id
stringlengths
3
6
url
stringlengths
33
779
title
stringlengths
1
95
text
stringlengths
3
190k
2114
https://kn.wikipedia.org/wiki/%E0%B2%9A%E0%B2%A6%E0%B3%81%E0%B2%B0%E0%B2%82%E0%B2%97%20%28%E0%B2%86%E0%B2%9F%29
ಚದುರಂಗ (ಆಟ)
ಚದುರಂಗ (ಚೆಸ್) ಇಬ್ಬರು ಆಟಗಾರರಿಂದ ಆಡಲ್ಪಡುವ ಒಂದು ಆಟ - ಇದನ್ನು ೬೪ ಚೌಕಗಳಿರುವ ಮಣೆಯ ಮೇಲೆ ಆಡಲಾಗುತ್ತದೆ. ಮಣೆಯ ಮೇಲಿನ ಚೌಕಗಳು ಕಪ್ಪು ಮತ್ತು ಬಿಳುಪು ಬಣ್ಣಗಳಿಂದ ಕೂಡಿದ್ದ ಒಂದು ಕಪ್ಪು ಮತ್ತು ಒಂದು ಬಿಳಿ - ಹೀಗೆ ಜೋಡಿಸಲ್ಪಟ್ಟಿರುತ್ತವೆ. ಆಟದ ಪ್ರಾರಂಭದಲ್ಲಿ ಪ್ರತಿ ಆಟಗಾರನ ಬಳಿ ೧೬ ಕಾಯಿಗಳಿರುತ್ತವೆ - ಒಂದು ರಾಜ, ಒಂದು ರಾಣಿ, ಎರಡು ಆನೆ, ಎರಡು ಕುದುರೆ, ಎರಡು ಒಂಟೆ ಮತ್ತು ಎಂಟು ಪದಾತಿಗಳು. ಒಬ್ಬ ಆಟಗಾರನ ಕಾಯಿಗಳು ಸಾಮಾನ್ಯವಾಗಿ ಬಿಳಿ ಬಣ್ಣದವಾಗಿದ್ದು ಇನ್ನೊಬ್ಬ ಆಟಗಾರನವು ಕಪ್ಪು ಬಣ್ಣದವಾಗಿರುತ್ತವೆ. ಪ್ರತಿ ಕಾಯಿಯೂ ಸಹ ವಿಶಿಷ್ಟ ರೀತಿಯಲ್ಲಿ ಚಲಿಸುತ್ತದೆ ಹಾಗೂ ಎದುರಾಳಿಯ ಕಾಯಿಗಳ ಮೇಲೆ ದಾಳಿ ನಡೆಸಬಲ್ಲುದು. ಆಟದ ಉದ್ದೇಶ ಎದುರಾಳಿಯ ರಾಜನ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಲಲು ಯಾವ ಚೌಕಗಳೂ ಇಲ್ಲದ ಹಾಗೆ ಮಾಡುವುದು - ಇದಕ್ಕೆ ಚೆಕ್‍ಮೇಟ್ ಎಂದು ಕರೆಯಲಾಗುತ್ತದೆ. ಪರಿಚಯ ಚದುರಂಗ ಅದೃಷ್ಟವನ್ನು ಅವಲಂಬಿಸಿದ ಆಟವಲ್ಲ. ಶುದ್ಧವಾಗಿ ಆಟಗಾರರ ಆಲೋಚನೆ, ಯೋಜನಾ ಸಾಮರ್ಥ್ಯ ಮತ್ತು ಮುಂದಾಲೋಚನೆಗಳನ್ನು ಅವಲಂಬಿಸಿದ ಆಟ. ಹಾಗಿದ್ದೂ, ಈ ಆಟ ಎಷ್ಟು ಕ್ಲಿಷ್ಟವಾಗಿರಬಲ್ಲುದೆಂದರೆ ಒಂದು ಪಂದ್ಯದಲ್ಲಿ ಸಾಧ್ಯವಿರಬಹುದಾದ ಒಟ್ಟು ನಡೆಗಳ ಸಂಖ್ಯೆ ವಿಶ್ವದಲ್ಲಿರುವ ಎಲ್ಲ ಪರಮಾಣುಗಳ ಸಂಖ್ಯೆಗಿಂತಲೂ ಹೆಚ್ಚು ಎಂದು ಲೆಕ್ಕ ಹಾಕಲಾಗಿದೆ! ಚದುರಂಗ, ಪ್ರಪಂಚದ ಅತ್ಯಂತ ಜನಪ್ರಿಯ ಆಟಗಳಲ್ಲಿಯೂ ಒಂದು. ಕೆಲವರ ವರ್ಣನೆಯಂತೆ, ಇದು ಕೇವಲ ಆಟವಾಗಿರದೆ ಇದೊಂದು "ಕಲೆ," "ವಿಜ್ಞಾನ," "ವರ್ಚುಯಲ್ ಯುದ್ಧಕಲೆ," ಮತ್ತು ಮಾನಸಿಕ ವ್ಯಾಯಾಮ ಎಂದು ವರ್ಣಿಸಿದವರೂ ಉಂಟು. ಮನರಂಜನೆಗಾಗಿ ಹಾಗೂ ಸ್ಪರ್ಧಾತ್ಮಕವಾಗಿ ಪ್ರಪಂಚದಾದ್ಯಂತ ಈ ಆಟವನ್ನು ಆಡಲಾಗುತ್ತದೆ. ಅಂತರಜಾಲ ತಾಣಗಳ ಮೂಲಕ, ಈಮೇಲ್ ಮೂಲಕ ಸಹ ಇದನ್ನು ಬಹಳಷ್ಟು ಆಡಲಾಗುತ್ತದೆ. ಚದುರಂಗ ಆಟಕ್ಕೆ ಸಂಬಂಧಪಟ್ಟ ಇತರ ಆಟಗಳೂ ಪ್ರಪಂಚದ ವಿವಿಧೆಡೆಗಳಲ್ಲಿ ಜನಪ್ರಿಯ - ಚೀನಾದ್ ಶಿಯಾಂಗ್-ಕಿ, ಜಪಾನ್ ನ್ ಶೋಗಿ ಮೊದಲಾದವು ಈ ಗುಂಪಿಗೆ ಸೇರುತ್ತವೆ. ಚರಿತ್ರೆ ಚದುರಂಗ ಉಗಮಗೊಂಡದ್ದು ಎಲ್ಲಿ ಎಂಬುದರ ಬಗ್ಗೆ ಅನೇಕ ಊಹಾಪೋಹಗಳು ಇವೆ - ಗ್ರೀಸ್, ಭಾರತ, ಈಜಿಪ್ಟ್ ಮೊದಲಾದ ದೇಶಗಳಲ್ಲಿ ಉಗಮಗೊಂಡಿತು ಎಂದು ವಿವಿಧ ಚರಿತ್ರಕಾರರ ಅಭಿಪ್ರಾಯ. ಆದರೆ ಸಾಮಾನ್ಯವಾಗಿ ಒಪ್ಪಲ್ಪಟ್ಟಿರುವ ಸಿದ್ಧಾಂತದಂತೆ ಇಂದಿನ ಚದುರಂಗ ಆಟದ ಪೂರ್ವರೂಪದ ಉಗಮ ಸುಮಾರು ಕ್ರಿ.ಶ. ಆರನೇ ಶತಮಾನದ ಭಾರತದಲ್ಲಿ ಆಯಿತು. ಭಾರತದಿಂದ ೧೦ ನೇ ಶತಮಾನದ ನಂತರ ಮಧ್ಯಪೂರ್ವ ದೇಶಗಳ ಮೂಲಕ ಸ್ಪೇನ್ ಮತ್ತು ಇತರ ಯೂರೋಪಿಯನ್ ದೇಶಗಳತ್ತ ಹರಡಿತು ಎಂದು ಹೇಳಲಾಗುತ್ತದೆ. ಆಧುನಿಕ ಚದುರಂಗ ೧೫ ನೆಯ ಶತಮಾನದಿಂದ ಇತ್ತೀಚೆಗೆ ಚದುರಂಗದ ನಿಯಮಗಳು ಸಾಕಷ್ಟು ಬದಲಾಗಿವೆ. ವಿವಿಧ ಕಾಯಿಗಳು ಚಲಿಸುವ ರೀತಿಯೂ ಸಹ ಸ್ವಲ್ಪ ಬದಲಾಗಿದೆ. ಮೊದಲು ಒಂಟೆ ತನ್ನ ನಾಲ್ಕು ಮೂಲೆಗಳ ದಿಕ್ಕಿನಲ್ಲಿ ಎರಡು ಚೌಕಗಳಷ್ಟು ಮಾತ್ರ ಚಲಿಸಬಹುದಾಗಿತ್ತು. ರಾಣಿ ಇದೇ ದಿಕ್ಕುಗಳಲ್ಲಿ ಒಂದೇ ಚೌಕ ಚಲಿಸುತ್ತಿತ್ತು. ೧೫ ನೆಯ ಶತಮಾನದ ಕೊನೆಗೆ ಇಟಲಿ ದೇಶದಿಂದ ಹೊಸ ನಿಯಮಗಳ ಪಾಲನೆ ಶುರುವಾಯಿತು. ಪದಾತಿಗಳು ತಮ್ಮ ಮೊದಲ ನಡೆಯಲ್ಲಿ ಒಂದು ಅಥವಾ ಎರಡು ಚೌಕಗಳನ್ನು ಕ್ರಮಿಸುವ ಸಾಮರ್ಥ್ಯ ಪಡೆದವು. ರಾಣಿ ಅತ್ಯಂತ ಹೆಚ್ಚು ಸಾಮರ್ಥ್ಯವುಳ್ಳ ಕಾಯಿಯಾಯಿತು. ಆನ್ ಪಾಸಾನ್, ಕ್ಯಾಸಲಿಂಗ್ ಮೊದಲಾದ ವಿಶಿಷ್ಟ ನಿಯಮಗಳು ಸಹ ಬೆಳಕಿಗೆ ಬಂದವು. ಚೆಸ್ ಕಾಯಿಗಳ ಆಕಾರ ಸಹ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಈಗ ಸರ್ವೇಸಾಮಾನ್ಯವಾಗಿ ಉಪಯೋಗಿಸಲಾಗುವ ವಿನ್ಯಾಸವನ್ನು ಮೊದಲಿಗೆ ೧೮೪೯ ರಲ್ಲಿ ನಥಾನಿಯಲ್ ಕುಕ್ ಪ್ರಾರಂಭಿಸಿದ್ದು. ಆಗಿನ ಪ್ರಸಿದ್ಧ ಆಟಗಾರರಾದ ಹೊವರ್ಡ್ ಸ್ಟಾಂಟನ್ ಇದನ್ನು ಪ್ರಸಿದ್ಧಗೊಳಿಸಿದ್ದರಿಂದ ಈ ವಿನ್ಯಾಸಕ್ಕೆ "ಸ್ಟಾಂಟನ್ ವಿನ್ಯಾಸ" ಎಂದೇ ಕರೆಯಲಾಗುತ್ತದೆ. ಚೆಸ್ ಪಂದ್ಯಾವಳಿಗಳಲ್ಲಿ ಉಪಯೋಗಿಸಲ್ಪಡುವ ರೀತಿಯ ಚೆಸ್ ಮಣೆ, ಕಾಯಿಗಳು ಮತ್ತು ಗಡಿಯಾರವನ್ನು ಚಿತ್ರದಲ್ಲಿ ಕಾಣಬಹುದು. ಅಂತಾರಾಷ್ಟ್ರೀಯವಾಗಿ ಈ ಆಟದ ಅಧಿಕೃತ ಉಸ್ತುವಾರಿ ನಡೆಸುವ ಸಂಸ್ಥೆ ಫಿಡೆ (FIDE). ವಿವಿಧ ದೇಶಗಳಲ್ಲಿ ಸಹ ಅನೇಕ ರಾಷ್ಟ್ರೀಯ ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಕಂಪ್ಯೂಟರ್ ಚೆಸ್ ಇತ್ತೀಚೆಗೆ ಅತ್ಯಂತ ಸಮರ್ಥವಾಗಿ ಚದುರಂಗವನ್ನು ಆಡಬಲ್ಲ ಕಂಪ್ಯೂಟರ್ ತಂತ್ರಾಂಶಗಳನ್ನು ತಯಾರಿಸಲಾಗಿದೆ. ೮೦ ರ ದಶಕದವರೆಗೂ ಕೇವಲ ಕುತೂಹಲವೆಂದು ಪರಿಗಣಿಸಲಾಗಿದ್ದ ಇಂಥ ತಂತ್ರಾಂಶಗಳು, ಇತ್ತೀಚೆಗೆ ಪ್ರಸಿದ್ಧ ಚೆಸ್ ಆಟಗಾರರನ್ನು ಪಂದ್ಯಾವಳಿಗಳಲ್ಲಿ ಸೋಲಿಸುವಷ್ಟು ಸಾಮರ್ಥ್ಯವನ್ನು ಪಡೆದಿವೆ. ಎಲ್ಲ ಗಣಕಯಂತ್ರಗಳ ಮೇಲೂ ಕೆಲಸ ಮಾಡುವ ಕೆಲವು ಪ್ರಸಿದ್ಧ ತಂತ್ರಾಂಶಗಳೆಂದರೆ ಚೆಸ್ ಮಾಸ್ಟರ್, ಫ್ರಿಟ್ಜ್ (Fritz). ಇನ್ನು ಕೆಲವು ಕೇವಲ ಸಾಫ್ಟ್‍ವೇರ್ ತಂತ್ರಾಂಶಗಳಾಗಿರದೆ ಅನೇಕ ಸಿಪಿಯು ಗಳನ್ನೊಳಗೊಂಡ ಸಮರ್ಥ ಕಂಪ್ಯೂಟರ್‍ಗಳು - ಉದಾಹರಣೆಗಳೆಂದರೆ ಡೀಪ್ ಬ್ಲೂ, ಹೈಡ್ರಾ. ಪ್ರಸಿದ್ಧ ಆಟಗಾರರು ಚದುರಂಗದಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಆಟಗಾರರೆಂದರೆ ವಿಶ್ವನಾಥನ್ ಆನಂದ್. ಇತರ ಕೆಲವು ಪ್ರಸಿದ್ಧ ಭಾರತೀಯ ಆಟಗಾರರೆಂದರೆ ಮೀರ್ ಸುಲ್ತಾನ್ ಖಾನ್, ಪ್ರವೀಣ್ ತಿಪ್ಸೆ, ದಿಬ್ಯೇಂದು ಬರುವಾ, ಅಭಿಜಿತ್ ಕುಂಟೆ, ಕೃಷ್ಣನ್ ಶಶಿಕಿರಣ್, ಪೆಂಡ್ಯಾಲ ಹರಿಕೃಷ್ಣ, ವಿಜಯಲಕ್ಷ್ಮಿ, ಸ್ವಾತಿ ಘಾಟೆ, ಭಾಗ್ಯಶ್ರಿ ತಿಪ್ಸೆ ಇತ್ಯಾದಿ. ಪ್ರಪಂಚದ ಕೆಲ ಪ್ರಸಿದ್ಧ ಆಟಗಾರರಲ್ಲಿ ಕೆಲವರೆಂದರೆ ಪಾಲ್ ಮಾರ್ಫಿ (೧೮೩೭ - ೧೮೮೪), ವಿಲಹೆಲ್ಮ್ ಸ್ಟೀನಿಟ್ಜ್ (೧೮೩೬ - ೧೯೦೦), ಹೋಸೆ ರಾವುಲ್ ಕಾಪಾಬ್ಲಾಂಕಾ (೧೮೮೮ - ೧೯೪೨), ಬಾಬಿ ಫಿಷರ್, ಅನತೋಲಿ ಕಾರ್ಪೋವ್, ಗ್ಯಾರಿ ಕ್ಯಾಸ್ಪರೋವ್, ವ್ಲಾಡಿಮಿರ್ ಕ್ರಾಮ್ನಿಕ್, ಬೋರಿಸ್ ಗೆಲ್ಫಾಂಡ್, ಮೊದಲಾದವರು. ೮ ವರ್ಷದ ಅನಘಾ ನಂಜನಗೂಡು ತಾಲ್ಲೂಕಿನ ಕುಗ್ರಾಮ ಕಳಲೆಯ ಎಂಟು ವರ್ಷದ ಕೆ.ಜಿ.ಆರ್‌.ಅನಘಾ ರಷ್ಯಾದ ಜಾರ್ಜಿಯಾದಲ್ಲಿ ನಡೆಯಲಿರುವ ವಿಶ್ವ ಕೆಡೆಟ್‌ ಚೆಸ್‌ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾಳೆ.೧7 years shifali of mandya got gold medal in common wealth games ಸ್ಥಳ ಮತ್ತು ಸಂಸ್ಕೃತಿ ನೋಡಿ ೧.ವಿಶ್ವ ಚಾಂಪಿಯನ್‌ಷಿಪ್‌ಗೆ 8 ವರ್ಷದ ಅನಘಾ: 7 year old shifali of mandya got gold medal in common wealth game ಬಾಹ್ಯ ಸಂಪರ್ಕಗಳು FIDE ಅಧಿಕೃತ ತಾಣ ಅಧಿಕೃತ ನಿಯಮಗಳು ಚೆಸ್ ಸುದ್ದಿಗಳು ಕ್ರೀಡೆ ಚದುರಂಗ
2115
https://kn.wikipedia.org/wiki/%E0%B2%B8%E0%B2%BF%E0%B2%95%E0%B3%8D%E0%B2%95%E0%B2%BF%E0%B2%82
ಸಿಕ್ಕಿಂ
ಸಿಕ್ಕಿಂ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಭಾರತದ ನೆಲಾವೃತ ರಾಜ್ಯ. ಭಾರತದಲ್ಲೇ ಅತ್ಯಂತ ಕಡಿಮೆ ಜನನಿಬಿಡ ರಾಜ್ಯವಾಗಿದ್ದು, ಅತ್ಯಂತ ಸಣ್ಣ ರಾಜ್ಯಗಳಲ್ಲಿ ಗೋವಾದ ನಂತರ ಎರಡನೆಯ ಸ್ಥಾನವನ್ನು ಪಡೆದಿದೆ. Namgyal ಮನೆತನವು 17ನೇ ಶತಮಾನದಲ್ಲಿ ಸಿಕ್ಕಿಂ ನಲ್ಲಿ ಆಡಳಿತ ನಡೆಸುತ್ತಿತ್ತು. ಈ ಮನೆತನದ ರಾಜರು ಬೌದ್ಧ ಸನ್ಯಾಸಿ ರಾಜರಾಗಿದ್ದರು, ಇವರನ್ನು chogyal ಗಳೆಂದು ಕರೆಯಲಾಗುತ್ತಿತ್ತು.೧೮೯೦ ರಲ್ಲಿ ಸಿಕ್ಕಿಂ ಬ್ರಿಟಿಷ್ ಇಂಡಿಯಾದ ಆಡಳಿತಕ್ಕೊಳಪಟ್ಟಿತ್ತು. 1973 ರಲ್ಲಿ chogyal ಅರಮನೆಯಲ್ಲಿ ನಡೆದ ದಂಗೆಯ ನಂತರ, ಭಾರತ ಸರ್ಕಾರವು ಸೇನಾ ಕಾರ್ಯಾಚರಣೆ ನಡೆಸಿ ಗ್ಯಾಂಗ್ಟಕ್ ಅನ್ನೋ ವಶಪಡಿಸಿಕೊಂಡಿತು. ತದನಂತರ ಸಿಕ್ಕಿಂ ಭಾರತದ 22ನೆ ರಾಜ್ಯವಾಗಿ ಸೇರ್ಪಡೆಗೊಂಡಿತ್ತು. ಸಿಕ್ಕಿಂ ಒಂದು ವಿಶಿಷ್ಟ ಮತ್ತು ಬಹುಸಂಸ್ಕೃತಿಯ ರಾಜ್ಯ, ಇಲ್ಲಿ ಇಂಗ್ಲೀಷ್,ನೇಪಾಳಿ, ಸಿಕ್ಕಿಂಮಿಸ್ಸ,ಲೇಪಚ್ಚ ಭಾಷೆಗಳನ್ನು ಅಧಿಕೃತವಾಗಿಯೂ, ಮತ್ತು ಆಡಳಿತದ ಅನುಕೂಲಕ್ಕಾಗಿ ಲಿಂಬು,ಮಗರ್, ರಾಯ್, ತಮಂಗ್ ಮುಂತಾದ ಭಾಷೆಗಳನ್ನು ಬಳಸುತ್ತಾರೆ. ಇಂಗ್ಲಿಷ್ ಶಾಲೆಗಳಲ್ಲಿ ಮತ್ತು ಸರ್ಕಾರಿ ಕಡತಗಳಲ್ಲಿ ಬಳಸುವ ಭಾಷೆಯಾಗಿದೆ. ಸಿಕ್ಕಿಂನ ಆರ್ಥಿಕತೆಗೆ ಸಂಪೂರ್ಣವಾಗಿ ಕೃಷಿ ಮತ್ತು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಸಿಕ್ಕಿಂನಲ್ಲಿ ಭಾರತದಲ್ಲಿ ಹೆಚ್ಚು ಸಾಂಬಾರ್ ಪದಾರ್ಥವಾದ ಚಕ್ಕೆಯನ್ನು ಬೆಳೆಯಲಾಗುತ್ತದೆ, ಮತ್ತು ಇದು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಲೆಪಚ್ಚಗಳನ್ನು ಸಿಕ್ಕಿಂನ ಮೂಲನಿವಾಸಿಗಳು ಎಂದು ತಿಳಿಯಲಾಗಿದೆ, ಆದರೆ ಲಿಂಬುಸ್ ಮತ್ತು ಮಗರ್ ಗಳು ಕೂಡ ಸಿಕ್ಕಿಂನ ಪೂರ್ವ ಮತ್ತು ದಕ್ಷಿಣ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಲೆಪಚ್ಚಗಳ ಮೊದಲೇ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತದೆ. ಎಂಟನೇ ಶತಮಾನದಲ್ಲಿ ಬೌದ್ಧ ಸನ್ಯಾಸಿಯಾದ ಪದ್ಮಸಂಭವ ಎಂಬುವವರು ಸಿಕ್ಕಿಂನಲ್ಲಿ ಬೌದ್ಧ ಧರ್ಮವನ್ನು ಹರಡಲು ಪ್ರಮುಖ ಕಾರಣಕರ್ತರಾಗಿದ್ದಾರೆ, ಇವರನ್ನು ಗುರು ರಿನ್ಪೋಚೆ ಎಂದು ಕೂಡ ಸಂಬೋಧಿಸುತ್ತಾರೆ. ಧರ್ಮಗಳು ಹಿಂದೂ ಧರ್ಮವು ಒಂದನೆಯ ಸ್ಥಾನದಲ್ಲಿದ್ದರೆ,ಬೌದ್ಧದರ್ಮವು ಎರಡನೆಯ ಸ್ಥಾನದಲ್ಲಿದೆ. ಉಲ್ಲೇಖಗಳು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2116
https://kn.wikipedia.org/wiki/%E0%B2%A8%E0%B2%BE%E0%B2%97%E0%B2%BE%E0%B2%B2%E0%B3%8D%E0%B2%AF%E0%B2%BE%E0%B2%82%E0%B2%A1%E0%B3%8D
ನಾಗಾಲ್ಯಾಂಡ್
ನಾಗಾಲ್ಯಾಂಡ್ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ಇದು ಪಶ್ಚಿಮದಲ್ಲಿ ಅಸ್ಸಾಂ, ಉತ್ತರದಲ್ಲಿ ಅರುಣಾಚಲ ಪ್ರದೇಶ, ಪೂರ್ವದಲ್ಲಿ ಮ್ಯಾನ್ಮಾರ್ ಮತ್ತು ದಕ್ಷಿಣದಲ್ಲಿ ಮಣಿಪುರದ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ನಾಗಾಲ್ಯಾಂಡಿನ ರಾಜಧಾನಿ ಕೊಹಿಮ. ಭೌಗೋಳಿಕ ಸ್ಥಾನ ನಾಗಾಲ್ಯಾಂಡ್ ಭಾರತ ಗಣರಾಜ್ಯದ ಈಶಾನ್ಯ ಭಾಗದಲ್ಲಿರುವ ಒಂದು ಪರ್ವತಮಯ ರಾಜ್ಯ. ಅಸ್ಸಾಂ ರಾಜ್ಯಕ್ಕೂ ಮೈನ್‍ಮಾರ್ ನಡುವೆ ಇದೆ. ಈ ರಾಜ್ಯದ ಪಶ್ಚಿಮ ಮತ್ತು ವಾಯವ್ಯಕ್ಕೆ ಅಸ್ಸಾಮ್ ರಾಜ್ಯ, ಪೂರ್ವಕ್ಕೆ ಮೈನ್‍ಮಾರ್ ಮತ್ತು ದಕ್ಷಿಣಕ್ಕೆ ಮಣಿಪುರ ಇದೆ; ಪೂರ್ವದಲ್ಲಿ ಮೈನ್‍ಮಾರ್ ಗಡಿಯಿಂದ ನಾಗಾಲ್ಯಾಂಡಿನ ಉತ್ತರದ ಮೊನಚಾದ ತುದಿಯವರೆಗೆ ಅರುಣಾಚಲ ಪ್ರದೇಶ ಹಬ್ಬಿದೆ. ನಾಗಾಲ್ಯಾಂಡಿನ ವಿಸ್ತೀರ್ಣ 16,579 ಚ.ಕಿಮೀ. ಜನಸಂಖ್ಯೆ ೧೯,೮೦,೬೦೨ (೨೦೧೧) , ರಾಜಧಾನಿ ಕೋಹಿಮ. ಭೌತಲಕ್ಷಣ ರಾಜ್ಯದ ಬಹುಭಾಗ ಹಿಮಾಲಯ ಪರ್ವತ ವ್ಯವಸ್ಥೆಗೆ ಒಳಪಟ್ಟಿದೆ. ಉತ್ತರದಲ್ಲಿ ಬ್ರಹ್ಮಪುತ್ರಾ ಬಯಲಿನಿಂದ ಥಟ್ಟನೆ ಸುಮಾರು 600 ಮೀ.ಗೆ ಏರುವ ನಾಗಾ ಬೆಟ್ಟಗಳು ಪಶ್ಚಿಮದಲ್ಲಿ 1,800 ಮೀ.ಗೂ ಹೆಚ್ಚು ಎತ್ತರವಾಗಿವೆ. ಅಲ್ಲಲ್ಲಿ ಕೆಲವು ಶಿಖರಗಳು 3,050 ಮೀ.ಗಿಂತ ಎತ್ತರವಾಗಿವೆ. ಇವುಗಳ ಪೂರ್ವಕ್ಕೆ ಇದಕ್ಕೆ ಸೇರಿಕೊಂಡಂತೆ ಇರುವ ಪಾಟ್ಕೈ ಶ್ರೇಣಿ ಈ ರಾಜ್ಯವನ್ನು ಮೈನ್‍ಮಾರ್‍ನಿಂದ ಪ್ರತ್ಯೇಕಿಸುತ್ತದೆ. ಮೈನ್‍ಮಾರ್ ಗಡಿಯಲ್ಲಿರುವ ಸಾರಮತಿ ಶಿಖರದ ಎತ್ತರ 3,826 ಮೀ. ರಾಜ್ಯದ ವಾಯವ್ಯ ಭಾಗದಲ್ಲಿ ಬ್ರಹ್ಮಪುತ್ರಾ ನದಿಯ ಉಪನದಿಗಳು ಹರಿಯುತ್ತವೆ. ಆಗ್ನೇಯ ಭಾಗ 1,200 ಮೀ.ಗಿಂತ ಎತ್ತರವಾಗಿದೆ. ಮೈನ್‍ಮಾರ್‍ನಲ್ಲಿ ಹರಿಯುವ ಚಿಂದ್ವಿನ್ ನದಿಯ ಉಪನದಿಗಳ ಜಲಾನಯನ ಭೂಮಿ ಇದು. ನೈಋತ್ಯ ಭಾಗದಲ್ಲಿ ಬರಾಕ್ ನದಿ ಉಗಮಿಸುತ್ತದೆ. ಬೆಟ್ಟಗಳು ಅಲ್ಲಲ್ಲಿ ಕತ್ತರಿಸಿದಂತಿವೆ. ವಾಯುಗುಣ ನಾಗಾಲ್ಯಾಂಡಿನದು ಮಾನ್ಸೂನ್ ವಾಯುಗುಣ. ಸರಾಸರಿ ವಾರ್ಷಿಕ ಮಳೆ ಆಗ್ನೇಯದಲ್ಲಿ 1,813 ಮಿ.ಮೀ. ಈಶಾನ್ಯದಲ್ಲಿ 2590 ಮಿ.ಮೀ.ಗಿಂತ ಅಧಿಕ. ಉಷ್ಣತೆ ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ. ನೆಲೆದ ಎತ್ತರಕ್ಕೆ ಅನುಗುಣವಾಗಿ ಬೇಸಗೆಯಲ್ಲಿ 21(ಛಿ ನಿಂದ 40(ಛಿ ವರೆಗೆ ವ್ಯತ್ಯಾಸವಾಗುತ್ತದೆ. ಚಳಿಗಾಲದಲ್ಲಿ 4(ಛಿ ಕನಿಷ್ಠ ಮಿತಿ. ವಾತಾವರಣದಲ್ಲಿಯ ತೇವದಿಂದಾಗಿ ಬೇಸಗೆಯಲ್ಲಿ ತಗ್ಗಿನ ಪ್ರದೇಶಗಳಲ್ಲಿ ಧಗೆ ಹೆಚ್ಚು. ಸಸ್ಯಪ್ರಾಣಿ ಜೀವನ ಬೆಟ್ಟಗಳು ದಟ್ಟವಾದ ಕಾಡಿನಿಂದ ಆವೃತವಾಗಿವೆ. ಇಲ್ಲಿಯ ಕಾಡುಗಳನ್ನು ನಿತ್ಯಹಸುರಿನ ಮರಗಳ ಕಾಡು. ಅಗಲ ಎಲೆಗಳ ಮರಗಳ ಕಾಡು. ಪೀತದಾರು ಮರಗಳ ಕಾಡು ಎಂದು ವಿಂಗಡಿಸಬಹುದು. ಸರದಿ ಬೇಸಾಯಕ್ಕಾಗಿ (ಝೂಮ್) ಕಾಡುಗಳನ್ನು ಕಡಿದ ಎಡೆಗಳಲ್ಲಿ ಎತ್ತರವಾದ ಹುಲ್ಲು, ಬಿದಿರು, ಕುರುಚಲು ಬೆಳೆದಿವೆ. 1,220 ಮೀ.ಗಳಿಗಿಂತ ಕೆಳಗಿನ ಪ್ರದೇಶದಲ್ಲಿ ನಿತ್ಯಹಸಿರು ಕಾಡುಗಳಿವೆ. ಬೆಲೆಬಾಳುವ ಸಾಗುವಾನಿ ಮರಗಳೂ, ಬಿದಿರೂ ಇವೆ. ಪೂರ್ವ ಮತ್ತು ಆಗ್ನೇಯ ಭಾಗದ ಎತ್ತರದ ಪ್ರದೇಶಗಳಲ್ಲಿ ಓಕ್, ಪೈನ್ ಮತ್ತು ಇತರ ಶಂಕುಪರ್ಣಿ ಮರಗಳಿವೆ. ತಗ್ಗಿನ ಬೆಟ್ಟಗಳಲ್ಲಿರುವ ಪ್ರಾಣಿಗಳು ಖಡ್ಗಮೃಗ, ಆನೆ, ಹುಲಿ, ಚಿರತೆ, ಕರಡಿ, ಜಿಂಕೆ, ಕಾಡೆಮ್ಮೆ, ಕಾಡುಹಂದಿ ಮತ್ತು ಕಾಡೆತ್ತು, ಹಲವು ಬಗೆಯ ಕೋತಿಗಳು, ಮುಳ್ಳುಹಂದಿ, ಪ್ಯಾಂಗೊಲಿನ್, ಆಡು, ಕಾಡುನಾಯಿ, ನರಿ, ಪುನುಗಿನ ಬೆಕ್ಕು ಮತ್ತು ಮುಂಗುಸಿ. ಇಲ್ಲಿ ಹಲವು ಬಗೆಯ ಹಕ್ಕಿಗಳಿವೆ. ಜನ ರಾಜ್ಯದ ಜನಸಾಂದ್ರತೆ ಚ.ಕೀ.ಮೀ.ಗೆ 31 ಇದ್ದು ಪ್ರತಿ 1000 ಪುರುಷರಿಗೆ 871 ಸ್ತ್ರೀಯರಿದ್ದರು. ಈ ರಾಜ್ಯದಲ್ಲಿ ಹಿಂದುಗಳು. ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಜೈನರು ಮತ್ತು ಬೌದ್ಧರು ಇದ್ದಾರೆ. ನಾಗಾಗಳು ಇಂಡೋ-ಮುಂಗೊಲಾಯಿಡ್ ಬುಡಕಟ್ಟಿಗೆ ಸೇರಿದವರು. ವಿವಿಧ ಭಾಗಗಳಲ್ಲಿ ವಿವಿಧ ರೀತಿ-ನೀತಿ ಅನುಸರಿಸುವ ಅಂಗಮಿ, ಸೇಮಾ, ರೆಂಗ್ಮಾ, ಜಾಕೇಸಾಂಗ್, ಸಂಗ್‍ತಮ್, ಚಾಂಗ್, ಪೋಮ್, ಇಮ್, ಚುಂಗರ್, ಬೇನ್‍ಮುಂಗರ್, ಜೇóಲಿಯಾಂಗ್, ಕುಕೀ ಮುಂತಾದ ಹದಿನೇಳು ವಿಭಿನ್ನ ಪಂಗಡಗಳಿವೆ. ಅವರೆಲ್ಲ ಇಂಡೋ-ಟಿಬೆಟನ್ ಮೂಲದ ಮೂವತ್ತು ಭಾಷೆ-ಉಪಭಾಷೆಗಳನ್ನು ಬಳಸುತ್ತಾರೆ. ಈ ಜನ ಮಾತನಾಡುವಾಗ ಹೇರಳವಾಗಿ ಸಂಯುಕ್ತ ಪದಗಳನ್ನು ಬಳಸುತ್ತಾರಾದರೂ ಮಾತಾಡುವ ರೀತಿಯೊಳಗೊಂದು ಗೇಯತೆ ಇದೆ. ಯುದ್ಧ ಜನಾಂಗವೆಂದು ಹೆಸರಾದ ನಾಗಾಗಳು ಇಂದಿಗೂ ಯುದ್ಧ ಮತ್ತು ಬೇಟೆಯ ಉತ್ಸಾಹ ಮತ್ತು ಕ್ಷಾತ್ರಪರಂಪರೆಗಳನ್ನು ಕಾಯ್ದುಕೊಂಡು ಬಂದಿರುವುದು ಅವರ ಯುದ್ಧ ನೃತ್ಯಗಳಲ್ಲೂ ಆಟ ಪಂದ್ಯಗಳಲ್ಲೂ ಉತ್ಸವ ಮೇಳಗಳಲ್ಲೂ ಕಂಡುಬರುತ್ತದೆ. 19ನೆಯ ಶತಮಾನದವರೆಗೂ ಈ ಜನಗಳಲ್ಲಿ ಗುಲಾಮಗಿರಿ ಪದ್ಧತಿ, ದೇವತೆಗಳಿಗೆ ಮನುಷ್ಯನ ಬಲಿ ಕೊಡುವ ರೂಢಿ, ಮನುಷ್ಯರ ತಲೆ ಬೇಟೆಯಾಡುವ ಹವ್ಯಾಸ ಇವೆಲ್ಲ ಬಹು ಪ್ರಿಯವಾಗಿದ್ದುವು. ನೆರೆಹಳ್ಳಿಗಳಲ್ಲಿರುವ ವೈರಿಗಳ ತಲೆ ಬೇಟೆಯಾಡಿ ಬರುವವರು ನಿಜವಾದ ಬಂಟಾಳುಗಳೆಂಬ ಭಾವನೆ ಈ ಜನರಲ್ಲಿತ್ತು. ವೈರಿಗಳ ತಲೆಗಳನ್ನು ತುಂಡರಿಸಿ ತಂದವನು ಅವಿವಾಹಿತ ಯುವಕನಾಗಿದ್ದರಂತೂ ಅವನಿಗೆ ಅಪಾರ ಸನ್ಮಾನ. ಅವನ ಹಳ್ಳಿಯ ಅತ್ಯಂತ ಸುಂದರ ಕನ್ಯೆಯ ಕೈಹಿಡಿಯುವ ಬಹುಮಾನ ಇವು ದೊರಕುತ್ತಿದ್ದುವು. ಇಲ್ಲಿಯ ಕೆಲವು ಪಂಗಡಗಳಲ್ಲಿ ಬಹುಪತ್ನೀತ್ವವೂ ಮತ್ತೆ ಕೆಲವರಲ್ಲಿ ಏಕಪತ್ನೀತ್ವವೂ ಜಾರಿಯಲ್ಲಿವೆ. ಮನಸ್ಸಿಗೆ ಬಂದಾಗ ವಿವಾಹವಿಚ್ಛೇದನ ಪಡೆದು ಬೇರೆ ಮದುವೆಯಾಗುವ ರೂಢಿಯೂ ಬಳಕೆಯಲ್ಲಿದೆ. ಈ ಜನರಿಗೆ ದೆವ್ವ ಮತ್ತು ಭೂತಗಳಲ್ಲಿ ನಂಬಿಕೆಯುಂಟು. ಪುರುಷರು ನಡುವಿಗೊಂದು ತುಂಡು ಬಟ್ಟೆಯನ್ನೂ ಸ್ತ್ರೀಯರು ಸೋಗಾಮಿನಿ, ತಾಟ್-ನೀ ಟುಕೋ-ಲೀ-ಮಿನಿ, ಜೋಯೀ-ಲೀ-ಮಿನಿ, ಲಹು ಪಿಟಿಕಾ ಮುಂತಾದ ಹೆಸರುಗಳುಳ್ಳ ಮಿಶ್ರಬಣ್ಣದ ವಸ್ತ್ರಗಳನ್ನೂ ತೊಟ್ಟು ಕೈ ಕೊರಳು ಕಿವಿಗಳಲ್ಲಿ ಕವಡೆ, ಹರಳು, ಬಿದಿರುಗಳ ಆಭರಣಗಳನ್ನು ಧರಿಸುತ್ತಾರೆ. ಇವರ ಮುಖ್ಯ ಆಹಾರ ಅನ್ನ. ಅತಿಥಿಗಳೂ ವಯೋವೃದ್ಧರೂ ಊಟ ಮಾಡಿಯಾದ ಬಳಿಕ ಇತರರ ಊಟ ನಡೆಯುವುದು ಇಲ್ಲಿಯ ರೂಢಿ. ಬೇಟೆ ಈ ಜನರಿಗೆ ಬಲು ಪ್ರಿಯವಾದ ಹವ್ಯಾಸ. ಆಡಳಿತ ನಾಗಾಲ್ಯಾಂಡ್ ರಾಜ್ಯವನ್ನು ಕೋಹಿಮ, ಮೊಕೋಕ್‍ಚಂಗ್, ತುಯೆನ್‍ಸಾಂಗ್ ಮಾನ್, ಜûುನ್ಹಿಬೊಟೊ, ವೊಕಾ, ಧೀಮಾಪುರ್ ಮತ್ತು ಫೆಕ್ ಎಂಬ ಎಂಟು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಕೋಹಿಮ, ಮೊಕೋಕ್‍ಚಂಗ್ ಮತ್ತು ತುಯೆನ್‍ಸಾಂಗ್ ಇವು ಆಯಾ ಜಿಲ್ಲೆಗಳ ಮುಖ್ಯ ಪಟ್ಟಣಗಳು. ರಾಜ್ಯದ ರಾಜಧಾನಿ ಕೋಹಿಮ. ರಾಜ್ಯದಲ್ಲಿ ಒಟ್ಟು 960 ಗ್ರಾಮಗಳಿವೆ. 169 ಗ್ರಾಮಗಳಲ್ಲಿ ತಲಾ 1,000ಕ್ಕಿಂತ ಕಡಿಮೆ ಜನವಸತಿಯಿತ್ತು. ಕೃಷಿ ಈ ರಾಜ್ಯದ 90% ಜನ ಬೇಸಾಯಗಾರರು. ಗುಡ್ಡಬೆಟ್ಟಗಳಲ್ಲಿರುವ ಗಿಡಗಂಟೆಗಳಿಗೆ ಬೆಂಕಿ ಹಚ್ಚಿ ಸುಟ್ಟು ತೆರವಾದ ಜಾಗದಲ್ಲಿ ವ್ಯವಸಾಯ ಮಾಡುವ ಪದ್ಧತಿ ಇದೆ. ಕೋಗಿಲೆ ಕೂಗಿದ ಅನಂತರ ಬತ್ತದ ಬಿತ್ತನೆ ಮಾಡಿದರೆ ಹುಲುಸಾದ ಬೆಳೆ ಬರುತ್ತದೆಂದು ಜನರ ನಂಬಿಕೆ. ಈ ರಾಜ್ಯದಲ್ಲಿ ಬತ್ತವೇ ಪ್ರಮುಖ ಬೆಳೆ. ಇತರ ಧಾನ್ಯಗಳೂ ಮೆಣಸಿನಕಾಯಿ ಬೇಳೆಕಾಳುಗಳೂ ಹತ್ತಿ, ಕಬ್ಬು, ಬಟಾಟೆಗಳೂ ಬೆಳೆಯುತ್ತವೆ. ಬೇಸಾಯ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಆರಂಭವಾಗುತ್ತದೆ. ಮೊದಲು ಹೆಂಗಸರು ಹೊಲಗಳಲ್ಲಿಯ ಹಳೆಯ ಕಸ ಕೊಳೆ ತೆಗೆಯುತ್ತಾರೆ. ಗಂಡಸರು ಅಗೆಯುವ ಕೆಲಸ ಮಾಡುತ್ತಾರೆ. ಎರಡು ತಿಂಗಳಲ್ಲಿ ಗಿಡಮರಗಳನ್ನು ಸುಡುವ ಕೆಲಸ ನಡೆಯುತ್ತದೆ. ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ಸಣ್ಣ ಕಾಳುಗಳ ಬಿತ್ತನೆಯೂ ಏಪ್ರಿಲ್ ತಿಂಗಳಲ್ಲಿ ಬತ್ತದ ಬಿತ್ತನೆಯೂ ನಡೆಯುತ್ತದೆ. ಕೊಯಿಲಿಗೆ ಬಂದ ಬೆಳೆಗಳನ್ನು ಕೆಲವರು ಕೈಯಿಂದಲೇ ಕೀಳುತ್ತಾರೆ. ಕುಡುಗೋಲು ಬಳಸುವುದೂ ಉಂಟು. ಸುಗ್ಗಿಯಾದ ಬಳಿಕ ಧಾನ್ಯಗಳನ್ನು ಬಿದಿರಿನ ಕಣಜಗಳಲ್ಲಿ ಸಂಗ್ರಹಿಸಿಡುತ್ತಾರೆ. ರಾಜ್ಯದ ಕೆರೆಕೊಳ್ಳಗಳಲ್ಲಿ ಮೀನು ಹಿಡಿಯುತ್ತಾರೆ. ಅರಣ್ಯಗಳಿಂದ ಬಿದಿರು, ಓಕ್, ಮನೆ ಕಟ್ಟುವ ಮತ್ತು ಚಪ್ಪರಗಳಿಗೆ ಬಳಸುವ ಮರ ಉರುವಲು, ಗೋಂದು ಮುಂತಾದವು ದೊರೆಯುತ್ತವೆ. ಕೈಗಾರಿಕೆಗಳು ರಾಜ್ಯದಲ್ಲಿ ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಕಡಿಮೆ. ಅನೇಕ ಗ್ರಾಮಗಳಲ್ಲಿ ನೇಯ್ಗೆ ಕೆಲಸ ನಡೆಯುತ್ತದೆ. ಬಟ್ಟೆ, ರೇಷ್ಮೆ, ಬಿದಿರಿನ ಬುಟ್ಟಿಹೆಣಿಗೆ, ಕೃಷಿಗಾಗಿ ಮತ್ತು ಬೇಟೆಗಾಗಿ ಮರದ ಉಪಕರಣಗಳ ತಯಾರಿಕೆ- ಇವು ಕೆಲವು ಸಣ್ಣ ಕೈಗಾರಿಕೆಗಳು. 3 ನೇಯ್ಗೆ ಕೇಂದ್ರಗಳನ್ನೂ 3 ಗುಡಿಕೈಗಾರಿಕೆಗಳ ಕೇಂದ್ರಗಳನ್ನೂ 3 ರೇಷ್ಮೆ ಕ್ಷೇತ್ರಗಳನ್ನೂ ಒಂದು ಕುಶಲ ವಸ್ತು ತಯಾರಿಕೆಯ ತರಬೇತಿ ಮತ್ತು ಉತ್ಪಾದನ ಕೇಂದ್ರವನ್ನೂ ಸಣ್ಣ ಕೈಗಾರಿಕೆಗಳ ಸೇವಾಕೇಂದ್ರವೊಂದನ್ನೂ ಸರ್ಕಾರ ನಡೆಸುತ್ತಿದೆ. ದಿಮಾಪುರ (3,08,382) ಈ ಕೈಗಾರಿಕೆಗಳ ವ್ಯಾಪಾರ ಕೇಂದ್ರ. ರಾಜಧಾನಿ ಕೋಹಿಮ (3,14,366). ಮೊಕೋಕ್‍ಚಂಗ್ (2,27,320) ಇತರ ಪಟ್ಟಣಗಳು. ಸಾರಿಗೆ-ಸಂಪರ್ಕ: ಪರ್ವತ ಪ್ರಧಾನವಾದ ಈ ರಾಜ್ಯದಲ್ಲಿ ಸಾರಿಗೆ-ಸಂಪರ್ಕ ಕಷ್ಟಕರ. ರಾಜ್ಯದ 9,860 ಕಿ.ಮೀ. ಉದ್ದದ ರಸ್ತೆಯಲ್ಲಿ 996 ಗ್ರಾಮಗಳಿಗೆ ಸಂಪರ್ಕವೇರ್ಪಡಿಸಿದೆ. ರಾಜ್ಯದಲ್ಲಿ 8.04 ಕಿ.ಮೀ. ರೈಲು ಮಾರ್ಗವಿದ್ದು ಈಗ ಮತ್ತಷ್ಟು ದೂರ ವಿಸ್ತರಿಸಿದೆ. ದಿಮಾಪುರ ಮುಖ್ಯ ರೈಲ್ವೆ ನಿಲ್ದಾಣ. ಇದು ನಾಗಾಲ್ಯಾಂಡಿನ ಪ್ರವೇಶದ್ವಾರವೆಂದು ಪ್ರಸಿದ್ಧವಾಗಿದೆ. ಆರೋಗ್ಯ: ಈ ಪ್ರದೇಶದ ಜನ ಸಾಮಾನ್ಯವಾಗಿ ದೃಢಕಾಯರು. ಇವರು ಯುದ್ಧ ಜನಾಂಗವೆಂದೇ ಹೆಸರಾದವರು. ಇಲ್ಲಿಯ ಸ್ತ್ರೀಪುರುಷರಿಗೆ ತಮ್ಮ ಮೈಕಟ್ಟು ಮತ್ತು ಸ್ನಾಯುಬಲಗಳ ಬಗ್ಗೆ ಬಲು ಅಭಿಮಾನ. ರಾಜ್ಯದಲ್ಲಿ ಸಾರ್ವಜನಿಕ ಆಸ್ಪತ್ರೆಗಳೂ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಉಪ ಕೇಂದ್ರಗಳೂ ಕ್ಷಯರೋಗ ಆಸ್ಪತ್ರೆಗಳೂ ಇವೆ. ಶಿಕ್ಷಣ ಈ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳೂ ಮಾಧ್ಯಮಿಕ ಶಾಲೆಗಳೂ ಪ್ರೌಢಶಾಲೆಗಳೂ ಕಾಲೇಜುಗಳೂ ತರಬೇತಿ ಕೇಂದ್ರಗಳೂ ಒಂದು ತಾಂತ್ರಿಕ ವಿದ್ಯಾಲಯವೂ ಇದೆ. ಇತಿಹಾಸ ಹದಿಮೂರನೆಯ ಶತಮಾನದಲ್ಲಿ ಈಗಿನ ಮೈನ್‍ಮಾರ್ ಪ್ರದೇಶದ ಸರದಾರನೊಬ್ಬ ಪಾಟ್ಕೈ ಶ್ರೇಣಿಯನ್ನು ದಾಟಿ ಬಂದು ನಾಗಾ ಜನರ ಮೇಲೆ ದಾಳಿ ಮಾಡಿ ಸೋಲಿಸಿ, ಅವರ ಮೇಲೆ ಪ್ರಭುತ್ವ ಸ್ಥಾಪಿಸಿಕೊಂಡಿದ್ದನೆಂದು ದಾಖಲೆಯಿದೆ. ತದನಂತರ ಅಸ್ಸಾಮಿನ ಅಹೋಮ್ ದೊರೆಗಳು ಈ ಪ್ರದೇಶವನ್ನಾಳಿದರು. 19 ನೆಯ ಶತಮಾನದಲ್ಲಿ ಭಾರತದ ಇತರ ಪ್ರದೇಶಗಳಂತೆ ಅಸ್ಸಾಂ ಕೂಡ ಬ್ರಿಟಿಷರ ಆಡಳಿತಕ್ಕೊಳಪಟ್ಟಿತು. ನಾಗಾ ಪರ್ವತಪ್ರದೇಶವೂ ಅವರ ಅಧೀನವಾಯಿತು. 1866ರಲ್ಲಿ ಬ್ರಿಟಿಷರು ಅಸ್ಸಾಮನ್ನು ಗಡಿಜಿಲ್ಲೆ ಎಂದು ಪರಿಗಣಿಸಿದರು. 1880ರಿಂದ ನಾಗಾಲ್ಯಾಂಡನ್ನು ಬ್ರಿಟಿಷ್ ಆಡಳಿತ ಪ್ರದೇಶವೆಂದು ಕಾದಿಡಲಾಯಿತು. ಆಡಳಿತ ಯಾರದಿದ್ದರೂ ನಾಗಾ ಜನರು ತಮ್ಮ ಸ್ವಯಂ ಪಂಗಡ ಪದ್ಧತಿಯನ್ನು ಬಿಟ್ಟುಕೊಡಲಿಲ್ಲ. 1928ರಲ್ಲಿ ಇಂಗ್ಲೆಂಡಿನಿಂದ ಸೈಮನ್ ಆಯೋಗ ಭಾರತಕ್ಕೆ ಬಂದಾಗ ನಾಗಾ ಜನರ ಪ್ರಮುಖ ಪ್ರತಿನಿಧಿಗಳೆಲ್ಲ ಸೇರಿ ಒಂದು ಬಿನ್ನವತ್ತಳೆ ಸಲ್ಲಿಸಿ ನಾಗಾ ಪ್ರದೇಶದ ಅಭಿವೃದ್ಧಿ ಪ್ರತ್ಯೇಕವಾಗಿಯೇ ನಡೆಯಬೇಕೆಂದೂ ಭಾರತದ ಒಳನಾಡಿನೊಂದಿಗೆ ಈ ಪ್ರದೇಶವನ್ನು ಸೇರಿಸಕೂಡದೆಂದು ಕೇಳಿಕೊಂಡರು. ಈ ಪ್ರದೇಶದಲ್ಲಿ ಕೆಲಸಮಾಡುತ್ತಿದ್ದ ಕ್ರೈಸ್ತ ಪಾದ್ರಿಗಳು ಸದಾಕಾಲವೂ ಈ ಪ್ರತ್ಯೇಕತಾಭಾವನೆಯನ್ನು ನೀರೆರೆದು ಬೆಳೆಸಿದರು. ಭಾರತ 1947ರಲ್ಲಿ ಸ್ವತಂತ್ರವಾದಾಗ ನಾಗಾಗಳಲ್ಲಿ ಕೆಲವರು ತಮ್ಮದು ಸ್ವತಂತ್ರ ರಾಷ್ಟ್ರವೆಂದು ಪ್ರಚಾರ ಮಾಡುತ್ತ, ಭಾರತದಿಂದ ಪ್ರತ್ಯೇಕಗೊಳ್ಳಲು ಸಶಸ್ತ್ರ ಬಂಡಾಯ ಹೂಡಿದರು. ಆದರೆ ನಾಗಾಗಳಲ್ಲೇ ಇದ್ದ ನಾನಾ ಪಂಗಡಗಳಲ್ಲಿ ಒಗ್ಗಟ್ಟು ಇರಲಿಲ್ಲ. 1957ರಲ್ಲಿ ಭಾರತ ಸರ್ಕಾರ ನಾಗಾ ಬೆಟ್ಟಗಳ ಜಿಲ್ಲೆಯನ್ನೂ ತುಯೆನ್‍ಸಾಂಗನ್ನೂ ಕೇಂದ್ರ ಆಡಳಿತಕ್ಕೆ ಒಳಪಡಿಸಿತು. ಆದರೆ ನಾಗಾಗಳಲ್ಲಿ ಕೆಲವರು ಇದನ್ನು ಒಪ್ಪಲಿಲ್ಲ. ಅಶಾಂತಿ ಮುಂದುವರಿಯಿತು. ಇವರು ಭಾರತ ಸರ್ಕಾರದೊಂದಿಗೆ ಸಹಕರಿಸಲಿಲ್ಲ. ಸಂಧಾನವೂ ಮುಂದುವರಿಯಿತು. ಪ್ರತ್ಯೇಕತೆಯ ಹೆಸರಿನಲ್ಲಿ ನಡೆದ ಹಿಂಸಾಕೃತ್ಯಗಳಿಗೆ ನಾಗಾ ಜನರಲ್ಲಿ ಅನೇಕರು ಹೇಸಿ ದೂರ ಸರಿದರು. ವಿಚಾರಶೀಲ ನಾಗಾ ಜನ 1955ರಲ್ಲಿ ತಮ್ಮದೇ ಅದೊಂದು ಹೊಸ ಸಂಘಟನೆ ಮಾಡಿಕೊಂಡರು. ಆದರೆ ಮರುವರ್ಷ ಅವರ ಮುಖಂಡನ ಕೊಲೆಯಾಯಿತು. 1957ರಲ್ಲಿ ನಾಗಾ ಪಂಗಡಗಳ ಮಹಾಪರಿಷತ್ತು ಸೇರಿತು. ಭಾರತ ಸರ್ಕಾರದ ಪ್ರೇರಣೆಯಿಂದ ವಿಶಾಲ ತಳಹದಿಯ ಮೇಲೆ ನಡೆದ ಈ ಪರಿಷತ್ತಿನಲ್ಲಿ ಎಲ್ಲ ನಾಗಾ ಪಂಗಡಗಳ 1,765 ಪ್ರತಿನಿಧಿಗಳೂ ಸುಮಾರು 2,000 ವೀಕ್ಷಕರೂ ಸೇರಿದ್ದರು. ನಾಗಾ ಜನರ ಭವಿಷ್ಯವನ್ನು ಶಾಂತಿಯುತ ಮಾತುಕತೆಗಳ ಮೂಲಕ ನಿರ್ಣಯಿಸಬೇಕು; ನಾಗಾ ಪಂಗಡಗಳು ವಾಸಿಸುವ ವಿವಿಧ ಭಾಗಗಳನ್ನು ಸೇರಿಸಿ ಭಾರತ ಒಕ್ಕೂಟದಲ್ಲಿ ಒಂದು ರಾಜ್ಯದ ನಿರ್ಮಾಣವಾಗಬೇಕು ಎಂದು ತೀರ್ಮಾನವಾಯಿತು. 1963ರಲ್ಲಿ ಭಾರತದ ಸಂಸತ್ತು ನಾಗಾಲ್ಯಾಂಡು ಭಾರತದ ಹದಿನಾರನೆಯ ರಾಜ್ಯವೆಂದು ಮನ್ನಣೆ ನೀಡಿತು. ಜನಪ್ರತಿನಿಧಿಗಳ ಸರ್ಕಾರ ಸ್ಥಾಪಿತವಾಯಿತು. ಆದರೆ ತಲೆಮರೆಸಿಕೊಂಡ ಕೆಲವು ಜನರು ಶಾಂತಿಪ್ರಿಯ ಜನರಿಗೆ ಕಿರುಕುಳ ನೀಡುವ ಕೃತ್ಯಗಳನ್ನು ಮುಂದುವರಿಸಿಯೇ ಇದ್ದರು. ಆದರೆ 1975ರ ಕೊನೆಕೊನೆಯಲ್ಲಿ ಭಾರತ ಸರ್ಕಾರ ಒಂದು ಒಪ್ಪಂದದ ಮೂಲಕ ನಾಗಾ ಜನರ ಸರ್ವಾಂಗೀಣ ಅಭಿವೃದ್ಧಿಯ ದಾರಿಯನ್ನು ಸುಗಮಗೊಳಿಸಿತು. ಭಾರತದ ಸಂವಿಧಾನಕ್ಕೆ ಅಧೀನವಾಗಿರುವ ಇತರ ರಾಜ್ಯಗಳಂತೆಯೇ ನಾಗಾಲ್ಯಾಂಡ್ ಕೂಡ ತನ್ನ ಜನತೆಯ ಜೀವನ ಸಂಸ್ಕøತಿಗಳನ್ನೂ ನಡೆನುಡಿಗಳನ್ನೂ ಮತಧರ್ಮಗಳನ್ನೂ ಅಭಿವೃದ್ಧಿಪಡಿಸಬಹುದೆಂಬುದು ಭಾರತ ಸರ್ಕಾರದ ನಿಲುವು. ಅಂತೆಯೇ ನಾಗಾ ಜನಗಳಲ್ಲಿ ಮೊದಲಿನಿಂದಲೂ ಬೇರೂರಿದ್ದ ಪ್ರತ್ಯೇಕತಾಭಾವನೆಯನ್ನು ತೊಡೆದುಹಾಕಿ ಅವರು ಭಾರತದಲ್ಲಿ ಒಂದಾಗಿ ಬೆಳೆಯುವಂತೆ ಮಾಡಲು ಕ್ರಮಗಳನ್ನು ಸರ್ಕಾರ ಮುಂದುವರಿಸಿದೆ. ರಾಜ್ಯಪಾಲರು ಕೊಹಿಮಾ (ಪಿಟಿಐ): ಮಂಗಳೂರು ಮೂಲದ ಮುಂಬಯಿ ಕನ್ನಡಿಗ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರು ದಿ.19/7/2014 ಶನಿವಾರ ನಾಗಲ್ಯಾಂಡ್‌ನ 19ನೇ ರಾಜ್ಯಪಾಲ­ರಾಗಿ ಅಧಿಕಾರ ಸ್ವೀಕರಿಸಿದರು. ಹೆಚ್ಚುವರಿಯಾಗಿ ತ್ರಿಪುರಾ ರಾಜ್ಯದ ರಾಜ್ಯಪಾಲರ ಹೊಣೆಯನ್ನು ಆಚಾರ್ಯ ಅವರಿಗೆ ವಹಿಸಲಾಗಿದ್ದು, ರಾಜಭವನದಲ್ಲಿ ನಡೆದ ಕಾರ್ಯ­ಕ್ರಮದಲ್ಲಿ ಗುವಾಹಟಿ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಕೆ.ಸೈಕೈ ಅವರು ಪ್ರಮಾಣವಚನ ಬೋಧಿಸಿದರು. (ಹಿಂದಿನ ವಿಧಾನ ಸಭೆಯ ಅವಧಿ ಮುಗಿದ ದಿನಾಂಕ ೧೦-೩-೨೦೧೩ /10-3-2013 ರಿಂದ ಹೊಸ ವಿಧಾನ ಸಭೆಯ ಅಸ್ಥಿತ್ವಕ್ಕೆ ಬಂದಿತು ಹೊಸ ಮಂತ್ರಿ ಮಂಡಳ- ವಿವರ -ಕೆಳಗೆ--) ನಾಗಲ್ಯಾಂಡ್‌ ಮುಖ್ಯಮಂತ್ರಿ ಟಿ.ಆರ್‌. ಜಿಲ್ಲಾಂಗ್‌ ಸೇರಿದಂತೆ ಸಂಪುಟ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಚಾರ್ಯ ಅವರು 1948–50ರಲ್ಲಿ ಮಂಗಳೂರಿನ ಎಂಜಿಎಂ ಪದವಿ ಕಾಲೇಜಿನ ಮೊದಲ ಬ್ಯಾಚ್‌ ವಿದ್ಯಾರ್ಥಿ. ನಂತರ ಕೆಲಕಾಲ ಇಲ್ಲಿನ ಕಾಡಬೆಟ್ಟು ವಿದ್ಯಾರಣ್ಯ ಶಾಲೆ­ಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿ­ಸಿದ್ದರು.ಆಮೇಲೆ ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಾ ಸಂಘ) ಸೇರಿದ ಅವರು, 1948ರಲ್ಲಿ ಆರ್‌ಎಸ್‌ಎಸ್‌ ನಿಷೇಧ­ಕ್ಕೊಳಗಾದ ನಂತರ 30 ವರ್ಷಗಳ ಕಾಲ ಮುಂಬಯಿ ವಿಶ್ವ­ವಿದ್ಯಾಲಯದ ಸೆನೆಟ್‌ ಸದಸ್ಯರೂ ಆಗಿದ್ದರು. ಕೆಲಕಾಲ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.1995ರಿಂದ 2000ರವರೆಗೆ ಬಿಜಿಪಿ ರಾಷ್ಟ್ರೀಯ ಪ್ರಧಾನ ಕಾರ್ಯ­ದರ್ಶಿ­ಯಾಗಿದ್ದ ಆಚಾರ್ಯ ಅವರು, ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿ­­ಯಾಗಿದ್ದರು. ರಾಜಕೀಯ-ವಿಧಾನ ಸಭೆ ನಾಗಾಲ್ಯಾಂಡಿನ ವಿಧಾನ ಸಭೆಯ ಚುನಾವಣೆ ೨೦೧೩ ಫೆಬ್ರವರಿ 2013 ,23/೨೩ ಕ್ಕೆ ನೆಡೆದು ;ಹಿಂದಿನವಿಧಾನ ಸಭೆಯ ಅವಧಿ ಮುಗಿದ ದಿನಾಂಕ ೧೦-೩-೨೦೧೩ /10-3-2013 ರಿಂದ ಅಸ್ಥಿತ್ವಕ್ಕೆ ಬಂದಿತು ಫಲಿತಾಂಶ ನೋಡಿ ಭಾರತದ ಪ್ರಧಾನ ಮಂತ್ರಿಗಳು ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ ಲೋಕಸಭೆ ರಾಜ್ಯಸಭೆ ಉಲ್ಲೇಖಗಳು ಬಾಹ್ಯ ಸಂಫರ್ಕಗಳು State Portal of the Government of Nagaland ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2117
https://kn.wikipedia.org/wiki/%E0%B2%A4%E0%B3%8D%E0%B2%B0%E0%B2%BF%E0%B2%AA%E0%B3%81%E0%B2%B0
ತ್ರಿಪುರ
ತ್ರಿಪುರ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ಉತ್ತರ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಬಾಂಗ್ಲಾದೇಶದಿಂದ ಸುತ್ತುವರಿಯಲ್ಪಟ್ಟಿರುವ ತ್ರಿಪುರದ ಪೂರ್ವಕ್ಕೆ ಅಸ್ಸಾಂ ಮತ್ತು ಮಿಝೊರಾಮ್‌ಗಳಿವೆ. ೨೦೧೨ ರ ಹಿಂದೆ ತ್ರಿಪುರಾದಲ್ಲಿ ಧಲಾಯ್, ಉತ್ತರ ತ್ರಿಪುರ, ದಕ್ಷಿಣ ತ್ರಿಪುರ, ಮತ್ತು ಪಶ್ಚಿಮ ತ್ರಿಪುರ ಎಂಬ ನಾಲ್ಕು ಜಿಲ್ಲೆಗಳಿದ್ದವು. ಜನವರಿ, ೨೦೧೨ ರಲ್ಲಿ ಖೊವಾಯ್, ಉನಾಕೋಟಿ, ಸಿಪಾಹಿ ಜಾಲಾ, ಮತ್ತು ಗೋಮತಿ ಎಂಬ ೪ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಅಗರ್ತಲಾ ರಾಜಧಾನಿ ಹಾಗೂ ಅತಿದೊಡ್ಡಪಟ್ಟಣ. ಬಧಾರ್ ಘಾಟ್, ಧರ್ಮನಗರ್, ಜೋಗೇಂದ್ರ ನಗರ್, ಕೈಲಾಶ್ ಶಹರ್, ಪ್ರತಾಪ್ ಘಡ್, ಉದಯ್ ಪುರ್, ಅಮರ್ ಪುರ್, ಭೇಲೋನಿಯಾ, ಗಾಂಧಿ ಗ್ರಾಮ್, ಇಂದ್ರ ನಗರ್, ಕುಮಾರ್ ಘಾಟ್, ರಾಣಿರ್ ಬಜಾರ್, ಸೋನಾಮುರಾ, ತೇಲಿಯಾಮುರಾ. ಭೂಗೋಳ ಹಾಗೂ ಹವಾಮಾನ ಈಶಾನ್ಯ ಭಾರತದ ಅಸ್ಸಾಮ್, ಅರುಣಾಚಲಪ್ರದೇಶ್, ಮಣಿಪುರ್, ಮೇಘಾಲಯ, ಮಿಜೊರಂ, ನಾಗಾಲ್ಯಂಡ್, ಮತ್ತು ತ್ರಿಪುರ ರಾಜ್ಯಗಳನ್ನು ಜೊತೆಜೊತೆಯಾಗಿ ಸಪ್ತ ಸೋದರಿಯರು ಎನ್ನುತ್ತಾರೆ. ತ್ರಿಪುರದ ಒಟ್ಟು ವಿಸ್ತೀರ್ಣ ೪,೦೫೦.೮೬ ಚದರ ಮೈಲಿಗಳು. ಉತ್ತರದಿಂದ ದಕ್ಷಿಣಕ್ಕೆ ಗರಿಷ್ಠ ದೂರ ೭೦ ಮೈಲಿಗಳು. ಪೂರ್ವದಿಂದ ಪಶ್ಚಿಮಕ್ಕೆ ೧೧೪ ಮೈಲಿಗಳು. ಅಸ್ಸಾಮ್ ನ ಕರೀಮ್ ಗಂಜ್ ಜಿಲ್ಲೆ ಮತ್ತು ಮಿಜೊರಂನ ಐಜ್ವಾಲ್ ಜಿಲ್ಲೆಗಳಿಂದ ತ್ರಿಪುರಾಕ್ಕೆ ಹೋಗಲು ದಾರಿಗಳಿವೆ. ಐದು ಬೆಟ್ಟಗಳ ಸಾಲುಗಳು ರಾಜ್ಯದಲ್ಲಿ ಉತ್ತರದಿಂದ ಕಕ್ಷಿಣಕ್ಕೆ ಸಾಗುತ್ತವೆ. ಈ ಬೆಟ್ಟಗಳ ಹೆಸರು : (ಪಶ್ಚಿಮದಿಂದ ಪೂರ್ವಕ್ಕೆ)-ಬೋರೋಮುರಾ, ಅಥರಾಮುರಾ, ಲೋಂಗ್, ಥರೈ, ಶಾಖಾನ್, ಜಾಮ್ ಪ್ಯು. ಇವುಗಳ ಮಧ್ಯೆ ಅಗರ್ತಲಾ-ಉದಯಪುರ್, ಖೋವಾಇ-ತೆಲಿಯಾಮುರಾ, ಕಮಾಲ್ ಪುರಾ, ಅಂಬಾಸಾ, ಕೈಲಾಸ್ ಶಹರ್-ಮಾನು ಧರ್ಮನಗರ್-ಕಾಂಚನ್ಪುರ್ ಕಣಿವೆಗಳಿವೆ. ಜಾಮ್ ಪ್ಯು ಶ್ರೇಣಿಯಲ್ಲಿರುವ ೯೩೯ ಮೀಟರ್ (೩,೦೮೧ ಅಡಿ) ಎತ್ತರದ 'ಬೆಟ್ಲಿಂಗ್ ಶಿಬ್' ತ್ರಿಪುರದ ಅತಿ ಎತ್ತರದ ಬೆಟ್ಟ. ರಾಜ್ಯದ ತುಂಬಾ ಈಶ್ರೇಣಿಗೆ ಸೇರದ ಒಂಟಿಯಾಗಿರುವ ಹಲವಾರು ಬೆಟ್ಟಗಳೂ ಇವೆ. ಇವುಗಳಿಗೆ 'ತಿಲ್ಲಾ ' ಎಂದು ಹೆಸರು. ಕಣಿವೆಗಳ ನಡುವೆ ಇರುವ ಸಮೃದ್ಧ ಕೃಷಿ ಭೂಮಿಗೆ 'ಲುಂಗಾ' ಎಂಬ ಹೆಸರಿದೆ. ಕಣಿವೆಗಳ ನಡುವೆ ಹರಿಯುವ ಹಲವಾರು ನದಿಗಳು ಬಾಂಗ್ಲಾದೇಶಕ್ಕೆ ಸಾಗುತ್ತವೆ. ಗುಮ್ತಿ ಪಶ್ಚಿಮಕ್ಕೆ ಹರಿದರೆ, ಕೊವ್ರಾ, ಧಾಲೃ, ಮಾನು, ಜುರಿ, ಲಾಂಗಾಯಿ, ಉತ್ತರಕ್ಕೆ ಹರಿಯುತ್ತವೆ. ಮುಹುರಿ, ಮತ್ತು ಫೆನಿ, ನೈಋತ್ಯ ದಿಕ್ಕಿಗೆ ಹರಿಯುತ್ತವೆ. ಚಳಿಗಾಲ : ಡಿಸೆಂಬರ್ ನಿಂದ ಫೆಬ್ರವರಿ ತಿಂಗಳ ನಡುವೆ. ಬೇಸಗೆ : ಮಾರ್ಚ್-ಏಪ್ರಿಲ್. ಮಳೆಗಾಲ : ಮೇ-ಸೆಪ್ಟೆಂಬರ್, ಮಾನ್ಸೂನ್ ಕಾಲದಲ್ಲಿ ನೈಋತ್ಯ ಮಾನ್ಸೂನ್ ಭಾರಿ ಮಳೆ ಸುರಿಸುತ್ತದೆ. ವರ್ಷಕ್ಕೆ ಸರಾಸರಿ ೨,೧೯೪ ಮಿ.ಮೀ. ಮಳೆ ಬೀಳುತ್ತದೆ. ಆಗ ರಾಜ್ಯದುದ್ದಕ್ಕೂ ನೆರೆಯ ಹಾವಳಿ ಆಗುವುದು ಸರ್ವೇ ಸಾಮಾನ್ಯ. ಚಳಿಗಾಲದಲ್ಲಿ ೧೩ ಡಿಗ್ರಿ ಸೆಲ್ಸಿಯಸ್ ಇದ್ದರೆ, ಬೇಸಿಗೆಯಲ್ಲಿ ೩೬ ಡಿಗ್ರಿ ಉಷ್ಣತೆ ಇರುತ್ತದೆ. ಅಕ್ಟೋಬರ್ ನವೆಂಬರ್ ನಡುವೆ ತೇವಭರಿತ ಹವಾಮಾನ ಇರುತ್ತದೆ. ತ್ರಿಪುರದ ಉತ್ಸವಗಳು ಗಾರಿಯಾ ಪೂಜೆ ಕೇರ್ ಪೂಜಾ ತ್ರಿಪುರದ ಒಂದು ಬುಡಕಟ್ಟಿನ ಪಂಗಡದವರು ನಡೆಸುವ ಜನಾಂಗೀಯ ಉತ್ಸವ. ಬುಡಕಟ್ಟಿನ ಜನಗಳು ತಮ್ಮ ತಮ್ಮ ಪ್ರದೇಶದ ಗಡಿರೇಖೆಯನ್ನು ಬರೆದು , ಈ ಪೂಜೆ ಆರಂಭಿಸುತ್ತಾರೆ. ಈ ಉತ್ಸವ ಜರುಗುವ ಸಮಯದಲ್ಲಿ ಬೇರೆ ಬೇರೆ ಬುಡಕಟ್ಟುಗಳ ಜನ ಈ ನಿಯಮಿತ ಗಡಿಯ ಉಲ್ಲಂಘನೆ ಮಾಡುವಂತಿಲ್ಲ. ಹೊರಊರಿನಲ್ಲಿರುವ ಪಂಗಡ ದ ಜನ ಗಡಿಯೊಳಗೆ ಬಂದರೆ, ಪೂಜೆ ಮುಗಿಯುವ ತನಕ ಹೊರಗೆ ಹೋಗುವಂತಿಲ್ಲ. ತ್ರಿಪುರ ಸುಂದರಿ ದೇವಾಲಯ ಉದಯಪುರದಲ್ಲಿರುವ 'ತ್ರಿಪುರಸುಂದರಿ ದೇವಾಲಯ' ಭಾರತೀಯ ೫೧ ಶಕ್ತಿಪೀಠಗಳಲ್ಲೊಂದು. ಪುರಾಣಗಳ ಪ್ರಕಾರ, ದಕ್ಷನ ಯಜ್ಞಕುಂಡದಲ್ಲಿ ದಹಿಸಿಹೋದ ಸತಿಯ ಕಳೇಬರವನ್ನು ಎತ್ತಿಕೊಂಡು ಮಹಾದೇವನು ತಾಂಡವ ನೃತ್ಯವನ್ನು ಆರಂಭಿಸಿದ್ದ ಝಳದಲ್ಲಿ ಮೂರು ಲೋಕಗಳೂ ಸುಟ್ಟುಹೋಗುವ ಸ್ಥಿತಿಯಲ್ಲಿದ್ದವು. ಶಿವನ ಆಕ್ರೋಶಕ್ಕೆ ತಡೆಹಾಕಲು ಮಹಾವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ಕಳೇಬರವನ್ನು ೫೧ ತುಂಡುಗಳಾಗಿ ಕತ್ತರಿಸಿದ ಈ ತುಂಡುಗಳುಕೆಳಗೆ ಬಿದ್ದ ಸ್ಥಳಗಳೇ ಶಕ್ತಿಪೀಠಗಳೆಂದು ಹೆಸರಾದವು. ಹಾಗೆ ಬಿದ್ದ ಸತೀದೇವಿಯ ಬಲಗಾಲು, ಮಾತಾಬಾರಿ ಎಂದು ಹೆಸರುಪಡೆಯಿತು. ದಕ್ಷಿಣ ತ್ರಿಪುರಾ ಜಿಲ್ಲೆಯ ಉದಯಪುರದಲ್ಲಿರುವ ಈ ಕ್ಷೇತ್ರದಲ್ಲಿ ಮಾತಾ ತ್ರಿಪುರಸುಂದರಿ ದೇವಾಲಯ ನಿರ್ಮಾಣವಾಗಿದೆ. ಉದಯಪುರ ಜಿಲ್ಲಾ ಕೇಂದ್ರ. ಪ್ರತಿವರ್ಷವೂ ದೀಪಾವಳಿ ಹಬ್ಬದ ದಿನದಂದು, ಇಲ್ಲಿನ ಜಾತ್ರೆ(ಮೇಳಾ) ಯಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಬಂದು ಸೇರುತ್ತಾರೆ.೧೫೧೦ ರಲ್ಲಿ ಮಹಾರಾಜ ಧನ್ಯಮಾಣಿಕ್ಯ ಈ ದೇವಾಲಯವನ್ನು ಕಟ್ಟಿಸಿದನು. ಬಂಗಾಲಿ ಶೈಲಿಯಲ್ಲಿ ಕಟ್ಟಿರುವ ಈ ದೇವಸ್ಥಾನ ಚೌಕಾಕೃತಿಯ ಗರ್ಭಗುಡಿಯನ್ನು ಹೊಂದಿದೆ. ಅದರ ಮೇಲಿನ ಗೋಪುರ ಶಂಕುವಿನ ಆಕಾರವಿದೆ. ತ್ರಿಪುರಸುಂದರಿಯ ೨ ವಿಗ್ರಹಗಳಿವೆ. ಒಂದು ವಿಗ್ರಹಕ್ಕೆ 'ಛೋಟಿಮಾ' ಎಂದೂ ಮತ್ತೊಂದಕ್ಕೆ 'ತ್ರಿಪುರಸುಂದರೀದೇವಿ' ಎಂದೂ ಹೆಸರಿದೆ. ತ್ರಿಪುರಾದ ರಾಜರು, ಹಿಂದೆ ಮೃಗಯಾ ವಿಹಾರ, ಮತ್ತು ಯುದ್ಧಗಳ ವೇಳೆಯಲ್ಲಿ 'ಛೋಟಿಮಾ' ಮೂರ್ತಿಯನ್ನು ತಮ್ಮೊಂದಿಗೆ ಒಯ್ಯುತ್ತಿದ್ದರು. ದೇವಾಲಯದ ವಾಸ್ತು ರಚನೆ ಆಮೆಯಾಕಾರವಾಗಿರುವುದರಿಂದ ಇದಕ್ಕೆ 'ಕೂರ್ಮಪೀಠ'ವೆಂದೂ ಕರೆಯುತ್ತಾರೆ. ಕೆಂಪು-ಕಪ್ಪು ಕಾಷ್ಠಿ ಶಿಲೆಯ ಮಹಾಕಾಳೀ ವಿಗ್ರಹವನ್ನು 'ಸೋರೋಶೋ' ಎಂಬ ರೂಪದಲ್ಲಿ ಅರ್ಚಿಸಲಾಗುತ್ತದೆ. 'ಕಲ್ಯಾಣ ಸಾಗರ' ಎಂಬ ಸುಪ್ರಸಿದ್ಧ ಕೆರೆ ದೇವಾಲಯದ ಪೂರ್ವ ಭಾಗದಲ್ಲಿದೆ. ಈ ಕೆರೆಯಲ್ಲಿ ಬೃಹದ್ ಗಾತ್ರ ಮೀನುಗಳು ಹಾಗೂ ಆಮೆಗಳನ್ನು ನೋಡಬಹುದು. ಇಲ್ಲಿ ಮೀನುಗಾರಿಕೆಗೆ ಅನುಮತಿ ಇಲ್ಲ. ಭಕ್ತರು ಮಂಡಕ್ಕಿ ಮತ್ತು ಬಿಸ್ಕತ್ ಚೂರುಗಳನ್ನು ಎಸೆಯುತ್ತಾರೆ. ತ್ರಿಪುರ ಸುಂದರಿ ದೇವಾಲಯ, ಉದಯಪುರದಿಂದ ೩ ಕಿ.ಮೀ ಮತ್ತು ಅಗರ್ತಲಾದಿಂದ ೫೫ ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ತಲುಪಲು, ಬಸ್ಸು ಮತ್ತು ರಿಕ್ಷಾಗಳು ಸಿಕ್ಕುತ್ತವೆ. ಉದಯಪುರದಲ್ಲಿ 'ಭುವನೇಶ್ವರಿ ದೇವಸ್ಥಾನ', 'ಗುಣಬಾಟಿ ದೇವಾಲಯ',ಹಾಗೂ ಸುಂದರ ಕೆರೆಗಳು ಇವೆ. ಖಾರ್ಚಿ ಪೂಜಾ ಚದುರ್ದಶ ದೇವತೆಗಳ ಖಾಂದಾನಿ ಪೂಜೆಗೆ ಖಾರ್ಚಿ ಪೂಜೆ ಎನ್ನುವ ಹೆಸರಿದೆ. ಜುಲೈ-ಆಗಸ್ಟ್ ತಿಂಗಳ ನಡುವೆ ಅಮಾವಾಸ್ಯೆಯ ಬಳಿಕ ಎಂಟನೆಯ ದಿನ ಈ ಪೂಜೆ ನಡೆಯುತ್ತದೆ. ಚದುರ್ದಶ ದೇವತಾ ಮಂದಿರದಲ್ಲಿ ತ್ರಿಪುರಿ ಮೂಲದ ಚಾಂತಾಯಿ ವಂಶದ ಅರ್ಚಕರು ಪಾರಂಪರಿಕವಾಗಿ ಪೂಜೆಯನ್ನು ಮಾಡುತ್ತಾರೆ. ಇದೊಂದೇ ದೇವಾಲಯದಲ್ಲಿ ತ್ರಿಪುರಿ ಪೂಜಾರಿಗಳು ಇರುವುದು. ಚಂತಾಯ್ ಪೂಜಾರಿಗಳು ದೇವತೆಗಳನ್ನು ಸೈದ್ರಾ ನದಿಗೆ ಒಯ್ದು ಪವಿತ್ರ ಸ್ನಾನ ಮಾಡಿಸಿ ದೇವಾಲಯಕ್ಕೆ ತರುತ್ತಾರೆ. ದೇವಿಯರ ಅಲಂಕಾರದ ಬಳಿಕ ಪೂಜೆ ನಡೆಯುತ್ತದೆ. ಖಾರ್ ಪಾಪ. ಮತ್ತು ಚಿ ಅಂದರೆ ಶುಭ್ರಗೊಳಿಸುವುದು. ಈ ಎರಡು ಶಬ್ದಗಳು ಸೇರಿ 'ಖಾರ್ಚಿ' ಎಂಬ ಹೆಸರು ಬಂದಿದೆ. ರಾಜ್ಯದ ಜನರೆಲ್ಲರ ಪಾಪ ಪರಿಹಾರಾರ್ಥವಾಗಿ ಈ ಪೂಜೆ ನಡೆಯುತ್ತದೆ. ಅಮಾ ಪೇಚಿ (ಮಾತೃದೇವತೆ ಋತುಮತಿಯಾಗುವ ದಿನದ ಆಚರಣೆ)ಯ ೧೫ ದಿನಗಳ ತರುವಾಯ ಈ ಹಬ್ಬ ಜರುಗುತ್ತದೆ. ಈ ೧೫ ದಿನಗಳಲ್ಲಿ ಉಳುವುದು, ನೆಲ ಅಗಿಯುವುದು ನಿಶಿದ್ಧ. ಖಾರ್ಚಿ ಪೂಜೆ ೭ ದಿನಗಳ ತನಕ ಜರುಗುತ್ತದೆ. ಈ ವೇಳೆ ಪುರಾತನ ಅಗರ್ತಲಾ ನಗರದ ಚತುರ್ದಶ ದೇವತಾ ಮಂದಿರದಲ್ಲಿ ಸತತವಾಗಿ ಪೂಜೆ ನಡೆಯುತ್ತದೆ. ತ್ರಿಪುರಿಗಳಲ್ಲದೆ ಇತರರೂ ಈ ಪೂಜೆಯಲ್ಲಿ ಸಂಭ್ರಮದಿಂದ ಭಾಗಗೊಳ್ಳುತ್ತಾರೆ. ಜನರು ದೇವಿಗೆ ಸಿಹಿತಿಂಡಿಗಳ ನೈವೇದ್ಯವನ್ನು ಸಮರ್ಪಿಸುತ್ತಾರೆ. ಕೋಳಿ, ಕುರಿ, ಆಡು, ಕೋಣಗಳ ಬಲಿಯನ್ನೂ ಕೊಡುವ ಸಂಪ್ರದಾಯವಿದೆ. ದುರ್ಗಾಪೂಜಾ ತ್ರಿಪುರದ ಬಂಗಾಳಿಗಳು, ಅಕ್ಟೋಬರ್, ನವೆಂಬರ್ ತಿಂಗಳ ಸಮಯದಲ್ಲಿ ನವರಾತ್ರಿಯ ವೇಳೆ ಅತ್ಯಂತ ಸಂಭ್ರಮದಿಂದ ದುರ್ಗಾಪೂಜೆಯನ್ನು ಆಚರಿಸುತ್ತಾರೆ. ದುರ್ಗೆಯ ಮೂರ್ತಿಯನ್ನು ಕೊನೆಯದಿನ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಕೊಳದಲ್ಲಿ ವಿಸರ್ಜನೆ ಮಾಡುತ್ತಾರೆ. ತೀರ್ಥ ಮುಖ ಗೋಮತಿ ನದಿಯ ಉಗಮ ಸ್ಥಾನಕ್ಕೆ ತೀರ್ಥಮುಖ ಎಂದು ಹೆಸರು. ಪುರಾತನ ಕಾಲದಿಂದಲೂ ತ್ರಿಪುರಿ ಜನರಿಗೆ ಇದು ಪವಿತ್ರ ತೀರ್ಥ ಕ್ಷೇತ್ರವಾಗಿತ್ತು. ಜನವರಿ-ಫೆಬ್ರವರಿ ತಿಂಗಳ ಮಧ್ಯೆ ಉತ್ತರಾಯಣ ಸಂಕ್ರಾಂತಿಯದಿನ ತ್ರಿಪುರಿ ಬುಡಕಟ್ಟಿನ ಜನರೇ ಅಲ್ಲದೆ ತ್ರಿಪುರದ ಎಲ್ಲಾ ವರ್ಗದ ಜನರೂ ಜಾತಿ, ಪಂಥಗಳ ಭೇದವಿಲ್ಲದೆ ಕೆರೆಗಳಲ್ಲಿ ತೀರ್ಥಸ್ನಾನ ಮಾಡಿ ಸಂಭ್ರಮದಿಂದ ಪೂಜೆಮಾಡುತ್ತಾರೆ. ಇಲ್ಲಿ ಜರುಗುವ ೨ ದಿನಗಳ ಜಾತ್ರೆಯ ಪೂಜೆಯಲ್ಲಿ ತಲೆ ಕೂದಲು ಬೋಳಿಸಿ, ಭಕ್ತಿ, ಶ್ರದ್ಧೆಗಳಿಂದ ದೇವತೆಗಳ ಪೂಜೆಯನ್ನು ಮಾಡುತ್ತಾರೆ. ತ್ರಿಪುರ-ವಿಧಾನ ಸಭೆ ವಿಧಾನ ಸಭೆ : 60 ಸ್ಥಾನಗಳು ತ್ರಿಪುರ ಮಾಣಿಕ್ ಸರ್ಕಾರ್ 03-11-1998 ದಿನಾಂಕ 14-2-2013 ರ 11ನೇ ವಿಧಾನ ಸಭೆ ಚುನಾವಣೆ ; 93.57% ಮತದಾನ -ಧಾಖಲೆ ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ) ತ್ರಿಪುರಾ ಸಿಪಿಎಮ್ =49 ( 2008ರಲ್ಲಿ 46ಕ್ಕೆ +3); ಭಾರತೀಯ ರಾಷ್ಟ್ರೀಯ ಕಾಂಗ್ರೆ 10: ಸಿಪಿಐ 1; ಇತರೆ 0; ಒಟ್ಟು 60 ಲೋಕ ಸಭೆ -- ಸಿಪಿಎಮ್ = 2 ಸ್ಥಾನ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2120
