text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ಆಯುರ್ವೇದದ ಪ್ರಕಾರ ನಮ್ಮ ಆರೋಗ್ಯ ಚೆನ್ನಾಗಿರಲು ಅಗ್ನಿ ಅಥವಾ ಬೆಂಕಿ ಎಂಬ ಧಾತು ಕಾರಣವಾಗಿದೆ. ಈ ಧಾತುವಿಗೆ ನಮ್ಮ ದೇಹದ ಜೀವಕೋಶ-ಅಂಗಾಂಶಗಳ ಒಳಗೆ ಯಾವ ವಸ್ತುಗಳಿಗೆ ಪ್ರವೇಶ ಪಡೆಯಬಹುದು ಅಥವಾ ನಿವಾರಿಸಬಹುದು ಎಂದು ನಿರ್ಧರಿಸುವ ಶಕ್ತಿ ಇದೆ. ನಾವು ಸೇವಿಸುವ ಆಹಾರಗಳು ಈ ಅಗ್ನಿಯನ್ನು ಇನ್ನಷ್ಟು ಬಲಪಡಿಸಬಹುದು ಅಥವಾ ಶಿಥಿಲಗೊಳಿಸಿ ಆರೋಗ್ಯವನ್ನು ಬಾಧಿಸಬಹುದು. ಆಯುರ್ವೇದದ ಪ್ರಕಾರ ಅನಾರೋಗ್ಯಕರ ಆಹಾರಗಳ ಸೇವನೆ, ಅತಿಯಾಗಿ ತಣ್ಣಗಿರುವ ಆಹಾರಗಳು, ಸಿದ್ದರೂಪದ ಆಹಾರ ಮೊದಲಾದವೆಲ್ಲಾ ದೇಹದಲ್ಲಿ 'ಆಮ' ಎಂಬ ವಿಷವಸ್ತುವಿನ ಉತ್ಪಾದನೆಗೆ ಕಾರಣವಾಗುತ್ತವೆ. ಈ ವಿಷವಸ್ತುಗಳೇ ಅನಾರೋಗ್ಯಕ್ಕೆ ಮೂಲವಾಗಿದ್ದು ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತವೆ. ಆಯುರ್ವೇದದ ಪ್ರಕಾರ ಉತ್ತಮ ಆರೋಗ್ಯ ಉಳಿಸಿಕೊಳ್ಳಬೇಕಾದರೆ ಮೊದಲಾಗಿ ಆಹಾರಕ್ರಮವನ್ನು ಬದಲಿಸಿಕೊಳ್ಳಬೇಕಾಗುತ್ತದೆ ಹಾಗೂ ದೇಹದಲ್ಲಿ ಅಗ್ನಿಯ ಪ್ರಮಾಣವನ್ನು ಸಮತೋಲನಗೊಳಿಸಬೇಕಾಗುತ್ತದೆ. ಈ ಜೀವರಾಸಾಯನಿಕ ಅಗ್ನಿಯ ಸಮತೋಲನವನ್ನು ಕಾಪಾಡಿಕೊಳ್ಳಲು ಈ ಕ್ರಮಗಳನ್ನು ಅನುಸರಿಸಬೇಕು: 1. ಆರೋಗ್ಯಕರ ಆಹಾರಗಳನ್ನೇ ಸೇವಿಸಿ, ಅತಿಯಾದ ಎಣ್ಣೆ ಇರುವ, ಹುರಿದ, ಅತಿ ಖಾರ ಅಥವಾ ತಣ್ಣನೆಯ ಆಹಾರಗಳನ್ನು ವರ್ಜಿಸಿ. ಹೆಚ್ಚು ಹೆಚ್ಚು ಕ್ಷಾರೀಯ ಆಹಾರಗಳನ್ನು ಸೇವಿಸಿ. ಇವು ದೇಹದಲ್ಲಿ ಅಗ್ನಿಯ ಪ್ರಭಾವವನ್ನು ನಿಯಂತ್ರಿಸಲು ನೆರವಾಗುತ್ತವೆ. 3. ಪ್ರತಿ ಎರಡು ಊಟಗಳ ನಡುವೆ ಕನಿಷ್ಠ ಮೂರು ಗಂಟೆಗಳಾದರೂ ಏನನ್ನೂ ಸೇವಿಸಬಾರದು. ಈ ಮೂಲಕ ಅಜೀರ್ಣತೆಯಾಗುವುದನ್ನು ತಡೆಯಬಹುದು ಹಾಗೂ ಆಮ್ಲೀಯತೆ, ಹುಳಿತೇಗು ಮೊದಲಾದ ಜಠರ ಮತ್ತು ಜೀರ್ಣಸಂಬಂಧಿ ತೊಂದರೆಗಳೂ ಎದುರಾಗುವುದಿಲ್ಲ. ಒಂದು ವೇಳೆ ಜೀರ್ಣಶಕ್ತಿಗೆ ಸಂಬಂಧಿಸಿದ ಯಾವುದೇ ತೊಂದರೆ ಎದುರಾದರೆ ಆಯುರ್ವೇದ ಈ ಬಗೆಯ ಚಿಕಿತ್ಸೆಗಳನ್ನು ಸೂಚಿಸುತ್ತದೆ: ಒಂದು ವೇಳೆ ಅಜೀರ್ಣತೆಯ ತೊಂದರೆ ಇದ್ದರೆ ನೀವು ಹೆಚ್ಚು ಹೆಚ್ಚಾಗಿ ಹಬೆಯಲ್ಲಿ ಬೇಯಿಸಿದ ಅಥವಾ ಬೆಂಕಿಯಲ್ಲಿ ಸುಟ್ಟ ತರಕಾರಿಗಳನ್ನು ಸೇವಿಸಬೇಕು. ಜೀರ್ಣಶಕ್ತಿಯನ್ನು ಚುರುಕುಗೊಳಿಸುವ ಮಸಾಲೆಗಳಾದ ಶುಂಠಿ, ಕಾಳುಮೆಣಸು, ದಾಲ್ಚಿನ್ನಿ ಮೊದಲಾದವುಗಳನ್ನೂ ಸೇವಿಸಬೇಕು. ಇನ್ನೊಂದು ಉಪಶಮನ ನೀಡುವ ವಿಧಾನವೆಂದರೆ ಕಾಲು ಲೋಟ ಗೋಧಿಯಹುಲ್ಲಿನ ರಸದಲ್ಲಿ (wheatgrass juice) ಹತ್ತರಿಂದ ಹನ್ನೆರಡು ತುಳಸಿ ಎಳೆಗಳು ಮತ್ತು ಮೂರರಿಂದ ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಸೇರಿಸಿ ಚೆನ್ನಾಗಿ ಗೊಟಾಯಿಸಿ ದಿನಕ್ಕೊಂದು ಬಾರಿ ಕುಡಿಯಿರಿ. ಈ ತೊಂದರೆಗೆ ಸರಳವಾದ ಪರಿಹಾರವಿದೆ. ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಕೊಂಚ ಹಸಿಶುಂಠಿ, ಕಲ್ಲುಪ್ಪು ಮತ್ತು ಚಿಟಿಕೆ ಇಂಗು ಬೆರೆಸಿ ಊಟದ ಬಳಿಕ ನಿಧಾನವಾಗಿ ಕುಡಿಯಿರಿ. ಇದರಿಂದ ಹೊಟ್ಟೆಯುಬ್ಬರಿಕೆಯುಂಟಾಗುವುದಿಲ್ಲ. ಊಟದ ಬಳಿಕ ದೊಡ್ಡಜೀರಿಗೆಯ ಕಾಳುಗಳನ್ನೂ ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಂಡು ಹೊಟ್ಟೆಯುಬ್ಬರಿಕೆಯಾಗುವುದನ್ನು ತಡೆಯುತ್ತದೆ. ಒಂದು ಚಿಕ್ಕಚಮಚ ತುಪ್ಪವನ್ನು ಒಂದೂಕಾಲು ಲೋಟದಷ್ಟು ನೀರಿನಲ್ಲಿ ಬೆರೆಸಿ ಅರ್ಧ ಚಿಕ್ಕಚಮಚ ಉಪ್ಪು ಹಾಕಿ ಕಲಕಿ. ಈ ನೀರನ್ನು ರಾತ್ರಿ ಊಟ ಮಾಡಿದ ಒಂದು ಘಂಟೆಯ ಬಳಿಕ ಕುಡಿಯಿರಿ. ಈ ನೀರಿನಲ್ಲಿರುವ ತುಪ್ಪ ಜೀರ್ಣಾಂಗಳ ಒಳಗೆ ಆಹಾರದ ಚಲನೆಗೆ ಸೂಕ್ತವಾದ ಜಾರುಕದಂತೆ ಕೆಲಸಮಾಡುತ್ತದೆ. ಉಪ್ಪಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಸೋಂಕಿನಿಂದ ರಕ್ಷಿಸುತ್ತದೆ. ಪರಿಣಾಮವಾಗಿ ಮಲಬದ್ದತೆಯ ತೊಂದರೆ ನೈಸರ್ಗಿಕವಾಗಿ ಕಡಿಮೆಯಾಗುತ್ತದೆ. ಹೊಟ್ಟೆಯ ಹುಣ್ಣು ಅಥವಾ ಗ್ಯಾಸ್ಟ್ರಿಕ್ ಅಲ್ಸರ್ ಎಂದು ಕರೆಯಲಾಗುವ ಈ ತೊಂದರೆ ಹೊಟ್ಟೆಯ ಒಳಪದರಲ್ಲಿ ಉಂಟಾಗುವ ಹುಣ್ಣುಗಳಾಗಿದ್ದು ಹಲವು ವ್ಯಕ್ತಿಗಳು ಈ ತೊಂದರೆಗೆ ಒಳಗಾಗುತ್ತಾರೆ. ಸಾಮಾನ್ಯವಾಗಿ ಈ ಹುಣ್ಣುಗಳಿಗೆ ನೀಡಲಾಗುವ ಔಷಧಿಗಳ ಅಡ್ಡ ಪರಿಣಾಮದಿಂದ ಅತಿಸಾರ, ತಲೆನೋವು ಮೊದಲಾದವು ಎದುರಾಗುತ್ತವೆ. ಆದ್ದರಿಂದ ಈ ತೊಂದರೆಯನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೇ ನಿವಾರಿಸಲು ನೈಸರ್ಗಿಕ ಸಾಮಾಗ್ರಿಗಳೇ ಉತ್ತಮ. ಆಹಾರದಲ್ಲಿ ಜೇನು, ಎಲೆಕೋಸಿನ ರಸ, ಬೆಳ್ಳುಳ್ಳಿ, ಅರಿಶಿನ ಮೊದಲಾದವುಗಳನ್ನು ಸೇವಿಸಬೇಕು. ಎಲೆಕೋಸಿನ ರಸವನ್ನು ತಯಾರಿಸಲು ಒಂದೂಮುಕ್ಕಾಲು ಕಪ್ ನೀರು ಮತ್ತು ಸುಮಾರು ಮೂರು ಕಪ್ (ಸುಮಾರು 675 ಗ್ರಾಂ) ಚಿಕ್ಕದಾಗಿ ಕತ್ತರಿಸಿದ ಎಲೆಕೋಸಿನ ತುರಿಯನ್ನು ಚೆನ್ನಾಗಿ ಕುದಿಸಿ ಬಳಿಕ ಮಿಕ್ಸಿಯಲ್ಲಿ ಕಡೆದು ಬಟ್ಟೆಯಲ್ಲಿ ಸೋಸಿ ರಸವನ್ನು ಸಂಗ್ರಹಿಸಬೇಕು. ಈ ರಸವನ್ನು ಫ್ರಿಜ್ಜಿನಲ್ಲಿರಿಸಿ ತಣ್ಣಗಾದ ಬಳಿಕವೇ ಸೇವಿಸಬೇಕು. ಒಂದು ಅಧ್ಯಯನದ ಪ್ರಕಾರ ಅಲ್ಸರ್ ತೊಂದರೆ ಇರುವ ವ್ಯಕ್ತಿಗಳು ದಿನದ ಅವಧಿಯಲ್ಲಿ ಒಟ್ಟು 946 ಮಿಲೀನಶ್ಟು ಈ ರಸವನ್ನು ಸೇವಿಸಿದ ಬಳಿಕ ಈ ಹುಣ್ಣುಗಳು ಸುಮಾರು ಏಳರಿಂದ ಹತ್ತು ದಿನಗಳ ಅವಧಿಯಲ್ಲಿ ಸಂಪೂರ್ಣವಾಗಿ ಗುಣವಾಗಿವೆ. ಎದೆಯುರಿ ಅಥವಾ ಹುಳಿತೇಗು (ಅಜೀರ್ಣತೆಯಿಂದ ಎದುರಾದ ಆಮ್ಲೀಯತೆ) ನಿವಾರಣೆಗೆ ಮಜ್ಜಿಗೆಯೇ ಅತ್ಯುತ್ತಮ ಔಷಧಿಯಾಗಿದೆ. ಕೊಂಚ ಮೊಸರಿಗೆ ಸಮಪ್ರಮಾಣದ ನೀರು ಬೆರೆಸಿ ಕೊಂಚ ಕಲ್ಲುಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಹುರಿದ ಜೀರಿಗೆಯ ಪುಡಿಯನ್ನೂ, ಒಂದು ಚಿಕ್ಕ ತುಂಡು ಶುಂಠಿಯನ್ನೂ ಬೆರೆಸಿ ಇನ್ನಷ್ಟು ಸ್ವಾದಭರಿತವಾಗಿಸಬಹುದು. ಈ ದ್ರವವನ್ನು ಊಟದ ಬಳಿಕ ಸೇವಿಸುವುದರಿಂದ ಹುಳಿತೇಗು ಇಲ್ಲವಾಗುತ್ತದೆ. ಜಠದ ಒಳಭಾದ ಪದರದಲ್ಲಿ ಎದುರಾಗುವ ಉರಿಯೂತದಿಂದ ಎದುರಾಗುವ ಈ ತೊಂದರೆ ಸಮಾನ್ಯವಾಗಿ ಸಂಸ್ಕರಿಸಿದ, ಅತಿಯಾದ ಮಸಾಲೆಯುಕ್ತ ಅಹಾರ ಅಥವಾ ಮದ್ಯ ಸೇವನೆಯಿಂದಲೇ ಎದುರಾಗುತ್ತದೆ. ಈ ತೊಂದರೆಯನ್ನು ನಿವಾರಿಸಲು ಬೆಳ್ಳುಳ್ಳಿ, ಹಸಿರು ಟೀ ಅಥವಾ ಮನುಕಾ ಜೇನು (ಈ ಜೇನಿಗೆ ಔಷಧೀಯ ಗುಣಗಳಿವೆ) ಸೇವಿಸಬಹುದು. ಹಸಿರು ಟೀ ಯಲ್ಲಿ ಕೊಂಚ ಮನುಕಾ ಜೇನು ಬೆರೆಸಿ ಕುಡಿಯಬಹುದು. ಒಂದು ವೇಳೆ ಈ ತೊಂದರೆ ಬಾಧಿಸುತ್ತಿದ್ದರೆ ನೀವು ದಿನಿವಿಡೀ ಇತರ ದಿನದಲ್ಲಿ ಸೇವಿಸುವುದಕ್ಕಿಂತಲೂ ಹೆಚ್ಚು ಪ್ರಮಾಣದ ನೀರನ್ನು ಕುಡಿಯುತ್ತಿರಬೇಕು. ಅಲ್ಲದೇ ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸಬಾರದು. ಸುಲಭವಾಗಿ ಜೀರ್ಣವಾಗುವಂತಹ ಆಹಾರಗಳನ್ನೇ ಸೇವಿಸಬೇಕು. ಈ ತೊಂದರೆಗೆ ಸುಲಭ ಪರಿಹಾರವೆಂದರೆ ಒಂದೂಕಾಲು ಲೋಟ ನೀರಿನಲ್ಲಿ ಒಂದಿಂಚು ದೊಡ್ಡ ಶುಂಠಿಯನ್ನು ಚಿಕ್ಕದಾಗಿ ತುರಿದು ಬೆರೆಸಿ ಹಾಗೂ ಕೊಂಚ aniseed (ದೊಡ್ಡಜೀರಿಗೆಯನ್ನು ಹೋಲುವ ಕಾಳುಗಳು) ಕಾಳುಗಳನ್ನು ಬೆರೆಸಿ ಈ ನೀರನ್ನು ಕುದಿಸಿ. ಬಳಿಕ ಈ ನೀರನ್ನು ಸೋಸಿ ತಣ್ಣಗಾದ ಬಳಿಕ ಚಿಟಿಕೆಯಷ್ಟು ಅರಿಶಿನ ಬೆರೆಸಿ ಕುಡಿಯಿರಿ. ಇದರಲ್ಲಿರುವ ಶುಂಠಿ ಅತಿಸಾರ ತೊಂದರೆಯನ್ನು ನಿವಾರಿಸುವ ಜೊತೆಗೇ ಜೀರ್ಣಶಕ್ತಿಯನ್ನೂ ಉತ್ತಮಗೊಳಿಸುತ್ತದೆ.
OSCAR-2019
ಇವೆರಡೂ ಬೇರುಪದಗಳ ಹುರುಳಾದ ಚೂಪುತನದ ಮೇಲೆಯೇ ಇವನ್ನು ಕೊಂಡಿಸಲಾಗಿದೆ. ಆದರೆ ಮುಳ್ಳು(thorn) ಎಂಬುದು ತಾನಾಗಿಯೇ ಸುತ್ತಣದಲ್ಲಿ ದೊರೆಯುವುದು ಆದರೆ ಮೊಳೆ(nail) ಎಂಬುದು ಮಾನವನಿಂದ ಉಂಟಾದ ವಸ್ತು. ಹಾಗಾಗಿ ಒಂದು ಹೆಜ್ಜೆ ಮುಂದೆ ಹೋಗಿ ಮುಳ್ಳಿನಿಂದಲೇ ಮೊಳೆ ಎಂಬ ಪದದ ಹುಟ್ಟಿರಬಹುದೆಂದು ಹೇಳಬಹುದಾಗಿದೆ.
OSCAR-2019
ವಾಷಿಂಗ್ಟನ್, ನ.2-ಯುವಕನೊಬ್ಬ ದಂಪತಿಯನ್ನು ಕೊಂದು ಶವವೊಂದರ ಮುಖವನ್ನು ಭಕ್ಷಿಸಿದ ಭೀಭತ್ಸ ಘಟನೆಯಿಂದಾಗಿ ಇಲ್ಲಿನ ಜನ ಬೆಚ್ಚಿ ಬಿದ್ದಿದ್ದಾರೆ. ತಾನು ನಡೆಸಿದ ಬೀಭತ್ಸ ಮತ್ತು ವಿಕೃತ ಕೃತ್ಯಗಳನ್ನು ಈ ನರಭಕ್ಷಕ ಎಳೆಎಳೆಯಾಗಿ ಬಿಚ್ಚಿಟ್ಟಾಗ ಪೊಲೀಸರೇ ಹೌಹಾರಿದರು…! ಈ ಸೈಕೋಪಾತ್ ಯುವಕನ ಹೆಸರು-ಆಸ್ಟಿನ್ ಹರ್ರೌಫ್. ವಯಸ್ಸು-19 ವರ್ಷ. ಅಪರಾಧ-ಫ್ಲಾರಿಡಾದ ದಂಪತಿಯ ಹತ್ಯೆ ಮತ್ತು ಶವದ ಮುಖವನ್ನು ತಿಂದು ಹಾಕಿದ ಘೋರ ಕೃತ್ಯ.. ಈ ಭಯಾನಕ ಘಟನೆ ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಅಮೆರಿಕದ ಪ್ರಮುಖ ದಿನಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ ಸಂಚಲನ ಮೂಡಿಸಿತ್ತು. ಆಸ್ಟಿನ್ ಆಗಸ್ಟ್ 15ರಂದು ಸೌತ್ ಫ್ಲಾರಿಡಾದ ದಂಪತಿ 59 ವರ್ಷದ ಸ್ಟೀವನ್ ಜಾನ್ ಮತ್ತು 53 ವರ್ಷದ ಮಿಚೆಲ್ಲೆ ಮಿಶ್ಕಾನ್‍ರನ್ನು ಅತ್ಯಂತ ಹರಿತವಾದ ಚಾಕು ಮತ್ತು ವೋಡ್ಕಾ ಮದ್ಯದ ಬಾಟಲ್‍ನಿಂದ ಭೀಕರವಾಗಿ ಕೊಂದಿದಲ್ಲದೇ ಜಾನ್‍ರ ಮುಖ ಮತ್ತು ಎದೆ ಭಾಗವನ್ನು ಭಕ್ಷಿಸಿದ್ದ. ಬಹುಕಾಲ ಶವದ ಬಳಿಯೇ ಇದ್ದ ಸೈಕೋಪಾತ್ ಯುವಕನನ್ನು ಪಾಮ್ ಬೀಚ್ ಪೆÇಲೀಸರು ಆಕಸ್ಮಿಕವಾಗಿ ಪತ್ತೆ ಮಾಡಿದರು. ಈತ ಜಾನ್ ಶವದ ಮೇಲೆ ಕುಳಿತು ಮುಖದ ಭಾಗವನ್ನು ಕಚ್ಚಿ ಜಗಿದು ನೆಲಕ್ಕೆ ಉಗುಳುತ್ತಿದ್ದ ದೃಶ್ಯ ನೋಡಿ ಪೊಲೀಸರೇ ಭಯಭೀತರಾಗಿದ್ದರು. ಆತನ ಬಾಯಲ್ಲಿ ಶವದ ಕೂದಲಿನೊಂದಿಗೆ ರಕ್ತ ಒಸರುತ್ತಿತ್ತು. ಈತನನ್ನು ತಕ್ಷಣ ಬಂಧಿಸಲಾಯಿತು. ಆದರೆ ಈತನನ್ನು ಸೆರೆ ಹಿಡಿಯುವುದಕ್ಕೆ ಮೊದಲೇ ದಂಪತಿಯ ಗ್ಯಾರೇಜ್‍ನಲ್ಲಿದ್ದ ಕಾಸ್ಟಿಕ್ ರಾಸಾಯನಿಕ ಸೇವಿಸಿದ್ದ ಈತ ತೀವ್ರ ಆಸ್ವಸ್ಥನಾಗಿದ್ದ. ಆಸ್ಪತ್ರೆಯಲ್ಲಿ 11 ದಿನಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದ. ಈತ ಇತ್ತೀಚೆಗೆ ಚೇತರಿಸಿಕೊಂಡಿದ್ದು, ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರು. ತಾನು ಜೋಡಿ ಕೊಲೆ ಮಾಡಿದ್ದು, ಶವ ಭಕ್ಷಣೆ ಮಾಡಿದ್ದಾಗಿ ಹರ್ರೌಫ್ ಇಲಾಖೆಯ ಸಾರ್ಜೆಂಟ್‍ಗೆ ವಿಚಾರಣೆ ವೇಳೆ ತಿಳಿಸಿದ್ದಾನೆ. ಫ್ಲಾರಿಡಾದ ಸ್ಟೇಟ್ ಯೂನಿವರ್ಸಿಟಿ ವಿದ್ಯಾರ್ಥಿಯಾದ ಈತ ಮಾದಕ ವಸ್ತು ವ್ಯಸನಿ ಮತ್ತು ಮಾನಸಿಕ ಅಸ್ವಸ್ಥ ಎಂಬುದು ದೃಢಪಟ್ಟಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ. ಮಂಗಳೂರು, ಮೇ 29- ಆಟವಾಡುವಾಗ ಆಟಿಕೆಯ ಸಣ್ಣ ಮ್ಯಾಗ್ನೆಟ್ ನುಂಗಿದ್ದ 9 ವರ್ಷದ ಬಾಲಕಿಯ ಜೀವ ಉಳಿಸುವಲ್ಲಿ ಇಲ್ಲಿನ ಕೆಎಂಸಿ ವೈದ್ಯರು ಯಶಸ್ವಿಯಾಗಿದ್ದಾರೆ. ನಗರದ ನಿವಾಸಿ ಪ್ರೇಮ್(ಹೆಸರು ಬದಲಿಸಿದೆ) ಎಂಬ ಬಾಲಕಿ ನಿನ್ನೆ ಸಂಜೆ ಆಟವಾಡುವಾಗ ಆಟಿಕೆಯ ಮ್ಯಾಗ್ನೆಟ್ ನುಂಗಿದ್ದಳು ತಡರಾತ್ರಿ ಬಾಲಕಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಪೊಷಕರು ಆತಂಕಗೊಂಡಿದ್ದರು. ತಕ್ಷಣ ಕೆಎಂಸಿ ಆಸ್ಪತ್ರೆಗೆ ಕರೆತಂದು ಎಕ್ಸ್‍ರೇ ತೆಗೆಸಿದಾಗ ಶ್ವಾಸಕೋಳದಲ್ಲಿ ಏನೋ ಸಿಕ್ಕಿಹಾಕಿಕೊಂಡಿರುವುದು ಗೊತ್ತಾಗಿದೆ. ನಂತರ ಬಾಲಕಿಯನ್ನು ವಿಚಾರಿಸಿದಾಗ ತಾನು ಆಟವಾಡುವಾಗ ಸಣ್ಣ ಆಟಿಕೆ ವಸ್ತು ನುಂಗಿರುವುದಾಗಿ ತಿಳಿಸಿದ್ದಾಳೆ. ವೈದ್ಯರು ನಂತರ ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಅದು ಮ್ಯಾಗ್ನೆಟ್ ಎಂದು ತಿಳಿದಿದೆ. ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದು ಬ್ರಾಂಕೊಸ್ಕೋಪ್‍ನಿಂದ ನಿಧಾನವಾಗಿ ವಸ್ತುವನ್ನು ಹೊರತೆಗೆಯಲಾಗಿದೆ. ಇದೊಂದು ಕಷ್ಟದ ಚಿಕಿತ್ಸೆ. ಸಫಲತೆ ವಿರಳ. ಆದರೆ, ಬಾಲಕಿ ಅದೃಷ್ಟ ಚೆನ್ನಾಗಿದ್ದು, ಜೀವ ಉಳಿದಿದೆ ಎಂದು ಮಕ್ಕಳ ತಜ್ಞವೈದ್ಯ ಡಾ.ಜಯತೀರ್ಥ ಜೋಷಿ ತಿಳಿಸಿದ್ದಾರೆ.
OSCAR-2019
ಬೆಂಗಳೂರು,ಅ.3- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ತರುವ ಹೆಗ್ಗುರಿಯೊಂದಿಗೆ ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಇಂದಿನಿಂದ ಆರಂಭವಾಯಿತು. ಬೆಳಗಾವಿಯ ಧರ್ಮನಾಥ ಭವನದಲ್ಲಿ
OSCAR-2019
ಕಾಪು (ಪಡುಬಿದ್ರಿ): ಇತ್ತೀಚಿನ ದಿನಗಳಲ್ಲಿ ಹಲವು ಕೃಷಿ ಚಟುವಟಿಕೆಗಳು ನಡೆಯುತ್ತಿದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಇಂದಿಗೂ ವೈಜ್ಞಾನಿಕ ಕೃಷಿ ನಡೆಯುತ್ತಿಲ್ಲ. ಈ ಬಗ್ಗೆ ಇಲ್ಲಿನ ಕೃಷಿಕರು ವಿಶೇಷ ಗಮನ ನೀಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕೃಷ್ಣ ಸ್ವಾಮಿ ರಾವ್ ಸಲಹೆ ಮಾಡಿದರು. ಕಾಪು ಸಮೀಪದ ಇನ್ನಂಜೆಯ ಪ್ರಗತಿಪರ ಯುವ ಕೃಷಿಕ ಸುಧಾಕರ ಶೆಟ್ಟಿ ಮಡಂಬು ಅವರು ಬಾರಿಟ್ರಾನ್ಸ್‌ಪ್ಲಾಂಟರ್ (ಭತ್ತದ ನಾಟಿ ಯಂತ್ರ) ಮೂಲಕ ನೇಜಿ ನಾಟಿ ಮಾಡಿ ಭತ್ತದ ಕೃಷಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿದರು. ವೈಜ್ಞಾನಿಕ ಅನ್ವೇಷಣೆಯ ಭತ್ತದ ನಾಟಿ ಯಂತ್ರ, ಪರಿಕರಗಳು ಬಂದು ಸುಮಾರು 10 ವರ್ಷ ಕಳೆದರೂ ಕರಾವಳಿಯಲ್ಲಿ ಬಳಸುತ್ತಿಲ್ಲ. ಸಬ್ಸಿಡಿ ಮೂಲಕ ಯಂತ್ರಗಳನ್ನು ಸರ್ಕಾರ ನೀಡುತ್ತಿದೆ. ಕೃಷಿಕರು ಇದನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು. ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಉಡುಪಿ, ಆತ್ಮ ಅನುಷ್ಠಾನ ಸಮಿತಿ ಉಡುಪಿ, ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ರೈತ ಸಂಪರ್ಕ ಕೇಂದ್ರ ಕಾಪು ಅಧಿಕಾರಿ ಕೆ.ತಿಮ್ಮಪ್ಪ ಗೌಡ ಆತ್ಮಯೋಜನೆ ಅಧಿಕಾರಿ ಸಂಜನಾ, ಭೂಚೇತನ ಕಾರ್ಯಕ್ರಮದ ಸರಿತಾ, ರಾಘವೇಂದ್ರ ನಾಯಕ್ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
OSCAR-2019
ರೊಟ್ಟಿ ಸುಟ್ಟು ಹೋಗಿದ್ದಕ್ಕೆ ತಲಾಕ್ ನೀಡಿದ ಪತಿ | Kannada Dunia | Kannada News | Karnataka News | India News ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪಹರೇತ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ತಲಾಕ್ ನೀಡಿದ ಘಟನೆ ಬೆಳಕಿಗೆ ಬಂದಿದೆ. ರೊಟ್ಟಿ ಸುಟ್ಟು ಹೋಗಿದೆ ಎನ್ನುವ ಕಾರಣಕ್ಕೆ ಮುಸ್ಲಿಂ ಯುವಕನೊಬ್ಬ ಪತ್ನಿಗೆ ಮೂರು ಬಾರಿ ತಲಾಕ್ ಹೇಳಿದ್ದಾನೆ. ನಿಹಾಲ್ ಖಾನ್ ಜೊತೆ ರಜಿಯಾ ಮದುವೆ ಜುಲೈ 4, 2017 ರಲ್ಲಿ ನಡೆದಿತ್ತು. ರೊಟ್ಟಿ ಸುಟ್ಟು ಹೋಗಿದೆ ಎನ್ನುವ ಕಾರಣ ಹೇಳಿ ನಿಹಾಲ್, ರಜಿಯಾಗೆ ತಲಾಕ್ ನೀಡಿದ್ದಾನೆ. ನಂತ್ರ ರಜಿಯಾಳನ್ನು ಮನೆಯಿಂದ ಹೊರ ಹಾಕಿದ್ದಾನೆ. ರಜಿಯಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಳಂತೆ. ಆದ್ರೆ ಪೊಲೀಸರು ದೂರು ದಾಖಲಿಸಿಕೊಳ್ಳದ ಕಾರಣ ಪೊಲೀಸ್ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾಳೆ. ರಜಿಯಾಗೆ ತಲಾಕ್ ನೀಡುವ ಮೂರು ದಿನ ಮೊದಲು ನಿಹಾಲ್ ಹಿಂಸೆ ನೀಡಿದ್ದನಂತೆ. ಸಿಗರೇಟಿನಿಂದ ರಜಿಯಾ ದೇಹದ ಕೆಲ ಭಾಗವನ್ನು ಸುಟ್ಟಿದ್ದನಂತೆ.
OSCAR-2019
ಉಪ ವಿಭಾಗೀಯ ಅಧಿಕಾರಿಗಳನ್ನು ಕಂದಾಯ ಇಲಾಖೆಯ ಜಿಲ್ಲೆಯ ನಿಗದಿತ ತಾಲೂಕುಗಳ ಉಸ್ತುವಾರಿ ವಹಿಸಲಾಗುತ್ತದೆ. ಅವರು ಉಪ-ವಿಭಾಗೀಯ ದಂಡಾಧಿಕಾರಿಯು ಆಗಿರುತ್ತಾರೆ. ಕಂದಾಯದ ವಿಷಯಗಳ ಬಗ್ಗೆ ತಹಶೀಲ್ದಾರರು ಉಪ-ವಿಭಾಗೀಯ ಅಧಿಕಾರಿಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಒಳಪಟ್ಟಿರುತ್ತಾರೆ. ಉಪವಿಭಾಗಗಳ ಉಸ್ತುವಾರಿ ವಹಿಸಿರುವ ಸಹಾಯಕ ಆಯುಕ್ತರು ಜಿಲ್ಲಾಧಿಕಾರಿಯವರ ಅಧಿಕಾರಗಳನ್ನು ಹೊಂದಿದ್ದು, ಕರ್ನಾಟಕದ ಭೂ ಕಂದಾಯ ಕಾಯಿದೆ, 1964 ರ ಹಲವು ಕಲಮುಗಳು ಮತ್ತು ಇತರ ರಾಜ್ಯ ಕಾನೂನುಗಳಡಿಯಲ್ಲಿ ಇಡಲಾಗಿದೆ. ಸಹಾಯಕ ಆಯುಕ್ತರು ತನ್ನ ಆಧೀನ ಆದೇಶಗಳನ್ನು ನಿರ್ವಹಿಸುವ ಕಂದಾಯ ವಿಷಯಗಳ ವಿಷಯದಲ್ಲಿ ಮೊದಲ ಮೇಲ್ಮನವಿ ಪ್ರಾಧಿಕಾರ ಮತ್ತು ಕರ್ನಾಟಕ ಭೂ ಕಂದಾಯ ಕಾಯಿದೆ, 1964 ರ ಕಲಮು 56 ರ ಪರಿಷ್ಕರಣೆ ಅಧಿಕಾರವನ್ನು ಅತ್ಯಂತ ಕೆಳಮಟ್ಟದ ಪ್ರಾಧಿಕಾರಿಯಾಗಿದ್ದಾರೆ . ಸಹಾಯಕ ಆಯುಕ್ತರ ಕಚೇರಿ ಸಾಮಾನ್ಯವಾಗಿ ತನ್ನ ಉಪವಿಭಾಗಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಕೆಲಸವನ್ನು ನಿರ್ವಹಿಸುತ್ತದೆ ಮತ್ತು 1961 ರಲ್ಲಿ ಕರ್ನಾಟಕ ಭೂಮಿ ಸುಧಾರಣೆ ಕಾಯಿದೆ ಅಡಿಯಲ್ಲಿ ಸ್ಥಾಪಿಸಲ್ಪಟ್ಟ ಟ್ರಿಬ್ಯೂನಲ್ಗಳ ಅಧ್ಯಕ್ಷರಾಗಿದ್ದು, ತಾಲುಕ್ಸ್ ಅವರ ಉಪವಿಭಾಗದಲ್ಲಿದೆ. ವಿಶೇಷ ಭೂಮಿ ಸ್ವಾಧೀನ ಅಧಿಕಾರಗಳನ್ನು ಸಹಾಯಕ ಆಯುಕ್ತರ ಕಚೇರಿ ತನ್ನ ಸಾಮಾನ್ಯ ಕೆಲಸದೊಂದಿಗೆ ನಿರ್ವಹಿಸಬೇಕು.ಸಹಾಯಕ ಆಯುಕ್ತರು ತಮ್ಮ ಉಪ ವಿಭಾಗದ ಚುನಾವಣಾ ನೋಂದಣಿ ಅಧಿಕಾರಿಗಳಾಗಿದ್ದಾರೆ. ಸಹಾಯಕ ಆಯುಕ್ತರು ತನ್ನ ಉಪ-ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಅಸೆಂಬ್ಲಿ ಕ್ಷೇತ್ರಗಳಿಗೆ ರಿಟರ್ನಿಂಗ್ ಆಫೀಸರ್ ಆಗಿರುತ್ತಾರೆ.
OSCAR-2019
ಚಾಲುಕ್ಯರ ನಾಡು, ಶಿಲ್ಪಕಲೆಯ ತೊಟ್ಟಿಲು. ಕವಿ ಚಕ್ರವರ್ತಿ ರನ್ನನ ತವರು; ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ, ಶರಣ ಸಂಸ್ಕೃತಿಯ ಕೋಟೆ, ಬೆಲ್ಲ, ಸಕ್ಕರೆ, ಸಿಮೆಂಟ್, ಗ್ರಾನೈಟ್‌ಗಳ ಆಗರ. ಬರದ ಬವಣೆಯಲ್ಲೂ ಇಂದಿರಾ ಗಾಂಧಿಯವರನ್ನು ಬಂಗಾರದಲ್ಲಿ ತೂಗಿ ಅದನ್ನು ದೇಶಕ್ಕೆ ಅರ್ಪಿಸುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದ ಬಿಜಾಪುರ ಜಿಲ್ಲೆಯ ಭಾಗವಾಗಿತ್ತು. ಅದೇ ‘ಬಾಗಲಕೋಟೆ’ ಜಿಲ್ಲೆ. ಆಲಮಟ್ಟಿ ಅಣೆಕಟ್ಟೆ ನಿರ್ಮಾಣವಾದ ಬಳಿಕ ಮುಳುಗಡೆ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬಾಗಲಕೋಟೆ ಭವ್ಯ ಇತಿಹಾಸ, ಸಾಹಿತ್ಯ ಮತ್ತು ಶಿಲ್ಪಕಲೆಗಳ ಅಸಾಮಾನ್ಯ ಪರಂಪರೆ ಹೊಂದಿದೆ. ಶರಣ ಸಂಸ್ಕೃತಿಯ ಭದ್ರಕೋಟೆಯಾಗಿಯೂ ಜಿಲ್ಲೆ ಹೆಸರುವಾಸಿ. ಶಿಲ್ಪಕಲೆಯ ತೊಟ್ಟಿಲು ಎಂದು ಕರೆಸಿಕೊಳ್ಳುವ ಐಹೊಳೆ, ವಿಶ್ವಪರಂಪರೆಯ ಪಟ್ಟಿಗೆ ಸೇರಿದ ಪಟ್ಟದಕಲ್ಲು ದೇವಸ್ಥಾನಗಳ ಸಮುಚ್ಚಯ, ದಕ್ಷಿಣ ಕಾಶಿ ಮಹಾಕೂಟ ಹಾಗೂ ಬಾದಾಮಿಯ ಗುಹಾಂತರ ದೇವಾಲಯಗಳು ಮತ್ತಿತರ ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಬ್ರಿಟಿಷರ ವಿರುದ್ಧ ಸೆಡ್ಡುಹೊಡೆದು ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಹಲಗಲಿ ಬೇಡರು, ಪರಕೀಯರ ಆಡಳಿತ ಹಾಗೂ ಜಮೀನ್ದಾರರ ಉಪಟಳದ ವಿರುದ್ಧ ಬಂಡೆದ್ದ ವೀರ ಸಿಂಧೂರ ಲಕ್ಷ್ಮಣನ ಸಂಘರ್ಷದ ಬದುಕಿಗೆ ಈ ನೆಲ ಸಾಕ್ಷಿಯಾಗಿದೆ. ನಂತರದ ಕಾಲಘಟ್ಟದಲ್ಲಿ ಧಾರ್ಮಿಕ, ಸಾಂಸ್ಕೃತಿಕ ತಿರುವುಗಳನ್ನು ಪಡೆದುಕೊಂಡ ಬಾಗಲಕೋಟೆ ಜಿಲ್ಲೆಯು ಟೋಪ ತೇನಿ ಸೆರಗಿನ ಇಳಕಲ್ ಸೀರೆಗಳು, ಗುಳೇದಗುಡ್ಡದ ಖಣಗಳು, ಮಹಾಲಿಂಗಪುರ ಬೆಲ್ಲ, ಸಕ್ಕರೆಯ ಸಿಹಿ, ರಬಕವಿ- ಬನಹಟ್ಟಿಯ ಕೈಮಗ್ಗಗಳು, ಮುಧೋಳದ ವಿಶಿಷ್ಟ ಬೇಟೆ ನಾಯಿ ತಳಿ, ಖನಿಜ ಸಂಪತ್ತು, ಪಿಂಕ್ ಗ್ರಾನೈಟ್, ಸಿಮೆಂಟ್ ಉದ್ಯಮ ಹಾಗೂ ರೈತರೇ ನಿರ್ಮಿಸಿದ ಚಿಕ್ಕಪಡಸಲಗಿ ಬ್ಯಾರೇಜ್‌ನಿಂದ ದೇಶದ ಗಮನಸೆಳೆದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಬಾಗಲಕೋಟೆ ನಗರದ ಬಹುಭಾಗವು ‘ಕೃಷ್ಣಾರ್ಪಣೆ’ಯಾಗಿದೆ. ನಗರದ ಸಂತ್ರಸ್ತರಿಗಾಗಿ ನವ ನಗರವನ್ನೇ ನಿರ್ಮಿಸಲಾಗಿದೆ. ದೇಶದ ಅತೀ ದೊಡ್ಡ ಪುನರ್ವಸತಿ ಯೋಜನೆಗಳಲ್ಲಿ ಈ ನವನಗರವೂ ಒಂದು. 1963 ಜುಲೈ 2ರಂದು ಎಐಸಿಸಿ ಅಧ್ಯಕ್ಷೆ ಇಂದಿರಾ ಗಾಂಧಿ ಅವರನ್ನು ಚಿನ್ನದಿಂದ ತುಲಾಭಾರ ಮಾಡಲಾಯಿತು. ಆಗ ಸಂಗ್ರಹವಾದ 1,18,553 ತೊಲ ಚಿನ್ನವನ್ನು ರಾಷ್ಟ್ರಕ್ಕೆ ದೇಣಿಗೆ ನೀಡಿದ ಹಿರಿಮೆ ಈ ಭಾಗದ ಜನರದು. ಅದರಲ್ಲಿ ಬಾಗಲಕೋಟೆ ಜಿಲ್ಲೆಯ ಪಾಲೂ ಇದೆ. ಜಮಖಂಡಿಯ ಪಟವರ್ಧನ ರಾಜಮನೆತನದವರು ನಿರ್ಮಿಸಿದ ಸುಂದರ ಅರಮನೆ, ಶತಮಾನ ಕಂಡ ಶಿವಯೋಗ ಮಂದಿರ, ಶತಮಾನದತ್ತ ದಾಪುಗಾಲು ಹಾಕುತ್ತಿರುವ ಉತ್ತರ ಕರ್ನಾಟಕದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಸಹಕಾರಿ ರಂಗದಲ್ಲಿ ಛಾಪು ಮೂಡಿಸಿರುವ ಜಿಲ್ಲಾ ಕೇಂದ್ರ ಸಹಕಾರಿ(ಡಿಸಿಸಿ) ಬ್ಯಾಂಕು ಹಾಗೂ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕುಗಳು, ಇತ್ತೀಚೆಗಷ್ಟೇ ಆರಂಭಗೊಂಡಿರುವ ದೇಶದ ಮೂರನೇ ತೋಟಗಾರಿಕೆ ವಿಶ್ವವಿದ್ಯಾಲಯ ಜಿಲ್ಲೆಯ ಮುಕುಟಪ್ರಾಯಗಳಾಗಿವೆ. ಬಸವ ತತ್ವ ಪ್ರಚಾರ ಕೈಂಕರ್ಯದ ಇಳಕಲ್‌ನ ಚಿತ್ತರಗಿ ಮಠದ ಡಾ. ಮಹಾಂತ ಸ್ವಾಮೀಜಿ, ಶರಣ ಸಂಸ್ಕೃತಿ ಪ್ರತಿಪಾದಿಸುವ ಮಾತೆ ಮಹಾದೇವಿ, ಭಾವೈಕ್ಯತೆಯ ಕೇಂದ್ರವಾದ ಇಳಕಲ್‌ನ ಮುರ್ತುಜಾ ಖಾದ್ರಿ ದರ್ಗಾ, ಪಂಚಮಸಾಲಿ ಗುರುಪೀಠ, ಭೋವಿ(ವಡ್ಡರ) ಗುರುಪೀಠ ಹೀಗೆ ಅನೇಕ ಧಾರ್ಮಿಕ ಸಂಸ್ಥೆಗಳು ಜಿಲ್ಲೆಯ ವಿಶೇಷಗಳು. ಐತಿಹಾಸಿಕ ಹಿನ್ನೆಲೆ ಬಾಗಲಕೋಟೆ ರಾಮಾಯಣ ಕಾಲದಲ್ಲಿ ರಾವಣನ ಆಸ್ಥಾನದ ವಾದ್ಯ ಮೇಳದ(ವಾಜಂತ್ರಿ-ಭಜಂತ್ರಿ)ವರ ಊರಾಗಿತ್ತು ಎಂಬ ಐತಿಹ್ಯವಿದೆ. ವಿಜಾಪುರದ ಆದಿಲ್‌ಶಾಹಿ ತನ್ನ ಮಗಳ ಬಳೆ(ಉರ್ದುವಿನಲ್ಲಿ ಬಂಗಡಿ)ಯ ವೆಚ್ಚಕ್ಕೆ ಈ ಊರನ್ನು ಕೊಟ್ಟಿದ್ದರಿಂದ ಬಾಗಲಕೋಟೆಗೆ ‘ಬಂಗಡಿಕೋಟ್’ ಎಂಬ ಹೆಸರು ಬಂತು. ಅಪಭ್ರಂಶಗೊಳ್ಳುತ್ತ ಸಾಗಿದ ಬಂಗಡಿಕೋಟ್ ಕ್ರಮೇಣ ‘ಬಾಗಲಕೋಟೆ’ ಎಂಬ ಹೆಸರು ಪಡೆಯಿತು ಎಂದು ಹೇಳಲಾಗಿದೆ. ಹಲವು ಅರಸೊತ್ತಿಗೆಗಳಿಗೆ ಸಾಕ್ಷಿಯಾಗಿರುವ ಈ ನೆಲ ಕೆಲಕಾಲ ರಾಷ್ಟ್ರಕೂಟರ, ಕಲಚೂರ್ಯರ ಆಡಳಿತಕ್ಕೆ ಒಳಪಟ್ಟಿತ್ತು. ಏಕಕಾಲದಲ್ಲಿ ಹುಟ್ಟಿಕೊಂಡ ವಿಜಯನಗರ ಮತ್ತು ಬಹುಮನಿ ಸಾಮ್ರಾಜ್ಯಗಳ ನಡುವೆ ಹಂಚಿಹೋಗಿತ್ತು. ಆದಿಲ್‌ಶಾಹಿ, ಪೇಶ್ವೆಯರ ಆಡಳಿತವನ್ನೂ ಕಂಡಿರುವ ಜಿಲ್ಲೆ 1818ರ ನಂತರ ಬ್ರಿಟಿಷರ ವಶವಾಯಿತು. ಆಗ ಜಮಖಂಡಿ, ಮುಧೋಳ ಸಂಸ್ಥಾನಗಳು ಪಟವರ್ಧನ ಮತ್ತು ಘೋರ್ಪಡೆ ಮನೆತನಗಳ ಆಡಳಿತದಲ್ಲಿತ್ತು. ಕೆಲವು ಕಡೆ ದೇಸಾಯಿಗಳು (ದೇಶಗತಿ ಮನೆತನ) ಆಳ್ವಿಕೆ ನಡೆಸಿದರು. ಸ್ವಾತಂತ್ರ್ಯ ನಂತರ ಭಾರತ ಒಕ್ಕೂಟದಲ್ಲಿ ಸೇರ್ಪಡೆಗೊಂಡ ಸುಮಾರು 600 ಸಂಸ್ಥಾನಗಳ ಪೈಕಿ ಮೊದಲನೆಯದು ಜಮಖಂಡಿ ಸಂಸ್ಥಾನ ಎಂಬುದು ಗಮನಾರ್ಹ. ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಅಂದರೆ 1997 ಆಗಸ್ಟ್ 15ರಂದು ರಾಜ್ಯದ 23ನೇ ಜಿಲ್ಲೆಯಾಗಿ ಬಾಗಲಕೋಟೆ ಹೊರಹೊಮ್ಮಿತು. ವಿಜಾಪುರ ಜಿಲ್ಲೆಯ ಹನ್ನೊಂದು ತಾಲ್ಲೂಕುಗಳಲ್ಲಿ ಬಾಗಲಕೋಟೆ, ಹುನಗುಂದ, ಬಾದಾಮಿ, ಬೀಳಗಿ, ಮುಧೋಳ ಹಾಗೂ ಜಮಖಂಡಿ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚಿಸಲಾಯಿತು. 6575 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಜಿಲ್ಲೆಯು ವಿಸ್ತೀರ್ಣದಲ್ಲಿ ರಾಜ್ಯದ 12ನೇ ಸ್ಥಾನದಲ್ಲಿದೆ. ಎರಡು ಕಂದಾಯ ಉಪ ವಿಭಾಗಗಳ, ಆರು ತಾಲ್ಲೂಕುಗಳ 18 ಹೋಬಳಿಗಳಲ್ಲಿ 623 ಜನವಸತಿ ಗ್ರಾಮಗಳು ಹಾಗೂ 4 ಜನವಸತಿ ಇಲ್ಲದ ಗ್ರಾಮಗಳು ಜಿಲ್ಲೆಯಲ್ಲಿವೆ. ಬಾಗಲಕೋಟೆ ಜಿಲ್ಲೆಯು ಐದು ಜಿಲ್ಲೆಗಳಿಂದ ಸುತ್ತುವರಿದಿದೆ. ಉತ್ತರಕ್ಕೆ ವಿಜಾಪುರ, ದಕ್ಷಿಣಕ್ಕೆ ಗದಗ, ಪೂರ್ವಕ್ಕೆ ರಾಯಚೂರು, ಕೊಪ್ಪಳ ಹಾಗೂ ಪಶ್ಚಿಮಕ್ಕೆ ಬೆಳಗಾವಿ ಜಿಲ್ಲೆಗಳಿವೆ. ಆರು ತಾಲ್ಲೂಕು ಪಂಚಾಯ್ತಿಗಳು, 163 ಗ್ರಾಮ ಪಂಚಾಯ್ತಿಗಳು, 12 ಸ್ಥಳೀಯ ಸಂಸ್ಥೆಗಳು, 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಾಗಲಕೋಟೆ ಜಿಲ್ಲೆಯ ಜನಸಂಖ್ಯೆ ಇತ್ತೀಚಿನ ಗಣತಿ ಪ್ರಕಾರ 19ಲಕ್ಷ. ಜಿಲ್ಲೆಯ 6,58,877 ಹೆಕ್ಟೇರ್ ಭೌಗೋಳಿಕ ಕ್ಷೇತ್ರದಲ್ಲಿ 4,67,407 ಹೆಕ್ಟೇರ್ ಕೃಷಿ ಭೂಮಿ. ಇದರಲ್ಲಿ 2,22,860 ಹೆಕ್ಟೇರ್ ನೀರಾವರಿ ಪ್ರದೇಶ, 81,126 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ವಾರ್ಷಿಕ ವಾಡಿಕೆಯ ಮಳೆ ಪ್ರಮಾಣ 586 ಮಿ.ಮೀ. ಕಬ್ಬು, ಕಡಲೆ, ಜೋಳ, ಭತ್ತ, ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ, ತೊಗರಿ, ಶೇಂಗಾ ಇಲ್ಲಿನ ಪ್ರಮುಖ ಬೆಳೆಗಳು. ಕೃಷಿ ಹಾಗೂ ನೇಕಾರಿಕೆ ಜಿಲ್ಲೆಯ ಜನರ ಪ್ರಮುಖ ಉದ್ಯೋಗಗಳು. ಕನ್ನಡ ಜಿಲ್ಲೆಯ ಮುಖ್ಯ ಭಾಷೆ. ಉರ್ದು, ಮರಾಠಿ, ರಾಜಸ್ತಾನಿ, ಗುಜರಾತಿ ಭಾಷಿಕರೂ ಜಿಲ್ಲೆಯಲ್ಲಿದ್ದಾರೆ. ಮೂರು ನದಿಗಳು ಹರಿಯುತ್ತಿದ್ದರೂ ಜಿಲ್ಲೆಯಲ್ಲಿ ಸಮರ್ಪಕ ನೀರಾವರಿ ವ್ಯವಸ್ಥೆ ಇಲ್ಲ.
OSCAR-2019
ಶಿವನನ್ನು ಮಹಾಜ್ಞಾನಿ, ಕೈಲಾಸವಾಸಿ ಎಂದು ಕರೆಯುತ್ತಾರೆ. ತ್ರಿಕಾಲ ಜ್ಞಾನಿಯಾಗಿರುವ ಈ ಭಗವಂತ ಎಲ್ಲವನ್ನೂ ತಿಳಿದಿರುವ ಮಹಾ ಮಹಿಮನಾಗಿದ್ದಾರೆ. ಹಿಂದೂ ಧರ್ಮದ ಪ್ರಕಾರ ಶಿವನನ್ನು ಪ್ರಳಯಾಂತಕ, ವಿಧ್ವಂಸಕ ಎಂದು ಕರೆಯಲಾಗಿದೆ. ಭಗವಂತ ಶಿವನ ಹೆಸರು ಕೇಳುತ್ತಿದ್ದಂತೆಯೇ ಮನದಲ್ಲಿ ಮೂಡುವ ಚಿತ್ರವೆಂದರೆ ಹಿಮಪರ್ವತದ ಮೇಲೆ ಕುಳಿತು ಶಿಖದಲ್ಲಿ ಚಂದ್ರನನ್ನೂ, ಕೊರಳಲ್ಲಿ ನಾಗನನ್ನೂ, ರುದ್ರಾಕ್ಷಿಮಾಲೆಗಳನ್ನೂ, ಕೈಯಲ್ಲೊಂದು ತ್ರಿಶೂಲ, ಡಮರುಗ ಮತ್ತು ತಲೆಯಿಂದ ಚಿಮ್ಮುತ್ತಿರುವ ಗಂಗೆ, ಹೀಗೆ ಅನೇಕ ರೀತಿಯ ಕಲ್ಪನೆಗಳು ಮನದಲ್ಲಿ ಮೂಡುತ್ತದೆ. ಹಿಂದೂ ಧರ್ಮದಲ್ಲಿ ಶಿವನು "ದೇವಾದಿದೇವ" (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವನು. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ. ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವಜ್ರವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾನೆ....ಬೇರೆ ಬೇರೆ ಕಾರಣಗಳಿಗಾಗಿ ಶಿವನಿಗೆ ಭಕ್ತರ ಸಂಖ್ಯೆ ಕೂಡ ಅಧಿಕವಿದೆ. ಸಾಧನ, ವೃತ ಮತ್ತು ಪೂಜೆಯಿಂದ ಭಗವಂತನನ್ನು ಒಲಿಸುತ್ತಾರೆ. ಇಂದಿನ ಲೇಖನದಲ್ಲಿ ಅತಿ ಶಕ್ತಿಶಾಲಿ ಮತ್ತು ಶಿವನನ್ನು ಒಲಿಸಿಕೊಳ್ಳವ ಮಹಾ ಮೃತ್ಯುಂಜಯ ಮಂತ್ರವನ್ನು ತಿಳಿಸುತ್ತಿದ್ದೇವೆ. ಇದನ್ನು ನಿತ್ಯವೂ ಜಪಿಸುವುದರಿಂದ ನೀವು ಫಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಅದ್ಭುತವಾದ ಮಂತ್ರವನ್ನು ಪಠಿಸುವುದು ಮತ್ತು ಅದನ್ನು ಪಠಿಸಿ ಪಡೆದುಕೊಳ್ಳಬಹುದಾದ ಫಲವನ್ನು ಕುರಿತು ಅರಿತುಕೊಳ್ಳೋಣ..... ನಾವು ನಿನ್ನನ್ನು ಧ್ಯಾನಿಸುತ್ತೇವೆ ಓಹ್ ಶಿವ. ಸಾವಿನ ಬಂಧಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಹಾಯ ಮಾಡಿ ಮತ್ತು ಅಮರತ್ವವು ಸಾಧ್ಯವಾಗದಿದ್ದರೂ, ದಯವಿಟ್ಟು ಮೋಕ್ಷವನ್ನು ಸಾಧಿಸಲು ನಮಗೆ ಸಹಾಯ ಮಾಡಿ. ಮಂತ್ರವನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಜನರಿಗೆ ದೀರ್ಘಕಾಲ ಬದುಕಲು ಸಹಾಯ ಮಾಡುತ್ತದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ ಆದರೆ ಅನಿವಾರ್ಯ ಸಾವು ಬಂದಾಗ ಜನರು ಮರಣದ ಭಯವಿಲ್ಲದೆ ಬದುಕಲು ಸಹಾಯ ಮಾಡುತ್ತಾದೆ ಮತ್ತು ಮೋಕ್ಷವನ್ನು ತಲುಪುತ್ತಾರೆ ಎಂದು ಮತ್ತೊಂದು ವಿವರಣೆಯು ಹೇಳುತ್ತದೆ. ಮೃತ್ಯುಂಜಯ ಮಂತ್ರ ಅಥವಾ ಮಹಾ ಮೃತ್ಯುಂಜಯ ಮಂತ್ರ ಹಿಂದೂ ಧರ್ಮದಲ್ಲಿನ ಅತ್ಯಂತ ಪ್ರಮುಖ ಮಂತ್ರಗಳಲ್ಲಿ ಒಂದಾಗಿದೆ. ಇದು ಅತ್ಯಂತ ಹಳೆಯದು ಮತ್ತು ಅತ್ಯಂತ ಜನಪ್ರಿಯವಾಗಿದೆ. ಇದನ್ನು ಸೇಜ್ ಮಾರ್ಕೆಂಡೇಯನಿಂದ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಚಂದ್ರನು ಒಮ್ಮೆ ರಾಜ ದಕ್ಷನಿಂದ ಶಾಪಗೊಂಡಿದ್ದಾರು ಎಂದು ಕಥೆ ಹೇಳುತ್ತದೆ. ಚಂದ್ರ ದೇವರಿಗೆ ಈ ಮಂತ್ರವನ್ನು ನೀಡಲು ಋಷಿ ಮಾರ್ಕಂಡೇಯನು ದಕ್ಷನ ಮಗಳಾದ ಸತಿಗೆ ಈ ಮಂತ್ರವನ್ನು ಉಪದೇಶಿಸಿದ್ದರು. ಇನ್ನೊಂದು ಕಥೆಯು ಭಗವಾನ್ ಶಿವನು ಈ ಮಂತ್ರವನ್ನು ಋಷಿ ಶುಕ್ರಾಚಾರ್ಯನಿಗೆ ಕೊಟ್ಟಿದ್ದಾರೆಂದು ಹೇಳುತ್ತಾನೆ. ಶುಕ್ರಾ ಚಾರ್ಯರು ಅದನ್ನು ದೀದಿಚಿಗೆ ಉಪದೇಶಿಸಿದರು. ಅವನು ಇದನ್ನು ಪ್ರತಿಯಾಗಿ ರಾಜ ಕ್ಶುವಾಗೆ ಕೊಟ್ಟರು ಮತ್ತು ಅದು ಶಿವ ಪುರಾಣವನ್ನು ಪ್ರವೇಶಿಸಿತು. ಮಹಾ ಮೃತ್ಯುಂಜಯ ಮಂತ್ರ ಮರಣವನ್ನು ನಿವಾರಿಸುವುದಾಗಿ ಹೇಳಲಾಗಿದೆ. ರಾಜ ದಕ್ಷನು ಚಂದ್ರನನ್ನು ನಿಧಾನ ಮತ್ತು ಭಯಾನಕ ಸಾವು ಬರಲಿ ಎಂದು ಶಪಿಸಿದನು ಎಂದು ಹೇಳಲಾಗುತ್ತದೆ. ಇದರ ಪರಿಣಾಮವಾಗಿ, ಅವರು ಅಮಾವಾಸ್ಯೆಯಲ್ಲಿ ಕ್ಷೀಣಿಸಿ ನಂತರ ಕೊನೆಗೊಳ್ಳುತ್ತಾರೆ. ಸತಿ ದೇವತೆ ಚಂದ್ರ ದೇವರಿಗೆ ಈ ಮಂತ್ರವನ್ನು ನೀಡಿದರು. ಈ ಮಂತ್ರವನ್ನು ಓದಿದ ನಂತರ ಶಿವನು ಚಂದ್ರ ದೇವರನ್ನು ಅವರ ತಲೆಯ ಮೇಲೆ ಇಟ್ಟುಕೊಂಡರು ಮತ್ತು ಇದು ಅವರ ನಿಧಾನವಾದ ಮರಣವನ್ನು ಬದಲಾಯಿಸಿತು ಮತ್ತು ಇದು ಪೂರ್ಣಿಮಾ ಅಥವಾ ಹುಣ್ಣಿಮೆಯ ದಿನದಲ್ಲಿ ಕೊನೆಗೊಳ್ಳುತ್ತದೆ. ನೀವು ಅತಿ ಕಡಿಮೆ ಸಮಯವನ್ನು ಹೊಂದಿದ್ದು ಮಂತ್ರದ ಪೂರ್ಣ ಫಲವನ್ನು ಪಡೆದುಕೊಳ್ಳುವ ಇಚ್ಛೆಯನ್ನು ಹೊಂದಿದ್ದಲ್ಲಿ ಹತ್ತಿರದ ಶಿವ ದೇವಾಲಯಕ್ಕೆ ಹೋಗಿ. ನೀರಿನಿಂದ ಶಿವಲಿಂಗವನ್ನು ತೊಳೆಯುತ್ತಿರುವಾಗ ಈ ಮಂತ್ರವನ್ನು ಪಠಿಸಿ. ಭಗವಂತನಿಗೆ ಬಿಲ್ವ ಎಲೆಯನ್ನು ಅರ್ಪಿಸಿ. ಇದನ್ನು ಸೋಮವಾರ ಆರಂಭಿಸಿ ಮತ್ತು 15 ದಿನಗಳ ಕಾಲ ಅನುಸರಿಸಿ. ನಿಮ್ಮ ಮನೆಯ ಸದಸ್ಯರು ಅನಾರೋಗ್ಯವನ್ನು ಹೊಂದಿದ್ದರೆ ಅವರಿಗೆ ಮಂತ್ರ ಪಠಿಸಲು ಸಾಧ್ಯವಾಗದೇ ಇದ್ದಲ್ಲಿ ನೀವು ಅವರ ಪರವಾಗಿ ಈ ಮಂತ್ರವನ್ನು ಪಠಿಸಬಹುದಾಗಿದೆ. ಈ ಮಂತ್ರದಿಂದ ಹೊರಬರುವ ಶಕ್ತಿಯು ನಿಮ್ಮ ಪ್ರೀತಿಪಾತ್ರರನ್ನು ತಲುಪಿ ಭಗವಂತನ ಅನುಗ್ರಹ ಅವರಿಗೆ ದೊರಕುವಂತೆ ಆಗುತ್ತದೆ. ಮಹಾ ಮೃತ್ಯುಂಜಯ ಮಂತ್ರ ಎಂಬುದು ಮಂತ್ರವಾಗಿದ್ದು, ಅದು ಪೋಷಣೆ ಮತ್ತು ಪುನರುಜ್ಜೀವನಗೊಳ್ಳುತ್ತದೆ. ಇದು ನಿಮಗೆ ಶಾಂತಿ, ಸಮೃದ್ಧಿ, ಆರೋಗ್ಯ, ಸಂಪತ್ತು ಮತ್ತು ಸಂತೋಷದ ದೀರ್ಘಾವಧಿಯೊಂದಿಗೆ ಆಶೀರ್ವಾದ ನೀಡುತ್ತದೆ. ಒಳ್ಳೆಯ ಆಲೋಚನೆಗಳನ್ನು ಮತ್ತು ಸಕಾರಾತ್ಮಕ ಭಾವನೆಗಳನ್ನು ಉತ್ತೇಜಿಸುವ ಮೂಲಕ ನಿಮ್ಮನ್ನು ಗುಣಪಡಿಸುವ ಅಧಿಕಾರಗಳನ್ನು ಇದು ಹೊಂದಿದೆ. ನೀವು ಹೊಂದಿರುವ ಯಾವುದೇ ಕಾಯಿಲೆಯಿಂದ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವಲ್ಲಿ ನೀವು ಹೆಚ್ಚು ಪರಿಣಾಮಕಾರಿಯಾದ ಆಹಾರ ಮತ್ತು ಔಷಧದಂತೆ ಇದು ಕೆಲಸ ಮಾಡುತ್ತದೆ. ಮಂತ್ರ ಸಕಾರಾತ್ಮಕತೆ ಮತ್ತು ಬ್ರಹ್ಮಾಂಡದ ವೈಬ್‌ಗಳನ್ನು ಆಕರ್ಷಿಸುತ್ತದೆ, ಇದು ನಿಮ್ಮ ಸುತ್ತಮುತ್ತಲಿನ ಶುದ್ಧತೆಯನ್ನು ಮತ್ತು ಯಾವುದೇ ರೀತಿಯ ಋಣಾತ್ಮಕತೆಯನ್ನು ನಾಶಪಡಿಸುತ್ತದೆ.
OSCAR-2019
ಬಾಹ್ಯಾಕಾಶದ ಬಗ್ಗೆ ಹತ್ತಾರು ಬಗೆಯ ಕುತೂಹಲಗಳಿರುವುದು ಸಹಜ. ಕೆಲವರಿಗೆ ಬಾಹ್ಯಾಕಾಶದ ಬಗ್ಗೆ ಇನ್ನೊಂದಷ್ಟು ಮತ್ತೊಂದಷ್ಟು ತಿಳಿದುಕೊಳ್ಳುವ ಆಸಕ್ತಿ. ನಕ್ಷತ್ರಗಳು, ಗ್ರಹಗಳು, ಬ್ರಹ್ಮಾಂಡದ ಬಗೆಗಿನ ಹೊಸ ಹೊಸ ಸಂಗತಿಗಳು ಖುಷಿ Read more… ಬೆಂಗಳೂರು: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಕೈ ಕಚ್ಚಿದ ಘಟನೆ ತಡರಾತ್ರಿ ಬೆಂಗಳೂರು ಕೋಡಿಗೇಹಳ್ಳಿ ಬಳಿ ನಡೆದಿದೆ. ರಾತ್ರಿ 1 ಗಂಟೆಗೆ ಬಾರ್ ಬಳಿ ಗಿರೀಶ್ ಮತ್ತು ರೋಶನ್ Read more… ರಾಮನಗರ: ಕೆರೆಯಲ್ಲಿ ನಾಯಿಯ ಮೈ ತೊಳೆಯುವಾಗ ವ್ಯಕ್ತಿಯ ಮೇಲೆ ಮೊಸಳೆ ದಾಳಿ ನಡೆಸಿದ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ತಟ್ಟಿಕೆರೆಯ ಸಮೀಪ ನಡೆದಿದೆ. ತಟ್ಟಿಕೆರೆ ಅರಣ್ಯ ಪ್ರದೇಶದಲ್ಲಿರುವ Read more… ಮಂಗಳೂರು: ತಲವಾರ್ ನಿಂದ ಯುವಕನೊಬ್ಬನ ಕೈ ಕಡಿದ ಘಟನೆ ತಡರಾತ್ರಿ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ನಡೆದಿದೆ. ನೌಷಾದ್(23) ಗಾಯಗೊಂಡ ಯುವಕ. ಉಳ್ಳಾಲದ ಮಸೀದಿ ರಸ್ತೆಯಲ್ಲಿ ಹೋಗುವಾಗ, ಬೈಕ್ Read more…
OSCAR-2019
ಗರ್ಭಪಾತವು ನಿಜಕ್ಕೂ ಭಾರೀ ದೊಡ್ಡ ಆಘಾತ ನೀಡುವಂತದ್ದು, ಅದರಲ್ಲೂ ಪ್ರಮುಖವಾಗಿ ಯಾರು ತಾಯಿಯಾಗುವ ತವಕದಲ್ಲಿ ಅಧಿಕವಾಗಿರುತ್ತಾರೋ, ಮತ್ತು ಯಾವಾಗ ಇಂತಹ ಒಂದು ಘಟನೆ ಸಂಭವಿಸಿ ಬಿಡುತ್ತದೆಯೋ ನಿಜಕ್ಕೂ ಅದು ಸಂತೋಷವನ್ನು ನಮ್ಮಿಂದ ಕಸಿದುಬಿಡುವಂತಹ ಒಂದು ನಿರಾಶಾದಾಯಕ ಘಟನೆ. ಹಾಗಂತ, ಈ ರೀತಿಯ ಗರ್ಭಪಾತ ಅಥವಾ ಪ್ರಗ್ನೆನ್ಸಿ ಎಂದು ಕರ್ನ್ಫರ್ಮ್ ಆದ ಕೆಲವೇ ದಿನದಲ್ಲಿ ಹೀಗಾಗುವುದು ಒಂದು ಅಸಾಮಾನ್ಯ ಪ್ರಕ್ರಿಯೆಯಲ್ಲ.. ಇದನ್ನು ಮಹಿಳೆಯರ ರಿಪ್ರೊಡಕ್ಷನ್ ಪದ್ದತಿಯ ಒಂದು ಸಹಜ ಭಾಗ ಎಂದೇ ಪರಿಗಣಿಸಬಹುದು. ಒಂದು ಮಾಹಿತಿಯ ಪ್ರಕಾರ ಹೇಳುವುದಾದರೆ ಕೆಲವು ಗರ್ಭಪಾತಗಳು ಮಹಿಳೆಯರಿಗೆ ತಿಳಿಯದಂತೆಯೇ ನಡೆದು ಹೋಗುತ್ತದೆ.. ಕೆಲವರು ಅವರ ಪೀರೇಡ್ಸ್ ತಡವಾಗಿರುವುದನ್ನು ಗಮನಿಸದೇ ಇದ್ದಿರಬಹುದು. ನಿಜವಾಗಿಯೂ ಆ ಪೀರೇಡ್ಸ್ ತಡವಾಗಿರುವುದೇ ಗರ್ಭಪಾತವೂ ಆಗಿರಬಹುದು. ಪ್ರಮುಖವಾಗಿ ಯಾರು ಗರ್ಭ ಧರಿಸುವ ಯೋಜನೆಯಲ್ಲಿ ಇರುವುದಿಲ್ಲವೋ, ಮತ್ತು ಗರ್ಭವತಿಯಾಗುತ್ತಾರೋ, ಅಂತವರು ಪ್ರಮುಖವಾಗಿ ಹೀಗೆ ಆಗಿರುವುದರ ಪರಿಕಲ್ಪನೆಯಲ್ಲೂ ಇರುವುದಿಲ್ಲ ಮತ್ತು ಗರ್ಭಧಾರಣೆಯ ಟೆಸ್ಟ್ ಕೈಗೊಳ್ಳುವವರೆಗೂ ಅವರಿಗೆ ಇದರ ಅಂದಾಜು ಇರುವುದಿಲ್ಲ.. ಡಾಕ್ಟರ್ ಗಳು ತಿಳಿಸುವಂತೆ, ಅರ್ಧದಷ್ಟು ಗರ್ಭಾವಸ್ಥೆಯು ಮೊದಲ ಮೂರು ತಿಂಗಳು ಮುಗಿಯುವುದರ ಒಳಗೆ ಗರ್ಭಪಾತವಾಗಿ ಹೋಗಿಬಿಡುತ್ತದೆಯಂತೆ. ನೀವು ಕೂಡ ಇದೇ ರೀತಿ ಗರ್ಭ ಧರಿಸಲು ಪ್ರಯತ್ನಿಸಿ, ಗರ್ಭಪಾತವಾಗಿದ್ದರೆ, ಖಂಡಿತವಾಗಿಯೂ ಯಾವೆಲ್ಲ ನೈಸರ್ಗಿಕ ಕಾರಣಗಳಿಂದಾಗಿ ಇದು ಸಂಭವಿಸಿದೆ ಎಂಬುದನ್ನು ಅರಿತುಕೊಳ್ಳಬೇಕು. ಹಾಗಾದ್ರೆ ಲೇಖನದ ಮುಂದಿನ ಭಾಗವನ್ನು ಓದಿ ಮತ್ತು ಕೆಲವು ಸಾಮಾನ್ಯ ಕಾರಣಗಳು ಮತ್ತು ಅದರಿಂದ ಒಮ್ಮೆ ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಗರ್ಭಪಾತವಾಗಿರುವ ಸಾಧ್ಯತೆ ಇರುತ್ತದೆ. ಸುಮಾರು ಶೇಕಡಾ 60 ರಷ್ಟು ಗರ್ಭಪಾತವು ಕ್ರೋಮೋಸೋಮಲ್ ಗಳ ಅಸಹಜತೆಯಿಂದಾಗಿ ಸಂಭವಿಸಿರುತ್ತದೆ. ಕ್ರೋಮೋಸೋಮ್ ಎಂದರೆ ಒಂದು ಸಣ್ಣ ಸ್ಟ್ರಕ್ಚರ್ ಆಗಿದ್ದು ಪ್ರತಿಯೊಂದು ಜೀವಕೋಶದಲ್ಲೂ ಕೂಡ ಇರುತ್ತದೆ ಮತ್ತು ಇದು ನಮ್ಮ ಜೀನ್ಸ್ ಗಳನ್ನು ಹೊತ್ತುಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ..ಪ್ರತಿಯೊಬ್ಬ ವ್ಯಕ್ತಿಯಲ್ಲೂ 23 ಜೋಡಿಗಳಿರುತ್ತೆ ಮತ್ತು ಒಂದು ಜೋಡಿ ತಂದೆಯಾಗಿದ್ದರೆ ಮತ್ತೊಂದು ಜೋಡಿ ತಾಯಿಯಾಗಿರುತ್ತದೆ. ಯಾವಾಗ ಮೊಟ್ಟೆ ಮತ್ತು ವೀರ್ಯ ಭೇಟಿಯಾದಾಗ ಮತ್ತು ಒಂದು ಅಥವಾ ಇತರ ಅಂತ್ಯವು ತಪ್ಪಾಗಿರುತ್ತದೆ, ಆಗ ಕ್ರೋಮೋಸೋಮ್ ಗಳ ಜೋಡಣೆಯು ಸರಿಯಾದ ಕ್ರಮದಲ್ಲಿ ಇಲ್ಲದೇ ಇರುವ ಸಾಧ್ಯತೆಗಳಿರುತ್ತದೆ. ಇದನ್ನೇ ಭ್ರೂಣವು ರೂಪುಗೊಳ್ಳುವ ಸಂದರ್ಬದ ಕ್ರೋಮೋಸೋಮ್ ಗಳ ಅಸಹಜತೆ ಎಂದು ಕರೆಯಲಾಗುತ್ತೆ. ಈ ರೀತಿಯ ಗರ್ಭಧಾರಣೆಯು ಗರ್ಭಪಾತದಲ್ಲಿ ಅಂತ್ಯಗೊಳ್ಳುತ್ತದೆ. ಕೆಲವು ಮಂದಿಯಲ್ಲಿ ಗರ್ಭಾಶಯವು ಅಸಹಜ ಸ್ಥಿತಿಯಲ್ಲಿ ಆಕಾರಗೊಂಡಿರುತ್ತದೆ. ಕೆಲವೊಮ್ಮೆ ಗರ್ಭಾಶಯವು ಭಾಗವಾಗಿರುತ್ತದೆ. ಇದನ್ನು "ಗರ್ಭಾಶಯದ ಸೆಪ್ಟಮ್" ಎಂದು ಉಲ್ಲೇಖಿಸಲಾಗುತ್ತದೆ. ದುರ್ಬಲ ಅಥವಾ ಅಸಮರ್ಥ ಗರ್ಭಕಂಠವು ಯಶಸ್ವಿ ಗರ್ಭಾವಸ್ಥೆಯನ್ನು ಪಡೆಯುವಲ್ಲಿ ಸಮಸ್ಯೆ ಉಂಟುಮಾಡಬಹುದು. ಮೊದಲ ತ್ರೈಮಾಸಿಕ ಮುಗಿಯುವುದರ ಒಳಗೆ ಭ್ರೂಣವು ಗಾತ್ರದಲ್ಲಿ ಬೆಳೆದಿರುತ್ತದೆ ಮತ್ತು ಇದು ಗರ್ಭಕಂಠವನ್ನು ಉಬ್ಬುಗೊಳಿಸುತ್ತದೆ, ಇಂತಹ ಸಂದರ್ಬದಲ್ಲಿ ಗರ್ಭಕಂಠವು ದುರ್ಬವಿದ್ದರೆ, ಅದು ಭ್ರೂಟವನ್ನು ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಇದನ್ನು ಕೂಡಲೇ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಮತ್ತು ಮಹಿಳೆಯು ಪದೇ ಪದೇ ಗರ್ಭಪಾತಕ್ಕೆ ಒಳಗಾಗುತ್ತಿದ್ದಾಗ ಮಾತ್ರ ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ ಯಾಕೆಂದರೆ ಇದು ಗರ್ಭಾಶಯದ ಸೆಪ್ಟಮ್ ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ಪಡೆಯಬಹುದಾದ ಒಂದು ಸಮಸ್ಯೆಯಾಗಿದೆ. . ಒಂದು ಅಸಮರ್ಥ ಗರ್ಭಕಂಠವನ್ನು ಗರ್ಭಕಂಠದಲ್ಲಿ ಹೊಲಿಗೆ ಹಾಕುವ ಮೂಲಕ ಮುಚ್ಚಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವ0 ಚಿಕಿತ್ಸೆಯೇ ಇದಾಗಿದ್ದು, ಈ ವಿಧಾನವನ್ನು ಸೆರ್ಕ್ಲೇಜ್ ಎಂದು ಕರೆಯಲಾಗುತ್ತದೆ. ಆದರೆ ಈ ಗರ್ಭಧಾರಣೆ ಚಿಕಿತ್ಸೆಯ ನಂತರ ಮುಂದಿನ ಗರ್ಭಧಾರಣೆಯಲ್ಲಿ ಸಂಪೂರ್ಣ ಬೆಡ್ ರೆಸ್ಟ್ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ ಎಂಬುದನ್ನು ಮರೆಯಬೇಡಿ. ಕೆಲವೊಮ್ಮೆ ಮಹಿಳಾ ದೇಹವು ವೀರ್ಯವನ್ನು ತಮ್ಮದಲ್ಲದ ಶರೀರವೆಂದು ಕಾಣಲು ಆರಂಭಿಸುತ್ತದೆ ಮತ್ತು ಇದರ ಪ್ರತಿರಕ್ಷಣಾ ವ್ಯವಸ್ಥೆಗೆ ತಕ್ಕಂತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಯಾವಾಗ ಇದು ಸಂಭವಿಸುತ್ತದೆಯೋ, ಆಗ ಭ್ರೂಣವು ಮಹಿಳೆಯ ದೇಹದಿಂದ ಸ್ವೀಕರಿಸ್ಪಡುವುದಿಲ್ಲ. ಇದನ್ನೇ ರೋಗನಿರೋಧಕ ಅಸ್ವಸ್ಥತೆ ಅಥವಾ ಆಂಟಿಫಸ್ಫೋಲಿಪಿಡ್ ಪ್ರತಿಕಾಯಗಳು ಎಂದು ಕರೆಯಲ್ಪಡುತ್ತವೆ. ಇದು ಅದರ ಸ್ವಂತ ಅಂಗಾಂಶಗಳನ್ನೇ ಆಕ್ರಮಿಸುತ್ತದೆ ಮತ್ತು ಭ್ರೂಣವನ್ನೂ ಸೇರಿಸಿ ಆಕ್ರಮಿಸುತ್ತದೆ. ಇದರ ಫಲಿತಾಂಶ ಗರ್ಭಪಾತವಾಗಿರುತ್ತದೆ. ಆದರೆ ಇದು ಅಷ್ಟು ಸಾಮಾನ್ಯವಲ್ಲ, ಇಂತಹ ರೋಗಿಗಳನ್ನು ವೈದ್ಯರು ಕೂಡಲೇ ಚಿಕಿತ್ಸೆಗೆ ಒಳಪಡಿಸುತ್ತಾರೆ ಹೆಪರೀನ್ ಬಳೆಕೆ ಮಾಡಿ ರಕ್ತವನ್ನು ತೆಳುಗೊಳಿಸಲಾಗುತ್ತೆ ಮತ್ತು ಇತರೆ ಸ್ಟಿರಾಯ್ಡ್ ಗಳನ್ನೂ ಕೂಡ ಬಳಕೆ ಮಾಡಲಾಗುತ್ತೆ. ಮಹಿಳೆಯು ಥೈರಾಯ್ಡ್ ಅನ್ನು ಹೊಂದಿದ್ದಾಗ ಅಥವಾ ಅನಿಯಂತ್ರಿತ ಮಧುಮೇಹವನ್ನು ಹೊಂದಿರುವಾಗ ಅನಾನುಕೂಲವಾದ ಗರ್ಭಾಶಯದ ಪರಿಸರವು ಉಂಟಾಗುತ್ತದೆ. ಇಂತಹ ಪರಿಸರವು ಭ್ರೂಣವು ಬದುಕುಳಿಯಲು ಬಹಳ ಕಷ್ಟ ಪಡಬೇಕಾದ ಸಂದರ್ಭವನ್ನು ಎದುರಿಸುವಂತೆ ಮಾಡುತ್ತದೆ. ಇದು ಆಗದಂತೆ ತಡೆಯಬೇಕಾದರೆ, ನೀವು ಚಿಕಿತ್ಸೆಗೆ ಒಳಗಾಗಬೇಕು ಮತ್ತು ಜೀವನಶೈಲಿಯನ್ನು ಬದಲಿಸಿಕೊಳ್ಳಲು ನಿಮ್ಮ ವೈದ್ಯರು ನಿಮಗೆ ಸಲಹೆಗಳನ್ನು ನೀಡಬಹುದು.ವೈದ್ಯರು ಸೂಚಿಸುವ ಚಿಕಿತ್ಸೆಗೆ ಒಳಪಟ್ಟು ಮಧುಮೇಹವನ್ನು ನಿಯಂತ್ರಣಕ್ಕೆ ತರಬೇಕು ಮತ್ತು ಥೈರಾಯ್ಡ್ ಸಮಸ್ಯೆಯನ್ನು ಸರಿಯಾಗ ಚಿಕಿತ್ಸೆಯ ಮೂಲಕ ಸರಿಪಡಿಸಿಕೊಂಡರೆ ಸಮಸ್ಯೆಯಿಂದ ದೂರವಾಗಬಹುದು. ಬೇಗನೆ ತಾಯಿಯಾಗಲು ಸಾಧ್ಯವಾಗುತ್ತೆ. ಗರ್ಭಪಾತವು ಮರುಕಳಿಸುತ್ತಲೇ ಇರಲು ಇರುವ ಪ್ರಮುಖ ಕಾರಣಗಳಲ್ಲಿ ಇದೂ ಒಂದುಸ ಯಾವ ಮಹಿಳೆಯರಿಗೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್ ) ಅಥವಾ ಹೆಚ್ಚಿನ ಮಟ್ಟದ ಟೆಸ್ಟೋಸ್ಟೆರಾನ್ ( ಪುರುಷ ಹಾರ್ಮೋನುಗಳು) ಇರುತ್ತೋ ಅವರಿಗೆ ಗರ್ಭಪಾತ ಸಾಮಾನ್ಯ.,ಇದು ಸಾಮಾನ್ಯವಾಗಿ ನಿಮ್ಮ ಮುಟ್ಟಿನ ಸಮಯದಲ್ಲಿ ವ್ಯತ್ಯಯ ಮತ್ತು ಅನಿಯಮಿತ ಅಂಡೋತ್ಪತ್ತಿಗೂ ಕೂಡ ಕಾರಣವಾಗಿರುತ್ತದೆ. ಯಾವ ಮಹಿಳೆಯರು ಡಯಾಬಿಟಿಕ್ ಆಗಿರುವುದಿಲ್ಲವೋ, ಅವರಿಗೂ ಕೂಡ ಪಿಸಿಓಎಸ್ ನ ಕಾರಣದಿಂದಾಗಿ ಇನ್ಸುಲಿನ್ ಪ್ರಮಾಣದಲ್ಲಿ ವ್ಯತ್ಯಯ ಕಾಣಿಸಬಹುದು. ಇದು ಎಂಡೊಮೆಟ್ರಿಯಲ್ ಪದರದ ಸರಿಯಾದ ಪರಿಪಕ್ತಿಯನ್ನು ತಡೆಯುತ್ತದೆ. ಪಿಸಿಓಎಸ್ ನಿಂದ ಗುರುತಿಸಲ್ಪಟ್ಟಿರುವ ಮಹಿಳೆಯರು ಇದನ್ನು ಸರಿಪಡಿಸಲು ಚಿಕಿತ್ಸೆ ಪಡೆಯಬೇಕಾಗುತ್ತದೆ. ಆಗ ಮಾತ್ರ ಗರ್ಭಧಾರಣೆ ಸಲೀಸಾಗುತ್ತದೆ. ಕೆಲವು ರೀತಿಯ ಬ್ಯಾಕ್ಟೀರಿಯಾಗಳು ಸಂತಾನೋತ್ಪತ್ತಿ ಟ್ರಾಕ್ ನಲ್ಲಿರುವುದು ಕೂಡ ಕೆಟ್ಟ ಪರಿಣಾವನ್ನು ಉಂಟು ಮಾಡುತ್ತದೆ. ಈ ಬ್ಯಾಕ್ಟೀರಿಯಾಗಳು (ಉದಾಹರಣೆಗೆ ಮೈಕೋಪ್ಲಾಸ್ಮಾ ಹೋಮಿನಿಸ್ ಮತ್ತು ಯುರೇಪ್ಲಾಸ್ಮಾ ಯುರಿಯಲಿಟಿಕಮ್) ಜನನಾಂಗದ ಪ್ರದೇಶಗಳಲ್ಲಿ ವಾಸಿಸುತ್ತವೆ ಮತ್ತು ಗರ್ಭಪಾತಗಳ ಅಪಾಯವನ್ನು ಹೆಚ್ಚಿಸಬಹುದು. ಯಾವಾಗ ಈ ಬ್ಯಾಕ್ಟೀರಿಯಾಗಳಿಂದ ಸೋಂಕು ಹರಡುತ್ತದೆಯೋ ಆಗ ಎಂಡೊಮೆಟ್ರಿಯಮ್ ಊತವು ಭ್ರೂಣವನ್ನು ಅಭಿವೃದ್ಧಿಪಡಿಸುವುದನ್ನು ತಡೆಯುತ್ತದೆ. ಈ ಸೋಂಕಿಗೆ ಆಂಟಿ ಬಯೋಟಿಕ್ಸ್ ಗಳ ಮುಖಾಂತರ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಆನಾರೋಗ್ಯಕಾರಿ ಜೀವನಶೈಲಿಯೂ ಕೂಡ ನೀವು ಗರ್ಭಧರಿಸುವ ಸಂದರ್ಬದಲ್ಲಿ ನಿಮ್ಮನ್ನು ಸಮಸ್ಯೆಗೆ ದೂಡಬಹುದು.. ಯಾವಾಗಲೂ ನಿಮ್ಮ ಗರ್ಭಧಾರಣೆ ಯಶಸ್ವಿಯಾಗದಂತೆ ಮಾಡುವ ಸಾಧ್ಯತೆಗಳಿರುತ್ತದೆ. ಸ್ಮೋಕಿಂಗ್ ಮಾಡುವವರಲ್ಲಿ ಗರ್ಭಪಾತದ ಸಾಧ್ಯತೆಗಳು ಧೂಮಪಾನ ಮಾಡದವರಿಗಿಂತ ಹೆಚ್ಚಿರುತ್ತದೆ. ನಿಕೋಟಿನ್ ಅಂಶವು ಯಾವಾಗ ಪ್ಲಾಸೆಂಟಾ ಮುಖಾಂತರ ಪ್ರವಹಿಸಲ್ಪಡುತ್ತದೆಯೋ ಆಗ ಭ್ರೂಣದ ಬೆಳವಳಿಗೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಅರ್ಥಾತ್ ಭ್ರೂಣಕ್ಕೆ ರಕ್ತಸಂಚಾರವಾಗುವುದಲ್ಲಿ ಯಡವಟ್ಟು ಸಂಭವಿಸುತ್ತದೆ. ಅತಿಯಾಗಿ ಡ್ರಿಂಕ್ಸ್ ಮಾಡುವವರಲ್ಲೂ ಕೂಡ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಗರ್ಭಪಾತದ ಮೊದಲ ಚಿಹ್ನೆ ಎಂದರೆ ಅತಿಯಾದ ನೋವು ಮತ್ತು ಅಧಿರವಾಗಿ ರಕ್ತಸ್ರಾವವಾಗುವುದೇ ಆಗಿದೆ. ನೀವು ಈ ರೀತಿಯ ಗರ್ಭಪಾತವಾಗುವುದನ್ನು ಗಮನಿಸಿದರೆ, ಆದಷ್ಟು ಬೇಗನೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.
