೋ ಅಲ್ಲಿ ಬೋರ್‌ವೆಲ್ ಕೊರೆಯಬೇಕಿದೆ. ಅಲ್ಲದೇ ಈ ಬಗ್ಗೆ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕಿರುವ ಉದ್ದೇಶದಿಂದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕಿದೆ' ಎಂದು ಸೂಚಿಸಿದರು. ಗುಣಮಟ್ಟ: ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಅಂಗನವಾಡಿ ಕೇಂದ್ರಗಳ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿರುವ ಬಗ್ಗೆ ಜೆಡಿಎಸ್ ಸದಸ್ಯ ಎಂ.ಎನ್.ರಾಂ ಆಕ್ಷೇಪಿಸಿದರು. 'ನಿರ್ಮಿತಿ ಕೇಂದ್ರಗಳು ಸರಿಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕೆ ತುಮಕೂರು ಜಿಲ್ಲೆಯಲ್ಲಿ ಅವುಗಳನ್ನು ನಿರ್ಬಂಧಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ನಿರ್ಮಿತಿ ಕೇಂದ್ರಗಳಿಗೆ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೊಡುವುದರಲ್ಲಿ ಅರ್ಥವಿಲ್ಲ' ಎಂದು ಹೇಳಿದರು. ಜಿಲ್ಲಾ ಪಂಚಯ್ತಿ ವ್ಯಾಪ್ತಿಯಲ್ಲಿಯೇ ಎಂಜಿನಿಯರಿಂಗ್ ವಿಭಾಗ ಇರುವುದರಿಂದ ನಿರ್ಮಿತಿ ಕೇಂದ್ರಕ್ಕೆ ಹಣ ವಿನಿಯೋಗಿಸುವ ಅವಶ್ಯಕತೆ ಇದೆಯೇ ಎಂದು ಸದಸ್ಯರು ಪ್ರಶ್ನಿಸಿದರು. ಆದರೆ ಕಟ್ಟಡ ನಿರ್ಮಾಣವಾಗದಿದ್ದರೆ ಹಣ ಸರ್ಕಾರಕ್ಕೆ ಮರಳುವ ಸಾಧ್ಯತೆ ಇರುವುದರಿಂದ ನಿರ್ಮಿತಿ ಕೇಂದ್ರಗಳ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಲು ನಿರ್ಧರಿಸಲಾಯಿತು. ನೂತನ ಶಾಲಾ ಕಟ್ಟಡಗಳನ್ನು ನಿರ್ಮಿಸುವಾಗ ವರ್ಟಿಫೈಡ್ ಕಲ್ಲುಗಳನ್ನು ನೆಲಗಳಿಗೆ ಹಾಸಬಾರದು. ಅವು ಸೂಕ್ಷ್ಮವಾಗಿರುವುದರಿಂದ ಬೇಗನೆ ಹಾಳಾಗುತ್ತವೆ. ಅಲ್ಲದೇ ಮಕ್ಕಳು ಜಾರಿ ಬೀಳುವ ಸಾಧ್ಯತೆ ಇರುತ್ತದೆ. ಬದಲಿಗೆ ಕಡಪ ಕಲ್ಲು ಅಥವಾ ರೆಡ್ ಆಕ್ಸೈಡ್ ಲೇಪಿತ ನೆಲಹಾಸನ್ನು ಬಳಸುವಂತೆ ಸದಸ್ಯರು ಸೂಚಿಸಿದರು. ತಾಲೂಕು ಮಟ್ಟದ ಆಸ್ಪತ್ರೆಗಳಿಗೆ ಕ್ಷಕಿರಣ ಫಿಲಂಗಳ ಖರೀದಿಸುವಾಗ ಟೆಂಡರ್ ಪ್ರಕ್ರಿಯೆ ಅನುಸರಿಸಿ ಪಾರದರ್ಶಕತೆ ಕಾಯ್ದಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. ಚಿತ್ರೀಕರಣ ಬೇಡ: 'ಜೋಗಯ್ಯ' ಚಿತ್ರದ ಚಿತ್ರೀಕರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಭಾಂಗಣವನ್ನು ಬಾಡಿಗೆಗೆ ನೀಡುವ ಕುರಿತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿಂದೆ ಸಭಾಂಗಣವನ್ನು ಬಾಡಿಗೆಗೆ ಪಡೆದವರು ಅನೇಕ ಬಾರಿ ಇಲ್ಲಿನ ಕೆಲವು ಮೂಲಸೌಕರ್ಯ ವ್ಯವಸ್ಥೆಯನ್ನು ಹಾಳುಗೆಡವಿದ್ದಾರೆ. ಅಲ್ಲದೇ ಬಾಡಿಗೆ ಹಣದಿಂದ ಜಿಲ್ಲಾ ಪಂಚಾಯ್ತಿ ನಡೆಯಬೇಕಾದ ಅವಶ್ಯಕತೆಯಿಲ್ಲದಿರುವುದರಿಂದ ಇನ್ನು ಮುಂದೆ ಬಾಡಿಗೆ ನೀಡುವ ಪ್ರಸ್ತಾವವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಶಾಂತಮ್ಮ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ.ಸಿ. ಚಂದ್ರಶೇಖರ್ ಉಪಸ್ಥಿತರಿದ್ದರು. ಮೈಕ್ ಸಮಸ್ಯೆಗೆ ಕಿಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೂಕ್ತ ಮೈಕ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪದೇ ಪದೇ ಮೈಕ್ ದುರಸ್ತಿಗೆ ಒತ್ತಾಯಿಸಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹವಾ ನಿಯಂತ್ರಣ ವ್ಯವಸ್ಥೆ ಹಾಗೂ ಮೈಕ್ ದುರಸ್ತಿಗಾಗಿ ರೂ 20 ಲಕ್ಷ ಬಿಡುಗಡೆ ಮಾಡಿಕೊಂಡ ಅಧಿಕಾರಿಗಳು ಮೈಕ್ ದುರಸ್ತಿ ಕಾರ್ಯಸಮರ್ಪಕವಾಗಿ ನಿರ್ವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಅನೇಕ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರೂ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರು.
2018/12/11 03:21:26
https://www.prajavani.net/article/%E0%B2%B6%E0%B2%BE%E0%B2%B6%E0%B3%8D%E0%B2%B5%E0%B2%A4-%E0%B2%95%E0%B3%81%E0%B2%A1%E0%B2%BF%E0%B2%AF%E0%B3%81%E0%B2%B5-%E0%B2%A8%E0%B3%80%E0%B2%B0%E0%B3%81-%E0%B2%9C%E0%B2%BE%E0%B2%B0%E0%B2%BF
mC4
ಲೈಕೋಪಿನ್ ಜೀವಸತ್ವದಿಂದ ಹಾಲು ಹೆಚ್ಚಳ | Prajavani ಟೊಮೆಟೊದಲ್ಲಿರುವ ರಾಸಾಯನಿಕ: ಚಿನ್ಮಯ ವಿದ್ಯಾಲಯ ವಿದ್ಯಾರ್ಥಿಗಳ ಹೇಳಿಕೆ Published: 13 ಡಿಸೆಂಬರ್ 2018, 18:44 IST Updated: 13 ಡಿಸೆಂಬರ್ 2018, 18:44 IST ಕೋಲಾರ: 'ಟೊಮೆಟೊ ಹಣ್ಣಿನಲ್ಲಿರುವ ಲೈಕೋಪಿನ್ ಜೀವಸತ್ವವನ್ನು ಪಶು ಆಹಾರದ ರೂಪದಲ್ಲಿ ಜಾನುವಾರುಗಳಿಗೆ ನೀಡಿದರೆ ಹಾಲಿನ ಉತ್ಪಾದನೆ ಹೆಚ್ಚುತ್ತದೆ' ಎಂದು ನಗರದ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳಾದ ಆರ್.ಶ್ರೀಶ ಮತ್ತು ಅಗಸ್ತ್ಯ ಆರ್.ಕುಮಾರ್ ತಿಳಿಸಿದರು. ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಜಿಲ್ಲೆಯಲ್ಲಿ ಟೊಮೆಟೊ ಪ್ರಮುಖ ಬೆಳೆಯಾಗಿದ್ದು, ಬೆಲೆ ಕುಸಿತದ ಸಂದರ್ಭದಲ್ಲಿ ರೈತರು ಟೊಮೆಟೊ ಬೀದಿಗೆ ಚೆಲ್ಲುತ್ತಾರೆ. ಇದರ ಬದಲು ಟೊಮೆಟೊ ಸರಕನ್ನು ಮೇವಾಗಿ ಜಾನುವಾರುಗಳಿಗೆ ನೀಡಿದರೆ ಹಾಲಿನ ಉತ್ಪಾದನೆ ಹೆಚ್ಚುತ್ತದೆ' ಎಂದರು. 'ಟೊಮೆಟೊದಲ್ಲಿನ ಲೈಕೋಪಿನ್ ಜೀವಸತ್ವದಿಂದ ಪಶು ಆಹಾರ ತಯಾರಿಸುವ ಬಗ್ಗೆ ಸಂಶೋಧನೆ ನಡೆಸಿದ್ದೇವೆ. ರಾಜ್ಯ ವಿಜ್ಞಾನ ಪರಿಷತ್ ಇತ್ತೀಚೆಗೆ ನಡೆಸಿದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಲೈಕೋಪಿನ್ ಜೀವಸತ್ವವನ್ನು ಲಾಭದಾಯಕವಾಗಿ ಬಳಸುವ ಕುರಿತು ಪ್ರಾತ್ಯಕ್ಷಿಕೆ ನೀಡಿದ್ದೇವೆ' ಎಂದು ಹೇಳಿದರು. 'ಕೋಲಾರ ಮತ್ತು ಮುಳಬಾಗಿಲು ತಾಲ್ಲೂಕಿನ ವಡ್ಡಹಳ್ಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ 6 ಸಾವಿರ ಕ್ವಿಂಟಾಲ್‌ ಟೊಮೆಟೊ ಆವಕವಿದ್ದು, ಇದರಲ್ಲಿ ಶೇ 10ರಷ್ಟು ಸರಕು ತಿರಸ್ಕೃತಗೊಳ್ಳುತ್ತಿದೆ. ಟೊಮೆಟೊ ರಸ್ತೆಗೆ ಚೆಲ್ಲುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಟೊಮೆಟೊ ಕೊಳೆಯುವ ಮುನ್ನ ಸಂಸ್ಕರಿಸಿ, ಹಣ್ಣುಗಳಲ್ಲಿನ ಲೈಕೋಪಿನ್‌ ಅಂಶ ಬೇರ್ಪಡಿಸಿ ಪಶು ಆಹಾರವಾಗಿ ಹಸುಗಳಿಗೆ ನೀಡಿದರೆ ಹಾಲಿನ ಪ್ರಮಾಣ ಶೇ 8ರಷ್ಟು ಹೆಚ್ಚಲಿದೆ' ಎಂದು ವಿವರಿಸಿದರು. ಸಕಾರಾತ್ಮಕ ಸ್ಪಂದನೆ: 'ಲೈಕೋಪಿನ್‌ ಜೀವಸತ್ವವನ್ನು ಪಶು ಆಹಾರವಾಗಿ ಬಳಸಬಹುದಾದ ಸಂಗತಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು, ಅವರು ಪಶು ಆಹಾರ ಘಟಕ ಸ್ಥಾಪನೆಯ ಭರವಸೆ ನೀಡಿದ್ದಾರೆ. ಎಪಿಎಂಸಿ ಅಧ್ಯಕ್ಷ ನಾಗರಾಜ್ ಅವರು ಸಹ ಪಶು ಆಹಾರ ಘಟಕ ಸ್ಥಾಪನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ' ಎಂದರು. 'ಜಿಲ್ಲೆಯಲ್ಲಿ 1.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಪಶು ಆಹಾರ ಘಟಕ ಸ್ಥಾಪನೆ ಸಂಬಂಧ ಜಿಲ್ಲಾ ನಿರ್ಮಿತಿ ಕೇಂದ್ರದವರು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿದ್ದಾರೆ. ಖಾಸಗಿ ಸಹಭಾಗಿತ್ವದಲ್ಲಿ ₹ 2 ಕೋಟಿ ವೆಚ್ಚದಲ್ಲಿ ಘಟಕ ಸ್ಥಾಪಿಸಬಹುದು' ಎಂದು ಹೇಳಿದರು. ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಚಂದ್ರಪ್ರಕಾಶ್, ಪ್ರಾಂಶುಪಾಲ ಅನಂತಪದ್ಮನಾಭ್, ಸಮರ್ಥ ಭಾರತ ಟ್ರಸ್ಟ್ ಅಧ್ಯಕ್ಷ ತ್ಯಾಗರಾಜ್ ಹಾಜರಿದ್ದರು.
2019/02/22 00:29:15
https://www.prajavani.net/594140.html
mC4
ಋತುಗಳನ್ನು ಬಣ್ಣಿಸುವ 'ಋತುಚಕ್ರ' | ಅವಧಿ । AVADHI ಮರಾಠಿ ಭಾಷಾ ಪ್ರಕಾಂಡ ಪಂಡಿತೆ, ಸಾಹಿತಿ ದುರ್ಗಾ ಭಾಗವತ್ ಅವರ ಅಮೂಲ್ಯ ಕೃತಿ 'ಋತುಚಕ್ರ'ವನ್ನು ಮುಂಬೈಯ ಗಣಪತಿ ಪೈ ಅವರು ಸೊಗಸಾಗಿ, ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಪ್ರಕೃತಿಯಲ್ಲಿ ಋತುಗಳ ಪರ್ಯಟನೆಯ ಮೋಹಕ ಚಿತ್ರವನ್ನು ನಮ್ಮ ಮುಂದಿಡುತ್ತದೆ, ಈ ಕೃತಿ. ಮೂಲ ಲೇಖಕಿ ದುರ್ಗಾ ಭಾಗವತ್‌ರ ಭಾಷಾ ಪಾಂಡಿತ್ಯ, ಸೂಕ್ಷ್ಮಾತಿಸೂಕ್ಷ್ಮ ಅವಲೋಕನಾ ಶಕ್ತಿ, ಪದಲಾಲಿತ್ಯ ಹಾಗೂ ಕಲ್ಪನಾ ವಿಲಾಸವು, ಗಣಪತಿ ಪೈ ಅವರ ರಸಗ್ರಹಣ ಹಾಗೂ ಭಾವಾಭಿವ್ಯಕ್ತಿಯ ಸಾಮರ್ಥ್ಯದಿಂದ ಅತ್ಯಂತ ಸೂಕ್ತವಾಗಿ ಪಡಿಮೂಡಿರುವುದನ್ನು ನಾವಿಲ್ಲಿ ಕಾಣಬಹುದು. ಮುಂಬಯಿಯ ರಾಮನಾಥ ಜೋಶಿ ಅವರ ಪ್ರತಿಮಾ ಪ್ರಕಾಶನದಿಂದ ೧೯೯೧ರಲ್ಲಿ ಬೆಳಕು ಕಂಡ ಈ ಕೃತಿಗೆ ಸಾಹಿತಿ ಶಂ.ಬಾ.ಜೋಶಿ ಅವರ ಶ್ಲಾಘನೆಯ ಮಾತುಗಳ ಮುನ್ನುಡಿಯಿದೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ತಾನೀ ಕೃತಿಯನ್ನು ದುರ್ಗಾಭಾಗವತರ ಪಾದಪದ್ಮಗಳಿಗೆ ಸಮರ್ಪಿಸಿರುವುದಾಗಿ ಅನುವಾದಕರು ಹೇಳಿ ಕೊಂಡಿದ್ದಾರೆ. ಮೂಲ ಲೇಖಕಿ ದುರ್ಗಾ ಭಾಗವತ್ ಬಗ್ಗೆ ವಿಹಂಗಮ ನೋಟದ ಪರಿಚಯಾತ್ಮಕ ಲೇಖನವೂ ಇಲ್ಲಿದೆ. ಅವರ ಬಳಿ ವಿಶ್ವ ವಿದ್ಯಾಲಯದಿಂದ ಹೊರತಾದ ವಿದ್ಯಾರ್ಜನೆಯ ಭಾಗ್ಯ ತನ್ನದಾಗಿದ್ದು, ಅಂಕೆ ಶಂಕೆಗಳನ್ನು ಪರಿಹರಿಸಿಕೊಂಡು ಅವರಿಂದ ಸಮರ್ಪಕ ವಿವರಣೆ ಪಡೆದ ಕಾರಣವೇ 'ಋತುಚಕ್ರ'ದ ಅನುವಾದ ಸಾಧ್ಯವಾಯಿತೆಂದು ಅವರು ತನ್ನ ಮನೋಗತದಲ್ಲಿ ಹೇಳಿಕೊಂಡಿದ್ದಾರೆ. ಮೂಲ ಲೇಖಕರ ಮುನ್ನುಡಿಯ ಅನುವಾದವೂ ಇಲ್ಲಿದೆ. ದುರ್ಗಾ ಭಾಗವತ್ ಅವರು ಕ್ರಾಂತಿಕಾರಿ ಧೀರ ಮಹಿಳೆ ಎನ್ನಬಹುದು. ತುರ್ತು ಪರಿಸ್ಥಿತಿಯ ವಾದಗ್ರಸ್ತ ದಿನಗಳಲ್ಲಿ, ತಮ್ಮ ವಿಚಾರ ಮತ್ತು ಮತಸ್ವಾತಂತ್ರ್ಯವನ್ನು ಸರಕಾರಕ್ಕೆ ಮಾರಬಾರದೆಂಬ ಅಭಿಪ್ರಾಯದಿಂದ ಸರಕಾರದ ಯಾವುದೇ ಪುರಸ್ಕಾರ ಇಲ್ಲವೇ ಅನುದಾನವನ್ನು ಸ್ವೀಕರಿಸೆನೆಂದು ಪ್ರತಿಜ್ಞೆಗೈದು, ಅಂತೆಯೇ, ೧೯೯೦ರಲ್ಲಿ ಮಹಾರಾಸಹತರಾಷ್ಟ್ರ ಸರಕಾರ ನೀಡಿದ ಮಹಾರಾಷ್ಟ್ರ ಗೌರವ ಪುರಸ್ಕಾರ ಮತ್ತು ಒಂದು ಲಕ್ಷ ರೂಪಾಯಿಯ ಅನುದಾನವನ್ನು ತಿರಸ್ಕರಿಸಿ ಕೋಲಾಹಲವೆಬ್ಬಿಸಿದವರು. ತಮ್ಮ 'ಋತುಚಕ್ರ', 'ವ್ಯಾಸಪರ್ವ' ಮತ್ತು 'ಪೈಸ್' ಕೃತಿಗಳಿಂದ ಅವರು ಮರಾಠಿ ಸಾಹಿತ್ಯದ ಧ್ರುವತಾರೆಯೆನಿಸಿದ್ದಾರೆ. ಅವರ ಅನುವಾದ ಕೃಷಿಯೂ ಅಪಾರ. ಪಾಲಿ ಭಾಷೆಯ ಜಾತಕ ಕಥೆಗಳನ್ನು ಅನುವಾದಿಸಿ ಏಳು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಹನ್ನೆರಡು ವರ್ಷಗಳ ಅವರ ಪರಿಶ್ರಮದಿಂದ ಬಾಣ ಭಟ್ಟನ ' ಕಾದಂಬರೀ' ಕೃತಿಯ ಮರಾಠೀ ಅನುವಾದವೂ ಬೆಳಕು ಕಂಡು ಅವರ ವಿದ್ವತ್ತಿಗೆ ದ್ಯೋತಕವಾಗಿದೆ. ಬಂಗಾಳಿಯನ್ನು ಅಭ್ಯಸಿಸಿ ರವೀಂದ್ರನಾಥ ಠಾಕೂರರ 'ಲೋಕ ಸಾಹಿತ್ಯ'ವನ್ನೂ ಮರಾಠಿಗೆ ನೀಡಿದ್ದಾರೆ. ಋತುಚಕ್ರದ ಅಧ್ಯಾಯಗಳ ಶೀರ್ಷಿಕೆಗಳೇ ಚೇತೋಹಾರಿಯಾಗಿವೆ. ಅನುಕ್ರಮವಾಗಿ, 'ವಸಂತ ಹೃದಯ ಚೈತ್ರ', 'ಚೈತ್ರ ಮಿತ್ರ ವೈಶಾಖ', 'ಜ್ಯೇಷ್ಠದ ಪ್ರಥಮ ಮೇಘ ಮಂಡಲ', 'ಮೇಘ ಶ್ಯಾಮ ಆಷಾಢ', 'ಶ್ರಾವಣ ಶೃಂಖಲೆ', 'ಪುಷ್ಪಮಂಡಿತ ಭಾದ್ರಪದ', 'ಹೊಂಬಣ್ಣದ ಆಶ್ವೀಜ', 'ಸಂಧ್ಯಾರಂಜಿತ ಕಾರ್ತಿಕ', 'ಪ್ರಶಾಂತ ಮತ್ತು ಪ್ರಕ್ಷಬ್ಧ ಮಾರ್ಗಶಿರ', 'ತಾಲಬಧ್ಧ ಪುಷ್ಯ', 'ಮಾಯಾವಿ ಮಾಘ' ಮತ್ತು ಕೊನೆಗೆ 'ರೂಪಧಾರಿ ಫಾಲ್ಗುಣ' ಎಂದಿರುವ ಶೀರ್ಷಿಕೆಗಳೇ ಹೂರಣದ ಪದಗುಂಫನದ ಮಾಧುರ್ಯವನ್ನು ಸೂಚಿಸುತ್ತವೆ. ಚೈತ್ರನು ಕುಸುಮಾಕರ; ಹೂವಿನ ಧೂಳಿಯಲ್ಲಿ ಹೊರಳಾಡುವವನೇ ವಸಂತ, ಎನ್ನುತ್ತಾ ಮಧುಮಾಸದ ಜೀವ ಚೈತನ್ಯವನ್ನೂ, ಪ್ರಕೃತಿಯ ಕಾಮೋತ್ಕಟ ಚೇಷ್ಟೆಯ ಜೀವ ಸೃಷ್ಟಿಯ ತಂತ್ರವನ್ನೂ ವರ್ಣಿಸಲಾಗಿದೆ. ಲೇಖಕಿಯ ಸೂಕ್ಷ್ಮಾತಿಸೂಕ್ಷ್ಮ ಅವಲೋಕನವು ಇಲ್ಲಿ ಬಿಚ್ಚಿಡುವ ಹೂ, ಹಣ್ಣು, ತರು, ಲತೆಗಳ, ಹಕ್ಕಿ, ಪಕ್ಕಿ, ಕ್ರಿಮಿಕೀಟಗಳ ವರ್ಣನೆ ಅಸದಳ! ನಳನಳಿಸುವ ಗುಲಾಬಿ ಚಿಗುರೆಲೆಗಳ ಅಶ್ವತ್ಥ ಮರದ ಸೊಬಗೇ ನಮ್ಮನ್ನು ಅಯೋಮಯ ಗೊಳಿಸಿದರೆ, ಆ ಮರವನ್ನು ಹಬ್ಬಿ, ತಬ್ಬಿ, ಎದೆಯೆತ್ತರಕ್ಕೆ ನಿಂತು ಮುತ್ತಿಡುತ್ತಿರುವ ಮಧುಮಾಲತಿಯ ದಟ್ಟ ಗುಲಾಬಿ ಚೆಂಡುಗಳ ವರ್ಣನೆಯಂತೂ ಒದುಗರ ಮೈ ಮರೆಸುವಂತಿದೆ. ಮಲಬಾರ್ ಹಿಲ್‌ನ ಪುಷ್ಪಿತ ಅಶೋಕ ವೃಕ್ಷಗಳ ಸೊಬಗು; ಹೆಣ್ಣು ಅಶೋಕಗಳಿಗಿಂತ ಅಧಿಕ ಪ್ರಮಾಣದ ಹೂಗಳ ತುರಾಯಿಗಳಿಂದ ಶೋಭಿಸುವ ಗಂಡು ಅಶೋಕ ವೃಕ್ಷಗಳು; ಗುಜರಾತಿನಲ್ಲಿ ಚುನಡಿ ಎಂದು ಕರೆಯಲ್ಪಡುವ, ದುರ್ಗಂಧಿ ಅಥವಾ ಘಾಣೇರಿ ಹೂಗಳ ಅಸಾಧಾರಣ ವರ್ಣವೈಭವ; ಗಗನ ಚುಂಬಿ ತೆಂಗುಗಳಲ್ಲಿ ಉಗುರಿನ ಗಾತ್ರದ ಅಚ್ಚ ಹಳದಿ ಬಣ್ಣದ, ಮೂರು ಎಸಳುಗಳ, ಹಳದಿ ಕೇಸರಗಳ ಮುದ್ದು ಪುಟ್ಟ ಹೂಗಳು; ಸುರ ಅಡಕೆಯ ಎರಡು ಮೊಳ ಉದ್ದದ ಪಚ್ಚೆಯ ಮಣಿಗಳ ಹಾರಗಳ ಗೊಂಚಲುಗಳು; ಸುರಗಿಯ ಸುಂದರ ಕೇಸರ ಪರಾಗಗಳ, ಉಗುರಿನ ಗಾತ್ರದ ಬಿಳಿ ಎಸಳುಗಳುಳ್ಳ ಕಾಂಡಕ್ಕೇ ಅಂಟಿಕೊಂಡಿರುವ ಹೂಗಳು. ಅಂತೆಯೇ ಪುನ್ನಾಗದ ಮರಗಳು ಸೊಗಸು. ಬೇವಿನ ಮರಗಳ ನಸುನೀಲ ತುರಾಯಿಗಳು ; ಬಾಲ ಘನಶ್ಯಾಮ ಕೃಷ್ಣನಂತೆ ಕಾಣುವ ಹಲಗಲಿ (ವೆಲ್ವೆಟ್) ಹೂಗಳು ರಸ್ತೆಯ ಮೇಲೆ ಹಾಸಿದಂತಿರುವ ಪರಿ ! ವಸಂತ ಲಕ್ಷ್ಮಿಯ ಧವಳ ಲಾಸ್ಯ ಹೊಮ್ಮುವ ಬಿಳಿ ಸಂಪಿಗೆಮರ ! ಮುತ್ತಲ, ಬೂರಲ ಮತ್ತು ಸಂಪಿಗೆಯದು ನಿಷ್ಪರ್ಣ ಪುಷ್ಪ ವೈಭವವೆಂಬ ವರ್ಣನೆ ! ಚೈತ್ರ ವೈಶಾಖದ ಹುಣ್ಣಿಮೆ ಆಹ್ಲಾದಕರವೆಂದೂ, ಅಶ್ವಿಜದಿಂದ ಜ್ಯೇಷ್ಠ ಮಾಸದ ವರೆಗೆ ಎಲ್ಲ ಹುಣ್ಣಿಮೆಗಳೂ ಮನೋಹರವೆಂದೂ ವೈಶಾಖ ಹುಣ್ಣಿಮೆ ಎಲ್ಲ ಹುಣ್ಣಿಮೆಗಳ ಸೌಂದರ್ಯದ ಸಾರವೆಂದೂ ಬಣ್ಣಿಸಲಾಗಿದೆ. ಬಾಗಿ, ಗುಲ್‌ಮೊಹರ್, ಬಹಾವಾಗಳ ಸೌಂದರ್ಯ ವರ್ಣನೆಯೊಡನೆ ಮಧುಮಾಸದಲ್ಲಿ ಹಕ್ಕಿಗಳ ಮಿಲನೋತ್ಸವ, ಗೂಡು ಕಟ್ಟುವ ಸಂಭ್ರಮವನ್ನೂ ಅಷ್ಟೊಂದು ಆಕರ್ಷಕವಾಗಿ ಬಣ್ಣಿಸಲಾಗಿದೆ. ಹಾಗೆಯೇ ಜ್ಯೇಷ್ಠ ಮಾಸದಲ್ಲಿ ಎಲ್ಲೆಲ್ಲಿಯೂ ಚರಾಚರಗಳಲ್ಲಿ ಕುಟುಂಬ ವಾತ್ಸಲ್ಯದ ಛಾಯೆ ಕಂಡು ಬರುತ್ತಿದೆಯೆಂದು ಹೇಳಲಾಗಿದೆ. ಗುಲಗಂಜಿ ಮರ ಹಾಗೂ ಅದರ ಹೂವು, ಕಾಯಿಗಳ ವರ್ಣನೆ ಅಸದೃಶವಾಗಿದೆ. ಸುಫಲಿತ ಸೃಷ್ಟಿಯ ಕೃತಾರ್ಥತೆ ಮತ್ತು ಸುಖದ ಕಂಬನಿಗಳು ಬಕುಲ ಹೂಗಳ ರೂಪದಿಂದ ಟಪ್ ಟಪ್ ಎಂದು ಹಗಲಿರುಳು ಉದುರುತ್ತಿರುತ್ತವೆ ಎಂಬ ಉಪಮೆ ಎಷ್ಟು ಮೋಹಕವಾಗಿದೆ! ಪುಷ್ಪ ಮಂಡಿತ ಭಾದ್ರಪದದಲ್ಲಂತೂ ಹೂಗಳ ಸುಗ್ಗಿಯೇ ಇದೆ. ಹೀಗೆ ಆರಿಸ ಹೋದರೆ ಮುಗಿಯದ ಋತುವರ್ಣನೆಯ ಅಕ್ಷಯ ಭಂಡಾರವೇ ಇಲ್ಲಿದೆ. ಪ್ರತಿಯೊಂದು ವರ್ಣನಾ ವಾಕ್ಯವನ್ನೂ ಉಧ್ಧರಿಸುವ ಅಂದನಿಸುತ್ತದೆ. ಒಟ್ಟಿನಲ್ಲಿ ಗಣಪತಿ ಪೈ ಅವರು ಅನುವಾದಿಸಿದ ಋತುಚಕ್ರವು, ಚೆಲುವು, ದಕ್ಷತೆ, ಸಾರ್ಥಕತೆಯ ಉತ್ಕೃಷ್ಟ ರೂಪವಾಗಿದೆ. ಅನುವಾದಕ ಗಣಪತಿ ಪೈ ಅವರು ಈ ಮೂಲ ಮರಾಠಿ ಸಾಹಿತ್ಯ ಕೃತಿಯ ಚೆಲುವು, ಶ್ರೇಷ್ಠತೆಗೆ ಮಾರು ಹೋಗಿ, ಮೂಲ ಲೇಖಕಿಯನ್ನು ಸಂಪರ್ಕಿಸಿ, ಕೃತಿಯನ್ನು ಅಭ್ಯಸಿಸಿ ಅಮಿತ ಪರಿಶ್ರತಮದಿಂದ ಸೊಗಸಾಗಿ ಕನ್ನಡದಲ್ಲಿ ಪಡಿಮೂಡಿಸಿ ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಅನುಪಮ ಕೃತಿರತ್ನವೊಂದನ್ನು ನೀಡಿದ್ದಾರೆ. ← ಹಿಂದಿನದು: ಜಯಶ್ರೀ ಬಿ ಕದ್ರಿ ಕವಿತೆ- ಮಿಂಚು ಹುಳ ಮುಂದಿನದು: Yoga and meditation reaching artisans in remote areas →
2021/07/29 18:31:01
https://avadhimag.in/%E0%B2%A6%E0%B3%81%E0%B2%B0%E0%B3%8D%E0%B2%97%E0%B2%BE-%E0%B2%AD%E0%B2%BE%E0%B2%97%E0%B2%B5%E0%B2%A4%E0%B3%8D-%E0%B2%85%E0%B2%B5%E0%B2%B0-%E0%B2%AA%E0%B2%A6%E0%B2%B2%E0%B2%BE%E0%B2%B2%E0%B2%BF/
mC4
ಮಹಿಳೆ ಬೆತ್ತಲೆಗೊಳಿಸಿದರಂತೆ ಶಾಸಕರ ಬೆಂಬಲಿಗರು | Grievances galore at Siddaramaiah janata darshan - Kannada Oneindia 3 min ago ರಾಯಚೂರು : ಜೂ.26ರಂದು ಕರೇಗುಡ್ಡದಲ್ಲಿ ಸಿಎಂ ಗ್ರಾಮ ವಾಸ್ತವ್ಯ 13 min ago ಶಿವ, ಶಿವಾ... ಹೊಳೆಗೆ ಹಾರ್ತೇನೆ ಎಂದ ಗಂಡನಿಗೆ ಹೆಂಡ್ತಿ ಹಿಂಗಾ ಹೇಳೋದು! 25 min ago ಕುಮಾರಸ್ವಾಮಿ ಅಲ್ಲ, ಅವರಪ್ಪನೂ ಮಾತು ಕೇಳಬೇಕು: ಪ್ರಸನ್ನಾನಂದಪುರಿ ಸ್ವಾಮೀಜಿ 28 min ago ಮೈಸೂರಿನಲ್ಲಿ ನಿರ್ಮಾಣವಾಗಲಿದೆ ಕೋಲ್ಕತ್ತಾ ಮಾದರಿಯ ಸೈನ್ಸ್ ಸಿಟಿ ಮಹಿಳೆ ಬೆತ್ತಲೆಗೊಳಿಸಿದರಂತೆ ಶಾಸಕರ ಬೆಂಬಲಿಗರು | Updated: Wednesday, September 4, 2013, 9:52 [IST] ಬೆಂಗಳೂರು, ಸೆ.4 : ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ತನ್ನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. ಸೂಕ್ತ ತನಿಖೆಗೆ ಸಿಎಂ ಆದೇಶ ನೀಡಿದ್ದಾರೆ. ಮಂಗಳವಾರ ಜನತಾದರ್ಶನ ಕಾರ್ಯಕ್ರಮದಲ್ಲಿ, ಗೋಕಾಕ್‌ ತಾಲೂಕಿನ ತಪಸಿ ಗ್ರಾಮದ ರೇಣುಕಾ ಎಂಬುವರು ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲಿಗರ ವಿರುದ್ಧ ದೂರು ನೀಡಿದ್ದು, ತಮಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ವಿಧಾನಸಭೆ ಚುನಾವಣೆ ವೇಳೆ ಅಕ್ರಮ ಮದ್ಯ ಸಾಗಾಟದ ಬಗ್ಗೆ ನನ್ನ ಪತಿ ಬಾಳಪ್ಪ ನಾಯಕ್‌ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ ಕಾರಣ, ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ನಮ್ಮ ದೂರು ದಾಖಲಿಸಿಕೊಳ್ಳದ ಪೊಲೀಸರು, ತಪ್ಪು ಮಾಹಿತಿ ನೀಡಿದರು ಎಂದು ಪತಿ ಬಾಳಪ್ಪ ನಾಯಕ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ. ಘಟನೆ ಏನು : ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅರಭಾವಿ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆಮ್ಮನಕೊಲು ಮತ್ತು ತಪಸಿ ಗ್ರಾಮದಲ್ಲಿ ಮಾರುತಿ ಎಂಬುವರು ಅಕ್ರಮ ಮದ್ಯ ಸಂಗ್ರಹಿಸಿ ಬಿಜೆಪಿ ಅಭ್ಯರ್ಥಿ ಬೆಂಬಲಿಗರಿಗೆ ನೀಡುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಈ ದೂರನ್ನು ಬಾಳಪ್ಪ ನಾಯಕ್‌ ನೀಡಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಬೆಂಗಲಿಗರು, ಬಾಳಪ್ಪ ನಾಯಕ್ ಮತ್ತು ರೇಣುಕಾ ಅವರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ. ಈ ವಿಚಾರದ ಕುರಿತು ರಾಜಿ ಸಂಧಾನಕ್ಕೆಂದು ಶಾಸಕರಿಗೆ ಸೇರಿದ ಎನ್‌.ಎಸ್‌.ಎಫ್ ಕಚೇರಿಗೆ ಕರೆದು ಅಲ್ಲಿಯೂ ಚಪ್ಪಲಿಯಿಂದ ಹಲ್ಲೆ ಮಾಡಿದ್ದರು. ಬಾಳಪ್ಪ ನಾಯಕ್ ಬಾಲಚಂದ್ರ ಜಾರಕಿಹೊಳಿ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದರೂ, ಬೆಂಬಲಿಗರು ಹಲ್ಲೆ ಮಾಡುವುದು ಬಿಡಲಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ದೂರಿನಲ್ಲಿ ರೇಣುಕಾ ವಿವರಿಸಿದ್ದಾರೆ. ತನಿಖೆಗೆ ಆದೇಶ : ರೇಣುಕಾ ಅವರ ದೂರನ್ನು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು. ಪ್ರಕರಣದ ಕುರಿತು ತನಿಖೆ ನಡೆಸುವಂತೆ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದರು. siddaramaiah gokak police district news ಸಿದ್ದರಾಮಯ್ಯ ಬೆಳಗಾವಿ ಗೋಕಾಕ್ ಪೊಲೀಸ್ ಜಿಲ್ಲಾಸುದ್ದಿ Balappa Nayak of Gokak taluk in Belgaum district complained to Siddaramaiah that, supporters of former minister Balachandra Jarkiholi had assaulted him and his wife in retaliation that he had informed election officials about the sale of spurious liquor in the taluk during the recent assembly polls. On Tuesday, September 3, in janata darshan Balappa Nayak meets Siddaramaiah. CM direct the police to take note of the complaint and investigate.