https://kn.wikipedia.org/wiki/%E0%B2%89%E0%B2%A4%E0%B3%8D%E0%B2%A4%E0%B2%B0%20%E0%B2%AA%E0%B3%8D%E0%B2%B0%E0%B2%A6%E0%B3%87%E0%B2%B6
ಉತ್ತರ ಪ್ರದೇಶ
ಉತ್ತರ ಪ್ರದೇಶವು ನಿಶ್ಚಿತವಾಗಿ "ಉತ್ತರ ಭಾಗದ ಪ್ರಾಂತ್ಯ"[ಆಗಾಗ್ಗೆ ಇದನ್ನು U.P. ಎಂದೂ ಸಹ ಉಲ್ಲೇಖಿಸುವರು] ಭಾರತದ ಉತ್ತರ ಭಾಗದಲ್ಲಿ ನೆಲೆಸಿರುವ ಒಂದು ರಾಜ್ಯವಾಗಿದೆ. ಸುಮಾರು 190 ಮಿಲಿಯದಷ್ಟು ಜನಸಂಖ್ಯೆಯನ್ನು ಹೊಂದಿದೆ, ಇದು ಭಾರತದ ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ರಾಜ್ಯವಾಗಿದೆ, ಹಾಗೆಯೇ ಪ್ರಪಂಚದಲ್ಲೇ ಹೆಚ್ಚಿನ ಜನಸಂಖ್ಯೆಯು ಈ ರಾಷ್ಟ್ರದ ಒಳಗೆ ಇರುವುದು. ಜೊತೆಗೆ ಉತ್ತರ ಪ್ರದೇಶವು ಹೆಚ್ಚಾಗಿ ಫಲವತ್ತಾದ ಒಂದು ದೊಡ್ಡ ಭಾಗದ ಪ್ರದೇಶವನ್ನು ಆವರಿಸಿದೆ ಮತ್ತು ಗಂಗಾನದಿಯ ಸಮ ತಲ ಪ್ರದೇಶದಲ್ಲಿ ಜನನಿಬಿಡತೆ ಹೊಂದಿದೆ. ಅಂತರಾಷ್ಟ್ರೀಯ ಸರಹದ್ದನ್ನು ಉತ್ತರದಲ್ಲಿ ನೇಪಾಳದೊಂದಿಗೆ ಭಾರತ ರಾಜ್ಯದ ಉತ್ತರಕಾಂಡವು ಅದನ್ನು ಹಂಚಿಕೊಂಡಿದೆ. ಉತ್ತರ-ಪಶ್ಚಿಮಕ್ಕೆ ಹಿಮಾಚಲ ಪ್ರದೇಶವು, ಪಶ್ಚಿಮದಲ್ಲಿ ಹರಿಯಾಣ, ದೆಹಲಿ, ಮತ್ತು ರಾಜಾಸ್ತಾನ್,ದಕ್ಷಿಣದಲ್ಲಿ ಮಧ್ಯ ಪ್ರದೇಶವು,ಚತ್ತಿಸ್ ಗಡ ಮತ್ತು ಜಾರ್ ಖಂಡ್ ದಕ್ಷಿಣದ ಪೂರ್ವದಲ್ಲಿ ಮತ್ತು ಪೂರ್ವದಲ್ಲಿ ಬಿಹಾರ್ ಭಾರತದ ರಾಜ್ಯಗಳಿವೆ. ಉತ್ತರ ಪ್ರದೇಶದ ಆಡಳಿತದ ಹಾಗೂ ಶಾಸಕಾಂಗದ ರಾಜಧಾನಿ ಲಖನೌ ಮತ್ತು ಹಣಕಾಸಿನ ಆಡಳಿತ ಹಾಗೂ ಔದ್ಯೋಗಿಕ ರಾಜಧಾನಿ ಕಾನಪುರ್. ಈ ರಾಜ್ಯದ ಉಚ್ಚ ನ್ಯಾಯಾಲಯ ಅಲಹಾಬಾದ್‌ನಲ್ಲಿ ಸ್ಥಾಪಿಸಿದ್ದೂ, ಒಂದು ನ್ಯಾಯಾಧೀಶರ ಪೀಠ ರಾಜ್ಯದ ರಾಜಧಾನಿಯಾದ ಲಖನೌನಲ್ಲಿ ಕೂಡ ಇದೆ. ಇದು ವಾರನಾಸಿ ಹಾಗೂ ಆಗ್ರಾ ಅಂತಹ ಅನೇಕ ಐತಿಹಾಸಿಕ ನಗರಗಳ ಮನೆಯಾಗಿದೆ. ಇಲ್ಲಿನ ದೊಡ್ಡ ನಗರ ಎಂದರೆ ಕಾನಪುರ; ಗೋರಖಪುರ, ಮೀರಟ್, ಆಗ್ರಾ, ಅಲಿಘರ್, ಬರೇಲಿ, ಅಲಹಾಬಾದ್‌, ಘಾಜಿಯಾಬಾದ್ ಹಾಗೂ ನೋಯಿಡಾ ಇತರ ದೊಡ್ಡ ನಗರಗಳು. ಭಾರತದ ಸಂಸ್ಕೃತಿಯಲ್ಲಿ ಉತ್ತರ ಪ್ರದೇಶದ ಸ್ಥಾನ ಮಹತ್ವದಾಗಿದೆ; ಇದು ಹಿಂದುತ್ವದ ಜನ್ಮಸ್ಥಾನ ಎಂದು ನಂಬಲಾಗಿದೆ, ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮದ ಸದಸ್ಯತ್ವ ಹೊಂದಿರುವ, ಶಿಕ್ಷಣ ಹಾಗೂ ಸಂಸ್ಕೃತಿಯ ನೆಲೆಯಾಗಿದ್ದು ಹಲವು ಮುಖ್ಯ ಹಿಂದೂ ತೀರ್ಥಯಾತ್ರೆಗಳ ತಾಣವಾಗಿದೆ. ಬೌದ್ಧ ಧರ್ಮಕ್ಕೂ ಈ ರಾಜ್ಯ ಬಹಳ ಮುಂಚೆಯಿಂದ ಮುಖ್ಯವಾದ ಸ್ಥಳವಾಗಿದೆ. ಬುದ್ಧ ತನ್ನ ಅನುಯಾಯಿಗಳನ್ನು ಮೊದಲ ಬಾರಿಗೆ ಚೌಖಂಡಿ ಸ್ತುಪದಲ್ಲಿ ಭೇಟಿಯಾಗಿದ್ದರು. ಸರಾನಾಥಿನ ಧಾಮೆಕ್ ಸ್ತೂಪ ಬುದ್ಧರು ಮೊದಲು ಧರ್ಮೋಪದೇಶ ನೀಡಿದ ಸ್ಥಳವೆಂದು ಸ್ಮಾರಕೋತ್ಸವ ನಡೆಸುತ್ತಾರೆ. ಖುಷಿನಗರದಲ್ಲಿ ಗೌತಮ ಬುದ್ಧರು ದೈವಾಧೀನರಾದರು. ಕೊನೆಯವರೆಗೆ ಇದರ ಇತಿಹಾಸದಲ್ಲೇ, ಉತ್ತರ ಪ್ರದೇಶ ರಾಜ್ಯದ ಪ್ರದೇಶವನ್ನು ಮಧ್ಯದಲ್ಲಿಯೇ ಭಾಗಗಳನ್ನಾಗಿಸುವುದು ಮತ್ತು ಕೆಲಕಾಲದಲ್ಲಿ ಅದರ ಪೂರ್ವ ಅಥವಾ ಪಶ್ಚಿಮದ ಪ್ರಮುಖ ಭಾಗಗಳಲ್ಲಿ ದೊಡ್ಡದಾದ ಸಾಮ್ರಾಜ್ಯಗಳನ್ನು ರಚಿಸಲು ಮಗಧರು, ನಂದರು ,ಮೌರ್ಯನ್ನರು ,ಸುಂಗಾ , ಕುಶಾನರು ,ಗುಪ್ತರು, ಪಾಲರು.ಮತ್ತು ಮೊಘಲರು ಒಳಗೊಂಡು ಪ್ರೇರೇಪಿಸುತ್ತಿದ್ದರು. ಹಿಂದೂ-ಗಂಗಾನದಿಯ ಸಮತಲ ಪ್ರದೇಶವು, ಹೆಚ್ಚಿನ ರಾಜ್ಯಗಳಿಗೆ ಸೇತುವೆಯಾಗಿದೆ, ಹಾಗೂ ಮಧ್ಯ ಕಾಲೀನದಲ್ಲಿ ಹಿಂದೂ-ಇಸ್ಲಾಮಿಕ್ ಭಾಷೆಗಳ ಸಂಸ್ಕೃತಿಯನ್ನೇ ಇಳಿಮುಖವಾಯಿಸಿತು. ಪಿತ್ರಾಜಿತವಾದ ಮೊಘಲ್ ಸಾಮ್ರಾಜ್ಯವು ಪ್ರಂಪಚದಲ್ಲೇ ಹೆಸರಾಂತ ಮ್ಯೂಸಿಯಂ, ಶಹಜಹಾನ್ ಕಟ್ಟಿಸಿದ ತಾಜ್ ಮಹಲ್, ಮೊಘಲ್ ಸಾಮ್ರಾಜ್ಯದ ಪ್ರಖ್ಯಾತ ದೂರೆ ಅಕ್ಬರ್ ನು ಆಗ್ರಾದಲ್ಲಿ ಕಟ್ಟಿಸಿದ ಭವ್ಯವಾದ ಗೋಪುರ ಮತ್ತು ಫತೆಪುರ್ ಸಿಕ್ರಿ ಯಲ್ಲಿ ಇರು ಅಕ್ಬರನ ರಾಜಧಾನಿಯ-ಅರಮನೆಯು ಹೆಚ್ಚಿನ ಸ್ವಾಧೀನ ಪಡೆದುಕೊಂಡಿದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇದು ರಾಷ್ಟ್ರೀಯತೆಯ ಮಧ್ಯ ಭಾಗವಾಗಿತ್ತು ಮತ್ತು ಭಾರತೀಯದ ರಾಜಕೀಯ ಹಾಗೂ ಸಾಂಸ್ಕೃತಿಕ ಚಳುವಳಿಗಳು ಪ್ರಮುಖವಾದ ಪಾತ್ರವನ್ನು ವಹಿಸಿತು. ರಾಜ್ಯದಲ್ಲಿ ಹೆಸರಾಂತ ಶ್ರೇಷ್ಠ ಪರಂಪರೆಯ ಹಸ್ತ ಕೌಶಲ್ಯಗಳು ಮತ್ತು ಗುಡಿ ಕೈಗಾರಿಕೆಗಳು ವಿವಿಧ ತರಹದ ಅತ್ಯಂತ ನಿಪುಣರಾದ ಕುಶಲ ಕರ್ಮಿಗಳು ಮತ್ತು ಕಲಾ ನೈಪುಣ್ಯರನ್ನು ಹೊಂದಿದೆ. ಈ ರಾಜ್ಯದಲ್ಲಿ 98% ಕ್ಕಿಂತ ಹೆಚ್ಚಿನ ಜನಸಂಖ್ಯೆಯ ಹಿಂದುಗಳು ಹಾಗೂ ಮುಸ್ಲೀಮರು ಜೊತೆಯಾಗಿ ನೆಲೆಯಾಗಿರುವರು. ಉಳಿದವರಲ್ಲಿ ಸುಮಾರು 2% ಸಿಕ್ಕರು, ಜೈನರು, ಬೌದ್ಧರು ಮತ್ತು ಕ್ರಿಶಿಯನ್ನರು ಹಾಗೂ ಅದರ ಜೊತೆ ಬುಡ ಕಟ್ಟಿನ ಜನಾಂಗದವರು. ಇತಿಹಾಸ ರಾಜ್ಯದ ವಿಕಸನ 19ನೇ ಶತಮಾನದಿಂದ ಈ ಪ್ರದೇಶದ ಕುರಿತು ಹಲವು ಬೇರೆಬೇರೆ ತರಹದ ವಿವರಣೆಗಳಿವೆ, ಮತ್ತು ಮೊದಲು ಹೆಸರುಗಳಿವೆ ಹಾಗು ರಾಜ್ಯದ ಸರಹದ್ದುಗಳಿವೆ, ಅಂದರೆ, ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಪ್ರಾಬಲ್ಯದ ಅಡಿಯಲ್ಲಿ ಗಂಗಾ ನದಿಯ ಸಮತಲದಲ್ಲಿ ಸ್ಥಾಪಿತಗೊಳಿಸಿದ ನಂತರ. 1833 ರಲ್ಲಿ ಬೆಂಗಾಲ್ ನ ಅಧಿಪತ್ಯದ ಕಂಪನಿ ಸರ್ಕಾರವು ಎರಡು ಭಾಗವಾಗಿ ವಿಂಗಡಣೆಯಾಯಿತು. ಅವುಗಳಲ್ಲಿ ಒಂದು ಆಗ್ರಾದ ಅಧಿಪತ್ಯವಾಯಿತು. 1836 ರಲ್ಲಿ ಆಗ್ರಾ ಪ್ರದೇಶವನ್ನು ಉತ್ತರ-ಪಶ್ಚಿಮಗಳ ನಾಡೆಂದು ಹೆಸರಿಸಲಾಯಿತು ಹಾಗೂ ಕಂಪನಿ ಸರ್ಕಾರವು ಲೆಫ್‌ಟಿನೆಂಟ್ ಗೌರ್ವನರ್‌ನ ಆಡಳಿತದ ಅಡಿಯಲ್ಲಿ ಬಂದಿತು. 1877 ರಲ್ಲಿ ಕಂಪನಿ ಸರ್ಕಾರವು ಆಗ್ರಾ ಮತ್ತು ಔಧ್ ಎಂಬ ಎರ‍ಡು ಪ್ರಾಂತಗಳನ್ನು (1858ರಲ್ಲಿ, ಔಧ್ ಅನ್ನು ಕಂಪನಿ ಸರ್ಕಾರವು ತನ್ನಲ್ಲಿ ವಶಪಡಿಸಿಕೊಂಡಿತು.) ಬ್ರಿಟಿಷ್ ವಸಾಹತಿನ ಆಡಳಿತದ ಅಡಿಯಲ್ಲಿ ನಡೆಸಲಾಗುತ್ತಿತ್ತು. ಅವರನ್ನು ಉತ್ತರ-ಪಶ್ಚಿಮದ ಲೆಫ್ ಟಿನೆಂಟ್ ಗೌವರ್ನರ್ ಎಂದು ಕರೆಯಲಾಗುತ್ತಿತ್ತು ಮತ್ತು ಆತ ಔಧ್‌ನ ಇಲಾಖೆಯ ಮುಖ್ಯಾಧಿಕಾರಿಯೂ ಕೂಡ ಆಗಿದ್ದರು. ಇದರ ಹೆಸರು 1902 ರಲ್ಲಿ ಆಗ್ರಾ ಮತ್ತು ಔಧ್ ಸಂಯುಕ್ತ ಸಂಸ್ಥಾನವೆಂದು ಬದಲಾಯಿತು ಲೆಫ್ಟಿನೆಂಟ್ ಗವರ್ನರ್ ಆಗ್ರಾ ಮತ್ತು ಅವಧ್ ಸಂಯುಕ್ತ ಸಂಸ್ಥಾನದ ಅಧಿಕಾರ ಹಿಡಿದ. 1921 ರಲ್ಲಿ ಲೆಫ್ಟಿನೆಂಟ್ ಗವರ್ನರ್ ಎಂಬ ಹುದ್ದೆಯು ಗೌವರ್ನರ್ ಎಂದು ಆಯಿತು ಹಾಗೂ ಸಂಸ್ಥಾನದ ಹೆಸರುಗಳನ್ನು ಬ್ರಿಟಿಷ್ ಭಾರತದ ಸಂಯುಕ್ತ ಸಂಸ್ಥಾನ ಎಂದು ಬದಲಿಸಲಾಯಿತು. 1935, ರಲ್ಲಿ ಇದರ ಹೆಸರನ್ನು ಕುಂಠಿತಗೊಳಿಸಿ ಸಂಯುಕ್ತ ಸಂಸ್ಥಾನಗಳೆಂದು ಕರೆಯಲಾಯಿತು. 1947 ರಲ್ಲಿ, ಬ್ರಿಟಿಷ್‌ರ ವಸಾಹತಿನ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದ ನಂತರ ವೈಭವದಿಂದ ಕೂಡಿದ ರಾಜ್ಯಗಳಾದ ರಾಂಪುರ, ಬನಾರಸ್ ಹಾಗೂ ತೆಹರಿ-ಗರ್‌ವಾಲ್ ಗಳನ್ನು ಸಂಯುಕ್ತ ಸಂಸ್ಥಾನಗಳಿಗೆ ಒಗ್ಗೂಡಿಸಲಾಯಿತು. 195೦ರಲ್ಲಿ, ಸಂಯುಕ್ತ ಸಂಸ್ಥಾನವೆಂಬ ಹೆಸರನ್ನು ಬದಲಿಸಿ ಉತ್ತರ ಪ್ರದೇಶವೆಂದು ಕರೆಯಲಾಯಿತು. 1999 ರಲ್ಲಿ ಪ್ರತ್ಯೇಕವಾದ ಹಿಮಾಲಯ ರಾಜ್ಯ, ಉತ್ತರಾಂಚಲ್, (ಇತ್ತೀಚಿನ ಹೆಸರು ಉತ್ತರಾಖಂಡ), ಗಳನ್ನು ಉತ್ತರ ಪ್ರದೇಶದಿಂದ ರೂಪಿಸಲಾಯಿತು. ಇತಿಹಾಸಪೂರ್ವ, ದಂತಕತೆಗಳು ಮತ್ತು ಪ್ರಾಚೀನ ಕಾಲ ಉತ್ತರಪ್ರದೇಶದಲ್ಲಿನ ಪ್ರಾಕ್ತನ ಶಾಸ್ತ್ರದ ಸಂಶೋಧನೆಗಳ ಪ್ರಕಾರ ಇಲ್ಲಿ ಶಿಲಾಯುಗದ ಹೋಮೋ ಸೇಪಿಯನ್ ಬೇಟೆಗಾರ-ಸಂಗ್ರಹಕಾರರು ಜನರು 85±11 ಮತ್ತು 72±8 kyr ವರ್ಷಗಳ ನಡುವೆ (ಸಾವಿರಾರು ವರ್ಷಗಳ ಹಿಂದೆ) ಛಾತರ್ಫಾಲಿಯಾ, ಮಾಹುಘರ್, ಪಾರಿಸ್ಧಿಯಾ, ಲಲಿತ್‌ಪುರ್, ನಿಹಿ ಮತ್ತು ಗೋಪಿಪುರ, ದಲ್ಲಿದ್ದರು; ಮಧ್ಯ ಶಿಲಾಯುಗಕ್ಕೆ ಸಂಬಂಧಿಸಿದ ಮತ್ತು ನಂತರದ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ 21–31 kyr BP ಯಷ್ಟು ಹಳೆಯದಾದ ಉಪಕರಣಗಳು; [12] ಮಧ್ಯಶಿಲಾಯುಗದ/ಮೈಕ್ರೋಶಿಲೆಯ ಯುಗದ ಬೇಟೆಗಾರ-ಸಂಗ್ರಹಕಾರರ ವಸತಿಗಳು ಪ್ರತಾಪ್‌ಘರ್ ಸಮೀಪದಲ್ಲಿ ಸುಮಾರು 10,550–9550 B.C. ವರ್ಷ ಹಿಂದಿನವು ದೊರೆತಿವೆ; ಹಳ್ಳಿಗಳು, ಸಾಕಿದ ಜಾನುವಾರುಗಳು, ಕುರಿ, ಹೋತಗಳು ಮತ್ತು ಸಸ್ಯಗಳು ಮತ್ತು ಸುಮಾರು 6000 B.C. ಯಷ್ಟು ಹಿಂದಿನ ಕಾಲದಲ್ಲಿಯೇ ನಡೆದಿರಬಹುದಾದ ಕೃಷಿಯ ಕುರುಹುಗಳು - ಹೆಚ್ಚಿನವು c. 4000 ಮತ್ತು 1500 B.C.ರ ನಡುವಿನ ಸಮಯದವಾದರೂ - ಇವೆಲ್ಲವೂ ಸಹರಾನ್‌ಪುರ ವಿಭಾಗದಲ್ಲಿ ಕಾಣುವ ಸಿಂಧೂ ನದಿ ಕಣಿವೆ ನಾಗರೀಕತೆ ಮತ್ತು ಹರಪ್ಪಾ ಸಂಸ್ಕೃತಿ ಯಿಂದ ವೇದಗಳ ಕಾಲದ ಮೂಲಕ ಮಾನವ ಸಂಸ್ಕೃತಿಯ ಉಗಮವಾದ ಶಿಲಾಯುಗಕ್ಕೆ, ಕರೆದೊಯ್ಯುತ್ತವೆ. 4000 ವರ್ಷಗಳ ಹಿಂದೆ ಹೋದಲ್ಲಿ ಉತ್ತರ ಪ್ರದೇಶದ ಇತಿಹಾಸವನ್ನು ತಿಳಿದಂತೆ, ಆರ್ಯನ್ನರು ಮೊದಲು ಅವರ ನೆಲೆಯನ್ನು 2000 BC ಯಲ್ಲಿ ಸ್ಥಾಪಿಸಿದ್ದರು, ಇದು ಭಾರತದ ನಾಗರಿಕತೆಯಲ್ಲಿ ವೈಧಿಕ ಯುಗದ ರಾಜ ಧೂತನೆಂದೆನಿಸಿತು. ಆರ್ಯನ್ನರು ಅವರ ಮೂಲ ನೆಲೆ ಪಂಜಾಬ್ ಪ್ರದೇಶದಿಂದ ಸೋಸಿ ಹೋಗಿ ಡೋಬ್ ಪ್ರದೇಶಗಳಲ್ಲಿ ಹಾಗೂ ಗಾಗ್ರ ಸಮತಲ ಪ್ರದೇಶ ಹಾಗೂ ವಿವಿಧ ಹೆಸರಲ್ಲಿ ಕರೆಯಲ್ಪಡುವ ಮಧ್ಯ ದೇಶ (ಮಿಡ್ ಲ್ಯಾಂಡ್), ಆರ್ಯಾವರ್ತ(ಆರ್ಯನ್ನರ ಪ್ರದೇಶ) ಹಾಗೂ ಭಾರತವರ್ಷ (ಪ್ರಮುಖ ಆರ್ಯನ್ನರ ರಾಜನು ಭಾರತವನ್ನಾಳುವ ದೇಶ) ಗಳಲ್ಲಿ ನೆಲೆಸಿದರು. ಪ್ರಾಚೀನ ಹಿಂದೂ-ಆರ್ಯನ್ನರ ಸಾನಿಧ್ಯವು , ಪ್ರಾಚೀನ ವಸ್ತು ಶಾಸ್ತ್ರ ಶೋಧನೆಯಲ್ಲಿ ಮಾಸಲು ಬಣ್ಣದ ಕುಡಿಕೆ ತಯಾರಿಕೆಗಳ ಸಾನಿಧ್ಯದ ಭಾಗದಲ್ಲಿ ಬಹುಶಃ ಸಮಕೂಡುತ್ತಿತ್ತು. ಕಾಲಾ ನಂತರದಲ್ಲಿ, ಆರ್ಯನ್ನರು ಭಾರತದ ಒಳ ಭೂಖಂಡದ ಬೇರೆ ಬೇರೆ ಭಾಗಳಲ್ಲಿ ಹರಡಿಕೊಂಡರು, ದೂರ ದಕ್ಷಿಣದ ಕೇರಳ ಮತ್ತು ಶ್ರೀಲಂಕಾಗಳಲ್ಲಿ ಹೋಗಿ ಸೇರಿಕೊಂಡರು, ಹಾಗೂ ಸಕಾಲ ಮಾರ್ಗದಲ್ಲಿ, ಹಲವು ದೊಡ್ಡ ಜನಸಂಖ್ಯೆಯ ಕೇಂದ್ರಗಳಲ್ಲಿ ಪ್ರಾಚೀನ ರಾಜ್ಯಗಳು (ಮಹಾಜನಪದರು) ಉದಯಿಸಿದವು. ಪ್ರಾಚೀನ ಮಹಾಜನಪದ ಕಾಲದ ಅಯೋಧ್ಯೆಯ ಕೋಸಲ ಸಾಮ್ರಾಜ್ಯವು - ಇಲ್ಲಿಯೇ ಹಿಂದೂ ಪುರಾಣದ ಅವತಾರ ಪುರುಷನಾದ ರಾಮಾಯಣದ ರಾಮ ರಾಜ್ಯಭಾರ ಮಾಡಿದ್ದ - ಇಲ್ಲಿಯೇ ಇದೆ. ಕೃಷ್ಣ - ಹಿಂದೂ ಪುರಾಣದ ಮತ್ತೊಬ್ಬ ಅವತಾರ ಪುರುಷ ಮತ್ತು ಮಹಾಭಾರತ ಮಹಾಕಾವ್ಯದಲ್ಲಿ ಪ್ರಮುಖ ಪಾತ್ರವಹಿಸಿದವ ಹಾಗೂ ಹಿಂದೂ ದೇವತೆ ಮಹಾವಿಷ್ಣುವಿನ ಎಂಟನೆಯ ಅವತಾರವಾದವನು - ಇಲ್ಲಿಯ ಮಥುರಾ ನಗರದಲ್ಲಿಯೇ ಜನಿಸಿದನು. ಮಹಾಭಾರತ ಯುದ್ಧದ ನಂತರದ ಪಾಂಡವ ಅರಸು ಯುಧಿಷ್ಠಿರನ ಆಳ್ವಿಕೆಯಲ್ಲಿನ ಘಟನೆಗಳು ಇಲ್ಲಿಯ ಪಶ್ಚಿಮ ಉತ್ತರ ಪ್ರದೇಶದ ದೋಬ್ ಪ್ರದೇಶ ಮತ್ತು ದೆಹಲಿಯ ನಡುವೆ ನಡೆದಿರುವವೆಂದು (ಕುರು ಮಹಾಜನಪದದಲ್ಲಿ) ನಂಬಲಾಗಿದೆ. ಕುರು ಸಾಮ್ರಾಜ್ಯವು ಕಪ್ಪು ಮತ್ತು ಕೆಂಪು ಸರಂಜಾಮುಗಳಿಗೆ ಮತ್ತು ಚಿತ್ರಿಸಿದ ಬೂದು ಸರಂಜಾಮುಗಳ ಸಂಸ್ಕೃತಿಗೆ ಸಂಬಂಧಿಸಿದೆ ಮತ್ತು ಇದು ಭಾರತದ ವಾಯುವ್ಯ ಭಾಗದಲ್ಲಿ ಕಬ್ಬಿಣದ ಯುಗವು ಸುಮಾರು 1000 BCEರಲ್ಲಿ ಆರಂಭವಾಗಿರುವುದನ್ನು ಸೂಚಿಸುತ್ತದೆ. ಬ್ರಹ್ಮಪುರಾಣ ಮತ್ತು ವಿಶ್ವಕ್ಸೇನ ಸಂಹಿತದಲ್ಲಿ ದೇವರ ಅವತಾರವೆಂದು ಹೇಳಲಾಗಿರುವ ಸ್ವಾಮಿನಾರಾಯಣ ಛಾಪಿಯಾ ಎಂಬ ಹಳ್ಳಿಯಲ್ಲಿ ಜನಿಸಿದರು. ಪೂರ್ವ ಮತ್ತು ಪಶ್ಚಿಮದಿಂದ ಮಾಡಲ್ಪಟ್ಟ ಉತ್ತರ ಭಾರತದಲ್ಲಿನ ಸಾಮ್ರಾಜ್ಯ ವಿಸ್ತರಣೆಯ ದಂಡಯಾತ್ರೆಗಳು ವಿಶಾಲವಾದ ಗಂಗಾ ನದಿಯ ಬಯಲಿನ ಮೂಲಕವೇ ಆಗಬೇಕಾಗಿತ್ತು, ಮತ್ತು ಆ ಬಯಲೇ ಈಗ ಉತ್ತರ ಪ್ರದೇಶವಾಗಿದೆ. ಮೌರ್ಯ(320-200 BCE), ಕುಶಾನ(100-250 CE), ಗುಪ್ತ(350-600 C.E.) ಸಾಮ್ರಾಜ್ಯ ಸೇರಿದಂತೆ ಭಾರತದ ಎಲ್ಲ ಪ್ರಧಾನ ಸಾಮ್ರಾಜ್ಯಗಳ ಶಕ್ತಿ ಮತ್ತು ಸ್ಥಿರತೆಗಾಗಿ ಈ ಪ್ರದೇಶದ ಮೇಲಿನ ಹಿಡಿತ ಸಾಧಿಸುವುದು ಅತಿ ಮಹತ್ವದ್ದಾಗಿತ್ತು ಗುಪ್ತರ ಸಾಮ್ರಾಜ್ಯವನ್ನು ಮುರಿದ ಹನ್ ದಾಳಿಗಳ ತರುವಾಯ ಗಂಗಾ-ಯಮುನ ಸಂಗಮ ಪ್ರದೇಶವು ಕನೌಜ್ ಉದಯವಾಗುವುದನ್ನು ಕಂಡಿತು. ಹರ್ಷವರ್ಧನನ(590- 647 CE) ಆಳ್ವಿಕೆಯ ಕಾಲದಲ್ಲಿ ಕನೌಜ್ ಸಾಮ್ರಾಜ್ಯವು ತನ್ನ ಉತ್ತುಂಗದ ಸ್ಥಿತಿಯಲ್ಲಿತ್ತು. ಇದು ಪಂಜಾಬ್ ಮತ್ತು ಗುಜರಾತ್ ನಿಂದ ಬೆಂಗಾಲ್ ಮತ್ತು ಒರಿಸ್ಸಾವರೆಗೆ ತನ್ನ ವಿಸ್ತಾರವನ್ನು ಹೊಂದಿದ್ದು, ಕೇಂದ್ರ ಭಾರತದ ಹಾಗೂ ನರ್ಮದಾ ನದಿಯ ಉತ್ತರ ಭಾಗಗಳನ್ನೊಳಗೊಂಡಂತೆ ಒಟ್ಟಾರೆ ಇದು ಇಡೀ ಸಿಂಧೂ-ಗಂಗಾ ತಪ್ಪಲು ಪ್ರದೇಶವನ್ನು ಆಕ್ರಮಿಸಿತ್ತು. ಬೌದ್ಧಧರ್ಮದ ಆಶ್ರಯದಾತ ಹಾಗೂ ನಳಂದದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಹರ್ಷವರ್ಧನನು ಧರ್ಮಶಾಸ್ತ್ರದ ಕುರಿತಾಗಿ ಚರ್ಚೆಗಳಿಗೆ, ಕಲೆ ಮತ್ತು ಸಾಹಿತ್ಯಕ್ಕೆ ಆಶ್ರಯದಾತನಾಗಿದ್ದ. ತಾನೇ ಅತ್ಯುತ್ತಮ ಬರಹಗಾರನಾಗಿದ್ದ ಹರ್ಷನು ಮೂರು ಸಂಸ್ಕೃತ ನಾಟಕಗಳನ್ನು ಬರೆದಿದ್ದನು. ಭಾರತದಲ್ಲಿನ ಅನೇಕ ಸಮುದಾಯಗಳು ತಾವು ಕನೋಜ್‌ನಿಂದ ವಲಸೆ ಬಂದವರ ಸಂತತಿಯವರೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದು ಆಗಿನ ಕನೋಜ್‌ನ ವೈಭವವನ್ನು ಸೂಚಿಸುತ್ತದೆ. ಹರ್ಷವರ್ಧನನ ಸಾವಿನ ನಂತರ ಆತನ ಸಾಮ್ರಾಜ್ಯ ಅನೇಕ ರಾಜ್ಯಗಳಾಗಿ ಒಡೆದುಹೋಯಿತು, ಮತ್ತು ಇದನ್ನು ಹೆಚ್ಚಾಗಿ ರಜಪೂತರು ಆಳಿದರು. ಅವರು ಬಂಗಾಳದ ಶಕ್ತಿಯುತವಾದ ಪಾಲ ಸಾಮ್ರಾಜ್ಯವು ಈ ಪ್ರದೇಶದಲ್ಲಿ ಹೊಂದಿದ್ದ ನಿಯಂತ್ರಣಕ್ಕೂ ಸವಾಲು ಹಾಕಿದರು. ಮಧ್ಯಯುಗ ತುರ್ಕಿಯ-ಅಫಘಾನ್ ಮುಸಲ್ಮಾನ್‌ ಅಧಿಕಾರಿಗಳ ಆಗಮನ ಹರ್ಷವರ್ಧನದ ನಂತರದ ರಜಪೂತ ರಾಜರ ಪಥನಕ್ಕೆ ಕಾರಣವಾಯಿತು ಹಾಗೂ ಇಂದು ನಾವೂ ಏನು ಉತ್ತರ ಪ್ರದೇಶ ಎಂದು ಕರೆಯುವ ಸ್ಥಳವಿದೆ, ಅದು ನಂತರದ ಹಲವು ಘಟನೆಗಳಿಗೆ ಪರಿವರ್ತನಕಾರಿಯಾಯಿತು; 1000 ADಯ ನಂತರ ಈ ರಾಜ್ಯದ ಹೆಚ್ಚು ಭಾಗ ಇಂಡೋ-ಇಸ್ಲಾಮ್ ಸಾಮ್ರಾಜ್ಯಕ್ಕೆ (ಸುಲ್ತಾನೇಟ್ಸ್) ಹೋಯಿತು ಹಾಗೂ ಅವರ ರಾಜಧಾನಿಯಾದ ದೆಹಲಿಯಿಂದ ಆಳಲ್ಪಟ್ಟಿತು. ನಂತರ ಮುಘಲ್‌ರ ಕಾಲದಲ್ಲಿ, U.P. ಅವರ ವ್ಯಾಪಕ ಸಾಮ್ರಾಜ್ಯದ ಹೃದಯದ ಭಾಗವಾಯಿತು; ಅವರು ಈ ಸಾಮ್ರಾಜ್ಯಕ್ಕೆ ’ಹಿಂದೂಸ್ಥಾನ್’ ಎಂದು ಕರೆಯಲಾರಂಭಿಸಿದರು. ಇಂದಿಗೂ ಹಲವು ಭಾಷೆಗಳಲ್ಲಿ ಭಾರತಕ್ಕೆ ನಾವು ಇದೇ ಹೆಸರನ್ನು ಬಳಸುತ್ತೇವೆ. ಆಗ್ರಾ ಹಾಗೂ ಫತೆಹ್‌ಪುರ್ ಸಿಕ್ರಿ ಭಾರತದ ಶ್ರೇಷ್ಠ ಮುಘಲ್‌ ಸಾರ್ವಭೌಮನಾದ ಅಕ್ಬರ್‌ನ ರಾಜಧಾನಿ ನಗರಗಳಾಗಿದ್ದವು. ಔರಂಗಜೇಬ್‌ನ ಆಢಳಿತದ ಪರಾಕಾಷ್ಠೆಯ ಸಮಯದಲ್ಲಿ ಮುಘಲ್ ಸಾಮ್ರಾಜ್ಯವೂ ಭಾಗಶಃ ಸಂಪೂರ್ಣ ಭಾರತ ಉಪಖಂಡವನ್ನು ಆವರಿಸಿತ್ತು (ಇಂದಿನ ಅಫಘಾನಿಸ್ತಾನ್, ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶವನ್ನು ಸೇರಿಸಿ), ಇದನ್ನು ಬೇರೆ ಬೇರೆ ಸಮಯದಲ್ಲಿ ದೆಹಲಿ, ಆಗ್ರಾ ಹಾಗೂ ಅಲಹಾಬಾದ್‌‌ಗಳಿಂದ ಆಳಲಾಗಿತ್ತು. ಮುಘಲ್ ಸಾಮ್ರಾಜ್ಯ ಅಸಂಘಟಿತವಾದಾಗ, ಅವರ ಕೊನೆಯ ರಾಜ್ಯಕ್ಷೇತ್ರ ಹಿಂದೂಸ್ತಾನ ಹಾಗೂ ದೆಹಲಿಯ ಡೊಬ್ ಪ್ರದೇಶಕ್ಕೆ ನಿರ್ಬಂಧಿತವಾಗಿತ್ತು. ಭಾರತದ (U.P.) ಇತರ ಪ್ರದೇಶಗಳು ಈಗ ಹಲವು ಅಧಿಕಾರಿಗಳಿಂದ ಆಳಲಾಗಿತ್ತು: ಔದ್ಧನ್ನು ಔದ್ಧಿನ ನವಾಬರು ಆಳುತ್ತಿದ್ದರು, ರೋಹಿಲ್‌ಖಂಡ್ ಅಫಘಾನ್‌ರಿಂದ, ಬುಂದೇಲ್‌ಖಂಡ್ ಮರಾಠರಿಂದ ಮತ್ತು ಬನಾರಸ್ ಅದರದೇ ಸ್ವಂತ ರಾಜರಿಂದ ಆಳಲ್ಪಟ್ಟಿತು. ಅದೇ ಸಮಯದಲ್ಲಿ ನೇಪಾಲ್ ಕುಮೊನ್-ಘರವಾಲ್‌ನ್ನು ವ್ಯಾಪಕ ನೇಪಾಲಿನ ಭಾಗವೆಂದು ನಿಯಂತ್ರಿಸುತಿತ್ತು. ಈ ರಾಜ್ಯದ ರಾಜಧಾನಿ ನಗರ ಲಖನೌ ಅನ್ನು ಔದ್ಧಿನ ಮುಸ್ಲಿಮ್ ನವಾಬ್‌ರು 18ನೇಯ ಶತಮಾನದಲ್ಲಿ ಸ್ಥಾಪಿಸಿದ್ದರು. ಆಧುನಿಕ-ವಸಾಹತೀಕರಣ ಕಾಲ 18ನೇಯ ಶತಮಾನದ ಮಧ್ಯದಲ್ಲಿ ಬಂಗಾಳದಿಂದ ಆರಂಭಗೊಂಡ ಉತ್ತರ ಭಾರತದ ಪ್ರದೇಶಗಳ ಯುದ್ಧ ಸರಣಿಯು ಕೊನೆಗೂ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ರಾಜ್ಯದ ಭೂಪ್ರದೇಶಗಳ ಅಧಿಕಾರ ಸ್ವೀಕೃತಿಯ ಪ್ರಕ್ರಿಯೆಗೆ ದಾರಿ ಮಾಡಿ ಕೊಟ್ಟಿತು - ಬುಂದೇಲ್‍ಖಂಡ್, ಕುಮೌನ್ ಹಾಗೂ ಬನಾರಸ್ ಅಧಿಕಾರಿಗಳ ಪ್ರದೇಶಗಳನ್ನು ಸೇರಿಸಿ ಮತ್ತು ಮುಘಲರ ಕೊನೆಯ ಭೂಪ್ರದೇಶಗಳಾದ ಡೋಬ್ ಹಾಗೂ ದೆಹಲಿ. ಅಜಮೇರ್ ಹಾಗೂ ಜೈಪುರ್ ಸಾಮ್ರಾಜ್ಯಗಳನ್ನು ಕಂಪನಿ ಉತ್ತರ ಭೂಪ್ರದೇಶಗಳಲ್ಲಿ ಸೇರಿಸಿದಾಗ, ಅದನ್ನು ಅವರು (ಆಗ್ರಾದ) ಉತ್ತರ-ಪಶ್ಚಿಮ ಪ್ರಾಂತಗಳೆಂದು ಹೆಸರಿಸಿದರು. ಇಂದು, ಈ ರಾಜ್ಯದ ವಿಸ್ತಾರ ಗಣತಂತ್ರ ಭಾರತದ ಇತರ ಪ್ರಸ್ತುತ ’ಸಣ್ಣ-ರಾಜ್ಯಗಳನ್ನು’ ಹೋಲಿಸಿದರೆ ದೊಡ್ಡದೆನಿಸಬಹುದು, ಆದರೆ ಆರಂಭದ ಬ್ರಿಟಿಷರ ಸಮಯದ ’ವಿಭಜನೆ’ಯನ್ನು ಗಮನಿಸಿದರೆ ಇದು ಬ್ರಿಟಿಷರ ಸಣ್ಣ ಪ್ರಾಂತಗಳಲ್ಲೊಂದು. ಇದರ ರಾಜಧಾನಿ ಎರಡು ಬಾರಿ ಆಗ್ರಾ ಹಾಗೂ ಅಲಹಾಬಾದ್‌ ನಡುವೆ ಸ್ಥಳಾಂತರವಾಯಿತು. ವಿದೇಶೀ ಕಂಪನಿಯ ನಿಯಮದ ಕಾರ್ಯನೀತಿಗಳ ಬಗ್ಗೆ ಅಸಮಾಧಾನದಿಂದಾಗಿ ಉತ್ತರ ಭಾರತದ ಹಲವು ಭಾಗಗಳಲ್ಲಿ ಒಂದು ಗಂಭೀರ ಬಂಡಾಯ ಹೊರಗೆದ್ದಿತು; ಮೀರತ್ ಲಷ್ಕರಿನ ಸಿಪಾಯಿ, ಮಂಗಲ್ ಪಾಂಡೆ ಇದನ್ನು ಆರಂಭಿಸಿದನು ಎಂದು ಗಣ್ಯತೆ ಪಡೆದಿದ್ದಾನೆ. ಇದನ್ನು 1857ರ ಭಾರತೀಯ ಬಂಡಾಯ ಎಂದು ತಿಳಿಯಬಹುದು. ಇದರ ಪಥನದ ನಂತರ, ಗೊಂದಲ ಸ್ಥಿರಗೊಂಡ ಮೇಲೆ, ಹತಾಶೆಯರಾಗಿ ಬ್ರಿಟಿಷರು ಬಂಡಾಯ ಪ್ರದೇಶಗಳ ಜನರ ಅಂಗಾಗಳನ್ನು-ಕಡಿದು ಹಾಕಲು ಒಂದು ದೊಡ್ಡ ಪರಿಷ್ಕರಿಸಿದ ಉಪಾಯ ಮಾಡಿದರು: ಅವರು ದೆಹಲಿ ಪ್ರದೇಶವನ್ನು ’ಆಗ್ರಾದ NWFP’ಯಿಂದ ಕತ್ತರಿಸಿ ಪಂಜಾಬಿನ ಜೊತೆ ಸೇರಿಸಿದರು ಮತ್ತು ಅಜಮೇರ್ - ಮಾರವಾರ್ ಪ್ರದೇಶ ರಜಪೂತಾನದ ಜೊತೆ ಸೇರಿಸಿದರು; ಇದೇ ಸಮಯದಲ್ಲಿ ಅವರು ಔದ್ಧನ್ನು ರಾಜ್ಯದೊಳಗೆ ಸೇರಿಸಿಕೊಂಡರು. ಈ ಹೊಸ ರಾಜ್ಯವನ್ನು ’ಆಗ್ರಾ ಹಾಗೂ ಔದ್ಧಿನ ಉತ್ತರ ಪಶ್ಚಿಮ ಪ್ರಾಂತ್ಯಗಳು’ ಎಂದು ಕರೆಯಲಾಯಿತು, ಇದನ್ನೇ 1902ರಲ್ಲಿ ಅಗ್ರಾ ಹಾಗೂ ಔದ್ಧಿನ ಸಂಯುಕ್ತ ಪ್ರಾಂತಗಳು ಎಂದು ಹೊಸ ಹೆಸರಿಡಲಾಯಿತು. ಇದನ್ನು ಸಾಮಾನ್ಯವಾಗಿ ಸಂಯುಕ್ತ ಪ್ರಾಂತಗಳು ಅಥವಾ ಅದರ ಸಂಕ್ಷಿಪ್ತರೂಪ UP ಎಂದು ಉಲ್ಲೇಖಿಸಲಾಗುತಿತ್ತು. 1920ರಲ್ಲಿ ಈ ಪ್ರಾಂತದ ರಾಜಧಾನಿ ಅಲಹಾಬಾದ್‌‍ನಿಂದ ಲಖನೌಗೆ ಸ್ಥಳಾಂತರಿಸಲಾಯಿತು. ಉನ್ನತ ನ್ಯಾಯಲಯ ಅಲಹಾಬಾದ್‌‍ನಲ್ಲೇ ಮುಂದುವರೆಯಿತು ಆದರೆ ಒಂದು ನ್ಯಾಯಾಧೀಶರ ಪೀಠವನ್ನು ಲಖನೌನಲ್ಲಿ ಸ್ಥಾಪಿಸಲಯಿತು. ಅಲಹಾಬಾದ್‌ ಉತ್ತರ ಪ್ರದೇಶದ ಮುಖ್ಯ ಆಡಳಿತದ ತಳವೆಂದು ಇಂದಿಗೂ ಮುಂದುವರೆದಿದೆ ಹಾಗೂ ಹಲವು ಆಡಳಿತಾತ್ಮಕ ರಾಜಧಾನಿಗಳು ಕೂಡ ಇಲ್ಲಿವೆ. ಉತ್ತರ ಪ್ರದೇಶ ಭಾರತದ ರಾಜನೀತಿಯ ಕೇಂದ್ರ ಎಂದು ಮುಂದುವರೆಯಿತು ಮತ್ತು ವಿಶೇಷವಾಗಿ ಆಧುನಿಕ ಭಾರತದ ಇತಿಹಾಸದ ಭಾರತ ಸ್ವತಂತ್ರ ಚಳುವಳಿ ಹಾಗೂ ಪಾಕಿಸ್ತಾನ್‌ ಚಳುವಳಿಗಳ ಬಿಸಿಗೊಂಡ ಪಾತಿಗಳ ಕಾರಣ ಮುಖ್ಯವಾಗಿತ್ತು. ರಾಷ್ಟ್ರೀಯ ಘನತೆ ಹಾಗೂ ದೃಢಸಂಕಲ್ಪ ಉಳ್ಳಂತಹ ಜವಾಹರಲಾಲ್ ನೆಹರು ಅವರು UPನ ಚಳುವಳಿಯ ನಾಯಕರಾಗಿದ್ದರು. ಏಪ್ರಿಲ್ 11, 1936ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಯಿನ ಲಖನೌ ಸಮಾವೇಶದಲ್ಲಿ ಆಲ್ ಇಂಡೀಯಾ ಕಿಸಾನ್ ಸಭಾ (AIKS) ರೂಪಗೊಂಡಿತು. ಅತಿ ಪ್ರಸಿದ್ಧವಾದ ರಾಷ್ಟ್ರೀಯತಾವಾದಿ ಸ್ವಾಮಿ ಸಹಜಾನಂದ ಸರಸ್ವತಿ ಇದರ ಮೊದಲ ರಾಷ್ಟ್ರಪತಿಯಾಗಿ ಚನಾಯಿತರಾದರು. ಅವರು ಬಹು ಕಾಲದಿಂದ ಉಳಿದಿದ್ದ ರೈತ ಸಮುದಾಯದ ದೂರುಗಳ ಪ್ರತಿಉತ್ತರ ನೀಡಿದರು ಹಾಗೂ ರೈತರನ್ನು ಜಮೀನುದಾರ ಮಾಲೀಕರ ಸ್ವಾಧೀನತೆಯ ಹಕ್ಕುಗಳ ದಾಳಿ ವಿರುದ್ಧ ಸಜ್ಜುಗೊಳಿಸಿದರು. ಹೀಗೆ ಅವರು ರೈತರ ಚಳುವಳಿಯ ಕಿಡಿಯನ್ನು ಭಾರತದಲ್ಲಿ ಹೊತ್ತಿಸಿದರು. ಸ್ವಾತಂತ್ರ್ಯದ ನಂತರ ಸ್ವಾತಂತ್ರ್ಯದ ನಂತರ, ಈ ರಾಜ್ಯವನ್ನು ಉತ್ತರ ಪ್ರದೇಶ ("ಉತ್ತರ ಪ್ರಾಂತ") ಎಂದು ಇದರ ಮೊದಲ ಮುಖ್ಯಮಂತ್ರಿ ಗೋವಿಂದ್ ಬಲಭ್ ಪಂತ್‌ರಿಂದ ಮರು ಹೆಸರಿಸಲಾಯಿತು. ಪಂತ್‌ರವರು ಜವಾಹರಲಾಲ್ ನೆಹರುಯೊಂದಿಗೆ (ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನ ಮಂತ್ರಿ) ಚೆನ್ನಾಗಿ ಪರಿಚಿತರಿದ್ದರು ಹಾಗೂ ಹತ್ತಿರದವರಾಗಿದ್ದರು ಮತ್ತು ಕಾಂಗ್ರೆಸ್ ಪಾರ್ಟಿಯಲ್ಲಿ ಕೂಡ ಜನಪ್ರಿಯರಾಗಿದ್ದರು; ಇವರು ಲಖನೌನಲ್ಲಿ ಬಹಳ ಒಳ್ಳೆಯ ಹೆಸರು ಪಡೆದ ಕಾರಣ ನೆಹರುರವರು ಇವರನ್ನು ದೇಶದ ರಾಜಧಾನಿ ಹಾಗೂ ಕೇಂದ್ರ ಸರ್ಕಾರದ ಮುಖ್ಯಾಲಯ ಆದ ದೆಹಲಿಗೆ ಕರೆದು ಡಿಸೆಂಬರ್ 27, 1954ರಲ್ಲಿ ಗೃಹ ಮಂತ್ರಿಯಾಗಿ ನೇಮಿಸಿದರು. ಇವರ ನಂತರ ಡಾ. ಸಂಪೂರ್ಣಾನಂದರವರು 1957ರವರೆಗೆ ಮುಖ್ಯಮಂತ್ರಿಗಳಾಗಿದ್ದರು, ಇವರು ವಿಶ್ವವಿದ್ಯಾನಿಲಯದ ಅಧ್ಯಾಪಕರು ಹಾಗೂ ಸಂಸ್ಕೃತದ ಪರಿಣಿತ ವಿದ್ವಾಂಸರಾಗಿದ್ದರು. ಆನಂತರ ಇವರು ರಾಜಸ್ಥಾನಿನ ರಾಜ್ಯಪಾಲರಾದರು. ಸುಚೇತ ಕೃಪಲಾನಿಯವರು ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಕ್ಟೋಬರ್ 1963ಯಿಂದ ಮಾರ್ಚ್ 1967ರವರೆಗೆ ಸೇವೆ ಸಲ್ಲಿಸಿದರು, ರಾಷ್ಟ್ರದ ಕಾರ್ಮಿಕರ ಎರಡು ತಿಂಗಳುಗಳ ದೀರ್ಘ ಮುಷ್ಕರದ ಕಾರಣ ಅವರು ತಮ್ಮ ಸ್ಥಾನ ತ್ಯಾಗ ಮಾಡಬೇಕಾಯಿತು. ಅವರ ನಂತರ ಚಂದ್ರ ಭಾನು ಗುಪ್ತಾರವರು ಮುಖ್ಯಮಂತ್ರಿಗಳ ಕಾರ್ಯಾಲಯವನ್ನು ವಹಿಸಿಕೊಂಡರು, ಇವರೊಂದಿಗೆ ಲಕ್ಷ್ಮಿ ರಾಮಾನ್ ಆಚಾರ್ಯ ಹಣಕಾಸು ಮಂತ್ರಿಯಾಗಿದ್ದರು. ಆದರೆ ಅಸ್ತವ್ಯಸ್ತತೆ ಹಾಗೂ ಗೊಂದಲತೆಯಿಂದ ಈ ಸರ್ಕಾರ ಬರೀ ಎರಡು ವರ್ಷಗಳಲ್ಲೇ ಅಂತ್ಯವಾಯಿತು, ಪರಿಣಾಮವಾಗಿ ಚರಣ್ ಸಿಂಗ್‌ರವರು ಕಾಂಗ್ರೆಸ್‌ಯಿಂದ ಶಾಸಕರ ಒಂದು ಸಣ್ಣ ಗುಂಪಿನ ಜೊತೆಗೆ ಪಕ್ಷಾಂತರ ಹೋದರು; ಅವರು ಜನ ಕಾಂಗ್ರೆಸ್ ಎಂಬ ಒಂದು ಪಾರ್ಟಿ ನಿರ್ಮಿಸಿದರು, U.P.ಯಲ್ಲಿ ಇದು ಮೊದಲ ಕಾಂಗ್ರೆಸ್ ಅಲ್ಲದ ಸರ್ಕಾರವಾಗಿತ್ತು ಹಾಗೂ ಇದು ಒಂದು ವರ್ಷಗಿಂತ ಹೆಚ್ಚು ಸಮಯದವರೆಗೆ U.P.ಯನ್ನು ಆಳಿತು. 1970ರ ಕಾಲದ ಒಂದು ಭಾಗದಲ್ಲಿ ಹೇಮ್‌ವತಿ ನಂದನ್ ಬಹುಗುಣ ಕಾಂಗ್ರೆಸ್ ಪಾರ್ಟಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದರು. ಇವರನ್ನು ಇಂದಿರಾ ಗಾಂಧಿಯವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ಹಲವು ಇತರ ಕಾಂಗ್ರೆಸ್ ಅಲ್ಲದ ಮುಖ್ಯಮಂತ್ರಿಗಳ ಜೊತೆ ವಜಾಮಾಡಿತು, ಸ್ವಲ್ಪ ಸಮಯದಲ್ಲೇ ಅಪ್ರಿಯವಾದ ತುರ್ತು ಪರಿಸ್ಥಿತಿ ವಿಧಿಸಲಾದಾಗ ನಾರಾಯಣ್ ದತ್ತ್ ತಿವಾರಿ ಮುಖ್ಯಮಂತ್ರಿಯಾದರು. ಇವರು ಉತ್ತರಖಂಡದ ನಂತರದ ಮುಖ್ಯಮಂತ್ರಿ ಸಹಾ ಆದರು. 1977ರ ಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿ ದೊಡ್ಡ ಸೋಲನ್ನು ಎದುರಿಸಿತು, ಇದರ ಅನುಸರಣೆಯಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆಯಲಾಯಿತು. ಆದರೆ 1980ರಲ್ಲಿ ಕಾಂಗ್ರೆಸ್ ಪುನಃ ಹಿಂದಿರುಗಿತು ಹಾಗೂ ಇಂದಿರಾ ಗಾಂಧಿಯವರು V.P. ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಆರಿಸಿದರು. ನಂತರ ಇವರು ಇಂದಿರಾರವರ ಮಗನ ಪ್ರಮುಖ ಎದುರಾಳಿಯಾದರು. ನವೆಂಬರ್ 9, 2000ರಲ್ಲಿ ಘರವಾಲ್ ಹಾಗೂ ಕುಮೌನ್ ವಿಭಾಗಗಳು ಮತ್ತು ಹರಿದ್ವಾರ್ ಜಿಲ್ಲೆಯನ್ನೊಳಗೊಂಡು, ರಾಜ್ಯದಲ್ಲಿನ ಹಿಮಾಲಯದ ಭಾಗವನ್ನು ಒಂದು ಹೊಸ ರಾಜ್ಯವಾಗಿ ಸೃಷ್ಟಿಸಲಾಯಿತು. ಈಗ ಈ ರಾಜ್ಯವನ್ನು ಉತ್ತರಾಖಂಡ್ (ಉತ್ತರಾಖಂಡ)ಎನ್ನುತ್ತಾರೆ, ಇದರ ಅರ್ಥ ’ಉತ್ತರ ಖಂಡ’ದ ರಾಜ್ಯ. ಪ್ರಾದೇಶಿಕತೆ ಉತ್ತರ ಪ್ರದೇಶ ನೇಪಾಳದೊಂದಿಗೆ ಅಂತರಾಷ್ಟ್ರೀಯ ಗಡಿ ಹಂಚಿಕೊಂಡಿದೆ ಹಾಗೂ ಭಾರತದ ರಾಜ್ಯಗಳಾದ ಉತ್ತರಾಖಂಡ್, ಹಿಮಾಚಲ್ ಪ್ರದೇಶ, ಹರಿಯಾಣಾ, ದೆಹಲಿ, ರಾಜಸ್ಥಾನ, ಮಧ್ಯ ಪ್ರದೇಶ, ಛತ್ತಿಸ್‌ಗಡ್, ಝಾರ್‌ಖಂಡ್ ಹಾಗೂ ಬಿಹಾರ ಅಂತಹ ರಾಜ್ಯಗಳಿಂದ ಆವೃತವಾಗಿದೆ. ಈ ರಾಜ್ಯವನ್ನು ಎರಡು ಬೇರೆ ಬೇರೆ ನಿಮ್ನೋನ್ನತಿ ಪ್ರದೇಶಗಳಾಗಿ ವಿಭಜಿಸಬಹುದು:- ದೊಡ್ಡದಾದ ಗಂಗಾ ಬಯಲು ಪ್ರದೇಶ ಉತ್ತರದಲ್ಲಿದೆ: ಗಂಗ-ಯಮುನಾ ಒಟ್ಟುಗೂಡುವ ನಡುವಣ ಪ್ರದೇಶ, ಗಂಗಾ ನದಿಯ ಬಯಲುಗಳು ಹಾಗೂ ಟೆರೈ ಇದರಲ್ಲಿ ಸೇರಿಕೊಂಡಿವೆ. ಇಲ್ಲಿ ಹಲವು ಕೊಳಗಳು, ಸರೋವರಗಳು ಹಾಗೂ ನದಿಗಳಿಂದ ಕೂಡಿದ ಹೆಚ್ಚು ಫಲವತ್ತಾದ ಮೆಕ್ಕಲು ಮಣ್ಣು ಹಾಗೂ ಸಮತಲ ಲಕ್ಷಣದ ಪ್ರದೇಶವಿದೆ - (ಇಳಿಜಾರು 2 m/km). ಚಿಕ್ಕದಾದ ವಿಂಧ್ಯಾ ಗುಡ್ಡಗಳು ಹಾಗೂ ಏರುಪೇರಿಲ್ಲದ ಸಮಸ್ಥಿತಿಯ ಪ್ರದೇಶ ದಕ್ಷಿಣದಲ್ಲಿದೆ: ಇದು ಗಟ್ಟಿ ಬಂಡೆಗಳ ಸ್ತರ ಮತ್ತು ಗುಡ್ಡಗಳು, ಬಯಲುಗಳು, ಕಣಿವೆಗಳು ಹಾಗೂ ಏರುಪೇರಿಲ್ಲದ ಸಮಸ್ಥಿತಿಯ ಹಲವು ಪ್ರದೇಶಗಳ-ವಿವರಣೆಗಳಿಂದ ಕೂಡಿದೆ; ನಿಯಂತ್ರಿತ ನೀರಿನ ಲಭ್ಯತೆಯು ಈ ಪ್ರದೇಶವನ್ನು ತುಲನಾತ್ಮಕವಾಗಿ ಬಂಜರಾಗಿಸಿದೆ. ಸಸ್ಯ ಮತ್ತು ಜೀವ ವೈವಿದ್ಯ ಈಗ ಉತ್ತರ ಪ್ರದೇಶದಲ್ಲಿ 12.8% ರಷ್ಟು ಭೂಭಾಗವನ್ನು ಕಾಡುಗಳು ಆವರಿಸಿದೆ. ಬೆಚ್ಚುಬೀಳುವಷ್ಟು ಅರಣ್ಯನಾಶ ಹಾಗೂ ವನ್ಯ ಜೀವಿಗಳ ಅನುಮತಿಯಿಲ್ಲದೆ ಬೇಟೆಯಾಗಿದ್ದರೂ ಕೂಡ ಇಲ್ಲಿ ಸಸ್ಯ ಮತ್ತು ಜೀವಿಗಳ ವೈವಿಧ್ಯಮಯತೆ ಇದೆ. ಹಲವು ತಳಿಯ ಮರಗಳು, ಸ್ತನಿವರ್ಗದ ಪ್ರಾಣಿಗಳು, ಉರಗ ವರ್ಗದ ಪ್ರಾಣಿಗಳು ಹಾಗೂ ಹುಳುಗಳನ್ನು ಸಮಶೀತೋಷ್ಣದ ಮೇಲಿನ ಗುಡ್ಡಗಾಡು ವನಗಳ ಪಟ್ಟಿಯಲ್ಲಿ ಕಾಣಬಹುದು; ಔಷಧೀಯ ಗಿಡಗಳು ಕೂಡ ಈ ಕಾಡುಗಳಲ್ಲಿ ಲಭ್ಯವಿರುತ್ತದೆ ಅಥವಾ ಇತ್ತೀಚೆಗೆ ತೋಟಗಳಲ್ಲಿ ಬೆಳೆಸಲಾಗುತ್ತಿದೆ. ಟೆರೈ-ಡ್ವರ್ ಸವನ್ನಾ ಹಾಗೂ ಹುಲ್ಲು ಪ್ರದೇಶ ಜಾನುವಾರುಗಳಿಗೆ ಬೆಂಬಲಿಸುತ್ತದೆ. ತೇವವಾಗಿರುವ ಉದುರೆಲೆ ಅರಣ್ಯದ ಮರಗಳು ಮೇಲಿನ ಗಂಗೆಯ ಬಯಲುಗಳಲ್ಲಿ ಹಾಗೂ ನದಿಯ ದಡಗಳಲ್ಲಿ ಕೂಡ ಬೆಳೆಯುತ್ತವೆ. ವಾಸ್ತವದಲ್ಲಿ ಈ ವಿಶಾಲ ಬಯಲು ಎಷ್ಟು ಫಲವತ್ತು ಹಾಗೂ ಜೀವ ಬೆಂಲಿಕವಿದೆ ಎಂದರೆ ಏನಾದರೂ, ಎಲ್ಲಾದರೂ ಜೀವಿಸಬಲ್ಲದು ಅಥವಾ ಬೆಳೆಯಬಲ್ಲದೊ ಅದು ಇಲ್ಲಿ ಆಗುತ್ತದೆ. ಗಂಗಾ ಮತ್ತು ಅದರ ಉಪನದಿಗಳು ಹಲವು ಬಗೆಯ ದೊಡ್ಡ ಹಾಗೂ ಚಿಕ್ಕ ಉರಗ ವರ್ಗದ ಪ್ರಾಣಿಗಳ, ನೆಲಜಲ ವಾಸಿಗಳ, ತಾಜಾ-ನೀರಿನ ಮೀನು ಹಾಗೂ ಏಡಿಗಳ ನೆಲೆಯಾಗಿದೆ. ಹೆಚ್ಚಾಗಿ ಮೋಟು ಗಿಡಗಳು, ಬಬೂಲ್ ಅಂತಹ ಮರಗಳು ಹಾಗೂ ಚಿಂಕಾರ ಅಂತಹ ಪ್ರಾಣಿಗಳು ಬಂಜರು ವಿಂಧ್ಯಾಗಳಲ್ಲಿ ಕಂಡು ಬರುತ್ತವೆ. ರಾಜ್ಯದ ಮುಖ್ಯವಾದ ಗಿಡಗಳು ಹಾಗೂ ಪ್ರಾಣಿಗಳು ಈ ರೀತಿ ಇವೆ:- ಮರಗಳು: ಪೀತದಾರು ಮರ, ದೊಡ್ಡ ಹೂವು ಬಿಡುವ ನಿತ್ಯ ಹಸುರಿನ ಗುಲ್ಮ, ಫರ್ ಮರ, ದೇವದಾರು ಮರ, ಸಾಲ್ ಮರ, ಓಕ್‌ಮರ, ತೇಗದ ಮರ, ಶೀಶೆಮ್ ಮರ, ಮಾವಿನ ಮರ, ಬೇವಿನ ಮರ, ಆಲದ ಮರ, ಅಶ್ವತ್ಥ ಮರ, ಹುಣಸೇ ಮರ, ನೇರಳೆ ಮರ, ಮಹುವ ಮರ, ಸಿಮಲ್ ಮರ, ಗುಲಾರ್ ಮರ ಹಾಗೂ ಢಕ್ ಮರ. ಔಷಧೀಯ ಗಿಡಗಳು : ಹಿಂಗನ್, ಢಕ್, ರಾವೊಲ್ಫಿಯಾ, ಸೆಪೆಂಟಿನ, ಹೆಕ್ಸಾಂಡ್ರಮ್, ವೈಯಾಲ ಸರಪೆನ್ಸ್, ಪೊಡೊಫೈಲಮ್, ಇಪೆಕ್ರಾ ಗೆರಾರ್‌ಡೈಯಾನ. ದೊಡ್ಡ ಬೆನ್ನುಮೂಳೆಯುಳ್ಳ ಜೀವಿಗಳು : ಆನೆ, ಹುಲಿ, ಕರಡಿ, ನೀಲಿ ಜಿಂಕೆ, ಕಾಡು ಹಂದಿ, ಜಿಂಕೆ, ತೋಳ, ಜಂಬುಕ, ನರಿ, ಲಾಂಗೊರ್. ಪಕ್ಷಿಗಳು : ನವಿಲು, ಮುಳ್ಳುಹಂದಿ, ಬೂದು ಬಣ್ಣದ ಲಾವಕ್ಕಿ, ಪಾರಿವಾಳ, ಸ್ವಾಲೋ ಎಂಬ ವಲಸೆ ಹೋಗುವ ಒಂದು ಪುಟ್ಟ ಹಕ್ಕಿ, ಮೈನಾ, ಭಾರತದ ಉದ್ದ ತೋಕೆಯ ಸಣ್ಣ ಗಿಳಿ, ಕಾಗೆ ಹಾಗೂ ಬಾತುಕೋಳಿ. ಉರಗ ವರ್ಗದ ಪ್ರಾಣಿ : ಮೊಸಳೆ, ಘರಿಯಾಲ್, ಗೊಹ್, ಹಾವುಗಳು, ಓತಿಕೇತ ಹಾಗೂ ಇತರ ಹಲ್ಲಿಗಳು. ಮೀನುಗಳು : ರೋಹು, ಕಾಟ್ಲಾ, ಖುಸಾ, ಪರಹಾನ್, ಪತ್ರಾ, ಮೊಯಿ, ಕೊರೌಚ್ ಹಾಗೂ ಸಿಂಘಿ. ಹಿಂದು ಪುರಾಣ ಕಥೆ ಅನುಸಾರ, ಪ್ರಭು ರಾಮನ ಯೋಧ ಭಕ್ತ ಹಾನುಮಾನ ಜೀವ ಕಾಪಾಡುವ ಸಂಜೀವಿನಿ ವನಸ್ಪತಿಗಳನು ಇದೇ ಪ್ರದೇಶ ಅಥಾವಾ ತುಂಡಾದ ಉತ್ತರಾಖಂಡದ ಪ್ರದೇಶದ ಗುಡ್ಡಗಳಿಂದ ತಂದಿದ್ದನು. ಹವಾಗುಣ ಉತ್ತರ ಪ್ರದೇಶದ ಹವಾಗುಣ ಮುಖ್ಯವಾಗಿ ಉಷ್ಣವಲಯದ ಕೆಳಗಿನದಾಗಿದೆ, ಆದರೆ ವಾತವರಣ ಸ್ಥಳದ ಹಾಗೂ ಋತುಗಳ ಅನುಗುಣವಾಗಿ ಗಮನಾರ್ಹವಾಗಿ ಬದಲಾಗುತ್ತವೆ:- ಉಷ್ಣಾಂಶ : ಔನತ್ಯದ ಮೇಲೆ ಅವಲಂಬಿಸಿ, ಉಷ್ಣಾಂಶ ಸಾಧಾರಣವಾಗಿ ಜನವರಿಯಲ್ಲಿ ರಿಂದ ಮೇ ಹಾಗೂ ಜೂನ್ ನಲ್ಲಿ ರವೆರೆಗೂ ಮಾರ್ಪಡಾಗುತ್ತದೆ. ಅತಿ ಹೆಚ್ಚು ಉಷ್ಣಾಂಶ ರಾಜ್ಯದ ಗೋಂಡಾದಲ್ಲಿ ಮೇ 8, 1958ರಲ್ಲಿ ದಾಖಲಿಸಲಾಯಿತು. ಮಳೆಯ ಸುರಿತ : ರಾಜ್ಯದಲ್ಲಿ ಮಳೆಯ ಸುರಿತದ ಪರಿಮಿತಿ ಪೂರ್ವದಲ್ಲಿ ಹಾಗೂ ಪಶ್ಚಿಮದಲ್ಲಿ . ಶೇಖಡ 90ರಷ್ಟು ಮಳೆ ದಕ್ಷಿಣಪಶ್ಚಿಮ ಮಳೆಗಾಲದಲ್ಲೇ ಆಗುತ್ತದೆ, ಇದು ಜೂನ್‌ನಿಂದ ಸೆಪ್ಟೆಂಬರ್‌ರವರೆಗೆ ಇರುತ್ತದೆ. ಬಹಳಷ್ಟು ಮಳೆಸುರಿತ ಈ ನಾಲ್ಕು-ತಿಂಗಳ ಕಾಲ ಕೇಂದ್ರೀಕರಿಸಿದ ಕಾರಣ, ಪ್ರವಾಹಗಳು ಒಂದು ಪುನರಾವರ್ತ ಸಮಸ್ಯೆಯಾಗಿದೆ ಮತ್ತು ಧಾನ್ಯಗಳ, ಜೀವ ಹಾಗೂ ಆಸ್ತಿಯ ಹೆಚ್ಚು ನಷ್ಟಕ್ಕೆ ಕಾರಣವಾಗಿದೆ. ಇವೆಲ್ಲಾ ವಿಶೇಷವಾಗಿ ಹೆಚ್ಚಾಗಿ ಹಿಮಾಲಯ-ಮೂಲದ ನದಿಗಳ ಅತಿ ಕಡಿಮೆ ಉತ್ತರ-ದಕ್ಷಿಣ ಇಳಿಜಾರಿನ ಪ್ರಮಾಣ ಇರುವ ರಾಜ್ಯದ ಪೂರ್ವ ಭಾಗದಲ್ಲಿ ಕಾಣಬಹುದು. ಹಿಮಪಾತ : ರಾಜ್ಯದ ಹಿಮಾಲಯ ಪ್ರದೇಶದಲ್ಲಿ , ಪ್ರತಿ ವರ್ಷ ಹಿಮಪಾತ ಸಾಧಾರಣವಾಗಿ 3 ರಿಂದ 5 ಮೀಟರ್‌ಗಳು (10 ರಿಂದ 15 ಅಡಿಗಳಷ್ಟು) ಡಿಸೆಂಬರ್ ಹಾಗೂ ಮಾರ್ಚಿನ ಮಧ್ಯದಲ್ಲಿ ಆಗುವುದು ಸಾಮಾನ್ಯ. ಬರಗಳು : ಕಾಲ ಕಾಲಕ್ಕೆ ಮಳೆಗಾಲದ ವೈಫಲ್ಯ, ಬರ ಪರಿಸ್ಥಿತಿ ಹಾಗೂ ಬೆಳೆ ವೈಫಲ್ಯದ ಕಾರಣವಾಗುತ್ತವೆ. ಚುನಾವಣಾ ಕ್ಷೇತ್ರಗಳು ಈ ರಾಜ್ಯವು ಹಲವು ಬೇರೆ ಬೇರೆ ಪ್ರದೇಶಗಳನ್ನೊಳಗೊಂಡಿದೆ:- ಡೊಬ್ ಪ್ರದೇಶ UP ರಾಜ್ಯದ ಪಶ್ಚಿಮ ಗಡಿಯ ಉದ್ದ ಉತ್ತರದಿಂದ ದಕ್ಷಿಣದವರೆಗೆ ವಿಸ್ತರಿಸಿದೆ, ಈ ಪ್ರದೇಶ ಇನ್ನು ಮೂರು ಕ್ಷೇತ್ರಗಳಲ್ಲಿ ವಿಭಜಿಸಲಾಗಿದೆ: ಮೇಲಿನ ಡೊಬ್ ಉತ್ತರ-ಪಶ್ಚಿಮದಲ್ಲಿ, ಮದ್ಯ ಡೊಬ್ ಪಶ್ಚಿಮದಲ್ಲಿ, ಯಮುನದ ಆಚೆಯ ಪ್ರದೇಶದ ಬ್ರಜ್-ಭೂಮಿಯನ್ನು ಸೇರಿಸಿ, ಕೆಳಗಿನ ಡೊಬ್ ಮಧ್ಯ-ದಕ್ಷಿಣದಲ್ಲಿ, ಉತ್ತರದಲ್ಲಿ ರೊಹಿಲ್‌ಖಂಡ್ ಪ್ರದೇಶ; ಅವಧ (ಅಥವಾ ಔದ್ಧ), ಕೊಸಲರ ಐತಿಹಾಸಿಕ ದೇಶ ಮಧ್ಯದಲ್ಲಿ; ದಕ್ಷಿಣದಲ್ಲಿ ಬುಂದೆಲ್‌ಖಂಡಿನ ಉತ್ತರ ಭಾಗಗಳು; ದಕ್ಷಿಣ-ಪೂರ್ವದಲ್ಲಿ ಬಾಗೇಲ್‌ಖಂಡಿನ ಉತ್ತರ ಭಾಗಗಳು; ಮತ್ತು ಪೂರ್ವದಲ್ಲಿ ಭೊಜಪುರ್ ದೇಶದ ದಕ್ಷಿಣಪಶ್ಚಿಮ ಭಾಗ, ಸಾಮಾನ್ಯವಾಗಿ ಪೂರ್ವಾಂಚಲ್ ಎಂದು ಕರೆಯಲಾದ ("ಪೂರ್ವದ ಪ್ರಾಂತ") ಆಡಳಿತದ ವಿಭಜನೆಗಳು ಹಾಗೂ ಜಿಲ್ಲೆಗಳು (2007ರ ಪ್ರಕಾರ) ಉತ್ತರ ಪ್ರದೇಶ ರಾಜ್ಯ ಎಪ್ಪತ್ತು ಜಿಲ್ಲೆಗಳನ್ನು ಒಳಗೊಂಡಿದೆ, ಇವುಗಳ ಹದಿನೆಂಟು ವಿಭಜನೆಗಳ ಗುಂಪು ಕಟ್ಟಲಾಗಿದೆ:- ಆಗ್ರಾ ವಿಭಜನೆ, ಅಲಿಘರ್ ವಿಭಜನೆ, ಅಲಹಾಬಾದ್‌ ವಿಭಜನೆ, ಆಜಂಘರ್ ವಿಭಜನೆ, ಬರೇಲಿ ವಿಭಜನೆ, ಬಸ್ತಿ ವಿಭಜನೆ, ಚಿತ್ರಕೂಟ್ ವಿಭಜನೆ, ದೇವಿಪಟನ್ ವಿಭಜನೆ, ಫೈಜಾಬಾದ್ ವಿಭಜನೆ, ಗೊರಖ್‌ಪುರ್ ವಿಭಜನೆ, ಝಾಂಸಿ ವಿಭಜನೆ, ಕಾನಪುರ್ ವಿಭಜನೆ, ಲಖನೌ ವಿಭಜನೆ, ಮೀರಟ್ ವಿಭಜನೆ, ಮಿರ್ಜಾಪುರ್ ವಿಭಜನೆ, ಮೊರಾದಬಾದ ವಿಭಜನೆ, ಸಹರಾನಪುರ್ ವಿಭಜನೆ ಮತ್ತು ವಾರಾಣಾಸಿ ವಿಭಜನೆ. ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ ಲಖಿಮ್‌ಪುರ್ ಖೇರಿ. ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ಜಿಲ್ಲೆ ಅಲಹಾಬಾದ್‌, ನಂತರ ಕಾನಪುರ್ (2007ರ ಜನಗಣನೆ). ಜನಸಂಖ್ಯಾ ವಿಚಾರ ಉತ್ತರ ಪ್ರದೇಶ ಭಾರತದಲ್ಲೇ ಅತಿ ಹೆಚ್ಚು ಜನಸಂಖ್ಯೆ ಉಳ್ಳ ರಾಜ್ಯ, ಇದರ ಜನಸಂಖ್ಯ ಜುಲೈ 1, 2008ರಲ್ಲಿ 190 ಮಿಲಿಯನ್‌ಗಿಂತ ಹೆಚ್ಚಾಗಿತ್ತು. ಇದು ಒಂದು ಪ್ರತ್ಯೇಕ ದೇಶವಾಗಿದ್ದರೆ, ಉತ್ತರ ಪ್ರದೇಶ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಇರುವ ಐದನೆಯ ದೇಶವಾಗುತಿತ್ತು, ಕ್ರಮೇಣವಾಗಿ ಚೈನಾ, ಭಾರತ, ಸಂಯುಕ್ತ ರಾಷ್ಟ್ರಾದ ಅಮೇರಿಕಾ ಹಾಗೂ ಇಂಡೋನೇಷಿಯಾದ ನಂತರ. ಭಾರತದ 2001ರ ಜನಗಣನೆಯ ಪ್ರಕಾರ, ಸ್ವಲ್ಪ ಮಟ್ಟಕ್ಕೆ ಉತ್ತರ ಪ್ರದೇಶದ ಶೇಖಡ 80%ಗಿಂತ ಹೆಚ್ಚು ಜನಸಂಖ್ಯೆ ಹಿಂದುಗಳದಾಗಿದ್ದು, 18%ರಷ್ಟು ಜನಸಂಖ್ಯೆಯವರು ಮುಸ್ಲಿಮರಾಗಿದ್ದಾರೆ. ಉಳಿದ ಜನಸಂಖ್ಯೆಯವರು ಸಿಖ್‌ಗಳು, ಬೌದ್ಧ ಧರ್ಮದವರು, ಕ್ರಿಶ್ಚಿಯನರು ಹಾಗೂ ಜೈನರು. ಸಾಮಾಜಿಕ ಸ್ವರೂಪ ಉತ್ತರ ಪ್ರದೇಶದ ಜನಸಂಖ್ಯೆಯನ್ನು ಹಲವು ಜಾತಿಗಳು ಹಾಗೂ ಉಪ-ಜಾತಿಗಳಲ್ಲಿ ವಿಭಜಿಸಲಾಗಿದೆ. ಐತಿಹಾಸಿಕವಾಗಿ, ಹಿಂದು ಸಮಾಜ ನಾಲ್ಕು ಉಪ-ವಿಭಾಗಗಳಲ್ಲಿ ಅಥವಾ ವರ್ಣಗಳಲ್ಲಿ ವಿಭಜಿಸಲಾಗಿದೆ, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಹಾಗೂ ಶೂದ್ರರು, ಇನ್ನು ಐದನೆಯ ಗುಂಪು ಜಾತಿಯ ಹೊರಗೆ ಎಂದು ಪರಿಗಣಿಸಲಾದ ದಲಿತರದು. ವಾಸ್ತವದಲ್ಲಿ, ಉತ್ತರ ಪ್ರದೇಶದ ಸಮಾಜ ಜಾತಿಗಳು ಎಂದು ಉಲ್ಲೇಖಿಸಿದ ಹಲವು ಚಿಕ್ಕ ಗುಂಪುಗಳಲ್ಲಿ ವಿಭಜಿಸಲಾಗಿದೆ. ರಾಜ್ಯದ ಪ್ರಮುಖ ಬ್ರಾಹ್ಮಣ ಜಾತಿಗಳಲ್ಲಿ ಭಾರ್ಗವ, ಭಟ್, ಭೂಮಿಹರ್, ಗಂಗಪುತ್ರ, ಗೌರ್, ಜೋಷಿ, ಕನ್ಯಕುಬ್ಜಾ, ಮೈಥಿಲ್, ನಗರ ಸೇರಿವೆ. ಸಕಲ್‌ದ್ವಿಪಿಯ, ಸಂಧ್ಯಾ, ಸರ್ಯುಪರೀನ್, ಶ್ರೀಮಲಿ ಹಾಗೂ ತ್ಯಾಗಿ. ಹಾಗೆಯೇ, ಕ್ಷತ್ರಿಯ ವರ್ಣದಲ್ಲಿ ಹಲವು ಗುಂಪುಗಳು ಸೇರಿವೆ, ಇದರಲ್ಲಿ ರಜಪೂತ್ ಪ್ರಮುಖವಾದದ್ದು. ವೈಶ್ಯದ ಪ್ರಮುಖ ಜಾತಿಗಳು ಸಾಂಪ್ರದಾಯಿಕವಾಗಿ ವ್ಯಾಪಾರದಲ್ಲಿ ತೊಡಗಿರುತ್ತಾರೆ, ಅವುಗಳಲ್ಲಿ ಅಗ್ರಹಾರಿ, ಅಗ್ರವಾಲ್, ಬಾರ್ನವಾಲ್, ಘಾಟೆ ಬನಿಯ, ಹಲ್ವಾಯಿ, ಜೈಸ್ವಾಲ್, ಕಲ್ವಾರ್, ಕೇಸರ್ವಾನಿ, ಮಹೇಶ್ವರಿ, ಮಾಥುರ್, ಒಮಾರ್, ಓಸ್ವಾಲ್, ಪರ್ವಾರ್, ಪಟ್ವಾ, ರಸ್ತೋಗಿ, ಸಧ್ ಹಾಗೂ ತೇಲಿ ಸೇರಿವೆ. ಇವೆಲ್ಲಾ ಜಾತಿಗಳ ಜೊತೆ ಸಾಂಪ್ರದಾಯಿಕವಾಗಿ ಗುಮಾಸ್ತ ವೃತ್ತಿಯಲ್ಲಿ ತೊಡಗಿದ ಕಯಸ್ತಾ ಜಾತಿ ಕೂಡ ರಾಜ್ಯದ ಜನಸಂಖ್ಯೆಯಲ್ಲಿ ಒಂದು ಮುಖ್ಯ ಭಾಗವಾಗಿದೆ. ವೈಶ್ಯ ಜಾತಿಗಳು ಸಾಂಪ್ರದಾಯಿಕವಾಗಿ ಬೇಸಾಯದಲ್ಲಿ ತೊಡಗಿರುತ್ತಾರೆ, ಅವುಗಳಲ್ಲಿ ಅಹಿರ್, ಗಡೇರಿಯಾ, ಗೌರ್ವಾ, ಗುಜ್ಜರ್, ಜಟ್, ಕಚ್ಚಿ, ಕಂಬೊಜ್, ಕೊಯಿರಿ, ಕುರ್ಮಿ, ಮುರಾವ್, ಮಾಲಿ, ರಾವೆ ಹಾಗೂ ರೊರ್ ಸೇರಿವೆ. ಪ್ರಮುಖ ಶೂದ್ರ ಜಾತಿಗಳಲ್ಲಿ ಬರಹೈ, ಬರ್ವಾರ್, ಬೆಲ್ದಾರ್, ಧಾಗಿ, ಧೋಬಿ, ದುಸಧ್, ಜೋಗಿ, ಕಹರ್, ಕೇವಟ್, ನಾಯಿ ಹಾಗೂ ಥಾಥೇರಾ. ಉತ್ತರ ಪ್ರದೇಶದ ಹೊರವಲಯದ ಕ್ಷೇತ್ರಗಳು, ಹಲವು ಆದಿವಾಸಿ ಸಮುದಾಯಗಳಿಗೆ ಮನೆಯಾಗಿದೆ, ಅವುಗಳಲ್ಲಿ ಅಗಾರಿಯ, ಬೈಗಾ, ಭಾರ್, ಭೊಕ್ಸಾ, ಬಿಂದ್, ಚೇರೊ, ಗೊಂಡ್, ಕೋಲ್ ಹಾಗೂ ಕೊರ್ವಾ ಸೇರಿವೆ. ಇವುಗಳಲ್ಲಿ ಐದು ಆದಿವಾಸಿ ಸಮುದಾಯಗಳು ಭಾರತ ಸರ್ಕಾರದಿಂದ ಅನುಕೂಲವಿಲ್ಲದ ಹಿಂದುಳಿದ ಪಂಗಡಗಳು ಎಂದು ಗುರುತಿಸಲ್ಪಟ್ಟಿವೆ, ಎಂದರೆ ಥಾರುಗಳು, ಭೊಕ್ಸಾಗಳು, ಭೊಟಿಯಾಗಳು, ಜೌನಸ್ವರಿಗಳು ಹಾಗೂ ರಾಜಿಗಳು. ಉತ್ತರ ಪ್ರದೇಶದ ಮುಸ್ಲಿಮ್ ಸಮುದಾಯದಲ್ಲಿ ಸಗೋತ್ರವಿವಾಹ ಗುಂಪುಗಳು ಬಿರಾದರಿಗಳೆಂಬ ಉಲ್ಲೇಖನವಿದೆ. ಸಂಪ್ರಾದಾಯಕವಾಗಿ ಸಯ್ಯದ, ಸಿದ್ಧಿಕಿ, ಶೆಖ್, ಶೆಖ್‌ಜಾದಾ, ಮುಘಲ್ ಹಾಗೂ ಪಠಾಣ್, ಈ ಐದು ಸಮುದಾಯಗಳು ಇತರ ಪರದೇಶಗಳಿಂದ ಭಾರತಕ್ಕೆ ಸ್ಥಾಯಿಯಾದ ಗುಂಪುಗಳಲ್ಲಿ ಸಭ್ಯ ಎಂದು ತೋರುತ್ತದೆ. ಈ ಗುಂಪುಗಳ ಜೊತೆ ಹತ್ತಿರದ ಸಂಬಂಧ ಇರುವ ಸಮುದಾಯಗಳು ಸಭ್ಯ ಎಂದು ತೋರುವವರು ರಜಪೂತ ಸಮುದಾಯದಿಂದ, ಡೋಗರ್, ಗರ್ಹಾ, ಗುಜ್ಜರ್, ಜೊಜಾ, ಖಾನ್‌ಜಾದಾ, ಮ್ಮಲ್‌ಕಾನಾ, ಮೆವಾಟಿ, ರಾನ್‌ಘರ್ ಹಾಗೂ ಮುಸ್ಲಿಮ್ ತಿಯಾಗಿಗಳು. ಇತರ ಪ್ರಮುಖ ಮುಸ್ಲಿಮ್ ಬಿರಾದರಿಗಳು ಅನ್ಸಾರಿ, ಬಂಜಾರ, ಬಿಸಾಟಿ, ಧೋಬಿ ಗಡ್ಡಿ, ಘೋಸಿ, ಹಜ್ಜಾಮ್, ಮನಿಹಾರ್, ಮುಸ್ಲಿಮ್ ಕಯಸ್ಥಾಗಳು, ಸೈಫಿ ಹಾಗೂ ತೆಲಿ. ರಾಜಕೀಯ ಉತ್ತರಪ್ರದೇಶ ವಿಧಾನಸಭೆ ರಾಜ್ಯದ ಸಂಸತ್ತು (ವಿಧಾನ ಸಭಾ) 403 ಚುನಾವಣಾ ಘಟಕಗಳನ್ನು ಹೊಂದಿದೆ. ಉತ್ತರ ಪ್ರದೇಶದ 2007ರ ಚುನಾವಣೆಗಳಲ್ಲಿ ಮಾಯಾವತಿಯ ಬಹುಜನ್ ಸಮಾಜ ಪಾರ್ಟಿ ಅನಿರೀಕ್ಷಿತ ಬಹುಮತ ಸ್ಥಾನ ಪಡೆಯಿತು, ಇದು ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಕಾರಣವಾಯಿತು. 1991ರಲ್ಲಿ ಭಾರತೀಯ ಜನತಾ ಪಾರ್ಟಿ (BJP) ಬಹುಮತ ಪಡೆದ ನಂತರ ಇದೇ ಮೊದಲ ಬಾರಿಗೆ ಒಂದು ಪ್ರತ್ಯೇಕ ಪಾರ್ಟಿ ಸಂಪೂರ್ಣವಾದ ಬಹುಮತ ಪಡೆದದ್ದು; ಕಳೆದ ಎರಡು ದಶಕಗಳಲ್ಲಿ ಸಮಾಜವಾದಿ ಪಾರ್ಟಿ, ಭಾರತೀಯ ಜನತಾ ಪಾರ್ಟಿ ಹಾಗೂ ಬಹುಜನ್ ಸಮಾಜ ಪಾರ್ಟಿ ಇಂತಹ ಪಾರ್ಟಿಗಳ ನಡುವೆ ಹಲವು ಸಮ್ಮಿಶ್ರಣ ಸರ್ಕಾರಗಳ ಆಡಳಿತವೇ ಪ್ರಬಲವಾಗಿತ್ತು. BSPಯ 2007ರ ಜಯದ ಒಂದು ಕಾರಣ ಎಂದರೆ ಬ್ರಾಹ್ಮಣರ ವೋಟುಗಳ ಈ ದಲಿತ ಪ್ರಧಾನವಾಗಿರುವ ಪಾರ್ಟಿಯಲ್ಲಿ ಮಿಶ್ರಣ. ಮುಂಚಿನ ದಶಕಗಳಲ್ಲಿ ಮತದಾರರ ವಿಭಜನೆಯ ಪ್ರವೃತ್ತಿ ತುಂಬ ಆಳವಾಗಿ ಬೇರೂರಿತ್ತು, ದಲಿತರು, ಮೇಲಿನ ಜಾತಿಯವರು, ಮುಸ್ಲಿಮರು ಹಾಗೂ ಹಲವು OBC ಗುಂಪುಗಳ ನಡುವೆ ಈ ರಾಜ್ಯದಲ್ಲಿ ವೋಟುಗಳು ಪ್ರತಿಬಂಧಿತವಾಗಿದ್ದವು. ಮಾಯಾವತಿ, 206 ಸೀಟುಗಳಿಂದ ಜಯವಾಗಿ, UPಯ ಮುಂದಿನ CM ಆಗಿ 13 ಮೇ 2007ರಂದು ಗೌಪ್ಯತೆಯ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅವರು ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಅವರು 19 ಕ್ಯಾಬಿನೆಟ್ ದರ್ಜೆಯ ಮಂತ್ರಿಗಳ ಜೊತೆಗೆ, 21 ರಾಜ್ಯದ ಮಂತ್ರಿಗಳು ಕೂಡ ಸ್ವಂತಂತ್ರ ಹೊಣೆಗಾರಿಕೆಯನ್ನು ಪಡೆದು ರಾಜ್ಯಪಾಲ T.V. ರಾಜೇಶ್ವರ್‌ ರಿಂದ ವಚನಬದ್ಧತೆಯನ್ನು ಸ್ವೀಕರಿಸಿದರು. ಅವರ ಪ್ರಮುಖ ಕ್ಯಾಬಿನೆಟ್ ಸಹೋದ್ಯೋಗಿಗಳ ಹೆಸರು: ಅವಧಪಾಲ್ ಸಿಂಗ್, ಬಾಬು ಸಿಂಗ್ ಕುಷಾವಾಹ, ಬಾದ್‌ಶಾಹ ಸಿಂಗ್, ನಸೀಮುದ್ದೀನ್ ಸಿದ್ಧಿಕಿ, ರಾಕೇಶ್ ಧಾರ್ ತ್ರಿಪಾಠಿ, ರತನಲಾಲ್ ಅಹಿರ್ವಾರ್ ಹಾಗೂ ಸುಧೀರ್ ಗೋಯಲ್. ಮಾಜಿ ಮುಖ್ಯಮಂತ್ರಿ ಮುಲಾಯಮ್ ಸಿಂಗ್ ಯಾದವ್‌ರ ಸಮಾಜವಾದಿ ಪಾರ್ಟಿ ರಾಜ್ಯದಲ್ಲಿ 97 ಸೀಟುಗಳಿಂದ ಎರಡನೆಯ ಸ್ಥಾನ ಪಡೆಯಿತು. ವಿವಾದಗಳು ಇತ್ತೀಚಿನ ಸಮಯದಲ್ಲಿ ಆಪಾದನೆಯನ್ನು ಹೊತ್ತ ಜನರ ವ್ಯಾಪಕವಾದ ನುಸುಳಿಕೆಯಿಂದ ಉತ್ತರ ಪ್ರದೇಶದ ರಾಜಕೀಯ ಪ್ರತಿಬಿಂಬ ಹೆಸರು ಕೆಡಿಸಿಕೊಂಡಿದೆ. ಇಂತಹ ಜನರ ಯಶಸ್ಸು ಪ್ರಶ್ನಿಸುವಂತಹದಾಗಿರುತ್ತದೆ ಅಥವಾ ಇವರು ಹಿಂಸಾಚಾರ ಪ್ರವೃತ್ತಿಯನ್ನು ಹುರಿದುಂಬಿಸಿಕೊಂಡಿರುತ್ತಾರೆ. ಆದರೆ, ಕಳೆದ ಚುನಾವಣೆಯಲ್ಲಿ ಭಾರತದ ಚುನಾವಣಾ ಆಯೋಗ ಫಲಪ್ರದವಾಗಿ ತೃಪ್ತಿಕರವಾದ ಚುನಾವಣೆಯನ್ನು ನಿರ್ವಹಿಸಿದೆ ಎಂದು ಗ್ರಹಿಸಿಕೊಂಡಿತು - ಅತ್ಯಂತ ಶಿಸ್ತಿನ ಸುರಕ್ಷತೆಯನ್ನು ನಿಯೋಗಿಸುತ್ತಾ ಮತಗಟ್ಟೆ-ಆಕ್ರಮಣ, ನಕಲಿ ವೋಟುಗಳು ಹಾಗೂ ಇತರ ದುರುಪಯೋಗಗಳನ್ನು ತಡೆಯಿತು. ಆದರೂ, ಅಪರಾಧಿ-ರಾಜಕಾರಣಿಗಳು ಭಾಗವಹಿಸುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಇದಕ್ಕೆ ಮುಖ್ಯವಾದ ಕಾರಣ ಅವರ ಹಿಂದಿನ ಯಶಸ್ಸು. 2002ರ U.P. ಸಂಸತ್ತಿನ ಚುನಾವಣೆಯಲ್ಲಿ, ಅಪರಾಧಿ ದಾಖಲೆಗಳನ್ನುಳ್ಳ ಅಭ್ಯರ್ಥಿಗಳು ಸಂಸತ್ತಿನಲ್ಲಿ 403 ಸೀಟುಗಳಲ್ಲಿ 206 ಸೀಟುಗಳನ್ನು ಗೆದ್ದರು, ಇದರ ಅರ್ಥ ಒಳ್ಳೆಯ ಹೆಸರಿನ ರಾಜಕಾರಣಿಗಳಿಗಿಂತ ಹೆಚ್ಚು ಅಪರಾಧಿಗಳು ಚುನಾಯಿತರಾಗಿದ್ದರು. 2007ರ ಚುನಾವಣೆಗಳಲ್ಲಿ, ಅಪರಾಧಿಗಳ ಭಾಗವಹಿಸುವಿಕೆ ಗಮನಾರ್ಹವಾಗಿ ಹೆಚ್ಚಾಯಿತು. ರಾಜಕೀಯ ನಾಯಕತ್ವ ಈ ರಾಜ್ಯ ರಾಷ್ಟ್ರಕ್ಕೆ ನಾಯಕರನ್ನು ಒದಗಿಸುವ ದಾಖಲೆಯನ್ನು ಪಡೆದಿದೆ; ಭಾರತದ ಹದಿನಾಲ್ಕು ಪ್ರಧಾನ ಮಂತ್ರಿಗಳಲ್ಲಿ ಎಂಟು ಜನ ಉತ್ತರ ಪ್ರದೇಶದಿಂದ ಇದ್ದರು. ಅವರು: ಜವಾಹರಲಾಲ್ ನೆಹರು, ಲಾಲ್ ಬಹಾದುರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಚೌಧರಿ ಚರಣ ಸಿಂಗ್, ವಿಶ್ವನಾಥ ಪ್ರತಾಪ್ ಸಿಂಗ್, ಚಂದ್ರಶೇಖರ್ ಹಾಗೂ ಅಟಲ್ ಬಿಹಾರಿ ವಾಜ್‌ಪೇಯಿ. ಅಟಲ್ ಬಿಹಾರಿ ವಾಜ್‌ಪೇಯಿ ಅವರು ಗ್ವಾಲಿಯರನಲ್ಲಿ ಜನಿಸಿದ್ದರೂ ಕೂಡ UP ಚುನಾವಣಾ ಕ್ಷೇತ್ರವನ್ನು ಪ್ರತಿನಿಧಿಸಿದರು. ಸಮಕಾಲೀನ ರಾಜಕೀಯ ದೃಶ್ಯ ಕೂಡ ರಾಷ್ಟ್ರದ ಸನ್ನಿವೇಶದಲ್ಲಿ ಕುತೂಹಲಕಾರಿಯಾಗಿದೆ. ನೆಹರು-ಗಾಂಧಿ ಮೆನೆತನದ ಉತ್ತರಾಧಿಕಾರಿಗಳು U.P.ಯನ್ನು ತಮ್ಮ ತವರು ರಾಜ್ಯವೆಂದು ಒಪ್ಪಿ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಪ್ರಧಾನಿ ಸೋನಿಯಾ ಗಾಂಧಿ ರಾಯ ಬರೇಲಿಯನ್ನು ಪ್ರತಿನಿಧಿಸುತ್ತಾರೆ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಅಮೇಥಿ, ಸುಲ್ತಾನ್‌ಪುರ್ ವನ್ನು ಪ್ರತಿನಿಧಿಸುತ್ತಾರೆ. ಇಂದಿರಾ ಗಾಂಧಿಯವರೊಂದಿಗೆ ವೈಮನಸ್ಯ ಹೊಂದಿದ ಸೊಸೆ ಮೇನಕಾ ಗಾಂಧಿಯವರು BJP ಸಂಸತ್ತಿನ ಸದಸ್ಯೆ ಹಾಗೂ ಇವರ ಮಗ ವರುಣ ಗಾಂಧಿ ಕೂಡ BJP ರಾಜಕಾರಣಿಯಾಗಿ ಹಾಗೂ ಲೋಕಸಭೆಯ ಸದಸ್ಯರಾಗಿ ರಂಗಪ್ರವೇಶಿಸಿದ್ದಾರೆ. ಇತರ ಮುಖ್ಯ ರಾಜಕೀಯ ನಾಯಕರು BJP ನಾಯಕ ಹಾಗೂ ಮಾಜಿ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿಗಳಾದ ಡಾ. ಮುರಲಿ ಮನೋಹರ್ ಜೋಶಿ, SP ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಮುಲಾಯಮ್ ಸಿಂಗ್ ಯಾದವ್, BSP ಪ್ರಧಾನಿ ಹಾಗೂ ಈಗಿನ ನಾಲ್ಕನೇಯ ವೇಳೆಯ ಮುಖ್ಯ ಮಂತ್ರಿ ಮಾಯಾವತಿ, BJP ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಜನಾಥ ಸಿಂಗ್, ಮಾಜಿ BJP ಮುಖ್ಯ ಮಂತ್ರಿ ಕಲ್ಯಾಣ ಸಿಂಗ್, ರಾಷ್ಟ್ರೀಯ ಲೊಕದಳ ಮುಖ್ಯಸ್ಥ ಅಜೀತ ಸಿಂಗ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ನಂತರ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ನಾರಾಯಣ ದತ್ತ ತಿವಾರಿ, ಭಾರತೀಯ ಸರ್ಕಾರದ ಮಾಜಿ ಮಾಹಿತಿ ಹಾಗೂ ಪ್ರಸಾರಣ ಮಂತ್ರಿ ಮುಖ್ತಾರ ಅಬ್ಬಾಸ್ ನಖ್ವಿ, UP ಸರ್ಕಾರದ ಶಿಕ್ಷಣ ಮಂತ್ರಿ ಜಾಫರ ಅಲಿ ನಖ್ವಿ, ಮತ್ತಿತರರು. ರಾಜಕೀಯದ ಗೋಪುರಾಕೃತಿಯ ಕಟ್ಟಡದ ಅತ್ಯಂತ ಕೆಳಗಿನ ಶ್ರೇಣಿಯಲ್ಲಿ ಈ ರಾಜ್ಯ ಹಲವು ಗ್ರಾಮ ಮಂಡಳಿಗಳನ್ನು ಹೊಂದಿದೆ, ಇದನ್ನು ಪಂಚಾಯಿತಿಗಳೆಂದು ಉಲ್ಲೇಖಿಸುತ್ತಾರೆ. ಭಾರತದ ಇತರ ರಾಜ್ಯಗಳಲ್ಲೂ ಇದೇ ತರಹದ ವ್ಯವಸ್ಥೆ ಇದೆ. ಶಿಕ್ಷಣ ಉತ್ತರ ಪ್ರದೇಶದ ಕ್ಷೇತ್ರದಲ್ಲಿ ಕಲಿಯುವಿಕೆಯ ದೊಡ್ಡ ಸಂಪ್ರದಾಯವೇ ಇತ್ತು, ಆದರೂ ಇದು ಬರೀ ವಿಶಿಷ್ಟರ ಹಾಗೂ ಧಾರ್ಮಿಕ ಪ್ರತಿಷ್ಠಾನದವರಿಗೆ ಮಾತ್ರ ಸಿಮಿತವಾಗಿತ್ತು. ವೇದ ಕಾಲದಿಂದ ಗುಪ್ತ ಕಾಲದವರೆಗಿನ ಅಧ್ಯಯನ ಒಳಗೊಂಡಿದ ಸಂಸ್ಕೃತ ಆಧಾರಿತ ಶಿಕ್ಷಣ, ನಂತರದ ಪಾಲಿ ಜ್ಞಾನ ಗ್ರಂಥ ಸಂಗ್ರಹ ಹಾಗೂ ಪುರಾತನದಿಂದ ಮಧ್ಯಕಾಲದವರೆಗಿನ ಅಧ್ಯಯನ ಪರ್ಷಿಯನ್/ಅರೆಬಿಕ್ ಭಾಷೆಗಳಲ್ಲಿರುವ ಸಂಗ್ರಹ, ಇವೆಲ್ಲವೂ ಬ್ರಿಟೀಷರು ಆಡಳಿತಕ್ಕೆ ಬರುವ ಮುನ್ನ ಹಿಂದೂ-ಬೌದ್ಧ-ಮುಸ್ಲಿಮ್ ಶಿಕ್ಷಣದ ಮಹಾಸೌಧವಾಗಿತ್ತು. ಈಗಿನ ಶಾಲೆಯಿಂದ ವಿಶ್ವವಿದ್ಯಾಲಯದ ಪಶ್ಚಿಮ ಶಿಕ್ಷಣದ ಪದ್ಧತಿಯ ಆರಂಭ ಹಾಗೂ ಅಭಿವೃದ್ಧಿ ಇಲ್ಲಿಯೇ ಆಗಿದ್ದು, ದೇಶದ ಇತರ ಭಾಗಗಳಲ್ಲಿ ವಿದೇಶೀಯ ಕ್ರಿಸ್ತಧರ್ಮಪ್ರಚಾರಕರಿಂದ ಹಾಗೂ ಬ್ರಿಟಿಷ್ ವಲಸೆ ನಾಡಿನವರ ಆಡಳಿತದಿಂದ ಈ ಪದ್ಧತಿ ಅಳವಡಿಸಿಕೊಳ್ಳಲಾಯಿತು. ಅಲಿಗಡ್ ಮುಸ್ಲಿಮ್ ವಿಶ್ವವಿದ್ಯಾಲಯ ಒಂದು ವಾಸದ ಮನೆಗಳಿರುವ ಸೈದ್ಧಾಂತಿಕವಾದ ಸಂಸ್ಥೆ. ಬ್ರಿಟಿಷ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಮಾದರಿಯಂತೆ 1875ರಲ್ಲಿ ಸರ್ ಸೈಯದ್ ಅಹಮದ್ ಖಾನ್ ಇವರಿಂದ ಸ್ಥಾಪಿಸಲಾಗಿತ್ತು - ನಂತರ ಇದನ್ನು ಮೊಹಮದನ್ ಆಂಗ್ಲೊ-ಒರಿಯಂಟಲ್ ಕಾಲೇಜ್ ಎಂದು ಹೆಸರಿಸಲಾಯಿತು - ಮತ್ತು 1920ರಲ್ಲಿ ಇದಕ್ಕೆ ಕೇಂದ್ರ ವಿಶ್ವವಿದ್ಯಾಲಯ ಎಂಬ ದರ್ಜೆಯನ್ನು ಭಾರತದ ಸಂಸತ್ತು ನೀಡಿತು. ಭಾರತದಲ್ಲಿನ ಉತ್ತರ ಪ್ರದೇಶದ ಅಲಿಗಡ್‌ನಲ್ಲಿ ಸ್ಥಾಪಿತ ಈ ವಿಶ್ವವಿದ್ಯಾಲಯ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ರೂಪಗೊಂಡ ಮೊದಲನೆಯ ಉಚ್ಚ ಅಧ್ಯಯನ ಸಂಸ್ಥೆಯಾಗಿತ್ತು. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಭಾರತದ ವಾರಾಣಾಸಿಯಲ್ಲಿ ಸ್ಥಾಪಿತವಾದ ಒಂದು ಕೇಂದ್ರ ವಿಶ್ವವಿದ್ಯಾಲಯ. ಇದು ವಾರಾಣಾಸಿಯ ಕೇಂದ್ರ ಹಿಂದೂ ಕಾಲೇಜಿನಿಂದ ಪ್ರಕಟವಾಯಿತು, ಇದನ್ನು ಆನ್ನಿ ಬೆಸೆಂಟ್ ಒಬ್ಬ ಐರಿಷ್ ವಂಶದ ಬ್ರಿಟಿಷ್ ಮಹಿಳೆ ಸ್ಥಾಪಿಸಿದ್ದರು, ಇವರು ಏಪ್ರಿಲ್ 1911ರಲ್ಲಿ ವಾರಾಣಾಸಿಯಲ್ಲಿ ಒಂದು ಸಮಾನವಾದ ಹಿಂದೂ ವಿಶ್ವವಿದ್ಯಾಲಯಕ್ಕೆ ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರೊಂದಿಗೆ ಕೈಗೂಡಿಸಿದರು. ಕ್ರಮೇಣವಾಗಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ 1 ಅಕ್ಟೋಬರ್ 1917ರಿಂದ ಕೇಂದ್ರ ಹಿಂದೂ ಕಾಲೇಜ್‌ನ್ನು ತನ್ನ ಮೊದಲ ಘಟಕವಾಗಿಸಿಕೊಂಡು ಕಾರ್ಯಾರಂಭಿಸಿತು. ವಿಶ್ವವಿದ್ಯಾಲಯಕ್ಕೆ ಹಣ ಹೆಚ್ಚಾಗಿ ಹಿಂದೂ ರಾಜಕುಮಾರರಿಂದ ಬರುತ್ತಿತ್ತು ಹಾಗೂ ಇವತ್ತಿನ ಆವರಣವನ್ನು ಕಾಶಿ ನರೇಶರು ದಾನ ನೀಡಿದ ಜಮೀನಿನಲ್ಲಿ ಕಟ್ಟಲಾಗಿತ್ತು. ಏಷ್ಯಾದಲ್ಲೇ ಅತಿ ದೊಡ್ಡ ವಾಸದ ಮನೆಗಳಿರುವ ವಿಶ್ವವಿದ್ಯಾಲಯ ಎಂದು ಮನ್ನಣೆ ಪಡೆದಿದೆ, ಇಲ್ಲಿ 128ಗಿಂತ ಹೆಚ್ಚು ಬೋಧಿಸುವ ಇಲಾಖೆಗಳಿವೆ; ವಿಜ್ಞಾನ, ಭಾಷಾಧ್ಯಯನ, ಕಾನೂನು, ಇಂಜಿನಿಯರಿಂಗ್ (IT-BHU) ಹಾಗೂ ವೈದ್ಯಕೀಯ (IMS-BHU) ಸೇರಿದಂತೆ ಇಲ್ಲಿನ ಹಲವು ಕಾಲೇಜುಗಳು ಭಾರತದ ಶ್ರೇಷ್ಠ ಕಾಲೇಜುಗಳ ದರ್ಜೆಯನ್ನು ಪಡೆದಿದ್ದವು. ಈ ವಿಶ್ವವಿದ್ಯಾಲಯದ ಒಟ್ಟು ದಾಖಲಾತಿಗಳು ವಿದೇಶೀ ವಿಧ್ಯಾರ್ಥಿಗಳನ್ನು ಸೇರಿಸಿ 15,000ಕ್ಕಿಂತಲೂ ಹೆಚ್ಚು. 2010ರ ಶೈಕ್ಷಣಿಕ ಕಾಲಾವಧಿಯಿಂದ IIT ಕಾಲೇಜಾದ IT-BHU ಹೊಂದಿರುವ ಭಾರತದಲ್ಲಿನ ಏಕ ಮಾತ್ರ ವಿಶ್ವವಿದ್ಯಾಲಯ ಇದು. ಭಾರತದ ನಿರ್ವಹಣ ಸಂಸ್ಥೆ ಲಖನೌ ಭಾರತದ ನಿರ್ವಹಣ ಶಾಲೆಗಳಲ್ಲಿ ಪ್ರಮುಖವಾಗಿದೆ. ಭಾರತದ ತಂತ್ರಜ್ಞಾನದ ಸಂಸ್ಥೆ ಕಾನಪುರ್ - 1960ರಲ್ಲಿ ಉದ್ಯೋಗ ನಗರಿ ಕಾನಪುರ್‌ನಲ್ಲಿ ಸ್ಥಾಪಿತವಾಗಿದ್ದೂ ಅಂತರರಾಷ್ಟ್ರೀಯವಾಗಿ ಮನ್ನಣೆ ಪಡೆದ ಭಾರತದ ತಂತ್ರಜ್ಞಾನದ ಸಂಸ್ಥೆ; ಈಗ IIT-ಕಾನಪುರ್ ಅಥವಾ 'IITK' ಎಂದು ಪ್ರಚಲಿತವಾಗಿದೆ. ಇದು ಪ್ರಾಥಮಿಕವಾಗಿ ಪದವಿಪೂರ್ವದ ಶಿಕ್ಷಣವನ್ನು ಇಂಜಿನೀಯರಿಂಗ್ ಮತ್ತು ಸಂಬಂಧಪಟ್ಟ ವಿಜ್ಞಾನಗಳು ಹಾಗೂ ತಂತ್ರಜ್ಞಾನಗಳು ಹಾಗೂ ಇದೇ ಕ್ಷೇತ್ರದ ಸಂಶೋಧನೆಗಳನ್ನು ಬೋಧಿಸುವ ನಿಟ್ಟಿನಲ್ಲಿ ಕೇಂದ್ರೀಕರಿಸುತ್ತವೆ. ಪ್ರಸಿದ್ಧ ಲಾ ಮಾರ್ಟಿನೇರ್ ಕಾಲೇಜು ಸೇರಿದಂತೆ ರಾಜ್ಯದ ರಾಜಧಾನಿ ಲಖನೌನಲ್ಲಿ ಹಲವು ಒಳ್ಳೆಯ ಹೆಸರು ಪಡೆದ ಶಾಲೆಗಳು ಇವೆ. ಆರ್ಥಿಕತೆ ಭಾರತದ ಆರ್ಥಿಕತೆಯಲ್ಲಿ ಉತ್ತರ ಪ್ರದೇಶ ಎರಡನೇಯ ದೊಡ್ಡ ರಾಜ್ಯವಾಗಿದ್ದು, ಮೊದಲನೆಯದು ಮಹಾರಾಷ್ಟ್ರ. ಇದು ಭಾರತದ ಒಟ್ಟು GDP ಗೆ 8.17% ಒದಗಿಸುತ್ತದೆ. 1999 ಹಾಗೂ 2008ರ ನಡುವಿನಲ್ಲಿ, ಆರ್ಥಿಕತೆ ಕೇವಲ 4.4% ಪ್ರತಿ ವರ್ಷದ ಅನುಸಾರ ಬೆಳೆಯಿತು. ಇದು ಭಾರತದಲ್ಲಿ ಅತಿ ಕಡಿಮೆ ದರಗಳ ಶ್ರೇಣಿಯಲ್ಲಿ ಒಂದಾಗಿತ್ತು. ರಾಜ್ಯದ ಮಹತ್ವದ ಆರ್ಥಿಕ ಚಟುವಟಿಕೆ ಬೇಸಾಯವಾಗಿದ್ದು, 1991ರಲ್ಲಿ ರಾಜ್ಯದ 73% ರಷ್ಟು ಜನಸಂಖ್ಯೆಯವರು ಬೇಸಾಯದಲ್ಲಿ ತೊಡಗಿದ್ದರು ಹಾಗೂ ರಾಜ್ಯದ 46% ಆದಾಯವನ್ನು ಬೇಸಾಯದಿಂದ ಪಡೆಯಲಾಗಿದೆ ಎಂದು ಲೆಕ್ಕ ಹಾಕಲಾಗಿತ್ತು. ಉತ್ತರ ಪ್ರದೇಶವು ದೇಶದಲ್ಲಿ ಆಹಾರ-ಹೆಚ್ಚಳವಿರುವ ರಾಜ್ಯ ಎಂಬ ತನ್ನ ಹಿಂದಿನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ. ಉತ್ತರ ಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಚಿಕ್ಕ ಪ್ರಮಾಣದ ಉದ್ಯೋಗ ಘಟಕಗಳಿಗೆ ಮನೆಯಾಗಿದೆ, ಅಂದರೆ 12% ಅಂತೆ 2.3 ಮಿಲಿಯನ್‌ಗಿಂತ ಹೆಚ್ಚು ಘಟಕಗಳಿವೆ. ಆದರೆ ಔದ್ಯೋಗಿಕ ಉತ್ಪಾದನೆಯ ಮೇಲೆ ಈ ರಾಜ್ಯದ ವಿದ್ಯುತ್ ಮಂಡಳಿಯ ಕ್ರಮವಿಲ್ಲದ ವಿದ್ಯುತ್ ಸರಬರಾಜು ಬಹಳ ಪರಿಣಾಮ ಬೀರಿದೆ ಹಾಗೂ ಪೂರ್ಣ ಉತ್ಪಾದಕ ಸಾಮರ್ಥ್ಯದಗಿಂತ ಬಹಳ ಕೆಳಗೆ ಉಳಿದಿದೆ. ಸ್ಪರ್ಧಾತ್ಮಕ ಬೆಲೆಗಳಲ್ಲಿ ಬೇಕಾಗುವಷ್ಟು ಕಚ್ಚಾ ವಸ್ತುಗಳ ಲಭ್ಯವಿಲ್ಲದಿರುವಿಕೆ ಕೂಡ ಇನ್ನೊಂದು ನಕಾರಾತ್ಮಕ ಅಂಶವಾಗಿದೆ. ಭಾರತದ ಹಲವು ಭಾಗಗಳಂತೆ ಇಲ್ಲಿಯೂ ಕೂಡ ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ಹೆಚ್ಚು ಲಾಭ ಪಡೆಯುತ್ತಾರೆ ಮತ್ತು ಕಾರ್ಮಿಕ ವರ್ಗದವರ ಜೀವನ ಜೀವನೋಪಾಯ ಮಟ್ಟಕ್ಕೆ ಮಾತ್ರ ಉಳಿದಿರುತ್ತದೆ. ಅದಾಗ್ಯೂ, ಕಾರ್ಮಿಕ ಸಾಮರ್ಥ್ಯ UPಯಲ್ಲಿ ರಾಷ್ಟ್ರದ ಸರಾಸರಿಯನ್ನು (25) ಹೋಲಿಸಿದರೆ (26) ಹೆಚ್ಚಾಗಿದೆ. ರಾಜ್ಯದ ಕೆಲವು ಮುಖ್ಯ ಔದ್ಯೋಗಿಕ ಮುಖ್ಯ ಸ್ಥಳಗಳು ಈ ರೀತಿ ಇವೆ:- ಕಾನ್ಪುರ ದೇಶದಲ್ಲೇ ದೊಡ್ಡ ಪಾದರಕ್ಷೆ-ಉತ್ಪಾದಕ ಕೇಂದ್ರ. ನೋಯಿಡಾ ಹಾಗೂ ಲಖನೌ ದೇಶದ ಉನ್ನತ IT (ಮಾಹಿತಿ ತಂತ್ರಜ್ಞಾನದ) ತಾಣಗಳಲ್ಲೊಂದು. ಮೀರತ್ ಕ್ರೀಡಾ ಉತ್ಪನ್ನಗಳ, ಕತ್ರಿಯಂತಹ ಹರಿತವಾದ ಸಲಕರಣೆಗಳ ಹಾಗೂ ಚಿನ್ನದ ಆಭರಣಗಳ ಉತ್ಪಾದಕ ಕೇಂದ್ರ, ಈ ನಗರ ದೇಶದಲ್ಲೇ ನಿಯತವಾಗಿ ಕರ-ಸಲ್ಲಿಸುವ ನಗರಗಳಲ್ಲಿ ಉನ್ನತ ಸ್ಥಾನ ಪಡೆದಿದೆ. ಮಿರ್ಜಾಪುರ್‌ಹಾಗೂ ಭಾದೋಹಿಜಮಖಾನೆಗಳ ಹಾಗೂ ಹತ್ತಿಯ ದರಿಗಳ ಉತ್ಪಾದಕ ಕೇಂದ್ರಗಳು ಹಾಗೂ ವಿಶ್ವದಾದ್ಯಂತ ಇದರ ನಿರ್ಯಾತಕರು. ಮೊರಾದಾಬಾದ್, ಸಾಂಪ್ರಾದಾಯಿಕ ’ಮೊರಾದಾಬಾದಿ’ ಧಾತುಗಳ ವಸ್ತುವಿನ ಉತ್ಪಾದನೆಯಲ್ಲಿ ಪ್ರಸಿದ್ಧವಾಗಿದೆ, ಈಗ ತುಕ್ಕು ಹಿಡಿಯದ ಉಕ್ಕಿನ ಗೃಹೋಪಕರಣಗಳ ಪ್ರಮುಖ ಉತ್ಪಾದಕ ಹಾಗೂ ನಿರ್ಯಾತಕವಾಗಿ ಪ್ರಕಟಗೊಂಡಿದೆ. ಅಲಿಗಡ್ ಹಿತ್ತಾಳೆ, ತವರ, ಅಲ್ಯೂಮಿನಿಯಮ್ ಹಾಗೂ ಕಬ್ಬಿಣದ ಬಾಗಿಲು ಹೊಂದಿಕೆಗಳ ಉತ್ಪಾದನೆಯ ಮುಖ್ಯ ಸ್ಥಳವಾಗಿದೆ ಮತ್ತು ಇದು ಜೋಲು ಬೀಗಗಳಿಗೂ ಪ್ರಸಿದ್ಧವಾಗಿದೆ. ಈ ಸಾಮಾನುಗಳನ್ನು ವಿಶ್ವದಾದ್ಯಂತ ಸರಬರಾಜು ಮಾಡಲಾಗುತ್ತದೆ. ಅಲಿಗಡ್ ಪ್ಲಾಸ್ಟಿಕ್ಕಿನ ಆಟಿಕೆ ಬಂದೂಕುಗಳ ಉತ್ಪಾದನೆಯ ಮುಖ್ಯ ಸ್ಥಳವೂ ಹೌದು. 2006ರಲ್ಲಿ 8 ಮಿಲಿಯನ್ ಸ್ಥಳೀಯರು ಹಾಗೂ 825,000ರಷ್ಟು ವಿದೇಶೀಯರು ಆಗ್ರಾದ ಪ್ರವಾಸ ಮಾಡಿದರು, ಇದನ್ನು ಅನುಸರಿಸಿ ವಾರಣಾಸಿ, ಲಖನೌ, ಅಲ್ಹಾಬಾದ್, ವ್ರಿಂದಾವನ್ ಹಾಗೂ ಮಥುರಾ ಮುಂತಾದವುಗಳೂ ಸಹಾ ಪ್ರವಾಸ ಮಾಡಲ್ಪಟ್ಟವು. ಮಾಧ್ಯಮದ ಮೂಲಕ ಜಾಗತೀಕರಣ ಅಲ್ಲದೇ ಪಾಶ್ಚಿಮಾತ್ಯ ಪ್ರಭಾವ ಉತ್ತರ ಪ್ರದೇಶದ ಜೀವನ ಶೈಲಿಯ ಮೇಲೆ ಮಹತ್ತರ ಪರಿಣಾಮ ಬೀರುತ್ತಿದೆ ಮತ್ತು ಆರ್ಥಿಕತೆ ಹೊಸ ಅಭಿರುಚಿಗಳನ್ನು ಹಾಗೂ ಗ್ರಾಹಕೀಕರಣವನ್ನು ಒದಗಿಸಲು ತಾನೇ ಸಜ್ಜಾಗುತ್ತಿದೆ. ಇದರ ಸ್ಪಷ್ಟ ಸೂಚನೆಯನ್ನು ದೊಡ್ಡ ನಗರಗಳ ಉನ್ನತ ಸ್ಥಳಗಳಲ್ಲಿ ಮನೋಹರವಾದ ವ್ಯಾಪಾರದ ಮಾಲ್‌ಗಳ ಪ್ರಕಟವಾಗುವಿಕೆ ಇಂದ ನೋಡಬಹುದು. ರಾಜ್ಯದ ಪ್ರವಾಸೋದ್ಯಮದ ದುಡಿಮೆಯಿಂದ ಕೂಡ ಆರ್ಥಿಕತೆ ಒಳ್ಳೆ ಲಾಭ ಪಡೆಯುತ್ತಿದೆ. ಪ್ರವಾಸೋದ್ಯಮ ಉತ್ತರ ಪ್ರದೇಶ ಹಲವು ರಾಷ್ಟ್ರಿಯ ಹಾಗೂ ಅಂತರರಾಷ್ಟ್ರಿಯ ಸಂದರ್ಶಕರನ್ನು ಸೆಳೆಯುತ್ತದೆ; 2003ರಲ್ಲಿ 71 ಮಿಲಿಯನ್‌ಗಿಂತ ಹೆಚ್ಚು ಸ್ಥಳಿಯ ಪ್ರವಾಸಿಗರು ಹಾಗೂ 25% ರಷ್ಟು ಇಡಿ ಭಾರತದ ವಿದೇಶೀ ಪ್ರವಾಸಿಗರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದರು, ಇದು ಭಾರತದಲ್ಲಿನ ಒಂದು ಉನ್ನತ ಪ್ರವಾಸಿ ತಾಣ. ಈ ರಾಜ್ಯದಲ್ಲಿ ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಎರಡು ತಾಣಗಳಿವೆ, ಅವು ಆಗ್ರಾ ಪ್ರಯಾಣ ಹಾಗೂ ಹಿಂದೂ ಪುಣ್ಯಕ್ಷೇತ್ರಗಳ ತೀರ್ಥಯಾತ್ರೆ . ಆಗ್ರಾ ನಗರವು ಮೂರು ವಿಶ್ವ ಸಂರಕ್ಷಣಾ ಸ್ಮಾರಕಗಳ ಪ್ರವೇಶ ಸ್ಥಾನವಾಗಿದೆ: ತಾಜ್ ಮಹಲ್, ಆಗ್ರಾ ಕೋಟೆ ಹಾಗೂ ಹತ್ತಿರದ ಫತೆಹ್‍ಪುರ್ ಸಿಕ್ರಿ: ತಾಜ್ ಮಹಲ್ ಒಂದು ಮುಸ್ಲಿಮರ ಸಮಾಧಿ, ಇದನ್ನು ಮುಘಲ್ ಚಕ್ರವರ್ತಿ ಶಾಹ ಜಹಾನ್ ತನ್ನ ಪ್ರಿಯ ಪತ್ನಿ ಮುಮ್‌ತಾಜ್ ಮಹಲ್ ಸ್ಮರಣೆಯಲ್ಲಿ ನಿರ್ಮಿಸಿದ್ದರು. ಇದನ್ನು "ಭರತದಲ್ಲಿ ಮುಸ್ಲಿಮರ ಕಲೆಯ ಅನರ್ಘ್ಯ ರತ್ನ ಹಾಗೂ ವಿಶ್ವಾದ್ಯಂತ ಪ್ರಶಂಸಿಸಲಾದ ವಿಶ್ವ ಸಂಸ್ಕೃತಿಯ ಉತ್ಕೃಷ್ಟ ಕೃತಿ" ಎಂದು ಗುರುತಿಸಲಾಗಿದೆ. ಆಗ್ರಾ ದುರ್ಗ ತನ್ನ ಹೆಚ್ಚು ಪ್ರಸಿದ್ಧ ಭಗಿನಿ ತಾಜ್ ಮಹಲ್‌ಯಿಂದ 2.5 km ಉತ್ತರಪಶ್ಚಿಮದಲ್ಲಿದೆ. ಈ ದುರ್ಗವನ್ನು ಗೋಡೆಗಳುಳ್ಳ ಅರಮನೆಯಂತಹ ನಗರ ಎಂದು ಇನ್ನು ಖಚಿತವಾಗಿ ವರ್ಣಸಬಹುದು. ಫತೆಹ್‌ಪುರ್ ಸಿಕ್ರಿ 16ನೇಯ ಶತಮಾನದಲ್ಲಿನ ಆಗ್ರಾದ ಬಳಿಯ ವಿಶ್ವ ಪ್ರಸಿದ್ಧ ರಾಜಧಾನಿ ನಗರವಾಗಿತ್ತು, ಇದನ್ನು ಮುಘಲ್ ಚಕ್ರವರ್ತಿ ಮಹಾನ್ ಅಕ್ಬರ್ ನಿರ್ಮಿಸಿದ್ದರು. ಇವರ ಮುಸ್ಲಿಮ್ ಸಮಾಧಿ ಆಗ್ರಾದಲ್ಲಿದ್ದು ಇದು ಕೂಡ ಭೇಟಿ ನೀಡುವ ಪ್ರಮುಖ ಸ್ಥಾನದಲ್ಲೊಂದು. ಆಗ್ರಾದಲ್ಲೇ ದಯಾಲ್ ಬಾಗ್ ಹಲವರು ವೀಕ್ಷಿಸುವ ಆಧುನಿಕ ಸಮಯದಲ್ಲಿ ನಿರ್ಮಿಸಲಾದ ಒಂದು ದೇವಸ್ಥಾನ. ಇದು ಇನ್ನು ನಿರ್ಮಾಣ ಹಂತದಲ್ಲಿದ್ದು ಪೂರ್ಣಗೊಳ್ಳಲು ಒಂದು-ಶತಮಾನವಾಗಬಹುದು. ಅದರ ಜೀವಂತ ಎನಿಸುವ ಅಮೃತಶಿಲೆಯ ಶಿಲ್ಪಕಲೆಗಳು ಭಾರತದಲ್ಲಿ ಅದ್ವಿತೀಯವೆನಿಸಿದೆ. ಆಗ್ರಾದ ನಂಬಲಾಗದ ಆಧುನಿಕ ಆಕರ್ಷಣೆಗಳ್ಳಲ್ಲಿ ಏಷ್ಯಾದ ಅತಿ ದೊಡ್ಡ ಸ್ಪಾ (ರೋಗನಿವಾರಕವಾದ ಖನಿಜಜಲಗಳ ಊಟೆ) ಮತ್ತು ಏಷ್ಯಾದ ಮೊದಲ ಹಾಗೂ ಏಕಮಾತ್ರ 6D ಚಿತ್ರಮಂದಿರ ಇವೆ. ತೀರ್ಥ ಯಾತ್ರೆಯ ಪಯಣ ದಲ್ಲಿ ಪೂಜ್ಯ ಗಂಗಾ ಹಾಗೂ ಯಮುನಾ ನದಿಗಳ ದಡದ ಮೇಲೆ ಇರುವ ಹಿಂದೂಗಳ ಅತೀ ಧಾರ್ಮಿಕ ನಗರಗಳು: ವಾರಾಣಾಸಿ (ಈ ನಗರವನ್ನು ಜಗತ್ತಿನ ಪುರಾತನ ನಗರ ಎಂದು ಪರಿಗಣಿಸಲಾಗಿದೆ), ಅಯೋಧ್ಯಾ (ರಾಮ ದೇವರ ಜನ್ಮ ಭೂಮಿ), ಮಥುರಾ (ಕೃಷ್ಣ ದೇವರ ಜನ್ಮ ಸ್ಥಾನ) ಹಾಗೂ ಅಲ್ಹಾಬಾದ್ (ಪೂಜ್ಯ ಗಂಗಾ-ಯಮುನಾ ನದಿಗಳ ಕೂಡಲು ಅಥವಾ ’ಪವಿತ್ರ-ಸಂಗಮ’). ವಾರಾಣಾಸಿಯನ್ನು ಜಗತ್ತಿನ ಪುರಾತನ ನಗರಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಇದು ತನ್ನ ಘಾಟಿಗಳಿಗೆ ಪ್ರಸಿದ್ಧವಾಗಿದೆ (ನದಿಯ ದಡದ ಉದ್ದಕ್ಕೂ ಮೆಟ್ಟಲುಗಳಿದ್ದು ಅಲ್ಲಿ ಜನರು ಸ್ನಾನ ಮಾಡುತ್ತಾರೆ), ಇಲ್ಲಿ ವರ್ಷಪೂರ್ತಿ ಭಾರತದಾದ್ಯಂತ ಹಾಗೂ ಹೊರದೇಶಗಳಿಂದಲೂ ಕೂಡ ಬರುವ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ. ಅವರು ಈ ಗಂಗಾ ನದಿಯಲ್ಲಿ ಪವಿತ್ರ ಮುಳುಗು ಹಾಕಲು ಬರುತ್ತಾರೆ. ಮಥುರಾ ತನ್ನ ಆಕರ್ಷಕವಾದ ಹೋಲಿ ಆಚರಣೆಗೆ ಜಗತ್ತಿನಲ್ಲೆ ಪ್ರಸಿದ್ಧವಾಗಿದೆ, ಇದು ಹಲವಾರು ಪರ್ಯಟಕರನ್ನು ಕೂಡ ಆಕರ್ಷಿಸುತ್ತದೆ. ನಮ್ಮ ಭಾರತೀಯ ಚಲನಚಿತ್ರ ಉದ್ಯಮವು ಸ್ವಲ್ಪ ಹೆಚ್ಚಾಗಿ ಈ ಉತ್ಸವದ ಸಮಾಜಿಕ-ಧಾರ್ಮಿಕತೆಯನ್ನು ಮನರಂಜನೆಯ ರೂಪದಲ್ಲಿ ದರ್ಶಿಸಿದ್ದಾರೆ. ಪ್ರತಿ ವರ್ಷ, ಸಾವಿರಾರು ಜನರು ಮಘ ಜಾತ್ರೆಯ ಉತ್ಸವದಲ್ಲಿ ಪಾಲ್ಗೊಳ್ಳಲು ಅಲ್ಹಾಬಾದಿನಲ್ಲಿ ಒಟ್ಟುಗೂಡುತ್ತಾರೆ. ಇದನ್ನು ಗಂಗಾ ನದಿಯ ದಡದ ಮೇಲೆ ಆಚರಿಸಲಾಗುತ್ತದೆ. ಇದೇ ಹಬ್ಬವನ್ನು 12 ವರ್ಷಕ್ಕೊಂದು ಸಲ ದೊಡ್ಡ ಪ್ರಮಾಣದಲ್ಲಿ ಆಯೋಜಿಸಿ ಕುಂಭ ಜಾತ್ರೆ ಎನ್ನುತ್ತಾರೆ, ಇಲ್ಲಿ 10 ಮಿಲಿಯನ್‌ಗಿಂತ ಹೆಚ್ಚು ಹಿಂದೂ ಭಕ್ತಾದಿಗಳು ಒಟ್ಟುಸೇರುತ್ತಾರೆ - ಜಗತ್ತಿನಲ್ಲೆ ಮಾನವರ ಅತಿ ಹೆಚ್ಚು ಒಗ್ಗೂಡುವಿಕೆ. ವಾರಣಾಸಿಯ ಹತ್ತಿರವೆ ಐತಿಹಾಸಿಕವಾಗಿ ಮುಖ್ಯವಾದ ನಗರಗಳಾದ ಸಾರಾನಾಥ ಹಾಗೂ ಕುಶಿನಗರ ಸ್ಥಾಪಿತವಾಗಿವೆ. ಗೌತಮ ಬುದ್ಧ ಜ್ಞಾನೋದಯವಾದ ಮಲೇ ತನ್ನ ಮೊದಲ ಧರ್ಮೋಪದೇಶವನ್ನು ಸಾರಾನಾಥನಲ್ಲಿ ನೀಡಿದರು ಹಾಗೂ ಅವರು ಕುಶಿನಗರದಲ್ಲಿ ದೈವಾಧೀನರಾದರು; ಹೀಗಾಗಿ ಎರಡು ಸ್ಥಾನಗಳು ಬೌದ್ಧರಿಗೆ ಪ್ರಮುಖ ತೀರ್ಥಯಾತ್ರೆಯ ತಾಣಗಳು. ಸಾರಾನಾಥದಲ್ಲಿ ಅಶೋಕನ ಕಂಭಗಳಿವೆ ಹಾಗೂ ಅಶೋಕನ ಸಿಂಹ ರಾಜಧಾನಿ ಇದೆ, ಎರಡು ಪುರಾತತ್ವ ಶಾಸ್ತ್ರದ ಉಪಕರಣಗಳೆಂದು ರಾಷ್ಟ್ರಿಯ ಮಹತ್ವದ ಪ್ರಾಮುಖ್ಯತೆಯನ್ನು ಪಡೆದಿದೆ. ವಾರಾಣಾಸಿಯಿಂದ 80 km ದೂರದಲ್ಲಿನ ಘಾಜಿಪುರ್ ತನ್ನ ಗಂಗೆಯ ಘಾಟ್‌ಗಳಿಗಲ್ಲದೆ ಬ್ರಿಟಿಷಿನ ಪ್ರಬಲವಾದ ದೊರೆ ಲಾರ್ಡ್ ಕಾರ್ನ್‌ವಾಲ್ಲಿಸ್‌ನ ಸಮಾಧಿಗೆ ಕೂಡ ಪ್ರಸಿದ್ಧವಾಗಿದೆ, ಈ ಸಮಾಧಿಯ ಉಸ್ತುವಾರಿಯನ್ನು ಭಾರತದ ಪುರಾತತ್ವ ಶಾಸ್ತ್ರ ಸರ್ವೇಕ್ಷಣೆಯವರು ನೋಡಿಕೊಳ್ಳುತ್ತಾರೆ. ಉತ್ತರ ಪ್ರದೇಶದ ರಾಜಧಾನಿಯಾದ ಲಖನೌನಲ್ಲಿ ಕೂಡ ಬರ ಇಮಾಂಬರ ಹಾಗೂ ಛೋಟಾ ಇಮಾಂಬರ ಅಂತಹ ಹಲವಾರು ಸುಂದರ ಐತಿಹಾಸಿಕ ಸ್ಮಾರಕಗಳಿವೆ. ಔಧ-ಕಾಲದ ಬ್ರಿಟಿಷರು ವಾಸಿಸುವ ವಸತಿಗಳ ನಾಶಗೊಂಡ ಅನೇಕ ಭಾಗಗಳು ಕೂಡಿ ಇರುವ ಸ್ಥಳವನ್ನು ಕೂಡ ಇಲ್ಲಿ ಸಂರಕ್ಷಿಸಲಾಗಿದೆ, ಇವುಗಳನ್ನು ಈಗ ಪುನಃ ಸ್ಥಾಪಿಸಲಾಗುತ್ತಿದೆ. ದುಧ್ವಾ ರಾಷ್ಟ್ರೀಯ ಉಪವನ ಹುಲಿಗಳಿಗೆ ಎಂದು ಇರುವ ದೇಶದ ಉತ್ತಮ ಮೀಸಲು ಪ್ರದೇಶಗಳಲ್ಲೊಂದು. ಲಖಿಮಪುರ್ ಖೇರಿ - ಹುಲಿಗಳ ಮನೆಯಾದ ಮಿಸಲು ಪ್ರದೇಶ ಮತ್ತು ಕಟೆರಿನೈಘಾಟ್ ವನ್ಯಜೀವಿ ಅಭಯಧಾಮ - ಭಾರತದಲ್ಲೇ ಅತಿ ಹೆಚ್ಚು ವನ್ಯಜೀವಿಗಳು ಒಂದೆಡೆ ಸೇರಿರುವ ಅಭಯಧಾಮ ಅದರಲ್ಲಿಯೂ ಹುಲಿಗಳ ಹಾಗೂ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ, ಇದು ಬಹ್‌ರೈಚ್‌ನಲ್ಲಿದ್ದು ನೇಪಾಳಿನ ಗಡಿ ಭಾಗದಲ್ಲಿದೆ ಹಾಗೂ ಪ್ರೇಕ್ಷಣೀಯ ಸ್ಥಳ. ವಿದೇಶೀಯರಿಗೆ ಕೆಲವು ಪ್ರದೇಶಗಳಲ್ಲಿ ಪ್ರವಾಸ ಮಾಡಲು ವಿಶೇಷ ಪರವಾನಗಿ ಪತ್ರ ಪಡೆಯ ಬೇಕಾಗುತ್ತದೆ. ಸಾರಿಗೆ ವ್ಯವಸ್ಥೆ ಈ ರಾಜ್ಯದಲ್ಲಿ ಹಲವು ಮಾದರಿಯ ಸಾರಿಗೆಯ ದೊಡ್ಡ ಸಂಪರ್ಕ ಪದ್ಧತ್ತಿ ಇದೆ:- ವಾಯುಯಾನ : ಈ ರಾಜ್ಯದಲ್ಲಿ ನಾಲ್ಕು ಮುಖ್ಯ ವಿಮಾನ ನಿಲ್ದಾಣಗಳು ಹಾಗೂ 23 ವಿಮಾನ ಇಳಿಯುವ ದಾರಿಗಳಿವೆ. ಲಖನೌ, ಅಗ್ರಾ, ಕಾನಪುರ್ ಹಾಗೂ ವಾರಾಣಾಸಿ ನಗರಗಳಲ್ಲಿ ರಾಷ್ಟ್ರ ಮಟ್ಟದ ಒಳ್ಳೆಯ ಸಂಪರ್ಕದ ದೇಶೀಯ ವಿಮಾನ ನಿಲ್ದಾಣಗಳಿವೆ. ಲಖನೌ ರಾಜ್ಯದಲ್ಲಿ ಅತಿ ದೊಡ್ಡ ಹಾಗೂ ಬಹಳ ಮುಖ್ಯ ವಿಮಾನ ನಿಲ್ದಾಣ. (ಬರೇಲಿಯ ತ್ರಿಶೂಲ್ ವಾಯು-ತಳವನ್ನು ದೇಶೀಯ ವಿಮಾನ-ನಿಲ್ದಾಣವಾಗಿ ಉನ್ನತೀಕರಿಸುವ ಕಾರ್ಯ ಕೂಡ ನಡೆದಿದೆ.) ರೈಲುಮಾರ್ಗಗಳು : ಪ್ರಾಯಶಃ ರಾಜ್ಯದ ಎಲ್ಲಾ ದೊಡ್ಡ ಹಾಗೂ ಸಣ್ಣ ನಗರಗಳು ರೈಲು ಮಾರ್ಗದ ಸಂಪರ್ಕ ಹೊಂದಿದ್ದಾರೆ. ದೇಶದಲ್ಲೇ ಅತಿ ದೊಡ್ಡ ರೈಲಿನ ಸಂಪರ್ಕ ಇಲ್ಲಿದೆ; ಒಟ್ಟು ರೈಲು ಮಾರ್ಗದ ಉದ್ದ 8,546 km (2006 ಪ್ರಕಾರ) ಹಾಗೂ ಹೆಚ್ಚು ರೈಲುಮಾರ್ಗಗಳ ನಿಬಿಡತೆಯಲ್ಲಿ ಆರನೆಯ ಸ್ಥಾನ ಪಡೆದಿದೆ. ರಸ್ತೆಮಾರ್ಗಗಳು : ದೇಶದಲ್ಲೇ ಮಹಾರಾಷ್ಟ್ರದ ನಂತರ ಈ ರಾಜ್ಯದಲ್ಲಿ ಅತಿ ದೊಡ್ಡ ರಸ್ತೆ ಸಂಪರ್ಕವಿದೆ. ಇಲ್ಲಿ 31 ರಾಷ್ಟ್ರೀಯ ಹೆದ್ದಾರಿಗಳಿವೆ (NH) ಎಂಬ ಹೆಮ್ಮೆ ಇದರದು, ಇದರ ಒಟ್ಟು ಉದ್ದ 4,942 km (ಭಾರತದ ಒಟ್ಟು NHಗಳ ಉದ್ದದ 8.5%). ಭಾರತದ ರಸ್ತೆ ನಿಬಿಡತೆಯಲ್ಲಿ ಏಳನೆಯ ಸ್ಥಾನ ಪಡೆದಿದೆ, (1,027 km ಪ್ರತಿ 1,000 km,2 2002ರ ಪ್ರಕಾರ) ಹಾಗೂ ದೇಶದಲ್ಲಿನ ನಗರ ಪ್ರದೇಶದ ಅತಿ ದೊಡ್ಡ ಮೇಲ್ಪದರದ ರಸ್ತೆ ಸಂಪರ್ಕ ಇಲ್ಲಿದೆ (50,721 km, 2002ರ ಪ್ರಕಾರ). ಕಾನಪುರ್, ಲಖನೌ, ಬರೇಲಿ, ಅಲ್ಹಾಬಾದ್, ವಾರಾಣಾಸಿ, ಝಾಂಸಿ, ಗೋರಖಪುರ್, ಆಗ್ರಾ ಹಾಗೂ ಘಾಜಿಪುರ್ ನಗರಗಳು ಹಲವು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಪಡೆದಿದ್ದಾವೆ. ಈಗಾಗಲೆ ಲಖನೌ ಹಾಗೂ ಕಾನಪುರ್ ಮಧ್ಯೆ ನಗರದ ಮೋಟಾರುದಾರಿ ಇದೆ, ಇನ್ನು ಹೊಸ ನಗರದ ಮೋಟಾರುದಾರಿಗಳು ಆಗ್ರಾ ಹಾಗೂ ನೋಯಿಡಾ ಮಧ್ಯೆ ಮತ್ತು ನೋಯಿಡಾ ಹಾಗೂ ಬಾಲಿಯಾ ಮಧ್ಯೆ ಬರಲಿದೆ (ಘಾಜಿಪುರ್ ಬಳಿ). ರಾಜ್ಯ ಸರ್ಕಾರದ ರಸ್ತೆ ಸಾರಿಗೆ ಕಂಪನಿ UPSRTC-ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದಲ್ಲಿನ ರಾಷ್ಟ್ರೀಯ ಮಾರ್ಗಗಳ ಮೂಲಕ ರಾಜ್ಯದ ಒಳಗೆ ಹಾಗೂ ರಾಜ್ಯದಿಂದ ರಾಜ್ಯದ ಸಾರಿಗೆಯ ಸೇವೆಯನ್ನು ಒದಗಿಸುತ್ತದೆ. ಜಲಮಾರ್ಗಗಳು : ಗಂಗಾ ನದಿಯ ಉದ್ದೊಂದು ವಿಸ್ತರಣೆ ಅಲ್ಹಾಬಾದ್ (ಉತ್ತರ ಪ್ರದೇಶ) ಇಂದ ಹಲ್ದಿಯ (ಪಶ್ಚಿಮ ಬಂಗಾಳ)ದ ವರೆಗೆ ರಾಷ್ಟ್ರೀಯ ಜಲಮಾರ್ಗ ಎಂದು ಘಷಿಸಲಾಗಿದೆ (NW) -I ಹಾಗೂ NW-Iನ ಒಟ್ಟು ಉದ್ದದಲ್ಲಿನ 600 km ಉತ್ತರ ಪ್ರದೇಶದಲ್ಲಿದೆ. ಈ ರಾಜ್ಯದಲ್ಲಿ ದೊಡ್ಡ ಹಾಗೂ ವೈವಿದ್ಯ ಸಾರಿಗೆ ಸಂಪರ್ಕವಿದ್ದರೂ ಸಹ, ಅದರ ಪರಿಸ್ಥಿತಿ ಹಾಗೂ ಕಾರ್ಯಾನಿರ್ವಾಹಣೆಯನ್ನು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸುವ ಅವಶ್ಯಕತೆ ಇದೆ. ಸಂಸ್ಕೃತಿ ವಾಸ್ತು ಶಿಲ್ಪ ಉತ್ತರ ಪ್ರದೇಶ ಭಾಗದ ವಾಸ್ತುಶಿಲ್ಪಗಳು ಹಿಂದಿನ ಸಹಸ್ರವರ್ಷದ ವಿಸ್ತಾರವಾದ ಬದಲಾಗಿರುವ ಕಾಲವನ್ನು ದಾಟಿ ಉಳಿದಿವೆ. ಅವುಗಳಲ್ಲಿ ಅತಿ ಪುರಾತನವಾಗಿರುವುದು ಪುರಾತತ್ವ ಶಾಸ್ತ್ರ ಅಥವಾ ಪುರಾಣ ಸಂಗ್ರಹದ ನಿಯಮಗಳ ವ್ಯಾಪ್ತಿಯಲ್ಲಿ ಬರುತ್ತದೆ; ರಾಜ್ಯದಲ್ಲಿನ ಧಾರ್ಮಿಕ ಕ್ಷೇತ್ರಗಳನ್ನು ಪುರಾಣಗಳ ಕಥಾ ನಿರೂಪಣೆಗಳಲ್ಲಿ ಗುರುತಿಸಲು ಸಾಧ್ಯ ಮತ್ತು ಇತರೆ ಭಾರತೀಯ ಧರ್ಮಗಳ ಪವಿತ್ರ ಸಾಹಿತ್ಯಗಳು ಅತ್ಯಂತ ಪುರಾತನ ವಾಸ್ತುಶಿಲ್ಪದ ಮಹಾಸೌಧಗಳನ್ನು ಹೊಂದಿದೆ ಮತ್ತು ಅವುಗಳನ್ನು ಕಾಲಕ್ಕೆ ಅನುಗುಣವಾಗಿ ಮತ್ತೆ ಮತ್ತೆ ಕಟ್ಟಲಾಗಿದೆ. ಮಧ್ಯಯುಗದ ರಾಜರು ಮತ್ತು ಚಕ್ರವರ್ತಿಗಳು ಸ್ಮಾರಕಗಳನ್ನು ಉಳಿಸಿ ಹೋಗಿದ್ದಾರೆ: ಕೋಟೆಗಳು, ಅರಮನೆಗಳು, ದೇವಸ್ಥಾನಗಳು, ಮಸೀದಿಗಳು ಮತ್ತು ಭವ್ಯ ಸಮಾಧಿಗಳು, ಅವುಗಳ ಬಾಹ್ಯ ಮತ್ತು ಅಂತರಿಕ ವೈಭವ ಆ ಕಾಲಗಳ ಸಮೃದ್ಧಿಯನ್ನು ನೆನೆಪಿಸುತ್ತದೆ. ಆಡಳಿತ, ನ್ಯಾಯ ಇಲಾಖೆ, ಆಸ್ಪತ್ರೆಗಳು, ಬ್ಯಾಂಕ್‍ಗಳು, ಅಂಚೆ ಸೇವೆಗಳು, ಪೋಲಿಸ್, ರೈಲ್ವೇ ಇತ್ಯಾದಿಗಳಿಗಾಗಿ ಕಟ್ಟಿದ ಬ್ರಿಟಿಷ್ ವಸಾಹತಿಗ ಕಟ್ಟಡಗಳನ್ನು ಹೆಚ್ಚಿನ ನಗರಗಳಲ್ಲಿ ಇನ್ನೂ ಸಹ ಕಾಣಬಹುದು; ಅವರ ವಾಸ್ತುಶಿಲ್ಪ ಹೆಚ್ಚಿನ ನಿದರ್ಶನಗಳಲ್ಲಿ ಕೇವಲ ಕ್ರಿಯಾತ್ಮಕವಾಗಿವೆ. ಕಲೆ ಮತ್ತು ಕರಕೌಶಲ ಉತ್ತರ ಪ್ರದೇಶವು ಪಿತ್ರಾರ್ಜಿತವಾಗಿ ಬಂದಂತಹ ಅದರ ಶ್ರೇಷ್ಠ ಕಲೆ ಮತ್ತು ಕರಕೌಶಲ್ಯಗಳಿಗೆ ಪ್ರಖ್ಯಾತಿಯನ್ನುಗಳಿಸಿದೆ. ಹಲವು ಪ್ರಸಿಧ್ಧ ಕೇಂದ್ರಗಳು ಕೆಳಕಂಡತಿವೆ: ಬರೇಲಿಯು ಅದರ ಝರೀ ಕೆಲಸ (ಒಂದು ವಿಧದ ದಾರದ ಅಲಂಕಾರ),ಸುರ್ಮ(ಕೋಲ್) ಮತ್ತು ಜುಮುಕಿಗಳಿಗೆ ಹೆಮ್ಮೆಪಡಬಹುದಾಗಿದೆ. ಫಿರೋಜಾಬಾದ್, ಬಳೆಗಳ ನಗರ, ಹಾಗೆಯೇ ಇದು ಹಲವು ಬಗೆಯ ಗಾಜಿನ ಉಪಕರಣಗಳ ಕರಕೌಶಲ್ಯಗಳಿಗೆ ಮುಖ್ಯ ಸ್ಥಳವಾಗಿದೆ. ಇಲ್ಲಿನ ಕಾರ್ಖಾನೆಗಳಲ್ಲಿ ಮಾಡಿದ ಗಾಜಿನಲ್ಲಿ ಕೃತಿಗಳ ಉತ್ಪಾದನೆಯು ಆಶ್ಚರ್ಯ ಪಡುವಂತಹುದಾಗಿದ್ದು, ಇವುಗಳನ್ನು ಪ್ರಪಂಚದಾದ್ಯಂತ ರಫ್ತು ಮಾಡಲಾಗುತ್ತಿದೆ. ಕನೋಜ್ ಪೂರ್ವದಿಂದಲೂ ಸುಗಂಧ ದ್ರವ್ಯ, ಸುವಾಸನೆ,ಮತ್ತು ರೋಸ್ ವಾಟರ್ ಹಾಗೂ ಪರಂಪರೆಯ ತಂಬಾಕುಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಕಾನ್‌ಪುರ್ ಇದರ ಚರ್ಮದ ಕರ ಕುಶಲತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ;ಇಲ್ಲಿ ತಯಾರಿಸಿದ ಚಪ್ಪಲಿಗಳು ಹಾಗೂ ಇನ್ನಿತರ ಚರ್ಮದ ವಸ್ತುಗಳನ್ನು ಹೆಚ್ಚಾಗಿ ಭಾರತದ ಮಾರುಕಟ್ಟೆ ಮತ್ತು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಖುರ್ಜಾ ಇದು ತನ್ನ ಸೆರಾಮಿಕ್ ಕುಡಿಕೆಗಳಿಗೆ ಹೆಸರುವಾಸಿಯಾಗಿದೆ, ಸಂಪೂರ್ಣ ರಾಜ್ಯವು ಇದರ ಮಡಿಕೆಗಳಿಗೆ ಭಾರತವೊಂದೇ ಅಲ್ಲ ಪ್ರಪಂಚದಾದ್ಯಂತ ಕೂಡ ಹೆಸರುವಾಸಿಯಾಗಿದೆ. ರಾಜಧಾನಿ ಲಕ್ನೋ ಇದರ ಬಟ್ಟೆಗಳ ಕುಸುರಿ ಕೆಲಸ ಹಾಗೂ ರೇಷ್ಮೆ ಮತ್ತು ಹತ್ತಿ ಉಡುಪುಗಳ ಮೇಲಿನ ಕಸೂತಿ (ಚಿಕನ್) ಕೆಲಸಕ್ಕೆ ಹೆಗ್ಗಳಿಕೆಗೆ ಅರ್ಹವಾಗಿದೆ. ಭಾದೋಹಿಯು ರತ್ನಗಂಬಳಿಗೆ ಹೆಸರುವಾಸಿಯಾಗಿದೆ ಹಾಗೂ ಪಕ್ಕದಲ್ಲಿರುವ ಡಾಲರ್ ನಗರವೆಂದೂ ಸಹ ಹೆಸರುವಾಸಿಯಾಗಿದೆ ಇದು ರಾಜ್ಯದ ಅತ್ಯಂತ ಆದಾಯವನ್ನು ಉಂಟು ಮಾಡುವಂತಹ ಜಿಲ್ಲೆಯಾಗಿದೆ. ಮುರಾದಾಬಾದ್ ಲೋಹದ ಸರಕು ವಿಶೇಷವಾಗಿ ಮನುಷ್ಯ ಕೃತಿಯ ಹಿತ್ತಳೆ ಸಾಮಾನುಗಳಿಗೆ ಹೆಸರುವಾಸಿಯಾಗಿದೆ. ಪಿಲಿಭಿಟ್ ತನ್ನ ಮರದ-ಕೊಳಲು ಹಾಗೂ ಮರದಲ್ಲಿ ಮಾಡಿದ ಕಾಲಿನ ಚಪ್ಪಲಿಗಳಿಗೆ ಹೆಸರುವಾಸಿಯಾಗಿದೆ(ಖಾದಾನ್). ಇಂತಹ ಕೊಳಲುಗಳನ್ನು ಯುರೋಪ್,ಅಮೇರಿಕಾ ಮತ್ತು ಇನ್ನಿತರ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಸಹರನ್‌ಪುರ್ ದಲ್ಲಿ ತಯಾರಿಸುವಂತಹ ಮರದ ಕೆತ್ತನೆಯ ವಸ್ತುಗಳು ಹೊರದೇಶದಲ್ಲಿ ಮತ್ತು ಭಾರತದೆಲ್ಲೆಡೆ ಹೆಸರುವಾಸಿಯಾಗಿವೆ. ವಾರಣಾಸಿಯು ತನ್ನ ಬನಾರಸ್ ಸೀರೆಗಳು ಮತ್ತು ರೇಷ್ಮೆಗೆ ಹೆಸರುವಾಸಿಯಾಗಿದೆ. ಒಂದು "ಬನಾರಸ್ ಸೀರೆ" ಈ ರಾಜ್ಯದ ಯಾವುದೇ ಮದುವೆಗೆ ಅವಶ್ಯಕವಾದ ಭಾಗವಾಗಿದೆ. ಭಾಷೆ ಮತ್ತು ಸಾಹಿತ್ಯ ಉತ್ತರ ಪ್ರದೇಶ ರಾಜ್ಯದ ಆಡಳಿತ ಭಾಷೆಯು ಹಿಂದಿ ಆಗಿರುವುದರಿಂದ, ಭಾರತದಲ್ಲಿ ಉತ್ತರ ಪ್ರದೇಶವು ಹಿಂದಿ ಭಾಷೆಯ ಕೇಂದ್ರ ಭಾಗವಾಗಿ ಪದೇ ಪದೇ ಉಲ್ಲೇಖಿಸಲ್ಪಡುತ್ತದೆ. 