OSCAR-2019
ಹಾಸನ, ಆಗಸ್ಟ್ 23: ನಗರದ ಸತ್ಯಮಂಗಲ, ಚನ್ನಪಟ್ಟಣ ಹಾಗೂ ಹುಣಸಿನಕೆರೆಗಳ ಅಭಿವೃದ್ಧಿ ಕುರಿತಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಲಭ್ಯವಿರುವ ಅನುದಾನ ಬಳಸಿ ಮೂರು ಕೆರೆಗಳಿಗೆ ನೀರು ತುಂಬಿಸಲು ಇರುವ ಯೊಜನೆ, ಹಣಕಾಸು ಜಲಮೂಲಗಳ ಹಾಗೂ ಮಳೆ ನೀರು ಸಂಗ್ರಹಕ್ಕಿರುವ ಅಡೆತಡೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಹೇಮಾವತಿ ನದಿಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ನೀರಿನ ಪೈಪ್ ಲೈನ್‍ಗೆ ಸ್ವಲ್ಪ ಹೆಚ್ಚುವರಿ ವೆಚ್ಚಬರಿಸಿ ಒಂದು ಭಾರಿ ಚನ್ನಪಟ್ಟಣ ಕೆರೆಗೆ ನೀರು ತುಂಬಿಸಬಹುದಾಗಿದೆ. ಹಾಗಾಗಿ ಆದಷ್ಟು ಶೀಘ್ರವಾಗಿ ಈ ಕಾರ್ಯ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿಗಳು ನೀರಾವರಿ ಇಲಾಖೆಯ ಅಭಿಯಂತರರುಗಳಿಗೆ ಸೂಚನೆ ನೀಡಿದರು. ಈಗಾಗಲೇ 36 ಕೋಟಿ ರೂಪಾಯಿ ಅನುದಾನ ಲಭ್ಯವಿದ್ದು, ಸದರಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಚನ್ನಪಟ್ಟಣ ಕೆರೆಗಳಿಗೆ ನೀರು ತುಂಬಿಸಿ ಸೌಂದರ್ಯವೃದ್ಧಿ ಮಾಡಬೇಕಿದೆ. ಚನ್ನಪಟ್ಟಣ ಕೆರೆಯ ಹೂಳು ತೆಗೆಯುವ ಕಾರ್ಯದ ಜವಾಬ್ದಾರಿಯನ್ನು ಬೃಹತ್ ನೀರಾವರಿ ಇಲಾಖೆ ವಹಿಸಿಕೊಂಡಿದೆ. ಆದಷ್ಟು ಬೇಗ ಅದನ್ನು ಪೂರ್ಣಗೊಳಿಸಿ ಹೇಮಾವತಿ ನದಿಯಿಂದ ನೀರು ತುಂಬಿಸುವ ಕೆಲಸ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು. ಸತ್ಯಮಂಗಲ ಮತ್ತು ಹುಣಸಿನಕೆರೆಗಳಿಗೆ ನೀರು ತುಂಬಿಸುವ ಹಾಗೂ ಅಭಿವೃದ್ಧಿಪಡಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು. ಆದರೆ, ಲಭ್ಯವಿರುವ ಅನುದಾನದಲ್ಲಿ ಎಲ್ಲಾ ಅಭಿವೃದ್ಧಿ ಏಕಕಾಲದಲ್ಲಿ ಸಾಧ್ಯವಿಲ್ಲದ ಕಾರಣ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು. ಹಸಿರು ಭೂಮಿ ಪ್ರತಿಷ್ಟಾನದ ಪ್ರಮುಖರಾದ ಆರ್.ಪಿ ವೆಂಕಟೇಶ್ ಮೂರ್ತಿಯವರು ಮಾತನಾಡಿ ನಗರದ ಅಂತರ್ಜಲವೃದ್ಧಿಗೆ ಚನ್ನಪಟ್ಟಣ ಕೆರೆ ಜೊತೆಗೆ ಸತ್ಯಮಂಗಲ ಹುಣಸಿನಕೆರೆಗಳು ತುಂಬಬೇಕಿದೆ. ಯಗಚಿ ಜಲಾಶಯದಿಂದ ಹುಣಸಿನಕೆರೆ ಮೂಲಕ ಸತ್ಯಮಂಗಲ ಕೆರೆಯನ್ನು ತುಂಬಿಸಬಹುದು. ಇದೇ ರೀತಿ ನಗರ ಸಭೆಯ ಜಲಮೂಲದ ಮೂಲಕ ಹುಣಸಿನಕೆರೆ ತುಂಬಿಸಬೇಕು ಎಂದರು. ಹುಣಸಿನಕೆರೆಗೆ ಕೊಳಚೆ ನೀರು ಸೇರ್ಪಡೆ ತಡೆ ಹಾಗೂ ಇತರೆ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಕೈಗೊಳ್ಳಲಿದೆ ಎಂದರು. ಚನ್ನಪಟ್ಟಣ ಕೆರೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರದೇಶದ ಜೊತೆಗೆ ಪಕ್ಕದಲ್ಲಿ ಇರುವ 160 ಎಕರೆ ಖಾಲಿಜಾಗದ ವ್ಯಪ್ತಿಯೊಳಗಿರುವ ಮತ್ತು ಕೆರೆಯಲ್ಲಿ ನೀರು ತುಂಬುವ ಸುತ್ತ ಮುತ್ತಲ ಪ್ರದೇಶವನ್ನು ಸೌಂದರ್ಯಭಿವೃದ್ಧಿಗೊಳಿಸಬೇಕು ಎಂದು ಮನವಿ ಮಾಡಿದರು. ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರೋ. ಯೊಗೇಂದ್ರ ಅವರು ನಗರದ ಮಳೆ ನೀರು ಹರಿವಿನ ಮಾರ್ಗ ಪಥ ಸರಿಪಡಿಸುವ ಮೂಲಕ ಹೇಗೆ ಸತ್ಯಮಂಗಲ ಕೆರೆಗೆ ನೈಸರ್ಗಿಕವಾಗಿ ನೀರು ತುಂಬಿಸಲು ಸಾಧ್ಯ ಎಂಬುದನ್ನು ವಿವರಿಸಿದರು. ನಗರ ಸಭೆ ಆಯುಕ್ತರಾದ ಬಿ.ಎ. ಪರಮೇಶ್ ಅವರು, ಹಾಲಿ ನಗರದ ನೀರು ಪೂರೈಕೆಗೆ ಅನುಷ್ಠಾನಗೊಳ್ಳುತ್ತಿರುವ ಅವೃತ ಯೋಜನೆಯಲ್ಲಿ ಸಣ್ಣ ಮಾರ್ಪಾಡು ಮಾಡುವ ಮೂಲಕ ಚನ್ನಪಟ್ಟಣ ಹಾಗೂ ಹುಣಸಿನಕೆರೆಗಳಿಗೆ ನೀರು ತುಂಬಿಸಬಹುದಾಗಿದೆ. ಹೆಚ್ಚುವರಿ ವೆಚ್ಚವನ್ನು ನಗರಸಭೆ ಅಥವಾ ಇನ್ನಾವುದಾದರು ಲಭ್ಯ ಅರ್ಥಿಕ ಮೂಲದಿಂದ ಭರಿಸಬಹುದಾಗಿದೆ ಎಂದು ಅಬಿಪ್ರಾಯ ಪಟ್ಟರು. ಎಲ್ಲರ ಅನಿಸಿಕೆ ಆಲಿಸಿದ ಜಿಲ್ಲಾಧಿಕಾರಿಯವರು, ತ್ರಿವಳಿ ಕೆರೆಗಳ ಅಭಿವೃದ್ದಿ ನಗರದ ಜನತೆಯ ಬಹುದಿನಗಳ ಬೇಡಿಕೆ. ಈಗ 20 ಲಕ್ಷ ರೂಪಾಯಿ ಕೆರೆಗಳ ಅಭಿವೃದ್ದಿಗೆ ಹಣ ಒದಗಿಸಲಾಗಿದೆ. ಅಲ್ಲದೆ ಚನ್ನಪಟ್ಟಣ ಕೆರೆ ಸೌಂದರ್ಯಭಿವೃದ್ದಿಗೆ ಪ್ರತ್ಯೇಕ ಆವಕಾಶಗಳಿವೆ ಎಲ್ಲವನ್ನು ಬಳಸಿ ಆದಷ್ಟು ನಗರದ ಅಂರ್ತಜಲ ವೃದ್ದಿಗೆ ಪ್ರಯತ್ನಿಸಲಾಗುವುದು ಎಂದರು. ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕಾರ್ಯಪ್ರವೃತರಾಗಬೇಕು ಎಂದು ಅವರು ಹೇಳಿದರು. ಹಂದಿನ ಕೆರೆಗೆ ನೀರು :ಯಗಚಿ ಜಲಾಶಯದ ನಾಲೆಗಳ ದುರಸ್ಥಿ ಕಾರ್ಯ ನಡೆಯುತ್ತಿದೆ ಅದು ಮುಗಿದ ಕೂಡಲೆ ಹಂದಿನ ಕೆರೆಗೆ ನೀರು ಪೂರೈಕೆಯಾಗಲಿದೆ. ಆ ಮೂಲಕ ಹಾಲುವಾಗಿಲು ಸತ್ಯಮಂಗಲ ಕೆರೆಗಳಿಗೆ ನೀರು ಪೂರೈಕೆಯಾಗಲಿದೆ. ಈ ಬಗ್ಗೆ ಯಗಚಿ ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು. ಹುಣಸಿನಕೆರೆಗೆ ಭೇಟಿ: ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿಯವರು ಅಧಿಕಾರಿಗಳೊಂದಿಗೆ ಇಂದು ಹುಣಸಿನಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಸಭೆ ಆಯುಕ್ರರಾದ ಬಿ.ಎ. ಪರಮೇಶ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೃಷ್ಣ ಮೂರ್ತಿ ಮತ್ತಿತರರು ಹಾಜರಿದ್ದರು.
OSCAR-2019
ಕೊಲಂಬೊ: ಅಂಗಳದಲ್ಲಿ ಎದುರಾದಾಗ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಮಹಾ ವೈರಿಯಾಗಿ ಕಾಣಿಸಿಕೊಳ್ಳುವ ಶ್ರೀಲಂಕಾದ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಕಣ್ಣರಳಿಸಿಕೊಂಡು ನುಗ್ಗಿಬಂದು ಚೆಂಡನ್ನು ಎಸೆದಾಗ ಭಯವಾಗುವುದು ಸಹಜ. ಆದರೆ ಅಂಗಳದಿಂದ ಹೊರಗೆ ಇದ್ದಾಗ ಸಿಂಹಳೀಯರ ನಾಡಿನ ನೆಚ್ಚಿನ ‘ಮುರಳಿ’ ಎಲ್ಲರಿಗೂ ಅಚ್ಚುಮೆಚ್ಚಿನ ಸ್ನೇಹಿತ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಶ್ರೇಯ ಹೊಂದಿರುವ ಮುರಳಿಯನ್ನು ಇದೇ ಕಾರಣಕ್ಕಾಗಿ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಪಾಲ್ ಕಾಲಿಂಗ್‌ವುಡ್ ಅವರು ‘ನನ್ನ ಗೆಳೆಯ’ ಎಂದು ಕರೆದಿದ್ದು. ಸದಾ ನಗುನಗುತ್ತಾ ಉತ್ಸಾಹದಿಂದ ಎದುರಾಳಿ ತಂಡದ ಆಟಗಾರರನ್ನು ಕೂಡ ಹೆಗಲ ಮೇಲೆ ಕೈಹಾಕಿ ಮಾತನಾಡಿಸುವ ಲಂಕಾದ ಬೌಲರ್ ಎಂದರೆ ಪಾಲ್‌ಗೆ ಭಾರಿ ಗೌರವ. ಭಾರತ ತಂಡದ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲಿ ಮಾಡಿದಂಥ ಅದ್ಭುತ ಸಾಧನೆಯನ್ನು ಶ್ರೀಲಂಕಾ ಸ್ಪಿನ್ನರ್ ಮುರಳಿ ಬೌಲಿಂಗ್ ವಿಭಾಗದಲ್ಲಿ ಮಾಡಿದ್ದಾರೆ ಎನ್ನುವುದು 34 ವರ್ಷ ವಯಸ್ಸಿನ ಕಾಲಿಂಗ್‌ವುಡ್ ಅಭಿಪ್ರಾಯ. ವಿಶ್ವಕಪ್ ಕ್ರಿಕೆಟ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಂಕಾ ತಂಡವನ್ನು ಎದುರಿಸಲಿರುವ ಇಂಗ್ಲೆಂಡ್ ತಂಡದವರು ಗುರುವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಒಬ್ಬೊಬ್ಬ ಆಟಗಾರನನ್ನು ಮಾತನಾಡಿಸುವುದಕ್ಕೆ ಅವಕಾಶ ಸಿಗುವಂತೆ ಮಾಡಿದ್ದ ‘ಮುಕ್ತ ಮಾಧ್ಯಮ ಗೋಷ್ಠಿ’ಯಲ್ಲಿ ಹಾಜರಿದ್ದ ಕಾಲಿಂಗ್‌ವುಡ್ ಮುಂದೆ ಹೋಗಿ ಕುಳಿತಾಗ ಹರ್ಷಚಿತ್ತದಿಂದಲೇ ಅವರು ಮಾತಿಗಿಳಿದರು. ಪಾಲ್ ತಮ್ಮ ತಂಡದ ಕುರಿತು ಆಡಿದ ಮಾತುಗಳಿಗಿಂತ ಆತಿಥೇಯ ದೇಶದ ಹಿರಿಯ ಸ್ಪಿನ್ನರ್ ಬಗ್ಗೆ ಆಡಿದ ಮಾತುಗಳೇ ಹೆಚ್ಚು. ಮುರಳಿ ಸಾಧನೆಯ ಎತ್ತರಕ್ಕೆ ಏರಿದ್ದರೂ ಅವರತ್ತ ನೋಡುವ ರೀತಿ ಬದಲಾಗಿಲ್ಲ ಎನ್ನುವ ಕಡೆಗೆ ಅವರ ಗಮನ ಸೆಳೆದಾಗ ‘ವಿಶ್ವ ಶ್ರೇಷ್ಠ ಸ್ಪಿನ್ನರ್ ಸಾಧನೆ ದೊಡ್ಡದು. ಅದನ್ನು ಅನುಮಾನದಿಂದ ನೋಡುವ ಅಗತ್ಯವಿಲ್ಲ. ಹಾಗೆ ಮಾಡುವುದು ಸೂಕ್ತವೂ ಅಲ್ಲ. ಏಕೆಂದರೆ ಸ್ವತಃ ಮುರಳಿ ತಮ್ಮ ಶೈಲಿಯಲ್ಲಿ ಯಾವುದೇ ಅನುಮಾನಾಸ್ಪದ ಅಂಶವಿಲ್ಲ ಎನ್ನುವುದನ್ನು ತಜ್ಞರಮುಂದೆಯೇ ಸಾಬೀತುಪಡಿಸಿದ್ದಾರೆ’ ಎಂದು ವಿವರಿಸಿದರು. ಶ್ರೀಲಂಕಾ ವಿರುದ್ಧ ಆಡಿದ ಹೆಚ್ಚಿನ ಪಂದ್ಯಗಳಲ್ಲಿ ನಮಗೆ ಭಯವಾಗಿ ಕಾಡಿದ್ದು ಮುರಳಿ. ಆದ್ದರಿಂದಲೇ ಅವರ ಬಗ್ಗೆ ಗೌರವವೂ ಇದೆ. ಕ್ರೀಸ್‌ನಲ್ಲಿ ಇದ್ದಾಗ ವೈರಿಯಂತೆ ಕಾಣುವ ಈ ಬೌಲರ್ ಹೋಟೆಲ್ ಪ್ರಾಂಗಣದಲ್ಲಿ ಸಿಕ್ಕರೆ ಹೃದಯಕ್ಕೆ ಹತ್ತಿರವಾದ ಗೆಳೆಯ ಎನಿಸುವುದು ವಿಶೇಷ. ಅಷ್ಟೊಂದು ಹೃದಯವಂತ ಆಟಗಾರರು ಹೆಚ್ಚಿಲ್ಲ ಎಂದು ಕೂಡ ಅವರು ಹೇಳಿದರು. ‘ಎಷ್ಟೆಲ್ಲಾ ಪರೀಕ್ಷೆಗಳನ್ನು ಮಾಡಿ, ತಪ್ಪಿಲ್ಲ ಎನ್ನುವ ಪ್ರಮಾಣ ಪತ್ರವನ್ನು ನೋಡಿದ ನಂತರವೂ ಈ ಬೌಲರ್ ಬಗ್ಗೆ ಕೆಲವರು ಇನ್ನೂ ಕಟುವಾಗಿ ಬರೆಯುತ್ತಾರೆ. ಅಂಥವರ ಮೇಲೆ ನನಗೂ ಕೋಪವಿದೆ. ಇನ್ನೂ ಅನುಮಾನವಿದ್ದರೆ ಮತ್ತೆ ಪರೀಕ್ಷೆಗೆ ಒಳಗಾಗಲು ಸಿದ್ಧವೆಂದು ಮುರಳಿ ಹೇಳುವಾಗ ಮತ್ತದೇ ಮಾತು ಆಡುವವರನ್ನು ಕಂಡಾಗ ಬೇಸರ ಆಗುತ್ತದೆ’ ಎಂದ ಕಾಲಿಂಗ್‌ವುಡ್ ಅವರು ಸಂಪೂರ್ಣವಾಗಿ ತಮ್ಮ ಬೆಂಬಲ ಮುರಳಿಗೆ ಎನ್ನುವಂತೆ ಮಾತು ಮುಂದುವರಿಸಿದರು. ‘ವಿಚಿತ್ರ ಬುದ್ಧಿಯ ಕೆಲವರ ಮಿದುಳಿನಿಂದಲೂ ಮುರಳಿ ಬೌಲಿಂಗ್ ಶೈಲಿ ಅನುಮಾನಾಸ್ಪದ ಎನ್ನುವ ಹುಳುವನ್ನು ಕಿತ್ತು ಹಾಕಬೇಕು. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಾನವ ದೇಹ ಚಲನಾ ಪರಿಣತರ ಸಮಿತಿಯಲ್ಲಿರುವ ಪ್ರೊ. ಬ್ರೂಸ್ ಎಲಿಯಟ್ ಅವರಿಗೇ ಇಲ್ಲದ ಅನಮಾನ ಬೇರೆಯವರಿಗೆ ಯಾಕೆ?’ ಎಂದು ಪಾಲ್ ಪರೋಕ್ಷವಾಗಿ ಆಸ್ಟ್ರೇಲಿಯಾದ ಮಾಧ್ಯಮಗಳ ಕಡೆಗೆ ತಮ್ಮ ಮಾತಿನ ಕಿಡಿ ಸಿಡಿಸಿದರು.
OSCAR-2019
ವಿಧಾನಸೌಧ: ನವೀಕರಣದ ಹೆಸರಲ್ಲಿ ವಿಧಾನಸೌಧದ ಕೊಠಡಿಗಳನ್ನು ಒಡೆಯುವುದನ್ನು ನಿಲ್ಲಿಸಬೇಕಿದ್ದರೆ, ಅದನ್ನು ಪಾರಂಪರಿಕ ಕಟ್ಟಡ ಎಂದು ಘೋಷಿಸುವ ಅಗತ್ಯವಿದೆ ಎಂದು ಪರಿಷತ್​ನ... ಬೆಂಗಳೂರು: ವಿಧಾನ ಪರಿಷತ್​ ಸಭಾಪತಿ ಸ್ಥಾನಕ್ಕಾಗಿ ಮುಂದುವರಿದಿದ್ದ ಗೊಂದಲವನ್ನು ಬಗೆಹರಿಸಲು ಜೆಡಿಎಸ್​ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಂದಾಗಿದ್ದು,... ಬೆಂಗಳೂರು: ವಿಧಾನ ಪರಿಷತ್​ನ ತಲಾ ಮೂರು ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ.76.8 ಮತದಾನವಾಗಿದ್ದು, ಆರು ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆ ಸೇರಿದೆ. ಒಟ್ಟು 2,75,123 ಮತದಾನದ ಹಕ್ಕು ಹೊಂದಿದ್ದರು.... ಚಾಮರಾಜನಗರ: ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೂ. 8ರಂದು ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಮಸ್ಟರಿಂಗ್ ಕಾರ್ಯ ನಡೆಯಿತು. ಬಳಿಕ ಚುನಾವಣೆ ಕಾರ್ಯಕ್ಕೆ ನಿಯೋಜಿತವಾಗಿರುವ... ಬೆಂಗಳೂರು: ಚಿಂತಕರ ಚಾವಡಿ ಎಂದೇ ಹೇಳಲಾಗುವ ಮೇಲ್ಮನೆಯ ಮೂರು ಶಿಕ್ಷಕರು ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆಯಲಿದೆ. ಜೂ. 8ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೂ ಮತದಾನ ನಡೆಯಲಿದೆ. ಚುನಾವಣಾ ಆಯೋಗ...
OSCAR-2019
ಬೆಂಗಳೂರು, ಮಾರ್ಚ್ 22: 2016ರ ಅಮೆರಿಕಾ ಚುನಾವಣೆ ಮತ್ತು ಬ್ರೆಕ್ಸಿಟ್ ವೇಳೆ 5 ಕೋಟಿಗೂ ಹೆಚ್ಚು ಫೇಸ್ಬುಕ್ ಬಳಕೆದಾರರ ಮಾಹಿತಿ ಖಾಸಗಿ ಕಂಪನಿಗೆ ಸೋರಿಕೆಯಾಗಿದೆ ಎಂಬ ವಿಚಾರ ಜಗತ್ತಿನಲ್ಲೆಲ್ಲಾ ಚರ್ಚೆಗೆ ಗ್ರಾಸವಾಗಿದೆ. ಭಾರತದಲ್ಲೂಈ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿವೆ. ಈ ಎಲ್ಲಾ ವಿವಾದಗಳ ಆಚೆಗೆ ಜನರು ಪ್ರಖ್ಯಾತ ಸಾಮಾಜಿಕ ಜಾಲತಾಣ ಫೇಸ್ಬುಕ್ ನಿಂದ ದೂರಸರಿಯಲು ಇಚ್ಛಿಸಿದ್ದಾರೆ. ಸಾಮಾನ್ಯ ಜನರು ತಮ್ಮ ಖಾತೆಗಳನ್ನು ಡಿಲೀಟ್ ಮಾಡಿ, ಅಮೂಲ್ಯ ಖಾಸಗಿ ಮಾಹಿತಿಗಳನ್ನು ಸಂರಕ್ಷಿಸುವತ್ತ ಗಮನ ಹರಿಸಿದ್ದಾರೆ. ನೀವು ಫೇಸ್ಬುಕ್ ನಲ್ಲಿರುವ ನಿಮ್ಮೆಲ್ಲಾ ಮಾಹಿತಿಗಳನ್ನು ತೆಗೆಯಲು ಇಚ್ಚಿಸಿದ್ದೀರಾ ಅಥವಾ ಕೇವಲ ಅದನ್ನು ಮುಚ್ಚಿಡುವುದು (ಹೈಡ್) ನಿಮ್ಮ ಉದ್ದೇಶವೇ? ಎಂಬುದನ್ನು ನೀವು ಮೊದಲು ನಿರ್ಧರಿಸಿಕೊಳ್ಳಬೇಕು. ಅಂದರೆ ನೀವು ಈ ಖಾತೆಗಳಿಗೆ ಮತ್ತೆ ಬರಬಹುದು. ಒಮ್ಮೆ ಖಾತೆಯನ್ನು ಡಿಯಾಕ್ಟಿವೇಟ್ ಮಾಡಿ ಮತ್ತೆ ಲಾಗ್ ಇನ್ ಆದರೆ, ಮೊದಲಿನಂತೆಯೇ ನಿಮ್ಮ ಖಾತೆ ತೆರೆಯುತ್ತದೆ. ಒಂದೇ ವ್ಯತ್ಯಾಸ ಏನು ಅಂದರೆ, ನೀವು ಡಿಯಾಕ್ಟಿವೇಟ್ ಆಗಿದ್ದ ಅವಧಿಯಲ್ಲಿ ನಿಮ್ಮ ಖಾತೆಯನ್ನು ಯಾರೂ ನೋಡಲು ಸಾಧ್ಯವಾಗುವುದಿಲ್ಲ. ಆದರೆ ನೀವು ಮತ್ತೆ ಲಾಗ್ ಇನ್ ಆಗುತ್ತಿದಂತೆ ಹಳೆಯದೆಲ್ಲಾ ಮತ್ತೆ ತೆರೆದುಕೊಳ್ಳಲಿದೆ. ಡಿಲೀಟ್ ಮಾಡುವುದೆಂದರೆ ನೀವು ಇಲ್ಲಿಯವರೆಗೆ ಫೇಸ್ಬುಕ್ ನಲ್ಲಿ ಹಾಕಿದ ಮಾಹಿತಿಗಳನ್ನು ಡಿಲೀಟ್ ಮಾಡುವುದು ಎಂದರ್ಥ. ಆದರೆ ನೀವು ಮೆಸೆಂಜರ್ ನಲ್ಲಿ ಕಳುಹಿಸಿದ ಮಾಹಿತಿಗಳನ್ನು ಇದು ಒಳಗೊಂಡಿರುವುದಿಲ್ಲ. ಅಂದರೆ ನೀವು ನಿಮ್ಮ ಫೇಸ್ಬುಕ್ ಖಾತೆ ಡಿಲೀಟ್ ಮಾಡಿದರೂ ಮೆಸೆಂಜರ್ ನಲ್ಲಿ ಕಳುಹಿಸಿದ ಸಂದೇಶಗಳು ಡಿಲೀಟ್ ಆಗುವುದಿಲ್ಲ. ಪೇಸ್ಬುಕ್ ನೀಡುವ ಮಾಹಿತಿಗಳ ಪ್ರಕಾರ ಡಿಲೀಟ್ ಪ್ರಕ್ರಿಯೆ ಆರಂಭಿಸಿದ ನಂತರ ನೀವು ಹಾಕಿದ ಫೋಟೋಗಳು, ಪೋಸ್ಟ್ ಗಳು, ಸ್ಟೇಟಸ್ ಮತ್ತು ಬ್ಯಾಕಪ್ ಸಿಸ್ಟಂನಲ್ಲಿ ಸಂಗ್ರಹವಾದ ಮಾಹಿತಿಗಳನ್ನು ಸಂಪೂರ್ಣ ಅಳಿಸಿಹಾಕಲು 90 ದಿನಗಳ ಸಮಯ ಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಅಮೂಲ್ಯ ಮಾಹಿತಿಗಳನ್ನು ತಾನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ, ಮತ್ತು ಸಿಗಲು ಬಿಡುವುದೂ ಇಲ್ಲ ಎನ್ನುತ್ತದೆ ಫೇಸ್ಬುಕ್. ನೆನಪಿಡಿ: ಮುಂದಿನ ದಿನಗಳಲ್ಲಿ ನಿಮ್ಮ ಮಾಹಿತಿಗಳು ಯಾರಿಗೂ ಸಿಗಬಾರದು ಎಂದಿದ್ದರೆ ನೀವು ನಿಮ್ಮ ಖಾತೆಯನ್ನು ಡಿಲೀಟ್ ಮಾಡುವುದೇ ಸೂಕ್ತ. ಹೀಗೊಂದು ಅವಕಾಶ ಫೇಸ್ಬುಕ್ ನಲ್ಲಿದೆ. ನೀವು ನಿಮ್ಮ ಖಾತೆಯನ್ನು ಡಿಲೀಟ್ ಮಾಡುವ ಮುನ್ನ ಎಲ್ಲಾ ಮಾಹಿತಿಗಳನ್ನೂ ಡೌನ್ಲೋಡ್ ಮಾಡಬಹುದು. 'ರಿಕ್ವೆಸ್ಟ್ ಅಕೌಂಟ್ ಡಿಲೀಶನ್' (Request account deletion) ಆಯ್ಕೆ ಮಾಡಿ. ಇದರ ಕೆಳಗೆಯೇ 'ಡಿಯಾಕ್ಟಿವೇಟ್ ಯುವರ್ ಅಕೌಂಟ್' (Deactivate your account) ಆಯ್ಕೆಯೂ ಇದೆ. ಇದನ್ನೂ ಆಯ್ದುಕೊಳ್ಳಬಹುದು.
OSCAR-2019
ನವದೆಹಲಿ, ಮಾರ್ಚ್ 27: ಇಡೀ ದೇಶವೇ ಎದುರು ನೋಡುತ್ತಿರುವ ಕರ್ನಾಟಕ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಒ. ಪಿ. ರಾವತ್ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಒಟ್ಟು ಮತದಾರರು, ಚುನಾವಣಾ ದಿನಾಂಕ, ಅಭ್ಯರ್ಥಿಗಳ ಖರ್ಚಿಗೆ ಮಿತಿ ನಿಗದಿ, ಮತಗಟ್ಟೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಪ್ರಮುಖ ವಿವರಗಳು ಇಲ್ಲಿವೆ. ಇದೇ ಮೇ 26ರಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಅವಧಿ ಕೊನೆಗೊಳ್ಳಲಿದೆ. ಅದಕ್ಕೂ ಮೊದಲು ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರಬೇಕಿದೆ. ಜನಸಂಖ್ಯೆಗೆ ಹೋಲಿಸಿದಾಗ ಕರ್ನಾಟಕದಲ್ಲಿ ಶೇಕಡಾ 72 ಮತದಾರರಿದ್ದಾರೆ. 2011ರ ಜನಗಣತಿಗೆ ಹೋಲಿಸಿದರೆ ಈ ಸಂಖ್ಯೆ ಸರಿಸುಮಾರು ಸರಿಯಾಗಿದೆ. ಲಿಂಗ ಅನುಪಾತವೂ ಜನಗಣತಿಯ ಲೆಕ್ಕಕ್ಕೆ ಸರಿಯಾಗಿದೆ ಎಂದು ಒಪಿ ರಾವತ್ ಹೇಳಿದ್ದಾರೆ. ಚುನಾವಣಾ ಆಯೋಗದ ಬಳಿ ಇರುವ ಗುರುತಿನ ಚೀಟಿಯಲ್ಲಿ ಶೇಕಡಾ 99.47 ಮತದಾರರ ಭಾವಚಿತ್ರಗಳಿವೆ. ಶೇಕಡಾ 97.46 ಮತದಾರರಿಗೆ ಭಾವಚಿತ್ರ ಸಹಿತ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಚುನಾವಣೆಗೂ 7 ದಿನ ಮೊದಲು ಮನೆಗಳಿಗೆ ಮತ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ. ಇದನ್ನೇ ದಾಖಲೆಯಾಗಿ ಉಪಯೋಗಿಸಿ ಮತದಾನ ಮಾಡಬಹುದು ಎಂದು ರಾವತ್ ಹೇಳಿದ್ದಾರೆ. ಪ್ರತಿ ಮನೆಗೂ ಮತದಾನ ಮಾರ್ಗದರ್ಶಿಯನ್ನು ನೀಡಲಾಗುತ್ತದೆ. ಇದು ಕನ್ನಡ ಮತ್ತು ಬೇಕಿದ್ದರೆ ಇಂಗ್ಲೀಷ್ ಭಾಷೆಯಲ್ಲೂ ಇರುತ್ತದೆ. ಈ ಚುನಾವಣೆಯಲ್ಲಿ 'ಆಕ್ಸೆಸಿಬಲ್ ಎಲೆಕ್ಷನ್' ಎಂಬ ಥೀಮ್ ಇಟ್ಟುಕೊಳ್ಳಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ವಿಶೇಷ ಚೇತನರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ. ನಗರ ಪ್ರದೇಶದ ಪ್ರತೀ ಕ್ಷೇತ್ರಗಳ 5 ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಣೆ ಮಾಡಲಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 450 ಮಹಿಳೆಯರೇ ನಿರ್ವಹಣೆ ಮಾಡುವ ಮತಗಟ್ಟೆಗಳಾಗಿವೆ. ಬಾರಿ ಸಂಪೂರ್ಣವಾಗಿ ವಿವಿಪ್ಯಾಟ್ ಹೊಂದಿರುವ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಗಳನ್ನು ಬಳಸಲಾಗುತ್ತದೆ. ಇದರಲ್ಲಿ ಪ್ರತೀ ಕ್ಷೇತ್ರದಲ್ಲಿ ಒಂದು ವಿವಿಪ್ಯಾಟ್ ಗಳ ಸ್ಲಿಪ್ ಲೆಕ್ಕ ಹಾಕಿ ಇವಿಎಂಗಳ ಜತೆ ತಾಳೆ ಮಾಡಲಾಗುತ್ತದೆ. ಈ ಬಾರಿ ಅಭ್ಯರ್ಥಿಗಳ ಭಾವಚಿತ್ರವನ್ನು ಇವಿಎಂಗಳಲ್ಲಿ ಪ್ರಕಟ ಮಾಡಲಾಗುತ್ತದೆ. ಇನ್ನು ಎಲೆಕ್ಟ್ರಾನಿಕ್ ಟ್ರಾನ್ಸಿಮಿಟೆಡ್ ಪೋಸ್ಟಲ್ ವೋಟ್ ವ್ಯವಸ್ಥೆಯನ್ನು ಸೇನೆ ಮತ್ತು ಸರಕಾರಿ ಸೇವೆಯಲ್ಲಿರುವವರಿಗೆ ನೀಡಲಾಗುತ್ತದೆ. ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರಲಿದೆ. ಸಂಪೂರ್ಣ ಕರ್ನಾಟಕಕ್ಕೆ ಇದು ಅನ್ವಯವಾಗಲಿದೆ. ಅಭ್ಯರ್ಥಿಗಳಿಗೆ ಮತ್ತು ಕೇಂದ್ರ ಸರಕಾರ ಘೋಷಣೆ ಮಾಡುವ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳಿಗೂ ಇದು ಅನ್ವಯವಾಗಲಿದೆ. ಪ್ರಚಾರಕ್ಕೆ ಪರಿಸರಕ್ಕೆ ಪೂರಕ ವಸ್ತುಗಳನ್ನು ಬಳಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಫ್ಲೆಕ್ಸ್, ಪಾಲಿಥೀನ್, ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಷೇಧ ಹೇರಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಲೌಡ್ ಸ್ಪೀಕರ್ ಬಳಕೆಗೆ ಚುನಾವಣಾ ಆಯೋಗ ತಡೆ ಹಾಕಿದೆ. ಶಿಕ್ಷಣ ಸಂಸ್ಥೆ, ಆಸ್ಪತ್ರೆ ಆವರಣದಲ್ಲಿ ಪ್ರಚಾರ ಮಾಡುವಂತಿಲ್ಲ. ಇನ್ನು ಚುನಾವಣಾ ಅಕ್ರಮಗಳು ಕಂಡು ಬಂದರೆ ಪರಿಶೀಲನೆಗೆ 'ಫೈಯಿಂಗ್ ಎಕ್ಸ್ ಪರ್ಟ್' ಇರಲಿದ್ದಾರೆ. ಇವರು ಜಿಪಿಎಸ್ ಹೊಂದಿದ್ದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ ಎಂದು ಚುನಾವಣಾ ಆಯುಕ್ತರು ಮಾಹಿತಿ ನೀಡಿದ್ದಾರೆ. ಇನ್ನು ದಾಖಲೆ ಇದ್ದ ಹಣವನ್ನು ಜಪ್ತಿ ಮಾಡುವುದಿಲ್ಲ. ದಾಖಲೆ ಇಲ್ಲದ ಹಣ ಮತ್ತು ಇತರ ವಸ್ತುಗಳನ್ನು ಮಾತ್ರ ವಶಕ್ಕೆ ಪಡೆಯುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರತೀ ಅಭ್ಯರ್ಥಿ ಗರಿಷ್ಠ 28 ಲಕ್ಷ ರೂಪಾಯಿಗಳನ್ನು ಚುನಾವಣೆಗೆ ಖರ್ಚು ಮಾಡಬಹುದು. ಪಕ್ಷಗಳಿಗೆ ಖರ್ಚಿಗೆ ಯಾವುದೇ ಮಿತಿ ಇಲ್ಲ. ಇದೇ ಮೊದಲ ಬಾರಿಗೆ ಮತದಾನ ಕೇಂದ್ರಗಳ ಸುತ್ತ ಸ್ಥಾಪಿಸಲಾದ ಬೂತ್ ಗಳ ಖರ್ಚುಗಳನ್ನು ಅಭ್ಯರ್ಥಿಗಳ ಖಾತೆಗೆ ಸೇರಿಸಲಾಗುತ್ತದೆ. ಕಳೆದ ಬಾರಿ ಅಂದರೆ 2013ರಲ್ಲಿ ಶೇಕಡಾ 71.45 ಮತದಾನ ನಡೆದಿತ್ತು. ಇದನ್ನು ಹೆಚ್ಚಿಸಲು ಒತ್ತು ನೀಡುವುದಾಗಿ ಚುನಾವಣಾ ಆಯುಕ್ತರು ಹೇಳಿದ್ದಾರೆ.
OSCAR-2019
ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಸಮೀಪದ ಕೆ.ಜಿ.ಹಬ್ಬನಕುಪ್ಪೆ ತರಗನ್ ಎಸ್ಟೇಟ್‌ನಲ್ಲಿ ಕಳೆದ ಹತ್ತು ದಿನದಿಂದ ಬೀಡುಬಿಟ್ಟಿರುವ ಹುಲಿ, ಹಸು ಮೇಲೆ ದಾಳಿ ಮಾಡಿ ಗಾಯಗೊಳಿಸಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಕಾವೆರಪ್ಪ ತಮ್ಮ ಹಸುವನ್ನು ಎಸ್ಟೇಟ್‌ನಲ್ಲಿ ಮೇಯಲು ಬಿಟ್ಟ ಸಮಯದಲ್ಲಿ ಹುಲಿ ದಾಳಿ ಮಾಡಿದೆ. ದಾಳಿಗೆ ಹೆದರಿದ ಹಸುವಿನ ಅರಚ್ಚಾಟ ಕೇಳಿ ಸ್ಥಳಕ್ಕೆ ಸ್ಥಳೀಯರು ತೆರಳುತ್ತಿದಂತೆ ಹುಲಿ ಪರಾರಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಹುಲಿಯ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಪರೀಶಿಲಿಸಿ ಶತಾಯಗತಾಯ ಹುಲಿ ಸೆರೆ ಹಿಡಿಯುವ ಎಲ್ಲ ಪ್ರಯತ್ನ ಮುಂದುವರೆಸುತ್ತೇವೆ ಎಂದು ಗ್ರಾಮಸ್ಥರಿಗೆ ತಿಳಿಸಿದರು. ಆದರೆ ಹುಲಿ ಅತೀ ಸೂಕ್ಷ್ಮ ಮತ್ತು ಬಲಿಷ್ಠ ಪ್ರಾಣಿಯಾಗಿದ್ದು.ಆದ್ದರಿಂದಲೇ ಹುಲಿ ಹೆಜ್ಜೆ ಕಂಡು ಹಿಡಿಯಬಹುದು ಎಂದು ತಿಳಿಸಿದರು.
OSCAR-2019
ಮೈಸೂರು,ನ.25- ಕರ್ನಾಟಕಕ್ಕೆ ಹಾಗೂ ಕನ್ನಡ ಭಾಷೆಗೆ ಮೈಸೂರನ್ನಾಳಿದ ಒಡೆಯರ ವಂಶಸ್ಥರು ಅತಿ ಹೆಚ್ಚು ಕೊಡುಗೆ ನೀಡಿದ್ದಾರೆ. ಇದೀಗ ನಗರದ ಮಹಾ ರಾಜ ಕಾಲೇಜು ಆವರಣದಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಆದರೆ ಇಂತಹ ಪ್ರಮುಖ ಸಮ್ಮೇಳನಕ್ಕೆ ಒಡೆಯರ ವಂಶಸ್ಥರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೃಷ್ಣರಾಜ ಒಡೆಯರ್, ಶ್ರೀ ಜಯಚಾಮರಾಜ ಒಡೆಯರ್ ಹೀಗೆ ಹಲವಾರು ರಾಜರು ಕನ್ನಡ ನಾಡು-ನುಡಿಗೆ ಅಪಾರ ಒತ್ತು ಕೊಟ್ಟಿದ್ದರು. ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡ ಮಾತೆ ಭುವನೇಶ್ವರಿ ದೇವಿಯ ಮಂದಿರವನ್ನು ಅರಮನೆ ಆವರಣದಲ್ಲಿ ನಿರ್ಮಾಣ ಮಾಡಲಾಗಿದೆ. ಎಷ್ಟೊಂದು ಕೊಡುಗೆ ನೀಡಿರುವ ಒಡೆಯರ ವಂಶಸ್ಥರನ್ನು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ನೀಡದೆ ಅವಮಾನ ಮಾಡಲಾಗಿದೆ ಎಂದು ಒಡೆಯರ ವಂಶಸ್ಥರ ಅಭಿಮಾನಿಗಳು ಸಮ್ಮೇಳನದ ವೇಳೆ ತೀವ್ರವಾಗಿ ಖಂಡಿಸಿದ್ದಾರೆ. ಇದು ಮೈಸೂರು ಜಿಲ್ಲಾಡಳಿತ ಮಾಡಿರುವ ಎಡವಟ್ಟು . ಒಡೆಯರ ವಂಶಸ್ಥರಿಗೆ ಹಾಗೂ ಕನ್ನಡ ಭಾಷೆಗೆ ಜಿಲ್ಲಾಡಳಿತ ಅವಮಾನ ಮಾಡಿದೆ ಎಂದು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. September 2, 2016 Sri Raghav Sachin, Tendulkar, Virat Kohli, ಮೆಕ್‌ಗ್ರಾತ್, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ನವದೆಹಲಿ, ಸೆ.1- ಕ್ರಿಕೆಟ್ ಇತಿಹಾಸದಲ್ಲಿ ಶತಕಗಳ ಶತಕ ಗಳಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಒಬ್ಬ ಶ್ರೇಷ್ಠ ಆಟಗಾರರಾಗಿದ್ದರೆ, ವಿರಾಟ್ ಕೊಹ್ಲಿ ಸಮರ್ಥ ಪ್ಲೇಯರ್ ಆಗಿದ್ದಾರೆ ಎಂದು ದುಬೈ,ಆ.31- ಇತ್ತೀಚೆಗೆ ಅಮೆರಿಕಾದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ರನ್ ಬರ ಅನುಭವಿಸಿದರೂ ಕೂಡ ಟೀಂ ಇಂಡಿಯಾದ ಉಪನಾಯಕ ವಿರಾಟ್ ಕೊಹ್ಲಿ ಟ್ವೆಂಟಿ-20 ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಪೋರ್ಟ್ ಆಫ್ ಸ್ಪೇನ್, ಆ.23- ರ್ಯಾಂ ಕಿಂಗ್ಗೋಸ್ಕರ ನಾವು ಕ್ರಿಕೆಟ್ ಆಡುವುದಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟೆಹರಾನ್, ಮೇ 2-ಪರ್ಷಿಯನ್ ಭಾಷೆಯ ಜೆಮ್ ಟೆಲಿವಿಷನ್ ಸಂಸ್ಥೆಯ ಸಂಸ್ಥಾಪಕ ಸಯೀದ್ ಕರೀಮಿ (45) ಮತ್ತು ಅವರ ಪಾಲುದಾರನನ್ನು ಟರ್ಕಿಯ ಇಸ್ತಾನ್‍ಬುಲ್‍ನಲ್ಲಿ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
OSCAR-2019
ಕುಂದಾಪುರ: ಉದಯವಾಣಿಯ ಕುಂದಾಪುರ ಕಛೇರಿಯು ನಗರದ ಮುಖ್ಯರಸ್ತೆಯ ಬಳಿ ಇರುವ ಶ್ರೀಸಾಯಿ ಸೆಂಟರ್‌ನ ಎರಡನೇ ಮಹಡಿಗೆ ಸ್ಥಳಾಂತರಗೊಂಡಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ನೂತನ ಕಚೇರಿಯನ್ನು ಉದ್ಘಾಟಿಸಿ ಶುಭಹಾರೈಸಿದರು. ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ನ ಸಿಇಒ ವಿನೋದ್‌ ಕುಮಾರ್‌, ಫೈನಾನ್ಸ್‌ ಡಿ.ಜಿ.ಎಂ ಸುದರ್ಶನ್‌ ಶೇರಿಗಾರ್‌, ರಾಧಾಕೃಷ್ಣ ಕೊಡವೂರು, ಕೃಷ್ಣಮೂರ್ತಿ, ಉದಯ ಆಚಾರ್‌ ಸಾಸ್ತಾನ, ಹರೀಶ್‌ ಜಾಲಾಡಿ, ವಿಶ್ವನಾಥ್‌, ರಾಘವೇಂದ್ರ ಪ್ರಭು, ಸಂತೋಷ್‌ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು. ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ. ನ ಮ್ಯಾಗಜೀನ್‌ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ರಾಮಚಂದ್ರ ಮಿಜಾರ್‌ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಹ ಉಪಾಧ್ಯಕ್ಷ ಆನಂದ ಕೆ. ವಂದಿಸಿದರು.
OSCAR-2019
ಭಾರತೀಯ ಜನತಾ ಪಕ್ಷದ ಮುಖಂಡ ಅನಂತ್ ಕುಮಾರ್ ಹೆಗಡೆ ಜೆಡಿಎಸ್ ಪಕ್ಷವನ್ನು ಪುಟಗೋಸಿ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಎಚ್.ಡಿ ಕುಮಾರಸ್ವಾಮಿ ಮಾನ ಮುಚ್ಚಿಕೊಳ್ಳಲು ಪುಟಗೋಸೀನೇ ಬೇಕು ಎಂದಿದ್ದರು. ಇದೀಗ ಮಂಡ್ಯದ ಯುವಕರ ತಂಡವೊಂದು ಅನಂತ್ ಕುಮಾರ್ ಹೆಗಡೆ ವಿರುದ್ಧ ನಾಳೆ ಪುಟಗೋಸಿ ಚಳವಳಿ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಜೆಡಿಎಸ್‌ಗೆ ಪುಟಗೋಸಿ ಎಂದಿದ್ದಕ್ಕೆ ಅಪಾರ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪುಟಗೋಸಿ ಚಳವಳಿಗೆ ಕರೆ ನೀಡಿದ್ದಾರೆ. ನಾಳೆ 100 ಕ್ಕೂ ಹೆಚ್ಚು ಪುಟಗೋಸಿ ಪೋಸ್ಟ್ ಮಾಡಲಿದೆ. ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವಿರುದ್ಧ ವಿನೂತನ ಚಳವಳಿಗೆ ಕರೆ ನೀಡಲಾಗಿದ್ದು, ಕರೆಗೆ ಜೆಡಿಎಸ್ ಅಭಿಮಾನಿಗಳು ಸ್ಪಂದಿಸುತ್ತಿದ್ದಾರೆ.
OSCAR-2019
ಹಿಂದಿನ ವರ್ಷ ಭಾರೀ ಸುದ್ದಿ ಮಾಡಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆ. ಡಿಸೆಂಬರ್ 11ರಂದು ಇಟಲಿಯಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದ್ರೆ ರೋಮ್ ನಲ್ಲಿರುವ ಭಾರತೀಯ ರಾಯಭಾರಿಗಳಿಗೆ ಈ ಬಗ್ಗೆ ಮಾಹಿತಿಯಿರಲಿಲ್ಲ. ಇದು ಮದುವೆ ನೋಂದಣಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಇನ್ನೊಮ್ಮೆ ಕೊಹ್ಲಿ-ಅನುಷ್ಕಾ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗುವ ಸಾಧ್ಯತೆಯಿದೆ. ಪಂಜಾಬ್-ಹರ್ಯಾಣ ಹೈಕೋರ್ಟ್ ವಕೀಲ ಹಾಗೂ ಅಂಬಾಲ ನಿವಾಸಿ ಹೇಮಂತ್ ಕುಮಾರ್ ಡಿಸೆಂಬರ್ 13ರಂದು ಆರ್ ಟಿ ಐ ಸಲ್ಲಿಸಿದ್ದರು. ಇದಕ್ಕೆ ಜನವರಿ 4ರಂದು ರೋಮ್ ನಲ್ಲಿರುವ ಭಾರತೀಯ ರಾಯಭಾರಿಗಳು ಉತ್ತರ ನೀಡಿದ್ದಾರೆ. ಇದ್ರ ಪ್ರಕಾರ ನಿಯಮಾನುಸಾರ ವಿರಾಟ್ ಹಾಗೂ ಅನುಷ್ಕಾ ಭಾರತೀಯ ರಾಯಭಾರಿ ಕಚೇರಿಯಲ್ಲಿರುವ ಅಧಿಕಾರಿಗಳಿಗೆ ಮದುವೆ ಬಗ್ಗೆ ಮಾಹಿತಿ ನೀಡಿಲ್ಲ. ವಿದೇಶದಲ್ಲಿ ಮದುವೆಯಾಗುವಾಗ ರಾಯಭಾರಿ ಕಚೇರಿಗೆ ಮಾಹಿತಿ ನೀಡುವುದು ಅತ್ಯಗತ್ಯ. ವಿರಾಟ್ ಹಾಗೂ ಅನುಷ್ಕಾ ಮಾಹಿತಿ ನೀಡಿಲ್ಲ. ಇದ್ರಿಂದಾಗಿ ಮದುವೆ ನೋಂದಣಿಗೆ ತೊಂದರೆಯಾಗುವ ಸಾಧ್ಯತೆಯಿದೆ. ವಿರಾಟ್-ಅನುಷ್ಕಾ ಭಾರತದ ಯಾವ ಜಾಗದಲ್ಲಿ ನೆಲೆಸ್ತಾರೋ ಆ ರಾಜ್ಯದ ನಿಯಮಾನುಸಾರ ಮದುವೆ ನೋಂದಣಿ ಮಾಡಬೇಕಾಗುತ್ತದೆ. ಇದಕ್ಕಾಗಿ ಇನ್ನೊಮ್ಮೆ ರಿಜಿಸ್ಟರ್ ಮ್ಯಾರೇಜ್ ಆಗುವ ಅನಿವಾರ್ಯತೆ ಎದುರಾಗಬಹುದು ಎಂದು ಹೇಮಂತ್ ಹೇಳಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಮುಂಬೈ ನಿವಾಸದ ಝಲಕ್ ಒಂದನ್ನು ಅಭಿಮಾನಿಗಳ ಮುಂದೆ ಪ್ರದರ್ಶಿಸಿದ್ದಾರೆ. ಮುಂಬೈನ ಗಗನಚುಂಬಿ ಕಟ್ಟಡಗಳ ಹಿನ್ನೆಲೆ ಇರುವ ಸೆಲ್ಫಿ ಒಂದನ್ನು ಪೋಸ್ಟ್ ಮಾಡಿದ್ದಾರೆ. ಮನೆಯಲ್ಲೇ ಕುಳಿತು ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು, ಅದಕ್ಕಾಗಿ ಬೇರೆಡೆಗೆ ಹೋಗಬೇಕಾಗಿಲ್ಲ ಅಂತಾ ಬರೆದುಕೊಂಡಿದ್ದಾರೆ. ಕಳೆದ ಡಿಸೆಂಬರ್ 11ರಂದು ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರನ್ನು ಮದುವೆಯಾಗಿದ್ದರು. ಮದುವೆ ನಂತರ ವಿರುಷ್ಕಾ ಜೋಡಿ ಮುಂಬೈನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಕೊಹ್ಲಿ ಕೂಡ ಅಲ್ಲಿಗೇ ಶಿಫ್ಟ್ ಆಗಿದ್ದಾರೆ. ಇತ್ತೀಚೆಗಷ್ಟೆ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೊಹ್ಲಿ, ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಕೊಹ್ಲಿ ಆಡುತ್ತಿಲ್ಲ. ಕ್ರಿಕೆಟ್ ನಿಂದ ಬ್ರೇಕ್ ಸಿಕ್ಕಿರೋದ್ರಿಂದ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ತಿದ್ದಾರೆ.
OSCAR-2019
ಗುರುದ್ವಾರ ಬೀದರ ಸಿಖ್ಖರ ಪವಿತ್ರ ಸ್ಥಳಗಳಲ್ಲೊಂದಾಗಿದೆ. ಈ ಸ್ಥಳವು ಪ್ರತಿ ವರ್ಷವೂ ದೇಶದ ನಾನಾ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶೇಷವಾಗಿ ನವೆಂಬರ್ ಮತ್ತು ಮಾರ್ಚ್ ತಿಂಗಳಲ್ಲಿ ಆಗಮಿಸುತ್ತಾರೆ. ಸ್ಥಳೀಯ ಐತಿಹ್ಯದ ಪ್ರಕಾರ ಗುರುನಾನಕರು ಇಲ್ಲಿಗೆ ಭೇಟಿಕೊಟ್ಟಾಗ ಜನರು ಕ್ಷಾಮದಿಂದ ಬಳಲುತ್ತಿದ್ದರು. ಸ್ಥಳೀಯರ ಅಳಲನ್ನು ಆಲಿಸಿದ ಗುರುನಾನಕರು ಪವಾಡದ ಮೂಲಕ ತಮ್ಮ ಕಾಲಿನಿಂದ ಕಲ್ಲನ್ನು ಸರಿಸುವುದರೊಂದಿಗೆ ಕೆಂಪುಬಂಡೆಯೊಳಗಿನಿಂದ ನೀರು ಚಿಮ್ಮುವಂತೆ ಮಾಡಿದರು. ಈ ದಿನದವರೆಗೂ ಸ್ಫಟಿಕಸ್ಪಷ್ಟ ನೀರು ಹರಿಯುತ್ತಿದೆ. ಈ ನೀರನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳನ್ನು ಗುಣಮುಖವಾಗುವುದೆಂಬ ನಂಬಿಕೆಯಿದೆ. ಸ್ಥಳೀಯ ಸಾಂಪ್ರದಾಯಿಕ ಮಾತುಗಳ ಪ್ರಕಾರ, ಈ ದೇವಾಲಯದಲ್ಲಿ ಶ್ರೀ ರಾಮನು ಲಂಕೆಯಿಂದ ಹಿಂದಿರುಗಿದ ಸಮಯದಲ್ಲಿ ಸ್ಥಾಪಿಸಿದ ಶಿವಲಿಂಗ ವಿಗ್ರಹವಿದೆ. ಕಣಿವೆಯಲ್ಲಿರುವ ದೇವಾಲಯದ ಸ್ಥಳವು ಕಣ್ಣುಗಳಿಗೆ ಸಮ್ಮೋಹನಗೊಳಿಸುವಂತಿದೆ. ಶಿವರಾತ್ರಿ ಉತ್ಸವದ ಸಮಯದಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ದೇವಾಲಯದ ಮುಂದೆ ಒಂದು ನೈಸರ್ಗಿಕ ಕಾರಂಜಿ ಕೊಳದೊಳಗೆ ಹರಿಯುತ್ತದೆ. ಈ ಸ್ಥಳೀಯರ ನಂಬಿಕೆಯ ಪ್ರಕಾರ ಶಕ್ತಿಯುತವಾದ ನರಸಿಂಹ ದೇವರು ಸುಮಾರು 300 ಮೀಟರ್ ಅಂತರದ ಗುಹೆಯೊಳಗಡೆ ಇದ್ದಾರೆ. ಭಕ್ತರು ದರ್ಶನವನ್ನು ಹೊಂದಲು ಎದೆಯ ಎತ್ತರದ ನೀರಿನಿಂದ ಗುಹೆಯೊಳಗೆ ಕ್ರಮಿಸಬೇಕಾಗುತ್ತದೆ. ಈ ಗುಹೆಯ ಪ್ರವೇಶವು ಮೇಲ್ಛಾವಣಿಯ ಮೇಲೆ ಕುಳಿತಿರುವ ಬಾವಲಿಗಳೊಂದಿಗೆ ರೋಮಾಂಚಕ ಅನುಭವವನ್ನು ನೀಡುತ್ತದೆ ಆದರೆ ಭಕ್ತರಿಗೆ ಅವರು ಯಾವುದೇ ಹಾನಿ ಮಾಡಲಾರವು. ಯುವ ಐಎಎಸ್ ಅಧಿಕಾರಿ ಶ್ರೀ ಎಂ. ಮಹೇಶ್ವರ ರಾವ್ ಅವರು 1999 ರಲ್ಲಿ ಸಹಾಯಕ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ದೇವಾಲಯದ ಪ್ರಭಾರವನ್ನು ವಹಿಸಿದ್ದರು. ಇವರ ಮತ್ತು ದೇವಾಲಯದ ಸಮಿತಿಯ ಆಸಕ್ತಿಯಿಂದ ಗುಹೆಯು ಹವಾನಿಯಂತ್ರಿತ ಮತ್ತು ವಿದ್ಯುಚ್ಛಕ್ತಿ ಪಡೆಯಿತು. ಬೀದರ ಪಟ್ಟಣದಿಂದ ಬೀದರ ಹೈದರಾಬಾದ್ ಹೆದ್ದಾರಿ ಮೇಲೆ 6 ಕಿಮೀ ದೂರದಲ್ಲಿರುವ ಪರಿಸರ ಪ್ರವಾಸೋದ್ಯಮ ಕೇಂದ್ರವಿದೆ. ಇದನ್ನು ದೇವ ದೇವ ವನ ಎಂದು ಹೆಸರಿಸಲಾಗಿದೆ. ಇಲ್ಲಿ ಎರಡುನೂರಕ್ಕೂ ಹೆಚ್ಚು ಔಷಧೀಯ ಸಸ್ಯಗಳು ಇವೆ. ಈ ವನವು ಸಸ್ಯಗಳ ಅಸಾಂಪ್ರದಾಯಿಕ ದೇವಾಲಯವೆಂದು ನಂಬಲಾಗಿದೆ. ಹುಮನಾಬಾದಿನಲ್ಲಿರುವ ವೀರಭದ್ರೇಶ್ವರ ದೇವಾಲಯ ಮತ್ತು ಚಾಂಗಲೇರಾ ಹಳ್ಳಿಯಲ್ಲಿರುವ ವೀರಭದ್ರೇಶ್ವರ ದೇವಾಲಯ ಇವೆರಡು ಅತ್ಯಂತ ಪುರಾತನ ದೇವಾಲಯಗಳು. ಅನುಕ್ರಮವಾಗಿ ಜನೆವರಿ ಮತ್ತು ನವೆಂಬರ್ ತಿಂಗಳಿನಲ್ಲಿ ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಿಸುತ್ತವೆ. ವಾರ್ಷಿಕ ಜಾತ್ರಾ ಮತ್ತು ರಥೋತ್ಸವ ಜರಗುತ್ತದೆ. ಕ್ರಿ.ಶ. 1725 ರಲ್ಲಿ ನವೀಕೃತಗೊಂಡ ಹುಮನಾಬಾದಿನಲ್ಲಿರುವ ದೇವಾಲಯವು ಚಲಿಸುವ ಕಂಬಕ್ಕೆ ಹೆಸರುವಾಸಿಯಾಗಿದೆ. ಮಾಣಿಕಪ್ರಭು ದೇವಾಲಯದ ವಾರ್ಷಿಕ ಉತ್ಸವವು ಡಿಸೆಂಬರ್ ತಿಂಗಳಿನಲ್ಲಿ ಜರುಗುತ್ತದೆ. ಈ ಸಂಧರ್ಭದಲ್ಲಿ ರಾತ್ರಿ ಹೊತ್ತಿನಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ನಡೆಯುತ್ತದೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಈ ವರೆಗೆ ಭೀಮಸೇನ್ ಜೋಷಿ, ಜಕೀರ್ ಹುಸೇನ್ ಮತ್ತು ಇತರರು ಆಗಮಿಸಿರುತ್ತಾರೆ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಚಿದಂಬರ ಆಶ್ರಮ, ಶ್ರೀ ಸಿದ್ಧಾರೂಢ ಮಠ, (ಗುಂಪಾ) ಕ್ರಿ.ಶ. 1986 ರಲ್ಲಿ ಸ್ಥಾಪಿಸಿದ್ದಾರೆ. ಶ್ರೀ ಸಿದ್ಧಾರೂಢ ಪ್ರತಿಮೆಯ ಎರಡೂ ಕಡೆಗಳಲ್ಲಿ 12 ಜ್ಯೋತಿರ್ಲಿಂಗಗಳಿವೆ. ಇದು ಬೀದರಿನ ಮನ್ನಳ್ಳಿ ರಸ್ತೆಯಲ್ಲಿರುವ ದೇವಸ್ಥಾನ. ಇದನ್ನು ಗುಂಪಾ ಎಂದೂ ಕರೆಯುತ್ತಾರೆ. ಕಳೆದ ಮೂರು ದಶಕಗಳಿಂದ ಶ್ರೀ ಸಿದ್ಧಾರೂಢ ಮಠ (ಗುಂಪಾ) ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರವೆನಿಸಿದೆ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ವರ್ಷದ (ಜುಲೈ) ಶ್ರಾವಣ ಮಾಸ, ನವರಾತ್ರಿ, ಮತ್ತು ಪ್ರತಿ ಭಾನುವಾರದ ಸಂಜೆ ಪ್ರವಚನವನ್ನು ನೀಡುತ್ತಾರೆ. ಬಹಳಷ್ಟು ಭಕ್ತರು ಆಧ್ಯಾತ್ಮಿಕ ಹಸಿವನ್ನು ಹಿಂಗಿದ್ದಾರೆ. ಬೀದರನಲ್ಲಿ ಪವಿತ್ರ ಸ್ಥಳಗಳನ್ನು ಭೇಟಿ ಮಾಡುವ ಭೇಟಿದಾರರು / ಯಾವುದೇ ಭಕ್ತರು, ಈ ದೇವಾಲಯಕ್ಕೆ ಭೇಟಿ ನೀಡದಿದ್ದರೆ ಅವರ ಯಾತ್ರೆಯು ಅಪೂರ್ಣವಾಗುತ್ತದೆ. ಭಾರತದ ನಾನಾ ಭಾಗಗಳಿಂದ ಪ್ರತಿವರ್ಷ ಸಾವಿರಾರು ಭಕ್ತರು ಸದ್ಗುರು ಸಿದ್ದಾರೂಢ ಮತ್ತು ಶಿವಕುಮಾರ ಮಹಾಸ್ವಾಮಿಜಿ ಜಯಂತಿ ಆಚರಿಸಲು ಭೇಟಿ ನೀಡುತ್ತಾರೆ. ಈ ಜಯಂತಿಯು ನವೆಂಬರ್ ತಿಂಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.
OSCAR-2019
ರಕ್ಷಿತ್‌ ಶೆಟ್ಟಿ ಸ್ಟೈಲಿಶ್‌ ಬೈಕ್‌ವೊಂದರಲ್ಲಿ ಓಡಾಡುತ್ತಿದ್ದೆರ ಖಂಡಿತಾ ನಿಮ್ಮ ಕಣ್ಣು ಆ ಬೈಕ್‌ ಮೇಲೆ ಬಿದ್ದೇ ಬೀಳುತ್ತದೆ. "ಇದ್ಯಾವುದಪ್ಪಾ ಇಂಫೋರ್ಟೆಡ್‌ ಬೈಕ್‌' ಎಂದು ನೋಡುವ ಸರದಿ ನಿಮ್ಮದಾಗುತ್ತದೆ. ಆ ಮಟ್ಟಿನ ಬೈಕ್‌ವೊಂದು ರಕ್ಷಿತ್‌ ಬಳಿ ಇದೆ. ಎಲ್ಲಾ ಓಕೆ ಯಾವುದು ಈ ಬೈಕ್‌ ಎಂದು ನೀವು ಹತ್ತಿರ ಹೋಗಿ ನೋಡಿದರೆ ಟ್ಯಾಂಕ್‌ ಮೇಲೆ "ಸುಕರ್ಣ' ಎಂದು ಕಾಣುತ್ತದೆ. ಸುಕರ್ಣ ಯಾವ ಕಂಪೆನಿಯ ಬೈಕ್‌ ಎಂದು ನೀವು ತಲೆಕೆಡಿಸಿಕೊಳ್ಳುವುದು ಗ್ಯಾರಂಟಿ. ಅಷ್ಟಕ್ಕೂ ರಕ್ಷಿತ್‌ ಬಳಿ ಇರೋದು ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಬೈಕ್‌. ಅದನ್ನು ಅವರಿಗೆ ಬೇಕಾದಂತೆ ಸ್ಟೈಲಿಶ್‌ ಆಗಿ ರೆಡಿಮಾಡಿಸಿದ್ದಾರೆ. ನೀವು "ಕಿರಿಕ್‌ ಪಾರ್ಟಿ' ಸಿನಿಮಾ ನೋಡಿದ್ದರೆ ಅದರಲ್ಲಿ ರಕ್ಷಿತ್‌ ಬುಲೆಟ್‌ ಬೈಕ್‌ವೊಂದನ್ನು ಓಡಿಸುತ್ತಾರೆ. ಬುಲೆಟ್‌ನಲ್ಲಿ ಲಾಂಗ್‌ ರೈಡ್‌ ಹೋಗುವ ದೃಶ್ಯವಿದೆ. ಇತ್ತೀಚೆಗೆ ಆ ಬುಲೆಟ್‌ ಅನ್ನು ತಮಗೆ ಬೇಕಾದಂತೆ ಡಿಸೈನ್‌ ಮಾಡಿಸಿ, ಹೊಸ ಲುಕ್‌ ಕೊಟ್ಟಿದ್ದಾರೆ. ಎಲ್ಲಾ ಓಕೆ ಈ ಬೈಕ್‌ಗೆ ಯಾವ ಹೆಸರು ಕೊಡೋದೆಂದು ರಕ್ಷಿತ್‌ ಆಲೋಚಿಸುತ್ತಿದ್ದಾಗ ಅವರಿಗೆ ತೋಚಿದ್ದು ಸುಕರ್ಣ. ಆ ಹೆಸರು ಕೊಡಲು ಕಾರಣ ಕೂಡಾ "ಕಿರಿಕ್‌ ಪಾರ್ಟಿ' ಚಿತ್ರ. ಆ ಚಿತ್ರದಲ್ಲಿ ರಕ್ಷಿತ್‌ ಹೆಸರು ಕರ್ಣ ಎಂದು. ಆರಂಭದಲ್ಲಿ ತುಂಟ ವಿದ್ಯಾರ್ಥಿಯಾಗಿರುವ ಕರ್ಣ ಮುಂದೆ ಒಳ್ಳೆಯವನಾಗುತ್ತಾನೆ. ಅದೇ ಕಾರಣಕ್ಕೆ ತಮ್ಮ ಬೈಕ್‌ಗೆ "ಸುಕರ್ಣ' ಎಂದು ಹೆಸರಿಟ್ಟಿದ್ದಾರೆ ರಕ್ಷಿತ್‌. ಜೊತೆಗೆ ಬೈಕ್‌ ಟ್ಯಾಂಕ್‌ ಮೇಲೆ ಸಣ್ಣ ಅಕ್ಷರಗಳಲ್ಲಿ "ಕಿರಿಕ್‌ ಪಾರ್ಟಿ' ಎಂದು ಬರೆಯಲಾಗಿದೆ. ಸದ್ಯ ಈ ಬೈಕ್‌ ಅನೇಕರ ಗಮನ ಸೆಳೆಯುತ್ತಿರೋದಂತೂ ಸುಳ್ಳಲ್ಲ. ರಾಜರಾಜೇಶ್ವರಿ ನಗರದ ತಮ್ಮ ಕಚೇರಿ ಮುಂದೆ ಬೈಕ್‌ ನಿಲ್ಲಿಸಿದ್ದರೆ ಅದನ್ನು ನೋಡುವವರ, ಅದರ ಜೊತೆ ಫೋಟೋ ತೆಗೆಸಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅಂದಹಾಗೆ, ರಕ್ಷಿತ್‌ ಅವರ "ಅವನೇ ಶ್ರೀಮನ್ನಾರಾಯಣ' ಚಿತ್ರೀಕರಣ ಸೋಮವಾರದಿಂದ ಆರಂಭವಾಗಿದ್ದು, ಬಾಗಲಕೋಟೆಯಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ರಕ್ಷಿತ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಿತ್‌ಗೆ ನಾಯಕಿಯಾಗಿ ಸಾನ್ವಿ ಶ್ರೀವಾತ್ಸವ್‌ ಕಾಣಿಸಿಕೊಳ್ಳುತ್ತಿದ್ದು, ಮಿಕ್ಕಂತೆ ಅಚ್ಯುತ್‌ ಕುಮಾರ್‌, ಪ್ರಮೋದ್‌ ಶೆಟ್ಟಿ, ಬಾಲಾಜಿ ಮನೋಹರ್‌ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಚಿತ್ರವನ್ನು ಸಚಿನ್‌ ನಿರ್ದೇಶಿಸುತ್ತಿದ್ದು, ರಕ್ಷಿತ್‌ ಶೆಟ್ಟಿ, ಪುಷ್ಕರ್‌ ಮಲ್ಲಿಕಾರ್ಜುನಯ್ಯ ಮತ್ತು ಪ್ರಕಾಶ್‌ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಕರಮ್‌ ಚಾವ್ಲಾ ಅವರ ಛಾಯಾಗ್ರಹಣ ಮತ್ತು ಚರಣ್‌ರಾಜ್‌ ಅವರ ಸಂಗೀತವಿದೆ.