2019/06/25 10:52:28
https://kannada.oneindia.com/news/2013/09/04/districts-grievances-galore-at-siddaramaiah-janata-darshan-077092.html?utm_medium=Desktop&utm_source=OI-KN&utm_campaign=Topic-Article
mC4
ಜೀಸಸ್, ಒಂದೇ ದಾರಿ? - ವರ್ಲ್ಡ್‌ವೈಡ್ ಚರ್ಚ್ ಆಫ್ ಗಾಡ್ ಸ್ವಿಟ್ಜರ್ಲೆಂಡ್ ಮಾಧ್ಯಮ > ಜರ್ನಲ್ ಉತ್ತರಾಧಿಕಾರ > ಮ್ಯಾಗಜೀನ್ ಉತ್ತರಾಧಿಕಾರಿ 2016-01 > ಜೀಸಸ್, ಏಕೈಕ ಮಾರ್ಗ? ಮೋಕ್ಷವು ಯೇಸುಕ್ರಿಸ್ತನ ಮೂಲಕ ಮಾತ್ರ ಸಾಧ್ಯ ಎಂಬ ಕ್ರಿಶ್ಚಿಯನ್ ನಂಬಿಕೆಯನ್ನು ಕೆಲವರು ತಿರಸ್ಕರಿಸುತ್ತಾರೆ. ನಮ್ಮ ಬಹುತ್ವ ಸಮಾಜದಲ್ಲಿ, ಸಹಿಷ್ಣುತೆಯನ್ನು ನಿರೀಕ್ಷಿಸಲಾಗಿದೆ, ಬೇಡಿಕೆಯಿದೆ, ಮತ್ತು ಎಲ್ಲಾ ಧರ್ಮಗಳನ್ನು ಅನುಮತಿಸುವ ಧಾರ್ಮಿಕ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಕೆಲವೊಮ್ಮೆ ಎಲ್ಲಾ ಧರ್ಮಗಳು ಅಂತಿಮವಾಗಿ ಸಮಾನವಾಗಿರುವ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಎಲ್ಲಾ ರಸ್ತೆಗಳು ಒಂದೇ ದೇವರಿಗೆ ದಾರಿ ಮಾಡಿಕೊಡುತ್ತವೆ. ಕೆಲವರು ಈಗಾಗಲೇ ದಾರಿಯಲ್ಲಿದ್ದರು ಮತ್ತು ಈಗ ಈ ಪ್ರವಾಸದ ಗಮ್ಯಸ್ಥಾನದಿಂದ ಮರಳಿದ್ದಾರೆ ಎಂದು ಹೇಳುತ್ತಾರೆ. ಒಂದೇ ದಾರಿ ಇದೆ ಎಂದು ನಂಬುವ ಮತ್ತು ಸುವಾರ್ತಾಬೋಧನೆಯನ್ನು ತಿರಸ್ಕರಿಸುವ ಸಂಕುಚಿತ ಮನಸ್ಸಿನ ಜನರನ್ನು ಅಂತಹ ಜನರು ಸಹಿಸುವುದಿಲ್ಲ. ಎಲ್ಲಾ ನಂತರ, ಇದು ಇತರ ಜನರ ನಂಬಿಕೆಗಳನ್ನು ಬದಲಾಯಿಸುವ ಆಕ್ರಮಣಕಾರಿ ಪ್ರಯತ್ನ ಎಂದು ಅವರು ಹೇಳುತ್ತಾರೆ. ಆದರೆ ಅವರು ಕೇವಲ ಒಂದು ರೀತಿಯಲ್ಲಿ ನಂಬುವ ಜನರ ನಂಬಿಕೆಗಳನ್ನು ಬದಲಾಯಿಸಲು ಬಯಸುತ್ತಾರೆ. ಈಗ ಅದು ಹೇಗೆ? ಮೋಕ್ಷಕ್ಕೆ ಕಾರಣವಾಗುವ ಏಕೈಕ ಮಾರ್ಗವೆಂದರೆ ಯೇಸು ಎಂದು ಕ್ರಿಶ್ಚಿಯನ್ ನಂಬಿಕೆ ಕಲಿಸುತ್ತದೆಯೇ? ಇತರ ಧರ್ಮಗಳು ಹೆಚ್ಚಿನ ಧರ್ಮಗಳು ಪ್ರತ್ಯೇಕವಾಗಿವೆ. ಸಾಂಪ್ರದಾಯಿಕ ಯಹೂದಿಗಳು ನಿಜವಾದ ಮಾರ್ಗವನ್ನು ಹೊಂದಿದ್ದಾರೆಂದು ಹೇಳಿಕೊಳ್ಳುತ್ತಾರೆ. ಮುಸ್ಲಿಮರು ದೇವರಿಂದ ಉತ್ತಮವಾದ ಬಹಿರಂಗಪಡಿಸುವಿಕೆಯನ್ನು ತಿಳಿದಿದ್ದಾರೆಂದು ಹೇಳಿಕೊಳ್ಳುತ್ತಾರೆ. ಹಿಂದೂಗಳು ತಾವು ಸರಿ ಎಂದು ನಂಬುತ್ತಾರೆ ಮತ್ತು ಬೌದ್ಧರು ಕೂಡ ಅದನ್ನು ನಂಬುತ್ತಾರೆ. ಆಧುನಿಕ ಬಹುವಚನಕಾರರೂ ಸಹ ಇತರ ವಿಚಾರಗಳಿಗಿಂತ ಬಹುತ್ವ ಹೆಚ್ಚು ಸರಿಯಾಗಿದೆ ಎಂದು ನಂಬುತ್ತಾರೆ. ಆದ್ದರಿಂದ ಎಲ್ಲಾ ರಸ್ತೆಗಳು ಒಂದೇ ದೇವರಿಗೆ ಕಾರಣವಾಗುವುದಿಲ್ಲ. ವಿಭಿನ್ನ ಧರ್ಮಗಳು ವಿಭಿನ್ನ ದೇವರುಗಳನ್ನು ಸಹ ವಿವರಿಸುತ್ತವೆ. ಹಿಂದೂಗಳು ಅನೇಕ ದೇವತೆಗಳನ್ನು ಹೊಂದಿದ್ದಾರೆ ಮತ್ತು ಮೋಕ್ಷವನ್ನು ಏನೂ ಇಲ್ಲದ ಮರಳುವಿಕೆ ಎಂದು ವಿವರಿಸುತ್ತಾರೆ. ಮತ್ತೊಂದೆಡೆ, ಮುಸ್ಲಿಮರು ಏಕದೇವೋಪಾಸನೆ ಮತ್ತು ಸ್ವರ್ಗೀಯ ಪ್ರತಿಫಲಗಳಿಗೆ ಒತ್ತು ನೀಡುತ್ತಾರೆ. ಮುಸ್ಲಿಂ ಅಥವಾ ಹಿಂದೂ ಇಬ್ಬರೂ ಒಪ್ಪುವುದಿಲ್ಲ, ಅವರ ಮಾರ್ಗಗಳು ಒಂದೇ ಗುರಿಯತ್ತ ಸಾಗುತ್ತವೆ. ಆ ಮನಸ್ಥಿತಿಯನ್ನು ಬದಲಿಸುವ ಬದಲು ಅವರು ಹೋರಾಡುತ್ತಾರೆ. ಪಾಶ್ಚಾತ್ಯ ಬಹುತ್ವವಾದಿಗಳು ತಮ್ಮನ್ನು ತಕ್ಕಂತೆ ಮತ್ತು ತಿಳುವಳಿಕೆಯಿಲ್ಲದ ಜನರು ಎಂದು ನೋಡುತ್ತಿದ್ದರು. ಆದರೆ ಧರ್ಮಗಳ ಮೇಲಿನ ಅವಮಾನ ಅಥವಾ ಆಕ್ರಮಣವು ಬಹುತ್ವವಾದಿಗಳು ಬಯಸುವುದಿಲ್ಲ. ಕ್ರಿಶ್ಚಿಯನ್ ಸಂದೇಶವು ಸರಿಯಾದದು ಎಂದು ನಾವು ನಂಬುತ್ತೇವೆ ಮತ್ತು ಅದೇ ಸಮಯದಲ್ಲಿ ಜನರು ಅದನ್ನು ನಂಬದಿರಲು ಅನುಮತಿಸುತ್ತಾರೆ. ನಾವು ಅದನ್ನು ಅರ್ಥಮಾಡಿಕೊಂಡಂತೆ, ನಂಬಿಕೆಗೆ ಜನರು ಅದನ್ನು ನಂಬದಿರಲು ಸ್ವಾತಂತ್ರ್ಯದ ಅಗತ್ಯವಿದೆ. ಆದರೆ ನಾವು ನಂಬುವುದನ್ನು ಆರಿಸಿಕೊಳ್ಳುವ ಮಾನವರ ಹಕ್ಕಿಗಾಗಿ ನಾವು ನಿಂತಿದ್ದರೂ ಸಹ, ಎಲ್ಲಾ ಧರ್ಮಗಳು ನಿಜವೆಂದು ನಾವು ನಂಬುತ್ತೇವೆ ಎಂದಲ್ಲ. ಇತರ ಜನರಿಗೆ ತಮಗೆ ಬೇಕಾದುದನ್ನು ನಂಬಲು ಅವಕಾಶ ನೀಡುವುದರಿಂದ ನಾವು ನಂಬುವುದನ್ನು ನಿಲ್ಲಿಸಬೇಕು ಎಂದು ಅರ್ಥವಲ್ಲ ಏಕೆಂದರೆ ಮೋಕ್ಷದ ಏಕೈಕ ಮಾರ್ಗವೆಂದರೆ ಯೇಸು. ಬೈಬಲ್ನ ಹಕ್ಕುಗಳು / ಹಕ್ಕುಗಳು ಯೇಸುವಿನ ಮೊದಲ ಶಿಷ್ಯರು ಅವರು ದೇವರಿಗೆ ಏಕೈಕ ಮಾರ್ಗವೆಂದು ಹೇಳಿಕೊಳ್ಳುತ್ತಾರೆ ಎಂದು ನಮಗೆ ಹೇಳುತ್ತಾರೆ. ನೀವು ಅವನನ್ನು ಅನುಸರಿಸದ ಹೊರತು ನೀವು ದೇವರ ರಾಜ್ಯದಲ್ಲಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು (ಮ್ಯಾಥ್ಯೂ 7,26-27) ಮತ್ತು ನಾವು ಅವನನ್ನು ನಿರಾಕರಿಸಿದರೆ ನಾವು ಶಾಶ್ವತತೆಯಲ್ಲಿ ಅವನೊಂದಿಗೆ ಇರುವುದಿಲ್ಲ (ಮ್ಯಾಥ್ಯೂ 10,32-33). ಯೇಸು ಸಹ ಹೀಗೆ ಹೇಳಿದನು: ತಂದೆಯು ಯಾರನ್ನೂ ನಿರ್ಣಯಿಸುವುದಿಲ್ಲ, ಆದರೆ ಎಲ್ಲಾ ತೀರ್ಪನ್ನು ಮಗನಿಗೆ ಒಪ್ಪಿಸಿದ್ದಾನೆ, ಆದ್ದರಿಂದ ಎಲ್ಲರೂ ತಂದೆಯನ್ನು ಗೌರವಿಸುವಂತೆ ಮಗನನ್ನು ಗೌರವಿಸುತ್ತಾರೆ. ಮಗನನ್ನು ಗೌರವಿಸದವನು ಅವನನ್ನು ಕಳುಹಿಸಿದ ತಂದೆಯನ್ನು ಗೌರವಿಸುವುದಿಲ್ಲ "(ಜಾನ್ 5,22-23). ಯೇಸು ತಾನು ಸತ್ಯ ಮತ್ತು ಮೋಕ್ಷದ ವಿಶೇಷ ಮಾರ್ಗ ಎಂದು ಹೇಳಿಕೊಂಡಿದ್ದಾನೆ ಮತ್ತು ಆತನನ್ನು ತಿರಸ್ಕರಿಸುವ ಜನರು ಸಹ ದೇವರನ್ನು ತಿರಸ್ಕರಿಸುತ್ತಿದ್ದಾರೆ. ಜೋಹಾನ್ಸ್ ನಲ್ಲಿ 8,12 ಅವನು "ನಾನು ಪ್ರಪಂಚದ ಬೆಳಕು" ಮತ್ತು ಜಾನ್ 1 ರಲ್ಲಿ ಹೇಳುತ್ತಾನೆ4,6-7 ನಿಂತಿದೆ « [] ನಾನು ದಾರಿ ಮತ್ತು ಸತ್ಯ ಮತ್ತು ಜೀವನ; ನನ್ನ ಮೂಲಕ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ. ನೀವು ನನ್ನನ್ನು ಗುರುತಿಸಿದಾಗ, ನೀವು ನನ್ನ ತಂದೆಯನ್ನೂ ಗುರುತಿಸುತ್ತೀರಿ. ಮತ್ತು ಇಂದಿನಿಂದ ನೀವು ಅವನನ್ನು ತಿಳಿದಿದ್ದೀರಿ ಮತ್ತು ಅವನನ್ನು ನೋಡಿದ್ದೀರಿ. ಮೋಕ್ಷಕ್ಕೆ ಬೇರೆ ಮಾರ್ಗಗಳಿವೆ ಎಂದು ಹೇಳುವ ಜನರು ತಪ್ಪು ಎಂದು ಯೇಸುವೇ ಹೇಳಿದ್ದಾನೆ. ಪೇತ್ರನು ಯಹೂದಿ ಆಡಳಿತಗಾರರೊಂದಿಗೆ ಮಾತನಾಡುವಾಗ ಅಷ್ಟೇ ಸ್ಪಷ್ಟವಾಗಿ ಹೇಳಿದನು: "ಬೇರೆ ಯಾರಲ್ಲಿಯೂ ಮೋಕ್ಷವಿಲ್ಲ, ಅಥವಾ ಆಕಾಶದ ಕೆಳಗೆ ಮನುಷ್ಯರ ನಡುವೆ ನಾವು ರಕ್ಷಿಸಲ್ಪಡಬೇಕಾದ ಬೇರೆ ಯಾವುದೇ ಹೆಸರಿಲ್ಲ" (ಕಾಯಿದೆಗಳು 4,12). ಕ್ರಿಸ್ತನನ್ನು ತಿಳಿದಿಲ್ಲದ ಜನರು ತಮ್ಮ ಅಪರಾಧಗಳು ಮತ್ತು ಪಾಪಗಳಿಂದ ಸತ್ತಿದ್ದಾರೆ ಎಂದು ಪೌಲನು ಮತ್ತೊಮ್ಮೆ ಸ್ಪಷ್ಟಪಡಿಸಿದನು (ಎಫೆಸಿಯನ್ಸ್ 2,1) ಅವರಿಗೆ ಯಾವುದೇ ಭರವಸೆ ಇರಲಿಲ್ಲ ಮತ್ತು ಅವರ ಧಾರ್ಮಿಕ ನಂಬಿಕೆಗಳ ಹೊರತಾಗಿಯೂ, ಅವರು ದೇವರನ್ನು ಹೊಂದಿರಲಿಲ್ಲ (ಪದ್ಯ 12). ಒಬ್ಬನೇ ಮಧ್ಯವರ್ತಿ ಇರುವುದರಿಂದ ದೇವರಿಗೆ ಒಂದೇ ದಾರಿ (1. ಟಿಮೊಥಿಯಸ್ 2,5) ಯೇಸು ಎಲ್ಲರಿಗೂ ಅಗತ್ಯವಿರುವ ವಿಮೋಚನಾ ಮೌಲ್ಯವಾಗಿತ್ತು (1. ಟಿಮೊಥಿಯಸ್ 4,10) ಮೋಕ್ಷಕ್ಕೆ ಕಾರಣವಾಗುವ ಬೇರೆ ಯಾವುದೇ ಮಾರ್ಗಗಳಿದ್ದರೆ, ದೇವರು ಅದನ್ನು ಸೃಷ್ಟಿಸುತ್ತಿದ್ದನು (ಗಲಾತ್ಯದವರು 3,21) ಕ್ರಿಸ್ತನ ಮೂಲಕ ಜಗತ್ತು ದೇವರೊಂದಿಗೆ ಹೊಂದಾಣಿಕೆಯಾಗುತ್ತದೆ (ಕೊಲೊಸ್ಸಿಯನ್ಸ್ 1,20-22). ಅನ್ಯಜನರ ನಡುವೆ ಸುವಾರ್ತೆಯನ್ನು ಹರಡಲು ಪೌಲನನ್ನು ಕರೆಯಲಾಯಿತು. ಅವರ ಧರ್ಮವು ನಿಷ್ಪ್ರಯೋಜಕವಾಗಿದೆ ಎಂದು ಅವರು ಹೇಳಿದರು (ಕಾಯಿದೆಗಳು 1 ಕೊರಿ4,15) ಇಬ್ರಿಯರಿಗೆ ಬರೆದ ಪತ್ರವು ಈಗಾಗಲೇ ಕ್ರಿಸ್ತನಿಗಿಂತ ಉತ್ತಮವಾದ ಮಾರ್ಗವಿಲ್ಲ ಎಂದು ಹೇಳುತ್ತದೆ. ಎಲ್ಲಾ ಇತರ ವಿಧಾನಗಳಿಗಿಂತ ಭಿನ್ನವಾಗಿ, ಇದು ಪರಿಣಾಮಕಾರಿಯಾಗಿದೆ (ಹೀಬ್ರೂ 10,11) ಅದು ಸಾಪೇಕ್ಷ ಪ್ರಯೋಜನವಲ್ಲ, ಆದರೆ ಎಲ್ಲಾ ಅಥವಾ ಏನೂ ವ್ಯತ್ಯಾಸವಿಲ್ಲ. ವಿಶೇಷ ಮೋಕ್ಷದ ಕ್ರಿಶ್ಚಿಯನ್ ಸಿದ್ಧಾಂತವು ಸ್ವತಃ ಯೇಸು ಏನು ಹೇಳಿದನು ಮತ್ತು ಬೈಬಲ್ ನಮಗೆ ಏನು ಕಲಿಸುತ್ತದೆ ಎಂಬುದರ ಮೇಲೆ ಆಧಾರಿತವಾಗಿದೆ ಮತ್ತು ಜೀಸಸ್ ಯಾರು ಮತ್ತು ನಮ್ಮ ಅನುಗ್ರಹದ ಅಗತ್ಯಕ್ಕೆ ನಿಕಟ ಸಂಬಂಧ ಹೊಂದಿದೆ. ನಮ್ಮ ಅನುಗ್ರಹದ ಅವಶ್ಯಕತೆ ಯೇಸು ದೇವರ ಮಗನೆಂದು ವಿಶೇಷ ರೀತಿಯಲ್ಲಿ ಬೈಬಲ್ ಹೇಳುತ್ತದೆ. ಅವನು ಮಾನವ ರೂಪದಲ್ಲಿರುವ ದೇವರು. ಆತನು ನಮ್ಮ ವಿಮೋಚನೆಗಾಗಿ ತನ್ನ ಪ್ರಾಣವನ್ನು ಕೊಟ್ಟನು. ಯೇಸು ಇನ್ನೊಂದು ಮಾರ್ಗಕ್ಕಾಗಿ ಪ್ರಾರ್ಥಿಸಿದನು, ಆದರೆ ಯಾವುದೂ ಇರಲಿಲ್ಲ (ಮತ್ತಾಯ 26,39) ಪಾಪದ ಪರಿಣಾಮಗಳನ್ನು ಭರಿಸಲು ಮತ್ತು ಅದರಿಂದ ನಮ್ಮನ್ನು ಬಿಡುಗಡೆ ಮಾಡಲು ದೇವರು ಸ್ವತಃ ಮಾನವ ಜಗತ್ತಿಗೆ ಪ್ರವೇಶಿಸಿದ್ದರಿಂದ ಮಾತ್ರ ನಾವು ಮೋಕ್ಷವನ್ನು ಪಡೆಯುತ್ತೇವೆ. ಇದು ನಮಗೆ ಅವರ ಕೊಡುಗೆ. ಹೆಚ್ಚಿನ ಧರ್ಮಗಳು ಮೋಕ್ಷದ ಮಾರ್ಗವಾಗಿ ಕೆಲವು ರೀತಿಯ ಕೆಲಸ ಅಥವಾ ಕಾರ್ಯಗಳನ್ನು ಕಲಿಸುತ್ತವೆ-ಸರಿಯಾದ ಪ್ರಾರ್ಥನೆಗಳನ್ನು ಹೇಳುವುದು, ಸರಿಯಾದ ಕೆಲಸಗಳನ್ನು ಮಾಡುವುದು ಮತ್ತು ಅದು ಸಾಕಾಗುತ್ತದೆ ಎಂದು ಭಾವಿಸುತ್ತೇವೆ. ಜನರು ಸಾಕಷ್ಟು ಪ್ರಯತ್ನಿಸಿದರೆ ಸಾಕಷ್ಟು ಒಳ್ಳೆಯವರಾಗಬಹುದು ಎಂದು ಅವರು ಕಲಿಸುತ್ತಾರೆ. ಆದಾಗ್ಯೂ, ಕ್ರಿಶ್ಚಿಯನ್ ನಂಬಿಕೆಯು ನಮಗೆಲ್ಲರಿಗೂ ಅನುಗ್ರಹ ಬೇಕು ಎಂದು ಕಲಿಸುತ್ತದೆ ಏಕೆಂದರೆ ನಾವು ಎಷ್ಟೇ ಪ್ರಯತ್ನಿಸಿದರೂ ನಾವು ಎಂದಿಗೂ ಉತ್ತಮವಾಗುವುದಿಲ್ಲ. ಈ ಎರಡು ವಿಚಾರಗಳು ಒಂದೇ ಸಮಯದಲ್ಲಿ ನಿಜವಾಗುವುದರಿಂದ ಅದು ಅಸಾಧ್ಯ. ಅನುಗ್ರಹದ ಸಿದ್ಧಾಂತವು ಕಲಿಸುತ್ತದೆ, ನಾವು ಇಷ್ಟಪಡುತ್ತೇವೆಯೋ ಇಲ್ಲವೋ, ಮೋಕ್ಷಕ್ಕೆ ಬೇರೆ ಮಾರ್ಗವಿಲ್ಲ. ಭವಿಷ್ಯದ ಅನುಗ್ರಹ ಯೇಸುವಿನ ಬಗ್ಗೆ ಕೇಳುವ ಮೊದಲೇ ಸಾಯುವ ಜನರ ಬಗ್ಗೆ ಏನು? ಯೇಸು ಜೀವಿಸುವ ಮೊದಲು ಜನಿಸಿದ ಜನರ ಬಗ್ಗೆ ಏನು? ಅವರಿಗೂ ಭರವಸೆ ಇದೆಯೇ? ಹೌದು ಅವರು ಹೊಂದಿದ್ದಾರೆ ನಿಖರವಾಗಿ ಏಕೆಂದರೆ ಕ್ರಿಶ್ಚಿಯನ್ ನಂಬಿಕೆಯು ಅನುಗ್ರಹದ ನಂಬಿಕೆಯಾಗಿದೆ. ಜನರು ದೇವರ ಅನುಗ್ರಹದಿಂದ ರಕ್ಷಿಸಲ್ಪಡುತ್ತಾರೆಯೇ ಹೊರತು ಯೇಸುವಿನ ಹೆಸರನ್ನು ಹೇಳುವ ಮೂಲಕ ಅಥವಾ ವಿಶೇಷ ವಿಯೆನ್ನಾವನ್ನು ಹೊಂದುವ ಮೂಲಕ ಅಲ್ಲ. ನಿಮಗೆ ತಿಳಿದೋ ತಿಳಿಯದೆಯೋ ಇಡೀ ಪ್ರಪಂಚದ ಪಾಪಗಳಿಗಾಗಿ ಯೇಸು ಮರಣಹೊಂದಿದನು (2. ಕೊರಿಂಥಿಯಾನ್ಸ್ 5,14; 1. ಜೋಹಾನ್ಸ್ 2,2) ಅವರ ಮರಣವು ಪ್ಯಾಲೆಸ್ಟೀನಿಯನ್ ಅಥವಾ ಪೆರುವಿಯನ್ ಆಗಿರಲಿ, ಭೂತಕಾಲ, ವರ್ತಮಾನ ಮತ್ತು ಭವಿಷ್ಯದ ಪ್ರತಿಯೊಬ್ಬ ಮನುಷ್ಯನಿಗೆ ಪರಿಹಾರದ ತ್ಯಾಗವಾಗಿತ್ತು. ದೇವರು ತನ್ನ ಮಾತಿಗೆ ನಂಬಿಗಸ್ತನಾಗಿದ್ದಾನೆ ಎಂದು ನಾವು ಖಚಿತವಾಗಿ ಹೇಳಬಹುದು, ಏಕೆಂದರೆ ಇದನ್ನು ಈ ಕೆಳಗಿನಂತೆ ಬರೆಯಲಾಗಿದೆ: "ಅವನು ನಿಮ್ಮೊಂದಿಗೆ ತಾಳ್ಮೆಯಿಂದಿರುತ್ತಾನೆ ಮತ್ತು ಯಾರೂ ನಾಶವಾಗಬೇಕೆಂದು ಬಯಸುವುದಿಲ್ಲ, ಆದರೆ ಪ್ರತಿಯೊಬ್ಬರೂ ಪಶ್ಚಾತ್ತಾಪವನ್ನು ಕಂಡುಕೊಳ್ಳುತ್ತಾರೆ" (2. ಪೆಟ್ರಸ್ 3,9) ಅವನ ಮಾರ್ಗಗಳು ಮತ್ತು ಸಮಯಗಳು ಅನೇಕವೇಳೆ ಅಗ್ರಾಹ್ಯವಾಗಿದ್ದರೂ ಸಹ, ನಾವು ಆತನನ್ನು ನಂಬುತ್ತೇವೆ ಏಕೆಂದರೆ ಅವನು ಸೃಷ್ಟಿಸಿದ ಜನರನ್ನು ಅವನು ಪ್ರೀತಿಸುತ್ತಾನೆ. ಯೇಸು ಹೇಳಿದ್ದು: "ದೇವರು ಲೋಕವನ್ನು ಎಷ್ಟು ಪ್ರೀತಿಸಿದನೆಂದರೆ ಆತನು ತನ್ನ ಒಬ್ಬನೇ ಮಗನನ್ನು ಕೊಟ್ಟನು, ಆತನನ್ನು ನಂಬುವವನು ನಾಶವಾಗದೆ ಶಾಶ್ವತ ಜೀವನವನ್ನು ಹೊಂದುತ್ತಾನೆ. ಯಾಕಂದರೆ ಜಗತ್ತನ್ನು ನಿರ್ಣಯಿಸಲು ದೇವರು ತನ್ನ ಮಗನನ್ನು ಲೋಕಕ್ಕೆ ಕಳುಹಿಸಲಿಲ್ಲ, ಆದರೆ ಅವನ ಮೂಲಕ ಜಗತ್ತು ರಕ್ಷಿಸಲ್ಪಡಲಿ "(ಜಾನ್. 3,16-17) ಎದ್ದ ಕ್ರಿಸ್ತನು ಮರಣವನ್ನು ಗೆದ್ದನೆಂದು ನಾವು ನಂಬುತ್ತೇವೆ. ಆದ್ದರಿಂದ ಸಾವು ಕೂಡ ದೇವರು ಮತ್ತು ಮನುಷ್ಯನ ನಡುವಿನ ಗಡಿಯಲ್ಲ. ಜನರು ತಮ್ಮ ಮೋಕ್ಷವನ್ನು ಅವನಿಗೆ ಒಪ್ಪಿಸಲು ದೇವರನ್ನು ಸರಿಸಲು ಸಾಧ್ಯವಾಗುತ್ತದೆ. ಹೇಗೆ ಮತ್ತು ಯಾವಾಗ ಎಂದು ನಮಗೆ ತಿಳಿದಿಲ್ಲ, ಆದರೆ ನಾವು ಅವನ ಮಾತನ್ನು ನಂಬಬಹುದು. ಆದುದರಿಂದ, ನಾವು ಅದನ್ನು ನಂಬಬಹುದು, ಒಂದು ರೀತಿಯಲ್ಲಿ ಅಥವಾ ಇನ್ನೊಂದರಲ್ಲಿ ಆತನು ಬದುಕಿರುವ ಅಥವಾ ಎಂದೆಂದಿಗೂ ಬದುಕಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೀತಿಯಿಂದ ಮತ್ತು ಸ್ಥಿರವಾಗಿ ಮಾರ್ಗದರ್ಶನ ಮಾಡುತ್ತಾನೆ, ಅವರು ಸಾಯುವ ಮೊದಲು, ಸಮಯದಲ್ಲಿ ಅಥವಾ ಅವಳ ಮರಣದ ನಂತರ. ಕೊನೆಯ ತೀರ್ಪಿನ ದಿನದಂದು ಕೆಲವರು ನಂಬಿಗಸ್ತವಾಗಿ ಕ್ರಿಸ್ತನ ಕಡೆಗೆ ತಿರುಗಿದರೆ, ಅಥವಾ ಆತನು ಅವರಿಗಾಗಿ ಏನು ಮಾಡಿದ್ದಾನೆಂದು ತಿಳಿದುಕೊಂಡರೆ, ಅವನು ಖಂಡಿತವಾಗಿಯೂ ಅವರಿಂದ ದೂರವಾಗುವುದಿಲ್ಲ. ಆದರೆ ಜನರು ಯಾವಾಗ ರಕ್ಷಿಸಲ್ಪಟ್ಟರು ಮತ್ತು ಅವರು ತಮ್ಮ ಮೋಕ್ಷವನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ಲೆಕ್ಕಿಸದೆಯೇ, ಇನ್ನೂ ಕ್ರಿಸ್ತನ ಮೂಲಕ ಮಾತ್ರ ಅವರು ಉಳಿಸಲ್ಪಡುತ್ತಾರೆ. ಸದುದ್ದೇಶದ ಕಾರ್ಯಗಳು ಮತ್ತು ಕೆಲಸಗಳು ಯಾರನ್ನೂ ಎಂದಿಗೂ ಉಳಿಸುವುದಿಲ್ಲ, ಜನರು ಪ್ರಾಮಾಣಿಕವಾಗಿ ನಂಬಿದ್ದರೂ ಸಹ, ಅವರು ಸಾಕಷ್ಟು ಒಳ್ಳೆಯವರಾಗಿದ್ದರೆ ಮಾತ್ರ ಅವರು ಉಳಿಸಲ್ಪಡುತ್ತಾರೆ. ಕೃಪೆಯ ತತ್ವ ಮತ್ತು ಯೇಸುವಿನ ತ್ಯಾಗ ಎಂದರೆ ಯಾವುದೇ ಒಳ್ಳೆಯ ಕಾರ್ಯಗಳು ಅಥವಾ ಧಾರ್ಮಿಕ ಕಾರ್ಯಗಳು ಯಾರನ್ನೂ ಉಳಿಸುವುದಿಲ್ಲ. ಅಂತಹ ಒಂದು ಮಾರ್ಗವು ಅಸ್ತಿತ್ವದಲ್ಲಿದ್ದರೆ, ದೇವರು ನಮಗೆ ಅದನ್ನು ಸಾಧ್ಯವಾಗಿಸುತ್ತಿದ್ದನು (ಗಲಾತ್ಯದವರು 3,21) ಜನರು ಶ್ರಮ, ಧ್ಯಾನ, ಧ್ವಜಾರೋಹಣ, ಸ್ವಯಂ ತ್ಯಾಗ ಅಥವಾ ಬೇರೆ ರೀತಿಯಲ್ಲಿ ತಮ್ಮ ಮೋಕ್ಷವನ್ನು ಪಡೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ, ಅವರು ಕಲಿಯುತ್ತಾರೆ, ಏಕೆಂದರೆ ಅವರ ಕೆಲಸಗಳು ಮತ್ತು ಕಾರ್ಯಗಳು ಅವರಿಗೆ ದೇವರೊಂದಿಗೆ ಏನನ್ನೂ ತರುವುದಿಲ್ಲ. ಮೋಕ್ಷವು ಅನುಗ್ರಹದಿಂದ ಮತ್ತು ಅನುಗ್ರಹದಿಂದ ಮಾತ್ರ. ಕರುಣೆಯನ್ನು ಗಳಿಸಲಾಗಿಲ್ಲ ಮತ್ತು ಅದು ಎಲ್ಲರಿಗೂ ಲಭ್ಯವಿದೆ ಎಂದು ಕ್ರಿಶ್ಚಿಯನ್ ನಂಬಿಕೆಯು ಕಲಿಸುತ್ತದೆ. ಜನರು ಯಾವ ಧಾರ್ಮಿಕ ಹಾದಿಯನ್ನು ಹಿಡಿದಿದ್ದರೂ, ಕ್ರಿಸ್ತನು ಅವರನ್ನು ತಪ್ಪು ದಾರಿಯಿಂದ ಮತ್ತು ಅವನ ದಾರಿಯಲ್ಲಿ ಕರೆದೊಯ್ಯಬಹುದು. ಪ್ರತಿಯೊಬ್ಬರಿಗೂ ಅಗತ್ಯವಿರುವ ಏಕೈಕ ಪ್ರಾಯಶ್ಚಿತ್ತ ತ್ಯಾಗ ಮಾಡಿದ ದೇವರ ಏಕೈಕ ಪುತ್ರನು. ಅವನು ದೇವರ ಅನುಗ್ರಹ ಮತ್ತು ಮೋಕ್ಷಕ್ಕೆ ಸಾಕ್ಷಿಯಾದ ಅನನ್ಯ ಸಂದೇಶವಾಹಕ ಮತ್ತು ಮಾರ್ಗ. ಯೇಸು ಸ್ವತಃ ಅದಕ್ಕೆ ಸಾಕ್ಷಿ ಹೇಳಿದನು. ಯೇಸು ಅದೇ ಸಮಯದಲ್ಲಿ ಪ್ರತ್ಯೇಕ ಮತ್ತು ಅಂತರ್ಗತ. ಅವನು ಕಿರಿದಾದ ಮಾರ್ಗ ಮತ್ತು ಇಡೀ ಪ್ರಪಂಚದ ಉದ್ಧಾರಕ. ಇದು ಮೋಕ್ಷಕ್ಕೆ ಇರುವ ಏಕೈಕ ಮಾರ್ಗವಾಗಿದೆ ಮತ್ತು ಆದರೂ ಇದು ಎಲ್ಲರಿಗೂ ಪ್ರವೇಶಿಸಬಹುದಾಗಿದೆ. ದೇವರ ಅನುಗ್ರಹವು ಯೇಸುಕ್ರಿಸ್ತನಲ್ಲಿ ಸಂಪೂರ್ಣವಾಗಿ ವ್ಯಕ್ತವಾಗಿದೆ, ಪ್ರತಿಯೊಬ್ಬ ವ್ಯಕ್ತಿಯು ನಿಖರವಾಗಿ ಬೇಕಾಗುತ್ತದೆ, ಮತ್ತು ಒಳ್ಳೆಯ ಸುದ್ದಿ ಎಲ್ಲರಿಗೂ ಉಚಿತವಾಗಿ ಲಭ್ಯವಿರುತ್ತದೆ. ಇದು ಕೇವಲ ಒಳ್ಳೆಯ ಸುದ್ದಿಯಲ್ಲ, ಇದು ಹರಡಲು ಯೋಗ್ಯವಾದ ಉತ್ತಮ ಸುದ್ದಿ. Dಇದು ನಿಜವಾಗಿಯೂ ಯೋಚಿಸಲು ಯೋಗ್ಯವಾಗಿದೆ.