1951ರಲ್ಲಿ ಉತ್ತರ ಪ್ರದೇಶ ರಾಜ್ಯ ಭಾಷಾ ಕಾನೂನು ಕಾಯಿದೆಯ ಪ್ರಕಾರ ಹಿಂದಿ ಮತ್ತು ಉರ್ದು ಇವು ರಾಜ್ಯದ ಆಡಳಿತ ಭಾಷೆಯಾಗಿ ಸ್ಥಾಪಿತಗೊಂಡು ಇದೇ ವಿಷಯವು 1989ರಲ್ಲಿ ತಿದ್ದುಪಡಿ ಹೊಂದಿತು, ಜೊತೆಗೆ ರಾಜ್ಯದ ಸಾಮಾನ್ಯ ಜನತೆ ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ರಾಜ್ಯದ ಮೂಲ ಭಾಷೆಗಳು ಹಿಂದಿ ಭಾಷೆಯ ಉಪ ಭಾಷೆಗಳಾಗಿ ಪರಿಗಣಿಸಲ್ಪಟ್ಟವು. ಭಾಷೆಗಳಿಗೆ ಸಂಬಂಧಪಟ್ಟಂತೆ ಹಿಂದಿ ಭಾಷೆಯು, ಉತ್ತರ ಪ್ರದೇಶ ರಾಜ್ಯದ ಹಿಂದೂ ಆರ್ಯ ಭಾಷೆಗಳ ಪ್ರದೇಶಗಳಾದ ಮಧ್ಯಭಾಗ, ಪೂರ್ವ ಮಧ್ಯಭಾಗ, ಪೂರ್ವ ವಲಯಗಳ ಮೂಲಕ ಹರಡಿದ್ದು ಅಲ್ಲಿನ ಪ್ರಧಾನ ಮೂಲ ಭಾಷೆಗಳಾದ ಭೊಜಪುರಿ, ಅವಧಿ, ಬುಂದೇಲಿ, ಬ್ರಜ್ ಭಾಷಾ, ಕನ್ನೌಜಿ ಮತ್ತು ಒಂದು ಪ್ರತ್ಯೇಕ ವರ್ಗದ ಭಾಷೆಯಾದ ಖರಿಬೋಲಿ ಇವುಗಳ ತಳಹದಿಯ ಮೇಲೆ ಉತ್ತಮ ಗುಣ ಮಟ್ಟದ ಹಿಂದಿ ಮತ್ತು ಉರ್ದು ಭಾಷೆಗಳು ರೂಪುಗೊಂಡಿವೆ. ರಾಜ್ಯದ ನೈಋತ್ಯ ಭಾಗದ ಅಂಚುಗಳಲ್ಲಿ ಮಾತನಾಡಲು ಬಾಘೆಲಿ ಭಾಷೆಯನ್ನು ಬಳಸಲಾಗುತ್ತದೆ. ರಾಜ್ಯ ಸರಕಾರವು ಸಾಂಸ್ಕೃತಿಕ ಉತ್ಸವಗಳ ಸಂದರ್ಭಗಳಲ್ಲಿ ಇಲ್ಲಿಯ ಪ್ರಾಂತ ಭಾಷೆಗಳನ್ನು ಪ್ರೋತ್ಸಾಹಿಸಿ ಅವುಗಳ ಬಗ್ಗೆ ತಿಳಿವಳಿಕೆನೀಡಲು ಪ್ರಯತ್ನಿಸುತ್ತದೆ, ಆದರೆ ಇದು ನಗಣ್ಯವಾಗಿದೆ. ಇದರ ಹೊರತಾಗಿ ಮಧ್ಯಕಾಲೀನ ಯುಗದ 2 ಮುಖ್ಯ ಭಾಷೆಗಳಾದ ಬ್ರಜ್ ಭಾಷಾ ಮತ್ತು ಅವಧಿ ಇವುಗಳನ್ನು ಹಿಂದಿ ಭಾಷೆಯ ಅಡಿಯಲ್ಲಿ ಸೇರಿಸಿದ ಹಾಗೆ ಪರಿಗಣಿಸಲಾಗುತ್ತಿದೆ. ಒಂದು ಕಾಲದಲ್ಲಿ ಈ ಎರಡು ಪ್ರಾಂತ ಭಾಷೆಗಳು ಆ ಪ್ರದೇಶದ ಸಾಹಿತ್ಯದ ಮುಖ್ಯ ಮಾಧ್ಯಮಗಳಾಗಿದ್ದವು ಆದರೆ ಈ ಭಾಷೆಗಳ ಅಥವಾ ಇತರ ಪ್ರಾಂತ ಭಾಷೆಗಳ ಪ್ರಗತಿ ಗಣನೀಯವಾಗಿಲ್ಲ. ಸ್ಥಳೀಯ ಭಾಷೆಗಳನ್ನು ಮಾತನಾಡುವವರ ಅಂದಾಜು ಮಾಡುವುದು ಕಷ್ಟಕರ. ಏಕೆಂದರೆ ಹಿಂದಿ ಭಾಷೆಯು ಸರ್ಕಾರ ಮತ್ತು ಶಿಕ್ಶಣ ವ್ಯವಸ್ಥೆಯಲ್ಲಿ ಬಳಕೆಯಾಗುವ ಭಾಷೆಯಾಗಿದ್ದು ನಗರ ಪ್ರದೇಶದ ವಿಧ್ಯಾಭ್ಯಾಸ ಹೊಂದಿದ ಹೆಚ್ಚಿನ ಸಂಖ್ಯೆಯ ಜನರು ಹಿಂದಿಯನ್ನು ತಮ್ಮ ಮಾತೃಭಾಷೆ ಎಂದು ಪರಿಗಣಿಸುತ್ತಾರೆ. ಅದೇ ಹಳ್ಳಿಗಳಲ್ಲಿನ ಜನರು ಭಾಷಾ ಜ್ಞಾನದ ಕೊರತೆಯಿಂದಾಗಿ ಹಿಂದಿ ಭಾಷೆಯನ್ನು ತಮ್ಮ ಭಾಷೆಯ ಮತ್ತು ಒಟ್ಟು ವರ್ಗದ ವಿಶಿಷ್ಟತೆಯನ್ನು ಸೂಚಿಸುವುದಕ್ಕಾಗಿ ಬಳಸುತ್ತಾರೆ. ಇತ್ತೀಚೆಗೆ ಭೊಜಪುರಿ ಭಾಷೆಯು, ಭಾಷಾಧ್ಯಯನದ ಸಮರ್ಥನೆಯನ್ನು ಕಂಡಿತು ಮತ್ತು ಅದೇ ವೇಳೆ ಬುಂದೆಲಿಯ ಬಗ್ಗೆ ಅಂತಹ ಕ್ರಿಯಾಚಟುವಟಿಕೆಯೇನೂ ನಡೆಯಲಿಲ್ಲ. ಮಾಧ್ಯಮ ಉತ್ತರ ಪ್ರದೇಶವು ರಾಷ್ಟ್ರೀಯ ಮಾಧ್ಯಮ ವ್ಯವಸ್ಥೆಯಲ್ಲಿ ಉತ್ತಮವಾಗಿ ಒಂದುಗೂಡಿದೆ. ಬಾನುಲಿಯ ಪ್ರಸಾರ :- ಬಾನುಲಿಯ ಪ್ರಸಾರವು 1936ರಲ್ಲಿ ಆಲ್ ಇಂಡಿಯ ರೇಡಿಯೊ ಮುಖಾಂತರ ಪ್ರಾರಂಭವಾಯಿತು. ( AIR ಎಂದು ಸಂಕ್ಷಿಪ್ತಗೊಳಿಸಲಾಗಿದೆ ) ಈಗ ಅಧಿಕೃತವಾಗಿ ಆಕಾಶವಾಣಿ ಎಂದು ಗುರುತಿಸಲ್ಪಡುತ್ತಿದೆ ಇಂದು ಇದು ದೂರದರ್ಶನದ ಸಹೋದರಿ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ, ರಾಷ್ತ್ರೀಯ ದೂರದರ್ಶನ ಪ್ರಸಾರ ಮತ್ತು ಆಲ್ ಇಂಡಿಯ ರೇಡಿಯೊ ಇವೆರಡೂ ಪ್ರಸಾರ ಭಾರತಿಯ ಶಾಖೆಗಳು. (ಭಾರತೀಯ ಪ್ರಸರಣ ನಿಗಮ) ಭಾರತ ಸರ್ಕಾರದ, ಸಚಿವ ಸಂಪುಟದ ಮಾಹಿತಿ ಮತ್ತು ಪ್ರಸರಣ ಖಾತೆಯ ಸ್ವಾಯುತ್ತ ಅಧಿಕಾರದ ನಿಗಮವಾಗಿದೆ. ಬೇರೆ ಬೇರೆ ಭಾಷೆಗಳ ಹೇಳಿಕೆ ರೂಪದ ಪ್ರಸಾರವು ಆಕಾಶವಾಣಿಯ ವಿವಿಧ ಕೇಂದ್ರಗಳ ಮೂಲಕ ಪ್ರಸಾರವಾಗುತ್ತದೆ. ದೂರದರ್ಶನ:- ಭಾರತದಲ್ಲಿ ದೂರದರ್ಶನದ ಕಾರ್ಯಕ್ರಮ ಪ್ರಸಾರವು ೧1959ರಲ್ಲಿ ಪರೀಕ್ಷೆಯ ಜೊತೆಗೆ ಶಿಕ್ಷಣದ ಪ್ರಸಾರ ಕಾರ್ಯಕ್ರಮದೊಂದಿಗೆ ನವ ದೆಹಲಿಯಲ್ಲಿ ಪ್ರಾರಂಭವಾಯಿತು. ದೂರದರ್ಶನವು ಕಿರುತೆರೆಯಲ್ಲಿ ಕಪ್ಪು ಬಿಳುಪಿನ ಕಾರ್ಯಕ್ರಮಗಳನ್ನು 1970ರಲ್ಲಿ ಪ್ರಾರಂಭಿಸಿತು ಮತ್ತು 1982ರಲ್ಲಿ ಬಣ್ಣದ ಕಿರುತೆರೆಯಾಗಿ ರೂಪಾಂತರಗೊಂಡಿತು. ಇಂದು ಹಲವಾರು ಖಾಸಗಿ ದೂರದರ್ಶನ ಕೇಂದ್ರಗಳು ರಾಷ್ಟೀಯ ಮಟ್ಟದಲ್ಲಿ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ ಮತ್ತು ಮಾಧ್ಯಮದ ಸಕ್ರಿಯ ಹಾಗೂ ಪ್ರಭಾವಶಾಲಿ ಅಂಗಗಳಾಗಿವೆ. ದೂರದರ್ಶನದ ಕಾರ್ಯಕ್ರಮಗಳು ಎಲ್ಲೆಡೆ ತಲುಪುವಲ್ಲಿ, ಉಪಗ್ರಹದ ಮೂಲಕ ಪ್ರಸಾರವು ಕ್ರಾಂತಿಕಾರಿ ಬೆಳವಣಿಗೆಯನ್ನು ತಂದಿದೆ. ದೂರದರ್ಶನದಲ್ಲಿ ಪ್ರಸಾರವಾಗುವ ಪ್ರಮುಖ ಕ್ರಿಕೆಟ್ ಪಂದ್ಯಗಳು ಅತಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸುವುದಲ್ಲದೆ ರಸ್ತೆ ಬದಿಯಲ್ಲಿ ಇರಿಸಿದ ದೂರದರ್ಶನವು ಕ್ರಿಕೆಟ್ ಪ್ರೇಮಿಗಳ ಜನಸ್ತೋಮವನ್ನು ಆಕರ್ಷಿಸುತ್ತದೆ. ವೃತ್ತ ಪತ್ರಿಕೆ ಮತ್ತು ನಿಯತಕಾಲಿಕ ಮುಂತಾದವುಗಳು. ಒಂದು ನಿರ್ದಿಷ್ಟ ಸಂಖ್ಯೆಯ ನಿಯತಕಾಲಿಕಗಳು ಹಿಂದಿ, ಆಂಗ್ಲ ಮತ್ತು ಉರ್ದುವಿನಲ್ಲಿ ಪ್ರಕಾಶಿತಗೊಂಡಿವೆ ಪತ್ರಿಕೋದ್ಯಮದ ಬೆಳವಣಿಗೆಯು ಇಲ್ಲಿ ವಾಸಿಸಲು ಆರಂಭಿಸಿದ ಬ್ರಿಟನ್ ದೇಶದವರ ಕಾರಣದಿಂದ ಉಂಟಾದಷ್ಟೇ ಭಾರತೀಯ ಸ್ವಾತಂತ್ರ್ಯ ಚಳುವಳಿಯಿಂದಾಗಿ ಕೂಡ ಆಯಿತು ಮತ್ತು ಇತರ ವಾರ್ತೆಗಳ ಹಾಗೂ ಸಾಮಾಜಿಕ-ಧಾರ್ಮಿಕ ಸಂಸ್ಕರಣಗಳ ಪ್ರಚಾರ ಮಾಡಲು ಕೂಡ ಈ ಬೆಳವಣಿಗೆ ಅವಶ್ಯಕವಾಗಿತ್ತು. ದ ಪೈಯೋನಿಯರ್ ಪತ್ರಿಕೆಯನ್ನು ಅಲ್ಹಾಬಾದ್‌ನಲ್ಲಿ 1865ನಲ್ಲಿ ಜೋರ್ಜ್ ಆಲೆನ್ ಎಂಬ ಆಂಗ್ಲ ವ್ಯಕ್ತಿ ಸ್ಥಾಪಿಸಿದನು. 1865ಯಿಂದ 1869ರ ವರಗೆ ಇದು ವಾರದಲ್ಲಿ ಮೂರು ಸಲ ಪ್ರಕಟವಾಗುತಿತ್ತು ಮತ್ತು ನಂತರ ದೈನಿಕವಾಗಿ ಪ್ರಕಟಗೊಳ್ಳಲಾರಂಭಿಸಿತು. 1866ರಲ್ಲಿ ಪೈಯೋನಿಯರ್ ಮೇಲ್ ಎಂಬ ಬಹುತೇಕವಾಗಿ ಜಾಹಿರಾತುಗಳನ್ನುಳ್ಳ ಒಂದು ಪುರವಣಿಯನ್ನು ಇದಕ್ಕೆ ಸೇರಿಸಲಾಗಿತ್ತು. ಅಲ್ಹಾಬಾದ್‌ನಿಂದಲೇ ದ ನ್ಯಾಶನಲ್ ಹೆರಾಲ್ಡ್ ಎಂಬ ಒಂದು ರಾಷ್ಟ್ರೀಯತಾವಾದಿ ವಾರ್ತಾಪತ್ರಿಕೆ ಪ್ರಕಾಶನಗೊಳ್ಳಲು ಆರಂಭಿಸಿತು, ನೆಹರುರವರ ಹಾಗೂ ಸಂಪಾದಕರಾಗಿ M.C. ರಾವು ಇವರ ಪ್ರೋತ್ಸಾಹದೊಂದಿಗೆ ಬ್ರಿಟಿಷರ ಕಾಲದಲ್ಲಿ ಆರಂಭವಾಯಿತು. ಸಿದ್ದಕಿ ಎಂಬ ಉರ್ದು ಸಾಪ್ತಾಹಿಕ ಇದೆ ಕಾಲದಲ್ಲಿ ಹೆಚ್ಚು ಗೌರವಿಸಲಾದ ಬುದ್ಧಿಜೀವಿ ಮೌಲಾನ ಅಬ್ದುಲ್ ಮಾಜಿದ್ ದರ್ಯಾಬಾದಿ ಆರಂಭಿಸಿದರು, ಇದರ ಉದ್ದೇಶ ಹಿಂದೂ-ಇಸ್ಲಮ್ ಸಮಾಜವನ್ನು ಸಂಸ್ಕರಣಿಸುವುದಾಗಿತ್ತು. ಪ್ರಸ್ತುತ, ಎಲ್ಲಾ ಪ್ರಮುಖ ರಾಷ್ಟ್ರೀಯ ಮಟ್ಟದ ದೈನಿಕಗಳೆ ತಮ್ಮ ’ನಗರದ ಮುದ್ರಣಗಳನ್ನ’ ರಾಜ್ಯದ ಹಲವು ಪ್ರಮುಖ ನಗರಗಳಿಂದಲೇ ಪ್ರಕಾಶಿಸಲಾಗುತ್ತದೆ. ಈ ರಾಜ್ಯದ ತಮ್ಮ ’ಸ್ಥಳಿಯ’ ಪ್ರಕಾಶನಗಳು - ದೈನಿಕಗಳು/ಸಾಪ್ತಾಹಿಕಗಳು/ಮಾಸಿಕಗಳು ಹಲವಾರು ಇದ್ದು ಪ್ರಾಯಶಃ ಎಲ್ಲಾ ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿವೆ. ಕೆಲವು ಹಿಂದಿ ಭಾಷೆಯ ದೈನಿಕಗಳು, ಉದಾ. ಅಮರ ಉಜಾಲ ಹಾಗೂ ರಾಜಕೀಯದ ಬಲಪಂಥದ ದೈನಿಕ ಜಾಗರಣ್ ವ್ಯಾಪಕ ಪ್ರಸಾರ ಹೊಂದಿದ್ದು, ಅವು ಸ್ಥಳಿಯ ಮುದ್ರಣಗಳನ್ನು ಸಹಾ ಪ್ರಮುಖ ನಗರಗಳಲ್ಲಿ ಹೊಂದಿದ್ದವು. ನ್ಯಾಷನಲ್ ಹೆರಾಲ್ಡ್ ಈಗ ಉರ್ದು ಆವೃತಿಯನ್ನು ಪ್ರಕಾಶಿಸುತ್ತದೆ. ಇನ್ನು ಕೆಳ ಮಟ್ಟದಲ್ಲಿ, ಸ್ಥಳಿಯವಾಗಿ ಪ್ರಕಾಶಿತವಾದ ವಾರ್ತಾ ಪತ್ರಿಕೆಗಳು ಮತ್ತು ಸಾಹಿತ್ಯಕ ಸಾಪ್ತಾಹಿಕಗಳು ಹಾಗೂ ಮಾಸಿಕಗಳು ಅತಿ ಹೆಚ್ಚು ಸಂಖ್ಯೆಗಳಲ್ಲಿವೆ. ಶ್ರವ್ಯ-ದೃಷ್ಟಿಗೋಚರ ಉತ್ಪನ್ನಗಳ ನಿರ್ಮಾಣ : ಬೆಳ್ಳಿ ತೆರೆಗೆ ಚಲನಚಿತ್ರದ ಬಾಲಿವುಡ್‌ ಮಟ್ಟದ ಉತ್ಪನ್ನ ಗಳು ಅಥವಾ ಉತ್ತಮ ದರ್ಜೆಯ ಮಾಹಿತಿಯುಳ್ಳ ಚಿಕ್ಕ ಸಾಕ್ಷ್ಯಚಿತ್ರಗಳು ಹೆಚ್ಚಾಗಿದ್ದರೂ ಸಹ ಉತ್ತರ ಪ್ರದೇಶದಲ್ಲಿ ಇವುಗಳ ಬೆಳವಣಿಗೆ ಇಲ್ಲ. ಹೇಗಾದರೂ, ಈ ರಾಜ್ಯದಿಮ್ದ ಕಲಾಕಾರರು ಹಾಗೂ ಬರಹಗಾರರು ಸತತವಾಗಿ ಭಾರತೀಯ ಚಲನಚಿತ್ರ ಉದ್ಯಮ ಕೇಂದ್ರಗಳಲ್ಲಿ ತಮ್ಮೆ ಪ್ರತಿಭೆಯ ನೆರವನ್ನು ನೀಡುತ್ತಲೇ ಬಂದಿದ್ದಾರೆ, ಗೀತೆ ಹಾಗೂ ಕಥೆ ಬರಹಗಾರರಾಗಿ, ರಚನೆಕಾರರು ಹಾಗೂ ಸಂಗೀತಗಾರರಾಗಿ, ಗೀತಕಾರರಾಗಿ, ನಟರಾಗಿ, ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಲೇ ಇರುತ್ತಾರೆ. ನೃತ್ಯ ಮತ್ತು ಸಂಗೀತ ಅತ್ಯಂತ ಪುರಾತನವಾದ ನೃತ್ಯ ಮತ್ತು ಸಂಗೀತಗಳಿಗೆ ಈ ರಾಜ್ಯವು ತಾಯಿ ನಾಡಾಗಿದೆ. ಆಗಿನ ಗುಪ್ತರುಮತ್ತು ಹರ್ಷವರ್ಧನರ ಕಾಲದಲ್ಲಿ, ಉತ್ತರಪ್ರದೇಶವು ಸಂಗೀತದ ನವೀನತೆಗೆ ಪ್ರಮುಖ ಕೇಂದ್ರವಾಗಿತ್ತು. ಹಿಂದೂಸ್ತಾನಿ ಶ್ರೇಷ್ಠ ಗಾಯನದಲ್ಲಿ ವೀರಾಗ್ರೇಸರಾಗಿದ್ದ ಸ್ವಾಮಿ ಹರಿದಾಸರು ಒಬ್ಬ ಪ್ರಖ್ಯಾತ ಸಂತ-ಸಂಗೀತಗಾರರು. ಮೊಘಲ್ ಸಾಮ್ರಾಜ್ಯದ ಅಕ್ಬರನ ಆಸ್ಥಾನದಲ್ಲಿ ,ಸ್ವಾಮಿ ಹರಿದಾಸರ ಶಿಷ್ಯನಾಗಿದ್ದ ತಾನ್‌ಸೇನನು ಪ್ರಖ್ಯಾತ ಸಂಗೀತಗಾರನಾಗಿದ್ದನು. ತಾನ್‌ಸೇನನು ಹಾಡುತ್ತಿದ್ದ ರಾಗಗಳು ಅಧಿಕ ಸಾಮರ್ಥ್ಯವನ್ನು ಹೊಂದಿವೆ ಎಂದು ನಂಬಲಾಗಿತ್ತು. ಯಾವಾಗ ಆತ ಅವುಗಳನ್ನು ಹಾಡುತ್ತಿದ್ದ, ಆಗ ಮಳೆ ಬರುತ್ತಿತ್ತು ಅಥವಾ ದೀಪಗಳು ಬೆಳಗುತ್ತಿದ್ದವು. ಕಥಕ್ ಒಂದು ನಮೂನೆಯ ಶ್ರೇಷ್ಠ ನೃತ್ಯ, ಇದನ್ನು ಸಂಪೂರ್ಣ ದೇಹದೊಂದಿಗೆ ಪಾದ ಮತ್ತು ತೋಳುಗಳನ್ನು ಸಮಸ್ಥಾನಗಳಲ್ಲಿ ಚಲಿಸುವರು. ಉತ್ತರ ಪ್ರದೇಶದಲ್ಲಿ ಇದು ಬೆಳೆದು ಅಭಿವೃದ್ಧಿಯನ್ನು ಹೊಂದಿದೆ. ಕೊನೆಯ ಅವಧ್‌ನ ನವಾಬನಾದ ವಾಜೀದ್ ಆಲಿ ಷಾ ಈ ಕಲೆಯ ಒಬ್ಬ ಪ್ರಖ್ಯಾತ ಆಶ್ರಯದಾತನು ಹಾಗೂ ಕಥಕ್ ನೃತ್ಯದಲ್ಲಿ ಭಾವೋದ್ದೀಪ್ತ ಪಟುವಾಗಿದ್ದನು. ಇಂದು,ಈ ನೃತ್ಯ ಮಾದರಿಯ ಲಕ್ನೋ ಘರಾನಾ ಹಾಗೂ ಬನಾರಸ್ ಘರಾನಾ ಎಂಬ ಹೆಸರು ಎರಡು ಪ್ರಖ್ಯಾತ ಶಾಲೆಗಳಿಗೆ ರಾಜ್ಯವು ತವರಾಗಿವೆ. ಇಂದಿನ ಆಧುನಿಕ ಕಾಲದಲ್ಲಿ, ಉತ್ತರ ಪ್ರದೇಶವು ಸಂಗೀತ ಇತಿಹಾಸಕಾರರಾದ ಅನೂಪ್ ಜಲೋಟಾ, ಬಾಬಾ ಸೈಗಲ್, ಗಿರಿಜಾ ದೇವಿ, ಗೋಪಾಲ್ ಶಂಕರ್ ಮಿಶ್ರ, ಹರಿ ಪ್ರಸಾದ್ ಚೌರಾಸಿಯಾ, ಕಿಶನ್ ಮಾಹಾರಾಜ್, ನೌಷಾಧ್ ಆಲಿ, ಪಂಡಿತ್ ರವಿಶಂಕರ್, ಶುಭಾ ಮುದ್‌ಗಲ್, ಸಿದ್ದೇಶ್ವರಿ ದೇವಿ, ತಲತ್ ಮಹಾಮೂದ್, ಉಸ್ತಾದ್ ಬಿಸ್‌ಮಿಲ್ಹಾ ಖಾನ್ ಮುಂತಾದವರನ್ನು ಜಗತ್ತಿಗೆ ಕೊಟ್ಟಿದೆ. ಐತಿಹಾಸಿಕ ಗಝಲ್ ಗಾಯಕರಾದ ಬೇಗಮ್ ಆಖ್ತರ್‌ರವರು ಉತ್ತರ ಪ್ರದೇಶಕ್ಕೆ ಸೇರಿದವರಾಗಿವರು. ಗಝಲ್ ಗಾಯನದ ಪ್ರಕಾರವನ್ನು ಅವರು ಅಚ್ಚರಿಪಡಿಸುವಷ್ಟು ಎತ್ತರಕ್ಕೆ ಕೊಂಡೊಯ್ದಿದ್ದರು. " ಏ ಮೊಹಬತ್ ತೇರೆ ಅಂಜಾಮ್ ಪೆ ರೋನಾ ಆಯಾ" ಎಂಬ ಇವರ ಒಂದು ಗಾಯನವು ಎಲ್ಲಾ ಕಾಲದಲ್ಲಿಯೂ ಕೇಳುವಂತಹ ಅತ್ಯುತ್ತಮ ಗಾಯನವಾಗಿದೆ. ಹಾಗೂ ಇದು, ಆಕಸ್ಮಿಕವಾಗಿ, ಬ್ರಿಟೀಷ್ ಪಾಪ್ ಇತಿಹಾಸದ ಕ್ಲಿಫ್ ರಿಚರ್ಡ್‌ನ ಹುಟ್ಟಿದ ಸ್ಥಳವಾಗಿದೆ. ಪ್ರಖ್ಯಾತ ಗಾಯಕ ಪಂಡಿತ್ ವಿಷ್ಣು ನಾರಯಣ ಭಟ್‌ಕಾಂಡೆಯವರ ಹೆಸರನ್ನು ಲಕ್ನೋದಲ್ಲಿರುವ ಭಟ್‌ಕಾಂಡೆ ಸಂಗೀತ ವಿಶ್ವವಿದ್ಯಾಲಯಕ್ಕೆ ಇಡಲಾಯಿತು. ಪ್ರೀತಿಯನ್ನು ಪೂಜಿಸುವ ಯಾವುದೇ ರಾಧ ಮತ್ತು ಶ್ರೀ ಕೃಷ್ಣರ ಆಚರಣೆಗಳಲ್ಲಿ ರಾಸಿಯಾ (ಬ್ರಿಜ್‌ನಲ್ಲಿ ತಿಳಿದ ಮತ್ತು ವಿಶೇಷವಾಗಿ ಪ್ರಖ್ಯಾತಿಯಾದ) ಎಂಬ ಹಾಡುಗಳು ಈ ಪ್ರದೇಶದ ಜಾನಪದ ಸಂಸ್ಕೃತಿಯಲ್ಲಿ ಸೇರಿಹೋಗಿವೆ. ಇಂತಹ ಹಾಡುಗಳನ್ನು ಬಂಬ್ ಎಂದು ತಿಳಿದಿರುವ ದೊಡ್ಡ ಮೃದಂಗಗಳ ಸಂಗಡದೊಂದಿಗೆ ಮತ್ತು ಹಲವು ಹಬ್ಬಗಳಲ್ಲಿ ಪ್ರದರ್ಶಿಸುವರು. ಇತರ ಜಾನಪದ ನೃತ್ಯಗಳು ಅಠವಾ ಜಾನಪದ ರಂಗಭೂಮಿ ವಿಧಗಳು ಸೇರಿಕೊಂಡಿವೆ: ಖಯಾಲ್ *ನಕ್ಯಾಲ್-(ಅನುಕರಣೆ)ನೌಟಂಕಿ *ಖವ್ವಾಲಿ ರಾಮಲೀಲಾ,ರಾಮಾಯಣದ ಸಂಪೂರ್ಣ ಅಭಿನಯಗಳು *ರಾಸಲೀಲಾ *ಸ್ವಾಂಗ್‌ಗಳಲ್ಲಿ ಸೇರಿಕೊಂಡಿವೆ. ಖುಷಿನಗರ್‌ನ ಫಝೀಲಾನಗರ್‌ದಲ್ಲಿರುವ ಜೋಗಿಯಾ ಜಾನುಬಿ ಪಟ್ಟಿಯ ಲೋಕ್‌ರಂಗ್ ಸಾಂಸ್ಕೃತಿಕ ಸಮಿತಿಯು ಅತ್ಯಂತ ಪ್ರಸಿದ್ಧವಾದ ಸಂಘಟನೆಯಾಗಿದ್ದು, ಇದು ಜನಪದ ಗೀತೆಗಳು, ಜನಪದ ಸಂಗೀತಗಾರರು ಮತ್ತು ಜನಪದ ಸಂಸ್ಕೃತಿಯ ಕುರಿತು ಸಂಶೋಧನೆ ಮಾಡುತ್ತಿದೆ. ಪ್ರತೀವರ್ಷ ಮೇ ತಿಂಗಳಿನಲ್ಲಿ ಈ ಸಮಿತಿಯು "ಲೋಕ್‌ರಂಗ್" ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಇದರಲ್ಲಿ ಸುಮಾರು 150ಕ್ಕಿಂತ ಹೆಚ್ಚು ಜನ ಕಲಾವಿದರು ಮತ್ತು ಲೇಖಕರು ಭಾಗವಹಿಸುತ್ತಾರೆ. ಆಹಾರ ಪದ್ಧತಿ ಉತ್ತರ ಪ್ರದೇಶ ಅತ್ಯುತ್ತಮ ಸಸ್ಯಾಹಾರ ಮತ್ತು ಮಾಂಸಾಹಾರ ಆಹಾರವನ್ನು ತಯಾರಿಸುವಲ್ಲಿ ಶ್ರೀಮಂತ ಆಚಾರವನ್ನು ಹೊಂದಿದೆ. ಸಿಹಿತಿಂಡಿಗಳು ಸಾಂಪ್ರದಾಯಿಕ ವಿಶೇಷ ಸಂದರ್ಭಗಳಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಕ್ರಮಬದ್ಧವಾದ ಸಸ್ಯಾಹಾರ ಊಟವು ಚಪಾತಿ, ರೋಟಿಸ್ (ಫ್ಲಾಟ್‌ಬ್ರೆಡ್) ಮತ್ತು/ಅಥವಾ ಪೂರಿ (ಊದಿದ ಫ್ಲಾಟ್‌ಬ್ರೆಡ್‌ಗಳನ್ನು ಹೆಚ್ಚು ಕರಿದಿರುವ), ದಾಲ್ (ಗಟ್ಟಿ ಲೆಂಟಿಲ್ ಬೀಜದ ಸೂಪ್), ಅನ್ನ(ಬೇಯಿಸಿದ ಬಿಳಿ ಅಕ್ಕಿ), ತರಕಾರಿ ಕರ್ರಿಗಳು (ಒಂದು ಅಥವಾ ಹೆಚ್ಚು ಒಣಗಿದ/ಕರಿದ ಮತ್ತು ಕಡಿಮೆ-ದ್ರವಸ್ಥಿತಿಯ ಕರ್ರಿ), ಮೊಸರು, ಉಪ್ಪಿನಕಾಯಿಗಳು, ಅಪ್ಪಳ (ತೆಳು ಮಸಾಲ ಕ್ರಾಕರ್ಸ್) ಮತ್ತು ವಿವಿಧ ಸಿಹಿತಿಂಡಿಗಳನ್ನು ಒಳಗೊಂಡಿರುತ್ತದೆ. ಇದನ್ನು ಸಾಮಾನ್ಯವಾಗಿ ಲೋಹದ ಪಾತ್ರೆಗಳಲ್ಲಿ ಬಳಸಲಾಗುತ್ತದೆ ಮತ್ತು ಚಮಚವನ್ನು ಬಳಸದೆ ಬರಿದಾದ ನೆಲದಲ್ಲಿ ಕುಳಿತು ಸಾಂಪ್ರದಾಯಿಕವಾಗಿ ತಿನ್ನಲಾಗುತ್ತದೆ. ಸಂಪ್ರದಾಯಿಕ ಶೈಲಿಯಲ್ಲಿ ದೊಡ್ಡ ಸಮಾರಂಭವನ್ನು ಏರ್ಪಡಿಸಿದ್ದಾಗ, ಬಳಸಿ ಬೀಸಾಡಬಹುದಾದ ಸಮತಟ್ಟಾದ ತಟ್ಟೆಗಳಲ್ಲಿಯೂ (’ಪಟ್ಟಾಲ್’ ಎಂದು ಕರೆಯುವ) ಸಹ ಆಹಾರವನ್ನು ಬಡಿಸಬಹುದು, ಅವುಗಳನ್ನು ಕೆಲವು ಮರಗಳ ಅಗಲವಾದ ಎಲೆಗಳನ್ನು ಬಳಸಿ ಹೆಣೆದು ತಯಾರಿಸಲಾಗಿದೆ. ಮಾಂಸಾಹಾರ ಊಟವು ಅನೇಕ ವಿವಿಧ ಮಾಂಸ ಅಥವಾ ಪ್ರಾಂತ್ಯದಲ್ಲಿ ಉತ್ಪತ್ತಿ ಮಾಡಿದ ಅನ್ನ ತಯಾರಿಕೆಗಳನ್ನು ಒಳಗೊಂಡಿರುತ್ತದೆ ಮತ್ತು ಅದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ಮೊಘಲೈ ಆಹಾರ ಪದ್ಧತಿ ಎಂದು ಚಿರಪರಿಚಿತ; ಅವುಗಳಲ್ಲಿ ಕೆಲವು: ಕೆಬಾಬ್, ಕುಫ್ತಾ, ಕೊರ್ಮ, ಕೀಮಾ, ಪುಲಾವ್, ಬಿರಿಯಾನಿ, ಪ್ರೊಥಾಸ್ (ಸಾದಾ ಅಥವಾ ಸ್ಟಫ್ಡ್ ), ಹಲ್ವಾ, ಫಿರ್ನಿ ಇತ್ಯಾದಿ. ಜೊತೆಗೆ ಹೆಚ್ಚಿನ ಸಸ್ಯಹಾರಿ ತಿಂಡಿಗಳ ಆಯ್ಕೆಯನ್ನು ಆಹಾರ ಔತಣದ ನಡುವೆ ನೀಡಬಹುದು. ಸಂಪ್ರದಾಯಬದ್ಧವಾಗಿ, ಆಹಾರವನ್ನು ಲೋಹದ ಪಾತ್ರೆ ಅಥವಾ ಕುಂಬಾರಿಕೆಯ ಮಣ್ಣಿನ ಪಾತ್ರೆಗಳಲ್ಲಿ ಬಳಸಲಾಗುತ್ತದೆ, ಬಟ್ಟೆ-ಹಾಸಿದ ಅಥವಾ ಕಾರ್ಪೆಟ್‌ನಂತೆ ನೆಲವನ್ನು ಆವರಿಸಿದ ಹಾಸಿರುವ ಬಟ್ಟೆ ಮೇಲೆ ಕುಳಿತು ನೇರವಾಗಿ ಕೈಗಳು ಅಥವಾ (ಕೆಲವು ಸಂದರ್ಭ) ಚಮಚಗಳನ್ನು ಬಳಸಿ ಊಟ ಮಾಡಲಾಗುತ್ತದೆ. ಅನೇಕ ಆಧುನಿಕ ಕುಟುಂಬಗಳಲ್ಲಿ, ಪಶ್ಚಿಮಾತ್ಯ ಟೇಬಲ್‌ ಸರಕುಗಳ ಮತ್ತು ಊಟ ಮಾಡುವ ಟೇಬಲ್ ಹಾಗೂ ಕುರ್ಚಿಗಳ ಬಳಕೆಯು ಸಂಪ್ರದಾಯದ-ನಡವಳಿಕೆಯಾಗಿದೆ ಮತ್ತು ಪಾಶ್ಚಿಮಾತ್ಯ ತಿಂಡಿಗಳು ಸಹ ಇದರಲ್ಲಿ ಸೇರಿದೆ. ಉಡುಪು ಉತ್ತರ ಪ್ರದೇಶದ ಜನರು ವೈವಿದ್ಯಮಯ ಉಡುಪುಗಳನ್ನು ಧರಿಸುತ್ತಾರೆ. ಆದ್ದರಿಂದ ಸಾರ್ವಜನಿಕ ನೋಟವು ಯಾವಾಗಲೂ ಅನೇಕ ವಿವಿಧ ಉಡುಪುಗಳು ಮತ್ತು ಬಣ್ಣಗಳ ಪ್ರದರ್ಶನವಾಗಿರುತ್ತದೆ. ಅಲಂಕರಿಸಿದ ಉಡುಗೆಗಳು ಸೇರಿದಂತೆ ಸಂಪ್ರದಾಯ ಶೈಲಿಗಳ ಉಡುಪುಗಳಿವೆ, ಅವುಗಳೆಂದರೆ ಮಹಿಳೆಯರಿಗೆ ಸೀರೆ ಮತ್ತು ಪುರುಷರಿಗೆ ಧೋತಿ ಅಥವಾ ಲುಂಗಿ ಮತ್ತು ಹೊಲಿದ ಉಡುಗೆಗಳಾದ ಮಹಿಳೆಯರಿಗೆ ಸಲ್ವಾರ್ ಕಮೀಜ್ ಮತ್ತು ಪುರುಷರಿಗೆ ಕುರ್ತಾ-ಪೈಜಾಮ. ಯುರೋಪಿಯಾನ್-ಶೈಲಿಯ ಟ್ರೌಸರ್ಸ್ ಮತ್ತು ಶರ್ಟ್‌ಗಳು ಸಹ ವಿದ್ಯಾವಂತ ಪುರುಷರಿಗೆ ಸಾಮಾನ್ಯವಾಗಿವೆ. ಉಡುಗೆಯ ಬಟ್ಟೆಯನ್ನು ಹವಾಮಾನದ ಅಗತ್ಯತೆಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ; ಆದ್ದರಿಂದ ಹತ್ತಿಯಿಂದ ನೇಯ್ದ ಬಟ್ಟೆಗಳು ಮತ್ತು ಕಾಟನ್-ಸಿಂಥೆಟಿಕ್ ಮಿಶ್ರ ಬಟ್ಟೆಗಳು ಬೇಸಿಗೆಯಲ್ಲಿ ಸಾಮಾನ್ಯವಾಗಿವೆ. ಉಣ್ಣೆ ಅಥವಾ ಸಿಂಥೆಟಿಕ್ ಉಣ್ಣೆಯಿಂದ ತಯಾರಿಸಿದ ಬೆಚ್ಚಗಿನ ಬಟ್ಟೆಗಳು ಚಳಿಗಾಲದಲ್ಲಿ ಅಗತ್ಯವಾಗುತ್ತವೆ, ವಿಶೇಷವಾಗಿ ಅತ್ಯುಚ್ಚ್ರಾಯ ಸ್ಥಿತಿಯ ಚಳಿಗಾಲದಲ್ಲಿ ಸ್ವೆಟರ್, ಜಾಕೆಟ್ ಮತ್ತು/ಅಥವಾ ಕೋಟ್ ಅನ್ನು ಧರಿಸುತ್ತಾರೆ. ಹಬ್ಬಗಳು ಧಾರ್ಮಿಕ ಆಚರಣೆಗಳು ನಿತ್ಯ ಜೀವನದ ಸಮಗ್ರ ಭಾಗವಾಗಿವೆ ಮತ್ತು ಅವು ಭಾರತದ ಉಳಿದ ಭಾಗಗಳಲ್ಲಿಯೂ ಜನಪ್ರಿಯ ಸಾರ್ವಜನಿಕ ಕಾರ್ಯಗಳಾಗಿವೆ. ಆದ್ದರಿಂದ ಯಾವುದೇ ಆಶ್ಚರ್ಯವಿಲ್ಲದೆ, ಅನೇಕ ಹಬ್ಬಗಳು ಹುಟ್ಟಿನಿಂದಲೇ ಧಾರ್ಮಿಕವಾಗಿವೆ, ಆದರೂ ಅನೇಕರು ಜಾತಿ ಮತ್ತು ನಂಬಿಕೆಗಳನ್ನು ಲಕ್ಷಿಸದೆ ಆಚರಿಸುತ್ತಾರೆ. ಅತ್ಯಂತ ಪ್ರಮುಖ ಹಿಂದೂ ಹಬ್ಬಗಳೆಂದರೆ ದಿವಾಳಿ, ಹೋಳಿ ಮತ್ತು ದಸರಾ. ಈ ಹಬ್ಬಗಳಿಗೆ ಜೈನರು ಮತ್ತು ಸಿಖ್‌ರು ಸಮಾನ ಉತ್ಸಾಹ ತೋರುವುದನ್ನು ಸಹ ಗಮನಿಸಲಾಗಿದೆ. ಬಾರಾ ವಾಫಾತ್, ಈದ್, ಬಕ್ರಿದ್ ಮತ್ತು ಮೊಹರಾಂ -ಇವು ಮುಸ್ಲಿಂರ ಧಾರ್ಮಿಕ ಹಬ್ಬಗಳು. ಮಹಾವೀರ ಜಯಂತಿ ಯನ್ನು ಜೈನರು, ಬುದ್ಧ ಜಯಂತಿಯನ್ನು ಬುದ್ಧ ಧರ್ಮಿಯರು, ಗುರು ನಾನಕ್ ಜಯಂತಿಯನ್ನು ಸಿಖ್‌ರು ಮತ್ತು ಕ್ರಿಸ್‌ಮಸ್ ಅನ್ನು ಕ್ರಿಶ್ಚಿಯನ್ನರು ಆಚರಿಸುತ್ತಾರೆ. ರಾಷ್ಟ್ರಾದ್ಯಂತ ಆಚರಣೆಯ ಭಾಗವಾಗಿ ಎರಡು ಜ್ಯಾತ್ಯಾತೀತ ರಾಷ್ಟ್ರೀಯ ಹಬ್ಬಗಳಾದ, ಸ್ವತಂತ್ರ ದಿನ ಮತ್ತು ಗಣರಾಜ್ಯ ದಿನವನ್ನು ಕಚೇರಿಗಳು ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಭಕ್ತಿ ಭಾವನೆಯೊಂದಿಗೆ ಆಗಸ್ಟ್ 15 ಮತ್ತು ಜನವರಿ 26ರಂದು ಜವಾಬ್ದಾರಿಯುತವಾಗಿ ಎಲ್ಲಾ ಸರ್ಕಾರಿ ಕಛೇರಿಗಳು, ಅನೇಕ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳು ಮತ್ತು ವಿವಿಧ ಗುಂಪಿನ ವ್ಯಕ್ತಿಗಳು ಆಚರಿಸುತ್ತಾರೆ. ಕ್ರೀಡೆ ಪ್ರಸ್ತುತದಲ್ಲಿ, ಉತ್ತರಪ್ರದೇಶದ ಸಾಮಾನ್ಯ ಕ್ರೀಡೆಗಳು ಎರಡು ವಿಭಿನ್ನ ಪ್ರಕಾರದಲ್ಲಿವೆ: ಅವುಗಳೆಂದರೆ ಸಾಂಪ್ರದಾಯಿಕ ಕ್ರೀಡೆಗಳು ಮತ್ತು ಪ್ರಮುಖವಾಗಿ ಯುರೋಪ್‌ನಲ್ಲಿ ಜನಿಸಿದ ಆಧುನಿಕ ಕ್ರೀಡೆಗಳು. ಸಂಪ್ರದಾಯಿಕ ಕ್ರೀಡೆಗಳಾದ , ಮಲ್ಲಯುದ್ದ, ಈಜುವಿಕೆ, ಕಬ್ಬಡಿ ಸೇರಿದಂತೆ ಅತ್ಯಂತ ಹಿಂದಿನ ಕಾಲದ ಆಟಗಳನ್ನು ಈಗಲೂ ಆಡಲಾಗುತ್ತಿದೆ ಮತ್ತು ಟ್ರಾಕ್ (ಗೆರೆ ಎಳೆದ ಸಾಲು)- ಅಥವಾ ಜಲ ಕ್ರೀಡೆಗಳನ್ನು ಆಧುನಿಕ ಉಪಕರಣಗಳ ಬಳಕೆಯಿಲ್ಲದೆ ಸ್ಥಳೀಯ ಸಂಪ್ರದಾಯ ನಿಯಮಗಳ ಪ್ರಕಾರ ಆಡಲಾಗುತ್ತದೆ; ಕೆಲವು ಸಂದರ್ಭಗಳಲ್ಲಿ, ಕತ್ತಿ ಅಥವಾ ’ಪಟ’(ಕಡ್ಡಿ)ವನ್ನು ಬಳಸುವ ಸಮರೋಚಿತ ಕಲೆಗಳ ಪ್ರದರ್ಶನ ಮಾಡಲಾಗುತ್ತದೆ, ಅದು ಕ್ರೀಡೆಯ ಮೂಲ ರೂಪವಾಗಿದೆ. ಆದರೆ, ಸಂಘಟಿತ ಪೋಷಣೆ ರದ್ಧತಿ ಮತ್ತು ಅವಶ್ಯಕ ಸೌಲಭ್ಯಗಳಿಲ್ಲದೆ ಈ ಕ್ರೀಡೆಗಳು ಪ್ರತ್ಯೇಕ ಹವ್ಯಾಸಗಳು ಅಥವಾ ಸ್ಥಳೀಯ ಸ್ಪರ್ಧಾತ್ಮಕ ಆಟಗಳಾಗಿ ಉಳಿದಿವೆ. ಉದಾ: ಆಸಕ್ತಿ ಹೊಂದಿರುವ ಶಾಲೆಗಳಲ್ಲಿ. ಆಧುನಿಕ ಕ್ರೀಡೆಗಳು - ಒಳಾಂಗಣ, ಮೈದಾನ ಮತ್ತು ಟ್ರಾಕ್ (ಗೆರೆ ಎಳೆದ ಸಾಲು) ಆಟಗಳು - ಜನಪ್ರಿಯವಾಗಿವೆ, ಅದರಲ್ಲೂ ವಿದ್ಯಾವಂತ ವರ್ಗದ ನಡುವೆ. ಆದರೆ ರಾಜ್ಯ ಅವುಗಳಲ್ಲಿ ಇನ್ನೂ ಎಲ್ಲಾ ರೀತಿಯ ರಾಷ್ಟ್ರೀಯ ಅರ್ಹತೆಯ ಯಶಸ್ಸನ್ನು ಹೊಂದಿದೆ. ಫೀಲ್ಡ್ ಹಾಕಿ ಆಡುತ್ತಿದ್ದ ಸಮಯದಲ್ಲಿ, ಅದು ಭಾರೀ ಪ್ರಮಾಣದಲ್ಲಿ ಜನಪ್ರಿಯವಾಗಿತ್ತು ಮತ್ತು ಉತ್ತರ ಪ್ರದೇಶ ಭಾರತದ ಕೆಲವು ಉತ್ತಮ ಹಾಕಿ ಆಟಗಾರರನ್ನು ತಯಾರಿಸಿತ್ತು, ಅವರು ದೇಶಕ್ಕೆ ಕೀರ್ತಿಯನ್ನು ತಂದರು. ಧ್ಯಾನ್‌ಚಂದ್, ಪೌರಾಣಿಕ ಫೀಲ್ಡ್ ಹಾಕಿಯ ಭಾರತದ ಆಟಗಾರ ಮತ್ತು ಹಲವಾರು ವರ್ಷಗಳ ಅನೇಕ ಒಲಂಪಿಕ್ ಆಟಗಳ ನಾಯಕನಾಗಿದ್ದರು, ಅವರು ಆಗಸ್ಟ್ 29,1905 ರಂದು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದರು. ಜರ್ಮನ್ ಆಡಳಿತಾಧಿಕಾರಿಯಾಗಿದ್ದ ಅಡೊಲ್ಫ್ ಹಿಟ್ಲರ್, ಬರ್ಲಿನ್ ಒಲಂಪಿಕ್ ಹಾಕಿ-ಫೈನಲ್ಸ್‌‌‍ನಲ್ಲಿ ಧ್ಯಾನ್‌ಚಂದ್‌’ರ ಆಟದಿಂದ ಹೆಚ್ಚು ಪ್ರಭಾವಿತರಾಗಿದ್ದರು, ಅವರು ಜರ್ಮನ್‌ಗೆ ವಲಸೆ ಹೋಗುವುದಿದ್ದರೆ ಕಲೊನೆಲ್(ಕರ್ನಲ್) ಸ್ಥಾನಕ್ಕೆ ’ಲ್ಯಾನ್ಸ್ ನಾಯಕ್’ಆಗಿ ಧ್ಯಾನ್ ಚಂದ್‌ನನ್ನು ಮೇಲೇರಿಸುವುದಾಗಿ ಅವರು ಕರೆ ನೀಡಿದ್ದರು; ಚಂದ್ ಆ ಕರೆಯನ್ನು ಒಪ್ಪಲಿಲ್ಲ. ಹಾಕಿಯ ಜನಪ್ರಿಯತೆಯನ್ನು ಈಗ ಕ್ರಿಕೆಟ್ ಪಡೆದುಕೊಂಡಿದೆ. ಆದಾಗ್ಯೂ ತನ್ನ ಕ್ರಿಕೆಟ್ ತಂಡಕ್ಕಾಗಿ ಹೆಸರು ಮಾಡಿಲ್ಲ, ಯುಪಿ ಫೆಬ್ರುವರಿ 2006ರ ಪಂದ್ಯಾವಳಿಯಲ್ಲಿ, ಫೈನಲ್‌ನಲ್ಲಿ ಬೆಂಗಾಳಿ ತಂಡವನ್ನು ಮಣಿಸಿ ತನ್ನ ಪ್ರಥಮ ರಣಜಿ ಟ್ರೋಪಿಯನ್ನು ಗಳಿಸಿತು. ಅದು ತನ್ನ 3 ಅಥವಾ 4 ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿರುವುದನ್ನು ಸಹ ಹೆಗ್ಗಳಿಕೆಯಾಗಿ ಹೇಳಿಕೊಳ್ಳಬಲ್ಲದು. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಅದು ಭಾರತದ ಕೆಲವು ಹೆಚ್ಚು ಜನಪ್ರಿಯ ವಿಜಯಗಳಿಗೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಪ್ರಾಂತಗಳು ಉಪ್ಪರ್ ಡೊಬ್ ಮಿಡಲ್ ಡೊಬ್ ಲೋವರ್ ಡೊಬ್ ರೊಹಿಲ್‌ಖಂಡ್ ಅವಾದ್ ಪೂರ್ವಾಂಚಲ ಬುಂದೇಲ್‌ಖಂಡ್ ಬಘೇಲ್‌ಖಂಡ್ ಆಕರಗಳು ಬಾಹ್ಯ ಕೊಂಡಿಗಳು ಭಾರತದ ಮುಂದಿನ ಜನಸಂಖ್ಯೆ, ದೀರ್ಘಾವಧಿಯ ಜನಸಂಖ್ಯಾ ವಿಜ್ಞಾನದ ನೋಟ ಉತ್ತರ ಪ್ರದೇಶ ಸರ್ಕಾರದ ಅಧಿಕೃತ ಜಾಲತಾಣ ಉತ್ತರ ಪ್ರದೇಶದ ಆಗ್ರಾದಲ್ಲಿ ಗುರು ಕಾ ತಾಲ್ ಗುರುದ್ವಾರ ಉತ್ತರ ಪ್ರದೇಶದಲ್ಲಿ ಜರುಗಿದ ಸುದ್ದಿಯನ್ನು ಒಳಗೊಂಡ ಬ್ಲಾಗ್ ಉತ್ತರ ಪ್ರದೇಶ ಕುರಿತ ಜಾಲತಾಣ ಉತ್ತರ ಪ್ರದೇಶ ಪ್ರವಾಸಿ ಸ್ಥಳಗಳ ಭೂಪಟ ಉತ್ತರ ಅಮೇರಿಕದ ಉತ್ತರ ಪ್ರದೇಶ ಸಂಘಟನೆ- उत्तर प्रदेश असोसिएशन औफ़ उत्तर अमेरीका - भाषा ही जोड़ती है - ಯುನೈಟೆಡ್ ಯುಎಸ್ ಭಾಷೆ ಉತ್ತರ ಪ್ರಾದೇಶ ಪ್ರವಾಸೋದ್ಯಮದ ಅಧಿಕೃತ ಜಾಲತಾಣ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉತ್ತರ ಪ್ರದೇಶ 1834ರಲ್ಲಿ ಸ್ಥಾಪನೆಯಾದ ರಾಜ್ಯಗಳು ಮತ್ತು ಪ್ರಾಂತ್ಯಗಳು
2121
https://kn.wikipedia.org/wiki/%E0%B2%85%E0%B2%82%E0%B2%A1%E0%B2%AE%E0%B2%BE%E0%B2%A8%E0%B3%8D%20%E0%B2%AE%E0%B2%A4%E0%B3%8D%E0%B2%A4%E0%B3%81%20%E0%B2%A8%E0%B2%BF%E0%B2%95%E0%B3%8A%E0%B2%AC%E0%B2%BE%E0%B2%B0%E0%B3%8D%20%E0%B2%A6%E0%B3%8D%E0%B2%B5%E0%B3%80%E0%B2%AA%E0%B2%97%E0%B2%B3%E0%B3%81
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು - ಭಾರತ ದೇಶಕ್ಕೆ ಸೇರಿದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದು. ಈ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿವೆ. ಇವು ಭಾರತದ ಭೂಭಾಗದಿಂದ ಸುಮಾರು ೧೨೦೦ ಕಿ.ಮೀ. ದೂರದಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ. ಈ ಕೇಂದ್ರಾಡಳಿತ ಪ್ರದೇಶ ಕೊಲ್ಕತ್ತಾ ಹೈಕೋರ್ಟ್ ಗೆ ಸಂಬಂಧಿಸಿದೆ .. ಸಮೀಪದ ದೇಶ- ಮಯನ್ಮಾರ್ ಭೌಗೋಳಿಕ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸುಮಾರು 223 ದ್ವೀಪಗಳನ್ನು ಒಳಗೊಂಡಿರುವ ಈ ಸ್ತೋಮ ಬಂಗಾಳಕೊಲ್ಲಿಯ ಪೂರ್ವಭಾಗದಲ್ಲಿದೆ. (ಉ.ಅ. 70 _ 130 ಮತ್ತು ರೇ 92 ಡಿಗ್ರಿ _95 ಡಿಗ್ರಿ). ವಿಸ್ತೀರ್ಣ 3215 ಚದರ ಮೈಲಿಗಳು. ಅಂಡಮಾನ್ ದ್ವೀಪ ಸ್ತೋಮದಲ್ಲು ಉತ್ತರ ಅಂಡಮಾನ್, ಮಧ್ಯ ಅಂಡಮಾನ್, ದಕ್ಷಿಣ ಅಂಡಮಾನ್ ಮತ್ತು ಪುಟ್ಟ ಅಂಡಮಾನ್‍ಗಳೆಂಬ ನಾಲ್ಕು ದ್ವೀಪಗಳಿವೆ. ನಿಕೋಬಾರ್ ಸ್ತೋಮದಲ್ಲಿ ಕಾರ್‍ನಿಕೋಬಾರ್ ಪುಟ್ಟ ನಿಕೋಬಾರ್ ಮತ್ತು ಗ್ರೇಟ್ ನಿಕೋಬಾರ್ ಎಂಬ ಮೂರು ದ್ವೀಪಗಳಿವೆ. ಈ ಎರಡು ಸ್ತೋಮಗಳನ್ನು ಹತ್ತನೆಯ ಡಿಗ್ರಿಯ ಕಡಲುಗಾಲುವೆ ಬೇರ್ಪಡಿಸಿದೆ. ಈ ದ್ವೀಪಗಳಿಗೆ ಪ್ರಧಾನವಾದ ರೇವುಪಟ್ಟಣ ಪೋರ್ಟ್ ಬ್ಲೇರ್ (ಸ್ಥಾಪನೆ 1858) ಇದು ಮದ್ರಾಸಿಗೆ 1120 ಕಿ.ಮೀ. ರಂಗೂನಿಗೆ 624 ಕಿ.ಮೀ. ಹಾಗೂ ಕೋಲ್ಕತ್ತಾಗೆ 1170 ಕಿ.ಮೀ. ದೂರದಲ್ಲಿದೆ. ಇತಿಹಾಸ ಈ ದ್ವೀಪಸ್ತೋಮ ಬಹಳ ಹಿಂದಿನಿಂದಲೂ ಪ್ರಸಿದ್ಧವಾಗಿತ್ತು. ಇತ್ಸಿಂಗ್, ಮಾರ್ಕೊಪೋಲೊ, ನಿಕಾಲೊ ಕಾಂಟಿ ಮತ್ತು ಇತರ ಪ್ರವಾಸಿಗರು ಇವುಗಳ ವಿಷಯವಾಗಿ ಬರೆದಿದ್ದಾರೆ. 1789 ರಲ್ಲಿ ಕ್ಯಾಪ್ಟನ್ ಅರ್ಚಿಬಾಲ್ಡ್ ಬ್ಲೇರ್ ಎಂಬುವನು ಇಲ್ಲಿ ಬ್ರಿಟಿಷ್ ವಸಾಹತವನ್ನು ಸ್ಥಾಪಿಸಿದರು. ಬಹಳಕಾಲ ಈ ದ್ವೀಪಗಳು ದುಷ್ಕರ್ಮಿಗಳ ಕೊಲೆಪಾತಕಿಗಳ ಮತ್ತು ರಾಜಕೀಯ ಬಂದಿಗಳ ನಿವಾಸವಾಗಿತ್ತು. 1858ರಲ್ಲಿ ಜಾರಿಗೆ ಬಂದ ಬಂದಿಗಳ ರವಾನೆಯ ಕಾನೂನು 1945ರಲ್ಲಿ ರದ್ದಾಯಿತು. 1942ರಲ್ಲಿ ಜಪಾನರು ಈ ದ್ವೀಪವನ್ನಾಕ್ರಮಿಸಿದರು. 1956ರಿಂದ ಈಚೆಗೆ ಇದು ಭಾರತದ ಕೇಂದ್ರಾಡಳಿತಕ್ಕೆ ಒಳಪಟ್ಟಿದೆ. ಮೇಲ್ಮೈ ಲಕ್ಷಣ ಈ ದ್ವೀಪಗಳು ಬೆಟ್ಟಗುಡ್ಡಗಳಿಂದ ತುಂಬಿವೆ; ಇವು ಹೆಚ್ಚಾಗಿ ಹವಳ ದ್ವೀಪಗಳು. ಇದರಿಂದಾಗಿ ಭೂಮಿಯ ಮೇಲ್ಮೈ ಲಕ್ಷಣ ಬಹಳ ವ್ಯತ್ಯಾಸಗೊಂಡಿದೆ. ಉತ್ತರದ ದಕ್ಷಿಣಾಭಿಮುಖವಾಗಿ ಹಬ್ಬಿರುವ 1000' ದಿಂದ 2500' ಗಳ ಎತ್ತರದ ಬೆಟ್ಟಗಳು ಮತ್ತು ಅವುಗಳ ಮಧ್ಯೆ ಉಂಟಾಗಿರುವ ಕಣಿವೆಗಳು ಮೇಲ್ಮೈ ಲಕ್ಷಣದ ವೈಶಿಷ್ಟ್ಯ. ಕರಾವಳಿಯಲ್ಲಿ ಅನೇಕ ಕೊಲ್ಲಿಗಳಿವೆ. ಅವುಗಳಲ್ಲಿ ಮುಖ್ಯವಾದುವು ಬ್ಲೇರ್, ಕಾಲ್‍ಪಾಂಗ್, ಕಾಲಾರ ಮತ್ತು ಕಾಂಗೊ. ನದಿಗಳೆಲ್ಲ ಸಣ್ಣವು; ಮಳೆಗಾಲದಲ್ಲಿ ಮಾತ್ರ ಪ್ರವಾಹವುಳ್ಳ ನುಗ್ಗು ಹೊನಲಿನವು. ಹವಾಮಾನ ಇಲ್ಲಿನ ವಾಯುಗುಣ ಸಾಗರೀಕ ಉಷ್ಣವಲಯದ ಮಾದರೀಯದು. ಶಾಖ 75 ಡಿಗ್ರಿ ಯಿಂದ 85 ಡಿಗ್ರಿಗಳ ವರೆಗೆ ಇರುತ್ತದೆ. ಸರಾಸರಿ ಸಾಪೇಕ್ಷಕ ಆಧ್ರ್ರತೆ 80%. ವಾರ್ಷಿಕ ಮಳೆ ಉತ್ತರ ಭಾಗದಲ್ಲಿ 75. ದಕ್ಷಿಣ ಭಾಗದಲ್ಲಿ 120. ಸಸ್ಯಸಂಕುಲ ಇಲ್ಲಿನ ಸಸ್ಯವರ್ಗದಲ್ಲಿ ಪ್ರಧಾನವಾದವು ದಟ್ಟವಾದ ಉಷ್ಣವಲಯದ ಕಾಡುಗಳು; ನಿತ್ಯ ಹರಿದ್ವರ್ಣದ, ಚಳಿಗಾಲದಲ್ಲಿ ಎಲೆಯುದುರುವ ಮತ್ತು ಮ್ಯಾನ್‍ಗ್ರೋವ್ ಎಂಬ ಜಾತಿಯ ಮರಗಳಿಂದ ತುಂಬಿದ ಮರಗಳು ಎಲ್ಲೆಡೆ ಹಬ್ಬಿವೆ. ನಿತ್ಯಹರಿದ್ವರ್ಣದ ಕಾಡುಗಳು ನದಿ ಕಣಿವೆಗಳಲ್ಲಿಯೂ ಬೆಟ್ಟಗಳ ಮೇಲ್ಭಾಗದಲ್ಲಿಯೂ ಕಾಣಬರುವವು. ಬೆಟ್ಟಗಳ ಇಳಿಜಾರುಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ಅಗಲವಾದ ಎಲೆಯುಳ್ಳ ಮರಗಳು ಬೆಳೆಯುತ್ತವೆ. ಮ್ಯಾನ್‍ಗ್ರೊವ್ ಕಾಡುಗಳು ಕರಾವಳಿಯಲ್ಲಿ ಹೆಚ್ಚು. ಈ ದ್ವೀಪಗಳ ಆರ್ಥಿಕ ಸಂಪತ್ತು ಅರಣ್ಯ, ಮೀನುಗಾರಿಕೆ ಮತ್ತು ವ್ಯವಸಾಯಗಳನ್ನವಲಂಬಿಸಿದೆ. ಕೆಲವು ಮುಖ್ಯ ಜಾತಿಯ ಮರಗಳು ಇಲ್ಲಿಂದ ರಫ್ತಾಗುತ್ತಿವೆ. ವಾಣಿಜ್ಯ ಮೀನುಗಾರಿಕೆ ಹೆಚ್ಚಾಗಿ ಬೆಳೆಯಲವಕಾಶವಿದ್ದರೂ ಈಗ ಇಲ್ಲಿನ ಜನರ ಅವಶ್ಯಕತೆಯನ್ನು ಮಾತ್ರ ಪೂರೈಸುವಷ್ಟಿದೆ. ಶಿಕ್ಷೆ ವಿಧಿಸಲ್ಪಟ್ಟ ಅಪರಾಧಿಗಳ ನೆಲೆಸುನಾಡಾದಾಗಲೇ ಇಲ್ಲಿ ಭೂ ವ್ಯವಸಾಯ ಪ್ರಾರಂಭವಾಯಿತು; ಈಗ ಕೇವಲ ಒಂದರಷ್ಟು ಭೂಮಿಯನ್ನು ಕೃಷಿಗೆ ಉಪಯೋಗಿಸುತ್ತಿದ್ದಾರೆ. ಉಷ್ಣ ವಲಯದ ಬೆಳೆಗಳಾದ ಎಣ್ಣೆ ಕಾಳುಗಳು, ಕಬ್ಬು, ಭತ್ತ, ಸಿಹಿ ಆಲೂಗೆಡ್ಡೆ, ಬಾಳೆ, ಪರಂಗಿ, ಮಾವು, ಸೇಬು, ತೆಂಗು, ರಬ್ಬರ್, ಟೀ ಇವೇ ಮೊದಲಾದವುಗಳನ್ನು ಬೆಳೆಯುತ್ತಾರೆ. ಆಹಾರಕ್ಕಾಗಿ ಕೋಳಿ ಸಾಕಣೆ ಎಲ್ಲೆಡೆಯೂ ಕಂಡುಬರುತ್ತದೆ. ಮರ ಕಡಿಯುವುದು ಮತ್ತು ಮರ ಕೊಯ್ಯುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದು ಜನರ ಮುಖ್ಯ ಉದ್ಯೋಗ. ಜಾತಂ ದ್ವೀಪದಲ್ಲಿರುವ ಚಾತಂ ಮರ ಕೊಯ್ಯುವ ಕಾರ್ಖಾನೆ ಭಾರತದಲ್ಲಿಯೇ ದೊಡ್ಡದು. ಪೋರ್ಟ್‍ಬ್ಲೇರ್‍ನಲ್ಲಿ ಒಂದು ಬೆಂಕಿಪೊಟ್ಟಣದ ಕಾರ್ಖಾನೆ ಇದೆ. ವಿವಿಧ ಕೈಗಾರಿಕೆಗಳ ಬೆಳವಣಿಗೆಗೆ ಇಲ್ಲಿ ಸಾಕಷ್ಟು ಅನುಕೂಲಗಳಿವೆ. ಜನಜೀವನ ಈ ದ್ವೀಪ ಸ್ತೋಮದಲ್ಲಿನ ಜನಸಂಖ್ಯೆ ೩,೭೯,೯೪೪ (೨೦೧೧). ಸುಮಾರು 400 ಹಳ್ಳಿಗಳಿವೆ. ಈ ದ್ವೀಪಸ್ತೋಮದಲ್ಲಿ ಪೋರ್ಟ್‍ಬ್ಲೇರ್ ಒಂದೇ ಜನನಿಬಿಡವಾದ ಪಟ್ಟಣ. ಜನಸಂಖ್ಯೆ-೧,೦೮,೦೫೮ (೨೦೧೧). 1951_61ರ ಅವಧಿಯಲ್ಲಿ ಪೂರ್ವಬಂಗಾಳದಿಂದ ನಿರಾಶ್ರಿತರನ್ನು ಇಲ್ಲಿ ನೆಲೆಸುವಂತೆ ಮಾಡಿದುದರಿಂದ ಜನಸಂಖ್ಯೆ 105% ಹೆಚ್ಚಿತು. ಸ್ಥಳೀಯ ಬುಡಕಟ್ಟಿನ ಒಟ್ಟು ಜನಸಂಖ್ಯೆ 14,122. ಇದು ಒಟ್ಟು ಜನಸಂಖ್ಯೆಯ 22 % ರಷ್ಟಿದೆ. ಇಲ್ಲಿನ ಜಾರಾವಾಸ್, ಒಂಗೇಸ್, ಅಂಡಮಾನೀಸ್ ಮತ್ತು ಸೆಂಟಿನಲೀಸ್ ಪಂಗಡದವರು ಪ್ರಪಂಚದ ಅತ್ಯಂತ ಪುರಾತನ ಜನಾಂಗಗಳಿಗೆ ಸೇರಿದವರು .ದಟ್ಟವಾದ ಕಾಡುಗಳು, ಅನಾಗರೀಕ ಜನರು, ಪ್ರವೇಶಿಸಲು ಅಸಾಧ್ಯವಾದ ಭೂಸ್ಥಿತಿ ಇವುಗಳಿಂದ ಈ ದ್ವೀಪಗಳು ವಿಚಿತ್ರವಾದೊಂದು ಅಸ್ತಿತ್ವವನ್ನು ಪಡೆದಿವೆ. ಇತ್ತೀಚಿನವರೆಗೆ ಈ ದ್ವೀಪಗಳು ದಂಡನೆಗೊಳಗಾದ ಅಪರಾಧಿಗಳನ್ನಿಡುವ ಸ್ಥಳವಾಗಿದ್ದವು.ಈ ಸ್ತೋಮ ಇಂದು ಭಾರತ ಒಕ್ಕೂಟದ ಒಂದು ಭಾಗವಾಗಿ ಉತ್ತಮ ಭವಿಷ್ಯವನ್ನು ಎದುರು ನೋಡುತ್ತಿದೆ. ಅರಣ್ಯ ಮತ್ತು ಮೀನುಗಾರಿಕೆಯ ಸಂಪತ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉಪಯೋಗಿಸಿಕೊಂಡರೆ ಈ ದ್ವೀಪಗಳ ಭವಿಷ್ಯ ಉತ್ತಮವಾಗುತ್ತದೆ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು Census of India, Provisional Population Totals Andaman and Nicobar Administration Website ಭಾರತೀಯ ದ್ವೀಪಗಳು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2122
https://kn.wikipedia.org/wiki/%E0%B2%9A%E0%B2%82%E0%B2%A1%E0%B3%80%E0%B2%97%E0%B2%A1
ಚಂಡೀಗಡ