OSCAR-2019
ಇದರ ಬಗ್ಗೆ ಬರೆಯಬಾರದು ಎಂದು ತುಂಬಾ ಅಂದು ಕೊಂಡೆ. ಆದರೆ ಈ ವಾರದ ಹೈಲೈಟ್ ಅದೇ ಆಗಿದ್ದರಿಂದ, ಎಲ್ಲೆಲ್ಲೂ ಅದರ ಬಗ್ಗೆ ಚರ್ಚೆ… (ಪರ-ವಿರೋಧ) ಆಗುತ್ತಲಿದ್ದರಿಂದ let me write my two sentences ಅಂತ ಈ ಬರಹ. ವಿಷಯ ಅದೇ.. valentine’s day ! Google ಮಾಡುವುದರಿಂದ ಸಿಗದ ವಿಷಯವೇ ಇಲ್ಲ. ಅಲ್ಲಿ ನಾನು ಓದಿದ ವಿಷಯವನ್ನು ಇಲ್ಲಿ ಕನ್ನಡೀಕರಿಸಿ ಬರೆಯುವುದರಲ್ಲಿ ಅರ್ಥವೇ ಇಲ್ಲ. ಪರ, ವಿರೋಧ ಮಾತಾಡುವವರೆಲ್ಲರೂ ಒಮ್ಮೆ ಅದನ್ನು ಓದಿ ಬರಬೇಕು. ‘history of valentine’.. ಬಹಳ interesting ಆಗಿದೆ. ಕ್ರಿಸ್ತರು ಫೆಬ್ರವರಿ ತಿಂಗಳನ್ನು month of romance ಎಂದು ಸಂಭ್ರಮಿಸುತ್ತಾರೆ. ಹದಿನಾಲ್ಕನೇ ಫೆಬ್ರವರಿಯನ್ನು ರಾಜಾಜ್ಞೆಗೆ ವಿರುದ್ಧ ಸೈನಿಕರಿಗೆ ಮದುವೆ ಮಾಡಿಸಿದ ಸೇಂಟ್ ವಾಲೆಂಟೈನ್ ದಿನವನ್ನಾಗಿ ಆಚರಿಸುತ್ತಾರೆ. ಪಗಾಸ್ ಧರ್ಮದ ಪಾಲಕರಿಗೂ ಫೆಬ್ರವರಿ ತಿಂಗಳು ಮುಖ್ಯವಾಗಿತ್ತು. ಅದನ್ನು fertility month ಎಂದು ಆಚರಿಸುತ್ತಿದ್ದರು. fertility month.. ಎಂದು ಭೂಮಿಯನ್ನು, ಹೆಣ್ಣನ್ನು ಪೂಜಿಸುತ್ತಿದ್ದರು. ನಮ್ಮಲ್ಲಿ ಕೂಡ ಈ ಸಮಯದಲ್ಲಿ ಸಂಕ್ರಾಂತಿ ಹಬ್ಬ ಬರುತ್ತದೆ. ಭೂತಾಯಿಯ ಪೂಜೆ ಮಾಡುತ್ತೇವೆ. ಮಾಘ ಮಾಸ ಬರುವುದು ಫೆಬ್ರವರಿಯಲ್ಲೇ. ಲಗ್ನಕ್ಕೆ ಹೇಳಿ ಮಾಡಿಸಿದ ಮಾಸ, ಮಾಘ ಮಾಸ! ಪ್ರೇಮಿಗಳು, ದಂಪತಿಗಳು ಒಬ್ಬರಿಗೆ ಒಬ್ಬರು ಕಾರ್ಡ್ ಕೊಟ್ಟೋ, ಹೂವು ಕೊಟ್ಟೋ, ಉಡುಗೊರೆ ಕೊಟ್ಟೋ ಪ್ರೇಮ ನಿವೇದಸಿಕೊಳ್ಳುತ್ತಾರೆ ಈಗ. ತಪ್ಪೇನು? ತಾಯಿ ಮಗುವಿನ ಪ್ರೇಮವನ್ನು ವೈಭವೀಕರಿಸುವ ನಾವು ರೊಮ್ಯಾಂಟಿಕ್ ಪ್ರೇಮಕ್ಕೆ ಯಾಕೆ ವಿರೋಧ ವ್ಯಕ್ತಪಡಿಸುತ್ತೇವೆ? ಪ್ರೇಮ ನಮ್ಮ ಸಂಸ್ಕೃತಿ ಅಲ್ಲವೆಂದರೆ, ಪ್ರೇಮವೇ ಇಲ್ಲದ ಸಂಸ್ಕೃತಿ ಅಂದೆಂಥಹ ಸಂಸ್ಕೃತಿ, ಎಂಬ ಪ್ರಶ್ನೆ ಹುಟ್ಟುತ್ತದೆ. ಗಂಡು-ಹೆಣ್ಣಿನ ನಡುವಿನ ಪ್ರೇಮವನ್ನು ಬರೀ ಕಾಮವೆನ್ನುವ ದೃಷ್ಟಿಕೋನ ಬದಲಾಗಬೇಕಲ್ಲವೇ? ಕಾಮ ಇದೆ. ಇಲ್ಲವೆಂದಲ್ಲ.. ಇದ್ದರೆ ತಪ್ಪೇನು ಇಲ್ಲವಲ್ಲ.. ವಾತ್ಯಾಯನ ಕಾಮಸೂತ್ರ ಬರೆದ ನಾಡಿನಲ್ಲಿ ಜನಸಂಖ್ಯೆಯಲ್ಲಿ ಪ್ರಪಂಚದಲ್ಲಿಯೇ ಮೊದಲ ಸ್ಥಾನ ಪಡೆಯುವ ದಿನ ದೂರವಿಲ್ಲದ ನಾಡಿನಲ್ಲಿ ಕಾಮದ ಬಗ್ಗೆ ಇಷ್ಟೊಂದು ಮಡಿವಂತಿಕೆ ಯಾಕೆ? ಅರವತ್ತು ದಾಟಿರುವ ನನ್ನ ಸ್ನೇಹಿತೆಯೊಬ್ಬರು ತಮ್ಮ ಗಂಡ ತಮಗೆ ನೀಡುತ್ತಿರುವ ಕೆಂಪು ಗುಲಾಬಿಯನ್ನು ನಾಚಿಕೆಯಿಂದ ತಾವು ಸ್ವೀಕರಿಸುತ್ತಿರುವ ಫೋಟೋವನ್ನು ತಮ್ಮ ಫೇಸ್ ಬುಕ್ ವಾಲಿನಲ್ಲಿ ಹಾಕಿ ಸಂಭ್ರಮ ಪಟ್ಟರು. ನೋಡಿ ಸಂತೋಷ ಪಟ್ಟವರು ನೂರಾರು ಮಂದಿ. ಪ್ರೇಮ, ಪ್ರೇಮ ನಿವೇದನೆ, ಒಂದು ಆಲಿಂಗನ, ಒಂದು ಮುತ್ತು ಅಪರಾಧವಾದರೆ ನಮ್ಮ ಸಂಸ್ಕೃತಿಗೆ ಧಕ್ಕೆ ತರುತ್ತದೆ ಎಂದಾದರೆ ಅಷ್ಟೇ ಪೇಲವವೇ ಈ ಸಂಸ್ಕತಿ? “ಹಾಗಲ್ಲಾ- ಈ ವಾಲೈಂಟೈನ್ ಡೇ ಫ್ರೆಂಡ್ ಶಿಫ್ ಡೇ ಎಲ್ಲಾ ಈ ವ್ಯಾಪಾರಿಗಳು ಅದೇ ಈ ಹೂವಿನ, ಕಾರ್ಡಿನ ವ್ಯಾಪಾರಿಗಳು ತಮ್ಮ ವ್ಯಾಪಾರ ವೃದ್ಧಿಸಲು ಇದನ್ನು ಪಾಪುಲರ್ ಮಾಡಿದ್ದಾರೆ… ಅವರ ವ್ಯಾಪಾರಕ್ಕಾಗಿ ಈಗಂತೂ ಈ ಹೊಟೆಲ್ಲಿನವರು, ಆಭರಣದ ಅಂಗಡಿಯವರೂ ಕೂಡ ಸೇರಿಕೊಂಡು.. ವ್ಯಾಲೆಂಟೆನ್ ಡೇ ಆಚರಿಸದರು ಹುಂಬರು ಎಂಬುವಂತಹ ಕೀಳರಿಮೆ ಹುಟ್ಟಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.. ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಎಲ್ಲರೂ ಆಚರಿಸಲು ಆರಂಭಿಸಿದ್ದಾರೆ. ಈ ವ್ಯಾಪಾರಿಗಳ ಜೇಬು ತುಂಬುತ್ತಾರೆ” ಇದು ಒಂದು ವಾದ. ಇನ್ನೊಂದು.. ‘ನಮ್ಮ ಹೆಣ್ಣುಮಕ್ಕಳನ್ನು ಬಲೆಗೆ ಹಾಕಿಕೊಂಡು ಅವರನ್ನು ಹಾಳುಮಾಡುತ್ತಾರೆ. ಒಂದು ಕೆಂಪು ಗುಲಾಬಿ ಒಂದು ಚಾಕೋಲೇಟ್ ಬಾರ್ ಕೊಟ್ಟು!’ ಗುಲಾಬಿ ಮುಡಿದು, ಚಾಕೋಲೇಟ್ ತಿನ್ನುವ ಹೆಣ್ಣು ಮಕ್ಕಳೇನು ಲಾಲಿಪಾಪ್ ತಿನ್ನುವ ವಯಸ್ಸಿನವರೇ? ಯಾವುದು ಸರಿ ಯಾವುದು ಅಲ್ಲ ಎಂಬ ವಿವೇಚನೆ ಅವರಿಗಿಲ್ಲವೇ? ಗುಲಾಬಿ ಕೊಟ್ಟು ಪ್ರೇಮ ನಿವೇದನೆ ಮಾಡಿದ ತಕ್ಷಣ, ಕಾಮಕೇಳಿಯಲ್ಲಿ ತೊಡಗುತ್ತಾರೆ ಎನ್ನುವುದಾದರೆ ವ್ಯಾಲೆಂಟೈನ್ ದಿನವೇ ಏಕೆ ಬೇಕು? ವರ್ಷದ ಮೂನ್ನೂರರವತೈದು ದಿನದಲ್ಲಿ ಯಾವುದೇ ದಿನ ಅದು ಸಂಭವಿಸಬಹುದು. ಸರಿ-ತಪ್ಪುಗಳ ತುಲನೆ ಅವರಿಗೆ ಬಿಟ್ಟಿದ್ದಲ್ಲವೇ? ಪಾರ್ಕಿಗೆ, ಥಿಯೇಟರಿಗೆ ನುಗ್ಗಿ, ಅಲ್ಲಿ ಕುಳಿತಿರುವ ಯುವ ಪ್ರೇಮಿಗಳನ್ನು ಥಳಿಸಿ, ಹೆಣ್ಣುಮಕ್ಕಳ ಕೆನ್ನೆಗೆ ಹೊಡೆದು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹರಿಯ ಬಿಟ್ಟಿರುವವರ ಸಂಸ್ಕೃತಿ ಸಂಸ್ಕಾರ ಎಂತಹುದು? ಹಾರ, ತಾಳಿ ತೆಗೆದುಕೊಂಡು ಹೋಗಿ ಮದುವೆಯೇ ಮಾಡಿಸಿ ಬಿಡಲು ಇವರು ಯಾವ ನಾಡಿನ ಸಂಸ್ಕೃತಿಯ ಸಂರಕ್ಷಕರು? ಇಂತಹ ರಕ್ಷಕರು ನಮಗೆ ಬೇಡ. ಅದರ ಬದಲು ಕಾಲೇಜುಗಳಲ್ಲಿ ಗಂಡು ಅಥವಾ ಹೆಣ್ಣು ಮಕ್ಕಳು ಮೋಸ ಹೋಗದಿರಲು ಅವರನ್ನು ಪ್ರಿಪೇರ್ ಮಾಡಬೇಕು.. ಮೋಸ ಮಾಡದಿರುವಂತೆ ತಿಳಿವಳಿಕೆ ನೀಡಬೇಕು. ಮೊಬೈಲ್ ಕಿತ್ತುಕೊಂಡು, ಕೆನ್ನೆಗೆ ಹೊಡೆದು, ಕಾಲಲ್ಲಿ ಒದ್ದು ಹೆಣ್ಣು ಮಕ್ಕಳಿಗೆ (ವಾಲಂಟೈನ್ ದಿನ) ಬುದ್ಧಿ ಹೇಳುತ್ತಿದ್ದ ಎರಡು ನಿಮಿಷದ ವಿಡಿಯೋ ನೋಡಿ ಕೋಪ ಉಕ್ಕಿಬಂತು. ಹಾಳಾಗುವುದೇ ಇದ್ದರೆ, ಮೋಸ ಹೋಗುವುದೇ ಇದ್ದರೆ ಮಾರ್ಚ್ ಹದಿನೈದು ಕೂಡ ಆಗಬಹುದು.. ಏಪ್ರಿಲ್ ಒಂದು ಕೂಡ ಆಗಬಹುದು. ಯಾರೂ ಯಾವ ಸಂಸ್ಕೃತಿಯನ್ನು ರಕ್ಷಿಸಲಾರರು. ಸಂಸ್ಕೃತಿಗೆ ರಕ್ಷಣೆ ಬೇಕಾಗಿಯೂ ಇಲ್ಲ. ಜೊತೆಗೆ ಸಂಸ್ಕೃತಿ ಎನ್ನುವುದರ ವ್ಯಾಪ್ತಿ ದೊಡ್ಡದು. ಹಾಗೂ ಸಂಸ್ಕೃತಿ ನಿಂತ ನೀರಲ್ಲ. ನಿಂತ ನೀರಾದರೆ ಅದು ಪಾಚಿಕಟ್ಟಿ ನಮ್ಮನ್ನು ಜಾರಿ ಬೀಳಿಸುತ್ತದೆ. ಸಂಸ್ಕೃತಿ ಎನ್ನುವುದು ಹರಿಯುವ ನದಿಯಂತೆ.. ಹಳಿತನ್ನು ಒಗೆದು, ಹೊಸತನ್ನು ಹೊತ್ತುಕೊಂಡು ಸುತ್ತಲ ಪ್ರದೇಶವನ್ನು ಹಸಿರುಗೊಳಿಸಿ, ಜೀವನವನ್ನುಕೊಡುವುದು ಸಂಸ್ಕೃತಿ. ಒಪ್ಪಿದನ್ನು ಸ್ವೀಕರಿಸಿ, ಒಪ್ಪಿಗೆಯಾಗದನ್ನು ಬಿಟ್ಟರೆ ಆಯಿತು. ಬದಲಾವಣೆಯನ್ನು ತರುವುದು ಯಾರ ಕೈಯಲ್ಲೂ ಇಲ್ಲ.. ಹುಂಬತನ ಬೇಡ.
OSCAR-2019
ಪತ್ರಿಕೆಯ ಮುಖ ಪುಟದಲ್ಲಿ ಶೋಭಿಸುವ ರೂಪದರ್ಶಿಗಳ ಕೇಶರಾಶಿಗಳನ್ನು ನೋಡಿದಾಗ ಮನಸ್ಸಿಗೆ ಒಂದು ಬಗೆಯ ಆಸೆ ಹಾಗೂ ಬೇಸರ ಉಂಟಾಗುವುದು ಸಹಜ. ಹೌದು, ಆ ರೂಪದರ್ಶಿಗಳ ಕೇಶರಾಶಿಯಂತೆಯೇ ನಮ್ಮ ಕೇಶರಾಶಿಯೂ ಕಂಗೊಳಿಸಬೇಕು ಎಂದು ನಾವು ಬಯಸುತ್ತೇವೆ. ಜೊತೆಗೆ ಅಂತಹ ಕೂದಲು ನಮಗಿಲ್ಲವಲ್ಲಾ... ಎನ್ನುವ ಬೇಸರ ಒಂದಿಷ್ಟು ನೋವನ್ನುಂಟು ಮಾಡುವುದು. ಸುಂದರ ಕೇಶರಾಶಿಯನ್ನು ಕಂಡಾಗ ಉಂಟಾಗುವ ಆಶ್ಚರ್ಯ ಹಾಗೂ ಬೇಸರದಿಂದಾಗಿ ನಮ್ಮ ಕೂದಲ ಆರೈಕೆಗಾಗಿ ಒಂದಿಷ್ಟು ಔಷಧಗಳ ಹುಡುಕಾಟ ಹಾಗೂ ಆರೈಕೆಯ ವಿಧಾನಗಳನ್ನು ಹುಡುಕಲು ಮನಸ್ಸು ಬಯಸುವುದು. ನೀವು ಅಂತಹ ಹುಡುಕಾಟದಲ್ಲಿ ಇದ್ದೀರಿ ಎಂದಾದರೆ ನಿಮಗೆ ಅತ್ಯುತ್ತಮ ಆಯ್ಕೆ ಲೋಳೆಸರ/ಅಲೋವೆರಾ ಆಗುವುದು. ಏಕೆಂದರೆ ಅಲೋವೆರಾ ಅತ್ಯುತ್ತಮ ಔಷಧೀಯ ಗುಣಗಳನ್ನು ಒಳಗೊಂಡಿರುವುದಲ್ಲದೆ ಕೂದಲ ಆರೈಕೆಗೆ ಅತ್ಯುತ್ತಮ ಸಹಕಾರ ನೀಡುವುದು. ಅತ್ಯುತ್ತಮ ಪೌಷ್ಟಿಕಾಂಶದ ಗುಣವನ್ನು ಒಳಗೊಂಡಿರುವ ಇದನ್ನು ಕೂದಲ ಸಮಸ್ಯೆಯನ್ನು ಬಹುಬೇಗ ನಿವಾರಣೆ ಮಾಡಬಲ್ಲ ಮಾಂತ್ರಿಕ ಔಷಧೀಯ ಸಸ್ಯ ಎಂದು ಹೇಳಲಾಗುವುದು. ಅಲೋವೆರಾ ಅನ್ನು ನಿಮ್ಮ ಕೂದಲಿಗೆ ಅನ್ವಯಿಸಿಕೊಂಡರೆ ನಿಮ್ಮ ಕೇಶರಾಶಿಯ ಸಮಸ್ಯೆ ಬಹುಬೇಗ ನಿವಾರಣೆ ಹೊಂದುವುದು. 1. ಲೋಳೆಸರ/ಅಲೋವೆರಾದಲ್ಲಿ ಪ್ರೋಟಿಯೋಲೈಟಿಕ್ ಕಿಣ್ವಗಳಿವೆ. ಇದು ನೆತ್ತಿಯ ಭಾಗದಲ್ಲಿ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುತ್ತವೆ. ಕೋಶದ ಆರೋಗ್ಯವನ್ನು ಸುಧಾರಿಸುವುದಲ್ಲದೆ ಆರೋಗ್ಯಕರವಾದ ಕೂದಲು ಬಹುಬೇಗ ಹುಟ್ಟುವಂತೆ ಉತ್ತೇಜಿಸುತ್ತದೆ. 2. ಅಲೋವೆರಾ ಅನ್ವಯಿಸಿಕೊಳ್ಳುವುದರಿಂದ ಕೇಶರಾಶಿಯು ಬಹುಬೇಗ ಮೃದು ಹಾಗೂ ರೇಷ್ಮೆಯಂತೆ ಮಾಡುವುದು. ಕೇಶರಾಶಿಯು ಈ ಬದಲಾವಣೆಯನ್ನು ಪಡೆದುಕೊಂಡರೆ ನಿಮ್ಮ ಇಷ್ಟದಂತಹ ಕೇಶವಿನ್ಯಾಸಗಳನ್ನು ಸರಾಗವಾಗಿ ಮಾಡಿಕೊಳ್ಳಬಹುದು. 3. ಅಲೋವೆರಾ ಅನ್ವಯಿಸಿಕೊಳ್ಳುವುದರಿಂದ ಕೂದಲುದುರುವುದನ್ನು ತಡೆಯಬಹುದು. ಜೊತೆಗೆ ನೈಸರ್ಗಿಕವಾಗಿ ದಪ್ಪವಾದ ಹಾಗೂ ಅಧಿಕ ಕೂದಲು ಬೆಳೆಯುವಂತೆ ಉತ್ತೇಜಿಸುವುದು. 5. ಅಲೋವೆರಾದಲ್ಲಿ ಇರುವ ಪ್ರತಿರೋಧಕ ಗುಣವು ತಲೆಹೊಟ್ಟು ಮತ್ತು ಕೂದಲು ಒಡೆಯುವ ಸಮಸ್ಯೆಗಳನ್ನು ಅದ್ಭುತ ರೀತಿಯಲ್ಲಿ ನಿವಾರಿಸುವುದು. 6. ಅಲೋವೆರಾದಲ್ಲಿರುವ ಪ್ರೋಟಿಯೋಲೈಟಿಕ್ ಕಿಣ್ವಗಳು, ಪ್ರೋಟೀನ್, ಜೀವಸತ್ವಗಳು, ಖನಿಜಗಳು ಕೂದಲುಗಳ ಕಿರುಚೀಲಗಳಿಗೆ ಅಥವಾ ಬೇರುಗಳಿಗೆ ಪರಿಣಾಮಕಾರಿಯ ರೀತಿಯಲ್ಲಿ ಪೋಷಣೆ ನೀಡುತ್ತದೆ. ಲೋಳೆಸರ ಅಥವಾ ಅಲೋವೆರಾ ಎಂದು ಕರೆಯಲ್ಪಡುವ ಈ ಸಸ್ಯ ಅದ್ಭುತ ಶಕ್ತಿಯನ್ನು ಪಡೆದುಕೊಂಡಿದೆ. ಇದನ್ನು ಅಡುಗೆಮನೆಯ ಕಿಟಕಿ, ಬಾಲ್ಕನಿ ಅಥವಾ ಕೈತೋಟ ಹೀಗೆ ಕೆಲವು ಪ್ರಮುಖ ಸ್ಥಳಗಳಲ್ಲಿ ಇಟ್ಟು ಬೆಳೆಸುವುದರಿಂದ ಅನೇಕ ಬಗೆಯ ರಾಸಾಯನಿಕ ವಸ್ತುಗಳನ್ನು ನಿವಾರಿಸುತ್ತದೆ. ನಿತ್ಯವೂ ಅಲೋವೆರಾವನ್ನು ಹೇಗೆ ಅನ್ವಯಿಸಿಕೊಳ್ಳುವುದು? ಅವುಗಳ ಪ್ರಯೋಜನ ಪಡೆದುಕೊಳ್ಳುವುದು ಹೇಗೆ ಎನ್ನುವ ಹೊಸ ವಿಧಾನವನ್ನು ಈ ಕೆಳಗೆ ವಿವರಿಸಲಾಗಿದೆ... ತೆಂಗಿನ ಎಣ್ಣೆ ಮತ್ತು ಅಲೋವೆರಾ ಜೆಲ್ ಅನ್ನು ಸಮ ಪ್ರಮಾಣದಲ್ಲಿ ಬೆರೆಸಿದಾಗ, ಅಲೋವೆರಾದ ಶಕ್ತಿಯು ದ್ವಿಗುಣಗೊಳ್ಳುವುದು. ಈ ಮಿಶ್ರಣವನ್ನು ನಿತ್ಯವೂ ಗಣನೀಯವಾಗಿ ಅನ್ವಯಿಸುವುದರಿಂದ ನಯವಾದ ಹಾಗೂ ಕಾಂತಿಯಿಂದ ಕೂಡಿದ ಕೇಶರಾಶಿಯನ್ನು ಪಡೆದುಕೊಳ್ಳಬಹುದು. ಈ ಮಿಶ್ರಣವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಅಥವಾ ವಾರದಲ್ಲಿ ಎರಡು ಬಾರಿ ಅನ್ವಯಿಸಬಹುದು. ಈ ಮಿಶ್ರಣವನ್ನು ನೆತ್ತಿಗೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಬಹುದು. ಹೀಗೆ ಮಾಡುವುದರಿಂದ ಹಾನಿಗೊಳಗಾದ ಕೂದಲು ಸೂಕ್ತ ಆರೈಕೆಗೆ ಒಳಗಾಗುವುದು. ಜೊತೆಗೆ ಸೋಂಕುಗಳು ನಿವಾರಣೆ ಹೊಂದುವವು. ಇದನ್ನು ಅನ್ವಯಿಸಿ ಒಂದು ಶವರ್ ಕ್ಯಾಪ ಧರಿಸಬೇಕು. ಬಳಿಕ ಒಂದು ಗಂಟೆಗಳ ಕಾಲ ಆರಲು ಬಿಟ್ಟು ಸ್ವಚ್ಛಗೊಳಿಸಬಹುದು. ಈ ಮಿಶ್ರಣ ಅನ್ವಯಿಸುವುದರಿಂದ ನೆತ್ತಿಯ ಮೇಲೆ ಸಾಕಷ್ಟು ತೇವಾಂಶ ಇರುವಂತೆ ನೋಡಿಕೊಳ್ಳಬಹುದು. ಕೂದಲು ಆರೋಗ್ಯಕರವಾಗಿ ಹಾಗೂ ಸಮೃದ್ಧವಾಗಿ ಬೆಳೆಯುವುದು. ಈ ಮಿಶ್ರಣಗಳ ಅನ್ವಯವನ್ನು ಗಣನೀಯವಾಗಿ ಮಾಡುತ್ತಿದ್ದರೆ ಪದೇ ಪದೇ ಕೇಶಗಳನ್ನು ಟ್ರಿಮ್ ಮಾಡಿಸುವ ಅಗತ್ಯ ಇರುವುದಿಲ್ಲ. ಅನೇಕರು ಸೂರ್ಯನ ಕಿರಣದಿಂದ ತ್ವಚೆ ಸುಡುವುದಕ್ಕೆ ಆರೈಕೆಯಾಗಿ ಅಲೋವೆರಾದ ಮೊರೆ ಹೋಗುತ್ತಾರೆ. ಅದೇ ಆರೋಗ್ಯಕರವಾದ ಅಲೋವೆರಾವನ್ನು ಕೂದಲ ಸಂರಕ್ಷಣೆಗೆ ಸಹಾಯ ಮಾಡುವುದು ಹೇಗೆ? ಎನ್ನುವುದನ್ನು ಇಂದು ಬೋಲ್ಡ್ ಸ್ಕೈ ತಿಳಿಸಿಕೊಟ್ಟಿದೆ. ಕೂದಲ ಆರೋಗ್ಯ ಕಾಪಾಡುವ ದಿವ್ಯ ಔಷಧಿಯಾದ ಅಲೋವೆರಾ ಹೆಚ್ಚಿನ ಪೋಷಣೆ ನೀಡುವುದು. ನಿಜ, ರಾಸಾಯನಿಕ ಪದಾರ್ಥಗಳಿಂದ ನೆತ್ತಿಯ ಆರೋಗ್ಯ ಹಾಗೂ ಕೂದಲ ಆರೋಗ್ಯ ಹದಗೆಟ್ಟಾಗ ಆರೈಕೆ ಮಾಡಬಹುದಾದ ಎರಡು ನೈಸರ್ಗಿಕ ಉತ್ಪನ್ನವೆಂದರೆ ಅಲೋವೆರಾ ಮತ್ತು ತೆಂಗಿನೆಣ್ಣೆ ಎನ್ನುವುದನ್ನು ನೆನಪಿಡಿ.
OSCAR-2019
ಬೆಂಗಳೂರು, ಮಾರ್ಚ್ 10: ಅಪ್ಲಿಕೇಷನ್ ಆಧಾರತ ಟ್ಯಾಕ್ಸಿ ಸೇವೆಗಳ ಕನಿಷ್ಠ ಮತ್ತು ಗರಿಷ್ಠ ದರವನ್ನು ಸಾರಿಗೆ ಇಲಾಖೆ ಪರಿಷ್ಕರಿಸಿದೆ. ಈ ಸಂಬಂಧ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ ಸಂಸ್ಥೆಗಳ ಜತೆ ಮುಂದಿನ ವಾರದಲ್ಲಿ ಸಭೆ ನಡೆಸಲು ತೀರ್ಮಾನಿಸಿದೆ. ಬೆಂಗಳೂರಿಗೆ ಅನ್ವಯವಾಗುವಂತೆ ಜನವರಿಯಲ್ಲಿ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ಸಾರಿಗೆ ಇಲಾಖೆ ಮೊದಲ ಬಾರಿಗೆ ಹೊರಡಿಸಿದ್ದ ಕನಿಷ್ಠ ದರ ಆದೇಶದಲ್ಲಿ ಕೆಲ ಲೋಪಗಳಿದ್ದವು. ಇದೇ ಅಂಶಗಳನ್ನು ಮುಂದಿಟ್ಟುಕೊಂಡು ಅಪ್ಲಿಕೇಷನ್ ಆಧಾರಿತ ಕಂಪನಿಗಳು ಕಳೆದೆರೆಡು ತಿಂಗಳಿನಿಂದ ಆದೇಶ ಪಾಲಿಸಲು ಹಿಂದೇಟು ಹಾಕಿದ್ದವು. ಲೆಕ್ಕದಲ್ಲಿ ಇಲಾಖೆ ಎಡವಟ್ಟು: ಟ್ಯಾಕ್ಸಿಗಳಿಗೆ ಕನಿಷ್ಠ ದರ ನಿಗದಿಪಡಿಸುವ ವಿಚಾರದಲ್ಲಿ ಇಲಾಖೆ ಎಡವಿತ್ತು. ವಾಹನ ಬೆಲೆ ಆಧರಿಸಿ ಕಾರುಗಳನ್ನು ಎಬಿಸಿಡಿ ವರ್ಗ ಎಂದು ಇಲಾಖೆ ಬೇಪಡಿಸಿತ್ತು. ಎ ವರ್ಗವು ಅತಿ ಹೆಚ್ಚು ಬೆಲೆಯುಳ್ಳ ಕಾರುಗಳಾಗಿದ್ದು, ಡಿ ವರ್ಗದಲ್ಲಿ ಕನಿಷ್ಠ ಬೆಲೆಯ ಕಾರುಗಳಿವೆ . ಪರಿಷ್ಕೃತ ದರದಲ್ಲಿ ಸಿ ಮತ್ತು ಬಿ ವರ್ಗದ ವಾಹನಗಳು ಮೊದಲ 4ಕಿ.ಮೀಗೆ ಪಡೆಯಬೇಕಾದ ದರವನ್ನು ಇಲಾಖೆ ಪರಿಷ್ಕರಿಸಿದೆ. ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್ ಪೋರ್ಟೇಷನ್ ಟೆಕ್ನಾಲಜಿ ಅಗ್ರೆಗೇಟರ್ ರೂಲ್ಸ್ 2016ರ ಅನ್ವಯ ಬೆಂಗಳೂರು ನಗರ ಮಿತಿಯ ಬಳಿಕ 25ಕಿ.ಮೀ ವರೆಗೂ ಹವಾನಿಯಂತ್ರಿತ ಸಿಟಿ ಟ್ಯಾಕ್ಸಿಗಳಿಗೆ ಅನ್ವಯವಾಗುವಂತೆ ಕನಿಷ್ಠ-ಗರಿಷ್ಠ ದರ ಅನ್ವಯ ಎಂದು ಸಾರಿಗೆ ಇಲಾಖೆ ತಿಳಿಸಿತ್ತು. ola uber price hike bengaluru taxi karnataka government ಬೆಂಗಳೂರು ಓಲಾ ಊಬರ್ ದರ ಟ್ಯಾಕ್ಸಿ ಕರ್ನಾಟಕ ಸರ್ಕಾರ
OSCAR-2019
ಲಕ್ಷ್ಮಿ ಮನೆಯ ದೀಪ. ಜೀವನದ ಜ್ಯೋತಿ. ಲಕ್ಷ್ಮಿ ದೇವಿ ಇಲ್ಲದ ಮನೆಯು ದಾರಿದ್ರ್ಯ ಹಾಗೂ ಬಡತನದಿಂದ ಕೂಡಿರುತ್ತದೆ. ಮನೆಯಲ್ಲಿ ಸದಾ ಕಿರಿಕಿರಿ, ಅಸಮಧಾನಗಳು ತಾಂಡವಾಡುತ್ತಿರುತ್ತವೆ. ಎಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೋ ಆ ಮನೆಯಲ್ಲಿ ಉತ್ತಮ ಭಾಂದವ್ಯ, ಧನಧಾನ್ಯಗಳ ಸಿರಿ, ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತವೆ. ಜೊತೆಗೆ ವ್ಯಕ್ತಿ ಯಾವುದೇ ಕೊರತೆಗಳಿಲ್ಲದೆ ಸಂತೋಷದ ಜೀವನ ನಡೆಸಬಲ್ಲನು. ಉತ್ತಮ ಜೀವನಕ್ಕೆ ಲಕ್ಷ್ಮಿ ದೇವಿಯ ಆಶೀರ್ವಾದ ಬಹಳ ಪ್ರಮುಖವಾದದ್ದು. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಲ್ಲಿ ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ವರ ಮಹಾಲಕ್ಷ್ಮಿ ವ್ರತವು ಲಕ್ಷ್ಮಿ ದೇವಿಗೆ ಸಮರ್ಪಿತವಾದದ್ದು. ವಿವಾಹಿತ ಮಹಿಳತೆಯರು ಮನೆಯಲ್ಲಿ ಸಂಪತ್ತು ಹಾಗೂ ಸೌಭಾಗ್ಯ ದೊರೆಯಲಿ ಎಂದು ಧಾರ್ಮಿಕವಾಗಿ ಆಚರಿಸುತ್ತಾರೆ. ವರಮಹಾಲಕ್ಷ್ಮಿ ವ್ರತವನ್ನು ಏಕೆ ಆಚರಿಸಬೇಕು? ಮನೆಯಲ್ಲಿ ಹೇಗೆ ಕೈಗೊಳ್ಳುವುದು ಎನ್ನುವ ಇನ್ನಷ್ಟು ಮಾಹಿತಿಯನ್ನು ಈ ಮುಂದೆ ವಿವರಿಸಲಾಗಿದೆ... ಶ್ರಾವಣ ಮಾಸದ ಹುಣ್ಣಿಮೆಯ ಶುಕ್ರವಾರ ಅಥವಾ ಹುಣ್ಣಿಮೆಯ ನಂತರದ ಶುಕ್ರವಾರದ ದಿನದಲ್ಲಿ ವರಮಹಾಲಕ್ಷ್ಮಿ ದೇವಿಯ ವ್ರತವನ್ನು ಕೈಗೊಳ್ಳಲಾಗುವುದು. ಅದು ಸಾಮಾನ್ಯವಾಗಿ ಆಗಸ್ಟ್ ಥವಾ ಸಪ್ಟೆಂಬರ್ ತಿಂಗಳಲ್ಲಿ ಬರುತ್ತದೆ. ಒಂದಾನೊಂದು ಕಾಲದಲ್ಲಿ ಮಗಧ ಸಾಮ್ರಾಜ್ಯ ಎನ್ನುವ ಸಾಮ್ರಾಜ್ಯವಿತ್ತು. ಅಲ್ಲಿ ಚಾರುಮತಿ ಎನ್ನುವ ಬ್ರಾಹ್ಮಣ ಮಹಿಳೆ ವಾಸವಾಗಿದ್ದಳು. ಅವಳ ಪತಿ ಹಾಗೂ ಕುಟುಂಬದವರು ದೇವರ ಆರಾಧನಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಚಾರುಮತಿಯ ಭಕ್ತಿ ಭಾವಕ್ಕೆ ಮೆಚ್ಚಿದ ವರಮಹಾಲಕ್ಷ್ಮಿಯು ಕನಸಿನಲ್ಲಿ ಬಂದು ವರಮಹಾಲಕ್ಷ್ಮಿ ವ್ರತದ ಪೂಜಾ ವಿಧಾನವನ್ನು ಅನುಸರಿಸಲು ಹೇಳಿದಳು. ಈ ಪೂಜೆಯನ್ನು ಕೈಗೊಂಡರೆ ಜೀವನದ ಇಷ್ಟಗಳು ನೆರವೇರುವುದು ಎಂದು ಹೇಳಿದಳು ಎನ್ನಲಾಗುತ್ತದೆ. ಅಂತೆಯೇ ಚಾರುಮತಿಯು ತನ್ನ ಊರಿನಲ್ಲಿ ಇದ್ದ ಮಹಿಳೆಯರಿಗೆ ವಿಷಯವನ್ನು ತಿಳಿಸಿದಳು. ಬಳಿಕ ಎಲ್ಲಾ ಮಹಿಳೆಯರು ದೇವಿಯ ಆಣತಿಯಂತೆ ಪೂಜೆಯನ್ನು ಗೈದರು. ಜೊತೆಗೆ ಜೀವನದಲ್ಲಿ ಬಯಸಿದ ಸುಖ-ಸಂಪತ್ತನ್ನು ಪಡೆದುಕೊಂಡರು ಎನ್ನಲಾಗುತ್ತದೆ. ವರಮಹಾಲಕ್ಷ್ಮಿ ಪೂಜಾ ವಿಧಾನದಲ್ಲಿ ವಿವಿಧ ವಿಧಾನಗಳನ್ನು ಒಳಗೊಂಡಿದೆ. ಅಂಗ ಪೂಜೆ, ತೋರಗಂಧಿ ಪೂಜೆ, ಶೋಡಶೋಪಚಾರ ಪೂಜೆ, ವರಮಹಾಲಕ್ಷ್ಮಿ ವ್ರತ ಕಥೆ, ಮಂತ್ರ ಪುಷ್ಪ, ವಯನ ವಿಧಿ, ಥೋರಬಂಧನಂ ಮೊದಲಾದ ರೀತಿ-ನೀತಿಗಳನ್ನು ಒಳಗೊಂಡಿರುತ್ತದೆ. ಮಡಿಕೆ ಒಣಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಮಡಿಕೆ ಕೆಳಭಾಗದಲ್ಲಿ ಜಿಪ್ಸಮ್ ಅನ್ವಯಿಸಿ. ಬಳಿಕ ಮಡಿಕೆ/ಬಿಂದಿಗೆಯನ್ನು ಅರಿಶಿನ ಮತ್ತು ಕುಂಕುಮದ ಬಟ್ಟು/ಹುಂಡುಗಳಿಂದ ಅಲಂಕರಿಸಿ. ಮಡಿಕೆ ಒಳಗೆ ಅಕ್ಕಿ, ಒಣ ಹಣ್ಣು ಹಾಗೂ ನಾಣ್ಯವನ್ನು ಇಟ್ಟು ತುಂಬಿರಿ. ಮೃದುವಾದ ಮಾವಿನೆಲೆಯಿಂದ ಮಡಿಕೆಯ ಕುತ್ತಿಗೆಯ ಭಾಗವನ್ನು ಅಲಂಕರಿಸಿ. ಮಾವಿನ ಎಲೆಯ ತುದಿಯು ಮೇಲ್ಮುಖವಾಗಿಯೇ ಇರಬೇಕು. ತೆಂಗಿನ ಕಾಯಿಗೆ ಅರಿಶಿನ, ಕುಂಕುಮ ಮತ್ತು ಚಂದನವನ್ನು ಲೇಪಿಸಿ ಅಲಂಕರಿಸಿ. ಬಳಿಕ ಬಿಂದಿಗೆಯ ಕಂಟದಲ್ಲಿ, ಮಾವಿನೆಲೆಗಳ ಮಧ್ಯೆ ಇರಿಸಿ. ತೆಂಗಿನ ಕಾಯಿಯ ಕಣ್ಣುಗಳು ಮೇಲ್ಭಾಗದಲ್ಲಿ ಇರಬೇಕು. ಹೊಸ ಕುಪ್ಪುಸದ ಬಟ್ಟೆಯನ್ನು ಕಲಶಕ್ಕೆ ಇಡಬೇಕು.ಬಳಿಕ ಹೂವಿನ ಹಾರವನ್ನು ಹಾಕಿ ಅಲಂಕರಿಸಿ. ಲಕ್ಷ್ಮಿ ದೇವಿ ವಿವಾಹಿತ ಮಹಿಳೆಯಾಗಿದ್ದರಿಂದ ಯಾವುದೇ ಹೊಸ ಸೀರೆಯನ್ನು ತೊಡಿಸಬಹುದು. ದೇವಿ ಸುಮಂಗಲಿಯ ಸಂಕೇತವಾದ್ದರಿಂದ ಮಂಗಲ ಸೂತ್ರ, ಬಳೆ, ಕುಂಕುಮ ಇಟ್ಟು ಸಿಂಗಾರ ಮಾಡಬಹುದು. ಹಸಿರು ಸೀರೆಯನ್ನು ಮಾತ್ರ ತೊಡಿಸಬೇಕು.
OSCAR-2019
ರಾಮನಗರದಿಂದ ಕಣಕ್ಕಿಳಿಯುತ್ತಿರುವ ಅನಿತಾ ಕುಮಾರಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ನಾಮಪತ್ರ ಜೊತೆಯಲ್ಲೇ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ಧಾರೆ. ಸಮ್ಮಿಶ್ರ ಸರ್ಕಾರದ ಹಿತದೃಷ್ಟಿಯಿಂದ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ. ಪಕ್ಷದ ಹಿರಿಯರ ಮಾತನ್ನು ಗೌರವಿಸಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದೇನೆ- ಇಕ್ಬಾಲ್​​​ ನೀವು ಡಿಕೆಶಿ ಬಗ್ಗೆ ಯಾಕಿಷ್ಟು ದೊಡ್ಡದಾಗಿ ಯೋಚನೆ ಮಾಡ್ತಿರೀ. ಅವರದು ಕನಕಪುರ, ರಾಮನಗರದಲ್ಲಿ ನಡೆಯಬಹುದಷ್ಟೇ, ಹೈದರಾಬಾದ್ ಕರ್ನಾಟಕದಲ್ಲಿ ಏನು ನಡೆಯೋಲ್ಲ- ಜನಾರ್ದನ​​ ರೆಡ್ಡಿ
OSCAR-2019
ಘಟನೆಯಲ್ಲಿ ಇಬ್ಬರು ವಿಡಿಯೋ ಮಾಡುತ್ತಿದ್ದರೆ ಉಳಿದವರು ಬಾಲಕಿಯನ್ನು ಬೆತ್ತಲೆಗೊಳಿಸುವಲ್ಲಿ ನಿರತರಾಗಿದ್ದರು. ಬಾಲಕಿ ನನ್ನನ್ನು ಬಿಡಿ ಅಣ್ಣ ಎಂದು ಪರಿಪರಿಯಾಗಿ ವಿನಂತಿಸಿದರೂ ಘೋರವಾಗಿ ಕಿರುಕುಳ ನೀಡುತ್ತಿದ್ದರು. ಘಟನೆಗೆ ಸಂಬಂಧಿಸಿದಂತೆ 18 ವರ್ಷ ಮೇಲ್ಪಟ್ಟ ಮೂವರನ್ನು ಮಕ್ಕಳ ಲೈಂಗಿಕ ಕಿರುಕುಳ ಸಂರಕ್ಷಣ ಕಾಯಿದೆಯಡಿ ಬಂಧಿಸಲಾಗಿದೆ. ಪಾಟ್ನ(ಏ.30): ನಿಮ್ಮ ದಮ್ಮಯ್ಯ ನನ್ನನ್ನು ಬಿಟ್ಟುಬಿಡಿ ಎಂದು ಕಾಲಿಡಿದು ಗೋಗರೆದರೂ 13 ವರ್ಷದ ಬಾಲಕಿಯನ್ನು 8 ಮಂದಿ ಯುವಕರು ಬೆತ್ತಲೆ ಮಾಡಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬಿಹಾರದ ಜನಾನ್'ಬಾದ್ ಜಿಲ್ಲೆಯ ರಾಮ್'ದನಿ ಗ್ರಾಮದಲ್ಲಿ ನಡೆಯಿದೆ. ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ತೀಚಿಗಷ್ಟೆ ಕೇಂದ್ರ ಸರ್ಕಾರ ಫೋಕ್ಸೋ ಕಾಯಿದೆಯನ್ನು ತಿದ್ದುಪಡಿ ಮಾಡಿ ಜೀವಾವಧಿ ಶಿಕ್ಷೆಗೆ ಬದಲಾಗಿ ಗಲ್ಲು ಶಿಕ್ಷೆಯನ್ನಾಗಿ ಮಾರ್ಪಡಿಸಿದೆ. ಕೆಲ ದಿನಗಳ ಹಿಂದಷ್ಟೆ ಜಮ್ಮು ಕಾಶ್ಮೀರದ ಕಟುವಾದಲ್ಲಿ 8 ವರ್ಷದ ಬಾಲಕಿಯೊಬ್ಬಳ ಮೇಲೆ ಯುವಕರ ಗುಂಪು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರು. ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
OSCAR-2019
ನವದೆಹಲಿ, ಅ. 23- ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ಪಟಾಕಿಗಳ ಮಾರಾಟ ಭರಾಟೆ ಜೋರಾಗುವುದು ಸರ್ವೇಸಾಮಾನ್ಯ. ಆ ಪಟಾಕಿಗಳ ಮೆರುಗನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಲು ನಾನಾ ರೀತಿಯ ಕಸರತ್ತನ್ನು ನಡೆಸುತ್ತಾರೆ. ಅದರಲ್ಲೂ ಚಿಕ್ಕ ಮಕ್ಕಳನ್ನು ಸೆಳೆಯುವುದಕ್ಕಾಗಿಯೇ ಸುರ್‌ಸುರ್ ಬತ್ತಿ, ಪ್ಲವರ್‌ಪಾಟ್‌ಗಳ ಮೇಲೆ ಕಾರ್ಟೂನ್‌ಗಳ ಚಿತ್ರಗಳನ್ನು ಬಳಸುತ್ತಿದ್ದರು. ಅದರಂತೆಯೇ ಈ ಬಾರಿಯು ಟಿವಿ ಮಾಧ್ಯಮಗಳ ಮೂಲಕ ಈಗಾಗಲೇ ಮಕ್ಕಳ ಮನ ಸೂರೆಗೊಂಡಿರುವ ಬೆನ್‌ಟನ್, ಎಕ್ಸ್‌ಮನ್, ಚೋಟಾಭೀಮ್, ಡೋರಾ ಸೇರಿದಂತೆ ಮತ್ತಿತರ ಚಿತ್ರಗಳನ್ನು ಪಟಾಕಿಗಳ ಬಾಕ್ಸ್ ಮೇಲೆ ಮುದ್ರಿಸುವ ಮೂಲಕ ಚಿಣ್ಣರ ಗಮನವನ್ನು ಸೆಳೆಯುತ್ತಿದ್ದಾರೆ. ಮಕ್ಕಳನ್ನು ಸೆಳೆಯಲು ಈ ರೀತಿಯ ಟ್ರಿಕ್ಸ್ ಆದರೆ, ಯುವಕರನ್ನು ಸೆಳೆಯಲು ಕರೀನಾಕಪೂರ್, ಜಾಕಿಚಾನ್, ವೈಜಯಂತಿ ಮಾಲಾ, ಧರ್ಮೇಂದ್ರ, ಹೇಮಾಮಾಲಿನಿಯರ ಚಿತ್ರಗಳನ್ನು ಮುದ್ರಿಸುವ ಮೂಲಕ ದೆಹಲಿಯ ಬೀದಿ ಬೀದಿಗಳಲ್ಲಿ ಪಟಾಕಿ ಪ್ರೇಮಿಗಳನ್ನು ಸೆಳೆಯುತ್ತಿದ್ದಾರೆ. ಚಿಕ್ಕಮಕ್ಕಳು ಸೆಳೆಯುವುದಕ್ಕಾಗಿ ನಾವು ಈ ಬಾರಿ ಟೀವಿ ಹಾಗೂ ಸಿನಿಮಾಗಳಲ್ಲಿ ಮಕ್ಕಳನ್ನು ಸೆಳೆದಿರುವ ಕಾರ್ಟೂನ್ ಚಿತ್ರಗಳನ್ನು ಬಳಸುತ್ತಿದ್ದೇವೆ ಎಂದು ಉದ್ಯಮಿ ಆರ್.ಎಸ್.ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಾಲಿವುಡ್ ಚಿತ್ರಗಳನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ಕೆಲವು ದಿಗ್ಗಜರನ್ನು ಹಬ್ಬದ ವೇಳೆ ಸ್ಮರಿಸಿಕೊಳ್ಳುವ ಸಲುವಾಗಿ ವೈಜಯಂತಿ ಮಾಲಾ, ಧರ್ಮೇಂದ್ರ, ಹೇಮಾಮಾಲಿನಿರ ಚಿತ್ರಗಳನ್ನು ಬಳಸುತ್ತಿದ್ದೇವೆ ಎಂದು ಚೌರೀ ಬಜಾರ್‌ನ ಪಟಾಕಿ ಅಂಗಡಿ ಮಾಲೀಕ ಮುಖೇಶ್ ತಿಳಿಸಿದ್ದಾರೆ. ದೀಪಾವಳಿ ಎಂದರೆ ಬೆಳಕಿನ ಹಬ್ಬ ಅದರ ರಂಗನ್ನು ಮತ್ತಷ್ಟು ಹೆಚ್ಚಿಸಲು ಚಿಣ್ಣರು, ಯುವಕರು ಸೇರಿದಂತೆ ಎಲ್ಲಾ ವಯೋಮಾನದವರು ಪಟಾಕಿಯನ್ನು ಸಿಡಿಸುತ್ತಾರೆ. ಆ ಪಟಾಕಿಗಳ ಮೆರುಗನ್ನು ಮತ್ತಷ್ಟು ಹೆಚ್ಚಿಸಲು ಈ ರೀತಿಯ ಐಡಿಯಾವನ್ನು ಬಳಸುತ್ತಿದ್ದೇವೆ ಎಂದು ರಾಜ್ ಕೌಶಿಲ್ ಎಂಬ ಮತ್ತೊಬ್ಬ ವ್ಯಾಪಾರಿ ತಿಳಿಸಿದ್ದಾನೆ. ನಾಳೆಯಿಂದ ನಡೆಯಲಿರುವ ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಇ೦ದು ಬೆಳಗ್ಗೆ ಕಲ್ಬುರ್ಗಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರನ್ನು ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಮುಖಂಡರು ಮತ್ತು ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಜಯಘೋಷಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಬೆಂಗಳೂರು,ಜ.20– ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖಂಡ ಕೆ.ಎಸ್.ಈಶ್ವರಪ್ಪ ನಡುವಿನ ಗುದ್ದಾಟ ನಿರ್ಣಾಯಕ ಹಂತ ತಲುಪಿರುವ ಹಂತದಲ್ಲೇ ನಾಳೆಯಿಂದ ಕಲಬುರುಗಿಯಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ನಾಳೆಯಿಂದ ಎರಡು ದಿನ ಸೇಡಂ ರಸ್ತೆಯ ಹಾರಕೂಡ ಕಲ್ಯಾಣ ಮಂಟಪದಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ಕಾರ್ಯಕಾರಿಣಿಯಲ್ಲಿ ಪ್ರಮುಖವಾಗಿ ಪಕ್ಷದ ಸಂಘಟನೆಗಿಂತ ಸಂಗೊಳ್ಳಿ ರಾಯಣ್ಣ ಬ್ರೀಗೇಡ್ ವಿವಾದವೇ ಚರ್ಚೆಯ ಕೇಂದ್ರ ಬಿಂದುವಾಗಲಿದೆ. ಪರಸ್ಪರ ಒಬ್ಬರ ಮುಖ ಇನ್ನೊಬ್ಬರು ನೋಡದಷ್ಟು ದೂರು ಸರಿದು, ಕತ್ತಿ ಮಸೆಯುತ್ತಿರುವುದರಿಂದ ಸಭೆ ಯಶಸ್ವೀಯಾಗಲಿದಿಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ. ನಿನ್ನೆ ಭಿನ್ನಮತೀಯರ ಸಭೆಯನ್ನು ಸ್ವತಃ ಯಡಿಯೂರಪ್ಪ ಕರೆದಿದ್ದರೂ ಈಶ್ವರಪ್ಪ ಬಣ ಗೈರು ಹಾಜರಾಗಿದ್ದು, ಬಿಎಸ್‍ವೈ ಕಣ್ಣು ಇನ್ನಷ್ಟು ಕೆಂಪಾಗುವಂತೆ ಮಾಡಿದೆ. ತಮ್ಮ ನಾಯಕತ್ವದ ವಿರುದ್ದ ಬಂಡೆದ್ದಿರುವವರನ್ನು ಪಕ್ಷದಿಂದಲೇ ಹೊರಹಾಕಬೇಕೆಂಬ ದೃಢನಿರ್ಧಾರಕ್ಕೆ ಬಂದಿದ್ದರೂ ಹೈಕಮಾಂಡ್ ಅವರ ಕೈ ಕಟ್ಟಿ ಹಾಕಿರುವುದು ಗುಟ್ಟಾಗಿ ಉಳಿದಿಲ್ಲ. ಸಭೆಯಲ್ಲಿ ಪ್ರಮುಖವಾಗಿ ತೊಗರಿಗೆ ಬೆಂಬಲ ಬೆಲೆ, 371(ಜೆ) ಸರ್ಮಪಕ ಅನುಷ್ಠಾನದಲ್ಲಿನ ನ್ಯೂನತೆ ಸೇರಿದಂತೆ ಈ ಭಾಗದ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಸರ್ಕಾರದ ಗಮನಕ್ಕೆ ತರುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಜನಸಾಮಾನ್ಯರಲ್ಲಿ ಯೋಜನೆಗಳ ಮಾಹಿತಿ ಕೊಂಡೊಯ್ಯುವುದು ಸೇರಿದಂತೆ ಪಕ್ಷದ ಸಂಘಟನೆ ಕುರಿತು ಚರ್ಚೆ ನಡೆಯಲಿದೆ. ಅಲ್ಲದೆ ಮುಖ್ಯವಾಗಿ ಪಕ್ಷದ ಸಂಘಟನೆ, ಮುಂಬರುವ ನಂಜನಗೂಡು, ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ಬರದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನ ನೀಡಲು ಒತ್ತಾಯ, ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಪ್ರಚಾರಕ್ಕೆ ತೆರಳುವುದು ಸೇರಿದಂತೆ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಸುಮಾರು ಐದಿನೈದು ವರ್ಷಗಳ ನಂತರ ಕಲಬುರಗಿಯಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಗೆ ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಾಗೌಡ, ರಮೇಶ್ ಜಿಗಜಿಣಗಿ, ನಿರ್ಮಲ ಸೀತಾರಾಮನ್, ಪ್ರಮುಖರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಪ್ರಹ್ಲಾದ್ ಜೋಶಿ, ಸೇರಿದಂತೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು , ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ 650 ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಹಿಂದೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಪಕ್ಷದ ಪ್ರಮುಖರೆಲ್ಲರೂ ಒಗ್ಗಟ್ಟು ಪ್ರದರ್ಶಿಸಿದ್ದರಿಂದ ಯಶಸ್ಸಿಯಾಗಿತ್ತು. ಕೇವಲ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಯಡಿಯೂರಪ್ಪ- ಈಶ್ವರಪ್ಪ ನಡುವಿನ ಸಂಬಂಧ ಹಾವು ಮುಂಗುಸಿಯುಂತಾಗಿದೆ. ಇಬ್ಬರ ನಡುವಿನ ಕಾದಾಟ ಜಿಲ್ಲೆಗಳಲ್ಲೂ ಎರಡು ಬಣಗಳನ್ನು ಸೃಷ್ಟಿಸಿದೆ. ಸ್ವತಃ ತವರು ಜಿಲ್ಲೆ ಶಿವಮೊಗ್ಗದಲ್ಲೇ ಉಭಯ ನಾಯಕರ ನಡುವಿನ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದರು. ಹೀಗೆ ಮುನಿಸಿಕೊಂಡಿರವವರು ಹಸ್ತಲಾಘವ ಮಾಡಲಿದ್ದಾರೆಂಬುದನ್ನು ಕಾದು ನೋಡಬೇಕು. ಆದರೆ, ಬ್ರಿಗೇಡ್‍ನೊಂದಿಗೆ ಗುರುತಿಸಿಕೊಂಡವರಿಗೆ ಬಿಜೆಪಿ ಸಮಾವೇಶಕ್ಕೆ ಅಹ್ವಾನ ನೀಡಿಲ್ಲ. ಹೀಗಾಗಿ ಅಂದು ಸಮಾವೇಶದಿಂದ ದೂರು ಉಳಿದುಕೊಳ್ಳಲು ಮತ್ತು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡುಯೂರಪ್ಪ ಅವರ ಮುಂದೆ ತಮ್ಮ ನೋವು ತೋಡಿಕೊಳ್ಳಲು ಹಿಂದುಳಿದ ವರ್ಗಗಳ ನಾಯಕರು ತಿರ್ಮಾನಿಸಿದ್ದಾರೆ.
OSCAR-2019
ಸಿಂಹ, ಹುಲಿ, ಘೇಂಡಾಮೃಗ ಮತ್ತಿತರ ಪ್ರಾಣಿಗಳು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ... ಜನ ಮಾತ್ರ ಜೀವ ಬೆದರಿಕೆಯಿಂದ ಮನೆಯೊಳಗೆ ಅಡಗಿ ಕೂತಿದ್ದಾರೆ! ಇದು ಜಾರ್ಜಿಯಾದ ರಾಜಧಾನಿ ತುಬುಲಿಸಿಯಲ್ಲಿ ಭಾನುವಾರ ಕಂಡ ದೃಶ್ಯ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಬುಲಿಸಿಯಲ್ಲಿ ಭಾರಿ ಪ್ರವಾಹ ಕಾಣಿಸಿಕೊಂಡಿದೆ. ಇದರಿಂದ ನಗರದಲ್ಲಿರುವ ಪ್ರಾಣಿ ಸಂಗ್ರಹಾಲಯ ಸಂಪೂರ್ಣವಾಗಿ ಜಲಾವೃತವಾಗಿದ್ದು, ಅಲ್ಲಿದ್ದ ಪ್ರಾಣಿಗಳೆಲ್ಲ ತಪ್ಪಿಸಿಕೊಂಡಿವೆ. ಹೆಚ್ಚಿನ ಚಿತ್ರಗಳು ಮುಂದಿವೆ...
OSCAR-2019
ರಾಯಚೂರು, ಅ.14– ಪಿಯುಸಿ ಮೊದಲ ವರ್ಷದ ವಿದ್ಯಾರ್ಥಿನಿ ಬಿಸಿಎಂ ಹಾಸ್ಟೆಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂಧನೂರಿನಲ್ಲಿ ನಡೆದಿದೆ. ತನುಜಾ (17) ಮೃತ ಯುವತಿ. ಎಸಿಎಂ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಯುವತಿ ಸಿಂಧನೂರು ನಗರದ ಬಿಸಿಎಂ ವಸತಿ ನಿಲಯದಲ್ಲಿದ್ದಳು. ಹಬ್ಬಕ್ಕೆ ಊರಿಗೆ ಹೋಗಿ ಬಂದವಳು ನಿನ್ನೆ ತಡರಾತ್ರಿ ನೇಣಿಗೆ ಶರಣಾಗಿದ್ದಾಳೆ. ವಸತಿ ನಿಲಯದ ಅಧಿಕಾರಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದಾವಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
OSCAR-2019
ಮೊಂಡುತನದಲ್ಲಿ ಎರಡು ವಿಧವಿದೆ. ಸಕಾರಾತ್ಮಕ ಮೊಂಡುತನ ಯಶಸ್ಸಿಗೆ ಕಾರಣವಾಗುತ್ತದೆ. ಆದ್ರೆ ನಕಾರಾತ್ಮಕ ಮೊಂಡುತನ ಲಾಭಕಾರಕವಲ್ಲ. ಸಣ್ಣ ಸಣ್ಣ ವಿಷಯಕ್ಕೆ ಮೊಂಡುತನ ಮಾಡುವುದನ್ನು ನಕಾರಾತ್ಮಕ ಮೊಂಡುತನವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಈ ರೀತಿ ಮೊಂಡುತನವನ್ನು ಮಕ್ಕಳಲ್ಲಿ ಕಾಣಬಹುದಾಗಿದೆ. ಮಂಗಳ ಹಾಗೂ ರಾಹು ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿದ್ದರೆ ಮಕ್ಕಳು ಈ ರೀತಿ ಮೊಂಡುತನ ಮಾಡ್ತಾರೆಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಮಂಗಳ ಗ್ರಹ ಕೆಟ್ಟ ಸ್ಥಾನದಲ್ಲಿದ್ದರೆ ಆ ವ್ಯಕ್ತಿ 28-48 ವರ್ಷಗಳ ಕಾಲ ಕೆಟ್ಟ ಜೀವನ ನಡೆಸ್ತಾನೆ. ಅದೇ ರಾಹು ಗ್ರಹ ಕೆಟ್ಟ ಸ್ಥಾನದಲ್ಲಿದ್ದರೆ ಮನುಷ್ಯ 36-52 ವರ್ಷಗಳ ಕಾಲ ಕೆಟ್ಟ ಜೀವನ ನಡೆಸಬೇಕಾಗುತ್ತದೆ. ಮಂಗಳ ಹಾಗೂ ರಾಹು ಕೆಟ್ಟದಾಗಿದ್ದರೆ ಮಕ್ಕಳು ಮೊಂಡುತನ, ಗಲಾಟೆ ಮಾಡುತ್ತಾರೆ. ಬೆಳ್ಳಿ ಮಕ್ಕಳನ್ನು ಶಾಂತವಾಗಿಡಲು ನೆರವಾಗುತ್ತದೆ. ಬೆಳ್ಳಿಯ ಆಭರಣ ಧರಿಸುವುದ್ರಿಂದ, ಬೆಳ್ಳಿ ಲೋಟದಲ್ಲಿ ನೀರು ಕುಡಿಯುವುದ್ರಿಂದ ಮನಸ್ಸು ಶಾಂತವಾಗಿರುತ್ತದೆ. ಮಕ್ಕಳ ಮನಸ್ಸನ್ನು ಶಾಂತಗೊಳಿಸಲು ಹಾಲಿಗೆ ಅಶ್ವಗಂಧ ಬೆರಸಿ ಕುಡಿಸಬೇಕು. ಮಕ್ಕಳ ಹಠವನ್ನು ಕಡಿಮೆ ಮಾಡಲು ಒಣದ್ರಾಕ್ಷಿ, ದ್ರಾಕ್ಷಿಯನ್ನು ನೀಡುವುದು ಒಳ್ಳೆಯದೆಂದು ಪರಿಗಣಿಸಲಾಗಿದೆ. ಗ್ಯಾಸ್ ಹಾಗೂ ಪಿತ್ತವನ್ನು ಹೆಚ್ಚಿಸುವ ಆಹಾರವನ್ನು ಮೊಂಡುತನ ಮಾಡುವ ಮಕ್ಕಳಿಗೆ ನೀಡಬಾರದು. ವಿಟಮಿನ್ ಹೆಚ್ಚಿಸುವ ಆಹಾರವನ್ನು ಮಕ್ಕಳಿಗೆ ನೀಡಬೇಕು. ಸಕ್ಕರೆ ಹಾಗೂ ಉಪ್ಪು ಹೆಚ್ಚಿರುವ ಆಹಾರವನ್ನು ಎಂದೂ ಮಕ್ಕಳಿಗೆ ನೀಡಬಾರದು. ಬಿಳಿ ಶ್ರೀಗಂಧ ಹಾಗೂ ಅರಿಶಿನದ ತಿಲಕವನ್ನು ಹಚ್ಚುವುದ್ರಿಂದಲೂ ಮೊಂಡುತನ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
OSCAR-2019
1983ರಲ್ಲಿ ಹಾಲಿ ಮುಖ್ಯಮಂತ್ರಿಗಳನ್ನು ಸೋಲಿಸಿದ ಅಭ್ಯರ್ಥಿ 'ದೈತ್ಯ ಸಂಹಾರಿ' ಬಿ.ಎ ಜೀವಿಜಯ ಅವರು ಈ ಬಾರಿ ಮಡಿಕೇರಿ ಕ್ಷೇತ್ರದಿಂದ ಜಾತ್ಯಾತೀತ ಜನತಾದಳ ಟಿಕೆಟ್ ಪಡೆದು ಸ್ಪರ್ಧೆಗಿಳಿಯುತ್ತಿದ್ದಾರೆ. ಅಂದಿನ ಸಿಎಂ ಆರ್. ಗುಂಡೂರಾವ್ ಮತ್ತು ಬಿ.ಎ. ಜೀವಿಜಯ ನಡುವಿನ ರಾಜಕೀಯ ಕದನ ಆ ಕಾಲಕ್ಕೆ ರೋಚಕವಾಗಿತ್ತು. ಅಂದಿನ ಕಾಲದಲ್ಲಿ ಎಲ್ಲೆಡೆ ಕಾಂಗ್ರೆಸ್ ತನ್ನ ಪ್ರಭುತ್ವ ಹೊಂದಿತ್ತು. ಜನತಾ ಪರಿವಾರದಿಂದ ಸ್ಪರ್ಧಿಸಿದ್ದ ಜೀವಿಜಯ ಅವರು ಅವರಿಗೆ ಗೆಲುವು ತಂದು ಕೊಟ್ಟಿದ್ದು ರೈತ ಸಮೂಹ. 1972 ಹಾಗೂ 78ರಲ್ಲಿ ಸತತವಾಗಿ ಗೆಲುವು ದಾಖಲಿಸಿದ್ದ ಕುಶಾಲನಗರ ಮೂಲದ ಗುಂಡೂರಾಯರು ಕೂಡಾ ಪ್ರಭಾವಿ ನಾಯಕರಾಗಿ, ಸಿಎಂ ಆಗಿ ಬೆಳೆದಿದ್ದು ಕೂಡಾ ಕುತೂಹಲಕಾರಿ. ಡಿ. ದೇವರಾಜ ಅರಸು ಅವರನ್ನು ಹಿಂದಿಕ್ಕಿ ಸಿಎಂ ಸ್ಥಾನಕ್ಕೇರಿದ್ದ ಗುಂಡೂರಾಯರಿಗೆ 1983ರಲ್ಲಿ ಸೋಲಿನ ಕಹಿಯುಣಿಸಿದ್ದು ಜೀವಿಜಯ. ರೈತರ ಮೇಲಿನ ದೌರ್ಜನ್ಯ, ಆಂತರಿಕ ಭಿನ್ನಮತ ಹೀಗೆ ಕೆಲ ಕಾರಣಗಳು ಗುಂಡೂರಾಯರ ವಿರುದ್ಧವಾಗಿ ನಿಂತು, ಜೀವಿಜಯ ಅವರ ಕೈಗೆ ಗೆಲುವಿನ ಕಾಣಿಕೆ ನೀಡಿತ್ತು. ಈ ಹಿಂದೆ ಇದ್ದ ಸೋಮವಾರ ಪೇಟೆ 2008ರ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ರದ್ದಾಯಿತು. ಇಲ್ಲಿಂದಲೇ ಗೆದ್ದು ಆರ್. ಗುಂಡೂರಾವ್ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಆದರೆ ಆ ಕ್ಷೇತ್ರವೇ ಇವತ್ತು ನೆನಪು ಮಾತ್ರ. 1983ರಲ್ಲಿ ಗೆಲುವು ಸಾಧಿಸಿದ ಬಳಿಕ ಸತತ 9 ಬಾರಿ ಸ್ಪರ್ಧಿಸಿರುವ ಜೀವಿಜಯ ಅವರು ಈಗ 10ನೇ ಬಾರಿಗೆ ಕಣಕ್ಕಿಳಿದಿದ್ದಾರೆ. 1983, 85, 2004ರಲ್ಲಿ ಗೆಲುವು ಸಾಧಿಸಿದರು. karnataka election flashback ba jivijaya madikeri karnataka assembly elections 2018 kodagu jds congress ಬಿಎ ಜೀವಿಜಯ ಮಡಿಕೇರಿ ಕರ್ನಾಟಕ ವಿಧಾನಸಭೆ ಚುನಾವಣೆ 2018 ಕೊಡಗು ಜೆಡಿಎಸ್ ಕಾಂಗ್ರೆಸ್
OSCAR-2019
ಬೆಂಗಳೂರು: ದೈನಂದಿನ ಬೆಲೆ ಪರಿಷ್ಕರಣೆ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದ್ದರೂ ಗ್ರಾಹಕರ ಗಮನಕ್ಕೆ ಬರುತ್ತಿಲ್ಲ. ಹಿಂದೆಲ್ಲಾ ತೈಲ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ತೈಲ ಬೆಲೆಯನ್ನು ಪರಿಷ್ಕರಿಸುತ್ತಿದ್ದವು. ರೂಪಾಯಿ ಲೆಕ್ಕದಲ್ಲಿ ಏರಿಳಿತವಾಗುತ್ತಿದ್ದ ಕಾರಣ ಗ್ರಾಹಕರ ಗಮನಕ್ಕೆ ಬರುತ್ತಿತ್ತು. ಕಳೆದ ಜುಲೈನಲ್ಲಿ ದೈನಂದಿನ ಬೆಲೆ ಪರಿಷ್ಕರಣೆ ಜಾರಿಗೆ ಬಂದಿದೆ. ಪೈಸೆಗಳ ಲೆಕ್ಕದಲ್ಲಿ ಬೆಲೆ ಏರಿಳಿತ ಕಾಣುತ್ತಿರುವುದರಿಂದ ಗ್ರಾಹಕರ ಗಮನ ಹರಿಸುವುದೇ ಇಲ್ಲ. ಬೆಂಗಳೂರಿನಲ್ಲಿ ಸೆಪ್ಟಂಬರ್ 3 ರಂದು ಪೆಟ್ರೋಲ್ ಬೆಲೆ ಲೀಟರ್ ಗೆ 70.62 ರೂ. ಇದ್ದು, ಸೆಪ್ಟಂಬರ್ 10 ರಂದು 71.31 ರೂ. ಆಗಿದೆ. ಪ್ರತಿ ಲೀಟರ್ ಗೆ 69 ಪೈಸೆ ಜಾಸ್ತಿಯಾಗಿದೆ. ಅದೇ ರೀತಿ ಡೀಸೆಲ್ ಬೆಲೆಯಲ್ಲಿಯೂ ಏರಿಕೆಯಾಗಿದ್ದು, 1.18 ರೂ. ಏರಿಕೆಯಾಗಿದೆ. "ಬಂಟ್ವಾಳದಲ್ಲಿ ಶಾಂತಿ ಕದಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ'' | Kannada Dunia | Kannada News | Karnataka News | India News ಮಂಗಳೂರಿನ ಬಂಟ್ವಾಳದಲ್ಲಿ ನಡೆದ ಗಲಭೆ ನಂತ್ರ ಸಿಎಂ ಸಿದ್ಧರಾಮಯ್ಯ ಇಂದು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಸಿಎಂ ಅಧಿಕಾರಿಗಳ ಸಭೆ ನಡೆಸಿದ್ದು, ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಅಧಿಕಾರಿಗಳ ಕೆಲಸಕ್ಕೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಮೂಲಗಳು ಹೇಳಿವೆ. ಸಭೆಯಲ್ಲಿ ಮಾತನಾಡಿದ ಸಿಎಂ ಬಂಟ್ವಾಳ ಗಲಾಟೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಗಲಭೆ ಸೃಷ್ಟಿಸಿದವರನ್ನು ಗಡಿಪಾರು ಮಾಡಿ. ನಿಷೇಧಾಜ್ಞೆ ಯಾರೇ ಉಲ್ಲಂಘಿಸಿದರೂ ಕಠಿಣ ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಅಪರಾಧ ಕಡಿಮೆ ಆಗಬೇಕು ಎಂದು ಸಿದ್ಧರಾಮಯ್ಯ ಸಭೆಯಲ್ಲಿ ಸೂಚಿಸಿದ್ದಾರೆ. ಮಂಗಳೂರು ಜನರು ಶಾಂತಿ ಪ್ರಿಯರು. ಆದ್ರೆಇತ್ತೀಚೆಗೆ ಶಾಂತಿ ಕದಡುತ್ತಿದೆ. ಕೂಡಲೆ ಶಾಂತಿ ನೆಲೆಸುವ ಕೆಲಸವಾಗಬೇಕೆಂದಿದ್ದಾರೆ ಸಿಎಂ.
OSCAR-2019
ಇತ್ತೀಚಿನ ದಿನಗಳಲ್ಲಿ ಪಾದಗಳ ಆರೈಕೆಯ ಬಗ್ಗೆ ಹೆಚ್ಚಿನವರು ಗಮನಹರಿಸುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು ಎತ್ತರದ ಚಪ್ಪಲಿಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಇನ್ನೂ ಕೆಲವರು ಮೆತ್ತನೆಯ ಚಪ್ಪಲಿಗಳತ್ತ ಗಮನಹರಿಸುತ್ತಿದ್ದಾರೆ. ಒಟ್ಟಾರೆಯಾಗಿ ತಮ್ಮ ಪಾದಗಳು ವಿವಿಧ ರಂಗಿನಿಂದ ಆಕರ್ಷಕವಾಗಿ ಕಾಣಬೇಕೆಂಬುದು ಎಲ್ಲರ ಬಯಕೆಯಾಗಿದೆ. ನಿಮ್ಮ ಕಾಲಿನ ಆರೈಕೆಯು ಮುಂದಿನ ಆಗುಹೋಗುಗಳನ್ನು ತಡೆಯತ್ತದೆ. ಈ ನಿಟ್ಟಿನಲ್ಲಿ ಕಾಲಿನ ಆರೈಕೆಯ ಬಗ್ಗೆ ಈ ತಾಣದಲ್ಲಿ ಅನೇಕ ಸಂಗತಿಗಳನ್ನು ಈ ಹಿಂದೆ ನಿಮಗಾಗಿ ನೀಡಲಾಗಿದೆ. ಈ ಲೇಖನದಲ್ಲಿಯೂ ಸಹ ಕೆಲವು ಸಂಗತಿಗಳನ್ನು ನೀಡಲಾಗಿದೆ. ನಿಮ್ಮ ಕಾಲನ್ನು ಬಿಸಿಲಿಗೆ ಹೆಚ್ಚು ಒಡ್ಡಿದರೆ, ಮೆಲನಿನ್ ಎಂಬ ಸತ್ವವು ಉತ್ಪತ್ತಿಯಾಗುತ್ತದೆ. ಇದರಿಂದ ಚರ್ಮವು ಕಪ್ಪಾಗಲು ಪ್ರಾರಂಭಿಸುತ್ತದೆ. ಔಷಧ ಉತ್ಪನ್ನಗಳು ಕೇವಲ ನಿಮ್ಮ ಚರ್ಮದ ಸತ್ತ ಜೀವ ಕೋಶಗಳನ್ನು ಹೊರತೆಗೆದು ಪಾದವನ್ನು ಹಿತಗೊಳಿಸುತ್ತದೆ. ಆದರೆ ಕಪ್ಪು ಕಲೆಗಳನ್ನು ಹೋಗಲಾಡಿಸುವ ಬಗೆ ಹೇಗೆ? ಬನ್ನಿ ಪಾದದ ಕಪ್ಪು ಕಲೆಗಳನ್ನು ಹೋಗಲಾಡಿಸಲು ಕೆಲವು ಸೌಂದರ್ಯವರ್ಧಕ ಪ್ಯಾಕ್‌ಗಳ ಸಂಗತಿಗಳನ್ನು ನಿಮ್ಮ ಉಪಯೋಗಕ್ಕಾಗಿ ಈ ಲೇಖನದಲ್ಲಿ ನೀಡಲಾಗಿದೆ. ಪಾದ ಅಸಹ್ಯವಾಗಿದ್ದರೆ ನೀವು ಎಷ್ಟೇ ದುಬಾರಿ ಪಾದರಕ್ಷೆ ಧರಿಸಿದರೂ ಕೂಡ ಪಾದ ಅಂದಗೆಡುತ್ತದೆ. ಆದ್ದರಿಂದ ಪಾರ್ಲರ್‌ಗೆ ಹೋಗಿ ದುಬಾರಿ ಸೌಂದರ್ಯ ಪರಿಹಾರಗಳನ್ನು ಪಡೆಯುವ ಬದಲಿಗೆ ಮನೆಯಲ್ಲೇ ನೈಸರ್ಗಿಕವಾಗಿ ದೊರೆಯುವ ಪರಿಹಾರಗಳನ್ನು ನೀವು ಪಡೆದುಕೊಳ್ಳಬಹುದು. ಬ್ರೌನ್ ಶುಗರ್, ಆಲೀವ್ ಆಯಿಲ್, ಜೇನು ಮತ್ತು ಲಿಂಬೆಯ ಕೆಲವು ಹನಿಗಳನ್ನು ತೆಗೆದುಕೊಳ್ಳಿ. ನಿಮ್ಮ ಪಾದಕ್ಕೆ ಈ ಮಿಶ್ರಣವನ್ನು ಹಚ್ಚಿ ಮತ್ತು ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ. ಕೆಲವು ನಿಮಿಷ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚನೆಯ ನೀರಿನಿಂದ ಕಾಲುಗಳನ್ನು ತೊಳೆದುಕೊಳ್ಳಿ. ಕೊನೆಗೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಹಿಂದಿನಿಂದಲೂ ಬಳಸಿಕೊಂಡು ಬಂದಿರುವ ವಿಧಾನ ಇದಾಗಿದೆ. ನಿಮ್ಮ ದುರ್ಬಲ ಮತ್ತು ಒಣ ಪಾದದ ತ್ವಚೆಯನ್ನು ಆರೈಕೆ ಮಾಡಲು ಪೆಟ್ರೋಲಿಯಂ ಜೆಲ್ಲಿ ಅತ್ಯುತ್ತಮವಾದುದಾಗಿದೆ. ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ ಮಾಡಲು ಮತ್ತು ಮೃದುವಾಗಿಸಲು ಇದು ನೆರವುಕಾರಿಯಾಗಿದೆ. ಸ್ವಲ್ಪ ಪೆಟ್ರೋಲಿಯಂ ಜೆಲ್ಲಿ ತೆಗೆದುಕೊಳ್ಳಿ ಮತ್ತು ವೃತ್ತಾಕಾರವಾಗಿ ಪಾದಗಳಿಗೆ ಹಚ್ಚಿ ಮಸಾಜ್ ಮಾಡಿ. ರಾತ್ರಿ ಪೂರ್ತಿಹಾಗೆಯೇ ಬಿಡಿ ನಂತರ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ನಿಮ್ಮ ಪಾದದ ಮಸಾಜ್ ಕೂಡ ಅತೀ ಮುಖ್ಯವಾದುದು. ಇದರಿಂದ ನಿಮ್ಮ ಒಣ ತ್ವಚೆಗೆ ಮಾಲೀಶು ಆರೈಕೆ ದೊರೆಯುತ್ತದೆ. ಅಡುಗೆ ಮನೆಯಲ್ಲಿರುವ ಎಣ್ಣೆಗಳನ್ನು ಬಳಸಿಕೊಂಡು ಪಾದದ ಮಸಾಜ್ ಮಾಡಿ. ಮೊದಲಿಗೆ ನಿಮ್ಮ ಪಾದಗಳನ್ನು ಸೋಪು ನೀರಿನಲ್ಲಿ ಮುಳುಗಿಸಿ. ಪ್ಯೂಮಿಕ್ ಸ್ಟೋನ್ ಬಳಸಿಕೊಂಡು ಪಾದಗಳನ್ನು ಉಜ್ಜಿ. ಯಾವುದೇ ವೆಜಿಟೇಬಲ್ ಎಣ್ಣೆಗಳಾದ ತೆಂಗಿನೆಣ್ಣೆ, ಕ್ಯಾನಲೊ ಎಣ್ಣೆ ಮೊದಲಾದವುಗಳನ್ನು ಬಳಸಿಕೊಂಡು ಮಸಾಜ್ ಮಾಡಿ. ರಾತ್ರಿ ಪೂರ್ತಿ ಹಾಗೆಯೇ ಬಿಡಿ. ತ್ವಚೆ ಸಂಬಂಧಿ ಸಮಸ್ಯೆಗಳಿಗೆ ಅಲೊವೇರಾ ಅಥವಾ ಲೋಳೆಸರ ಜೆಲ್ ಅತ್ಯುತ್ತಮವಾದುದು. ಇದು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ನಿಮ್ಮ ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಪೋಷಣೆ ಮಾಡುತ್ತದೆ. ಇದರಲ್ಲಿ ಎ, ಸಿ, ಡಿ ಮತ್ತು ಇ ವಿಟಮಿನ್ ಗಳು ಯಥೇಚ್ಛವಾಗಿದೆ. ಫೋಲಿಕ್ ಆಸಿಡ್ ಮತ್ತು ನಿಯಾಸಿನ್ ಅಂಶವೂ ಇದರಲ್ಲಿದೆ. ತಾಮ್ರ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಪೊಟಾಷಿಯಂ, ಜ಼ಿಂಕ್, ಸೋಡಿಯಂ ಮತ್ತು ಕಬ್ಬಿಣದಂತಹ ಖನಿಜ ಸತ್ವಗಳು ಇದರಲ್ಲಿದೆ. ಅಲ್ಲದೇ ನಮ್ಮ ದೇಹಕ್ಕೆ ಅವಶ್ಯವಿರುವ ಅಮೈನೊ ಆಸಿಡ್ ಮತ್ತು ಜೀವಸತ್ವಗಳೂ ಸಹ ಇದರಲ್ಲಿ ಅಡಗಿದೆ.ಆದ್ದರಿಂದ ಅಲೋವೆರಾದಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದಂತಹ ಸಾಕಷ್ಟು ಸತ್ವಗಳು ಅಡಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣವು ದೇಹದ ರೋಗ ಪ್ರತಿಬಂಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯು ಇಮ್ಮಡಿಯಾಗುತ್ತದೆ. ಅಲೊವೇರಾ ಜೆಲ್ ಬಳಸಿ ಕೂಡ ನಿಮ್ಮ ಪಾದದ ಆರೈಕೆಯನ್ನು ನೀವು ಮಾಡಬಹುದು. ಕಾರ್ನ್‌ಮೀಲ್ ಮತ್ತು ಓಟ್‌ಮೀಲ್ ಬಳಸಿಕೊಂಡು ಪುಡಿಯನ್ನು ಸಿದ್ಧಪಡಿಸಿ. ಇದಕ್ಕೆ ಅಲೊವೇರಾ ಜೆಲ್ ಮಿಶ್ರ ಮಾಡಿ. ನಂತರ ನಿಮ್ಮ ಪಾದಕ್ಕೆ ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿಕೊಂಡು ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಸಾಕ್ಸ್ ಬಳಸಿ ನಿಮ್ಮ ಪಾದಗಳನ್ನು ಮುಚ್ಚಿ. ನಿಮ್ಮ ಪಾದ ಮಗುವಿನ ಪಾದದಂತೆ ಮೃದುವಾಗಿರುತ್ತದೆ. ಈ ವಿಧಾನಗಳನ್ನು ಬಳಸಿ ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಹಣ್ಣುಗಳಲ್ಲಿ ಹಲವಾರು ರೋಗಗಳನ್ನು ತಡೆಯುವ ಹಾಗೂ ನಿವಾರಿಸುವಂತ ಶಕ್ತಿ ಇದೆ. ಹಿಂದಿನಿಂದಲೂ ಭಾರತೀಯರು ಆಯುರ್ವೇದದ ಮೂಲಕ ಪ್ರಕೃತಿಯಲ್ಲಿ ಸಿಗುವಂತಹ ಗಿಡಮೂಲಿಕೆ ಹಾಗೂ ಹಣ್ಣುಗಳನ್ನು ಬಳಸಿಕೊಂಡು ಚಿಕಿತ್ಸೆ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ಲಿಂಬೆಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದರಲ್ಲಿರುವ ಪೋಷಕಾಂಶಗಳು ಮತ್ತು ಫ್ಲಾವನಾಯ್ಡ್ ಶಕ್ತಿಶಾಲಿ ರೋಗನಿರೋಧಕವಾಗಿ ಕೆಲಸ ಮಾಡುತ್ತದೆ. ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿ ಉಗುರುಬೆಚ್ಚನೆಯ ನೀರನ್ನು ತುಂಬಿಸಿ.ಲಿಂಬೆ ಹಣ್ಣೊಂದನ್ನು ಅಡ್ಡಲಾಗಿ ಕತ್ತರಿಸಿ ಅದರ ಮೇಲೆ ಕೊಂಚ ಉಪ್ಪನ್ನು ಸವರಿ. ಈ ಲಿಂಬೆಹಣ್ಣಿನಿಂದ ಪಾದಗಳ ಕೆಳಭಾಗವನ್ನು ಹಿಂಡುತ್ತಾ ಸವರಿ. ಬಲಪಾದಕ್ಕೆ ಅರ್ಧ ಲಿಂಬೆ, ಎಡಗಾಲಿಗೆ ಅರ್ಧ ಲಿಂಬೆ ಉಪಯೋಗಿಸಿ. ತದನಂತರ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ವರೆಗೆ ಅನುಕ್ರಮವಾಗಿ ಎಡ ಮತ್ತು ಬಲ ಪಾದಗಳನ್ನು ಲಿಂಬೆಯಿಂದ ಉಜ್ಜುತ್ತಾ ಬನ್ನಿ.ಬಳಿಕ ಕೊಂಚ ಕಾಲ ಒಣಗಲು ಬಿಟ್ಟು ಉಗುರುಬೆಚ್ಚನೆಯ ನೀರಿನಲ್ಲಿ ಕಾಲಿಡಿ. ಸುಮಾರು ಐದು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಒರಟಾಗಿದ್ದ ಮತ್ತು ಚರ್ಮದ ಸತ್ತ ಜೀವಕೋಶಗಳು ಸಡಿಲಗೊಂಡು ಕಾಲನ್ನು ಉಜ್ಜಿಕೊಂಡಾಗ ನಿವಾರಣೆಯಾಗುತ್ತದೆ. ಉಜ್ಜಿಕೊಳ್ಳಲು ಒರಟು ಕಲ್ಲು ಅಥವಾ ಇದಕ್ಕಾಗಿಯೇ ಇರುವ ಉಪಕರಣವನ್ನು ಉಪಯೋಗಿಸಬಹುದು. ನಿಮ್ಮ ಪಾದಗಳನ್ನು ಹೈಡ್ರೇಟ್ ಮಾಡಲು ತೆಂಗಿನೆಣ್ಣೆಯನ್ನು ಬಳಸಿ. ಪ್ರತೀ ದಿನ ತೆಂಗಿನೆಣ್ಣೆಯನ್ನು ಬಳಸಿ ಪಾದಗಳನ್ನು ಮಸಾಜ್ ಮಾಡಿ. ಇದು ಪಾದಗಳನ್ನು ಮೃದುವಾಗಿರಿಸುವುದಲ್ಲದೆ ಹೈಡ್ರೇಟ್ ವನ್ನಾಗಿ ಮಾಡುತ್ತದೆ. ಮಲಗುವ ಮುಂಚೆ ತೆಂಗಿನೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ನಂತರ ಬೆಳಗ್ಗೆ ಸ್ನಾನದ ಸಮಯದಲ್ಲಿ ಪಾದಗಳನ್ನು ತೊಳೆದುಕೊಳ್ಳಿ.