2022/05/20 08:27:23
https://kn.wkg-ch.org/%E0%B2%AE%E0%B2%BE%E0%B2%A7%E0%B3%8D%E0%B2%AF%E0%B2%AE/%E0%B2%A8%E0%B2%BF%E0%B2%AF%E0%B2%A4%E0%B2%95%E0%B2%BE%E0%B2%B2%E0%B2%BF%E0%B2%95%E0%B2%A6-%E0%B2%85%E0%B2%A8%E0%B3%81%E0%B2%95%E0%B3%8D%E0%B2%B0%E0%B2%AE/2016-01-%E0%B2%85%E0%B2%A8%E0%B3%8D%E0%B2%A8%E0%B3%81-%E0%B2%85%E0%B2%A8%E0%B3%81%E0%B2%B8%E0%B2%B0%E0%B2%BF%E0%B2%B8%E0%B3%81%E0%B2%B5-%E0%B2%A8%E0%B2%BF%E0%B2%AF%E0%B2%A4%E0%B2%95%E0%B2%BE%E0%B2%B2%E0%B2%BF%E0%B2%95/%E0%B2%AF%E0%B3%87%E0%B2%B8%E0%B3%81%E0%B2%B5%E0%B2%BF%E0%B2%A8-%E0%B2%8F%E0%B2%95%E0%B3%88%E0%B2%95-%E0%B2%AE%E0%B2%BE%E0%B2%B0%E0%B3%8D%E0%B2%97.html
mC4
ದೆಹಲಿ ಆಗ್ರಾಗಳಲ್ಲಿ ಐಸಿಸ್ನ ಸ್ಲೀಪರ್ ಸೆಲ್ಗಳನ್ನು ಗುರುತಿಸಿ ತರುಣರೊಂದಷ್ಟು ಜನರನ್ನು ಒಳಗಿಂದ ಎಳೆದೆಳೆದು ಬಿಸಾಡುತ್ತಿದ್ದಂತೆ ದೇಶದಲ್ಲಿ ಅಲ್ಲೋಲ-ಕಲ್ಲೋಲವೆದ್ದಿದೆ. ನರೇಂದ್ರಮೋದಿಯವರಾದಿಯಾಗಿ ರಾಷ್ಟ್ರದ ಪ್ರಮುಖ ನಾಯಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಸಿದ್ಧರಾಗಿದ್ದ ಮಾನವ... ಜಿಎಸ್‌ಟಿ ಜಾರಿಯಾದ ನಂತರ ದೇಶದಲ್ಲಿ ಟ್ರಕ್‌ಗಳು ಕ್ರಮಿಸುತ್ತಿರುವ ದೂರ ದಿನಕ್ಕೆ ಅಂದಾಜು 100 ರಿಂದ 150 ಕಿಲೋಮೀಟರ್ ನಷ್ಟು ಹೆಚ್ಚಾಗಿದೆ ಎಂದು ಸಂಚಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.‌ 2017 ರ‌... ನಮ್ಮ ಕಾಲದಲ್ಲಿ ನಾವು ಕೇಳಬಹುದಾದ ಅತ್ಯಂತ ಕೆಟ್ಟ ಸುದ್ದಿಯೊಂದು ಬಂಗಾಳದಿಂದ ಹೊರಗೆ ಬಂದಿದೆ. ಬಂಗಾಳದ ಖ್ಯಾತ ಪತ್ರಕರ್ತ ಸುಮನ್ ಚಟ್ಟೋಪಾಧ್ಯಾಯ ಶಾರದಾ ಚಿಟ್ಫಂಡ್ನ ಹಗರಣದಲ್ಲಿ ಸಾಕ್ಷಿ ಸಮೇತ ಸಿಕ್ಕುಬಿದ್ದು ಜೈಲುಪಾಲಾಗಿದ್ದಾರೆ.... ಮಯೋಪಿಯ ಅಥವಾ ಸಮೀಪ ದೃಷ್ಟಿದೋಷ. ದೂರದ ವಸ್ತುಗಳನ್ನು ಗ್ರಹಿಸುವ ಕಣ್ಣಿನ ಶಕ್ತಿ ಕುಂದಿದಾಗ ಉಂಟಾಗುವ ಸ್ಥಿತಿಯಿದು. ದುರ್ದೈವವಶಾತ್ ನಾವು ನಮ್ಮ ಭಾರತದ ಚರಿತ್ರೆಯನ್ನು ಅಭ್ಯಸಿಸುತ್ತಿರುವುದೆಲ್ಲಾ ಈ ದೃಷ್ಟಿದೋಷದೊಂದಿಗೇ. ಕಣ್ಣು ಮಂಜಾಗಿ,... ನಿನ್ನೆ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳ ಮತ್ತು ದೆಹಲಿ ವಿಶೇಷ ಪೊಲೀಸರೊಂದಿಗೆ ಸೇರಿ ಉತ್ತರಪ್ರದೇಶ ಮತ್ತು ದೆಹಲಿಯ 17 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಐಸಿಸ್ ಉಗ್ರ... ನಾಜೀರುದ್ದೀನ್ ಶಾ ಖಾಸಗಿ ಚಾನೆಲ್ ಒಂದಕ್ಕೆ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಪ್ರತಿಯೊಬ್ಬ ಭಾರತೀಯನ ಬೆನ್ನಿಗೂ ಚೂರಿ ಹಾಕುವಂತಹ ಮಾತುಗಳನ್ನಾಡಿದ್ದಾರೆ. ಭಾರತದಲ್ಲಿ ಅಸಹನೆ ಹೆಚ್ಚುತ್ತಿದ್ದು ಮುಸಲ್ಮಾನರು ಬದುಕುವುದೇ ಕಷ್ಟವಾಗುತ್ತಿದೆ ಎಂದಿದ್ದಾರಲ್ಲದೇ ನನ್ನ... ಐದು ರಾಜ್ಯಗಳ ಚುನಾವಣೆ ಮತ್ತು ಆನಂತರದ ಬೆಳಣಿಗೆಗಳ ಚಚರ್ೆ ಇನ್ನೂ ನಿಂತೇ ಇಲ್ಲ. ಏಕೆಂದರೆ ಅದು ಬರಲಿರುವ ಲೋಕಸಭಾ ಚುನಾವಣೆಗೆ ಬಲು ಹತ್ತಿರದ ಪೂರ್ವಭಾವಿ ಚುನಾವಣೆ. ಬಹುಶಃ ಹರಿಯಾಣಾದಲ್ಲಿ ಮುನ್ಸಿಪಾಲಿಟಿ... ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತನ್ನ ಸಂವಹನಾ ಉಪಗ್ರಹ GSAT-7A ವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಉಡಾವಣೆ ಮಾಡಲಿದೆ. ಮಂಗಳವಾರ ಅಂದರೆ ಇಂದು ಮಧ್ಯಾಹ್ನ...
2020/01/26 23:12:15
http://yuvalive.net/page/20/
mC4
ಭೂ ಹಗರಣ- ಲೋಕಾಯುಕ್ತ ತನಿಖೆ: ಈಗ ಸಚಿವ ನಿರಾಣಿ ಸರದಿ | Prajavani ಭೂ ಹಗರಣ- ಲೋಕಾಯುಕ್ತ ತನಿಖೆ: ಈಗ ಸಚಿವ ನಿರಾಣಿ ಸರದಿ Published: 24 ಅಕ್ಟೋಬರ್ 2011, 15:15 IST Updated: 24 ಅಕ್ಟೋಬರ್ 2011, 15:15 IST ಬೆಂಗಳೂರು, (ಪಿಟಿಐ): ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ, ಹಣಕಾಸಿನ ಲಾಭಕ್ಕಾಗಿ ಸರ್ಕಾರಿ ಭೂಮಿಯನ್ನು ಡಿ ನೋಟಿಫೈ ಮಾಡಿದ ಆರೋಪದ ಕುರಿತು ತನಿಖೆ ನಡೆಸಲು ಲೋಕಾಯುಕ್ತ ನ್ಯಾಯಾಲಯವು ಸೋಮವಾರ ಆದೇಶ ನೀಡಿದ್ದು, ರಾಜ್ಯ ಬಿಜೆಪಿ ಸರ್ಕಾರಕ್ಕೆ ಈಗ ಮತ್ತೊಮ್ಮೆ ಮುಜುಗರ ಎದುರಾದಂತಾಗಿದೆ. ಸಚಿವ ನಿರಾಣಿ ಅವರ ವಿರುದ್ಧ ಭ್ರಷ್ಟಚಾರ ನಿಗ್ರಹ ಕಾಯಿದೆ ಅನ್ವಯ ಸಲ್ಲಿಸಲಾದ ಅರ್ಜಿಯನ್ನು ಪುರಸ್ಕರಿಸಿದ ಲೋಕಾಯುಕ್ತ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಸಚಿವರ ವಿರುದ್ಧ ಮಾಡಲಾದ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆ ನಡೆಸಿ ನವೆಂಬರ್ 16 ರಂದು ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ. ಕೈಗಾರಿಕಾ ಸಚಿವ ನಿರಾಣಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ನಗರದ ಕೈಗಾರಿಕೋದ್ಯಮಿ ಆಲಂ ಪಾಷಾ ಎನ್ನುವವರು ಗುರುವಾರ ಈ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. `2010ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ, ಸ್ವಂತ ಲಾಭಕ್ಕಾಗಿ ತಮ್ಮ ಸಚಿವ ಸ್ಥಾನವನ್ನು ದುರುಪಯೋಗ ಮಾಡಿದ ಸಚಿವ ನಿರಾಣಿ ಅವರು, ತಾವು ಮತ್ತು ತಮ್ಮ ಕುಟುಂಬದ ಸದಸ್ಯರು ಸೇರಿದಂತೆ ಎಂಟು ಜನರು ಸೇರಿಕೊಂಡು ಅಸ್ತಿತ್ವವಿಲ್ಲದ ಸಂಸ್ಥೆಗಳನ್ನು ಹೆಸರಿಸಿದ್ದಾರೆ. ದೇವನಹಳ್ಳಿ ಮತ್ತು ದಾಬಸ್ ಪೇಟೆ ಸಮೀಪದಲ್ಲಿ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಸೇರಿದ್ದ ಭೂಮಿಯನ್ನು ಡಿನೋಟಿಫೈ ಮಾಡಿಸಿ ಆ ಸಂಸ್ಥೆಗಳಿಗೆ ಮಂಜೂರು ಮಾಡಿದ್ದಾರೆ, ಅದರಿಂದ ಸರ್ಕಾರದ ಬೊಕ್ಕಸಕ್ಕೆ 130 ಕೋಟಿ ರೂಪಾಯಿಯಯಷ್ಟು ನಷ್ಟ ಉಂಟಾಗಿದೆ~ ಎಂದೂ ದೂರಿನಲ್ಲಿ ಆರೋಪಿಸಲಾಗಿತ್ತು. ಇದಲ್ಲದೇ ಯಾವ ಅಧಿಕಾರವಿಲ್ಲದಿದ್ದರೂ ಸಚಿವರು ತಾವೇ ಹೆಸರಿಸಿದ ವ್ಯಕ್ತಿಗಳಿಗೆ ಸೇರಿದ ಸಂಸ್ಥೆಗಳ ಹೆಸರಿನಲ್ಲಿ ಮಂಜೂರು ಮಾಡಿದ್ದ ಜಮೀನುಗಳನ್ನು ಒಟ್ಟಿಗೆ ಕೂಡಿಸಿ ಅವುಗಳನ್ನು ಅಡವಿಟ್ಟು 500 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದೂ ದೂರಿನಲ್ಲಿ ತಿಳಿಸಲಾಗಿತ್ತು. ಕಳೆದ ವಾರ ಸದಾನಂದಗೌಡ ಅವರ ಸಂಪುಟದ ಹಿರಿಯ ಸದಸ್ಯ ಗೃಹ ಸಚಿವ ಆರ್ .ಅಶೋಕ್ ಅವರ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಿಡಿಎ ಸ್ವಾಧೀನದಲ್ಲಿದ್ದ ಭೂಮಿಯನ್ನು ಅಕ್ರಮವಾಗಿ ಖರೀದಿಸಿ, ಡಿ ನೋಟಿಫೈ ಮಾಡಿ ಲಾಭ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಾಲಯವು ತನಿಖೆಗೆ ಆದೇಶಿಸಿತ್ತು. ಈಗ ಸದಾನಂದಗೌಡ ಅವರ ಸಂಪುಟದ ಇನ್ನೊಬ್ಬ ಸದಸ್ಯ ಸಚಿವ ನಿರಾಣಿ ಅವರು ತನಿಖೆಗೆ ಒಳಪಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಣದ ಲಾಭಕ್ಕಾಗಿ ಸರ್ಕಾರಿ ಭೂಮಿಯನ್ನು ಡಿ ನೋಟಿಫೈ ಮಾಡಿದ ಕುರಿತಾದ ಖಾಸಗಿ ದೂರಿನ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಲೋಕಾಯುಕ್ತ ನ್ಯಾಯಾಲಯದ ಆದೇಶದಂತೆ ಈಗ ನ್ಯಾಯಾಂಗದ ವಶದಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ.
2018/12/12 16:45:44
https://www.prajavani.net/article/%E0%B2%AD%E0%B3%82-%E0%B2%B9%E0%B2%97%E0%B2%B0%E0%B2%A3-%E0%B2%B2%E0%B3%8B%E0%B2%95%E0%B2%BE%E0%B2%AF%E0%B3%81%E0%B2%95%E0%B3%8D%E0%B2%A4-%E0%B2%A4%E0%B2%A8%E0%B2%BF%E0%B2%96%E0%B3%86-%E0%B2%88%E0%B2%97-%E0%B2%B8%E0%B2%9A%E0%B2%BF%E0%B2%B5-%E0%B2%A8%E0%B2%BF%E0%B2%B0%E0%B2%BE%E0%B2%A3%E0%B2%BF-%E0%B2%B8%E0%B2%B0%E0%B2%A6%E0%B2%BF
mC4
"ಲಂಚಾವತಾರ"ದ ಮೂಲಕ ರಾಜಕಾರಣಿಗಳ ಬೆವರಿಳಿಸುತ್ತಿದ್ದ ರಂಗ ರತ್ನಾಕರನ ನೆನಪು! | Udayavani – ಉದಯವಾಣಿ Saturday, 06 Jun 2020 | UPDATED: 12:15 PM IST ಮಾಸ್ಟರ್‌ಗೆ ಅದೆಂಥಾ ಧೈರ್ಯ...ಖಡ್ಗದ ಕಡಿತ ಅವರ ಮಾತು ವಿಷ್ಣುದಾಸ್ ಪಾಟೀಲ್, May 5, 2019, 11:29 AM IST ಕನ್ನಡ ರಂಗಭೂಮಿಯ ಸೂರ್ಯ ಮರೆಯಾದಂತೆ ಭಾಸವಾಗುತ್ತಿದೆ. ಹಲವು ವರ್ಷ ನಾಟಕ ಕ್ಷೇತ್ರದಲ್ಲಿ ಆನೆ ನಡೆದದ್ದೇ ದಾರಿ ಎಂಬಂತೆ ನಿರ್ಭಿಡೆಯಿಂದ ಪಾತ್ರಗಳ ಮೂಲಕ ರಂಜನೆ ಮತ್ತು ಸಂದೇಶಗಳನ್ನು ಯಾವ ಮುಚ್ಚು ಮರೆಯಿಲ್ಲದೆ ನೀಡಿದ ಮಾಸ್ಟರ್‌ ಹಿರಣ್ಣಯ್ಯ ಅವರು ಎಲ್ಲರನ್ನೂ ಅಗಲಿದ್ದಾರೆ. ಮಾತುಗಳೆಂದರೆ ಹಿರಣ್ಣಯ್ಯ ಅವರ ಹಾಗೆ, ನೇರವಾಗಿ ಹೇಳುತ್ತಾನೆ ಎಂದು ಹಲವರು ಆಡಿಕೊಳ್ಳುತ್ತಿದ್ದರು. ಇದಕ್ಕೆ ಕಾರಣ ಸಮಾಜದಲ್ಲಿರುವ, ರಾಜಕಾರಣದಲ್ಲಿರುವ ಅಂಕು ಡೊಂಕುಗಳು ,ಹುಳುಕುಗಳನ್ನು ಅವರು ರಂಗದಲ್ಲಿ ಪ್ರಸ್ತುತಪಡಿಸುತ್ತಿದ್ದುದೇ ಕಾರಣ. ನೇರ ನಡೆನುಡಿಯ ಹಿರಣ್ಣಯ್ಯ ಬದುಕೇ ವಿಶಿಷ್ಠತೆಯಿಂದ ಕೂಡಿರುವುದು. ಹೇಗೆ ಬೇಕೋ ಹಾಗೆ ನೋವು , ನಲಿವು ಸವಾಲುಗಳ ಮೂಲಕ ಜನಪ್ರಿಯ ವ್ಯಕ್ತಿತ್ವವಾಗಿ ಉಳಿದುಕೊಂಡವರು ಅವರು. ಲಂಚಾವತಾರ, ಹೆಸರೆ ಹೇಳುವಂತೆ ನಾಟಕದಲ್ಲಿ ಲಂಚದ ಕುರಿತಾಗಿ, ರಾಜಕಾರಣಿಗಳ ಕೋಟಿ ಲೂಟಿಯ ಕುರಿತಾಗಿ ತಮ್ಮದೇ ಶೈಲಿಯಲ್ಲಿ ಜನರಿಗೆ ತಲುಪಿಸಿ ಮನೋರಂಜನೆ ನೀಡಿ ಗಮನಸೆಳೆದವರು. ಮಾಸ್ಟರ್‌ ಹಿರಣ್ಣಯ್ಯ. ಲಂಚಾವತಾರ ನಾಟಕ 12,000 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡದ್ದು ರಂಗಭೂಮಿಯ ದಾಖಲೆಯಾಗಿ ಉಳಿದಿದೆ. ಯಾವುದನ್ನೂ ಮುಚ್ಚಿಡದಿರುವ ವ್ಯಕ್ತಿತ್ವ ಹಿರಣ್ಣಯ್ಯ ಅವರದ್ದು, ಸಾವಿರ ಸುಳ್ಳು ಹೇಳಿ ಮದುವೆ ಮಾಡಿ ಎನ್ನುತ್ತಾರೆ ಆದರೆ ಮಾಸ್ಟರ್‌ ಹಿರಣ್ಣಯ್ಯ ಅವರು ನಾನು ಸತ್ಯ ಹೇಳಿದ್ದರಿಂದಲೆ ನನಗೆ ಒಳ್ಳೆಯ ಹೆಂಡತಿ ಸಿಕ್ಕಿದಳು ಎಂದು ವೀಕ್‌ ಎಂಡ್‌ ವಿದ್‌ ರಮೇಶ್‌ ಕಾರ್ಯಕ್ರಮದಲ್ಲಿ ಹೇಳಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ. ನಾನು ಕುಡಿತೇನೆ, ಇಸ್ಪಿಟ್‌ ಆಡ್ತೇನೆ, ನಾಟಕದವನು, ಹಾಗೋ ಹೀಗೋ ಆಚೆ ಈಚೆ ನೋಡುತ್ತೇನೆ, ಇಷ್ಟಾದ ಮೇಲೂ ನಿಮ್ಮ ಮಗಳನ್ನು ನನಗೆ ಕೊಡುವುದಾದರೆ ಕೊಡಿ ಎಂದು ನಾನು ನನ್ನ ಮಾವನಲ್ಲಿ ಕೇಳಿಕೊಂಡಿದ್ದೆ ಎಂದು ಹಿರಣ್ಣಯ್ಯ ಹೇಳಿಕೊಂಡಿದ್ದರು. ಅನಿವಾರ್ಯ ಎಂಬಂತೆ ಹಿರಣ್ಣಯ್ಯ ಅವರು ಅಂಜದೆ, ಅಳುಕದೆ ರಾಜಕಾರಣಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದವರು. ಇಂದಿರಾ ಗಾಂಧಿ ಅವರ ವಿರುದ್ಧವೂ ಟೀಕೆಯ ಮಳೆಗೈದು ದಾವೆ ಎದುರಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದವರು. ವೃದ್ಧಾಪ್ಯದಲ್ಲೂ ಟೀಕೆ ನಿಲ್ಲಿಸದ ಮಾಸ್ಟರ್‌ ಹಿರಣ್ಣಯ್ಯ ಅವರು 80ವರ್ಷ ಕಳೆದ ಬಳಿಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಪದವೊಂದನ್ನು ಟೀಕೆ ಮಾಡಿದದ್ದರು. ಸಿದ್ದರಾಮಯ್ಯ ಅಭಿಮಾನಿಗಳ ಕಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಕ್ಷಮೆಯನ್ನೂ ಯಾಚಿಸಿ ಉದಾರತೆ ಮತ್ತು ಹಿರಿತನವನ್ನು ತೋರಿದ್ದರು. ಯಾವುದೇ ಪಕ್ಷವೆಂದು ನೋಡದೆ ಟೀಕಿಸುತ್ತಿದ್ದ ಹಿರಣ್ಣಯ್ಯ ಬದುಕಿನ ಯಾತ್ರೆಯಲ್ಲಿ ಗಳಿಸಿದ್ದು ಖ್ಯಾತಿ . ಬದುಕನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಹಲವರಿಗೆ ತಿಳಿಸಿ ಹೇಳುವಲ್ಲಿ ಹಿರಿಯಜ್ಜನಾಗಿದ್ದ ಅವರು ನಾನೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಮುಂದಾಗಿದ್ದೆ ಎನ್ನುತ್ತಾರೆ. ಸಂಕಷ್ಟಗಳ ಸರಮಾಲೆ ನನ್ನನ್ನು ಆವರಿಸಿದ್ದರೂ ಎಲ್ಲವನ್ನು ಎದುರಿಸಿ ಜೀವನದಲ್ಲಿ ಗೆದ್ದಿದ್ದೇನೆ ಎಂದು ಶಾಂತಿ ನಿವಾಸದಲ್ಲಿ ಹೇಳುತ್ತಿದ್ದ ಮಾಸ್ಟರ್‌ ಹಿರಣ್ಣಯ್ಯ ಮೌನಿಯಾಗಿದ್ದಾರೆ. ಅಭಿಮಾನಿಗಳಿಗೆ "ಮಕ್ಮಲ್‌ ಟೋಪಿ" ಹಾಕಿ "ದೇವದಾಸಿ"ಯನ್ನು ತೋರಿಸಿ "ನಡುಬೀದಿ ನಾರಾಯಣ"ನಾಗಿ ನೈಜ ಜೀವನದ "ಪಶ್ಚಾತ್ತಾಪ"ವನ್ನು ವ್ಯಕ್ತಪಡಿಸಿ ಭ್ರಷ್ಟಾಚಾರ , "ಲಂಚಾವತಾರ", "ಚಪಲಾವತಾರ"ದ ವಿರುದ್ಧ "ಎಚ್ಚಮ ನಾಯಕ"ನಾಗಿ ಹೋರಾಡಿದ ಮಾಸ್ಟರ್‌ ಹಿರಣ್ಣಯ್ಯ ಬಣ್ಣದ ಬದುಕಿನ ಕೊಂಡಿ ಕಳಚಿಕೊಂಡು ಬಲು ದೂರ ಸಾಗಿದ್ದಾರೆ. ಹಿರಣ್ಣಯ್ಯ ಅವರು ಬಿಟ್ಟು ಹೋಗಿರುವ ನೇರ ನಡೆ ನುಡಿ, ಧೈರ್ಯ ಮತ್ತು ತಪ್ಪನ್ನು ಎತ್ತಿ ತೋರಿಸುವ ಎದೆಗಾರಿಕೆ ಎಲ್ಲರಿಗೂ ಆದರ್ಶಪ್ರಾಯ. ಮುಖವಾಡ ಧರಿಸಿ ಬದುಕಬಾರದು , ಏನೇ ಇದ್ದರು ಪಾರದರ್ಶಕವಾಗಿರಬೇಕು ಎನ್ನುವ ಆದರ್ಶ ಎಲ್ಲರ ಬದುಕಿಗೂ ಅನ್ವಯವಾಗಬೇಕಲ್ಲವೆ?..
2020/06/06 06:45:35
https://www.udayavani.com/articles/web-focus/master-hirannaiah-daring-artist
mC4
ಪುತ್ರಿ ಸಿನಿಮಾದಲ್ಲಿ ನಟಿಸುವ ಸುದ್ದಿ ತಳ್ಳಿ ಹಾಕಿದ ಸಚಿನ್ | News13 News13 > ಸುದ್ದಿಗಳು > ರಾಷ್ಟ್ರೀಯ > ಪುತ್ರಿ ಸಿನಿಮಾದಲ್ಲಿ ನಟಿಸುವ ಸುದ್ದಿ ತಳ್ಳಿ ಹಾಕಿದ ಸಚಿನ್ ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಿನಿಮಾಗೆ ಸೇರಲಿದ್ದಾರೆ ಎಂಬ ವದಂತಿ ಭಾರೀ ಸುದ್ದಿಯನ್ನು ಮಾಡಿತ್ತು. ಇದೀಗ ಸ್ವತಃ ಸಚಿನ್ ಅವರಿಗೆ ತನ್ನ ಮಗಳು ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ತನ್ನ ಮಗಳು ಸಾರಾ ಶಿಕ್ಷಣದತ್ತ ಗಮನ ಹರಿಸುತ್ತಿದ್ದಾಳೆ. ಅವಳು ಸಿನಿಮಾದಲ್ಲಿ ನಟಿಸುತ್ತಿದ್ದಾಳೆ ಎಂಬ ಸುದ್ದಿ ಆಧಾರ ರಹಿತವಾದುದು ಎಂದು ಸಚಿನ್ ಟ್ವೀಟರ್‌ನಲ್ಲಿ ಸೋಮವಾರ ಸ್ಪಷ್ಟಪಡಿಸಿದ್ದಾರೆ. ನಟ ಶಾಹಿದ್ ಕಪೂರ್ ಅವರ ಮುಂದಿನ ಸಿನಿಮಾದಲ್ಲಿ ಸಾರ ನಟಿಸುತ್ತಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಸಚಿನ್ ಅವರ ಜೀವನಚರಿತ್ರೆಯನ್ನೊಳಗೊಂಡ ಸಾಕ್ಷ್ಯಚಿತ್ರವೊಂದು ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ. ಇದನ್ನು ಲಂಡನ್ ಮೂಲದ ಜೇಮ್ಸ್ ಎರ್ಸ್ಕಿನ್ ಎಂಬುವವರು ನಿರ್ದೇಶಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಅವರ ಮಗಳು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿ ಹುಟ್ಟಿಕೊಂಡಿದ್ದು ಗಮನೀಯ.
2020/05/30 01:12:25
https://news13.in/archives/6019
mC4
ಸಾಲಗಾರರ ಕಾಟಕ್ಕೆ ಹೆದರಿ ಮಂಡ್ಯದಲ್ಲಿ ರೈತ ಆತ್ಮಹತ್ಯೆ | Defaulted farmer hanged himself in KR Pet, Manday - Kannada Oneindia » ಸಾಲಗಾರರ ಕಾಟಕ್ಕೆ ಹೆದರಿ ಮಂಡ್ಯದಲ್ಲಿ ರೈತ ಆತ್ಮಹತ್ಯೆ ಸಾಲಗಾರರ ಕಾಟಕ್ಕೆ ಹೆದರಿ ಮಂಡ್ಯದಲ್ಲಿ ರೈತ ಆತ್ಮಹತ್ಯೆ Published: Tuesday, May 16, 2017, 19:45 [IST] ಕೆ.ಆರ್.ಪೇಟೆ, ಮೇ 16: ಬರದಿಂದ ಬೆಳೆಬೆ ಳೆಯಲಾಗದೆ ಸಾಲ ಮಾಡಿಕೊಂಡಿದ್ದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಚಿಕ್ಕಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಸೋಮನಹಳ್ಳಿ ಗ್ರಾಮದ ನಿವಾಸಿ ಈರೇಗೌಡ (50) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಅಘಲಯ ಗ್ರಾಮದಲ್ಲಿರುವ ವಿ.ಎಸ್.ಎಸ್.ಎನ್. ಬ್ಯಾಂಕಿನಲ್ಲಿ ಎರಡು ಲಕ್ಷ ರೂ. ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಎರಡು ಲಕ್ಷ ರೂ.ಗಳನ್ನು ಸಾಲ ಮಾಡಿದ್ದರು. ಅಲ್ಲದೆ, ಕೈಸಾಲವನ್ನು ಕೂಡ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.[ಮಂಡ್ಯದಲ್ಲಿ ವಿಷವುಣಿಸಿ, ಉಸಿರುಗಟ್ಟಿಸಿ ವಿದ್ಯಾರ್ಥಿಯ ಕೊಲೆ] ಒಂದು ಎಕರೆ ಜಮೀನು ಹೊಂದಿದ್ದು ಮಳೆಯಾಗದ ಹಿನ್ನೆಲೆಯಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಮಾಡಿದ ಸಾಲದ ಬಡ್ಡಿ ದಿನದಿಂದ ದಿನಕ್ಕೆ ಹೆಚ್ಚಾಗಿತ್ತಲ್ಲದೆ, ಕೈ ಸಾಲ ನೀಡಿದವರು ಹಿಂತಿರುಗಿಸುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಅವರು ತಮ್ಮ ಜಮೀನಿನ ಬಳಿಯ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮೃತರ ಪತ್ನಿ ನಾಗಮ್ಮ ಪಟ್ಟಣ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮೃತ ರೈತನಿಗೆ ಒಬ್ಬ ಪುತ್ರ ಮತ್ತು ಪುತ್ರಿಯಿದ್ದಾರೆ. ಸಬ್‍ಇನ್ಸ್ ಪೆಕ್ಟರ್ ಅರುಣ್‍ಕುಮಾರ್ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. farmer, death, kr pet, mandya, ರೈತ, ಸಾವು, ಕೆ ಆರ್ ಪೇಟೆ, ಮಂಡ್ಯ A farmer hanged to death in Santhebachanahalli here in KR Pet of Mandya. Eregowda hanged himself after he fails to pay 4 lack loans, which he have received from local banks.