ಚಂಡೀಗಡ (ಪಂಜಾಬಿ: ਚੰਡੀਗੜ੍ਹ, ಹಿಂದಿ:चंडीगढ़) ಭಾರತದ ಒಂದು ನಗರ. ಈ ನಗರ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರಾಜಧಾನಿ. ಆದರೆ ಈ ನಗರ ಎರಡೂ ರಾಜ್ಯಗಳ ಆಡಳಿತದಲ್ಲಿರದೆ, ಕೇಂದ್ರ ಸರ್ಕಾರದಡಿಯಲ್ಲಿದ್ದು ಕೇಂದ್ರಾಡಳಿತ ಪ್ರದೇಶವಾಗಿದೆ. ಪಂಜಾಬಿನ ರಾಜ್ಯಪಾಲ ಇದರ ಆಡಳಿತದ ಮುಖ್ಯಸ್ಥ. ಇದು ೧೯೬೬ರಿಂದ ಭಾರತದ ಪಂಜಾಬ್ ಮತ್ತು ಹರ್ಯಾಣ ಈ ಎರಡು ರಾಜ್ಯಗಳ ರಾಜಧಾನಿಯಾಗಿದೆ. ಇದರ ಹೆಸರು 'ಚಂಡಿಯ ಕೋಟೆ ' ಎಂಬುದಾಗಿ ಆಂಗ್ಲ ಭಾಷೆಗೆ ತರ್ಜುಮೆಯಾಗಿದೆ. ಈ ಹೆಸರು ಇಲ್ಲಿಯ ಪುರಾತನ ಮಂದಿರವಾದ 'ಚಂಡಿ ಮಂದಿರ'ದಿಂದ ಬಂದಿದೆ. ಇಲ್ಲಿ ಹಿಂದೂ ದೇವತೆ ಚಂಡಿಯ ಆರಾದನೇ ನಡೆಯುತ್ತದೆ, ಚಂಡಿದೇವತೆ ನಗರದಲ್ಲಿದ್ದಾಳೆ ಎಂಬ ನಂಬಿಕೆಯಿದೆ. ಈ ಮಂದಿರವು ನಗರವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡುತ್ತದೆ. ಚಂಡಿಗಢ ರಾಜ್ಯವು ಮೊಹಾಲಿ,ಪಂಚಕುಲಾ ಮತ್ತು ಜ್ಹಿರಾಕಪುರ್ ಪ್ರದೇಶಗಳನ್ನು ಒಳಗೊಂಡಿದ್ದು ೨೦೦೧ರ ಸಮೆಕ್ಷೆಯ ಪ್ರಕಾರ ಈ ಮೂರೂ ಪ್ರದೇಶಗಳ ಒಟ್ಟು ಜನಸಂಖ್ಯೆ ೧೧೬೫೧೧೧(೧.೧೬ಮಿಲಿಯ) ಇರುತ್ತದೆ. ಇದು ಪ್ರಪಂಚದಾದ್ಯಂತ ತನ್ನ ಕಲಾಕೃತಿಗಳು ಮತ್ತು ಗ್ರಾಮೀಣ ಯೋಜನೆಗಳಿಗೆ ಹೆಸರುವಾಸಿಯಾಗಿದೆ ಇದು ಭಾರತದ ಮೊಟ್ಟ ಮೊದಲ ಆಯೊಜಿತ ನಗರವಾಗಿದೆ. ಲಿ ಕಾರ್ಬಸಿಯರ್, ಪೈರೆ ಜಿನ್ನೆರೆಟ್, ಮ್ಯಾಥ್ಯು ನೌಕಿ ಮತ್ತು ಆಲ್ಬರ್ಟ್ ಮಾಯೇರ್ ಅಂತಹ ಮಹಾನ್ ಕಲಾವಿದರ ಅತಿ ಪ್ರಸಿದ್ಧ ಕಲಾಕೃತಿಗಳ ರಚನೆಗೆ ಚಂಧಿಗಧ ಮೂಲವಾಗಿದೆ ೨೦೦೬-೦೭ನೆ ವಾರ್ಷಿಕದ ಸಮೀಕ್ಷೆಯ ಪ್ರಕಾರ ೭೦,೩೬೧ ಮತ್ತು ಇಂದಿನ ಗಣತಿಯ ಪ್ರಕಾರ ೯೯,೨೬೨ ಸಾವಿರ ರಾಜ್ಯಾದಾಯವನ್ನು ಹೊಂದಿರುವ ಚಂಡಿಗಡ ಭಾರತದ ಅತಿ ಹೆಚ್ಚು ರಾಜ್ಯಾದಾಯವನ್ನು ಹೊಂದಿದ ಸಂಯುಕ್ತ ಪ್ರಾಂತ್ಯವಾಗಿದೆ . ಇತಿಹಾಸ ೧೯೪೭ರಲ್ಲಿ ಭಾರತ ಮತ್ತು ಪಾಕಿಸ್ತಾನಗಳಾಗಿ ಬ್ರಿಟಿಷ್ ಭಾರತ ಇಬ್ಭಾಗವಾದಾಗ, ಪಂಜಾಬ್ ಪ್ರಾಂತ್ಯವು ಸಹಾ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಇಬ್ಭಾಗವಾಗಿತ್ತು. ಆಗ ವಿಭಜನೆಯಲ್ಲಿ ಲಾಹೋರ್ ಪಾಕಿಸ್ತಾನದ ಭಾಗವಾಗಿದ್ದ ಕಾರಣ ಭಾರತದ ಪಂಜಾಬ್ ಪ್ರಾಂತ್ಯಕ್ಕೆ ಒಂದು ಹೊಸ ರಾಜಧಾನಿಯ ಅಗತ್ಯವುಂಟಾಯಿತು. ಆಗಲೇ ಇದ್ದ ನಗರಗಳ ನವೀಕರಣಕ್ಕಿಂತ ಒಂದು ಹೊಸ ಯೋಜಿತ ನಗರ ಸೃಷ್ಟಿಯ ಬಗೆಗೆ ಆಲೋಚನೆಗಳು ಹೆಚ್ಚಾಗಿ ಬರತೊಡಗಿದವು. ಆಗಲೇ ಇದ್ದ ನಗರಗಳ ನವೀಕರಣಕ್ಕಿಂತ ಒಂದು ಹೊಸ ಯೋಜಿತ ನಗರ ಸೃಷ್ಟಿಯ ಬಗೆಗೆ ನಿರ್ಧಾರ ಮಾಡಲಾಯಿತು. ಸ್ವತಂತ್ರ ಭಾರತದ ಬೇರೆ ಯಾವುದೇ ಹೊಸ ನಗರ ಯೋಜನೆಗಳಿಗಿಂತ ಚಂಡಿಗಢ ನಗರ ಯೋಜನೆ ಅತಿ ಶೀಘ್ರವಾಗಿ ಸಾಗಿತು. ಇದಕ್ಕೆ ಈ ನಗರವು ಇದ್ದ ಸ್ಥಳ ಮತ್ತು ನವಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ವೈಯಕ್ತಿಕ ಆಸಕ್ತಿಯು ಕಾರಣವಾಗಿತ್ತು. ನೆಹರೂರವರು ನವಭಾರತದ ಮಾದರಿ ಮತ್ತು ಅಭಿವೃದ್ಧಿಯನ್ನು ಸೂಚಿಸುವ ಸಲುವಾಗಿ, ಚಂಡಿಗಡವನ್ನು "ಐತಿಹಾಸಿಕ ಪರಂಪರೆಯ ಬಂಧವಿಲ್ಲದ ಹಾಗೂ ಭಾರತದ ಭವಿಷ್ಯದ ವಿಶ್ವಾಸದ" ಕುರುಹಾಗಿ ನಿರ್ಮಿಸಬೇಕೆಂದು ಸೂಚಿಸಿದರು. ಚಂಡಿಗಡದ ಹಲವಾರು ಕಟ್ಟಡ ಮತ್ತು ಸ್ಮಾರಕಗಳು ೧೯೫೦ರಲ್ಲಿ ಫ್ರಾನ್ಸಿನ (ಸ್ವಿಡ್ಜರ್‌ಲ್ಯಾಂಡಿನಲ್ಲಿ ಜನಿಸಿದ) ವಾಸ್ತುಶಿಲ್ಪಿ ಮತ್ತು ಗ್ರಾಮ ನಿರ್ಮಾಪಕ ಲೆ ಕಾರ್ಬಸೈಯೇರ್‌ನಿಂದ ನಿರ್ಮಿತವಾಗಿವೆ. ನಿಜವಾಗಿ ಲೆ ಕಾರ್ಬಸೈಯರ್ ಗ್ರಾಮ ನಿರ್ಮಾಣಕ್ಕೆ ಬಂದ ಎರಡನೇ ವಾಸ್ತುಶಿಲ್ಪಿಯಾಗಿದ್ದನು. ಮೊದಲು ಅಮೆರಿಕಾದ ವಾಸ್ತುಶಿಲ್ಪಿ ಆಲ್ಬರ್ಟ್ ಮೇಯರ್ (ಪೋಲಂಡ್ ಜನಿತ ವಾಸ್ತುಶಿಲ್ಪಿ ಮ್ಯಾಥ್ಯೂ ನೋವಿಕ್ಕಿಯೊಂದಿಗೆ ಕೆಲಸ ಮಾಡುತ್ತಿದ್ದನು) ಚಂಡಿಗಡ ನಿರ್ಮಾಣಕ್ಕೆ ಯೋಜನೆ ಹಾಕಿದ್ದನು. ೧೯೫೦ರಲ್ಲಿ ನೋವ್ಕಿಯ ನಿಧನದ ನಂತರ ಲೆ ಕಾರ್ಬಸಿಯರ್ ಈ ಯೋಜನೆಗೆ ಕರೆಸಲ್ಪಟ್ಟನು. ೧೯೬೬ರ ನವೆಂಬರ್ ೧ ರಂದು ಭಾರತದ ನವೀಕೃತ ಹರಿಯಾಣವು ಪಂಜಾಬ ಪ್ರಾಂತ್ಯದಿಂದ ವಿಭಾಗಿಸಲ್ಪಟ್ಟಿತು. ಇದಕ್ಕೆ ಮುಖ್ಯ ಕಾರಣ ಹರಿಯಾಣವನ್ನು ಪ್ರಮುಖ ಹಿಂದಿ ಭಾಷೆ ಮಾತನಾಡುವ ಪ್ರಾಂತ್ಯವನ್ನಾಗಿ ಮಾಡುವುದಾಗಿತ್ತು. ಇದರಿಂದ ಪಂಜಾಬಿನ ಪಶ್ಚಿಮ ಪ್ರಾಂತ್ಯವು ಈಗಿನ ಹಾಗೆ ಹೆಚ್ಚು ಪಂಜಾಬಿ ಭಾಷೆ ಮಾತನಾಡುವ ಪ್ರಾಂತ್ಯವಾಗಿ ಉಳಿಯಿತು. ಆದರೂ, ಚಂಡಿಗಡ ನಗರವು ಗಡಿಪ್ರದೇಶದಲ್ಲಿ ಇದ್ದ ಕಾರಣ ಇದನ್ನು ಈ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಈ ಎರಡು ರಾಜ್ಯಗಳ ರಾಜಧಾನಿಯನ್ನಾಗಿ ರಚಿಸಲಾಯಿತು. ೧೯೫೨ ರಿಂದ ೧೯೬೬ ವರೆಗೆ ಇದು ಪಂಜಾಬಿನ ರಾಜಧಾನಿಯಾಗಿತ್ತು. ೧೯೮೫ ರಲ್ಲಿ ಭಾರತದ ಆಗಿನ ಪ್ರಧಾನಿ ರಾಜೀವ ಗಾಂಧಿಯವರು ಅಕಾಲಿ ದಳದ ಮುಖ್ಯಸ್ಥ ಸಂತ ಹರ್ಚಂದ್ ಸಿಂಗ್‌ರೊಂದಿಗೆ ಒಪ್ಪಂದ ಮಾಡಿಕೊಂಡಂತೆ ೧೯೮೬ ರಲ್ಲಿ ಚಂಡಿಗಡವು ಪಂಜಾಬಿಗೆ ರವಾನಿಸಲ್ಪಡಬೇಕಾಯಿತು.ಇದು ಹರಿಯಾಣದ ನವ ರಾಜಧಾನಿಯ ನಿರ್ಮಾಣದೊಂದಿಗೆ ಆಗಬೇಕಿತ್ತು, ಆದರೆ ತಡವಾಯಿತು. ಈಗ ಪಂಜಾಬಿನ ದಕ್ಷಿಣ ಭಾಗದ ಕೆಲವು ಗ್ರಾಮಗಳು ಹರಿಯಾಣಕ್ಕೆ ಮತ್ತು ಪಂಜಾಬಿ ಭಾಷೆ ಮಾತನಾಡುವ ಹರಿಯಾಣದ ಗ್ರಾಮಗಳು ಪಂಜಾಬಿಗೆ ಹೋಗಬೇಕು ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ೧೫ ನೆ ಜುಲೈ ೨೦೦೭ ರಂದು ಚಂಡಿಗಡವು ಭಾರತದ ಮೊಟ್ಟ ಮೊದಲ ಧೂಮಪಾನರಹಿತ ನಗರವಾಗಿ ಹೊರಹೊಮ್ಮಿತು. ಚಂಡಿಗಡ ಸರಕಾರವು ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನವನ್ನು ಖಂಡಿತವಾಗಿ ನಿಷೇಧಿಸಿದ್ದಲ್ಲದೆ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿತು. ಇದೇ ಮುಂದುವರೆದು ೨ ನೆ ಅಕ್ಟೋಬರ್ ೨೦೦೮ ಗಾಂಧೀ ಜಯಂತಿಯಂದು "ಪಾಲಿಥಿನ್ (ಪ್ಲ್ಯಾಸ್ಟಿಕ್) ಬ್ಯಾಗ್‌ಗಳ ಮೇಲೆ ಸಂಪೂರ್ಣ ನಿಷೇಧವನ್ನು ಹೇರಿತು. ಭೌಗೋಳಿಕತೆ ಮತ್ತು ಹವಾಮಾನ ಚಂಡಿಗಡವು ಭಾರತದ ಹಿಮಾಲಯ ಪರ್ವತದ ವಾಯುವ್ಯ ಪರ್ವತ ಶ್ರೇಣಿಯಾದ ಶಿವಾಲಿಕ್ ಶ್ರೇಣಿಯ ಬುಡದಲ್ಲಿ ನೆಲೆಸಿದೆ. ಇದು ಸರಿಸುಮಾರು ೪೪ ಚ.ಮೈಲು ಅಥವಾ ೧೪೪ ಚ.ಕಿಮೀ ಪ್ರದೇಶವನ್ನು ಒಳಗೊಂಡಿದೆ, ಮತ್ತು ತನ್ನ ಪೂರ್ವದಲ್ಲಿ ಹರಿಯಾಣಾ ಮತ್ತು ಉತ್ತರ, ಪಶ್ಚಿಮ ಹಾಗೂ ದಕ್ಷಿಣಗಳಲ್ಲಿ ಪಂಜಾಬ್ ರಾಜ್ಯಗಳ ಗಡಿಗಳಿಗೆ ಹೊಂದಿಕೊಂಡಿದೆ. ಚಂಡಿಗಢದ ನಿಖರವಾದ ಭೂಪಟದ ವಿಸ್ತೀರ್ಣವು . ಇದು ಸರಾಸರಿ ೩೨೧ ಮೀಟರ್ (೧೦೫೩ ಅಂಗುಲಗಳು) ಎತ್ತರ ಇದೆ. ಪಂಜಾಬಿನ ಮೊಹಾಲಿ, ಪಟಿಯಾಲಾ, ರೂಪನಗರ್ ಮತ್ತು ಹರಿಯಾಣದ ಪಂಚಕುಲಾಗಳು ಮತ್ತು ಅಂಬಾಲಾ ಜಿಲ್ಲೆಗಳು ಇದನ್ನು ಸುತ್ತುವರೆದಿವೆ. ಹಿಮಾಚಲ ಪ್ರದೇಶದ ಗಡಿಯೂ ಕೂಡ ಇದರ ಉತ್ತರದ ಗಡಿಯಿಂದ ಕೆಲ ನಿಮಿಷಗಳ ದೂರದಲ್ಲಿದೆ. ಚಂಡಿಗಡವು ಹಲವಾರು ಹವಾಮಾನ ವೈಪರಿತ್ಯವನ್ನು ಹೊಂದಿದ್ದು ಇಲ್ಲಿಯ ಹವಾಮಾನವು ಆಯಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ.ಇದು ಉರಿ ಬೇಸಿಗೆ, ಹದವಾದ ಛಳಿ, ಹಾಗೂ ಗಾಢವಾದ ಮಳೆಗಾಲಗಳನ್ನು ಹೊಂದಿದ್ದು ಉಷ್ಣತೆಯಲ್ಲಿ ವಿಪರೀತವಾದ ಏರಿಳಿವನ್ನು ಹೊಂದಿರುತ್ತದೆ (-೧ ಸೆ ಇಂದ ೧.೨ ಸೆ ವರೆಗೆ). ಡಿಸೆಂಬರ್ ಮತ್ತು ಜನವರಿಯ ಚಳಿ ಸಮಯದಲ್ಲಿ ಕೆಲವೊಮ್ಮೆ ಇಬ್ಬನಿಯು ಬೀಳುತ್ತದೆ. ಇಲ್ಲಿ ವಾರ್ಷಿಕ ಸರಾಸರಿ ಮಳೆಯು 1110.7 ಮಿಮಿ ಇರುತ್ತದೆ. ಅಲ್ಲದೆ ನಗರದಲ್ಲಿ ಕೆಲವೊಂಮ್ಮೆ ಚಳಿಗಾಲದಲ್ಲಿ ದಕ್ಷಿಣ ಭಾಗದಿಂದ ಮಳೆ ಬರುತ್ತದೆ. ಸರಾಸರಿ ಉಷ್ಣತೆ ವಸಂತಕಾಲ : ಈ ಸಮಯದಲ್ಲಿ ವಾತಾವರಣವು ಹಿತಕರವಾಗಿ ಇರುತ್ತದೆ.( ಫೆಬ್ರುವರಿಯ ಉತ್ತರಾಧಿಯಿಂದ ಮಾರ್ಚನ ಪ್ರಥಮಾಧಿಯವರೆಗೆ ಮತ್ತು ಸೆಪ್ಟೆಂಬರನ ಉತ್ತರಾಧಿಯಿಂದ ಅಕ್ಟೊಬರನ ಪ್ರಥಮಾಧಿಯವರೆಗೆ. ಇ ಮದ್ಯೆ ಉಶ್ಣತೆ ಗರಿಷ್ಟ ೧೬ ರಿಂದ ೨೫ ಡಿಗ್ರಿ ಮತ್ತು ಕನಿಷ್ಟ ೯ ರಿಂದ ೧೮ ಡಿಗ್ರಿ ಇರುತ್ತದೆ. ಶರತ್ಕಾಲ : ಶರತ್ಕಾಲದಲ್ಲಿ ಉಷ್ಣತೆಯು ೩೬ ಡಿಗ್ರಿ ಗರಿಷ್ಟತೆಯನ್ನು ತಲುಪುತ್ತದೆ. ಅಲ್ಲದೆ ಉಷ್ಣತೆ ಸಾಮಾನ್ಯವಾಗಿ ೧೬ ಡಿಗ್ರೀಯಿಂದ ೨೭ ಡಿಗ್ರ‍ಿ ಇರುತ್ತದೆ. ಕನಿಷ್ಟ ಉಷ್ಣತೆಯು ೧೩ ಡಿಗ್ರ‍ಿ ಬರಬಹುದು. ಬೇಸಿಗೆಕಾಲ :ಬೇಸಿಗೆಯಲ್ಲಿ (ಮೇ ತಿಂಗಳ ಮಧ್ಯಂತರದಿಂದ ಜೂನ್ ತಿಂಗಳ ಮಧ್ಯಂತರದವರೆಗೆ) ಉಷ್ಣತೆಯು ಗರಿಷ್ಟಮಿತಿಯಾದ ೪೬.೫ ಡಿಗ್ರಿಯನ್ನು ಮುಟ್ಟುತ್ತದೆ. ಇದಲ್ಲದೆ ಉಷ್ಣತೆಯು ೩೫ ಡಿಗ್ರ‍ಿಯಿಂದ ೪೦ ಡಿಗ್ರಿಯವರೆಗೆ ಇರುತ್ತದೆ. ಮಳೆಗಾಲ : ಮಳೆಗಾಲದಲ್ಲಿ (ಜೂನ್ ಮದ್ಯಂತರದಿಂದ ಸೆಪ್ಟೆಂಬರ್ ಮದ್ಯಂತರದವರೆಗೆ),ಚಂಡಿಗಡದಲ್ಲಿ ಮಳೆ ಅತಿಯಾಗಿರುತ್ತದೆ. ಕೆಲವೊಮ್ಮೆ(ಸಾಮಾನ್ಯವಾಗಿ ಅಗೊಸ್ಟ್ ಮತ್ತು ಸೆಪ್ಟೆಂಬೆರ್ ತಿಂಗಳುಗಳಲ್ಲಿ) ಮಳೆ ಅತಿ ಬಿರುಸಾಗಿ ಬೀಳುತ್ತದೆ. ಇಲ್ಲಿ ಮಳೆಗೆ ಬೇಕಾದ ಚಂಡಮಾರುತಳು ಪಶ್ಚಿಮೊತ್ತರ ಹಾಗೂ ದಕ್ಷಿಣೊತ್ತರದಿಂದ ಬರುತ್ತವೆ. ಹೆಚ್ಚಾಗಿ ಈ ನಗರವು ಅತಿಯಾದ (ಬೆಂಬಿಡದ ಮಳೆ) ಮಳೆಯನ್ನು ದಕ್ಷಿಣ ಭಾಗದಿಂದ ಪಡೆಯುತ್ತದೆ. ಇಲ್ಲಿಯವರೆಗೆ ಚಂಡಿಗಡದಲ್ಲಿ ಸುರಿದ ಅತಿ ಹೆಚ್ಚು ಮಲೆಗಾಲದ ಮಳೆಯೆಂದರೆ ೧೯೫.೫ ಮಿಲಿ ಮೀಟರ್ ಆಗಿದೆ. ಚಳಿಗಾಲ :ಚಳಿಗಾಲವು (ನವಂಬರನಿಂದ ಮದ್ಯಂತರ ಮಾರ್ಚವರೆಗೆ) ಇಲ್ಲಿ ಬಹಳ ಚಳಿಯಿಂದ ಕೂಡಿದ್ದು ಕೆಲವೊಮ್ಮೆ ಚಳಿಯ ಕೊರೆತ ಅತಿಯಾಗಿರುತ್ತದೆ. ಚಳಿಗಾಲದಲ್ಲಿ ಇಲ್ಲಿಯ ಸರಾಸರಿ ಉಷ್ಣತೆಯು ಗರಿಷ್ಟ ೭ ಡಿಗ್ರಿಯಿಂದ ೧೫ ಡಿಗ್ರಿ ಮತ್ತು ಕನಿಷ್ಟ -೨ ಡಿಗ್ರಿಯಿಂದ ೫ ಡಿಗ್ರಿಯವರೆಗೆ ಇರುತ್ತದೆ.ಇಲ್ಲಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಪಶ್ಚಿಮ ದಿಕ್ಕಿನಿಂದ ಎಡೆಬಿಡದ ಮಳೆಯು ಬರುತ್ತದೆ. ಕೆಲವೊಮ್ಮೆ ಮಂಜೂ ಬೀಳುತ್ತವೆ. ಸಸ್ಯ ಮತ್ತು ಜೀವ ವೈವಿಧ್ಯ ಚಂಡಿಗಡದ ಹೆಚ್ಚಿನ ಪ್ರದೇಶವು ದಟ್ಟವಾದ ಆಲ ಮತ್ತು ನೀಲಗಿರಿ ಗಿಡಗಳಿಂದ ತುಂಬಿದೆ. ಅರಣ್ಯ ಪ್ರದೇಶದಲ್ಲಿ ಅಶೋಕ,ದಾಲ್ಚಿನ್ನಿ,ಹಿಪ್ಪೆನೇರಳೆ ಹಣ್ಣು ಮತ್ತಿತರ ಗಿಡ ಮರಗಳಿಂದ ತುಂಬಿದೆ.ಈ ನಗರವು ತನ್ನ ಸುತ್ತಮುತ್ತಲೂ ಅರಣ್ಯ ಪ್ರದೇಶದಿಂದ ಆವೃತವಾಗಿರುವ ಕಾರಣ ಇಲ್ಲಿ ಹಲವಾರು ವನ್ಯ ಜೀವಿಗಳು ನೆಲೆಸಲು ಮತ್ತು ಗಿಡಮರಗಳು ಬೆಳೆಯಲು ಅನುಕೂಲಕರವಾಗಿದೆ. ಜಿಂಕೆ,ಕಾಡು ಜಿಂಕೆ,ದೊಡ್ಡ ಜಾತಿಯ ಜಿಂಕೆ, ಗಿಳಿ,ಮರಕುಟಿಕ,ನವಿಲು ಮುಂತಾದವುಗಳು ಇಲ್ಲಿಯ ಸುರಕ್ಷಿತ ಅರಣ್ಯಗಳಲ್ಲಿ ನೆಲೆಸಿವೆ. ಸುಕ್ನಾ ಕೊಳದ ವಿವಿಧ ರೀತಿಯ ಬಾತುಕೋಳಿಗಳು ಮತ್ತು ಜಲಚರಗಳು ಸೈಬೀರಿಯಾ ಮತ್ತು ಜಪಾನಿನ ವಲಸೆ ಪಕ್ಷಿಗಳಿಗೆ ಆಹ್ವಾನ ನೀಡುತ್ತವೆ. ನಗರದಲ್ಲಿ ನೆಲೆಸಿರುವ ಗಿಳಿಗಳ ಪಕ್ಷಿಧಾಮವೊಂದು ವಿವಿಧ ಬಗೆಯ ಪಕ್ಷಿಗಳಿಗೆ ತಾಣವಾಗಿದೆ. ವಾಸ್ತುಶಿಲ್ಪ ಮತ್ತು ಗ್ರಾಮ ಯೋಜನೆ ಅಲ್ಬೆರ್ಟ್ ಮೇಯರ್ ನಂತರದಲ್ಲಿ ಕಾರ್ಯಾರಂಭ ಮಾಡಿದ ಲೆ ಕಾರ್ಬಸಿಯರ್ ಅವರಿಂದ ನಿರ್ಮಾಣವಾದ ಚಂಡಿಗಡ ನಗರವು Congrès International d'Architecture Moderne CIAMನ ಯೋಜನೆಯಂತೆ ನಡೆದಿದ್ದು, ನಗರ ಕಾರ್ಯವೈಖರಿ, ಮಾನವನಿಗೆ ಹೊಂದುವ ಯೋಜನೆ ರೂಪ ಮತ್ತು ರಸ್ತೆ ಮತ್ತು ಕಾಲುದಾರಿ ಜಾಲಗಳನ್ನು ಜೋಡಿಸುವಿಕೆ ಈ ಎಲ್ಲವೂ ಆ ಯೋಜನೆಯಂತೆಯೇ ಕಾರ್ಯರೂಪಕ್ಕೆ ಬಂದವು. ಚಂಡಿಗಡದ ಪರಿಕಲ್ಪನೆಯು ಮೂಲತಃ ಕಲ್ಪನಾತ್ಮಕ ಭೂಪಟದಲ್ಲಿ ಮತ್ತು ಚಿತ್ರಗಳಲ್ಲಿ, ಟಿಪ್ಪಣಿಗಳಲ್ಲಿದ್ದು ಆ ಅಸಂಖ್ಯೆ ಮಾಹಿತಿಗಳ ತರ್ಜುಮೆಯನ್ನು ಇಟ್ಟಿಗೆ ಮತ್ತು ಮರಳುಗಳಿಂದ ಮಾಡಲಾಯಿತು. ಲಿ ಚೊರ್ನಸೈಯರನು ಮೆಯರ್ ಮತ್ತು ನವಕ್ಕಿ ಯರ ಹಲವಾರು ಅಲೋಚನೆಗಳನ್ನು ಬಳಸಿ ಕೆಲಸ ಮಾಡಿದ್ದಾನೆ. ಉದಾಹರಣೆಗೆ ಮೂಲ ನೀಲನಕ್ಷೆಯ ಆಲೋಚನೆಗಳು ಮತ್ತು ಪರಿಕರಗಳು, ಅಂದರೆ ರಾಜಧಾನಿ, ನಗರ ಕೇಂದ್ರ, ವಿಧ್ಯಾಲಯದ ಒಳಾಂಗಣ, ಕೈಗಾರಿಕಾ ಪ್ರದೇಶ ಮತ್ತು ತಂಗುದಾಣ ಮುಂತಾದವು. ಅಲ್ಲದೆ ನೆರೆಯ ಪ್ರದೇಶದ ಯೊಜನೆಗಳು ಕೂಡಾ ಮೂಲ ಯೋಜನೆಯಂತೆಯೇ ಉಳಿದಿದೆ. ಆದರೆ, ಮೇಯರ್ ಮತ್ತು ನವಕ್ಕಿಯವರ ಯೊಜನಾ ರೇಖೆಗಳನ್ನು ನಂತರ ಹಲವಾರು ಚಚ್ಚೌಕಗಳಿಂದ ಮರುರೂಪಿಸಲಾಗಿದ್ದು, ಕಟ್ಟಡಗಳು ದೊರೆತ ಸಲಕರಣೆಗಳಿಂದ ನಿರ್ಮಾಣಗೊಂಡವು. ಹೊರತೋರುವ ಇಟ್ಟಿಗೆಗಳು ಮತ್ತು ಕಟ್ಟಡ ಕಲ್ಲುಗಳು ಒರಟು ಹೊರಮೈಯಿಂದಾಗಿ ಕಾಂಕ್ರೀಟು ಸಂಪೂರ್ಣವಾಗದೆ, ಜ್ಯಾಮಿತಿಯ ಪ್ರಕಾರ ಹೊರಮೈ ಅಪೂರ್ಣವಾಗಿ ಕಾಣತೊಡಗಿತು. ಇದು ಉದ್ಯಾನವನಗಳ ನಡುವೆ ರೂಪಿಸಿದ ಚಂಡಿಗಡದ ವಿಶಿಷ್ಟ ವಾಸ್ತುಶಿಲ್ಪದ ಮಾದರಿಯಾಯಿತು. ಮೊದಲನೆಯ ಯೋಜನೆಯು ಎರಡು ಮುಖಗಳನ್ನು ಹೊಂದಿತ್ತು: ಮೊದಲನೆಯದು ೧೫೦,೦೦೦ ಜನಸಂಖ್ಯೆೆಗಾಗಿ ಮತ್ತು ಎರಡನೆಯದು ೫೦೦’೦೦೦ ಜನಸಂಖ್ಯೆಗಾಗಿ. ಲಿ ಚರ್ಬಸೈರ್ ನು ನಗರವನ್ನು ಎರಡು "ಸೆಕ್ಟರ್" ಗಳೆಂಬ ಘಟಕಗಳಾಗಿ ವಿಭಾಗಿಸಿದನು. ಇದರ ಪ್ರತಿಯೊಂದು ವಿಭಾಗಗಳೂ ಅವುಗಳದ್ದೆ ಆದ ಅಗತ್ಯ ನೆಲೆ, ಕಾರ್ಯಾಗಾರ ಮುಂತಾದ ಮನರಂಜನೆ ಪ್ರದೇಶಗಳನ್ನು ಹೊಂದಿದ್ದವು. ಈ ಸೆಕ್ಟರ್‌ಗಳು ೭ ಪ್ರಸರಣ ಪ್ರಕಾರಗಳ ಶ್ರೇಣಿ ವ್ಯವಸ್ಥೆಯಾದ ೭ V ಗಳ ಮೂಲಕ ಸಾಗುವ ರಸ್ತೆ ಮತ್ತು ಮಾರ್ಗಗಳ ಜಾಲಗಳ ಮೂಲಕ ಈ ಸೆಕ್ಟರ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಈ ಜಾಲದ ಅತ್ಯಂತ ಎತ್ತರದ ಬಿಂದುವು V೧ಆಗಿದ್ದು, ಇವು ಇತರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಾಗಿವೆ, ೭ನೇ ತಿರುವು ಅತ್ಯಂತ ಕೆಳಗಿನ ತಿರುವಾಗಿದ್ದು, ಇದು ಪ್ರತಿಯೊಂದು ಮನೆಗೆ ದಾರಿಯನ್ನು ಕಲ್ಪಿಸುತ್ತದೆ. ಮತ್ತೆ ತಿರುವು V೮ನ್ನು ಇದಕ್ಕೆ ಸೇರಿಸಲಾಗಿದ್ದು ಇದು ಸೈಕಲ್ ಸವಾರರಿಗೆ ಮತ್ತು ಪಾದಚಾರಿಗಳಿಗೆ ದಾರಿಯಾಗಿದೆ.ಲಿ ಕೊರ್ಬಸೈಯರ್ ನಿಂದ ನಿರ್ಮಿತವಾದ ಅರಮನೆಗಳ ಸಮೂಹ. ನಗರ ಯೋಜನೆಯು ಚಚ್ಚೌಕ ಮಾದರಿಯಲ್ಲಿತ್ತು. ಇಡೀ ನಗರವು ಮಾದರಿ ವೀಕ್ಷಣೀಯ ಪ್ರದೇಶದ ಮಾದರಿಯ ಚಚ್ಚೌಕ ಭಾಗಗಳಾಗಿ ವಿಭಾಗಿಸಲ್ಪಟ್ಟಿದ್ದವು.ಪ್ರತಿಯೊಂದು ವಿಭಾಗವು ಸರಾಸರಿ ೮೦೦ಮೀx೧೨೦೦ಮೀ ಅಳತೆ ಹೊಂದಿತ್ತು. ಪ್ರತಿಯೊಂದು ಭಾಗವೂ ಪ್ರತ್ಯೇಕ ಮಾರುಕಟ್ಟೆ,ದೇವಸ್ಥಾನ,ಶಾಲಾ ಕಾಲೇಜುಗಳನ್ನು ಕೇವಲ ೧೦ ನಿಮಿಷದ ನಡುಗೆಯ ದಾರಿಯಲ್ಲಿ ಹೊಂದಿದ್ದವು. ಮೊದಲನೆಯ ಎರಡು ಯೋಜನೆಯಂತೆ ಇಲ್ಲಿ ೧ ರಿಂದ ೪೭(೧೩ನ್ನು ಅಪಶಕುನವೆಂದು ಪರಿಗಣಿಸಿ ಬಿಡಲಾಗಿತ್ತು) ವಿಭಾಗಗಳಾಗಿ ಮಾಡಲಾಗಿತ್ತು. ಮೊದಲನೇ ವಿಭಾಗದಲ್ಲಿ ಸಮೂಹಗಳು,ಕಾರ್ಯದರ್ಶಿ ಭವನ,ಮುಖ್ಯ ನ್ಯಾಯಾಲಯಗಳು ನಿರ್ಮಿಸಲ್ಪಟ್ಟಿದ್ದವು.ಇವು ಲಿ ಕಾರ್ಬಸೈಯರ್ನಿಂದ ನಿರ್ಮಿತವಾದ ಹಾಗೂ ಆತನ ವಾಸ್ತುಶಿಲ್ಪ ಕಲೆಗೆ ಗರಿಯನಿಟ್ಟ ಮೂರು ಪ್ರಮುಖ ಕಟ್ಟಡಗಳಾಗಿದ್ದವು. ಈ ನಗರವು ತನ್ನ ಸುತ್ತ ೧೬ ಕಿ.ಮೀ ಪ್ರದೇಶದವರೆಗೆ ದಟ್ಟವಾದ ಅರಣ್ಯದಿಂದ ಸುತ್ತುವರೆದಿತ್ತು. ಈ ಸುತ್ತಮುತ್ತಲಿನ ಅರಣ್ಯ ಪ್ರದೇಶವು ತನ್ನ ಹಚ್ಚ ಹಸಿರಿಗೆ ಹೆಸರುವಾಸಿಯಾದ ಕಾರಣ ಈ ಪ್ರದೇಶದಲ್ಲಿ ಸಧ್ಯದಲ್ಲಿ ಇನ್ನಾವುದೂ ನವೀಕರಣ ಕಾರ್ಯಗಳು ನಡೆಯದೇ ಇರುವದು ಉತ್ತಮವೆಂಬ ಆಲೋಚನೆಯಾಗಿತ್ತು. ಲಿ ಕೊರ್ಬಸೈಯರನು ನಗರದ ಹೆಚ್ಚಿನ ವಾಸ್ತುಶಿಲ್ಪದ ಕಾರ್ಯಕ್ಕೆ ತನ್ನ ಗುಂಪಿನ ನುರಿತ ಸದಸ್ಯರನ್ನು ಬಿಟ್ಟಿದ್ದರೂ,ನಗರದ ಸಂಪೂರ್ಣ ಯೋಜನೆ ಮತ್ತು ಪ್ರಮುಖ ಕಟ್ಟಡಗಳಾದ ಮುಖ್ಯ ನ್ಯಾಯಾಲಯ,ಕಾರ್ಯದರ್ಶಿ ಭವನ,ಸಮೂಹ ಭವನಗಳು,ವಸ್ತು ಸಂಗ್ರಹಾಲಯ,ಕಲಾ ಭವನ,ಕಲಾ ಶಾಲೆ ಮತ್ತು ಈಜುಕೊಳಗಳ ನಿರ್ಮಾಣದ ಹೊಣೆ ಖುದ್ದಾಗಿ ಹೊತ್ತುಕೊಂಡಿದ್ದನು. ಲಿ ಕೊರ್ಬಸೈಯರ್ ನ ಅತಿ ಪ್ರಮುಖ ಕಟ್ಟಡವೆಂದರೆ ನ್ಯಾಯದ ಮನೆ,ಮುಖ್ಯ ನ್ಯಾಯಾಲಯದ ಪ್ರಮುಖ ಭಾಗ. ಇದು ಇತರೆ ೮ ನ್ಯಾಯಾಲಯ ಕಟ್ಟಡಗಳಿಗಿಂತ ಎತ್ತರವಾಗಿದೆ. ಉಳಿದ ಎಲ್ಲಾ ಕಟ್ಟಡಗಳು ಲಿ ಕೊರ್ಬಸೈಯರ್ ನ ಸಹೋದರ ಪೈರ್ರೆ ಜಿನೆರೆಟ್,ಆಂಗ್ಲ ದಂಪತಿಗಳಾದ ಮ್ಯಾಕ್ಸ್‌ವೆಲ್ ಮತ್ತು ಜೇನ್ ಡ್ರಿವ್, ಮತ್ತು ಭಾರತದ ೯ ವಾಸ್ತುಶಿಲ್ಪಿಗಳ ಸಮೂಹಗಳಿಂದ ಸೇರಿ ನಿರ್ಮಿಸಲ್ಫಟ್ಟಿತು. ನಗರ ನಿರ್ಮಾಣವು ಸಂಪೂರ್ಣಗೊಂಡಾಗ ಅದು ಮೂಲ ಯೋಜನೆಯನ್ನು ಹೂಲುತ್ತಿರಲಿಲ್ಲ,ಕಾರಣ ಮೂಲ ಯೋಜನೆಯಲ್ಲಿ ಒಂದು ವಿಹಾರ ತಾಣವು ನಗರದ ಯೋಜನೆಯ ಇತಿಹಾಸದಲ್ಲಿ ಒಂದು ಪ್ರಮುಖ ಭೂಭಾಗವಾಗಬೇಕೆಂಬುದಾಗಿತ್ತು. ಇದು ಹಲವಾರು ವಾಸ್ತುಶಿಲ್ಪಿಗಳಿಗೆ,ಯೋಜನಾಕಾರರಿಗೆ, ಇತಿಹಾಸಕಾರರಿಗೆ, ಸಾಮಾಜಿಕ ವಿಜ್ಞಾನಿಗಳಿಗೆ ಆಸಕ್ತಿಯ ವಿಷಯವಾಗಿ ಮುಂದುವರೆಯಿತು. ಚಂಡಿಗಢವು ತನ್ನೊಂದಿಗೆ ಎರಡು ಪ್ರಮುಖ ನಗರಗಳನ್ನು ಹೊಂದಿದೆ.ಪಂಚಕುಲಾ ಮತ್ತು ಮೊಹಾಲಿ. ಕೆಲವೊಮ್ಮೆ ಈ ಮೂರು ನಗರಗಳನ್ನು ಒಟ್ಟಾಗಿ ಚಂಡಿಗಢ ತ್ರಿವಳಿಗಳೆಂದು ಕರೆಯಲಾಗುತ್ತದೆ. ಚಂಡಿಗಡ UT ಯ ಆಡಳಿತ ಚಂಢೀಘಡ್ ಆಡಳಿತವು ಆಡಳಿತಗಾರರ ಕೆಳಗೆ ಅಧೀನದಲ್ಲಿದೆ ಇವರನ್ನು ೨೩೯ ರ ಸಂವಿಧಾನದ ACT ನ ಕೆಳಗೆ ನೇಮಿಸಲಾಗಿದೆ. ಪಂಜಾಬ್ ನ ಗೌವರ್ನರ್ ಚಂಡಿಗಡದ ಆಡಳಿತಾಧಿಕಾರಿ ಆಗಿರುತ್ತಾರೆ. ಚಂಡಿಗಡ ಆಡಳಿತ ಅಧೀನದ ಕಾರ್ಯಗಳು ಮಂತ್ರಿ ಮಂಡಲದ ಕೆಳಗೆ ನಡೆಯುತ್ತದೆ. ಆಡಳಿತಗಾರರಿಗೆ ಸಲಹೆಗಾರರಾಗಿ,ಒಂದು ರಾಜ್ಯದ ಪ್ರಧಾನ ಕಾರ್ಯದರ್ಶಿಗಳಿಗೆ ಸಮಾನ ಹುದ್ದೆಯ ಹಿರಿಯ ಅಧಿಕಾರಿಗಳು ಇದ್ದು, ಅವರು ಆಲ್ ಇಂಡಿಯಾ ಸರ್ವೀಸಸ್ ಗಳಿಗೆ ಸಂಬಂಧಿಸಿರುತ್ತಾರೆ, ನಂತರ ಎರಡನೆಯ ಹಂತದಲ್ಲಿ ಇದನ್ನು ಆಡಳಿತಗಾರರು ಅಧಿಕಾರ ನಡೆಸುವರು. ಅವನು ಸಾಮಾನ್ಯವಾಗಿ ಭಾರತೀಯ ಆಡಳಿತದ ಸೇವೆಯ AGMU ಕೇಡರ್ ಗಳಿಗೆ ಸಂಬಂಧಿಸಿರುತ್ತಾನೆ. ಭಾರತೀಯ ಆಡಳಿತಾತ್ಮಕ ಸೇವೆಗೆ ಸೇರಿದ ಜಿಲ್ಲಾಧಿಕಾರಿ ಚಂಡಿಗಡ UT ಯಲ್ಲಿ ಸಾಮಾನ್ಯ ಆಡಳಿತದ ಸಂಪೂರ್ಣ ಉಸ್ತುವಾರಿಯನ್ನು ಹೊಂದಿದ್ದಾರೆ. ಭಾರತಿಯ ಪೊಲೀಸ್ ಸೇವೆಗೆ ಸೇರಿದ ಹಿರಿಯ ಅಧಿಕಾರಿಯಾದ ಪೊಲಿಸ್ ಸೂಪರಿಂಟೆಂಡೆಂಟ್ ಚಂಡಿಗಡ UT ಯ ಕಾನೂನು ಮಾತ್ತು ಸುವ್ಯವಸ್ಥೆ ಹಾಗೂ ಸಂಬಂಧಿತ ವಿಷಯಗಳ ಪಾಲನೆಯ ಹೊಣೆ ವಹಿಸಿರುತ್ತಾರೆ. ಭಾರತೀಯ ಅರಣ್ಯ ಸೇವೆಗೆ ಸೇರಿದ ಅಧಿಕಾರಿಯಾದ ಅರಣ್ಯಗಳ ಉಪ ಸಂರಕ್ಷಕರು ಚಂಡಿಗಡ UT ಯಲ್ಲಿ ಅರಣ್ಯಗಳು,ಪರಿಸರ ಮತ್ತು ವನ್ಯಜೀವಿ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಮೇಲಿನ ಮೂವರು ಅಧಿಕಾರಿಗಳು ಸಾಮಾನ್ಯವಾಗಿ AGMU cadre ಯಿಂದ ಮತ್ತು ಆಲ್ ಇಂಡಿಯಾ ಸರ್ವೀಸಸ್ ಗಳಿಗೆ ಪಂಜಾಬ್ ಮತ್ತು ಹರಿಯಾಣಗಳಿಂದಲೂ ಸಹ ಬಂದಿರುತ್ತಾರೆ. ಜನಗಣತಿ ಭಾರತೀಯ ಜನಗಣತಿ, ಚಂಡಿಗಡ ೯೦೦,೬೩೫,ರಷ್ಟು ಜನಸಂಖ್ಯೆೆಯನ್ನು ಹೊಂದಿದೆ, ಸುಮಾರು ೭೯೦೦ ವ್ಯಕ್ತಿಗಳಿಗೆ ಒಂದು ಚದರ ಕಿಲೊ ಮೀಟರ್ ನಷ್ಟು ಸಾಂದ್ರತೆಯನ್ನು ಉಂಟುಮಾಡಿದೆ. ಒಟ್ಟು ಜನಸಂಖ್ಯೆೆಯಲ್ಲಿ ೫೪% ಪುರುಷರು ಮತ್ತು ೪೬% ಮಹಿಳೆಯರು ಇದ್ದಾರೆ. ಸ್ತ್ರಿ ಮತ್ತು ಪುರುಷರ ಪ್ರಮಾಣವು ಪ್ರತಿ ೧೦೦೦ ಪುರುಷರಿಗೆ ೭೭೭ ರಷ್ಟು ಸ್ತ್ರೀಯರಿದ್ದಾರೆ ಇದು ದೇಶದಲ್ಲಿ ಯಾವುದೇ ತರಹ ಕೆಳಮಟ್ಟದಾಗಿದೆ. ಚಂಡಿಗಡದ ಸರಾಸರಿ ಸಾಕ್ಷರತೆಯ ಪ್ರಮಾಣವು ೮೧.೯%,ಆಗಿದ್ದು ದೇಶದ ಸರಾಸರಿ ೬೪.೮% ಕ್ಕಿಂತ ಹೆಚ್ಚಾಗಿದೆ. ಇದರಲ್ಲಿ ೮೬.೧% ಪುರಶರು ಮತ್ತು ೭೬.೫% ಮಹಿಳೆಯರು ಇದ್ದಾರೆ. ಜನಸಂಖ್ಯೆೆಯ ೧೨%ರಷ್ಟು ೬ ವರ್ಷ ವಯೋಮಿತಿಗಿಂತ ಕೆಳಗಿನವರು ಪ್ರಮುಖ ಧರ್ಮಿಯರಾದ ಹಿಂದುಗಳು (೭೮.೬%), ಸಿಕ್‌ ಧರ್ಮೀಯರು (೧೬.೧%),ಇಸ್ಲಾಮಿಯರು(೩.೯%) ಮತ್ತು ಕ್ರಿಶ್ಚಿಯನ್ನರು (0.8%) ಚಂಡಿಗಡದಲ್ಲಿ ಇರುವರು. ಚಂಡಿಗಡದಲ್ಲಿ ಪಂಜಾಬಿ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾರಾದರೂ ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷೆಯು ಹೆಚ್ಚು ಜನಪ್ರಿಯವಾಗಿದೆ. ಕೆಲವು ಜನರು ಉರ್ದು ಹಾಗೂ ಹಿಂದುಸ್ತಾನಿ ಭಾಷೆಯನ್ನೂ ಸಹ (ಹಿಂದಿ ಮತ್ತು ಉರ್ದು ಬೆರಸಿ)ಮಾತನಾಡುವುದು ಸಾಮಾನ್ಯವಾಗಿದೆ. ಒಂದು ಮಹತ್ವದ ಶೇಕಡವಾರು ಚಂಡಿಗಡದ ಜನಸಂಖ್ಯೆೆಯು ಪಕ್ಕದ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್‌ ಗಳಿಂದ ಬಂದ ಹೆಚ್ಚಿನ ವಿವಿಧ ಸರ್ಕಾರಿ ನೌಕರಿಗೆ ಸೇರಿಕೊಳ್ಳುದಕ್ಕಾಗಿ ಚಂಡಿಗಡದಲ್ಲಿ ನೆಲೆಸಿದವರಾಗಿದ್ದಾರೆ. ಆರ್ಥಿಕತೆ ಚಂಡಿಗಡದಲ್ಲಿ ಮೂರು ಸರ್ಕಾರಗಳಿರುವುದರಿಂದಾಗಿ, ಸರ್ಕಾರವೇ ಇಲ್ಲಿ ಪ್ರಮುಖ ಉದ್ಯೋಗದಾತನಾಗಿದೆ. ಆದುದರಿಂದಲೇ ಇಲ್ಲಿನ ಹೆಚ್ಚಿನ ಜನರು ಇಲ್ಲಿಯ ಯಾವುದೇ ಸರಕಾರೀ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರು ಅಥವಾ ಅಂತಹ ಹುದ್ದೆಗಳಿಂದ ನಿವೃತ್ತಿಯನ್ನು ಹೊಂದಿದವರಾಗಿರುತ್ತಾರೆ. ಇಂತಹ ಕಾರಣಗಳಿಂದ ಚಂಡಿಗಡವನ್ನು ಆಗಾಗ್ಗೆ "ಪಿಂಚಣಿದಾರರ ಸ್ವರ್ಗ" ಎಂದು ಕರೆಯುವರು. ಸುಮಾರು ೧೫ ತರಹ ದೊಡ್ದದಾದ ಎರಡು ಸಾರ್ವಜನಿಕ ವಿಭಾಗದ ಕಾರ್ಖಾನೆಗಳನ್ನು ಇದು ಹೊಂದಿದೆ. ಇದರೊಂದಿಗೆ ಚಂಡಿಗಡದಲ್ಲಿ ೨೫೦೦ ಕ್ಕಿಂತ ಹೆಚ್ಚಿನ ಘಟಕಗಳು ಸಣ್ಣ ಪ್ರಮಾಣ ಉದ್ದಿಮೆಗಳಲ್ಲಿ ನೋಂದಣಿಗೊಂಡಿವೆ. ಕಾಗದ ತಯಾರಿಕೆ,ಮೂಲ ಲೋಹಗಳು ಮತ್ತು ಮಿಶ್ರ ಲೋಹಗಳು ಹಾಗೂ ಯಂತ್ರೋಪಕರಣಗಳು ಪ್ರಮುಖವಾದ ಕಾರ್ಖಾನೆಗಳೆನಿಸಿವೆ ಇತರ ಉದ್ದಿಮೆಗಳು ಆಹಾರ ಉತ್ಪನ್ನಗಳಿಗೆ, ಒಳಉಡುಪುಗಳು, ಯಂತ್ರೋಪಕರಣ ಸಾಧನಗಳು, ಔಷಧ ತಯಾರಿಕೆಗಳು, ಮತ್ತು ವಿದ್ಯುತ್ ಉಪಕರಣಗಳ ಕಾರ್ಖಾನೆಗಳಿವೆ. ಹೀಗಿದ್ದರೂ ಕೂಡ ಒಟ್ಟು ತಲಾ ಆದಾಯ ರೂ ೯೯,೨೬೨,ರಷ್ಟು ಇದ್ದು, ದೇಶದಲ್ಲಿಯೇ ಚಂಡಿಗಡವು ಶ್ರೀಮಂತ ನಗರವಾಗಿದೆ. ಚಂಡಿಗಡದ ಒಟ್ಟು ರಾಜ್ಯ ಗೃಹ ಬಳಕೆಯ ವಸ್ತುಗಳಿಂದ ೨೦೦೪ ರಲ್ಲಿ ಅಂದಾಜು ೨.೨ ಬಿಲಿಯನ್ ಡಾಲರ್ ನಷ್ಟು ಇತ್ತೀಚಿನ ಬೆಲೆಯಲ್ಲಿ ಹೊಂದಿದೆ. ಚಂಡಿಗಡವು ಚೆನ್ನಾಗಿ ಅಭಿವೃಧ್ಧಿ ಹೊಂದಿದಂತಹ ಮಾರುಕಟ್ಟೆ ಮತ್ತು ಬ್ಯಾಂಕಿಂಗ್ ಸೌಕರ್ಯವನ್ನು ಹೊಂದಿದೆ. ಸುಮಾರು ದೇಶದ ಎಲ್ಲಾ ಪ್ರಮುಖ ಬ್ಯಾಂಕುಗಳು ಚಂಡಿಗಡದಲ್ಲಿ ನೋಂದಣಿಯಾಗಿವೆ. ಹೆಚ್ಚಿನ ಬ್ಯಾಂಕುಗಳು ಒಂದು ಪಾನ್ ಇಂಡಿಯಾ ಇರುವಿಕೆಯ ಜೊತೆಗೆ ಅದರ ವಲಯ/ಪ್ರಾದೇಶಿಕ ಕಛೇರಿಗಳು ಚಂಡಿಗಡದಲ್ಲಿ ಪ್ರಸ್ತುತವಾಗಿದೆ. ಹೆಚ್ಚಾಗಿ ಇರುವಂತಹ ವಾಣಿಜ್ಯ ವಿಭಾಗದ ಎಲ್ಲಾ ಕಛೇರಿಗಳು ಒಂದೇ ವಿಭಾಗದಲ್ಲಿ ೧೭ ಭಾಗದಷ್ಟು ಬ್ಯಾಂಕ್‌ನ ಚದರ ಚಂಡಿಗಡದಲ್ಲಿದೆ. ಚಂಡಿಗಡದಲ್ಲಿ ಮೂರು ಉದ್ಯೋಗ ಅಭಿವೃಧ್ಧಿ ಸಂಸ್ಥೆಗಳ ಕಛೇರಿಗಳಿವೆ. ಅವುಗಳೆಂದರೆ : ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ (FICCI), ದಿ ಪಿಎಚ್‌ಡಿ ಚೇಂಬರ್ ಆಫ್ ಕಾಮಾರ್ಸ್ ಮತ್ತು ಇಂಡಸ್ಟ್ರಿಸ್ (PHDCCI) ಮತ್ತು ದಿ ಕಾನ್ ಫೆಡರೇಶನ್ ಆಫ್ ಇಂಡಿಯನ್ ಇಡಸ್ಟ್ರಿಸ್(CII)ಅದರ ಯಾವುದೇ ಪ್ರಾದೇಶಿಕ ಪ್ರಮುಖ ಕಛೇರಿಗಳು ಚಂಡಿಗಡ ದ ೩೧ ರ ವಿಭಾಗದಲ್ಲಿದೆ. ಚಂಡಿಗಡದಲ್ಲಿ ರಕ್ಷಣಾ ಪಡೆಯು ಮಹತ್ತರವಾಗಿವೆ. ಭಾರತೀಯ ವಾಯು ಪಡೆಯು ಮೂಲ ಭಾಗ ೩೧ ರ ವಿಭಾಗದಲ್ಲಿದೆ ಮತ್ತು ಚಂಡಿಮಂದಿರದ ಕಂಟೋನ್‌ಮೆಂಟಿನ ಹತ್ತಿರ ಇರುವುದಲ್ಲದೇ, ಹತ್ತಿರದ ನಗರ ಪ್ರದೇಶದ ಲೇಹ್-ಲಢಾಕ್ ಮತ್ತು ಸಿಯಾಚಿನ್ ಪ್ರ್ರಾಂತ್ಯಗಳಲ್ಲಿ ರಕ್ಷಣಾ ಪಡೆಗಳಿಗೆ ಸರಬರಾಜಿಗೆ ಈ ನಗರವು ಮೂಲವಾಗಿದೆ. ಚಂಡಿಗಡದ ಐಟಿ ಪಾರ್ಕ್ (ಚಂಡಿಗಡ ಟೆಕ್ನಾಲಜಿ ಪಾರ್ಕ್) ಕೂಡಾ ಐಟಿ ಉದ್ಯಮದ ಕುರುಹಾಗಿದೆ. ಚಂಡಿಗಡದ ಮೂಲಭೂತ ಸೌಕರ್ಯ, ದಿಲ್ಲಿ,ಪಂಜಾಬ್, ಹರಿಯಾಣ,ಮತ್ತು ಹಿಮಾಚಲಪ್ರದೇಶಗಳಿಗೆ ಸಾಮಿಪ್ಯತೆ ಹೊಂದಿರುವುದು ಮತ್ತು ಇಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವ ಪ್ರತಿಭೆಗಳು ಇವೆಲ್ಲವೂ ಇಲ್ಲಿಗೆ ಮಾಹಿತಿ ತಂತ್ರಜ್ಞಾನ ಉದ್ದಿಮೆಗಳಿಗೆ ಆಹ್ವಾನ ನೀಡುತ್ತಿವೆ. ಭಾರತದ ಪ್ರಸಿದ್ದ ಕಂಪನಿಗಳು ಮತ್ತು ಅಂತರಾಷ್ಟ್ರೀಯ ನಿಗಮಗಳಾದ ಕ್ವಾರ್ಕ್,ಇನ್ಫೊಸಿಸ್,ಡೆಲ್ ನಂತಹ ಕಂಪನಿಗಳು ಈ ನಗರದಲ್ಲಿ ಮತ್ತು ಸುತ್ತಮುತ್ತಲು ನೆಲೆಯೂರಿವೆ. ಇತ್ತೀಚೆಗೆ ಅಂತರ್ಜಾಲ ಮಾಧ್ಯಮವು ನಡೆಸಿದ ಭೂ ಮಂಡಲದ ಸೇವಾ ಸರ್ವೇಯ ಪ್ರಕಾರ ಚಂಡಿಗಡವು ೯ ನೇ ಸ್ತಾನದಲ್ಲಿದ್ದು ಪ್ರಪಂಚದಲ್ಲಿ ಗುರುತಿಸಲ್ಪಟ್ಟ ೫೦ ಅಭಿವೃದ್ದಿ ಹೊಂದಿದ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ ನಗರಗಳಲ್ಲಿ ಒಂದಾಗಿದೆ. ಶಿಕ್ಷಣ ಚಂಡಿಗಡವು ತನ್ನ ಉತ್ತಮ ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಇಲ್ಲಿಯ ಶಾಲಾ ಕಾಲೇಜುಗಳು ವಿವಿಧ ರೀತಿಯ ಪಠ್ಯಕ್ರಮಗಳಿಗೆ ಗುರುತಿಸಲ್ಪಟ್ಟಿವೆ. ಚಂಡಿಗಡದಲ್ಲಿ ಇರುವ ಕೆಲವು ಪ್ರಮುಖ ಶಾಲಾ ಕಾಲೇಜುಗಳೆಂದರೆ ಜಿಜಿಡಿಯೆಸ್‌ಸಿ ಕಾಲೇಜ್, ಡಿಎವಿ ಕಾಲೇಜ್, ಎಂಸಿಎಂಡಿಎವಿ ಕಾಲೇಜ್, ಸರಕಾರಿ ಬಾಲಕರ ಮತ್ತು ಬಾಲಕಿಯರ ಕಾಲೇಜುಗಳು ಮತ್ತು ಶಿಕ್ಷಕ ತರಬೇತಿ ಕಾಲೇಜು. ಇದಲ್ಲದೆ ಸರಕಾರವು ಹಲವಾರು ವಿಭಾಗಗಳ ಅವಶ್ಯಕತೆಗಳನ್ನು ಈಡೇರಿಸಲು ಹಲವಾರು ಮಾದರಿ ಶಾಲೆಗಳ ನಿರ್ಮಾಣವನ್ನು ಮಾಡಿದೆ. ಇವು ಹರಿಯಾಣ, ಹಿಮಾಚಲ ಪ್ರದೇಶ, ಜೆ ಮತ್ತು ಕೆ, ಪಂಜಾಬ, ಉತ್ತರಾಂಚಲ ಮತ್ತು ಆಗ್ನೇಯ ಭಾಗದ ವಿಧ್ಯಾರ್ಥಿಗಳ ಅದ್ಯಯನಕ್ಕೆ ಮೂಲ ಕೇಂದ್ರಗಳಾಗಿವೆ. ಚಂಡಿಗಡವು ಈ ಕೆಳಕಂಡ ಕೆಲವು ಉನ್ನತ ಶಿಕ್ಷಣ ಕೇಂದ್ರಗಳನ್ನು ಹೊಂದಿದೆ. ಚಂಡಿಗಡ ವಾಸ್ತುಶಿಲ್ಪ ಕಾಲೇಜು ಸರಕಾರಿ ಲಲಿತಕಲಾ ಕಾಲೇಜು,ವಿಭಾಗ ೧೦ IMTECH(ಇನ್ಸ್‌ಟಿಟ್ಯೂಟ್‌ ಅಫ್ ಮೈಕ್ರೊ ಬಯಾಲಾಜಿಕಲ್ ಟೆಕ್ನಾಲಜಿ) ಇಂಡೊ ಸ್ವಿಸ್ ತರಬೇತಿ ಕೇಂದ್ರ (NITTTR) ನ್ಯಾಷಿನಲ್ ಇನ್ಸ್‌ಟಿಟ್ಯೂಟ್ ಅಫ್ ಟೆಕ್ನಿಕಲ್ ಟ್ರೈನಿಂಗ್ ಅಂಡ್ ರಿಸರ್ಚ್. ಪಂಜಾಬ್ ಮಹಾವಿದ್ಯಾಲಯ. PGIMER(ವೈಧ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಉನ್ನತ ಪದವಿ ಮಹಾವಿದ್ಯಾಲಯ) ಪಂಜಾಬ್ ಇಂಜಿನಿಯರಿಂಗ್ ಕಾಲೇಜು ಇದಲ್ಲದೆ ನೆರೆಯ ಮೊಹಾಲಿಯಲ್ಲಿ ಚಂಡಿಗಡದ ಫಾರ್ಮಸಿ ಕಾಲೇಜ್(CCP) ಮತ್ತು ಚಂಡಿಗಡದ ಹೊಟೆಲ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಟರಿಂಗ್ ತಂತ್ರದ ಕಾಲೇಜ್ಗಳೂ(CCHM) ಇವೆ.ಮೊಹಾಲಿಯ ಭಾರತೀಯ ವೈಜ್ಞಾನಿಕ ಶಿಕ್ಷಣ ಸಂಶೋಧನಾ ಸಂಸ್ಥೆ(ಐ.ಐ.ಯೆಸ್.ಇ.ಅರ್) ಇತ್ತೀಚೆಗೆ ತೆರೆದಿದ್ದು,ವೈಜ್ಞಾನಿಕ ಸಂಶೋಧನೆಗಳಿಗೆ ಮತ್ತು ಉತ್ತಮ ವೈಜ್ಞಾನಿಕ ಪದವಿ,ಮತ್ತು ಉನ್ನತ ಪದವಿ ಶಿಕ್ಷಣವನ್ನು ಒದಗಿಸಲು ಸಹಕಾರಿಯಾಗಿದೆ. ಮೊಹಾಲಿಯ ಸಮೀಪದಲ್ಲಿ ಇರುವ ರಾಷ್ಟ್ರೀಯ ಫಾರ್ಮಸಿಟಿಕಲ್ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು ಪ್ರಥಮ ರಾಷ್ಟ್ರೀಯ ಫಾರ್ಮಸಿಟಿಕಲ್ ಸಂಸ್ಥೆಯಾಗಿದ್ದು, ಈ ಮೂಲಕ ಫಾರ್ಮಾಸಿಟಿಕಲ್ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಹೆಸರು ಪಡೆಯುವ ಉದ್ದೇಶ ಹೊಂದಿದೆ. ಚಂಡಿಗಡದ ಬಾಹ್ಯಾಕಾಶ ನಗರವಾದ ಮೊಹಾಲಿಯು ಸುಧಾರಿತ ಕಂಪ್ಯೂಟೆರ್ ಟೆಕ್ನಾಲಜಿಗಳ ಆವಿಷ್ಕಾರಕ್ಕೆ ಎಡೆಮಾಡಿಕೊಟ್ಟಿದೆ. C-DAC ಮೊಹಾಲಿಯು ಟೆಲೆಮೆಡೆಸಿನ್ ಸೇರಿದಂತೆ ಸ್ಟೇಟ್ ಅಫ್ ದಿ ಅರ್ಟ್ ವಿಷಯದಲ್ಲಿ ಆವಿಷ್ಕಾರವನ್ನು ಮಾಡುತ್ತಿದೆ. ಸಾರಿಗೆ ಚಂಡಿಗಡ್‍ನಲ್ಲಿ ಪ್ರತಿಯೊಬ್ಬರ ಲೆಕ್ಕಕ್ಕೆ ಅತಿ ಹೆಚ್ಚು ಸಂಖ್ಯೆಯ ವಾಹನಗಳಿವೆ. ಅಗಲವಾದ, ಚೆನ್ನಾಗಿ ಸುಸ್ಥಿತಿಯಲ್ಲಿಟ್ಟಿರುವ ರಸ್ತೆಗಳು ಹಾಗೂ ನಗರದಾದ್ಯಂತ ವಿಸ್ತಾರವಾದ ವಾಹನಗಳ ನಿಲುಗಡೆ ಪ್ರದೇಶ, ಸ್ಥಳೀಯ ಸಾರಿಗೆಗೆ ಖಾಸಗೀ ವಾಹನಗಳ ಬಳಕೆಯನ್ನು ಅನುಕೂಲಗೊಳಿಸುತ್ತದೆ. ಚಂಡಿಗಡ್ ಬಸ್‌ಗಳು ಚಂಡಿಗಡ್ ಟ್ರಾನ್ಸ್‌ಪೋರ್ಟ್ ಅಂಡರ್‌ಟೇಕಿಂಗ್ (CTU) ಅಂತರಗತ ಓಡುತ್ತವೆ,ಇದು ಚಂಡಿಗಡ್ ಆಡಳಿತದ ಒಂದು ಉದ್ಯಮ ಆಗಿದ್ದು ಸ್ಥಳೀಯ ಸಾರಿಗೆಯಲ್ಲದೇ ಅಂತರ-ರಾಜ್ಯ ಸಾರಿಗೆ ಸೇವೆಗಳನ್ನು ಒದಗಿಸುತ್ತದೆ. ಚಂಡಿಗಡ್ ಸಂಚಾರ ಪೋಲಿಸರು ಸಂಚಾರಿ ನಿಯಮಗಳ ಪರಿಪಾಲನೆಯ ಉಸ್ತುವಾರಿ ಚೆನ್ನಾಗಿ ವಹಿಸಿಕೊಂಡು ಬಹಳ ಕ್ರಮಬದ್ಧವಾದ ಸಂಚಾರಿ ವ್ಯವಸ್ಥೆ ಎಂದು ಮನ್ನಣೆ ಪಡೆದಿದೆ. ಕ್ಷೇತ್ರ ೨೩ರ ಸಂಚಾರಿ ಉದ್ಯಾನವನ ಮಕ್ಕಳಿಗೆ, ಕೈಗಾಡಿ-ಎಳೆಯುವವರಿಗೆ ಹಾಗೂ ಹೊಸ ಚಾಲಕರಿಗೆ ಸಂಚಾರಿ ಸುರಕ್ಷತೆಯನ್ನು ಪರಿಚಯ ಮಾಡಿ ಕೊಡುತ್ತದೆ. ಕೈಗಾಡಿಗಳಲ್ಲಿ ಸ್ವಲ್ಪ ದೂರದ ಪ್ರಯಾಣ ಸಾಮಾನ್ಯ, ವಿಶೇಷವಾಗಿ ಶಾಲೆಗೆ-ಹೋಗುವ ಮಕ್ಕಳು, ಗೃಹಿಣಿಯರು ಹಾಗೂ ವೃದ್ಧರು ಇದನ್ನು ಬಳಸುತ್ತಾರೆ. ಆಟೋ-ಗಾಡಿಗಳು ಸೀಮಿತವಾಗಿದ್ದು ಹಲವೂ ಬಾರಿ ಬರಿ ISBT ಗೆ ಹೋಗಲು ಹಾಗೂ ಬರಲು ಮಾತ್ರ ಓಡಾಡುತ್ತವೆ. ಹಲವು ಹೆಚ್ಚು ಸಂಚಾರದ ರಸ್ತೆಗಳಲ್ಲಿ ಈಗ ಕೈಗಾಡಿಗಳಿಗೆ ಕಿರುದಾರಿ ಮಾಡಲಾಗಿದೆ, ಇದಕ್ಕೆ ಕೈಗಾಡಿ-ಎಳೆಯುವವರು ಕಡ್ಡಾಯವಾಗಿ ಬದ್ಧವಾಗಿರಬೇಕು. ಆಧುನಿಕ ಆಕಾಶವಾಣಿ ಸೇವೆಯುಳ್ಳ ಕ್ಯಾಬ್‌ಗಳು ಸಮರ್ಪಕವಾಗಿ ಸ್ಥಾಪಿಸಿಲಾದ ಸಂಪರ್ಕವನ್ನು ಈ ನಗರ ಹೊಂದಿದೆ ಎಂಬ ಹೆಮ್ಮೆಗಳಿಸಿದೆ. ಚಂಡಿಗಡ್ ರಸ್ತೆಯ ಪಥದಿಂದ ಉತ್ತಮವಾಗಿ ಸಂರ್ಪಕ ಹೊಂದಿದೆ. ಚಂಡಿಗಡವನ್ನು ದೇಶದ ಇತರ ಭಾಗದೊಂದಿಗೆ ಜೋಡಿಸುವ ಎರಡು ಮುಖ್ಯ ರಾಷ್ಟ್ರೀಯ ಹೆದ್ದಾರಿಗಳು (NH) : NH ೨೨ (ಅಂಬಾಲ - ಕಲ್ಕ - ಶಿಮ್ಲಾ - ಕಿನೊರ್) ಮತ್ತು NH ೨೧ (ಚಂಡಿಗಡ - ಲೆಹ್). ಚಂಡಿಗಡದಲ್ಲಿ ಎರಡು ಅಂತರ-ರಾಜ್ಯ ಬಸ್ ಟರ್ಮಿನಸ್ (ISBT) ಗಳಿವೆ, ಒಂದು ಉತ್ತರ,ದಕ್ಷಿಣ,ಪೂರ್ವ ದಿಕ್ಕುಗಳಿಗಾಗಿ ೧೭ನೇ ವಿಭಾಗದಲ್ಲಿದೆ,ಈ ಪ್ರದೇಶದಿಂದ ಹರಿಯಾಣ,ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ ಅಲ್ಲದೆ ದೇಶದ ರಾಜಧಾನಿ ದೆಹಲಿಯ ಎಲ್ಲಾ ಪ್ರಮುಖ ನಗರಗಳಿಗೆ ನಿರಂತರ ಬಸ್ ಸೌಲಭ್ಯವಿರುವದು. ಮತ್ತು ಎರಡನೇಯದು ೪೩ನೇ ವಿಭಾಗವಾದ ಪಶ್ಚಿಮ ಭಾಗದಲ್ಲಿದ್ದು, ಮುಖ್ಯವಾಗಿ ಪಂಜಾಬ, ಹಿಮಾಚಲ, ಜಮ್ಮು, ಮತ್ತು ಕಾಶ್ಮೀರದ ಕೆಲವು ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಚಂಡಿಗಡವು ISBT ಯ ಸುಮಾರು ೧೦ ಕಿ.ಮೀ. ಅಂತರದಲ್ಲಿ ಒಂದು ರೈಲು ನಿಲ್ದಾಣವನ್ನು ಹೊಂದಿದೆ. ಇಲ್ಲಿಂದ ರಾಜಧಾನಿ ನವದೆಹಲಿ,ಅಲ್ಲದೆ ಇನ್ನಿತರ ಜಂಕ್ಷನ್ಗಳಾದ ಅಂಬಾಲಾ,ಅಮೃತಸರ್,ಭಿವಾನಿ,ಚೆನ್ನೈ,ಹೌರಾ,ಕಾಲ್ಕಾ,ಲಖನೌ,ಮುಂಬಯಿ,ಪಾಟ್ನಾ,ಶ್ರಿ ಗಂಗಾನಗರ್,ಮತ್ತು ತಿರುವನಂತಪುರಂಗಳಿಗೆ ನಿರಂತರ ಸಂಪರ್ಕವನ್ನು ಹೊಂದಿದೆ. ಚಂಡಿಗಡವು ISBT ಯಿಂದ ಸುಮಾರು ೧೨ ಕಿ.ಮಿ. ಅಂತರದಲ್ಲಿ ಚಂಡಿಗಡ ಏರ್‌ಪೋರ್ಟ್ ಎಂಬ ಒಂದು ದೇಶೀಯ ವಿಮಾನ ನಿಲ್ದಾಣವನ್ನೂ ಹೊಂದಿದೆ. ಏರ್ ಇಂಡಿಯಾ,ಜೆಟ್ ಏರ್‌ವೇಸ್,ಜೆಟ್‌ಲೈಟ್ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್ ಗಳು ನಿರಂತರವಾಗಿ ಚಂಡಿಗಡದಿಂದ ನವ ದೆಹಲಿ ಮತ್ತು ಮುಂಬಯಿಗಳಿಗೆ ವಿಮಾನ ಸಂಚಾರವನ್ನು ಮಾಡುತ್ತವೆ. ಈ ವಿಮಾನ ನಿಲ್ದಾಣವು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗುವ ತಯಾರಿಯನ್ನು ನಡೆಸಿದೆ, ಅಲ್ಲದೆ ಕಿಂಗ್‌ಫಿಶರ್ ಮತ್ತು ಸಿಲ್ಕ್‌ಏರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡು ಬ್ಯಾಂಕಾಕ್ ಮತ್ತು ಸಿಂಗಪುರ್ ಗಳೊಂದಿಗೆ ಇತರೆ ಪೂರ್ವ ಏಷ್ಯಾದ ದೇಶಗಳಿಗೆ ವಿಮಾನ ಸಂಪರ್ಕವನ್ನು ಕಲ್ಪಿಸುವಲ್ಲಿ ಕಾರ್ಯ ಕೈಗೊಂಡಿದೆ. ಅತಿ ಶೀಘ್ರದಲ್ಲಿ ಈ ನಗರವು ಮೆಟ್ರೊ ರೈಲ್ವೆ ಮತ್ತು ಅಂತರಾಷ್ಟ್ರೀಯ ವಿಮಾನನಿಲ್ದಾಣವನ್ನು ಹೊಂದುವುದರಲ್ಲಿ ಸಂಶಯವಿಲ್ಲ. ಈ ಎರಡೂ ಯೋಜನೆಗಳಿಗೆ ಸರಕಾರದ ಪರವಾನಗಿಯೂ ಸಿಕ್ಕಿದ್ದು, ಈಗ ಇವುಗಳ ನಿರ್ಮಾಣದ ಯೋಜನೆಯು ಸಿದ್ದಗೊಳ್ಳುತ್ತಿದೆ. ಕ್ರೀಡಾಂಗಣಗಳು ಮತ್ತು ಉದ್ಯಾನವನಗಳು ಚಂಡಿಗಡವು ಅಸಂಖ್ಯ ರಾಷ್ಟ್ರೀಯ ಕ್ರೀಡಾಂಗಣಗಳಿಗೆ ಮನೆಯಾಗಿದೆ. ಉದಾಹರಣೆಗೆ ಪಿಎಚ್ಎಲ್ ಮತ್ತು ಐಪಿಎಲ್. ಈ ನಗರವು ತನ್ನಲ್ಲಿ ಹಲವಾರು ಕ್ರೀಡೆಗಳ ಸಮೂಹ ಕ್ರೀಡಾಂಗಣಗಳ ದೊಡ್ದ ಜಾಲವನ್ನೇ ಹೊಂದಿದೆ. ಈ ಕ್ರೀಡಾಂಗಣಗಳ ಸಮೂಹವು ಕ್ರಿಕೆಟ್ ಕ್ರೀಡಾಂಗಣ, ಈಜು ಕಲಿಕಾ ಕೇಂದ್ರ, ಶೂಟಿಂಗ್ ಅಂಕಣ ಮತ್ತು ಹಾಕಿ ಕ್ರಿಡಾಂಗಣವನ್ನು ಹೊಂದಿದೆ. ಚಂಡಿಗಡವು ನಗರದ ಸುತ್ತವೂ ಹಲವಾರು ಉದ್ಯಾನವನಗಳನ್ನು ಸಹಾ ಹೊಂದಿದೆ. ಅವುಗಳಲ್ಲಿ ತುಂಬ ಜನಪ್ರಿಯವಾದುದು ಜಾಕಿರ್ ಹುಸೇನ್ ರೋಸ್ ಗಾರ್ಡನ್ (ಗುಲಾಬೀ ತೋಟ). ಇಲ್ಲಿನ ಪ್ರಮುಖ ನಿವಾಸಿಗಳು. ಅಭಿನವ ಬಿಂದ್ರಾ,೨೦೦೮ ರ ಒಲಂಪಿಕ್ ಆಟದಲ್ಲಿ ಚಿನ್ನದ ಪದಕ ಪಡೆದವರು.ಪುರುಷರ 10ಮಿ ಏರ್ ರೈಫಲ್‌ನಲ್ಲಿ ಅಶೋಕ್ ಮಲ್ಹೊತ್ರಾ, ಭಾರತದ ಮಾಜೀ ಕ್ರಿಕೆಟಿಗ ಜಸ್ಪಾಲ್ ಭಾಟ್ಟಿ,ಪ್ರಸಿದ್ದ ಹಾಸ್ಯಕಾರ ಜೀವ್ ಮಿಲ್ಕಾ ಸಿಂಗ್, ಪ್ರಥಮ ಭಾರತೀಯ ಗೋಲ್ಫ್ ಆಟಗಾರನಾಗಿದ್ದು ಏಷ್ಯಾದ ಉತ್ತಮ ಗೊಲ್ಫ್ ಆಟಗಾರನಾಗಿ ಆಯ್ಕೆಯಾಗಿ ಯುರೊಪ್ ಟೂರ್‌ನ ಸದಸ್ಯನಾಗಿದ್ದನು. ಕಪಿಲ್ ದೇವ್, ಭಾರತದ ಕ್ರಿಕೆಟ್ ತಂಡದ ಮಾಜೀ ನಾಯಕ. ಮಿಲ್ಕಾ ಸಿಂಗ್, ಅಥ್ಲೆಟ್. ನೆಕ್ ಚಂದ್, ಪ್ರಸಿದ್ಧ ರಾಕ್ ಗಾರ್ಡನ್‌ನ ನಿರ್ಮಾತೃ ಪೂನಂ ಧಿಲ್ಲೋನ್, ಹಿಂದಿ ಚಿತ್ರನಟಿ ರಮೇಶ ಕುಮಾರ್ ನಿಭೊರಿಯಾ, ಅಸ್ಡೆನ್ ಪ್ರಶಸ್ತಿ ವಿಜೇತ ಮತ್ತು ಗ್ರೀನ್ ಆಸ್ಕರ್ ಎಂದು ಹೆಸರುವಾಸಿಯಾದವ. ಯೊಗರಾಜ ಸಿಂಗ್, ಭಾರತೀಯ ಮಾಜೀ ಕ್ರಿಕೆಟಿಗ ಮತ್ತು ಪಂಜಾಬಿನ ಚಿತ್ರನಟ. ಯುವರಾಜ ಸಿಂಗ್, ಯೊಗರಾಜ್ ಸಿಂಗ್‌ರ ಪುತ್ರ ಮತ್ತು ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡದ ಉಪನಾಯಕ. ಇದನ್ನೂ ಗಮನಿಸಿ ಚಂಡಿಗಡದ ರಾಜಧಾನಿ ಪ್ರದೇಶ ಮೊಹಾಲಿ ಪಂಚಕುಲ ರಾಕ್ ಗಾರ್ಡನ್ ಝಿರಾಕ್ ಪುರ್ ಪ್ರಮುಖ ಅಕ್ಯಾಡೆಮಿಕ್ ಕೆಲಸಗಳು .ಇವೆನ್ ಸನ್, ಚಂಡಿಗಡ ಬರ್ಕಲೀ,ಯುನಿವರ್ಸಿಟಿ ಆಫ್ ಕಾಲಿಫೋರ್ನಿಯಾ ಪ್ರೆಸ್,೧೯೬೬ ಜೋಶಿ ಕಿರಣ್, ಡಾಕ್ಯುಮೆಂಟಿಂಗ್ ಚಂಡಿಗಡ್ :ದ ಇಂಡಿಯನ್ ಆರ್ಕಿಟೆಕ್ಚರ್ ಆಫ್ ಪಿಯರ್ರೆ ಜೆಯನರೆಟ್, ಎಡ್ವಿನ್ ಮ್ಯಾಕ್ಸ್‌ವೆಲ್ ಫ್ರೈ ಮತ್ತು ಜೇನ್ ಡ್ರೀವ್ ರವರುಗಳ ಭಾರತೀಯ ವಾಸ್ತುಶಿಲ್ಪ. ಅಹಮ್ಮದಾಬಾದ್: ಚಂಡಿಗಡದ ವಾಸ್ತುಶಿಲ್ಪ ಕಾಲೇಜ್ ನೊಂದಿಗೆ ಸೇರಿ ೧೯೯೯ ರಲ್ಲಿ ನಕ್ಷೆಯ ವರದಿ ಬಿಡುಗಡೆ ISBN ೧-೮೯೦೨೦೬-೧೩-X ಕಾಲಿಯಾ,ರವಿ. ಚಂಡಿಗಡ: ದ ಮೇಕಿಂಗ್ ಆಫ್ ಎನ್ ಇಂಡಿಯನ್ ಸಿಟಿ. ನವ ದೆಹೆಲಿ: ಆಕ್ಸ್‌‍ಫರ್ಡ್ ಯುನಿವರ್ಸಿಟಿ ಪ್ರೆಸ್.೧೯೯೯. ಮ್ಯಾಕ್ಸ್‌ವೆಲ್ ಫ್ರೈ ಮತ್ತು ಜೇನ್ ಡ್ರಿವ್ ಚಂಡಿಗಡ್ ಅಂಡ್ ಪ್ಲ್ಯಾನಿಂಗ್ ಡೆವಲಪ್‌ಮೆಂಟ್ ಇನ್ ಇಂಡಿಯಾ , ಲಂಡನ್:ರಾಯಲ್ ಸೊಸೈಟಿ ಅಫ್ ಆರ್ಟ್ಸ್ ನ ದಾಖಲೆ ಪುಸ್ತಕ. ಕ್ರ.ಸಂ.೪೯೪೮, ೧ ಎಪ್ರಿಲ್ ೧೯೫೫,Vol.CIII, ಪುಟಗಳು ೩೧೫-೩೩೩. I.ದ ಪ್ಲ್ಯಾನ್ ,ಇ ಮ್ಯಾಕ್ಸ್‌ವೆಲ್ ಫ್ರೈ II ರಿಂದ,ಹೌಸಿಂಗ್ , ಜೇನ್ ಬಿ.ಡ್ರಿವ್ ರಿಂದ. ನಾಗಿಯಾ, ಅಶಿಶ್. ರೀ-ಲೊಕೇಟಿಂಗ್ ಮಾಡರ್ನಿಸಮ್: ಚಂಡಿಗಡ, ಲಿ ಕೊರ್ಬಸೈಯರ್ ಅಂಡ್ ದ ಗ್ಲೋಬಲ್ ಪೋಸ್ಟಕೊಲೊನಿಯಲ್ . ಪಿಎಚ್‌ಡಿ ಪ್ರಬಂಧ, ವಾಶಿಂಗಟನ್ ಯುನಿವರ್ಸಿಟಿ, ೨೦೦೮. ಪೆರೆರಾ,ನಿಹಾಲ್. "ಸ್ಪರ್ಧಾತ್ಮಕ ನೋಟ: ಚಂಡಿಗಡ ಯೋಜನೆಯ ಮಿಶ್ರತೆ,ಪ್ರಚೋದಕತೆ ಮತ್ತು ಜನಕತೆ" ಪ್ಲ್ಯಾನಿಂಗ್ ಪರ್ಸ್‌ಪೆಕ್ಟಿವ್ಸ್ ೧೯ (೨೦೦೪): ೧೭೫-೧೯೯ ಪ್ರಕಾಶ್, ವಿಕ್ರಮಾದಿತ್ಯ. ಚಂಡಿಗಡ್ಸ್ ಲಿ ಕೊರ್ಬಸೈಯರ್: ದ ಸ್ಟ್ರಗಲ್ ಫಾರ್ ಮಾಡರ್ನಿಟಿ ಇನ್ ಪೋಸ್ಟ್‌ಕಾಲೋನಿಯಲ್ ಇಂಡಿಯಾ. ಸೀಯಾಟಲ್:ವಾಷಿಂಗ್ಟನ್ ವಿಶ್ವವಿದ್ಯಾಲಯ ಪ್ರೆಸ್, ೨೦೦೨. ಸರಿನ್,ಮಧು. ಅರ್ಬನ್ ಪ್ಲ್ಯಾನಿಂಗ್ ಇನ್ ದ ಥರ್ಡ್ ವರ್ಲ್ಡ್: ದ ಚಂಡಿಗಡ್ ಎಕ್ಸ್‌ಪೀರಿಯೆನ್ಸ್ . ಲಂಡನ್:ಮ್ಯಾನ್ಸೆಲ್ಲ್ ಪಬ್ಲಿಷಿಂಗ್, ೧೯೮೨. ನೋಡಿ ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ ಉಲ್ಲೇಖನಗಳು ಬಾಹ್ಯ ಸಂಪರ್ಕಗಳು ಚಂಡಿಗಡನ ಆಡಳಿತ. ಚಂಡಿಗಡದ ಆಡಳಿತದ ವ್ಯವಹಾರಿಕ ಜಾಲ್. ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾರತದ ಪಟ್ಟಣಗಳು
2124
https://kn.wikipedia.org/wiki/%E0%B2%B0%E0%B2%BE%E0%B2%9C%E0%B2%B8%E0%B3%8D%E0%B2%A5%E0%B2%BE%E0%B2%A8
ರಾಜಸ್ಥಾನ