OSCAR-2019
`ಒಂದು ಬಾಗಿಲು ಮುಚ್ಚಿದಾಗ ಮತ್ತೊಂದು ಬಾಗಿಲು ಖಂಡಿತ ತೆರೆದಿರುತ್ತದೆ. ಆದರೆ ಮುಚ್ಚಿದ ಬಾಗಿಲೆಡೆಗೆ ನಾವು ತುಂಬಾ ಹೊತ್ತು ನೋಡುತ್ತಿರುತ್ತೇವೆಯೇ ಹೊರತು ನಮಗಾಗಿ ತೆರೆದ ಬಾಗಿಲಿನತ್ತ ಕಣ್ಣು ಹರಿಸುವುದೇ ಇಲ್ಲ~ ನೋಡಬೇಕೆಂದರೆ ಕಾಣದ ಹಾಗೂ ಆಲಿಸಬೇಕೆಂದರೆ ಕೇಳದ ಅಮೆರಿಕದ ಖ್ಯಾತ ಲೇಖಕಿ ಹೆಲೆನ್ ಕೆಲ್ಲರ್ ಅಂಗವಿಕಲರಿಗೆ ಸ್ಫೂರ್ತಿ ಉಂಟು ಮಾಡಲು ಹೇಳಿದ ಮಾತಿದು. ಅದೆಷ್ಟು ಮಂದಿಗೆ ಈ ಮಾತು ಸ್ಫೂರ್ತಿ ಆಗಿದೆಯೋ ಗೊತ್ತಿಲ್ಲ. ಆದರೆ ಶಿವಮೊಗ್ಗದ ಹುಡುಗ ಶೇಖರ್ ನಾಯಕ್ ಈಗ ಎಲ್ಲರಂತೆ ಬದುಕಲು ಆ ನುಡಿಗಳು ಪ್ರೇರಣೆ ಆಗಿವೆ. ಅಂದ ಹಾಗೆ, ಮಂದ ದೃಷ್ಟಿಯ ಶೇಖರ್ ಈಗ ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ. ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಆಡಿ ರಾಜ್ಯಕ್ಕೆ ಹೆಮ್ಮೆ ತಂದ ಆಟಗಾರ. ಆದರೆ ಈ ಹುಡುಗ ನಡೆದು ಬಂದ ಹಾದಿಯ ಕಥೆಗೆ ಕಿವಿ ಕೊಟ್ಟರೆ ನಿಮ್ಮ ಹೃದಯ ಕಲಕದೇ ಇರದು, ಕಣ್ಣಂಚಿನಲ್ಲಿ ನೀರು ಜಿನುಗದೇ ಇರದು. ಶೇಖರ್ ಅವರ ಅಮ್ಮ ಜಮಿಲಾ ಬಾಯಿ ಕೂಡ ಅಂಧರು. ಅಷ್ಟೇ ಅಲ್ಲ, ಜಮಿಲಾ ಅವರ ನಾಲ್ಕು ಮಂದಿ ಸಹೋದರಿಯರಿಗೂ ಕಣ್ಣು ಕಾಣಿಸುವುದಿಲ್ಲವಂತೆ. `ನಿನಗೆ ಸರಿಯಾಗಿ ಕಣ್ಣು ಕಾಣಿಸದೇ ಇರಬಹುದು. ಆದರೆ ಇಡೀ ಪ್ರಪಂಚಕ್ಕೆ ನೀನು ಕಾಣಿಸಬೇಕು. ನೀನು ಯಾರು ಎಂದು ಎಲ್ಲರಿಗೂ ಗೊತ್ತಾಗಬೇಕು ಎಂದು ಅಮ್ಮ ಹೇಳುತ್ತಿದ್ದಳು. ಅವಳೀಗ ಇಲ್ಲ. ಆದರೆ ಆ ಮಾತುಗಳನ್ನು ನಾನು ಸವಾಲಾಗಿ ಸ್ವೀಕರಿಸಿದೆ~ ಎನ್ನುತ್ತಾರೆ ಶೇಖರ್. `ಹುಟ್ಟಿನಿಂದಲೇ ನನಗೆ ಈ ಸಮಸ್ಯೆ ಇದೆ. ಆದರೆ ನನ್ನ ಜೀವನ ಸಾಗಿಸಲು ಹಾಗೂ ಅಂದುಕೊಂಡ ಗುರಿ ಮುಟ್ಟಲು ಇದು ಯಾವತ್ತೂ ಅಡ್ಡಿ ಆಗಿಲ್ಲ. ಅದನ್ನು ತನ್ನ ದೌರ್ಬಲ್ಯ ಎಂದು ಭಾವಿಸಿಲ್ಲ. ಏನಾದರೂ ಸಾಧನೆ ಮಾಡಲು ನಾನು ಆಯ್ಕೆ ಮಾಡಿಕೊಂಡ ಕ್ಷೇತ್ರ ಕ್ರಿಕೆಟ್~ ಎಂದು `ಪ್ರಜಾವಾಣಿ~ಯೊಂದಿಗೆ ಮಾತನಾಡುತ್ತಾ ಶೇಖರ್ ತಮ್ಮ ಕಥೆಯನ್ನು ಬಿಚ್ಚಿಟ್ಟರು. ಜೀವನದಲ್ಲಿ ವಿಧಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವರಿಗೆ ಏನನ್ನೂ ಕೇಳದೆ ಎಲ್ಲವನ್ನು ಧಾರಾಳವಾಗಿ ನೀಡುತ್ತದೆ. ಆದರೆ ಇನ್ನು ಕೆಲವರಿಗೆ ಬದುಕಿನಲ್ಲಿ ಏನನ್ನೂ ಕೊಡುವುದಿಲ್ಲ. ಬದಲಿಗೆ ಇರುವುದನ್ನೇ ಕಿತ್ತುಕೊಂಡು ಬಿಡುತ್ತದೆ. ಅಲ್ಲವೇ? `ನಾನು ಜನಿಸಿ ಎಂಟು ವರ್ಷಗಳವರೆಗೆ ಪೂರ್ಣ ಅಂಧನಾಗಿದ್ದೆ. ಒಮ್ಮೆ ಕಾಲುವೆಯಲ್ಲಿ ಬಿದ್ದಾಗ ಕಣ್ಣಿಗೆ ಪೆಟ್ಟಾಗಿತ್ತು. ಆಗ ಬೆಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೆ. ಹಾಗಾಗಿ ಕೊಂಚ ದೃಷ್ಟಿ ಪಡೆಯಲು ಸಾಧ್ಯವಾಯಿತು. ಆದರೆ ಅದಾಗಿ 15 ದಿನಗಳಲ್ಲಿ ಅಪ್ಪ ಲಚ್ಮಾ ನಾಯಕ್ ತೀರಿಕೊಂಡರು. ಅಪ್ಪನ ಮುಖವನ್ನು ಸರಿಯಾಗಿ ನೋಡಲು ಕೂಡ ದೇವರು ನನಗೆ ಅವಕಾಶ ನೀಡಲಿಲ್ಲ. ಕೆಲ ವರ್ಷಗಳ ಬಳಿಕ ಅಮ್ಮ ಸಾವನ್ನಪ್ಪಿದಳು~ ಎಂದಾಗ ಶೇಖರ್ ಕಣ್ಣುಗಳು ನೀರಾಡಿದವು. 1997ರಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದ ಶೇಖರ್ 2000ರಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆ ಆದರು. 2004ರಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಶೇಖರ್ 198 ರನ್ ಗಳಿಸಿದಾಗ ಇಡೀ ಅಂಧರ ಕ್ರಿಕೆಟ್ ವಲಯ ಭೇಷ್ ಎಂದಿತ್ತು. ಅವರು 2002 ಹಾಗೂ 2006 ವಿಶ್ವಕಪ್‌ನಲ್ಲಿ ಭಾರತ ತಂಡ ಪ್ರತಿನಿಧಿಸಿದ್ದಾರೆ. 2010ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ಭಾರತ ತಂಡದ ಸಾರಥ್ಯವನ್ನು ಶೇಖರ್ ವಹಿಸಿದ್ದರು. 2011ರ ನವೆಂಬರ್‌ನಲ್ಲಿ ಭಾರತ ತಂಡ ಪಾಕ್ ಪ್ರವಾಸ ಕೈಗೊಂಡಿತ್ತು. ಈಗ ಭಾರತ ತಂಡದಲ್ಲಿ ಕರ್ನಾಟಕದ ಇಬ್ಬರು ಆಟಗಾರರು ಇದ್ದಾರೆ. ಮತ್ತೊಬ್ಬ ಆಟಗಾರ ಪ್ರಕಾಶ್. `ನೀನು ಕುರುಡನಲ್ಲ, ಚೆನ್ನಾಗಿ ಕಣ್ಣು ಕಾಣಿಸುವ ನಾವು ಕುರುಡರು~ ಎಂದು ಕೆಲವರು ನನ್ನ ಆಟಕ್ಕೆ ಬೆನ್ನು ತಟ್ಟಿದಾಗ ಆಗುವ ಖುಷಿಯಲ್ಲಿಯೇ ನಾನು ಬದುಕುತ್ತಿದ್ದೇನೆ ಎನ್ನುವ 26 ವರ್ಷ ವಯಸ್ಸಿನ ಶೇಖರ್ `ಚೆಂಡು ಎಂಬುದು ಒಂದು ಜೀವನ. ಅದನ್ನು ಬೆನ್ನಟ್ಟಿ ಹಿಡಿಯಲು ಮುಂದಾಗುವುದೇ ಗುರಿ ಮುಟ್ಟುವುದು ಎಂದರ್ಥ. ನಮ್ಮಲ್ಲಿ ಏನು ಇರುತ್ತದೆಯೋ ಅಷ್ಟಕ್ಕೆ ತೃಪ್ತಿಪಟ್ಟುಕೊಂಡು ಸಾಧನೆಯತ್ತ ಗಮನ ಹರಿಸಬೇಕು. ಏಕೆಂದರೆ ಈ ಜಗತ್ತಿನಲ್ಲಿ ಏನಿದ್ದರೂ, ಎಷ್ಟಿದ್ದರೂ ಸಾಲುವುದಿಲ್ಲ~ ಎಂದು ಅವರು ಜೀವನವನ್ನು ವಿಶ್ಲೇಷಿಸುತ್ತಾರೆ. `ಕೆಲ ಹುಡುಗರು ಬೇರೆ ಬೇರೆ ರೀತಿಯಲ್ಲಿ ನನ್ನನ್ನು ಹೀಯಾಳಿಸುತ್ತಿದ್ದರು. ಕುರುಡ ಎಂದು ಜೋರಾಗಿ ಕೂಗಿ ಕರೆಯುತ್ತಿದ್ದರು. ತುಂಬಾ ನೋವಾಗುತಿತ್ತು. ಆದರೆ ನಗುತ್ತಲೇ ಅವರ ಕರೆಗೆ ಓ ಎನ್ನುತ್ತಿದ್ದೆ. ಈ ರೀತಿ ಹೀಯಾಳಿಸುತ್ತಿದ್ದವರು ಈಗ ಏನಾಗಿದ್ದಾರೆಯೋ ಗೊತ್ತಿಲ್ಲ. ಆದರೆ ನಾನು ಭಾರತ ತಂಡದ ನಾಯಕ~ ಎಂದು ಶೇಖರ್ ಹೆಮ್ಮೆಯಿಂದ ನುಡಿಯುತ್ತಾರೆ.ರೇಸ್‌ನಲ್ಲಿ ಕೊನೆಯ ಸ್ಥಾನ ಪಡೆಯುವವ ಸೋತವನಲ್ಲ. ಆದರೆ ಒಮ್ಮೆಯೂ ಓಡಲು ಪ್ರಯತ್ನಿಸದವನು, ಓಡಿದರೆ ಸೋಲು ಎದುರಾಗುತ್ತದೆ ಎಂದು ಭಯ ಪಡುವವನು ಸೋತವ~ ಎಂದು ಯಾರೋ ಹೇಳಿದ ಮಾತು ನೆನಪಾಗುತ್ತಿದೆ. ಸಮರ್ಥರ ಕ್ರಿಕೆಟಿಗರಿಗೆ ಐಸಿಸಿ ಇರುವಂತೆ ವಿಶ್ವ ಅಂಧರ ಕ್ರಿಕೆಟ್ ಮಂಡಳಿ ಇದೆ. ಇದು ಇಂಗ್ಲೆಂಡ್‌ನಲ್ಲಿದೆ. ಸಮರ್ಥರು ಕ್ರಿಕೆಟ್ ಆಡುವ ದೇಶಗಳೆಲ್ಲಾ ಅಂಧರ ಕ್ರಿಕೆಟ್‌ನಲ್ಲೂ ಪಾಲ್ಗೊಳ್ಳುತ್ತವೆ. ಭಾರತ ಅಂಧರ ಕ್ರಿಕೆಟ್ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಬಿಸಿಸಿಐ ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿದೆ. ಈ ಸಂಸ್ಥೆಯ ಅಧ್ಯಕ್ಷ ಎಸ್.ನಾಗೇಶ್ ಹಾಗೂ ಕಾರ್ಯದರ್ಶಿ ಜಿ.ಕೆ.ಮಹಾಂತೇಶ್. ಇವರಿಬ್ಬರೂ ಅಂಧರು ಹಾಗೂ ಮಾಜಿ ಆಟಗಾರರು. ಇದಕ್ಕೆ ಆರ್ಥಿಕ ಸಹಾಯ ನೀಡುತ್ತಿರುವುದು ಸಮರ್ಥನಂ ಅಂಗವಿಕಲರ ಸಂಸ್ಥೆ. ಭಾರತ ತಂಡ ಈಗಾಗಲೇ 25 ಅಂತರರಾಷ್ಟ್ರೀಯ ಏಕದಿನ ಹಾಗೂ ಮೂರು ಟ್ವೆಂಟಿ-20 ಪಂದ್ಯಗಳಲ್ಲಿ ಆಡಿದೆ. ಕರ್ನಾಟಕದಲ್ಲಿ 23 ಜಿಲ್ಲಾ ತಂಡಗಳಿವೆ. ಸುಮಾರು 700 ಅಂಧ ಕ್ರಿಕೆಟಿಗರಿದ್ದಾರೆ. ಅಂಧರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಆಯೋಜಿಸುವ ಅವಕಾಶ ಭಾರತಕ್ಕೆ ಲಭಿಸಿದೆ. ಅದು ಬೆಂಗಳೂರಿನಲ್ಲಿ ಡಿಸೆಂಬರ್ ಎರಡರಿಂದ 10ರವರೆಗೆ ಜರುಗಲಿದೆ. 10 ದೇಶಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ. `ಇದೊಂದು ಹೆಮ್ಮೆಯ ವಿಷಯ~ ಎನ್ನುತ್ತಾರೆ ಮಹಾಂತೇಶ್.
OSCAR-2019
ಎರಡೆರಡು ಅಡಿ ಎತ್ತರದ ಮೆಟ್ಟಿಲುಗಳನ್ನು ಹತ್ತಿ, ಮುಖ್ಯ ಬಾಗಿಲಲ್ಲೇ ತಲೆ ಬಗ್ಗಿಸಿ, ಮುಂದಿನ ಬಾಗಿಲಿಗೆ ಕಾಲು ಕುಂಟಾಗಿಸಿ, ಸೊಂಟ, ಬೆನ್ನನ್ನೂ ಬಾಗಿಸಿ, ಕಾಲು ಎತ್ತಿಟ್ಟು ಒಂದೊಂದೇ ಹೊಸ್ತಿಲು ದಾಟುತ್ತಾ, ಹಿತ್ತಲಲ್ಲಿ ಹೊರಬಂದು, ಎರಡನೇ ಮನೆಯ ಬಚ್ಚಲು ಹೊಕ್ಕು ಕೈಕಾಲು ತೊಳೆದು, ಎದುರಿನ ಹಟ್ಟಿಯಲ್ಲಿ ಹೊರಬಂದು, ಮೂರನೇ ಮನೆಯ ಪಾಯಿಖಾನೆಯಲ್ಲಿ ಅವಸರದಲ್ಲೇ ಒಂಚೂರು ಕಾಲ ಕಳೆದು, ನಾಲ್ಕನೇ ಮನೆಯಲ್ಲಿರುವ ಮೂಲ ದೇವರಿಗೆ ಕೈಮುಗಿದು, ಐದನೇ ಮನೆಯಲ್ಲಿ ಕೆಲ ದಿನಗಳ ಹಿಂದೆ ಉಪನಯನಕ್ಕೆ ಮಾಡಿದ್ದ ಸ್ವೀಟು ತಿಂದು, ಆರನೇ ಮನೆಯ ಪಡಸಾಲೆಗೆ ಬಂದು, ಅಲ್ಲಿ ಶಿವರಾಮ ಕಾರಂತ-ಗಂಗೂಬಾಯಿ ಹಾನಗಲ್‌ರಂಥ ಮಹಾರಥರೇ ಉಳಿದುಕೊಂಡಿದ್ದರು ಎಂಬುದು ತಿಳಿದು, ಸುಸ್ತಾಗಿ, ಇನ್ನುಳಿದ ಆರು ಮನೆಗಳಿಗೆ ಸಾಯಂಕಾಲ ಬರುವುದಾಗಿ ಹೇಳಿದೆವು ! ಒಂದು ಮನೆಯ ಮಾಡು ಇನ್ನೊಂದಕ್ಕೆ ತಾಗಿಕೊಂಡು ಉದ್ದಕ್ಕೂ ಹನ್ನೆರಡು ಮನೆಗಳು. ಐದಡಿ ಅಗಲದ ಮಣ್ಣಿನ ಗೋಡೆಗಳು, ಒಂದಡಿ ದಪ್ಪದ ಮರದ ಬಾಗಿಲುಗಳು, ಗೋಡೆಗಳಲ್ಲಿ ತೂಗುತ್ತಿರುವ ಶಂಕರಾಚಾರ್ಯ, ಶ್ರೀಧರಸ್ವಾಮಿ, ರಾಮಕೃಷ್ಣ ಪರಮಹಂಸ ಮತ್ತು ದೇವಾನುದೇವತೆಗಳು. ಮಧ್ಯೆ ಅಚ್ಚರಿ ಹುಟ್ಟಿಸುವ ಕುವೆಂಪು, ಶಿವರಾಮ ಕಾರಂತರ ಫೋಟೊಗಳು. ಮನೆಯೆದುರಿನ ಚಿಟ್ಟೆಗಳಲ್ಲಿ ಕಾಟನ್ ಸೀರೆಯುಟ್ಟು ಕುಳಿತಿರುವ ಮುದುಕಿಯರು, ಗಡಿಬಿಡಿಯಲ್ಲಿ ಓಡಾಡುತ್ತಿರುವ ತಲೆಯಂಚು ಬಿಳಿಯಾದ ಗಂಡಸರು. ಆದರೆ ಬಿಳಿ ಪಂಚೆಯಿಟ್ಟುಕೊಂಡು, ಕೂದಲು ಸರಿಮಾಡಿಕೊಳ್ಳುತ್ತಾ ಎಲ್ಲ ಮನೆಗಳಿಂದ ಹೊರಬರುತ್ತಿರುವವರನ್ನು ಆಚೀಚೆಯ ಮನೆಯವರು, ‘ಎಂಥ ಡಾಕ್ಟ್ರೆ, ನೋಡದ್ದೆ ಸುಮಾರು ಸಮಯ ಆತು’, ‘ಹೋ ಎಂಜಿನಿಯರು ಬೆಂಗ್ಳೂರಿಲಿ ಚಳಿ ಹೇಂಗಿದ್ದು?’, ‘ಎಂತ ಕೂಸೆ, ಟಿವಿ ಕೆಲ್ಸ ಹೇಂಗಿದ್ದು?’ ಅನ್ನತೊಡಗಿದಾಗ ನಮಗೂ ಒಂಚೂರು ಗಲಿಬಿಲಿಯಾದದ್ದು ಹೌದು ! ಅಲ್ಲಿ ಉಳಿದುಕೊಂಡ ಇಪ್ಪತ್ತನಾಲ್ಕು ಗಂಟೆಗಳಲ್ಲಿ, ನಾಲ್ಕೈದು ಮನೆಯ ಬಚ್ಚಲುಗಳಲ್ಲಿ ಕೀಜಿ, ಹಿತ್ತಾಳೆ, ಪ್ಲಾಸ್ಟಿಕ್, ಸ್ಟೀಲು ತಂಬಿಗೆಗಳಿಂದ ತೆಳ್ಳಗಿನ ತಣ್ಣನೆಯ ನೀರು ಎತ್ತೆತ್ತಿ ಸುರಿದುಕೊಂಡು ಮನಸೋಇಚ್ಚೆ ಮಿಂದೆವು. ಇಂತಹುದೊಂದು ಮಾಯಕದಂಥ ಘಟನಾವಳಿ ಜರಗಿದ್ದ್ದು , ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ಸೊರಬ ತಾಲೂಕಿಗೆ ಸೇರಿದ ಊರೊಂದರ ಬ್ರಾಹ್ಮಣರ ಅಗ್ರಹಾರದಲ್ಲ. ಜಗಳವಿಲ್ಲದೆಯೂ ಜೀವಂತವಾಗಿರುವ, ಪೇಟೆಯ ಸೋಂಕಿಗೆ ತುತ್ತಾಗದೆ-ಹಳ್ಳಿಯ ಜಾಡ್ಯಕ್ಕೂ ಸಿಲುಕದೆ ಕಂಗೊಳಿಸುತ್ತಿರುವ ಆ ಲೋಕ, ಹಳ್ಳಿ ಭಾರತದ ಒಂದು ರಸಘಟ್ಟಿ. ಮನೆಯ ಒಬ್ಬರನ್ನೋ ಇಬ್ಬರನ್ನೋ ನಗರಕ್ಕೆ ಕಳುಹಿಸಿ, ಹಳ್ಳಿ ಕಲುಷಿತವಾಗದಂತೆ ನೋಡಿಕೊಳ್ಳುತ್ತ, ಊರಿನ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಹೆಮ್ಮೆಯಿಂದ ಸುಖವಾಗಿ ಬದುಕುವುದನ್ನು ರೂಢಿಸಿಕೊಂಡಿರುವ ಈ ಜನ ಹಳ್ಳಿಯ ಮಿಕಗಳಾಗಿಲ್ಲ ,ಪೇಟೆಯ ಬಕಾಸುರರೂ ಅಲ್ಲ. ಕಪ್ಪಗಿನ ಮರದ ಮಂಟಪದ ಮೇಲೆ ಕೆಂಪು ದಾಸವಾಳ ಹೂವುಗಳು. ಎದುರು ಕುಳಿತುಕೊಳ್ಳಲು ಕೂರ್ಮಾಕೃತಿಯ ಮರದ ಮಣೆ. ಉರಿಯುತ್ತಿರುವ ದೀಪ, ತೂಗುತ್ತಿರುವ ಕೆಂಪು ಮಡಿ ಬಟ್ಟೆ -ಇವೆಲ್ಲ ಆ ದೇವರ ಕೋಣೆಗಳ ಪಾವಿತ್ರ್ಯವನ್ನು ಸಾರಿ ಹೇಳುತ್ತಿದ್ದವು. ಬಹಳ ದಿನಗಳಿಂದ ಮೂಲೆ ಪಾಲಾದಂತೆ ಬಟ್ಟೆ ಮುಚ್ಚಿಕೊಂಡಿದ್ದ ಟಿವಿ, ನಮ್ಮಲ್ಲಿ ಹೆಚ್ಚಿನವರ ಕಣ್ಣಿಗೂ ಬೀಳಲಿಲ್ಲ. ಪ್ರತಿ ಮನೆಯಲ್ಲೂ ಮರದ ಪತ್ತಾಯಗಳು, ಒತ್ತು ಸೇಮಿಗೆ ಮಣೆಗಳು, ದಪ್ಪದ ಬಾಜಾರ ಕಂಬಗಳು, ಮರದ ಪೆಟ್ಟಿಗೆಗಳು, ಕಿರಿದಾದ ಬಾಯಿಯ ತಳ ಕಾಣದ ಆಳ ಬಾವಿಗಳು, ಹೊರಗೆ ಬಗೆಬಗೆಯ ಬಣ್ಣಗಳ ದಾಸವಾಳ ಹೂವಿನ ಗಿಡಗಳು... ಜೋಲು ಮಂಚದ ಮೇಲೆ ಕುಳಿತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ ರಾಯರು, ರ್‍ಯಾಡಲ್ ಶ್ರುತಿಪೆಟ್ಟಿಗೆ ಆನ್ ಮಾಡಿ, ಕಣ್ಣುಮುಚ್ಚಿ ಶ್ರುತಿ ಪರೀಕ್ಷಿಸಿಕೊಳ್ಳತೊಡಗಿದರು. ಆಗ ಕೆಲವರಿಗೆ ನಗು ತಡೆಯಲಿಕ್ಕಾಗದಿದ್ದರೂ ‘ಶ್ರೀ ವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೆ....’ ಎಂದು ಆರಂಭಿಸಿದಾಗ ನೆಲದಲ್ಲಿ ಚಕ್ರಮುಟ್ಟ ಹಾಕಿ ಕುಳಿತಿದ್ದ ಮೂವತ್ತು ಜನರೂ ರೋಮಾಂಚನಗೊಂಡರು . ರಾಯರೂ ಉತ್ಸಾಹಭರಿತರಾಗಿ ‘ಅಕ್ಕಿಯೊಳಗನ್ನವ ಮೊದಲಾರು ಕಂಡವನು...’ಅಂತ ನಾಲ್ಕು ಮಂಕುತಿಮ್ಮನ ಕಗ್ಗವನ್ನೂ ಹಾಡದೇ ನಿಲ್ಲಿಸಲಿಲ್ಲ. ಹಾಸಿಗೆಯಿಂದ ಏಳಲಿಕ್ಕಾಗದ ಅವರ ಹೆಂಡತಿ, ಒಳಕೋಣೆಯ ಮಂಚದಲ್ಲಿ ಒಂಚೂರೂ ಬೆನ್ನು ಬಗ್ಗಿಸದೆ ತದೇಕಚಿತ್ತೆಯಾಗಿ ಬಟ್ಟೆ ಹೊದ್ದು ಕುಳಿತಿರುವುದನ್ನು ಕಂಡ ನಮ್ಮ ಹೆಂಗಸರು ಪಾದಕ್ಕೆರಗಿ ಆಶೀರ್ವಾದ ಬೇಡಿದರು. ಅಜ್ಜಿಯ ಕೆನ್ನೆಯ ಒಂದು ಮಡಿಕೆಯೂ ಮಿಸುಕಲಿಲ್ಲ. ಅಡಿಕೆ ಚಪ್ಪರದ ಕೆಳಗೆ ಕುಳಿತಿದ್ದ ನಮ್ಮ ಬಾವನೂ ಭಾವೀ ಅಕ್ಕನೂ ಉಂಗುರ ಬದಲಾಯಿಸಿಕೊಂಡರು. ಉಳಿದ ಹುಡುಗರು ನಾವೆಲ್ಲ ಒಬ್ಬೊಬ್ಬಳ ಬಲಗೈಯನ್ನು ಎಡಗೈಯಲ್ಲಿ ಹಗುರವಾಗಿ ಹಿಡಿದು ಮೈಮರೆತು, ಉಂಗುರವನ್ನು ಬೆರಳುಗಳಿಗೆ ತೊಡಿಸುತ್ತಿದ್ದಾಗ ... ಕವಿ-ಕತೆಗಾರ ಶ್ರೀಕೃಷ್ಣ ಆಲನಹಳ್ಳಿ ಸಂಪಾದಕತ್ವದಲ್ಲಿ 'ಸಾಹಿತ್ಯ ಸಂಸ್ಕೃತಿಗೆ ಮೀಸಲಾದ ವಿಚಾರವೇದಿಕೆ’ ಎಂಬ ಅಡಿಶೀರ್ಷಿಕೆಯೊಂದಿಗೆ ಪ್ರಕಟವಾಗುತ್ತಿದ್ದ ಸಾಹಿತ್ಯ ಪತ್ರಿಕೆ 'ಸಮೀಕ್ಷಕ. ೧೯೬೬ರ ಫೆಬ್ರವರಿ ಸಂಚಿಕೆಯ ಮುಖಪುಟ ಮೊದಲನೆಯದು, ಹಿಂಬದಿಯ ಪುಟ ಎರಡನೆಯ ಚಿತ್ರ. ಅದರಲ್ಲಿ ಈ ಸಂಚಿಕೆಗೆ ಬರೆದಿರುವ ಲೇಖಕರ ಹೆಸರುಗಳಿವೆ. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಇದರ ಮುಖ್ಯೋದ್ದೇಶ ಸಂಪಾದಕರು ಹೇಳಿಕೊಂಡಂತೆ ಹೀಗಿದೆ- 'ವಿಚಾರವಂತ ಲೇಖಕರಿಂದ ಉತ್ತಮ ಲೇಖನಗಳನ್ನು ಬರೆಸಿ ಪ್ರಕಟಿಸುವುದು; ಆ ಮೂಲಕ ಕನ್ನಡದಲ್ಲಿ ವಿಮರ್ಶಾ ಪ್ರಜ್ಞೆ ಬೆಳೆಯಲು ಕೈಲಾದ ಪ್ರಯತ್ನ ಮಾಡುವುದು. ಪತ್ರಿಕೆಯ ಸಲಹಾಗಾರರಾಗಿ -ಜಿ.ಎಚ್. ನಾಯಕ್ ಮತ್ತು ಎಚ್.ಎಂ.ಚನ್ನಯ್ಯರ ಹೆಸರಿವೆ. ಆದರೆ ಈ ಪತ್ರಿಕೆ ಬಹಳ ಕಾಲ ಬಾಳಲಿಲ್ಲ. ಮದರಾಸಿನ ವಿಜಯ ರಾಘವಾಚಾರಿ ರಸ್ತೆಯಿಂದ ಈಗಷ್ಟೆ ಎದ್ದು ಬಂದಂತಿರುವ ಎಸ್.ದಿವಾಕರ್ ಛೋಟಾ ಕತೆಗಳ ಉದ್ದನೆ ಮನುಷ್ಯ. ತುಟಿಗಳೆಡೆ ಸಿಗರೇಟು ಸಿಕ್ಕಿಸಿಕೊಂಡು 'ಏನು ಮತ್ತೆ ಸಮಾಚಾರ?’ ಅನ್ನುತ್ತಲೇ ಫಕ್ಕನೆ ಅಡಿಗರದೋ ಬೇಂದ್ರೆಯದೋ ನಾಲ್ಕು ಸಾಲು ಹೇಳಿ ನಮ್ಮನ್ನು ಗಲಿಬಿಲಿ ಮಾಡುವ, ನೂರೆಂಟು ಪದ್ಯಗಳನ್ನು ಹೃದಯ ಪಾಠ ಮಾಡಿಕೊಂಡಿರುವ ಈ ತೆಳ್ಳಗಿನ ದೇಹಿ, ಏನೆಲ್ಲ ಬಲ್ಲರು ಎಂಬುದನ್ನು ಎಲ್ಲ ಬಲ್ಲವರಿಲ್ಲ ! ಈ ಅಪ್ಪಟ ಕರಿಯ ಹೇಳುವುದನ್ನು ಕೇಳಿದಾಗೆಲ್ಲ ನಾವು ಹೇಳುತ್ತೇವೆ ಯೆಸ್ ದಿವಾಕರ್ ಸಾರ್. ಈಗ ಬೆಂಗಳೂರಿನಲ್ಲಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನಲ್ಲಿ ಉದ್ಯೋಗಿಯಾಗಿರುವ ಈ ಅಕ್ಷರ ಜೀವಿ, ೬೦ರ ದಶಕದ 'ಸಮೀಕ್ಷಕ’ದಲ್ಲಿ ಪ್ರಕಟಿಸಿರುವ 'ಪ್ರಾಯ’ ಎಂಬ ಅಮೋಘ ಪದ್ಯವನ್ನು ಅವರ ಕ್ಷಮೆ ಕೋರಿ ಇಲ್ಲಿ ಕೊಡಲಾಗಿದೆ ! (ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಕಾಡೊಳಗಿನ ಊರೊಂದರಲ್ಲಿ ಅಡಿಕೆ ಕೃಷಿಯಲ್ಲಿ ಬದುಕುತ್ತಿದ್ದ ನಾಲ್ವರ ಮಧ್ಯಮ ವರ್ಗದ ಕುಟುಂಬ. ಮಗಳು ದೂರದ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಹೈಸ್ಕೂಲು ಓದುತ್ತಿದ್ದಳು. ಮಗನಿಗೆ ಐದಾರು ವರ್ಷ. ನಲವತ್ತರ ವಯಸ್ಸಿನ ಆ ಮನೆಯ ಯಜಮಾನ ಆರೇಳು ಕೋಣೆಗಳ ಹೊಸ ತಾರಸಿ ಮನೆ ಕಟ್ಟಿಸಿದರು. ಗೃಹಪ್ರವೇಶವಾದ ತಿಂಗಳಲ್ಲೇ ಬೆಂಗಳೂರಿಗೆ ಬಂದು ಸಣ್ಣ ಕೋಣೆ ಹಿಡಿದರು. ಯಾಕೆ ಅಂತೀರಾ? ಬೆಂಗಳೂರಲ್ಲಿ ದುಡಿದು ಸಂಪಾದಿಸಿ, ಮನೆ ಕಟ್ಟಲು ಮಾಡಿದ ಸಾಲ ತೀರಿಸಲು ! ಹಳ್ಳಿಗಳಲ್ಲಿರುವ 'ಸ್ಥಿತಿವಂತ-ಗುಣವಂತ’ ಹುಡುಗರನ್ನೂ ಧಿಕ್ಕರಿಸಿ ನಗರದಲ್ಲಿರುವ ಹುಡುಗನೇ ಆಗಬೇಕೆಂದು ಬಹುತೇಕ ಯುವತಿಯರು ಪಟ್ಟು ಹಿಡಿಯುತ್ತಿರುವ ಕಾಲದಲ್ಲಿ, ಈ ಮನೆಯ ಸ್ಥಿತಿ ಕೊಂಚ ವ್ಯತ್ಯಸ್ಥವಾಗಿದೆ ಅವರ ಪತ್ನಿ ಏನಂದರೋ ಗೊತ್ತಿಲ್ಲ. ಅಂತೂ ಈ ಪದ್ಯ ಅರ್ಧ ಹೊಸೆದಿರುವಾಗ, ಆ ಘಟನೆ ನೆನಪಾಗಿ ಬರೆದುಕೊಂಡಿದ್ದೇನೆ.) ಸಕಲ ಪ್ರಾಣಿಗಳಲ್ಲಿ ಮನುಷ್ಯರ ಹೆಚ್ಚುಗಾರಿಕೆ ಕಂಡುಬಂದದ್ದು ಮಾತಾಡುವುದರಿಂದ ಹಾಗೂ ಎರಡೇ ಕಾಲುಗಳಲ್ಲಿ ನಡೆಯುವುದರಿಂದ. (ಬುದ್ಧಿಶಕ್ತಿಯಿಂದ ಅಂತಲೂ ಹೇಳಿಯಾರು, ನಿಮಗೆಂದಾದರೂ ಹಾಗೆ ಸತ್ಯವಾಗಿ ಅನ್ನಿಸಿದೆಯೆ?!) ಆದರೆ ಇವೆಲ್ಲಕ್ಕಿಂತಲೂ ವಿಶೇಷ ಅನಿಸಿದ್ದು ...ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ತಾಕತ್ತು ಇರುವುದರಿಂದ ! ಯಾವುದಕ್ಕುಂಟು ಈ ಭಾಗ್ಯ? ಈ ಭಂಗಿಗಿರುವ ಘನತೆ-ಗತ್ತು , ಯೋಗಾಸನದವರು ತಲೆ ಮೇಲೆ ಕಾಲು ಹಾಕಿದರೂ ಉಂಟೆ? ಹಾಗಾಗಿ ನಾವೆಲ್ಲ ಹೇಳಬೇಕು 'ಕಾಲಾಯ’ ತಸ್ಮೈ ನಮಃ ಕಾಲುಭಾಗ, ಕಾಲುದಾರಿ, ಕಾಲುಂಗುರ (ಕಾಲ್ಬೆರಳುಂಗುರ ಅಲ್ಲ !) ಪದಗಳಲ್ಲದೆ ಕಾಲುವೆ, ಕಾಲಂ ಪದಗಳೂ ಕಾಲಿನಿಂದಲೇ ಬಂದದ್ದು ಅಂತ ಸಾಧಿಸಿದರೆ ತೋರಿಸಬಹುದು. ಯಾಕೆಂದರೆ ಹುಡುಕುತ್ತಿದ್ದ ಬಳ್ಳಿಯಾದರೂ ತೊಡರುವುದು ಕಾಲಿಗೆ ತಾನೆ ! ಬಲಗಾಲಿಟ್ಟು ಒಳಗೆ ಬಂದರೆ ಎಲ್ಲವೂ ಶುಭಪ್ರದ. ಕಾಲಿನಲ್ಲೇ ಇರುವ ಪಾದಕ್ಕಿಂತ ಪವಿತ್ರವಾದದ್ದು ನಮ್ಮಲ್ಲಿ ಬೇರ್‍ಯಾವುದೂ ಇಲ್ಲ. ಪಾಂಡವರು ರಾಜಸೂಯ ಯಾಗ ಮಾಡುವಾಗ, ಅತಿಥಿಗಳ ಪಾದ ತೊಳೆಯುವ ಪುಣ್ಯದ ಕೆಲಸ ನನಗಿರಲಿ ಅಂದನಂತೆ ದೇವ ಶ್ರೀಕೃಷ್ಣ . ಯಾರಾದರೂ ಹೊಸ ರಂಗಕ್ಕೆ ಪ್ರವೇಶಿಸಿದಾಗ ಪದಾರ್ಪಣೆ ಅನ್ನದೆ ಶಿರಾರ್ಪಣೆ ಅಂತೆಲ್ಲ ಅನ್ನುವುದುಂಟೆ? ಕಾಲಿಗೆ ಬಿದ್ದರೆ ಆತ ಪೂರ್ತಿ ಶರಣಾಗತ ಎಂಬುದರಲ್ಲೆ ಸುಳ್ಳುಂಟೆ? ಯಾವ ನೃತ್ಯವಾದರೂ ಪ್ರಧಾನವಾದ ಗೆಜ್ಜೆಯನ್ನು ಕಾಲಿಗಲ್ಲದೆ ಕುತ್ತಿಗೆಗೆ ಕಟ್ಟುತ್ತಾರೆಯೆ? ತಲೆ ಇದ್ದರೂ ನಾವು ಕೆಲವು ಸಲ ಬುದ್ಧಿ ಹೇಳುವುದು ಕಾಲಿಗೇ ಅಲ್ವೆ? ಹೀಗೆ ಮಹಿಮಾನ್ವಿತವಾದ ಕಾಲುಳ್ಳ ಕಾಲಾಳುಗಳಾದ ನಮಗೆ ಯಾವ ವಿಷಯವೂ ಕಾಲಕಸಕ್ಕೆ ಸಮ ಎನಿಸದಿರಲಿ. ಈಗ ಕಾಲ್ಬುಡಕ್ಕೆ ಬರೋಣ. ಅಂದರೆ ಕಾಲಿನ ಮುಖ್ಯ ಕಾರ್‍ಯವಾದ ನಡಿಗೆಯ ಬಗ್ಗೆ ಗಮನಿಸೋಣ. ಈ ನಡಿಗೆಗೂ ನಡತೆಗೂ ಹತ್ತಿರದ ಸಂಬಂಧ ಇರುವುದು ತಮಗೆ ಗೊತ್ತಿದೆ. ದೇವರ ಗರ್ಭಗುಡಿಯ ಮುಂದಿನ ದಾರಿಗೆ 'ನಡೆ’ ಅನ್ನುತ್ತಾರೆ. ಸಭೆಯ ನಡಾವಳಿಯಂತೆ ದೈವದ ನಡಾವಳಿ ಅಂತ ದಕ್ಷಿಣಕನ್ನಡದ ಭೂತಕೋಲ ನಡೆಸುವುದಕ್ಕೆ ಹೇಳುತ್ತಾರೆ ! ನಮ್ಮ ಕೆಲವು ರಾಜಕೀಯ ಪುಢಾರಿಗಳು ಹೀಗೆ ಹಾಡುವುದೂ ಉಂಟು-'ನಡೆ ಮುಂದೆ ನಡೆ ಮುಂದೆ ನಡೆ ಮುಂದೆ ಮುಂದೆ, ನನ್ನ ಹಿಂದೆಯೆ ನೀನು ನುಗ್ಗಿ ನಡೆ ಮುಂದೆ !’ ಆದರೆ ನಡಿಗೆಯಿಂದಲೇ ಮನುಷ್ಯನೊಬ್ಬನ ಗುಣ ಸ್ವಭಾವವೂ ಕೊಂಚಮಟ್ಟಿಗೆ ಅರಿವಾದೀತು. ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಎಚ್ಚರಿಕೆಯಿಂದ ನಡೆವವರದ್ದು ನಿಧಾನ ಪ್ರವೃತ್ತಿಯೆಂದೂ, ದಾಪುಗಾಲು ಹಾಕುತ್ತ ಹೋಗುವವರು ಗಡಿಬಿಡಿ ಸುಬ್ರಾಯರೆಂದೂ ಕೆಲವರು ವಿಶ್ಲೇಷಿಸಬಹುದು. ಅಂತೂ ಕಾಲ್ನ-ಡಿಗೆ ಎಲ್ಲರೂ ಬರಲೇಬೇಕು ಬಿಡಿ. ಕೊಂಚ ಹಿಂದಕ್ಕೆ ಕಾಲಿಟ್ಟರೆ...ನಮ್ಮ ಕವಿಗಳ ಗಮನವೆಲ್ಲ ಹಂಸಗಮನೆ, ಮದಗಜಗಮನೆಯರ ಮೇಲೆಯೇ. ನೀ ನಡೆವ ದಾರಿಯಲಿ ಅದೂ ಇದೂ ಹಾಸಿರಲಿ ಅಂತ ಹಾಡಿದ ಜನರೆಷ್ಟಿಲ್ಲ? ಇತ್ತೀಚೆಗೆ ಕ್ಯಾಟ್‌ವಾಕ್, ಡಾಗ್‌ವಾಕ್‌ಗಳೆಲ್ಲ ಹೆಚ್ಚಾದ ನಂತರವಷ್ಟೇ, ನಡಿಗೆಯಲ್ಲಿ ಮುಖ್ಯವಾದ ಕಾಲುಗಳಿಗೂ ಮುಖಸೌಂದರ್‍ಯದಷ್ಟೇ ಪ್ರಾಮುಖ್ಯ ಸಿಕ್ಕಿದ್ದು. 'ಕಾಲುಗಳ ಕಾಳಜಿ’ ಈಗ ಸೌಂದರ್‍ಯಶಾಸ್ತ್ರದ ಮುಖ್ಯಪಾಠಗಳಲ್ಲೊಂದು. 'ನುಡಿದರೆ ಮುತ್ತಿನ ಹಾರದಂತಿರಬೇಕು’...ನಡೆದರೆ ಏನು ಅಂತ ನೀವಿನ್ನು ಸೇರಿಸಬೇಕು ! ಕಣ್ಣಿನ ಬಗೆಗಷ್ಟೇ ಹೊಗಳುತ್ತಿದ್ದವರೀಗ 'ನೀಳ ಕಾಲುಗಳ ಸುಂದರಿ’ ಅಂತ ವರ್ಣಿಸತೊಡಗಿರುವುದು ಕಾಲುಪ್ರಿಯರಿಗೆ ಸಂತಸದ ಸುದ್ದಿಯೇ. (ಇನ್ನು , ಕಚ್ಚಿ ಎಳೆಯೋ ಕಾಲಿನ ಬಗ್ಗೆ ಯೋಚಿಸಬೇಡಿ ಮಾರಾಯ್ರೆ) ಫ್ಯಾಷನ್ ಷೋ ಎಂಬ ಶೋಕಿ ಶುರುವಾದ ಮೇಲಂತೂ ಚೆಂದದ ಕಾಲುಗಳ ಒಂದೊಂದು ಹೆಜ್ಜೆಗೂ ಲಕ್ಷ ರೂಪಾಯಿ. 'ಮೆಲ್ಲಮೆಲ್ಲನೇ ಬಂದಳೇ/ ಬಂದನೇ’ ಎರಡಕ್ಕೂ ಡಿಮ್ಯಾಂಡ್. 'ನಡೆದರೆ ನಡು ಬಗ್ಗದಂತಿರಬೇಕು’ ಅನ್ನುತ್ತಾ ರ್‍ಯಾಂಪ್ ಏರುವ ಪ್ರದರ್ಶನ ಗೊಂಬೆಗಳ ಕೈಹಿಡಿಯುವುದೇ ಕಾಲಲ್ಲವೇ? ಆಹಾ 'ಕಾಲೇಷು’ ರಮ್ಯಂ ! ದಕ್ಷಿಣಕನ್ನಡ-ಉಡುಪಿಯ ದೇವಸ್ಥಾನಗಳ ಉತ್ಸವ ಸಂದರ್ಭದಲ್ಲಿ , ದೇವರ ಮೂರ್ತಿಯನ್ನು ಸುಮಾರು ೧೫ ಕೆಜಿ ತೂಕದ ಅರ್ಧಚಂದ್ರಾಕೃತಿಯ ಬೆಳ್ಳಿಯ ಪ್ರಬಾಳೆಯಲ್ಲಿಟ್ಟು ಒಬ್ಬನೇ ಹೊತ್ತುಕೊಂಡು ದೇವಾಲಯಕ್ಕೆ ಪ್ರದಕ್ಷಿಣೆ ಬರುವ ಸಂಪ್ರದಾಯವಿದೆ. ಆತನ ಜತೆಗೆ ವಾದ್ಯ-ಚೆಂಡೆಯವರೂ ಇರುತ್ತಾರೆ. ಹದಿನೈದಿಪ್ಪತ್ತು ಕೆಜಿ ಭಾರ ಹೊತ್ತ ಆ ವ್ಯಕ್ತಿ ಎರಡೂ ಕೈಗಳನ್ನು ಬೀಸುತ್ತಾ ತಲೆಯ ಮೇಲೆ ನಿಂತಿರುವ ದೇವರೆಡೆಗೆ ಸಂಪೂರ್ಣ ಧ್ಯಾನವಿಟ್ಟು ಹೆಜ್ಜೆ ಹಾಕುವ ನಡಿಗೆ ಬಹಳ ವಿಶಿಷ್ಟ. ಇನ್ನು ಮಲೆನಾಡಿನ ಹೊಲದ ಹಾದಿಗಳಲ್ಲಿ, ಅಡಿಕೆಮರ ಹಾಕಿದ ಸಂಕಗಳಲ್ಲಿ , ಸೊಂಟದಲ್ಲಿ ಕೊಡ ಇಟ್ಟುಕೊಂಡು ಬರುವಲ್ಲಿ ಜನರ ನಡಿಗೆಗಳನ್ನು ಗಮನಿಸಿದರೆ ಕಾಲ್ನಡಿಗೆಯ ಕಾಲಂಶ ಮಹಾತ್ಮೆಯಾದರೂ ಅರಿವಾದೀತು. ಪ್ರೈಮರಿಯಲ್ಲಿ ಸೊಟ್ಟಮೊಟ್ಟ ಅಕ್ಷರ ಬರೆವವರಿಗೆ 'ನಿಂದು ಕಾಗೆಕಾಲು ಅಕ್ಷರ’ ಅಂತ ಮಾಷ್ಟ್ರು ಹೇಳುವುದುಂಟು. ಉದ್ದಕ್ಕಿದ್ದವರಿಗೆ ಕೊಕ್ಕರೆಗಾಲು ಅಂತ ಸಹಪಾಠಿಗಳು ಹೀಯಾಳಿಸುವುದುಂಟು. ಕಾಲು ಕೆರೆದು ಜಗಳಕ್ಕೆ ಬರುವ ಅವರ ಮುಕ್ಕಾಲು ಬುದ್ಧಿಗೂ ಉತ್ತರಿಸದೆ ಬಿಡಬೇಡಿ. ಕಾಗೆ ಕಾಲು ತಲೆಗೆ ತಗುಲಿದರೆ ಆತನ ಅಂತ್ಯಕಾಲ ಸಮೀಪಿಸಿತೆಂದೇ ಅರ್ಥ, ಹುಷಾರ್. ಇನ್ನು ಕತ್ತೆ ಕಾಲಿನ ಒದೆಯ ಬಗ್ಗೆ ನಿಮಗೆ ಹೇಳಬೇಕಾದೀತೇ?! ಹಾಲು ಕರೆವಾಗ ಎಷ್ಟು ಜನರ ಕಾಲಿಗೆ ಎಷ್ಟೆಷ್ಟು ಸಲ ಹಸು ತುಳಿದಿದೆ ಅಂತ ಮನೆಯ (ಹಳೆ)ಹೆಂಗಸರನ್ನು ಕೇಳಿ. ಮನುಷ್ಯನಿಗೆ- ಓಡಾಡಲು, ವಾಹನ ಚಲಾಯಿಸಲು, ತುದಿಗಾಲಿನಲ್ಲಿ ನಿಂತು ಇಣುಕಲು (ಇದು ಮಾನವರ ವಿಶೇಷ ಸಾಮರ್ಥ್ಯ) ಕಾಲ್ಗಳೇ ಬೇಕಲ್ಲ. ಮಹಾಭಾರತ ನಡೆದದ್ದೇ ಕೌರವನ ತೊಡೆಯ ಮೇಲೆ, ತಿಳಕೊಳ್ಳಿ.....ಅಂತ ಸಮಾಧಾನವಾಗಿ ಹೇಳಿ ! ಆದರೂ ಸತ್ಯ ಹೇಳುತ್ತೇನೆ. ಕಾಲುಗಳಿಂದ ಇರುವ ಒಂದೇಒಂದು ತೊಂದರೆ ಎಂದರೆ ಒಡೆವ ಅಂಗಾಲು. ಅದೆಷ್ಟು ಮುಲಾಮು, ಆಯುರ್ವೇದ ಉಪಚಾರಗಳು ಬಂದರೂ ಒಡೆಯುವ ಕಾಲುಗಳು ಒಡೆಯುತ್ತಲೇ ಇವೆ. ಒಡೆದುಒಡೆದು ಚಂಬಲ್ ಕಣಿವೆಗಳಂತಾಗಿ, ಕಪ್ಪು ಮಣ್ಣು ತುಂಬಿಕೊಂಡು, ರಕ್ತ ಒಸರುತ್ತಾ , ಊರಲಾಗದಷ್ಟು ನೋಯುತ್ತಾ, ಕೊಂಚ ವಾಸನೆ ಹೊರಡಿಸುತ್ತಾ ಛೆ ಛೆ ಸಾಕಪ್ಪಾಸಾಕು. ಹಾಗಾಗಿಯೇ ನಮ್ಮ ಕೆಲವು 'ನಗರದೇವತೆ’ಗಳ ಪಾದಾಂಬುಜ ನೆಲವನ್ನೇ ಸ್ಪರ್ಶಿಸುವುದಿಲ್ಲ. ಅವುಗಳಿಗೆ ಯಾವತ್ತೂ ಮೆತ್ತನೆ ಚೀಲ. ಕೆಲವರ ಕೆನ್ನೆಗಿಂತ ಅವರ ಅಂಗಾಲು ನುಣು[. ಎಷ್ಟೆಂದರೆ ಅವರ ಕಾಲನ್ನೇ ನಮ್ಮ ಕೆನ್ನೆಗೆ ಒತ್ತಿಕೊಳ್ಳೋಣ ಅನಿಸುವಷ್ಟು ! ಕಾಲಿನ ಬಗ್ಗೆಯೇ ಆದರೂ ಕೈಯಲ್ಲೇ ಬರೆಯಬೇಕಾಗಿಬಂದ ಈ ಬರೆಹವನ್ನು ನಿಮ್ಮ ಕಾಲಿಗೆ ಹಾಕುತ್ತಿದ್ದೇನೆ. ಇದು ಪುರಾಣದ 'ಕಾಲು’ಭಾಗ ಅಷ್ಟೆ. ಕೈಹಿಡಿದು...ಅಲ್ಲಲ್ಲ...ಕಾಲು ಹಿಡಿದು ಒಪ್ಪಿಸಿಕೊಳ್ಳಿ !
OSCAR-2019
ಟೆಕ್ಸಾಸ್ ಎ ಮತ್ತು M ಯೂನಿವರ್ಸಿಟಿ TAMU ಸಮಗ್ರತಾ ದೃಷ್ಟಿ ಗಾರ್ಡನ್ನಲ್ಲಿ Cenizo ಹೂವುಗಳು (Leucophyllum frutescens) ನ ಕ್ಲೋಸ್ ಅಪ್. ಕಾಲೇಜು ಕೇಂದ್ರ, ಟೆಕ್ಸಾಸ್, ಸೆಪ್ಟೆಂಬರ್ 9, 2009
OSCAR-2019
ಭಾರತದ ಸ್ವಾತಂತ್ರ್ಯಕ್ಕಾಗಿ ಬಂಗಾಲದಲ್ಲಿ ಸಾವಿರಾರು ಬಾಲಕರು, ತರುಣರು ಸಾಹಸದ ಕಾರ್ಯಗಳನ್ನು ಮಾಡಿದರು. ಅಪಾರ ಕಷ್ಟನಷ್ಟಗಳನ್ನು ಸಹಿಸಿದರು. ಪ್ರಾಣವನ್ನೇ ಬಲಿಗೊಟ್ಟರು. ಅಂತಹ ವೀರ ಕುಮಾರರ ಪೈಕಿ ಸುಶೀಲ ಕುಮಾರ ಸೇನ್ ಸಹ ಒಬ್ಬ. ಬಾಲ್ಯದಲ್ಲೆ ಹೋರಾಟದ ಕಣಕ್ಕೆ ಕಾಲಿಟ್ಟ ಅಸಂಖ್ಯ ಎಳೆಯರ ಪ್ರತಿನಿಧಿ ಅವನು. ಕೊನೆಯ ಉಸಿರಿನವರೆಗೂ ಅವನು ದೇಶದ ವಿಷಯವಾಗಿ ಯೋಚಿಸಿದನೇ ಹೊರತು, ತನ್ನ ಸ್ವಂತ ನೋವು ಸಾವುಗಳ ಬಗ್ಗೆ ಚಿಂತಿಸಲಿಲ್ಲ. ಆ ವೀರನ ಆತ್ಮಕ್ಕೆ ಅನಂತ ವಂದನೆಗಳು.
OSCAR-2019
ಬೆಂಗಳೂರು, ಮಾರ್ಚ್ 3: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಮತ್ತೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವಂತೆ ನಿವೃತ್ತ ನ್ಯಾ. ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇನ್ನೊಂದೆಡೆ ಈ ಸಮಿತಿ ನೇಮಕವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ವರದಿ ನೀಡಲು ನಿವೃತ್ತ ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ರಚನೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿವೆ. ಇವುಗಳ ವಿಚಾರಣೆ ನಡೆಸಿದ ಹೈಕೋರ್ಟ್ ಮಾರ್ಚ್9ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಸರಕಾರಕ್ಕೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾ. ಎಸ್. ಸುನೀಲ್ ದತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿ ಮುಂದಿನ ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿದೆ. ಸಮಿತಿಯ ರಚನೆಯು ಕೋರ್ಟ್ ನೀಡುವ ತೀರ್ಪನ್ನು ಆಧರಿಸಿರುತ್ತದೆ ಎಂದು ಈಗಾಗಲೇ ಮಧ್ಯಂತರ ಆದೇಶವನ್ನೂ ನೀಡಲಾಗಿದೆ. ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಅರ್ಜಿದಾರರು, ಸಮಿತಿ ನೀಡುವ ಶಿಫಾರಸ್ಸುಗಳನ್ನು ಸರಕಾರ ಪಾಲಿಸುವುದರಿಂದ ಸಮಾಜದಲ್ಲಿ ಒತ್ತಡ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. ಜತೆಗೆ ಕೆಲವು ಕ್ಯಾಬಿನೆಟ್ ಸಚಿವರು ಪ್ರತ್ಯೇಕ ಲಿಂಗಾಯತ ಧರ್ಮದ ಪರ ಸಮಾವೇಶಗಳನ್ನು ನಡೆಸುತ್ತಿದ್ದಾರೆ ಎಂದೂ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಜತೆಗೆ ಶಶಿಧರ್ ಶಾನುಭಾಗ್ ಮೊದಲಾದವರು ತಮ್ಮ ಅರ್ಜಿಯಲ್ಲಿ, ಸರಕಾರಕ್ಕೆ ಸಮಿತಿ ನೇಮಕ ಮಾಡುವ ಅರ್ಹತೆ ಇಲ್ಲ. ಆಯೋಗವನ್ನು ಅಲಸಂಖ್ಯಾತರ ಕಲ್ಯಾಣಕ್ಕಾಗಿ ರಚನೆ ಮಾಡಲಾಗಿದೆಯೇ ಹೊರತು, ಇದಕ್ಕೆ ಸಮಿತಿ ನೇಮಿಸುವ ಅಧಿಕಾರವಿಲ್ಲ ಎಂದು ಹೇಳಿದ್ದರು. ಈ ಕುರಿತು ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ, ಸರಕಾರದ ಉತ್ತರ ಸಿದ್ದವಿದೆ. ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
OSCAR-2019
ಸ್ಟಾವನ್‍ಗೆರ್, (ನಾರ್ವೆ), ಏ.9-ನಾರ್ವೆ ರಾಜಧಾನಿ ಓಸ್ಲೋದ ಅತ್ಯಂತ ಜನಸಂದಣಿ ಪ್ರದೇಶದಲ್ಲಿ ಪತ್ತೆಯಾದ ಸ್ಫೋಟಕವೊಂದನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದು, ಸಂಭವಿಸಬಹುದಾದ ಭಾರೀ ವಿಧ್ವಂಸಕ ಕೃತ್ಯವನ್ನು ತಪ್ಪಿಸಿದ್ದಾರೆ. ಈ ಸಂಬಂಧ ಶಂಕಿತ ಭಯೋತ್ಪಾದಕನನ್ನು ಬಂಧಿಸಲಾಗಿದೆ. ಬಾಂಬ್ ರೀತಿಯ ಭಾರೀ ಸ್ಫೋಟಕವೊಂದು ಪತ್ತೆಯಾಗಿರುವುದನ್ನು ಓಸ್ಲೋ ಪೊಲೀಸ್ ಮುಖ್ಯಸ್ಥ ವಿಡಾರ್ ಪೆಡೆರ್‍ಸೆನ್ ಖಚಿತಪಡಿಸಿದ್ದಾರೆ. ಈ ಸ್ಫೋಟಕವನ್ನು ನಿಷ್ಕ್ರಿಯ ಅಥವಾ ತಟಸ್ಥಗೊಳಿಸಲಾಗಿದೆ ಎಂದು ಪೊಲೀಸ್ ಟ್ವೀಟರ್ ತಿಳಿಸಿದೆ. ಬಂಧಿತ ಉಗ್ರಗಾಮಿ ಬಗ್ಗೆ ಅಥವಾ ಸ್ಫೋಟಕದ ಬಗ್ಗೆ ಯಾವುದೇ ಸ್ಪಷ್ಟ ವಿವರ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಗ್ರಿಯೋನ್‍ಲ್ಯಾಂಡ್ ಅಂಡರ್‍ಗ್ರೌಂಡ್ ಸ್ಟೇಷನ್ ಹೊರಗೆ ರಸ್ತೆಯಲ್ಲಿ ಸ್ಪೋಟಕ ಪತ್ತೆಯಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆ ಪ್ರದೇಶದ ಜನರನ್ನು, ಬಾರ್ ಮತ್ತು ರೆಸ್ಟೋರೆಂಟ್‍ಗಳು ಹಾಗೂ ಅಂಗಡಿಗಳನ್ನು ತೆರವುಗೊಳಿಸಿದರು. ನಂತರ ಅದನ್ನು ನಿಷ್ಕ್ರಿಯಗೊಳಿಸಿ ಭಾರೀ ವಿಧ್ವಂಸಕ ಕೃತ್ಯವನ್ನು ತಪ್ಪಿಸಿದ್ದಾರೆ ಎಂದು ವಿಡಾರ್ ತಿಳಿಸಿದ್ದಾರೆ. ಫ್ರಾನ್, ಇಂಗ್ಲೆಂಡ್, ಸ್ವೀಡನ್ ಸೇರಿದಂತೆ ಅನೇಕ ದೇಶಗಳಲ್ಲಿ ಭಯೋತ್ಪಾದಕರ ದಾಳಿಗಳ ಹಿನ್ನೆಲೆಯಲ್ಲಿ ನಾರ್ವೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
OSCAR-2019
ಬೆಂಗಳೂರು, ಜೂ.18- ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಮೂರು ಪುಟಗಳ ಸುದೀರ್ಘ ಪತ್ರ ಬರೆದಿ ರುವ ಅವರು, ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ. ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಮರು ಆಯ್ಕೆ ಬಯಸಿದ್ದ ಪುಟ್ಟಸ್ವಾಮಿ ಅವರಿಗೆ ಪಕ್ಷ ಟಿಕೆಟ್ ನೀಡಲಿಲ್ಲ. ಇದರಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಸಾಕಷ್ಟು ಜವಾಬ್ದಾರಿಯುತ ಕೆಲಸಗಳನ್ನು ನಿಭಾಯಿಸಿ ದ್ದೇನೆ. ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲೂ ಪಕ್ಷದ ಕೆಲಸಗಳನ್ನು ನಿಷ್ಠೆಯಿಂದ ಮಾಡಿದ್ದೇನೆ. ಪರಿಷತ್‍ನಲ್ಲೂ ನನ್ನ ಪಕ್ಷವನ್ನು ಸಮರ್ಥಿಸಿಕೊಂಡು ಕಾಂಗ್ರೆಸ್‍ನ ವೈಫಲ್ಯಗಳನ್ನು ಎತ್ತಿ ತೋರಿಸಿದ್ದೇನೆ. ಆದರೂ ಪಕ್ಷ ನನ್ನನ್ನು ಯಾವ ಕಾರಣಕ್ಕೆ ಮರು ಆಯ್ಕೆ ಬಯಸಲಿಲ್ಲ ಎಂಬ ಬಗ್ಗೆ ಬೇಸರವಾಗಿದೆ. ಹಾಗಾಗಿ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಪರಿಷತ್‍ನ ವಿರೋಧ ಪಕ್ಷದ ಸ್ಥಾನ ನೀಡುವುದಾಗಿ ಬಿಎಸ್‍ವೈ ಹೇಳಿದ್ದರು. ಆದರೆ, ನನಗೆ ಪರಿಷತ್‍ಗೆ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲ. ಯಾವುದೇ ಕಾರಣ ನೀಡದೆ ನನ್ನನ್ನು ಕಡೆಗಣಿಸಲಾಗಿದೆ ಎಂದು ಅಲವತ್ತುಕೊಂಡಿದ್ದಾರೆ. ಪಕ್ಷದ ಬಗ್ಗೆ ನಾನು ನಿರ್ವಹಿಸಿದ ಕೆಲಸಗಳಿಗೆ ಮಾನ್ಯತೆ ನೀಡದಿರುವುದು ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಆದ್ದರಿಂದ ಈ ಎಲ್ಲ ವಿಷಯಗಳಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
OSCAR-2019
1977ರಲ್ಲಿ 16 ವಯತಿನಿಲ್ ಫಿಲ್ಮ್ ಫೇರ್ ವಿಶೇಷ ಪ್ರಶಸ್ತಿ ಗೆದ್ದ ಶ್ರೀದೇವಿಗೆ ಆಗ 14 ವರ್ಷ. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಭಾರತಿರಾಜು ಅವರ ಚೊಚ್ಚಲ ನಿರ್ದೇಶನದ 16 ವಯತಿಲು ಚಿತ್ರದಲ್ಲಿ ನಟ ಕಮಲ್ ಹಾಸನ್ ಮತ್ತು ರಜನಿಕಾಂತ್ ಜೊತೆ ನಟಿಸಿದರು. ಮೂವರ ನಟನೆಗೆ ಸಹ ಬಹಳ ಪ್ರಶಂಸೆ ವ್ಯಕ್ತವಾಗಿದೆ.
OSCAR-2019
'ದೆವ್ವ' ಭಯ ಪಡಿಸಬೇಕು, ಎದೆ ನಡುಗಿಸಬೇಕು, ಜೀವ ಝಲ್ ಎನಿಸಬೇಕು ನಿಜ. ಆದ್ರೆ, 'ಚಿಟ್ಟೆ' ಚಿತ್ರದಲ್ಲಿರುವ 'ದೆವ್ವ' ಹಾಗಿಲ್ಲ. ಇಲ್ಲಿರೋದು ಬಿಳಿ ಗೌನ್ ಧರಿಸಿರುವ ಸುಂದರ 'ದೆವ್ವ'. ವಿಕಾರವಾಗಿ ಕಾಣದ 'ದೆವ್ವ' ಕಾಫಿ ಬ್ರೇಕ್ ಕೊಡುತ್ತೆ, ಇನ್ನೊಬ್ಬರನ್ನ ಸಾಯಿಸುವಂತೆ ಸೂಚಿಸುತ್ತೆ, ಸತ್ಯ ಕಕ್ಕಿಸುತ್ತೆ, ಒಬ್ಬರಿಗೆ ಜೀವದಾನವನ್ನೂ ಮಾಡುತ್ತೆ. ಕೊನೆಗೆ ವಾಪಸ್ ಹೋಗುವಾಗ 'ಟಾಟಾ' ಕೂಡ ಮಾಡುವಷ್ಟು ಒಳ್ಳೆತನ 'ದೆವ್ವ'ಕ್ಕಿದೆ.! ಹಾರರ್ ಸಿನಿಮಾ ಅಂದ್ರೆ ಹೀಗೇ ಇರಬೇಕು ಎಂಬ ಕಟ್ಟುಪಾಡಿಗೆ ಬೀಳದೆ, 'ಚಿಟ್ಟೆ' ಹಾರಿಸಿರುವ ನಿರ್ದೇಶಕರ ಪ್ರಯತ್ನ ಪರ್ವಾಗಿಲ್ಲ. ಆಗಷ್ಟೇ ಮದುವೆ ಆಗಿರುವ ಮನು (ಯಶಸ್ ಸೂರ್ಯ) ಹಾಗೂ ಸೋನು (ಹರ್ಷಿಕಾ ಪೂಣಚ್ಚ) ಬಾಡಿಗೆ ಮನೆಯೊಂದರಲ್ಲಿ ಸಂಸಾರ ಶುರು ಮಾಡುತ್ತಾರೆ. ದಾಂಪತ್ಯ ಜೀವನ ಸುಖವಾಗಿ ಸಾಗುತ್ತಿದೆ ಎನ್ನುವಾಗಲೇ ವಿಚಿತ್ರ ಘಟನೆಗಳು ನಡೆಯಲಾರಂಭಿಸುತ್ತೆ. ಆ ವಿಚಿತ್ರ ಘಟನೆಗಳಿಗೆಲ್ಲ 'ಚಿಟ್ಟೆ' ಕಾರಣ.! ಕೆಂಪು ಹಾಗೂ ಕಪ್ಪು ಬಣ್ಣದ 'ಚಿಟ್ಟೆ' ಇಡೀ ಚಿತ್ರದ ಸಸ್ಪೆನ್ಸ್. ಆ ಸಸ್ಪೆನ್ಸ್ ನ ನಾವು ಬಿಟ್ಟುಕೊಡುವುದಿಲ್ಲ. ನೀವು ಚಿತ್ರಮಂದಿರದಲ್ಲಿಯೇ ನೋಡಿ... ಪ್ರೀತಿಸುವ ಪತಿಯಾಗಿ ಯಶಸ್ ಸೂರ್ಯ ಅಭಿನಯ ಚೆನ್ನಾಗಿದೆ. ಹರ್ಷಿಕಾ ಪೂಣಚ್ಚ ನಟನೆ ಅಚ್ಚುಕಟ್ಟಾಗಿದೆ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡರೂ ಬಿ.ಎಂ.ಗಿರಿರಾಜ್ ಕಚಗುಳಿ ಇಡುತ್ತಾರೆ. ಎಲ್ಲರಿಗಿಂತ ಹೆಚ್ಚು ಗಮನ ಸೆಳೆಯುವುದು 'ಕುಲವಧು' ಧಾರಾವಾಹಿಯ ದೀಪಿಕಾ. ಅವರ ನಟನೆಗೆ ಫುಲ್ ಮಾರ್ಕ್ಸ್ ಕೊಡಬಹುದು. ನಿರ್ದೇಶಕರು ಚಿತ್ರಕಥೆ ಬಗ್ಗೆ ಇನ್ನೂ ಹೆಚ್ಚು ಗಮನ ಹರಿಸಬೇಕಿತ್ತು. ಕಥೆಯಲ್ಲಿ ಅನವಶ್ಯಕವಾಗಿ ಹಾಡುಗಳನ್ನು ತುರುಕದೆ, ಥ್ರಿಲ್ಲಿಂಗ್ ಅಂಶಗಳನ್ನು ಸೇರಿಸಿದ್ದರೆ 'ಚಿಟ್ಟೆ' ಹಾರಾಟ ಇನ್ನೂ ಚೆನ್ನಾಗಿರುತ್ತಿತ್ತು. ನಿರ್ದೇಶಕ ಎಂ.ಎಲ್. ಪ್ರಸನ್ನ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿರುವ ಹಾಡುಗಳು ಪರ್ವಾಗಿಲ್ಲ. ವಿಶ್ವಜಿತ್ ರಾವ್ ಛಾಯಾಗ್ರಹಣ ಓಕೆ. ಸಂಕಲನ ಇನ್ನೂ ಚುರುಕಾಗಿರಬೇಕಿತ್ತು. ಒಂದ್ಕಡೆ ನವ ದಂಪತಿಯ ಲವ್, ರೋಮ್ಯಾನ್ಸ್... ಇನ್ನೊಂದು ಕಡೆ ಸೇಡು ತೀರಿಸಿಕೊಳ್ಳುವ ದೆವ್ವ... ಇವೆರಡೂ ಹದವಾಗಿ ಬೆರೆತಿರುವ 'ಚಿಟ್ಟೆ' ನೋಡುವಂತಹ ಚಿತ್ರ. Read more about: film review harshika poonacha kannada cinema sandalwood ಚಿತ್ರ ವಿಮರ್ಶೆ ಹರ್ಷಿಕಾ ಪೂಣಚ್ಚ ಕನ್ನಡ ಸಿನಿಮಾ ಸ್ಯಾಂಡಲ್ ವುಡ್
OSCAR-2019
ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ೨೩,೯೩೪ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ. ಅಕ್ಟೋಬರ್ ೬ : ಯುದ್ಧಗಳಲ್ಲಿ ಲೈಂಗಿಕ ಹಿಂಸೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದರ ವಿರುದ್ಧ ಹೋರಾಡಿದ ಡೇನಿಸ್​ ಮುಕ್ವೆಜ್ ಮತ್ತು ಇರಾಕಿನ ಚಳವಳಿಗಾರ್ತಿ ನಾದಿಯಾ ಮುರಾದ್​ ಅವರು 2018 ರ ನೋಬೆಲ್​ ಶಾಂತಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
OSCAR-2019
ಬೆಂಗಳೂರು: ರಾಜ್ಯದ ತೆಂಗು, ಬಾಳೆ, ಹಣ್ಣು– ತರಕಾರಿಗಳ ಬೆಳೆ ಮತ್ತೊಮ್ಮೆ ಕೀಟ ಬಾಧೆಯ ಅಪಾಯಕ್ಕೆ ಸಿಲುಕಿದೆ. ಮಧ್ಯ ಅಮೆರಿಕ ಮೂಲದ ಸಣ್ಣ ಗಾತ್ರದ ಬಿಳಿ ನೊಣಗಳ ‘ದೊಡ್ಡ ಸೇನೆ’ಯೇ ರಾಜ್ಯದ ಕರಾವಳಿ ಪ್ರದೇಶದ ತೆಂಗು ಬೆಳೆಯನ್ನು ಆಕ್ರಮಿಸಿವೆ. 2016 ರಲ್ಲಿ ತಮಿಳುನಾಡಿಗೆ ಪ್ರವೇಶಿಸಿದ ಈ ನೊಣಗಳು ( Aleurodicus rugioperculatus) ಅಲ್ಲಿನ ಬಹುತೇಕ ತೆಂಗಿನ ಮರಗಳನ್ನು ಆವರಿಸಿವೆ. ಅದೇ ನೊಣಗಳು ಈಗ ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೂ ಪ್ರವೇಶಿಸಿವೆ. ಇನ್ನು ಆರು ತಿಂಗಳಲ್ಲಿ ಇಡೀ ರಾಜ್ಯದ ತೆಂಗು, ಬಾಳೆ ಅಲ್ಲದೆ, ಹಣ್ಣು, ತರಕಾರಿಯ ಬೆಳೆಗಳನ್ನೂ ವ್ಯಾಪಿಸುವ ಸಾಧ್ಯತೆ ಇದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಧೀನ ಸಂಸ್ಥೆ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೊ ನಿರ್ದೇಶಕಿ ಡಾ. ಚಂದೀಶ್ ಆರ್‌. ಬಲ್ಲಾಳ್ ‘ಪ್ರಜಾವಾಣಿ’ಗೆ ಈ ಕುರಿತು ವಿವರ ನೀಡಿದ್ದಾರೆ. ‘ತೆಂಗಿನ ಮರಗಳು ಮತ್ತು ಇತರ ಹಣ್ಣು– ತರಕಾರಿ ಸಸ್ಯಗಳ ಮೇಲೆ ಬಿಳಿ ಹಿಟ್ಟು ಎರಚಿದಂತೆ ಕಾಣುವ ಈ ಕೀಟಗಳು ಅತ್ಯಂತ ಆಕ್ರಮಣಕಾರಿ. ಇವು ತ್ವರಿತಗತಿಯಲ್ಲಿ ಮೊಟ್ಟೆಗಳನ್ನಿಟ್ಟು ಸಂತಾನೋತ್ಪತ್ತಿ ಮಾಡುತ್ತಾ ಸಾಗುತ್ತವೆ. ಮಧ್ಯ ಅಮೆರಿಕದಿಂದ ತೆಂಗು ಮತ್ತು ಅಡಿಕೆ ಸಸ್ಯಗಳ ಮಾದರಿಯ ಅಲಂಕಾರಿಕ ಸಸ್ಯಗಳ ಮೂಲಕ ಈ ಕೀಟಗಳು ಭಾರತಕ್ಕೆ ಕಾಲಿಟ್ಟಿವೆ. ತಮಿಳುನಾಡಿನ ಪೊಲ್ಲಾಚಿಯಲ್ಲಿ ಮೊದಲು ಕಾಣಿಸಿಕೊಂಡಿವೆ’ ಎಂದು ಅವರು ತಿಳಿಸಿದರು. ‘ಈ ಕೀಟಗಳಿಗೆ ಹೆಚ್ಚು ದೂರ ಹಾರುವ ಸಾಮರ್ಥ್ಯ ಇಲ್ಲದಿದ್ದರೂ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹರಡುತ್ತಿವೆ. ಇದಕ್ಕೆ ಕಾರಣ ಮುಂಗಾರು ಮತ್ತು ಆ ಬಳಿಕ ರಾಜ್ಯದಲ್ಲಿ ಪ್ರಬಲವಾಗಿ ಬೀಸುತ್ತಿರುವ ಗಾಳಿಯ ಮೂಲಕ ಹಬ್ಬುತ್ತಿವೆ’ ಎಂದು ಈ ಕುರಿತು ಅಧ್ಯಯನ ನಡೆಸಿರುವ ಕೃಷಿ ಕೀಟ ಸಂಪನ್ಮೂಲ ಬ್ಯೂರೊ ಪ್ರಧಾನ ಕೀಟ ವಿಜ್ಞಾನಿ ಡಾ. ಶೈಲೇಶ್‌ ವಿವರಿಸಿದರು. ‘ಈ ಕೀಟಗಳ ಆಕ್ರಮಣಕ್ಕೆ ಒಳಗಾಗುವ ತೆಂಗಿನ ಮರಗಳ ಗರಿಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇವು ರಸ ಹೀರುವ ಕೀಟಗಳು. ಮರದ ಮೇಲೆ ಕಪ್ಪು ಬಣ್ಣದ ಬೂಸ್ಟ್‌ ಬೆಳೆಯುತ್ತದೆ. ಇದರಿಂದ ತೆಂಗಿನ ಮರದ ಮೂಲ ಸೊಗಸು ಕೆಟ್ಟು ಹೋಗುತ್ತದೆ. ಸದ್ಯಕ್ಕೆ ಎಳನೀರಿಗೆ ಯಾವುದೇ ರೀತಿಯಲ್ಲಿ ಹಾನಿಯಾಗುವುದು ಕಂಡು ಬಂದಿಲ್ಲ. ಆದರೆ, ತೆಂಗಿನ ಮರ ತನ್ನ ಸ್ವರೂಪ ಕಳೆದುಕೊಳ್ಳುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ’ ಎಂದರು. ಕೀಟ ನಾಶಕ ಬಳಸಬೇಡಿ: ‘ಇದೇ ಮಾದರಿಯ ಬಿಳಿ ಬಣ್ಣದ ನೊಣವೊಂದು ಈಗಾಗಲೇ ರಾಜ್ಯದಲ್ಲಿ ಇದೆ. ಈಗ ಬಂದಿರುವ ಬಿಳಿ ನೊಣ ಬೇರೆಯದು. ಕೃಷಿ ಇಲಾಖೆ ಅಧಿಕಾರಿಗಳು ಎರಡೂ ಒಂದೇ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅದು ಸರಿಯಲ್ಲ. ಎರಡೂ ಬೇರೆ ಜಾತಿಯ ಕೀಟಗಳು. ಈ ಹರಡುತ್ತಿರುವ ಕೀಟಗಳಿಗೆ ಯಾವುದೇ ರೀತಿಯ ಕೀಟನಾಶಕಗಳನ್ನು ಬಳಸಬಾರದು. ಇದನ್ನು ಹತೋಟಿಗೆ ತರುವ ಎರಡು ವಿಶೇಷ ಬಗೆಯ ಕೀಟಗಳು (Encarsia dispersa ಮತ್ತು Encarsia gudelopae) ಆ ನೊಣಗಳ ಜತೆಗೆ ಇವೆ. ಇವು ಪರಿಣಾಮಕಾರಿಯಾಗಿ ಹತೋಟಿ ಮಾಡಬಲ್ಲವು’ ಎಂದು ಶೈಲೇಶ್‌ ತಿಳಿಸಿದರು. ‘ಒಂದು ವೇಳೆ ಕೀಟ ನಾಶಕ ಬಳಸಿದರೆ, ಹತೋಟಿ ಮಾಡುವ ರೈತ ಮಿತ್ರ ಕೀಟಗಳು ನಾಶಗೊಳ್ಳುತ್ತವೆ. ಆಗ ನೊಣಗಳನ್ನು ಹತೋಟಿಗೆ ತರುವುದು ಕಷ್ಟ. ನೊಣಗಳು ಮತ್ತಷ್ಟು ವ್ಯಾಪಕಗೊಳ್ಳುತ್ತವೆ. ನೀರನ್ನು ಎರಚಿ ತೆಂಗಿನ ಮರಗಳಿಗೆ ಅಂಟಿರುವ ನೊಣಗಳನ್ನು ಸ್ವಚ್ಛಗೊಳಿಸುವುದು ಸೂಕ್ತ’ ಎಂದು ಬಲ್ಲಾಳ್‌ ಹೇಳಿದರು. ವಿವರಗಳಿಗೆ ನ್ಯಾಷನಲ್‌ ಬ್ಯುರೊ ಆಫ್‌ ಅಗ್ರಿಕಲ್ಚರಲ್‌ ಇನ್‌ಸೆಕ್ಟ್‌ ರಿಸೋರ್ಸಸ್‌– ದೂರವಾಣಿ 080–23414220 ಸಂಪರ್ಕಿಸಬಹುದು. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ತಜ್ಞರು ತಣ್ಣೀರು ಬಾವಿ, ಪಣಂಬೂರು, ಸುರತ್ಕಲ್‌, ಮುಲ್ಕಿ, ಉಚ್ಚಿಲ, ಪಡುಬಿದ್ರಿ, ಮಲ್ಪೆ, ಬೈಂದೂರು, ಸೇಂಟ್‌ಮೇರಿಸ್‌ನಲ್ಲಿ ತೆಂಗು, ಬಾಳೆಗಳ ಸಮೀಕ್ಷೆ ನಡೆಸಿದ್ದು, ಬಿಳಿ ನೊಣಗಳ ಹಾವಳಿ ತೀವ್ರ ಸ್ವರೂಪದ್ದಾಗಿದೆ. ತೆಂಗು ಬೆಳೆಯುವ ಪ್ರದೇಶಗಳಾದ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ರಂಗನ ತಿಟ್ಟು, ಶ್ರೀರಂಗ ಪಟ್ಟಣ, ನಾಗನಹಳ್ಳಿ ಪ್ರದೇಶಗಳ ತೆಂಗಿನ ತೋಟಗಳ ಮೇಲೆ ನಿಗಾ ಇಡಲಾಗಿದೆ.