2017/09/20 00:25:29
https://kannada.oneindia.com/news/mandya/defaulted-farmer-hanged-himself-in-kr-pet-manday-117962.html
mC4
ಮತ ಖರೀದಿಗೆ ಪೈಪೋಟಿ, ಲಕ್ಷಾಂತರ ವೆಚ್ಚ | Prajavani ಮತ ಖರೀದಿಗೆ ಪೈಪೋಟಿ, ಲಕ್ಷಾಂತರ ವೆಚ್ಚ ಒಕ್ಕಲಿಗರ ಸಂಘದ ಚುನಾವಣೆ ಜ.5ರಂದು Published: 03 ಜನವರಿ 2014, 16:24 IST Updated: 03 ಜನವರಿ 2014, 16:24 IST ಕೋಲಾರ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಎರಡು ದಿನ ಮಾತ್ರ ಉಳಿದಿದೆ. ಪ್ರತಿಷ್ಠೆಯ ಕಣವಾಗಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಕೋಟಿಗಟ್ಟಲೆ ಹಣವನ್ನು ಲೆಕ್ಕಕ್ಕೇ ಇಡದೆ ಖರ್ಚು ಮಾಡುತ್ತಿ­ದ್ದಾರೆ. ಎರಡು ದಿನದಲ್ಲಿ ಹತ್ತಾರು ಕೋಟಿ ರೂಪಾಯಿ ಖರ್ಚಾಗುವ ನಿರೀಕ್ಷೆಯೂ ಇದೆ. ಯಾವುದೇ ರಾಜ­ಕೀಯ ಚುನಾವಣೆಗಿಂತಲೂ ಕಡಿಮೆ ಇಲ್ಲದಂತೆ ಸಂಘದ ಚುನಾವಣೆಯ ಚಟುವಟಿಕೆಗಳು ನಡೆಯುತ್ತಿವೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳೆರಡೂ ಸೇರಿ ಮೂರು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸ್ಪರ್ಧಿಸಿರುವ 14 ಅಭ್ಯರ್ಥಿಗಳ ಪೈಕಿ ಆರು ಮಂದಿ ಎರಡು ಪ್ರತ್ಯೇಕ ಒಕ್ಕೂಟಗಳನ್ನು ರಚಿಸಿ­ಕೊಂಡು ಸಂಯುಕ್ತವಾಗಿ ಪ್ರಚಾರ ನಡೆ­ಸು­ತ್ತಿದ್ದಾರೆ. ಉಳಿದವರು ವೈಯ­ಕ್ತಿಕ­ವಾಗಿ ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಮತ ಹಾಕಲು ತಮ್ಮ ಸಮುದಾಯ­ದವರಿಂದಲೇ ಹಣವನ್ನು ಪಡೆಯಲು ಒಕ್ಕಲಿಗ ಮತದಾರರು ಯಾವುದೇ ಹಿಂಜರಿಕೆಯನ್ನು ತೋರದಿರುವುದು ಕೂಡ ಪ್ರಸ್ತುತ ಗಮನ ಸೆಳೆದಿರುವ ಅಂಶ. ಕೆಲವು ಅಭ್ಯರ್ಥಿಗಳು ತಾವೇನೂ ಕೊಡುವ ಸ್ಥಿತಿಯಲ್ಲಿ ಇಲ್ಲ. ಇಷ್ಟವಿದ್ದರೆ ಮತ ಹಾಕಿ ಎಂದು ನಿಷ್ಠುರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಮತಕ್ಕೆ 2 ಸಾವಿರ: ಎರಡು ಒಕ್ಕೂಟಗಳ ಪೈಕಿ ಒಂದು ಒಕ್ಕೂಟದ ಅಭ್ಯರ್ಥಿಗಳು ಒಂದು ಮತಕ್ಕೆ ಒಂದು ಸಾವಿರ ರೂಪಾಯಿ ಆಮಿಷವನ್ನು ಒಡ್ಡಿದ್ದರೆ, ಅದಕ್ಕಿಂತಲೂ ಹೆಚ್ಚು ಶ್ರೀಮಂತರಾದ ಮತ್ತೊಂದು ಒಕ್ಕೂಟದ ಅಭ್ಯರ್ಥಿಗಳು ಒಂದು ಮತಕ್ಕೆ ಎರಡು ಸಾವಿರ ರೂಪಾಯಿ ಹಂಚುವ ಸಿದ್ಧತೆ ನಡೆಸಿ­ದ್ದಾರೆ. ಇದು ಚುನಾವಣೆಯ ಹಿಂದಿನ ದಿನ ಹೆಚ್ಚು ವೇಗ ಪಡೆಯುವ ಸಾಧ್ಯತೆ­ಗಳಿವೆ. ಹಣವಷ್ಟೇ ಅಲ್ಲದೆ ಮೊಬೈಲ್ ಫೋನ್, ಚಿನ್ನದ ಉಂಗುರಗಳನ್ನು ನೀಡಲು ಕೆಲವು ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ ಎಂದೂ ತಿಳಿದುಬಂದಿದೆ. ಕೋಟಿಗಟ್ಟಲೆ: ಎರಡೂ ಜಿಲ್ಲೆ ಸೇರಿ ಸಂಘದಲ್ಲಿ 35,060 ಮತದಾರರಿ­ದ್ದಾರೆ. ಒಂದು ಸಾವಿರದಂತೆ ಒಬ್ಬ ಅಭ್ಯರ್ಥಿ ನೀಡಿದರೆ ಕನಿಷ್ಠ 3.50 ಕೋಟಿ ಖರ್ಚು ಮಾಡಬೇಕಾಗುತ್ತದೆ. ಎರಡು ಸಾವಿರ ರೂಪಾಯಿ ನೀಡಿ­ದರೆ 7 ಕೋಟಿ ಖರ್ಚಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಮೂವರು ಅಭ್ಯರ್ಥಿ­ಗಳೂ ಬಹಳಷ್ಟು ಮತದಾರ­ರಿಗೆ ಹಣ ನೀಡದೇ ಇದ್ದರೂ, ಕನಿ಼ಷ್ಠ ತಲಾ 1 ಕೋಟಿ ರೂಪಾಯಿ ಖರ್ಚಾ­ಗುವ ನಿರೀಕ್ಷೆ ಇದೆ. ಮತದಾರರ ಹೆಚ್ಚಳ: ಸಂಘದ ಚುನಾ­ವಣೆಯು ಐದು ವರ್ಷಕ್ಕೆ ನಡೆ­ಯು­ತ್ತದೆ. ಐದು ವರ್ಷದ ಹಿಂದೆ ಚುನಾ­ವಣೆ ನಡೆದ ಸಂದರ್ಭದಲ್ಲಿ ಎರಡೂ ಜಿಲ್ಲೆಗಳಲ್ಲಿ ಒಟ್ಟಾರೆ ಸುಮಾರು ಐದೂ­ವರೆ ಸಾವಿರ ಮತ­ದಾರರಷ್ಟೇ ಇದ್ದರು. ಈಗ ಆ ಸಂಖ್ಯೆಯು ಸುಮಾರು ಆರು ಪಟ್ಟು ಹೆಚ್ಚಾಗಿದೆ. ಈ ಬೆಳವಣಿಗೆ ನಿರೀಕ್ಷಿತವೇ ಆಗಿದೆ ಎನ್ನು­ತ್ತಾರೆ ಸಮುದಾಯದ ಮುಖಂಡರೊಬ್ಬರು. ಈ ಹಿಂದಿನ ಚುನಾವಣೆಗಿಂತಲೂ ಮುಂಚೆ ಸದಸ್ಯತ್ವ ಹೊಂದಲು ಅವ­ಕಾಶ­ವನ್ನೇ ನೀಡಿರಲಿಲ್ಲ. ಚುನಾವಣೆಯ ಬಳಿಕವಷ್ಟೇ ಹೊಸ ಸದಸ್ಯತ್ವಕ್ಕೆ ಅವ­ಕಾಶ ನೀಡಿದ್ದರಿಂದ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬುದು ಅವರ ನುಡಿ. ಮಹಿಳಾ ಅಭ್ಯರ್ಥಿ ಇಲ್ಲ ಎರಡೂ ಜಿಲ್ಲೆಯಿಂದ ಸ್ಪರ್ಧಿಸಿರುವ 14 ಮಂದಿ ಪೈಕಿ ಮಹಿಳೆಯರು ಒಬ್ಬರೂ ಇಲ್ಲ ಎಂಬುದು ಗಮನಾರ್ಹ. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ವೈದ್ಯರು , ವಕೀಲರು, ರಾಜಕೀಯ ಮುಖಂಡರ ಸಂಖ್ಯೆಯೇ ಹೆಚ್ಚಿದೆ. ವೈದ್ಯರು ಮತ್ತು ವಕೀಲರು, ರಿಯಲ್ ಎಸ್ಟೇಟ್ ಉದ್ಯಮಿಗಳು ತಮ್ಮ ವೃತ್ತಿ ಜವಾಬ್ದಾರಿಗಳನ್ನು ಪಕ್ಕಕ್ಕಿಟ್ಟು ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಪ್ರವಾಸವನ್ನು ಕೈಗೊಂಡಿದ್ದಾರೆ. ಪಕ್ಷಾತೀತವಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಸಂಘದ ಮಾಜಿ ಪದಾಧಿಕಾರಿಗಳು ಮತ್ತು ಮತ್ತು ಹೊಸ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕೆ.ಬಿ.ಗೋಪಾಲಕೃಷ್ಣ, ಡಾ.ಎಂ.ಸಿ.ನವೀನಕುಮಾರ್, ಪಿ.ನಾಗರಾಜು, ಆರ್.ನಂಜುಂಡಗೌಡ, ಡಾ.ಡಿ.ಕೆ.ರಮೇಶ್, ಎನ್.ರಮೇಶ್ ಯಲುವಳ್ಳಿ, ಡಿ.ರಾಮಚಂದ್ರ, ವಿ.ಇ.ರಾಮಚಂದ್ರ, ಟಿ.ಎಂ.ರಂಗನಾಥ್, ಎಚ್.ಲೋಕೇಶ್, ಸಿ.ವಿ.ಲೋಕೇಶಗೌಡ, ಎನ್.ಶ್ರೀರಾಮರೆಡ್ಡಿ, ಎಂ.ಸಿ.ಸತೀಶ್ ಮತ್ತು ಎಂ.ಎನ್.ಸದಾಶಿವರೆಡ್ಡಿ ಕಣದಲ್ಲಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಸೋತವರ ಪರ ಅನುಕಂಪ, ಗೆದ್ದಿದ್ದ ಕೆಲವರ ಕುರಿತ ಅಸಮಾಧಾನ ಮತ್ತು ಹೊಸದಾಗಿ ಸ್ಪರ್ಧಿಸಿದವರ ಬಗ್ಗೆ ಕುತೂಹಲ ಈ ಬಾರಿಯ ಚುನಾವಣೆಯ ವಿಶೇಷವಾಗಿದೆ. ಮತದಾನ ಎಲ್ಲೆಲ್ಲಿ? ಜ.5ರಂದು ಬೆಳಿಗ್ಗೆ 8ರಿಂದ ಸಂಜ 4ರವರೆಗೆ ಮತದಾನ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ನಡೆಯುತ್ತದೆ. ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳೆರಡಕ್ಕೂ ಒಂದೇ ಮತದಾನ ಕೇಂದ್ರವನ್ನು ಬಾಗೇಪಲ್ಲಿಯಲ್ಲಿ ಸ್ಥಾಪಿಸಲಾಗಿದೆ. ಕೋಲಾರದ ಮಹಿಳಾ ಸಮಾಜ ವಿದ್ಯಾಸಂಸ್ಥೆ, ಶ್ರೀನಿವಾಸಪುರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಮುಳಬಾಗಲಿನ ಸರ್ಕಾರಿ ಪದವಿಪೂರ್ವ ಕಾಲೇಜು, ಬಂಗಾರಪೇಟೆಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಮಾಲೂರಿನ ಬಾಲಗಂಗಾಧರನಾಥ ಸ್ವಾಮೀಜಿ ವಿದ್ಯಾಸಂಸ್ಥೆ, ಚಿಕ್ಕಬಳ್ಳಾಪುರದ ಜೂನಿಯರ್ ಕಾಲೇಜು, ಗೌರಿಬಿದನೂರಿನ ಮುನ್ಸಿಪಲ್ ಪ್ರೌಢಶಾಲೆ, ಚಿಂತಾಮಣಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಶಿಡ್ಲಘಟ್ಟದ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಬಾಗೇಪಲ್ಲಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿಯಾಗಿರುವ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಎಂ.ಶಿವಣ್ಣ ತಿಳಿಸಿದ್ದಾರೆ. ಮತ ಎಣಿಕೆಯು ಕೋಲಾರದ ಗೋಕುಲ ವಿದ್ಯಾಸಂಸ್ಥೆಯ ಆವರಣದಲ್ಲಿ ಜ.6ರಂದು ಬೆಳಿಗ್ಗೆ 9ರಿಂದ ಮತ ಎಣಿಕೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಒಂದೇ ಮತದ ಲೆಕ್ಕಾಚಾರ ಚುನಾವಣೆಯಲ್ಲಿ ಒಂದೇ ಮತ ಚಲಾವಣೆಯ ಲೆಕ್ಕಾಚಾರವೂ ನಡೆಯುತ್ತಿದೆ. ಮೂರು ಮತದ ಬದಲಿಗೆ ಒಂದೇ ಮತವನ್ನು ಚಲಾಯಿಸಿದರೆ ಹೆಚ್ಚು ಹಣ ನೀಡುವ ಆಮಿಷವನ್ನೂ ಅಭ್ಯರ್ಥಿಗಳು ಒಡ್ಡುತ್ತಿದ್ದಾರೆ ಎಂದು ತಿಳಿದುಬಂದಿದೆ. ತಮಗೊಬ್ಬರಿಗೇ ಮತವನ್ನು ಚಲಾಯಿಸಿ, ಉಳಿದ ಇಬ್ಬರಿಗೆ ಮತ ಚಲಾಯಿಸದಿದ್ದರೆ ತಾವು ಮೊದಲ ಸ್ಥಾನ ಪಡೆಯಬಹುದು ಎಂಬ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮತದಾರರಿಗೆ 4ರಿಂದ 5 ಸಾವಿರ ರೂಪಾಯಿವರೆಗೂ ಆಮಿಷ ಒಡ್ಡುತ್ತಿದ್ದಾರೆ. ಈಗಾಗಲೇ ಒಂದಕ್ಕಿಂತಲೂ ಹೆಚ್ಚು ಬಾರಿ ಸಂಘಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ ಕೆಲವರು ಪ್ರಚಾರ ಸಂದರ್ಭದಲ್ಲಿ ಈ ತಂತ್ರವನ್ನು ಬಳಸುತ್ತಿದ್ದಾರೆ. ಇದು ಅವರಿಗೆ ಹೆಚ್ಚು ವೆಚ್ಚವನ್ನು ತರುವ ತಂತ್ರವೂ ಹೌದು.
2018/12/13 01:56:15
https://www.prajavani.net/article/%E0%B2%AE%E0%B2%A4-%E0%B2%96%E0%B2%B0%E0%B3%80%E0%B2%A6%E0%B2%BF%E0%B2%97%E0%B3%86-%E0%B2%AA%E0%B3%88%E0%B2%AA%E0%B3%8B%E0%B2%9F%E0%B2%BF-%E0%B2%B2%E0%B2%95%E0%B3%8D%E0%B2%B7%E0%B2%BE%E0%B2%82%E0%B2%A4%E0%B2%B0-%E0%B2%B5%E0%B3%86%E0%B2%9A%E0%B3%8D%E0%B2%9A
mC4
ಲೇಬರ್ ಸದಸ್ಯತ್ವಕ್ಕೆ ಮೇಘನಾದ ದೇಸಾಯಿ ರಾಜೀನಾಮೆ | Vartha Bharati- ವಾರ್ತಾ ಭಾರತಿ ಲೇಬರ್ ಸದಸ್ಯತ್ವಕ್ಕೆ ಮೇಘನಾದ ದೇಸಾಯಿ ರಾಜೀನಾಮೆ ವಾರ್ತಾ ಭಾರತಿ Nov 20, 2020, 11:35 PM IST ಲಂಡನ್, ನ. 20: ಭಾರತ ಮೂಲದ ಅರ್ಥಶಾಸ್ತ್ರಜ್ಞ ಹಾಗೂ ಲೇಖಕ ಲಾರ್ಡ್ ಮೇಘನಾದ ದೇಸಾಯಿ ಬ್ರಿಟನ್‌ನ ಪ್ರತಿಪಕ್ಷ ಲೇಬರ್ ಪಾರ್ಟಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿರುವ ಜನಾಂಗೀಯ ತಾರತಮ್ಯವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಪಕ್ಷ ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ. ಲೇಬರ್ ಪಕ್ಷದ ಮುಖ್ಯಸ್ಥ ಜೆರೆಮಿ ಕಾರ್ಬಿನ್ 'ಕಾನೂನುಬಾಹಿರ ಕೃತ್ಯ'ಗಳನ್ನು ನಡೆಸಿರುವುದನ್ನು ದೇಶದ ಮಾನವಹಕ್ಕುಗಳ ಸಂಸ್ಥೆ ದೃಢಪಡಿಸಿರುವ ಹೊರತಾಗಿಯೂ, ಕೇವಲ 19 ದಿನಗಳ ಅಮಾನತಿನ ಬಳಿಕ ಅವರನ್ನು ಪಕ್ಷಕ್ಕೆ ಮರು ಸೇರ್ಪಡೆಗೊಳಿಸಲಾಗಿದೆ ಎಂದು ದೇಸಾಯಿ ಹೇಳಿದರು. ಈ ಹಿನ್ನೆಲೆಯಲ್ಲಿ, ಪಕ್ಷದ ನನ್ನ 49 ವರ್ಷಗಳ ಸದಸ್ಯತ್ವವನ್ನು ಕೊನೆಗೊಳಿಸುವ ನಿರ್ಧಾರಕ್ಕೆ ನಾನು ಬರಬೇಕಾಯಿತು ಎಂದು 80 ವರ್ಷದ ಲೇಖಕ ಹೇಳಿದರು. ''ಯಾವುದೇ ಕ್ಷಮಾಪಣೆಯಿಲ್ಲದೆ ಅವರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಂಡಿರುವುದು ವಿಚಿತ್ರ ನಿರ್ಧಾರವಾಗಿದೆ. ಪಕ್ಷದಲ್ಲಿ ಈ ಮಾದರಿಯ ಜನಾಂಗೀಯ ತಾರತಮ್ಯವಿರುವುದನ್ನು ನನಗೆ ಸಹಿಸಲು ಸಾಧ್ಯವಿಲ್ಲ'' ಎಂದು ಅವರು ಹೇಳಿದ್ದಾರೆ.
2020/11/28 19:09:03
https://www.varthabharati.in/article/antaraashtriya/268145
mC4
ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ- 25 ಸಾವಿರ ಯುನಿಟ್ ಇವಿ ಸ್ಕೂಟರ್ ಮಾರಾಟ ಮಾಡಿದ Komaki - Kannada DriveSpark 19 min ago ದುಬೈನಲ್ಲಿ ಹೊಸ ಡೀಲರ್​ಶಿಪ್ ತೆರೆದ Hero MotoCorp ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ವಿವಿಧ ರಾಜ್ಯಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಸಬ್ಸಡಿ ಜೊತೆಗೆ ರಾಜ್ಯ ಮಟ್ಟದಲ್ಲೂ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ಇವಿ ವಾಹನಗಳ ನೋಂದಣಿ ಸಂಖ್ಯೆಯು ಹೆಚ್ಚಿದೆ. ಕೊಮಾಕಿ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಲೋ ಸ್ಪೀಡ್ ಮತ್ತು ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಲೋ-ಸ್ಪೀಡ್ ಮಾದರಿಗಳಲ್ಲಿ ಎಕ್ಸ್‌ಜಿಟಿ ಸರಣಿಗಳನ್ನು ಮತ್ತು ಹೈ ಸ್ಪೀಡ್ ಮಾದರಿಗಳಲ್ಲಿ ಟಿಎನ್ 95, ಎಂ-5, ಎಸ್ಇ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.
2021/10/28 07:16:07
https://kannada.drivespark.com/two-wheelers/2021/komaki-xgt-x1-ev-scooter-reached-25000-unit-sales-milestone-027593.html
mC4
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ: ಪ್ರಧಾನಿ ಮೋದಿ - The Deccan News ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ: ಪ್ರಧಾನಿ ಮೋದಿ ದೆಹಲಿ: ರಾಜಕೀಯ ಸ್ಥಿರತೆಗೆ ಬಂದಾಗ ಜನರು ಬಿಜೆಪಿಯನ್ನು ನಂಬುತ್ತಾರೆ ಎಂಬುದಕ್ಕೆ ಪುರಾವೆಯಾಗಿ ಕರ್ನಾಟಕ ಉಪಚುನಾವಣೆಯಲ್ಲಿ 15 ವಿಧಾನಸಭಾ ಸ್ಥಾನಗಳಲ್ಲಿ 12 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಜನಾದೇಶವನ್ನು ಹಿಂಬಾಗಿಲಿನ ಮೂಲಕ ಕಳವು ಮಾಡಿದ್ದ ಕಾಂಗ್ರೆಸ್‌ಗೆ ಮತದಾರರು ಉಪಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಕರ್ನಾಟಕದ ಮತದಾರರು ಕಾಂಗ್ರೆಸ್-ಜೆಡಿಎಸ್ ಗೆ ತಕ್ಕ ಪಾಠ ಕಲಿಸಿದ್ದಾರೆ. ಇಂದಿನ ಉಪಚುನಾವಣೆ ಫಲಿತಾಂಶ ದೇಶದ ಎಲ್ಲಾ ರಾಜ್ಯಗಳಿಗೂ ಒಂದು ಸಂದೇಶ ನೀಡಿದೆ. ರಾಜಕೀಯ ಸ್ಥಿರತೆಯ ಬಗ್ಗೆ ದೇಶವು ಏನು ಯೋಚಿಸುತ್ತದೆ ಮತ್ತು ರಾಜಕೀಯ ಸ್ಥಿರತೆಗಾಗಿ ದೇಶವು ಬಿಜೆಪಿಯನ್ನು ಎಷ್ಟು ನಂಬುತ್ತದೆ ಎಂಬ ಉದಾಹರಣೆ ಇಂದು ನಮ್ಮ ಮುಂದೆ ಇದೆ. ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಹೇಳಿದರು. ಇಂದು ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿ 12 ಸ್ಥಾನಗಳನ್ನು ಗಳಿಸಿದ್ದರೆ, ಕಾಂಗ್ರೆಸ್ 2, ಇತರೆ 1, ಜೆಡಿಎಸ್‍ ಯಾವುದೇ ಸ್ಥಾನವನ್ನು ಗಳಿಸಲು ಸಾಧ್ಯವಾಗಿಲ್ಲ. ಇದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಭದ್ರವಾಗಿದೆ.
2020/01/27 22:53:53
https://thedeccannews.com/narendra-modi-accused-the-congress-of-stealing-peoples-mandate-in-karnataka-through-back-door
mC4
ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ: ಪೇಜಾವರ ಶ್ರೀ | udupi pejawar sri blessed that Let the state government be full-time - Kannada Oneindia 5 min ago ಮೊದಲ ಬಾರಿಗೆ ರಾಷ್ಟ್ರೀಯ ಭದ್ರತಾ ಯೋಜನೆ; ರಾಹುಲ್ ಸಮಿತಿಯಲ್ಲಿ 'ಸರ್ಜಿಕಲ್ ಸ್ಟ್ರೈಕ್' ಹೂಡಾ | Updated: Friday, June 1, 2018, 11:52 [IST] ಉಡುಪಿ, ಜೂನ್. 01 : ಸಿಎಂ ಕುಮಾರಸ್ವಾಮಿ ಅನುಭವಿ ರಾಜಕಾರಣಿ. ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ ಎಂದು ಹಾರೈಸುತ್ತೇನೆ ಎಂದು ಪೇಜಾವರ ಶ್ರೀ ಹೇಳಿದರು. ಉಡುಪಿ ಮಠದಲ್ಲಿ ಇಂದು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ವಿಕೃತಿಯಾಗಿವೆ. ರಾಜಕಾರಣಿಗಳು ರೆಸಾರ್ಟ್, ಆಪರೇಷನ್ ನಲ್ಲಿ ತಲ್ಲೀನರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮತ ಚಲಾಯಿಸಿ ಅಭ್ಯರ್ಥಿಗಳಿಗೆ ಹಾರೈಸಿದ ಪೇಜಾವರ ಶ್ರೀಗಳು ಯಾವುದೇ ರಾಜಕೀಯ ಪಕ್ಷಗಳು ನೈತಿಕತೆ ಹೊಂದಿಲ್ಲ. ಗೊಂದಲ ನಿರ್ಮಾಣವಾದ್ರೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಬೇಡ. ಸರ್ವ ಪಕ್ಷ ಸರ್ಕಾರ ಜಾರಿಗೆ ಬರಬೇಕು. ಅಂತಹ ಪ್ರಯೋಗ ರಾಜ್ಯದಲ್ಲಿ ನಡೆಯಬೇಕು. ವಿಪಕ್ಷ ಮುಕ್ತ ಸರ್ಕಾರ ಸರಿಯಲ್ಲ. ವಿಪಕ್ಷ ಇರಬೇಕು ಎಂಬುದು ನನ್ನ ವಾದ. ಮೋದಿ ಸರ್ಕಾರದಿಂದ ಸಾಕಷ್ಟು ಕೆಲಸ ಆಗಿದೆ. ಕೇಂದ್ರ ಸರ್ಕಾರದ ಬಗ್ಗೆ ಬಹಳ ನಿರೀಕ್ಷೆ ಇತ್ತು. ನಿರೀಕ್ಷೆಯಷ್ಟು ಸಾಧನೆಗಳು ಆಗಲಿಲ್ಲ ಎಂಬ ಬೇಸರವಿದೆ. ರಾಮ ಮಂದಿರಕ್ಕಿಂತ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ಗಂಗಾ ಶುದ್ಧೀಕರಣ ವಿಷಯದಲ್ಲೂ ಪೂರ್ತಿ ಕೆಲಸ ಆಗಿಲ್ಲ ಎಂದು ತಿಳಿಸಿದರು. ಈ ಬಾರಿಯೂ ಇಫ್ತಾರ್ ಕೂಟ ಮಾಡಬೇಕೆಂಬ ಭಾವನೆ ಇದೆ. ಮುಸಲ್ಮಾನ ನಾಯಕರು, ಪ್ರಮುಖರು ಒಪ್ಪಿದರೆ ಸತ್ಕಾರ ಕೂಟ ಮಾಡುತ್ತೇನೆ. ಈ ಬಾರಿ ಮುಸ್ಲೀಮರು ಇಫ್ತಾರ್ ಕೂಟಕ್ಕೆ ಬಹಳ ಉತ್ಸಾಹ ತೋರಿಸುತ್ತಿಲ್ಲ. ಕಳೆದ ಬಾರಿಯ ಇಫ್ತಾರ್ ಕೂಟ ಬಹಳ ಚರ್ಚೆಯಾಗಿತ್ತು. ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಿಸಲು ಮುಸಲ್ಮಾನರು ಒಪ್ಪುತ್ತಿಲ್ಲ. ಗೋವಿಂದ ಕಲ್ಯಾಣ ಮಂಟಪದಲ್ಲಿ ಸತ್ಕಾರ ಕೂಟ ಆಯೋಜಿಸುವ ಆಲೋಚನೆಯಿದೆ. ಅಲ್ಪಸಂಖ್ಯಾತರನ್ನು ಬಹು ಸಂಖ್ಯಾತರನ್ನು ಸಮಾನವಾಗಿ ಕಾಣಬೇಕು. ಸಂವಿಧಾನ ಬದಲಿಸಿ ಅಂತ ನಾನು ಯಾವತ್ತೂ ಹೇಳಿಲ್ಲ. ದೇಶದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಶಿಕ್ಷಣ, ಆಹಾರ, ಸರ್ಕಾರದ ಯೋಜನೆ ಎಲ್ಲಾ ಧರ್ಮದ ಬಡವರಿಗೆ ಸಿಗಬೇಕು. ನಾನು ಅಂಬೇಡ್ಕರ್ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು. swamiji state government kumaraswamy udupi district news ಮಠ ರಾಜ್ಯ ಸರ್ಕಾರ ಉಡುಪಿ ಜಿಲ್ಲಾ ಸುದ್ದಿ ಎಚ್ ಡಿ ಕುಮಾರಸ್ವಾಮಿ udupi pejawar sri blessed that Let the state government be full-time. CM Kumaraswamy is an experienced politician. All party government must come into force.
2019/02/21 17:04:28
https://kannada.oneindia.com/news/udupi/udupi-pejawar-sri-blessed-that-let-the-state-government-be-full-time-142358.html
mC4
ಶಾಲೆ ಸ್ಥಳಾಂತರ ಕೈಬಿಡಿ|ಶಾಲೆ ಸ್ಥಳಾಂತರ ಕೈಬಿಡಿ - vijayapura - News in kannada, vijaykarnataka ಶಾಲೆ ಸ್ಥಳಾಂತರ ಕೈಬಿಡಿ ಶಾಲೆ ಸ್ಥಳಾಂತರ ಕೈಬಿಡಿ ವಿಜಯಪುರ: ನಗರದ ಗಾಂಧಿವೃತ್ತದಲ್ಲಿರುವ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ನಂ.1ನ್ನು ಸ್ಥಳಾಂತರಿಸಬಾರದು ಎಂದು ಒತ್ತಾಯಿಸಿ ಶಾಲೆ ಆವರಣದ ಮುಂಭಾಗದಲ್ಲಿ ಕಾನೂನು ರಕ್ಷ ಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ರಾರ‍ಯಲಿ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಸಂಘಟನೆ ಪ್ರಮುಖ ಉದಯಕುಮಾರ ಪುತ್ರನ್‌ ಮಾತನಾಡಿ, ಶತಮಾನಗಳಿಂದ ಬಡ ಮಕ್ಕಳ ಶೈಕ್ಷ ಣಿಕ ಕೇಂದ್ರಬಿಂದುವಾಗಿರುವ ಶಾಲೆಯನ್ನು ವಿನಾಕಾರಣ ಸ್ಥಳಾಂತರಿಸಲಾಗುತ್ತಿದೆ. ಐತಿಹಾಸಿಕ ಚರಿತ್ರೆಯುಳ್ಳ, ಶಾಲೆಯನ್ನು ಮಕ್ಕಳ ಅಥವಾ ಪಾಲಕರ ಅಹವಾಲು ಇಲ್ಲದೇ ಕೇವಲ ಅಧಿಕಾರಿಗಳು ಶಾಲೆಯನ್ನು ಸ್ಥಳಾಂತರಿಸಲು ಮುಂದಾಗಿದ್ದಾರೆ ಎಂದು ದೂರಿದರು. ಪಾರ್ಕಿಂಗ್‌ ನೆಪದಲ್ಲಿ ವಿನಾಕಾರಣ ಶಾಲೆ ಕಟ್ಟಡವನ್ನು ಸ್ಥಳಾಂತರಿಸಲಾಗುತ್ತಿದೆ. ಗಾಂಧಿಚೌಕ್‌ ಸುತ್ತಮುತ್ತವಿರುವ ಹಲವು ಬೃಹತ್‌ ಕಟ್ಟಡಗಳ ಮಾಲೀಕರು ತಮ್ಮ ಕಟ್ಟಡದ ಪಾರ್ಕಿಂಗ್‌ ಸ್ಥಳಗಳಿಗೆ ಮೀಸಲಾದ ಜಾಗವನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಡಿಗೆಗೆ ನೀಡಿದ್ದಾರೆ. ಪಾರ್ಕಿಂಗ್‌ಗೆ ಸ್ಥಳಾವಕಾಶ ಬಿಟ್ಟಿಲ್ಲ. ಸ್ವತಃ ಸರಕಾರವೇ ಎಲ್‌ಬಿಎಸ್‌ ಮಾರ್ಕೆಟ್‌ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಬಿಡದೇ ನಿಯಮಾವಳಿಯನ್ನು ಗಾಳಿಗೆ ತೂರಿದೆ ಎಂದು ದೂರಿದರು. ಮೊದಲು ಖಾಸಗಿ ಕಟ್ಟಡ, ಸರಕಾರಿ ಕಟ್ಟಡಗಳ ಪಾರ್ಕಿಂಗ್‌ ನಿಗದಿಗೊಳಿಸಿದ ಸ್ಥಳದಲ್ಲಿ ವ್ಯಾಪಾರ ಮಾಡುವುದನ್ನು ತೆರವುಗೊಳಿಸಲಿ ಹಾಗೂ ನೀತಿ, ನಿಯಮಗಳನ್ನು ಗಾಳಿಗೆ ತೂರಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದರು. ಗಾಂಧಿ ವೃತ್ತ ಈಗಾಗಲೆ ಜನದಟ್ಟನೆಯಿಂದ ಒಳಗೊಂಡಂತಹ ಸ್ಥಳದಲ್ಲಿ ಸಿಟಿ ಬಸ್‌ ನಿಲ್ದಾಣ ಅವೈಜ್ಞಾನಿಕವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಅನುಕೂಲವಾಗಿರುವ ಶಾಲೆ ಕಟ್ಟಡವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಎಂದು ಆಗ್ರಹಿಸಿದರು. ರಮೇಶ ಬೂದಿಹಾಳ, ಶಿವಕುಮಾರ ಬಿರಾದಾರ, ನಾನಾಗೌಡ ಬಿರಾದಾರ, ಶಿವಲಿಂಗಯ್ಯ ಹಿರೇಮಠ, ಶಿವಾನಂದ ಹಿಪ್ಪರಗಿ, ಭೀಮರಾಯ ಗುಡಿದಿನ್ನಿ, ಚನ್ನ ಕುಂಬಾರ, ಯಲ್ಲಾಲಿಂಗ ಭತಗುಣಕಿ, ನೀಲಕಂಠ ತೋಳಬಂದಿ, ರೇವಣಸಿದ್ದ ಭಜಂತ್ರಿ, ಬಾಬು ತಳವಾರ, ಸಚಿನ್‌ ಬರಗಲ, ಸಂತೋಷ ಭಜಂತ್ರಿ, ಉಮೇಶ ಭಜಂತ್ರಿ, ಕಲ್ಲು ದರಗೊಂಡ, ಮುದಕು ಹೂಗಾರ, ಅಜಯ ನಾಯ್ಕೋಡಿ, ಮಲ್ಲು ಹೊಸಮನಿ, ನಜೀರ್‌ ದುಂಡಸಿ, ಚಂದ್ರಶೇಖರ ರಾಠೋಡ, ಮತೀನಕುಮಾರ ದೇವಧರ, ತನ್ಸೀರ್‌ ಎಂಡಿ, ಚನ್ನ ಕುಂಬಾರ, ಶಕೀಲ್‌ ಅಹ್ಮದ್‌, ಲಾಲಸಾಬ್‌ ಪಟೇಲ್‌ ಇದ್ದರು.
2017/11/18 01:01:51
https://vijaykarnataka.indiatimes.com/district/vijayapura/-/articleshow/55686381.cms
mC4
|ಮಣ್ಣು: ಮಾರಕ ರೋಗಗಳಿಗೂ ಪರಿಹಾರ - article - News in kannada, vijaykarnataka ಮಣ್ಣು: ಮಾರಕ ರೋಗಗಳಿಗೂ ಪರಿಹಾರ Updated: Dec 13, 2012, 04:38AM IST * ಡಾ.ವೆಂಕಟ್ರಮಣ ಹೆಗಡೆ ಮಣ್ಣು ಆರೋಗ್ಯ ಚಿಕಿತ್ಸೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಇತ್ತೀಚೆಗೆ ಇಂಥದ್ದೊಂದು ಚಿಕಿತ್ಸೆ ಹೆಚ್ಚು ಖ್ಯಾತಿಗೆ ಬರುತ್ತಿದೆ. ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರು ಮಣ್ಣಿನ ತತ್ವವನ್ನು ಚಿಕಿತ್ಸೆಗೆ ಬಳಸುತ್ತಿದ್ದರು. ಕಪ್ಪು ಮಣ್ಣು ಅಥವಾ ಹುತ್ತದ ಮಣ್ಣನ್ನು ಪ್ರಕತಿ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗೆ ಬಳಸುತ್ತಾರೆ. ಹುತ್ತದ ಮಣ್ಣು ಚರ್ಮದ ವ್ಯಾಧಿಗಳಲ್ಲಿ ವಿಶೇಷ ಪರಿಣಾಮ ಹೊಂದಿದ್ದರೆ ಕಪ್ಪು ಮಣ್ಣು ಸೂರ್ಯ ಕಿರಣಗಳ ಶಕ್ತಿಯನ್ನು ದೇಹಕ್ಕೆ ವರ್ಗಾಯಿಸುವ ಮತ್ತು ದೇಹದಿಂದ ಅಧಿಕ ಉಷ್ಣಾಂಶವನ್ನು ಹೀರುವ ಅಗಾಧಶಕ್ತಿ ಹೊಂದಿದೆ. ಈ ಚಿಕಿತ್ಸೆಯಿಂದ ಮೊಡವೆಗಳು ಕಡಿಮೆ ಆಗುತ್ತವೆ. ಮೊಡವೆಯಿಂದ ಉಂಟಾದ ಕಲೆಯನ್ನು ಹೋಗಲಾಡಿಸುತ್ತದೆ. ಉರಿಯೂತವನ್ನು ತಡೆಯುತ್ತದೆ. ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ. ಕುಷ್ಠರೋಗ, ಅಲರ್ಜಿ, ಸೋರಿಯಾಸಿಸ್ ಹಾಗೂ ಇತರ ಚರ್ಮರೋಗಗಳಿಗೆ ಮಡ್ ಥೆರಪಿಯಿಂದ ಪರಿಹಾರ ಕಂಡುಕೊಳ್ಳಬಹುದು. ಮಣ್ಣಿನ ತಯಾರಿಕೆ ಚಿಕಿತ್ಸೆಗೆ ಬಳಸುವ ಮಣ್ಣನ್ನು ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡಬೇಕು. ರಾಸಾಯನಿಕ ಪದಾರ್ಥಗಳಿಂದ ಮುಕ್ತವಾದ ಪ್ರದೇಶದಿಂದ ಮಣ್ಣು ತೆಗೆಯುವುದು ಉತ್ತಮ ಅಥವಾ ಭೂಮಿಯ ಮೇಲ್ಮೈಯಿಂದ 3-4 ಅಡಿ ಆಳದಿಂದ ಮಣ್ಣನ್ನು ತೆಗೆಯುವುದು. ಆ ರೀತಿ ತೆಗೆದ ಮಣ್ಣನ್ನು ಕಲ್ಮಶಗಳಿಂದ ಶುದ್ಧೀಕರಿಸಿ ಎರಡು ದಿನಗಳವರೆಗೆ ಒಣಗಿಸಿ ಮಣ್ಣು ಮೃದುವಾಗುವಂತೆ ಪುಡಿಮಾಡಿ ಶೋಧಿಸಿ ನಂತರ ಒಂದು ಬಕೆಟ್ ನಲ್ಲಿ ನೆನೆ ಹಾಕಬೇಕು. ಪೂರ್ಣ ಮಣ್ಣಿನ ಸ್ನಾನ ಹದಮಾಡಿದ ಮಣ್ಣನ್ನು ವ್ಯಕ್ತಿಯ ಪೂರ್ಣ ದೇಹಕ್ಕೆ ಲೇಪಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಣ್ಣು ಕಿವಿ ಮತ್ತು ಕಣ್ಣುಗಳ ಒಳ ಸೇರದಂತೆ ಎಚ್ಚರ ವಹಿಸಬೇಕು. ಮಣ್ಣನ್ನು ಲೇಪಿಸಿದ ನಂತರ ಸುಮಾರು 45 ನಿಮಿಷಗಳ ವರೆಗೆ ಸೂರ್ಯಕಿರಣಗಳಿಗೆ ಮೈ ಒಡ್ಡಬೇಕು. ನಂತರ ತಣ್ಣೀರಿನ ಸ್ನಾನ ಮಾಡಬೇಕು. ಮಣ್ಣಿನ ಅರ್ಧ ಸ್ನಾನ ಅಂದರೆ ಈ ವಿಧಾನದಲ್ಲಿ ಮಣ್ಣನ್ನು ದೇಹದ ನಿರ್ದಿಷ್ಟ ಭಾಗಕ್ಕೆ ಲೇಪಿಸಲಾಗುತ್ತದೆ. ಅದು ನೇರವಾಗಿ ಚರ್ಮದ ಮೇಲಾಗಿರಬಹುದು ಮಣ್ಣಿನ ಪಟ್ಟಿಗಳ ಮೂಲಕವಾಗಿರಬಹುದು. ಪ್ರಕತಿ ಚಿಕಿತ್ಸಾಲಯಗಳಲ್ಲಿ ಕಾಟನ್ ಬಟ್ಟೆಯಲ್ಲಿ ಮಣ್ಣಿನ ಪ್ಯಾಕ್ ತಯಾರಿಸಿ ಹೊಟ್ಟೆ ಹಾಗೂ ಕಣ್ಣುಗಳ ಮೇಲೆ ಈ ಪಟ್ಟಿಗಳನ್ನು ಎಲ್ಲ ಸಾಧಕರಿಗೆ ಪ್ರತಿದಿನ ನೀಡಲಾಗುತ್ತದೆ. ಇನ್ನೂ ತೊಂದರೆ ಇರುವ ಭಾಗಕ್ಕೆ ನೇರವಾಗಿಯೂ ಸಹ ಮಣ್ಣಿನ ಲೇಪನ ಮಾಡಬಹುದು.