ಸಂಕ್ಷಿಪ್ತ ವಿವರ ರಾಜಸ್ಥಾನ್ ಉತ್ತರ ಭಾರತದಲ್ಲಿ ಒಂದು ರಾಜ್ಯವಾಗಿದೆ. 342,239 ಚದರ ಕಿಲೋಮೀಟರ್ (132,139 ಚದರ ಮೈಲಿ) ಅಥವಾ ಭಾರತದ ಒಟ್ಟು ಭೌಗೋಳಿಕ ಪ್ರದೇಶದ 10.4 ರಷ್ಟು ಪ್ರದೇಶವನ್ನು ರಾಜ್ಯದ ಒಳಗೊಳ್ಳುತ್ತದೆ. ಇದು ಭಾರತದಲ್ಲಿ ಅತಿದೊಡ್ಡ ಪ್ರದೇಶದ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ಏಳನೇ ಅತಿದೊಡ್ಡ ರಾಜ್ಯವಾಗಿದೆ. ರಾಜಸ್ಥಾನವು ಭಾರತದ ವಾಯುವ್ಯ ಭಾಗದಲ್ಲಿ ನೆಲೆಗೊಂಡಿದೆ. ಅದರಲ್ಲಿ ವಿಶಾಲವಾದ ಮತ್ತು ನಿರಾಶ್ರಯವಾದ ಥಾರ್ ಮರುಭೂಮಿ ("ರಾಜಸ್ಥಾನ ಮರುಭೂಮಿ" ಮತ್ತು "ಗ್ರೇಟ್ ಇಂಡಿಯನ್ ಡಸರ್ಟ್" ಎಂದೂ ಸಹ ಕರೆಯಲ್ಪಡುತ್ತದೆ). ಇದು ಪಂಜಾಬಿನ ರಾಜ್ಯದೊಂದಿಗೆ ಮತ್ತು ಪಾಕಿಸ್ತಾನಗಡಿಯನ್ನು ವಾಯವ್ಯ ಭಾಗದಲ್ಲಿ ಹಂಚಿಕೊಂಡಿದೆ. ಸಟ್ಲೆಜ್-ಇಂಡಸ್ ನದಿ ಕಣಿವೆಯ ಉದ್ದಕ್ಕೂ ಪಶ್ಚಿಮಕ್ಕೆ ಸಿಂಧ್ ಇದ್ದು, ಇದು ಭಾರತದ ಇತರ ಐದು ರಾಜ್ಯಗಳ ಗಡಿಯನ್ನು ಹೊಂದಿದೆ: ಉತ್ತರಕ್ಕೆ ಪಂಜಾಬ್; ಹರಿಯಾಣ ಮತ್ತು ಉತ್ತರ ಪ್ರದೇಶ ಈಶಾನ್ಯಕ್ಕೆ; ಆಗ್ನೇಯಕ್ಕೆ ಮಧ್ಯ ಪ್ರದೇಶ; ಮತ್ತು ನೈಋತ್ಯಕ್ಕೆ ಗುಜರಾತ್. ಕಾಳಿಬಂಗಾದಲ್ಲಿ ಸಿಂಧೂ ಕಣಿವೆ ನಾಗರಿಕತೆಯ ಅವಶೇಷಗಳು ಪ್ರಮುಖ ಲಕ್ಷಣಗಳಾಗಿವೆ; ದಿಲ್ವಾರ ದೇವಸ್ಥಾನಗಳು, ಪುರಾತನ ಅರವಾಲ್ಲಿ ಪರ್ವತ ಶ್ರೇಣಿಯಲ್ಲಿರುವ ರಾಜಸ್ಥಾನದ ಏಕೈಕ ಗಿರಿಧಾಮ ಮೌಂಟ್ ಅಬುವು ಜೈನ ಯಾತ್ರಾ ಸ್ಥಳವಾಗಿದೆ; ಮತ್ತು ಪೂರ್ವ ರಾಜಸ್ತಾನದಲ್ಲಿ, ಭರತ್ಪುರ್ ಸಮೀಪವಿರುವ ಕಿಯೊಲಾಡಿಯೊ ರಾಷ್ಟ್ರೀಯ ಉದ್ಯಾನವನ, ವಿಶ್ವ ಪಾರಂಪರಿಕ ತಾಣ ಅದರ ಹಕ್ಕಿಗಳ ಜೀವಜಾಲಕ್ಕೆ ಹೆಸರುವಾಸಿಯಾಗಿದೆ. ರಾಜಸ್ಥಾನದಲ್ಲಿ ಮೂರು ರಾಷ್ಟ್ರೀಯ ಹುಲಿ-ಮೀಸಲು ತಾಣಗಳು ಇವೆ. ಅವು ಸವಾಯಿ ಮಾಧೋಪುರದಲ್ಲಿ, ರಣಥಂಬೋರ್ ರಾಷ್ಟ್ರೀಯ ಉದ್ಯಾನವನ, ಅಲ್ವಾರ್ನ ಸರಿಸ್ಕಾ ಹುಲಿ ರಿಸರ್ವ್ ಮತ್ತು ಕೋಟಾದಲ್ಲಿನ ಮುಕುಂದ್ರ ಹಿಲ್ ಟೈಗರ್ ರಿಸರ್ವ್. ರಾಜ್ಯವು 30 ಮಾರ್ಚ್ 1949 ರಂದು ರಜಪುತಾನಾದಲ್ಲಿ ಸ್ಥಾಪನೆಯಾಯಿತು - ಬ್ರಿಟಿಷ್ ರಾಜ್‍ನಲ್ಲಿದ್ದಾಗ ಆ ಪ್ರದೇಶವು ಅದರ ಅವಲಂಬನೆಗಳಿಂದಾಗಿ ಹೆಸರನ್ನು ಸ್ವೀಕರಿಸಿದೆ - ಇದು ಭಾರತದ ಬಣರಾಜ್ಯದಲ್ಲಿ ವಿಲೀನಗೊಂಡಿತು. ಇದರ ರಾಜಧಾನಿ ಮತ್ತು ದೊಡ್ಡ ನಗರ ಜೈಪುರ. ಇತರ ಪ್ರಮುಖ ನಗರಗಳು ಜೋಧಪುರ್, ಕೋಟಾ, ಬಿಕನೇರ್, ಅಜ್ಮೀರ್ ಮತ್ತು ಉದಯಪುರ. ರಾಜಕೀಯ ಮತ್ತು ಸರ್ಕಾರ +199 ಸದಸ್ಯರ ವಿಧಾನ ಸಭೆ.ಶ್ರೀ ಅಶೋಕ್ ಗೆಹ್ಲೋಟ್ ಮುಖ್ಯ ಮಂತ್ರಿ (೨೦೧೮) ವಿಧಾನ ಸಭೆ ೨೦೧೮ ೨೦೧೮ ರ ಚುನಾವಣೆ -ಎಣಿಕೆ ೧೧-೧೨-೨೦೧೮ ಶ್ರೀ ಅಶೋಕ್ ಗೆಹ್ಲೋಟ್ ಮುಖ್ಯ ಮಂತ್ರಿಯಾಗಿ ಸೋಮವಾರ ದಿ.೧೭-೧೨-೨೦೧೮ರಂದು ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಸಚಿನ್‌ ಪೈಲಟ್‌ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ರಾಜಸ್ಥಾನ ಸಚಿವ ಸಂಪುಟದಲ್ಲಿರುವ 23 ಸಚಿವರಲ್ಲಿ ಮೂವರು ಸಚಿವರು ಪಿಎಚ್‍ಡಿ, ಇಬ್ಬರು ಎಂಬಿಎ, ಆರು ಸಚಿವರು ಎಲ್‍ಎಲ್‍ಬಿ ಮತ್ತು ಒಬ್ಬರು ಇಂಜಿನಿಯರಿಂಗ್ ಪದವಿ ಪಡೆದವರಾಗಿದ್ದಾರೆ. ಏಳು ಸಚಿವರು ಪದವಿ ಪೂರೈಸಿಲ್ಲ. 15 ನೇ ವಿಧಾನಸಭೆ (ಡಿಸೆಂಬರ್ 2018 ರಲ್ಲಿ ರಚನೆ) ಪಕ್ಷದ ಬಲ- ಸದಸ್ಯರು ವಿಧಾನಸಭೆಯ ನಾಯಕ (ಮುಖ್ಯಮಂತ್ರಿ) ಅಶೋಕ್ ಗೆಹ್ಲೋಟ್, ಕಾಂಗ್ರೆಸ್-(INC); 17 ಡಿಸೆಂಬರ್ 2018 ರಿಂದ. ಪಕ್ಷಗಳ ಬಲಾ ಬಲ ರಾಜಸ್ಥಾನದ ನೋಟ ಚಿತ್ರಾಂಕಣ ರಾಜಸ್ಥಾನ ವಿಸ್ತೀರ್ಣದಲ್ಲಿ ಭಾರತದ ಅತ್ಯಂತ ದೊಡ್ಡ ರಾಜ್ಯ. [[Image:Bikaner.gif|thumb|right|ಬಿಕಾನೆರ್‌ ಮುಖ್ಯ ನಗರಗಳು ಮತ್ತು ಪಟ್ಟಣಗಳು ಬಾಹ್ಯ ಸಂಪರ್ಕ ರಾಜಸ್ಥಾನ ಸಕಾ೯ರದ ಅಧಿಕೃತ ಜಾಲತಾಣ ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ. ರಾಜಸ್ಥಾನಕ್ಕಾಗಿ ಮೀಸಲಾದ ಪೋರ್ಟಲ್ / ಫೋರಮ್ ನೃತ್ಯ ದಿಬ್ಬಗಳು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಜಸ್ಥಾನ
2125
https://kn.wikipedia.org/wiki/%E0%B2%A6%E0%B2%AE%E0%B2%A8%E0%B3%8D%20%E0%B2%AE%E0%B2%A4%E0%B3%8D%E0%B2%A4%E0%B3%81%20%E0%B2%A6%E0%B2%BF%E0%B2%AF%E0%B3%81
ದಮನ್ ಮತ್ತು ದಿಯು
ದಮನ್ ಮತ್ತು ದಿಯು ಭಾರತದ ಕೇಂದ್ರಾಡಳಿತ ಪ್ರದೇಶಗಳು.ಸ್ವಾತಂತ್ರ್ಯಕ್ಕಿಂತ ಮೊದಲು ಗೋವಾದೊಂದಿಗೆ ಪೊರ್ಚುಗೀಸರ ಸ್ವಾಧೀನವಿತ್ತು. "ಗೋವಾ, ದಮನ್ ಮತ್ತು ದಿಯು" ಪ್ರದೇಶವನ್ನು 1987 ವರೆಗೆ ಒಂದು ಒಕ್ಕೂಟ ಕ್ಷೇತ್ರವಾಗಿ ಆಡಳಿತಕ್ಕೊಳಪಟ್ಟಿತ್ತು. ಗೋವಾ ಪ್ರತ್ಯೇಕ ಒಕ್ಕೂಟ ಕ್ಷೇತ್ರವಾಗಿ ಮಾಡಿದಾಗ, ದಮನ್ ಮತ್ತು ದಿಯು ಬೇರೆಯಾದ ಕೇಂದ್ರಾಡಳಿತ ಪ್ರದೇಶವಾಯಿತು. ಎರಡು ಜಿಲ್ಲೆಗಳಲ್ಲಿ ಕೇಂದ್ರಾಡಳಿತ ಪ್ರದೇಶದ ಸ್ಥಳಗಳಲ್ಲಿ ಒಂದಾಗಿದೆ. ದಮನ್ ಮತ್ತು ದಿಯು ರಸ್ತೆಯಲ್ಲಿ ಸರಿಸುಮಾರು ೬೫೦ ಕಿಲೋಮೀಟರ್ ಪರಸ್ಪರ ದೂರ ಇವೆ.ಭಾರತದ ಉತ್ತರದಲ್ಲಿರುವ ಒಂದು ಒಕ್ಕೂಟ ಪ್ರದೇಶ. ಭೌಗೋಳಿಕ ಸ್ಥಾನ ಗುಜರಾತ್ ರಾಜ್ಯದ ಪಶ್ಚಿಮ ತೀರದಲ್ಲಿ ಮುಂಬಯಿಯಿಂದ ಸು. 193 ಕಿ.ಮೀ. ದೂರದಲ್ಲಿ ದರ್ಮನ್ ಪ್ರದೇಶವಿದೆ. ಪೂರ್ವದಲ್ಲಿ ಗುಜರಾತ್ ರಾಜ್ಯ, ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ, ಉತ್ತರದಲ್ಲಿ ಕೊಲಕ್ ನದಿ ಮತ್ತು ದಕ್ಷಿಣದಲ್ಲಿ ಕಲೈ ನದಿ ದಮನ್ ಪ್ರದೇಶವನ್ನು ಸುತ್ತುವರೆದಿವೆ. ದೀವ ಒಂದು ಪುಟ್ಟ ದ್ವೀಪ. ಇದು ಗುಜರಾತಿನ ಜುನಾಘಡ್ ಜಿಲ್ಲೆಯ ದಕ್ಷಿಣಕ್ಕೆ ಅರೇಬಿಯ ಸಮುದ್ರದಲ್ಲಿದೆ. ಈ ದ್ವೀಪಕ್ಕೆ ಗುಜರಾತ್ ರಾಜ್ಯ ಎರಡು ಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಿದೆ. ದಾಮನ್ ಗುಜರಾತಿನ ವಲ್ಸದ್ ಜಿಲ್ಲದೆಯ ಪಕ್ಕದಲ್ಲಿದ್ದು 72 ಚ.ಕಿ.ಮೀ. ವಿಸ್ತೀರ್ಣವಿದೆ. ದೀವ್ 40 ಚ.ಕಿ.ಮೀ. ವಿಸ್ತೀರ್ಣವುಳ್ಳದ್ದು ಇವುಗಳ ಒಟ್ಟು ವಿಸ್ತೀರ್ಣ 112 ಚ.ಕಿ.ಮೀ. 2001ರ ಅಂಕಿ ಅಂಶದ ಪ್ರಕಾರ 92,512 ಮಂದಿ ಪುರುಷರು, 65,692 ಮಂದಿ ಮಹಿಳೆಯರು ಇರುವ ಈ ಪ್ರದೇಶಗಳ ಒಟ್ಟು ಜನಸಂಖ್ಯೆ 1,58,204. ಆಡಳಿತ ಕೇಂದ್ರ ಪಟ್ಟಣ ದಮನ್. ಇತಿಹಾಸ ಗೋವ, ದಮನ್ ಮತ್ತು ದೀವ್ ಇವು ಪೋರ್ಚುಗೀಸರ ಆಡಳಿತಕ್ಕೆ ಸೇರಿದ್ದ ಪ್ರದೇಶಗಳಾಗಿದ್ದವು. ಭಾರತ ಸ್ವತಂತ್ರವಾದರೂ ಇವು ಪೋರ್ಚುಗೀಸರ ಮುಷ್ಠಿಯಿಂದ ಬಿಡುಗಡೆಯಾಗಲಿಲ್ಲ. ಇದಕ್ಕಾಗಿ ಭಾರತೀಯರು ಗೋವದ ಮುಕ್ತಿಗಾಗಿ ಮತ್ತೆ ಹೋರಾಡಬೇಕಾಯಿತು. 1961ರಲ್ಲಿ ಮುಕ್ತಗೊಂಡ ಈ ಪ್ರದೇಶಗಳು ಭಾರತದ ಆಡಳಿತಕ್ಕೆ ಸೇರಿದವು. ಮುಂದೆ 1987, ಮೇ 30ರಂದು ಗೋವ ರಾಜ್ಯವಾಯಿತು. ಅಂದಿನಿಂದ ದಮನ್ ಮತ್ತು ದೀವ್‍ಗಳು ಒಕ್ಕೂಟದ ಆಡಳಿತಕ್ಕೆ ಒಳಪಟ್ಟವು. ದಮನ್ ಜಿಲ್ಲೆಯ ಜನಸಂಖ್ಯೆ ೨,೪೨,೯೧೧ ದೀವ್ ಜಿಲ್ಲೆಯ ಜನಸಂಖ್ಯೆ 44,215. ಎರಡು ಪಟ್ಟಣಗಳು, 23 ಗ್ರಾಮಗಳು ಇರುವ ಈ ಪ್ರದೇಶಗಳಿಗೆ ದಮನ್ ಮತ್ತು ದೀವ್‍ಗಳೇ ಆಡಳಿತ ಪ್ರದೇಶಗಳು. ವ್ಯವಸಾಯ ಈ ಪ್ರದೇಶದ ಒಟ್ಟು ಭೂ ಪ್ರದೇಶದಲ್ಲಿ 1,12,103 ಹೆಕ್ಟೇರ್‍ಗಳು ವ್ಯವಸಾಯಕ್ಕೆ ಬಳಸಲಾಗಿದೆ. ಬತ್ತ, ರಾಗಿ, ಬಾಜ್ರ, ಜೋಳ, ನೆಲಗಡಲೆ, ವಿವಿಧ ದ್ವಿದಳ ಧಾನ್ಯಗಳು, ಗೋಧಿ ಬೆಳೆಯುವುದರ ಜೊತೆಗೆ ಬಾಳೆಹಣ್ಣು, ಸಪೋಟ, ಮಾವು, ತೆಂಗು ಮತ್ತು ಕಬ್ಬು ಬೆಳೆಯುತ್ತಾರೆ. ಇಲ್ಲಿ ಅರಣ್ಯ ಪ್ರದೇಶವಿಲ್ಲವೆಂದೇ ಹೇಳಬಹುದು. ಕೈಗಾರಿಕೆ ಎರಡೂ ಪ್ರದೇಶಗಳು ಸೇರಿದಂತೆ ಸು. 746 ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳಿವೆ. ದಮನ್ನಿನ ಆಮ್ನಿಬಸ್ ಇಂಡಸ್ಟ್ರಿಯರ್ ಡೆವಲಪ್‍ಮೆಂಟ್ ನಿಗಮ ಮುಖ್ಯ ಕೈಗಾರಿಕಾ ಕ್ಷೇತ್ರವಾಗಿದ್ದು ದಬೆಲ್, ಭಿಮ್‍ಪುರೆ, ಕಾಚಿಗಮ್ ಮತ್ತು ಕದೈಯ ಇವು ಸಹ ಕೈಗಾರಿಕಾ ಕ್ಷೇತ್ರಗಳಾಗಿವೆ. ಸಾಕಷ್ಟು ವಿದ್ಯುತ್ ಸರಬರಾಜಿದ್ದು ಪಟ್ಟಣ ಮತ್ತು ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವಿದೆ. ಸಂಪರ್ಕ ಸಾರಿಗೆ ಸಂಪರ್ಕ ಕುರಿತಂತೆ ದಮನ್‍ನಲ್ಲಿ 191 ಕಿ.ಮೀ. ದೂರದ ಹಾಗೆ ದೀವ್‍ನಲ್ಲಿ 78 ಕಿ.ಮೀ ರಸ್ತೆಗಳಿವೆ. ನೇರ ರೈಲು ಸಂಪರ್ಕವಿಲ್ಲದ ಇವುಗಳಿಗೆ ಹತ್ತಿರದ ಮುಂಬಯಿ, ದೆಹಲಿ ಪಶ್ಚಿಮ ರೈಲು ಮಾರ್ಗದ ವಾಪಿ ನಿಲ್ದಾಣ ದಮನ್‍ಗೆ ಹತ್ತಿರವಿದ್ದರೆ ದೀವ್‍ಗೆ ಮೀಟರ್ ಗೇಜ್‍ನ ದೆಲ್ವಾಡ ರೈಲು ನಿಲ್ದಾಣ ಹತ್ತಿರವಿದೆ. ಎರಡೂ ಪ್ರದೇಶಗಳಿಗೆ ವಿಮಾನ ಸಂಪರ್ಕವಿದೆ. ಮುಂಬಯಿಯಿಂದ ದೀವ್‍ಗೆ ನಿಗದಿತವಾದ ನೇರ ವಿಮಾನ ಸಂಪರ್ಕವಿದೆ. ಪ್ರವಾಸೋದ್ಯಮ ಈ ಎರಡೂ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡುವುದುಂಟು. ಬಾಮ್ ಜೇಸಸ್ ಚರ್ಚ್, ಆವರ್ ಲೇಡಿ ಆಫ್ ಸೀ ಚರ್ಚ್, ಅವರ್ ಲೇಡಿ ಆಫ್ ರೆಮೆಡಿಯೋಸ್ ಚರ್ಚ್, ಮೋತಿದಮನ್ ಮತ್ತು ನಾನಿ ದರ್ಮನ್ ಕೋಟೆಗಳು ಜಾಮ್‍ಪೊರೆ ಮತ್ತು ದೇವ್‍ಕ ಸಮುದ್ರ ತೀರಗಳು, ಸಾರ್ವಜನಿಕ ಉದ್ಯಾನವನ, ಮೋತಿ ದಮನ್ ಜೆಟ್ಟಿ, ಮತ್ತು ಪರ್ಗೊಲ ತೋಟಗಳು, ಮೋತಿ ದಮನ್ ವಿಹಾರ ಉದ್ಯಾನವನ, ದೇವ್‍ಕ, ದಮನ್ ಗಂಗಾ ಪ್ರವಾಸಿ ವಿಹಾರ ಕೇಂದ್ರಗಳು, ಕಾಚಿಗಮ್, ಸತ್ಯ ಸಾಗರ್ ಉದ್ಯಾನ್, ಮಿರಸಾಲ್ ಉದ್ಯಾನ, ಮತ್ತು ಜಲಕ್ರೀಡಾ ಪಾರ್ಕ್‍ಗಳು ಬಹು ಪ್ರಸಿದ್ಧ. ಅದರಂತೆ ದೀವ್‍ನ ಸಂತ ಪಾಲ್ ಚರ್ಚ್, ದೀವ್‍ನ ಕೋಟೆ ಮತ್ತು ಪನಿ ಕೊಟ ಕೋಟೆ, ನಗೋವ ಮತ್ತು ಚಕ್ರತೀರ್ಥ, ಗೋಖ್ಲಾದ ಮಕ್ಕಳ ಉದ್ಯಾನವನ ಮತ್ತು ಬೇಸಿಗೆ ಮನೆ ಯಾತ್ರಿಕರನ್ನು ಸೆಳೆಯುವ ಬಹು ಪ್ರಸಿದ್ಧ ಆಕರ್ಷಕ ಸ್ಥಳಗಳಾಗಿವೆ. ಆಡಳಿತ ಇತ್ತೀಚೆಗೆ ಮುಂಬಯಿಯಲ್ಲಿ ದಮನ್, ದೀವ್ ಮತ್ತು ದಾದ್ರಾ ಮತ್ತು ನಗರ್ ಹವೇಲಿ ಇವುಗಳಿಗೆ ಒಂದು ಉಚ್ಛನ್ಯಾಯಾಲಯವನ್ನು ಸ್ಥಾಪಿಸಲಾಗಿದೆ ಉಲ್ಲೇಖಗಳು ಬಾಹ್ಯ ಸಂಪರ್ಕಗಳು Daman Administration's Official Website WorldStatesmen, including lists of Portuguese captains/governors of Damão and Diu ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2126
https://kn.wikipedia.org/wiki/%E0%B2%B2%E0%B2%95%E0%B3%8D%E0%B2%B7%E0%B2%A6%E0%B3%8D%E0%B2%B5%E0%B3%80%E0%B2%AA
ಲಕ್ಷದ್ವೀಪ
ಲಕ್ಷದ್ವೀಪ (ಮಲಯಾಳಂನಲ್ಲಿ: : ലക്ഷദ്വീപ്) ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಂತ ಚಿಕ್ಕದಾದುದು. ಮುಖ್ಯವಾಗಿ ೧೨ ಹವಳ ದ್ವೀಪಗಳು, ೩ ಹವಳದ ರೀಫ್‌ಗಳು ಹಾಗು ೫ ಆಳವಿರದ ಸಾಗರತಳದ ಪ್ರದೇಶಗಳಿಂದ ನಿರ್ಮಿತವಾಗಿರುವ ಈ ದ್ವೀಪ ಸಮೂಹದ ಒಟ್ಟು ವಿಸ್ತೀರ್ಣ ೩೨ ಚದುರ ಕಿ.ಮಿ.ಗಳಷ್ಟು. ಇದಲ್ಲದೆ ಇನ್ನೂ ಹಲವಾರು ಪುಟ್ಟ ಜನನಿಬಿಡ ದ್ವೀಪಗಳಿವೆ. ಜನರಿರುವ ದ್ವೀಪಗಳು ಒಟ್ಟು ೧೧. ಅಗಟ್ಟಿ ಅಮಿನಿ ಅನ್ಡ್ರೊಟ್ ಬಂಗಾರಂ ಬಿತ್ರ ಚೆತ್ಲಾತ್ ಕದ್ಮತ್ ಕಲ್ಪೇನಿ ಕವರತ್ತಿ ಕಿಲ್ತಾನ್ ಮಿನಿಕಾಯ್ ಐತಿಹ್ಯ ಈಗ ಪ್ರಚಲಿತದಲ್ಲಿರುವ 'ಲಕ್ಷದ್ವೀಪ,' ಒಂದು ಕಾಲದಲ್ಲಿ 'ಲಖದೀವ್','ಮಿನಿಕೋಯ್' ಮತ್ತು 'ಅಮಿನ್ ದಿವಿ' ದ್ವೀಪಗಳು ಎಂದು ಕರೆಯಲಾಗುತ್ತಿದ್ದ, ಅರಬ್ಬೀ ಸಮುದ್ರದ ನಡುವೆ ಇರುವ ಒಂದು ದ್ವೀಪ ಸಮೂಹವಾಗಿತ್ತು. ಭಾರತದೇಶದ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶ. ಲಕ್ಷದ್ವೀಪದ ಒಟ್ಟು ಭೂ ವಿಸ್ತೀರ್ಣ ೩೨ ಚದರ ಕಿ.ಮೀ.ಗಳು. ಇವು ೪,೨೦೦ ಚ. ಕಿ; ಮೀ. ವಿಸ್ತೀರ್ಣದ ಜಲಭಾಗದ ಮಧ್ಯೆ ಇವೆ. ಭಾರತದ ಪಶ್ಚಿಮ ತೀರದಿಂದ ಈ ದ್ವೀಪಗಳು ೨೦೦ ರಿಂದ ೪೪೦ ಕಿ.ಮಿ ನಷ್ಟು ದೂರದಲ್ಲಿವೆ. ಈ ದ್ವೀಪ ಸಮುದಾಯವನ್ನು ಒಂದು ಜಿಲ್ಲೆಯಾಗಿ ಪರಿಗಣಿಸಲಾಗಿದ್ದು, ಇದನ್ನು ೧೦ ತಾಲೂಕುಗಳನ್ನಾಗಿ ವಿಂಗಡಿಸಲಾಗಿದೆ. ಲಕ್ಷದ್ವೀಪದ ರಾಜಧಾನಿ ಕವರಟ್ಟಿ. 'ಕೇರಳ ಹೈಕೋರ್ಟ್' ನ ಪರಿಧಿಯಲ್ಲಿ ಬರುತ್ತದೆ. ಸ್ವಾತಂತ್ರ್ಯಪೂರ್ವದ ಕಾಲದಲ್ಲಿ ಇದು 'ಮದ್ರಾಸ್ ಪ್ರೆಸಿಡೆನ್ಸಿ' ಅಂಗವಾಗಿತ್ತು. ೧೯೫೬ ರಲ್ಲಿ ಕೇಂದ್ರಾಡಳಿತ ಪ್ರದೇಶವಾಯಿತು. ಒಟ್ಟು ೩೯ ದ್ವೀಪಗಳಿವೆ; ೧೦ ರಲ್ಲಿ ಮಾತ್ರ ಜನವಸತಿ ಇದೆ. ೨೦೧೧ ರ ಜನಗಣತಿ ಪ್ರಕಾರ, ಇಲ್ಲಿನ ಜನಸಂಖೆ ೬೪,೪೨೯ ಹೆಚ್ಚು ಜನ ಮುಸಲ್ಮಾನರು.'ಸುನ್ನಿ ಪಂಥದ ಶಫಿ ಸಮುದಾಯ'ಕ್ಕೆ ಸೇರಿದ್ದಾರೆ. ಅವರೆಲ್ಲಾ ಮಲಯಾಳಂ ಭಾಷೆಯಲ್ಲಿ ವ್ಯವಹರಿಸುತ್ತಾರೆ ಮಿನಿಕೋಯ್ ದ್ವೀಪದಲ್ಲಿ ಮಾಹ್ಲ್ (ಮಾಹಿ) ಭಾಷೆ ಬಳಕೆಯಲ್ಲಿದೆ. ಆದಿವಾಸಿಗಳಿಲ್ಲದ ದ್ವೀಪ ಸಮುದಾಯ ಪ್ರದೇಶ. ಕ್ರಿ.ಪೂ.೧೫೦೦ ರಲ್ಲಿ, ಇಲ್ಲಿ ಜನ ವಾಸಿಸಲು ಆರಂಭಿಸಿದರು. ಪುರಾತನ ಕಾಲದ ನಾವಿಕರು ಹೇಳುವ ಕಥೆಗಳ ಪ್ರಕಾರ, ಕ್ರಿ.ಪೂ. ೬ ನೆಯ ಶತಮಾನದ ಜಾತಕ ಕಥೆಗಳಲ್ಲಿ ಈ ದ್ವೀಪಗಳ ಉಲ್ಲೇಖವಿದೆ. ಪುರಾತನ ಗ್ರೀಕ್ ನಾವಿಕರ 'ಸಮುದ್ರೀಯ ಭೂಪಟ' ಮತ್ತು ದಾಖಲೆಗಳಲ್ಲಿ ಈ ದ್ವೀಪಗಳ ಉಲ್ಲೇಖವಿದೆ. ಈ ದ್ವೀಪಕ್ಕೆ ಅವರು ಬಂದಿರಬಹುದು. 'ಪಾಥಿತ್ರಪ್ಪತ್ತು' ಎಂಬ ಸಂಗಮ ಸಾಹಿತ್ಯದಲ್ಲಿ ಈ ದ್ವೀಪಗಳು ಚೇರ ಸಾಮ್ರಾಜ್ಯಕ್ಕೆ ಸೇರಿದವು, ಎಂದು ಹೇಳಲಾಗಿದೆ. ೭ ನೆಯ ಶತಮಾನದ ಪಲ್ಲವ ಶಿಲಾಬರಹಗಳಲ್ಲಿ 'ದ್ವೀಪ ಲಕ್ಷಮ್' ಪಲ್ಲವರಿಗೆ ಸೇರಿದೆ ಎಂಬ ಉಲ್ಲೇಖವಿದೆ. ಉಲ್ಲೇಖಗಳು ಸ್ಥಳೀಯ ಬರಹಗಳ ಪ್ರಕಾರ 'ಚೇರ ಸಾಮ್ರಾಜ್ಯದ ಕೊನೆಯ ಅರಸು ಚೇರಮನ್ ಪೆರುಮಾಳ್' ಕಾಲದಲ್ಲಿ ಇಲ್ಲಿ ಜನವಸತಿ ಆರಂಭವಾಗಿತ್ತು.ಮೊದಲು ಅಮಿನಿ, ಕಾಲ್ ಪೇನಿ,ಆಂಡ್ರೋಟ್, ಕವರಟ್ಟಿ, ಮತ್ತು ಅಗಾಟ್ಟಿ, ದ್ವೀಪಗಳಲ್ಲಿ ಕೇರಳದಿಂದ ಬಂದು ನೆಲೆಸಿದ ಜನರಿದ್ದರು. ಪುರಾತತ್ವ ಇಲಾಖೆಯ ದಾಖಲೆಗಳ ಪ್ರಕಾರ ಇಲ್ಲಿ ಕ್ರಿ.ಶಕ ೫-೬ ನೆಯ ಶತಮಾನದಲ್ಲಿ ಬೌದ್ಧಧರ್ಮ ಪ್ರಚಲಿತದಲ್ಲಿತ್ತು. ಕ್ರಿ.ಶ. ೬೬೧ ರಲ್ಲಿ, 'ಉಬೇದುಲ್ಲ' ಎಂಬ ಅರಬ್ ಇಲ್ಲಿಗೆ ಇಸ್ಲಾಂ ಧರ್ಮವನ್ನು ತಂದನು. ೧೧ ಶತಮಾನದಲ್ಲಿ ಚೋಳರು ಆಧಿಪತ್ಯ ನಡೆಸಿದರು. ಅವರ ನಂತರ ದ್ವೀಪಗಳು, 'ಕಣ್ಣಾನೂರಿನ ಅರಸರ ಆಡಳಿತ'ಕ್ಕೆ ಒಳಗಾಯಿತು. ೧೩೪೩ ರಲ್ಲಿ ಅರಬ್ ಯಾತ್ರಿ,ಇಬ್ನ್ ಬಟೂಟಾ ಎಂಬುವನು ಎಂಬುವನು ಇಲ್ಲಿಗೆ ಬಂದಿದ್ದ ಎಂದು ಸ್ಥಳೀಯರು ಹೇಳುತ್ತಾರೆ. ಪೋರ್ಚುಗೀಸರು ಇಲ್ಲಿ ೧೪೯೮ ರಲ್ಲೇ ಆಗಮಿಸಿದ್ದರು. ಅವರು ಇಲ್ಲಿ ತೆಂಗಿನನಾರಿನ ಉತ್ಪಾದನೆ ಪ್ರಾರಂಭಿಸಿದರು. ಆದರೆ ಸ್ಥಳೀಯರು ೧೫೪೫ ರಲ್ಲಿ ಅವರನ್ನು ಓಡಿಸಿದ್ದರು. ೧೭ ನೆಯ ಶತಮಾನದಲ್ಲಿ ಕಣ್ಣೂರಿನ 'ಆಲಿ ರಜಾ ಅರಕ್ಕಲ್ ಭೀವಿ'ಗೆ ಈ ದ್ವೀಪಗಳು ಕೊಳತ್ತಿರಿ ರಾಜರಿಂದ ಕಾಣಿಕೆಯಾಗಿ ಸಿಕ್ಕಿತು. ಅಮಿನ್ ದೀವಿ ದ್ವೀಪಗಳು, ೧೭೮೭ ರಲ್ಲಿ ಟಿಪ್ಪುಸುಲ್ತಾನ ವಶಕ್ಕೆ ಬಂದವು. ಅವರ ಬಳಿಕ ಬ್ರಿಟಿಷರ ಸಮಯದಲ್ಲಿ ಅವು, ದಕ್ಷಿಣ ಕೆನರಾ ಭಾಗವಾಯಿತು.ಉಳಿದ ದ್ವೀಪಗಳನ್ನು ಕಣ್ಣಾನೂರಿನ ಅರಕ್ಕಲ್ ಮನೆತನ ಆಳುತ್ತಿತ್ತು. ಅರಕ್ಕಲ್ ರಾಜರು, ಕಪ್ಪ ಕೊಡದ ಕಾರಣ, ಬ್ರಿಟಿಷರು ಈ ದ್ವೀಪಗಳನ್ನು ವಶಪಡಿಸಿಕೊಂಡು ಮದ್ರಾಸ್ ಪ್ರೆಸಿಡೆನ್ಸಿಯ ಮಲಬಾರ್ ಜಿಲ್ಲೆಗೆ ಸೇರಿಸಿದರು. ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2128
https://kn.wikipedia.org/wiki/%E0%B2%95%E0%B3%87%E0%B2%82%E0%B2%A6%E0%B3%8D%E0%B2%B0%E0%B2%BE%E0%B2%A1%E0%B2%B3%E0%B2%BF%E0%B2%A4%20%E0%B2%AA%E0%B3%8D%E0%B2%B0%E0%B2%A6%E0%B3%87%E0%B2%B6%E0%B2%97%E0%B2%B3%E0%B3%81
ಕೇಂದ್ರಾಡಳಿತ ಪ್ರದೇಶಗಳು
ಕೇಂದ್ರಾಡಳಿತ ಪ್ರದೇಶವು ಒಂದು ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ. ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತದೆ. ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರುವುದಿಲ್ಲ. ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನ ಸಭೆಯ ಸ್ಥಾನ ಕಲ್ಪಿಸಬಹುದು.ದೆಹಲಿ ಹಾಗು ಪುದುಚ್ಛೇರಿ ಸರ್ಕಾರಗಳು ಇದರ ಉದಾಹರಣೆಗಳಾಗಿವೆ. ಉಲ್ಲೇಖ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 1) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 2) ಆಂದ್ರಪ್ರದೇಶ ಮತ್ತು ತೆಲಂಗಾಣ 3)ಅರುಣಾಚಲ ಪ್ರದೇಶ 4)ಅಸ್ಸೋo 5)ಬಿಹಾರ್ 6)ಚಂಡೀಗಢ 7) ಛತ್ತೀಸ್ಗಡ 8)ದೆಹಲಿ 9)ಗೋವಾ 10) ಗುಜರಾತ್ 11)ಹರಿಯಾಣ 12)ಹಿಮಾಚಲ ಪ್ರದೇಶ 13)ಜಮ್ಮು ಮತ್ತು ಕಾಶ್ಮೀರ
2131
https://kn.wikipedia.org/wiki/%E0%B2%A1%E0%B3%8B%E0%B2%97%E0%B3%8D%E0%B2%B0%E0%B2%BF
ಡೋಗ್ರಿ
Languages with ISO 639-2 code ISO language articles citing sources other than Ethnologue ಡೋಗ್ರಿ ( ಹೆಸರು ಡೋಗ್ರಾ ಅಕ್ಖರ್ ; ದೇವನಾಗರಿ : ಡೊಗರಿ ; ನಸ್ತಾಲಿಕ್ : ; IPA: [ɖoːɡɾiː] ) ಎಂಬುದು ಪ್ರಾಥಮಿಕವಾಗಿ ಭಾರತದ ಜಮ್ಮು ಮತ್ತು ಕಾಶ್ಮೀರದ ಜಮ್ಮು ಪ್ರದೇಶದಲ್ಲಿ ಮಾತನಾಡುವ ಇಂಡೋ-ಆರ್ಯನ್ ಭಾಷೆ. ಪಶ್ಚಿಮ ಹಿಮಾಚಲ ಪ್ರದೇಶ, ಉತ್ತರ ಪಂಜಾಬ್, ಮತ್ತು ಈಶಾನ್ಯ ಪಾಕಿಸ್ತಾನಿ ಪಂಜಾಬ್‌ನ ಪಕ್ಕದ ಪ್ರದೇಶಗಳಲ್ಲಿ ಮಾತನಾಡುವವರ ಸಣ್ಣ ಗುಂಪುಗಳನ್ನು ಹೊಂದಿದೆ. ಇದು ಡೋಗ್ರಾಗಳ ಜನಾಂಗೀಯ ಭಾಷೆಯಾಗಿದೆ. ಗ್ರೇಟರ್ ದುಗ್ಗರ್ನ ಐತಿಹಾಸಿಕ ಪ್ರದೇಶದಲ್ಲಿ ಮಾತನಾಡುತ್ತಿದ್ದರು. ಪ್ರಸ್ತುತ ಜಿಲ್ಲೆಗಳಲ್ಲಿ : ಕಥುವಾ, ಜಮ್ಮು, ಸಾಂಬಾ, ಉಧಂಪುರ್, ಮತ್ತು ರಿಯಾಸಿ, ಈ ಜಿಲ್ಲೆಯ ನಿವಾಸಿಗಳು ಕಾಶ್ಮೀರಿ, ಹಿಂದಿ, ಉರ್ದು ಮತ್ತು ಪಂಜಾಬಿ ಮಾತನಾಡುತ್ತಾರೆ. ಡೋಗ್ರಿ ಪಾಶ್ಚಾತ್ಯ ಪಹಾರಿ ಭಾಷೆಗಳ ಗುಂಪಿನ ಸದಸ್ಯ. ಇಂಡೋ-ಯುರೋಪಿಯನ್ ಭಾಷೆಗೆ ಅಸಾಧಾರಣವಾಗಿ, ಡೋಗ್ರಿ ಟೋನಲ್ ಆಗಿದೆ. ಇದು ಇತರ ಪಾಶ್ಚಿಮಾತ್ಯ ಪಹಾರಿ ಭಾಷೆಗಳು ಮತ್ತು ಪಂಜಾಬಿಗಳೊಂದಿಗೆ ಹಂಚಿಕೊಳ್ಳುವ ಲಕ್ಷಣವಾಗಿದೆ. ಇದು ಹಲವಾರು ಪ್ರಭೇದಗಳನ್ನು ಹೊಂದಿದ್ದು, ಎಲ್ಲವೂ 80% ಕ್ಕಿಂತ ಹೆಚ್ಚು ಲೆಕ್ಸಿಕಲ್ ಹೋಲಿಕೆಯನ್ನು ಹೊಂದಿದೆ (ಜಮ್ಮು ಮತ್ತು ಕಾಶ್ಮೀರದೊಳಗೆ). ಡೋಗ್ರಿಯನ್ನು ಭಾರತದಲ್ಲಿ 2.6 ಮಿಲಿಯನ್ ಜನರು ಮಾತನಾಡುತ್ತಾರೆ. (2011 ರ ಜನಗಣತಿ ಆಧಾರ). ಇದು 2003 ರಿಂದ ದೇಶದ 22 ಅನುಸೂಚಿತ ಭಾಷೆಗಳಲ್ಲಿ ಒಂದಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ 5 ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಧ್ವನಿಶಾಸ್ತ್ರ ಸ್ವರಗಳು ಈ ಕೆಳಗಿನ ಸ್ವರಗಳ ನಾಸಲ್ ಮಾರ್ಪಾಡುಗಳಿವೆ / /. ಪದ-ಮಧ್ಯದ ಅಥವಾ ಪದ-ಅಂತಿಮ / / ಮೊದಲು ಸಂಭವಿಸಿದಾಗ ಸ್ವರ ಶಬ್ದಗಳನ್ನು ಸಾಮಾನ್ಯವಾಗಿ ಮೂಗಿನ ಸಹಾಯದಿಂದ ಧ್ವನಿಸುತ್ತದೆ. / / ಒಂದು /a/ ಸ್ವರ ಧ್ವನಿಯ ಮೊದಲು ಸಂಭವಿಸಿ [ ] ಅನ್ನು ಹೊಂದಬಹುದು. ಪದ-ಅಂತಿಮ / / ಅನ್ನು ಬ್ಯಾಕ್ ಸೌಂಡ್ [ ] ಎಂದು ಅರಿತುಕೊಳ್ಳಲಾಗುತ್ತದೆ ಮತ್ತು ಕೇಂದ್ರೀಕೃತ [ ] ಧ್ವನಿಯ ಕಡೆಗೆ ಚಲಿಸಬಹುದು. ಸ್ವರ ನಿಯಮಗಳು ಇವು ದೇವನಾಗರಿ ಲಿಪಿಯನ್ನು ಬಳಸಿಕೊಂಡು ಡೋಗ್ರಿಯಲ್ಲಿ ಸ್ವರಗಳನ್ನು ಬರೆಯುವ ನಿಯಮಗಳಾಗಿವೆ. ಅವು ಈ ಕೆಳಗಿನಂತಿವೆ:- ಪಂಜಾಬಿಯಂತೆಯೇ, ಡೋಗ್ರಿಯಲ್ಲೂ ನಾದದ ಬಳಕೆಗಳಿಗಾಗಿ घ (gʱə), झ (d͡ʒʱə), ढ (ɖʱə), ध (d̪ʱə), भ (bʱə) ಮತ್ತು ढ़ (ɽʱə) ಅಕ್ಷರಗಳನ್ನು ಬಳಸುತ್ತಾರೆ. ಪದದ ಆರಂಭದಲ್ಲಿ, ಅದು ಹೆಚ್ಚು ಬೀಳುವ ಸ್ವರವನ್ನು ಹೊಂದಿರುತ್ತದೆ; ಅಂದರೆ:- घ (kə̂), झ (t͡ʃə̂), ढ (ʈə̂), ध (t̪ə̂), भ (pə̂) ಮತ್ತು ढ़ (ɽə̂). ಪದದ ಮಧ್ಯ ಮತ್ತು ಅಂತಿಮ ಸ್ಥಾನದಲ್ಲಿದ್ದಾಗ, ಹಿಂದಿನ ಸ್ವರವು ಕಡಿಮೆ-ಏರುತ್ತಿರುವ ಸ್ವರವನ್ನು ಹೊಂದಿರುತ್ತದೆ; ಅಂದರೆ:- अघ (ə̌ɡ), अझ (ə̌d͡ʒ), अढ (ə̌ɖ), अध (ə̌d̪), अभ (ə̌b) ಮತ್ತು अढ़ (ə̌ɽ). ಉದಾಹರಣೆಗಳು:- घड़ी (kə̂ɽiː)- ಗಡಿಯಾರ, ಮತ್ತು बध (bə̌d̪). ಪಂಜಾಬಿಗಿಂತ ಭಿನ್ನವಾಗಿ, ಯಾವುದೇ ह (ɦə) ಶಬ್ದವಿಲ್ಲ ಮತ್ತು ಇದು ಎಲ್ಲಾ ಸ್ಥಾನಗಳಲ್ಲಿ ಹೆಚ್ಚು ಬೀಳುವ ಸ್ವರವನ್ನು ಹೊಂದಿದೆ; ಅಂದರೆ:- हत्थ (ə̂t̪ːʰə)- ಕೈ. ಪದಗಳ ಮಧ್ಯದಲ್ಲಿ ಕಡಿಮೆ-ಏರುತ್ತಿರುವ ಸ್ವರವನ್ನು ಸೂಚಿಸಲು, ಹಿಂದಿನ ಸ್ವರವು ಉದ್ದವಾದಾಗ ಅದನ್ನು ಸೂಚಿಸಲು ಡೋಗ್ರಿ ह (ह ನೊಂದಿಗೆ ಹೇಲಂಟ್ ) ಅನ್ನು ಬಳಸುತ್ತಾರೆ; ಅಂದರೆ:- आ (aː), ई (iː), ऊ (uː), ए (eː), ऐ (ɛː), ओ (oː) ಮತ್ತು औ (ɔː). ಉದಾಹರಣೆ:- साह्ब (sǎːb)- ಸಾಹಬ್ . ಹಿಂದಿನ ಸ್ವರವು ಚಿಕ್ಕದಾದಾಗ, ಅಂದರೆ, - अ (ə), इ (ɪ) ಮತ್ತು उ (ʊ); ಸಂಯೋಜಿಸುವ ಅಪಾಸ್ಟ್ರಫಿ ( ʼ ) ಅನ್ನು ಬಳಸಲಾಗುತ್ತದೆ. ಉದಾಹರಣೆ:- ल ʼ त्त (lə̌tː)- ಕಾಲು. ಚಿಕ್ಕ ಸ್ವರ ಮತ್ತು ದೀರ್ಘ ಸ್ವರದ ನಡುವೆ ಇರುವಾಗ ಪದಗಳ ಮಧ್ಯದಲ್ಲಿ ಹೆಚ್ಚು ಬೀಳುವ ಸ್ವರವನ್ನು ಸೂಚಿಸಲು ಮೊದಲ ಹಂತದಲ್ಲಿ ಉಲ್ಲೇಖಿಸಲಾದ ಅಕ್ಷರಗಳನ್ನು ಸಹ ಬಳಸಬಹುದು. ವ್ಯಂಜನಗಳು / / ವ್ಯಂಜನಗಳನ್ನು ಹೊರತುಪಡಿಸಿ ಎಲ್ಲಾ ವ್ಯಂಜನಗಳಲ್ಲಿ ಜೆಮಿನೇಷನ್ ಸಂಭವಿಸುತ್ತದೆ. ರೆಟ್ರೋಫ್ಲೆಕ್ಸ್ ವ್ಯಂಜನಗಳು / / ಪದದ ಆರಂಭಿಕ ಸ್ಥಾನದಲ್ಲಿ ವಿರಳವಾಗಿ ಕಂಡುಬರುತ್ತದೆ. / / ಪರ್ಸೋ-ಅರೇಬಿಕ್ ಸಾಲದ ಪದಗಳಿಂದ ಮಾತ್ರ ಸಂಭವಿಸುತ್ತದೆ. / / ಅನ್ನು / / ನ ಅಲೋಫೋನ್ ಆಗಿಯೂ ಕೇಳಲಾಗುತ್ತದೆ. / / ಕೆಲವು ಭಾಷಣದಲ್ಲಿ ಟ್ರಿಲ್ಡ್ [ ] ಎಂದು ಸಹ ಸ್ವಲ್ಪಮಟ್ಟಿಗೆ ಕೇಳಬಹುದು. ಕೆಲವು ಪದಗಳಲ್ಲಿ, / / ಹೆಚ್ಚು ದುರ್ಬಲವಾಗಿ ಉಚ್ಚರಿಸಬಹುದು, ಅಥವಾ ಗ್ಲೋಟಲ್ ಫ್ರಿಕೇಟಿವ್ ಸೌಂಡ್ ಮೂಲಕ ಹೊರಹಾಕಬಹುದು ಮತ್ತು ಬದಲಾಯಿಸಬಹುದು [ ]. ಹಲ್ಲಿನ ನಾಸಲ್ ನಂತರದ ಅಲ್ವಿಯೋಲಾರ್ ಅಫ್ರಿಕೇಟ್ ವ್ಯಂಜನಕ್ಕೆ ಮುಂಚಿತವಾಗಿ, ಪದ-ಪ್ರಾರಂಭದಲ್ಲಿ ಅಥವಾ ಮಧ್ಯದಲ್ಲಿ ಪದಗಳಲ್ಲಿ ಅಪರೂಪವಾಗಿ ಸಂಭವಿಸಿದಾಗ ಪ್ಯಾಲಟಲ್ ಮೂಗಿನ ಧ್ವನಿ [ ] ವಿಶಿಷ್ಟವಾಗಿ ಸಂಭವಿಸುತ್ತದೆ. ಅನುನಾಸಿಕ ಧ್ವನಿ [ ] ವಿಶಿಷ್ಟವಾಗಿ ನಾಲಗೆಯು ಹಲ್ಲನ್ನು ಸಂಪರ್ಕಿಸಿ ಮೂಗಿನ ಸಹಾಯದಿಂದ ಸಂಭವಿಸುತ್ತದೆ ಮತ್ತು ಅಪರೂಪವಾಗಿ ಪದ-ಪ್ರಾರಂಭದಲ್ಲಿ ಅಥವಾ ಮಧ್ಯದಲ್ಲಿ ಸಂಭವಿಸುತ್ತದೆ. ಲಿಪಿ ಡೋಗ್ರಿಯನ್ನು ಮೂಲತಃ ಹಳೆಯ ಡೋಗ್ರಾ ಅಕ್ಕರ್ ಲಿಪಿಯಲ್ಲಿ ಬರೆಯಲಾಗಿದೆ - ಟಕ್ರಿಯ ಮಾರ್ಪಡಿಸಿದ ಆವೃತ್ತಿ. ಈ ಲಿಪಿಯ ಮಾರ್ಪಡಿಸಿದ ಆವೃತ್ತಿಯನ್ನು ಜಮ್ಮು ಮತ್ತು ಕಾಶ್ಮೀರದ ಮಹಾರಾಜ ರಣಬೀರ್ ಸಿಂಗ್ ಅವರ ಆದೇಶದಿಂದ ರಚಿಸಲಾಗಿದೆ. ಇದನ್ನು ನಂತರ ಡೋಗ್ರಾ ಅಕ್ಕರ್ ಎಂದು ಕರೆಯಲಾಯಿತು. ಅಧಿಕೃತ ದಾಖಲೆಗಳನ್ನು ಈ ಹೊಸ ಲಿಪಿಯಲ್ಲಿ ಬರೆಯಲಾಗಿದೆ; ಆದಾಗ್ಯೂ ಇದು ಸಾಮಾನ್ಯ ಡೋಗ್ರಿ-ಮಾತನಾಡುವ ಜನಗಿಗೆ ಹಿಡಿಸಲಿಲ್ಲ. ಪ್ರಸ್ತುತ, ಭಾರತದಲ್ಲಿ ಡೋಗ್ರಿಗೆ ಅಧಿಕೃತವಾಗಿ ಮಾನ್ಯತೆ ಪಡೆದ ಲಿಪಿ ದೇವನಾಗರಿ ಮತ್ತು ವಾಸ್ತವಿಕವಾಗಿ ಎಲ್ಲಾ ಡೋಗ್ರಿ ಸಾಹಿತ್ಯವನ್ನು ಅದರಲ್ಲಿ ಪ್ರಕಟಿಸಲಾಗಿದೆ. ಐತಿಹಾಸಿಕ ಉಲ್ಲೇಖಗಳು 1317 ರಲ್ಲಿ ಪ್ರಸಿದ್ಧ ಉರ್ದು ಮತ್ತು ಪರ್ಷಿಯನ್ ಕವಿ ಅಮೀರ್ ಖುಸ್ರೊ ಅವರು ಭಾರತದ ಭಾಷೆಗಳು ಮತ್ತು ಉಪಭಾಷೆಗಳನ್ನು ವಿವರಿಸುವಾಗ ಡುಗರ್ (ಡೋಗ್ರಿ) ಅನ್ನು ಈ ಕೆಳಗಿನಂತೆ ಉಲ್ಲೇಖಿಸಿದ್ದಾರೆ: "ಸಿಂಧಿ-ಒ-ಲಹೋರಿ-ಒ-ಕಾಶ್ಮೀರಿ-ಒ-ಡುಗರ್." ಹೆಸರಿನ ಮೂಲದ ಸಿದ್ಧಾಂತಗಳು ಜಮ್ಮು ಮತ್ತು ಕಾಶ್ಮೀರದ ಮಹಾರಾಜ ರಣಬೀರ್ ಸಿಂಗ್ ಅವರ ಆಸ್ಥಾನದಲ್ಲಿರುವ ಬುದ್ಧಿಜೀವಿಗಳು ದುಗ್ಗರ್ ಅನ್ನು ದ್ವಿಗರ್ತ ಎಂಬ ಪದದ ವಿಕೃತ ರೂಪ ಎಂದು ವಿವರಿಸಿದ್ದಾರೆ, ಇದರರ್ಥ 'ಎರಡು ತೊಟ್ಟಿಗಳು', ಇದು ಮನ್ಸಾರ್ ಮತ್ತು ಸುರಿನ್ಸರ್ ಸರೋವರಗಳ ಸಂಭವನೀಯ ಉಲ್ಲೇಖವಾಗಿದೆ. ಭಾಷಾಶಾಸ್ತ್ರಜ್ಞ ಜಾರ್ಜ್ ಗ್ರಿಯರ್ಸನ್ ಅವರು ದುಗ್ಗರ್ ಎಂಬ ಪದವನ್ನು ರಾಜಸ್ಥಾನಿ ಪದದ ಡೂಂಗರ್‌ನೊಂದಿಗೆ 'ಬೆಟ್ಟ' ಎಂಬರ್ಥದೊಂದಿಗೆ ಮತ್ತು ಡೋಗ್ರಾವನ್ನು ಡೊಂಗರ್‌ನೊಂದಿಗೆ ಸಂಪರ್ಕಿಸಿದ್ದಾರೆ. ರಾಜಸ್ಥಾನದಿಂದ ಡೋಗ್ರಿಗೆ ತೋರಿಕೆಯ ಬದಲಾವಣೆಗಳ ಅಸಂಗತತೆಯಿಂದಾಗಿ ಈ ಅಭಿಪ್ರಾಯವು ಬೆಂಬಲವನ್ನು ಹೊಂದಿಲ್ಲ (ಮೂಲಭೂತವಾಗಿ ಡೋಂಗರ್ ಡೋಗ್ರಾ ಆದ ಸಂದರ್ಭದಲ್ಲಿ ಡೋಂಗರ್ ಹೇಗೆ ದುಗ್ಗರ್ ಆದರು ಎಂಬ ಪ್ರಶ್ನೆ ಇದೆ), ಮತ್ತು ಕೆಲವು ವಿದ್ವಾಂಸರಿಂದ ವಿರೋಧವಾಗಿದೆ. ಹಿಮಾಚಲ ಪ್ರದೇಶದ ಚಂಬಾದಲ್ಲಿರುವ ಭೂರಿ ಸಿಂಗ್ ವಸ್ತುಸಂಗ್ರಹಾಲಯದಲ್ಲಿರುವ ಹನ್ನೊಂದನೇ ಶತಮಾನದ ತಾಮ್ರ ಫಲಕದ ಶಾಸನದಲ್ಲಿ ಉಲ್ಲೇಖಿಸಲಾದ ಸಾಮ್ರಾಜ್ಯದ ಹೆಸರಾದ ದುರ್ಗರಾ ಎಂಬ ಪದದಿಂದ ಮತ್ತೊಂದು ಪ್ರಸ್ತಾಪವು ಉದ್ಭವಿಸಿದೆ. ದುರ್ಗಾರ ಪದವು ಹಲವಾರು ಉತ್ತರ ಇಂಡೋ-ಆರ್ಯನ್ ಭಾಷೆಗಳಲ್ಲಿ 'ಅಜೇಯ' ಎಂದರ್ಥ, ಮತ್ತು ದುಗ್ಗರ್ ಭೂಪ್ರದೇಶದ ಒರಟುತನ ಮತ್ತು ಐತಿಹಾಸಿಕವಾಗಿ ಮಿಲಿಟರಿ ಮತ್ತು ಸ್ವಾಯತ್ತ ಡೋಗ್ರಾ ಸಮಾಜಗಳಿಗೆ ಸೂಚಿಸಬಹುದು. 1976 ರಲ್ಲಿ, ಕರ್ನಾಟಕದ ಧಾರವಾಡದಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯವಸ್ತು ಸಮ್ಮೇಳನದ ಭಾಷಾ ಅಧಿವೇಶನದಲ್ಲಿ ಭಾಗವಹಿಸಿದ ತಜ್ಞರು ದ್ವಿಗರ್ತ ಮತ್ತು ದುರ್ಗರ ಕಲ್ಪನೆಗಳ ಬಗ್ಗೆ ಒಮ್ಮತವನ್ನು ತಲುಪಲು ಸಾಧ್ಯವಾಗಲಿಲ್ಲ. ಆದರೆ ಡೋಂಗರ್ - ಡುಗ್ಗರ್ ಸಂಪರ್ಕದ ಬಗ್ಗೆ ಒಪ್ಪಂದವನ್ನು ನಿರ್ವಹಿಸಿದರು. ನಂತರ1982 ರಲ್ಲಿ ಜೈಪುರದಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದಲ್ಲಿ ರಾಜಸ್ಥಾನ ಮತ್ತು ದುಗ್ಗರ್‌ನ ಸಂಸ್ಕೃತಿ, ಭಾಷೆ ಮತ್ತು ಇತಿಹಾಸವು ಕೆಲವು ಸಾಮ್ಯತೆಗಳನ್ನು ಹಂಚಿಕೊಳ್ಳುತ್ತದೆ ಎಂದು ಭಾಷಾಶಾಸ್ತ್ರಜ್ಞರು ಒಪ್ಪಿಕೊಂಡರು. ರಾಜಸ್ಥಾನದ ಕೆಲವು ಭಾಗಗಳಲ್ಲಿ ದುಗ್ಗರ್ ಮತ್ತು ಡೋಗ್ರಾ ಪದಗಳು ಸಾಮಾನ್ಯವಾಗಿದೆ ಎಂದು ಸೂಚಿಸಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅನೇಕ ಕೋಟೆಗಳನ್ನು ಹೊಂದಿರುವ ಪ್ರದೇಶಗಳನ್ನು ದುಗ್ಗರ್ ಎಂದು ಕರೆಯಲಾಗುತ್ತದೆ ಮತ್ತು ಅದರ ನಿವಾಸಿಗಳನ್ನು ಡೋಗ್ರಾಸ್ ಎಂದು ಕರೆಯಲಾಗುತ್ತದೆ. ದುಗ್ಗರ್‌ನ ಭೂಮಿಯಲ್ಲಿ ಅನೇಕ ಕೋಟೆಗಳಿವೆ, ಇದು ಮೇಲಿನ ಅಭಿಪ್ರಾಯವನ್ನು ಬೆಂಬಲಿಸುತ್ತದೆ. ಸಾಹಿತ್ಯ ಪತ್ರಿಕೆ ಶಿರಜಾ ಡೋಗ್ರಿಯಲ್ಲಿ ಧರಮ್ ಚಂದ್ ಪ್ರಶಾಂತ್ ಬರೆದ ಲೇಖನವು " ದುಗ್ಗರ್ ಪದವು ದುಗ್ಗರ್ಹ್ ಪದದ ರೂಪವಾಗಿದೆ ಎಂಬ ಅಭಿಪ್ರಾಯವು ಸೂಕ್ತವಾಗಿ ಧ್ವನಿಸುತ್ತದೆ" ಎಂದು ಸಲಹೆ ನೀಡಿದೆ. ಇತ್ತೀಚಿನ ಇತಿಹಾಸ ಆಧುನಿಕ ಕಾಲದಲ್ಲಿ ಹೆಸರಾಂತ ಗಣಿತಶಾಸ್ತ್ರಜ್ಞ ಭಾಸ್ಕರಾಚಾರ್ಯರಿಂದ (ಬಿ. 1114 AD) ಸಂಸ್ಕೃತ ಶಾಸ್ತ್ರೀಯ ಗಣಿತದ ಕೃತಿ ಲೀಲಾವತಿಯ ಗಮನಾರ್ಹವಾದ ಡೋಗ್ರಿ ಭಾಷಾಂತರವನ್ನು (ಹೊಸ ಡೋಗ್ರಾ ಲಿಪಿಯಲ್ಲಿ) 1873 ರಲ್ಲಿ ವಿದ್ಯಾ ವಿಲಾಸ್ ಪ್ರೆಸ್, ಜಮ್ಮುವಿನಿಂದ ಪ್ರಕಟಿಸಲಾಯಿತು ಸಂಸ್ಕೃತ ಸಾಕ್ಷರತೆಯು ಕೆಲವರಿಗೆ ಸೀಮಿತವಾಗಿದ್ದರಿಂದ, ದಿವಂಗತ ಮಹಾರಾಜ ರಣಬೀರ್ ಸಿಂಗ್ ಅವರು ಲೀಲಾವತಿಯನ್ನು ಡೋಗ್ರಿ ಭಾಷೆಗೆ ಅನುವಾದಿಸಿದರು, ಆಗ ಜಮ್ಮು ಪಾಠಶಾಲಾದಲ್ಲಿ ಜ್ಯೋತಿಷಿ ಬಿಶೇಶ್ವರರು ಪ್ರಾಂಶುಪಾಲರಾಗಿದ್ದರು. ಡೋಗ್ರಿಯಲ್ಲಿ ಕವನ, ಕಾದಂಬರಿ ಮತ್ತು ನಾಟಕೀಯ ಕೃತಿಗಳ ಸ್ಥಾಪಿತ ಸಂಪ್ರದಾಯಗಳು ಇವೆ. ಇತ್ತೀಚಿನ ಕವಿಗಳು ರಾಜ ರಂಜಿತ್ ದೇವ್ ಅವರ ಆಸ್ಥಾನದಲ್ಲಿ 18 ನೇ ಶತಮಾನದ ಡೋಗ್ರಿ ಕವಿ ಕವಿ ದತ್ತು (1725-1780) ರಿಂದ ಪ್ರೊಫೆಸರ್ ರಾಮ್ ನಾಥ್ ಶಾಸ್ತ್ರಿ ಮತ್ತು ಶ್ರೀಮತಿ. ಪದ್ಮಾ ಸಚ್‌ದೇವ್ . ಕವಿ ದತ್ತು ಅವರ ಬರಹ ಮಸ್ಸಾ (ಹನ್ನೆರಡು ತಿಂಗಳುಗಳು), ಕಮಲ್ ನೇತ್ರ (ಕಮಲ ಕಣ್ಣುಗಳು), ಭೂಪ್ ಬಿಜೋಗ್ ಮತ್ತು ಬೀರ್ ಬಿಲಾಸ್ ಗಾಗಿ ಹೆಚ್ಚು ಗೌರವಿಸಲ್ಪಟ್ಟಿದ್ದಾರೆ. ಶಿರಜಾ ಡೋಗ್ರಿ ಎಂಬುದು ಜಮ್ಮು ಮತ್ತು ಕಾಶ್ಮೀರ ಕಲೆ, ಸಂಸ್ಕೃತಿ ಮತ್ತು ಭಾಷೆಗಳ ಅಕಾಡೆಮಿಯಿಂದ ಬಿಡುಗಡೆಯಾದ ಡೋಗ್ರಿ ಸಾಹಿತ್ಯದ ನಿಯತಕಾಲಿಕವಾಗಿದೆ. ಇದು ಆಧುನಿಕ ಡೋಗ್ರಿ ಸಾಹಿತ್ಯ ಕೃತಿಯ ಗಮನಾರ್ಹ ಪ್ರಕಟಣೆ. ಇತ್ತೀಚಿನ ಜನಪ್ರಿಯ ಹಾಡುಗಳಲ್ಲಿ ಪಾಲಾ ಶಾಪಯ್ಯ ದೊಗರಿಯಾ, ಮನ್ನೆ ಡಿ ಮೌಜ್ ಮತ್ತು ಶೋರಿ ದೇಯಾ ಸೇರಿವೆ. ಹೆಸರಾಂತ ಪಾಕಿಸ್ತಾನಿ ಗಾಯಕಿ ಮಲಿಕಾ ಪುಖರಾಜ್ ಅವರು ಮೂಲತಃ ದುಗ್ಗರ್‌ನವರು. ಮತ್ತು ಅವರ ಹಲವಾರು ಡೋಗ್ರಿ ಹಾಡುಗಳ ನಿರೂಪಣೆಗಳು ಈ ಪ್ರದೇಶದಲ್ಲಿ ಜನಪ್ರಿಯವಾಗಿವೆ. ಕರಣ್ ಸಿಂಗ್ ಸಂಯೋಜಿಸಿದ ಕೆಲವು ಭಕ್ತಿಗೀತೆಗಳು ( ಭಜನೆಗಳು ) ಕೌನ್ ಕರೇಯಾನ್ ತೇರಿ ಆರತಿ ಸೇರಿದಂತೆ ಕಾಲಾನಂತರದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿವೆ. ಡೋಗ್ರಿ ಕಾರ್ಯಕ್ರಮಗಳು ನಿಯಮಿತವಾಗಿ ರೇಡಿಯೋ ಕಾಶ್ಮೀರ ( ಆಲ್ ಇಂಡಿಯಾ ರೇಡಿಯೋದ ವಿಭಾಗ), ಮತ್ತು ದೂರದರ್ಶನ (ಭಾರತೀಯ ರಾಜ್ಯ ದೂರದರ್ಶನ) ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸಾರವಾಗುತ್ತದೆ. ಆದಾಗ್ಯೂ, ಡೋಗ್ರಿಯು ಕಾಶ್ಮೀರಿಯಂತೆ (ಇದು ದೂರದರ್ಶನ ಕೊಶುರ್ ಚಾನೆಲ್ ಅನ್ನು ಹೊಂದಿದೆ, ಇದು ಭಾರತದಾದ್ಯಂತ ಕೇಬಲ್ ಮತ್ತು ಉಪಗ್ರಹ ದೂರದರ್ಶನದಲ್ಲಿ ಲಭ್ಯವಿದೆ) ಮೀಸಲಾದ ರಾಜ್ಯ ದೂರದರ್ಶನ ಚಾನೆಲ್ ಅನ್ನು ಇನ್ನೂ ಹೊಂದಿಲ್ಲ. ಭಾಷೆಯ ಅಧಿಕೃತ ಮನ್ನಣೆಯು ಪ್ರಗತಿಪರವಾಗಿದೆ. 2 ಆಗಸ್ಟ್ 1969 ರಂದು, ದೆಹಲಿಯ ಸಾಹಿತ್ಯ ಅಕಾಡೆಮಿಯ ಜನರಲ್ ಕೌನ್ಸಿಲ್ ಭಾಷಾಶಾಸ್ತ್ರಜ್ಞರ ಸಮಿತಿಯ ಸರ್ವಾನುಮತದ ಶಿಫಾರಸಿನ ಆಧಾರದ ಮೇಲೆ ಡೋಗ್ರಿಯನ್ನು ಭಾರತದ "ಸ್ವತಂತ್ರ ಆಧುನಿಕ ಸಾಹಿತ್ಯ ಭಾಷೆ" ಎಂದು ಗುರುತಿಸಿತು. ಡೋಗ್ರಿ ಭಾರತೀಯ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. 22 ಡಿಸೆಂಬರ್ 2003 ರಂದು, ಭಾಷೆಯ ಅಧಿಕೃತ ಸ್ಥಾನಮಾನದ ಪ್ರಮುಖ ಮೈಲಿಗಲ್ಲು, ಭಾರತೀಯ ಸಂವಿಧಾನದಲ್ಲಿ ಡೋಗ್ರಿಯನ್ನು ಭಾರತದ ರಾಷ್ಟ್ರೀಯ ಭಾಷೆಯಾಗಿ ಗುರುತಿಸಲಾಯಿತು. 2005 ರಲ್ಲಿ, ಕಳೆದ 50 ವರ್ಷಗಳಲ್ಲಿ ಪ್ರಕಟವಾದ ಡೋಗ್ರಿಯಲ್ಲಿನ 100 ಕ್ಕೂ ಹೆಚ್ಚು ಗದ್ಯ ಮತ್ತು ಕವನಗಳ ಸಂಗ್ರಹವನ್ನು ಮೈಸೂರಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ (CIIL) ನಲ್ಲಿ ಆನ್‌ಲೈನ್‌ನಲ್ಲಿ ನೀಡಲಾಗಿದೆ. ಇದರಲ್ಲಿ ಖ್ಯಾತ ಬರಹಗಾರ ಧಿನು ಭಾಯಿ ಪಂಥ್, ಪ್ರೊಫೆಸರ್ ಮದನ್ ಮೋಹನ್ ಶರ್ಮಾ, ಬಿಪಿ ಸಥಾಯ್ ಮತ್ತು ರಾಮ್ ನಾಥ್ ಶಾಸ್ತ್ರಿ ಅವರ ಕೃತಿಗಳನ್ನು ಒಳಗೊಂಡಿತ್ತು. ಮಾದರಿ ಪಠ್ಯ ಕೆಳಗಿನ ಪಠ್ಯವು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಆರ್ಟಿಕಲ್ 1 ರಿಂದ ಬಂದಿದೆ. ಇವುಗಳನ್ನು ಸಹ ನೋಡಿ ಹೆಸರು ಡೋಗ್ರಾ ಅಕ್ಕರ್ ಪಾಶ್ಚಿಮಾತ್ಯ ಪಹಾರಿ ಭಾಷೆಗಳು ಡೋಗ್ರಾಸ್ ದುಗ್ಗರ್ ಡೋಗ್ರಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ ಡೋಗ್ರಿ ಸಿನಿಮಾ ಭಾರತದ ಭಾಷೆಗಳು ಉಲ್ಲೇಖಗಳು ಗ್ರಂಥಸೂಚಿ ಗೋಪಾಲ್ ಹಲ್ದಾರ್ (2000). ಭಾರತದ ಭಾಷೆಗಳು . ನವದೆಹಲಿ: ನ್ಯಾಷನಲ್ ಬುಕ್ ಟ್ರಸ್ಟ್ ಬಾಹ್ಯ ಕೊಂಡಿಗಳು ಡೋಗ್ರಿ ಭಾಷೆ, ವೇದ್ ಕುಮಾರಿ ಘಾಯ್ ಅವರ ಲೇಖನ ಡೋಗ್ರಿ ಭಾಷೆ, ಸಾಹಿತ್ಯ ಮತ್ತು ಬರಹಗಾರರ ಕುರಿತು ಹೆಚ್ಚಿನ ಮಾಹಿತಿಗಾಗಿ Duggar Times.com Dailyexcelsior.com, "ನೂರನೇ ತಿದ್ದುಪಡಿ," ಡೋಗ್ರಿಯನ್ನು ರಾಷ್ಟ್ರೀಯ ಭಾಷೆಯಾಗಿ ಗುರುತಿಸುವ ಕುರಿತು ಸುದ್ದಿ ವರದಿ. ಡೋಗ್ರಿ ಟೋನ್ಗಳನ್ನು ಪ್ರತಿನಿಧಿಸಲು ದೇವನಾಗರಿಗೆ ಮಾರ್ಪಾಡುಗಳು Pahari.org, ಅಲಾಮಿ ಪಹಾರಿ ಅದಾಬಿ ಸಂಗತ್ (ಗ್ಲೋಬಲ್ ಪಹಾರಿ ಕಲ್ಚರಲ್ ಅಸೋಸಿಯೇಷನ್) Ancientscripts.com, ದಿ ಟಕ್ರಿ ಸ್ಕ್ರಿಪ್ಟ್. Crulp.org, ಪಂಜಾಬಿಯಲ್ಲಿ ನಾದ ಮತ್ತು ಧ್ವನಿಯ ಕುರಿತಾದ ಕಾಗದ. TDIL ನಲ್ಲಿ ಡೋಗ್ರಿ ಕಂಪ್ಯೂಟಿಂಗ್ ಸಂಪನ್ಮೂಲಗಳು (ದೇವನಾಗರಿ ಸ್ಕ್ರಿಪ್ಟ್) Pages with unreviewed translations
2133
https://kn.wikipedia.org/wiki/%E0%B2%AE%E0%B3%88%E0%B2%A5%E0%B2%BF%E0%B2%B2%E0%B2%BF
ಮೈಥಿಲಿ
ಮೈಥಿಲಿ ಇಂಡೋ-ಆರ್ಯನ್ ಭಾಷಾ ಕುಟುಂಬದ ಒಂದು ಭಾಷೆ. ಭಾರತದ ಬಿಹಾರ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಮತ್ತು ನೇಪಾಳದ ತೆರಾಯ್ ಪ್ರದೇಶದಲ್ಲಿ ಈ ಭಾಷೆ ಬಳಕೆಯಲ್ಲಿದೆ. 6,121,922 (1991) ಜನರ ತಾಯ್ನುಡಿ. ದೇಸಿಲ್ ಬಅನ, ತಿರುಹುತಿಯ ಪರ್ಯಾಯ ಪದಗಳು. ಇದನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ. ಮೂಲ ಮತ್ತು ವಿಕಾಸ ಮಾಗಧಿ ಅಪಭ್ರಂಶದಿಂದ ವಿಕಾಸಗೊಂಡಿದೆ. ಮೈಥಿಲೀ ಎಂಬುದು ಮಂಥ್ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ಪ್ರಾಚೀನ ಸಂಸ್ಕ್ರತ ಮಹಾಕಾವ್ಯಗಳಲ್ಲಿ ಮಿಥಿಲ ಎಂಬ ಪ್ರಯೋಗವಾಗಿರುವುದರಿಂದ ನಿಥಿಲಿ ಎಂಬುದೇ ಮೈಥಿಲೀಯ ಮೂಲರೂಪವೆಂದು ಹೇಳುವವರೂ ಉಂಟು. ವ್ಯಾಕರಣ ಮತ್ತು ಲಿಪಿ ಈ ಭಾಷೆಯ ದ್ವನಿಗಳು ಹಿಂದೀ ಭಾಷೆಯನ್ನೇ ಹೋಲುತ್ತವೆ. ಎರಡು ಬಗೆಯ ಲಿಂಗವ್ಯವಸ್ಥೆ, ಎರಡು ಬಗೆಯ ವಚನ ವ್ಯವಸ್ಥೆ ಇದೆ. ನಾಮಪದ, ಕ್ರಿಯಾಪದಗಳನ್ನು ಸೂಚಿಸುವ ವಿಭಕ್ತಿ-ಪ್ರತ್ಯಯಗಳು ಮತ್ತು ಕಾಲಸೂಚಕ ಪ್ರತ್ಯಯಗಳಿವೆ. ಪದರಚನೆ ವಾಕ್ಯರಚನೆ ಹಿಂದಿ ಭಾಷೆಯಲ್ಲಿರುವಂತೆಯೇ ಇದೆ. ಸಂಸ್ಕೃತ, ಪ್ರಾಕೃತ, ಅಫಭ್ರಂಶ, ಮಘಹಿ, ಭೋಜಪುರಿ ಮುಂತಾದ ಭಾಷೆಗಳ ಅನೇಕ ಶಬ್ದಗಳಿವೆ. ಮೈಥಿಲೀಯ ಮೇಲೆ ಹಿಂದೀ ಮತ್ತು ಬಂಗಾಲೀ ಭಾಷೆಗಳ ಪ್ರಭಾವ ಹೆಚ್ಚು. ಮೈಥಿಲೀಯನ್ನು ಬರೆಯಲು ನಾಗರಿ, ಕೈಥಿ, ಮೈಥಿಲೀ ಲಿಪಿಗಳುಂಟು. ಈ ಪೈಕಿ ನಾಗರಿ ಲಿಪಿಯೇ ಹೆಚ್ಚು ಬಳಕೆಯಲ್ಲಿದೆ. ಈ ಭಾಷೆಯ ಸಾಹಿತ್ಯ ಖಡಿಬೋಲಿ-ಹಿಂದೀ ಭಾಷಾ ರೂಪದಲ್ಲೂ ಮೈಥಿಲೀ ಭಾಷಾರೂಪದಲ್ಲೂ ಇದೆ. ಪ್ರಬೇಧಗಳು ಈ ಭಾಷೆಯಲ್ಲಿ ಪೂರ್ವ, ಪಶ್ಚಿಮ, ಮಧ್ಯ, ಉತ್ತರ, ದಕ್ಷಿಣ ಮೈಥಿಲೀ ಎಂಬ ಪ್ರಾದೇಶಿಕ ಪ್ರಬೇಧಗಳಿವೆ. ಇವುಗಳ ಜೊತೆಗೆ ಸಾಮಾಜಿಕ ಪ್ರಭೇದಗಳೂ ಉಂಟು. ಉತ್ತರ ದರ್ಭಾಂಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತನಾಡುವ ಮೈಥಿಲೀ ಭಾಷಾರೂಪವನ್ನು ಶಿಷ್ಟರೂಪವೆಂದು ಪರಿಗಣಿಸಲಾಗಿದೆ. ಇದನ್ನೂ ನೋಡಿ ಮೈಥಿಲಿ ಸಾಹಿತ್ಯ ಭಾರತೀಯ ಭಾಷೆಗಳು ಇಂಡಿಕ್ ಭಾಷೆಗಳು
2146
https://kn.wikipedia.org/wiki/%E0%B2%AE%E0%B3%8A%E0%B2%98%E0%B2%B2%E0%B3%8D%20%E0%B2%B8%E0%B2%BE%E0%B2%AE%E0%B3%8D%E0%B2%B0%E0%B2%BE%E0%B2%9C%E0%B3%8D%E0%B2%AF
ಮೊಘಲ್ ಸಾಮ್ರಾಜ್ಯ