OSCAR-2019
ಗಣರಾಜ್ಯೋತ್ಸವ ಆಚರಣೆಗಳ ಅಂಗವಾಗಿ ನವದೆಹಲಿಯ ವಿಜಯ್ ಚೌಕ್ ನಲ್ಲಿ ನಡೆದ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಹಾಗು ಇತರ ಗಣ್ಯರು ಪಾಲ್ಗೊಂಡಿದ್ದರು. ಸಮಾರಂಭದ ಚಿತ್ರಗಳನ್ನು ಮುಂದೆ ನೋಡಿ.
OSCAR-2019
ಬಂಟ್ವಾಳ ತಾಲೂಕು ಇರಾ ಗ್ರಾಮದ ಕುಂಡಾವು ಎಂಬಲ್ಲಿ ಎತ್ತರವಾದ ಪ್ರದೇಶದಲ್ಲಿ ಶ್ರೀ ಸೋಮನಾಥ ದೇವಾಲಯವಿರುವುದು. ಕುಂಡಲಿನಿ ಎಂಬ ಮಹರ್ಷಿಯು ಸ್ಥಾಪಿಸಿದ ದೇವಾಲಯವಾಗಿದೆ. ಭಾವಬೀಡಿನ ಬಂಟ ಬಲ್ಲಾಳ ಅರಸರು ಪೂಜಾ ಕೈಂಕರ್ಯಗಳನ್ನು ನೋಡಿಕೊಳ್ಳುತ್ತಿದ್ದರು . ಸುಮಾರು ೯೦೦ ವರ್ಷಗಳ ಇತಿಹಾಸವಿರುವ ದೇವಾಲಯ. ೧೧೨೧ರಲ್ಲಿ ಬ್ರಹ್ಮಕಲಶ ನಡೆದ ಬಗ್ಗೆ ದಾಖಲೆಗಳು ಇದೆ ಎಂದು ತಿಳಿಯಲಾಗಿದೆ. ಅಲ್ಲದೆ ೧೯೭೧, ೧೯೯೮, ೨೦೧೪ ರಲ್ಲಿ ಅಭಿವೃದ್ಧಿ ಕಾರ್ಯಗಳೊಂದಿಗೆ ಬ್ರಹ್ಮಕಲಶೋತ್ಸವಗಳು ಅದ್ದೂರಿಯಾಗಿ ನಡೆದಿರುತ್ತದೆ. ಸೋಮನಾಥನು ಕಲಾಪ್ರಿಯನಾದ ಕಾರಣ ದೇವಾಲಯದ ಹೆಸರಿನಲ್ಲಿ ಕುಂಡಾವು ಯಕ್ಷಗಾನ ಮೇಳ ಕಾರ್ಯಾಚರಿಸುತ್ತದೆ. ಪವಿತ್ರವಾದ ಈ ಕ್ಷೇತ್ರವು ಭಕ್ತರ ಸಂಕಲ್ಪಗಳನ್ನು ಈಡೇರಿಸುವ ಶ್ರದ್ದಾಭಕ್ತಿಯ ಕೇಂದ್ರವೆನಿಸಿದೆ.
OSCAR-2019
ಬೆಂಗಳೂರು,ಸೆ.1-ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು , ನಿನ್ನೆ ಬೆಳ್ಳಂಬೆಳಗ್ಗೆ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಮಹಿಳೆಯ ಸರ ಅಪಹರಣ ಹಾಗೂ ವೃದ್ಧೆಯ ಸರ ಅಪಹರಣ ಯತ್ನ ಪ್ರಕರಣದ ಬೆನ್ನಲ್ಲೇ ಸಂಜೆ ಮತ್ತೆ ಮೂರು ಕಡೆ ಮಾಂಗಲ್ಯ ಸರ ಅಪಹರಿಸಿರುವುದು ಮಹಿಳೆಯರಲ್ಲಿ ಆತಂಕವುಂಟು ಮಾಡಿದೆ. ಅನ್ನಪೂರ್ಣ ಎಂಬುವರು 9ನೇ ಕ್ರಾಸ್, 9ನೇ ಬ್ಲಾಕ್ನಲ್ಲಿ ನಿನ್ನೆ ಮಧ್ಯಾಹ್ನ 3.50ರಲ್ಲಿ ನಡೆದು ಹೋಗುತ್ತಿದ್ದಾಗ ಇಬ್ಬರು ಸರಗಳ್ಳರು ಇವರನ್ನು ಹಿಂಬಾಲಿಸಿ 30 ಗ್ರಾಂ ತೂಕದ ಸರ ಎಗರಿಸಿ ಪರಾರಿಯಾಗಿದ್ದಾರೆ. ಕಾವೇರಿ ಲೇಔಟ್ನ ಮೂರನೇ ಕ್ರಾಸ್ ನಿವಾಸಿ ಶೋಭಾವತಿ ಎಂಬುವರು ನಿನ್ನೆ ಸಂಜೆ 4 ಗಂಟೆಯಲ್ಲಿ ಮನೆ ಮುಂದೆ ಗೇಟ್ ಬಳಿ ನಿಂತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರು ಇವರ 90 ಗ್ರಾಂ ತೂಕದ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದಾರೆ. ಜಯನಗರದ 3ನೇ ಕ್ರಾಸ್, 11ನೇ ಮುಖ್ಯರಸ್ತೆಯ ಓರ್ರಾ ಜ್ಯುವೆಲರಿ ಅಂಗಡಿ ಬಳಿ ನಾಗರತ್ನ ಎಂಬುವರು ನಿನ್ನೆ ರಾತ್ರಿ 7.45ರಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್ನಲ್ಲಿ ಇವರನ್ನು ಹಿಂಬಾಲಿಸಿದ ಚೋರರು ಸಮಯ ಸಾಧಿಸಿ ಒಂದು ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಅಪಹರಿಸಿದ್ದಾರೆ. ಸಹಾಯಕ್ಕಾಗಿ ಕೂಗಿಕೊಂಡರೂ ಪ್ರಯೋಜನವಾಗಿಲ್ಲ. ಈ ಮೂರು ಪ್ರಕರಣಗಳನ್ನು ಆಯಾ ವ್ಯಾಪ್ತಿಯ ಪೊಲೀಸರು ದಾಖಲಿಸಿಕೊಂಡು ಸರಗಳ್ಳರಿಗಾಗಿ ಬಲೆ ಬೀಸಿದ್ದಾರೆ. ಪ್ರತಿದಿನ ದ್ವಿಚಕ್ರ ವಾಹನದಲ್ಲಿ ಸರಗಳ್ಳರು ಸುತ್ತಾಡುತ್ತಾ ಒಂಟಿ ಮಹಿಳೆಯರ ಸರ ಅಪಹರಿಸುತ್ತಿರುವುದರಿಂದ ಮಹಿಳಾಮಣಿಗಳು ಭಯದಿಂದಲೇ ಓಡಾಡುವಂತಾಗಿದೆ. ಚನ್ನಪಟ್ಟಣ, ಸೆ.20– ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಅಸಮರ್ಪಕ ವಿದ್ಯುತ್ ನೀಡುತ್ತಿರುವುದನ್ನು ಖಂಡಿಸಿ, ತಾಲೂಕಿನ ಸಿಂಗರಾಜಿಪುರ ಗ್ರಾಮದ ರೈತರು ಸೋಮವಾರ ಪಟ್ಟಣದ ಗ್ರಾಮಾಂತರ ವಿಭಾಗದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಗ್ರಾಮದಲ್ಲಿ ರೈತರ ಕೃಷಿ ಭೂಮಿಗೆ ಅಳವಡಿಸಿರುವ 2 ಟ್ರಾನ್ಸ್‍ಫಾರ್ಮರ್‍ಗಳು ಸುಟ್ಟು ನಾಲ್ಕೈದು ತಿಂಗಳುಗಳೇ ಕಳೆದಿವೆ. ಈ ಬಗ್ಗೆ ದೂರು ನೀಡಿದರೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದೆ ಬೇಜವಾಬ್ದಾರಿಯುತವಾಗಿ ಮಾತನಾಡುತ್ತಾರೆ. ಜೊತೆಗೆ ರೈತರಿಗೆ ಪ್ರತಿನಿತ್ಯ 8 ಗಂಟೆ ವಿದ್ಯುತ್ ನೀಡಬೇಕೆಂದು ಸರ್ಕಾರವೇ ಆದೇಶ ಮಾಡಿದ್ದರೂ ಬೆಸ್ಕಾಂ ಅಧಿಕಾರಿಗಳು 2-3 ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗೂ ನಮಗೆ ಪರಿಹಾರ ಬೇಕು ಎಂದು ಗ್ರಾಮಸ್ಥರು ಗ್ರಾಮಾಂತರ ಬೆಸ್ಕಾಂನ ಎಇಇ ಪುಟ್ಟಯ್ಯ ಅವರನ್ನು ತರಾಟೆಗೆ ಪಡೆದರು.ಕಳೆದ ನಾಲ್ಕೈದು ತಿಂಗಳಿಂದ ಗ್ರಾಮದ ಲಕ್ಕಣ್ಣನಕಟ್ಟೆ ಮತ್ತು ಶಿವಲಿಂಗಯ್ಯ ಜಮೀನಿನ ಬಳಿ ಇರುವ 2 ಟ್ರಾನ್ಸ್ ಫಾರ್ಮರ್‍ಗಳು ಮೂರು ಬಾರಿ ಕೆಟ್ಟು ಹೋಗಿವೆ. ಅವುಗಳನ್ನು ಸರಿಪಡಿಸಿ ಎಂದು ಮನವಿ ಮಾಡಿದ್ದೇವೆ. ಆದರೆ ನಮ್ಮ ಮನವಿಗೆ ಅಧಿಕಾರಿಗಳಾದ ತಾವು ಸ್ಪಂದಿಸುತ್ತಿಲ್ಲ. ಜೊತೆಗೆ ಈ ಭಾಗದ ಲೈನ್‍ಮೆನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಇ ಚಂದ್ರಶೇಖರ್ ಮಾತನಾಡಿ. ಬಿ.ವಿ. ಹಳ್ಳಿ. ಗ್ರಾಮದಲ್ಲಿ ಸಬ್ ಸ್ಟೇಷನ್ ನಿರ್ಮಿಸುವರೆಗೆ ಈ ಸಮಸ್ಯೆಯಿದ್ದು, ನಂತರ ಒತ್ತಡ ಕಡಿಮೆಯಾಗಲಿದ್ದು, ಮೋಳೆ ಸಬ್ ಸ್ಟೇಷನ್‍ನಿಂದ ಗ್ರಾಮದ ಕೆಲ ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. ಇದರಿಂದ ಸಮಸ್ಯೆ ಪರಿಹಾರವಾಗಲಿದೆ. ರೈತರು ಅಲ್ಲಿಯವರೆಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಶಿವಲಿಂಗಯ್ಯ, ನಾಗೇಶ್, ಸುರೇಶ್, ಜಯರಾಮೇಗೌಡ, ರಂಗಪ್ಪ, ಚಿಕ್ಕಣ್ಣ, ಕುಮಾರ್, ಸಿದ್ದಲಿಂಗೇಗೌಡ, ಗಿರೀಶ್, ರಾಜು ಬೊಮ್ಮಗೌಡ ಇನ್ನೂ ಮುಂತಾದವರು ಹಾಜರಿದ್ದರು. ಚಿಕ್ಕಮಂಗಳೂರು, ಜ.4- ಹೆಲ್ಮೆಟ್ ವಶಪಡಿಸಿಕೊಳ್ಳುವ ಅವಕಾಶವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ತಿಳಿಸಿದರು. ಮೈಸೂರಿನಲ್ಲಿ ಬೈಕ್ ಸವಾರರ ಹಾಫ್ ಹೆಲ್ಮೆಟ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೀವು ಜಿಲ್ಲೆಯಲ್ಲಿ ಹೆಲ್ಮೆಟ್‍ಗಳನ್ನು ವಶಪಡಿಸಿಕೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಫ್ ಹೆಲ್ಮೆಟ್‍ಅಥವಾ ಫುಲ್ ಹೆಲ್ಮೆಟ್ ಯಾವುದೇ ಆಗಲಿ ಪೊಲೀಸರು ವಶಕ್ಕೆ ಪಡೆಯುವ ಕಾನೂನು ಇಲ್ಲ. ಅವಕಾಶವೂ ಇಲ್ಲ ಎಂದು ತಿಳಿಸಿದರು. ಬೈಕ್ ಸವಾರರ ಸುರಕ್ಷತೆಗಾಗಿ ಐಎಸ್‍ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಬೇಕು ಎಂಬ ಕಾನೂನು ಇದೆ. ಆ ನಿಯಮಗಳನ್ನು ಪಾಲಿಸಬೇಕು. ಅದರ ಬದಲಾಗಿ ಹಾಫ್ ಹೆಲ್ಮೆಟ್‍ಗಳನ್ನು ಧರಿಸಿದವರನ್ನು ಪೊಲೀಸರು ಹಿಡಿದು ದಂಡ ವಿಧಿಸುವುದು ಸರಿಯಲ್ಲ. ಬೈಕ್ ಸವಾರರಿಗೆ ಐಎಸ್‍ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಿ ಹಾಫ್ ಹೆಲ್ಮೆಟ್ ಧರಿಸಬೇಡಿ ಎಂದು ಹೇಳಿ ಕಳುಹಿಸಬೇಕು. ಆದರೆ, ಹೆಲ್ಮೆಟ್ ವಶಪಡಿಸಿಕೊಳ್ಳುವಾಗಿಲ್ಲ ಎಂದು ಹೇಳಿದರು. ಮಳವಳ್ಳಿ,ಆ.31- ಸಾಹಿತಿ ಹಾಗೂ ವೈಜ್ಞಾನಿಕ ಚಿಂತಕರಾದ ಡಾ.ಕಲ್ಬುರ್ಗಿರವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ತಾಲ್ಲೂಕು ಘಟಕ ಪ್ರತಿಭಟನೆ ನಡೆಸಿತು.ಪ್ರತಿಭಟನಾಕಾರರು ತಮ್ಮ
OSCAR-2019
ಹುಬ್ಬಳ್ಳಿ: ‘ಭೀಮಣ್ಣ ಕೊನೆಯ ಬಾರಿ ಹಾಡಿದ್ದು ಕರ್ನಾಟಕದಲ್ಲಿ. 2004ರಲ್ಲಿ ಮೈಸೂರಿನ ದಸರಾ ಮಹೋತ್ಸವದಲ್ಲಿ ಹಾಡಿದ್ದೇ ಕೊನೆ. ಮತ್ತೆ ಅವನು ಹಾಡಲಿಲ್ಲ. ಅವನ ಆರೋಗ್ಯ ಕೆಟ್ಟಿತ್ತು. ಹೀಗಾಗಿ ಮತ್ತೆ ಹಾಡಲಾಗಲಿಲ್ಲ’ ಎಂದು ಭೀಮಸೇನ ಜೋಷಿ ಕುರಿತು ನೆನಪಿಸಿಕೊಂಡರು ಗಂಗೂಬಾಯಿ ಹಾನಗಲ್ ಪುತ್ರ ಬಾಬುರಾವ್ ಹಾನಗಲ್. ‘ಭೀಮಣ್ಣನನ್ನು ಏಕವಚನದಲ್ಲೇ ಮಾತಾಡಿಸುತ್ತಿದ್ದೆವು. ಅಷ್ಟೊಂದು ಸಲಿಗೆ ಇತ್ತು. ನಮ್ಮ ತಾಯಿ ಹಾಗೂ ಭೀಮಣ್ಣ ಒಟ್ಟಿಗೇ ಸವಾಯಿ ಗಂಧರ್ವರ ಬಳಿ ಶಾಸ್ತ್ರೀಯ ಸಂಗೀತ ಕಲಿತರು. ಆಗ ಕುಂದಗೋಳದಲ್ಲಿಯ ಸವಾಯಿ ಗಂಧರ್ವರ ಮನೆಯಲ್ಲಿಯೇ ಭೀಮಣ್ಣ ಇದ್ದ. ಗುರುಕುಲ ಪದ್ಧತಿಯಂತೆ ಕಲಿಯುತ್ತಿದ್ದ. ಅದು 1940ರ ಅಂದಾಜು ಇರಬಹುದು. ಆಗ ನಳ ಇರಲಿಲ್ಲ. ಹೊಂಡದಿಂದ 15-20 ಕೊಡ ನೀರನ್ನು ನಿತ್ಯ ತರುತ್ತಿದ್ದ. ನಮ್ಮ ತಾಯಿ ನಿತ್ಯ ಸಂಜೆ ಐದು ಗಂಟೆಯ ರೈಲು ಹಿಡಿದುಕೊಂಡು ಹುಬ್ಬಳ್ಳಿಯಿಂದ ಕುಂದಗೋಳಕ್ಕೆ ಹೋಗುತ್ತಿದ್ದರು. ಅಲ್ಲಿ ಸವಾಯಿ ಗಂಧರ್ವರ ಬಳಿ ಕಲಿತು ರಾತ್ರಿ 11ರ ರೈಲಿಗೆ ವಾಪಸು ಬರುತ್ತಿದ್ದರು. ಆಗ ಕುಂದಗೋಳದಲ್ಲಿ ಕರೆಂಟಿರಲಿಲ್ಲ. ಭೀಮಣ್ಣನೇ ಕಂದೀಲು ಹಿಡಿದುಕೊಂಡು ನಮ್ಮ ತಾಯಿಯನ್ನು ರೈಲು ನಿಲ್ದಾಣದವರೆಗೆ ಬಿಡುತ್ತಿದ್ದ. ಆಗ ಅವನಿಗೆ 20 ವರ್ಷ ಇರಬೇಕು. ನಾಲ್ಕು ವರ್ಷಗಳವರೆಗೆ ಕುಂದಗೋಳದಲ್ಲಿದ್ದ. ಕಾಯಿಪಲ್ಲೆಗೆ, ಔಷಧಿಗೆ ಹೀಗೆ ಎಲ್ಲಕ್ಕೂ ಹುಬ್ಬಳ್ಳಿಗೆ ಬರಬೇಕಿತ್ತು. ಬಂದಾಗೆಲ್ಲ ನಮ್ಮನೆಗೆ ತಪ್ಪದೇ ಬರುತ್ತಿದ್ದ. ‘1946ರಲ್ಲಿ ಭೀಮಣ್ಣ ಶಿಷ್ಯತ್ವ ಪಡೆದ. ಅದಕ್ಕೆ ಗಂಡಾ ಸಮಾರಂಭ ಎನ್ನುತ್ತಾರೆ. ಅದು ನಡೆದದ್ದು ಹುಬ್ಬಳ್ಳಿಯಲ್ಲೇ. ಗುಡ್‌ಶೆಡ್ ರಸ್ತೆಯಲ್ಲಿದ್ದ ರೈಲ್ವೆ ಇನ್‌ಸ್ಟಿಟ್ಯೂಟ್ ಸಂಸ್ಥೆಯಲ್ಲಿ. ಸವಾಯಿ ಗಂಧರ್ವರು ತಮ್ಮ ಶಿಷ್ಯನೆಂದು ಸ್ವೀಕರಿಸಿದರು ಆಗ. ಹುಬ್ಬಳ್ಳಿಯಲ್ಲಿಯೇ ಭೀಮಣ್ಣನ ಮೊದಲ ಸಂಗೀತ ಕಛೇರಿ ನಡೆದದ್ದು. ನಮ್ಮ ತಂದೆ ಗುರಾಚಾರ್ಯ ಕೌಲಗಿ ಕಛೇರಿ ಏರ್ಪಡಿಸಿದ್ದರು. 1944ರಲ್ಲಿ ಹುಬ್ಬಳ್ಳಿ ಆರ್ಟ್ ಸರ್ಕಲ್ ಎಂಬ ಸಂಸ್ಥೆಯನ್ನು ಶುರು ಮಾಡಿದೆವು. ಒಟ್ಟು 25 ಸಂಗೀತ ಕಛೇರಿಯನ್ನು ಭೀಮಣ್ಣ ಕೊಟ್ಟ. ಆರ್ಟ್ ಸರ್ಕಲ್ಲಿನ ಬೆಳ್ಳಿಹಬ್ಬಕ್ಕೆ (1970) ಹಾಗೂ ಸುವರ್ಣ ಮಹೋತ್ಸವಕ್ಕೆ (1994) ಬಂದು ಕಛೇರಿ ಕೊಟ್ಟಿದ್ದ. ಮರಾಠಿಯಲ್ಲಿ ನಾಟ್ಯ ಸಂಗೀತ ಹಾಡುತ್ತಿದ್ದ ಭೀಮಣ್ಣ ಶಾಸ್ತ್ರೀಯ ಸಂಗೀತದಲ್ಲಿ ಶಿಖರ ಮುಟ್ಟಿದವರು. ಜೊತೆಗೆ ಉಪಶಾಸ್ತ್ರೀಯ ಸಂಗೀತದ ಠುಮ್ರಿ, ದಾಧ್ರಾ ಗಾಯನವನ್ನು ಹಾಡುತ್ತಿದ್ದ.ಮುಖ್ಯವಾಗಿ ಸಂತವಾಣಿಯನ್ನು ಪರಿಚಯಿಸಿ, ಅದನ್ನು ಪ್ರಸಿದ್ಧಿಗೊಳಿಸಿದ. ಕನ್ನಡ, ಮರಾಠಿ ಹಾಗೂ ಹಿಂದಿ ಭಕ್ತಿಗೀತೆ ಹಾಡುತ್ತಿದ್ದ. ಹೀಗಾಗಿ ಆತ ಸಂತವಾಣಿ ಕಾರ್ಯಕ್ರಮ ನೀಡಿದ. ಹುಬ್ಬಳ್ಳಿಯಲ್ಲಿ ಶಂಕರಮಠ ಕಟ್ಟಲು ಹಾಗೂ ಧಾರವಾಡದಲ್ಲಿ ಪವನ್ ಇಂಗ್ಲಿಷ್ ಮಾಧ್ಯಮ ಶಾಲೆ ಕಟ್ಟಲು ಸಹಾಯಾರ್ಥವಾಗಿ ಸಂತವಾಣಿ ಕಾರ್ಯಕ್ರಮಗಳನ್ನು ನೀಡುತ್ತಿದ್ದ.
OSCAR-2019
ಬೆಂಗಳೂರು: ವಿಧಾನಸಭಾ ಚುನಾವಣೆಗೆ ರಂಗು ಬರುತ್ತಿದ್ದಂತೆ ನಗರದದೆಲ್ಲೆಡೆ ಪ್ರಚಾರದ ಭರಾಟೆಯೂ ಶುರುವಾಗಿದೆ. ಪ್ಲಾಸ್ಟಿಕ್ ಬಂಟಿಂಗ್ಸ್, ಬ್ಯಾನರ್‌ಗಳನ್ನು ಹಾಕುವವರ ವಿರುದ್ಧ ಬಿಬಿಎಂಪಿ ಚಾಟಿ ಬೀಸಿದ್ದರೂ ರಾಜಕೀಯ ಪಕ್ಷಗಳು ಹಳೆಯ ಚಾಳಿ ಮುಂದುವರಿಸಿವೆ. ನಗರದ ಎಲ್ಲೆಂದರಲ್ಲಿ ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳಿಗೆ ಶುಭಾಶಯ ಕೋರುವ, ಬೆಂಬಲ ಸಾರುವ ಬ್ಯಾನರ್‌ಗಳು ಬೀಡುಬಿಟ್ಟಿವೆ. ಜನರ ಮತ ಸೆಳೆಯಲು ಪ್ರಮುಖ ರಾಜಕೀಯ ಪಕ್ಷಗಳು ವಿವಿಧ ಬಗೆಯ ಪ್ರಚಾರ ತಂತ್ರಗಳನ್ನು ಅನುಸರಿಸುತ್ತವೆ. ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳ ಮೂಲಕ ಮತ ಯಾಚಿಸುವುದು ಸುಲಭ ಮಾರ್ಗ. ಇದಕ್ಕೆ ದೊಡ್ಡ ಮೊತ್ತದ ಬಜೆಟ್ ಬೇಕಾಗಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳ ಮುಖಂಡರು ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಮುನ್ನವೇ ಈ ಮೂಲಕ ಪ್ರಚಾರ ಆರಂಭಿಸಿದ್ದಾರೆ. ನಗರದ ಪ್ರಮುಖ ಗಲ್ಲಿಗಲ್ಲಿಗಳಲ್ಲಿ, ಪ್ರಮುಖ ಗೋಡೆಗಳಲ್ಲಿ, ಮರಗಳಲ್ಲಿ ಪ್ರಚಾರ ಸಾಮಗ್ರಿಗಳು ರಾರಾಜಿಸಲು ಆರಂಭಿಸಿವೆ. `ಕಸ ರಗಳೆ'ಯಿಂದ ನಾಲ್ಕಾರು ತಿಂಗಳಿಂದ ತತ್ತರಿಸಿದ್ದ ಉದ್ಯಾನನಗರಿಯಲ್ಲಿ ಮತ್ತೆ ಕಸ ವಿಲೇವಾರಿ ಸಮಸ್ಯೆ ಉದ್ಭವಿಸುವ ಭೀತಿ ಎದುರಾಗಿದೆ. `ಪ್ಲಾಸ್ಟಿಕ್ ಹಲವಾರು ವರ್ಷಗಳ ಕಾಲ ಮಣ್ಣಿನಲ್ಲಿ ಕರಗದೆ ಇರುತ್ತದೆ. ಇದರಿಂದಾಗಿ ಭೌತಿಕ ಗುಣಗಳ ಮೇಲೆ ಪರಿಣಾಮ ಬೀರುತ್ತದೆ. ಭೂಮಿಯ ಆಳಕ್ಕೆ ಬೇರು ಹೋಗದಂತೆ ತಡೆ ಒಡ್ಡುತ್ತದೆ. ಆಧುನಿಕ ಕಾಲಘಟ್ಟದಲ್ಲಿ ಪ್ಲಾಸ್ಟಿಕ್ ಒಂದು ರೀತಿಯಲ್ಲಿ ಹಿತಶತ್ರು ಇದ್ದಂತೆ. ನಗರದಲ್ಲಿ ಕಸ ಸಮಸ್ಯೆ ಬಿಗಡಾಯಿಸಿದ್ದು, ಚುನಾವಣಾ ಪ್ರಚಾರಕ್ಕೆ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಯಂತ್ರಣ ಹೇರಬೇಕು. ಕಾಗದ ವಸ್ತುಗಳು ಭೂಮಿಯಲ್ಲಿ ಬೇಗ ಕರಗುತ್ತವೆ. ಕಾಗದದ ಸಾಮಗ್ರಿಗಳನ್ನೇ ಚುನಾವಣಾ ಪ್ರಚಾರಕ್ಕೆ ಬಳಸಬೇಕು' ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿ ಡಾ.ಸಿ.ಎ. ಶ್ರೀನಿವಾಸಮೂರ್ತಿ ಸಲಹೆ ನೀಡಿದರು. ಪ್ರಾಣಿಗಳನ್ನೇಕೆ ಕೊಲ್ಲುವಿರಿ?: `ಬೇಕಾಬಿಟ್ಟಿಯಾಗಿ ಎಲ್ಲದಕ್ಕೂ ಪ್ಲಾಸ್ಟಿಕ್ ಬಳಸಿ ಮೂಕ ಪ್ರಾಣಿಗಳನ್ನು ಏಕೆ ಕೊಲ್ಲುತ್ತೀರಿ' ಎಂಬುದು ನಗರದ ಡೇರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ವೆಂಕಟೇಶಯ್ಯ ಅವರ ಕಟುವಾದ ಪ್ರಶ್ನೆ. `ನಗರದಲ್ಲಿ ಕಸವನ್ನು ಬೇರ್ಪಡಿಸುತ್ತಿಲ್ಲ. ಇದರಿಂದಾಗಿ ಹಸಿ ಕಸದ ಜೊತೆಗೆ ಪ್ಲಾಸ್ಟಿಕ್ ಸಹ ಜಾನುವಾರುಗಳ ಹೊಟ್ಟೆ ಸೇರುತ್ತದೆ. ಚುನಾವಣಾ ಸಂದರ್ಭದಲ್ಲಿಯಂತೂ ಗಲ್ಲಿ ಗಲ್ಲಿಯಲ್ಲಿ ಪ್ಲಾಸ್ಟಿಕ್ ಧ್ವಜ ಬಿದ್ದಿರುತ್ತದೆ. ಮಾನವನ ನಿರ್ಲಕ್ಷ್ಯದ ಧೋರಣೆಗೆ ಜಾನುವಾರುಗಳು ಬಲಿಪಶುಗಳು' ಎಂದು ಅವರು ಬೇಸರ ವ್ಯಕ್ತಪಡಿಸಿದರು. `ಪ್ಲಾಸ್ಟಿಕ್ ವಸ್ತುಗಳ ಸೇವನೆಯಿಂದ ಜಾನುವಾರುಗಳು ಅಜೀರ್ಣ, ಹೊಟ್ಟೆ ಊದಿಕೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತವೆ. ಪ್ಲಾಸ್ಟಿಕ್ ವಸ್ತುಗಳನ್ನು ಸೇವಿಸಿದ 2-3 ದಿನಗಳಲ್ಲೇ ಅದರ ದುಷ್ಟರಿಣಾಮ ಜಾನುವಾರುಗಳ ಮೇಲಾಗಲು ಆರಂಭವಾಗುತ್ತದೆ. ಅತಿಯಾದ ಪ್ಲಾಸ್ಟಿಕ್ ಸೇವನೆ ಜಾನುವಾರುಗಳ ಸಾವಿಗೂ ಕಾರಣವಾಗುತ್ತದೆ' ಎಂಬುದು ಅವರ ಎಚ್ಚರಿಕೆಯ ನುಡಿ. ಚುನಾವಣಾ ಪ್ರಚಾರದಲ್ಲಿ ಪ್ಲಾಸ್ಟಿಕ್ ಪರಿಕರಗಳ ಬಳಸದಂತೆ ಕಟ್ಟುನಿಟ್ಟಿನ ನಿಷೇಧ ಹೇರಬೇಕು ಎಂದು ಸಲಹೆ ನೀಡುತ್ತಾರೆ. ಸೌಂದರ್ಯಕ್ಕೆ ಧಕ್ಕೆ: `ಹಸಿರುನಗರಿ ಎಂದು ಪ್ರಖ್ಯಾತಿ ಗಳಿಸಿರುವ ನಗರದ ಸೌಂದರ್ಯ ದಿನೇ ದಿನೇ ಕುಸಿತ ಕಾಣುತ್ತಿದೆ. ಚಿತ್ರವಿಚಿತ್ರವಾದ ಬ್ಯಾನರ್‌ಗಳು, ಬಂಟಿಂಗ್ಸ್‌ಗಳು ಕಪ್ಪು ಚುಕ್ಕೆ ಇದ್ದಂತೆ. ಬಿಬಿಎಂಪಿ ಸಹ ಒಂದು ಬಾರಿ ಕಾರ್ಯಾಚರಣೆ ನಡೆಸಿ ಮೌನಕ್ಕೆ ಶರಣಾಗಿ ಬಿಡುತ್ತದೆ. ರಾಜಕೀಯ ಪಕ್ಷಗಳಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಕಠಿಣ ಕ್ರಮ ಕೈಗೊಂಡರೆ ಸ್ವಲ್ಪ ಮಟ್ಟಿಗೆ ಇದಕ್ಕೆ ನಿಯಂತ್ರಣ ಹೇರಬಹುದು. ಚುನಾವಣಾ ಸಮಯದಲ್ಲೇ ಮತ್ತೆ ಕಸ ಸಮಸ್ಯೆ ಬಿಗಡಾಯಿಸುವ ಆತಂಕ ಎದುರಾಗಿದೆ' ಎಂದು ಸಾಫ್ಟ್‌ವೇರ್ ಎಂಜಿನಿಯರ್ ಸುಧೀಂದ್ರ ಆತಂಕ ವ್ಯಕ್ತಪಡಿಸುತ್ತಾರೆ. ಹಬ್ಬದ ಸಂಭ್ರಮ: `ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ಪ್ರಚಾರಕ್ಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ರಾಜಕೀಯ ಪಕ್ಷಗಳು ಹಾಗೂ ಕಾರ್ಯಕರ್ತರಿಗೂ ಜಾಗೃತಿ ಮೂಡಿದೆ. ಪ್ಲಾಸ್ಟಿಕ್‌ನಿಂದ ತಯಾರಾದ ಚುನಾವಣಾ ಸಾಮಗ್ರಿಗಳಿಗಂತೂ ಬೇಡಿಕೆ ಇಲ್ಲ. ನಾವಂತೂ ಪ್ಲಾಸ್ಟಿಕ್‌ನಿಂದ ತಯಾರಿಸಿದ ಧ್ವಜ, ಬಂಟಿಂಗ್ಸ್‌ಗಳನ್ನು ಮಾರುವುದೇ ಇಲ್ಲ' ಎಂಬುದು ನಗರದ ರುಷಬ್ ಎಂಟರ್‌ಪ್ರೈಸಸ್‌ನ ಮಾಲೀಕ ಅನಿಲ್ ಅವರ ವಾದ. `2004ರ ಚುನಾವಣೆಯ ವೇಳೆ ರಾಜ್ಯಚುನಾವಣಾ ಆಯೋಗ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತು. ಅದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಕಾಯ್ದೆಗೂ ತಿದ್ದುಪಡಿ ತರಲಾಯಿತು. ಆದರೂ, ಗ್ರಾಮೀಣ ಪ್ರದೇಶಗಳಲ್ಲಿ ಅರಿವಿನ ಕೊರತೆಯಿಂದ ಚುನಾವಣೆ ಪ್ರಚಾರಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ' ಎಂದು ಹೇಳುವ ಅವರು, `ನಗರದಲ್ಲಿ ಪ್ಲಾಸ್ಟಿಕ್ ಬಂಟಿಂಗ್ಸ್, ಬ್ಯಾನರ್‌ಗಳು, ಫ್ಲೆಕ್ಸ್‌ಗಳ ಬದಲು ಈಗ ಕಾಗದದ ಬಾವುಟ, ಟೋಪಿ, ಶಾಲುಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಬಳಸಲಾಗುತ್ತಿದೆ' ಎಂದು ವಿವರ ನೀಡುತ್ತಾರೆ. `ಚುನಾವಣೆ ಒಂದು ರೀತಿಯಲ್ಲಿ ಹಬ್ಬ ಇದ್ದಂತೆ. ಆಗ ಸಂಭ್ರಮ ಇರಲೇಬೇಕು. ಬಂಟಿಂಗ್ಸ್, ಬ್ಯಾನರ್, ಬಾವುಟ ಎಲ್ಲ ಇದ್ದಾಗ ಚುನಾವಣೆಗೆ ಹಬ್ಬದ ಸಂಭ್ರಮ ಬರುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳು ಇವುಗಳ ಬಳಕೆಗೆ ಹೆಚ್ಚಿನ ಒಲವು ತೋರುವುದು ಸಹಜ' ಎನ್ನುವ ಅವರು, `ಬಾವುಟ, ಟೋಪಿ, ಶಾಲುಗಳು ಜನರನ್ನು ಪರಿಣಾಮಕಾರಿಯಾಗಿ ಸುಲಭವಾಗಿ ತಲುಪುತ್ತವೆ. ಖರ್ಚು ಕಡಿವೆು' ಎಂದರು. `ಚುನಾವಣಾ ಸಂದರ್ಭದಲ್ಲಿ ಪ್ಲಾಸ್ಟಿಕ್ ಸಾಮಗ್ರಿಗಳಿಗೆ ನಿಯಂತ್ರಣ ಹಾಗೂ ನಿಷೇಧ ವಿಧಿಸುವ ಸಂಬಂಧ ಬಿಬಿಎಂಪಿ ಹಾಗೂ ರಾಜ್ಯ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಯಾವುದೇ ಪಾತ್ರ ಇಲ್ಲ' ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ವಾಮನಾಚಾರ್ಯ ಸ್ಪಷ್ಟಪಡಿಸಿದರು. `ಪ್ಲಾಸ್ಟಿಕ್ ದುಷ್ಪರಿಣಾಮದ ಕುರಿತು ಮಂಡಳಿ ವತಿಯಿಂದ ಮುಂದಿನ ದಿನಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಳ್ಳುತ್ತೀರಾ' ಎಂದು ಪ್ರಶ್ನಿಸಿದಾಗ, `ಈವರೆಗೆ ಅಂತಹ ಯಾವುದೇ ಯೋಚನೆ ಮಾಡಿಲ್ಲ. ಈ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳುವುದೂ ಇಲ್ಲ' ಎಂದರು. ಚುನಾವಣಾ ನೀತಿ ಸಂಹಿತೆ ಪ್ರಕಾರ ಎಲ್ಲ ಅನಧಿಕೃತ ಹೋರ್ಡಿಂಗ್‌ಗಳು, ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ಅಂತಹ ಚಟುವಟಿಕೆ ನಡೆಸುವವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಬಂದರೆ ಪ್ರಚಾರದಲ್ಲಿ ಪ್ಲಾಸ್ಟಿಕ್ ಸಾಮಗ್ರಿ ಸಂಪೂರ್ಣ ನಿಷೇಧಕ್ಕೆ ಕ್ರಮ ಕೈಗೊಳ್ಳುತ್ತೇವೆ. ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಚುನಾವಣಾ ಪ್ರಚಾರಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಂಟಿಂಗ್ಸ್, ಬ್ಯಾನರ್‌ಗಳನ್ನು ಬಳಸುವುದಕ್ಕೆ ಅವಕಾಶ ಇಲ್ಲ. ಈಗಾಗಲೇ ಅಂತಹ ಬ್ಯಾನರ್‌ಗಳನ್ನು ಕಿತ್ತು ಹಾಕಿದ್ದೇವೆ. ಆದರೆ, ಕಣ್ಣು ತಪ್ಪಿಸಿ ಹಾಕುತ್ತಿದ್ದಾರೆ. ಬ್ಯಾನರ್‌ಗಳನ್ನು ಹಾಕಿದ ವೇಗದಲ್ಲೇ ನಾವು ಅದನ್ನು ತೆರವು ಮಾಡುತ್ತಿದ್ದೇವೆ. ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ಈಗಾಗಲೇ ಸಾಕಷ್ಟು ಜಾಗೃತಿ ಮೂಡಿಸುವ ಪ್ರಯತ್ನವೂ ಆಗಿದೆ. ಪಕ್ಷಕ್ಕೆ ಹಾಗೂ ಅಭ್ಯರ್ಥಿಗೆ ಬೆಂಬಲ ಸಾರಿ ಪ್ಲಾಸ್ಟಿಕ್ ಬಂಟಿಂಗ್ಸ್ ಹಾಕಿದ್ದರೆ ಆ ಪಕ್ಷದ ಹಾಗೂ ಅಭ್ಯರ್ಥಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದು. ಚುನಾವಣಾ ಪ್ರಚಾರಕ್ಕೆ ಪ್ಲಾಸ್ಟಿಕ್ ಬಳಸದಂತೆ ಸಂಪೂರ್ಣ ನಿಷೇಧ ಹೇರಬಹುದು. ಈ ಮೂಲಕ ನಗರದ ಕಸ ಸಮಸ್ಯೆಗೆ ತಕ್ಕ ಮಟ್ಟಿಗೆ ಪರಿಹಾರ ದೊರಕುತ್ತದೆ. ವಿದೇಶಗಳಲ್ಲಿ ಚುನಾವಣಾ ಪ್ರಚಾರಕ್ಕೆ ಪ್ಲಾಸ್ಟಿಕ್ ಬಳಸುವುದಿಲ್ಲ. ಇದರ ಬದಲು ಜನರೊಂದಿಗೆ ಮುಖಾಮುಖಿ, ಸಮಾವೇಶ, ಸಭೆಗಳನ್ನು ನಡೆಸಿ ಮತದಾರರೊಂದಿಗೆ ಸಂವಾದ ನಡೆಸಲಿ. ಅದು ಬಿಟ್ಟು ಪ್ರತಿಷ್ಠೆ ಪ್ರದರ್ಶನಕ್ಕೆ ಪ್ಲಾಸ್ಟಿಕ್ ಬಂಟಿಂಗ್ಸ್, ಬ್ಯಾನರ್ ಬಳಸುವುದು ಬೇಡ.
OSCAR-2019
ಮೂರು ದಿನಗಳಲ್ಲಿ 50ಕ್ಕೂ ಹೆಚ್ಚು ಮರಿಗಳು ಮೃತಪಟ್ಟಿವೆ. ಚಿಕ್ಕೋಡಿ ತಾಲ್ಲೂಕಿನ ನಾಗರಮನವಳ್ಳಿ ಗ್ರಾಮದ ದರಿಯಪ್ಪ ಮಾರುತಿ ಪೂಜಾರಿ, ಶ್ರೀಕಾಂತ ಮಾರುತಿ ಪೂಜಾರಿ, ಬೀರಪ್ಪ ಮಾರುತಿ ಪೂಜಾರಿ ಹಾಗೂ ನಾಗರತ್ನಮ್ಮ ಎಂಬುವರಿಗೆ ಈ ಕುರಿಗಳು ಸೇರಿವೆ. ‘ಹುಲ್ಲುಗಾವಲಿನಲ್ಲಿ ಮೇಯುತ್ತಿರುವಾಗ ಏಕಾಏಕಿ ಮೂರ್ಛೆ ಬೀಳುತ್ತಿವೆ. ನಂತರ ಬಾಯಲ್ಲಿ ನೊರೆ ಬಂದು ಕುರಿ ಮರಿಗಳು ಜೀವ ಬಿಡುತ್ತಿವೆ. ಈ ಕುರಿತು ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದರೆ, ಮೂರು ದಿನಗಳಾದರೂ ಬಂದಿಲ್ಲ’ ಎಂದು ದರಿಯಪ್ಪ ಮಾರುತಿ ಪೂಜಾರಿ ತಿಳಿಸಿದರು. ಈ ಕುರಿತು ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬೆಣ್ಣಿ ಅವರನ್ನು ಸಂಪರ್ಕಿಸಿದಾಗ, ‘ಈ ವಿಷಯ ಗಮನಕ್ಕೆ ಬಂದಿದೆ. ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುವಂತೆ ಸಿಬ್ಬಂದಿಗೆ ತಿಳಿಸಿದ್ದೇನೆ’ ಎಂದರು.
OSCAR-2019
ಬಳ್ಳಾರಿ: ವಿವಿಧ ವಸತಿ ಯೋಜನೆಗಳಡಿ ಸ್ಥಳೀಯ ಬಡಜನತೆಗೆ ಅಗತ್ಯ ನಿವೇಶನ ಹಾಗೂ ಮನೆ ಒದಗಿಸಬೇಕು ಎಂದು ಆಗ್ರಹಿಸಿ ನಗರದ ವಿವಿಧ ಕೊಳೆಗೇರಿ ಹಾಗೂ ಬಡಾವಣೆಗಳಲ್ಲಿ ವಾಸಿಸುವ ಜನತೆ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಸಂಘಟನೆ ಹಮ್ಮಿಕೊಂಡಿರುವ `ಸೂರಿಗಾಗಿ ಸಮರ' ಕಾರ್ಯಕ್ರಮದಡಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪಾಲಿಕೆ ಕಚೇರಿಗೆ ತೆರಳಿದ ಪ್ರತಿಭಟನಕಾರರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಕಳೆದ ನಾಲ್ಕೈದು ದಶಕಗಳಿಂದ ಮನೆ ಹಾಗೂ ನಿವೇಶನ ಇಲ್ಲದ ಬಡ ಜನರು ಬಾಡಿಗೆ ಮನೆಗಳಲ್ಲೇ ವಾಸಿಸುವಂತಾಗಿದೆ. ನಗರದ ವಿವಿಧೆಡೆ ಚರಂಡಿ, ಒಳಚರಂಡಿ, ಕಾಲುವೆಗಳು ಮತ್ತಿತರ ಅನಾರೋಗ್ಯಕರ ವಾತಾವರಣ ಇರುವ ಪ್ರದೇಶಗಳಲ್ಲಿ ಅನಿವಾರ್ಯವಾಗಿ ಗುಡಿಸಲು ಹಾಕಿಕೊಂಡು, ಚಿಕ್ಕಪುಟ್ಟ ಮನೆಗಳನ್ನು ಬಾಡಿಗೆಗೆ ಪಡೆದು ಬದುಕುತ್ತಿದ್ದಾರೆ. ಇವರಿಗೆಲ್ಲ ಮನೆ ಕಟ್ಟಿಸಿಕೊಡುವಂತೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವನಾಗಿಲ್ಲ ಎಂದು ಪ್ರತಿಭಟನಕಾರರು ದೂರಿದರು. ಸರ್ಕಾರ ಕೂಡಲೇ ಬಡ ಜನರಿಗೆ ಜೀವನಕ್ಕೆ ಅಗತ್ಯವಾಗಿರುವ ಮನೆಗಳನ್ನು ನಿರ್ಮಿಸಿಕೊಡಬೇಕು. ಎಲ್ಲ ವಾರ್ಡ್‌ಗಳಲ್ಲೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಸಂಗನಕಲ್ಲು ಕಟ್ಟೆಬಸಪ್ಪ, ಉಪಾಧ್ಯಕ್ಷ ಹೊನ್ನಳ್ಳಿ ಈಶ್ವರ್, ಕೆ.ರವಿಕುಮಾರ್, ಕೊಳಗಲ್ ಎರಿಸ್ವಾಮಿ, ಅಂಜಿನಿ, ಶಂಕರಗೌಡ, ಪ್ರಭು, ಕೃಷ್ಣಮೂರ್ತಿ ಹಾಗೂ ನಗರದ ವಿವಿಧೆಡೆ ಜೀವಿಸವ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
OSCAR-2019
ಚಂಡೀಗಡ (ಐಎಎನ್‌ಎಸ್): ಭಾರತ-ಪಾಕಿಸ್ತಾನ ತಂಡಗಳ ಮಧ್ಯೆ ಬುಧವಾರ ಮೊಹಾಲಿಯಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ಎರಡೂ ದೇಶಗಳ ಪ್ರಧಾನ ಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಚಂಡೀಗಡ ಮತ್ತು ಮೊಹಾಲಿಯ ಎಲ್ಲ ಹೋಟೆಲ್‌ಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಸೋಮವಾರ ರಾತ್ರಿ ಶುರುವಾದ ಕಾರ್ಯಾಚರಣೆ ಮಂಗಳವಾರವೂ ಮುಂದುವರಿಯಿತು. ‘ಅತಿಥಿಗಳ ದಾಖಲೆಗಳನ್ನು ಪರಿಶೀಲಿಸಿದ್ದು, ಬೇರೆ ಕಡೆಯಿಂದ ಬಂದ ಪ್ರವಾಸಿಗರ ಮಾಹಿತಿಯನ್ನು ಕಲೆಹಾಕಿದ್ದೇವೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಚಂಡೀಗಡದಲ್ಲಿ 40 ಚಿಕ್ಕ ಹಾಗೂ ದೊಡ್ಡ ಹೋಟೆಲ್‌ಗಳಿದ್ದು, 1,400 ಕೋಣೆಗಳು ಅತಿಥಿಗಳಿಗೆ ಲಭ್ಯವಿವೆ. ಹೋಟೆಲ್ ತಾಜ್‌ನಲ್ಲಿ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ವಾಸ್ತವ್ಯ ಹೂಡಲಿದ್ದು, ಭಾರಿ ಬಿಗಿಭದ್ರತೆಯಿಂದ ಕೋಟೆಯಂತೆ ಭಾಸವಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ಆಟಗಾರರು ಇದೇ ಹೋಟೆಲ್‌ನಲ್ಲಿ ತಂಗಿದ್ದಾರೆ. ಮೊಹಾಲಿ ಹೋಟೆಲ್‌ಗಳನ್ನು ಪೊಲೀಸರು ತಲಾಶೆಗೆ ಒಳಪಡಿಸಿದ್ದಾರೆ. ‘ಪಂದ್ಯದ ಭದ್ರತಾ ವ್ಯವಸ್ಥೆ ಭಾಗವಾಗಿ ಈ ಪರಿಶೀಲನೆ ನಡೆಸಲಾಗಿದೆ. ವಿದೇಶಿ ಪ್ರವಾಸಿಗರ ಆಗಮನದ ಎಲ್ಲ ದಾಖಲೆಗಳನ್ನು ಸರಿಯಾಗಿಡುವಂತೆ ಹೋಟೆಲ್ ಮಾಲೀಕರಿಗೆ ಸೂಚಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ. ಪಾಕಿಸ್ತಾನದಿಂದ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಪಂದ್ಯ ವೀಕ್ಷಿಸಲು ಆಗಮಿಸುವ ನಿರೀಕ್ಷೆ ಇದೆ. ಐದು ಹಂತದ ಭದ್ರತಾ ವ್ಯವಸ್ಥೆಯನ್ನು ಕ್ರೀಡಾಂಗಣಕ್ಕೆ ಒದಗಿಸಲಾಗಿದ್ದು, ಕ್ರೀಡಾಂಗಣ ಸುತ್ತಲಿನ 2.5 ಕಿ.ಮೀ. ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ.
OSCAR-2019
ಮೈಸೂರು: ರಂಗಾಯಣ ಪ್ರತಿ ವರ್ಷ ಆಯೋಜಿಸುವ ಬಹುರೂಪಿ ಅಂತರ ರಾಷ್ಟ್ರೀಯ ನಾಟಕೋತ್ಸವವನ್ನು ಮುಂದಿನ ವರ್ಷದ ಜನವರಿಯಲ್ಲಿ ಹಮ್ಮಿಕೊಂಡಿದೆ. ಇದಕ್ಕಾಗಿ ರಾಷ್ಟ್ರೀಯ, ಅಂತರರಾಷ್ಟ್ರೀಯ ರಂಗತಂಡಗಳಿಂದ ನಾಟಕಗಳ ಆಯ್ಕೆಗಾಗಿ ಆಹ್ವಾನಿಸಲಾಗಿದೆ. ಆಸಕ್ತ ರಂಗತಂಡಗಳು ರಂಗಾಯಣದ ವೆಬ್‌ಸೈಟ್‌ www.ranagayana.org –ಇಲ್ಲಿಂದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿ ಸೆಪ್ಟೆಂಬರ್‌ 30ರೊಳಗೆ ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು– ಇಲ್ಲಿಗೆ ಕಳುಹಿಸಬಹುದು.
OSCAR-2019
ಕುಶ ಪೆಚ್ಚಾಗುತ್ತಾನೆ. ಕತ್ತಿನಿಂದ ಸರವನ್ನು ತೆಗೆದು ವಾಲ್ಮೀಕಿಗಳತ್ತ ಚಾಚುತ್ತಾನೆ. ವಾಲ್ಮೀಕಿಗಳು ನಗುನಗುತ್ತ, "ಈಗ ಹಾಕಿಕೊಂಡಿರು. ಅದು ಪಾರಿತೋಷಕ ತಾನೆ. ನಾಳೆ... ಕಾರ್ಕಳ: ವಾಲ್ಮೀಕಿ ರಾಮಾಯಣದಲ್ಲಿ ವರ್ಣಿತನಾಗಿರುವ ಶ್ರೀರಾಮ ಒಬ್ಬ ಮನುಷ್ಯಮೂರ್ತಿ. ಅವನ ನಡೆ-ನುಡಿಗಳೆಲ್ಲ ಮನುಷ್ಯ ಸಹಜವಾಗಿಯೇ ಇದ್ದವು. ಹಾಗೆ ಪುರುಷನಾಗಿದ್ದುಕೊಂಡೇ ಆತ ಹೇಗೆ ಮರ್ಯಾದಾ... ಹೌದು, ತಾನು ಹುಟ್ಟುವುದಕ್ಕೂ ಮೊದಲಿನ ಅಯೋಧ್ಯೆಯ ಚಿತ್ರಣವಿದು! ಕೇಳಲಿಕ್ಕೆ ಚ‌ಂದ ನಗರಗಳ ವರ್ಣನೆ, ನಿರ್ವಹಿಸಲಿಕ್ಕೆ ಮಾತ್ರ ಕಷ್ಟ ಅನ್ನಿಸಿತು ರಾಮನಿಗೆ. ಅದೇಕೋ ದೂರದ... ಶಾಂತಜ್ಜಿ ದೀಪ ತಂದಿರಿಸಿ ಹೋಯಿತು. ಕತ್ತಲು ಕವಿದಿದೆಯೆಂದು, ಆಗ ಅರಿವಾಯಿತು ದೀಪದ ಧ್ಯಾನ ಮಾಡಲಾರಂಭಿಸಿದರು. ದೀಪವು, ನಾಲ್ಕು ಗೋಡೆಗಳ ನಡುವೆ ಉರಿದಂತೆ ನೆಟ್ಟಗೆ... ಕೂಡಿದ ಹಕ್ಕಿಗಳು ಕಾವಿಗೆ ಬಂದಾಗ ಕೊಲ್ಲುವುದು ಬೇಡ ಎನ್ನುವುದು ಒಂದು ತಿಳುವಳಿಕೆ. ರಾಮಾಯಣಕ್ಕೂ ಮೊದಲೇ ಇದ್ದ ತಿಳುವಳಿಕೆ, ರಾಮಾಯಣ ಮಹಾಕಾವ್ಯವನ್ನು ರೂಪಿಸಿದ ತಿಳುವಳಿಕೆ. ನನ್ನ ದುರದೃಷ್ಟಕ್ಕೆ ಯಾರನ್ನು ಹೊಣೆ ಮಾಡಲಿ? ದೈವವೇ, ಅವಿವೇಕವೇ, ಭ್ರಮೆಯೇ? ದುರಾಸೆಯೇ? ಮಾಯಾಮೃಗದ ಪ್ರಕರಣ ನಡೆಯದಂತೆ ತಡೆಯಲು ಎಷ್ಟೊಂದು ಅವಕಾಶಗಳಿದ್ದವು. ಅವುಗಳನ್ನೆಲ್ಲ ಮೀರಿ ಮಾಯೆ ಗೆದ್ದು ಬಿಟ್ಟಿತು... ಬ್ರಹ್ಮನ ಮಾನಸ ಪುತ್ರರಾದ ಅತ್ರಿ ಋಷಿಗಳು ಮಹಾ ತಪಸ್ವಿಗಳು ಹಾಗೂ ಅವರ ಪತ್ನಿ ಅನುಸೂಯದೇವಿಯು ಮಹಾ ಪತಿವ್ರತೆ. ಪತಿಯೇ ಅವಳಿಗೆ ದೇವನು, ಅಥಿತಿ ಸೇವೆ ಅತ್ರಿ ಋಷಿಗಳ ಆಶ್ರಮದ ನಿಯಮವಾಗಿತ್ತು. ಅನುಸೂಯೆಯ ಪತಿವ್ರತಾ... ಇಂಡೋನೇಷ್ಯಾದಲ್ಲಿ ದೇವರ ದ್ವೀಪ ಎಂದೇ ಹೆಸರಾದದ್ದು ಬಾಲಿ. ಆ ದೇವರಿಗೂ ಆಕರ್ಷಕ ಎನಿಸುವಷ್ಟು ಚೆಂದದ ದ್ವೀಪ ಎನ್ನುವುದರ ಜತೆ ಕಣ್ಣು ಹಾಯಿಸಿದಲ್ಲೆಲ್ಲಾ ದೇವಾಲಯಗಳೇ! ನಿಸರ್ಗದ ಅಂಶಗಳಾದ ಕಲ್ಲು, ನೀರು, ಅಗ್ನಿ,... ಹೊಸದಿಲ್ಲಿ: ಕಾಂಗ್ರೆಸ್‌ ನಾಯಕಿ ರೇಣುಕಾ ಚೌಧರಿ ಅವರ ಕುರಿತು ಪ್ರಧಾನಿ ಮೋದಿ ಅವರು ನೀಡಿದ ಹೇಳಿಕೆ ಗುರುವಾರ ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಜತೆಗೆ, ಆಂಧ್ರಪ್ರದೇಶಕ್ಕೆ ವಿಶೇಷ... ಪುರಾಣದ ಕಥೆಗಳು ಮೇಲ್ನೋಟಕ್ಕೆ ಮಿಥ್ಯಸೃಷ್ಟಿಯೆಂದು ಅನಿಸಿದರೂ ಸಾವಿರ ಸಾವಿರ ವರ್ಷಗಳಿಂದ ಜನಪದ ಮಣ್ಣ ಬದುಕಲ್ಲಿ ಆಳವಾಗಿ ಬೇರೂರಿ ವಿಸ್ತಾರವಾಗಿ ಹರಿದುಕೊಂಡು ಬಂದಿರುವ ಜೀವನದಿ. ಅವು ಭೂತಕಾಲದಲ್ಲಿ ಹುಟ್ಟಿದರೂ... ಸ್ವಭಾವಕ್ಕೆ ಜಾತಿಭೇದವಿಲ್ಲ. ಯಾವುದೇ ಕುಲದಲ್ಲಿ ಹುಟ್ಟಿದರೂ ರಾವಣ ಸ್ವಭಾವವೂ ಬರಬಹುದು, ವಿಭೀಷಣನ ಸ್ವಭಾವವೂ ಬರಬಹುದು ಎನ್ನುವುದಕ್ಕೆ ಇವರಿಬ್ಬರು ಮತ್ತು ರಾಕ್ಷಸ ಕುಲದಲ್ಲಿ ಹುಟ್ಟಿದರೂ ಸಾತ್ವಿಕನಾಗಿ... ನವದೆಹಲಿ: ಈ ತಿಂಗಳ 26ರಂದು ದೇಶಕ್ಕೆ 69ನೇ ಗಣರಾಜ್ಯ ದಿನದ ಸಂಭ್ರಮ. ವಿಶೇಷವೆಂದರೆ, ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಆಸಿಯಾನ್‌ -ಇಂಡಿಯಾ ಟ್ಯಾಬ್ಲೋ ಪ್ರಮುಖ ಆಕರ್ಷಣೆಯಾಗುವ...
OSCAR-2019
ರಾಯಚೂರಿನಲ್ಲಿ ರಸ್ತೆ ವಿಸ್ತರಣೆ ವೇಳೆ ಮಸೀದಿಯನ್ನು ತೆರವುಗೊಳಿಸಿದಾಗ, ಅದರ ನಿರ್ಮಿತಿಯೇ ಹಿಂದು ದೇವಸ್ಥಾನದ ಮಾದರಿಗಳನ್ನು ಹೊಂದಿತ್ತು ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ಸುದ್ದಿಯಾಗುತ್ತಿದೆ. ಹಾಗಾದರೆ, ದೇವಾಲಯವನ್ನೇ ಒಡೆದು ಮಸೀದಿ ಕಟ್ಟಲಾಗಿತ್ತೇ ಎಂಬ ಪ್ರಶ್ನೆಯ ಸುತ್ತ ಫೇಸ್ಬುಕ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಕಾವು ಪಡೆದುಕೊಂಡಿದೆ. ಮುಸ್ಲಿಂ ಆಕ್ರಮಣಗಳಲ್ಲಿ ಬಲವಂತದ ಮತಾಂತರ ದೇವಾಲಯ ಭಗ್ನಗೊಳಿಸುವಿಕೆ ಇವೆಲ್ಲವೂ ಸಾಮಾನ್ಯವಾಗಿದ್ದಿದ್ದರಿಂದ ಇಂಥ ಸಾಧ್ಯತೆ ತೀರ ಅಚ್ಚರಿಯಾಗೇನೂ ಕಾಡಬೇಕಿಲ್ಲ. ದಶಕಗಳಷ್ಟು ಹಳೆಯದಾದ ಮದರಾಸವು ಶಾಲೆಯಾಗಿ ಮಾರ್ಪಾಡಗಿದೆ. ಇದರ ಪ್ರಿನ್ಸಿಪಾಲರಾಗಿರುವವರು ಆರ್ ಎಸ್ ಎಸ್ ಸಂಬಂಧ ಹೊಂದಿರುವ ಹಿಂದು ವ್ಯಕ್ತಿ. ಮುಸ್ಲಿಮರ ಪ್ರಾಬಲ್ಯ ಹೆಚ್ಚಿರುವ ವಲ್ಲದ್ ನಗರದ ರೆಹ್ಮಾನಿ ಮಾಡಲ್ ಶಾಲೆಯ ಪ್ರಿನ್ಸಿಪಾಲರಾಗಿ ಈ ಹಿಂದೆ ಸಂಘ ಪರಿವಾರದ ಆದರ್ಶ ವಿದ್ಯಾ ಮಂದಿರದಲ್ಲಿ ಸೇವೆ ಸಲ್ಲಿಸಿದ್ದ ಕೈಲಾಶ್ ಚಂದ್ರ ಯಾದವ್ ಕಾರ್ಯನಿರ್ವಹಿಸುತ್ತಿದ್ದಾರೆ. ಮದರಸಾ ಅನ್ನೋದು ಶಾಲೆಯಾಗೋದು ಅಂದ್ರೆ ಏನು? ಅರ್ಥವಿಷ್ಟೆ- ಮದ್ರಸಾ ಆಗಿದ್ದಾಗ ಕೇವಲ ಮುಸ್ಲಿಂ ಧಾರ್ಮಿಕ ಪಠ್ಯಗಳನ್ನು ಮಾತ್ರ ಅಭ್ಯಸಿಸಲಾಗುತ್ತದೆ. ಶಾಲೆ ಎಂದಾಗ ಸಾರ್ವತ್ರಿಕ ಶಿಕ್ಷಣ ಭಾಗ್ಯ ಸಿಗುತ್ತದೆ. ಶಾಲೆಯಲ್ಲಿ ಓದುತ್ತಿರುವ ಎಲ್ಲ 1300 ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯದವರೇ. ಇದು ಕೇವಲ ಶಾಲೆಗೆ ಸೀಮಿತವಾಗದೇ ಆ ಭಾಗದಲ್ಲಿ ಹಿಂದು- ಮುಸ್ಲಿಂ ಹಬ್ಬಗಳನ್ನು ಪರಸ್ಪರರು ಸೇರಿಕೊಂಡು ಆಚರಿಸುವ ಪರಿಪಾಠವಿದೆ. 1980 ರಲ್ಲಿ ಮದರಾಸವನ್ನುಶಾಲೆಯನ್ನಾಗಿ ಪರಿವರ್ತಿಸಿದ, ರೆಹ್ಮನಿ ಕ್ಷೇಮಾಭಿವೃದ್ಧಿ ಸಮಾಜದ ಮುಖ್ಯಸ್ಥ 72 ವರ್ಷದ ಅಬ್ದುಲ್ ಖ್ವಾಯುಮ್ ಅಖ್ತರ್ ಆಧುನಿಕ ದೃಷ್ಟಿಕೋನವನ್ನು ಹೊಂದಿದವರು. ‘ನನಗೆ ಶಿಕ್ಷಕರ ಶೈಕ್ಷಣಿಕ ಅರ್ಹತೆ ಮುಖ್ಯವೇ ಹೊರತು ಅವರ ಸಂಬಂಧ ಅಥವಾ ಧರ್ಮವಲ್ಲ. ನಮ್ಮ ಶಾಲೆಯಲ್ಲಿ ಈದ್ ಹಬ್ಬವನ್ನು ಆಚರಿಸುವಂತೆಯೇ ಹೋಳಿ ಮತ್ತು ದೀಪಾವಳಿ ಆಚರಣೆಯೂ ಇದೆ’ ಎನ್ನುತ್ತಾರವರು. Previous articleಸುದ್ದಿಸಂತೆ: ಪ್ರಶ್ನೆಪತ್ರಿಕೆ ಸಿಬ್ಬಂದಿಗೆ ಗೃಹಬಂಧನ, ಮಾನ್ಸೂನ್ ಚೆನ್ನಾಗಾಗುತ್ತಂತೆ.. ಶಬರಿಮಲೈ, ಜೆ ಎನ್ ಯು… Next article‘ನನ್ನ ಚಿತ್ರವನ್ನು ರಾಜಕೀಯಕ್ಕೆ ಬಳಸಿಕೊಂಡು ಬದುಕಿನ ನೆಮ್ಮದಿ ಕಸಿಬೇಡಿ’ ಅಂತ ಅನ್ಸಾರಿ ಹೇಳ್ತಿರೋದನ್ನು ಕಾಂಗ್ರೆಸ್ ಕೇಳಿಸಿಕೊಳ್ಳುತ್ತಾ?