2017/12/15 17:42:56
https://vijaykarnataka.indiatimes.com/lavalavk/health/article/-/articleshow/17588237.cms
mC4
ಅಸ್ತಿಮಜ್ಜೆ, ಕಸಿ ಸೇವೆ ಆರಂಭಕ್ಕೆ ಚಿಂತನೆ: ಡಾ| ಬಲ್ಲಾಳ್‌ | Udayavani – ಉದಯವಾಣಿ Tuesday, 01 Dec 2020 | UPDATED: 11:28 AM IST ಮಣಿಪಾಲ ಸಮಗ್ರ ಕ್ಯಾನ್ಸರ್‌ ಆರೈಕೆ ಕೇಂದ್ರದ ವಾರ್ಷಿಕೋತ್ಸವ Team Udayavani, Oct 24, 2020, 1:09 AM IST ಉಡುಪಿ: ಎಂಸಿಸಿಸಿಸಿ ರೋಗಿಗಳ ಬಳಕೆಗಾಗಿ ಆ್ಯಪ್‌ ಮೂಲಕ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿರುವುದು ತುಂಬಾ ಸಂತೋಷವಾಗಿದೆ. ಇದು ಜನರಿಗೆ ತುಂಬಾ ಉಪಯೋಗವಾಗಲಿದೆ. ಮುಂಬಯಿಯಿಂದ ಕೊಚ್ಚಿನ್‌ವರೆಗೆ ಈ ಕರಾವಳಿ ಪ್ರದೇಶದಲ್ಲಿ ಲಭ್ಯವಿಲ್ಲದ ಅಸ್ತಿಮಜ್ಜೆ, ಕಸಿ ಸೇವೆಗಳನ್ನು ಆರಂಭದಲ್ಲಿ 6 ಹಾಸಿಗೆಗಳೊಂದಿಗೆ (4 ವಯಸ್ಕ + 2 ಮಕ್ಕಳ) ಪ್ರಾರಂಭಿಸುವುದು ನಮ್ಮ ಮುಂದಿನ ಯೋಜನೆಯಾಗಿದೆ ಎಂದು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌ ಹೇಳಿದರು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಮಗ್ರ ಕ್ಯಾನ್ಸರ್‌ ಆರೈಕೆ ಕೇಂದ್ರ (ಎಂಸಿಸಿಸಿಸಿ)ದಲ್ಲಿ ಶುಕ್ರವಾರ ನಡೆದ ಎರಡನೇ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇತ್ತೀಚೆಗೆ ಪ್ರಶಾಮಕ ಆರೈಕೆ ಮತ್ತು ಸಹಾಯಕ ವಿಭಾಗವು ದೀರ್ಘ‌ಕಾಲದ ಮತ್ತು ಮಧ್ಯಸ್ಥಿಕೆ ನೋವಿನ ವಿಭಾಗವನ್ನು ಪ್ರಾರಂಭಿಸುವ ಮೂಲಕ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿದೆ. ಶೀಘ್ರದಲ್ಲೇ ಮಕ್ಕಳ ಪ್ರಶಾಮಕ ಆರೈಕೆ, ಮೂತ್ರಪಿಂಡದ ಬೆಂಬಲ ಆರೈಕೆ ಮತ್ತು ನರವಿಜಓನ ಪ್ರಶಾಮಕ ಆರೈಕೆ ಸೇವೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು. ಸಮಾರಂಭದ ಮುಖ್ಯ ಅತಿಥಿಯಾಗಿ ಆಸ್ಟ್ರೇಲಿಯಾ ಸರಕಾರದ "ಕ್ಯಾನ್ಸರ್‌ ಆಸ್ಟ್ರೇಲಿಯ' ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರೊ| ಡೊರೊಥಿ ಕೀಫೆ ಅವರು ಭಾಗವಹಿಸಿದ್ದರು. ಮಣಿಪಾಲ್‌ ಹೆಲ್ತ… ಎಂಟರ್‌ಪ್ರೈಸೆಸ್‌ ಪ್ರೈವೇಟ್‌ ಲಿ. ಮುಖ್ಯಸ್ಥ ಡಾ| ಸುದರ್ಶನ್‌ ಬಲ್ಲಾಳ್‌, ಕುಲಪತಿ ಲೆ| ಜ| ಡಾ| ವೆಂಕಟೇಶ್‌, ಸಹ ಕುಲಪತಿ ಡಾ| ಪಿ.ಎಲ್‌.ಎನ್‌.ಜಿ. ರಾವ್‌ ಗೌರವ ಅತಿಥಿಗಳಾಗಿದ್ದರು. ಕಸ್ತೂರ್ಬಾ ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಸಿ.ಜಿ. ಮುತ್ತಣ್ಣ, ಎಂಸಿಸಿಸಿಸಿಯ ಸಂಯೋಜಕರಾದ ಡಾ| ನವೀನ್‌ ಎಸ್‌. ಸಲಿನ್ಸ್‌ ಉಪಸ್ಥಿತರಿದ್ದರು. ಕೆಎಂಸಿ ಡೀನ್‌ ಡಾ| ಶರತ್‌ ಕುಮಾರ್‌ ರಾವ್‌ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ವಂದಿಸಿದರು. ನ್ಯೂಕ್ಲಿಯರ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಡಾ| ಸುಮಿತ್‌ ಎಸ್‌. ಮಾಲಾಪುರೆ ನಿರೂಪಿಸಿದರು.
2020/12/01 05:59:58
https://www.udayavani.com/homepage-karnataka-edition/karavali/karavali-udupi/anniversary-of-manipal-cancer-care-center
mC4
ಸ್ನೇಹಿತರ ದಿನದ ವಿಶೇಷ: ಸಚಿನ್ ಗಾಗಿ ಕಾಂಬ್ಳಿಯಿಂದ ವಿಶೇಷ ಟ್ವೀಟ್ | 'You are Jai, and me Veeru': Vinod Kambli to Sachin Tendulkar on Friendship Day - Kannada MyKhel » ಸ್ನೇಹಿತರ ದಿನದ ವಿಶೇಷ: ಸಚಿನ್ ಗಾಗಿ ಕಾಂಬ್ಳಿಯಿಂದ ವಿಶೇಷ ಟ್ವೀಟ್ Published: Sunday, August 5, 2018, 15:24 [IST] ಬೆಂಗಳೂರು, ಆಗಸ್ಟ್ 05: ಪ್ರತಿ ವರ್ಷದಂತೆ ಈ ವರ್ಷ ಕೂಡಾ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು(ಆಗಸ್ಟ್ 05) ಸ್ನೇಹಿತರ ದಿನಾಚರಣೆ ಆಚರಿಸಲಾಗುತ್ತಿದೆ. ಕ್ರೀಡಾಲೋಕದಲ್ಲಿ ಕೂಡಾ ವಿಶೇಷ ಟ್ವೀಟ್ ಗಳು ಹರಿದು ಬಂದಿವೆ. ಕ್ರಿಕೆಟ್ ಲೋಕದಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಅವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರು ವಿಶೇಷವಾಗಿ ಟ್ವೀಟ್ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್, ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ, ಧೋನಿ ಹಾಗೂ ರೈನಾ, ಯುವರಾಜ್ ಹಾಗೂ ಹರ್ಭಜನ್ ಸಿಂಗ್ ಹೀಗೆ ಗೆಳೆಯರ ಜೋಡಿ ಬೆಳೆಯುತ್ತದೆ. ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಅವರು ಸಚಿನ್ ಅವರನ್ನು ಶೋಲೆ ಚಿತ್ರದ 'ಜೈ' ಹಾಗೂ ತಮ್ಮನ್ನು 'ವೀರು' ಪಾತ್ರಕ್ಕೆ ಹೋಲಿಸಿ ಟ್ವೀಟ್ ಮಾಡಿ, ಗಮನ ಸೆಳೆದಿದ್ದಾರೆ. ಕಾಂಬ್ಳಿ ಅಲ್ಲದೆ, ರೋಹಿತ್ ಶರ್ಮ, ಸಚಿವ ರಾಜ್ಯವರ್ಧನ್ ರಾಥೋರ್ ಮುಂತಾದವರು ಟ್ವೀಟ್ ಮಾಡಿದ್ದಾರೆ. ಸಚಿನ್ ಗಾಗಿ ಕಾಂಬ್ಳಿಯಿಂದ ವಿಶೇಷ ಟ್ವೀಟ್ ಸಚಿನ್ ಹಾಗೂ ನಾನು ಎಂದಿಗೂ ಗೆಳೆತನ ಮುರಿಯುವುದಿಲ್ಲ ಎಂದು ಶೋಲೆ ಚಿತ್ರದ ಹಾಡನ್ನು ಹಾಕಿದ್ದಾರೆ. ಸೆಹ್ವಾಗ್ ಅವರ ಟ್ವೀಟ್ ಸ್ನೇಹಿತರು ನಮ್ಮ ಬದುಕಿನ ಕನ್ನಡಿಯಂತೆ, ಎಲ್ಲಾ ಸಮಯಕ್ಕೆ ನಮ್ಮ ಜೊತೆಗಿರುತ್ತಾರೆ ಎಂದು ಮಾಜಿ ಕ್ರಿಕೆಟರ್ ಸೆಹ್ವಾಗ್ ಅವರು ಟ್ವೀಟ್ ಮಾಡಿದ್ದಾರೆ. ಹರ್ಮನ್ ಪ್ರೀತ್ ಕೌರ್ ಟ್ವೀಟ್ ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು ಟ್ವೀಟ್ ಮಾಡಿದ್ದಾರೆ. On #FriendshipDay2018, let us celebrate the beautiful bond between friends - softer than velvet, yet stronger than steel! ರಾಜ್ಯವರ್ಧನ್ ರಾಥೋರ್ ರಿಂದ ಟ್ವೀಟ್ ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋರ್ ರಿಂದ ಟ್ವೀಟ್ This #FriendshipDay, revisit the best moments from the season gone by 🤝 📸 Full album - https://t.co/82nSmm2hl6#CricketMeriJaan pic.twitter.com/7tznAcFIAF — Mumbai Indians (@mipaltan) August 5, 2018 ಮುಂಬೈ ಇಂಡಿಯನ್ ಟ್ವೀಟ್ ಹಳೆ ನೆನಪುಗಳನ್ನು ಕೆದುಕುತ್ತದೆ ಈ ದಿನ ಎಂದು ಟ್ವೀಟ್ ಮಾಡಿದ ಮುಂಬೈ ಇಂಡಿಯನ್ಸ್ ಹೆಚ್ಚುದಿನಗಳ ನಿಮ್ಮ ಜತೆ ಇದ್ದು ಮರೆಯಾಗುವವರಲ್ಲ ನಿಜವಾದ ಗೆಳೆಯರುನಿಮ್ಮ ಜತೆಯಿದ್ದು, ನಿಮ್ಮ ಜತೆ ಬಿಡದಿರುವವರು ನಿಜವಾದ ಗೆಳೆಯರು ಎಂದು ಟ್ವೀಟ್ ಮಾಡಿದ ರೋಹಿತ್ ಶರ್ಮ Read more about: sachin tendulkar vinod kambli twitter cricket ಸಚಿನ್ ತೆಂಡೂಲ್ಕರ್ ವಿನೋದ್ ಕಾಂಬ್ಳಿ ಟ್ವಿಟ್ಟರ್ ಕ್ರಿಕೆಟ್
2019/05/19 14:57:38
https://kannada.mykhel.com/cricket/you-are-jai-and-me-veeru-vinod-kambli-to-sachin-tendulkar-on-friendship-day-005774.html
mC4
ಶೇಖಾವತ್, ಪ್ರತಿಭಾ ಇಬ್ಬರಿಗೂ ಮತ ಹಾಕುವ ಹಕ್ಕಿಲ್ಲ! | ಶೇಖಾವತ್, ಪ್ರತಿಭಾ ಇಬ್ಬರಿಗೂ ಮತ ಹಾಕುವ ಹಕ್ಕಿಲ್ಲ! - Shekhavat and Pratibha have no voting rights - Kannada Oneindia ಶೇಖಾವತ್, ಪ್ರತಿಭಾ ಇಬ್ಬರಿಗೂ ಮತ ಹಾಕುವ ಹಕ್ಕಿಲ್ಲ! ನವದೆಹಲಿ, ಜುಲೈ 19 : ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಇಬ್ಬರೂ ಪ್ರಮುಖ ಹುರಿಯಾಳುಗಳಿಗೆ ಮತ ನೀಡುವ ಹಕ್ಕಿಲ್ಲ. ರಾಜ್ಯಸಭೆಯ ಅಧ್ಯಕ್ಷರಾಗಿದ್ದರೂ ಎನ್‌ಡಿಎ ಬೆಂಬಲ ಪಡೆದಿರುವ ಸ್ವತಂತ್ರ ಅಭ್ಯರ್ಥಿ ಉಪರಾಷ್ಟ್ರಪತಿ ಭೈರೋನ್‌ಸಿಂಗ್ ಶೇಖಾವತ್ ಅವರಿಗೆ ತಮಗೆ ತಾವೇ ಮತ ನೀಡಲು ಸಾಧ್ಯವಾಗಿಲ್ಲ. ಶೇಖಾವತ್ ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರೂ ಮೇಲ್ಮನೆ ಅಥವ ಕೆಳಮನೆಗೆ ಆಯ್ಕೆಯಾಗಿಲ್ಲದ ಕಾರಣ ಮತ ಹಾಕುವುದರಿಂದ ವಂಚಿತರಾಗಿದ್ದಾರೆ. ಮೇಲ್ನೋಟಕ್ಕೆ ತುರುಸಿನ ಸ್ಪರ್ಧೆಯಂತೆ ಕಂಡರೂ ರಾಷ್ಟ್ರಾಧ್ಯಕ್ಷರಾಗುವುದು ಖಚಿತವಾಗಿರುವ ಕಾಂಗ್ರೆಸ್ ಮತ್ತು ಎಡಪಕ್ಷಗಳ ಬೆಂಬಲದ ಪ್ರತಿಭಾ ಪಾಟೀಲ್ ಅವರ ಕಥೆಯೂ ಬೇರೆಯಲ್ಲ. ಅವರು ರಾಜಸ್ತಾನದ ಮಾಜಿ ರಾಜ್ಯಪಾಲೆಯಾಗಿದ್ದರೂ ಸಂಸದ ಅಥವಾ ರಾಜ್ಯಸಭೆ ಸದಸ್ಯರಾಗಿರದ ಕಾರಣ ಅವರೂ ಮತ ಹಾಕುವಂತಿಲ್ಲ. ವಿಪರ್ಯಾಸವೆಂದರೆ ಇದೇ ಅಲ್ವೇ? ಲೋಕಸಭೆ ಅಥವ ರಾಜ್ಯಸಭೆ ಚುನಾವಣೆಯಾಗಿದ್ದರೆ ತಮಗೆ ತಾವೇ ಮತ ಚಲಾಯಿಸದಿದ್ದರೆ ಅವರ ಆಯ್ಕೆಯೇ ಅಸಿಂಧುವಾಗುತ್ತಿತ್ತು. ಆದರೆ ಇಲ್ಲಿ ಹಾಗಲ್ಲ. ರಾಷ್ಟ್ರಪತಿ ಚುನಾವಣೆಗೆ ಎಂಪಿ ಅಥವ ಎಂಎಲ್‌ಎಗೆ ಮಾತ್ರ ಮತ ಚಲಾಯಿಸುವ ಹಕ್ಕಿದೆ. ಈ ಕಾರಣದಿಂದಾಗಿ 776 ಸಂಸದರ ಪೈಕಿ 774 ಸದಸ್ಯರಿಗೆ ಮಾತ್ರ ಮತ ಚಲಾವಣೆಯ ಹಕ್ಕಿದೆ. 30 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು ಶಾಸಕರ ಸಂಖ್ಯೆ 4120. ಈ ಜನಪ್ರತಿನಿಧಿಗಳ ಮತಗಳ ಒಟ್ಟು ಮೌಲ್ಯ 10.98 ಲಕ್ಷ.
2020/02/20 09:40:58
https://kannada.oneindia.com/news/2007/07/19/no-voting-rights.html
mC4
ಮದ್ವೆಯಾದ 4ನೇ ದಿನಕ್ಕೆ ವಧು ಹೇಳಿದ ಸತ್ಯಕ್ಕೆ ವರ ಕಂಗಾಲು – Public TV ಮದ್ವೆಯಾದ 4ನೇ ದಿನಕ್ಕೆ ವಧು ಹೇಳಿದ ಸತ್ಯಕ್ಕೆ ವರ ಕಂಗಾಲು – ವರನಿಂದ ಲಕ್ಷ ಲಕ್ಷ ಪಡೆದಿದ್ದ ಬ್ರೋಕರ್ ಜೈಪುರ: ಮದುವೆಯಾದ ನಾಲ್ಕನೇ ದಿನಕ್ಕೆ ವಧು ಹೇಳಿದ ಸತ್ಯ ಕೇಳಿ ಪತಿ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ. ವರ ವಧುವಿನ ಪೋಷಕರಿಗೆ 3.5 ಲಕ್ಷ ರೂಪಾಯಿ ನೀಡಿದ್ದನು. 20 ದಿನಗಳ ಹಿಂದೆ ವರ ಉಮ್ಮೇದ್ ಸಿಂಗ್ ಮನೆಗೆ ಬಂದ ಗಂಗಾ ಸಿಂಗ್ ಮತ್ತು ನಗೌರ ಗ್ರಾಮದ ಕೆಲವರು ಮದುವೆ ಮಾಡೋದಾಗಿ ಹೇಳಿದ್ದರು. ಹಾಗೆ ಕನ್ಯೆ ನೋಡುವ ಶಾಸ್ತ್ರಕ್ಕೆ ಹೋಗೋಣ ಅಂತ ಪುಸಲಾಯಿಸಿದ್ದರು. ಅದೇ ರೀತಿ ಉಮ್ಮೇದ್ ಸಿಂಗ್ ಸೋದರರು ಮತ್ತು ಸಂಬಂಧಿ ಜೊತೆ ಹೋಗಿ ಯುವತಿಯನ್ನ ನೋಡಿಕೊಂಡು ಬಂದಿದ್ದನು. ಸಂಪ್ರದಾಯದಂತೆ 500 ರೂಪಾಯಿ ನೀಡಿ ಮುಖ ನೋಡುವ ಶಾಸ್ತ್ರವ ನಡೆದಿತ್ತು. ಲಕ್ಷ ಲಕ್ಷ ಹಣ ಕಿತ್ಕೊಂಡ್ರು: ಮದುವೆ ಮುನ್ನ ವಧುವಿನ ತಂದೆ ಆರ್ಥಿಕ ಸಂಕಷ್ಟದಲ್ಲಿದ್ದಾನೆ ಎಂದು ಉಮ್ಮೇದ್ ಬಳಿಯಿಂದ ಗಂಗಾಸಿಂಗ್ 3.5 ಲಕ್ಷ ರೂ. ಪಡೆದುಕೊಂಡಿದ್ದನು. ಡಿಸೆಂಬರ್ ಏಳರಂದು ಕುಟುಂಬಸ್ಥರ ಜೊತೆ ಉಮ್ಮೇದ್ ಸಿಂಗ್ ಯುವತಿಯನ್ನ ನೋಡಲು ಹೋದಾಗಲೂ ಗಂಗಾ ಸಿಂಗ್ ಕುಂಟು ನೆಪಗಳನ್ನ ಕೇಳಿ ಎರಡು ಲಕ್ಷ ರೂ. ಪಡೆದಿದ್ದನು. ಮದುವೆ ನಡೆಯುತ್ತಿರುವ ಬಗ್ಗೆ ಯಾರಿಗೂ ಹೇಳಬೇಡಿ ಎಂದು ಎರಡೂ ಕುಟುಂಬಗಳಿಗೆ ಗಂಗಾ ಸಿಂಗ್ ಹೇಳಿದ್ದನು. ಡಿಸೆಂಬರ್ 11ರಂದು ಕುದುರೆ ಏರಿ ಉಮ್ಮೇದ್ ಸಿಂಗ್ ವಧುವಿನ ಮನೆಯತ್ತ ಹೊರಟಿದ್ದನು. ಈ ವೇಳೆ ವಧುವಿನ ಮನೆಯಲ್ಲಿ ಸಾವಾಗಿದೆ, ಹಾಗಾಗಿ ಎಲ್ಲರೂ ನೇರವಾಗಿ ಮಾಂಗಲೋಧ ಗ್ರಾಮಕ್ಕೆ ಬನ್ನಿ ಅಂತ ಹೇಳಿ ಉಮ್ಮೇದ್ ನಿಂದ 1.5 ಲಕ್ಷ ರೂ. ಕಿತ್ತುಕೊಂಡಿದ್ದನು. ವಧು ಬದಲಾವಣೆ: ಮದುವೆ ಮನೆಯಲ್ಲಿ ತೋರಿಸಿದ ಯುವತಿ ಇವಳು ಅಲ್ಲ ಎಂದು ಕುಟುಂಬಸ್ಥರಿಗೆ ತಿಳಿದಿದೆ. ಆದ್ರೂ ಉಮ್ಮೇದ್ ಸಿಂಗ್ ಬದಲಿಯಾಗಿದ್ದ ಕಾಂತಾ ಹೆಸರಿನ ಮಹಿಳೆಯನ್ನ ಮದುವೆ ಆಗಿದ್ದಾನೆ. ಮದುವೆಯಾದ ಎರಡು ದಿನದ ಬಳಿಕ ಶಾಸ್ತ್ರದ ಪ್ರಕಾರ ವಧುವನ್ನ ತವರಿಗೆ ಕರೆದುಕೊಂಡು ಹೋಗಲು ಗಂಗಾಸಿಂಗ್ ಬಂದಿದ್ದನು. ತವರಿಗೆ ಹೋಗುವ ಮುನ್ನ ಪತ್ನಿಗೆ ಉಮ್ಮೇದ್ ಸಿಂಗ್ ಹೊರ ಮೊಬೈಲ್ ಗಿಫ್ಟ್ ನೀಡಿದ್ದನು. ನಾಲ್ಕನೇ ದಿನಕ್ಕೆ ಬಂತು ಕರೆ: ಮದುವೆಯಾದ ನಾಲ್ಕನೇ ದಿನಕ್ಕೆ ಪತಿಗೆ ಫೋನ್ ಮಾಡಿದ ಕಾಂತಾ, ಗಂಗಾಸಿಂಗ್ ನಿಮಗೆ ಮೋಸ ಮಾಡಿದ್ದಾನೆ. ಈಗ ನನ್ನನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋಗಿದ್ದಾನೆ. ಮದುವೆ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬಂದಿದ್ದ ನನಗೆ ಬೆದರಿಕೆ ಹಾಕಿ ವಧುವಿನ ಸ್ಥಾನದಲ್ಲಿ ಕೂರಿಸಿದರು. ನಾನು ಏಳು ದಿನದ ಅಡುಗೆ ಕೆಲಸಕ್ಕೆ ದಿನಕ್ಕೆ ಸಾವಿರ ರೂಪಾಯಿಯಂತೆ ನಗೌರಗೆ ಗಂಗಾಸಿಂಗ್ ನನ್ನ ಕರೆ ತಂದಿದ್ದನು. ಅವರ ಬೆದರಿಕೆಯಿಂದ ನಾನು ನಿಮ್ಮನ್ನ ಮದುವೆಯಾಗಿದ್ದೇನೆ ಎಂದು ಹೇಳಿದ್ದಾಳೆ. ಈ ವಿಷಯ ತಿಳಿದ ಉಮ್ಮೇದ್ ಸಿಂಗ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗಂಗಾ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾನೆ. ಪೊಲೀಸರು ಗಂಗಾ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 420, 406ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
2021/03/08 19:26:39
https://publictv.in/loot-the-bride-for-money-was-just-4-days-jodhpur-rajasthan
mC4
ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೆ SEC ಗ್ರೀನ್ ಸಿಗ್ನಲ್ | Webdunia Kannada ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೆ SEC ಗ್ರೀನ್ ಸಿಗ್ನಲ್ ನವದೆಹಲಿ| Ramya kosira| Last Modified ಮಂಗಳವಾರ, 12 ಅಕ್ಟೋಬರ್ 2021 (19:30 IST) ಶಾಲೆಗಳತ್ತ ಮಕ್ಕಳು ಮುಖ ಮಾಡಿರುವ ಈ ಸಮಯದಲ್ಲಿ ಮಕ್ಕಳ ಕೊರೊನಾ ಲಸಿಕೆ ಸಂಬಂಧ ಮಹತ್ವದ ಸುದ್ದಿ ಹೊರ ಬಿದ್ದಿದೆ. ZyCoV-D ಬಳಿಕ ಮತ್ತೊಂದು ಮಕ್ಕಳ ಲಸಿಕೆಗೆ ಅನುಮತಿ ಸಿಕ್ಕಿದೆ. ಔಷಧ ನಿಯಂತ್ರಕದ ವಿಷಯ ತಜ್ಞರ ಸಮಿತಿಯು (SEC) 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ಸಂಸ್ಥೆಯ ಕೊವಾಕ್ಸಿನ್ ಲಸಿಕೆಗೆ ತುರ್ತು ಬಳಕೆಯ ಅಧಿಕಾರವನ್ನು ನೀಡುವಂತೆ ಶಿಫಾರಸು ಮಾಡಿದೆ. ಅಂತಿಮ ಅನುಮೋದನೆಗಾಗಿ ಎಸ್ ಇಸಿ ತನ್ನ ಶಿಫಾರಸನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಗೆ ಸಲ್ಲಿಸಿದೆ. ವಿವರವಾದ ಚರ್ಚೆಯ ನಂತರ, ತುರ್ತು ಪರಿಸ್ಥಿತಿಯಲ್ಲಿ ಬಳಕೆಗಾಗಿ ಲಸಿಕೆಯ ಮಾರುಕಟ್ಟೆ ಅನುಮೋದನೆಯನ್ನು ನೀಡಲು ಸಮಿತಿಯು ಶಿಫಾರಸು ಮಾಡಿದೆ ಎಂದು ತಜ್ಞರ ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ತುರ್ತು ಬಳಕೆಯ ಅಧಿಕಾರವು ನಾಲ್ಕು ಷರತ್ತುಗಳನ್ನು ಒಳಗೊಂಡಿದೆ. ತಜ್ಞರ ಸಮಿತಿಯ ಷರತ್ತುಗಳು ಹೀಗಿವೆ *ಸಂಸ್ಥೆಯು ಅಪ್ಡೇಟ್ ಮಾಡಿದ ಪ್ರಿಸ್ಕ್ರೈಬಿಂಗ್ ಮಾಹಿತಿ/ಪ್ಯಾಕೇಜ್ ಇನ್ಸರ್ಟ್ (PI), ಉತ್ಪನ್ನ ಗುಣಲಕ್ಷಣಗಳ ಸಾರಾಂಶ (SmPC) ಮತ್ತು ಫ್ಯಾಕ್ಶೀಟ್ ಅನ್ನು ಒದಗಿಸಬೇಕು; *ಸಂಸ್ಥೆಯು AEFI ಮತ್ತು AESI ದತ್ತಾಂಶವನ್ನು ಒಳಗೊಂಡಂತೆ ಸುರಕ್ಷತಾ ಡೇಟಾವನ್ನು ಸಲ್ಲಿಸಬೇಕು *ಸರಿಯಾದ ವಿಶ್ಲೇಷಣೆಯೊಂದಿಗೆ, ಮೊದಲ 15 ತಿಂಗಳಿಗೊಮ್ಮೆ ಪ್ರತಿ 15 ದಿನಗಳಿಗೊಮ್ಮೆ ಮತ್ತು ನಂತರ ಮಾಸಿಕ ವರದಿ ನೀಡಬೇಕು. *ಹೊಸ ಔಷಧಗಳು ಮತ್ತು ಚಿಕಿತ್ಸಾ ಪ್ರಯೋಗಗಳ ನಿಯಮಗಳಾದ 2019 ರ ಅಗತ್ಯತೆಗಳ ಪ್ರಕಾರ ಸಂಸ್ಥೆಯು ಅಪಾಯ ನಿರ್ವಹಣಾ ಯೋಜನೆಯನ್ನು ಸಲ್ಲಿಸಬೇಕು. 28 ದಿನಗಳ ಅಂತರದಲ್ಲಿ ಮಕ್ಕಳಿಗೆ 2 ಡೋಸ್ ಭಾರತ್ ಬಯೋಟೆಕ್ ಕಳೆದ ವಾರ ಮಕ್ಕಳ ಮೇಲಿನ ಕ್ಲಿನಿಕಲ್ ಪ್ರಯೋಗಗಳ ಡೇಟಾವನ್ನು ಡಿಸಿಜಿಐಗೆ ಪರಿಶೀಲನೆಗಾಗಿ ಮತ್ತು ತುರ್ತು ಬಳಕೆಯ ಅನುಮೋದನೆಗಾಗಿ ಸಲ್ಲಿಸಿತ್ತು. ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ 2-18 ವಯೋಮಾನದವರಿಗೆ ಕೋವಿಡ್ -19 ಲಸಿಕೆಗಳಿಗಾಗಿ ವಿಶ್ವದ ಮೊದಲ ಅನುಮೋದನೆ ಪಡೆದ ಲಸಿಕೆಯಾಗಿದೆ. 28 ದಿನಗಳ ಅಂತರದಲ್ಲಿ ಮಕ್ಕಳಿಗೆ ಎರಡು ಡೋಸ್ ಕೋವಾಕ್ಸಿನ್ ನೀಡಲಾಗುವುದು. ವಯಸ್ಕರಿಗೆ, ಸರ್ಕಾರವು ಎರಡು ಡೋಸ್ಗಳ ನಡುವೆ 4-6 ವಾರಗಳ ಅಂತರವನ್ನು ನಿಗದಿಪಡಿಸಿದೆ. ಅನುಮತಿ ಪಡೆದ 2ನೇ ಲಸಿಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ ಅನ್ನು ಭಾರತದಲ್ಲಿ ನಡೆಯುತ್ತಿರುವ ಕೋವಿಡ್ -19 ಲಸಿಕೆ ಅಭಿಯಾನದಲ್ಲಿ ವಯಸ್ಕರಿಗೆ ಬಳಸಲಾಗುತ್ತಿದೆ. ಇದು ಭಾರತದಲ್ಲಿ ಮಕ್ಕಳಿಗೆ ಅನುಮೋದನೆ ಪಡೆದ ಎರಡನೇ COVID-19 ಲಸಿಕೆಯಾಗಿದೆ. DGCI, ಆಗಸ್ಟ್ನಲ್ಲಿ, ZyCoV-D ಅನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಹಾಗೂ ವಯಸ್ಕರಿಗೆ ಅನುಮೋದಿಸಿತ್ತು. ಆದರೆ ಮಕ್ಕಳಿಗೆ ಲಸಿಕಾ ವಿತರಣೆ ಇನ್ನೂ ಆರಂಭವಾಗಿಲ್ಲ.