ಮೊಘಲ್ ಸಾಮ್ರಾಜ್ಯ (ಉರ್ದು:: مغل باد شاہ) ಭಾರತೀಯ ಉಪಖಂಡದ ಉತ್ತರ ಭಾಗಗಳನ್ನು ೧೫೨೬ ರಿಂದ ಆಳಿದ ಮುಖ್ಯ ಸಾಮ್ರಾಜ್ಯಗಳಲ್ಲಿ ಒಂದು. ಮೊಘಲ್ ಸಾಮ್ರಾಜ್ಯದ ಸ್ಥಾಪನೆ ೧೫೨೬ ರಲ್ಲಿ ಬಾಬರ್ ನಿಂದ ನಡೆಯಿತು - ಮೊದಲ ಪಾಣಿಪಟ್ ಯುದ್ಧದಲ್ಲಿ ಇಬ್ರಾಹಿಮ್ ಲೋದಿಯನ್ನು ಸೋಲಿಸಿದ ನಂತರ. ಹುಮಾಯೂನ್ ನ ಕಾಲದಲ್ಲಿ ಶೇರ್ ಷಾ ಮೊಘಲ್ ಸಾಮ್ರಾಜ್ಯವನ್ನು ಸೋಲಿಸಿದರೂ, ನಂತರ ಅಕ್ಬರ್ ನ ಕೆಳಗೆ ಮೇಲೇರಲಾರಂಭಿಸಿದ ಮೊಘಲ್ ಸಾಮ್ರಾಜ್ಯ ಔರಂಗಜೇಬನ ಕಾಲದ ವರೆಗೂ ಬೆಳೆಯಿತು. ೧೭೦೭ ರಲ್ಲಿ ಔರಂಗಜೇಬನ ಮರಣದ ನಂತರ ೧೫೦ ವರ್ಷಗಳ ಕಾಲ ಭಾರತದಲ್ಲಿ ಉಳಿದರೂ ಮೊಘಲ್ ಸಾಮ್ರಾಜ್ಯದ ಶಕ್ತಿ ಕುಂದುತ್ತಾ ಬ೦ದಿತು - ೧೮೫೭ ರಲ್ಲಿ ಬಹಾದುರ್ ಷಾ ನ ಬಹಿಷ್ಕಾರದ ನಂತರ ಮೊಘಲ್ ಸಾಮ್ರಾಜ್ಯ ಕೊನೆಗೊಂಡಿತು. ಚಕ್ರವರ್ತಿಗಳು ಮೊಘಲ್ ಸಾಮ್ರಾಜ್ಯದ ಪ್ರಸಿದ್ಧ ಚಕ್ರವರ್ತಿಗಳು ಮತ್ತು ಅವರ ಆಡಳಿತದ ಕಾಲ: ಬಾಬರ್ (1526 - 1530) ಹುಮಾಯೂನ್ (1530-1556) ಅಕ್ಬರ್ (1556-1605) ಜಹಾಂಗೀರ್ (1605-1627) ಷಾ ಜಹಾನ್ (1627-1658) ಔರಂಗಜೇಬ್ (1658-1707) ಮೊಘಲ್ ಸಾಮ್ರಾಜ್ಯದ ಪ್ರಸಿದ್ಧ ಚಕ್ರವರ್ತಿಗಳ ನಂತರದ ರಾಜರು ಮತ್ತು ಅವರ ಆಡಳಿತದ ಕಾಲ: ಬಹದೂರ್ ಶಹ (1707-1712) ಜಹಾನದಾರ್ ಶಹ (1712-1713) ಫಾರೂಕ್ ಷಿಯಾರ್ (1713-1719) ರಷಿ ಉದ್ ದರಾಜಿತ್ ಮತ್ತು ರಷಿ ಉದ್ದೌಲಾ (1719) ಮಹಮ್ಮದ್ ಶಹಾರಂಗೀಲಾ (1719-1748) ಅಹಮ್ಮದ್ ಶಹಾ (1748-1754) ಎರಡನೆಯ ಆಲಂಗಿರ್ (1754-1758) ಮೂರನೆಯ ಷಾ ಜಹಾನ್ (1758-1759) ಎರಡನೆಯ ಶಹಾ ಆಲಂ (1759-1806) ಎರಡನೆಯ ಅಕ್ಬರ್ (1806-1837) ಬಹದೂರ್ ಶಹಾ (1838-1857) ಸ್ಥಾಪನೆ ಮತ್ತು ಬಾಬರ್‌ನ ಆಡಳಿತ ೧೬ ನೆಯ ಶತಮಾನದ ಆರ೦ಭದಲ್ಲಿ ಜಹೀರುದ್ದೀನ್ ಬಾಬರನ ನೇತೃತ್ವದಲ್ಲಿ ಮಂಗೋಲ್, ಟರ್ಕಿಷ್ ಮತ್ತು ಆಫ್ಘನ್ ಸೈನಿಕರು ಭಾರತದ ರಾಜ್ಯಗಳನ್ನು ಗೆಲ್ಲುವ ಉದ್ದೇಶದಿಂದ ಬಂದರು. ೧೩೯೮ ರಲ್ಲಿ ದೆಹಲಿಯ ಮೆಲೆ ದಂಡೆತ್ತಿ ಲೂಟಿ ನಡೆಸಿದ್ದ ತೈಮೂರನ ಮರಿಮಗ ಬಾಬರ್. ಇಂದಿನ ಉಜ್ಬೆಕಿಸ್ತಾನದಲ್ಲಿರುವ ಸಮರ್‍ಕ೦ದದಲ್ಲಿ ಸ್ವಲ್ಪ ಕಾಲ ಆಡಳಿತ ನಡೆಸಿದ್ದ ಬಾಬರ್ ೧೫೦೪ ರಲ್ಲಿ ಕಾಬೂಲ್ ನಲ್ಲಿ ರಾಜ್ಯ ಸ್ಥಾಪಿಸಿ ನಂತರ ಪಂಜಾಬ್ ಅನ್ನು ಗೆದ್ದ ನಂತರ ದೆಹಲಿಯ ಸುಲ್ತಾನ ಇಬ್ರಾಹಿಮ್ ಲೋದಿಯತ್ತ ತಿರುಗಿದ. ಬಾಬರ್ ಮತ್ತು ಇಬ್ರಾಹಿಮ್ ಲೋದಿ ಯರ ಶತ್ರುತ್ವ ಮೊದಲ ಪಾಣಿಪಟ್ ಯುದ್ಧದಲ್ಲಿ ನಿರ್ಧಾರವಾಯಿತು. ಬಾಬರ್ ಸುಮಾರು ೧೨,೦೦೦ ಸೈನಿಕರನ್ನು ಮಾತ್ರ ಹೊಂದಿದ್ದರೂ ಇಬ್ರಾಹಿಮ್ ಲೋದಿಯ ಸುಮಾರು ಒಂದು ಲಕ್ಷ ಸೈನಿಕರ ಸೇನೆಯನ್ನು ಸೋಲಿಸಿದ - ಮುಖ್ಯವಾಗಿ ಫಿರಂಗಿ ಮತ್ತು ಬಂದೂಕುಗಳ ಪರಿಣಾಮಕಾರಿ ಉಪಯೋಗದಿಂದ. ಒಂದು ವರ್ಷ ನಂತರ, ರಜಪೂತರ ರಾಣಾಸಿಂಗ್ ನ ಮೇಲೆ ವಿಜಯ ಸಾಧಿಸಿ ಭಾರತದಲ್ಲಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದ. ಹುಮಾಯೂನನ ಆಡಳಿತ ಬಾಬರನ ಮರಣದ ನಂತರ ಅಧಿಕಾರಕ್ಕೆ ಬಂದ ಹುಮಾಯೂನ್ ಎಲ್ಲ ಕಡೆಗಳಿಂದ ಎದ್ದ ದಂಗೆಗಳನ್ನು ತಡೆಯಲಾರದೆ ತನ್ನ ಸಾಮ್ರಾಜ್ಯದ ಬಹುಭಾಗವನ್ನು ಶೇರ್ ಷಾ ನಿಗೆ ಸೋತು ೧೫೪೦ ರಲ್ಲಿ ಪರ್ಷಿಯಾಗೆ ತಪ್ಪಿಸಿಕೊಂಡು ಹೋಗಬೇಕಾಯಿತು. ೧೫೪೫ ರಲ್ಲಿ ಕಾಬೂಲ್ ನ ಮೇಲೆ ಮತ್ತೆ ಅಧಿಕಾರ ಸ್ಥಾಪಿಸಿ ೧೫೫೫ ರಲ್ಲಿ ದೆಹಲಿಯನ್ನು ವಶಪಡಿಸಿಕೊಂಡ. ಇದಾಗಿ ಒಂದು ವರ್ಷದಲ್ಲೇ ಹುಮಾಯೂನ್ ನ ಮರಣವಾಯಿತು. ಅಕ್ಬರ್ ಹುಮಾಯೂನ್ ನ ಅಕಸ್ಮಾತ್ ಮರಣದ ನಂತರ5 ಅಧಿಕಾರಕ್ಕೆ ಬಂದದ್ದು ಅವನ ೧೩ ವರ್ಷದ ಮಗ ಜಲಾಲುದ್ದೀನ್ ಅಕ್ಬರ್. ಮೊದಲಿಗೆ ಇವನ ಮಾವ ಬೈರಾಮ್ ಖಾನ್ ಅಕ್ಬರನ ಪರವಾಗಿ ಆಡಳಿತ ನಡೆಸಿದ. ವಯಸ್ಸಿಗೆ ಬಂದಂತೆ ಅಕ್ಬರ್ ಸ್ವಂತವಾಗಿ ಅಧಿಕಾರವನ್ನು ಕೈಗೆ ತೆಗೆದುಕೊಳ್ಳಲಾರಂಭಿಸಿದ. ಆಡಳಿತ ನೀತಿಗಳನ್ನು ಬಹಳವಾಗಿ ಸುಧಾರಿಸಿದ್ದಲ್ಲದೆ ಅಕ್ಬರ್ ಮೊಘಲ್ ಸಾಮ್ರಾಜ್ಯದ ವಿಸ್ತರಣೆಯನ್ನೂ ನಡೆಸಿದ - ಇಡೀ ಉತ್ತರ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿ ಅಕ್ಬರನ ಸಾಮ್ರಾಜ್ಯ ಹಬ್ಬಿತು. ೧೫೭೧ ರಲ್ಲಿ ಅಕ್ಬರ್ ಫತೇಪುರ್ ಸಿಕ್ರಿ ನಗರವನ್ನು ಕಟ್ಟಿಸಿದ - ಆದರೆ ೧೫೮೫ ರಲ್ಲಿ ನೀರಿನ ಅಭಾವದಿಂದ ಲಾಹೋರ್ ಗೆ ತನ್ನ ರಾಜಧಾನಿಯನ್ನು ವರ್ಗಾಯಿಸಿದ. ೧೫೯೯ ರಲ್ಲಿ ಮತ್ತೆ ಆಗ್ರಾಕ್ಕೆ ತನ್ನ ರಾಜಧಾನಿಯನ್ನು ವರ್ಗಾಯಿಸಿದ. ತನ್ನ ದೊಡ್ಡ ಸಾಮ್ರಾಜ್ಯವನ್ನು ಪರಿಣಾಮಕಾರಿಯಾಗಿ ಆಳುವುದಕ್ಕೆ ಅಕ್ಬರ್ ಅನೇಕ ಹೊಸ ನೀತಿಗಳನ್ನು ಜಾರಿಗೆ ತಂದ. ತನ್ನ ಮಂತ್ರಿಗಳಲ್ಲಿ ಒಬ್ಬನಾದ ತೋಡರಮಲ್ಲನ ನೇತೃತ್ವದಲ್ಲಿ ತನ್ನ ಸಾಮ್ರಾಜ್ಯದಾದ್ಯಂತ ನೆಲದ ಅಂದಾಜು, ಬೇರೆ ಬೇರೆ ಸ್ಥಳಗಳಲ್ಲಿ ಬೆಳೆಯುವ ಬೆಳೆಗಳು ಮತ್ತು ಮಣ್ಣಿನ ಫಲವತ್ತತೆಯ ಅಂದಾಜುಗಳನ್ನು ತರಿಸಿಕೊಂಡು ಇದಕ್ಕೆ ಅನುಸಾರವಾಗಿ ಭೂಕಂದಾಯವನ್ನು ನಿರ್ಧರಿಸಿದ. ತನ್ನ ಸಾಮ್ರಾಜ್ಯದಲ್ಲಿದ್ದ ವಿವಿಧ ಧರ್ಮಗಳ ಜನರನ್ನು ಆಳಲಿಕ್ಕೆ ಧರ್ಮಸಹಿಷ್ಣುತೆಯನ್ನು ಜಾರಿಗೆ ತಂದ. ಜಹಾಂಗೀರ್ ಮತ್ತು ಷಾ ಜಹಾನ್ ಜಹಾಂಗೀರ್ ಮತ್ತು ಷಾ ಜಹಾನರ ಆಡಳಿತದ ಮೊದಲ ವರ್ಷಗಳು ರಾಜಕೀಯ ಸ್ಥಿರತೆ, ಆರ್ಥಿಕ ಹೆಚ್ಚಳ, ಮತ್ತು ಕಲೆಯ ಬೆಳವಣಿಗೆಗೆ ಹೆಸರಾಗಿವೆ. ನೂರ್ ಜಹಾನಳ ಜಹಾಂಗೀರನ ಪಟ್ಟದ ರಾಣಿ ಪರ್ಷಿಯನ್ ರಾಜಕುಮಾರಿ ನೂರ್ ಜಹಾನ್ ("ಪ್ರಪಂಚದ ಬೆಳಕು"). ನೂರ್ ಜಹಾನಳ ಕಾಲದಲ್ಲಿ ಅನೇಕ ಪರ್ಷಿಯನ್ ನಾಯಕರು ಮೊಘಲ್ ಆಸ್ಥಾನಕ್ಕೆ ಬಂದು. ಈ ಕೆಲಸ ಮಾಡದ ನಾಯಕರ ಸಂಖ್ಯೆ ಸರ್ಕಾರದಲ್ಲಿ ಹೆಚ್ಚುತ್ತ ಹೋದಂತೆ ಭ್ರಷ್ಟಾಚಾರ ಸಹ ಹೆಚ್ಚಲಾರಂಭಿಸಿತು. ಜಹಾಂಗೀರನ ಇಸ್ಲಾಮ್ ಮತಪ್ರಚಾರ ಮೊದಲಾದ ವಟುವಟಿಕೆಗಳಿಂದ ಮೊಘಲ್ ಸಾಮ್ರಾಜ್ಯದ ಪ್ರತಿಷ್ಠೆ ಸ್ಬಲ್ಪ ಕಡಿಮೆಯಾಯಿತು. ೧೬೨೨ ರಲ್ಲಿ ನೂರ್ ಜಹಾನ್ ಸಿಂಹಾಸನವನ್ನು ಪರ್ಷಿಯಾದ ತನ್ನ ಸಂಬಂಧಿಕರಿಗೆ ಕೊಡುವ ಪ್ರಯತ್ನ ಮಾಡಿದಾಗ ಷಾ ಜಹಾನ್ ದಂಗೆಯೆದ್ದು ಸಿಂಹಾಸವನ್ನೇರಿದ. ೧೬೩೬ ರಿಂದ ೧೬೪೬ ರ ನಡುವೆ ದಕ್ಷಿಣ ಭಾರತ ಮತ್ತು ಉತ್ತರ ಪಶ್ಚಿಮ ಭಾರತಗಳತ್ತ ಸೈನ್ಯವನ್ನು ಕಳುಹಿಸಿದ - ಯುದ್ಧಗಳಲ್ಲಿ ಗೆದ್ದರೂ ಈ ಯುದ್ಧಗಳ ವೆಚ್ಚ ಹೆಚ್ಚುತ್ತಾ ಹೋದಂತೆ ಸಾಮಾನ್ಯ ಜನರ ಮೇಲಿನ ಕಂದಾಯ ಹೆಚ್ಚುತ್ತಾ ಹೋಯಿತು. ಇಷ್ಟರ ಮಧ್ಯದಲ್ಲಿಯೂ ವಾಣಿಜ್ಯ ಮತ್ತು ಕಲೆಯ ಅನೇಕ ಕೇಂದ್ರಗಳು ಹುಟ್ಟಿದವು - ಲಾಹೋರ್, ದೆಹಲಿ, ಆಗ್ರಾ ಮತ್ತು ಅಹ್ಮದಾಬಾದ್. ತಾಜ್ ಮಹಲನ್ನು ಷಾ ಜಹನ್ ಕಟ್ಟದ್ದಲ್ಲ ಅವನು ಹುಟ್ಟೋ ಮೊದಲೆ ಇತ್ತು ಬಾಬರ್ ಸತ್ತಿರುವುದು ಅಲ್ಲೆ ಔರ೦ಗಜೇಬ್ ಮತ್ತು ಸಾಮ್ರಾಜ್ಯದ ಅವನತಿ ಮೊಘಲ್ ಸಾಮ್ರಾಜ್ಯದ ಕೊನೆಯ ಪ್ರಮುಖ ಚಕ್ರವರ್ತಿ ಔರಂಗಜೇಬ್ (ಆಡಳಿತ: ೧೬೫೮ - ೧೭೦೭). ತನ್ನ ಅಣ್ಣ-ತಮ್ಮಂದಿರನ್ನು ಕೊಂದು ಅಧಿಕಾರಕ್ಕೆ ಏರಿದ ಔರಂಗಜೇಬನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯ ಇನ್ನೂ ದೊಡ್ಡದಾಗಿ ಹಬ್ಬಿದರೂ, ಸಹ ಅವನತಿಯ ಚಿಹ್ನೆಗಳು ಮೂಡಲಾರಂಭಿಸಿದವು. ಅಫ್ಘಾನಿಸ್ತಾನದಲ್ಲಿ ಪಠಾಣರ ಮೇಲೆ, ಬಿಜಾಪುರ ಮತ್ತು ಗೋಲಕೊಂಡದ ಸುಲ್ತಾನರ ಮೇಲೆ, ಮರಾಠರ ಮೇಲೆ ಮತ್ತು ಅಸ್ಸಾಮ್ ನ ಅಹೋಮ್ ಗಣದ ಮೇಲೆ ಸತತವಾಗಿ ನಡೆಸಿದ ಯುದ್ಧಗಳ ಪರಿಣಾಮವಾಗಿ ಸಾಮ್ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿತು. ಇತರ ಧರ್ಮಗಳ ಮೇಲೆ ಔರಂಗಜೇಬ್ ಹೆಚ್ಚು ಸಹಿಷ್ಣುತೆ ತೋರದಿದ್ದ ಕಾರಣಕ್ಕಾಗಿ ಅನೇಕ ಕಡೆ ದಂಗೆಗಳು ಏಳಲಾರಂಭಿಸಿ ದವು. ಔರಂಗಜೇಬನ ನಂತರ ಬಂದ ಮೊಘಲ್ ರಾಜರು ಸಾಮ್ರಾಜ್ಯವನ್ನು ಸಮರ್ಥವಾಗಿ ಆಳುವಲ್ಲಿ ವಿಫಲರಾದರು - ನಿಧಾನವಾಗಿ ಕುಗ್ಗಿದ ಸಾಮ್ರಾಜ್ಯ ಕೊನೆಗೆ ೧೮೫೭ ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಸಂಪೂರ್ಣವಾಗಿ ನಿಂತಿತು. ಉಲ್ಲೇಖಗಳು ಬಾಹ್ಯ ಕೊಂಡಿಗಳು Mughals and Swat Mughal India an interactive experience from the British Museum The Mughal Empire from BBC Mughal Empire The Great Mughals Gardens of the Mughal Empire Indo-Iranian Socio-Cultural Relations at Past, Present and Future, by M. Reza Pourjafar, Ali A. Taghvaee, in Web Journal on Cultural Patrimony (Fabio Maniscalco ed.), vol. 1, January–June 2006 Adrian Fletcher's Paradoxplace — PHOTOS — Great Mughal Emperors of India A Mughal diamond on BBC Some Mughal coins with brief history ಇತಿಹಾಸ ಭಾರತದ ಇತಿಹಾಸ
2147
https://kn.wikipedia.org/wiki/%E0%B2%AE%E0%B3%80%E0%B2%A1%E0%B2%BF%E0%B2%AF%E0%B2%BE%E0%B2%B5%E0%B2%BF%E0%B2%95%E0%B2%BF
ಮೀಡಿಯಾವಿಕಿ
ಮೀಡಿಯಾವಿಕಿ, ಕನ್ನಡ ವಿಶ್ವಕೋಶ, ಆಂಗ್ಲ ವಿಶ್ವಕೋಶ ಸೇರಿದಂತೆ ಹಲವಾರು ವಿಕಿಗಳಲ್ಲಿ ಉಪಯೋಗಿಸಲಾಗುವ ತಂತ್ರಾಂಶ. ಸಂಪರ್ಕಗಳು ಯೋಜನೆಯ ಅಧಿಕೃತ ಪುಟ ತಂತ್ರಜ್ಞಾನ
2153
https://kn.wikipedia.org/wiki/%E0%B2%AA%E0%B2%A6%E0%B2%BE%E0%B2%A4%E0%B2%BF%20%28%E0%B2%9A%E0%B2%A6%E0%B3%81%E0%B2%B0%E0%B2%82%E0%B2%97%29
ಪದಾತಿ (ಚದುರಂಗ)
ಪದಾತಿ (ಕಾಲಾಳು, ಆಂಗ್ಲದಲ್ಲಿ 'ಪಾನ್') ಚದುರಂಗದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಮತ್ತು ಅತಿ ದುರ್ಬಲ ಕಾಯಿ. ಇದು ಹಿಂದಿನ ಕಾಲದ ಸೈನ್ಯಗಳ ಪದಾತಿ ದಳವನ್ನು ಪ್ರತಿನಿಧಿಸುತ್ತದೆ. ಆಟದ ಪ್ರಾರಂಭದಲ್ಲಿ ಪ್ರತಿ ಆಟಗಾರನ ಬಳಿ ಎಂಟು ಪದಾತಿಗಳಿರುತ್ತವೆ. ಚಲನೆ ಪದಾತಿಗಳ ಚಲನೆ ಬೇರೆಲ್ಲ ಕಾಯಿಗಳ ಚಲನೆಗೆ ಹೋಲಿಸಿದಂತೆ ಸ್ವಲ್ಪ ವಿಚಿತ್ರವಾದದ್ದು. ಪದಾತಿಗಳು ಮುಂದಕ್ಕೆ ಮಾತ್ರ ಚಲಿಸಬಲ್ಲವು. ಮೊದಲ ಬಾರಿ ಒಂದು ಅಥವಾ ಎರಡು ಚೌಕಗಳನ್ನು ಕ್ರಮಿಸಬಲ್ಲ ಪದಾತಿಗಳು ಇದರ ನಂತರ ಒಂದೊಂದು ಚೌಕ ಮಾತ್ರ ಚಲಿಸಬಲ್ಲವು. ಬೇರೆ ಕಾಯಿಗಳನ್ನು ಹಿಡಿಯುವಾಗ ಮಾತ್ರ ಪದಾತಿಗಳು ತಮ್ಮ ಮೂಲೆಯ ಕಡೆಗಿರುವ ಒಂದು ಚೌಕ್ಕೆ ಹೋಗುತ್ತವೆ. ಕಾಣಿಸಿರುವ ಚಿತ್ರದಲ್ಲಿ ಇರುವ ಬಿಳಿ ಪದಾತಿ ಕಪ್ಪು ಆನೆ ಅಥವಾ ಕಪ್ಪು ಕುದುರೆಯನ್ನು ತಿನ್ನಬಲ್ಲದು. ಆನ ಪಾಸಾನ್ ಪದಾತಿಗಳ ಅತಿ ವಿಚಿತ್ರ ಚಲನೆ. ಒಂದು ಪದಾತಿ ಮೊದಲ ಬಾರಿ ಚಲಿಸುವಾಗ ಎರಡು ಚೌಕ ಕ್ರಮಿಸಿ ಎದುರಾಳಿಯ ಒಂದು ಪದಾತಿಯ ಪಕ್ಕಕ್ಕೆ ಬಂದು ನಿಂತರೆ, ಎದುರಾಳಿಯ ಪದಾತಿ ಮೊದಲನೆಯದನ್ನು "ಹಿಡಿದು" ಮೂಲೆಯ ಮೇಲೆ ಒಂದು ಚೌಕ ಕ್ರಮಿಸಬಲ್ಲದು (ಚಿತ್ರ ನೋಡಿ). ಬಿಳಿ ಪದಾತಿ ಕಪ್ಪು ಪದಾತಿಯನ್ನು "ತಿಂದು" ಗುರುತು ಹಾಕಿರುವ ಚೌಕಕ್ಕೆ ಚಲಿಸಬಲ್ಲುದು. ಈ ರೀತಿಯ ಚಲನೆ ೧೩ ನೆಯ ಶತಮಾನದಲ್ಲಿ ಪರಿಚಯಿಸಲ್ಪಟ್ಟಿದ್ದು. ಒಂದು ಪದಾತಿ ಇಡೀ ಮಣೆಯನ್ನು ಕ್ರಮಿಸಿ ಇನ್ನೊಂದು ತುದಿಯನ್ನು ಮುಟ್ಟಿದರೆ ಅದು ಆಟಗಾರನ ಆಯ್ಕೆಯ ಬೇರೆ ಯಾವುದಾದರೂ ಕಾಯಿಯಾಗಿ ಪರಿವರ್ತನೆ ಹೊಂದುತ್ತದೆ. ಉಕ್ತಿ "ಪದಾತಿಗಳು ಚದುರಂಗದ ಹೃದಯ." - ಆಂಡ್ರೆ ಫಿಲಿಡಾರ್, ೧೮ ನೇ ಶತಮಾನದ ಫರೆಂಚ್ ಆಟಗಾರ, ಪದಾತಿಗಳನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ಬಹಳಷ್ಟು ಸಂಶೋಧನೆ ನಡೆಸಿದವರು. ಇವನ್ನೂ ನೋಡಿ ಚದುರಂಗ ಚದುರಂಗ ಕ್ರೀಡೆ ಚದುರಂಗದ ಕಾಯಿ
2164
https://kn.wikipedia.org/wiki/%E0%B2%B0%E0%B2%BE%E0%B2%9C%20%28%E0%B2%9A%E0%B2%A6%E0%B3%81%E0%B2%B0%E0%B2%82%E0%B2%97%29
ರಾಜ (ಚದುರಂಗ)
ರಾಜ (♔♚) ಚದುರಂಗದಲ್ಲಿ ಉಪಯೋಗವಾಗುವ ಕಾಯಿಗಳಲ್ಲಿ ಒಂದು. ಇದು ಈ ಆಟದ ಅತಿ ಮುಖ್ಯ ಕಾಯಿಯೂ ಹೌದು - ಎದುರಾಳಿಯ ರಾಜನನ್ನು ಹಿಡಿಯುವುದೇ ಇಡೀ ಆಟದ ಉದ್ದೇಶ. ರಾಜನ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಳಲು ಯಾವ ಚೌಕಗಳೂ ಇಲ್ಲದೆ ಇದ್ದ ಹಾಗೆ ಮಾಡಿದಲ್ಲಿ ಆಟ ಮುಗಿದಂತೆ - ಇದಕ್ಕೆ "ಚೆಕ್ ಮೇಟ್" ಎಂದು ಹೆಸರು. ರಾಜ ಯಾವುದೇ ದಿಕ್ಕಿನಲ್ಲಾದರೂ ಸರಿಯಾಗಿ ಒಂದು ಚೌಕ ಕ್ರಮಿಸಬಹುದು. ಹಾಗೆಯೇ ಆ ಚೌಕಗಳಲ್ಲಿರುವ ಎದುರಾಳಿಯ ಕಾಯನ್ನು ಆಕ್ರಮಿಸಬಹುದು. ರಾಜನಿಗೆ ಇರುವ ಒಂದು ವಿಶೇಷ ಚಲನೆಯೆಂದರೆ "ಕ್ಯಾಸ್‍ಲಿಂಗ್". ಎರಡು ಕಾಯಿಗಳು ಒಂದೇ ನಡೆಯಲ್ಲಿ ಕ್ರಮಿಸುವುದು ಈ ಒಂದು ಉದಾಹರಣೆಯಲ್ಲಿ ಮಾತ್ರ. ಎದುರಾಳಿಯ ಯಾವುದೇ ಕಾಯಿ ರಾಜನ ಮೇಲೆ ದಾಳಿ ನಡೆಸುವುದಕ್ಕೆ "ಚೆಕ್" ಎಂದು ಹೆಸರು. "ಚೆಕ್" ಇಂದ ತಪ್ಪಿಸಿಕೊಳ್ಳುವುದಕ್ಕೆ ಆಗದಿದ್ದಲ್ಲಿ "ಚೆಕ್ ಮೇಟ್." ರಾಜನನ್ನು ನಡೆಸುವಾಗ "ಚೆಕ್" ಬರುವ೦ಥ ಯಾವುದೇ ಚೌಕಕ್ಕೆ ಅದನ್ನು ಚಲಿಸುವ೦ತಿಲ್ಲ. ಹಾಗೆಯೇ, "ಚೆಕ್" ಇದ್ದಾಗ, ಕ್ಯಾಸ್‍ಲಿಂಗ್ ನಡೆಯನ್ನು ಮಾಡುವಹಾಗಿಲ್ಲ. ಮೂಲ ಸ್ಥಾನಗಳು ಆಟ ಪ್ರಾರಂಭವಾಗುವಾಗ, ಬಿಳಿಯ ರಾಜ, e1 ಸ್ಥಾನದಲ್ಲಿರುತ್ತದೆ. (ಅಂದರೆ, ಮೊದಲ ಸಾಲಿನಲ್ಲಿ ಎಡಗಡೆಯಿಂದ ಐದನೆ ಮನೆ) ಕಪ್ಪನೆಯ ರಾಜ, e8 ಸ್ಥಾನದಲ್ಲಿರುತ್ತದೆ. (ಅಂದರೆ, ಎಂಟನೆ ಸಾಲಿನಲ್ಲಿ ಎಡಗಡೆಯಿಂದ ಐದನೆ ಮನೆ) ಗಮನಿಸಿ: ಸಾಲುಗಳ ಸಂಖ್ಯ ಬಿಳಿಯ ಕಾಯಿ ನಡೆಸುವ ಸ್ಪರ್ಧಿಯ ಕಡೆಯಿಂದ. ಚದುರಂಗ ಕ್ರೀಡೆ ಚದುರಂಗದ ಕಾಯಿ
2168
https://kn.wikipedia.org/wiki/%E0%B2%B0%E0%B2%BE%E0%B2%A3%E0%B2%BF%20%28%E0%B2%9A%E0%B2%A6%E0%B3%81%E0%B2%B0%E0%B2%82%E0%B2%97%29
ರಾಣಿ (ಚದುರಂಗ)
ರಾಣಿ ಚದುರಂಗದ ಕಾಯಿಗಳಲ್ಲಿ ಒಂದು - ಇದು ಈ ಆಟದ ಅತ್ಯಂತ ಪ್ರಬಲವಾದ ಕಾಯಿಯೂ ಹೌದು. ಇದನ್ನು ನೀರವಾಗಿ (ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ, ಮೇಲಿಂದ ಕೆಳಗೆ, ಕೆಳಗಿಂದ ಮೇಲೆ) ಎಷ್ಟು ಚೌಕಗಳನ್ನು ಬೇಕಾದರೂ ನಡೆಸಬಹುದು. ಹಾದುಹೋಗುವ ಚೌಕಗಳು ಖಾಲಿಯಿರಬೇಕಷ್ಟೆ. ಹಾಗೆಯೇ, ರಾಣಿಯನ್ನು ಡಯಾಗನಲ್ ಮಾದರಿಯಲ್ಲಿ ನಡೆಸಬಹುದು. ಚದುರಂಗ ಕ್ರೀಡೆ ಚದುರಂಗದ ಕಾಯಿ
2169
https://kn.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%20%E0%B2%A4%E0%B2%82%E0%B2%AC%E0%B2%BE%E0%B2%95%E0%B3%81%20%E0%B2%A8%E0%B2%BF%E0%B2%B7%E0%B3%87%E0%B2%A7%20%E0%B2%A6%E0%B2%BF%E0%B2%A8
ವಿಶ್ವ ತಂಬಾಕು ನಿಷೇಧ ದಿನ
ವಿಶ್ವ ತಂಬಾಕು ನಿಷೇಧ ದಿನವು ವಿಶ್ವ ಪರ್ಯಂತ ಪ್ರತಿ ವರ್ಷ ೩೧ ಮೆ ಯಂದು ಆಚರಿಸಲಾಗುತ್ತದೆ ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು ೧೯೮೭ರ ಇಸವಿಯಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ತಂಬಾಕು ನಿಷೇಧ ದಿನವನ್ನು ಆಯೋಜಿಸಿದರು..೧೯೮೭ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ಸ೦ಸ್ಥೆಯು ತ೦ಬಾಕು ರಹಿತ ದಿನದ ಆಚರಗೆಯ ಬಗ್ಗೆ ಅದಿನೂಚನೆ ಹೊರಡಿಸಿತು.ವಿಶ್ವ ಆರೋಗ್ಯ ಸ೦ಸ್ಥೆಯು ಆರೋಗ್ಯದ ದೃಷ್ಟಿಯಿ೦ದ ತ೦ಬಾಕು ನಿಷೇಧ ಬಗ್ಗೆ ಚಿ೦ತನೆಯನ್ನು ಕೈಗೊ೦ಡಿತು.ತ೦ಬಾಕು ಸೇವನೆಯಿ೦ದ ಪ್ರತಿ ವರ್ಷ ಪ್ರಪ೦ಚದಾದ್ಯ೦ತ ಆರು ಮಿಲಿಯ೦ನ್ ಅಷ್ಟು ಜನರು ಮರಣ ಹೊ೦ದುತಿದ್ದಾರೆ. ಧೂಮಪಾನ ಕೆಟ್ಟದ್ದು ಆದರೆ ಧೂಮಪಾನಿಗಳು ಕೆಟ್ಟವರಲ್ಲ.ಆದುದರಿ೦ದ ಸರ್ಕಾರ ಮನುಷ್ಯನ ಭವಿಶ್ಯದ ಬಗ್ಗೆ ಚಿ೦ತಿಸಿ ತ೦ಬಾಕು ನಿಷೇಧವನ್ನು ಮಾಡುತ್ತಾರೆ.ಭಾರತ ದೇಶದಲ್ಲಿ ಕ್ಯಾನ್ಸರ್ ಹೆತ್ತ ಸೊಸೈಟಿ ರೆಡ್ ಕ್ರಾಸ್ ಸ೦ಸ್ಥೆ,ಯೆನ್ ಜಿ ಒ,ಮು೦ತಾದ ಸ೦ಸ್ಥೆಗಳು ತ೦ಬಾಕಿನ ದುಷ್ಪರಿಣಾಮಗಳ ಬಗ್ಗೆ ಹಲವು ಉಪನ್ಯಾಸ ಗಳನ್ನು,ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮಗಳನ್ನು ಮೂಡುತ್ತಿವೆ.ಹಾಗೆಯೇ ತ೦ಬಾಕಿನ ಯಾವುದೇ ರೀತಿಯ ಜಾಹಿರಾತಿಗೂ ಅವಕಾಶ ಕೊಡುತಿಲ್ಲ.ತಮಿಳುನಾಡಿನಲ್ಲಿ ಕ್ಯಾನ್ಸರ್ ಸ೦ಸ್ಥೆ ತ೦ಬಾಕು ನಿಯ೦ತ್ರಣ ತೆರೆದಿದೆ. ಇದರ ಮುಖ್ಯ ಉದ್ದೇಶವೆ೦ದರೆ ಒ೦ದು ಸ೦ಪೂರ್ಣ ದಿನ ಅ೦ದು ಘ೦ಟೆಗಳ ಕಾಲ ಯಾವುದೇ ರೀತಿಯ ತ೦ಬಾಕು ಇರುವ ವಸ್ತುಗಳನ್ನು ಸೇವಿಸದಿರುವುದು ಅಥವಾ ಉಪಯೋಗಿಸದೆ ಇರುವುದು. ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿ೦ದ ಅ೦ದರೆ ೩೦-೪೦ ಹರೆಯದವರಿಗಿ೦ತ ಹೆಚ್ಚಾಗಿ ಯುವಕರೆ ಹೆಚ್ಚಾಗಿ ತ೦ಬಾಕು ಇರುವ ವಸ್ತುಗಳನ್ನು ಸೇವಿಸುತಿದ್ದಾರೆ.ಉವಕರಿಗೆ ಅದರಿ೦ದ ಹಾಗುವ ಹಾನಿ,ತೊ೦ದರೆಗಳನ್ನು ಅರ್ಥಮಾಡಿಸಲು ಈ ದಿನ ಒ೦ದು ಪ್ರಯತ್ನ ಇದನ್ನು ವಿಶ್ವದಾದ್ಯ೦ತೆ ಆಚರಿಸುತ್ತಾರೆ. ತ೦ಬಾಕು ಸೇವನೆಯಿ೦ದ ಆಗುತ್ತಿರುವ ಸಾವಿನ ಸ೦ಖ್ಯೆಯು ಕ್ಷೀಣವಾಗಿ ಹೆಚ್ಚುತ್ತಲೇ ಇದೆ.ಸಿಗರೇಟ್ ತಮ್ಮ ಅಕ್ಕಪಕ್ಕದಲ್ಲಿರುವವರಿಗೆ ಹೆಚ್ಚಿನ ಹಾನಿಯನ್ನು ಮಾಡುತ್ತಾರೆ.ಹೀಗೆ ತಮಗೆ ಕಾಯಿಲೆಯನ್ನು ತ೦ದುಕೊಳ್ಳುವುದಲ್ಲದೆ ಇ ಚಟ ಇಲ್ಲದೆ ಜನಕ್ಕೂ ಅವರೂ ಕಾಯಿಲೆಗಳನ್ನು ಬರಿಸುತ್ತಾರೆ.ಹೀಗಾಗಿ ಬಹಳಷ್ಟು ಜನ ಸಾಯುತ್ತಾರೆ.ಇದನ್ನು ತಡೆಯುವ ದಿನವನ್ನು ಆಚರಿಸುತ್ತಾರೆ. ಈ ದಿನವನ್ನು ಬೂದಿ ಟ್ರೇ ಗಳಲ್ಲಿ ಧೂಮುಗಳನ್ನು ಇಟ್ಟು ಆಚರಿಸುತ್ತಾರೆ.ತ೦ಬಾಕು ಹಾಗು ಅದರಿ೦ದ ತಯಾರಿಸುವ ವಸ್ತುಗಳಿ೦ದ ಆಗುವ ಹಾನಿ ತಡೆಗಟ್ಟಲು ಈ ದಿನ ಆಚರಿಸುವರು. ಬಾಹ್ಯ ಸಂಪರ್ಕಗಳು ತಂಬಾಕು ನಿಷೇಧ ದಿನ ತಾಣ ವಿಶ್ವ ಆರೋಗ್ಯ ಸಂಘಟನೆಯ ವಿಶ್ವ ತಂಬಾಕು ನಿಷೇಧ ದಿನಗಳು ಪ್ರಮುಖ ದಿನಗಳು
2170
https://kn.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%20%E0%B2%86%E0%B2%B0%E0%B3%8B%E0%B2%97%E0%B3%8D%E0%B2%AF%20%E0%B2%B8%E0%B2%82%E0%B2%98%E0%B2%9F%E0%B2%A8%E0%B3%86
ವಿಶ್ವ ಆರೋಗ್ಯ ಸಂಘಟನೆ
ವಿಶ್ವ ಆರೋಗ್ಯ ಸಂಘಟನೆಯು ಸಂಯುಕ್ತ ರಾಷ್ಟ್ರ ಸಂಸ್ಥೆಯ ಒಂದು ವಿಶೇಷ ವಿಭಾಗೀಯ ಸಂಸ್ಥೆ. ಈ ಸಂಘಟನೆಯು ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯದ ಕಾರ್ಯಗಳನ್ನು ಒಟ್ಟಾಗಿಸಿ ಅವುಗಳು ಸಫಲವಾಗುವಲ್ಲಿ ಪ್ರಯತ್ನ ಪಡುವುದು ಇದರ ಗುರಿ. ಸಂಯುಕ್ತ ರಾಷ್ಟ್ರ ಸಂಸ್ಥೆಯು ಎಪ್ರಿಲ್ ೭, ೧೯೪೮ರಂದು ಈ ಸಂಘಟನೆಯನ್ನು ಸ್ಥಾಪಿಸಿತು. ಸ್ವಿಟ್ಜರ್ಲ್ಯಾನ್ಡ್ನ ಜಿನಿವಾ ನಗರವು ಸಂಘಟನೆಯ ಕೇಂದ್ರವಾಗಿದೆ. ಮೇ ೨೦೦೬ರಲ್ಲಿ ಅನಿರೀಕ್ಷಿತವಾಗಿ ಮೃತರಾದ ಲೀ ಜೊಂಗ್-ವೂಕ್‍ರವರ ಸ್ಥಾನದಲ್ಲಿ ತಾತ್ಕಾಲಿಕವಾಗಿ ಆಂಡರ್ಸ್ ನಾರ್ಡ್‍ಸ್ಟ್ರಾಮ್‍ರವರು ಸಂಘಟನೆಯ ಸಾರ್ವತ್ರಿಕ ದಿಗ್ದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಬಾಹ್ಯ ಸಂಪರ್ಕಗಳು ಆರೋಗ್ಯ ಸಂಘಟನೆಯ ತಾಣ ಆರೋಗ್ಯ ಸಂಯುಕ್ತ ರಾಷ್ಟ್ರ ಸಂಸ್ಥೆ ಅಂತರರಾಷ್ಟ್ರೀಯ ಸಂಘಟನೆಗಳು
2173
https://kn.wikipedia.org/wiki/%E0%B2%B8%E0%B3%8D%E0%B2%B5%E0%B2%BF%E0%B2%9F%E0%B3%8D%E0%B2%9C%E0%B2%B0%E0%B3%8D%E0%B2%B2%E0%B3%8D%E0%B2%AF%E0%B2%BE%E0%B2%82%E0%B2%A1%E0%B3%8D
ಸ್ವಿಟ್ಜರ್ಲ್ಯಾಂಡ್
ಸ್ವಿಟ್ಜರ್ಲೆಂಡ್‌‌ ( , , ), ಅಧಿಕೃತವಾಗಿ ಸ್ವಿಸ್‌ ಒಕ್ಕೂಟ (ಲ್ಯಾಟಿನ್‌ನಲ್ಲಿ ಕಾನ್‌ಪೊಡೆರೇಷ್ಯೋ ಹೆಲ್ವೆಟಿಕಾ, ಆದ್ದರಿಂದ ಇದರ ISO ರಾಷ್ಟ್ರ ಸಂಕೇತಗಳಾಗಿ CH ಮತ್ತು CHEಯನ್ನು ನಿಗದಿಪಡಿಸಲಾಗಿದೆ), ಸುತ್ತಲೂ ಭೂಪ್ರದೇಶದಿಂದ ಆವೃತವಾದ ಪರ್ವತ ಪ್ರದೇಶ ಸುಮಾರು 7.7 ದಶಲಕ್ಷ ಜನಸಂಖ್ಯೆ(2009ರಲ್ಲಿ)ಯನ್ನು ಹೊಂದಿರುವ 41,285 km²ನಷ್ಟು ವಿಸ್ತೀರ್ಣವಿರುವ ಪಶ್ಚಿಮ ಯೂರೋಪ್‌ನ ರಾಷ್ಟ್ರವಾಗಿದೆ. ಸ್ವಿಟ್ಜರ್ಲೆಂಡ್‌‌ ಕ್ಯಾಂಟನ್‌ಗಳೆಂದು ಕರೆಯಲಾಗುವ 26 ರಾಜ್ಯಗಳನ್ನು ಹೊಂದಿರುವ ಸಂಯುಕ್ತ ಗಣರಾಜ್ಯವಾಗಿದೆ. ಬರ್ನ್‌ ರಾಜ್ಯಾಡಳಿತದ ಅಧಿಕಾರ ಕೇಂದ್ರವಾಗಿದ್ದರೆ, ಇದರ ಎರಡು ಜಾಗತಿಕ ಮಹಾನಗರಗಳಾದ ಜಿನೀವಾ ಮತ್ತು ಜ್ಯೂರಿಚ್‌ಗಳು ರಾಷ್ಟ್ರದ ಆರ್ಥಿಕ ಕೇಂದ್ರಗಳಾಗಿವೆ. ಸ್ವಿಟ್ಜರ್ಲೆಂಡ್‌‌ ಕನಿಷ್ಟ ತಲಾವಾರು GDP $67,384ನ್ನು ಹೊಂದಿ ತಲಾ ಸಮಗ್ರ ದೇಶೀಯ ಉತ್ಪನ್ನದ ಆಧಾರದಲ್ಲಿ, ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಜ್ಯೂರಿಚ್‌ ಮತ್ತು ಜಿನೀವಾಗಳು ಅನುಕ್ರಮವಾಗಿ ವಿಶ್ವದಲ್ಲೇ ಎರಡನೇ ಮತ್ತು ಮೂರನೇ ಉನ್ನತ ಜೀವನ ಮಟ್ಟವನ್ನು ಹೊಂದಿರುವ ನಗರಗಳಾಗಿ ಶ್ರೇಯಾಂಕಿತಗೊಂಡಿವೆ. ಸ್ವಿಟ್ಜರ್ಲೆಂಡ್‌‌ ಉತ್ತರದಲ್ಲಿ ಜರ್ಮನಿಯನ್ನು, ಪಶ್ಚಿಮದಲ್ಲಿ ಫ್ರಾನ್ಸ್‌ನ್ನು, ದಕ್ಷಿಣದಲ್ಲಿ ಇಟಲಿ ಮತ್ತು ಪೂರ್ವದಲ್ಲಿ ಲಿಯೆಕ್‌ಟೆನ್ಸ್ಟೀನ್‌, ಆಸ್ಟ್ರಿಯಾಗಳನ್ನು ಗಡಿಯಾಗಿ ಹೊಂದಿದೆ. ಈ ರಾಷ್ಟ್ರವು ದೀರ್ಘಕಾಲೀನ ಅಲಿಪ್ತ ನೀತಿಯ ಇತಿಹಾಸವನ್ನು ಹೊಂದಿದೆ—1815ರಿಂದ ಇಲ್ಲಿಯವರೆಗೆ ಯಾವುದೇ ಅಂತರರಾಷ್ಟ್ರೀಯ ಯುದ್ಧಗಳಲ್ಲಿ ಭಾಗವಹಿಸಿಲ್ಲ — ಮತ್ತು ರೆಡ್‌ ಕ್ರಾಸ್‌, ವಿಶ್ವ ವ್ಯಾಪಾರ ಸಂಘಟನೆ ಮತ್ತು U.N.ನ ಎರಡು ಐರೋಪ್ಯ ಶಾಖೆಗಳಲ್ಲಿ ಒಂದು ಶಾಖೆಯೂ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಸಂಘಟನೆಗಳಿಗೆ ಆತಿಥೇಯನಾಗಿದೆ. ಈ ರಾಷ್ಟ್ರವು ಐರೋಪ್ಯ ಒಕ್ಕೂಟದ ಭಾಗವಾಗದೇ ಇದ್ದರೂ, ಇದು ಷೆಂಗನ್‌ ಒಪ್ಪಂದಕ್ಕೆ ಬದ್ಧವಾಗಿದೆ. ಜರ್ಮನ್‌, ಫ್ರೆಂಚ್‌, ಇಟಾಲಿಯನ್‌ ಮತ್ತು ರೋಮನ್ಷ್‌ ಎಂಬ ನಾಲ್ಕು ಭಾಷೆಗಳನ್ನು ರಾಷ್ಟ್ರಭಾಷೆಗಳಾಗಿ ಹೊಂದಿರುವ ಸ್ವಿಟ್ಜರ್ಲೆಂಡ್‌‌ ಬಹುಭಾಷಿಕ ರಾಷ್ಟ್ರವಾಗಿದೆ. ರಾಷ್ಟ್ರದ ಔಪಚಾರಿಕ ಹೆಸರು ಜರ್ಮನ್‌ ಭಾಷೆಯಲ್ಲಿ , ಫ್ರೆಂಚ್‌ನಲ್ಲಿ , ಇಟಾಲಿಯನ್‌ ಭಾಷೆಯಲ್ಲಿ ಮತ್ತು ರೋಮಾನ್ಷ್‌ನಲ್ಲಿ ಎಂದಾಗಿದೆ. ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್‌‌‌ನ ಸ್ಥಾಪನೆಯು 1291ರ ಆಗಸ್ಟ್‌ 1ರಲ್ಲಿ ಆಗಿದ್ದುದರಿಂದ; ಸ್ವಿಸ್ ರಾಷ್ಟ್ರೀಯ ದಿನವನ್ನು ಅಂದು ವಾರ್ಷಿಕವಾಗಿ ಆಚರಿಸಲಾಗುತ್ತದೆ. ವ್ಯುತ್ಪತ್ತಿ ಶಾಸ್ತ್ರ ಸ್ವಿಟ್ಜರ್ಲೆಂಡ್‌‌ ಎಂಬ ಆಂಗ್ಲ ಹೆಸರು ಸ್ವಿಸ್‌ನ 16ರಿಂದ 19ನೇ ಶತಮಾನಗಳವರೆಗೆ ಬಳಕೆಯಲ್ಲಿದ್ದು ಈಗ ಬಳಕೆಯಲ್ಲಿಲ್ಲದ ರೂಪಾಂತರ ಸ್ವಿಟ್ಜರ್‌ ಪದವನ್ನು ಹೊಂದಿದ್ದ ಸಂಯುಕ್ತ ಪದವಾಗಿದೆ. ಆಂಗ್ಲ ಪದ ಸ್ವಿಸ್ ಎಂಬುದು ಫ್ರೆಂಚ್‌ನಿಂದ ಕಡ ಪಡೆದುಕೊಂಡ , 16ನೇ ಶತಮಾನದಿಂದಲೂ ಬಳಕೆಯಲ್ಲಿರುವ ಗುಣವಾಚಕವಾಗಿದೆ. ಸ್ವಿಟ್ಜರ್‌ ಎಂಬ ಹೆಸರು ಅಲೆಮಾನ್ನಿಕ್‌ ಮೂಲದ್ದಾಗಿದ್ದು , ಸ್ಕ್ವಿಜ್‌ ಅದರ ಸಂಬಂಧಿತ ಪ್ರಾಂತ್ಯಕ್ಕೆ ಸೇರಿದ್ದಾಗಿತ್ತು. ಈ ಪ್ರದೇಶ ಹಳೆಯ ಸ್ವಿಸ್ ಒಕ್ಕೂಟದ ಕೇಂದ್ರವಾಗಿ ಪರಿಣಮಿಸಿದ ವಾಲ್ಡ್‌ಸ್ಟಾಟ್ಟೆನ್‌ ಕ್ಯಾಂಟನ್‌ಗಳಲ್ಲಿ ಒಂದಾಗಿತ್ತು. ಪ್ರಾಥಮಿಕವಾಗಿ ಹಳೆಯ ಉನ್ನತ ಜರ್ಮನ್‌ ಎಂಬುದಾಗಿ ಸ್ಥಳನಾಮವನ್ನು 972ರಲ್ಲೇ ದೃಢೀಕೃತಗೊಳಿಸಲಾಗಿತ್ತು. ಇದು ಬಹುಶಃ "ದಹಿಸಲು" ಎಂಬರ್ಥದಲ್ಲಿ ನಗರವನ್ನು ಕಟ್ಟಲು ಅರಣ್ಯವನ್ನು ದಹಿಸಿ ತೆರವುಗೊಳಿಸಿದ್ದನ್ನು ನೆನಪಿಸಲು ಇರಬಹುದು. ಈ ಹೆಸರು ನಂತರ ಕ್ಯಾಂಟನ್ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳಿಗೆ ವಿಸ್ತರಿಸಲಾಯಿತು. ಒಂದು ಭಾಗದ ಹೆಸರನ್ನು ಪೂರ್ಣ ಪ್ರದೇಶಕ್ಕೆ ಬಳಸುವ ರೀತಿಯಲ್ಲಿ 1499ರ ಸ್ವಾಬಿಯನ್‌ ಯುದ್ಧದ ನಂತರ ಇದು ಇಡೀ ಒಕ್ಕೂಟವನ್ನು ಇದೇ ಹೆಸರಿಂದ ಕರೆಯಲಾಯಿತು.ರಾಷ್ಟ್ರದ ಸ್ವಿಸ್ ಜರ್ಮನ್‌ ಹೆಸರು ಕ್ಯಾಂಟನ್ ಮತ್ತು ವಸಾಹತುಗಳ ಹೆಸರಿಗೆ ಸಮಾನಾರ್ಥಕವಾಗಿದ್ದರೂ , ನಿರ್ದಿಷ್ಟ ಅನುಚ್ಛೇದಗಳಿಂದ ಪ್ರತ್ಯೇಕಿಸಲಾಗಿದೆ(ಒಕ್ಕೂಟಕ್ಕೆ , ಆದರೆ ಕ್ಯಾಂಟನ್ ಮತ್ತು ಪಟ್ಟಣಗಳಿಗೆ ಸರಳವಾಗಿ ಎಂದು ಕರೆಯಲಾಗಿದೆ). ನೆಪೋಲಿಯನ್‌ನ ಹೆಲ್ವೆಟಿಕ್‌ ಗಣರಾಜ್ಯಕ್ಕೆ ಮರಳಿ ನವೀನ-ಲ್ಯಾಟಿನ್‌ ಹೆಸರಾದ ಕಾನ್‌ಫೊಡರೇಷಿಯೋ ಹೆಲ್ವೆಟಿಕಾ ಎಂಬುದನ್ನು ಒಕ್ಕೂಟ ರಾಷ್ಟ್ರದ ಸ್ಥಾಪನೆಯಾದ 1848ರಲ್ಲಿ ಪರಿಚಯಿಸಲಾಯಿತು. ರೋಮನ್‌ ಯುಗದ ಮುನ್ನ ಸ್ವಿಸ್ ಪ್ರಸ್ಥಭೂಮಿಯಲ್ಲಿ ವಾಸವಾಗಿದ್ದ ಕೆಲ್ಟಿಕ್‌ ಬುಡಕಟ್ಟು ಜನಾಂಗದ ಹೆಸರಿನಿಂದ ಹೆಲ್ವೆಟೀ ಎಂಬುದು ಈ ಹೆಸರಿಗೆ ಮೂಲವಾಗಿತ್ತು. ಹೆಲ್ವೆಟೀ ಎಂಬ ಹೆಸರು ಇಟ್ರಸ್ಕನ್‌ ರೂಪದಲ್ಲಿ ಶಾಸನ ಬದ್ಧವಾಗಿ, ಸುಮಾರು 300 BC ಕಾಲದ ಹಡಗಿನ ಮೇಲೆ ದೃಢಪಡಿಸಲಾಗಿತ್ತು. ಈ ಹೆಸರುಗಳು ಇತಿಹಾಸ ಶಾಸ್ತ್ರದಲ್ಲಿ ಮೊದಲು 2ನೇ ಶತಮಾನ BCಯ ಸಮಯದಲ್ಲಿನ, ಪೋಸಿಡೊನಿಯಸ್‌ ರಚಿತ ಇತಿಹಾಸದಲ್ಲಿ ಕಾಣಿಸಿಕೊಳ್ಳುತ್ತವೆ. ಜೋಹಾನ್ನ್‌ ಕ್ಯಾಸ್ಪರ್‌ ವೇಸನ್‌ಬಕ್‌ ಎಂಬಾತನ 1672ರಲ್ಲಿ ಬರೆದ ನಾಟಕದಲ್ಲಿ 17ನೇ ಶತಮಾನದ ಹೆಲ್ವೆಟಿಯಾ ಸ್ವಿಸ್ ಒಕ್ಕೂಟದ ರಾಷ್ಟ್ರೀಯ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ. ಇತಿಹಾಸ 1848ರಲ್ಲಿ ಸ್ವಿಸ್ ಒಕ್ಕೂಟದ ಸಂವಿಧಾನದ ಅಳವಡಿಕೆಯ ನಂತರ ಸ್ವಿಟ್ಜರ್ಲೆಂಡ್‌‌ ಪ್ರಸಕ್ತ ಚಾಲ್ತಿಯಲ್ಲಿರುವ ರಾಜಕೀಯ ವ್ಯವಸ್ಥೆಯನ್ನೇ ಪಾಲಿಸುತ್ತಿದೆ. 13ನೇ ಶತಮಾನದ ಅಂತ್ಯದಲ್ಲಿ ಆಧುನಿಕ ಸ್ವಿಟ್ಜರ್ಲೆಂಡ್‌‌‌ನ ಪೂರ್ವಿಕರು ರಕ್ಷಣಾತ್ಮಕ ಮೈತ್ರಿಯನ್ನು ಸ್ಥಾಪಿಸಿದರು. ಇದು ಶತಮಾನಗಳ ಕಾಲ ರಾಷ್ಟ್ರಗಳ ಸಡಿಲ ಒಕ್ಕೂಟವಾಗಿ ಮುಂದುವರೆಯಲು ಕಾರಣವಾಯಿತು. ಪೂರ್ವ ಇತಿಹಾಸ ಸ್ವಿಟ್ಜರ್ಲೆಂಡ್‌‌‌ನಲ್ಲಿನ ಮಾನವ ಅಸ್ತಿತ್ವದ ಪ್ರಾಚೀನ ಕುರುಹುಗಳು 150,000 ವರ್ಷಗಳ ಹಿಂದಿನವು. ಸ್ವಿಟ್ಜರ್ಲೆಂಡ್‌‌‌ನಲ್ಲಿನ ಗ್ಯಾಕ್‌ಲಿಂಗೆನ್‌ನಲ್ಲಿ ಪತ್ತೆಯಾದ ಕೃಷಿ ನೆಲೆಯೇ ಅತಿ ಹಳೆಯ ಪರಿಚಿತ ನೆಲೆಯಾಗಿದ್ದು , ಇದು ಸುಮಾರು 5300 BCಗಳಷ್ಟು ಹಳೆಯದಾಗಿದೆ. ಈ ಪ್ರದೇಶದ ಅತಿ ಹಳೆಯ ಗೊತ್ತಿರುವ ಬುಡಕಟ್ಟು ಸಂಸ್ಕೃತಿಯೆಂದರೆ ಹಾಲ್‌ಸ್ಟಟ್‌ ಮತ್ತು ಲಾ ಟೆನೆ ಸಂಸ್ಕೃತಿಗಳು. ಲಾ ಟೆನೆ ನ್ಯೂಚಾಟೆಲ್‌ ಸರೋವರದ ಉತ್ತರದಲ್ಲಿರುವ ಉತ್ಖನನ ಕ್ಷೇತ್ರದಿಂದ ಪ್ರೇರಿತವಾಗಿ ಈ ಹೆಸರುಗಳನ್ನಿಡಲಾಗಿದೆ. ಲಾ ಟೆನೆ ಸಂಸ್ಕೃತಿಯು ಕಬ್ಬಿಣ ಯುಗದ ಉತ್ತರಾರ್ಧದಲ್ಲಿ ಸುಮಾರು 450 BCಯ ಕಾಲದಲ್ಲಿ , ಗ್ರೀಕ್‌ ಮತ್ತು ಎಟ್ರುಸ್ಕನ್‌ ನಾಗರೀಕತೆಗಳ ಪ್ರಭಾವದಲ್ಲಿ ಬೆಳೆದು ಏಳಿಗೆ ಹೊಂದಿತು. ಸ್ವಿಸ್ ಪ್ರದೇಶದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಪ್ರಮುಖವಾದದ್ದೆಂದರೆ ಹೆಲ್ವೆಟೀ. 58ನೇ ಇಸವಿ BCಯಲ್ಲಿ, ಬಿಬ್ರಾಕ್ಟ್‌‌ ಕಾಳಗದಲ್ಲಿ, ಜ್ಯೂಲಿಯಸ್‌ ಸೀಜರ್‌'ನ ಸೇನೆಯು ಹೆಲ್ವೆಟೀಯನ್ನು ಪರಾಭವಗೊಳಿಸಿತು. 15 BC ಕಾಲದಲ್ಲಿ ರೋಮ್‌ನ ಎರಡನೇ ಚಕ್ರವರ್ತಿಯಾಗುತ್ತಿದ್ದ , ಟಿಬೆರಿಯಸ್‌ I, ಮತ್ತು ಆತನ ಸಹೋದರ, ಡ್ರೂಸಸ್‌, ಆಲ್ಫ್ಸ್‌ ಪ್ರದೇಶವನ್ನು ವಶಪಡಿಸಿಕೊಂಡು ರೋಮ್‌ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು. ಹೆಲ್ವೆಟೀಯು ಆಕ್ರಮಿಸಿದ ಪ್ರದೇಶ—ನಂತರದ ಕಾನ್‌ಫೊಡರೇಷಿಯೋ ಹೆಲ್ವೆಟಿಕಾ ದ ನಾಮ ಮಾತ್ರ ಭಾಗವಾಗಿದ್ದ —ಮೊದಲು ರೋಮ್‌ನ ಗಲ್ಲಿಯಾ ಬೆಲ್ಜಿಕಾ ಪ್ರಾಂತ್ಯದ ಭಾಗವಾಗಿತ್ತು. ನಂತರ ಆಗಿನ ತನ್ನ ಜರ್ಮೇನಿಯಾ ಸುಪೀರಿಯರ್‌ ಪ್ರಾಂತ್ಯದ ಭಾಗವಾಗಿತ್ತು. ಆಧುನಿಕ ಸ್ವಿಟ್ಜರ್ಲೆಂಡ್‌‌‌ನ ಪೂರ್ವ ಭಾಗವು ರಯೇಶ್ಯಾ ಎಂಬ ರೋಮ್‌ ಪ್ರಾಂತ್ಯದೊಂದಿಗೆ ವಿಲೀನವಾಗಿತ್ತು. ಮಧ್ಯ ಯುಗದ ಪೂರ್ವಭಾಗದಲ್ಲಿ, 4ನೇ ಶತಮಾನದಿಂದ, ಆಧುನಿಕ-ಕಾಲದ ಸ್ವಿಟ್ಜರ್ಲೆಂಡ್‌‌‌ನ ಪಶ್ಚಿಮ ಹರವಿನ ಪ್ರದೇಶವು ಬರ್ಗಂಡಿಯನ್‌ ಅರಸರ ಸೀಮೆಗೆ ಒಳಪಟ್ಟಿತ್ತು. ಅಲೆಮಾನ್ನಿಗಳು ಸ್ವಿಸ್‌ ಪ್ರಸ್ಥಭೂಮಿಯಲ್ಲಿ 5ನೇ ಶತಮಾನದಲ್ಲಿ ನೆಲೆಗೊಂಡರೆ, ಆಲ್ಪ್ಸ್‌ ಕಣಿವೆಗಳಲ್ಲಿ 8ನೇ ಶತಮಾನದಲ್ಲಿ ನೆಲೆಗೊಂಡು ಅಲೆಮಾನ್ನಿಯಾ ಪ್ರದೇಶವನ್ನು ರೂಪಿಸಿದರು. ಆಧುನಿಕ-ಕಾಲದ ಸ್ವಿಟ್ಜರ್ಲೆಂಡ್‌‌ ಅಲೆಮಾನ್ನಿಯಾ ಮತ್ತು ಬರ್ಗಂಡಿ ಅಧಿಪತ್ಯಗಳ ನಡುವೆ ಹಂಚಿಹೋಗಿತ್ತು. 6ನೇ ಶತಮಾನದಲ್ಲಿ ಇಡೀ ಪ್ರದೇಶವು , 504 ADಯ ಕಾಲದಲ್ಲಿ ಕ್ಲೋವಿಸ್‌ Iನ ಅಲೆಮಾನ್ನಿಗಳ ಮೇಲಿನ ಟೋಲ್‌‌ಬಿಯಾಕ್‌ನಲ್ಲಿನ ವಿಜಯದ ನಂತರ ಮತ್ತು ನಂತರದ ಬರ್ಗಂಡಿಯನ್ನರ ಫ್ರಾಂಕಿಷ್‌ ಪ್ರಭುತ್ವದಿಂದಾಗಿ ವಿಸ್ತರಿಸುತ್ತಿದ್ದ ಫ್ರಾಂಕಿಷ್‌ ಸಾಮ್ರಾಜ್ಯದ ಭಾಗವಾಗಿತ್ತು. 6ನೇ, 7ನೇ ಮತ್ತು 8ನೇ ಶತಮಾನಗಳುದ್ದಕ್ಕೂ ಸ್ವಿಸ್ ಪ್ರದೇಶಗಳು ಫ್ರಾಂಕಿಷ್‌ ಅಧಿಪತ್ಯದಲ್ಲಿ ಮುಂದುವರೆದವು (ಮೆರೊವಿಂಜಿಯನ್‌ ಮತ್ತು ಕ್ಯಾರೋಲಿಂಜಿಯನ್‌ ಅಧಿಪತ್ಯಗಳು). ಆದರೆ ಮಹಾನ್‌ ಚಾರ್ಲ್ಸ್‌ನ ನೇತೃತ್ವದ ತನ್ನ ವಿಸ್ತರಣೆಯ ನಂತರ ಫ್ರಾಂಕಿಷ್‌ ಸಾಮ್ರಾಜ್ಯ ವರ್ಡನ್‌ ಒಪ್ಪಂದದಿಂದಾಗಿ 843ರಲ್ಲಿ ವಿಭಜಿತವಾಯಿತು. ಪ್ರಸಕ್ತ ಸ್ವಿಟ್ಜರ್ಲೆಂಡ್‌‌‌ನ ಈಗಿನ ಪ್ರಾಂತ್ಯಗಳು ಮಧ್ಯ ಫ್ರಾನ್ಷಿಯಾ ಮತ್ತು ಪೂರ್ವ ಫ್ರಾನ್ಷಿಯಾಗಳಾಗಿ ವಿಭಜನೆಯಾದವು. ಪವಿತ್ರ ರೋಮ್‌ ಸಾಮ್ರಾಜ್ಯ 1000 ADಯ ಅವಧಿಯಲ್ಲಿ ನಂತರ ಮರು ಏಕೀಕರಣಗೊಂಡವು.1200ರ ಹೊತ್ತಿಗೆ, ಸ್ವಿಸ್ ಪ್ರಸ್ಥಭೂಮಿಯು ಸೆವಾಯ್‌, ಝಹ್ರಿಂಗರ್‌, ಹಬ್ಸ್‌ಬರ್ಗ್‌ ಮತ್ತು ಕಿಬರ್ಗ್‌ ಆಡಳಿತಗಳ ಸ್ವಾಮ್ಯಕ್ಕೆ ಒಳಪಟ್ಟಿತ್ತು. ಕೆಲ ಪ್ರದೇಶಗಳು (ಯೂರಿ, ಸ್ಕ್ವಿಜ್‌, ನಂತರ ವಾಲ್ಡ್‌ಸ್ಟಾಟೆನ್‌ ಎಂದು ಹೆಸರಾದ ಅಂಟರ್‌ವಾಲ್ಡನ್‌ಗಳು) ಸಾಮ್ರಾಜ್ಯಕ್ಕೆ ಪರ್ವತ ಕಣಿವೆಗಳ ಮೇಲೆ ನೇರ ನಿಯಂತ್ರಣ ಸಿಗುವ ಹಾಗೆ ಸಾಮ್ರಾಜ್ಯದ ನೇರ ಆಳ್ವಿಕೆಗೆ ಒಳಪಟ್ಟವು . 1264 ADಯಲ್ಲಿ ಕಿಬರ್ಗ್‌ ರಾಜವಂಶವು ಕುಸಿದಾಗ, ಹಬ್ಸ್‌ಬರ್ಗ್ಸ್‌ ಚಕ್ರವರ್ತಿ ರುಡಾಲ್ಫ್‌ Iನ ನೇತೃತ್ವದಲ್ಲಿ (1273ರಲ್ಲಿ ಪವಿತ್ರ ರೋಮ್‌ನ ಚಕ್ರವರ್ತಿಯಾಗಿದ್ದ ) ಪೂರ್ವ ಸ್ವಿಸ್ ಪ್ರಸ್ಥಭೂಮಿಯವರೆಗೆ ತನ್ನ ಎಲ್ಲೆಯನ್ನು ವಿಸ್ತರಿಸಿಕೊಂಡಿತು. ಹಳೆಯ ಸ್ವಿಸ್ ಒಕ್ಕೂಟ ಹಳೆಯ ಸ್ವಿಸ್ ಒಕ್ಕೂಟವು ಮಧ್ಯ ಆಲ್ಪ್ಸ್‌‌ ಪರ್ವತ ಶ್ರೇಣಿಯ ಕಣಿವೆಯ ಸಮುದಾಯಗಳಲ್ಲಿ ಒಂದು ಮೈತ್ರಿ ಒಕ್ಕೂಟವಾಗಿತ್ತು. ಒಕ್ಕೂಟವು ಸಮಾನ ಆಸಕ್ತಿ(ಸುಂಕ ಮುಕ್ತ ವ್ಯಾಪಾರ)ಗಳನ್ನು ಮತ್ತು ಪ್ರಮುಖ ಪರ್ವತ ಪ್ರದೇಶದ ವ್ಯಾಪಾರ ಮಾರ್ಗಗಳಲ್ಲಿ ಶಾಂತಿ ಕಾಪಾಡುವಿಕೆ ಮುಂತಾದವುಗಳ ನಿರ್ವಹಣೆ ನಡೆಸುತ್ತಿತ್ತು . ಇದೇ ಮಾದರಿಯ ಇನ್ನಿತರ ಮೈತ್ರಿಗಳು ದಶಕಗಳ ಹಿಂದೆಯೇ ಅಸ್ತಿತ್ವದಲ್ಲಿದ್ದಿರಬಹುದಾದರೂ, ಗ್ರಾಮೀಣ ಸಮುದಾಯಗಳಾದ ಯೂರಿ, ಸ್ಕ್ವಿಜ್‌, ಮತ್ತು ನಿಡ್‌ವಾಲ್ಡೆನ್‌ಗಳ ನಡುವಿನ 1291ರ ಒಕ್ಕೂಟ ಶಾಸನಪತ್ರವು ಒಕ್ಕೂಟ ನಿರ್ಮಾಣದ ಆಧಾರ ಸ್ತಂಭವೆಂದು ಪರಿಗಣಿಸಲ್ಪಟ್ಟಿದೆ. 1353ರ ಹೊತ್ತಿಗೆ ಮೂರು ಮೂಲ ಕ್ಯಾಂಟನ್‌ಗಳು ಎಂದರೆ ಗ್ಲಾರಸ್‌ ಮತ್ತು ಝಗ್‌ ಮತ್ತು ಲ್ಯೂಸರ್ನ್‌ ಕ್ಯಾಂಟನ್‌ಗಳು, ಜ್ಯೂರಿಚ್‌ ಮತ್ತು ಬರ್ನ್‌ ನಗರರಾಜ್ಯಗಳೊಂದಿಗೆ ಸೇರಿ ಎಂಟು ರಾಜ್ಯಗಳಿಂದ ರೂಪುಗೊಂಡಿದ್ದ 15ನೇ ಶತಮಾನದ ಕೊನೆಯವರೆಗೆ ಅಸ್ತಿತ್ವದಲ್ಲಿದ್ದ "ಹಳೆಯ ಒಕ್ಕೂಟ"ವು ಅಸ್ತಿತ್ವಕ್ಕೆ ಬಂದಿತ್ತು. ಈ ವಿಸ್ತರಣವು ಒಕ್ಕೂಟದ ಶಕ್ತಿ ಮತ್ತು ಐಶ್ವರ್ಯಗಳನ್ನು ಹೆಚ್ಚಿಸುವಲ್ಲಿ ನೆರವಾಯಿತು. 1460ರ ಹೊತ್ತಿಗೆ, ಒಕ್ಕೂಟದ ಸಂಸ್ಥಾನಗಳು ಪ್ರಾಂತ್ಯದ ದಕ್ಷಿಣ ಮತ್ತು ಪಶ್ಚಿಮ ತಗ್ಗು ಪ್ರದೇಶಗಳು ಆಲ್ಫ್ಸ್‌ ಮತ್ತು ಜೂರಾ ಪರ್ವತಗಳವರೆಗೆ ನಿಯಂತ್ರಣವನ್ನು ಪಡೆದುಕೊಂಡವು. ಇದು ನಿರ್ದಿಷ್ಟವಾಗಿ ಹಬ್ಸ್‌ಬರ್ಗ್ಸ್‌ಗಳ (ಸೆಂಪಾಕ್‌ ಕಾಳಗ, ನ್ಯಾಫೆಲ್ಸ್‌ಗಳ ಕಾಳಗ) ಬರ್ಗಂಡಿಯ ದಿಟ್ಟ ಚಾರ್ಲ್ಸ್‌ ಮೇಲಿನ 1470ರಲ್ಲಿನ ವಿಜಯದಿಂದ, ಮತ್ತು ಸ್ವಿಸ್ ಕೂಲಿ ಸಿಪಾಯಿಗಳ ಯಶಸ್ಸಿನ ನಂತರ ಸಾಧ್ಯವಾಯಿತು.1499ರಲ್ಲಿನ ಸ್ವಾಬಿಯನ್‌ ಯುದ್ಧದಲ್ಲಿ ಚಕ್ರವರ್ತಿ ಮ್ಯಾಕ್ಸಿಮಿಲಿಯನ್‌ Iನ ಸ್ವಾಬಿಯನ್‌ ಒಕ್ಕೂಟದ ಮೇಲಿನ ಸ್ವಿಸ್ ವಿಜಯವು ಪವಿತ್ರ ರೋಮ್‌ ಸಾಮ್ರಾಜ್ಯದೊಳಗೆ ವಸ್ತುತಃ ಸ್ವಾತಂತ್ರ್ಯ ಗಳಿಸಲು ಕಾರಣವಾಯಿತು. ಹಳೆಯ ಸ್ವಿಸ್ ಒಕ್ಕೂಟವು ಮುಂಚಿನ ಅನೇಕ ಯುದ್ಧಗಳಿಂದಾಗಿ ಅಜೇಯತೆಯ ಕೀರ್ತಿ ಪಡೆದಿತ್ತು. ಆದರೆ ಒಕ್ಕೂಟದ ವಿಸ್ತರಣೆ ಮಾಡುವಾಗ 1515ರಲ್ಲಿ ಮಾರಿಗ್ನಾನೋ ಕಾಳಗದಲ್ಲಿನ ಸ್ವಿಸ್ ಸೋಲು ಹಿನ್ನಡೆ ಕಾಣುವಂತೆ ಮಾಡಿತು. ಇದು ಸ್ವಿಸ್ ಚರಿತ್ರೆಯ "ಧೀರ" ಯುಗದ ಮುಕ್ತಾಯಕ್ಕೆ ನಾಂದಿ ಹಾಡಿತು. ಝ್ವಿಂಗ್ಲಿಯ ಸುಧಾರಣೆಯ ಯಶಸ್ಸು ಕೆಲ ಕ್ಯಾಂಟನ್‌ಗಳಲ್ಲಿ 1529 ಮತ್ತು 1531ರಲ್ಲಿ (ಕಪ್ಪೆಲರ್‌ ಕ್ರೀಗ್‌ ) ಅಂತರ-ಕ್ಯಾಂಟನ್ ಯುದ್ಧಗಳಿಗೆ ಕಾರಣವಾಯಿತು. ಈ ಆಂತರಿಕ ಯುದ್ಧಗಳು ನಡೆದ ನೂರು ವರ್ಷಕ್ಕೂ ಹೆಚ್ಚಿನ ಕಾಲದ ನಂತರವೇ, 1648ರಲ್ಲಿ, ವೆಸ್ಟ್‌ಫಾಲಿಯಾ ಒಪ್ಪಂದದ ಅಂಗವಾಗಿ, ಐರೋಪ್ಯ ರಾಷ್ಟ್ರಗಳು ಪವಿತ್ರ ರೋಮ್‌ ಸಾಮ್ರಾಜ್ಯದಿಂದ ಸ್ವಿಟ್ಜರ್ಲೆಂಡ್‌‌‌ನ ಸ್ವತಂತ್ರತೆಯನ್ನು ಮತ್ತು ಅದರ ಅಲಿಪ್ತ ನೀತಿ()ಗೆ ಮಾನ್ಯತೆ ನೀಡಿದವು. ಸ್ವಿಸ್ ಚರಿತ್ರೆಯ ಪೂರ್ವ ಆಧುನಿಕ ಅವಧಿಯಲ್ಲಿ, ಶ್ರೀಮಂತ ವರ್ಗದ ಕುಟುಂಬಗಳ ಹೆಚ್ಚುತ್ತಿದ್ದ ಸರ್ವಾಧಿಕಾರಿತನವು ಮೂವತ್ತು ವರ್ಷಗಳ ಯುದ್ಧದ ನಂತರದ ಆರ್ಥಿಕ ಹಿನ್ನಡೆಯೊಂದಿಗೆ ಸೇರಿಕೊಂಡು 1653ರ ಸ್ವಿಸ್ ರೈತರ ದಂಗೆಗೆ ಕಾರಣವಾಯಿತು. ಈ ಹೋರಾಟಕ್ಕೆ ಹಿನ್ನೆಲೆಯಾಗಿ, ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌ ಕ್ಯಾಂಟನ್‌ಗಳ ನಡುವಿನ ಸಂಘರ್ಷವು ಮುಂದುವರಿದು, 1656 ಮತ್ತು 1712ರಲ್ಲಿ ನಡೆದ ವಿಲ್‌ಮರ್ಗನ್‌ ಕಾಳಗಗಳ ರೂಪದಲ್ಲಿ ಹಿಂಸೆಯನ್ನು ಸ್ಫೋಟಿಸಿತು. ನೆಪೋಲಿಯನ್‌ ಯುಗ 1798ರಲ್ಲಿ ಫ್ರೆಂಚ್‌ ಕ್ರಾಂತಿಯ ಸೇನೆಯು ಸ್ವಿಟ್ಜರ್ಲೆಂಡ್‌‌‌ನ್ನು ವಶಪಡಿಸಿಕೊಂಡು ಏಕೀಕೃತ ಸಂವಿಧಾನವನ್ನು ಹೇರಿತು. ಇದು ರಾಷ್ಟ್ರದ ಆಡಳಿತವನ್ನು ಏಕೀಕರಣಗೊಳಿಸಿತು ಮತ್ತು ಪರಿಣಾಮವಾಗಿ ಕ್ಯಾಂಟನ್‌ಗಳ ವ್ಯವಸ್ಥೆಯನ್ನು ರದ್ದುಗೊಳಿಸಿತು ಮತ್ತು ಮುಲ್‌ಹಾಸನ್‌ ಮತ್ತು ವಾಲ್‌ಟೆಲ್ಲಿನಾ ಕಣಿವೆಗಳನ್ನು ಸ್ವಿಟ್ಜರ್ಲೆಂಡ್‌‌‌ನಿಂದ ಪ್ರತ್ಯೇಕಿಸಿತು. ಹೆಲ್ವೆಟಿಕ್‌ ಗಣರಾಜ್ಯ ಎಂದೆನಿಸಿದ ಹೊಸ ಪ್ರಭುತ್ವವು, ಬಹಳವೇ ಅಪಖ್ಯಾತಿ ಹೊಂದಿತ್ತು. ಈ ಸರ್ಕಾರವನ್ನು ವಿದೇಶೀ ಆಕ್ರಮಣಕಾರಿ ಸೇನೆಯಿಂದ ಹೇರಲಾಗಿತ್ತು. ಇದರಿಂದಾಗಿ ಶತಮಾನಗಳ ಕಾಲದ ಸಂಸ್ಕೃತಿಯು ನಾಶವಾಗಿ, ಸ್ವಿಟ್ಜರ್ಲೆಂಡ್‌‌ ಎಂಬುದು ಕೇವಲ ಫ್ರೆಂಚ್‌ ಪರಾಧೀನ ರಾಷ್ಟ್ರವಾಗಿ ಬದಲಾಯಿಸಿತ್ತು. ನಿಡ್‌ವಾಲ್ಡೆನ್‌ ದಂಗೆಯನ್ನು 1798ರ ಸೆಪ್ಟೆಂಬರ್‌ ತಿಂಗಳಿನಲ್ಲಿ ತೀವ್ರವಾಗಿ ಫ್ರೆಂಚ್‌ ಸೇನೆಯು ಹತ್ತಿಕ್ಕಿದ ಸಂಗತಿ ಫ್ರೆಂಚ್‌ ಸೇನೆಯ ದಬ್ಬಾಳಿಕೆಗೆ ಮತ್ತು ಸ್ಥಳೀಯ ನಿವಾಸಿಗಳಿಂದ ಸೇನೆಯ ಇರುವಿಕೆಯ ಬಗೆಗೆ ಇದ್ದ ವಿರೋಧಕ್ಕೆ ಉದಾಹರಣೆಯಾಗಿದೆ.