OSCAR-2019
ಸ್ನೇಹಿತ ಅನಿಲ್ ಭಾರದ್ವಾಜ್ ಒಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ ಸುವರ್ಣ ನ್ಯೂಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅಮೇರಿಕಾದಲ್ಲಿದ್ದಾರೆ. ಇತ್ತೀಚೆಗೆ ಅಮೆರಿಕಾದಲ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ ತೆರೆ ಕಂಡಿತು. ಕಳದ ವಾರ ಅನಿಲ್ ಮತ್ತು ನಾನು ಸುಮಾರು 2 ಗಂಟೆ ಪೂನ್ ನಲ್ಲಿ ವಿಡಿಯೋ ಚಾಟಿಂಗ್ ಮಾಡಿದೆವು. ಆ ಸಮಯದಲ್ಲಿ ಅನಿಲ್ ಗೆ ಅಲ್ಲಿಗೆ ಬರುವ ಕನ್ನಡ ಸಿನಿಮಾಗಳ ಬಗ್ಗೆ ಲೇಖನ ಬರೆದುಕೊಡುವಂತೆ ವಿನಂತಿಸಿದೆ. ಕೂಡಲೆ ರೆಡಿಯಾದ ಅನಿಲ್ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ ನೋಡಿ ಲೇಖನ ಬರೆದು ಕಳುಹಿಸಿದ್ದಾರೆ. ಅವರಿಗೆ ಚಿತ್ರಲೋಕ ಕಡೆಯಿಂದ Thanks ಬೆಂಗಳೂರಲ್ಲೋ ಮೈಸೂರಲ್ಲೋ ಅಥವಾ ಹುಬ್ಬಳ್ಳಿಯಲ್ಲೋ ಆದರೆ ಹೊಸ ಸಿನಿಮಾ ಬಿಡುಗಡೆ ಆಗೋ ವಿಷಯ ಅಷ್ಟು ರಸವತ್ತಾಗಿರ್ತಾ ಇರಲಿಲ್ಲ. ಆದರೆ ಈ `ಶೋ' ನಡೆದಿದ್ದು ದೂರದ ಅಮೆರಿಕಾದಲ್ಲಿ. ಅದು ಸಹ ಭಾರತ ಎಂಬ ದೇಶದಲ್ಲಿ ಹಿಂದಿ ಎಂಬ ಭಾಷೆ ಒಂದನ್ನೇ ಜನ ಮಾತನಾಡೋದು ಎಂದು ತಿಳಿದುಕೊಂಡಿರೋ ಅಮೆರಿಕನ್ನರ ನಾಡಲ್ಲಿ ಕನ್ನಡ ಎಂಬೊಂದು ಪ್ರಾದೇಶಿಕ ಪ್ರಾಚೀನ ಭಾಷೆಯೊಂದಿದೆ, ಆ ಭಾಷೆಯಲ್ಲೂ ಸಾವಿರಾರು ಕನ್ನಡ ಸಿನಿಮಾಗಳು ತಯಾರಾಗುತ್ತಿವೆ ಮತ್ತು ಈ ಸಿನಿಮಾಗಳನ್ನು ನೋಡಲು ವಿಶ್ವಾದ್ಯಂತ ಹರಡಿಕೊಂಡಿರುವ ಕನ್ನಡಿಗರು ತುದಿಗಾಲಲ್ಲಿ ನಿಂತಿರುತ್ತಾರೆ ಎಂಬ ವಿಚಾರ ಅಮೆರಿಕನ್ನರಿಗಿರಲಿ ಹೆಚ್ಚು ಕನ್ನಡಿಗರಿಗೂ ಗೊತ್ತಿರಲಿಕ್ಕಿಲ್ಲ. ಈ ಅಮೆರಿಕ ದೇಶವೇ ಹಾಗೆ. ಇದು ವಲಸಿಗರ ದೇಶ. ಈ ದೇಶದಲ್ಲಿ ಇಂಗ್ಲೀಷ್ ಮಾತ್ರವಲ್ಲದೇ ಜಗತ್ತಿನ ನಾನಾ ಭಾಗಗಳ ನೂರಾರು ಭಾಷೆಗಳನ್ನು ಮಾತನಾಡುವ ಜನ ಇರ್ತಾರೆ. ಈ ಜನ ಆಗಾಗ ಅವರವರ ದೇಶದ ಅವರವರ ಭಾಗದ ಭಾಷೆಯ ಸಿನಿಮಾಗಳನ್ನು ಅಮೆರಿಕ ದೇಶದಲ್ಲಿ ತಾವಿರುವ ಊರಿಗೆ ತರಿಸಿಕೊಂಡು, ಟಾಕೀಸೊಂದರಲ್ಲಿ ಆ ಚಿತ್ರದ ಪ್ರದರ್ಶನ ಏರ್ಪಡಿಸಿಕೊಂಡು, ಅವರವರೇ ನೋಡಿ ಸಂತಸ ಪಡುತ್ತಾರೆ. ಅನೇಕರು ಗಮನಿಸಿರಬಹುದು. ಕೆಲವೊಮ್ಮೆ ಹೊಸ ಕನ್ನಡ ಸಿನಿಮಾ ಬಗ್ಗೆ ಪ್ರಚಾರ ನೀಡುವಾಗ `ಏಕಕಾಲಕ್ಕೆ 125 ದೇಶಗಳಲ್ಲಿ ತೆರೆಕಾಣುತ್ತಿರುವ ಕನ್ನಡ ಚಿತ್ರ..!' ಎಂಬ ಟ್ಯಾಗ್ಲೈಗನ್ ಇರುತ್ತೆ. ಇದರರ್ಥ ಆ 125 ದೇಶಗಳಲ್ಲಿ ಕನ್ನಡಿಗರೂ ಇದ್ದು ಅವರಿಗಾಗಿ ಈ ಸಿನಿಮಾ ಅಲ್ಲಿಯೂ ಬಿಡುಗಡೆ ಆಗುತ್ತಿದೆ ಎಂದು ಅನೇಕರಿಗೆ ಗೊತ್ತಿರುವುದಿಲ್ಲ. ಬದಲಿಗೆ ಆ ದೇಶದ ಜನ ಸಹ ನಮ್ಮ ಕನ್ನಡ ಸಿನಿಮಾ ಮೆಚ್ಚಿಕೊಂಡು ಥೇಟರ್ಗೆಗ ಬರ್ತಾರೆ ಅಂದುಕೊಂಡರೆ ಅದು ನಿಮ್ಮ ತಪ್ಪಲ್ಲ ಬಿಡಿ. ಹೊಸದೊಂದು ಕನ್ನಡ ಸಿನಿಮಾ ತೆರೆ ಕಾಣುವ ಸಂದರ್ಭದಲ್ಲಿ ಅದರ ಪ್ರಚಾರಕ್ಕೆಂದೇ ಭಾರತದಲ್ಲಿ ನಾನಾ ಮಾದರಿಯ ಮಾಧ್ಯಮಗಳು ಲಭ್ಯ. ಎಲ್ಲದಕ್ಕೂ ಮೊದಲು ಸಿನಿಮಾ `ಶೂಟ್' ಆಗಲಿ-ಬಿಡಲಿ ಅದಕ್ಕೊಂದು ಹೆಸರು ಇಡುವ ಮುಂಚೆಯೇ `ಪ್ರೊಡಕ್ಷನ್ ನಂ 1,2,3...ಇತ್ಯಾದಿ' ಎಂಬ ಹೆಸರಿನೊಂದಿಗೆ ಪತ್ರಿಕೆಗಳಲ್ಲಿ ಅದಾಗಲೇ ಪುಟಗಟ್ಟಲೇ ಜಾಹೀರಾತು ಆರಂಭವಾಗಿರುತ್ತದೆ. ಆ ನಂತರ ಸಿನಿಮಾ ಶೂಟ್ ಆದಲ್ಲಿ ಸೆನ್ಸಾರ್ಗೂಿ ಮುಂಚಿತವಾಗಿಯೇ ಎಲ್ಲಾ ಟಿವಿ ಚಾನೆಲ್ಗಹಳಲ್ಲಿ ಟ್ರೈಲರ್ಗರಳು ಓಡೋಕೆ ಶುರುವಾಗುತ್ತವೆ. ಸುದೈವವಶಾತ್ ಇತ್ತೀಚೆಗೆ ಟ್ರೈಲರ್ಗ್ಳಿಗೂ ಸೆನ್ಸಾರ್ ಮಾಡಿಸಿ ಅದನ್ನು ಬಿಡುಗಡೆ ಮಾಡೋ ಪರಿಪಾಠ ರೂಢಿಯಲ್ಲಿದೆ. ಇನ್ನು ಸಿನಿಮಾ ತೆರೆ ಕಾಣಲಿದೆ ಎನ್ನುವಾಗ ನಾಯಕ ನಟ ಮತ್ತು ನಟಿ, ಮುಖ್ಯವಾಗಿ ನಿರ್ಮಾಪಕ ಮತ್ತು ನಿರ್ದೇಶಕರ ಸಂದರ್ಶನಗಳು ಟವಿ ಚಾನೆಲ್ಗಾಳಲ್ಲಿ ಗಂಟೆಗಟ್ಟಲೆ ಪ್ರಸಾರವಾಗುತ್ತವೆ. ಸಂದರ್ಶನದುದ್ದಕ್ಕೂ `ಬನ್ನಿ ಥೇಟರ್ಗೆರ ನಮ್ಮ ಸಿನಿಮಾ ನೋಡೋಕೆ. ಇದು ತುಂಬಾ ಡೀಫರೆಂಟ್ ಆಗಿರೋ ಸ್ಟೋರಿ. ಸ್ಟಾರ್ಟಿಂಗ್ ಮಿಸ್ ಆದ್ರೆ ಥ್ರಿಲ್ ಹೋಗುತ್ತೆ...' ಎಂದೆಲ್ಲಾ ಹೇಳಿಕೊಂಡು ಅಸಂಖ್ಯಾರ ಟಿವಿಗಳ ಮುಂದೆ ಕೂತಿರುವವರನ್ನು ಟಾಕೀಸಿನತ್ತ ಸೆಳೆಯಲು ನಟನಟಿಯರು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಇತ್ತ ಸಿನಿಮಾ ರಿಲೀಸ್ ಆಗಿದೆ ಎಂದು `ಮಾಸ್'ಗೆ ತಿಳಿಸಲು ಊರು ತುಂಬಾ ಕಂಡಕಂಡ ಗೋಡೆಗಳಿಗೆ ಉದ್ದುದ್ದ ಪೋಸ್ಟರ್ಗತಳನ್ನು ಹಚ್ಚಲಾಗುತ್ತದೆ. ಫ್ಲೈ ಓವರ್ ಕಂಬಗಳು, ಬಿಬಿಎಂಪಿ ಶೌಚಾಲಯಗಳು, ನಾನಾ ಸರ್ಕಲ್ಗಳಳ ಸುತ್ತಲಿನ ಜಾಹೀರಾತು ಫಲಕಗಳು ಹೀಗೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ದೃಷ್ಟಿ ಎಲ್ಲೆಲ್ಲಿ ಹೋಗಲು ಸಾಧ್ಯವೋ ಅಲ್ಲೆಲ್ಲಾ ಸಿನಿಮಾಗಳ ಪೋಸ್ಟರ್ಗಫಳು ರಾರಾಜಿಸುತ್ತವೆ. ಆಟೋ ಹಿಂಬದಿ, ಜೋಡು ರಸ್ತೆಗಳಿದ್ದಲ್ಲಿ ಅದಕ್ಕಿರುವ ರಸ್ತೆ ವಿಭಜಕಗಳಿಗೆ ಅಳವಡಿಸಲಾಗಿರುವ ಬೀದಿದೀಪದ ಕಂಬಗಳಿಗೂ ನಾಲ್ಕೈದು ಅಡಿಯ ಸಿನಿಮಾ ಬ್ಯಾನರ್ಗಹಳನ್ನು ಕಟ್ಟಿ ನೇತು ಹಾಕಲಾಗಿರುತ್ತದೆ. ಇಷ್ಟೆಲ್ಲಾ ಸಾಲದೆಂಬಂತೆ, ಸಿನಿಮಾ ಟ್ರೈಲರ್ಗಾಳನ್ನು ಯು ಟ್ಯೂಬಿನಲ್ಲಿ, ಫೇಸ್ಬುದಕ್ಕಿನಲ್ಲಿ, ಟ್ವಿಟರ್ನಪಲ್ಲಿ, ನಾನಾ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ. ಇತ್ತೀಚಿನ ಕೆಲವು ವರ್ಷಗಳಿಂದ ಬಾಲಿವುಡ್ ಮಂದಿಗೆ ಮತ್ತೊಂದು ಮಾದರಿಯ ಪ್ರಚಾರದ ಹುಚ್ಚು ಶುರುವಾಗಿದೆ. ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳು ಮತ್ತು ಅದರ ನಂತರದ ಮಹಾನಗರಗಳ ಮಾಲ್ಗಯಳನ್ನು ಸುತ್ತಿ ಸುತ್ತಿ ತಮ್ಮ ಸಿನಿಮಾ ಬಗ್ಗೆ ಪ್ರಚಾರ ಮಾಡುವುದು. ಹಿಂದೆಲ್ಲಾ ಸಿನಿಮಾ ನಿರ್ಮಾಪಕರು ಚಿತ್ರ ನಿರ್ಮಾಣಕ್ಕೆ ಮಾತ್ರ ಹಣ ಹಾಕುತ್ತಿದ್ದರು. ಆದರೆ ಇದೀಗ ಸಿನಿಮಾ ಪ್ರಚಾರಕ್ಕೆಂದೇ ಬಜೆಟ್ನಿಲ್ಲಿ ಅರ್ಧದಷ್ಟು ಹಣವನ್ನು ಎತ್ತಿಡುವ ಸ್ಥಿತಿ ಎದುರಾಗಿದೆ. ಆದರೆ ಸಿನಿಮಾ ಚೆನ್ನಾಗಿದ್ದರೆ ಈ ಎಲ್ಲಾ ಕಸರತ್ತುಗಳು ಮಾಡಿದ್ದಕ್ಕೂ ಸಾರ್ಥಕ. ಆದರೆ ಅಮೆರಿಕದಲ್ಲಿನ ಚಿತ್ರಣ ತುಸು ವಿಭಿನ್ನ. ಇಲ್ಲಿ ಎಲ್ಲಂದರಲ್ಲಿ ಪೋಸ್ಟರ್ಗುಳನ್ನು ಹಚ್ಚಿದಲ್ಲಿ ಜೈಲು ಗ್ಯಾರೆಂಟಿ. ಆಟೋರಿಕ್ಷಾ ಅಂದರೇನು ಎಂದು ತಿಳಿಯದ ಈ ದೇಶದ ಜನತೆಯ ನಡುವೆ ಪೋಸ್ಟರ್ ಹಚ್ಚಿಕೊಂಡು ಊರಿಡಿ ಆಟೋ ಸುತ್ತುವುದು ಕನಸಿನ ಮಾತು. ಅಂದ ಮಾತ್ರಕ್ಕೆ ಇಲ್ಲಿ ಪ್ರಚಾರದ ಭರಾಟೆ ಇಲ್ಲ ಎಂದೇನಲ್ಲ. ಅಮೆರಿಕದಲ್ಲೂ ಸಿನಿಮಾ ನಿರ್ಮಾಣ ಮಾಡುವ ಹಂತದಲ್ಲೇ ಬಜೆಟ್ನಳ ಸಿಂಹಪಾಲನ್ನು ಪ್ರಚಾರಕ್ಕೆಂದು ಎತ್ತಿಡಲಾಗುತ್ತದೆ. ಭಾರತದಲ್ಲಿದ್ದಂತೆ ಇಲ್ಲಿಯೂ ಪ್ರಚಾರದ ಜವಾಬ್ದಾರಿಯನ್ನು ನಿರ್ಮಾಪಕರು ಅಥವಾ ವಿತರಕರೇ ನೋಡಿಕೊಳ್ಳುತ್ತಾರೆ. ಇಲ್ಲಿಯೂ ಥೇಟರ್ಗದಳಲ್ಲಿ, ಟಿವಿ ಚಾನೆಲ್ಗ್ಳಲ್ಲಿ, ಇಂಟರ್ನೆರಟ್ನರ ನಾನಾ ವೆಬ್ಸೈೇಟ್ ಮತ್ತು ಸೋಷಿಯಲ್ ಮಿಡಿಯಾಗಳಲ್ಲಿ ಸಿನಿಮಾ ಬಗ್ಗೆ ಪ್ರಚಾರ ನೀಡಲಾಗುತ್ತದೆ. ಮುಖ್ಯರಸ್ತೆಗಳಲ್ಲಿ ಅಲ್ಲಲ್ಲಿ ದೊಡ್ಡದೊಡ್ಡ ಡಿಸ್ಪ್ಲೇ ಬೋರ್ಡ್ಗುಳಿದ್ದು ಅದರಲ್ಲಿ ಮಾತ್ರ ಸಿನಿಮಾಗಳ ಬಗ್ಗೆ ಜಾಹೀರಾತು ನೀಡಲಾಗಿರುತ್ತದೆ. ವೃತ್ತಪತ್ರಿಕೆಗಳು, ವೆಬ್ಸೈಿಟ್ಗಲಳು ಮತ್ತು ಸೋಷಿಯಲ್ ಮಿಡಿಯಾಗಳಲ್ಲಿ ಸಿನಿಮಾ ಬಗ್ಗೆ ಉತ್ತಮ ಅಭಿರುಚಿಯ ರಿವ್ಯೂ ಬಂದಲ್ಲಿ ಮಾತ್ರ ಜನ ಥೇಟರ್ನೆತ್ತ ಹೆಜ್ಜೆ ಹಾಕುತ್ತಾರೆ. ಇದೀಗ ಭಾರತದಲ್ಲೂ ಚಾಲ್ತಿಯಲ್ಲಿರುವಂತೆ ಆನ್ಲೈಚನ್ನಂಲ್ಲಿ ಮುಂಚಿತವಾಗಿಯೇ ಟಿಕೆಟ್ಗ್ಳನ್ನು ಕಾಯ್ದಿರಿಸಿಕೊಂಡಿರುತ್ತಾರೆ ಸಿನಿರಸಿಕರು. ಬಹುತೇಕ ಹಾಲಿವುಡ್ ಸಿನಿಮಾಗಳು ಯ್ಯಾಕ್ಷನ್, ಥ್ರಿಲ್ಲರ್ ಮತ್ತು ಸಸ್ಪೆನ್ಸ್ನಿಂ ದಲೇ ಕೂಡಿರುವ ಹಿನ್ನೆಲೆಯಲ್ಲಿ ಇಲ್ಲಿ ಸಿನಿಮಾಗಳು ತ್ರೀಡಿಯಲ್ಲೇ ತಯಾರಾಗಿರುತ್ತವೆ. ಈ ಮಾದರಿಯ ಸಿನಿಮಾಗಳನ್ನು ನೋಡಲು ಥೇಟರ್ಗದಳಲ್ಲಿ ವಿಶೇಷ ತ್ರೀಡಿ ಕನ್ನಡಕಗಳ ವ್ಯವಸ್ಥೆ ಮಾಡಿರುತ್ತಾರೆ. ಪ್ರೇಕ್ಷಕರು ಥೇಟರ್ನ ಲ್ಲಿ ಆಸೀನರಾದ ನಂತರ ಇನ್ನೇನು ಸಿನಿಮಾ ಶುರುವಾಗುತ್ತದೆ ಎನ್ನುವುದಕ್ಕೂ ಮುನ್ನ ಥೇಟರ್ನತ ಮೇಲ್ವಿಚಾರಕರು ಮೈಕ್ ಹಿಡಿದು ಪರದೆಯ ಮುಂದೆ ಬಂದು ನಿಂತು ಎಲ್ಲರಿಗೂ ವಿಷ್ ಮಾಡಿ, ಸಿನಿಮಾ ಬಗ್ಗೆ ಎರಡು ಉತ್ತಮ ಮಾತುಗಳನ್ನಾಡುತ್ತಾರೆ. ಅಕಸ್ಮಾತ್ ಪ್ರೇಕ್ಷಕರಿಗೆ ಅನಿರೀಕ್ಷಿತವಾಗಿ ಏನಾದರೂ ತೊಂದರೆ ಉಂಟಾದಲ್ಲಿ ಹಿಂದೆ ಇಬ್ಬರು ಸಹಾಯಕರು ನಿಂತಿದ್ದಾರೆಂದೂ ತರ್ತು ಸಂದರ್ಭದಲ್ಲಿ ಅವರು ನಿಮ್ಮ ಸಹಾಯಕ್ಕೆ ಬರುತ್ತಾರೆಂದು ತಿಳಿಸಿ ಹೊರಟುಹೋಗುತ್ತಾರೆ. ಇದಾದ ನಂತರ ಒಂದಷ್ಟು ಟ್ರೈಲರ್ಗಿಳು, ಆ ನಂತರ ಸಿನಿಮಾ ಶುರುವಾಗುತ್ತದೆ. ಆದರೆ ನೆನಪಿರಲಿ ಅಮೆರಿಕದಲ್ಲಿ ಸಿನಿಮಾಗಳಿಗೆ ಇಂಟರ್ವೆದಲ್ ಇರುವುದೇ ಇಲ್ಲ! ಒಮ್ಮೆಲೆ ಸಿನಿಮಾ ಮುಗಿದ ನಂತವೇ ಎಲ್ಲರೂ ಟಾಯ್ಲೆಟ್ ಕಡೆ ಓಡುವುದು ಇಲ್ಲಿ ಸಾಮಾನ್ಯ. ಆದರೆ ಸಿನಿಮಾ ಮುಗಿಯುತ್ತಿದ್ದಂತೆ ಕಾರ್ ಪಾರ್ಕಿಂಗ್ ಕಡೆ ಜನ ಓಡುವುದಿಲ್ಲ. ಅದು ಇಲ್ಲಿನ ಸಂಪ್ರದಾಯವೂ ಅಲ್ಲ. ಕ್ಲೈಮ್ಯಾಕ್ಸ್ನಮ ನಂತರ ಆ ಸಿನಿಮಾ ತಯಾರಿಸಲು ಶ್ರಮಿಸಿದ ಎಲ್ಲರ ಹೆಸರುಗಳು ಪರದೆಯಲ್ಲಿ ಬಂದು ಹೋದ ಮೇಲೆಯೇ ಥೇಟರ್ನಾ ಎಲ್ಲ ಲೈಟ್ಗಕಳು ಆನ್ ಆಗುತ್ತವೆ. ಅಲ್ಲಿಯವರೆಗೂ ಪ್ರೇಕ್ಷಕರು ಸಮಾಧಾನದಿಂದ ಕೂತಿದ್ದು, ಸಿನಿಮಾ ಚೆನ್ನಾಗಿರಲಿ ಬಿಡಲಿ ಎಲ್ಲರೂ ಒಮ್ಮೆ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಿ ಆ ನಂತರವೇ ಥೇಟರ್ನಿಂ ದ ಹೊರ ನಡೆಯುತ್ತಾರೆ.! ಅದು ಸಹ ಹೊರಬಾಗಿಲಿಗೆ ಹತ್ತರವಿರುವ ಸಾಲಿನಲ್ಲಿ ಕೂತಿರುವ ಪ್ರೇಕ್ಷಕರು ಮೊದಲು ಹೊರನಡೆದ ನಂತರವೇ ಹಿಂದಿನ ಸಾಲಿನವರು ಮುಂದೆ ಬರುತ್ತಾರೆ. ನೂಕುನುಗ್ಗಲು ಇಲ್ಲಿ ಇಲ್ಲವೇ ಇಲ್ಲ. ಇಂಥಹ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ಅಮೆರಿಕದಲ್ಲಿ ತಾವಿರುವ ಊರಿಗೆ ಕನ್ನಡ ಸಿನಿಮಾ ಬಂದರೆ ಕನ್ನಡಿಗರ ಸಂಭ್ರಮ ತಡೆಯೋರುಂಟೇ. ಸಾಮಾನ್ಯವಾಗಿ ಕನ್ನಡ ಚಿತ್ರಗಳು ಅಮೆರಿಕದಲ್ಲಿ ತೆರೆ ಕಾಣುವುದು ಕನ್ನಡ ಸಂಘಗಳ ಮೂಲಕ. ಇಲ್ಲಿನ 50 ರಾಜ್ಯಗಳಲ್ಲೂ ಒಂದೊಂದು ಕನ್ನಡ ಸಂಘವಿದೆ. ಪ್ರತಿರಾಜ್ಯದಲ್ಲೂ ಕನ್ನಡಕ್ಕೆ ಸಂಬಂಧಿಸಿದ ಏನೇ ಚಟುವಟಿಕೆಗಳು ನಡೆದರೂ ಅದು ಈ ಸಂಘದ ಮೂಲಕವೇ ನಡೆಯುತ್ತದೆ. ಕರ್ನಾಟಕದಿಂದ ಕಲಾವಿದರನ್ನು ಅಮೆರಿಕಗೆ ಕರೆಸಿಕೊಳ್ಳುವುದು, ನಾನಾ ಕಾರ್ಯಕ್ರಮಗಳನ್ನು ಆಯೋಜಿಸುವುದು ಇದೇ ಸಂಘಗಳೇ. ಬೆಂಗಳೂರಿನಲ್ಲಿರುವ ನಿರ್ಮಾಪಕರು, ವಿತರಕರು ಇನ್ನಿತರೆ ಸಿನಿಮಾ ಮೂಲದವರೊಂದಿಗೆ ಉತ್ತಮ ಸಂಪರ್ಕವುಳ್ಳ ಕೆಲ ಅಮೆರಿಕನ್ನಡಿಗರು ಆಗಾಗ ಸಂಘದ ಮೂಲಕ ಇಲ್ಲಿನ ತೆರೆಗೆ ಕನ್ನಡ ಸಿನಿಮಾಗಳು ಪ್ರದರ್ಶನವಾಗುವಂತೆ ಏರ್ಪಾಟು ಮಾಡುತ್ತಾರೆ. ಇಲ್ಲಿ ಕನ್ನಡ ಸಿನಿಮಾ ತೆರೆ ಕಾಣುವುದು `ಬಹುಮುಖ್ಯ ಈವೆಂಟ್'. ಕರ್ನಾಟಕದಲ್ಲಾದರೆ ದಿನಂಪ್ರತಿ ನಾನಾ ಊರುಗಳಲ್ಲಿ ಪುನಿತ್, ಸುದೀಪ್, ಯಶ್ ಇನ್ನಿತರೆ ನಟರ ಸಿನಿಮಾಗಳು ಓಡುತ್ತಲೇ ಇರುತ್ತದೆ. ಆದರೆ ಅಮೆರಿಕದಲ್ಲಿ ಹಾಗಲ್ಲ. ಇಲ್ಲಿ ವಾರಗಟ್ಟಲೆ ಕನ್ನಡ ಸಿನಿಮಾ ಓಡೋದು ತುಂಬಾ ಕಡಿಮೆ. ಇಲ್ಲೇನಿದ್ದರೂ ದಿನಗಳ ಬದಲಿಗೆ ಶೋಗಳ ಲೆಕ್ಕ. ಕರ್ನಾಟಕದಲ್ಲಿ ತುಂಬಾ ದಿನಗಳು ಓಡಿದ ಸಿನಿಮಾ ಆದ್ರೆ ಇಲ್ಲಿ 3 ಅಥವಾ 4 ಶೋಗಳಿಗಾಗಿ ಥೇಟರ್ ಬುಕ್ ಆಗಿರುತ್ತೆ. ಇಲ್ಲಾಂದ್ರೆ ಸಾಮಾನ್ಯವಾಗಿ ಎಲ್ಲಾ ಕನ್ನಡ ಸಿನಿಮಾಗಳು ಓಡೋದು ಒಂದೋ ಅಥವಾ ಎರಡು ಶೋ ಮಾತ್ರ. ಅಂದಹಾಗೆ ಅಮೆರಿಕದಲ್ಲಿ ಸಿನಿಮಾ ತೆರೆ ಕಾಣುವ ಬಗ್ಗೆ ಇಷ್ಟೆಲ್ಲಾ ವಿಚಾರಗಳನ್ನು ಚರ್ಚಿಸಲು ಮುಖ್ಯ ಕಾರಣ `ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'. ಹೌದು, ಇತ್ತೀಚೆಗೆ ಅಮೆರಿಕದ ಅರಿಜೋನ ರಾಜ್ಯದ ರಾಜಧಾನಿ ಫೀನಿಕ್ಸ್ ನಗರದಲ್ಲಿ ಈ ಸಿನಿಮಾದ ಒಂದು ಶೋ (ರಾತ್ರಿ 9.30ರ ಸೆಕೆಂಟ್ ಶೋ) ಏರ್ಪಡಿಸಲಾಗಿತ್ತು. ಕಮ್ಯೂನಿಟಿ ವೆಬ್ಸೈೀಟ್ಗ್ಳ ಮೂಲಕ 2-3 ವಾರಗಳ ಮುಂಚಿತವಾಗಿಯೇ ಕನ್ನಡಿಗರಿಗೆ ಈ ವಿಷಯ ತಿಳಿಯುವಂತೆ ಮಾಡಲಾಗಿತ್ತು. ರಾತ್ರಿ ಶೋ ಆದ್ದರಿಂದ ಪ್ರೇಕ್ಷಕರೆಲ್ಲರೂ ಊಟ ಮಾಡಿಕೊಂಡೇ ಥೇಟರ್ನನತ್ತ ಬಂದಹಾಗಿತ್ತು. ಎಂದಿನಂತೆ ಬಹುತೇಕ ಪ್ರೇಕ್ಷಕರು ಆನ್ಲೈಂನ್ನಲಲ್ಲೇ ಟಿಕೆಟ್ ಬುಕ್ ಮಾಡಿಕೊಂಡಿದ್ದರು ಅನಿಸುತ್ತೆ. ಕಾರಣ ಸಾಲಿಲ್ಲಿದ್ದವರೆಲ್ಲರೂ ಡಾಲರ್ ನೋಟಿನ ಬದಲಾಗಿ ಕೈಯಲ್ಲಿ ಐಫೋನ್ ಹಿಡಿದು ನಿಂತಿದ್ದು, ಕೌಂಟರ್ನತಲ್ಲಿದ್ದ ಮಹಿಳೆಗೆ ತಮಗೆ ಬಂದಿದ್ದ ಕನ್ಫರ್ಮೇಷನ್ ಇ-ಮೈಲ್ನ್ನು ಓಪನ್ ಮಾಡಿ ತೋರಿಸುತ್ತಾ ಥೇಟರ್ ಒಳಗೆ ಹೋಗುತ್ತಿದ್ದರು. ಮೇಲ್ನೋಟಕ್ಕೆ ಇದು ಕನ್ನಡ ಸಿನಿಮಾ ಪ್ರದರ್ಶನ ಆಗಿರಬಹುದು. ಆದರೆ ಕನ್ನಡಿಗರು ಅಪರೂಪಕ್ಕೊಮ್ಮೆ ಭೇಟಿ ಆಗೋದೆ ಇಂಥಹ ಸಂದರ್ಭಗಳಲ್ಲಿ. ಆದ್ದರಿಂದ ಈ ಸಂದರ್ಭವನ್ನೇ ಬಳಸಿಕೊಂಡು ಸಿನಿಮಾ ಶುರು ಆಗುವುದಕ್ಕೂ ಒಂದಲ್ಲಾ ಒಂದು ವಿಚಾರದ ಬಗ್ಗೆ ಹರಟುತ್ತಲೇ ಇರುತ್ತಾರೆ. `ಹೌ ವಾಸ್ ಇಂಡಿಯಾ?' ವಾಕ್ಯವೊಂದು ತೂರಿಬರುತ್ತದೆ. ಇತ್ತ ಕಡೆಯಿಂದ `ಇಟ್ಸ್ ಓಕೆ, ವಿಲ್ ಸಿ ವಾಟ್ ಮೋದಿ ಕೆನ್ ಡು' ಎಂದರೆ, ಮತ್ತೊಬ್ಬರು `ಮೈ ಗಾಡ್ ಜಯನಗರ್ ಹ್ಯಾಸ್ ಬಿಕಮ್ ವೊರ್ಸ್ ದೆನ್ ಎವರ್ ವಿತ್ ಹೆಲ್ ಟ್ರಾಫಿಕ್' ಎಂದು ನೊಂದುಕೊಳ್ಳುತ್ತಾರೆ. ಮತ್ತೆ ಇತ್ತ `ಥ್ರೀ ಫಂಕ್ಷನ್ಸ್... ಟು ಟ್ರಿಪ್ಸ್ ಟು ಟೆಂಪಲ್ಸ್, ಓಹ್ ದಿಸ್ ಟೈಂ ಇಂಡಿಯಾ ಟ್ರಿಪ್ ವಾಸ್ ಹೆಕ್ಟಿಕ್' ಎಂಬ ಉದಾಸೀನದ ಮಾತು. ಈ ಸಂಭಾಷಣೆ ಮುಂದುವರಿದಿರುವಾಗಲೇ ಅತ್ತ ತೆರೆಯ ಮೇಲೆ ಸಿಂಹ ಘರ್ಜನೆಯೊಂದಿಗೆ `ಯಶ್' ತೆರೆ ಮೇಲೆ ಬರುತ್ತಿದ್ದಂತೆ ಎಲ್ಲರೂ ಮೌನ. ಈ ಮೌನ ಕೆಲ ನಿಮಿಷಗಳಿಗೆ ಮಾತ್ರ. ಸಿನಿಮಾ ಆರಂಭವಾಗುತ್ತಿದ್ದಂತೆ ಕಾಮೆಂಟ್ಗದಳ ಸುರಿಮೆಳೆ. ಹುಡುಗಿಯ ಬಗ್ಗೆ ನಾಯಕನಟ `ಯಶ್' ಒಂದು ಡೈಲಾಗ್ ಹೊಡೆದ ತಕ್ಷಣ, ಅದುವರೆಗೂ ಇಂಗ್ಲೀಷ್ ಮಾತನಾಡುತ್ತಿದ್ದ ಗಂಡಸರು ಹೆಂಗಸರು ಆ ಭಾಷೆ ಮರೆತು ಕನ್ನಡದಲ್ಲೇ `ಹೌದು ಕಣೋ ನೀನ್ ಸರಿಯಾಗ್ ಹೇಳ್ದೇ' ಎಂದು ಕಾಮೆಂಟ್ ಮಾಡಿದರು. ಇನ್ನೂ ಕೆಲವರು `ಕೇಳಿಸ್ಕೊಳ್ರಪ್ಪಾ. ಈ ಕಾಲದ್ ಹುಡುಗೀರ್ಗೂ ಇದು ಅನ್ವಯಿಸುತ್ತೆ' ಎಂದರು. ಸಿನಿಮಾ ಮುಂದುವರಿದು ಅಮೆರಿಕಾದ ವರನ ಪಾತ್ರದಲ್ಲಿ ನಟ ಧ್ಯಾನ್ ಎಂಟ್ರಿ ಕೊಟ್ಟಾಗ ಎಲ್ಲರೂ ನಕ್ಕಿದ್ದೇ ನಕ್ಕಿದ್ದು. `ಏನ್ ಅಮೆರಿಕ ಅಂದ್ರೆ ಈ ಮಟ್ಟಕ್ಕೆ ಏರಿಸೋದಾ...ಡೈರೆಕ್ಟರೂ...' ಅಂತ ಕೆಲವರ ಕಾಮೆಂಟು. ಇನ್ನು ನಾಯಕ ನಟಿ, ನಟ ಸೇರಿದಂತೆ ನಾಲ್ಕು ಜನ ಡಿನ್ನರ್ ಪಾರ್ಟಿಗೆಂದು ಹೋಟೆಲ್ನ್ಲ್ಲಿ ಕೂತಿದ್ದಾಗ, ನಟ ಧ್ಯಾನ್ಗೆಾ ಬಾಸ್ನಿಂನದ ಕರೆ ಬಂದು ಊಟದ ನಡುವೆ ಎದ್ದು ಹೋಗುತ್ತಾರೆ. ಆಗ `ತಿಳ್ಕೊಳ್ರಪ್ಪಾ...ಅಮೆರಿಕ ವರ ಅಂದ್ರೆ ಇದೇ ಹಣೆಬರಹ. ಯಾವಾಗ್ಲೂ ಕೆಲಸ' ಅಂತ ವಯಸ್ಸಾದ ಆಂಟಿಯೊಬ್ಬರು ಕಾಮೆಂಟ್ ಪಾಸ್ ಮಾಡಿದ್ರು. ಇದಕ್ಕೆ ಥೇಟರ್ನ ಲ್ಲಿದ್ದವರೆಲ್ಲಾ ನಕ್ಕಿದ್ದೇ ನಕ್ಕಿದ್ದು. ಇದು ಇನ್ನೂ ಸಖತ್ತಾಗಿದೆ. ತಂದೆಗಾಗಿ ನಾಯಕ ನಟ ಯಶ್ ನಡುರಾತ್ರಿ ಫ್ಲೈಓವರ್ ಮೇಲೆ ಕುಣಿದಾಗ `ಅಲ್ನೋಡಿ.. ಅಲ್ನೋಡಿ.. ಇದು ಕೆಂಗೇರಿ ಫ್ಲೈ ಓವರ್ ಅಲ್ವಾ' ಅಂತ ಎಲ್ಲರೂ ಉದ್ಗಾರ ತೆಗೆದರು. ಇತ್ತ ಕಾಲೇಜು ಸೀನ್ ಬಂದಾಗಲೆಲ್ಲಾ `ಇದ್ಯಾವ ಕಾಲೇಜಪ್ಪಾ ಬೆಂಗ್ಳೂರಲ್ಲಿ?' ಎಂಬ ಕಾಮೆಂಟು. ಎಲ್ಲದಕ್ಕೂ ಮುಕುಟವಿಟ್ಟಂತೆ ರಜನಿಕಾಂತ್ ಸ್ಟೈಲಿನಲ್ಲಿ ಸಾಧುಕೋಕಿಲ ಸ್ಕ್ರೀನ್ ಮೇಲೆ ಬರುತ್ತಿದ್ದಂತೆ ಮತ್ತೆ ಎಲ್ಲರೂ ಹೋ ಎಂದು ಕೂಗಿದ್ದೇ ಕೂಗಿದ್ದು. ಹೀಗೆ ಎರಡೂವರೆ ಗಂಟೆಗಳ ಕಾಲ ಕನ್ನಡಿಗರೆಲ್ಲರೂ ತಾವಿರುವುದು ಅಮೆರಿಕದಲ್ಲಿ ಎಂಬುದನ್ನೇ ಮರೆತುಹೋದಂತಿತ್ತು. ಈಗಿರೋದೇ ನಿಜವಾದ ಕ್ಲೈಮ್ಯಾಕ್ಸ್..! ಸಿನಿಮಾ ಮುಗಿಸಿಕೊಂಡು ಎಲ್ಲರೂ ಮೈ ಮುರಿಯುತ್ತಾ ಹೊರಬಂದು ನಿಂತ ಮೇಲೆ ಆಯೋಜಕರನ್ನು ಕೇಳಿದ್ದು...`ಸೋ ವಿಚ್ ವಿಲ್ ಬಿ ದ ನೆಕ್ಸ್ಟ್ ಮೂವಿ...?'
OSCAR-2019
ಹರಿಯಾಣದಲ್ಲಿ ಡೇರಾ ಸಚ್ಚಾ ಸೌದಾದ ಸ್ವಯಂಘೋಷಿತ ದೇವಮಾನವ ರಾಮ್ ರಹೀಂ ಬೆಂಬಲಿಗರ ಹಿಂಸಾಚಾರ ಬಗ್ಗೆ ಪ್ರಧಾನಿ ಪ್ರತಿಕ್ರಿಯೆ ನೀಡಿದ್ದಾರೆ. ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ, ‘ ಕಾನೂನನ್ನು ಕೈಗೆ ತೆಗೆದುಕೊಂಡು, ಹಿಂಸಾಚಾರಕ್ಕಿಳಿಯುವವರು ಯಾರೇ ಆಗಿದ್ದರೂ, ಅವರನ್ನು ಸುಮ್ಮನೆ ಬಿಡುವುದಿಲ್ಲ, ಒಂದು ಕಡೆ ನಾವು ಹಬ್ಬಗಳಿಗಾಗಿ ಕಾಯುತ್ತಿರುತ್ತೇವೆ. ಆದರೆ ಇಂತಹ ಹಿಂಸಾಚಾರದ ಘಟನೆಗಳು ನಡೆಯುತ್ತಿರುವುದು ಚಿಂತೆಗೀಡು ಮಾಡುತ್ತದೆ, ಭಾರತ ಬುದ್ಧ ಮತ್ತು ಗಾಂಧಿಯ ನಾಡು, ಇಲ್ಲಿ ಯಾವುದೇ ರೀತಿಯ ಹಿಂಸೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ‘ ಎಂದು ಹೇಳಿದ್ದಾರೆ.
OSCAR-2019
ಕಲಬುರಗಿ : ಕಲಬುರಗಿಯ ಕೇಂದ್ರೀಯ ವಿವಿಯಲ್ಲಿ ಭಾರತ ಸ್ಕೌಟ್ಸ್-ಗೈಡ್ಸ್ ವತಿಯಿಂದ ಲಾರ್ಡ್‌ ಬೆಡನ್ ಪಾವೆಲ್‌ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಗಿತ್ತು. ಈ ದಿನವನ್ನು ಚಿಂತನ ದಿನವನ್ನಾಗಿ ಆಚರಣೆ ಮಾಡಿದ್ದು, ವಿವಿ. ಪ್ರಭಾರಿ ಪ್ರಾಂಶುಪಾಲರಾದ ಡಾ. ಕೆ. ಕೃಷ್ಣ ಅವರು, ಪಾವೆಲ್‌ ಹಾಗೂ ಲೇಡಿ ಪಾವೆಲ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸ್ಕೌಟ್ಸ್‌-ಗೈಡ್ಸ್‌ನ ಮಕ್ಕಳು ಝಂಡಾ ಏರಿಸಿ ಪ್ರಾರ್ಥನೆ ಸಲ್ಲಿಸಿದರು. ಮಾಸ್ಟರ್‌ ಶ್ರೀಶ್‌, ಕುಮಾರಿ ಸಿಂಚನಾ, ಮಾಸ್ಟರ್ ಹರ್ಷಾ ಶುಕ್ಲಾ ಸ್ಕೌಟ್ಸ್-ಗೈಡ್ಸ್‌ ಬಗೆಗಿನ ವಿಚಾರ ವ್ಯಕ್ತ ಪಡಿಸಿದರು. ಬಳಿಕ ಪ್ರಥಮ ಹಾಗೂ ದ್ವಿತೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರಮಾಣ ಪತ್ರವಿತರಿಸಲಾಯಿತು. ಇದೇ ವೇಳೆ ಸ್ಕೌಟ್ಸ್‌-ಗೈಡ್ಸ್‌ನಲ್ಲಿ ಸ್ವಯಂ ಚಾಲಿತ ಸಂಘವಿದೆ. ಇದರಲ್ಲಿ ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ಭಾಗವಹಿಸಿ, ದೇಶಕ್ಕೆ ಸೇವೆ ಸಲ್ಲಿಸಬಹುದು ಎಂದು ಪ್ರಾಂಶುಪಾಲರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಯ ಗ್ರಂಥಪಾಲಕರಾದ ಶ್ರೀ ಕಲ್ಯಾಣಿ ಚವ್ಹಾಣ್‌, ವಿಜಯ್‌ ಕುಮಾರ್‌ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
OSCAR-2019
7 ವರ್ಷಗಳ ಹಿಂದೆ ಮಗಳು ಕೊಲೆಯಾಗಿ ಹೋಗಿದ್ದಳು. ಒಬ್ಬಳೇ ಮಗಳನ್ನು ಕಳೆದುಕೊಂಡ ಮುಂಬೈನ ಸಂತೋಷ್ ಹಾಗೂ ಶೀತಲ್ ದಂಪತಿಗೆ ಬದುಕೇ ಬೇಡವಾಗಿತ್ತು. ಆದ್ರೀಗ ಅವರ ಮನೆಯಲ್ಲಿ ಸಂತಸದ ಹೊಳೆ Read more… ಹಸುಗೂಸೊಂದನ್ನು ಕೊಂದು ನದಿಗೆ ಎಸೆದಿದ್ದ ಕ್ರೂರ ದಂಪತಿಯನ್ನು ಹೈದ್ರಾಬಾದ್ ನಲ್ಲಿ ಬಂಧಿಸಲಾಗಿದೆ. ರಾಜಶೇಖರ್ ಮತ್ತವನ ಪತ್ನಿ ಶ್ರೀಲತಾ ಬಂಧಿತರು. ಫೆಬ್ರವರಿ 1 ರಂದು 3 ತಿಂಗಳ ಮಗುವಿನ ತಲೆ Read more…
OSCAR-2019
ಉಡುಪಿ, ಏಪ್ರಿಲ್ 12: "ಉಡುಪಿಯ ಕುಂದಾಪುರದಲ್ಲಿ ಬಿಜೆಪಿ ಭಿನ್ನಮತ ವಿಚಾರ ಪಕ್ಷದೊಳಗಿನ ಭಿನ್ನಮತವನ್ನು ರಾಜ್ಯಾಧ್ಯಕ್ಷರು ಶಮನ ಮಾಡುತ್ತಾರೆ. ಅಧಿಕೃತ ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆಯಾಗಿದೆ. ಅತೀ ಹೆಚ್ಚು ಅಂತರದಲ್ಲಿ ಗೆಲ್ಲುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತೇನೆ. ಭಿನ್ನಮತೀಯರು ಪಕ್ಷದಲ್ಲಿ ಇದ್ದಾರೋ ಇಲ್ಲವೋ ಅವರೇ ತೀರ್ಮಾನಿಸಲಿ". -ಹಾಲಾಡಿ ಶ್ರೀನಿವಾಸ ಶೆಟ್ಟಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ಕುಂದಾಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದ ಬಿಜೆಪಿ ಮುಖಂಡರ ನಡೆ ಮತ್ತು ರಾಜಕೀಯ ಗುರು ಎ.ಜಿ.ಕೊಡ್ಗಿ ಅವರ ಅಸಮಾಧಾನ ಕುರಿತು ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡ ಅವರು ಪ್ರತಿಕ್ರಿಯಿಸಿದ್ದಾರೆ. ಪಕ್ಷದಲ್ಲಿದ್ದರೆ ಅಭ್ಯರ್ಥಿ ಪರ ಕೆಲಸ ಮಾಡಬೇಕು. ಪಕ್ಷ ತೊರೆದವರಿಂದ ಯಾವ ಹಾನಿಯಾಗುತ್ತದೆ ಎಂದು ಜನರಿಗೆ ಗೊತ್ತು ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಕಿಶೋರ್ ಕುಮಾರ್ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ನಿಂತಿದ್ದರು. ಚುನಾವಣೆ ಸಂದರ್ಭದಲ್ಲಿ ಎಲ್ಲರ ಸಹಾಯ ಬೇಕು. ಪಕ್ಷದ ಹಿರಿಯ ನಾಯಕ ಎ.ಜಿ ಕೊಡ್ಗಿಯನ್ನು ಭೇಟಿಯಾಗಿದ್ದೇನೆ. ಕೊಡ್ಗಿಯವರ ಆಶೀರ್ವಾದ ಪಡೆದು ಬಂದಿದ್ದೇನೆ. ಎ.ಜಿ.ಕೊಡ್ಗಿಯವರು ಹಿರಿಯರು. ಅವರ ಮೇಲೆ ಗೌರವವಿದೆ. ಎಲ್ಲಾ ಕಡೆ ಸ್ವಲ್ಪ ಅಸಮಾಧಾನ ಇರುತ್ತದೆ. ನಿತ್ಯ ಜನರ ಕೆಲಸ ಮಾಡಿದ್ದೇನೆ. ಚುನಾವಣಾ ಸಂದರ್ಭದಲ್ಲಿ ವಿಶೇಷ ಪ್ರಚಾರ ಮಾಡುವುದಿಲ್ಲ ಎಂದಿದ್ದಾರೆ. udupi karnataka assembly elections 2018 district news ಹಾಲಾಡಿ ಶ್ರೀನಿವಾಸ ಶೆಟ್ಟಿ ಉಡುಪಿ ಕುಂದಾಪುರ ಕರ್ನಾಟಕ ವಿಧಾನಸಭೆ ಚುನಾವಣೆ 2018 ಜಿಲ್ಲಾಸುದ್ದಿ halady srinivas shetty
OSCAR-2019
ಬೆಂಗಳೂರು: ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳಕರ ನಡುವಿನ ಸಂಘರ್ಷಕ್ಕೆ ತೇಪೆ ಹಚ್ಚಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತು ಕಾಂಗ್ರೆಸ್ ಶಾಸಕಾಂಗದ ಪಕ್ಷದ ನಾಯಕ ಸಿದ್ದರಾಮಯ್ಯ ಹರಸಾಹಸಪಟ್ಟರು. ಕಳೆದ ರಾತ್ರಿ ಲಕ್ಷ್ಮಿ ಹೆಬ್ಬಾಳಕರ ಮತ್ತು ರಮೇಶ್ ಜಾರಕಿಹೊಳಿ ನಡುವೆ ನಾಯಕರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಪ್ರತ್ಯೇಕ ಮಾತುಕತೆ ನಡೆಸಿದರು. ಈ ವೇಳೆ ವೇಣುಗೋಪಾಲ್‌ ಬಳಿ ತಾ.ಪಂ., ಜಿ.ಪಂ., ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ತುಂಬಾ ತೊಂದರೆ ಕೊಟ್ಟಿದ್ದಾರೆ. ನನ್ನ ಕ್ಷೇತ್ರದ ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ನನಗೆ ನೆಮ್ಮದಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಜಲ ಸಂಪನ್ಮೂಲ, ಕಂದಾಯ, ಲೋಕೋಪಯೋಗಿ ಸೇರಿ ಹಲವು ಇಲಾಖೆಗಳಲ್ಲಿ ಅಧಿಕಾರಿಗಳನ್ನು ತಮ್ಮ ಇಷ್ಟದಂತೆ ನೇಮಿಸಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ, ಜಾರಕಿಹೊಳಿ ಸಹೋದರರ ವಿರುದ್ಧ ದೂರಿನ ಲಕ್ಷ್ಮಿ ಹೆಬ್ಬಾಳಕರ ಸುರಿಮಳೆಯನ್ನೇ ಸುರಿಸಿದರು. ನನ್ನ ಕ್ಷೇತ್ರದಲ್ಲಿ ಸುಮಾರು 8 ಜಿ.ಪಂ. ಕ್ಷೇತ್ರಗಳು ಇವೆ. ಸತೀಶ್​ ಜಾರಕಿಹೊಳಿ ಕ್ಷೇತ್ರದಲ್ಲಿ ಕೇವಲ 2 ಕ್ಷೇತ್ರಗಳು ಬರುತ್ತವೆ. ಹೀಗಿದ್ದರೂ ಅಧಿಕಾರಿಗಳನ್ನು ಅವರೇ ನೇಮಿಸಿಕೊಳ್ಳುತ್ತಿದ್ದಾರೆ. ಸಂಖ್ಯಾಬಲ, ಜನಬಲ ನನ್ನ ಪರವಾಗಿದೆ. ಜಾರಕಿಹೊಳಿ ಕುಟುಂಬದ ಬಗ್ಗೆ ನನಗೆ ಗೌರವವಿದೆ. ಆದರೆ, ಜಾರಕಿಹೋಳಿ ಸಹೋದರರು ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿದರು. ನೀವು ಮಾಧ್ಯಮಗಳ ಮುಂದೆ ಹೋಗಬಾರದು. ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಖಡಕ್‌ ಸೂಚನೆ ನೀಡಿದ ‌ ವೇಣುಗೋಪಾಲ್‌ ಎಲ್ಲಾ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಸಚಿವ ರಮೇಶ್ ಜಾರಕಿಹೊಳಿ ಜೊತೆಯೂ ತಡರಾತ್ರಿಯವರೆಗೂ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದೀರ್ಘ ಚರ್ಚೆ ನಡೆಸಿರುವ ವೇಣುಗೋಪಾಲ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ವಿಚಾರವಾಗಿ ಯಾಕೆ ಗೊಂದಲ ಮಾಡಿಕೊಳ್ತೀರಿ. ನಿಮ್ಮ ಸಮಸ್ಯೆ ಏನೇ ಇದ್ರೂ ನನ್ನ ಗಮನಕ್ಕೆ ತರಬಹುದಾಗಿತಲ್ವಾ. ಎಲ್ಲಾ ಬಿಟ್ಟು ಮಾಧ್ಯಮಗಳ ಮುಂದೆ ಹೋಗಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಹೆಚ್ಚು ಕಾಂಗ್ರೆಸ್ ಕ್ಷೇತ್ರಗಳನ್ನು ಗೆಲ್ಲಿಸಿದ್ದೇವೆ. ಪಕ್ಷಕ್ಕಾಗಿ ಇಷ್ಟು ವರ್ಷ ಕೆಲಸ ಮಾಡಿಕೊಂಡು ಬಂದಿದ್ದೇವೆ. ಆದರೂ ನನ್ನ ಹಾಗೂ ಸಹೋದರ ಸತೀಶ್ ವಿರುದ್ಧವೇ ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನೆ ಇರಲು ಹೇಗೆ ಸಾಧ್ಯ. ಜಿಲ್ಲೆಯಲ್ಲಿ ನಮ್ಮ ಬಳಿ ಯಾವುದನ್ನೂ ಚರ್ಚಿಸದೇ ಸರ್ವಾಧಿಕಾರಿ ಎಂಬಂತೆ ವರ್ತಿಸುತ್ತಿದ್ದಾರೆ. ನನ್ನ ಜೊತೆ ಹೈಕಮಾಂಡ್ ಇದೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ದೂರಿದರು. ಕೊನೆಗೆ ರಮೇಶ್ ಜಾರಕಿಹೊಳಿಗೆ‌ ಕಿವಿಮಾತು ಹೇಳಿದ ವೇಣುಗೋಪಾಲ್, ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಹೀಗೆಲ್ಲಾ ಕಿತ್ತಾಡಿಕೊಂಡರೆ ಹೇಗೆ ? ಎಲ್ಲವನ್ನೂ ಸರಿಪಡಿಸುತ್ತೇವೆ ಎಂದರು. ತಮ್ಮ ಆರೋಪಗಳಿಗೆ ಕಟ್ಟುಬಿದ್ದಿರುವ ಬೆಳಗಾವಿ ಜಿಲ್ಲಾ ಮುಖಂಡರಾದ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಿತ್ತಾಟಕ್ಕೆ ಬ್ರೇಕ್ ಹಾಕಲು ವೇಣುಗೋಪಾಲ್ ಮಾತುಕತೆ ನಡೆಸಿದರು. ವೇಣುಗೋಪಾಲ್‌ಗೆ ಬೆಳಗಾವಿ ಜಿಲ್ಲಾ ಮುಖಂಡರ ಜಗಳ ಕಗ್ಗಂಟಾಗಿದ್ದು, ಈ ಜಗಳವನ್ನು ಬಗೆಹರಿಸುವ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರಿಗೆ ವಹಿಸಿದ ಅವರು, ರಮೇಶ್ ಜಾರಕಿಹೊಳಿ ನಿಮ್ಮ‌ ಜೊತೆ ಚೆನ್ನಾಗಿದ್ದಾರೆ. ನಿಮ್ಮ ಮಾತನ್ನು ಕೇಳುತ್ತಾರೆ. ನೀವೇ ಸಮಸ್ಯೆಯನ್ನು ಬಗೆಹರಿಸಬೇಕು. ಜಾರಕಿಹೊಳಿ ಸಹೋದರರನ್ನು ಕರೆದು ಮಾತನಾಡಿ. ಆದಷ್ಟು ಬೇಗ ಈ ತಿಕ್ಕಾಟ ಕೊನೆಗಾಣಿಸಿ ಎಂದು ಹೇಳಿದ್ದಾರೆ.
OSCAR-2019
ಕಷ್ಟಪಡಲು ಬಯಸದ ಹುಡುಗಿಯರಿಗೆ ಬ್ಯೂಟಿ ಟಿಪ್ಸ್ | Kannada Dunia | Kannada News | Karnataka News | India News ಎಷ್ಟು ಸಾಧ್ಯವೂ ಅಷ್ಟು ನೀರನ್ನು ನೀವು ಕುಡಿಯಬೇಕು. ಹೌದು, ಸುಂದರವಾಗಿ ಕಾಣಲು ಇದೊಂದು ವಿಧಾನ. ನೀರು ಚರ್ಮದಲ್ಲಿ ತೇವಾಂಶವನ್ನು ಉಳಿಸುತ್ತದೆ. ಚರ್ಮ ಕೋಮಲವಾಗುವುದಲ್ಲದೇ ಹೊಳೆಯುವ ಚರ್ಮ ನಿಮ್ಮದಾಗುತ್ತದೆ.
OSCAR-2019
ಹಾಸನ : ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನಸೆಳೆದಿರುವ ಪ್ರಮುಖ ಕ್ಷೇತ್ರಗಳಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರವೂ ಒಂದು. ಇದಕ್ಕೆ ಕಾರಣ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪುತ್ರ, ಜೆಡಿಎಸ್‌ನ ‘ತೆರೆಮರೆಯ ಹೈಕಮಾಂಡ್‌’ ಎಚ್‌.ಡಿ. ರೇವಣ್ಣ ಸ್ಪರ್ಧೆ. ಈ ಕ್ಷೇತ್ರ ಮಾತ್ರವಲ್ಲದೆ, ಜಿಲ್ಲೆಯ ಸಮಸ್ತ ನರನಾಡಿಯನ್ನೂ ಬಲ್ಲ ರೇವಣ್ಣನವರು ಇದೀಗ 6ನೇ ಬಾರಿ ಅಖಾಡಕ್ಕೆ ಇಳಿದಿದ್ದಾರೆ. ಅವರ ಎದುರಾಳಿಯಾಗಿರುವವರು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಾಗೂರು ಮಂಜೇಗೌಡ. 2008ರ ಕ್ಷೇತ್ರ ಮರುವಿಂಗಡಣೆ ಬಳಿಕ ರೇವಣ್ಣ ಪಾಲಿಗೆ ಒಂದು ರೀತಿ ‘ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸಿದ್ದೂ ಹಾಲು ಅನ್ನ’ ಎಂಬಂತಾಗಿದೆ. ಒಕ್ಕಲಿಗರು ಅಧಿಕವಾಗಿರುವ ದುದ್ದ ಹಾಗೂ ಶಾಂತಿ ಗ್ರಾಮ ಹೋಬಳಿಗಳು ಹೊಳೆನರಸೀಪುರಕ್ಕೆ ಸೇರ್ಪಡೆಯಾಗಿದ್ದರೆ, ಕುರುಬ ಹಾಗೂ ವೀರಶೈವ ಸಮಾಜದವರು ಹೆಚ್ಚಿರುವ ಹಳ್ಳಿ ಮೈಸೂರು ಹೋಬಳಿ ಅರಕಲಗೂಡಿಗೆ ಸ್ಥಳಾಂತರಗೊಂಡು ರೇವಣ್ಣಗೆ ಅನುಕೂಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರೂ ಆಗಿರುವ ಬಾಗೂರು ಮಂಜೇಗೌಡರನ್ನು ಕಣಕ್ಕಿಳಿಸುವ ಸಲುವಾಗಿ ಕಳೆದ ಬಾರಿ ರೇವಣ್ಣ ಅವರಿಗೆ ಉತ್ತಮ ಪೈಪೋಟಿ ನೀಡಿದ್ದ ಮಾಜಿ ಸಚಿವ ದಿ. ಜಿ. ಪುಟಸ್ವಾಮಿಗೌಡರ ಸೊಸೆ ಜಿ. ಅನುಪಮಾ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿದೆ. ಈ ನಿರ್ಧಾರದ ಬಗ್ಗೆ ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಅನುಪಮಾ, ಈಗ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಹೇಳಿರುವುದರಿಂದ ಮಂಜೇಗೌಡರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮೂಲತಃ ಚನ್ನರಾಯಪಟ್ಟಣ ತಾಲೂಕಿನವರಾದ ಮಂಜೇಗೌಡರಿಗೆ ಇದು ಪ್ರಥಮ ಚುನಾವಣೆ. ಹಾಸನ ಜಿಲ್ಲೆಯವರಾದರೂ ಹೊಳೆನರಸೀಪುರ ಕ್ಷೇತ್ರಕ್ಕೆ ಮಾತ್ರ ಅವರು ಅಚ್ಚ ಹೊಸ ಮುಖ. ಹಾಗಾಗಿ ಇಡೀ ಹೊಳೆನರಸೀಪುರ ಕ್ಷೇತ್ರವನ್ನು ಕಡಿಮೆ ದಿನಗಳಲ್ಲಿ ಪರಿಚಯಿಸಿಕೊಂಡು ಪ್ರಚಾರ ಮಾಡುವುದು ಅವರ ಪಾಲಿಗೆ ಒಂದು ರೀತಿ ಸವಾಲು. ಮಂಜೇಗೌಡರಿಗೆ ಕಾಂಗ್ರೆಸ್‌ ಟಿಕೆಟ್‌ ಬೇಗ ನೀಡಲು ಅನೇಕ ಅಡಚಣೆಗಳು ಎದುರಾದವು. ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ರಾಜೀನಾಮೆ ಅಂಗೀಕಾರವಾಗುವುದು ವಿಳಂಬವಾಯಿತು. ಇಲ್ಲದಿದ್ದರೆ ಪ್ರಚಾರ ಮಾಡಲು ಹೆಚ್ಚಿನ ಅವಧಿ ಸಿಗುತ್ತಿತ್ತು. ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಈ ಚುನಾವಣೆಯಲ್ಲಿ ಒಕ್ಕಲಿಗರು ಜೆಡಿಎಸ್‌ಗಿಂತ ಹೆಚ್ಚಾಗಿ ಮಾಜಿ ಪ್ರಧಾನಿ ದೇವೇಗೌಡರ ಪರವಾಗಿ ಒಗ್ಗೂಡಿದಂತೆ ಕಾಣುತ್ತಿದೆ. ಹೀಗಾಗಿ ರೇವಣ್ಣ ಅವರನ್ನು ಸೋಲಿಸುವುದು ಕಾಂಗ್ರೆಸ್‌ಗೆ ಕಬ್ಬಿಣದ ಕಡಲೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡರು ಪಿಚ್‌ಗೆ ಬಂದು ಉತ್ತಮ ಪ್ರದರ್ಶನ ನೀಡುವಂತೆ ಕಾಣುತ್ತಿಲ್ಲ. ಹಾಗಾಗಿ ರೇವಣ್ಣ ಮತ್ತು ಬಾಗೂರು ಮಂಜೇಗೌಡರ ನಡುವೆಯೇ ನೇರ ಹಣಾಹಣಿ ನಿಶ್ಚಿತ ಎಂಬಂತಾಗಿದೆ. ಮತ್ತೊಂದೆಡೆ ಬಾಗೂರು ಮಂಜೇಗೌಡರ ಪ್ರಭಾವಕ್ಕಿಂತ ಕಾಂಗ್ರೆಸ್‌ ಪ್ರಭಾವ ಹೆಚ್ಚು. ಆದ್ದರಿಂದ ಮಂಜೇಗೌಡರಿಗೆ ಕಾಂಗ್ರೆಸ್‌ ಎಂಬುದೇ ಶ್ರೀರಕ್ಷೆ ಮತ್ತು ಬೆನ್ನೆಲುಬು. ಅಲ್ಲದೆ 2008 ಮತ್ತು 2013ರ ಚುನಾವಣೆಯಲ್ಲಿ 63 ಸಾವಿರ ಮತಗಳನ್ನು ಪಡೆದಿದ್ದ ಅನುಪಮಾ ಮೇಲ್ನೋಟಕ್ಕೆ ಪಕ್ಷದ ಪರ ಪ್ರಚಾರ ಮಾಡುವುದಾಗಿ ಹೇಳಿರಬಹುದು. ಆದರೆ ಅವರ ಬೆಂಬಲಿಗರು ಎಷ್ಟರ ಮಟ್ಟಿಗೆ ಬದ್ಧತೆಯಿಂದ ಮಂಜೇಗೌಡ ಪರ ಕೆಲಸ ಮಾಡುತ್ತಾರೆ ಎಂಬುದು ಅತ್ಯಂತ ಗೌಪ್ಯವಾಗಿದೆ. ಒಂದು ವೇಳೆ ಅವರು ಒಳ ಏಟು ನೀಡಿದರೆ ಮಂಜೇಗೌಡರು ರೇವಣ್ಣ ಅವರನ್ನು ಮಣಿಸಲು ಹರಸಾಹಸವನ್ನೇ ಮಾಡಬೇಕಾಗುತ್ತದೆ. ಆರ್ಥಿಕವಾಗಿ ಬಲಾಢ್ಯವಾಗಿರುವ ಮಂಜೇಗೌಡರು ಈಗಾಗಲೇ ನಿರೀಕ್ಷೆಗಿಂತ ಹೆಚ್ಚಾಗಿಯೇ ಪ್ರಚಾರದಲ್ಲಿ ತೊಡಗಿದ್ದಾರೆ. ಇದು ಎಷ್ಟರ ಮಟ್ಟಿಗೆ ಮತಗಳನ್ನು ತಂದುಕೊಡುತ್ತದೆ ಎಂಬುದು ಕೂಡ ಮಂಜೇಗೌಡರ ಎಷ್ಟರ ಮಟ್ಟಿಗೆ ಹೋರಾಟ ನೀಡುತ್ತಾರೆ ಎಂದು ನಿರ್ಧರಿತವಾಗುತ್ತದೆ. ‘ಹೊಳೆನರಸೀಪುರ ಕ್ಷೇತ್ರದಲ್ಲಿ ಜನರಿಗೆ ಸ್ವಾತಂತ್ರ್ಯವಿಲ್ಲ’ ಎಂದು ಈಗಾಗಲೇ ಬಾಗೂರು ಮಂಜೇಗೌಡರು ರೇವಣ್ಣ ವಿರುದ್ಧ ಹರಿಹಾಯ್ದಿದ್ದರೆ, ‘ಮಂಜೇಗೌಡ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿದ್ದು, ಅವರ ಸಹೋದರು ಹವಾಲಾ ಹಣ ತಂದು ಹಂಚುತ್ತಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯನ್ನೇ ನಡೆಸಬೇಕು’ ಎಂದು ಮಂಜೇಗೌಡರ ವಿರುದ್ಧ ರೇವಣ್ಣ ತೀವ್ರತರನಾಗಿ ಟೀಕೆ ಮಾಡುತ್ತಿದ್ದಾರೆ. ಇಬ್ಬರ ನಡುವೆ ಟೀಕೆ, ಟಿಪ್ಪಣೆ, ಆರೋಪ-ಪ್ರತ್ಯಾರೋಪಗಳ ಸುರಿಮಳೆ ಸುರಿಯುತ್ತಿದೆ. ಅಭಿವೃದ್ಧಿ ವಿಷಯ ಮಾತ್ರ ಇಲ್ಲಿ ಗೌಣವಾಗಿದ್ದು ವೈಯಕ್ತಿಕ ನೆಲೆಗಟ್ಟಿನಲ್ಲೇ ಟೀಕೆಗಳು ನಡೆಯುತ್ತಿವೆ. ನಾಲ್ಕು ಬಾರಿ ಗೆದ್ದು, ಒಂದು ಬಾರಿ ಸೋತಿರುವ ರೇವಣ್ಣನವರು ಕ್ಷೇತ್ರದ ಒಳ ಮತ್ತು ಹೊರ ಮರ್ಮವನ್ನು ಚೆನ್ನಾಗಿ ಬಲ್ಲವರೇ. ಆಗಾಗ್ಗೆ ಮುಂಗೋಪ ಪ್ರದರ್ಶಿಸುವ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಆದರೆ ಕ್ಷೇತ್ರದ ನಂಟು ಮತ್ತು ಅಭಿವೃದ್ಧಿಯನ್ನು ಕಡೆಗಣಿಸಿಲ್ಲ. ಕ್ಷೇತ್ರದ ಗ್ರಾಮೀಣ ಭಾಗದ ಎಲ್ಲಾ ರಸ್ತೆಗಳು ಡಾಂಬರೀಕರಣಗೊಂಡಿವೆ. ಅನೇಕ ಕಡೆ ಕಾಂಕ್ರೀಟ್‌ ರಸ್ತೆಗಳೂ ಆಗಿವೆ. ಅಲ್ಲದೇ ಕಾಲೇಜು, ನರ್ಸಿಂಗ್‌ ಸೇರಿದಂತೆ ಶಿಕ್ಷಣ ಕ್ಷೇತ್ರದ ಬಗ್ಗೆಯೂ ಗಮನಹರಿಸಿರುವುದುಂಟು. ಕ್ಷೇತ್ರದಲ್ಲಿ ನೈತಿಕತೆ ಮತ್ತು ಅಭಿವೃದ್ಧಿಗಿಂತ ಆರ್ಥಿಕತೆ ಮಾನದಂಡವಾದರೆ ಮಾತ್ರ ಕಾಂಗ್ರೆಸ್‌- ಜೆಡಿಎಸ್‌ ನಡುವೆ ತೀವ್ರ ಹಣಾಹಣಿ ನಡೆಯುವುದನ್ನು ತಳ್ಳಿಹಾಕುವಂತಿಲ್ಲ. ಈ ಹಿಂದೆ ನಡೆದ ಐದು ಚುನಾವಣೆಗಳಲ್ಲೂ ಸಚಿವ ದಿವಂಗತ ಜಿ.ಪುಟ್ಟಸ್ವಾಮಿಗೌಡರು ಮತ್ತು ಅವರ ಸೊಸೆ ಅನುಪಮಾ ಅವರೇ ರೇವಣ್ಣನವರಿಗೆ ಸಾಂಪ್ರದಾಯಿಕ ಎದುರಾಳಿಗಳು ಆಗಿದ್ದರು. ಈಗ ಕ್ಷೇತ್ರಕ್ಕೆ ಹೊಸ ಮುಖವಾದ ಆರ್ಥಿಕವಾಗಿಯೂ ಜೋರಾಗಿರುವ ಬಾಗೂರು ಮಂಜೇಗೌಡರು ರೇವಣ್ಣನರಿಗೆ ಪ್ರತಿಸ್ಪರ್ಧಿ. ಅಂತಿಮವಾಗಿ ಇಲ್ಲಿ ಫೈಟ್‌ ನಡೆಯುವುದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಮಾತ್ರ.
OSCAR-2019
ಜೈಪುರ, ಏಪ್ರಿಲ್ 12: ಪೂರ್ವ ರಾಜಸ್ಥಾನದಲ್ಲಿ ನಿನ್ನೆ(ಏಪ್ರಿಲ್ 11) ರಾತ್ರಿ ಸುರಿದ ಭಾರೀ ಮಳೆ, ಬಿರುಗಾಳಿಗೆ 12 ಜನ ಮೃತರಾಗಿದ್ದಾರೆ. ಇಲ್ಲಿನ ಧೋಲ್ಪುರ ಪ್ರದೇಶದಲ್ಲಿ ಏಳು ಜನ ಮೃತರಾಗಿದ್ದರೆ, ಭರತ್ಪುರದಲ್ಲಿ ಐದು ಜನ ಮೃತರಾಗಿದ್ದಾರೆ. ಧೋಲ್ಪುರ ಪ್ರದೇಶ ಜಲಾವೃತವಾಗಿದ್ದು, ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯುಂಟಾಗುತ್ತಿದೆ. ಉತ್ತರ ಭಾರತದಲ್ಲಿ ಈಗಾಗಲೇ ಪೂರ್ವ ಮುಂಗಾರಿನ ಸೂಚನೆ ಎಂಬಂತೆ ಮಳೆಯಾಗಿದ್ದು, ಹವಾಮಾನ ಇಲಾಖೆ ಮೊದಲೇ ಮಳೆಯ ಮುನ್ಸೂಚನೆ ನೀಡಿತ್ತು. ಮಳೆಯ ಕಾರಣ ಆಗ್ರಾ-ಧೋಲ್ಪುರ ರೈಲ್ವೇ ಸಂಪರ್ಕವನ್ನೂ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ದಕ್ಷಿಣ ಭಾರತದಲ್ಲೂ ಕೆಲವು ದಿನಗಳ ಹಿಂದೆ ಮಳೆಯಾಗಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಏ.12 ಮತ್ತು 13 ರಂದು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
OSCAR-2019
ಕ್ಯಾಂಡಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಲಂಕಾ ವಿರುದ್ಧ ಭಾರತ 3 ವಿಕೆಟ್ ಜಯ ಗಳಿಸಿದೆ. ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿ ಲಂಕಾ
OSCAR-2019
ಭಾರೀ ಕುತೂಹಲ ಹುಟ್ಟಿಸಿದ್ದ ರಿಲಯನ್ಸ್‌ ಜಿಯೋ ಫೋನ್‌, ಬುಕ್ಕಿಂಗ್‌ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ವೆಬ್‌ಸೈಟ್‌ ಕ್ರಾಶ್‌ ಆಗಿದೆ. ಇದರಿಂದಾಗಿ ಆದಷ್ಟು ಬೇಗ ಮೊಬೈಲ್ ಬುಕ್ಕಿಂಗ್‌ ಮಾಡಬೇಕೆಂದುಕೊಂಡಿದ್ದ ನರಿಗೆ ಭಾರೀ
OSCAR-2019
ಇಂಗ್ಲೆಂಡ್ ಫುಟ್ಬಾಲ್ ಆಟಗಾರ ವೇಯ್ನ್ ರೂನಿ ಅಂತರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದಾರೆ. 31 ವರ್ಷದ ವೇಯ್ನ್ ರೂನಿ, ಇಂಗ್ಲೆಂಡ್ ಪರವಾಗಿ 119 ಪಂದ್ಯಗಳನ್ನು ಆಡಿ 53 ಬಾಲಿವುಡ್‌ನ ಸೂಪರ್‌ ಸ್ಟಾರ್ ಅಕ್ಷಯ್‌ ಕುಮಾರ್‌ ಅಭಿನಯದ ಟಾಯ್ಲೆಟ್ : ಏಕ್‌ ಪ್ರೇಮ್ ಕಥಾ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ದೂಳೆಬ್ಬಿಸಿದೆ. ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾದ 13 ದಿನದಲ್ಲಿ
OSCAR-2019
ಹಾಸನ: ಸಿಎಂ‌ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್ಡಿಡಿ ಕೆಂಡಾ ಮಂಡಲವಾಗಿದ್ದಾರೆ., ಒಂದೂವರೆ ವರ್ಷ ದೇವೇಗೌಡರು ರಾಜ್ಯದ ವಿಕಾಸ ಮಾಡಿಲ್ಲವೇ ಎಂದು ವಿಕಾಸಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾತಿನಲ್ಲಿ ಹಿಡಿತ ಇರಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಸನದಲ್ಲಿ ಇಂದು ಮಾತನಾಡಿದ ಹೆಚ್.ಡಿ ದೇವೇಗೌಡರು, ‘ ನಾನು ಒಂದೂವರೆ ವರ್ಷ ಏನು ಮಾಡಿದೆ ಎಂದು‌ ನೆನಪಿಸಿಕೊಳ್ಳಲಿ, ಬೆಂಗಳೂರು ಐಟಿ‌ ಹಾರ್ಡ್ವೇರ್, ಕೈಗಾರಿಕೆಗೆ, ಶಕ್ತಿ ತುಂಬಿದ್ದು ಯಾರು? ಹೀಗೆ ಮಾತನಾಡಲು‌ ನಾಚಿಕೆ ಆಗುವುದಿಲ್ಲವೇ? ನನ್ನ ಕೆಣಕೋದು ಬೇಡ, ನಾನು ಯಾರ ಬಗ್ಗೆಯೂ ಈವರೆಗೂ ಅಗೌರವವಾಗಿ ಮಾತನಾಡಿಲ್ಲ, ನಾನು‌ ಫೌಂಡೇಷನ್ ಹಾಕಿದ ಕೃಷ್ಣಾಯೋಜನೆ ಬಳಕೆ ಮಾಡಲಾಗಿಲ್ಲ . ಇಂಥವರು ವಿಕಾಸದ ಬಗ್ಗೆ ವ್ಯಂಗ್ಯ ಮಾಡುತ್ತೀರಾ?’ ಎಂದು‌ ಆಕ್ರೋಶ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಹೋದ ಕಡೆ ಹಣ ಕೊಟ್ಟು ಜನ‌ ಕರೆದುಕೊಂಡು ಬಂದಿದ್ದಾರಾ? ಎಂದು ಪ್ರಶ್ನಿಸಿದ ಹೆಚ್.ಡಿಡಿ, ಇದು ಅಹಿಂದ ರಾಜಕೀಯ ಅಲ್ಲ, ಅಂಥ ಒಂದು ಕಾರ್ಯಕ್ರಮ ನೀವು ಮಾಡಿ? ಈಗ ಕುಮಾರಸ್ವಾಮಿ ಶಕ್ತಿ ಗೊತ್ತಾಯಿತೇ? ಕುಮಾರಸ್ವಾಮಿ ಒಬ್ಬ ರೈತನ ಮಗ, ನಿಮ್ಮ ಹಣ, ನಿಮ್ಮ‌ ಧಿಮಾಕಿಗೆ ಮುಂದಿನ ಭಾರಿ ಜನ ಉತ್ತರ ನೀಡಲಿದ್ದಾರೆ, ಸಿಎಂ‌ ವ್ಯಂಗ್ಯ ಮಾತು ನನಗೆ ಹೇಸಿಗೆ ತರಿಸಿದೆ, ನಿಮಗೆ ತಡೆದುಕೊಳ್ಳಲು ಆಗದಿದ್ದರೆ ಸುಮ್ಮನಿದ್ದು ಬಿಡಿ, ನಾನು ‌ಇಡೀ‌ ರಾಜ್ಯ ಸುತ್ತಿದ್ದೇನೆ, ನನ್ನ ಹೆಸರು ಹೇಳಿ ಯಾವುದೇ ಬಿರುದು ಕೊಡೋದು ಬೇಡ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ನಮ್ಮ ಕುಟುಂಬ ದಿಂದ ಎಷ್ಟು ಜನ‌ ಚುನಾವಣೆಗೆ ನಿಲ್ಲುತ್ತಾರೆ ಎಂಬುದು ದೊಡ್ಡ ವಿಷಯ ಅಲ್ಲ, ಈ ಬಗ್ಗೆ ಮುಂದಿನ ದಿನಗಳಲ್ಲಿ ನಾನೇ ತೀರ್ಮಾನ ಮಾಡುತ್ತೇನೆ. ಜೆಡಿಎಸ್ ಹಾಲಿ ಶಾಸಕರೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ, ಯಾವುದೇ ಬದಲಾವಣೆ ಇಲ್ಲ. ಎಂದು ಸ್ಪಷ್ಟನೆ ನೀಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಟಿಪ್ಪು ಜಯಂತಿಯನ್ನು ನಾಳೆ ನಮ್ಮ ಪಕ್ಷದ ಕಚೇರಿಯಲ್ಲಿ ಆಚರಿಸುತ್ತೇವೆ, ದೇಶದ ಎಲ್ಲಾ ನಾಯಕರ ಜಯಂತಿ ಇವರು ಮಾಡಲಿ, ಬೇಡ ಅನ್ನೋರು ಯಾರು? ಎಂದರು.
OSCAR-2019
ಈ ತಿಂಗಳ ಆದಿಯಲ್ಲಿ ಸದೃಢ ಮನಸ್ಸು ಹಾಗೂ ನೆಮ್ಮದಿ ಕಂಡುಬರುತ್ತದೆ. ಒಂದು ವೇಳೆ ಯಾವುದೋ ಕಾರಣಗಳಿಂದ ದುಃಖ ಆದರೂ ಬಾಳ ಸಂಗಾತಿ ಅಥವಾ ಸ್ನೇಹಿತರು ಆಡುವ ಧೈರ್ಯದ ಮಾತುಗಳಿಂದ ಮತ್ತೆ ಸಂತೋಷದಿಂದ ಇರುತ್ತೀರಿ. ನೀವು ಮಾಡಿದ ಖರ್ಚು ಅಥವಾ ಇನ್ನೊಂದಕ್ಕೆ ಏನೇ ಇರಲಿ ಹಣದ ವಿಚಾರದಲ್ಲಿ ತಿಂಗಳ ಮಧ್ಯಭಾಗದಲ್ಲಿ ಕುಟುಂಬದಲ್ಲಿ ಕಲಹ ಸಂಭವಿಸುವುದು. ಪೂರ್ವಜರ ಆಸ್ತಿ ಹಂಚಿಕೆ ಆಗದೆ ಉಳಿದಿದ್ದಲ್ಲಿ, ಆ ಆಸ್ತಿ ಮೇಲೆ ಆಸೆ ಇದ್ದಲ್ಲಿ ಆ ವಿಚಾರವಾಗಿ ಮಾತುಕತೆ ಮಾಡಿ ಫಲಿಸಬಹುದು. ಆದರೂ ಯಾವುದೋ ಒಂದು ಅನಿರೀಕ್ಷಿತ ಕಾರಣಗಳಿಂದ ಬರಬೇಕಾದ ಪಾಲು ಸಂಪೂರ್ಣ ನಿಮಗೆ ಸಿಗುವುದಿಲ್ಲ. ಸ್ತ್ರೀಯರು: ವ್ಯಾವಹಾರಿಕವಾಗಿ ನೋಡಿದಾಗ ಮಾತ್ರ ನಿಮಗೆ ಖರ್ಚು ಹೆಚ್ಚು ಕಾಣಿಸುತ್ತಿದೆ. ಆದರೆ ಸಮಯಕ್ಕೆ ಸರಿಯಾಗಿ ದುಡ್ಡು ಸಿಗುತ್ತದೆ ಎಂಬುದೇ ಆಶ್ಚರ್ಯಕರ. ನಿಮ್ಮ ಆರ್ಥಿಕ ಸ್ಥಿತಿ ವಿಚಿತ್ರವಾಗಿ ಇರುತ್ತದೆ. ಪ್ರಯತ್ನಿಸಿದರೆ ಮಾತ್ರ ಸಂತೋಷಕ್ಕೆ ಏನೂ ಕೊರತೆ ಇರುವುದಿಲ್ಲ. ಮನಸಿನಲ್ಲಿ ಇರುವ ಭಯ ಎಲ್ಲ ಬಿಟ್ಟು ಇರಬೇಕಾದ ತಿಂಗಳು ಇದು. ಹಣಕಾಸಿನ ವ್ಯವಹಾರಗಳಿಂದ ಆದಷ್ಟೂ ದೂರವಿರಿ. ತಿಂಗಳಿನ ಮೊದಲ ಅರ್ಧ ಭಾಗದ ತನಕ ಅಷ್ಟಾಗಿ ಯಶಸ್ಸು ಸಿಗದು. ಆದರೆ ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಲಭಿಸುತ್ತದೆ. ಮಾಸಿಕ ಋತು ಚಕ್ರದ ಸಮಸ್ಯೆ ಅದೇ ಸಂಬಂಧಿತ ಆರೋಗ್ಯ ಬಾಧೆ ಇಲ್ಲದಿದ್ದರೆ ಮಾತ್ರ ಇನ್ನಾವ ಸಮಸ್ಯೆ ಆಗುವುದಿಲ್ಲ. ಇಬ್ಬರೂ ಅಥವಾ ಅದಕ್ಕೂ ಹೆಚ್ಚಿನ ಜನರಿಗಾಗಿ ಅಡುಗೆ ಮಾಡಬೇಕಾದ ಜವಾಬ್ದಾರಿ ಹೆಗಲ ಮೇಲೆ ಬಂದಲ್ಲಿ ನೀವು ಒಬ್ಬರೇ ಅದನ್ನು ವಹಿಸಿಕೊಳ್ಳದೆ ಬೇರೆಯವರ ಸಹಾಯ ಪಡೆದರೆ ಉತ್ತಮ. ಇಲ್ಲದಿದ್ದರೆ ನಿಮ್ಮಿಂದ ಅಡುಗೆ ಹಾಳಾಗುತ್ತದೆ. ವಿದ್ಯಾರ್ಥಿಗಳು: ಸಂಘಟನೆ ಮಾಡಲು ಉತ್ತಮ ಸಹಕಾರ ಲಭಿಸುತ್ತದೆ. ಅಧ್ಯಾಪಕರಿಗೆ ನಿಮ್ಮ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಸುಳ್ಳು ಮಾತ್ರ ನುಡಿಯಬೇಡಿ. Get the complete month predictions of September 2017. Read monthly horoscope of Gemini in Kannada. Get free monthly horoscope, astrology and monthly predictions in Kannada.
OSCAR-2019
ಹೆಚ್ಚುವರಿ ಜಿಲ್ಲಾಧಿಕಾರಿಗಳು ಎಂ.ಸತೀಶ್ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ ಎಂದು 9 ಎಫ್‌ಐಆರ್‌ಗಳು ದಾಖಲಾಗಿವೆ. ಅವರು ಮಣ್ಣಿನಡಿ ಸಿಲುಕಿ ಮೃತಪಟ್ಟಿರಬಹುದು ಎಂದು ಹೇಳಿದ್ದಾರೆ. ಯೋಧರು, ಎನ್‌ಡಿಆರ್‌ಎಫ್, ನೌಕಾಪಡೆ, ಗರುಡಾ ಪಡೆಗಳು ಜಿಲ್ಲೆಯ ವಿವಿಧ ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಬುಧವಾರ ಮೂರು ಶವಗಳನ್ನು, ಗುರುವಾರ ಒಂದು ಶವವನ್ನು ಪತ್ತೆ ಹಚ್ಚಲಾಗಿದೆ. ಮಡಿಕೇರಿ ಕ್ಷೇತ್ರದ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ 37 ಜನರು ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. ನಾಪತ್ತೆಯಾದ ವ್ಯಕ್ತಿಗಳ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ. ಸಂತ್ರಸ್ತರ ಸಹಾಯಕ್ಕಾಗಿ ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರದಿದ್ದ ಸಹಾಯವಾಣಿಯನ್ನು ಸ್ಥಗಿತಗೊಳಿಸಲಾಗಿದೆ. ಒಟ್ಟು 84 ಕರೆಗಳನ್ನು ಸ್ವೀಕರಿಸಲಾಗಿದ್ದು, ಎಲ್ಲವೂ ಮನೆ, ಗುಡ್ಡ ಕುಸಿತಕ್ಕೆ ಸಂಬಂಧಿಸಿದವುಗಳು. ರಕ್ಷಣಾ ಪಡೆಗಳ ತಂಡ ಕೆಲವು ದಿನಗಳ ಕಾಲ ಕೊಡಗಿನಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಲಿವೆ. ಕೊಡಗಿನಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಜಿಲ್ಲಾಡಳಿತದ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. After heavy rain and landslide across Kodagu district 9 people are still reported missing. Nine complaint lodged by the family members of those who were untraceable.
OSCAR-2019
ಚನ್ನರಾಯಪಟ್ಟಣ: ದಂಡಿಗನಹಳ್ಳಿ ಹೋಬಳಿ ಕುಂದೂರುಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿಷಯದಲ್ಲಿ ಜಿಲ್ಲಾ ಸಚಿವರ ಹಸ್ತಕ್ಷೇಪ ಖಂಡಿಸಿ ಸಂಘದ ಅಧ್ಯಕ್ಷ ರವೀಶ್‌ ನೇತೃತ್ವದಲ್ಲಿ ಷೇರುದಾರರು ಶುಕ್ರವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರವೀಶ್ ಮಾತನಾಡಿ, ‘ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡಲಾಯಿತು ಎಂಬ ಕಾರಣದಿಂದ ಸಚಿವ ಎಚ್‌.ಡಿ.ರೇವಣ್ಣ, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ನಡೆಸಿ 10 ನಿರ್ದೇಶಕರ ಪೈಕಿ 6 ನಿರ್ದೇಶಕರಿಂದ ರಾಜೀನಾಮೆ ಕೊಡಿಸಿದ್ದಾರೆ’ ಎಂದು ದೂರಿದರು. 6 ನಿರ್ದೇಶಕರಿಂದ ಗುರುವಾರ ರಾಜೀನಾಮೆ ಕೊಡಿಸಲಾಗಿದೆ. ಆದರೆ ಕಳೆದ ತಿಂಗಳು 28ರಂದು ರಾಜೀನಾಮೆ ನೀಡಲಾಗಿದೆ ಎಂಬಂತೆ ನಮೂದಿಸಿ ಅಂಗೀಕರಿಸಲಾಗಿದೆ. 6 ನಿರ್ದೇಶಕರಿಗೆ ಅನೇಕ ಆಮಿಷ ಒಡ್ಡಲಾಗಿದೆ. ಈ ಸಹಕಾರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಹುನ್ನಾರ ನಡೆಸಲಾಗಿದೆ ಎಂದು ಆಪಾದಿಸಿದರು. ‘ಕುಂದೂರು ಮಠದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಇತ್ತೀಚೆಗೆ ಸೂಪರ್‌ಸೀಡ್‌ ಮಾಡಲು ಯತ್ನಿಸಲಾಗಿತ್ತು. ಅದು ಸಾಧ್ಯವಾಗದಿದ್ದಾಗ ನಿರ್ದೇಶಕರಿಂದ ರಾಜೀನಾಮೆ ಕೊಡಿಸುವ ಕೆಲಸಕ್ಕೆ ಸಚಿವ ರೇವಣ್ಣ ಮುಂದಾದರು. ಅಧ್ಯಕ್ಷನಾಗಿ ಉತ್ತಮವಾಗಿ ಕೆಲಸ ಮಾಡಿದರೂ ಇಲ್ಲಸಲ್ಲದ ಪಿತೂರಿ ಮಾಡಲಾಗಿದೆ. ಈ ಅನ್ಯಾಯದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.
OSCAR-2019
ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಮಾದಪ್ಪನಹಳ್ಳಿ ಬಳಿ ಶನಿವಾರ ಕ್ಯಾಂಟರ್ ಮತ್ತು ತವೇರಾ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟು ಆರು ಮಂದಿ ಗಾಯಗೊಂಡಿದ್ದಾರೆ. ತಮಿಳುನಾಡಿನ ಕೊಯಮತ್ತೂರು ಸಮೀಪದ ಸೂಲೂರು ಇಂದಿರಾನಗರದ ನಿವಾಸಿಗಳಾದ ಚಿನ್ನರಾಜು (65), ಮೋಜ್ ಕುಮಾರ್ (35) ಮತ್ತು ಮಹೇಂದ್ರನ್ (50) ಮೃತರು. ಅಪಘಾತದ ನಡೆದ ಸ್ಥಳದಲ್ಲಿ ಚಿನ್ನರಾಜು ಮೃತಪಟ್ಟರೆ, ಮನೋಜ್ ಕುಮಾರ್ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟರು. ಮಹೇಂದ್ರನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಪಘಾತ ಸಂಭವಿಸಿದ್ದನ್ನು ತಿಳಿದು ಸ್ಥಳಕ್ಕೆ ದೌಡಾಯಿಸಿದ ದೊಡ್ಡಮಾವತ್ತೂರು ಗ್ರಾಮಸ್ಥರು ಗಾಯಾಳುಗಳನ್ನು ಖಾಸಗಿ ತುರ್ತು ಚಿಕಿತ್ಸಾ ವಾಹನಗಳಲ್ಲಿ ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ಗಾಯಗೊಂಡವರೆಲ್ಲ ತಮಿಳು ಭಾಷಿಗರಾದ ಕಾರಣ ವಿಳಾಸ ಮತ್ತು ವಿವರಗಳನ್ನು ಪಡೆಯಲು ಪೊಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿ ಪರದಾಡಿದರು.