2021/10/16 18:47:40
https://kannada.webdunia.com/article/trending-news/sec-green-signal-for-pediatric-kovaccine-vaccine-121101200029_1.html
mC4
'ಮಾತೃಪೂರ್ಣದ ಹೊಣೆ ಬೇಡ' | Prajavani 'ಮಾತೃಪೂರ್ಣದ ಹೊಣೆ ಬೇಡ' ಬೆಂಗಳೂರು: 'ಮಾತೃಪೂರ್ಣ ಯೋಜನೆಯ ಹೊಣೆಗಾರಿಕೆಯನ್ನು ನಮ್ಮ ಮೇಲೆ ಹೇರಬೇಡಿ' ಎಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ಹಾಗೂ ಅಡುಗೆ ಸಹಾಯಕರು ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ, ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಮಹಾ ಮಂಡಳಿ, ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಹಾಗೂ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕ್ಷೇಮಾಭಿವೃದ್ಧಿ ಸಂಘಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು. ಚುನಾವಣೆ ದೃಷ್ಟಿಯಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡದೆ ಹಾಗೂ ಜನಾಭಿಪ್ರಾಯ ಸಂಗ್ರಹಿಸದೆ ಅನುಷ್ಠಾನಗೊಳಿಸಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ದೂರಿದರು. 'ಗರ್ಭಿಣಿಯರು ಹಾಗೂ ಬಾಣಂತಿಯರು ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿಲ್ಲ. ಯೋಜನೆ ಅನುಷ್ಠಾನಗೊಂಡ ದಿನದಿಂದ (ಅ.2) ಬಹುತೇಕ ಫಲಾನುಭವಿಗಳು ಆಹಾರ ಸೇವಿಸಲು ಅಂಗನವಾಡಿಗಳಿಗೆ ಬರುತ್ತಿಲ್ಲ. ಹೀಗಾಗಿ, ಹಿಂದಿನ ರೀತಿಯಲ್ಲೇ ಮನೆಗಳಿಗೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುವ ಪದ್ಧತಿಯನ್ನು ಜಾರಿಗೊಳಿಸಬೇಕು. ಫಲಾನುಭವಿಗಳ ಬೇಡಿಕೆಯೂ ಇದೇ ಆಗಿದೆ' ಎಂದು ಮಾಲೂರಿನ ದೊಡ್ಡಕಡತೂರಿನ ಕಾರ್ಯಕರ್ತೆ ಗೀತಾ ಹೇಳಿದರು. ಫಲಾನುಭವಿಗಳು ಅಂಗನವಾಡಿ ಕೇಂದ್ರಗಳಿಗೆ ಬರಲು ಅವರ ಆಚಾರ–ವಿಚಾರಗಳು ತೊಡಕಾಗಿವೆ. ಅವರನ್ನು ಕೇಂದ್ರಗಳಿಗೆ ಕಳುಹಿಸಲು ಕುಟುಂಬಸ್ಥರು ಸಹ ಹಿಂದೇಟು ಹಾಕುತ್ತಿದ್ದಾರೆ. ಓಡಾಟಕ್ಕೂ ತೊಂದರೆಯಾಗಿದೆ. ಹೀಗಾಗಿ, ಸರ್ಕಾರ ಯೋಜನೆಯನ್ನು ಮರುಪರಿಶೀಲನೆ ನಡೆಸಬೇಕು ಎಂದರು. ಸ್ವಂತ ಕಟ್ಟಡ ಕಲ್ಪಿಸಿ: ರಾಜ್ಯದಲ್ಲಿ ಒಟ್ಟು 65,911 ಅಂಗನವಾಡಿ ಕೇಂದ್ರಗಳಿವೆ. ಆ ಪೈಕಿ 34 ಸಾವಿರ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿದ್ದು, ಉಳಿದ ಅಂಗನವಾಡಿ ಕೇಂದ್ರಗಳನ್ನು ಬಾಡಿಗೆ ಕಟ್ಟಡಗಳು ಹಾಗೂ ಸಮುದಾಯ ಭವನಗಳಲ್ಲಿ ನಡೆಸಲಾಗುತ್ತಿದೆ. ಸ್ವಂತ ಕಟ್ಟಡಗಳಿಗೆ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಅಧ್ಯಕ್ಷ ಬಿ.ಆರ್.ಶಿವಶಂಕರ್ ಒತ್ತಾಯಿಸಿದರು. ಕೆಲವು ಕಡೆ ಅಂಗನವಾಡಿ ಕೇಂದ್ರಗಳ ಕೊಠಡಿಗಳು ಚಿಕ್ಕದಾಗಿವೆ. ಫಲಾನುಭವಿಗಳು ಕೇಂದ್ರಗಳಿಗೆ ಬಂದರೆ ಸ್ಥಳಾವಕಾಶದ ಕೊರತೆಯಿಂದ ಮಕ್ಕಳನ್ನು ಹೊರ ಕಳುಹಿಸಬೇಕಾಗುತ್ತದೆ. ಮಕ್ಕಳನ್ನು ಹೊರ ಕಳುಹಿಸಿದರೆ, ಪೋಷಕರು ಗಲಾಟೆ ಮಾಡುತ್ತಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆಯಲ್ಲಿನ ತೊಡುಕುಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರಿಗೆ ಅನೇಕ ಬಾರಿ ತಿಳಿಸಿದ್ದೇವೆ. ಸಾಕಷ್ಟು ಬಾರಿ ಪ್ರತಿಭಟನೆ ಹಾಗೂ ಸಮಾವೇಶಗಳನ್ನು ನಡೆಸಿದ್ದೇವೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದರು. ಇಲಾಖೆಯ ಜಂಟಿ ಕಾರ್ಯದರ್ಶಿ ರತ್ನಾ ಕಲಂದಾನಿ ಅವರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಅಂಗನವಾಡಿ ಕಾರ್ಯಕರ್ತರ ಹಕ್ಕೊತ್ತಾಯಗಳು * ಯೋಜನೆಯ ಬಗ್ಗೆ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ಮಾಡಬೇಕು * ಅಧ್ಯಯನ ಪೂರ್ಣಗೊಳ್ಳುವ ವರೆಗೆ 'ಟೇಕ್ ಹೋಮ್' ಪದ್ಧತಿ ಜಾರಿಗೊಳಿಸಬೇಕು * ಅಂಗನವಾಡಿ ಕೇಂದ್ರಗಳ ಕೆಲಸದ ಅವಧಿ ಬೆಳಿಗ್ಗೆ 9.30ರಿಂದ ಮದ್ಯಾಹ್ನ 1.30ಕ್ಕೆ ನಿಗದಿ ಮಾಡಬೇಕು * ಕಾರ್ಯಕರ್ತೆಯರಿಗೆ ಕನಿಷ್ಠ ವೇತನ (₹18,000) ಜಾರಿ * ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಪ್ರಮಾಣದ ಅಂಗನವಾಡಿಗಳೆಂದು ಘೋಷಿಸಬೇಕು * ಬಾಲವಿಕಾಸ ಸಮಿತಿಯಲ್ಲಿ ಜನ ಪ್ರತಿನಿಧಿಗಳು ಕಡ್ಡಾಯ ಆದೇಶ ಹಿಂಪಡೆಯಬೇಕು * ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಲಭ್ಯ ಒದಗಿಸಬೇಕು 'ಇಂದಿರಾ ಕ್ಯಾಂಟಿನ್‌ಗಳನ್ನಾಗಿಸುವ ಹುನ್ನಾರ' 'ಬೆಂಗಳೂರಿನಲ್ಲಿ ಜಾರಿಗೊಳಿಸಿರುವ ಇಂದಿರಾ ಕ್ಯಾಂಟಿನ್ ಯೋಜನೆ ಯಶಸ್ವಿಯಾಗಿದೆ. ಜನರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. ಹೀಗಾಗಿ, ಅಂಗನವಾಡಿ ಕೇಂದ್ರಗಳನ್ನು ಮುಂಬರುವ ದಿನಗಳಲ್ಲಿ ಇಂದಿರಾ ಕ್ಯಾಂಟಿನ್ ಮಾದರಿಯಾಗಿಸುವ ಹುನ್ನಾರವನ್ನು ಸರ್ಕಾರ ನಡೆಸಿದೆ' ಎಂದು ಶಿವಕುಮಾರ್ ಆರೋಪಿಸಿದರು. 'ಪ್ರತಿ ಫಲಾನುಭವಿಗಳಿಗೆ ನೀಡುವ 100 ಗ್ರಾಂ ತರಕಾರಿಗೆ ₹ 2.60 ಪೈಸೆ ಹಾಗೂ ಪ್ರತಿ ಮೊಟ್ಟೆಗೆ ₹ 4 ನಿಗದಿ ಪಡಿಸಿದೆ. ಈ ಹಣದಲ್ಲಿ ಇವುಗಳನ್ನು ಖರೀದಿಸಲು ಸಾಧ್ಯವಿಲ್ಲ. ಮೊಟ್ಟೆ ಬೆಲೆ 7 ರೂಪಾಯಿಯ ಗಡಿ ದಾಟಿದೆ. ಸರ್ಕಾರವೇ ಮೊಟ್ಟೆ ಹಾಗೂ ತರಕಾರಿಗಳನ್ನು ಪೂರೈಸಲಿ. ಅದರ ಉಸಾಬರಿ ನಮಗೆ ಬೇಡ' ಎಂದು ಕಾರ್ಯಕರ್ತೆಯರು ಸಮಸ್ಯೆಯನ್ನು ಬಿಚ್ಚಿಟ್ಟರು. '); $('#div-gpt-ad-508467-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-508467'); }); googletag.cmd.push(function() { googletag.display('gpt-text-700x20-ad2-508467'); }); },300); var x1 = $('#node-508467 .field-name-body .field-items div.field-item > p'); if(x1 != null && x1.length != 0) { $('#node-508467 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-508467').addClass('inartprocessed'); } else $('#in-article-508467').hide(); } else { _taboola.push({article:'auto', url:'https://www.prajavani.net/news/article/2017/12/06/538134.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-508467', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-508467'); }); googletag.cmd.push(function() { googletag.display('gpt-text-300x20-ad2-508467'); }); // Remove current Outbrain //$('#dk-art-outbrain-508467').remove(); //ad before trending $('#mob_rhs1_508467').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-508467 .field-name-body .field-items div.field-item > p'); if(x1 != null && x1.length != 0) { $('#node-508467 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-508467 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-508467'); }); } else { $('#in-article-mob-508467').hide(); $('#in-article-mob-3rd-508467').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-508467','#in-article-811324','#in-article-811306','#in-article-811300','#in-article-811298']; var twids = ['#twblock_508467','#twblock_811324','#twblock_811306','#twblock_811300','#twblock_811298']; var twdataids = ['#twdatablk_508467','#twdatablk_811324','#twdatablk_811306','#twdatablk_811300','#twdatablk_811298']; var obURLs = ['https://www.prajavani.net/news/article/2017/12/06/538134.html','https://www.prajavani.net/karnataka-news/ramesh-jarakiholi-cd-case-balachandra-jarakiholi-demands-cbi-probe-811324.html','https://www.prajavani.net/karnataka-news/i-do-not-have-any-cd-or-record-related-to-the-minister-social-worker-rajashekar-mulali-811306.html','https://www.prajavani.net/karnataka-news/day-night-investigation-no-withdrawal-of-complaints-police-811300.html','https://www.prajavani.net/karnataka-news/cd-case-dinesh-seeks-to-withdraw-complaint-against-ramesh-jarakiholi-811298.html']; var vuukleIds = ['#vuukle-comments-508467','#vuukle-comments-811324','#vuukle-comments-811306','#vuukle-comments-811300','#vuukle-comments-811298']; // var nids = [508467,811324,811306,811300,811298]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2021/03/07 15:42:52
https://www.prajavani.net/news/article/2017/12/06/538134.html
mC4
ಚಂದ್ರಯಾನ-2: ಇಸ್ರೋದ ಮಹತ್ವದ ಘಟ್ಟದ ಪರೀಕ್ಷೆ ಅಭೂತಪೂರ್ವ ಯಶಸ್ವಿ | Chandrayaan-2: ISRO successfully tests lander for soft landing on the moon: Sources | Kannadaprabha.com ಚಂದ್ರಯಾನ-2: ಇಸ್ರೋದ ಮಹತ್ವದ ಘಟ್ಟದ ಪರೀಕ್ಷೆ ಅಭೂತಪೂರ್ವ ಯಶಸ್ವಿ ಚಂದ್ರನ ಅಂಗಳದಲ್ಲಿ ಸೂಕ್ಷ್ಮ ಹಾಗೂ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವ ಪರೀಕ್ಷೆ ಯಶಸ್ವಿ Published: 27 Oct 2018 12:18 AM IST ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2ಗೆ ಸಂಬಂಧಿಸಿದ ಮಹತ್ವದ ಪರೀಕ್ಷೆಯೊಂದು ಅಭೂತಪೂರ್ವ ಯಶಸ್ಸು ಸಾಧಿಸಿದೆ. ಚಂದ್ರಯಾನ-2ರ ತಾಲೀಮು ನಡೆಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ಗೆ ಮಹತ್ವದ ಮುನ್ನಡೆ ದೊರತಿದ್ದು, ಚಂದ್ರನ ಅಂಗಳದಲ್ಲಿ ಸೂಕ್ಷ್ಮ ಹಾಗೂ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವ ಸಂಬಂಧ ತಾನು ನಡೆಸಿದ ಮಹತ್ವದ ಪ್ರಯೋಗವು ಯಶಸ್ವಿಯಾಗಿದೆ ಎಂದು ಇಸ್ರೋ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇಸ್ರೋ ಪಿತಾಮಾಹ ವಿಕ್ರಮ್ ಸಾರಾಭಾಯಿ ಹೆಸರಲ್ಲಿರುವ ಈ ಲ್ಯಾಂಡರ್ ಅನ್ನು ಇಂದು ಪರೀಕ್ಷೆಗೊಳಪಡಿಸಲಾಗಿತ್ತು. ಲ್ಯಾಡರ್ ನ ಲ್ಯಾಪ್ಟ್ ಅನ್ನು ಇಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಈ ಲ್ಯಾಪ್ಟ್ ಪರೀಕ್ಷೆ ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ. ಗುರುತ್ವಾಕರ್ಷಣ ಬಲದ ವ್ಯತ್ಯಾಸ ಹಾಗೂ ಧ್ರವ ಇಂಧನದ ಬಳಕೆ ಸಂಬಂಧ ಈ ಲ್ಯಾಪ್ಟ್ ಪರೀಕ್ಷೆ ನಡೆಸಲಾಗಿದ್ದು, ನಿರೀಕ್ಷೆಯನ್ನೂ ಮೀರಿ ಪರೀಕ್ಷೆ ಯಶಸ್ಸು ಕಂಡಿದೆ. ಮೂಲಗಳ ಪ್ರಕಾರ ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೋದ ವಿಶೇಷ ಪ್ರಯೋಗಾಲಯದಲ್ಲಿ ಈ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ, ಚಂದ್ರಯಾನ-2ಕ್ಕೆ ಸಂಬಂಧಿಸಿದ ಎಲ್ಲ ಮೂರೂ ಪ್ರಯೋಗಗಳೂ ಯಶಸ್ವಿಯಾಗಿ ಮುಗಿದಿದ್ದು, ಜನವರಿ 2019ರಲ್ಲಿ ಉಡಾವಣೆ ಮಾಡುವ ಲೆಕ್ಕಾಚಾರವನ್ನು ಇಸ್ರೋ ಹೊಂದಿದೆ. ಇನ್ನು 2008ರ ಅಕ್ಟೋಬರ್ ನಲ್ಲಿ ಇಸ್ರೋ ಚಂದ್ರಯಾನ-1 ಉಡಾವಣೆ ಮಾಡಿತ್ತು. Topics : New Delhi, Science And Technology, ISRO, Chandrayan-2, ನವದೆಹಲಿ, ವಿಜ್ಞಾನ ಮತ್ತು ತಂತ್ರಜ್ಞಾನ, ಇಸ್ರೋ, ಚಂದ್ರಯಾನ 2
2019/01/17 06:32:11
https://www.kannadaprabha.com/science-technology/chandrayaan-2-isro-successfully-tests-lander-for-soft-landing-on-the-moon-sources/327004.html
mC4
ಈ ರಾಶಿಯಲ್ಲಿ ನೀವೇನಾದ್ರು ಹುಟ್ಟಿದ್ದರೆ ತುಂಬಾನೇ ಅದೃಷ್ಟವಂತರು ಶಿವನಿಗೆ ಅತ್ಯಂತ ಪ್ರಿಯ ಈ ನಾಲ್ಕು ರಾಶಿಗಳು ಆ ರಾಶಿಗಳು ಯಾವುವು ಗೊತ್ತಾ !!!! – Nan Magand March 4, 2021 ನನ್ ಮಗಂದ್Leave a Comment on ಈ ರಾಶಿಯಲ್ಲಿ ನೀವೇನಾದ್ರು ಹುಟ್ಟಿದ್ದರೆ ತುಂಬಾನೇ ಅದೃಷ್ಟವಂತರು ಶಿವನಿಗೆ ಅತ್ಯಂತ ಪ್ರಿಯ ಈ ನಾಲ್ಕು ರಾಶಿಗಳು ಆ ರಾಶಿಗಳು ಯಾವುವು ಗೊತ್ತಾ !!!! ಸ್ನೇಹಿತರೇ ಸಾಮಾನ್ಯವಾಗಿ ನಾವು ಕೆಲವೊಂದು ಬಾರಿ ಜೀವನದಲ್ಲಿ ಎಂತಹ ಕಷ್ಟಗಳನ್ನು ಎದುರಿಸುತ್ತೇವೆ ಎಂಬುದು ನಮಗೆ ಅರಿವಿರುವುದಿಲ್ಲ. ಆದರೆ ಕೆಲವೊಂದು ಬಾರಿ ಸಮಸ್ಯೆಗಳಿಗೆ ಪರಿಹಾರ ಇದ್ದರೂ ಕೂಡ ನಮಗೆ ತಿಳಿಯುವುದಿಲ್ಲ.ರಾಶಿ ವಿಷಯದ ಆಧಾರದ ಮೇಲೆ ಕೆಲವೊಬ್ಬರ ಜೀವನ ಹೇಗಿದೆ ಗ್ರಹಗತಿಗಳು ಹೇಗಿದೆ ಎಂಬುದರ ಮೇಲೂ ಕೂಡ ಅವರ ಸುಖ ದುಃಖಗಳು ನಿರ್ಧಾರವಾಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ದಂತಹ ಸಂಶಯವಿಲ್ಲ.ಕೆಲವೊಂದು ಬಾರಿ ಇದರಿಂದ ಹೊರಗೆ ಬರುವಂತಹ ಅನೇಕ ದಾರಿಗಳಿದ್ದರೂ ಕೂಡ ನಮಗೆ ಸರಿಯಾದ ಮಾರ್ಗ ಇಲ್ಲದೇ ಆ ದಾರಿಗಳು ತಿಳಿಯಲು ಸಾಧ್ಯವಿರುವುದಿಲ್ಲ . ಸಾಮಾನ್ಯವಾಗಿ ಕೆಲವೊಂದು ದೇವರ ಅನುಗ್ರಹಕ್ಕೆ ಕೆಲವೊಂದು ರಾಶಿಯವರು ಒಳಗಾಗಿರುತ್ತಾರೆ ಆದರೆ ಅವರಿಗೆ ಅದರ ಮಾಹಿತಿ ಇರುವುದಿಲ್ಲ ಮತ್ತು ಯಾವ ದೇವರ ಅನುಗ್ರಹಕ್ಕೆ ಒಳಗಾಗಿದ್ದೇವೆ ಹೇಗೆ ಪೂಜೆ ಮಾಡಬೇಕು ಎಂಬ ಕನಿಷ್ಠ ಮಾಹಿತಿ ಕೂಡ ಇರುವುದಿಲ್ಲ .ಆದರೆ ಈ ದಿನ ನಾವು ನಿಮಗೆ ಶಿವನ ಅನುಗ್ರಹಕ್ಕೆ ಒಳಗಾಗಿರುವ ನಾಲ್ಕು ರಾಶಿಯವರ ಬಗ್ಗೆ ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ಪ್ರತಿಯೊಂದು ರಾಶಿಯ ಮೇಲೆ ಶಿವನ ಅನುಗ್ರಹ ಇದ್ದೇ ಇರುತ್ತದೆ . ಆದರೆ ನಾವು ಈಗ ಹೇಳಹೊರಟಿರುವ ರಾಶಿಯವರೆಂದರೆ ಶಿವನಿಗೆ ಅತ್ಯಂತ ಪ್ರಿಯವಾದವರು ಅವರು ಯಾಕೆ ಶಿವನಿಗೆ ಪ್ರಿಯ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.ನೀವು ಕೂಡ ಆ ರಾಶಿಯಾಗಿದ್ದರೆ ಈ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಈ ರಾಶಿಯವರು ಬೇರೆ ಬೇರೆ ಯಾರಾದರೂ ನಿಮ್ಮ ಕುಟುಂಬದಲ್ಲಿದ್ದರೆ ಅಥವಾ ಸ್ನೇಹಿತರಾಗಿದ್ದರೆ ಅವರಿಗೂ ಕೂಡ ಈ ಮಾಹಿತಿಯನ್ನು ತಿಳಿಸಿ.ಸಾಮಾನ್ಯವಾಗಿ ನಾವು ಈ ಕೆಳಗೆ ಹೇಳುವಂತಹ ರಾಶಿಯವರು ಶಿವನಿಗೆ ಅತ್ಯಂತ ಪ್ರಿಯವಾದ ರಾಶಿಯವರು ಎಂದರೆ ತಪ್ಪಾಗುವುದಿಲ್ಲ ಈ ರಾಶಿಯವರ ಮನಸ್ಥಿತಿ ಹೇಗಿರುತ್ತದೆ ಶಿವನಿಗೆ ಏಕೆ ಪ್ರಿಯ ಎಂಬ ಮಾಹಿತಿ ಇಲ್ಲಿದೆ. ಮೊದಲು ಆ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರೆಂದರೆ ಶಿವನಿಗೆ ಹೆಚ್ಚು ಪ್ರೀತಿ ಏಕೆಂದರೆ ಇವರು ಶಿವನ ಆರಾಧನೆಯಲ್ಲಿ ಹೆಚ್ಚು ಆಸಕ್ತಿಯಿಂದ ಮಾಡುತ್ತಾರೆ .ಮತ್ತು ಇವರು ಸಂಬಂಧಗಳಿಗೆ ಹೆಚ್ಚಿನ ಬೆಲೆಯನ್ನು ಕೊಡುತ್ತಾರೆ. ಯಾವುದೇ ರೀತಿಯ ದಂತಹ ಸಂಬಂಧವಾದರೂ ನಿಭಾಯಿಸುವ ಶಕ್ತಿ ಈ ರಾಶಿಯವರಿಗೆ ಇದೆ . ಆದ್ದರಿಂದ ಈ ರಾಶಿಯವರೆಂದರೆ ಶಿವನಿಗೆ ಅತ್ಯಂತ ಪ್ರಿಯ ಮತ್ತೊಂದು ರಾಶಿ ಎಂದರೆ ಕರ್ಕಾಟಕ ರಾಶಿ . ಈ ರಾಶಿಯವರೆಂದರೆ ಕೂಡ ಶಿವನಿಗೆ ಅತ್ಯಂತ ಪ್ರಿಯ ಏಕೆಂದರೆ ಇವರು ಶಿವನ ಆರಾಧನೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ . ಮತ್ತು ಇವರು ದಾನದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ತಿಳಿಯಬಾರದು ಎಂಬ ಮನಸ್ಥಿತಿಯನ್ನು ಹೊಂದಿದವರು ಇವರಾಗಿದ್ದಾರೆ .ಈ ರಾಶಿಯವರು ಸೋಮವಾರದಂದು ತಮ್ಮ ಗೋಶಾಲೆಯಲ್ಲಿ ಅಂದರೆ ದನ ಕರುಗಳಿಗೆ ಸಂತೃಪ್ತಿ ಆಗುವಷ್ಟು ಆಹಾರವನ್ನು ತಿನ್ನಿಸುವುದರಿಂದ ಶಿವನಿಗೆ ಇನ್ನೂ ಹತ್ತಿರ ಆಗುವ ಸಾಧ್ಯತೆ ಇದೆ. ಶಿವನಿಗೆ ಹತ್ತಿರವಾದಂತಹ ಮತ್ತೊಂದು ರಾಶಿಯ ಎಂದರೆ ಕನ್ಯಾ ರಾಶಿ ಈ ರಾಶಿಯವರು ಮನಸ್ಸಿನ ಒಳಗೊಂದು ಹೊರಗೊಂದು ಎಂದೂ ಮಾಡುವುದಿಲ್ಲ ಆದ್ದರಿಂದ ಈ ರಾಶಿಯವರೆಂದರೆ ಶಿವನಿಗೆ ಅತ್ಯಂತ ಪ್ರೀತಿ ಮನಸ್ಸಿನಲ್ಲಿ ಏನಿದೆ ಅದನ್ನು ಸಂಪೂರ್ಣವಾಗಿ ತಿಳಿಸುವ ಮನೋಭಾವವನ್ನು ಈ ರಾಶಿಯವರು ಹೊಂದಿದ್ದಾರೆ .ಮತ್ತೊಂದು ರಾಶಿ ಎಂದರೆ ಕುಂಭ ರಾಶಿ ಈ ರಾಶಿಯವರ ಮನಸ್ಥಿತಿ ಎಂದರೆ ಶಿವನಿಗೆ ಅತ್ಯಂತ ಪ್ರೀತಿ ಯಾವುದೇ ಕಾರಣಕ್ಕೂ ಯಾವುದೇ ರೀತಿಯ ದಂತಹ ಕಪಟ ಮೋಸಗಳನ್ನು ಅರಿಯದೆ ಇರುವವರು. ಈ ರಾಶಿಯವರು ಶಿವನ ಕೃಪೆಗೆ ಅತ್ಯಂತ ಹೆಚ್ಚು ಪಾತ್ರರಾಗಿದ್ದಾರೆ ಈ ಮೇಲಿನ ನಾಲ್ಕು ರಾಶಿಯವರು ಕೂಡ ಶಿವನ ಪ್ರೀತಿಗೆ ಪಾತ್ರರಾಗಿದ್ದಾರೆ ಆದರೆ ಅವರ ಗುಣಸ್ವಭಾವಗಳು ಎಂದೂ ಕೂಡ ಬದಲಾಗದ ರೀತಿಯಲ್ಲಿ ಅವರು ನೋಡಿಕೊಳ್ಳಬೇಕು ಅಷ್ಟೇ ಧನ್ಯವಾದಗಳು.
2021/08/02 21:39:56
https://govtjobsinkarnataka.com/%E0%B2%88-%E0%B2%B0%E0%B2%BE%E0%B2%B6%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%A8%E0%B3%80%E0%B2%B5%E0%B3%87%E0%B2%A8%E0%B2%BE%E0%B2%A6%E0%B3%8D%E0%B2%B0%E0%B3%81-%E0%B2%B9/
mC4
ಬಂಟ್ವಾಳ ಸಜಿಪನಡು ಕಂಚಿನಡ್ಕದ ತ್ಯಾಜ್ಯವಿಲೇವಾರಿ ಘಟಕಕ್ಕೆ ವಿರೋಧ: ಇಂದು ಬಂದ್ ಆಚರಣೆ - NAMMAKUDLA NEWS - ನಮ್ಮಕುಡ್ಲ ನ್ಯೂಸ್ ಬಂಟ್ವಾಳ ಸಜಿಪನಡು ಕಂಚಿನಡ್ಕದ ತ್ಯಾಜ್ಯವಿಲೇವಾರಿ ಘಟಕಕ್ಕೆ ವಿರೋಧ: ಇಂದು ಬಂದ್ ಆಚರಣೆ ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕದಲ್ಲಿ ಬಂಟ್ವಾಳ ಪುರಸಭೆ ನಿರ್ಮಿಸಿರುವ ಸುಮಾರು 1.40 ಕೋಟಿ ರೂಪಾಯಿ ವೆಚ್ಚದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಮಂಗಳೂರು ಸಹಾಯಕ ಆಯುಕ್ತರ ಆದೇಶದ ಮೇರೆಗೆ ನಿನ್ನೆ (ಮಾರ್ಚ್ 18) ತ್ಯಾಜ್ಯ ಘಟಕಕ್ಕೆ ತ್ಯಾಜ್ಯ ವಿಲೇವಾರಿಗೆ ಪುರಸಭೆಯ ಸಿಬ್ಬಂದಿಗಳು ತೆರಳಿದ ಸಂದರ್ಭದಲ್ಲಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳುವುದನ್ನು ಮನಗಂಡು ಬಂಟ್ವಾಳ ಪೊಲೀಸರು ಪ್ರತಿಭಟನಾ ನಿರತ ಕೆಲವರನ್ನು ಬಂಧಿಸಿದ್ದಾರೆ. ಪೊಲೀಸ್ ಸರ್ಪಗಾವಲಿನಲ್ಲಿ ಸಿಬ್ಬಂದಿಗಳು ತ್ಯಾಜ್ಯವನ್ನು ವಿಲೇವಾರಿ ಘಟಕಕ್ಕೆ ಹಾಕುವಂತಹ ಸ್ಥಿತಿ ಇಲ್ಲಿ ನಿರ್ಮಾಣವಾಗಿತ್ತು. ಇದೀಗ ಬಂಟ್ವಾಳ ಪುರಸಭಾ ಅಧಿಕಾರಿಗಳ ದಬ್ಭಾಳಿಕೆ ಮತ್ತು ಪೋಲಿಸ್ ದೌರ್ಜನ್ಯದ ವಿರುದ್ಧ ಸಜೀಪ ನಾಗರೀಕರು ಇಂದು ಸಜೀಪ ಬಂದ್ ಗೆ ಕರೆ ಕೊಟ್ಟಿದ್ದಾರೆ. ಸಜಿಪ ನಡು ಡಂಪಿಂಗ್ ಯಾರ್ಡ್ ವಿರೋಧ ವ್ಯಕ್ತಪಡಿಸಿದ ಪಂಚಾಯತ್ ಅಧ್ಯಕ್ಷರ ಮತ್ತು ನಾಗರಿಕರನ್ನು ಅಮಾನುಷವಾಗಿ ಬಂಧಿಸಿದ ಪೋಲೀಸರ ನಡೆ ಖಂಡನೀಯ ಎಂದು ಎಸ್.ಡಿ.ಪಿ.ಐ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಎಸ್.ಡಿ.ಪಿ.ಐ ಪ್ರಕಟಣೆ: ಬಂಟ್ವಾಳ ಪುರಸಭೆಯಿಂದ ಕಂಚಿನಡ್ಕ ಪದವಿನಲ್ಲಿ ಕೆಲವು ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ತ್ಯಾಜ್ಯ ಸಂಸ್ಕರಣೆಯ ಡಂಪಿಂಗ್ ಯಾರ್ಡ್ ಬಳಿ ಸ್ಥಳೀಯ ಮನೆಗಳನ್ನು ಅಂಗನವಾಡಿಗಳನ್ನು ಬೇರೆಡೆಗೆ ಸ್ಥಳಾಂತರಿಸದೆ ಮತ್ತು ಪುನರ್ವಸತಿ ಕಲ್ಪಿಸದೇ ಪುರಸಭೆಯಿಂದ ತ್ಯಾಜ್ಯ ಹಾಕಿದ್ದನ್ನು ವಿರೋಧಿಸಿದ ಪಂಚಾಯತ್ ಅದ್ಯಕ್ಷರನ್ನು ಸೇರಿದಂತೆ ಗ್ರಾಮದ ಜನರನ್ನು ಪೋಲಿಸರು ಬಂಧಿಸಿರುವ ಕ್ರಮವು ಖಂಡನೀಯವಾಗಿದೆ. ಡಂಪಿಂಗ್ ಯಾರ್ಡ್ ಗೆ ಗ್ರಾಮಸ್ಥರ ವಿರೋಧದ ನಡುವೆಯೂ ಮಂಗಳೂರು ಸಹಾಯಕ ಆಯುಕ್ತರ ಆದೇಶದ ಮೇರೆಗೆ ಬಲವಂತವಾಗಿ ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯ ಹಾಕಿದ್ದಾರೆ. ಅಲ್ಲದೇ ಇದರ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದ ಪಂಚಾಯತ್ ಅದ್ಯಕ್ಷರಿಗೆ, ಸದಸ್ಯರಿಗೆ ಮತ್ತು ಗ್ರಾಮಸ್ಥ ಮಹಿಳೆಯರಿಗೆ ಮಾತಾನಾಡಲು ಕೂಡ ಅವಕಾಶ ನೀಡದೇ ಅವರ ಹೋರಾಟವನ್ನು ಬಲವಂತವಾಗಿ ಹತ್ತಿಕ್ಕಿರುವ ಜಿಲ್ಲಾಡಳಿತದ ಸರ್ವಾಧಿಕಾರಿ ಧೋರಣೆಯನ್ನು ಸಹಿಸಲು ಖಂಡಿತವಾಗಿಯು ಸಾಧ್ಯವಿಲ್ಲ. ಇಂದು ಇಡೀ ದೇಶದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊರೊನ ವೈರಸ್ ನಿಂದ ಸಂಕಷ್ಟದಲ್ಲಿ ಇರುವಾಗ ಗ್ರಾಮಸ್ಥರು ವಾಸಿಸುವ ಸ್ಥಳದಲ್ಲೇ ತ್ಯಾಜ್ಯವನ್ನು ಹಾಕಿರುವುದು ವಿಪರ್ಯಾಸ. ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸದೇ ಪುರಸಭೆಯು ತ್ಯಾಜ್ಯವನ್ನು ಹಾಕಿದ್ದಲ್ಲಿ ತೀವ್ರ ಹೋರಾಟವನ್ನು ನಡೆಸಲಾಗುವುದೆಂದು ಎಸ್.ಡಿ.ಪಿ.ಐ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಎಸ್ ಎಚ್ ಪ್ರಕಟಣೆಯಲ್ಲಿ ತಿಳಿಸಿದ್ದರು.
2020/08/12 06:18:03
https://nammakudlanews.com/protest-against-dumping-yard-near-bantwal-sajipa/
mC4
ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಪೋಸ್ಟ್- ಶಿರಸಿಯಲ್ಲಿ 20 ಜನರ ಬಂಧನ – Public TV ಕಾರವಾರ: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಪುಂಡರು ದಾಳಿ ಮಾಡಿದ ಪ್ರಕರಣವನ್ನು ಸಮರ್ಥಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಯತ್ನದ ಮಾಡಿದ್ದ 20 ಜನರನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಶಿರಸಿ ನಗರದ ಕೆಲವು ಸಂಘಟನೆಯ ಪುಂಡರು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ವಾಟ್ಸಪ್ ಗ್ರೂಪ್ ಗಳಲ್ಲಿ ಧಾರ್ಮಿಕ ಮತ್ತು ಕೊಮು ಭಾವನೆಗಳಿಗೆ ಧಕ್ಕೆ ತರುವ ಮತ್ತು ಸಮಾಜದ ಶಾಂತಿ ಕದಡುವಂತಹ ಸಂದೇಶಗಳನ್ನು ಹರಿ ಬಿಟ್ಟಿದ್ದರು. ಮಾಹಿತಿ ಆಧಾರದ ಮೇಲೆ ಮುಂಜಾಗ್ರತಾ ಕ್ರಮವಾಗಿ 20 ಜನರನ್ನು ವಶಕ್ಕೆ ಪಡೆದು ಸಿ.ಪಿ.ಐ ಪ್ರದೀಪ್ ಬಿ.ಯು ಹಾಗೂ ಹೊಸ ಮಾರುಕಟ್ಟೆ ಠಾಣೆ ಪಿಎಸ್‍ಐ ನಾಗಪ್ಪ ಮತ್ತು ನಗರ ಠಾಣೆ ಪಿಎಸ್‍ಐ ಶಿವಾನಂದ ನಾವದಗಿ ಅವರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಕೋಮು ಸೌಹಾರ್ದತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದು, ಪ್ರಚೋದನಾಕಾರಿ ಹೇಳಿಕೆ, ಸಂದೇಶ, ವಿಡಿಯೋ ಹರಿಬಿಟ್ಟಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿರಸಿ ಉಪವಿಭಾಗದ ಡಿವೈಎಸ್‍ಪಿ ಗೋಪಾಲ ಕೃಷ್ಣ ನಾಯಕ ಎಚ್ಚರಿಸಿದ್ದಾರೆ. Related Topics:Bengaluru RiotsPublic TVSirsisocial mediaUttara Kannadaಉತ್ತರ ಕನ್ನಡಪಬ್ಲಿಕ್ ಟಿವಿಬೆಂಗಳೂರು ಗಲಭೆಶಿರಸಿಸಾಮಾಜಿಕ ಜಾಲತಾಣ
2020/09/28 18:56:00
https://publictv.in/bengaluru-riots-social-media-post-uttara-kannada-sirsi-youths
mC4
ಫೇಸ್ಬುಕ್ - ಅತ್ಯುತ್ತಮ ಸಾಮಾಜಿಕ ಮಾಧ್ಯಮ ಪರಿಕರಗಳು ಅಳಿಸಲಾದ Instagram ಸಂದೇಶಗಳನ್ನು ಮರುಪಡೆಯುವುದು ಹೇಗೆ 2022 : 3 ಪರೀಕ್ಷಿತ ವಿಧಾನಗಳು Instagram offre une pléthore de fonctionnalités conviviales. ಆದಾಗ್ಯೂ, un facteur qui peut laisser les individus perplexes est le repostage. Cela vous permet de reposter n'importe quoi, notamment les stories de quelqu'un sur Instagram, mais... 2022 ರಲ್ಲಿ Instagram ನಲ್ಲಿ ಪೋಸ್ಟ್ ಮಾಡಲು ಉತ್ತಮ ಸಮಯ : ದಿನದ ಚೀಟ್ ಶೀಟ್ ಫೇಸ್ಬುಕ್ ? Instagram ಅತ್ಯಂತ ಲೌಕಿಕದಿಂದ ಹಿಡಿದು ವಿಚಾರಣೆಗಳ ಸಂಗ್ರಹಣೆಯಲ್ಲಿ ಮುಳುಗಿದೆ. ನಿಮ್ಮನ್ನು ಮತ್ತೆ ಅನುಸರಿಸದ Instagram ಅನುಯಾಯಿಗಳನ್ನು ಅಳಿಸುವುದು ಹೇಗೆ? Il n'est pas agréable de voir quelqu'un se... Un seul compte Instagram n'est pas forcément suffisant pour faire le travail. ಬಹು Instagram ಖಾತೆಗಳನ್ನು ಏಕಕಾಲದಲ್ಲಿ ನಿರ್ವಹಿಸುವುದು ಈಗ ಹಿಂದೆಂದಿಗಿಂತಲೂ ಸುಲಭವಾಗಿದೆ, ನೀವು ವ್ಯಾಪಾರವನ್ನು ಪ್ರಾರಂಭಿಸುತ್ತಿದ್ದೀರಿ, ನೀವು ಹಿಡಿದಿದ್ದೀರಾ .... ಫೇಸ್ಬುಕ್ : ಫೇಸ್ಬುಕ್ Instagram ತ್ವರಿತವಾಗಿ ವ್ಯವಹಾರಗಳಿಗೆ ಸಾಮಾಜಿಕ ಮಾಧ್ಯಮ ಶಕ್ತಿ ಕೇಂದ್ರವಾಗಿದೆ. ಸ್ಪಷ್ಟ ಕಾರಣಗಳಿಗಾಗಿ : 13% de la population mondiale l'utilise, et 80% d'entre eux suivent des entreprises. 4 ದರದೊಂದಿಗೆ,21...
2022/05/18 09:17:27
https://winchesclub.com/kn/?subject=Tout%20sur%20le%20checkout%20d%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BDInstagram&body=https://winchesclub.com/tout-sur-le-checkout-dinstagram/
mC4
ಪ್ರಕೃತಿ ಚಿಕಿತ್ಸೆಗಾಗಿ ಎಂಆರ್​ಆರ್ ಆಸ್ಪತ್ರೆ · ಜಿಲ್ಲೆಬೆಂಗಳೂರುವಿಶೇಷ ವರದಿ ಪ್ರಕೃತಿ ಚಿಕಿತ್ಸೆಗಾಗಿ ಎಂಆರ್​ಆರ್ ಆಸ್ಪತ್ರೆ ಬೆಂಗಳೂರು: ಮಾನಸಿಕ, ದೈಹಿಕ ಸೇರಿ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದಕ್ಕೆಲ್ಲ ಪ್ರಕೃತಿ ಚಿಕಿತ್ಸೆಯಲ್ಲಿ ಪರಿಹಾರವಿದೆ. ಅಂತೆಯೇ ಸುಸಜ್ಜಿತ ಸೌಲಭ್ಯಗಳೊಂದಿಗೆ ಎಂಆರ್​ಆರ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಕಾರ್ಯಾಚರಿಸುತ್ತಿದೆ. ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ ನಡುವೆ ಬರುವ ಸೋಲೂರು ಗ್ರಾಮದ ಬಳಿ 20 ಎಕರೆ ಜಾಗದಲ್ಲಿ 200 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ 2 ವರ್ಷಗಳ ಹಿಂದೆ ನಿರ್ವಣವಾಗಿದ್ದು, ಲಕ್ಷಾಂತರ ಜನರು ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿಯೇ ಕಡಿಮೆ ಅವಧಿಯಲ್ಲಿಯೇ ಈ ಆಸ್ಪತ್ರೆಯು ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಅತ್ಯಂತ ಜನಪ್ರಿಯತೆ ಪಡೆದಿದೆ ಎಂಬುದು ಆಸ್ಪತ್ರೆಯವರು ನಿಡುವ ವಿವರಣೆ. ದೇಶದಲ್ಲಿ ಆಂದಾಜು ಶೇ.52 ಮಂದಿ ವೈದ್ಯರ ಸಲಹೆ ಪಡೆಯದೆ ಔಷಧಿಗಳನ್ನು ಸೇವಿಸುತ್ತಿದ್ದು, ರೋಗ ನಿರೋಧಕ ಶಕ್ತಿ ಕುಂಠಿತವಾಗಿ ಆನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ, ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಬಿಡುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದನ್ನು ತಪ್ಪಿಸಿ ಜನರಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕೆಂಬ ನಿಟ್ಟಿನಲ್ಲಿ ಎಂಆರ್​ಆರ್ ಸಮೂಹ ಸಂಸ್ಥೆಯು ಎಂಆರ್​ಆರ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು 2016ರಲ್ಲಿ ಆರಂಭಿಸಿದೆ. ಆಧುನಿಕ ಸಲಕರಣೆ ಮೂಲಕ ಬೊಜ್ಜು, ಮಧುಮೇಹ, ರಕ್ತದೊತ್ತಡ, ಗಂಟಲು ನೋವು, ಅಜೀರ್ಣ, ಮಲಬದ್ಧತೆ, ಮಾನಸಿಕ ಖಿನ್ನತೆ ಇನ್ನಿತರ ಕಾಯಿಲೆಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಔಷಧರಹಿತ ಮಸಾಜ್, ಮಣ್ಣಿನ, ಅರಿಶಿನ ಸ್ನಾನ, ಕೋಲಾನ್ ಹೈಡ್ರೋಥೆರಪಿ, ಆಹಾರ, ಉಪವಾಸ, ಜಲ ಚಿಕಿತ್ಸೆ, ಫಿಸಿಯೋಥೆರಪಿ, ಅಕ್ಯುಪಂಕ್ಚರ್, ಸ್ಟೀಂ, ಸೋನಾ ಬಾತ್, ಸೇರಿ ಇನ್ನಿತರ ಚಿಕಿತ್ಸೆಗಳನ್ನು ತಜ್ಞ ವೈದ್ಯರು ನೀಡಲಿದ್ದಾರೆ. ಏನೇನು ಸೌಲಭ್ಯ ಇದೆ? ಇಲ್ಲಿಗೆ ಚಿಕಿತ್ಸೆ ಪಡೆಯಲು ಬರುವ ಜನರಿಗೆ ಪ್ರತ್ಯೇಕ ವಸತಿ ಸೌಲಭ್ಯ ಇದೆ. ಸಾಮಾನ್ಯ, ವಿಶೇಷ ಕೊಠಡಿ ಮತ್ತು ಕಾಟೇಜ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಆಸ್ಪತ್ರೆಯಲ್ಲಿ ಸುಸಜ್ಜಿತ ಪ್ರಯೋಗಾಲಯ, ವಾಕಿಂಗ್ ಟ್ರಾ್ಯಕ್, ಒಳಾಂಗಣ ಆಟ, ಜಿಮ್ ಈಜುಕೊಳ, ಆಂಫಿ ಥಿಯೇಟರ್ ಸೇರಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆರೋಗ್ಯ ಶಿಕ್ಷಣ ಕೇಂದ್ರ ರೋಗದ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಆರೋಗ್ಯ ಶಿಕ್ಷಣ ಕೇಂದ್ರವಾಗಿ ಈ ಆಸ್ಪತ್ರೆ ಕೆಲಸ ಮಾಡುತ್ತಿದೆ. ಪ್ರತಿನಿತ್ಯ ಬೆಳಗ್ಗೆ 5ರಿಂದ ರಾತ್ರಿ 10 ಗಂಟೆವರೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಧುನಿಕ ಜೀವನ ಶೈಲಿಯಿಂದಾಗಿ ಬರುವ ರೋಗಗಳಿಗೆ ಮಾತ್ರೆರಹಿತ ಚಿಕಿತ್ಸೆ ಪಡೆಯಬಹುದು. ಆರೋಗ್ಯಕ್ಕೆ ಪಂಚ ಸೂತ್ರಗಳು ಪ್ರತಿನಿತ್ಯ ಹೆಚ್ಚು ನೀರು ಕುಡಿಯಿರಿ  ದಿನಕ್ಕೆ 2 ಹೊತ್ತು ಊಟ ಮಾಡಿ ನಿತ್ಯವೂ ಬೆಳಗ್ಗೆ 1 ಗಂಟೆ ವ್ಯಾಯಾಮ ಮಾಡಿ  ವಾರಕ್ಕೊಮ್ಮೆ ಉಪವಾಸ ಇರಿ ಮಾಂಸಾಹಾರ ತ್ಯಜಿಸಿ ವಿವಿಧ ಕಾಯಿಲೆಗಳಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ರಾಮಬಾಣ. ಬಡ, ಮಧ್ಯಮ ವರ್ಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. | ಡಾ. ಆರ್. ಚೇತನ್​ಕುಮಾರ್ ವೈದ್ಯಕೀಯ ನಿರ್ದೇಶಕ ಮತ್ತು ಸಿಇಒ ಮಾಹಿತಿಗೆ ಸಂಪರ್ಕ: ಎಂ.ಆರ್.ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಸೋಲೂರು, ಮಾಗಡಿ ತಾಲೂಕು, ರಾಮನಗರ ಜಿಲ್ಲೆ- 562127. ದೂ: 080-22682900 ಮೊ: 9972639888.
2019/11/17 20:13:14
https://www.vijayavani.net/%E0%B2%AA%E0%B3%8D%E0%B2%B0%E0%B2%95%E0%B3%83%E0%B2%A4%E0%B2%BF-%E0%B2%9A%E0%B2%BF%E0%B2%95%E0%B2%BF%E0%B2%A4%E0%B3%8D%E0%B2%B8%E0%B3%86%E0%B2%97%E0%B2%BE%E0%B2%97%E0%B2%BF-%E0%B2%8E%E0%B2%82/
mC4
ನಿದ್ರೆ: Latest ನಿದ್ರೆ News & Updates, Photos & Images, Videos | Vijaya Karnataka - Page 19 September,17,2019, 22:02:53 ಆಲೂರು: ಸಿರಿಧಾನ್ಯ ಬೆಳೆದು ಶ್ರೀಮಂತರಾಗಿ Jan 07, 2018, 05.07 AM ರಾಸಾಯನಿಕಗಳನ್ನು ಬಳಸಿ ಅಧಿಕ ಇಳುವರಿ ಬಯಸುವುದಕ್ಕಿಂತ ಸಾವಯುವ ಪದ್ಧತಿಯಡಿ ಬೆಳೆಗಳನ್ನು ಬೆಳೆದರೆ ಕೃಷಿಯಲ್ಲಿ ಪ್ರಗತಿ ಕಾಣಬಹುದು ಎಂಬುದನ್ನು ಥಾಯ್‌ಲ್ಯಾಂಡ್‌ ದೇಶ ಸಾಧಿಸಿ ತೋರಿಸಿದೆ ಜಿ.ಕೃಷ್ಣಪ್ರಸಾದ್‌ ತಿಳಿಸಿದರು. 'ಬೊಕ್ಕಸ ಲೂಟಿಯೇ ಸಾಧನೆ' ರಾಜ್ಯದ ಬೊಕ್ಕಸವನ್ನು ಲೂಟಿ ಹೊಡೆದಿರುವುದೇ ರಾಜ್ಯ ಸರಕಾರದ ಸಾಧನೆಯಾಗಿದ್ದು, ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ ದೊರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಥ್ರಿಲ್‌ ಕೊಡುವ ಹಾರರ್‌ ಗೇಮ್‌ ಭೂತಗಳ ಅಸ್ತಿತ್ವ ಸುಳ್ಳು ಇರಬಹುದು. ಆದರೆ ಭ್ರಮೆ ಹುಟ್ಟಿಸುವ ಹಾರರ್‌ ಗೇಮ್‌ಗಳು. ವ್ಯಾಯಾಮ ಮಾಡುವುದನ್ನು ಇದ್ದಕ್ಕಿದ್ದ ಹಾಗೆ ನಿಲ್ಲಿಸಿದರೆ ? Jan 04, 2018, 02.38 PM ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ಇದ್ದಕ್ಕಿದ್ದ ಹಾಗೆ ನಿಲ್ಲಿಸಿದರೆ ಅದು ನಿಮ್ಮ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಗೆ ಅಳವಡಿಸಿದ್ದ ಬ್ಯಾರಿಕೇಡ್‌ಗೆ ಡಿಕ್ಕಿಯಾದ ಘಟನೆಯಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಶಾಲನಗರದಲ್ಲಿ ಬುಧವಾರ ಮುಂಜಾನೆ ನಡೆದಿದೆ. ವಿದ್ಯಾರ್ಥಿಗಳಲ್ಲಿ ಡ್ರಗ್ಸ್‌ ವ್ಯಸನ ಆಘಾತಕಾರಿ ಈ ಪಿಡುಗಿನ ತೀವ್ರತೆಯನ್ನು ಗಮನಿಸಿದರೆ ಇದನ್ನು ಮಟ್ಟ ಹಾಕಲು ನಮ್ಮಲ್ಲಿರುವ ವ್ಯವಸ್ಥೆ ಏನೇನೂ ಸಾಲದು. ಇಡೀ ಸಮಸ್ಯೆಗೆ ಬೇರೆ ಬೇರೆ ಆಯಾಮಗಳಿವೆ. ಹೀಗಾಗಿ ಪೊಲೀಸರು, ನಾಗರಿಕ ಸಂಘಟನೆಗಳು, ವೈದ್ಯಕೀಯ ಸಿಬ್ಬಂದಿ, ಪೋಷಕರು, ಶಿಕ್ಷಕರು ಎಲ್ಲರೂ ಇಡಿಯಾಗಿ ಹಾಗೂ ಬಿಡಿ ಬಿಡಿ ನೆಲೆಯಲ್ಲಿ ಕೆಲಸ ಮಾಡಬೇಕು. ನಮ್ಮದು ಮೌಡ್ಯವಲ್ಲ; ಪಾಶ್ಚಾತ್ಯರದು ಆದರ್ಶವಲ್ಲ Dec 19, 2017, 05.17 PM ಭಾರತೀಯರ ವಿಚಾರಧಾರೆ ಪ್ರಪಂಚಕ್ಕೆ ಮಾದರಿಯಾಗಿದೆ. ಆದರೆ ಭಾರತದಲ್ಲಿ ಮೌಢ್ಯತೆ ಇದೆ, ಪಾಶ್ಚಾತ್ಯರಲ್ಲಿ ಪ್ರಗತಿಪರ ಚಿಂತನೆಯಿದೆ ಕೆಲವರು ತಪ್ಪು ಗ್ರಹಿಕೆಯಿಂದ ಈ ರೀತಿ ಹೇಳುತ್ತಿದ್ದಾರೆ ಎಂದು ವಿಜಯಪುರದ ನಿರ್ಭಯಾನಂದ ಸ್ವಾಮೀಜಿ ಹೇಳಿದರು. ನಿದ್ರೆ ಬರುತ್ತಿಲ್ಲವೇ? ನಂದಿ ಸುತ್ತಲ ರೈತರಿಗೆ ಭಾನುವಾರವೆಂದರೆ ಭಯ ! Dec 11, 2017, 04.04 PM ಭಾನುವಾರವೆಂದರೆ ಬಹುತೇಕರಿಗೆ ರಿಲಾಕ್ಸ್‌ ಮೂಡ್‌. ಒತ್ತಡವಿಲ್ಲದ ಸ್ವಚ್ಛಂದ ಪರಿಸ್ಥಿತಿ. ಆದರೆ, ಜಿಲ್ಲೆಯ ಕೆಲ ಗ್ರಾಮಗಳ ರೈತರಿಗೆ ಭಾನುವಾರ ಬಂದರೆ ಎಲ್ಲಿಲ್ಲದ ಭಯ ಕಾಡುತ್ತದೆ. ಜೀವ ಕೈಯಲ್ಲಿಡಿದು ರಸ್ತೇಲಿ ಓಡಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ..! ಕಂಪ್ಯೂಟರ್‌ ಆಪರೇಟರ್‌ ಆತ್ಮಹತ್ಯೆ ಯತ್ನ ಸಿಂದಗಿ: ತಾಲೂಕು ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆ ಆಧಾರಿತ ಕಂಪ್ಯೂಟರ್‌ ಆಪರೇಟರ್‌ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಬೆಳಗಿನಜಾವ ನಡೆದಿದೆ.
2019/09/17 16:32:56
https://vijaykarnataka.indiatimes.com/topics/%E0%B2%A8%E0%B2%BF%E0%B2%A6%E0%B3%8D%E0%B2%B0%E0%B3%86/19
mC4
10ನೇ ವಸಂತಕ್ಕೆ ಕಾಲಿಟ್ಟ ಬಚ್ಚನ್​ ಕುಟುಂಬದ ಕುಡಿ: Aaradhya Bachchan ಹುಟ್ಟುಹಬ್ಬದ ಸಂಭ್ರಮ | Aishwarya Rai Bachchan and Abhishek Bachchan celebrated their daughter Aaradhyas 10th Birthday ae– News18 Kannada 10ನೇ ವಸಂತಕ್ಕೆ ಕಾಲಿಟ್ಟ ಬಚ್ಚನ್​ ಕುಟುಂಬದ ಕುಡಿ: Aaradhya Bachchan ಹುಟ್ಟುಹಬ್ಬದ ಚಿತ್ರಗಳು ಇಲ್ಲಿವೆ..! ಬಚ್ಚನ್​ ಕುಟುಂಬದ ಕುಡಿ ಆರಾಧ್ಯಾ ಬಚ್ಚನ್ (Aaradhya Bachchan)​ 10ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮುದ್ದಿನ ಮಗಳ ಹುಟ್ಟುಹಬ್ಬವನ್ನು (10th Birthday) ಕುಟುಂಬದ ಮಟ್ಟಿಗೆ ಆಚರಿಸಿದ್ದಾರೆ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಹಾಗೂ ಅಭಿಷೇಕ್ ಬಚ್ಚನ್ (Abhishek Bachchan)​. (ಚಿತ್ರಗಳು ಕೃಪೆ: ಐಶ್ವರ್ಯಾ ರೈ ಬಚ್ಚನ್​ ಇನ್​ಸ್ಟಾಗ್ರಾಂ ಖಾತೆ) | November 17, 2021, 17:09 IST ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್​ ಮಗಳು ಆರಾಧ್ಯಾ ಬಚ್ಚನ್​ ಹುಟ್ಟುಹಬ್ಬವನ್ನು ಮನೆಯ ಮಟ್ಟಿಗೆ ಆಚರಿಸಿಕೊಂಡಿದ್ದಾರೆ. ಮಗಳ ಬರ್ತ್​ ಡೆ ಸೆಲಬ್ರೇಷನ್​ ಫೋಟೋಗಳನ್ನು ಒಂದು ದಿನ ತಡವಾಗಿ ಹಂಚಿಕೊಂಡಿದ್ದಾರೆ. ಆರಾಧ್ಯಾ ಬಚ್ಚನ್​ ನಿನ್ನೆಯಷ್ಟೆ 10ನೇ ವಸಂತಕ್ಕೆ ಕಾಲಿಟ್ಟಿದ್ದು, ಕುಟುಂಬದವರ ಜೊತೆ ಬರ್ತ್​ ಡೇ ಸೆಲಬ್ರೇಟ್​ ಮಾಡಿಕೊಂಡಿದ್ದಾರೆ. ವಿನ್ಯಾಸಿತ ಸ್ಲೀವ್​ ಲೆಸ್​ ಗೌನ್​ನಲ್ಲಿ ರಾಜಕುಮಾರಿಯಂತೆ ಮಿಂಚಿದ್ದಾರೆ ಆರಾಧ್ಯಾ. ಮಂಗಳವಾರ ನಡೆದ ಬರ್ತ್​ ಡೇ ಸೆಲಬ್ರೇಷನ್​ ಫೋಟೋಗಳನ್ನು ಐಶ್ವರ್ಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಇಂದು ಶೇರ್ ಮಾಡಿದ್ದು, ಮಗಳಿಗೆ ಮತ್ತೊಮ್ಮೆ ವಿಶ್​ ಮಾಡಿದ್ದಾರೆ. ಅಭಿಷೇಕ್​ ಬಚ್ಚನ್​ ಸಹ ಮಗಳ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದು, ಐಶ್ವರ್ಯಾ ಮಗಳ ಬಗ್ಗೆ ಏನು ಹೇಳುತ್ತಾರೆಂದು ನೆನಪಿಸಿಕೊಂಡಿದ್ದಾರೆ. ಮಗಳೇ ನೀನು ನಮ್ಮ ಪ್ರಪಂಚವನ್ನು ಉತ್ತಮವನ್ನಾಗಿಸುತ್ತೀಯಾ ಎಂದು ಬರೆದುಕೊಂಡಿದ್ದಾರೆ. 2011ರ ನವೆಂಬರ್​ 16ರಂದು ಆರಾಧ್ಯಾ ಬಚ್ಚನ್​ ಜನನವಾಗಿದ್ದು. ಮಗಳು ಹುಟ್ಟಿದ ನಂತರ ಐಶ್ವರ್ಯಾ ರೈ ಕೊಂಚ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದರು. ಮಗಳ ಲಾಲನೆ ಪಾಲನೆಯಲ್ಲಿ ಸಮಯ ಕಳೆಯುತ್ತಿದ್ದ ನಟಿ ಮತ್ತೆ ಸಿನಿಮಾಗಳತ್ತ ಮುಖ ಮಾಡಿದರು. ಈಗ ನಿರ್ದೇಶಕ ಮಣಿರತ್ನಂ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
2022/01/24 17:25:07
https://kannada.news18.com/photogallery/entertainment/aishwarya-rai-bachchan-and-abhishek-bachchan-celebrated-their-daughter-aaradhyas-10th-birthday-ae-663585.html
mC4
ವಿಸ್ಮಯ +: ಆಲುಗಡ್ಡೆಯಿಂದ ಇಷ್ಟೆಲ್ಲಾ ಉಪಯೋಗಗಳಿವೆ ಎಂದು ನಿಮಗೆ ಈ ಮೊದಲು ಗೊತ್ತಿತ್ತೇ? ಶುಕ್ರವಾರ, ಜನವರಿ 12, 2018 ಆಲುಗಡ್ಡೆಯಿಂದ ಇಷ್ಟೆಲ್ಲಾ ಉಪಯೋಗಗಳಿವೆ ಎಂದು ನಿಮಗೆ ಈ ಮೊದಲು ಗೊತ್ತಿತ್ತೇ? https://tinyurl.com/yc3sv8sp ಹೆಚ್ಚು ಕಾಲ ಕೆಡದೇ ಇರುವ, ಅಗ್ಗವಾದ, ವರ್ಷದ ಎಲ್ಲಾ ಋತುಗಳಲ್ಲೂ ಲಭ್ಯವಿರುವ ತರಕಾರಿಗಳೆಂದರೆ ಆಲುಗಡ್ಡೆ ಮತ್ತು ನೀರುಳ್ಳಿ. ಬಡವರ ನೆಚ್ಚಿನ ಈ ಆಲುಗಡ್ಡೆಯನ್ನು ಉದ್ದದ ಬೆರಳುಗಳಂತೆ ಚೌಕಾಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಹುರಿದು ಚೆಂದದ ಕಾಗದದ ಪೊಟ್ಟಣದಲ್ಲಿ ಕಟ್ಟಿಕೊಟ್ಟರೆ ಶ್ರೀಮಂತರಿಗೆ ಅದು ದುಬಾರಿಬೆಲೆಯ ಸ್ವಾದಿಷ್ಟ ಖಾದ್ಯ. ರೆಸಿಪಿಗಳಲ್ಲಿ ಹುಡುಕಹೊರಟರೆ ಆಲು ಜೊತೆಗಿನ ಇತರ ಸಾಮಾಗ್ರಿಗಳನ್ನು ಉಪಯೋಗಿಸಿ ತಯಾರಿಸಬಹುದಾದ ಖಾದ್ಯಗಳ ಪಟ್ಟಿ ನೂರಕ್ಕೂ ಹೆಚ್ಚಿವೆ. ಇದರಲ್ಲಿರುವ ವಿಟಮಿನ್ ಬಿ, ಸಿ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ಗಂಧಕ ಮೊದಲಾದ ಪೋಷಕಾಂಶಗಳು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ಕೊಬ್ಬನ್ನು ಕರಗಿಸುವ ಮೂಲಕ ತೂಕ ಇಳಿಯಲೂ ನೆರವಾಗುತ್ತವೆ. ಆಲುಗಡ್ಡೆಯನ್ನು ಚೆನ್ನಾಗಿ ಹುರಿದು ತಿನ್ನುವುದರಿಂದ ಕೊಬ್ಬು ಕಡಿಮೆಯಾಗುತ್ತದೆ. ಆದರೆ ಆಲುಗಡ್ಡೆಯ ಉಪಯೋಗ ಅಡುಗೆಗೆ ಹೊರತಾಗಿಯೂ ಬಹಳಷ್ಟಿದೆ. ಇದರ ಪರ್ಯಾಯ ಉಪಯೋಗಗಳಲ್ಲಿ ಪ್ರಮುಖವಾದುವನ್ನು ಕೆಳಗಿನ ಸ್ಲೈಡ್ ಷೋ ಮೂಲಕ ವಿವರಿಸಲಾಗಿದೆ: ೧) ಆಲುಗಡ್ಡೆ ಬೇಯಿಸಿದ ನೀರು ಕೂದಲಿಗೆ ಉತ್ತಮ ಆಲುಗಡ್ಡೆಯನ್ನು ಬೇಯಿಸಿದ ಬಳಿಕ ಉಳಿದ ನೀರನ್ನು ಚೆಲ್ಲಬೇಡಿ, ಬದಲಿಗೆ ತಣಿದ ಬಳಿಕ ಇದೇ ನೀರಿಗೆ ಒಂದು ಬೆಂದಿರುವ ಆಲುಗಡ್ಡೆಯನ್ನು ಚೆನ್ನಾಗಿ ಕಿವುಚಿ ನೀರನ್ನು ಗಾಢವಾಗಿಸಿ. ಈ ನೀರಿನಿಂದ ಕೂದಲನ್ನು ತೊಳೆದುಕೊಂಡರೆ ಕೂದಲಿಗೆ ಅಪ್ರತಿಮ ಕಾಂತಿ ದೊರಕುತ್ತದೆ. ಕೂದಲ ಬುಡಗಳನ್ನು ದೃಢಗೊಳಿಸುವ ಮೂಲಕ ಉದುರುವುದನ್ನು ನಿಯಂತ್ರಿಸುತ್ತದೆ ಅಲ್ಲದೇ ತಲೆಹೊಟ್ಟನ್ನೂ ನಿವಾರಿಸುತ್ತದೆ. ೨) ರಕ್ತದೊತ್ತಡ ಕಡಿಮೆಗೊಳಿಸುತ್ತದೆ. ೩) ಮಲಬದ್ದತೆ ನಿವಾರಿಸುತ್ತದೆ. ಒಂದು ವೇಳೆ ಮಲಬದ್ದತೆಯ ತೊಂದರೆ ಇದ್ದರೆ ಒಂದೆರಡು ಆಲುಗಡ್ಡೆಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿದು ತಿನ್ನುವ ಮೂಲಕ ಮಲಬದ್ದತೆಯ ತೊಂದರೆ ದೂರವಾಗುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಲವಣ ಹೊಟ್ಟೆಯಲ್ಲಿ ಆಮ್ಲೀಯತೆಗೆ ಕಾರಣವಾಗುವ ದ್ರವಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಹೊಟ್ಟೆಯುರಿ ಮೊದಲಾದ ತೊಂದರೆಗಳಿಂದ ತಪ್ಪಿಸುತ್ತದೆ. ೪) ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ೫) ಮೊಡವೆಗಳನ್ನು ನಿವಾರಿಸುತ್ತದೆ. ೬) ಚರ್ಮದಡಿಯ ಗಂಟುಗಳನ್ನು ನಿವಾರಿಸುತ್ತದೆ. ಕೆಲವೊಮ್ಮೆ ಚರ್ಮದಡಿಯಲ್ಲಿ ಕೆಲವು ಗ್ರಂಥಿಗಳು ಸ್ರವಿತವಾಗಿ ಗಂಟುಗಳು ಉಂಟಾಗುತ್ತವೆ. ಇದಕ್ಕೆ ಒಂದು ಉದಾಹರಣೆ ಮಣಿಕಟ್ಟಿನಲ್ಲಿ ಉಂಟಾಗುವ ಗ್ಯಾಂಗ್ಲಿಯಾನ್ ಎಂಬ ಗಂಟು. ಇದನ್ನು ನಿವಾರಿಸಲು ಸುಮಾರು ಮೂರು ಅಥವಾ ನಾಲ್ಕು ಆಲುಗಡ್ದೆಗಳನ್ನು ನೇರವಾಗಿ ಬೆಂಕಿಯ ಮೇಲಿಟ್ಟು ಸುಡಬೇಕು. ಬಳಿಕ ಸಿಪ್ಪೆ ಸುಲಿದು ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಚಿಮುಕಿಸಿಕೊಂದು ಬಿಸಿಬಿಸಿಯಾಗಿಯೇ ತಿನ್ನಬೇಕು. ಇದರಿಂದ ಗಂಟುಗಳು ಕರಗತೊಡಗುತ್ತವೆ. ೭) ಹೆರಿಗೆಯ ರೇಖೆಗಳನ್ನು ನಿವಾರಿಸುತ್ತದೆ. ೮) ಬಿಸಿಲಿನ ಝಳಕ್ಕೆ ಒಣಗಿದ ಬಣ್ಣವನ್ನು ನಿವಾರಿಸುತ್ತದೆ. ೯) ಊತವನ್ನು ನಿವಾರಿಸುತ್ತದೆ. ಕೆಲವೊಮ್ಮೆ ಪೆಟ್ಟು ಬಿದ್ದು ಅಥವಾ ಬೇರಾವುದೋ ಕಾರಣದಿಂದ ದೇಹದ ಯಾವುದಾದರೂ ಭಾಗಕ್ಕೆ ಬಾವು ಅಥವಾ ಊತ ಬಂದಿದ್ದರೆ ಆ ಸ್ಥಳಕ್ಕೆ ಆಲುಗಡ್ಡೆ ಬೇಯಿಸಿದ್ದ ನೀರಿನಿಂದ ಅದ್ದಿದ ಬಟ್ಟೆಯನ್ನು ಕಟ್ಟುವ ಮೂಲಕ ಕಡಿಮೆಯಾಗುತ್ತದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಒಂದು ಅಥವಾ ಎರಡು ಆಲುಗಡ್ಡೆಯನ್ನು ಕತ್ತರಿಸಿ ಚಿಕ್ಕ ತುಂಡುಗಳನ್ನಾಗಿಸಿ ಹಾಕಿ. ಈ ತುಂಡುಗಳ ಒಟ್ಟು ತೂಕದ ಎರಡರಷ್ಟು ತೂಕದ ನೀರನ್ನು ಸೇರಿಸಿ. ಉದಾಹರಣೆಗೆ ಐವತ್ತು ಗ್ರಾಂ ಆಲುಗಡ್ಡೆಯಿದ್ದರೆ ನೀರು ನೂರು ಗ್ರಾಂ ಇರಬೇಕು. ಹೆಚ್ಚು ಕಡಿಮೆ ಆಗಬಾರದು. ಈ ನೀರನ್ನು ಚೆನ್ನಾಗಿ ಕುದಿಸಿ ತಣಿಸಿ. ತಣಿದ ನೀರನ್ನು ಸ್ವಚ್ಛವಾದ ಬಟ್ಟೆಯಲ್ಲಿ ಅದ್ದಿ ಬಾವು ಬಂದ ಸ್ಥಳದ ಮೇಲೆ ಇಡಿಯ ರಾತ್ರಿ ಕಟ್ಟುವುದರಿಂದ ಬಾವು ಕಡಿಮೆಯಾಗುತ್ತದೆ.