OSCAR-2019
ಜಕಾರ್ತ: ಜಿಟಿ ಜಿಟಿ ಮಳೆಯ ನಡುವೆ ಇಂಡೊನೇಷ್ಯಾದ ರಾಷ್ಟ್ರಗೀತೆ ಮೊಳಗಿದಾಗ ಇಲ್ಲಿನ ಜಿಬಿಕೆ ಕ್ರೀಡಾಂಗಣದಲ್ಲಿ ಸೇರಿದ್ದ ಸಾವಿರಾರು ಮಂದಿ ಭಾವುಕರಾದರು. 16 ದಿನಗಳಿಂದ ಕ್ರೀಡಾಪಟುಗಳ ಛಲ, ಬಲದ ಸ್ಪರ್ಧೆಗಳಿಗೆ ಸಾಕ್ಷಿಯಾಗಿದ್ದ ಕ್ರೀಡಾಂಗಣದಲ್ಲಿ 18ನೇ ಏಷ್ಯನ್ ಕ್ರೀಡಾಕೂಟಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತು. ಇಂಡೊನೇಷ್ಯಾ ಸೇನೆಯ ವಾದ್ಯಮೇಳದ ವೈಭವದೊಂದಿಗೆ ಆರಂಭಗೊಂಡ ಕಲಾ ಕಾರ್ಯಕ್ರಮಗಳು ಹಾಡು, ನೃತ್ಯ ವೈಭವದೊಂದಿಗೆ ಮುಕ್ತಾಯಗೊಂಡವು. ಕೊರಿಯಾದ ಪಾಪ್ ಗಾಯಕರು ಮತ್ತು ನೃತ್ಯಪಟುಗಳು ರಂಜಿಸಿದ ಕಾರ್ಯಕ್ರಮದಲ್ಲಿ ಭಾರತದ ಸಿದ್ಧಾರ್ಥ್ ಸ್ಲೇಥಿಯಾ ಮತ್ತು ತಂಡದವರು ಹಿಂದಿ ಹಾಡುಗಳ ಮೂಲಕ ಗಮನ ಸೆಳೆದರು. ‘ಕೊಯಿ ಮಿಲ್‌ಗಯಾ...’, ‘ಜಯ ಹೋ...’ ಮುಂತಾದ ಹಾಡುಗಳಿಗೆ ಪ್ರೇಕ್ಷಕರು ಹೆಜ್ಜೆ ಹಾಕಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದ ಉತ್ತರ ಮತ್ತು ದಕ್ಷಿಣ ಕೊರಿಯಾದ ಕ್ರೀಡಾಪಟುಗಳು ಸಮಾರೋಪ ಸಮಾರಂಭದಲ್ಲೂ ಐಕ್ಯವನ್ನು ಮೆರೆದರು. ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಭಾರತದ ಧ್ವಜ ಹಿಡಿದು ಮುಂದೆ ಸಾಗಿದರು. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್‌ ಬಾಕ್‌ ಮುಖ್ಯ ಅತಿಥಿಯಾಗಿದ್ದರು. ಏಷ್ಯಾ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಶೇಕ್‌ ಅಹಮ್ಮದ್‌ ಅಲ್‌ ಫಹಾದ್‌ ಅಲ್‌ ಹಮ್ಮದ್‌ ಅಲ್‌ ಸಾಬಾ ಅವರು ಕ್ರೀಡಾಕೂಟ ಮುಕ್ತಾಯಗೊಂಡಿರುವುದಾಗಿ ಘೋಷಿಸಿದರು. ‘ಜಕಾರ್ತಗೆ ಧನ್ಯವಾದಗಳು. ನಿನ್ನನ್ನು ತೊರೆದು ಹೋಗಲು ಬೇಸರವಾಗುತ್ತದೆ. ಆದರೆ ಏನು ಮಾಡಲಿ ನಾವೆಲ್ಲರೂ ಈ ಸುಂದರ ನಾಡನ್ನು ತೊರೆದು ನಮ್ಮ ನಾಡಿಗೆ ಹೋಗಲೇಬೇಕಾಗಿದೆ’ ಎಂದು ಅವರು ಭಾವುಕರಾಗಿ ನುಡಿದರು. ಮುಂದಿನ ಕ್ರೀಡಾಕೂಟಕ್ಕೆ ಬರುವಂತೆ ಚೀನಾದ ಜಾಕ್‌ ಮಾ ಕಂಪೆನಿಯ ಸ್ಥಾಪಕ ಅಲಿಬಾಬಾ ಮತ್ತು ಒಲಿಂಪಿಕ್‌ ಚಾಂಪಿಯನ್‌ ಈಜುಪಟು ಸೂನ್ ಯಾಂಗ್‌ ಅವರು ಆಹ್ವಾನ ನೀಡಿದರು. ಜಕಾರ್ತ: ಈ ಬಾರಿ 132 ಚಿನ್ನದೊಂದಿಗೆ 289 ಪದಕಗಳನ್ನು ಬಗಲಿಗೆ ಹಾಕಿಕೊಂಡಿರುವ ಚೀನಾ ಮುಂದಿನ ಏಷ್ಯನ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿದೆ. ಚೀನಾದ ಹ್ಯಾಂಗ್‌ಜು ನಗರದ ಸ್ಪೋರ್ಟ್ಸ್‌ ಪಾರ್ಕ್‌ ಕ್ರೀಡಾಂಗಣದಲ್ಲಿ 2022ರ ಸೆಪ್ಟೆಂಬರ್‌ 10ರಿಂದ 25ರ ವರೆಗೆ ಸ್ಪರ್ಧೆಗಳು ನಡೆಯಲಿವೆ. ಚೀನಾ ಈ ಹಿಂದೆ ಎರಡು ಬಾರಿ ಏಷ್ಯನ್‌ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದೆ. 1990ರಲ್ಲಿ ಬೀಜಿಂಗ್‌ನಲ್ಲಿ ಮತ್ತು 2010ರಲ್ಲಿ ಗ್ವಾಂಗ್ಜುನಲ್ಲಿ ಕೂಟ ನಡೆದಿತ್ತು.
OSCAR-2019
ಅರೆ! ಇದೇನಿದು ಭೀಮಾ ನದಿಯಲ್ಲಿಯೂ ಬೋಟ್‌ಗಳಿವೆಯೇ? ಕಡಲು ತೀರದಂತೆ ಇಲ್ಲಿಯೂ ಮೀನುಗಾರಿಕೆ ನಡೆಯುತ್ತದೆಯೇ? ಎಂದು ಹುಬ್ಬೇರಿಸಬೇಡಿ. ಇವು ಮೀನುಗಾರಿಕೆಯ ಬೋಟ್‌ಗಳಲ್ಲ. ಬದಲಿಗೆ ಅನಧಿಕೃತವಾಗಿ ಭೀಮಾ ನದಿಯಲ್ಲಿ ಮರಳು ತೆಗೆಯುವ ಯಾಂತ್ರೀಕೃತ ಬೋಟ್‌ಗಳು. ಮಹಾರಾಷ್ಟ್ರದಲ್ಲಿ ಮಳೆ ಸುರಿದಿದ್ದರಿಂದ ಹಾಗೂ ಉಜನಿ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಭೀಮಾ ನದಿ ತುಂಬಿ ಹರಿಯುತ್ತಿದೆ. ಭೀಮಾ ನದಿಯಲ್ಲಿ ಈ ಸಂದರ್ಭದಲ್ಲಿ ಮರಳು (ಉಸುಕು) ತೆಗೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಈ ಬೋಟ್‌ಗಳನ್ನು ದಡಕ್ಕೆ ತಂದು ಲಂಗರು ಹಾಕಿ ನಿಲ್ಲಿಸಲಾಗಿದೆ. ಭೀಮಾ ತೀರದ ಸಿಂದಗಿ ಹಾಗೂ ಇಂಡಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಈ ಬೋಟ್‌ಗಳು ಕಾಣಸಿಗುತ್ತಿವೆ. ಭೀಮೆಯೂ ಸೇರಿದಂತೆ ನದಿಗಳಲ್ಲಿ ಯಾಂತ್ರೀಕೃತ ಬೋಟ್ ಬಳಸಿ ಮರಳು ತೆಗೆಯುವುದನ್ನು ನಿಷೇಧಿಸಲಾಗಿದೆ. ಆದರೆ, ಭೀಮಾ ನದಿಯಲ್ಲಿ ಬೇಸಿಗೆಯಲ್ಲಿ ಜೆಸಿಬಿಯಂತಹ ಬೃಹತ್ ಯಂತ್ರಗಳಿಂದ ಹಾಗೂ ನದಿಯಲ್ಲಿ ನೀರು ಹರಿವು ಇರುವಾಗ ಬೋಟ್‌ಗಳಿಂದ ಅನಧಿಕೃತವಾಗಿ ಮರಳು ತೆಗೆಯುವುದು ಸರ್ವೆಸಾಮಾನ್ಯ ಎಂಬಂತಾಗಿದೆ. `ಭೀಮಾ ತೀರದಲ್ಲಿ ಹೀಗೆ ಅನಧಿಕೃತವಾಗಿ ಮರಳು ತೆಗೆಯುವ ದೊಡ್ಡ ಮಾಫಿಯಾ ಇದೆ. ಪಕ್ಕದಲ್ಲಿಯೇ ಮಹಾರಾಷ್ಟ್ರದ ಸೊಲ್ಲಾಪುರ ನಗರ ಇರುವುದರಿಂದ ಹಾಗೂ ವಿಜಾಪುರ-ಗುಲ್ಬರ್ಗ ಜಿಲ್ಲೆಗಳ ಪಟ್ಟಣಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಭೀಮಾ ನದಿಯ ಮರಳನ್ನೇ ಅವಲಂಬಿಸಿರುವುದರಿಂದ ಅನಧಿಕೃತ ಮರಳು ಗಣಿಗಾರಿಕೆ ಹೆಚ್ಚಿದೆ. ಇಲ್ಲಿ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ~ ಎಂದು ಭೀಮಾ ತೀರದ ಜನತೆ ಹೇಳುತ್ತಾರೆ. ನದಿಯಲ್ಲಿ ಬೋಟ್ ಬಳಸಿದರೆ ಅದರಿಂದ ಇಂಧನ ಸೋರಿ ಜಲಚರ ಪ್ರಾಣಿಗಳಿಗೆ ಅಪಾಯವಾಗುತ್ತದೆ. ನೀರಿನ ಹರಿವು ಕಡಿಮೆ ಇರುವಾಗ ಬೋಟ್ ಬಳಕೆಯಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ ಎಂಬ ಆ ಭಾಗದ ರೈತರ ಆತಂಕಕ್ಕೆ ಶಾಶ್ವತ ಪರಿಹಾರ ದೊರೆತಿಲ್ಲ. ಉಮರಾಣಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಈ ವಿಷಯವೇ ಪ್ರಮುಖ ಚರ್ಚಾ ವಸ್ತುವಾಗಿತ್ತು. `ಭೀಮಾ ನದಿಯಲ್ಲಿ ಈಗ ಮರಳು ತೆಗೆಯಲು ಯಾರಿಗೂ ಟೆಂಡರ್ ನೀಡಿಲ್ಲ. ಆದರೂ ಅಕ್ರಮವಾಗಿ ಮರಳು ಸಾಗಿಸುವುದು ನಿಂತಿಲ್ಲ. ಮರಳು ವಾಹನಗಳ ಹಾವಳಿಯಿಂದ ರಸ್ತೆಗಳೆಲ್ಲ ಹಾಳಾಗಿವೆ. ಇನ್ನು 15 ದಿನಗಳಲ್ಲಿ ಇದನ್ನು ತಡೆಯದಿದ್ದರೆ ಬೀದಿಗಿಳಿದು ಹೋರಾಡುತ್ತೇವೆ~ ಎಂದು ಸಾರ್ವಜನಿಕರು ಸಭೆಯಲ್ಲಿದ್ದ ಶಾಸಕ ವಿಠ್ಠಲ ಕಟಕಧೋಂಡ ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. `ಇಂಡಿ ತಾಲ್ಲೂಕಿನ ದೇವಣಗಾಂವ, ಶಂಭೇವಾಡ, ಕಡ್ಲೇವಾಡದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯುವಂತೆ ನಾವು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಶಾಸಕ ರಮೇಶ ಭೂಸನೂರ ನಮ್ಮ ಹೋರಾಟ ಬೆಂಬಲಿಸಿ ಹೋಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ~ ಎಂದು ಅಲ್ಲಿಯ ಜನ ದೂರುತ್ತಿದ್ದಾರೆ. `ಉಮರಾಣಿ, ಟಾಕಳಿ, ಮರಗೂರ, ಧೂಳಖೇಡ, ಹಲಸಂಗಿ, ಬರಗುಡಿ, ಪಡನೂರ, ಅಣಚಿ, ಖೇಡಗಿ, ರೋಡಗಿ, ಭೂಯ್ಯಾರ, ತದ್ದೇವಾಡ, ಶಿರಗೂರ ಖಾಲ್ಸಾ, ಹಿಂಗಣಿ, ಅಗರಖೇಡ ಸೇರಿದಂತೆ ಭೀಮಾ ನದಿ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಾಮಾನ್ಯ~ ಎಂದು ಸಾರ್ವಜನಿಕರು ಹೇಳುತ್ತಾರೆ. `ಅಕ್ರಮ ಮರಳು ಗಣಿಗಾರಿಕೆ ತಡೆಯಲು ಪೊಲೀಸ್ ಇಲಾಖೆಯೊಂದಿಗೆ ನಾವು ಸಾಕಷ್ಟು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ ಮೂರು ಮೊಕದ್ದಮೆ ದಾಖಲಿಸಿದ್ದು, 6.30 ಲಕ್ಷ ದಂಡ ವಸೂಲಿ ಮಾಡಿದ್ದೇವೆ. ಪ್ರವಾಹ ಕಡಿಮೆಯಾದ ನಂತರ ಕಾರ್ಯಾಚರಣೆ ಮುಂದುವರೆಸುತ್ತೇವೆ~ ಎಂಬುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ನಂಜುಂಡಸ್ವಾಮಿ ವಿವರಣೆ. `ಜಿಲ್ಲೆಯ ಭೀಮಾ ನದಿಯ ಮರಳಿನಿಂದ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ ಸರಾಸರಿ 2.50 ಕೋಟಿ ರೂಪಾಯಿ ರಾಜಸ್ವ ಬರುತ್ತಿದೆ. ಮರಳು ತೆಗೆಯಲು ಈಗ ಯಾವುದೇ ಟೆಂಡರ್ ಆಗಿಲ್ಲ. 2011ರ ಹೊಸ ಮರಳು ನೀತಿಯಿಂದಾಗಿ ನೀರು ಇರುವ ಪ್ರದೇಶದಲ್ಲಿ ಮರಳು ತೆಗೆಯಲಿಕ್ಕೆ ಟೆಂಡರ್ ನೀಡಲು ಅವಕಾಶ ಇಲ್ಲ. ಜೆಸಿಬಿ ಮತ್ತು ಯಾಂತ್ರೀಕೃತ ಬೋಟ್ ಬಳಸಿ ಮರಳು ತೆಗೆಯುವಂತಿಲ್ಲ. ಇಂಡಿ ಮತ್ತು ಸಿಂದಗಿ ತಾಲ್ಲೂಕಿನಲ್ಲಿ 13 ಬ್ಲಾಕ್ ಹೊರತು ಪಡಿಸಿದರೆ ಉಳಿದೆಡೆ ಸರಣಿ ಬ್ಯಾರೇಜ್‌ಗಳಿರುವುದರಿಂದ ವರ್ಷದ 365 ದಿನವೂ ನೀರು ಇರುತ್ತದೆ. ಅಲ್ಲಿ ಟೆಂಡರ್ ನೀಡಲು ಅವಕಾಶ ಇಲ್ಲ~ ಎನ್ನುತ್ತಾರೆ ಅವರು. `ಭೀಮಾ ನದಿ ತೀರದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದವರನ್ನು ಮಟ್ಟ ಹಾಕಿದ್ದೇವೆ. ದಾಳಿಯ ಕಾಲಕ್ಕೆ ಸಿಕ್ಕ ಬೋಟ್‌ಗಳನ್ನು ಒಡೆದು ಹಾಕಿದ್ದೇವೆ. ಟ್ರ್ಯಾಕ್ಟರ್, ಜೆಸಿಬಿ ಮತ್ತಿತರ ಯಂತ್ರಗಳನ್ನು ಜಪ್ತಿ ಮಾಡಿದ್ದು, ನದಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ~ ಎಂದು ಎಸ್ಪಿ ಡಾ.ಡಿ.ಸಿ. ರಾಜಪ್ಪ ಹೇಳಿದರು.
OSCAR-2019
ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಜಂಟಿ ಆಯುಕ್ತ (ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ಅವರಿಗೆ ಬೆದರಿಕೆ ಪತ್ರ ಬರೆದಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಆರೋಗ್ಯ ವಿಭಾಗದ ಅಧಿಕಾರಿಗಳು ಮತ್ತು ನೌಕರರು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ‘ದಕ್ಷ ಅಧಿಕಾರಿಗಳಿಗೆ ರಕ್ಷಣೆ ಕೊಡಿ, ಬೆದರಿಕೆ ಪತ್ರ ಬರೆದವರನ್ನು ಬಂಧಿಸಿ’ ಎಂಬ ಘೋಷಣೆಗಳನ್ನು ಕೂಗುತ್ತ ಪಾಲಿಕೆ ಆವರಣದಲ್ಲಿ ಪ್ರತಿಭಟನಾ ಜಾಥಾ ನಡೆಸಿದರು. ಅಧಿಕಾರಿಗಳು ಮತ್ತು ನೌಕರರ ಸಂಘದ ನಿರ್ದೇಶಕ ಎ.ಅಮೃತರಾಜ್‌ ಮಾತನಾಡಿ, ‘ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವವರಿಗೆ ಜಂಟಿ ಆಯುಕ್ತರು ಇತ್ತೀಚೆಗೆ ನೋಟಿಸ್‌ಗಳನ್ನು ನೀಡಿದ್ದರು. ಇದರಿಂದ ಅಸಮಾಧಾನಗೊಂಡಿರುವವರೇ ಈ ಪತ್ರ ಕಳುಹಿಸಿದ್ದಾರೆ. ಇಂತಹ ಕೃತ್ಯ ಅಧಿಕಾರಿಗಳ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಕಿಡಿಗೇಡಿಗಳಿಗೆ ಶಿಕ್ಷೆಯಾದರೆ ಮಾತ್ರ ಇಂತಹ ಪ್ರಕರಣಗಳು ಮರುಕಳಿಸುವುದಿಲ್ಲ’ ಎಂದರು. ‘ಆರೋಗ್ಯ ಅಧಿಕಾರಿಗಳು ತ್ಯಾಜ್ಯ ವಿಂಗಡಣೆ ಮತ್ತು ವಾಣಿಜ್ಯ ಮಳಿಗೆಗಳ ತಪಾಸಣೆ ನಡೆಸಬೇಕಾಗುತ್ತದೆ. ಮಾರುಕಟ್ಟೆಗಳಲ್ಲಿ 40 ಮೈಕ್ರಾನ್‌ಗಿಂತ ತೆಳುವಾದ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪೊಲೀಸರು ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು. ‘ಕಿಡಿಗೇಡಿಯನ್ನು ಬಂಧಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಮೇಯರ್‌ ಒತ್ತಾಯಿಸಬೇಕು’ ಎಂದು ಸಂಘದ ಮತ್ತೊಬ್ಬ ನಿರ್ದೇಶಕ ಚ.ನಾಗರಾಜ ಹೇಳಿದರು. ಘನತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಮಾಡದ ಅಂಗಡಿ ಮಾಲೀಕರಿಗೆ ಕೆಲ ದಿನಗಳ ಹಿಂದೆ ಖಾನ್‌ ನೋಟಿಸ್‌ ನೀಡಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿಯವವರಿಗೆ ಪಾಲಿಕೆ ಇತ್ತೀಚೆಗೆ ಭಾರಿ ದಂಡ ವಿಧಿಸಿತ್ತು.
OSCAR-2019
ಮ್ಯಾಡ್ರಿಡ್,ಮೇ 31-ಭದ್ರತಾ ಸವಾಲುಗಳನ್ನು ಎದುರಿಸುವ ಭಾರತ ಮತ್ತು ಸ್ಪೇನ್ ಭಯೋತ್ಪಾದನೆ ನಿಗ್ರಹ ಹೋರಾಟಕ್ಕೆ ದ್ವಿಪಕ್ಷೀಯ ಸಹಕಾರವನ್ನು ಬಲಗೊಳಿಸುವ ಅಗತ್ಯವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆರು ದಿನಗಳ ಕಾಲ ವಿದೇಶ ಪ್ರವಾಸ ಕೈಗೊಂಡಿರುವ ಮೋದಿ, ತಮ್ಮ ಎರಡನೆ ಹಂತವಾಗಿ ಸ್ಪೇನ್ ರಾಜಧಾನಿ ಮ್ಯಾಡ್ರಿಡ್‍ನಲ್ಲಿರುವ ಮ್ಯಾಂಕ್‍ಲಾವ ಅರಮನೆಯಲ್ಲಿ ರಾಷ್ಟ್ರಾಧ್ಯಕ್ಷ ಮಾರಿಯಾನೋ ರಜೇಯ್ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು. ಉಭಯ ದೇಶಗಳಿಗೆ ಭಯೋತ್ಪಾದಕರಿಂದ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಪಿಡುಗನ್ನು ಮಟ್ಟ ಹಾಕಲು ದ್ವಿಪಕ್ಷೀಯ ಸಹಕಾರವನ್ನು ಸದೃಢಗೊಳಿಸುವ ಅಗತ್ಯವನ್ನು ಈ ಸಂದರ್ಭದಲ್ಲಿ ಮೋದಿ ಸ್ಪೇನ್ ಮುಖಂಡರ ಗಮನಕ್ಕೆ ತಂದರು. ಚೆನ್ನೈ, ಫೆ.17– ಮುಖ್ಯಮಂತ್ರಿಯಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ ಯಡಪ್ಪಾಡಿ ಪಳನಿಸ್ವಾಮಿಯವರಿಗೆ ನಾಳೆ ಅಗ್ನಿ ಪರೀಕ್ಷೆ. ಸರ್ಕಾರ ರಚಿಸಲು ರಾಜ್ಯಪಾಲ ವಿದ್ಯಾಸಾಗರ್ ರಾವ್ ನೀಡಿರುವ ಆಹ್ವಾನದ ಮೇರೆಗೆ
OSCAR-2019
ಚೆನ್ನೈ, ಫೆ.10 – ತ್ರಿಶಂಕು ರಾಜಕೀಯ ಸ್ಥಿತಿಗೆ ಸಿಲುಕಿರುವ ತಮಿಳುನಾಡಿಗೆ ಯಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಬಗ್ಗೆ ರಾಜ್ಯಪಾಲ ವಿದ್ಯಾಸಾಗರರಾವ್ ತೀವ್ರ ಗೊಂದಲಕ್ಕೆ ಸಿಲುಕಿರುವಾಗಲೇ ಸಿಎಂ ಹುದ್ದೆ ಮೇಲೆ ಚೆನ್ನೈ, ಫೆ.9- ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಸಾವಿನ ತನಿಖೆ ನಡೆಸಲು ಆಯೋಗ ರಚಿಸುವಂತೆ ಉಸ್ತುವಾರಿ ಮುಖ್ಯಮಂತ್ರಿ ಓ.ಪನ್ವೀರ್‍ಸೆಲ್ವಂ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಸೂಚನೆ ಚೆನ್ನೈ, ಫೆ.9-ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳಿಂದ ಅಲ್ಲೋಲ-ಕಲ್ಲೋಲವಾಗಿರುವ ತಮಿಳುನಾಡಿನಲ್ಲಿ ಮುಂದೇನಾಗಲಿದೆ ಎಂಬ ಕುತೂಹಲ ಇಡೀ ದೇಶವನ್ನು ತುದಿಗಾಲಲ್ಲಿ ನಿಲ್ಲಿಸಿದೆ. 125ಕ್ಕೂ ಹೆಚ್ಚು ಶಾಸಕರ ಬೆಂಬಲ ತಮಗಿದೆ ಎಂದು ಘೋಷಿಸಿಕೊಂಡಿರುವ ಚೆನ್ನೈ, ಫೆ.8-ತಮ್ಮ ವಿರುದ್ಧ ಹಠಾತ್ ಬಂಡಾವೆದ್ದು ತಮ್ಮ ಹಾದಿಗೆ ಮುಳ್ಳಾಗಿರುವ ಓ. ಪನ್ನೀರ್ ಸೆಲ್ವಂ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲು ಇಂದು ನಿಯೋಜಿತ ಮುಖ್ಯಮಂತ್ರಿ ವಿ.ಕೆ. ಶಶಿಕಲಾ ಚೆನ್ನೈ, ಫೆ. 8- ತಮಿಳುನಾಡಿನ ಜನರು ಬಯಸಿದರೆ ನಾನು ರಾಜೀನಾಮೆ ಹಿಂದಕ್ಕೆ ಪಡೆಯುತ್ತೇನೆ. ಜಯಲಲಿತಾ ಸಾವಿನ ಬಗ್ಗೆ ನಾನು ತನಿಖೆ ನಡೆಸುತ್ತೇನೆ. ಇದರ ತನಿಖೆಗಾಗಿ ಹೈಕೋರ್ಟ್ ನಿವೃತ್ತ
OSCAR-2019
ಪ್ರತಿ ಕೆಲವು ದಿನಗಳಿಗೊಮ್ಮೆ ಮಾರುಕಟ್ಟೆಯಲ್ಲಿ ಹೊಸ ಹೊಸ ಕೂದಲ ರಕ್ಷಣೆಯ ಉತ್ಪನ್ನಗಳು ಬಿಡುಗಡೆಯಾಗುತ್ತವೆ.ಅವುಗಳು ಕೂದಲ ಮೇಲೆ ಅದ್ಭುತವಾದ ಕೆಲಸವನ್ನು ಮಾಡಿ ಕೂದಲಿನ ಸಮಸ್ಯೆಗಳನ್ನು ದೂರ ಮಾಡುತ್ತವೆ ಎಂದು ಅವನ್ನು ಪ್ರತಿಸಿಬಿಂಬಿಸುತ್ತಾರೆ.ಆದರೆ ನೀವು ಹೊರಗೆ ಅಂಗಡಿಗಳಿಂದ ಖರೀದಿಸಿದ ಉತ್ಪನ್ನಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಪದಾರ್ಥಗಳು ನಿಮ್ಮ ಅಡುಗೆಮನೆಗಳಲ್ಲಿ ಈಗಾಗಲೇ ಲಭ್ಯವಿದೆ ಎಂಬ ವಿಷಯ ನಿಮಗೆ ತಿಳಿದಿದೆಯೇ? ಹೌದು,ಹಿಂದಿನಕಾಲದಿಂದ ವಿಶ್ವಾದ್ಯಂತ ಮಹಿಳೆಯರು ಸುಂದರವಾದ ಕೂದಲನ್ನು ಪಡೆಯಲು ಮನೆಯ ಪರಿಹಾರಗಳನ್ನೇ ಬಳಸಿದ್ದಾರೆ. ಆ ಸೌಂದರ್ಯದ ರಹಸ್ಯಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ತಿಳಿಸುತ್ತಾ ಬಂದಿದ್ದಾರೆ.ಜನಪ್ರಿಯವಾಗಿ 'ಅಜ್ಜಿಯ ಗುಟ್ಟುಗಳು ' ಎಂದೇ ಕರೆಯಲ್ಪಡುವ ಸೌಂದರ್ಯದ ಗುಟ್ಟುಗಳು ಮಹಿಳೆಯರು ನೈಸರ್ಗಿಕವಾಗಿ ಸುಂದರವಾದ ಕೂದಲನ್ನು ಪಡೆದುಕೊಳ್ಳಲು ಸಹಾಯಕಾರಿಯಾಗಿವೆ. ಈ ಗುಟ್ಟುಗಳಲ್ಲಿ ಒಂದು ಅಡುಗೆ ಸೋಡಾ.ನೀವು ಈಗಾಗಲೇ ಇದರ ಬಗ್ಗೆ ತಿಳಿದಿರುತ್ತೀರಿ ಅಲ್ಲವೇ? ಅಡುಗೆ ಸೋಡಾ ನಿಮ್ಮ ಕೂದಲಿನ ಮೌಲ್ಯವನ್ನು ಹೆಚ್ಚಿಸುವ ಒಳ್ಳೆಯ ಕೂದಲು ರಕ್ಷಕ ಉತ್ಪನ್ನವಾಗಿದೆ.ಇದು ನಿಮ್ಮ ಕೂದಲನ್ನು ಆರೋಗ್ಯಕರ ಮತ್ತು ಬಲವಾಗುವಂತೆ ಮಾಡಿ ನಿಮಗೆ ಅದ್ಭುತವಾಗಿ ಕಾಣುವ ಕೂದಲನ್ನು ನೀಡಲು ಸಹಾಯ ಮಾಡುತ್ತದೆ. ನಿಮ್ಮ ಕೂದಲಿಗೆ ಇದು ಹಲವು ರೀತಿಗಳಿಂದ ಲಾಭದಾಯಕವಾಗಿದ್ದರೂ,ವಿಶೇಷವಾಗಿ ಕೂದಲನ್ನು ನಯಗೊಳಿಸುವ ಇದರ ಸಾಮರ್ಥ್ಯವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ.ಪ್ರಮುಖವಾಗಿ ಇದನ್ನು ಹೇರ್ ಕಂಡಿಷನರ್ ಆಗಿ ಬಳಸಿದಾಗ, ಅದು ತುಂಬಾ ಚೆನ್ನಾಗಿ ಕೂದಲನ್ನು ಕಂಡೀಷನಿಂಗ್ ಮಾಡಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ . ಇದು ಕೇವಲ ನಿಮ್ಮ ಕೂದಲನ್ನು ಸುಸ್ಥಿತಿಯಲ್ಲಿಟ್ಟು ಅದರ ತೇವಾಂಶವನ್ನು ಕಾಪಾಡುವುದಷ್ಟೇ ಅಲ್ಲದೆ ಕೂದಲಿನ ವಿನ್ಯಾಸವನ್ನು ಮೃದುಗೊಳಿಸುತ್ತದೆ ಮತ್ತು ಕೂದಲು ಒಣಗುವುದನ್ನು ತಡೆಗಟ್ಟುತ್ತದೆ .ಇಂದು ಬೋಲ್ಡ್ ಸ್ಕೈ ಅಲ್ಲಿ ,ಅಡುಗೆ ಸೋಡಾದ ಹೇರ್ ಕಂಡಿಷನರ್ ಅನ್ನು ನೀವೇ ಹೇಗೆ ತಯಾರಿಸಿಕೊಳ್ಳಬಹುದೆಂದು ತಿಳಿಸುತ್ತೇವೆ .ಇದು ನಿಮ್ಮ ಕೂದಲಲ್ಲಿ ತೇವಾಂಶವನ್ನು ಹಾಗೆಯೇ ಉಳಿಸುತ್ತದೆ ಮತ್ತು ಅದರ ಆರೋಗ್ಯ ಮತ್ತು ನೋಟವನ್ನು ಹೆಚ್ಚಾಗುವಂತೆ ಮಾಡುತ್ತದೆ. ನಾವು ಕೂದಲಿನ ತೇವಾಂಶವನ್ನು ಉಳಿಸಲು ಅಡುಗೆ ಸೋಡಾ ಏಕೆ ಬಳಸಬೇಕು? ಅಡುಗೆ ಸೋಡಾವು ನೆತ್ತಿಯ ಬುಡದಲ್ಲಿರುವ ವಿಷಕಾರಿ ಅಂಶಗಳನ್ನು,ಕಲ್ಮಶಗಳನ್ನು,ಸತ್ತ ಚರ್ಮದಕೋಶಗಳನ್ನು,ನೀವು ತಲೆಗೆ ಉಪಯೋಗಿಸುವ ಹಲವು ರೀತಿಯ ಉತ್ಪನ್ನಗಳಿಂದ ಉಂಟಾದ ಶೇಖರಣೆಯನ್ನು ತೆಗೆದುಹಾಕುವ ಸಂಯುಕ್ತಗಳನ್ನು ಒಳಗೊಂಡಿದೆ. ಇದು ನಿಮ್ಮ ಕೂದಲಿಗೆ ಕಳೆದುಹೋದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ವಾಣಿಜ್ಯ ಕೂದಲು-ಆರ್ಧ್ರಕ ಉತ್ಪನ್ನಗಳಾದ ಮೌಸ್ಸ್, ಸೀರಮ್, ಕ್ರೀಮ್ ಮುಂತಾದವುಗಳಿಗೆ ಹೋಲಿಸಿದಾಗ,ಅಡುಗೆ ಸೋಡಾ ಸುರಕ್ಷಿತವಾಗಿದೆ ಮತ್ತು ಇದರಲ್ಲಿ ಯಾವುದೇ ರೀತಿಯ ಹಾನಿಕಾರಕ ರಾಸಾಯನಿಕ ವಸ್ತುಗಳು ಇಲ್ಲದೇ ಇರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ.ಅದಕ್ಕಾಗಿಯೇ ಕೂದಲನ್ನು ಶುಷ್ಕತೆಯಿಂದ ಮತ್ತು ತಲೆಹೊಟ್ಟಿನಿಂದ ಕಾಪಾಡಿ ಒಳ್ಳೆಯ ತೇವಾಂಶವನ್ನು ಕಾಪಾಡಿಕೊಳ್ಳುವಂತೆ ಮಾಡಲು ತಲೆಗೂದಲಿಗೆ ಅಡಿಗೆ ಸೋಡಾವನ್ನು ಬಳಸಲು ಶಿಫಾರಸು ಮಾಡಲಾಗಿದೆ. *ಯಾವುದೇ ಸೀರಮ್ ಅಥವಾ ಸ್ಟೈಲಿಂಗ್ ಇಲ್ಲದೆ ನಿಮ್ಮ ಕೂದಲಿಗೆ ಒಳ್ಳೆಯ ತೇವಾಂಶವನ್ನು ನೀಡಿ ಅದ್ಭುತವಾಗಿ ಕಾಣುವ ಕೂದಲನ್ನು ಪಡೆಯುವಂತೆ ಮಾಡುವ ಈ ನೈಸರ್ಗಿಕ ಹೇರ್ ಕಂಡಿಷನರ್ ಅನ್ನು ತಿಂಗಳಿಗೊಮ್ಮೆ ಬಳಸಿ. *ಅಡುಗೆ ಸೋಡಾ ನೆತ್ತಿಯ ಮೇಲಿರುವ ಹೆಚ್ಚಾದ ಎಣ್ಣೆಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಾಗಿಯೇ ಇದು ಎಣ್ಣೆಕೂದಲಿನ ಪ್ರಕಾರಕ್ಕೆ ಉತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಬಳಸುವುದರಿಂದ ನಿಮ್ಮ ಜಿಡ್ಡಾದ ಕೂದಲಿನ ಸಮಸ್ಯೆಯಿಂದ ಹೊರಬರಬಹುದು. *ಇದರಲ್ಲಿರುವ ಕೂದಲು ಮತ್ತು ತಲೆಬುರುಡೆ ಸ್ವಚ್ಛಗೊಳಿಸುವ ಸಾಮರ್ಥ್ಯದ ಕಾರಣ ಶಾಂಪೂಗಳಲ್ಲಿ ಇದನ್ನು ಪ್ರಮುಖ ಅಂಶವಾಗಿ ಬಳಸಲಾಗುತ್ತದೆ. ನೆತ್ತಿಯಲ್ಲಿ ನೀವು ಬಳಸಿರುವ ವಿವಿಧ ಉತ್ಪನ್ನಗಳಿಂದಾದ ಶೇಖರಣೆ ಮತ್ತು ಕೊಳೆಯನ್ನು ಇದು ತೆಗೆದುಹಾಕುತ್ತದೆ. *ಅಡುಗೆ ಸೋಡಾದ ಒಳ್ಳೆಯಗುಣವು ಕೂದಲಿನ ದಟ್ಟತೆಯನ್ನು ಹೆಚ್ಚಿಸುತ್ತದೆ ಹಾಗೂ ನಿರ್ಜೀವ ಮತ್ತು ಮಂದವಾಗಿ ಕಾಣುವ ಕೂದಲಿಗೆ ಒಳ್ಳೆಯ ಹೊಳಪನ್ನು ನೀಡುತ್ತದೆ. *ಶಿಲೀಂದ್ರ ನಿರೋಧಕ ಶಕ್ತಿಯಿರುವ ಅಡುಗೆ ಸೋಡಾ ಸಿಟ್ಟು ತರಿಸುವಂತಹ ತಲೆಯ ಹೊಟ್ಟಿಗೆ ಪರಿಣಾಮಕಾರಿಯಾಗಿದೆ.ಇದನ್ನು ಬಳಸುವುದರಿಂದ ನಿಮ್ಮ ತಲೆಯ ಹೊಟ್ಟು ನಿವಾರಣೆಯಾಗುವುದಲ್ಲದೇ ಅದರಿಂದಾದ ತಲೆಯಲ್ಲಿ ಉಂಟಾಗಬಹುದಾದ ಇತರ ಸಮಸ್ಯೆಗಳಾದ ನವೆ ಮತ್ತು ಹೊಟ್ಟನ್ನು ತಡೆಯುತ್ತದೆ. *ನಿಮ್ಮ ಕೂದಲಿಗೆ ಅಡಿಗೆ ಸೋಡಾದಿಂದ ಪ್ರಯೋಜನಕಾರಿಯಾಗಬಲ್ಲ ಅನೇಕ ಮಾರ್ಗಗಳ ಬಗ್ಗೆ ನೀವೀಗ ತಿಳಿದುಕೊಂಡಿದ್ದೀರಾ,ನೀವು ಈಗ ಮಾಡಬೇಕಾದದ್ದು ಏನೆಂದರೆ ಇದನ್ನು ನಿಮ್ಮ ಕೂದಲ ರಕ್ಷಣೆಯಲ್ಲಿ ಒಂದು ಭಾಗವನ್ನಾಗಿ ಉಪಯೋಗಿಸಿ.ಇದನ್ನು ಉಪಯೋಗಿಸಲು ಹಲವು ಮಾರ್ಗಗಳಿವೆ,ಆದರೆ ಸುಲಭವಾದದ್ದು ಎಂದರೆ ಅಡಿಗೆ ಸೋಡಾದ ಹೇರ್ ಕಂಡಿಷನರ್ .ಇದು ತಯಾರಿಸಲು ಸುಲಭ ಮತ್ತು ಹೆಚ್ಚು ಪರಿಣಾಮಕಾರಿಯಾಗಿದೆ. ಆದ್ದರಿಂದ ನಯವಾದ ಮತ್ತು ಒಳ್ಳೆಯ ತೇವಾಂಶವುಳ್ಳ ಕೂದಲನ್ನು ಪಡೆಯಲು ಇದನ್ನು ಪ್ರಯತ್ನಿಸಿ ನೋಡಿ.
OSCAR-2019
ಅಸ್ಸಾಂ,(ಸೆ.14): ಆಸ್ಪತ್ರೆಗೆ ಹೋಗಲು ಸಮರ್ಪಕವಾದ ರಸ್ತೆ ಸಂಪರ್ಕವಿಲ್ಲದೇ ಮಹಿಳೆಯೊಬ್ಬರು ನದಿ ತೀರದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಅಸ್ಸಾಂನ ಮಜುಲಿಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಮಹಿಳೆ ಐಮೋನಿ ಬ್ರಹ್ಮಪುತ್ರ ನದಿ ದಡದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಜುಲಿ ಗ್ರಾಮದಲ್ಲಿ ಇಂತಹ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಬೇರೆಡೆಗೆ ತೆರಳಲು ಸರಿಯಾದ ರಸ್ತೆ ಸಂಪರ್ಕವಿಲ್ಲ. ಇಂದು ಮುಂಜಾನೆ ಹೆರಿಗೆ ನೋವು ಅನುಭವಿಸುತ್ತಿದ್ದ ಐಮೋನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ಮುಂದಿನ ವಾರ ದಿನಾಂಕ ನಿಗದಿ ಮಾಡಿ ವಾಪಸ್ಸು ಕಳಿಸಿದ್ದರು. ಆಸ್ಪತ್ರೆಯಿಂದ ಮನೆಗೆ ಮರಳಿ ಬರುವಾಗ ದಾರಿ ಮಧ್ಯದಲ್ಲೇ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಅಲ್ಲೇ ಇದ್ದ ಮಹಿಳೆಯರ ಸಹಾಯದಿಂದ ಹೆರಿಗೆ ಮಾಡಿಸಲಾಗಿದೆ. ತಾಯಿ ಐಮೋನಿ ದಾರಿಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಗ್ರಾಮಸ್ಥರು ಬಿದಿರಿನಿಂದ ಹೆಣೆದ ಪಲ್ಲಕ್ಕಿಗೆ ಬಟ್ಟೆ ಸುತ್ತಿ ಅದರಲ್ಲಿ ತಾಯಿ ಮತ್ತು ಮಗುವನ್ನು ಮನೆಗೆ ಕರೆದೊಯ್ದಿದ್ದಾರೆ. ಗ್ರಾಮಸ್ಥರ ಸಹಾಯದಿಂದ ದೋಣಿಯ ಮೂಲಕ ನದಿಯನ್ನು ದಾಟಿ ಮನೆ ತಲುಪಿದ್ದಾಳೆ. ಜನ್ಮ ತಳೆದ ಗಂಡು ಮಗುವಿಗೆ ಸಂಗ್ಬಾದಿಕ್​​ ಎಂದು ಹೆಸರಿಟ್ಟಿದ್ದಾರೆ. ಸಂಗ್ಬಾದಿಕ್​​ ಅಂದರೆ ಪತ್ರಕರ್ತ ಎಂಬ ಅರ್ಥ ಬರುತ್ತದೆ. ಇಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲೇನಲ್ಲ. ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಈ ವರ್ಷ ಇಂತಹದೇ ಇನ್ನೊಂದು ಘಟನೆ ನಡೆದಿತ್ತು. ಗರ್ಭಿಣಿ ಮಹಿಳೆಯೊಬ್ಬರು ಇಂತಹದೇ ಪರಿಸ್ಥಿತಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಲ್ಲಿ ಸಮರ್ಪಕ ರಸ್ತೆಗಳು ಮತ್ತು ಆಸ್ಪತ್ರೆಗಳಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
OSCAR-2019
ವಿಜಯಪುರ : ವಿಜಯಪುರದಲ್ಲಿ ಮಾಜಿ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ ಸುದ್ದಿಗೋಷ್ಠಿ ನಡೆಸಿದ್ದಾರೆ. ‘ ಜಿಲ್ಲೆಯಲ್ಲಿ ಮಳೆ ಅಭಾವ, ಈ ಕುರಿತು ಸಚಿವ ಡಿ ಕೆ ಶಿವಕುಮಾರ್ ಹಾಗೂ ಆರೋಗ್ಯ ಸಚಿವ ಶಿವಾನಂದ ಪಾಟೀಲ ಜೊತೆಗೆ ಮಾತನಾಡಿದ್ದೇನೆ. ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಎಲ್ಲ ಕೆರೆ, ಕೆನಾಲ್ ಗಳಿಗೆ ನೀರು ಬಿಡುವಂತೆ ಮನವಿ ಮಾಡಿದ್ದೇನೆ. ಆಲಮಟ್ಟಿ ಡ್ಯಾಂ ನಿಂದ ಕೆನಾಲ್ ಗಳಿಗೆ ನೀರು ಬಿಡುಗಡೆ ಮಾಡುವಂತೆ ಕೇಳಿ ಪತ್ರ ಕೂಡ ಬರೆದಿದ್ದೇನೆ. ನಾಳೆ ಈ ಕುರಿತು ಸಭೆ ಕರೆಯಲಾಗಿದೆ ‘ ಎಂದಿದ್ದಾರೆ. ಬಜೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು ‘ ಹಿಂದಿನ ಬಜೆಟ್ ನ ಎಲ್ಲ ಯೋಜನೆಗಳು ಮುಂದುವರೆಯಲಿವೆ. ಸಿದ್ದರಾಮಯ್ಯ ಮಂಡನೆ ಮಾಡಿದ ಬಜೆಟ್ ಮುಂದುವರೆಯುತ್ತದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ‘ ಎಂದು ಹೇಳಿದ್ದಾರೆ. ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ವಿಚಾರವಾಗಿ ಮಾತನಾಡಿದ ಅವರು ‘ ಉ.ಕರ್ನಾಟಕ ಸಂಪೂರ್ಣ ಅಭಿವೃದ್ದಿ ಆಗಬೇಕು. ಬಹಳ ಕಷ್ಟಪಟ್ಟು ಅಖಂಡ ಕರ್ನಾಟಕ ನಿರ್ಮಾಣ ಮಾಡಲಾಗಿದೆ. ಇದು ಪ್ರತ್ಯೇಕವಾಗೋದು ಸರಿಯಲ್ಲ. ನಾವು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡಲ್ಲ ‘ ಎಂದರು. ಪ್ರತ್ಯೇಕ ಲಿಂಗಾಯತ ವಿಚಾರವಾಗಿ ಮಾತನಾಡಿದ ಎಂ.ಬಿ ಪಾಟೀಲ್ ‘ ಲಿಂಗಾಯತ ಅನ್ನೋದು ನಮ್ಮ ಅಸ್ಮಿತೆಯ ವಿಚಾರ. ಲಿಂಗಾಯತ ಅನ್ನೋದು ಜೈನ, ಬೌದ, ಶಿಖ್ ತರ ಪ್ರತ್ಯೇಕ ಧರ್ಮ. ಈ ಬಗ್ಗೆ ಬೇರು ಮಟ್ಟದಿಂದ ಜಾಗೃತಿ ಮೂಡಿಸಲಿದ್ದೇವೆ. ವೀರಶೈವ ಸ್ವತಂತ್ರ ಧರ್ಮವಾದ್ರೆ ಅವ್ರು ಮುಂದುವರೆಸಿಕೊಂಡು ಹೋಗಲಿ. ಪ್ರತ್ಯೇಕ ವೀರಶೈವ ಮಾಡಿಕೊಳ್ಳಲಿ. ಅವರ ಬಗ್ಗೆ ನಮಗೆ ಗೌರವವಿದೆ. ಸಧ್ಯ ಪ್ರತ್ಯೇಕ ಲಿಂಗಾಯತ ಹೋರಾಟ ಮುಂದುವರೆಯುತ್ತದೆ ‘ ಎಂದಿದ್ದಾರೆ. ಲಿಂಗಾಯತ ಹೋರಾಟದಿಂದ ಚುನಾವಣೆ ಮೇಲೆ ಪರಿಣಾವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ‘ ಲಿಂಗಾಯತ ಹೋರಾಟದಿಂದ ಯಾವುದೇ ಎಫೆಕ್ಟ ಆಗಿಲ್ಲ. ಅಹಿಂದ ಅಭ್ಯರ್ಥಿಗಳಿಗಿಂತ ಲಿಂಗಾಯತ ಅಭ್ಯರ್ಥಿಗಳು ಹೆಚ್ಚಾಗಿ ಗೆದ್ದು ಬಂದಿದ್ದಾರೆ. ಯಾವ ಕಾರಣದಿಂದ ಯಾರು, ಯಾರು ಸೋತಿದ್ದಾರೆ ಅನ್ನೋದರ ಬಗ್ಗೆ ಪಕ್ಷದ ಒಳಗೆ ಚರ್ಚೆಯಾಗಲಿದೆ. ಅಲ್ಲಿ ನಾವು ಕೂಡ ನಮ್ಮ ವಿಚಾರ ಮಂಡಣೆ ಮಾಡಲಿದ್ದೇವೆ ‘ ಎಂದಿದ್ದಾರೆ.
OSCAR-2019
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಗೆ ಟಾಲಿವುಡ್ ಮಿಲ್ಕಿ ಬ್ಯೂಟಿ ತಮನ್ನ ಬರಲಿದ್ದರೆ. ಯಶ್-ತಮನ್ನಾ ಕೆಜಿಫ್ ಸ್ಪೆಷಲ್ ಸಾಂಗ್‌ನಲ್ಲಿ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಟಾಲಿವುಡ್ ನಲ್ಲಿ ಹೆಸರು ಮಾಡಿರುವ ತಮನ್ನ ಈಗ ಸ್ಯಾಂಡಲ್ ವುಡ್ ಗೆ ಕಾಲಿಡಲಿದ್ದಾರೆ. ಹೌದು . 1970ರಲ್ಲಿ ತೆರೆ ಕಂಡ ‘ಪರೋಪಕಾರಿ’ ಚಿತ್ರದಲ್ಲಿನ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಕೆಜಿಎಫ್ ಚಿತ್ರದಲ್ಲಿ ರಿಕ್ರಿಯೇಟ್ ಮಾಡಲಾಗಿದೆ. ಈ ಹಾಡಿಗೆ ಸ್ಟಾರ್ ನಟಿಯರನ್ನೇ ಕರೆ ತರಲು ಮುಂದಾಗಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಇದೇನು ಮೊದಲ ಬಾರಿಗೆ ತಮನ್ನಾ ಸ್ಯಾಂಡಲ್ ವುಡ್​ ಗೆ ಬರುತ್ತಿಲ್ಲ ಈಗಾಗಲೇ ನಿಖಿಲ್ ಅಭಿನಯದ ಜಾಗ್ವರ್ ಚಿತ್ರದಲ್ಲೂ ತಮನ್ನಾ ಸ್ಟಪ್ ಹಾಕಿ ಹೋಗಿದ್ದರು, ಈಗ ಮತ್ತೊಂಮ್ಮೆ ಯಶ್ ಜೊತೆ ಹೆಜ್ಜೆ ಹಾಕಲು ಬರುತ್ತಿದ್ದರೆ. ಅದು ಜಯಲಲಿತ ಸೊಂಟ ಬಳುಕಿಸಿ ಹೆಜ್ಜೆ ಹಾಕಿದ್ದ ಜೋಕೆ ನಾನು ಬಳ್ಳಿಯ ಮಿಂಚು ಹಾಡಿಗೆ ಇದೀಗ ತಮನ್ನಾ ಹೆಜ್ಜೆ ಹಾಕುತ್ತಿದ್ದಾರೆ. ಕಾಜಲ್ ಅಗರವಾಲ್, ಲಕ್ಷ್ಮಿ ರೈ, ತಮನ್ನಾ ಭಾಟಿಯಾ ಸೇರಿದಂತೆ ಮತ್ತಿರರ ಸ್ಟಾರ್ ನಟಿಯರ ಹೆಸರುಗಳು ಕೇಳಿಬಂದಿದ್ದವು. ಆದ್ರೆ ಈಗ ಫೈನಲ್ ಆಗಿದ್ದು ತಮನ್ನಾ . ಉಪೇಂದ್ರ ಕುಮಾರ್ ಸಂಗೀತದಲ್ಲಿ ಎಲ್.ಆರ್. ಈಶ್ವರಿ ಹಾಡಿದ್ದ ಈ ಹಾಡು ಮತ್ತೆ ಕೇಳಿಬರಲಿದೆ ಹೊಸ ಅವತಾರದಲ್ಲಿ ತೆರೆಮೇಲೆ ಬರಲಿದೆ.
OSCAR-2019
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಚುನಾವಣಾ ಆಯೋಗವು ಉತ್ತಮ ಕ್ರಮ ಕೈಗೊಂಡಿದೆ. ಕಾಂಗ್ರೆಸ್‌ ಶಾಸಕರೇ ಹಗರಣದ ಸೂತ್ರಧಾರರಾಗಿದ್ದು, ಅವರ ಕೈವಾಡವಿದೆ. ಜಾಲಹಳ್ಳಿಯ ಫ್ಲ್ಯಾಟ್‌ನಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆಯಾಗಿದ್ದು, ಕಾಂಗ್ರೆಸ್‌ ಅಕ್ರಮದಲ್ಲಿ ತೊಡಗಿರುವುದು ಕಂಡುಬಂದಿದೆ ಎಂದು ಹೇಳಿದರು. ಹಣ, ಉಡುಗೊರೆಗಾಗಿ ತಂದಿದ್ದ ಸಾಕಷ್ಟು ವಸ್ತುಗಳು ಜಪ್ತಿಯಾಗಿವೆ. ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವನ್ನು ಆಯೋಗ ಮಾಡಬೇಕಿದೆ. ಮತದಾರರ ಪಟ್ಟಿಗೆ ಹೆಚ್ಚುವರಿಯಾಗಿ ಸೇರ್ಪಡೆ ಬಗ್ಗೆ ತನಿಖೆ ನಡೆಸಬೇಕು. ರಾಜರಾಜೇಶ್ವರಿನಗರ ಮಾತ್ರವಲ್ಲದೇ ಎಲ್ಲೆಡೆ ಈ ರೀತಿ ನಡೆದಿರುವ ಸಾಧ್ಯತೆ ಇದ್ದು, ಆಯೋಗ ಈ ಬಗ್ಗೆ ಗಮನ ಹರಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ಇಡೀ ಚುನಾವಣೆಯನ್ನು ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಆಗ್ರಹಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪ್ರಜಾತಂತ್ರ ಉಳಿಸುವ ಕೆಲಸವನ್ನು ಚುನಾವಣ ಆಯೋಗ ಮಾಡಿದೆ. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ಮತಪಟ್ಟಿಯನ್ನು ಮರು ಪರಿಶೀಲಿಸಬೇಕು. ಜತೆಗೆ ಹೆಚ್ಚುವರಿ ಮತದಾರರ ಪಟ್ಟಿ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಅಪರಾಧಿಗಳು ರಸ್ತೆಗಳಲ್ಲಿ ನಿರ್ಭಯವಾಗಿ ಓಡಾಡುತ್ತಿದ್ದಾರೆ. ಹೀಗಾಗಿ ಶಾಸಕ ಮುನಿರತ್ನ ಅವರನ್ನು ಬಂಧಿಸಬೇಕು. ಕೋರ್ಟ್‌ ಸೂಚನೆಯನ್ನು ಆಯೋಗ ಪಾಲಿಸಬೇಕು. ಮತದಾರರ ಗುರುತಿನ ಚೀಟಿ ಪತ್ತೆಯಾದ ದಿನದಂದು ತಡರಾತ್ರಿ ಕಾಂಗ್ರೆಸ್‌ ಮುಖಂಡ ರಣದೀಪ್‌ ಸಿಂಗ್‌ ಸುಜೇìವಾಲಾ ಪತ್ರಿಕಾಗೋಷ್ಠಿ ನಡೆಸಿದ್ದರು. ಇದೀಗ ಯಾಕೆ ಕಾಂಗ್ರೆಸ್‌ ನಾಯಕರು ಹೇಳಿಕೆ ನೀಡುತ್ತಿಲ್ಲ ಎಂದು ಕುಟುಕಿದರು.
OSCAR-2019
ನೋಟ ಟಾಪ್ 10 ಒನಿಡಾ ಟೆಲೆವಿಸಿಯೋನ್ಸ್ ಮೇಲೆ 14 November 2018 India ರಲ್ಲಿ. ಈ ಪಟ್ಟಿಯನ್ನು ಇತ್ತೀಚಿನ ಆನ್ಲೈನ್ ಪ್ರವೃತ್ತಿಗಳು ಮತ್ತು ನಮ್ಮ ವಿವರವಾದ ಸಂಶೋಧನೆ ಪ್ರಕಾರ ಸಂಕಲನ ಇದೆ. ಈ ಉತ್ಪನ್ನಗಳು ಮೂಲಕ ಬ್ರೌಸ್: ಬೆಲೆಗಳನ್ನು ಹೋಲಿಕೆ ವಿಶೇಷಣಗಳು ಮತ್ತು ವಿಮರ್ಶೆಗಳು, ಚಿತ್ರಗಳು ವೀಕ್ಷಿಸಿ ಓದಲು ಮತ್ತು ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಬೆಲೆ ಹಂಚಿಕೊಳ್ಳಿ. ಟಾಪ್ 10 ಉತ್ಪನ್ನದ ಪಟ್ಟಿ India ಮಾರುಕಟ್ಟೆಯಲ್ಲಿ ಜನಪ್ರಿಯ ಉತ್ಪನ್ನಗಳನ್ನು ತಿಳಿಯಲು ಒಂದು ಉತ್ತಮ ದಾರಿ. ಟಾಪ್ ಟ್ರೆಂಡಿಂಗ್ ಒನಿಡಾ ಟೆಲೆವಿಸಿಯೋನ್ಸ್ India ಇನ್ ಒನಿಡಾ 49 ಫಿಯೇ 123 ೧೯ಸಿಮ್ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿ Rs. 29,999 ಬೆಲೆಯ ಆಗಿದೆ. ಬೆಲೆಗಳು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR, ಆನ್ಲೈನ್ ಶಾಪಿಂಗ್ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಕ್ರಮಬದ್ಧವಾಗಿವೆ.
OSCAR-2019
ಈ ಕೆಳಗೆ ನಾನು ಪ್ರಕಟಿಸಿರುವುದು ಈ ದಿನ ನನಗೆ ಮಿತ್ರ ಯು. ಹೆಚ್. ಉಮರ್ ರಿಂದ ಬಂದಿರುವಂತಹ ಒಂದು ವಾಟ್ಸಪ್ ಸಂದೇಶ. ನನಗೂ ಅಷ್ಟೇ, ಡಾ. ಝಾಕಿರ್ ನಾಯ್ಕರ ಧರ್ಮ ಪ್ರಚಾರದ ವೈಖರಿಯ ಬಗ್ಗೆಯಾಗಲೀ, ಅವರ ಕಾರ್ಯಕ್ರಮಗಳ ಬಗ್ಗೆಯಾಗಲೀ ಸಹಮತವಿಲ್ಲ.
OSCAR-2019
ಅಹಂಕಾರ ಉದಾಸೀನಗಳ ಅಧಿಕಾರಸ್ಥ ಭಾರತ, ಪರಮೇಶ್ವರ್ ನಾಯ್ಕ್, ಜಾರ್ಜ್, ಕೇಜ್ರಿವಾಲರಲ್ಲಿ ಕಂಡ 3 ಬಿಂಬಗಳು | Digital Kannada ರಾಜ್ಯದಲ್ಲಿ ಪ್ರಕಟಗೊಂಡ ಇನ್ನೊಂದು ಉಡಾಫೆ ಧೋರಣೆ ಅಂತಂದ್ರೆ ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಅವರದ್ದು. ಇವರು ತಮ್ಮ ಕರೆಗಳನ್ನು ಸ್ವೀಕರಿಸೋದಿಲ್ಲ ಎಂಬ ಪತ್ರಕರ್ತರ ದೂರು ತುಂಬ ಹಳೆಯದ್ದು. ಇದೇ ಪ್ರಶ್ನೆ ಎದುರಾದಾಗ ಸಚಿವರು ಸಿಡಿಮಿಡಿಗೊಂಡ್ರು. ‘ನಿಮ್ಮ ಕರೆ ಸ್ವೀಕರಿಸೋದೇ ಕೆಲಸವಾ? ಯಾವ ಮಾಧ್ಯಮದವರು ಅಂತ ಮೆಸೇಜ್ ಕಳ್ಸಿ. ಪುರಸೊತ್ತಾದಾಗ ಕರೆ ಮಾಡುವೆ’ ಅಂದ್ರು. ಪತ್ರಕರ್ತರು ಹರಟೆಗೋ, ಅವರ ಮನೆ ಕೆಲಸಕ್ಕೋ ಸಚಿವರಿಗೆ ಕರೆ ಮಾಡಿದರೆ ಗರಂ ಆಗೋದರಲ್ಲಿ ನ್ಯಾಯವಿದೆ. ಇರಲಿ, ಮಾಧ್ಯಮದ ಜತೆ ಮಾತನಾಡುವುದಕ್ಕಿಂತ ಕೆಲಸದಲ್ಲಿ ತೊಡಗಿಸಿಕೊಳ್ಳುವುದೇ ಮುಖ್ಯ ಆದ್ಯತೆ ಅಂತಾದರೆ ಅದನ್ನೂ ಮನ್ನಿಸಬಹುದು. ಆದರೆ, ಅಭಿವೃದ್ಧಿ ಕಾರ್ಯಗಳು ಕುಂಟುತ್ತಿವೆಯಲ್ಲ ಎಂಬ ಪ್ರಶ್ನೆಗೂ ಸಮಜಾಯಿಷಿ ಕೊಡೋದರ ಬದಲು ನಗರಾಭಿವೃದ್ಧಿ ಸಚಿವರು ಸಿಟ್ಟೇ ಸಿಟ್ಟು ತೋರಿದರು. ‘ಸ್ವಂತ ಖರ್ಚಿಂದ ಅಭಿವೃದ್ಧಿ ಮಾಡೋಕಾಗುತ್ತಾ? ಎಲ್ಲವಕ್ಕೂ ನನ್ನನ್ನೇ ಕೇಳಿದ್ರೆ…’ ಎಂಬ ಆಕ್ಷೇಪ ಸಚಿವರದ್ದು. ಬೆಂಗಳೂರಿನ ಅಭಿವೃದ್ಧಿ ಕುಂಠಿತವಾಗಿರುವುದರ ಬಗ್ಗೆ ನಗರಾಭಿವೃದ್ಧಿ ಸಚಿವರನ್ನಲ್ಲದೇ ಇನ್ಯಾರನ್ನು ಕೇಳೋದು? ಬಿಬಿಎಂಪಿಯಲ್ಲೂ ಇವರದ್ದೇ ಮೈತ್ರಿಕೂಟ ಆಡಳಿತದಲ್ಲಿದೆ. ಹೀಗಿದ್ದಾಗಲೂ ಕೈಚೆಲ್ಲುವುದಾದರೆ ಆ ಭಾಗ್ಯಕ್ಕೆ ಸಚಿವರೆಂದೆನಿಸಿಕೊಳ್ಳಬೇಕೇಕೆ, ಅಲ್ವಾ? ನಾವು ಅಧಿಕಾರದಲ್ಲಿದ್ದೇವೆ, ಏನಾದ್ರೂ ಮಾಡಿ ಅರಗಿಸಿಕೊಳ್ತೀವಿ ಏನೀಗ – ಹೀಗೊಂದು ಅಹಂಕಾರ ವಲಯದತ್ತ ಸಾಗುತ್ತಿದ್ದಾರೆ ರಾಜ್ಯ ಕಾಂಗ್ರೆಸ್ ಸಂಪುಟದ ಸಚಿವರು. ಬುಧವಾರ ಸಿದ್ದರಾಮಯ್ಯ ಸಂಪುಟದ ಇಬ್ಬರು ಸಚಿವರ ಅಹಂಕಾರ- ಉದಾಸೀನ ಧೋರಣೆಗಳು ಪ್ರಕಟಗೊಂಡವು. ಕೂಡ್ಲಗಿ ಉಪವಿಭಾಗದ ಡಿವೈಎಸ್ಪಿ ಅನುಪಮಾ ಶೆಣೈ ಅವರನ್ನು ಎತ್ತಂಗಡಿ ಮಾಡಿಸಿದ್ದು ನಾನೇ ಅಂತ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜಂಬ ಕೊಚ್ಚಿಕೊಂಡಿದ್ದಾರೆ ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ್. ಅದರ ವಿಡಿಯೋ ಕ್ಲಿಪಿಂಗ್ ಹೊರಬಿದ್ದಿದೆ. ಅದರಲ್ಲಿ ಪರಮೇಶ್ವರ ನಾಯ್ಕ್ ಅವರು ತಮ್ಮ ಪೌರುಷಕ್ಕೆ ಕೊಟ್ಟಿರುವ ಕಾರಣವಾದರೂ ಏನು? ಇವರ ಕರೆ ಸ್ವೀಕರಿಸಿದ ಪೊಲೀಸ್ ಅಧಿಕಾರಿ, ಮಧ್ಯದಲ್ಲಿ 42 ಸೆಕೆಂಡ್ ಮಟ್ಟಿಗೆ ಬೇರೆ ಕರೆ ಆಲಿಸುವುದಕ್ಕೆ ಇವರ ಕರೆಯನ್ನು ಕಾಯ್ದಿರಿಸಿಬಿಟ್ಟರಂತೆ. ಇನ್ನೊಮ್ಮೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲವಂತೆ. ಅಂದ್ಮೇಲೆ ಆ ಅಧಿಕಾರಿಯನ್ನು ಯಾಕೆ ಇಟ್ಟುಕೊಳ್ಳಬೇಕು ಅನ್ನೋದು ಸಚಿವರ ವಾದ. ಅದಕ್ಕೂ ಮೀರಿದ ಕೆಟ್ಟ ಸಂದೇಶವೊಂದು ಈ ಪ್ರಕರಣದಲ್ಲಿ ರವಾನೆಯಾಗಿದೆ. ಅದೆಂದರೆ- ಕಾರ್ಯಕರ್ತರು ಪ್ರಕರಣವೊಂದರ ಬಗ್ಗೆ ಸಂದೇಹ ವ್ಯಕ್ತಪಡಿಸಿದಾಗ ತಾನು ಅವರ ಪರ ನಿಲ್ಲುತ್ತೇವೆಯೇ ಹೊರತು ಅಧಿಕಾರಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ- ಅನ್ನೋದು. ಅಂದರೆ ಅಧಿಕಾರಿಗಳಾದವರು ಅಧಿಕಾರರೂಢರಿಗೆ ನಿಷ್ಠೆ ತೋರಬೇಕೆಂಬ ಆಜ್ಞೆ ಸಚಿವರ ಮಾತಲ್ಲಿ ಪ್ರಕಟವಾಗಿದೆ. ಬಿಡದ ಕೆಮ್ಮು ಮತ್ತು ಸಕ್ಕರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಬೆಂಗಳೂರಿಗೆ ಬಂದಿದ್ದಾರೆ. ಅತ್ತ, ತಮಗೆ ಕೆಲವು ತಿಂಗಳುಗಳಿಂದ ಸಂಬಳವೇ ಸಿಕ್ಕಿಲ್ಲ ಎಂದು ದೆಹಲಿ ಮುನ್ಸಿಪಲ್ ಕೌನ್ಸಿಲ್ ನ ಸ್ವಚ್ಛತಾ ಕೆಲಸಗಾರರು ಬುಧವಾರ ಬೆಳಗ್ಗೆಯಿಂದ ಮುಖ್ಯಮಂತ್ರಿ ನಿವಾಸದೆದುರು ಪ್ರತಿಭಟನೆ ಆರಂಭಿಸಿದ್ದಾರೆ. ವರ್ಷದ ಹಿಂದೆ ಕಫ ಮತ್ತು ಸಕ್ಕರೆ ಕಾಯಿಲೆಗೆ ಬೆಂಗಳೂರಿನ ಜಿಂದಾಲ್ ನೈಸರ್ಗಿಕ ಚಿಕಿತ್ಸಾಲಯದಲ್ಲಿ ಆರೈಕೆಗೆ ಒಳಗಾಗಿದ್ದ ಅರವಿಂದ ಕೇಜ್ರಿವಾಲರು, ಮತ್ತೆ ಈಗ ಚಿಕಿತ್ಸೆ ಮೊರೆ ಹೋಗಿದ್ದಾರೆ. ಆರೋಗ್ಯ ಕೈಕೊಟ್ಟಾಗ ಸೂಕ್ತ ಚಿಕಿತ್ಸೆ ಪಡೆಯಲೇಬೇಕು, ಅದನ್ನು ಟೀಕಿಸುವಂತಿಲ್ಲ ಬಿಡಿ. ಆದರೆ, ಜಗತ್ತಿನ ಕೊಂಕುಗಳ ಬಗ್ಗೆ ಎಲ್ಲ ಮಾತನಾಡುವ, ಕಾಳಜಿ ತೋರಿಸುವ ಕೇಜ್ರಿವಾಲ್ ಅವರಿಗೆ ದೆಹಲಿ ಮುನ್ಸಿಪಾಲಿಟಿಯ ನೌಕರರ ಸಂಬಳ ಸರಿಪಡಿಸುವುದಕ್ಕೂ ಆಗದಾಯಿತೇ? ಈಗ ಸ್ವಚ್ಛತಾ ಕೆಲಸಗಾರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕುಳಿತರೆ, ಕೇಜ್ರಿವಾಲರು ಹತ್ತು ದಿನದ ಚಿಕಿತ್ಸೆ ಮುಗಿಸಿಕೊಂಡು ಹೋಗುವಷ್ಟರಲ್ಲಿ ಇಡೀ ದೆಹಲಿಗೇ ಕಫ ಕಟ್ಟಿರುತ್ತದಲ್ಲ ಏನು ಮಾಡೋದು? ದೆಹಲಿ ಮುನ್ಸಿಪಲ್ ಕೌನ್ಸಿಲ್ ನ 1.5 ಲಕ್ಷ ನೌಕರರ ಬೆಂಬಲ ಹೊಂದಿದೆ ಮೂರು ದಿನಗಳ ಮುಷ್ಕರ. ಅಲ್ಲಿಗೆ ಸ್ಥಳೀಯ ಸಂಸ್ಥೆ ಮಟ್ಟದ ಎಲ್ಲ ನಾಗರಿಕ ಸೇವೆಗಳೂ ಅಲಭ್ಯವಾಗುತ್ತವೆ. ದೆಹಲಿ ಪ್ರತಿದಿನ 9 ಸಾವಿರ ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದಿಸುತ್ತದೆ. ಸ್ವಚ್ಛತಾ ಕೆಲಸಗಾರರೆಲ್ಲ ಕನಿಷ್ಠ ಮೂರು ದಿನ ಪ್ರತಿಭಟನೆ ನಡೆಸಲಿದ್ದಾರೆ. ಅಲ್ಲಿಗೆ ದೆಹಲಿ ಗಲೀಜು ಚಿತ್ರಣ ಕಲ್ಪಿಸಿಕೊಳ್ಳಬಹುದು. ಖಂಡಿತ, ಇದರಲ್ಲಿಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಆಪ್ ಸರ್ಕಾರಕ್ಕೆ ಮಾತ್ರವೇ ದೋಷ ನೀಡಲಾಗುವುದಿಲ್ಲ. ಏಕೆಂದರೆ ಮುನ್ಸಿಪಾಲಿಟಿಯಲ್ಲಿ ಅಧಿಕಾರ ಹಿಡಿದಿರುವುದು ಬಿಜೆಪಿ. ಹಾಗಂತ ಎಲ್ಲವಕ್ಕೂ ಕೇಂದ್ರ ಮತ್ತು ಬಿಜೆಪಿಯನ್ನು ದೂರುತ್ತ ಇದ್ದರಾಯಿತೇ? ಇಷ್ಟೇ ಮಾಡಿ ಅಸಹಾಯಕತೆ- ಹತಾಶೆ ಪ್ರದರ್ಶಿಸಿಕೊಂಡಿರೋದಾದ್ರೆ ಅದಕ್ಕೆ ಮುಖ್ಯಮಂತ್ರಿ ಅಂತ ಏಕನಿಸಿಕೊಳ್ಳಬೇಕು? ಹೋರಾಟಗಾರ- ಕಾರ್ಯಕರ್ತರಾಗಿಯೇ ಮುಂದುವರಿಯಬಹುದು. ಮುಖ್ಯಮಂತ್ರಿಯಾಗಿ ಅಲ್ಲದಿದ್ದರೆ ಹೋರಾಟಗಾರನ ಅವತಾರದಲ್ಲಾದರೂ ಈ ಬಗ್ಗೆ ಕನಿಷ್ಠ ಹೋರಾಟ ಮಾಡಬಹುದಿತ್ತು ಕೇಜ್ರಿವಾಲರು. ಶಾಸಕರಿಗೆ ಬರೋಬ್ಬರಿ 400 ಪರ್ಸೆಂಟ್ ವೇತನ ಹೆಚ್ಚಳದ ನಿರ್ಣಯ ಪಾಸು ಮಾಡಿದ್ದು ಇದೇ ಆಪ್ ಸರ್ಕಾರ. ಪೌರ ಕಾರ್ಮಿಕರಿಗೆ ಸಂಬಳ ಸಂದಾಯವಾಗುವವರೆಗೂ ನಾವು ಇಂಥ ನಿರ್ಣಯ ಕೈಗೊಳ್ಳುವುದಿಲ್ಲ ಎಂಬ ನಿಲುವು ತಾಳಬಹುದಿತ್ತಲ್ಲ? ಸಮ- ಬೆಸ ಸಂಚಾರ ನಿಯಮ ಪ್ರಚಾರಕ್ಕೆ ಅಂತ ಕೋಟ್ಯಂತರ ರುಪಾಯಿಗಳನ್ನು ಜಾಹೀರಾತಿಗೆ ಸುರಿದಿರುವವರಿಗೆ ಮುನ್ಸಿಪಾಲಿಟಿ ನೌಕರರಿಗೆ ಸಂಬಳ ಕೊಡಿಸುವಷ್ಟೂ ಇಚ್ಛಾಶಕ್ತಿ ಇಲ್ಲದೇ ಹೋಯಿತೇ? ಮೂರು ಭಾಗಗಳಲ್ಲಿಮುನ್ಸಿಪಾಲಿಟಿಯನ್ನು ಒಡೆದಿರೋದೇ ವೆಚ್ಚ ಹೆಚ್ಚುವುದಕ್ಕೆ ಕಾರಣ, ಇದು ಮತ್ತೆ ಏಕತ್ರವಾಗಲಿ ಎಂಬ ಅಭಿಪ್ರಾಯವಿದೆ. ಈ ಬಗ್ಗೆ ತಮ್ಮದೊಂದು ನಿಲುವು ಹೊಂದಿ, ಬಿಜೆಪಿಯ ಮೇಲೂ ಒತ್ತಡ ತರಬಹುದಲ್ಲ? ಹೈದರಾಬಾದ್ ನಲ್ಲಿ ರೋಹಿತ್ ಸಾವನ್ನು ನಗದಾಗಿಸಿಕೊಳ್ಳುವಲ್ಲಿನ ಉತ್ಸಾಹ ಸ್ವಂತ ಕ್ಷೇತ್ರದ ಕಾಳಜಿಗಿರದಿದ್ದರೆ ಹೇಗೆ? ಇತ್ತೀಚೆಗೆ ಗುರಂಗಾವ್ ನಲ್ಲಿ ಪೊಲೀಸ್ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಹಾಗೂ ಸಿಆರ್ ಪಿಎಫ್ ಜಂಟಿಯಾಗಿ ಆಯೋಜನೆಯಲ್ಲಿ ಮಹಿಳಾ ಪೋಲೀಸರ 7 ನೇ ರಾಷ್ಟ್ರಿಯ ಸಮ್ಮೇಳನ ನಡೆಯಿತು. ಎಲ್ಲ ಸಮ್ಮೇಳನಗಳಲ್ಲಿ ಆಗುವಂತೆ ಸಮೀಕ್ಷಾ ವರದಿಗಳು- ಶಿಫಾರಸುಗಳು ಸಲ್ಲಿಕೆ ಆದವು. ಆ ಪೈಕಿ ಒಂದು ಸಮೀಕ್ಷಾ ವರದಿ ಮಾತ್ರ ಸರ್ಕಾರದ ಸಂವೇದನೆ ತಾಗಲೇಬೇಕು. ಕಾರ್ಯ ನಿರ್ವಹಿಸುವ ಸ್ಥಳಗಳಲ್ಲಿ ಮತ್ತು ನಿಯೋಜನೆಗೊಂಡ ಪ್ರದೇಶಗಳಲ್ಲಿ ಮಹಿಳಾ ಸಿಬ್ಬಂದಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ ಮತ್ತು ಕನಿಷ್ಟ ಕುಡಿಯುವ ನೀರಿನ ವ್ಯವಸ್ಥೆ ಸಿಗುತ್ತಿಲ್ಲ ಎಂಬ ಅಳಲು ವ್ಯಕ್ತವಾಗಿದೆ. ಈ ಹಿಂದೆ ಹಲವು ಮಹಿಳಾ ಪೇದೆಗಳಿಂದ ಹಿಡಿದು ಮಹಿಳಾ ಡಿಜಿಪಿ ಹುದ್ದೆಯ ಪೋಲೀಸರನ್ನು ಅಧ್ಯಯನಕ್ಕೆ ಒಳಪಡಿಸಿ ಇವರು ನೀಡಿರುವ ಮಾಹಿತಿ ಮತ್ತು ಸಲಹೆಗಳನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಸ್ಥಳಾವಕಾಶ ಕಲ್ಪಿಸಬೇಕು, ಆಗ ಮಾತ್ರ ಮಹಿಳಾ ಸಿಬ್ಬಂದಿಗಳು ಏಕಾಂತದಿಂದ ವಿಶ್ರಾಂತಿ ಪಡೆಯಲು ಸಾಧ್ಯ ಎಂದಿದ್ದಾರೆ ಸಮೀಕ್ಷೆಯ ರೂವಾರಿ ಮತ್ತು ಐಪಿಎಸ್ ಅಧಿಕಾರಿ ರೇಣುಕಾ ಮಿಶ್ರಾ. ಸಮೀಕ್ಷೆಗೆ ಒಳಪಡಿಸಿದ್ದ 334 ಮಹಿಳಾ ಸಿಬ್ಬಂದಿಯೊಂದಿಗೆ ಚರ್ಚಿಸಿರುವ ಪೊಲೀಸ್ ಅಧಿಕಾರಿ ಸೀಮಾ ಬಾಲ್, ಹೈದರಾಬಾದ್ ನ ರಾಷ್ಟ್ರೀಯ ಪೋಲೀಸ್ ಅಕಾಡೆಮಿ, ಪಂಜಾಬ್ ಪೊಲೀಸ್ ಪಡೆ, ಉತ್ತರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಒಡಿಷಾ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ಸಂಸದಿಯ ಸ್ಥಾಯಿ ಸಮಿತಿ ಮತ್ತು ಎರಡನೆ ಆಡಳಿತಾತ್ಮಕ ಸುಧಾರಣಾ ಆಯೋಗ ಈ ವಿಷಯಗಳ ಬಗ್ಗೆ ವರದಿಯನ್ನು ಸಿದ್ಧಗೊಳಿಸಿದೆ ಎಂದಿದ್ದಾರೆ. ಈ ಸಮೀಕ್ಷೆ ಪ್ರಕಾರ ಸೌಲಭ್ಯಗಳಿಲ್ಲದ ಕಡೆ ದಿರ್ಘಾವಧಿಯವರೆಗೆ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಶುಚಿತ್ವಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಬಗ್ಗೆ ವರದಿಯಾಗಿದೆ. ಫೆಬ್ರವರಿ 6ನ್ನು ವಿಶ್ವಸಂಸ್ಥೆಯು ‘ಮಹಿಳಾ ಲಿಂಗಚ್ಛೇದದ ವಿರುದ್ಧ ಶೂನ್ಯ ಸಹಿಷ್ಣುತೆ’ ದಿನವನ್ನಾಗಿ ಆಚರಿಸಿತು. ಏನಿದು ಲಿಂಗಚ್ಛೇದ? ಕೆಲವು ಸಮುದಾಯದಲ್ಲಿ ಪುರುಷರ ವಿಚಾರದಲ್ಲಿ ಆಚರಿಸುವ ಪದ್ಧತಿಗೆ ವೈದ್ಯಕೀಯ ಲಾಭದ ಕಾರಣವಿದೆ. ಆದರೆ, ಹಲವು ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಮಹಿಳೆಯ ಲಿಂಗಚ್ಛೇದದ ಕ್ರೂರ ಪದ್ಧತಿಯಿಂದ ಯಾವ ವೈಜ್ಞಾನಿಕ, ವೈದ್ಯಕೀಯ ಲಾಭಗಳೂ ಇಲ್ಲ. ಮಹಿಳೆಯರ ಜನನಾಂಗವನ್ನು ಬಲವಂತವಾಗಿ ಸೀಳುವ ಅನಿಷ್ಟ ಪದ್ಧತಿ ಈಜಿಪ್ಟ್, ಇಥಿಯೋಪಿಯಾ ಮತ್ತು ಇಂಡೋನೇಷ್ಯ ಸೇರಿದಂತೆ ಪ್ರಪಂಚದ 30 ರಾಷ್ಟಗಳ ಬುಡಕಟ್ಟು ಜನರಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. 14 ವರ್ಷದ ಬಾಲಕಿಯರು ಅ ಕೃತ್ಯಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಯುನಿಸೆಫ್ ವರದಿ ಹೇಳುತ್ತದೆ. ಈ ಅನಿಷ್ಟ ಪದ್ಧತಿಯನ್ನು 2006 ರಲ್ಲೇ ಶಿಕ್ಷಾರ್ಹ ಅಪರಾಧವಾಗಿಸಿದ್ದರೂ, ಯನಿಸೆಫ್ ನ ಹಿಂದಿನ ವರದಿಗಿಂತ ಪ್ರಸ್ತುತ ವರದಿಯ ಅಂಕಿ ಅಂಶಗಳು ಏರಿಕೆ ಕಂಡಿವೆ. ಈ ಹಿಂದೆ 125 ಮಿಲಿಯನ್ ನಷ್ಟಿದ್ದ ಇಂತಹ ಪ್ರಕರಣಗಳು ಈಗ 200 ಮಿಲಿಯನ್ ತಲುಪಿವೆ. ಏರಿಕೆಯಾಗಿರುವ ಜನಸಂಖ್ಯೆಯೂ ಇದಕ್ಕೆ ಕಾರಣ ಎನ್ನಬಹುದಾದರೂ ಈ ಬಗ್ಗೆ ಇನ್ನೂ ಜಾಗೃತಿ ಮೂಡದಿರುವುದು ವಿಷಾದಕರ. ಭಾರತದ ಉತ್ತರಭಾಗದಲ್ಲಿರುವ ಬೋಹ್ರಾ ಸಮುದಾಯದಲ್ಲಿ ಈ ಅಮಾನುಷ ಪದ್ಧತಿ ಜಾರಿಯಲ್ಲಿದೆ. ಶಿಯಾ ಮುಸ್ಲಿಮರ ಪಂಗಡವಿದು. ಇಂಥ ಲಿಂಗಚ್ಛೇದ ಸಂತ್ರಸ್ತೆ ಮಸೂಮಾ ರಣಾಲ್ವಿ ಎಂಬುವವರು ಇದನ್ನು ವಿರೋಧಿಸಿ ಆರಂಭಿಸಿರುವ ಆನ್ ಲೈನ್ ಪಿಟಿಷನ್ ಗೆ ನಲ್ವತ್ತು ಸಾವಿರಕ್ಕೂ ಹೆಚ್ಚು ಸಹಿಗಳು ದೊರೆತಿವೆ. ನೋವು ನಿವಾರಣಾ ಮದ್ದು ನೀಡದೆ ಜನನಾಂಗವನ್ನು ಕತ್ತರಿಸುವ ಭಯಾನಕ ರಿವಾಜು ಇದು. ನೋವು ಒಂದೆಡೆಯಾದರೆ ಸೋಂಕು ಹರಡದಂತೆ ಯಾವ ಮುನ್ನೆಚ್ಚರಿಕೆಯನ್ನೂ ವಹಿಸದ ಅಮಾನುಷತೆ ಇನ್ನೊಂದೆಡೆ. ಇದರಿಂದ ಹಲವು ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಈ ಸಂದರ್ಭದಲ್ಲಿ ಸಾಕಷ್ಟು ರಕ್ತಸ್ರಾವ ಆಗುತ್ತದೆ. ಮಗುವಿನ ಜನನದ ಸಂದರ್ಭದಲ್ಲಿ ಹೆಚ್ಚು ತೊಂದರೆ ಅನುಭವಿಸುತ್ತಾರೆ. Previous articleಹೆಡ್ಲಿ ಹೇಳಿಕೆ ಇಟ್ಕೊಂಡು ಪಾಕಿಸ್ತಾನಕ್ಕೆ ಉಗಿಯೋದು ಸುಲಭ, ಪ್ರಶ್ನಿಸಬೇಕಿರೋದು ಅಮೆರಿಕ ಎಷ್ಟ್ ಸುಭಗ?