2021/09/19 11:23:03
https://vismayaplus.blogspot.com/2018/01/blog-post_12.html
mC4
ಗುಟ್ಟೇನಲ್ಲದಿದ್ದರೂ ನಾನು ಎಂಟು ವರ್ಷ ಬರೆಯದೆ ಸುಮ್ಮನಿದ್ದೆ! Home » News » ಗುಟ್ಟೇನಲ್ಲದಿದ್ದರೂ ನಾನು ಎಂಟು ವರ್ಷ ಬರೆಯದೆ ಸುಮ್ಮನಿದ್ದೆ! "ಏನಪ್ಪಾ ಗಿಡ್ಡಪ್ಪ?" ಅಂದೆ. "ಹೇಳಪ್ಪಾ ಗಡ್ಡಪ್ಪಾ?" ಅಂದ ಅವನು. ಅವನು ಹಿಮ. ಸರಿಯಾಗಿ ಇನ್ನೊಂದು ವಾರಕ್ಕೆ, ಬರಲಿರುವ ನವೆಂಬರ್ 25ಕ್ಕೆ ಅವನಿಗೆ ಎಂಟು ವರ್ಷ! 'ಹಿಮ' ಅಂತಲೇ ಅವನನ್ನು ನಾನು ಕರೆಯೋದು. ಹಿಮವಂತ್.ಆರ್.ಬೆಳಗೆರೆ. ಚೆಂದಗೆ, ಬೆಳ್ಳಗಿದ್ದಾನೆ. ಅವನು ನನ್ನ ಕೊನೆಯ ಹಾಗೂ ನಾಲ್ಕನೆಯ ಮಗ. ಇಷ್ಟು ವರ್ಷ ಅವನು ತನ್ನ ಅಮ್ಮನನ್ನು ಬಿಟ್ಟಿರುತ್ತಿರಲಿಲ್ಲ. ಪ್ರತಿಯೊಂದಕ್ಕೂ ಅಮ್ಮ. ಆದರೆ ಈಗ ನಾನೆಂದರೆ ಪ್ರಾಣ. ಅವನ ಬೇಡಿಕೆಗಳನ್ನೆಲ್ಲ ಹೇಳಿಕೊಳ್ಳಬೇಕು. "ಅಪ್ಪ, ಚಿಕನ್ ತಿನ್ನೋಣ" ಅನ್ನಲಿಕ್ಕೂ ನಾನೇ ಬೇಕು: ತನ್ನ lap topಗೆ ಹೊಸ game ಹಾಕಿಕೊಡಲಿಕ್ಕೂ ನಾನೇ ಬೇಕು. ಅವನ ಮಾತು, ನಿರ್ಣಯ, ಖುಷಿ-ಎಲ್ಲ ಸ್ಪಷ್ಟ ಸ್ಪಷ್ಟ. ಅವನು ಯಶೋಮತಿಯೊಂದಿಗೆ ಇದ್ದಾನೆ: ಅವನ ತಾಯಿಯೊಂದಿಗೆ. ಅವರಿಬ್ಬರೂ ಅಲ್ಲೆಲ್ಲೋ ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್‌ನಲ್ಲಿದ್ದಾರೆ. ಹಿಮ, ತುಂಬ ಆರೋಗ್ಯವಂತ. ಈ ಎಂಟು ವರ್ಷಗಳಲ್ಲಿ ಅವನು ಖಾಯಿಲೆ ಬಿದ್ದಿಲ್ಲ. ಶಾಲೆಯಲ್ಲೂ ಅವನು ಜಿಂಕೆಮರಿ. ಮೊದಲು ಇಲ್ಲೇ ಹತ್ತಿರದಲ್ಲಿತ್ತು ಅಪಾರ್ಟ್‌ಮೆಂಟು. 'ನಮ್ಮದೇ ಶಾಲೆ 'ಪ್ರಾರ್ಥನಾ' ಇದೆಯಲ್ಲ? ಇಲ್ಲಿಗೇ ಹಾಕಿ ಬಿಡಿ' ಅಂದರು. I said no. ಮನೆಯ ಎದುರಿಗೇ ಶಾಲೆ. ಅದು ಮೊದಲನೇ disadvantage. ಅದು ನಮ್ಮ ಶಾಲೆ: ಎರಡನೇ disadvantage. "ಅಯ್ಯೋ, ಇವನು ರವಿ ಬೆಳಗೆರೆ ಮಗ!" ಅಂತ ಒಬ್ಬ ಟೀಚರ್ ಗುನುಗಿಬಿಟ್ಟರೆ ಸಾಕು: ಅವನು ಅದೆಂಥ ಪುಂಡಾಟಿಕೆ ಮಾಡಿದರೂ ಒಂದು ಪೆಟ್ಟು ಬೀಳುವುದಿಲ್ಲ. ಅವನನ್ನು ಗದರುವುದೂ ಇಲ್ಲ. ಅಲ್ಲದೆ 'ಪ್ರಾರ್ಥನಾ'ದಲ್ಲಿ ಒಂದು ಸ್ಪಷ್ಟವಾದ ಲಿಖಿತ ಆದೇಶವಿದೆ. ಯಾರೂ ಮಕ್ಕಳನ್ನು ಹೊಡೆಯುವಂತಿಲ್ಲ. ಅಲ್ಲಿಗೆ ಮುಗಿಯಿತಲ್ಲ? ಹಾಗಾಗಿ, ಹಿಮವಂತನನ್ನ ಕೊಂಚ ದೂರವಿರುವ ಶಾಲೆಗೆ ಸೇರಿಸಿದ್ದೇನೆ. ಒಂದು ತಮಾಷೆ ನೋಡಿ: ಜಯನಗರದ 'Cloud 9' ಆಸ್ಪತ್ರೆಯಲ್ಲಿ ಹಿಮ ಹುಟ್ಟಿದ. ಅವನು ಮಾತ್ರವೇ ಅಲ್ಲ. ಅದೇ ಹಿಂಚು ಮುಂಚಿನಲ್ಲಿ ರಾಧಿಕಾ ಮಗಳು ಶಮಿಕಾ ಹುಟ್ಟಿದಳು. ರಕ್ಷಿತಾಗೂ ಅಲ್ಲೇ ಹೆರಿಗೆ ಆಯಿತು. ಕಡೆಗೆ ದರ್ಶನ್ ಕೂಡ ಅಲ್ಲಿಂದಲೇ ಸಂತಾನ ಸೌಭಾಗ್ಯ ಹೊಂದಿದ. ಅಲ್ಲಿ ಪ್ರಸೂತಿ ತಜ್ಞರು ಡಾ.ಕಿಣಿ. ಅವರು ನನ್ನ ಆತ್ಮೀಯ ಸ್ನೇಹಿತರು. ಬಸಿರು ಹೊತ್ತು ಬಂದ ಹೆಣ್ಣು ಮಕ್ಕಳಿಗೆ ತಂದೆಯಂಥವರು. ಹಿಮ ಹುಟ್ಟಿದಾಗ ನಾನು ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲೇ ಇದ್ದೆ. ಅದು ಪಶ್ಚಿಮ ರಾಷ್ಟ್ರಗಳ ನಿಯಮ. ಇಲ್ಲಿ ಕೆಲವು ಆಸ್ಪತ್ರೆಗಳಲ್ಲಿ ಅದನ್ನು ಜಾರಿಗೆ ತಂದಿದ್ದಾರೆ. ಹೆರಿಗೆ ಆಗುವಾಗ ತಂದೆಯಾದವನು ಹೆರಿಗೆ ಕೋಣೆಯಲ್ಲೇ ಇರಬೇಕು: ಇದ್ದೆ. ಡಾ.ಕಿಣಿ ಅವರು ನನ್ನ ಕೈಯಲ್ಲೇ ಹೊಕ್ಕುಳ ಬಳ್ಳಿ ಕಟ್ ಮಾಡಿಸಿದರು. ಅಸಲಿಗೆ, ಹಿಮವಂತನನ್ನು ಮೊದಲು ಎತ್ತಿಕೊಂಡವನೇ ನಾನು. ಯಶೋಮತಿಗೆ ಗಂಡು ಮಗು ಹುಟ್ಟಿದೆ ಅಂತ ಹೇಳಿದವನೂ ನಾನೇ. ಹೆರಿಗೆ ಕೋಣೆಯಿಂದ ಹೊರಬಿದ್ದು ವಾರ್ಡ್‌ಗೆ ಬರುತ್ತಿದ್ದಂತೆಯೇ ನಮ್ಮ ಸಿ.ಇ.ಓ ಉಮೇಶ್‌ನ ಕರೆದು, ಇವತ್ತೇ ಮಗುವಿನ ಹೆಸರಿನಲ್ಲಿ ಇಂತಿಷ್ಟು ಹಣ fixed deposit ಮಾಡಿಟ್ಟು ಬಿಡಿ ಅಂದೆ. ಅದು ಜವಾಬ್ದಾರಿಯುತ ಗಂಡಸು ಮಾಡಬಹುದಾದ, ಮಾಡಲೇಬೇಕಾದ ಕೆಲಸ. ಅವನಿಗೆ ಸಂಬಂಧಿಸಿದಂತೆ ನಾನು ಯಾರೊಂದಿಗೂ, ಏನನ್ನೂ ಮುಚ್ಚಿಡುತ್ತಿರಲಿಲ್ಲ. ಈಗಲೂ ಇಲ್ಲ. ಬದುಕಬೇಕಾದದ್ದು ಏನಿದೆಯೋ ಅದನ್ನು ಹೇಗೆ ಬದುಕಬೇಕೋ ಹಾಗೆ ಬದುಕಬೇಕು: ನಿಚ್ಚಳ ಜಗತ್ತಿನಲ್ಲಿ. ಯಶೋಮತಿಯನ್ನು ಬೇಕಾದರೆ ಮುಚ್ಚಿಡಬಹುದು. ಕಂದನನ್ನು ಎಲ್ಲಿ ಬಚ್ಚಿಡಲಿ? ಹೆಸರಿಗೆ ಸಂಬಂಧಿಸಿದಂತೆ ನಾನು ಮೊದಲೇ ತೀರ್ಮಾನ ಮಾಡಿದ್ದೆ. ಗಂಡು ಮಗು ಹುಟ್ಟಿದರೆ, ಹಿಮವಂತ. ಹೆಣ್ಣು ಹುಟ್ಟಿದರೆ ಗಜಲ್ ಹಿಮಾನಿ. ನನ್ನ ಕಾದಂಬರಿಯ ನಾಯಕ ಹಿಮವಂತ. I am obsessed with him. 'ಹೇಳಿ ಹೋಗು ಕಾರಣ' ಕಾದಂಬರಿ ಬರೆಯುವಾಗ ತುಂಬ emotional ಆಗುತ್ತಿದ್ದೆ. "ಸರ್, ಹಿಮವಂತ್‌ಗೆ ಅನ್ಯಾಯ ಮಾಡಬೇಡಿ ಸರ್" ಅಂತ ರಸ್ತೆಯಲ್ಲಿ ನಿಲ್ಲಿಸಿ ಹೇಳುತ್ತಿದ್ದ ಹುಡುಗರಿದ್ದರು. ಅವರಿಗೆ ಗೊತ್ತಿಲ್ಲ: ಹಿಮವಂತನ ಪಾತ್ರ ಬೇರೆ ಯಾರದೂ ಅಲ್ಲ. ಅದು ನಾನೇ! ಕಾದಂಬರಿಕಾರ ಹಾಗೆ ತಾನೇ ಒಂದು ಪಾತ್ರವಾಗಿ ಒಡ ಮೂಡಿದಾಗ ಆ ಕಾದಂಬರಿ ಸೋಲುವುದಿಲ್ಲ. ಬಿಡಿ, ನಾನು ಸೋಲುವುದು ಮರೆತು ಇಪ್ಪತ್ತು ವರ್ಷಗಳಾಗಿವೆ! ನೀವು ಓದುವ bottom itemನ inspirational ಬರಹಗಳಾದರೂ ಏನಂತೀರಿ? ಅವು ಕೂಡ ನನ್ನ ಜೀವನಾನುಭವಗಳೇ. Such writings never fail. ಯಶೋಮತಿ ನನಗಿಂತ ಸಾಕಷ್ಟು ಕಿರಿಯಳು. ಅವರ ತಂದೆ ಇಲ್ಲಿಗೆ ಹತ್ತಿರದಲ್ಲೇ ಒಂದು ಚಿಕ್ಕ ಅಂಗಡಿ ಇಟ್ಟುಕೊಂಡಿದ್ದರು. ಅತ್ಯಂತ ಸಭ್ಯ ಯಜಮಾನರು. ಅವರು ತೀರಿಕೊಂಡದ್ದು ಈ ಇತ್ತೀಚೆಗೆ. ಸುಮಾರು 1997ರ ಆಗಸ್ಟ್ 15ರಂದು ಯಶೋಮತಿ ನನ್ನನ್ನು ಇಲ್ಲೇ ಆಫೀಸಿನಲ್ಲಿ ಭೇಟಿಯಾದಳು. ಅವಳಿಗೆ ಪತ್ರಿಕೋದ್ಯಮವೂ ಗೊತ್ತಿರಲಿಲ್ಲ. ಕಂಪ್ಯೂಟರ್ ಅಸಲೇ ಗೊತ್ತಿರಲಿಲ್ಲ. ಆದರೆ ಜಾಣೆ ಇದ್ದಳು. ಆರಂಭದಲ್ಲಿ ಅವಳಿಗೆ ಒಂದು ಸಾವಿರ ರುಪಾಯಿ ಸಂಬಳ fix ಮಾಡಿದ್ದೆ. ಆಗ ಅವಳು ಕಂಪ್ಯೂಟರ್ ಆಪರೇಟರ್. ಹೆಚ್ಚು ಮಾತಿನವಳಲ್ಲ. ನಾವೆಲ್ಲ ಒಟ್ಟಿಗೇ ಎಚ್ಚರವಿದ್ದು 'ಪತ್ರಿಕೆ'ಯ ಕೆಲಸವನ್ನು ರಾತ್ರಿಯಿಡೀ ಮಾಡಿ ಮುಗಿಸುತ್ತಿದ್ದೆವು. ನಾನು ಆಗಷ್ಟೆ ನನ್ನ ಮೊದಲನೆಯ ಕಾರು ಖರೀದಿಸಿದೆ: ಮಾರುತಿ 800. ರಾತ್ರಿಯಾದರೆ, ಕೊಂಚ ತಡವಾದರೆ ನಾನು ಆಫೀಸಿನ ಹುಡುಗಿಯರನ್ನು ಅವರ ಮನೆಗಳಿಗೆ drop ಮಾಡುತ್ತಿದ್ದೆ. ಕಟ್ಟ ಕಡೆಯ ಡ್ರಾಪ್ ಯಶೋಮತಿಯದು. ಕೆಲಬಾರಿ drop ಮಾಡುವ ಬದಲು ಇಬ್ಬರೂ ಒಂದು drive ಹೋಗುತ್ತಿದ್ದೆವು. ಆಕೆಯೆಡೆಗೆ ನನ್ನಲ್ಲೊಂದು pull ಹುಟ್ಟಿ ನಿಂತಿತ್ತು. ಆದರೆ ನೂರಕ್ಕೆ ನೂರು ಪಾಲು ನನ್ನನ್ನು ಆವರಿಸಿಕೊಂಡಿರುತ್ತಿದ್ದುದು ಲಲಿತೆ. ಈಗಲೂ ಅದು ಬದಲಾಗಿಲ್ಲ. ಯಶೋಮತಿ ಆ ದಿನಗಳಲ್ಲೇ ನನಗೆ ಸನ್ನಿಹಿತಳಾದಳು. ಆಗಲೇ ಅವರ ಮನೆಯಲ್ಲಿ ಸಣ್ಣಗೆ ಗೊಣಗು ಶುರುವಾಗಿತ್ತು. ಎಲ್ಲದರ ಮಧ್ಯೆ ನನಗೆ ಇಷ್ಟವಾದದ್ದೆಂದರೆ, ಅವಳು ದುಡ್ಡಿನ ಆಸೆಯವಳಲ್ಲ. ತನ್ನದು ಪುಟ್ಟ ಜಗತ್ತು. ಅವಳು ಕ್ಯಾರೆಕ್ಟರ್‌ಲೆಸ್ ಹುಡುಗಿಯಲ್ಲ. ಅವಳೇಕೆ, ಅವರ ಮನೆಯಲ್ಲಿ ಯಾರೂ ಕ್ಯಾರೆಕ್ಟರ್ ವಿಚಾರದಲ್ಲಿ ಹೆಸರಿಡಬಹುದಾದಂಥವರಲ್ಲ. ಅವರು ವೃತ್ತಿಯಿಂದ ಶಿಲ್ಪಿಗಳು. ಅವಳ ತಮ್ಮ ಈಗಲೂ ಶಿಲ್ಪಿಯೇ. ಅವಳಿಗೆ ಒಬ್ಬ ತಮ್ಮ, ಒಬ್ಬ ತಂಗಿ. ಅವಳ ತಾಯಿ ನೂರು ಕಷ್ಟ ಅನುಭವಿಸಿ, ಬದುಕಿನಲ್ಲಿ ಸ್ಥಿರಗೊಂಡವರು. They are nice people. ಕಡೆಗೊಂದು ದಿನ ಅವಳ ಮನೆಯವರಿಗೆ ವಿಷಯ ಹೇಳಬೇಕಾಯಿತು. At the same time, ನಾನು ಲಲಿತೆ-ಮಕ್ಕಳಿಗೂ ವಿಷಯ ತಿಳಿಸಬೇಕಾಯಿತು. ತಿಳಿಸಿದೆ. ಅವತ್ತು ಲಲಿತಳೊಂದಿಗೆ ಇದ್ದ ವಿಷಯ ಹೇಳಿ, ಒಂದು ವಿಷಾದ ಭಾವ ಹೊತ್ತು ಕೋಣೆಯಿಂದ ಹೊರಬಿದ್ದೆ. ಲಲಿತೆ ಜೊತೆಯಲ್ಲೇ ಬಂದಳು. ಲಿಫ್ಟ್‌ನಲ್ಲಿ ಇಳಿಯುವಾಗ ಅವಳು ಎದೆಯ ಮೇಲೆ ಷರ್ಟ್ ಹಿಡಿದು "ರವೀ... ಯಾಕೆ ಹೀಗೆ ಮಾಡಿದೆ?" ಅಂದಳು. "ತಪ್ಪಾಯಿತು ಲಲಿತಾ" ಅಂದೆ. ಅವಳ ಮುಂದೆ ತುಂಬ ಚಿಕ್ಕವನಾಗಿ ಹೋಗಿದ್ದೆ. ನನ್ನ ಕಣ್ಣಲ್ಲಿ ನೀರಿದ್ದವು. "ತಪ್ಪಾಯ್ತು' ಅಂದೆ. ಅಷ್ಟೆ! ಈ ಹದಿನೆಂಟು ವರ್ಷದಲ್ಲಿ ಲಲಿತೆ ಒಂದೇ ಒಂದು ಸಲ ಆ ವಿಷಯ ಪ್ರಸ್ತಾಪಿಸಿಲ್ಲ, ಸಿಟ್ಟಿಗೆದ್ದಿಲ್ಲ, ಗೋಳಾಡಲಿಲ್ಲ: No! She is very matured. ಅವತ್ತಿಗೂ-ಇವತ್ತಿಗೂ ನನಗೆ ಆಫೀಸೇ ಗತಿ. ಆ ದಿನಗಳಲ್ಲಿ ಯಶೋಮತಿ ಕೂಡ ಆಫೀಸಿನಲ್ಲೇ ಇರತೊಡಗಿದಳು. ನಂತರ ಇಲ್ಲೇ ಎದುರಿನಲ್ಲೇ ಇರುವ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಅವಳಿಗೊಂದು ಮನೆ ಕೊಡಿಸಿದೆ. ಮನೆ ಅಂತಾದ ಮೇಲೆ ಅವಳಿಗೆ ಶುರುವಾಯಿತು: ಮಗುವಿನ ಬಯಕೆ. ಸ್ವತಃ ಅವಳ ತಾಯಿ ಬಂದು ನಮ್ಮೊಂದಿಗೆ ನೆಲೆ ನಿಂತರು. ಈ ಮಹರಾಯ ಹಿಮವಂತ ಹುಟ್ಟಿದ್ದೇ ಆಗ. ವಿಧ್ಯುಕ್ತವಾಗಿ ಅವಳನ್ನು ನಾನು ಮದುವೆಯಾಗದಿದ್ದರೂ ಅವಳನ್ನು ಚೆನ್ನಾಗಿಯೇ ನೋಡಿಕೊಂಡೆ. 'ಪತ್ರಿಕೆ'ಯಲ್ಲಿ ಹಿಮವಂತನ ಬಗ್ಗೆ ಬರೆಯಲು ಕೊಂಚ time ತೆಗೆದುಕೊಳ್ಳೋಣ ಅಂತ ನಾನೇ ತೀರ್ಮಾನಿಸಿದ್ದೆ. ಒಬ್ಬ ಲಲಿತೆಯನ್ನು ಹೊರತುಪಡಿಸಿ ಮಕ್ಕಳಿಗೆಲ್ಲ ಯಶೋಮತಿ ಪರಿಚಿತೆ. ಚೇತನಾ, ಭಾವನಾ, ಕರ್ಣ-ಎಲ್ಲರೂ ಮನೆಗೆ ಬಂದಿದ್ದಾರೆ. ಈ ತುಂಟ ಇವತ್ತಿಗೂ 'ಬಾನಕ್ಕ, ಚೇತು ಅಕ್ಕ, ಕರ್ಣಣ್ಣ' ಅಂತಲೇ ಅನ್ನುತ್ತಾನೆ. ಅವರೆಲ್ಲರೂ ಅವನನ್ನು ಎತ್ತಿಕೊಂಡು ಆಡಿಸಿದವರೇ. "He is my kid brother" ಅಂದದ್ದು ಕರ್ಣ. ನಾವು ಬಯಲು ಸೀಮೆಯವರು. ಬಹುಪತ್ನಿತ್ವ ನಮ್ಮಲ್ಲಿ ಹೊಸತಲ್ಲ. ನನ್ನ ತಂದೆಯೇ ಇದ್ದನಲ್ಲ? ಆತನಿಗೆ ನನ್ನ ಅಮ್ಮ ನಾಲ್ಕನೆಯ ಪತ್ನಿ. ಅದಕ್ಕಿಂತ ಅಚ್ಚರಿಯೆಂದರೆ ಬಳ್ಳಾರಿಗೆ ಸಮೀಪದಲ್ಲೇ ಇರುವ ದರೂರಿನಲ್ಲಿ ಮಲ್ಲಿಗೌಡ ಎಂಬಾತನಿದ್ದ. ಮಹಾನ್ ಚೆಲುವ. ಆತನಿಗೆ ಒಬ್ಬಾಕೆಯೊಂದಿಗೆ ಸ್ನೇಹವಿತ್ತು. ಮಲ್ಲಿಗೌಡ ತನ್ನ ದರೂರಿನಿಂದ ಬಳ್ಳಾರಿಗೆ ಬಂದವನು, ಅಲ್ಲಿ ಹಾಡಹಗಲೇ ಕೊಲೆಯಾಗಿ ಬಿಟ್ಟ. ಅದಾಗಿ ಈಗ ಹತ್ತತ್ತಿರ ನಲವತ್ತು ವರ್ಷಗಳೇ ಆದವು. ಇತ್ತೀಚೆಗೆ ದರೂರು ಮಲ್ಲಿಗೌಡರ ಮಗ ಪುರುಷೋತ್ತಮ ಗೌಡ ಸಿಕ್ಕಿದ್ದ. ಯಾವುದೋ ದೇವಸ್ಥಾನದ ಸಮಾರಂಭದ ಇನ್ವಿಟೇಶನ್ ಕೊಟ್ಟ. ಅದರಲ್ಲಿ "ಶ್ರೀಮತಿ ವಿಮಲಾ" ಅಂತ ಪ್ರಿಂಟ್ ಆಗಿತ್ತು. ಅದು ದರೂರು ಮಲ್ಲಿಗೌಡ ಆ ದಿನಗಳಲ್ಲಿ ಸ್ನೇಹದಿಂದ ಇದ್ದ ಹೆಣ್ಣು ಮಗಳ ಹೆಸರು. "ಇದೇನಪ್ಪಾ, ಪುರುಷೋತ್ತಮಾ?" ಅಂದೆ. "ಹೌದಲ್ಲ ಸರ್, ಅವರು ನಮಗೆ ಮಾತೋಶ್ರೀಯವರು!" ಅಂದ. ಬಯಲು ಸೀಮೆಯ ಕರುಳಿನ ನಂಟೇ ಬೇರೆ. ನಾವು emotional fellows. ಕೊಂಚ ಮಟ್ಟಿಗೆ sentimental fellows ಕೂಡ. ಅಲ್ಲಿ ಕೊಲೆಯಾಗಲಿಕ್ಕೂ ಒಂದು ಕ್ಷುಲ್ಲಕ ಕಾರಣ ಸಾಕು: ಎರಡು ಕುಟುಂಬಗಳ ಬೀಗತನ ಬೆಳೆಯಲಿಕ್ಕೂ ಒಂದು ಕ್ಷುಲ್ಲಕ ಕಾರಣವೇ ಸಾಕಾಗಿರುತ್ತದೆ. Funny! "ನೋಡೂ, ಈ ಸಂಬಂಧದ ವಿಷಯ ರಹಸ್ಯವಾಗಿಲ್ಲ. ಹಾಗೆ ಇರುವುದೂ ಇಲ್ಲ. ಕ್ರಮೇಣ ಗೊತ್ತಾಗುತ್ತ ಹೋಗುತ್ತದೆ" ಅಂತ ಯಶೋಮತಿಗೆ ಹೇಳಿದ್ದೆ. ಆಕೆಗೆಂದೇ ಗಾಂಧಿ ಬಜಾರ್‌ನ ಪುಸ್ತಕದ ಮಳಿಗೆ ಮಾಡಿದೆ. ಇಲ್ಲಿ ಕೆಲಸ ಬಿಡುವಾಗ ಆಕೆಗೆ ಬರೋಬ್ಬರಿ ನಲವತ್ತು ಸಾವಿರ ರುಪಾಯಿ ಸಂಬಳವಿತ್ತು. ಕಳೆದ ವರ್ಷದ ತನಕ ಎಲ್ಲವೂ ಸರಿಯಿತ್ತು. ಒಂದೆರಡಲ್ಲ, ಹದಿನೆಂಟು ವರ್ಷ ಅದು ಸರಿಯಾಗೇ ಇತ್ತು. ಆದರೆ ಕ್ರಮೇಣ ಇಬ್ಬರ ನಡುವೆ ವಿಘಟನೆ ಆರಂಭವಾಯಿತು. ಎಂಥದ್ದೋ ಸೆಡವು, ಮನಸ್ತಾಪ. ಒಟ್ಟಿನಲ್ಲಿ ಉಲ್ಲಾಸ ಉಳಿಯದಂತಾಯಿತು. 'ನಾನು ಪ್ರತ್ಯೇಕವಾಗಿರುತ್ತೇನೆ' ಅಂದಳು ಆಕೆ. ಇಲ್ಲಿದ್ದ ಸ್ವಂತ Flat ಬಿಟ್ಟು ಹೋದಳು. ಹತ್ತಿರದಲ್ಲೇ ಆಕೆಯ ತಂಗಿಯ ಕುಟುಂಬವಿದೆ. "ಆಯ್ತು, ಅಲ್ಲೇ ಇರಿ" ಅಂದೆ. ಅಷ್ಟೇ ಅಲ್ಲ, ಒಟ್ಟಿಗಿದ್ದಾಗ ಏನೇನಿತ್ತೋ, ಅದೆಲ್ಲವನ್ನೂ ನಾನು ಇವತ್ತಿಗೂ ನಡೆಸಿಕೊಡುತ್ತಿದ್ದೇನೆ. ಹಿಮ ಆಫೀಸಿಗೆ ಬರುತ್ತಾನೆ. ಕಾರು ಕೊಟ್ಟು ಕರೆಸುತ್ತೇನೆ. ಬಿಡುವಿದ್ದಲ್ಲಿ shoppingಗೆ ಕರೆದೊಯ್ಯುತ್ತೇನೆ. ಅವನು ಏನೇನು ಕೇಳುತ್ತಾನೋ ಎಲ್ಲವೂ ಮನಮಾನಿ! ಇತ್ತೀಚೆಗಿನ ಹಟವೆಂದರೆ, "ನಾನು ಇಲ್ಲೇ ಆಫೀಸಿನಲ್ಲಿರ‍್ತೇನೆ. ಇಲ್ಲೇ ಮಲ್ಕೊಂಡು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶಾಲೆಗೆ ಹೋಗ್ತೇನೆ" ಅನ್ನುತ್ತಾನೆ. ಅವನ ಬರ್ತ್‌ಡೇ functionನ ಬೇರೆ ಬೇರೆ ನಗರಗಳಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದೆವು. ಊಟಿ, ದೆಹಲಿ, ಮುಂಬಯಿ-ಹೀಗೆ. ಈಗದು ಸಾಧ್ಯವಿಲ್ಲ. ಮೊದಲಾದರೆ ಅವನಿಗೆ ನಾನು ಸ್ನಾನ ಮಾಡಿಸುತ್ತಿದ್ದೆ. ಕೈ ಕಾಲಿಗೆ ಎಣ್ಣೆ ಹಚ್ಚಿ ನೀವಿ ಸ್ನಾನಕ್ಕೆ ಕಳಿಸುತ್ತಿದ್ದೆ. ಪಕ್ಕದಲ್ಲಿ ಮಲಗುತ್ತಿದ್ದ. ಆಗೆಲ್ಲ ಅವನ ಮೈಯಿಂದ ಮಗುವಿನ ವಾಸನೆ. ಅಲ್ಲೆಲ್ಲೊ ಇಟಲಿಗೆ, ಜರ್ಮನಿಗೆ ಹೋದರೆ, ಅಲ್ಲಿಂದ ಅವನಿಗೆಂದೇ ರಾಶಿ ಸಾಮಾನು, ಆಟಿಗೆ ತರುತ್ತಿದ್ದೆ. ಈಗಲೂ ಅಂಥದ್ದನ್ನೆಲ್ಲ ಮಾಡುತ್ತೇನೆ. ಒಳ್ಳೆಯದೊಂದು ಮೊಸರನ್ನ ಉಂಡರೆ ನನಗೆ ಹಿಮ ನೆನಪಾಗುತ್ತಾನೆ. ಕರುಳು ಸೆಳೆಯೋದು ಅಂದರೆ ಇದೇ ಅಲ್ಲವೆ? ಇದಂತೂ ಕಡ್ಡಾಯವಾಗಿ ಒಂದು ಮಗು ತನ್ನ ಅಪ್ಪನೊಂದಿಗೇ ಬೆಳೆಯಬೇಕಾದ ವಯಸ್ಸು. ಆದರೆ ಅವನು ಅಲ್ಲೆಲ್ಲೋ ರಾಜರಾಜೇಶ್ವರಿನಗರ. ನಾನು ಕಬೋಜಿಯಂತೆ ಇಲ್ಲಿ ಪದ್ಮನಾಭನಗರದಲ್ಲಿ. I am broke. ನನ್ನ ಯಾತನೆ ಏನು? ಅದು ನನಗಷ್ಟೆ ಗೊತ್ತು. ಅವನ ಪಾಲಿಗೆ ನಾನು ಇದ್ದೇ ಇದ್ದೇನೆ. ಆದರೆ ನನ್ನ ಪಾಲಿಗೆ ಮಗ ಕಳೆದುಹೋಗಿದ್ದಾನೆ. ಇದೇ ಚೇತನಾ, ಮಗುವಿದ್ದಾಗ ನನ್ನೊಂದಿಗೇ ಇರುತ್ತಿದ್ದಳು, ಹುಬ್ಬಳ್ಳಿಯಲ್ಲಿ. ಕರ್ಣ ಕೈಗೂಸಿದ್ದಾಗ ನನ್ನ ಎದೆ ಅವಚಿಕೊಂಡೇ ಇರುತ್ತಿದ್ದ. ಭಾವನಾಳ ವಿಷಯ ಕೇಳಲೇ ಬೇಡಿ. ಅದು ಒಂದು ಕ್ಷಣಕ್ಕೂ ಬಿಟ್ಟಿರದ ಅಂಟಂಪುರ್ಲೆ. ಆದರೆ ಹಿಮ? ಬಿಡಿ, ನಾನಾಗಲೇ ಹಿಮನ ಬರ್ತ್‌ಡೇ ಸಂಭ್ರಮದಲ್ಲಿದ್ದೇನೆ. "ನಂಗೆ ಬರ್ತ್‌ಡೇಗೆ ಐ-ಪ್ಯಾಡ್ ಕೊಡುಸ್ತೀರಾ?" ಅಂತ ಇತ್ತೀಚೆಗೆ ಕೇಳಿದ. ಬರೀ gadgetsನೊಂದಿಗೆ ಆಟವಾಗಿ ಬಿಡುತ್ತದೆ. ಅವನಿಗೊಂದು ಚೆಂದದ, handy ಆಗಿರುವ ಕೆಮರಾ ಕೊಡಿಸಲು ನಿರ್ಧರಿಸಿದ್ದೇನೆ. ಈಗ ಫೊಟೋ ತೆಗೆಯೋದು ಕಲಿ. ಆಗ ನಿನ್ನ ಬರ್ತ್‌ಡೇ ಇಂಡಿಯಾದಲ್ಲಲ್ಲ: ಕೀನ್ಯಾದಲ್ಲಿ ಮಾಡೋಣ ಅಂತ ಹೇಳಬೇಕಿದೆ. I love the boy. ನಿಮ್ಮದೊಂದು ಆಶೀಸ್ಸು ಅವನಿಗಿರಲಿ.
2018/12/13 03:30:42
http://www.ravibelagere.com/news/2015/11/24/khasbath-1049.html
mC4
ಪ್ರವಾಹ ಪರಿಹಾರಕ್ಕೆ ಶಾಸಕರ ನಿಧಿಯಿಂದ 50 ಲಕ್ಷ: ಡಿಕೆ ಶಿವಕುಮಾರ್ | Digital Kannada Home ರಾಜಕೀಯ ಪ್ರವಾಹ ಪರಿಹಾರಕ್ಕೆ ಶಾಸಕರ ನಿಧಿಯಿಂದ 50 ಲಕ್ಷ: ಡಿಕೆ ಶಿವಕುಮಾರ್ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಶಾಸಕ ನಿಧಿಯಿಂದ 50 ಲಕ್ಷವನ್ನು ನೀಡಲು ನಾನು ನಿರ್ಧರಿಸಿದ್ದೇನೆ. ಇನ್ನು ವೈಯಕ್ತಿಕವಾಗಿ ಕೂಡ ನಾನು ದೇಣಿಗೆ ನೀಡುತ್ತೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಸೋಮವಾರ ಹುಬ್ಬಳ್ಳಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದ ನಂತರ ಮೋದಗೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, 'ಕೇವಲ ನಾನು ಮಾತ್ರವಲ್ಲ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನ 100 ಶಾಸಕರು ಕೂಡ ಶಾಸಕರ ನಿಧಿಯಿಂದ ಹಣ ನೀಡುವಂತೆ ಮಾತುಕತೆ ನಡೆಸುತ್ತೇನೆ. ನಾನು ಬೆಂಗಳೂರಿಗೆ ಹೋದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಬಳಿ ಚರ್ಚೆ ಮಾಡುತ್ತೇನೆ. ನನ್ನ ಆಡಿಟರ್ ಬಳಿ ಚರ್ಚೆ ಮಾಡಿ ವೈಯಕ್ತಿಕವಾಗಿ ಎಷ್ಟು ಹಣ ನೀಡಬೇಕು ಎಂಬುದರ ಕುರಿತು ಚರ್ಚೆ ಮಾಡಿ ಹೇಳುತ್ತೇನೆ' ಎಂದು ತಿಳಿಸಿದ್ದಾರೆ. ಈ ವೇಳೆ ಅವರು ಹೇಳಿದ್ದಿಷ್ಟು… 'ರಾಜ್ಯದ ಇತಿಹಾಸದಲ್ಲಿ ಇಂದೆಂದೂ ಕಾಣದ ಪ್ರವಾಹ ಎದುರಾಗಿದೆ. ನಾವು ರಾಜಕೀಯ ಪಕ್ಷಗಳು ಒಟ್ಟಾಗಿ ಜನರ ಪರವಾಗಿ ನಿಲ್ಲುವ ಕರ್ತವ್ಯ ನಮ್ಮ ಮೇಲಿದೆ. ಮುಖ್ಯಮಂತ್ರಿಗಳು ಈಗಾಗಲೇ 40 ಸಾವಿರ ಕೋಟಿಗೂ ಹೆಚ್ಚು ನಷ್ಟ ಆಗಿದೆ ಅಂತಾ ಹೇಳಿದ್ದಾರೆ. ಕೂಡಲೇ ಎಲ್ಲ ಪಕ್ಷದವರು ಒಂದಾಗಿ ಸರ್ಕಾರದ ಪರವಾಗಿ ನಿಲ್ಲಬೇಕಿದೆ. ಈ ಹಿನ್ನೆಲೆಯಲ್ಲಿ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಜನರನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ನಾವು ಬಂದು ಆ ಕಾರ್ಯಕ್ಕೆ ಅಡಚಣೆ ಆಗೋದು ಬೇಡ ಎಂಬ ಉದ್ದೇಶದಿಂದ ನಾವು ಇಷ್ಟು ದಿನ ಪ್ರವಾಹದ ಜಾಗಕ್ಕೆ ಭೇಟಿ ಕೊಟ್ಟಿರಲಿಲ್ಲ. ಎಲ್ಲೆಲ್ಲಿ ಮನೆ ಬಿದ್ದಿದೆ, ಕೃಷಿ ಜಮೀನು ಕೊಚ್ಚಿ ಹೋಗಿರುವುದನ್ನು ನೋಡಿದ್ದೇವೆ. ನೂರಾರು ಜನ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ನಮ್ಮ ಜನರಿಗೆ ಆಗಿರುವ ನಷ್ಟ ತುಂಬಿಕೊಡಬೇಕು. ಕೂಡಲೇ ಮನೆ ಹಾಗೂ ಬೆಳೆ ಹಾನಿ ಕಟ್ಟಿಕೊಡುವ ವಿಶೇಷ ಪ್ಯಾಕೇಜ್ ಅನ್ನು ಸಿಎಂ ಘೋಷಣೆ ಮಾಡಬೇಕು ಎಂದು ಒತ್ತಾಯ ಮಾಡುತ್ತೇನೆ.
2021/09/27 03:55:18
https://digitalkannada.com/2019/08/12/dks-announce-50-lack-flood-relief-fund/
mC4
ಅರಳಿ ಮರ – ಪುಟ 128 – ಅರಳಿಮರ ಲೇಖಕ: ಅರಳಿ ಮರ ತಾವೋ ತಿಳಿವು #34 ~ ಯಾರೊಂದಿಗೂ ಸ್ಪರ್ಧೆಯಿಲ್ಲ… ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಎಲ್ಲ ಧಾರೆಗಳೂ ಸಮುದ್ರದತ್ತ ಹರಿಯುತ್ತವೆ. ಏಕೆಂದರೆ ಸಮುದ್ರ , ಕೆಳಗೆ ನಿಂತು ಕರೆಯುತ್ತದೆ. ಈ ವಿನಯವೇ ಸಮುದ್ರದ ಶಕ್ತಿ. ಜನರನ್ನು ಆಳಬೇಕೆನ್ನುವವರು ಅವರಿಗಿಂತ ಎರಡು ಹೆಜ್ಜೆ ಕೆಳಗೆ ನಿಲ್ಲಿ. ಜನರನ್ನು ಮುನ್ನಡೆಸಬೇಕೆನ್ನುವವರು ಅವರಿಗಿಂತ ಎರಡು ಹೆಜ್ಜೆ ಹಿಂದೆ ನಡೆಯಿರಿ. ತಾವೋ, ಮೇಲೆ ನಿಂತು ಮಾತಾಡುವಾಗಲೂ ಜನರಿಗೆ ಕೀಳರಿಮೆ ಕಾಡುವುದಿಲ್ಲ; ಮುಂದೆ ನಡೆಯುತ್ತಾ ಮುನ್ನಡೆಸುವಾಗಲೂ ಹಾದಿ ತಪ್ಪುವ ಭಯವಿರುವುದಿಲ್ಲ. ತಾವೋಗೆ ಯಾರೊಂದಿಗೂ ಸ್ಪರ್ಧೆಯಿಲ್ಲ ಅಂತಯೇ ತಾವೋ […] Rumor ಎಂಬ ಸುದ್ದಿ ದೇವತೆ: ಗ್ರೀಕ್ ಪುರಾಣ ಕಥೆಗಳು ~ 13 ಗಾಳಿಸುದ್ದಿಯನ್ನು 'ರೂಮರ್' ಅಂತಲೇ ಕರೆದು ಯಾಕೆ ಗೊತ್ತೆ? ಅದರ ಹಿಂದೊಂದು ಗ್ರೀಕ್ ಪುರಾಣ ಕಥೆಯಿದೆ! ರೂಮರ್, ಭೂದೇವಿ ಗೈಯಾ ಮತ್ತು ಸ್ವರ್ಗದ ದೇವತೆ ಒರನೋಸರ ಕಿರಿಯ ಮಗಳು. ಇವಳಿಗೆ ಫೆಮೆ, ಫಮಾ ಎಂಬ ಹೆಸರುಗಳೂ ಇದ್ದವು. ರೂಮರ್ ಮಹಾನ್ ಮಾತಿನ ಮಲ್ಲಿ. ಅವಳ ಮಾತಿನ ಚಟ ಎಷ್ಟೆಂದರೆ, ಯಾವಾಗಲೂ ಅಲ್ಲಿಯದನ್ನು ಇಲ್ಲಿಗೆ, ಇಲ್ಲಿಯದನ್ನು ಅಲ್ಲಿಗೆ ಹೇಳುತ್ತ ಇರುತ್ತಿದ್ದಳು. ಅವಳ ಈ ವ್ಯಸನವನ್ನು ಸರಿದಾರಿಯಲ್ಲಿ ನಡೆಸಲು ಅವಳಿಗೆ ಸ್ಯೂಸ್ ಮಹಾದೇವನು ಸುದ್ದಿ ದೇವತೆಯ ಸ್ಥಾನವನ್ನು ನೀಡಿದನು. ರೂಮರ್ ಗೆ […] ತಾವೋ ತಿಳಿವು #33 ~ ಇಲ್ಲಿ ಸಿದ್ಧಿ ಅಸಾಧ್ಯ ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತಾವೋ ಬ್ರಹ್ಮಾಂಡದ ಚುಕ್ಕಾಣಿ, ಒಳಿತಿಗಾಗಿ ಕಾಯುತ್ತಿರುವ ನಿಧಿ, ಕೆಡಕು ಶರಣಾಗುವ ಜಾಗ. ಸಿಹಿ ಮಾತುಗಳಿಂದ ಮನ್ನಣೆ ಸತ್ಕಾರ್ಯಗಳಿಂದ ಸ್ಥಾನ ಮಾನ ಸಾಧ್ಯ. ಆದರೆ, ತಾವೋಗೆ ಮೌಲ್ಯಗಳ ಹಂಗಿಲ್ಲ; ಅಂತೆಯೇ ಇಲ್ಲಿ ಸಿದ್ಧಿ ಅಸಾಧ್ಯ. ಹೊಸ ನಾಯಕ ಕಾಣಿಸಿಕೊಂಡಾಗ ಅವನಿಗೆ ಸಂಪತ್ತು, ಅನುಭವ ಧಾರೆಯೆರೆಯದಿರಿ. ಬದಲಾಗಿ, ತಾವೋ ಕಾಣಿಸಿ. ಸಂತರಿಗೆ ತಾವೋ ಯಾಕೆ ಆಪ್ಯಾಯಮಾನ? ಯಾಕೆಂದರೆ ಅವರು ಹುಡುಕಿದ್ದನ್ನು ಕಂಡುಕೊಳ್ಳುತ್ತಾರೆ, ಎಡವಿದಾಗ ಸಂತೈಸಲ್ಪಡುತ್ತಾರೆ, ಹಾಗೆಂದೇ ತಾವೋ […] ಸುಖ ದುಃಖಗಳು ನಮ್ಮೊಳಗೇ ಇವೆ ಒಮ್ಮೆ ಒಬ್ಬ ಸೂಫಿ ಸಂತ ರಾಜನಿಗೆ , "ನಾವು ಸುಖ ದುಃಖಗಳನ್ನು ಬೇರೆಯವರಲ್ಲಿ ಹುಡುಕುತ್ತೇವೆ. ವಾಸ್ತವದಲ್ಲಿ ಅವೆಲ್ಲವೂ ನಮ್ಮೊಳಗೇ ಇದೆ" ಎಂದು ಬೋಧಿಸುತ್ತಿದ್ದ. ರಾಜ ಅದನ್ನು ಒಪ್ಪಲಿಲ್ಲ. ಸಂತ ಅದನ್ನು ಸಾಬೀತುಪಡಿಸಲು ಮುಂದಾದ. "ನಿನ್ನ ರಾಜ್ಯದ ಆರೋಗ್ಯವಂತ ಯುವ ಗೃಹಸ್ಥನನ್ನು ಕರೆಸಿ, ಆರು ತಿಂಗಳು ಅವನನ್ನು ಒಂಟಿಯಾಗಿಡು, ಅನಂತರ ಮಾತಾಡೋಣ" ಅಂದ. ರಾಜ ಹಾಗೆಯೇ ಮಾಡಿದ. ನಾಲ್ಕು ದಿನ ತಿಂದುಂಡು ಸುಖವಾಗಿದ್ದ ಯುವ ಗೃಹಸ್ಥ, ಐದನೇ ದಿನಕ್ಕೆ ಗೋಳಿಡತೊಡಗಿದ. ಅವನ ಒಳಗಿನದೇ ಚಿಂತೆಗಳು ಅವನನ್ನು ಮುತ್ತಿ ತಿನ್ನತೊಡಗಿದ್ದವು. […] ತಾವೋ ತಿಳಿವು #32 ~ ಅನಾಮಧೇಯತೆಯೇ ನನ್ನ ವಿಳಾಸ ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ನನ್ನ ಮಾತು ತುಂಬಾ ಸರಳ ತಿಳಿಯಲು ಮತ್ತು ಬಳಸಲು ಕೂಡ. ಆದರೂ ಜನ ಹಿಂಜರಿಯುತ್ತಾರೆ. ನನ್ನ ಮಾತು, ಪೂರ್ವಜರಿಂದ ಕೃತಿ, ಸಾಧನೆಯಿಂದ, ಸಿದ್ಧಿಯಿಂದ. ಇವುಗಳ ಅನುಪಸ್ಥಿತಿ ಎಂದರೆ ನನ್ನ ಗೈರು ಹಾಜರಿ ಕೂಡ. ಅನಾಮಧೇಯತೆಯೇ ನನ್ನ ವಿಳಾಸ.
2019/08/18 01:41:02
https://aralimara.com/author/chithchethana/page/128/
mC4