OSCAR-2019
ಮೀನಿನ ಹೆಜ್ಜೆ, ನದಿಯ ಮೂಲ ಮತ್ತು ಹೆಣ್ಣಿನ ಮನಸ್ಸನ್ನು ತಿಳಿಯುವುದು ಅಸಾಧ್ಯ ಎನ್ನುವ ಮಾತಿದೆ. ಇದುವರೆಗೆ ಭೂಮಿ ಮೇಲಿನ ಯಾವ ಪುರುಷನಿಗೂ ಮಹಿಳೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ರಾಶಿ ಚಕ್ರಕ್ಕೆ ಅನುಗುಣವಾಗಿ ಕೆಲವು ವಿಚಿತ್ರ ಲಕ್ಷಣಗಳನ್ನು ಹೊಂದಿರುವ ಮಹಿಳೆಯರ ಬಗ್ಗೆ ತಿಳಿದುಕೊಳ್ಳುವುದು ಅಷ್ಟು ಕಷ್ಟವಾಗಲಾರದು. ಪ್ರತಿಯೊಂದು ಮಹಿಳಗೂ ತನ್ನದೇ ಆಗಿರುವಂತಹ ಕೆಲವೊಂದು ಲಕ್ಷಣಗಳು ಇರುವುದು ಮತ್ತು ಇದು ಆಕೆಗೆ ರಾಶಿಚಕ್ರಗಳಿಂದ ಬಂದಿರುವ ನಡವಳಿಕೆಗಳು ಆಗಿರುವುದು. 12 ರಾಶಿಗಳಲ್ಲಿ ಪ್ರತಿಯೊಬ್ಬರಿಗೂ ತುಂಬಾ ಭಿನ್ನವಾಗಿರುವ ನಡವಳಿಕೆಗಳು ಇರುವುದು. ಇವರ ನಡವಳಿಕೆ ಮತ್ತು ಸಂಪೂರ್ಣ ಅಭಿವೃದ್ಧಿಯಲ್ಲಿ ರಾಶಿಚಕ್ರಗಳು ಕೂಡ ಪ್ರಮುಖ ಪಾತ್ರ ವಹಿಸುವುದು. ನೀವು ಸಂಗಾತಿ, ಸ್ನೇಹಿತೆ ಅಥವಾ ಜತೆಗಾರ್ತಿಯ ಹುಡುಕಾಟದಲ್ಲಿ ಇದ್ದರೆ ಆಗ ನೀವು ನಿಮ್ಮ ಮನೋಧರ್ಮ, ಆದ್ಯತೆ ಮತ್ತು ಜೀವನಶೈಲಿಗೆ ಹೊಂದಿಕೊಳ್ಳುವವರನ್ನು ಹುಡುಕಿ. ಇದಕ್ಕಾಗಿ ನೀವು ಅವರ ರಾಶಿ ಚಕ್ರದ ಬಗ್ಗೆ ತಿಳಿಯುವುದು ಅತೀ ಅಗತ್ಯ. ಇದು ಅವರ ನಡವಳಿಕೆ ಮತ್ತು ಬೇರೆ ರಾಶಿಯವರೊಂದಿಗೆ ಹೊಂದಿಕೊಳ್ಳುವ ಗುಣಗಳನ್ನು ಹೇಳಲಿದೆ. ಇದರ ಬಗ್ಗೆ ನೀವು ಓದುತ್ತಾ ಸಾಗಿ.... ಮೇಷ ರಾಶಿಯ ಮಹಿಳೆಯರು ತುಂಬಾ ಕ್ರಿಯಾಶೀಲ ಮತ್ತು ಅತ್ಯುತ್ಸಾಹದವರು. ಆಕೆ ಸಂತೋಷವಾಗಿಲು ಸ್ವತಂತ್ರ ಬೇಕು. ಮೇಷ ರಾಶಿ ಮಹಿಳೆಯ ಕಟ್ಟಿ ಹಾಕಲು ಸಾಧ್ಯವಿಲ್ಲ ಮತ್ತು ತನ್ನ ಸುತ್ತ ಇರುವ ಪ್ರತಿಯೊಂದರ ಮೇಲೂ ನಿಯಂತ್ರಣ ಪಡೆಯಲು ಬಯಸುವಳು. ಸ್ನೇಹಿತರು ಮತ್ತು ಕುಟುಂಬದವರಿಗೆ ಇವರು ನಿಷ್ಠರಾಗಿರುವರು. ಆದರೆ ಮದುವೆಗೆ ತಯಾರಾಗಿರುವುದಿಲ್ಲ. ವೃಷಭ ರಾಶಿಯ ಮಹಿಳೆಯರು ಸ್ವತಂತ್ರ ಹಾಗೂ ಭಾವನಾತ್ಮಕವಾಗಿ ಬಲಿಷ್ಠಳಾಗಿರುವರು. ತನ್ನದೇ ನಿಯಮದ ಪ್ರಕಾರ ಆಕೆ ತನ್ನ ಜೀವನ ಸಾಗಿಸಲು ಬಯಸುವಳು. ಆಕೆ ಹೆಚ್ಚಿನ ಸಮಯದಲ್ಲಿ ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವಳು. ಆಕೆ ತುಂಬಾ ಕ್ರಿಯಾತ್ಮಕ ಹಾಗೂ ಕಲಾವಿದೆಯಾಗಿರುವಳು. ಮಿಥುನ ರಾಶಿಯ ಮಹಿಳೆಯರು ತುಂಬಾ ಜಾಣ್ಮೆ ಮತ್ತು ಪ್ರೀತಿಯ ಬಯಸುವರು. ಇವರು ಬೇರೆಲ್ಲಾ ರಾಶಿಗಳಿಗಿಂತ ಹೆಚ್ಚು ಭಾವನಾತ್ಮಕವಾಗಿ ಬದಲಾವಣೆಯಾಗುವರು. ಆಕೆ ಹೊಸ ಪ್ರದೇಶಗಳಿಗೆ ಪ್ರಯಾಣ ಮತ್ತು ಹೊಸ ಭಾಷೆಗಳು ಅಥವಾ ಕೌಶಲ್ಯಗಳನ್ನು ಕಲಿಯಲು ಬಯಸುವಳು. ಕುಟುಂಬ ಮತ್ತು ಸ್ನೇಹಿತರ ವಿಚಾರಕ್ಕೆ ಬಂದರೆ ಕರ್ಕಾಟಕ ರಾಶಿಯ ಮಹಿಳೆಯರು ತುಂಬಾ ಪ್ರೀತಿ ವ್ಯಕ್ತಿಪಡಿಸುವ ಮತ್ತು ಕಾಳಜಿ ಹೊಂದಿರುವ ಮಹಿಳೆ. ಸಣ್ಣ ಹುಡುಗಿಯಾಗಿದ್ದಾಗಲೂ ಆಕೆ ತನ್ನ ಈ ಗುಣ ತೋರಿಸುವಳು. ಕರ್ಕಾಟಕ ರಾಶಿ ಮಹಿಳೆಯರು ತುಂಬಾ ತಾಳ್ಮೆಯವರಾಗಿರುವರು. ಜನರನ್ನು ಭೇಟಿಯಾಗುವಲ್ಲಿ ಆಕೆ ತುಂಬಾ ಸೂಕ್ಷ್ಮ ಹಾಗೂ ನಾಚಿಕೆಯ ಸ್ವಭಾವದವರಾಗಿರುವರು. ಸೂರ್ಯನ ಚಿಹ್ನೆ ಸಿಂಹ ಹೊಂದಿರುವ ಈ ರಾಶಿಯ ಮಹಿಳೆಯರು ಹಲವಾರು ರೀತಿಯ ಪ್ರೇರಣಾತ್ಮಕ ಗುಣಗಳನ್ನು ಹೊಂದಿರುವರು. ಈ ಮಹಿಳೆಯರು ಯಾವಾಗಲೂ ಆಕರ್ಷಣೆಯ ಕೇಂದ್ರಬಿಂದು ಮತ್ತು ಸಾರ್ವಜನಿಕವಾಗಿ ಆತ್ಮವಿಶ್ವಾಸದಿಂದ ಇರುವರು. ಆಕೆಗೆ ಅಧಿಕಾರ ಬೇಕು ಮತ್ತು ಬೇರೆಯವರ ಆದೇಶ ಪಾಲಿಸುವುದು ಆಕೆಗೆ ಬೇಕಿಲ್ಲ. ಕನ್ಯಾ ರಾಶಿಯವರು ತುಂಬಾ ಪ್ರಾಮಾಣಿಕ ಹಾಗೂ ಪರಿಣಾಮಕಾರಿ ಮಹಿಳೆಯರು. ಕನ್ಯಾ ರಾಶಿ ಮಹಿಳೆಯರು ಜೀವನದಲ್ಲಿ ಏನಾದರೂ ಮಾಡಲು ಬಯಸುವರು ಮತ್ತು ಇದು ಅವರ ಜೀವನದ ಪ್ರಮುಖ ಉದ್ದೇಶವಾಗಿರುವುದು. ಆಕೆ ಮಾಡುವ ಪ್ರತಿಯೊಂದು ವಿಷಯದಲ್ಲೂ ತುಂಬಾ ಸೂಕ್ಷ್ಮ ಹಾಗೂ ಕ್ರಮಬದ್ಧವಾಗಿರುವಳು. ಆಕೆ ತುಂಬಾ ಸಂಘಟಿತ ವ್ಯಕ್ತಿಯಾಗಿರುವರು. ತುಲಾ ರಾಶಿಯವರು ತುಂಬಾ ಸಮತೋಲಿತ ಮತ್ತು ಶಾಂತಿಯುತ ಜೀವನ ನಡೆಸುವರು. ಇವರು ಯಾರನ್ನೂ ದೂಷಿಸಲು ಇಷ್ಟಪಡಲ್ಲ ಮತ್ತು ಪ್ರತಿಯೊಬ್ಬರನ್ನು ಇವರು ಸಂತೋಷವಾಗಿಡಲು ಬಯಸುವರು. ಈ ಮಹಿಳೆಯರು ಸ್ವಲ್ಪ ತಟಸ್ಥ ಹಾಗೂ ಏಕಾಂಗಿಯಾಗಿರುವರು. ಆಕೆ ಸರಿಯಾದ ಕೆಲಸ ಮಾಡುವಾಗ ತುಂಬಾ ಸುರಕ್ಷಿತವೆಂದು ಭಾವಿಸುವಳು. ವೃಶ್ಚಿಕ ರಾಶಿ ಮಹಿಳೆಯರು ಸ್ವತಂತ್ರ ಮತ್ತು ಬದ್ಧತೆಯಿರುವ ವ್ಯಕ್ತಿಗಳು. ಇವರ ಜೀವನವು ಅಸಮತೋಲಿತವಾಗಿರುವುದು. ಇವರ ಜೀವನದ ಪ್ರತಿಯೊಂದು ನಡೆಯಲ್ಲೂ ಏನಾದರೊಂದು ಸಮಸ್ಯೆಗಳು ಇರುವುದು. ಆಕೆ ಒಳ್ಳೆಯ ನಾಯಕಿ ಮತ್ತು ಸಂವಹನವು ಅದ್ಭುತವಾಗಿರುವುದು. ಧನು ರಾಶಿಯ ಮಹಿಳೆಯರು ತುಂಬಾ ಕುತೂಹಲಕಾರಿಯಾಗಿರುವರು. ಧನು ರಾಶಿಯ ಮಹಿಳೆಯರು ಜೀವನ ಮತ್ತು ತನ್ನ ಬಗ್ಗೆ ತಾತ್ವಿಕ ದೃಷ್ಟಿಕೋನ ಹೊಂದಿರುವರು. ಆಕೆ ಈ ವಿಚಾರಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವಳು. ಆಕೆ ಯಾವಾಗಲೂ ಹೊಸತನ್ನು ಕಲಿಯಲು ಇಷ್ಟಪಡುವಳು. ತನ್ನ ಮನಸ್ಸಿನಲ್ಲಿ ಇರುವುದನ್ನು ಮಾತನಾಡಲು ಆಕೆ ಹಿಂಜರಿಯಲ್ಲ. ಈ ಸಮಯದಲ್ಲಿ ತನ್ನ ಮನಸ್ಸಿನಲ್ಲಿ ಏನು ಇದೆಯಾ ಅದನ್ನು ಸಾಧಿಸುವಂತಹ ಗುಣವನ್ನು ಹೊಂದಿರುವವರು. ತನ್ನಲ್ಲಿರುವ ಉನ್ನತ ಮಟ್ಟದ ಆತ್ಮವಿಶ್ವಾಸದಿಂದ ಆಕೆ ಕಠಿಣ ಪರಿಶ್ರಮ ಮತ್ತು ಸಂಪನ್ಮೂಲ ವ್ಯಕ್ತಿಯಾಗಿರುವಳು. ಒಮ್ಮೆ ಆಕೆ ಸ್ನೇಹಿತೆಯಾದರೆ ಅವಳು ತುಂಬಾ ನಿಷ್ಠ ಮತ್ತು ಕಾಳಜಿ ಹೊಂದಿರುವಳು. ಕುಂಭ ರಾಶಿಯ ಮಹಿಳೆಯರು ಬೇರೆ ಎಲ್ಲಾ ಮಹಿಳೆಯರಿಗಿಂತ ಭಿನ್ನವಾದ ಕಲ್ಪನೆ ಮಾಡುವಳು. ಆಕೆಗೆ ತನ್ನ ಮಟ್ಟದ ಸ್ವಂತಂತ್ರ ಸಿಗದೇ ಇದ್ದರೆ ಆಗ ಆಕೆ ಸಂತೋಷವಾಗಿರಲು ಸಾಧ್ಯವಿಲ್ಲ. ಆಕೆ ತುಂಬಾ ಜಾಣೆ, ಕ್ರಿಯಾತ್ಮಕ ಮತ್ತು ಒಳ್ಳೆಯ ಕೇಳುಗರಳಾಗಿರುವಳು. ಆಕೆ ಆರ್ಥಿಕ ಸ್ಥಿರತೆ ಬಗ್ಗೆ ಹೆಚ್ಚು ಚಿಂತಿಸಲ್ಲ. ಮೀನ ರಾಶಿಯ ಮಹಿಳೆಯರು ಬೇರೆಲ್ಲಾ ರಾಶಿಯವರಿಗಿಂತ ತುಂಬಾ ಪ್ರೌಢ ಮತ್ತು ಅತ್ಯಾಧುನಿಕವಾಗಿರುವವರು. ಈಗ ಏನು ಮಾಡುತ್ತಿದ್ದೇವೆ ಮತ್ತು ಮುಂದೇನು ಮಾಡಲಿದ್ದೇವೆ ಎಂದು ಈ ರಾಶಿಯವರಿಗೆ ಸರಿಯಾಗಿ ತಿಳಿದಿರುವುದು. ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಈ ರಾಶಿಯ ಮಹಿಳೆಯರು ಬೇಗನೆ ನೆರವಾಗುವರು.
OSCAR-2019
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ಅವರ ಅವರ ಒಡೆತನದಲ್ಲಿರುವ ಪಬ್ ಮೇಲೆ ಸಿಸಿಬಿ ದಾಳಿ ನಡೆಸಿದ್ದು ಪಬ್ ಅನ್ನು ಮುಚ್ಚಿಸಲಾಗಿದೆ ಎನ್ನಲಾಗಿದೆ. ಇನ್ನು ನಿನ್ನೆ ತಡರಾತ್ರಿ 4 ಗಂಟೆ ತನಕ ಪಬ್ ತೆರೆದಿದ್ದು, ಈ ಕಾರಣಕ್ಕೆ ಏಕಾಕಾಲಕ್ಕೆ ಪೋಲಿಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕಾನೂನು ಅನ್ವಯ ಪಬ್ ಗೆ ಬೀಗ ಜಡಿಯಲಾಗಿದೆ ಎನ್ನಲಾಗಿದೆ.
OSCAR-2019
ದೇವರ ಬಗ್ಗೆ ನನ್ನ ಧೋರಣೆಗಳೇನೇ ಇದ್ದರೂ, ಹಬ್ಬಗಳ ಬಗೆ ನನ್ನ ನಂಬಿಕೆ ಅಚಲ. ಹಬ್ಬಗಳು ನಾಗರೀಕತೆಯೊಂದರ ಹಿರಿಮೆಯ ಧ್ಯೋತಕ. ಒಂದು ಸಮುದಾಯದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿಹಿಡಿಯುವ ಕಂಬಗಳಿದ್ದಂತೆ. ನಿಮ್ಮ ಮನೆಗೆ ಯಾರಾದರೂ ಗಣಪತಿ ಚಂದಾ ಕೇಳಲಿಕ್ಕೆ ಬಂದರೆ, ಪ್ರಶ್ನೆ ಕೇಳಿ…..ಖಂಡಿತಾ ಕೇಳಿ. ಆದರೆ ಗಣೇಶನಿಗೆ ಸರ್ಜರಿ ಮಾಡಿದವರ್ಯಾರು ಅಂತಾ ಕೇಳೋ ಬದಲು ಈ ಕೆಳಗಿನ ಪ್ರಶ್ಬೆಗಳನ್ನು ಕೇಳಿ ಅಥ್ವಾ ಈ ಸಲಹೆಗಳನ್ನು ಕೊಡಿ: (೪) ನಿಮ್ಮಲ್ಲಿ ಸಂಜೆ ಮನಂಜನಾ ಕಾರ್ಯಕ್ರಮ ಮಾಡಿಸೋ ಐಡಿಯಾ ಇದ್ರೆ, ನಮ್ಮ ಏರಿಯಾ ಮಕ್ಕಳಿಗೇ ಮೊದಲ ಆದ್ಯತೆ ಕೊಡಿ. ಅಥ್ವಾ ಒಂದು ದಿನ ಅವರದೇ ಕಾರ್ಯಕ್ರಮ ಮಾತ್ರ ಇಡಿ, (೫) ಆ ಮೂರನೇ ಕ್ರಾಸ್ ಮಹದೇವಪ್ಪ ಅವರು ಮೊನ್ನೆ ಉತ್ತಮ ಶಿಕ್ಷಕ ಅಂತಾ ರಾಜ್ಯಪ್ರಶಸ್ತಿ ತಗೊಂಡ್ರು, ಮತ್ತೆ..ಆ ಕೊನೇ ಮೈನ್ರೋಡಿನಲ್ಲಿರೋ ಉದ್ದದ ಹುಡುಗ ಮೊನ್ನೆ ರಾಷ್ಟಮಟ್ಟದ ಲಾಂಜ್ ಜಂಪಿನಲ್ಲಿ ಬೆಳ್ಳಿ ಪದಕ ಗೆದ್ನಂತೆ. ಅವರಿಬ್ರಿಗೂ ಒಂದೊಂದು ಸನ್ಮಾನ ಇಡಿ (೭) ಮತ್ತೆ…ಹೇಗಿದ್ದರೂ ನಿಮಗೆ ಕಾರ್ಯಕ್ರಮದ ಖರ್ಚಿಗೆ ಚಂದಾ ನಾವೆಲ್ಲಾ ಕೊಡ್ತಾ ಇದ್ದೀವಿ. ಆದ್ದರಿಂದ ನಿಮ್ಮ ಗಣೇಶನ ಕಾಣಿಕೆಡಬ್ಬದ ಬದಲು ಈ ಸಲ ಈ ಅನಾಥಾಶ್ರಮದ ಹೆಸರಿನಲ್ಲಿ ಒಂದು ಡಬ್ಬ ಇಡಿ. ಅದರಿಂದ ಸಿಗುವ ದುಡ್ಡನ್ನು ಅವರಿಗೆ ಕೊಡಿ. ಗಣೇಶನೂ ಸಂತುಷ್ಟನಾಗ್ತಾನೆ.’ ಎನ್ನುವ ಈ ರೀತಿಯ ಸಲಹೆಗಳನ್ನು ನೀಡಿ. ಇದು ನಿಜವಾದ ಸಮಾಜ ಕಾಳಜಿ. ಸಮಾಜವನ್ನು ಅದರ ಓಟವನ್ನು ಗುರುತಿಸಿಕೊಂಡು ಅದರಿಂದ ರಸ ತೆಗೆಯುವ ವಿಧ್ಯೆ ಗೊತ್ತಿರಬೇಕು. ಸಮಾಜವನ್ನು ವಿರೋಧಿಸಿ, ಅದರಲ್ಲಿರುವವರನ್ನೆಲ್ಲಾ ಮೂರ್ಖರೆಂದು ಕರೆದು ತನ್ನನ್ನು ಸಮಾಜವಾದಿಯೆಂದು ಕರೆದುಕೊಳ್ಳುವುದಲ್ಲ ಅಂತಾ ನನ್ನ ಬಲವಾದ ನಂಬಿಕೆ. ಇದೇ ತರಹ ಇನ್ಯಾವುದಾದರೂ ಐಡಿಯಾಗಳಿದ್ರೆ ದಯವಿಟ್ಟು ಹಂಚಿಕೊಳ್ಳಿ. ನಮ್ಮ ಗುಂಪಿನಲ್ಲಿ ಯಾರಾದ್ರೂ ಗಣೇಶ ಕೂರಿಸುವವರಿದ್ರೆ ಅವರಿಗೆ ಸಹಾಯವಾಗುತ್ತೆ. ಏನಂತೀರಾ?
OSCAR-2019
ರಾಜರಾಜೇಶ್ವರಿ ವಿಧಾನಸಭಾ ವ್ಯಾಪ್ತಿಯಲ್ಲಿರುವ ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮತ ಚೀಟಿ ಹಗರಣವೊಂದು ಬೆಳಕಿಗೆ ಬಂದಿದೆ. ಈ ಅಪಾರ್ಟ್‌ಮೆಂಟ್ ಮಂಜುಳಾ ನಂಜಾಮರಿ ಎಂಬುವವರಿಗೆ ಸೇರಿದೆ. ಈ ಮಂಜುಳಾ ಆರು ವರ್ಷಗಳ ಹಿಂದೆಯೇ ಬಿಜೆಪಿ ತೊರೆದಿದ್ದಾರೆಂದು ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಆದರೆ, ಸೋಲಿನ ಭೀತಿಯಿಂದ ಬಿಜೆಪಿ ಹೈಡ್ರಾಮಾ ಮಾಡುತ್ತಿದ್ದು, ಮುಂಜುಳಾ ಬಿಜೆಪಿ ಮುಖಂಡೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಕಾಂಗ್ರೆಸ್-ಬಿಜೆಪಿ ಆರೋಪ, ಪ್ರತ್ಯಾರೋಪಗಳು ಮುಂದುವರಿದಿದೆ.
OSCAR-2019
ದೀರ್ಘ ಸಮಯದ ನಂತ್ರ ಮತ್ತೆ ದೇಸಿ ಗರ್ಲ್ ಬಾಲಿವುಡ್ ಗೆ ವಾಪಸ್ ಆಗ್ತಿದ್ದಾಳೆ. ಬೆಡಗಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ಚಿತ್ರಗಳಿಗೆ ಬಣ್ಣ ಹಚ್ಚಲು ತಯಾರಿ ನಡೆಸಿದ್ದಾಳೆ. ಪ್ರಿಯಾಂಕ ಇನ್ಸ್ಟ್ರಾಗ್ರಾಮ್ ಪೋಸ್ಟ್ ಒಂದು ಇದ್ರ ಸುಳಿವು ನೀಡಿದೆ. ಪ್ರಿಯಾಂಕ ಸದ್ಯ ಭಾರತ್ ಚಿತ್ರದಲ್ಲಿ ನಟಿಸಲಿದ್ದಾಳೆ. ಸಲ್ಮಾನ್ ಖಾನ್ ಜೊತೆ ಭಾರತ್ ನಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳಲಿದ್ದು ಚಿತ್ರದ ಶೂಟಿಂಗ್ ಜುಲೈ 17ರಿಂದ ಶುರುವಾಗಲಿದೆ. ಭಾರತ್ ಜೊತೆ ಪಿಗ್ಗಿ ಮತ್ತೊಂದು ಬಾಲಿವುಡ್ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾಳೆಂಬ ಸುದ್ದಿಯಿದೆ. ವರದಿ ಪ್ರಕಾರ ಪ್ರಿಯಾಂಕ, ನಿರ್ದೇಶಕಿ ಸೋನಾಲಿ ಬೋಸ್ ಜೊತೆ ಕೆಲಸ ಮಾಡಲಿದ್ದಾಳಂತೆ. ಮಾಧ್ಯಮಗಳ ವರದಿ ಪ್ರಕಾರ ಪ್ರಿಯಾಂಕ ಜೊತೆ ಫರ್ಹಾನ್ ಅಖ್ತರ್ ಕೆಲಸ ಮಾಡಲಿದ್ದಾರೆ ಎನ್ನಲಾಗ್ತಿದೆ. ಪ್ರಿಯಾಂಕ ದೆಹಲಿ ಮೂಲದ ಸ್ಪೂರ್ತಿದಾಯಕ ಉಪನ್ಯಾಸಕಿ ಹಾಗೂ ಇಮ್ಯುನೋ ಡಿಫಿಸಿಯೆನ್ಸ್ ನಿಂದ ಬಳಲುತ್ತಿರುವ ಆಯೆಶಾ ಚೌಧರಿ ಜೀವನ ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ವರ್ಷ ಆಗಸ್ಟ್ ನಲ್ಲಿ ಚಿತ್ರದ ಶೂಟಿಂಗ್ ಶುರುವಾಗುವ ಸಾಧ್ಯತೆಯಿದೆ.
OSCAR-2019
ಪತ್ನಿ ಅನುಮತಿ ಕೇಳಿ ಫೋಟೋ ಪೋಸ್ಟ್ ಮಾಡಿದ ಕಿಂಗ್ ಖಾನ್ | Kannada Dunia | Kannada News | Karnataka News | India News ಇತ್ತೀಚೆಗಷ್ಟೇ ಬಾಲಿವುಡ್ ಲ್ಲಿ 26 ವರ್ಷಗಳನ್ನ ಪೂರ್ಣಗೊಳಿಸಿರುವ ಬಾಲಿವುಡ್ ನ ಕಿಂಗ್ ಖಾನ್ ಶಾರುಕ್ ಈಗ ಪತ್ನಿ ಗೌರಿಯೊಂದಿಗೆ ಫುಲ್ ರಿಲ್ಯಾಕ್ಸ್ ಮೂಡ್ ಲ್ಲಿದ್ದಾರೆ. ಸ್ಪೇನ್ ನಲ್ಲಿ ಹಾಲಿಡೇ ಎಂಜಾಯ್ ಮಾಡ್ತಿರೋ ಶಾರುಕ್ ಖಾನ್ ಮತ್ತು ಗೌರಿಯವರ ಒಂದು ಸೆಲ್ಫಿ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದ್ದು ಮಾಡ್ತಿದೆ. ಹಲವು ವರ್ಷಗಳ ಬಳಿಕ ನನ್ನ ಪತ್ನಿ ಇಬ್ಬರ ಫೋಟೋ ಒಂದನ್ನ ತೆಗೆಯೋಕೆ ನನಗೆ ಅನುಮತಿ ನೀಡಿದ್ದಾಳೆ. ಈ ಸೆಲ್ಫಿ ನನಗೆ ತುಂಬಾನೇ ಮಹತ್ವದ್ದು ಅಂತ ಶಾರುಕ್ ಖಾನ್ ಹೇಳಿಕೊಂಡಿದ್ದಾರೆ. ಟ್ಬಿಟ್ಟರ್ ನಲ್ಲಿ ಗೌರಿ ಮತ್ತು ಶಾರುಕ್ ಸೆಲ್ಫಿ ತುಂಬಾನೇ ಸದ್ದು ಮಾಡ್ತಿದೆ. ಫೋಟೋ ನೋಡಿದ ಮಂದಿ ಈ ಕ್ಯೂಟ್ ಕಪಲ್ ಗೆ ಶುಭ ಹಾರೈಸುತ್ತಿದ್ದಾರೆ.
OSCAR-2019
ಅಹಮದಾಬಾದ್‌ : 2002ರ ಫೆಬ್ರವರಿಯಲ್ಲಿ ನಡೆದಿದ್ದ ಗೋದ್ರಾ ಹತ್ಯಾಕಾಂಡ ಪ್ರಕರಣ ಸಂಬಂಧ 11 ದೋಷಿಗಳ ಗಲ್ಲು ಶಿಕ್ಷೆಯನ್ನು ಗುಜರಾತ್‌ ಹೈಕೋರ್ಟ್‌ ತಡೆಹಿಡಿದಿದ್ದು, ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಮಾರ್ಪಾಟು ಮಾಡಿದೆ. ಗೋದ್ರಾ ಸಾಬರಮತಿ ಎಕ್ಸ್‌ಪ್ರೆಸ್‌ರ ರೈಲು ಭೋಗಿಗೆ ಬೆಂಕಿ ಹಚ್ಚಲಾಗಿತ್ತು. ಈ ಈ ಪ್ರಕರಣದಲ್ಲಿ 11 ದೋಷಿಗಳ ಶಿಕ್ಷೆಯನ್ನು ಎತ್ತಿಹಿಡಿಯಲಾಗಿದ್ದು, ಮರಣದಂಡನೆಗೆ ಬದಲಾಗಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಜೊತೆಗೆ ಪ್ರಕರಣದಲ್ಲಿ 63 ಮಂದಿಯನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಗುಜರಾತ್‌ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. 2011ರಲ್ಲಿ ಎಸ್‌ಐಟಿ ಕೋರ್ಟ್‌ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವಂತೆ ಗುಜರಾತ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ 63 ಮಂದಿಯನ್ನು ಖುಲಾಸೆ ಗೊಳಿಸಿ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ. ಜೊತೆಗೆ 2002ರಲ್ಲಿದ್ದ ಗುಜರಾತ್‌ ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ವಿಫಲತೆ ಇದರಲ್ಲಿ ಎದ್ದು ಕಾಣುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಘಟನೆಯಲ್ಲಿ ಗಾಯಾಳುಗಳಾದವರ ಕುಟುಂಬಕ್ಕೆ 10 ಲಕ್ಷ ಪರಿಹಾರ ಒದಗಿಸುವಂತೆ ಗುಜರಾತ್‌ ಸರ್ಕಾರಕ್ಕೆ ಆದೇಶಿಸಿದೆ. 2002ರಲ್ಲಿ ಸಬರಮತಿ ಎಕ್ಸ್‌ಪ್ರೆಸ್‌ ರೈಲಿನ ಆರು ಬೋಗಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ 59 ಮಂದಿ ಕರಸೇವಕರು ಸಜೀವ ದಹನವಾಗಿದ್ದರು. ಗೋದ್ರೋತ್ತರ ಹಿಂಸಾಚಾರದಲ್ಲಿ ಸಾವಿರಾರು ಮಂದಿ ಸಾವಿಗೀಡಾಗಿದ್ದರು.
OSCAR-2019
ದೆಹಲಿ : ರಾಜಧಾನಿ ದೆಹಲಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಯಾಗಿದ್ದು, ಜನ ಪರದಾಡುವಂತಾಗಿದೆ. ಕೆಲ ತಿಂಗಳ ಹಿಂದಷ್ಟೇ ಮೆಟ್ರೋ ಪ್ರಯಾಣ ದರವನ್ನು ಏರಿಸಲಾಗಿತ್ತು. ಈಗ ಮತ್ತೆ ದರ ಏರಿಕೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿ ಮೆಟ್ರೋದಲ್ಲಿ 2ರಿಂದ 5 ಕಿ.ಮೀ ವರೆಗಿನ ಪ್ರಯಾಣ ದರ ಐದು ರೂ ಏರಿಕೆ ಮಾಡಲಾಗಿದೆ. ಐದು ಕಿ.ಮೀ ಗಿಂತ ಹೆಚ್ಚಿನ ದೂರ ಪ್ರಯಾಣ ಮಾಡುವವರು ಹೆಚ್ಚುವರಿಯಾಗಿ 10 ರೂ ನೀಡಬೇಕಿದೆ. ಐದರಿಂದ 12 ಕಿ.ಮೀ ಗೆ 30 ರೂ ನೀಡಬೇಕಿದ್ದು, 32 ಕಿ.ಮೀ ದೂರದ ಪ್ರಯಾಣಕ್ಕೆ 60 ರೂ ಪಾವತಿಸಬೇಕಿದೆ. ಸಾಮಾನ್ಯಾವಾಗಿ ದೆಹಲಿ ಮೆಟ್ರೋದಲ್ಲಿ ಓಡಾಡುವ ಮಂದಿ ಹೆಚ್ಚಿನದಾಗಿ ಸ್ಮಾರ್ಟ್‌ ಕಾರ್ಡ್‌ ಬಳಕೆ ಮಾಲಿದ್ದು, ಪ್ರಯಾಣಕ್ಕೆ ಶೇ.10ರಷ್ಟು ರಿಯಾಯಿತಿ ನೀಡಲಾಗಿದೆ. ಮತ್ತೊಂದೆಡೆ ಈ ಬಗ್ಗೆ ನಿರ್ಣಯ ಮಂಡನೆಗೆ ಬಿಜೆಪಿ ನಿರಾಕರಿಸಿದ್ದು, ದರ ಏರಿಕೆ ಪ್ರಸ್ತಾಪ ಹಿಂತೆಗೆದುಕೊಂಡದೆ 3000ಕೋಟಿ ರೂ ಹಣವನ್ನು ದೆಹಲಿ ಸರ್ಕಾರವೇ ಭರಿಸಲಿ ಎಂದು ಬಿಜೆಪಿ ಹೇಳಿದೆ. ದೆಹಲಿ ಸಾರಿಗೆ ಸಚಿವ ಕೈಲಾಶ್‌ ಗೆಹ್ಲೋಟ್‌ ಉದ್ದೇಶಿತ ಮೆಟ್ರೋ ದರ ಏರಿಕೆಯ ನಿರ್ಣಯವನ್ನು ಮಂಡಿಸಿದ್ದು, ಧ್ವನಿಮತದ ಮೂಲಕ ಇದಕ್ಕೆ ಅನುಮೋದನೆ ನೀಡಲಾಯಿತು. ಮೆಟ್ರೋ ದರ ಏರಿಕೆ ನಿಲ್ಲಿಸಬೇಕೆಂದರೆ ದೆಹಲಿ ಸರ್ಕಾರ 3000ಕೋಟಿ ಭರಿಸುವಂತೆ ಹೇಳಿದ್ದಾರೆ.
OSCAR-2019
ಕುಂದಾಪುರ: ಲಯನ್ಸ್ ಜಿಲ್ಲೆ 317 - ಡಿಯ ಜಿಲ್ಲಾ ಸಂಯೋಜಕರಾದ ಲಯನ್ ಕೆ. ಸದಾನಂದ ಉಪಾಧ್ಯಾಯರನ್ನು 2013-14ನೇ ಸಾಲಿನ ಅವರ ವಿಶೇಷ ಸಾಧನೆಯನ್ನು ಪರಿಗಣಿಸಿ ಗೋವಾದಲ್ಲಿ ನಡೆದ ಮಲ್ಟಿಪಲ್ ಸಮಾವೇಷದಲ್ಲಿ ಮಲ್ಟಿಪಲ್ 317ರ ಶ್ರೇಷ್ಟ ಜಿಲ್ಲಾ ಸಂಯೋಜಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಇಂಟರ್ ನ್ಯಾಷನಲ್ ಡೈರೆಕ್ಟರ್ ಕೃಷ್ಣಾ ರೆಡ್ಡಿ ಸಹಿತ ಅನೇಕ ಮಲ್ಟಿಪಲ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
OSCAR-2019
ಸಾಲ ಬಾದೆಯನ್ನು ತಾಳಲಾರದೆ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ತಾಲೂಕು ಕವಲೂರು ಗ್ರಾಮದಲ್ಲಿ ನಡೆದಿದೆ. ಈ ಘಟನೆಗೆ ಸಂಬಂದಿಸಿದಂತೆ ಕವಲೂರು ಗ್ರಾಮದ ರೈತ ಮಾರ್ತಂಡಪ್ಪ ಹಡಪದ
OSCAR-2019
ಸರಿ, ಇವನು ಹಾಗೆ ಮಂಪರಿನಲ್ಲಿದ್ದಾನೆ, ಹಾರ್ಲಿಕ್ಸ್ ಮತು ಬ್ರೆಡ್ ಟೋಸ್ಟ್ ಹಿಡಿದು ಬಿಂದು ಅರೆ ತೆರೆದ ಬಾಗಿಲ ಮೂಲಕ ನುಗ್ಗಿ ಬಂದಳು " ಕಾಮೂ, ಏ ಕಾಮೂ ಏಳಪ್ಪಾ...ಸ್ವಲ್ಪ ಎನಾದರೂ ತೊಗೊ" ಎನ್ನುತ್ತ ಬಂದು ಕಣ್ನು ತೆರೆಯುತ್ತಿದ್ದ ಕಾಮೂ ಪಕ್ಕದಲ್ಲಿ ಹಾಸಿಗೆ ಮೇಲೆ ಕೂತೇ ಬಿಟ್ಟಳು. ಚಡಪಡಿಸಿ ಎದ್ದ ಕಾಮೂಗೆ,"ಅಯ್ಯೊ ಪರವಾಗಿಲ್ಲ ಮಲಿಕ್ಕೋ" ಎನ್ನುತ್ತಾ ಎದೆಗೆ ಕೈಯಿಟ್ಟು ತಳ್ಳಿ ಮಲಗಿಸಿ ಹಣೆಯ ಮೆಲೆ ತನ್ನ ಮೃದುವಾದ ಕೈಯಿಡಲು, ಆಕೆ ಯ ಭಾರಿ ತೊನೆದಾಡುವ ಕ್ಷೀರಾಂಗಗಳಾದ ಮೊಲೆಗಳು ಕಣ್ಣಮುಂದೆ ಸರಿದಾಡಿ, ಬಿಸಿ ರಕ್ತದ ಕಾಮೂಗೆ ಜ್ವರ ಈಗ ಸೊಂಟದ ಕೆಳಗೆ ಜಾಸ್ತಿಯಾಗಿ ಏರತೊಡಗಿತು. ಹಾಗೆ ಅವನ ಹೆಗಲಿಗೆ ಕೈ ಹಾಕಿ ಎತ್ತಿ ಎಬ್ಬಿಸಿ ತನ್ನ ಎದೆಗೆ ಆನಿಸಿ ಕೊಂಡು ಕೂರಿಸಿಕೊಂಡು ಹಾರ್ಲಿಕ್ಸ್ ಲೋಟ ಬಾಯಿಗಿಟ್ಟಳು... ಕಾಮೂ ಗೋ ತನ್ನ ಮುಖ-ತಲೆಯೆಲ್ಲಾ ಮೆತ್ತನೆಯ ಕುಶನ್ ದಿಂಬಿನ ಮೇಲೆ ಇಟ್ಟಂತಾ ನವಿರಾದ ಅನುಭವ..ಅವನ ಸಾಮಾನಿಗೆ ಇದು ತನಗೆ ಸಂಭಂದಿಸಿದ ವಿಷಯ ಎಂದು ಹೇಗೆ ತಿಳಿದು ಹೋಯಿತೋ, ಗರ್ರನೆ ರಾಕೇಟ್ ನಂತೆ ಎದ್ದು ನಿಲ್ಲುವುದೇ? ಸೊಂಟದ ಕೆಳಗಿನ ಲುಂಗಿಯ ಉಬ್ಬನ್ನು ಬಟ್ಟೆ ಸರಿಪಡಿಸುವಂತೆ ಬಿಂದು ಒಂದು ಕೈಯಿಂದ ಕೆಳಗೆ ಒತ್ತುತ್ತಾ " ಪರವಾಗಿಲ್ಲಾ ಬಿಡು, ನಂಗೆಲ್ಲಾ ಅರ್ಥವಾಗುತ್ತೆ" ಎಂದು ಇವನು ನಾಲಿಗೆ ಕಚ್ಚಿಕೋ ಬೇಕು ಹಾಗೆ ವರ್ತಿಸಿದಳು, ನಾಟಿ ಬಿಂದು ಆಂಟಿ. ಅವಳ ಕೈ ಹಾಗೆ ಉಬ್ಬಿದ ಅವನ ಯುವ ಲಿಂಗವನ್ನು ಸ್ವಲ್ಪ ಅವಶ್ಯಕತೆಗಿಂತಾ ಜಾಸ್ತಿ ಹೊತ್ತೇ ಹಿಡಿದು ಒತ್ತಲು , ಕಾಮೂ ಗಂಟಲು ಸರಿ ಮಾಡಿ ಕೆಮ್ಮಿ ಒದ್ದಾಡಲು, ಅವನ ಬಿಸಿ ಮೊಗವನ್ನು ತನ್ನ ಮಲಗೋಬಾ ಹಣ್ಣಿನ ಮೊಲೆಗಳಿಗೆ ಇನ್ನೂ ಒತ್ತಿಕೊಳ್ಳುತ್ತಾ " ಪಾಪ, ಜ್ವರ- ಕೆಮ್ಮು ಇದೆ ನಿಂಗೆ..ಸ್ನಾನ ಮಾಡಬೇಡ ಇವತ್ತು...ನಾಳೆ ಬಂದು ನಾನೆ ಕೈ-ಕಾಲು ಮುಖ ತೊಳೆಸುತ್ತೇನೆ..ಆಯ್ತಾ...ಹಾರ್ಲಿಕ್ಸ್-ಹಾಲು ಕುಡಿ" ಎನ್ನುವುದೆ? ಅವಳ ಸೊಂಪಾದ ಮೊಲೆಗಳನ್ನು ಅಪ್ಪಿದ್ದ ಅವನಿಗೆ ಯಾವ ಹಾಲಿನ ಬಗ್ಗೆ ಹೇಳುತ್ತಿದ್ದಾಳೋ ಎಂದು ಅರಿಯಲಿಲ್ಲ. "ಬ್ರೆಡ್ ಸಾಕು ಅಂಟಿ" ಎನ್ನುತ್ತಾಇವನು ತಟ್ಟೆ ದೂರ ತಳ್ಳಲು ಅದನ್ನು ಇಡಹೋಗಿ ಬಿಂದೂ ಳ ನೈಟಿ ತೊಡೆ ಮೇಲೇರಿ,ಅವಳ ಕೇಶರಹಿತ ಸ್ಮೂತ್ ಮೀನಖಂಡ, ಬಾಳೆ ಕಂಭದಂತಾ ಅವಳ ಬಿಳಿ ತೊಡೆಗಳ ದರ್ಶನವಾಗುವುದೇ? ಬಿಂದು ಆಂಟಿ ಬೇಕೆಂದೆ ನಾಚಿಕೆ ನಟಿಸುತ್ತಾ " ಅಯ್ಯೊ ರಾಮಾ..ಇದು ಬೇರೆ ಚಿಕ್ಕ ನೈಟಿ...ಈ ಸೆಕೆಯಲ್ಲಿ ನೀನು ಪರವಾಗಿಲ್ಲಾ ಅಂದರೆ ತೆಗೆದು ಕೂತುಕೋತೀನಪ್ಪಾ..ನೀನು ಸಂಕೂಚ ಬೇಜಾರು ಮಾಡ್ಕೊಳ್ದಿದ್ರೆ ಸಾಕು...ಏನು?" ಅನ್ನಲು ಈಗಾಗಲೆ ೧೦೨ ಡಿಗ್ರೀ ಜ್ವರ - ಬಿ.ಪಿ, ಜಾಸ್ತಿಯಾಗುತ್ತಿದ್ದ ಕಾಮಚಂದ್ರನು, " ಪರವಾಗಿಲ್ಲ ಆಂಟಿ..ನೀವಿಗ ಹೋಗಿ ಬನ್ನಿ .ಎಷ್ಟೊ ಪರವಾಗಿಲ್ಲಾ...ನಾನು ಮಲ್ಕೋತೀನಿ" ಎಂದು ಶಿಷ್ಟಾಚಾರಕ್ಕೆ ಹೇಳಲು ಬಾಯೊಣಗಿ ಸಾಕು ಸಾಕಾಗಿ ಹೋಯಿತು... "ಉಶ್" ಎಂದ ಕಾಮೂ ಈಗಾಗಲೆ ಕಾದ ಕಭ್ಭಿಣದಂತಾಗಿದ್ದ ತನ್ನ ಸುಡು ಲಿಂಗವನ್ನು ಬೋರಾಲಾಗಿ ಮಲಗುತ್ತ ಒಂದು ಎಕ್ಸ್ಟ್ರಾ ದಿಂಬು ಇಟ್ಟುಕೊಂಡು ಒತ್ತಿಕೊಳ್ಳಲು ಶುರು ಮಾಡಿದನು..ಮೊದಲೆ ಜ್ವರದ ತಾಪ ;ಈಗ ಕಾಮಜ್ವರ- ರಕ್ತ ಸಂಚಾರ ಬೇರೆ ಜೋರಾಗಿದೆ...ಸೊಂಟ ಆಟೊಮ್ಯಾಟಿಕ್ ಆಗಿ ಏರಿಳಿಯಲಾರಮ್ಭಿಸಿತು, ಜಟಕಾ ಹೊಡೆಯುವಂತೆ... "ಹುಂ ಹೂಂ " ಎನ್ನುತ್ತಾ ಗೂಳಿ ಗುಟುರು ಹಾಕುತ್ತಾ ಪಡ್ಡೆಹುಡುಗು ಕಾಮ ಪಡುತ್ತ ತನ್ನ ನಿರೀಕ್ಶೆಗೂ ಮೀರಿ ಬೆಳೆದ ಬಿಸಿ ತುಣ್ಣೆಯನ್ನು ದಿಂಬಿಗೆ ಒತ್ತೊತ್ತಿ ಏರುತ್ತಿದಾನೆ...ಕಣ್ಣ ಮುಂದೆ ಬಿಂದು ಆಂಟಿಯ ಉಬ್ಬಿದ ಕೆಚ್ಚಲಿಂತಾ ಬಿರಿ ಸ್ತನಗಳು, ಅದರ ಮೃದು ಒತ್ತಡ, ಹಾಲು-ಬಿಳಿ ಅಮೃತಶಿಲೆಯಲ್ಲಿ ಕಡೆದ ಶಿಲಾಬಾಲಿಕೆ ತೊಡೆಗಳು ಮನದ ಪಟಲದಮುಂದೆ ’ರೀ-ಪ್ಲೇ ’ ಆಗುತ್ತಿದೆ..ತರಡು ಬೀಜದ ಚೀಲ ಸರ್ರನೆ ಮೇಲೇರಿ ರಸಸ್ರಾವ ಉತ್ಪಾದನೆ ಆರಂಭಿಸಿದೆ. ಇವನ ಕಾಮುಕ ಕೃತಕ ಮೈಥುನ ತನಗೇ ಚೆನ್ನಾಗಿದೆ ಅಂದು ಕೊಂಡು ಒಂಟಿ ಕೋಣೆಯೆಂದು ಭಾವಿಸಿ ದಿಂಬಿಗೆ ತನ್ನ ಬಲಿತ ಲಿಂಗ ಜಡಿಯುತ್ತಿದ್ದರೆ, ಬಾಗಿಲ ಮರೆಯಲ್ಲಿ ನಿಂತು ಇವನಿಗೆ ಅರಿವಾಗದಂತೆ ಅಷ್ಟೆ ಉಧ್ವೇಗದಿಂದ ಅದನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾಳೆ ಅಸಹಾಯಕ ಬಿಂದೂ ಆಂಟಿ!! ಉಸಿರು ಏರೇರಿ ಬೀಳುತ್ತಿದೆ...ನಿಪ್ಪಲ್ ಗಳು ಕಲ್ಲಾಗುತ್ತಿವೆ ಒಳಗೇ! ತೊಡೆಗಳು ಒಂದಕ್ಕೊಂದು ಒತ್ತಿ ಉಜ್ಜಾಡುತ್ತಾ ಸಲಿಲ ರಸ ಹರಿಯುವಂತಾಗುತ್ತಿದೆ...! ’ಇನ್ನು ಇವನನ್ನು ಬುಟ್ಟಿಗೆ ಹಾಕಿಕೊಳ್ಳದ ಬಿಡಬಾರದು...ತನ್ನ ಕಂಡ್ರೆ ಆಸೆಯಿದೆ...ಹೂಂ..ಅಲ್ಲಿ ನೋಡು..ಅಬ್ಬಾ... ಆ ದಿಂಬಿಗೆ ರೋಶದಿಂದ ಜಡಿದಾಡುತ್ತಿರುವುದು’ ಎಂದು ಹಲುಬಿಕೊಳ್ಳುತ್ತಾಮೆತ್ತಗೆ ಮಾಡಿಯಿಳಿದು ಮನಗೆ ತೆರೆದವಳಿಗೆ " ವರ್ಜಿನ್ ಹುಡುಗು ಸಾಮಾನು ಬೇರೆ...ಮದುವೆ ಆತಂಕವಿಲ್ಲ ಇನ್ನೂ...ಲೈಂಗಿಕ ರೋಗಗಳ ಭಯವಂತೂ ಇಲ್ಲವೆ ಇಲ್ಲಾ...ಆಸಕ್ತಿ ಲೆವೆಲ್ ಹೆಚ್ಚಾಗಿಯೆ ಇರುತ್ತದೆ’ ಎನ್ನುತ್ತ ಮನಸ್ಸು ಮಾಡಿದವಳಿಗೆ ಅಂದು ರಾತ್ರಿ ಜ್ಞಾಪಕ ಬಂದಿದ್ದೇ ತನ್ನ ಮನೆಯ ಬೇಸ್ ಮೆಂಟ್ ನಲ್ಲಿದ್ದ ಸಿನೆಮಾಗಳಿಗಾಗಿ ಮಾಡಿಸಿದ್ದ ೧೫ ಸೀಟು ಉಳ್ಳ ಪ್ರಿ-ವ್ಯೂ ಥಿಯೇಟರ್! ಇವಳು ಈ ನಿರ್ಧಾರಕ್ಕೆ ಬರುವಹೊತ್ತಿಗೆ ಅತ್ತ ರೂಮಿನಲ್ಲಿ ಹಾಸಿಗೆಗೆ ಗುಮ್ಮುತ್ತಿದ್ದ ಕಾಮೂ ನ ಅಂಗಚೇಷ್ಟೆ ಪರಾಕಾಶ್ಟೆಗೆ ಮುಟ್ಟಿ ಯುವ 8-ಇಂಚ್ ಲಿಂಗ ಬಿಗಿದು ವೀರ್ಯ ತುಂಬಿದ ಸಿರಿಂಝಿನಂತೆ ಅದು " ಚಿರ್! ಚಿರ್ ರ್!" ಎನ್ನುತ್ತಾ ಉಕ್ಕಿ ಉಕ್ಕಿ ಹರಿದು ಅವನ ಎದೆ ನಡುಗಿ,ಜ್ವರ ಉತ್ಕರ್ಶಕ್ಕೆ ಏರಿ, ದಿಂಬು ಒದ್ದೊದ್ದೆ ಯಾಗಿ ಹೋಗಿತ್ತು.. ತಾತ್ಕಾಲಿಕ ವಾಗಿ ಉದ್ರೇಕವೂ ಇಳಿದಿತ್ತು, ಬೆವೆರೂ ಹರಿದಿತ್ತು...’ಜ್ವರ ಬಿಟ್ಟಿದ್ದಕ್ಕೆ ಹೀಗೆ ಬೆವೆರು ಸುರಿಯುತ್ತಿದೆ ’ಎಂದು ಕೊಂಡ ಮುಗ್ಧ ಕಾಮೂ..ಪಾಪ.. ಇಷ್ಟಕ್ಕೆ ಅವನನ್ನು ಕಾಡುವುದು ಬಿಡದ ಬಿಂದು ಆಂಟಿ ಪದೆ ಪದೇ ಅವನ ಶುಶ್ರೂಶೆ ಗೆ ಬಂದಂತೆ ಮಾಡಿ, ಮೈಮುಟ್ಟಿ ಅಪ್ಪಿ, ತಬ್ಬಿ ತನ್ನ ಆಕರ್ಶಕ ಬಾಡಿ ಪ್ರದರ್ಶಿಸುವ ಯತ್ನ ಮಾಡುತ್ತಲೆ ಇದ್ದಳು...ಒಮ್ಮೆ ಸೀರೆಯ ಸೆರಗು ಜಾರಿಸಿ ಲೋ -ವಿ- ನೆಕ್ ಬ್ಲೌಸ್ ನಲ್ಲಿ ಹುದುಗಿದ್ದ೩೮-೪೦ ಇಂ.ಮೊಲೆ ಅವನಿಗೆ ಪುಗಸಟ್ಟೆ ದರ್ಶನ ವಿತ್ತರೆ, ಇನ್ನೊಮ್ಮೆ, ಪಾರದರ್ಶಕ ನೈಟಿಯಲ್ಲಿ ಮುದ್ದಾದ ಸಿಂಹ ಕಟಿ, ಸಮತಲ ಉದರ,ಸೊಗಸಾದ ನಾಭಿ, ಕೊಬ್ಬಿದ ಕುಂಡಿಗಳು ಸಾವಕಾಶವಾಗಿ ತೋರುವಳು,...ಮಗದೊಮ್ಮೆ ತನ್ನ ಜಿಮ್ ನಲ್ಲಿ ಉಪಯೋಗಿಸುವ ಟೆನ್ನಿಸ್ ಶಾರ್ಟ್ಸ್, ಬಿಗಿ ಟಿ-ಷರ್ಟ್ ನಲ್ಲಿ ಬರುವುದೇನು, ಮೈ ಮುಟ್ಟುವಂತೆ ಕೂತು ವಿಚಾರಿಸುವುದೇನು..ಒಟ್ಟಿನಲ್ಲಿ, ಅವನಿಗೆ ಜ್ವರದ ತಾಪ ಇಷ್ಟರ ಮಧ್ಯೆ ಕಡಿಮೆಯಾಗಿ ವಾಸಿಯಾಗಿದ್ದೇ ಆಶ್ಚರ್ಯ... ಅಂದ ಹಾಗೆ, ಹಾ! ಇದೆಲ್ಲ ಮಾಡಿ ರೂಮಿನ ಹೊರಹೋಗಿ ಕದ್ದು ನಿಂತು ಅವನು ಸ್ವ-ಮೈಥುನ ಹಾಸಿಗೆಯಲ್ಲಿ ಉತ್ಸಾಹದಿಂದ ಮಾಡಿಕೊಳ್ಳುವುದನ್ನು ನೋಡುವುದು ಮಾತ್ರ ಮರೆಯುತ್ತಿರಲಿಲ್ಲಾ..ಅವಳಿಗೇ ಆಗ ಕಾಮ ಜ್ವರ ಏರಿ ಬಿಡುವುದು.. ಇದೆಲ್ಲ ಕೊನೆಗೆ ಒಂದು ರೀತಿಯ ಮುಕ್ತಾಯ, ಇನ್ನೊಂದು ರೀತಿಯ ಹೊಸ ಅಧ್ಯಾಯ ಕಂಡಿದ್ದೆ ಆ ಸಿನೆಮಾ ಪ್ರಿ-ವ್ಯೂ ಥಿಯೇಟರ್ ನಲ್ಲಿ! ಅಂದು ಶನಿವಾರ ರಾತ್ರಿ..ಹೊರಗೆ ಮಳೆ...ಬೆಡ್ರೂಮಿನಲ್ಲಿ ಕಾಚ ಬ್ರಾ ಹಾಕದೆ ಬಿಂದು ಪ್ಲೇಗರ್ಲ್ ಎಂಬ ಹೆಂಗಸರ ಪೋಲಿ ಪುಸ್ತಕ ಓದುತ್ತಿದ್ದಾಳೆ...ಕಾಮುಕ ದೃಶ್ಯ, ಅಚ್ಚುಕಟ್ಟಾದ ನಗ್ನ ಗಂಡು ಮೈಗಳು...ಬಿಂದುಗೆ ಮೈಬಿಸಿಯೇರುತ್ತಿದೆ, ಕಾಮೂನ ಕಾಮವಶಪಡಿಸಿಕೊಳ್ಳಲು ಯೋಚಿಸುತ್ತಿದ್ದಾಳೆ.. ಒಂದು ಕಾಲದಲ್ಲಿ ಜಯಮಾಲಿನಿ ( ಏಳು ದಿನಕ್ಕೆ ಏಳು ಹೆಣ್ಣು ಧಾರಾವಾಹಿ ಓದಿ!)ತನ್ನ ಸಿನೆಮಾರಂಗದ ಗೆಳತಿ ಮತ್ತು ಇವಳು ಸೇರಿ ಚಿತ್ರ ನಿರ್ಮಾಪಕರಿಗಾಗಿ ತೆರೆದಿದ್ದ ಉತ್ತಮ ವ್ಯವಸ್ಥೆಯುಳ್ಳ ಥಿಯೇಟರ್ ಅದುವೇ! ತನ್ನ ಬಂಗಲೆಯ ಬೇಸ್ಮೇಂಟ್ ನಲ್ಲಿದೆ, ಅದರ ಬೀಗದ ಕೈ ತನ್ನ ಲ್ಲಿಯೇ ಇದೆ. ಬಹಳ ಅಪರೂಪವಾಗಷ್ಟೆ ಉಪಯೋಗವಾಗುತ್ತಿದ್ದ ಈ ಚಿತ್ರಮಂದಿರ, ಏರ್ ಕಂಡಿಶನ್, ಸ್ಟೀರಿಯೊ ಮೊದಲಾದ ಎಲ್ಲ ಸೌಕರ್ಯ ಇದ್ದು, ೧೫ ಸುಖಾಸನಗಳನ್ನು ಹೊಂದಿತ್ತು.ಇತ್ತೀಚೆಗಶ್ಟೆ ತನ್ನ ಟೆನ್ನಿಸ್ ಕ್ಲಬ್ ಗೆಳತಿ ನರ್ಮದಾ ಕೊಟ್ಟ ೨ ಗಂಟೆ ಕಾಲದ ಅತಿ-ಪೋಲಿ xxx ಚಿತ್ರವೊಂದರ DVD ಸಿಕ್ಕಿದೆ. ಅದರಲ್ಲಿ ಒಬ್ಬ ಕರಿಯ ಆಫ್ರಿಕನ್ ಹೀರೊ ಹಲ ಅಮೆರಿಕನ್ ಬಿಳಿ ಹಗೂ ಸ್ಪಾನಿಶ್ ಮತ್ತು ಏಶ್ಯನ್ ಹೆಂಗಸರನ್ನು ಸರದಿ ಸರದಿ ಯಾಗಿ ಜಡಿದು ಮೈಕೈ ಹಣ್ಣಾಗಿಸುತ್ತಾನೆ.....ಅದನ್ನೇನಾದರೂ ಕಾಮೂ ಜತೆ ನಾನೆ ಕೂತು ನೋಡಿದರೆ, ಹೇಗಿರುತ್ತೆ ಎಂಬ ಯೋಚನೆ ಬಂದಾಗಲೆ ಅವಳ ಶಾಟ ನಿಮರಿ ನಿಂತಿತ್ತು..ತುಲ್ಲು ನೀರೂರಿತು! "ನಾಳೆ ಭಾನುವಾರ ...ನಾವಿಬ್ಬರು ಒಂದು ಪಿಕ್ಚರ್ ನೋಡೋಣ..ಕೆಳಗೆ ಥಿಯೇಟರ್ ಗೆ ಬಂದುಬಿಡು ೩ ಗಂಟೆಗೆ...ನಿನ್ನ ಹೊಸ ಬರ್ಮುಡಾ ಚಡ್ದಿ , ಟೀ-ಶರ್ಟ್ ಹಾಕಿಕೊಂಡು ಬಾ.." ಅಂತಾ ಸೆರಗು ಜಾರಿಸಿ ತನ್ನ ಹಾಲಿನ ಡೈರಿ ತೋರಿಸುತ್ತಾ ಅವನನ್ನು ಊಟದ ಸಮಯದಲ್ಲಿ ಕರೆಯಲು ಅವನು ಉಗುಳು ನುಂಗಿ ಹೂ ಹುಟ್ಟುವ ಮೊದಲೇ ಅವನ ಎವೆರೆಡಿ ಯುವ ಲಿಂಗ ತಲೆಯಾಡಿಸಿಬಿಟ್ಟಿತ್ತು. ಆ ಪ್ರಿವ್ಯು ಥಿಯೇಟರ್ನ ಬಾಗಿಲಲ್ಲಿ ನಿಂತಿದ್ದ ಬಿಂದುಳ ದೇಹ ಸೊಬಗನು ಕಂಡು ನಮ್ಮ ಕಾಮೂ ಬೆರಗಾಗಿಬಿಟ್ಟ... ಚಿಕ್ಕದಾದ ಬಿಗಿಯಾದ ಟೆನ್ನಿಸ್ ಶಾರ್ಟ್ಸ್ ಮತ್ತು ಎರಡು ಸೈಜ್ ಚಿಕ್ಕ ಟಿ ಶರ್ಟ್ ಹಾಕಿದ್ದ ಅಪೂರ್ವ ಪೊಗದಸ್ತು ಸುಂದರಿಯ ಉಬ್ಬುತಗ್ಗುಗಳು ಕಾಮೂ ನ ಊಹೆಗೆ ಏನೂ ಮಿಗಿಸಿರಲಿಲ್ಲ... DVD ಪ್ಲೇಯರ್ ನಲ್ಲಿ ಸಿ.ಡಿ. ಹಾಕಿ ಮೈ-ಗೆ-ಮೈ ಅಂಟಿಕೊಂಡು ಕೂತ ಅವಳು ಏ. ಸಿ. ಬೇರೆ ಜಾಸ್ತಿ ಮಾಡಿಬಿಟ್ಟಳು...ಏನೋ ಒಂತರಾ ಚಳಿ..ಏನೋ ಒಂತರಾ ಬಿಸಿ... XXX ತರಹದ ಇಂಗ್ಲೀಶ್ ಚಿತ್ರ ಆರಂಭವಾಗುತ್ತಲೆ,ಇತ್ತ ಇಬ್ಬರೆ ನೋಡಿ, ಇವನ ಗಂಡು ತೊಡೆಗೆ ತನ್ನ ವಯಸ್ಕ ನುಣ್ಣನೆಯ ತೊಡೆ ಅಂಟಿಸಿ ," ನೋಡೊ..ಹೇಗೆ ಮಜಾ ಮಾಡ್ತಾರೆ" ಅಂತಿದಾಳೆ. ಕಪ್ಪು ಕರಿಯ ನೀಗ್ರೋ ಹೀರೊ ಬೆಳ್ಳನೆಯ ಯುರೋಪಿಯನ್ ಯುವತಿಯ ಮೊಲೆ ಬಿಚ್ಚಿ ನಾಯಿ ಹಾಲು ನೆಕ್ಕುವಂತೆ ಲೊಚಗುಟ್ಟುತ್ತಾ ನೆಕ್ಕುತ್ತಿದ್ದಾನೆ. ಅವಳೋ ಅವನ ಕಾಚಾ ಬಿಚ್ಚಿ ಇದ್ದಿಲ ಬಣ್ಣದ ಒಂದು ಅಡಿ ಉದ್ದವಿರುವ ಆಶ್ಚರ್ಯಕರ ಲಿಂಗವನ್ನು ಕಣ್ಣಿಗೊತ್ತಿಕೊಂಡು ಬಾಯಲ್ಲಿ ತುಂಬಿಸಲಾರದೆ ತುಂಬಿಸಿ ನುಂಗುತ್ತಿದ್ದಾಳೆ...ಕರಿಯ ಈಗ ಅವಳ ಜುಟ್ಟು ಹಿಡಿದು ಬಾಯಿಗೆ ಹಟಸಂಭೋಗ ಮಾಡಿಸಿಕೊಳ್ಳುತ್ತಿದ್ದಾನೆ, ಕಪ್ಪನೆಯ ಆಫ್ರಿಕನ್ ಕೋಣದಂತೆ ಕಾಣುತ್ತಾ, ಗುಟುರು ಹಾಕುತ್ತಾ. " ಪ್ರೇಮ- ಕಾಮ ಅಂದ್ರೆ ಇದೇ ನೋಡೊ...ಹೇಗಿರತ್ತೆ..ಇದನ್ನು ಬಿಟ್ಟು ನಮ್ಮ ದೇಶದ ಗಬ್ಬು ಕನ್ನಡ- ಹಿಂದಿ ಚಿತ್ರಗಳಲ್ಲಿ ಬರೇ ಹಾಡು ಹಾಡುವುದು, ಮರ ಸುತ್ತುವುದು, ಅಷ್ಟರಲ್ಲಿ ಮಗು ಹುಟ್ಟುವುದು ಅಂತಾ ತೋರಿಸ್ತಾರೆ.." ಅಲ್ವೇನೋ?" ಎನ್ನುತ್ತಾ ಬೆಣ್ನೆಮೈಯ್ಯಿನ ಬಿಂದು ಕಾಮೂನ ಹೆಗಲಿನ ಸುತ್ತ ಕೈ ಹಾಕಿ ಎಳೆದುಕೊಳ್ಳುತ್ತಾ , ಭುಜಕ್ಕೆ ತನ್ನ ಪುಶ್ಕಳ ಮೆದು ಮೊಲೆಗಳನ್ನು ಒತ್ತುತ್ತಾ ಪ್ರಚೋದಿಸುತ್ತಿದ್ದರೆ, ಅವನ ಸಾಮಾನು ಕಬ್ಬಿಣದ ಕೊಂಬಿನಂತೆ ಚಡ್ಡಿಯಲ್ಲಿ ಎದ್ದೆದ್ದು ಕುಣಿಯಹತ್ತಿದೆ. "ಆಂಟಿ ಇದೆಲ್ಲ ನೋಡಿದ್ರೆ" ಎನ್ನುತ್ತಾಕಾಮೂ ಈಗ ತೆರೆಯಮೇಲಿನ ಕರಿಯನ ಲಿಂಗ ಮೊಳದುದ್ದ ಬೆಳೆದು ಕೆಂಪು ಮೈಯ್ಯಿನ ಯುವತಿಯ ಯೋನಿ ಕಮಲವನ್ನು ಸೀಳಿ ಸೀಳಿ ಹೊಕ್ಕು ಗುದ್ದುತ್ತಿರುವುದನ್ನು ಕೈತೋರುತ್ತಾ," ನನಗೆ ಒಂತರಾ ಆಸೆಯಾಗಿ ನಿಮಗೆ ಏನೇನೋ ಮಾಡಬೇಕೆನ್ನಿಸುತ್ತದೆ" ಎಂದು ತೊದಲಲು, ಬಿಂದು ಆಂಟಿ ಹರ್ಶದಿಂದ ಕಿಲಕಿಲನೆ ನಗುತ್ತಾ " ಹೌದೇನೊ ಹುಚ್ಚಪ್ಪಾ...ನಂಗೆ ಆಗಲೆ ಹೇಳಬಾರದೆ ?" ಎಂದು ನಗುತ್ತಾ ಎದ್ದು ನಿರ್ಜನವಾದ ಅ ಚಿತ್ರಮಂದಿರದಲ್ಲಿ ತನ್ನ ಟೀ-ಶರ್ಟ್ ತೆಗೆದು ನೆಲದಮೇಲೆ ಬಿಸಾಕಿ ಅವನ ಮುಂದೆ ಲೇಸ್ ಬ್ರಾ ದಲ್ಲಿ ಹಿಡಿದೂ ಹಿಡಿಯಲಾರದ ಉಬ್ಬಿದ ಕುಚಗಳನ್ನು ಗಲಗಲನೆ ಅಲ್ಲಾಡಿಸುತ್ತಾ ಅಂಟಿ ಕೂತು ಅವನ ಕೆನ್ನೆ ಕಿವಿ ಕಚ್ಚಿ ಮುದ್ದಿಸಲಾರಬಿಸಿದಳು...ಕಾಮೂನ ಕೈಗಳು ಈಗ ಪುಶ್ಕಳವಾದ ಪರಂಗಿ ಹಣ್ಣು ಸ್ತನಗಳನ್ನು ಮನಬಂದಂತೆ ಹಿಂಡಿ ಹಿಸುಗುತ್ತಿವೆ...ಬಿಂದುಳ ಕೈ ಅವನ ಗಡಸು ಪುರುಶತ್ವವನ್ನು ಚಡ್ಡಿಯ ಬಾಯಿಂದ ಮೇಲೇರಿಸಿ ಅದರ ಕೆಂಪು ತುದಿ ಹೊರಬೀಳುವಂತೆ ಎತ್ತಿದೆ!ಚಡ್ಡಿಯ ಅಂಚು ಮೇಲೇರಿ ಅವಳ ತಂಪಾದ ಕೈಮುಶ್ಟಿಗೆ , ಅವನ ಬಿಸಿ ಉದ್ರಿಕ್ತ ಬುಲ್ಲಿ ಸಿಕ್ಕಿಹಾಕಿಕೊಂಡಿದೆ..ಅವಳಲ್ಲಿ ನೀವುವುದೇನು, ಅದರ ಗಾತ್ರ, ಬಿಸಿ ತಡಕುವುದೇನು..? ಅವನ ಎದೆ ನಗಾರಿಯಂತೆ ಅವಳಿಗೆ ಕೇಳಿಸುವುದೇನೋ ಎಂಬಂತೆ ಹೊಡೆದುಕೊಳ್ಳುತ್ತಿದೆ...! ಅಲ್ಲಿ ತೆರೆಯಮೆಲೆ ಆವೇಶಪಡುತ್ತಿರುವ ಜೋಡಿ... ಈಗ ಮೇಜಿನ ಮೇಲೆ ಅವಳನ್ನು ನಾಯಿ ತರಹ ನಿಲ್ಲಿಸಿ ಅವಲ ಕೆಂಪು ತಿಗ ಬಿಚ್ಚಿ ತನ್ನ ಕರಿ ಪ್ರಾಣಿ ಸಾಮಾನಿನಿಂದ ಧನಾ ಧಣ್ ಎಂದು ಕೊಬ್ಬಿ ಕೊಬ್ಬಿ ಕೇಯುತ್ತಿದ್ದಾನೆ ಆ ಲಕ್ಕಿ ಆಫ್ರಿಕನ್ ಯುವಕ.." ಬಿಚ್, ಫಕ್" ಎಂದೆಲ್ಲಾ ಅವಳನ್ನು ಕಾಮಾವೇಶದಿಂದ ಚಚ್ಚುತ್ತಿದ್ದಾನೆ. ಅವಳೊ "ಅಮ್ಮಾ..ಅಯ್ಯಾ..ಓ...ಐ ಕಾನ್ಟ್"ಎಂಬಂತೆ ದಮ್ಮಯ್ಯ ಹಾಕಿ ಹೊಡೆಸಿಕೊಳ್ಳುತ್ತಿದ್ದಾಳೆ. ಕಾಮೂನ ಕೈಯನ್ನು ಬಿಂದು ಈಗ ತನ್ನ ಚಿಕ್ಕ ಚೊಣ್ಣ ಚಡ್ಡಿಯ ಸಂದಿಗೆ ಸೇರಿಸಿ ಕೊಳ್ಳುತ್ತಿದ್ದಾಳೆ...ಅವನ ಅದೃಶ್ಟವಂತ ಕೈಗಳು ಅವಳ ನುಣ್ಣನೆಯ ರೇಶಿಮೆ ತೊಡೆಗಳ ಬಿಸುಪಿನಲ್ಲಿ ಮೇಲೆ ಮೇಲೆ ಏರಿ ಹೋಗಿ ಆ ಸ್ತ್ರೀತ್ವದ ತ್ರಿಕೋಣದ ಹತ್ತಿರ ಬಂದು ತಾಕಿ ಮುಂದೆಲ್ಲಿ ದಾರಿ ಎಂದು ಪಾಪ ಹುಡುಕುತ್ತಿದೆ..ಅಲ್ಲಲ್ಲಿ ಬೆದಕುತ್ತಿದೆ. ಸರ್ರನೆ ಎದ್ದು ತನ್ನ ಉಳಿದ ಚಡ್ದಿ ಜಾರಿಸಿ ತನ್ನ ಹುಟ್ಟಿದ ಅವತಾರವನ್ನೇ ಆ ಮಂದ ಬೆಳಕಿನಲ್ಲಿ ಆವನಿಗೆ ತೋರುತ್ತ ಅವನ ತೊಡೆಯೇರಿದ್ದಾಳೆ...ಕಾಮೂ ನ ಜೀವ ಬಾಯಿಗೆ ಬಂದಿದೆ..ಬಿಂದುಳ ಹಲ ವರ್ಶಗಳ ಹಸಿದ ಕಾಮಿನಿಯ ಭಾವುಕತೆ ಪರವಶತೆ ತಲುಪಿದೆ..ಒಬ್ಬರನ್ನೊಬ್ಬರು ಮನಬಂದಂತೆ ಲೊಚಕ್ ಪಚಕ್ ಎಂದು ಎಲ್ಲೆಂದರಲ್ಲಿ ಮುದ್ದಿಸುತ್ತ, ನೆಕ್ಕುತ್ತ ಕೈಯಾರೆ ಹಿಸುಗಾಡುತ್ತಾ ಕಂಪಿಸುತ್ತಿದ್ದಾರೆ. " ಒಳ್ಳೆ ಕಾಮು..ನಿಂಗೆ ಬೇಕಾದ್ದೆಲ್ಲಾ ಕೊಡ್ತೀನಿ.." ಎನ್ನುತ್ತಾ ಅವನ ಕರಿ ಬಾಳೆಕಾಯಿಯಂತಾ ಸಾಮಾನನ್ನು ಚಡ್ಡಿಯಿಂದ ಬಿಡುಗಡೆ ಮಾಡಿ ಸವರಿ ಮುದ್ದಾಡುತ್ತಿದ್ದಾಳೆ. ತೆರೆಯ ಮೇಲೆ ಕರಿಯನು ತನ್ನ ಯುವತಿಯ ತುಲ್ಲು ನೆಕ್ಕಿ ಮುಗಿಸಿ ತನ್ನ ಮೊಳದುದ್ದದ ಕುದುರೆ ಲಿಂಗವನ್ನು ಹಿಂದಿನಿಂದ ತೂರಿಸಿ ತೂರಿಸಿ, ಬಗ್ಗಿ ಮೊಲೆಗಳನ್ನೂ ಹಿಸುಗುತ್ತಾ ಕಾಮಾತುರತೆಯಿಂದ ರೇಪ್ ಮಾಡಿಯೇ ಬಿಡುತ್ತಿದ್ದಾನೆ ಅನಿಸುತಿದೆ...ಥಿಯೇಟರ್ ನಲ್ಲಿ ವಾತಾವರಣ ಹಸಿ ಬಿಸಿ ಕಾಮುಕತೆಯ ಪರಾಕಾಷ್ಟೆ ತಲುಪುತ್ತಿದೆ. ಮುಂದೆ ತೆರೆಯಮೇಲೆ ಕೇದು ಜಡಿಯುತ್ತುವ ನೀಗ್ರೋ ಯುವಕ, ಆ ಯುರೋಪಿಯನ ಹೆಣ್ಣಿನ ಕಾಮುಕ ಆವೇಶದ ಚೀರಾಟ... ಇಲ್ಲಿ ಕಣ್ಣ ಮುಂದೆ, ಬೆಣ್ಣೆಯಂತಾ ಬಿಂದು ಆಂಟಿಯ ನಗ್ನ ತಿಗದ ಸೀಳಿನಲ್ಲಿ ಕಾಣುತ್ತಿರುವ ಒದ್ದೆ ಯೋನಿ...ಯಾರಿಗುಂಟು, ಯಾರಿಗಿಲ್ಲ ಇಂತಾ ಅವಕಾಶ? "ಹಾ..ಹೂ ..ಅಯ್ಯೋ ನನ್ ರಾಜ" ಎನ್ನುತ್ತಾ ಬಿಂದು ತನ್ನ ಕುಂಬಳಕಾಯಿ ಗಾತ್ರದ ತಿಕಗಳನ್ನು ಸುತ್ತಿಸುತ್ತಾ ಅವನ ವರ್ಜಿನ್ ತುಣ್ಣೆಯನ್ನು ಲಕ್ಷಣವಾಗಿ ಸುರಕ್ಶಿತವಾಗಿ ತನ್ನ ಗರ್ಭಕ್ಕೆ ಸೇರಿಸಿಯೇ ಬಿಟ್ಟಳು. ಆಹಾ..ಆ ಚಿತ್ರದ ನೀಗ್ರೋ ಹೀರೊ ಏನು ಜಾಸ್ತಿ, ನಮ್ಮ ಕಾಮೂ ಏನು ಕಮ್ಮಿ...ಬಿರುಸಾದ ಕಾಮುಕ ಸಂಭೋಗ ಎರಡೂ ಕಡೆ ಜಾರಿಯಾಗಿದೆ. ಅಲ್ಲಿ ತೆರೆಯಮೇಲೆ ಕರಿಯ ತನ್ನ ಪ್ರೇಯಸಿಯನ್ನು ಮೇಜೆಲ್ಲ ಅಲ್ಲಾಡಿ ಹೋಗುವಂತೆ ಗುನ್ನ ಹೊಡೆಯುತ್ತಿದ್ದರೆ, ಇಲ್ಲಿ ರುಚಿ ಕಂಡ ಪ್ರಾಣಿಯಂತೆ, ಬೇಗ ಕೇದಾತದ ಗರಡಿ ಅರಿತ ಕಾಮೂ ಕೂಡಾ ಮುಂದೆ ಬಗ್ಗಿ ನಿಂತಿದ್ದ ಬಿಂದು ಆಂಟಿ ಹಿಡಿದಿದ್ದ ಮುಂದಿರುವ ಚೇರ್ ಗಳು ಬಿದ್ದು ಹೋಗಬೇಕು ಹಾಗೆ, ಅವಳ ಕೊಬ್ಬಿದ ಉಂಡೆ ತಿಗಗಳನ್ನುತನ್ನ ಮುಷ್ಟಿಯಲ್ಲಿ ಬಿಗಿ ಹಿಡಿದು ದೆಂಗುತ್ತಿದ್ದಾನೆ... ಅವನ ೯ ಇಂಚಿನ ಸಾಮಾನು ಅವಳ ವಯಸ್ಕ ಯೋನಿಯ ತಳ ಕಚ್ಚುವಂತೆ ಬಿಗಿ ಯಾಗಿ ತಾನೂ ಕಾಡು ಹಂದಿಯಂತೆ ಗುಟುರುಹಾಕುತ್ತಾ ಗುಮ್ಮಿ ಗುಮ್ಮಿ ಬೆದೆಯಿಳಿಸುತ್ತಿದ್ದಾನೆ. "ಚಟ್ ಫಟ್..ಫಟಾರ್‍" ಎಂದು ತಿಗದ ಚರ್ಮ ಕೆಂಪಾಗುವಂತೆ ಕೆಯ್ಯುವ ಹುಮ್ಮಸ್ಸಿನಲ್ಲಿ ಬಾರಿಸುತ್ತಿದ್ದಾನೆ...ಆದರೆ ಅದೆಲ್ಲಾ ಕಾಮಪೀಡಿತೆ , ಹಸಿದ ಬಿಂದೂ ಗೆ ವರದಾನದಂತಾಗಿದೆ.."ಆಂಟಿ ಆಂಟಿ" ಎನ್ನುತ್ತಾ ಅವಳನ್ನು ಭಂಗಿ-ಭಂಗಿಯಲ್ಲು ಬದಲಿಸಿ ಬದಲಿಸಿ ದಂಚುತ್ತಿದ್ದಾನೆ.
OSCAR-2019
ಬೆಂಗಳೂರು, ಮಾ.5-ಮುಂದಿನ ಚುನಾವಣೆಗೆ ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ದೊಮ್ಮಲೂರು ವಾರ್ಡ್ ಬಿಬಿಎಂಪಿ ಸದಸ್ಯ ಲಕ್ಷ್ಮಿನಾರಾಯಣ್ (ಗುಂಡಣ್ಣ) ಅವರಿಗೆ ಸ್ಥಳೀಯ ಸಂಘ ಸಂಸ್ಥೆ ಗಳಿಂದ ಬೆಂಬಲ ವ್ಯಕ್ತವಾಗಿದೆ.
OSCAR-2019