ಫ್ರಾನ್ಸ್‌‌ ಮತ್ತು ಅದರ ವಿರೋಧಿಗಳ ನಡುವೆ ಯುದ್ಧ ಆರಂಭವಾದಾಗ, ರಷ್ಯಾ ಮತ್ತು ಆಸ್ಟ್ರಿಯಾದ ಸೇನೆಗಳು ಸ್ವಿಟ್ಜರ್ಲೆಂಡ್‌‌ನ್ನು ವಶಪಡಿಸಿಕೊಂಡವು. ಹೆಲ್ವೆಟಿಕ್‌ ಗಣರಾಜ್ಯದ ಹೆಸರಿನಲ್ಲಿ ಫ್ರೆಂಚರ ಪರ ಹೋರಾಡಲು ಸ್ವಿಸ್ ಸಮ್ಮತಿಸಲಿಲ್ಲ. 1803ರಲ್ಲಿ ನೆಪೋಲಿಯನ್‌ ಎರಡೂ ಪಂಗಡಗಳಿಂದ ಪ್ರಮುಖ ಸ್ವಿಸ್ ರಾಜಕಾರಣಿಗಳನ್ನು ಕರೆಸಿ ಪ್ಯಾರಿಸ್‌ನಲ್ಲಿ ಭೇಟಿ ಏರ್ಪಡಿಸಿದನು. ಇದರ ಪರಿಣಾಮವಾಗಿ ಮಧ್ಯವರ್ತಿ ಕಾಯಿದೆಯು ಜಾರಿಯಾಗಿ ಬಹಳಷ್ಟು ಮಟ್ಟಿಗೆ ಸ್ವಿಸ್ ಸ್ವಾಯತ್ತತೆಯನ್ನು ಕಾಪಾಡಿಕೊಂಡು 19 ಕ್ಯಾಂಟನ್‌ಗಳ ಒಕ್ಕೂಟವೊಂದನ್ನು ಪರಿಚಯಿಸಿತು. ಸ್ವಿಸ್ ರಾಜಕೀಯದ ಬಹುಪಾಲು ಹಿತಾಸಕ್ತಿಯು ಕೇಂದ್ರ ಸರಕಾರದ ಅಗತ್ಯ ಹಾಗೂ ಕ್ಯಾಂಟನ್‌ಗಳ ಸ್ವಯಮಾಡಳಿತದ ಸಂಸ್ಕೃತಿಯ ನಡುವೆ ಹೊಂದಾಣಿಕೆಯನ್ನು ಸರಿದೂಗಿಸುವುದಾಗಿದೆ. 1815ರಲ್ಲಿ ವಿಯೆನ್ನಾದ ಆಡಳಿತ ಸ್ವಿಸ್ ಸ್ವತಂತ್ರತೆಯನ್ನು ಮರುಸ್ಥಾಪನೆಗೊಳಿಸಿತು. ಐರೋಪ್ಯ ಶಕ್ತಿಗಳು ಸ್ವಿಸ್ ಅಲಿಪ್ತ ನೀತಿಯನ್ನು ಅಂತಿಮವಾಗಿ ಒಪ್ಪಿಕೊಂಡವು. ಸ್ವಿಸ್ ಪಡೆಗಳು 1860ರ ಗೇಟಾದ ಮುತ್ತಿಗೆಯಲ್ಲಿ ನಡೆದ ಹೋರಾಟದವರೆಗೂ ವಿದೇಶೀ ಸರ್ಕಾರಗಳಿಗೆ ತಮ್ಮ ಸೇವೆ ಸಲ್ಲಿಸುತ್ತಿದ್ದವು. ಈ ಒಪ್ಪಂದವು ವಲಾಯಿಸ್‌‌, ನ್ಯೂಚಾಟೆಲ್‌ ಮತ್ತು ಜಿನೀವಾ ಕ್ಯಾಂಟನ್‌ಗಳನ್ನು ಸೇರಿಸಿಕೊಂಡು ಸ್ವಿಟ್ಜರ್ಲೆಂಡ್‌‌ನ ವಿಸ್ತರಣೆಗೆ ಅವಕಾಶ ನೀಡಿತು. ಆಗಿನಿಂದ ಸ್ವಿಟ್ಜರ್ಲೆಂಡ್‌‌ನ ಗಡಿಗಳು ಬದಲಾಗಿಲ್ಲ. ಸಂಯುಕ್ತ ಒಕ್ಕೂಟ ದೇಶ ಬರ್ನ್‌ ಕ್ಯಾಂಟನ್, ಲ್ಯೂಸರ್ನ್‌ ಮತ್ತು ಜ್ಯೂರಿಚ್‌ಗಳೊಂದಿಗೆ ಟಾಗ್ಸಾಟ್ಸುಂಗ್‌ (ಹಿಂದಿನ ಶಾಸಕಾಂಗ ಮತ್ತು ಕಾರ್ಯಾಂಗ ಸಮಿತಿ)ನ ಅಗ್ರಸ್ಥಾನ ವಹಿಸಿದ ಮೂರು ಕ್ಯಾಂಟನ್‌ಗಳಲ್ಲಿ ಒಂದಾಗಿದೆ. 1848ರಲ್ಲಿ ಕ್ಯಾಂಟನ್‌ಗಳ ರಾಜಧಾನಿಯನ್ನೇ ಒಕ್ಕೂಟದ ರಾಜಧಾನಿಯಾಗಿ ಮುಖ್ಯವಾಗಿ ಫ್ರೆಂಚ್‌ ಭಾಷಿಕರ ಪ್ರದೇಶಕ್ಕೆ ಸನಿಹವಿರುವುದರಿಂದ, ಆಯ್ಕೆ ಮಾಡಲಾಯಿತು. ಶ್ರೀಮಂತ ಕುಟುಂಬಗಳ ಅಧಿಕಾರ ಪುರ್ನಸ್ಥಾಪನೆಯು ಕೇವಲ ತಾತ್ಕಾಲಿಕವಾಗಿತ್ತು. 1839ರ ಜ್ಯೂರಿಪುಟ್ಷ್‌ ಹಿಂಸಾತ್ಮಕ ಘರ್ಷಣೆಗಳ ರಾಜಕೀಯ ಅಶಾಂತಿಯ ಅವಧಿಯ ನಂತರ, 1847ರಲ್ಲಿ ಕೆಲ ಕ್ಯಾಥೊಲಿಕ್‌ ಕ್ಯಾಂಟನ್‌ಗಳು ಪ್ರತ್ಯೇಕ ಮೈತ್ರಿಕೂಟ(ಸೋಂಡರ್‌ಬಂಡ್ಸ್‌ಕ್ರೇಗ್‌)ವನ್ನು ರಚಿಸಲು ನೋಡಿದಾಗ ಅಂತರ್ಯುದ್ಧ ಭುಗಿಲೆದ್ದಿತು. ಈ ಕಲಹವು ನೂರರ ಆಸುಪಾಸಿನ ಸಂಖ್ಯೆಯ ಜೀವಗಳನ್ನು ಬಲಿ ತೆಗೆದುಕೊಂಡು ಸುಮಾರು ಕೆಲ ವಾರಗಳ ಮಟ್ಟಿಗೆ ನಡೆಯಿತು. ಇದಕ್ಕೆ ಪ್ರಮುಖ ಕಾರಣ ವಿರೋಧಿಗಳಿಗೆಂದು ಉದ್ದೇಶಿಸಿದ ಆಕ್ರಮಣಗಳು ತಿರುಗುಬಾಣವಾದುದರಿಂದ ಸಂಭವಿಸಿದವು. 19ನೇ ಶತಮಾನದಲ್ಲಿ ನಡೆದ ಇತರೆ ಐರೋಪ್ಯ ದಂಗೆ ಮತ್ತು ಯುದ್ಧಗಳಿಗೆ ಹೋಲಿಸಿದರೆ ಸೋಂಡರ್‌ಬಂಡ್ಸ್‌ಕ್ರೇಗ್‌ನ ದಂಗೆ ಎಷ್ಟೇ ಅಲ್ಪ ಪ್ರಮಾಣದ್ದಾದರೂ ಸ್ವಿಸ್ ಜನರ ಮನಃಸ್ಥಿತಿ ಮತ್ತು ಸ್ವಿಟ್ಜರ್ಲೆಂಡ್‌‌ನ ಸಮಾಜದ ಮೇಲೆ ಬಹಳ ಪ್ರಭಾವ ಬೀರಿತು. ಈ ಯುದ್ಧವು ಇಡೀ ಸ್ವಿಸ್ ಪ್ರಾಂತ್ಯಕ್ಕೆ ತನ್ನ ಐರೋಪ್ಯ ನೆರೆಹೊರೆಯ ವಿರುದ್ಧ ಏಕತೆ ಮತ್ತು ಬಲದ ಸಾಮರ್ಥ್ಯದ ಅಗತ್ಯವನ್ನು ಮನದಟ್ಟು ಮಾಡಿಸಿತು. ಸ್ವಿಸ್ ಸಮಾಜದ ಎಲ್ಲಾ ವರ್ಗಗಳ ಜನರು ಕ್ಯಾಥೊಲಿಕ್‌, ಪ್ರೊಟೆಸ್ಟೆಂಟ್‌, ಪ್ರಗತಿಪರ ಇಲ್ಲವೇ ಸಾಂಪ್ರದಾಯಿಕ ಯಾವುದೇ ವರ್ಗಕ್ಕೆ ಸೇರಿರಲಿ, ಆರ್ಥಿಕ ಮತ್ತು ಧಾರ್ಮಿಕ ಆಸಕ್ತಿಗಳು ಒಂದುಗೂಡಿದರೆ ಕ್ಯಾಂಟನ್‌ಗಳ ಹಿತಾಸಕ್ತಿಗೆ ಹೆಚ್ಚು ಪೂರಕ ಎಂಬುದನ್ನು ಮನಗಂಡರು. ಇದೇ ಕಾರಣದಿಂದ ಯೂರೋಪ್‌ನ ಇತರೆ ಭಾಗಗಳು ಕ್ರಾಂತಿಯ ಕೋಲಾಹಲ ಮತ್ತು ಗಲಭೆಗಳಿಂದ ನಲುಗುತ್ತಿದ್ದರೆ, ಇತ್ತ ಸ್ವಿಸ್‌ ಜನರು ಅಮೇರಿಕದ ಶೈಲಿಯಿಂದ ಪ್ರೇರಿತವಾಗಿ ಒಂದು ಒಕ್ಕೂಟ ವ್ಯವಸ್ಥೆಯ ವಾಸ್ತವಿಕವಾದ ಸಂವಿಧಾನವನ್ನು ರಚಿಸುವುದರಲ್ಲಿ ಮಗ್ನರಾಗಿದ್ದರು. ಈ ಸಂವಿಧಾನವು ಕ್ಯಾಂಟನ್‌ಗಳಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ವಯಮಾಡಳಿತ ನಡೆಸುವ ಹಕ್ಕನ್ನು ನೀಡಿ ಉಳಿದ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಿತು. ಕ್ಯಾಂಟನ್‌ಗಳ ಅಧಿಪತ್ಯಕ್ಕೆ ಬೆಂಬಲ ಸೂಚಿಸಿದವರಿಗೆ ಮನ್ನಣೆಯೊಂದಿಗೆ (ಸೋಂಡರ್‌ಬಂಡ್‌ ಕಂಟೋನ್‌), ರಾಷ್ಟ್ರೀಯ ಸಂಸತ್ತನ್ನು ಮೇಲ್ಮನೆ ( ಸ್ವಿಸ್ ಸಂಸ್ಥಾನಗಳ ಆಡಳಿತ ಮಂಡಳಿ, ಪ್ರತಿ ಕ್ಯಾಂಟನ್‌ಗೆ ಇಬ್ಬರು ಪ್ರತಿನಿಧಿಗಳ ಹಾಗೆ) ಮತ್ತು ಕೆಳಮನೆಯೆಂದು (ಸ್ವಿಟ್ಜರ್ಲೆಂಡ್‌‌ನ ರಾಷ್ಟ್ರೀಯ ಸಮಿತಿಗೆ ದೇಶಾದ್ಯಂತದ ಸದಸ್ಯರು ಆಯ್ಕೆಯಾಗಬಹುದು) ಎಂದು ವಿಭಜಿಸಲಾಯಿತು. ಸಂವಿಧಾನದ ಯಾವುದೇ ತಿದ್ದುಪಡಿಗೆ ಜನಾಭಿಪ್ರಾಯ ಸಂಗ್ರಹಣೆಯನ್ನು ಕಡ್ಡಾಯಗೊಳಿಸಲಾಗಿದೆ. ಏಕೀಕೃತ ತೂಕ ಮಾಪನೆ ಮತ್ತು ಅಳತೆಯ ವ್ಯವಸ್ಥೆಯನ್ನು ಪರಿಚಯಿಸಲಾಯಿತು. 1850ರಲ್ಲಿ ಸ್ವಿಸ್ ಫ್ರಾಂಕ್‌ ಅನ್ನು ಸ್ವಿಸ್‌ನ ಏಕೈಕ ನಾಣ್ಯ ಪದ್ಧತಿ ಮಾಡಲಾಯಿತು. ಸಂವಿಧಾನದ 11ನೇ ಅನುಚ್ಛೇದವು ವಿದೇಶಗಳಿಗೆ ಸೇನೆಯ ಸೇವೆ ನೀಡುವುದನ್ನು ಪ್ರತಿಬಂಧಿಸಿದರೂ, ಆಗಲೂ ಎರಡು ಸಿಸಿಲೀಸ್‌ನ ಫ್ರಾನ್ಸಿಸ್‌ IIನ ರಕ್ಷಣೆಯನ್ನು ಸ್ವಿಸ್ ರಕ್ಷಣಾ ಸಿಬ್ಬಂದಿ 1860ರ ಗೇಟಾನ ಮುತ್ತಿಗೆಯ ಸಂದರ್ಭದಲ್ಲಿ ನಿರ್ವಹಿಸಿ, ಸ್ವಿಸ್ ಜನರು ವಿದೇಶಿ ಸೇವೆಗೆ ಮುಕ್ತಾಯ ಹಾಡಿದರು. ಸಂವಿಧಾನದ ಒಂದು ಪ್ರಮುಖ ವಿಧಿಯು ಅಗತ್ಯ ಬಿದ್ದರೆ ಇಡೀ ಸಂವಿಧಾನವನ್ನು ಪುನರ್ರಚನೆ ಮಾಡಬಹುದೆಂದು, ಹಾಗಾಗಿ ಇದನ್ನು ಒಮ್ಮೆ ಕೇವಲ ಒಂದು ತಿದ್ದುಪಡಿ ಮಾಡುವ ಬದಲಿಗೆ ಒಂದು ಸಮಗ್ರ ಸಂವಿಧಾನವಾಗಿ ರೂಪಿಸಲು ಸೂಚಿಸುತ್ತದೆ. ಈ ವಿಧಿಯ ಅಗತ್ಯವು ಜನಸಂಖ್ಯೆಯ ಹೆಚ್ಚಳ ಮತ್ತು ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾದ ಸಂದರ್ಭ ಒದಗಿದಾಗ ಎದ್ದುಕಾಣಿಸಿತು. 1872ರಲ್ಲಿ ರೂಪಿಸಿದ ಸಂವಿಧಾನದ ರೂಪರೇಖೆಯು ಸಮುದಾಯದಿಂದ ತಿರಸ್ಕೃತಗೊಂಡರೂ ಅದರಲ್ಲಿ ಮಾಡಿದ ಬದಲಾವಣೆಗಳಿಂದಾಗಿ 1874ರಲ್ಲಿ ಅಂಗೀಕೃತಗೊಂಡಿತು. ಈ ಸಂವಿಧಾನವು ಒಕ್ಕೂಟದ ಹಂತದಲ್ಲಿ ಶಾಸನಗಳನ್ನು ಜಾರಿಗೆ ತರಲು ಅನುಜ್ಞಾತ್ಮಕ ಜನಾಭಿಪ್ರಾಯವನ್ನು ಪರಿಚಯಿಸಿತು. ಇದು ರಕ್ಷಣೆ, ವ್ಯಾಪಾರ ಮತ್ತು ಕಾನೂನು ವಿಚಾರಗಳಿಗೆ ಸಂಬಂಧಪಟ್ಟಂತೆ ಒಕ್ಕೂಟಕ್ಕೆ ಹೊಣೆಗಾರಿಕೆಯನ್ನು ನೀಡಿತ್ತು.1891ರಲ್ಲಿ ಇಂದಿಗೂ ಅದ್ವಿತೀಯವಾಗಿರುವ ನೇರ ಪ್ರಜಾಪ್ರಭುತ್ವದ ದೃಢವಾದ ಅಂಶಗಳನ್ನು ಸೇರಿಸಿಕೊಂಡು ಸಂವಿಧಾನವನ್ನು ಪರಿಷ್ಕರಣೆ ಮಾಡಲಾಯಿತು. ಆಧುನಿಕ ಚರಿತ್ರೆ ಎರಡೂ ವಿಶ್ವಸಮರಗಳಲ್ಲಿ ಸ್ವಿಟ್ಜರ್ಲೆಂಡ್‌‌ ಆಕ್ರಮಿತವಾಗಿರಲಿಲ್ಲ. ವಿಶ್ವ ಸಮರ Iರ ಸಮಯದಲ್ಲಿ, ಸ್ವಿಟ್ಜರ್ಲೆಂಡ್‌‌ ವ್ಲಾಡಿಮಿರ್‌ ಇಲ್ಲಿಯಿಚ್‌ ಉಲ್ಯಾನೊವ್‌ (ಲೆನಿನ್‌)ಗೆ ಆಶ್ರಯ ಕೊಟ್ಟಿತ್ತು ಅಲ್ಲದೇ ಆತ 1917ರವರೆಗೆ ಅಲ್ಲಿಯೇ ಉಳಿದಿದ್ದ. ಸ್ವಿಸ್ ಅಲಿಪ್ತ ನೀತಿಯು 1917ರ ಗ್ರಿಮ್‌-ಹಾಫ್‌ಮನ್‌ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ತೀವ್ರ ಟೀಕೆಗೊಳಗಾದರೂ, ಈ ವಿರೋಧವು ತಾತ್ಕಾಲಿಕವಾಗಿತ್ತು. 1920ರಲ್ಲಿ, ಸ್ವಿಟ್ಜರ್ಲೆಂಡ್‌‌ ಯಾವುದೇ ಸೈನಿಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ನಿಬಂಧನೆಯ ಮೇರೆಗೆ ಜಿನೀವಾದಲ್ಲಿ ನೆಲೆಸಿರುವ ಲೀಗ್‌ ಆಫ್‌ ನೇಷನ್ಸ್‌ಗೆ ಸೇರ್ಪಡೆಗೊಂಡಿತು. ವಿಶ್ವಸಮರ IIರ ಸಮಯದಲ್ಲಿ, ಜರ್ಮನ್ನ ರು ಈ ದೇಶದ ಮೇಲೆ ಆಕ್ರಮಣ ನಡೆಸಲು ದೀರ್ಘ ಯೋಜನೆಗಳನ್ನು ಹಾಕಿಕೊಂಡಿದ್ದರೂ, ಸ್ವಿಟ್ಜರ್ಲೆಂಡ್‌‌ ಯಾವುದೇ ದಾಳಿಗೊಳಗಾಗಲಿಲ್ಲ. ಸೇನಾಬಲದ ಮೂಲಕ ನೀಡಿದ ವಿರೋಧ, ಜರ್ಮನಿಯೊಂದಿಗಿನ ರಿಯಾಯಿತಿಯ ಮಾತುಕತೆ ಹಾಗೂ ವಿಶ್ವ ಸಮರದ ಕಾಲದಲ್ಲಿನ ಇತರೆ ಮಹತ್ವದ ಘಟನೆಗಳಿಂದಾಗಿ ಉದ್ದೇಶಿತ ದಾಳಿ ನಡೆಯದಿದ್ದ ಉತ್ತಮ ಅದೃಷ್ಟ ಮುಂತಾದುವುಗಳ ಒಟ್ಟಾರೆ ಫಲವಾಗಿ ಸ್ವಿಟ್ಜರ್ಲೆಂಡ್‌‌ ತನ್ನ ಸ್ವತಂತ್ರತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.ಸ್ವಿಟ್ಜರ್ಲೆಂಡ್‌ನ ಪುಟ್ಟ ನಾಜಿ ಪಕ್ಷವು ಮಾಡಿದ ಜರ್ಮನಿಯ ಮೇಲಿನ ಆಕ್ರಮಣದ ಪ್ರಯತ್ನವು ಶೋಚನೀಯವಾಗಿ ವಿಫಲವಾಯಿತು. ಸ್ವಿಸ್ ಮುದ್ರಣ ಮಾಧ್ಯಮವು ತೃತೀಯ ಜರ್ಮನ್‌ ಸಾಮ್ರಾಜ್ಯವನ್ನು, ಸಾಕಷ್ಟು ಬಾರಿ ಜರ್ಮನಿಯ ನೇತಾರರನ್ನು ಉದ್ರೇಕಿಸುವಂತೆ ಬಲವಾಗಿ ಟೀಕಿಸುತ್ತಿತ್ತು. ಜನರಲ್‌ ಹೆನ್ರಿ ಗುಸನ್‌ರ ನೇತೃತ್ವದಲ್ಲಿ ಬೃಹತ್‌ ಪ್ರಮಾಣದ ಸೇನಾ ಕಾರ್ಯಾಚರಣೆಗೆ ಸನ್ನದ್ಧಗೊಳಿಸಲು ಆದೇಶಿಸಲಾಯಿತು. ಕೇವಲ ಗಡಿ ಪ್ರದೇಶದಲ್ಲಿ ಆರ್ಥಿಕ ಕೇಂದ್ರಗಳನ್ನು ರಕ್ಷಿಸುತ್ತಿದ್ದ ಸ್ಥಾಯೀ ರಕ್ಷಣಾ ನೀತಿಯಿಂದ ಹಿಂದೆ ಸರಿದು ದೀರ್ಘಕಾಲೀನ ವ್ಯವಸ್ಥಿತ ನಿರಂತರ ಸವೆಸುವ ಯುದ್ಧ ನಡೆಸುವಿಕೆ ಮತ್ತು ಆಲ್ಫ್ಸ್‌ ಪರ್ವತ ಶ್ರೇಣಿಯ ಎತ್ತರದ ಸ್ಥಳಗಳಲ್ಲಿ ರೀಡ್ಯುಟ್‌ ಎಂದು ಹೆಸರಾದ ಸದೃಢ ಉತ್ತಮ ಆಯುಧ ದಾಸ್ತಾನು ಹೊಂದಿರುವ ಪ್ರದೇಶಗಳಿಗೆ ಹಿಂತಿರುಗುವ ಮಾದರಿಯ ನೂತನ ಯುದ್ಧನೀತಿಯನ್ನು ಸ್ವಿಸ್‌ ಪಡೆ ಬದಲಿಸಿಕೊಂಡಿದೆ. ಸ್ವಿಟ್ಜರ್ಲೆಂಡ್‌‌ ಆಕ್ಸಿಸ್‌ ಮತ್ತು ಮಿತ್ರದೇಶಗಳ ನಡುವಿನ ದ್ವಿಪಕ್ಷೀಯ ಬೇಹುಗಾರಿಕೆ ಮತ್ತು ಆಗಾಗ್ಗೆ ನಡೆಯುತ್ತಿದ್ದ ಮಧ್ಯಸ್ಥಿಕೆಯ ಮಾತುಕತೆಗಳಿಗೆ ನೆಲೆಯಾಗಿತ್ತು. ಜಿನೀವಾದಲ್ಲಿ ನೆಲೆಸಿರುವ ಅಂತರರಾಷ್ಟ್ರೀಯ ರೆಡ್‌ಕ್ರಾಸ್‌ ಸಂಘಟನೆಯು ಈ ತರಹದ ಹಾಗೂ ಇನ್ನಿತರ ಸಂಘರ್ಷಗಳಲ್ಲಿ ಪ್ರಧಾನ ಪಾತ್ರ ವಹಿಸಿತ್ತು. ಸ್ವಿಟ್ಜರ್ಲೆಂಡ್‌‌ನ ವಾಣಿಜ್ಯೋದ್ಯಮವನ್ನು ಮಿತ್ರಪಕ್ಷಗಳು ಮತ್ತು ಆಕ್ಸಿಸ್‌ ದೇಶಗಳೆರಡೂ ದಿಗ್ಬಂಧಿಸಿದ್ದವು. ಜರ್ಮನಿಯ ತೃತೀಯ ಸಾಮ್ರಾಜ್ಯಕ್ಕೆ ಆರ್ಥಿಕ ಸಹಕಾರ ಮತ್ತು ಸಾಲದ ಕಾಲಾವಧಿಯ ವಿಸ್ತರಣೆಗಳು ಆಕ್ರಮಣದ ಸಾಧ್ಯಾಸಾಧ್ಯತೆಗಳ ಗ್ರಹಿಕೆಯ ಮೇಲೆ ಮತ್ತು ಇನ್ನಿತರ ವಾಣಿಜ್ಯ ಪಾಲುದಾರ ದೇಶಗಳ ಲಭ್ಯತೆಯ ಮೇಲೆ ಬದಲಾಗುತ್ತಿದ್ದವು. ಈ ರಿಯಾಯಿತಿಗಳು ವಿಚಿ ಫ್ರಾನ್ಸ್‌‌ ಮೂಲಕ ಹಾದುಹೋಗುತ್ತಿದ್ದ ನಿರ್ಣಾಯಕ ರೈಲ್ವೆ ಸಂಪರ್ಕವೊಂದನ್ನು 1942ರಲ್ಲಿ ಆಕ್ರಮಿಸಿ ಸ್ವಿಟ್ಜರ್ಲೆಂಡ್‌‌ ಸಂಪೂರ್ಣವಾಗಿ ಆಕ್ಸಿಸ್‌ ದೇಶಗಳಿಂದ ಸುತ್ತುವರೆಯುವ ಹಾಗೆ ಮಾಡಿದ ಸಮಯದಲ್ಲಿ ಗರಿಷ್ಠ ಮಟ್ಟ ಮುಟ್ಟಿತು. ವಿಶ್ವ ಸಮರದ ಅವಧಿಯಲ್ಲಿ 104,000 ಮಂದಿ ವಿದೇಶೀ ಸೈನಿಕರೂ ಸೇರಿದಂತೆ ಸುಮಾರು 300,000 ನಿರಾಶ್ರಿತರನ್ನು ಹೇಗ್‌ ಒಡಂಬಡಿಕೆಗಳಲ್ಲಿ ಸೂಚಿಸಲಾಗಿದ್ದ ಅಲಿಪ್ತ ರಾಷ್ಟ್ರಗಳ ಹಕ್ಕು ಮತ್ತು ಬಾಧ್ಯತೆ ಗಳಿಗೆ ಅನುಗುಣವಾಗಿ ನಿರ್ಬಂಧಕ್ಕೊಳಪಡಿಸಿತು. ನಿರಾಶ್ರಿತರಲ್ಲಿ 60,000 ಜನರು ನಾಜಿಗಳ ಹಿಂಸೆಯಿಂದ ತಪ್ಪಿಸಿಕೊಂಡು ಬಂದವರಾಗಿದ್ದರು. ಅವರಲ್ಲಿ 26,000ರಿಂದ 27,000 ಮಂದಿ ಯಹೂದಿಗಳಾಗಿದ್ದರು. ಆದರೂ, ನಾಜಿ ಜರ್ಮನಿಯೊಂದಿಗಿನ ಆರ್ಥಿಕ ಸಂಬಂಧಗಳು ಹಾಗೂ ಕಟ್ಟುನಿಟ್ಟಾದ ವಲಸೆ ಮತ್ತು ಆಶ್ರಯ ನೀತಿಗಳು ವಾದವಿವಾದಗಳಿಗೆ ಕಾರಣವಾದವು. ಯುದ್ದ ಸಮಯದಲ್ಲಿ , ಸ್ವಿಸ್ ವಾಯುದಳವು ಎರಡೂ ಪಡೆಗಳ ಯುದ್ಧವಿಮಾನಗಳೊಂದಿಗೆ ಹೋರಾಟ ನಡೆಸಿತಲ್ಲದೇ 11 ಒಳನುಗ್ಗುತ್ತಿದ್ದ ಲುಫ್ಟ್‌ವಾಫ್ಫೆ ವಿಮಾನಗಳನ್ನು 1940ರ ಮೇ ಮತ್ತು ಜೂನ್‌ನಲ್ಲಿ ಹೊಡೆದುರುಳಿಸಿತು. ಜರ್ಮನಿಯಿಂದ ಯುದ್ಧ ಬೆದರಿಕೆ ಗ್ರಹಿಸಿದ ನಂತರ ಯುದ್ಧನೀತಿ ಬದಲಾಯಿಸಿ ಇನ್ನಿತರ ಆಕ್ರಮಣಕಾರರನ್ನು ನೆಲಕಚ್ಚಿಸಿತು. ಸಮರದಲ್ಲಿ 100ಕ್ಕೂ ಹೆಚ್ಚಿನ ಮಿತ್ರಪಕ್ಷಗಳ ಬಾಂಬರ್‌ ವಿಮಾನಗಳನ್ನು ಮತ್ತು ಅವುಗಳ ಸಿಬ್ಬಂದಿಯನ್ನು ವಶಪಡಿಸಿಕೊಂಡಿತು. 1944-45ರ ಸಮಯದಲ್ಲಿ, ಮಿತ್ರ ಪಕ್ಷಗಳ ಬಾಂಬರ್‌ ವಿಮಾನಗಳು ಪ್ರಮಾದವಶಾತ್‌ ಸ್ವಿಸ್ ಪಟ್ಟಣಗಳ ಸ್ಕಾಫ್‌ಹಾಸೆನ್‌ ( 40 ಮಂದಿ ಕೊಲ್ಲಲ್ಪಟ್ಟರು ), ಸ್ಟೇನ್‌ ಆಮ್‌ ರೇಯ್ನ್‌, ವಾಲ್ಸ್‌, ರಫ್ಸ್‌‌ (18 ಮಂದಿ ಕೊಲ್ಲಲ್ಪಟ್ಟರು)ಗಳ ಮೇಲೆ ದಾಳಿ ನಡೆಸಿದವು ಮತ್ತು 1945ರ ಮಾರ್ಚ್‌ 4ರಂದು ಬಸೆಲ್‌ ಮತ್ತು ಜ್ಯೂರಿಚ್‌ ಗಳ ಮೇಲೆ ಕುಖ್ಯಾತ ಬಾಂಬ್‌ ದಾಳಿ ನಡೆಯಿತು. 1959ರಲ್ಲಿ ಮೊದಲು ಸ್ವಿಸ್‌ ಕ್ಯಾಂಟನ್‌ಗಳಲ್ಲಿ ಮಹಿಳೆಯರು ಮತದಾನದ ಹಕ್ಕು ಪಡೆದರೆ, ಒಕ್ಕೂಟದ ಮಟ್ಟದಲ್ಲಿ 1971 ರಲ್ಲಿ ಮತದಾನದ ಅವಕಾಶ ದೊರೆಯಿತು. ವಿರೋಧದ ನಂತರ ಕೊನೆಯ ಕ್ಯಾಂಟನ್‌ ಅಪ್ಪೆನ್‌ಜೆಲ್‌ ಇನ್ನರ್‌ಹೋಡೆನ್‌‌ನಲ್ಲಿ 1990ರಲ್ಲಿ ಈ ಅವಕಾಶ ದೊರೆಯಿತು. ಒಕ್ಕೂಟದ ಮಟ್ಟದಲ್ಲಿ ಮತದಾನದ ಹಕ್ಕು ದೊರೆತ ಮೇಲೆ ಮಹಿಳೆಯರು ರಾಜಕೀಯದಲ್ಲಿ ಬಹಳ ಮಹತ್ವ ಪಡೆಯುವ ಮಟ್ಟಿಗೆ ಬಹುಬೇಗ ಏರಿದರು. ಏಳು ಮಂದಿ ಸದಸ್ಯರ ಒಕ್ಕೂಟ ಕಾರ್ಯಾಂಗದ ಸಮಿತಿಯ ಪ್ರಥಮ ಮಹಿಳಾ ಸದಸ್ಯೆಯಾಗಿ ಎಲಿಜಬೆತ್‌ ಕೊಪ್‌ ಎಂಬಾಕೆ 1987-1989ರವರೆಗೆ ಕಾರ್ಯನಿರ್ವಹಿಸಿದರು. ಪ್ರಥಮ ಅಧ್ಯಕ್ಷೆಯಾಗಿ ರುತ್‌ ಡ್ರೇಫಸ್‌ರು 1999ನೇ ವರ್ಷದ ಅವಧಿಯಲ್ಲಿ ಕಾರ್ಯನಿರ್ವಹಿಸಲು 1998ರಲ್ಲಿ ಚುನಾಯಿತರಾದರು. (ಸ್ವಿಸ್‌ ಅಧ್ಯಕ್ಷರನ್ನು ಪ್ರತಿ ವರ್ಷ ಮೇಲ್ಕಂಡ ಏಳು ಜನ ಸದಸ್ಯರ ಉಚ್ಚ ಸಮಿತಿಯಲ್ಲೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ, ಹಾಗೂ ಯಾವುದೇ ಅಭ್ಯರ್ಥಿ ಸತತವಾಗಿ ಎರಡು ಅವಧಿಗೆ ಆಯ್ಕೆಯಾಗಲು ಅವಕಾಶವಿರುವುದಿಲ್ಲ). ಎರಡನೇ ಅಧ್ಯಕ್ಷೆಯಾಗಿ 2007ರಲ್ಲಿ ಮಿಷೆಲಿನ್‌ ಕಾಲ್ಮಿ-ರೇ ಎಂಬಾಕೆ ಉಚ್ಚ ಹುದ್ದೆಯನ್ನೇರಿದರು. ಆಕೆ ಫ್ರೆಂಚ್‌ ಭಾಷಿಕ ಕ್ಯಾಂಟನ್‌ ಆದ (ಜೆನ್‌ಫ್‌ ಎಂದು ಜರ್ಮನ್‌‌ ಭಾಷೆಯಲ್ಲಿ, ಜಿನರ್ವಾ ಎಂದು ಇಟಾಲಿಯನ್‌ ಭಾಷೆಯಲ್ಲಿ ಕರೆಯಲಾಗುವ) ಜೆನೆವ್‌ನ ಪಶ್ಚಿಮ ಭಾಗದ ಮೂಲದವರು. ಆಕೆ ಪ್ರಸ್ತುತ ಏಳು ಜನ ಸದಸ್ಯರ ಸಚಿವ ಸಂಪುಟ/ಉಚ್ಚ ಸಮಿತಿಯಲ್ಲಿ ತನ್ನ ಸಹೋದ್ಯೋಗಿಗಳಾಗಿ ಇನ್ನಿಬ್ಬರು ಮಹಿಳೆಯರನ್ನು ಎಂದರೆ, ಆರ್ಗಾವ್‌ ಕ್ಯಾಂಟನ್‌ನ ಡೋರಿಸ್‌ ಲ್ಯೂಥರ್ಡ್‌ ಹಾಗೂ ಗ್ರಾವುಬುಂಡೆನ್‌ ಕ್ಯಾಂಟನ್‌ನ ಎವೆಲಿನ್‌ ವಿಡ್ಮರ್‌-ಷ್ಲುಂಫ್‌ರನ್ನು ಹೊಂದಿದ್ದಾರೆ. ಸ್ವಿಟ್ಜರ್ಲೆಂಡ್‌ ಯೂರೋಪ್‌ ಆಡಳಿತ ಮಂಡಲಿಗೆ 1963ರಲ್ಲಿ ಸೇರ್ಪಡೆಯಾಯಿತು. ಬರ್ನ್‌ ಕ್ಯಾಂಟನ್‌ನ ಕೆಲ ಪ್ರದೇಶಗಳು ಬರ್ನ್‌ ಜನರಿಂದ ಸ್ವಾತಂತ್ರ್ಯ ಪಡೆದು ಜ್ಯೂರಾ ಕ್ಯಾಂಟನ್‌‌ ಎಂಬ ಹೊಸದೊಂದು ಕ್ಯಾಂಟನ್‌‌ನ್ನು 1979ರಲ್ಲಿ ರಚಿಸಿಕೊಂಡವು. 1999ರ ಏಪ್ರಿಲ್‌ 18ರಂದು ಜನಸಮುದಾಯ ಹಾಗೂ ಕ್ಯಾಂಟನ್‌ಗಳು ಸಂಪೂರ್ಣ ಪರಿಷ್ಕರಿಸಿದ ಒಕ್ಕೂಟ ಸಂವಿಧಾನವನ್ನು ರಚಿಸಲು ಬೆಂಬಲಿಸಿದವು. 2002ರಲ್ಲಿ ಸ್ವಿಟ್ಜರ್ಲೆಂಡ್‌ ಸಂಯುಕ್ತ ರಾಷ್ಟ್ರ ಸಂಘದ ಪೂರ್ಣ ಪ್ರಮಾಣದ ಸದಸ್ಯರಾಷ್ಟ್ರವಾಯಿತು. ಇದರಿಂದಾಗಿ ವ್ಯಾಟಿಕನ್‌ ಮಾತ್ರವೇ ಹೆಚ್ಚು ಮಾನ್ಯತೆಯನ್ನೂ ಹೊಂದಿದ್ದೂ ಸಂಯುಕ್ತ ರಾಷ್ಟ್ರ ಸಂಘದ ಸಂಪೂರ್ಣ ಸದಸ್ಯತ್ವ ಹೊಂದಿರದ ಕೊನೆಯ ರಾಷ್ಟ್ರವಾಗಿ ಉಳಿಯಿತು. ಸ್ವಿಟ್ಜರ್ಲೆಂಡ್‌ EFTAನ ಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, ಐರೋಪ್ಯ ಆರ್ಥಿಕ ವಲಯದ ಸದಸ್ಯತೆಯನ್ನು ಹೊಂದಿಲ್ಲ. ಐರೋಪ್ಯ ಒಕ್ಕೂಟದ ಸದಸ್ಯತ್ವ ಪಡೆಯಲು 1992ರ ಮೇ ತಿಂಗಳಿನಲ್ಲಿ ಅರ್ಜಿಯನ್ನು ಕಳಿಸಲಾಗಿತ್ತಾದರೂ, ಡಿಸೆಂಬರ್‌ 1992 ರಲ್ಲಿ EEAಯು ತಿರಸ್ಕೃತವಾದಾಗಿನಿಂದ ಈ ಕಾರ್ಯ ಮುಂದುವರೆಸಲಾಗಿಲ್ಲ. ಸ್ವಿಟ್ಜರ್ಲೆಂಡ್‌ EEAಯ ಬಗ್ಗೆ ಜನಾಭಿಪ್ರಾಯ ಕೇಳಿದ ಏಕೈಕ ರಾಷ್ಟ್ರವಾಗಿದೆ. ಆಗಿನಿಂದ ಬಹಳಷ್ಟು ಬಾರಿ EU ವಿಷಯದಲ್ಲಿ ಸಾಕಷ್ಟು ಜನಾಭಿಪ್ರಾಯ ಸಂಗ್ರಹಣೆ ನಡೆಯಿತಾದರೂ ಜನಸಮುದಾಯದಿಂದ ಈ ಬಗ್ಗೆ ಸಮ್ಮಿಶ್ರ ಅಭಿಪ್ರಾಯ ವ್ಯಕ್ತವಾದುದರಿಂದ ಈ ಸದಸ್ಯತ್ವ ಅರ್ಜಿಯು ಸ್ಥಗಿತಗೊಂಡಿದೆ. ಆದಾಗ್ಯೂ ಸ್ಥಳೀಯ ಶಾಸನವು EUಗೆ ಹೊಂದಾಣಿಕೆಯಾಗುವ ಹಾಗೆ ಬಹಳಷ್ಟು ಹೊಂದಾಣಿಕೆಗಳನ್ನು ಮಾಡಿರುವುದಲ್ಲದೇ ಐರೋಪ್ಯ ಒಕ್ಕೂಟದ ಜೊತೆ ಅನೇಕ ದ್ವಿಪಕ್ಷೀಯ ಒಡಂಬಡಿಕೆಗಳನ್ನು ಮಾಡಿಕೊಂಡಿದೆ. ಸ್ವಿಟ್ಜರ್ಲೆಂಡ್‌ ಮತ್ತು ಲೀಚ್‌ಟೆನ್‌ಸ್ಟೀನ್‌ಗಳು 1995ರಲ್ಲಿ ಇದರ ಸದಸ್ಯತ್ವವನ್ನು ಆಸ್ಟ್ರಿಯಾ ಪಡೆದ ನಂತರ ಸಂಪೂರ್ಣವಾಗಿ EU ಸದಸ್ಯರಿಂದ ಸುತ್ತುವರೆಯಲ್ಪಟ್ಟಿದೆ. 2005ರ ಜೂನ್‌ 5ರಂದು ಷೆಂಗೆನ್‌ ಒಪ್ಪಂದಕ್ಕೆ ಸಹಿ ಹಾಕಲು 55% ಬಹುಮತದೊಂದಿಗೆ ಮತದಾರರು ಸಮ್ಮತಿ ನೀಡಿದರು. ಇದನ್ನು EU ಟೀಕಾಕಾರರು ಈ ಒಪ್ಪಂದಕ್ಕೆ, ಪಾರಂಪರಿಕವಾಗಿ ಸಾರ್ವಭೌಮತ್ವದ ಅಥವಾ ಪ್ರತ್ಯೇಕತೆಯ ಪ್ರತೀಕ ಎಂದು ಗ್ರಹಿಸಲಾಗಿದ್ದ ಸ್ವಿಟ್ಜರ್ಲೆಂಡ್‌ನ ಬೆಂಬಲವಿದೆ ಎಂಬುದರ ಸಂಕೇತವಿದು ಎಂದು ಪರಿಗಣಿಸಿದ್ದಾರೆ. ರಾಜಕೀಯ 1848ರಲ್ಲಿ ಅಂಗೀಕೃತವಾದ ಒಕ್ಕೂಟ ಸಂವಿಧಾನವು ಆಧುನಿಕ ಒಕ್ಕೂಟ ರಾಷ್ಟ್ರದ ಕಲ್ಪನೆಯ ಶಾಸನಾಧಾರ ಮೂಲವಾಗಿತ್ತು. ಇದು ವಿಶ್ವದ ಹಳೆಯ ಒಕ್ಕೂಟ ವ್ಯವಸ್ಥೆಗಳಲ್ಲಿ ಎರಡನೆಯದಾಗಿದೆ. 1999ರಲ್ಲಿ ಹೊಸ ಸಂವಿಧಾನವನ್ನು ಅಳವಡಿಸಲಾಯಿತಾದರೂ, ಅದು ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಹೊಂದಿಲ್ಲ. ಇದು ವ್ಯಕ್ತಿಗತವಾಗಿ ಪ್ರಜೆಗಳ ರಾಜಕೀಯ ಮತ್ತು ಮೂಲಭೂತ ಹಕ್ಕುಗಳನ್ನು ಹಾಗೂ ಸಾರ್ವಜನಿಕ ವ್ಯವಹಾರಗಳಲ್ಲಿ ನಾಗರಿಕರ ಭಾಗವಹಿಸುವಿಕೆಗೆ ಸಂಬಂಧಪಟ್ಟಂತೆ ನೀತಿನಿಯಮಗಳ ಮುಖ್ಯಾಂಶಗಳನ್ನೊಳಗೊಂಡಿತ್ತು. ಇಷ್ಟೇ ಅಲ್ಲದೇ ಒಕ್ಕೂಟ ಮತ್ತು ಕ್ಯಾಂಟನ್‌ಗಳ ನಡುವೆ ಅಧಿಕಾರವನ್ನು ಹಂಚುವುದರೊಂದಿಗೆ ಒಕ್ಕೂಟದ ನ್ಯಾಯ ವ್ಯಾಪ್ತಿ ಹಾಗೂ ಅಧಿಕಾರ ವ್ಯಾಪ್ತಿಯನ್ನು ನಿಗದಿಪಡಿಸಿತು. ಒಕ್ಕೂಟದ ಹಂತದಲ್ಲಿ ಮೂರು ಆಡಳಿತ ಮಂಡಳಿಗಳಿದ್ದವು. ಅವೆಂದರೆ : ಉಭಯ ಸದನಗಳ ಸಂಸತ್ತು (ಶಾಸಕಾಂಗ), ಒಕ್ಕೂಟ ಸಮಿತಿ (ಕಾರ್ಯಾಂಗ) ಮತ್ತು ಒಕ್ಕೂಟ ನ್ಯಾಯಮಂಡಳಿ (ನ್ಯಾಯಾಂಗ). ಸ್ವಿಸ್ ಸಂಸತ್ತು ಎರಡು ಸಭೆಗಳನ್ನು ಹೊಂದಿದೆ : ಪ್ರತಿ ಕ್ಯಾಂಟನ್ ನಿಗದಿಪಡಿಸಿದ ವ್ಯವಸ್ಥೆಯಂತೆ ಆಯ್ಕೆಯಾಗಿರುವ 46 ಪ್ರತಿನಿಧಿಗಳನ್ನೊಳಗೊಂಡಿರುವ (ಪ್ರತಿ ಕ್ಯಾಂಟನ್‌ನಿಂದ ಇಬ್ಬರು ಮತ್ತು ಪ್ರತಿ ಅರೆ-ಕ್ಯಾಂಟನ್‌ನಿಂದ ಒಬ್ಬರು ಸೇರಿದಂತೆ) ಸಂಸ್ಥಾನಗಳ ಸಮಿತಿ, ಮತ್ತು ಪ್ರತಿ ಕ್ಯಾಂಟನ್‌‌ನ ಜನಸಂಖ್ಯೆಯ ಮೇಲೆ ಆಧಾರಿತವಾಗಿ ಅನುಪಾತಾಧರಿತ ಪ್ರತಿನಿಧಿತ್ವದ ಮೂಲಕ ಆಯ್ಕೆಯಾದ 200 ಸದಸ್ಯರನ್ನು ಹೊಂದಿರುವ ರಾಷ್ಟ್ರೀಯ ಸಮಿತಿಯನ್ನು ಹೊಂದಿದೆ. ಎರಡೂ ಸಭೆಗಳ ಸದಸ್ಯರು 4 ವರ್ಷಗಳ ಅವಧಿಯನ್ನು ಹೊಂದಿರುತ್ತಾರೆ. ಎರಡೂ ಸಭೆಗಳು ಜಂಟಿ ಅಧಿವೇಶನವನ್ನು ನಡೆಸುವ ಸಂದರ್ಭದಲ್ಲಿ, ಆ ಸಭೆಗಳನ್ನು ಒಟ್ಟಿಗೆ ಒಕ್ಕೂಟ ಶಾಸನ ಸಭೆ ಎಂದು ಕರೆಯಲಾಗುತ್ತದೆ. ಜನಾಭಿಪ್ರಾಯ ಸಂಗ್ರಹಣೆಗಳ ಮೂಲಕ, ನಾಗರಿಕರು ಸಂಸತ್ತು ಅಂಗೀಕರಿಸಿದ ಯಾವುದೇ ಮಸೂದೆಯ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಮತ್ತು ಶಾಸನಹಕ್ಕುಗಳ ಮೂಲಕ ಒಕ್ಕೂಟ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡುವಂತೆ ಕೋರಬಹುದು. ಇದರಿಂದಾಗಿ ಸ್ವಿಟ್ಜರ್ಲೆಂಡ್‌‌ ನೇರ ಪ್ರಜಾ ಪ್ರಭುತ್ವವನ್ನು ಹೊಂದಿರುವ ರಾಷ್ಟ್ರವೆನ್ನಬಹುದಾಗಿದೆ. ಒಕ್ಕೂಟ ಸಮಿತಿಯು ಒಕ್ಕೂಟ ಸರ್ಕಾರವನ್ನು ರಚಿಸುವುದಲ್ಲದೇ, ಒಕ್ಕೂಟ ಆಡಳಿತವನ್ನು ನಿರ್ದೇಶಿಸುತ್ತದೆ. ಇದರಿಂದಾಗಿ ಒಕ್ಕೂಟದ ವ್ಯವಸ್ಥೆಯ ನೇತಾರನಾಗಿ ಕಾರ್ಯನಿರ್ವಹಿಸುತ್ತದೆ. ಈ ಸಮಿತಿಯು ಒಕ್ಕೂಟ ಶಾಸನಸಭೆಯಿಂದ ನಾಲ್ಕು ವರ್ಷ ಅವಧಿಗೆ ಚುನಾಯಿತರಾದ ಏಳು ಮಂದಿ ಸಹೋದ್ಯೋಗಿಗಳನ್ನು ಹೊಂದಿರುವ ಸಮಿತಿಯಾಗಿದೆ. ಈ ಸಮಿತಿಯ ಕಾರ್ಯವೈಖರಿಯ ಮೇಲೆ ಶಾಸನಸಭೆಯು ಮೇಲ್ವಿಚಾರಣೆ ನಡೆಸುತ್ತದೆ. ಈ ಏಳು ಮಂದಿ ಸದಸ್ಯರಲ್ಲಿ ಒಬ್ಬರನ್ನು ಒಕ್ಕೂಟದ ಅಧ್ಯಕ್ಷರನ್ನಾಗಿ ಶಾಸನಸಭೆಯು ಆಯ್ಕೆ ಮಾಡುತ್ತದೆ. ಇದು ಸಾಂಪ್ರದಾಯಿಕವಾಗಿ ವಾರ್ಷಿಕವಾಗಿ ಆವರ್ತನದಲ್ಲಿ ಆಯ್ಕೆ ಮಾಡಲಾಗುತ್ತದೆ; ಅಧ್ಯಕ್ಷರು ಸರ್ಕಾರದ ನೇತೃತ್ವವನ್ನು ವಹಿಸಿಕೊಳ್ಳುವುದಲ್ಲದೇ, ಪ್ರಾತಿನಿಧಿಕ ಕಾರ್ಯಗಳನ್ನು ನಡೆಸುತ್ತಾರೆ. ಆದರೂ ಅಧ್ಯಕ್ಷರು ಯಾವುದೇ ಹೆಚ್ಚಿನ ಅಧಿಕಾರವಿಲ್ಲದೆಯೇ ಹಿರಿಯ ಸಹೋದ್ಯೋಗಿಯಾಗಿದ್ದುಕೊಂಡು, ಆಡಳಿತ ಮಂಡಳಿಯಲ್ಲಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. 1959ರಿಂದ ಸ್ವಿಸ್ ಸರಕಾರವು ನಾಲ್ಕು ಪ್ರಮುಖ ರಾಜಕೀಯ ಪಕ್ಷಗಳ ಸಂಯೋಜನೆಯಾಗಿದ್ದು, ಮತದಾರ ಸಮುದಾಯದ ಬಲವನ್ನು ಮತ್ತು ಒಕ್ಕೂಟ ಸಂಸತ್ತನ್ನು ಪ್ರತಿನಿಧಿತ್ವದ ಮೇಲೆ ಅವಲಂಬಿತವಾಗಿ ಪ್ರತಿ ಪಕ್ಷವು ಸ್ಥಾನಗಳನ್ನು ಪಡೆಯುತ್ತದೆ. 1959ರಿಂದ 2003ರವರೆಗೆ ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ಹಂಚಿಕೆಯಾದ 2 ಸ್ಥಾನಗಳು CVP/PDCಗೆ, 2 ಸ್ಥಾನಗಳು SPS/PSSಗೆ, 2 ಸ್ಥಾನಗಳು FDP/PRDಗೆ ಮತ್ತು 1 ಸ್ಥಾನ SVP/UDCಕ್ಕೆ ನೀಡುವ ವ್ಯವಸ್ಥೆಯು "ಮಾಂತ್ರಿಕ ಸೂತ್ರ"ವೆಂಬ ಹೆಸರಿಂದ ಬಳಕೆಯಲ್ಲಿದೆ. 2007ರ ಒಕ್ಕೂಟ ಸಮಿತಿ ಚುನಾವಣೆಗಳಲ್ಲಿ ಒಕ್ಕೂಟ ಸಮಿತಿಯ ಏಳು ಸ್ಥಾನಗಳು ಕೆಳಕಂಡಂತೆ ಹಂಚಿಕೆಯಾದವು : ಸಮಾಜವಾದಿ ಪ್ರಜಾಪ್ರಭುತ್ವವಾದಿಗಳಿಗೆ (SPS/PSS) 2 ಸ್ಥಾನಗಳು, ಉದಾರವಾದಿ ಪ್ರಜಾಪ್ರಭುತ್ವವಾದಿಗಳಿಗೆ (FDP/PRD) 2 ಸ್ಥಾನಗಳು, ಸ್ವಿಸ್ ಪೀಪಲ್ಸ್‌ ಪಾರ್ಟಿಗೆ (SVP/UDC) 2 ಸ್ಥಾನಗಳು, ಕ್ರೈಸ್ತ ಪ್ರಜಾಪ್ರಭುತ್ವವಾದಿಗಳಿಗೆ (CVP/PDC) 1 ಸ್ಥಾನ. ಒಕ್ಕೂಟದ ಸರ್ವೋಚ್ಚ ನ್ಯಾಯಾಲಯವು ಇತರೆ ಒಕ್ಕೂಟ ನ್ಯಾಯಾಲಯಗಳ ಹಾಗೂ ಕ್ಯಾಂಟನ್‌ ನ್ಯಾಯಾಲಯಗಳ ತೀರ್ಪುಗಳ ಮೇಲೆ ಸಲ್ಲಿಸಲಾಗುವ ಮೇಲ್ಮನವಿಗಳನ್ನು ಮಾತ್ರ ಪರಿಶೀಲಿಸುತ್ತದೆ. ನ್ಯಾಯಾಧೀಶರು ಒಕ್ಕೂಟ ಶಾಸನಸಭೆಯಿಂದ ಆರು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ. ನೇರ ಪ್ರಜಾಪ್ರಭುತ್ವ ಸ್ವಿಸ್ ನಾಗರೀಕರು ಮೂರು ಹಂತದ ಕಾನೂನುಗಳ ವ್ಯಾಪ್ತಿಗೆ ಒಳಪಡುತ್ತಾರೆ : ಅವೆಂದರೆ ಪಂಗಡ, ಕ್ಯಾಂಟನ್ ಮತ್ತು ಒಕ್ಕೂಟ ಹಂತಗಳು. 1848ರ ಒಕ್ಕೂಟ ಸಂವಿಧಾನವು ನೇರ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನಿರೂಪಿಸಿದೆ (ಸಂಸದೀಯ ಪ್ರಜಾಪ್ರಭುತ್ವ ಸಂಸ್ಥೆಗಳೂ ಇದರ ಭಾಗವಾದುದರಿಂದ ಕೆಲವೊಮ್ಮೆ ಅರೆ-ನೇರ ಅಥವಾ ಪ್ರಾತಿನಿಧಿಕ ನೇರ ಪ್ರಜಾಪ್ರಭುತ್ವವೆಂದೂ ಕರೆಯಲ್ಪಡುತ್ತದೆ). ಪೌರ ಹಕ್ಕುಗಳೆಂದು ಕರೆಯಲಾಗುವ ಒಕ್ಕೂಟದ ಮಟ್ಟದಲ್ಲಿ ಸ್ವಿಸ್ ನೇರ ಪ್ರಜಾಪ್ರಭುತ್ವದ ದಸ್ತೈವಜುಗಳು, (ವೊಲ್ಕ್ಸರೆಚ್ಟ್‌ , ಡ್ರಾಯಿಟ್ಸ್‌ ಸಿವಿಕ್ಸ್‌ ), ಸಂವಿಧಾನಾತ್ಮಕ ಶಾಸನಹಕ್ಕು ಗಳನ್ನು ಚಲಾಯಿಸುವ ಮತ್ತು ಜನಾಭಿಪ್ರಾಯ ಸಂಗ್ರಹಣೆಯನ್ನು ದಾಖಲಿಸುವ ಹಕ್ಕುಗಳನ್ನು ನೀಡುತ್ತವೆ, ಇವೆರಡೂ ಸಾಂವಿಧಾನಿಕ ನಿರ್ಣಯಗಳನ್ನು ಬದಲಿಸಬಹುದಾಗಿರುತ್ತವೆ. ನಾಗರೀಕರ ಗುಂಪೊಂದು ಒಕ್ಕೂಟದ ಜನಾಭಿಪ್ರಾಯ ಸಂಗ್ರಹಣೆ ಯ ಮೂಲಕ ಸಂಸತ್ತು ಅಂಗೀಕರಿಸಿದ ಶಾಸನವೊಂದನ್ನು ಅದು ಅಂಗೀಕೃತವಾದ 100 ದಿನಗಳೊಳಗೆ ವಿರೋಧಿಸುವ 50,000 ಮಂದಿಯ ಸಹಿಯನ್ನು ಪಡೆಯುವ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ. ಹಾಗಿದ್ದ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮತ ಚಲಾವಣೆಯನ್ನು ನಡೆಸಿ ಸರಳ ಬಹುಮತದ ಮೂಲಕ ಮತದಾರರು ಶಾಸನಕ್ಕೆ ಅಂಗೀಕಾರ ಇಲ್ಲವೇ ತಿರಸ್ಕಾರ ಸೂಚಿಸಬಹುದಾಗಿರುತ್ತದೆ. ಯಾವುದೇ ಎಂಟು ಕ್ಯಾಂಟನ್‌ಗಳು ಒಕ್ಕೂಟ ಶಾಸನದ ವಿರುದ್ಧ ಒಟ್ಟಿಗೆ ಜನಾಭಿಪ್ರಾಯ ಕೋರುವ ಸೌಲಭ್ಯ ಸಹಾ ಇದೆ. ಇದೇ ಮಾದರಿಯಲ್ಲಿ, ನಾಗರಿಕರಿಗೆ ಒಕ್ಕೂಟದ ಸಂವಿಧಾನಾತ್ಮಕ ಹಕ್ಕು ಗಳು ನೀಡುವ ಸೌಲಭ್ಯದ ಮುಖಾಂತರ 18 ತಿಂಗಳುಗಳೊಳಗೆ 100,000 ಮತದಾರರ ಸಹಿ ಪಡೆದುಕೊಂಡು ಪ್ರಸ್ತಾಪಿತ ಸಂವಿಧಾನಾತ್ಮಕ ತಿದ್ದುಪಡಿಗಳನ್ನೂ ಸಹಾ ರಾಷ್ಟ್ರೀಯ ಮತದಾನಕ್ಕೆ ಹಾಕಬಹುದಾಗಿದೆ. ಸಂಸತ್ತು ಹೀಗೆ ಪ್ರಸ್ತಾಪಿಸಿದ ತಿದ್ದುಪಡಿಗೆ ಪೂರಕ ಪ್ರತಿ-ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದ್ದು, ನಂತರ ಚುನಾವಣೆಯಲ್ಲಿ ಎರಡೂ ಪ್ರಸ್ತಾವಗಳು ಅಂಗೀಕೃತವಾದರೆ ಮತದಾರರು ತಮ್ಮ ಆದ್ಯತೆಯನ್ನು ತಿಳಿಸಬೇಕಾಗಿರುತ್ತದೆ. ಶಾಸನ ಹಕ್ಕುಗಳ ಮೂಲಕ ಇಲ್ಲವೇ ಸಂಸತ್ತಿನ ಮೂಲಕ ಆದ ಸಂವಿಧಾನಾತ್ಮಕ ತಿದ್ದುಪಡಿಗಳು, ರಾಷ್ಟ್ರೀಯ ಜನಪ್ರಿಯತೆಯ ಮತ ಹಾಗೂ ಕ್ಯಾಂಟನ್‌ಗಳ ಆಂತರಿಕ ಮತಗಳೆರಡರಲ್ಲೂ ಉಭಯ ಬಹುಮತ ಪಡೆಯುವುದು ಕಡ್ಡಾಯ. ಕ್ಯಾಂಟನ್‌ಗಳು ಸ್ವಿಸ್ ಒಕ್ಕೂಟ 26 ಕ್ಯಾಂಟನ್‌ಗಳನ್ನು ಹೊಂದಿದೆ: * ಸಂಸ್ಥಾನಗಳ ಆಡಳಿತ ಮಂಡಳಿಯಲ್ಲಿ ಅರೆ ಕ್ಯಾಂಟನ್‌ಗಳನ್ನು ಓರ್ವ ಶಾಸಕ (ಇಬ್ಬರ ಬದಲಿಗೆ) ಮಾತ್ರವೇ ಪ್ರತಿನಿಧಿಸುತ್ತಾರೆ (ಸಾಂಪ್ರದಾಯಿಕ ಅರೆ-ಕ್ಯಾಂಟನ್‌ಗಳನ್ನು ನೋಡಿ). ಅವುಗಳ ಜನಸಂಖ್ಯೆಯು 15,000ದಿಂದ (ಅಪ್ಪೆನ್‌ಜೆಲ್‌ ಇನ್ನರ್‌ಹೋಡೆನ್‌) 1,253,500ದ ವರೆಗೆ ವ್ಯತ್ಯಾಸವಾಗಿದ್ದರೆ (ಜ್ಯೂರಿಚ್‌ ), ಮತ್ತು ಅವುಗಳ ವಿಸ್ತೀರ್ಣ 37 km²ರಿಂದ (ಬಸೆಲ್‌ -ಸ್ಟಾಡ್ಟ್‌) 7,105 km²ವರೆಗೆ (ಗ್ರಾವುಬುಂಡೆನ್‌) ಭಿನ್ನಭಿನ್ನವಾಗಿವೆ. ಕ್ಯಾಂಟನ್‌ಗಳು ಒಟ್ಟು 2,889 ಪೌರಸಂಸ್ಥೆಗಳನ್ನೊಳಗೊಂಡಿವೆ. ಸ್ವಿಟ್ಜರ್ಲೆಂಡ್‌‌ನೊಳಗೇ ಎರಡು ಪರಾಧೀನ ಪ್ರದೇಶಗಳಿವೆ, ಅವುಗಳಲ್ಲಿ : ಬುಸಿಂಗೆನ್‌ ಜರ್ಮನಿಗೆ ಸೇರಿದ್ದರೆ, ಕ್ಯಾಂಪಿಯೋನೆ ಡಿ'ಇಟಾಲಿಯಾ ಇಟಲಿಗೆ ಸೇರಿದೆ. ಆಸ್ಟ್ರಿಯಾದ ರಾಜ್ಯವಾಗಿದ್ದ ವೋರಾರ್ಲ್‌ಬರ್ಗ್‌ನಲ್ಲಿ 1919ರ ಮೇ 11ರಂದು ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 80%ಗೂ ಮಿಕ್ಕಿದ ಜನರು ತಮ್ಮ ರಾಜ್ಯವನ್ನು ಸ್ವಿಸ್ ಒಕ್ಕೂಟಕ್ಕೆ ವಿಲೀನಗೊಳಿಸುವುದನ್ನು ಬೆಂಬಲಿಸಿದರು. ಆದರೂ, ಈ ವಿಲೀನವನ್ನು ಆಸ್ಟ್ರಿಯಾ ಸರ್ಕಾರ, ಮಿತ್ರದೇಶಗಳು, ಸ್ವಿಸ್‌ ಉದಾರವಾದಿಗಳು, ಸ್ವಿಸ್-ಇಟಾಲಿಯನ್‌ರು (ಸ್ವಿಟ್ಜರ್ಲೆಂಡ್‌ನ ಇಟಾಲಿಯನ್‌ ಭಾಗದಲ್ಲಿ ವಾಸಿಸುವ ಸ್ವಿಸ್ ದೇಶೀಯರು‌, ನಕ್ಷೆ ಪರಿಶೀಲಿಸಿ) ಮತ್ತು ರೋಮಂಡ್‌ಗಳು (ಸ್ವಿಟ್ಜರ್ಲೆಂಡ್‌ನ ಫ್ರೆಂಚ್‌-ಭಾಷಿಕ ಪ್ರದೇಶಗಳಲ್ಲಿ ವಾಸಿಸುವ ಸ್ವಿಸ್ ದೇಶೀಯರು‌, ನಕ್ಷೆ ಪರಿಶೀಲಿಸಿ) ಮುಂತಾದವರು ತಡೆದರು. ವಿದೇಶಿ ಸಂಬಂಧಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್‌‌ ಸೇನಾ, ರಾಜಕೀಯ ಅಥವಾ ನೇರ ಆರ್ಥಿಕ ಕಾರ್ಯಾಚರಣೆಗಳಿಗೆ ಸಂಬಂಧಿಸಬಹುದಾದ ಯಾವುದೇ ಮೈತ್ರಿಗಳಿಂದ ದೂರ ಉಳಿದಿದೆ. 1515ರಲ್ಲಿ ಅದರ ವಿಸ್ತರಣೆಯಾದ ನಂತರದಿಂದ ಅಲಿಪ್ತವಾಗಿ ನಡೆದುಕೊಂಡಿದೆ. ಕೇವಲ 2002ರಲ್ಲಿ ಸ್ವಿಟ್ಜರ್ಲೆಂಡ್‌‌ ಸಂಯುಕ್ತ ರಾಷ್ಟ್ರ ಸಂಘದ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆಯಿತಾದರೂ, ಈ ರಾಷ್ಟ್ರವು ಜನಾಭಿಪ್ರಾಯದ ಮೂಲಕವಾಗಿ ಸೇರಿದ ಪ್ರಪ್ರಥಮ ರಾಷ್ಟ್ರವಾಗಿತ್ತು. ಸ್ವಿಟ್ಜರ್ಲೆಂಡ್‌‌ ಬಹುಪಾಲು ಎಲ್ಲಾ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವುದಲ್ಲದೇ ಐತಿಹಾಸಿಕವಾಗಿ ಇತರೆ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಾ ಬಂದಿದೆ. ಸ್ವಿಟ್ಜರ್ಲೆಂಡ್‌‌ ಐರೋಪ್ಯ ಒಕ್ಕೂಟದ ಸದಸ್ಯತ್ವ ಪಡೆದಿಲ್ಲ; ಸ್ವಿಸ್ ನಾಗರಿಕರು 1990ರ ದಶಕದ ಪೂರ್ವ ಭಾಗದಿಂದಲೇ ನಿರಂತರವಾಗಿ ತಿರಸ್ಕರಿಸುತ್ತಾ ಬಂದಿದ್ದಾರೆ. ಅಸಾಧಾರಣ ಸಂಖ್ಯೆಯ ಅಂತರರಾಷ್ಟ್ರೀಯ ಸಂಸ್ಥೆಗಳು, ಭಾಗಶಃ ಈ ರಾಷ್ಟ್ರದ ಅಲಿಪ್ತ ನೀತಿಯ ಕಾರಣದಿಂದ ತಮ್ಮ ಪೀಠಗಳನ್ನು ಸ್ವಿಟ್ಜರ್ಲೆಂಡ್‌‌ನಲ್ಲಿ ಸ್ಥಾಪಿಸಿವೆ. 1863ರಲ್ಲಿ ರೆಡ್‌ ಕ್ರಾಸ್‌ ಸಂಸ್ಥೆಯನ್ನು ಅಲ್ಲಿ ಸ್ಥಾಪಿಸಲಾಯಿತಲ್ಲದೇ ಈಗಲೂ ಅದರ ಸಾಂಘಿಕ ಕೇಂದ್ರವು ಅದೇ ದೇಶದಲ್ಲಿದೆ. ಜಿನೀವಾನಲ್ಲಿ ಐರೋಪ್ಯ ಪ್ರಸರಣಾ ಒಕ್ಕೂಟವು ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಸ್ವಿಟ್ಜರ್ಲೆಂಡ್‌‌ ಸಂಯುಕ್ತ ರಾಷ್ಟ್ರ ಸಂಘಕ್ಕೆ ಇತ್ತೀಚೆಗೆ ಸೇರ್ಪಡೆಯಾದರೂ ಸಹಾ, ಜಿನೀವಾ ನಗರವು, ಸಂಯುಕ್ತ ರಾಷ್ಟ್ರ ಸಂಘದ ನ್ಯೂಯಾರ್ಕ್‌ ನಂತರದ ಎರಡನೇ ಅತಿ ದೊಡ್ಡ ಕೇಂದ್ರವಾಗಿದೆ. ಸ್ವಿಟ್ಜರ್ಲೆಂಡ್‌‌ ಲೀಗ್‌ ಆಫ್‌ ನೇಷನ್ಸ್‌‌ನ ಸ್ಥಾಪಕ ಸದಸ್ಯನಾಗಿದೆ. ಸಂಯುಕ್ತ ರಾಷ್ಟ್ರ ಸಂಘದ ಪ್ರಧಾನ ಕೇಂದ್ರವಾಗಿರುವುದಲ್ಲದೇ, ಜಿನೀವಾ ಅನೇಕ UN ಉಪಸಂಸ್ಥೆಗಳ ಕಚೇರಿಗಳನ್ನು ಉದಾಹರಣೆಗೆ ವಿಶ್ವ ಆರೋಗ್ಯ ಸಂಸ್ಥೆ (WHO), ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ(ITU) ಮತ್ತು ಇನ್ನಿತರ ಸುಮಾರು 200 ಅಂತರರಾಷ್ಟ್ರೀಯ ಸಂಸ್ಥೆಗಳ ಕಚೇರಿಗಳನ್ನು ಹೊಂದಿದೆ. ಇಷ್ಟೇ ಅಲ್ಲದೇ ಅನೇಕ ಕ್ರೀಡಾ ಒಕ್ಕೂಟಗಳು ಮತ್ತು ಅಂತರರಾಷ್ಟ್ರೀಯ ಐಸ್‌‌ ಹಾಕಿ ಒಕ್ಕೂಟದಂತಹಾ ಸಂಸ್ಥೆಗಳು ದೇಶದುದ್ದಕ್ಕೂ ತಮ್ಮ ಕಚೇರಿಗಳನ್ನು ಹೊಂದಿವೆ. ಪ್ರಾಯಶಃ ಅವುಗಳಲ್ಲಿ ಪ್ರಮುಖವಾದವೆಂದರೆ ಲಾಸನ್ನೆಯಲ್ಲಿರುವ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ, ಜ್ಯೂರಿಚ್‌ನಲ್ಲಿರುವ FIFA (ಅಂತರರಾಷ್ಟ್ರೀಯ ಸಾಂಘಿಕ ಫುಟ್‌ಬಾಲ್‌ ಒಕ್ಕೂಟ), ಮತ್ತು UEFA (ಐರೋಪ್ಯ ಫುಟ್‌ಬಾಲ್‌ ಸಂಘಗಳ ಒಕ್ಕೂಟ). ವಿಶ್ವ ಆರ್ಥಿಕ ಮಾರುಕಟ್ಟೆ ಪ್ರತಿಷ್ಠಾನವು ಜಿನೀವಾದಲ್ಲಿ ಕೇಂದ್ರವನ್ನು ಹೊಂದಿದೆ. ಡಾವೋಸ್‌ನಲ್ಲಿ ನಡೆಯುವ ವಾರ್ಷಿಕ ಸಭೆಯಿಂದಾಗಿ ಇದು ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ಈ ಸಭೆಯಲ್ಲಿ ಪ್ರಮುಖ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಮತ್ತು ರಾಜಕೀಯ ಧುರೀಣರನ್ನೂ ಒಂದೆಡೆ ಸೇರಿಸಿ ಆರೋಗ್ಯ ಮತ್ತು ಪರಿಸರಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ನಿವಾರಣೆಗೆಂದು ಪರಿಹಾರವನ್ನು ಚರ್ಚಿಸಲಾಗುತ್ತದೆ. ಸ್ವಿಸ್ ಶಸ್ತ್ರ ಸನ್ನದ್ಧ ಸೇನಾಪಡೆ ಪದಾತಿ ದಳ ಮತ್ತು ವಾಯುದಳಗಳೂ ಸೇರಿದಂತೆ ಸ್ವಿಸ್ ಸೇನಾ ಪಡೆಗಳು ಪ್ರಮುಖವಾಗಿ ಬಲವಂತವಾಗಿ ಸೇನೆಗೆ ಸೇರಿದವರನ್ನು ಹೊಂದಿವೆ. ವೃತ್ತಿಪರ ಸೈನಿಕರ ಸೇನಾಪಡೆಯ 5 ಪ್ರತಿಶತದಷ್ಟು ಮಾತ್ರವೇ ಇದ್ದು, ಉಳಿದವರೆಲ್ಲಾ ಬಲವಂತದಿಂದ ಸೇನೆಗೆ ಸೇರಿಸಲ್ಪಟ್ಟ 20ರಿಂದ 34(ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ 50) ವರ್ಷ ವಯೋಮಿತಿಯ ನಾಗರಿಕರು ತುಂಬಿದ್ದಾರೆ. ಸ್ವಿಟ್ಜರ್ಲೆಂಡ್‌‌ ಭೂಪ್ರದೇಶದಿಂದ ಸುತ್ತುವರೆಯಲ್ಪಟ್ಟಿರುವುದರಿಂದ ಇಲ್ಲಿ ನೌಕಾಪಡೆಯಿಲ್ಲ, ಆದರೂ ನೆರೆಹೊರೆಯಲ್ಲಿ ಗಡಿಯನ್ನು ಹೊಂದಿರುವ ಸರೋವರ ಪ್ರದೇಶಗಳ ರಕ್ಷಣೆಗೆ ಸೇನಾ ಗಸ್ತು ದೋಣಿಗಳನ್ನು ಬಳಸಲಾಗುತ್ತದೆ. ವ್ಯಾಟಿಕನ್‌ ಸಿಟಿಯ ಸ್ವಿಸ್ ಪಹರೆದಾರಿಕೆ ಬಿಟ್ಟರೆ ಇತರೆ ವಿದೇಶೀ ಸೇನೆಗಳಿಗೆ ಸೇವೆ ಸಲ್ಲಿಸುವುದು ಸ್ವಿಸ್‌ ನಾಗರಿಕರಿಗೆ ನಿಷಿದ್ಧವಾಗಿದೆ. ಸ್ವಿಸ್ ಸೇನಾ ವ್ಯವಸ್ಥೆಯ ರಚನೆಯು ಅಲ್ಲಿನ ಸೈನಿಕರು ತಮ್ಮ ಖಾಸಗಿ ಶಸ್ತ್ರಗಳೂ ಸೇರಿದಂತೆ ಎಲ್ಲಾ ಖಾಸಗಿ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟಿರಬೇಕೆಂದು ನಿರ್ಬಂಧ ವಿಧಿಸಿದೆ. ಕೆಲವು ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಈ ಪದ್ಧತಿಯನ್ನು ವಿವಾದಾತ್ಮಕ ಹಾಗೂ ಅಪಾಯಕಾರಿ ಎಂಬ ಅಭಿಪ್ರಾಯ ಪಟ್ಟಿವೆ. ಸೇನೆಗೆ ಕಡ್ಡಾಯವಾಗಿ ಸೇರಲೇಬೇಕೆಂಬ ನಿಬಂಧನೆ ಎಲ್ಲಾ ಪುರುಷ ಸ್ವಿಸ್ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ; ಸ್ತ್ರೀಯರು ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸಬಹುದು. ಸಾಧಾರಣವಾಗಿ ಅವರು 19ನೇ ವಯಸ್ಸಿನಲ್ಲಿ ಸೇನೆಯ ದಾಖಲಾತಿಗೆ ಹಾಜರಾಗಲು ಆದೇಶ ಪಡೆಯುತ್ತಾರೆ. ಯುವ ಸ್ವಿಸ್‌ ನಾಗರಿಕರಲ್ಲಿ ಮೂರನೇ ಎರಡರಷ್ಟು ಮಂದಿ ಸೇವೆಗೆ ದಾಖಲಾಗಲು ಅರ್ಹತೆಯನ್ನು ಪಡೆದಿರುತ್ತಾರೆ; ಅರ್ಹತೆ ಪಡೆಯದವರಿಗೆ ಪರ್ಯಾಯ ಸೇವೆಯೂ ಸಹಾ ಲಭ್ಯ. ವಾರ್ಷಿಕವಾಗಿ ಸುಮಾರು 20,000 ಮಂದಿ 18ರಿಂದ 21 ವಾರಗಳ ಕಾಲ ಸೇನೆಯ ಪ್ರಾಥಮಿಕ ತರಬೇತಿಯಲ್ಲಿ ಭಾಗವಹಿಸುತ್ತಾರೆ. "ಸೇನೆ XXI" ಎಂಬ ಸುಧಾರಣೆಯನ್ನು 2003ರಲ್ಲಿ ಸಾರ್ವಜನಿಕ ಅಭಿಮತದ ಮೇರೆಗೆ ಅಳವಡಿಸಿಕೊಳ್ಳಲಾಯಿತು, "ಸೇನೆ 95" ಎಂಬ ಹಿಂದಿನ ಪದ್ಧತಿಯನ್ನು ರದ್ದುಗೊಳಿಸಿ, ಅಗತ್ಯ ಸಿಪಾಯಿಗಳ ಗಣನೆಯನ್ನು 400,000ರಿಂದ 200,000ಕ್ಕೆ ಇಳಿಸಲಾಯಿತು. ಅವರಲ್ಲಿ 120,000 ಮಂದಿ ಸಕ್ರಿಯ ಸೇವೆಯಲ್ಲಿದ್ದು ಇತರೆ 80,000 ಮಂದಿ ಮೀಸಲು ಪಡೆಗೆ ಸೇರಿದವರು. ಸ್ವಿಟ್ಜರ್ಲೆಂಡ್‌ನ ಅಖಂಡತೆ ಮತ್ತು ಅಲಿಪ್ತತೆಯನ್ನು ಕಾಪಾಡಿಕೊಳ್ಳಲು ಸಮಗ್ರವಾಗಿ ಇದುವರೆವಿಗೆ ಮೂರು ಶಸ್ತ್ರಸಜ್ಜಿತ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಮೊದಲನೆಯದು 1870-71ರ ಫ್ರಾಂಕೋ-ಪ್ರಷ್ಯನ್‌ ಯುದ್ಧದ ಸಂದರ್ಭದಲ್ಲಿ ನಡೆದ ಕಾರ್ಯಾಚರಣೆ. ಆಗಸ್ಟ್‌ 1914ರಲ್ಲಿ ಹಠಾತ್‌ ಘೋಷಣೆಯಾದ ಪ್ರಥಮ ವಿಶ್ವ ಸಮರಕ್ಕೆ ಪ್ರತಿಕ್ರಿಯೆಯಾಗಿ ಎರಡನೆ ಕಾರ್ಯಾಚರಣೆಯನ್ನು ನಡೆಸಲಾಯಿತು. 1939ರ ಸೆಪ್ಟೆಂಬರ್‌ನಲ್ಲಿ ಆರಂಭಿಸಲಾದ ಮೂರನೇ ಸೈನಿಕ ಕಾರ್ಯಾಚರಣೆಯು ಜರ್ಮನಿಯಿಂದ ಪೋಲೆಂಡ್‌ ಮೇಲಿನ ಆಕ್ರಮಣಕ್ಕೆ ಪ್ರತಿಯಾಗಿ ನಡೆಸಿದ್ದುದಾಗಿತ್ತು; ಈ ಕಾರ್ಯಾಚರಣೆಗೆ ಹೆನ್ರಿ ಗ್ಯುಸೆನ್‌ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು. ಅಲಿಪ್ತ ನೀತಿಯ ಕಾರಣದಿಂದಾಗಿ ಸೇನೆಯು ಇತರೆ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳಲ್ಲಿ ಭಾಗವಹಿಸದಿದ್ದರೂ, ಇಲ್ಲಿನ ಸೇನೆಯು ವಿಶ್ವದಾದ್ಯಂತ ನಡೆಯುತ್ತಿರುವ ಶಾಂತಿಪಾಲನಾ ನಿಯೋಗಗಳ ಭಾಗವಾಗಿದೆ. 2000ನೇ ಇಸವಿಯಿಂದ ಸ್ವಿಸ್‌ ರಕ್ಷಣಾ ಇಲಾಖೆಯು ಕೃತಕ ಉಪಗ್ರಹ ಸಂವಹನವನ್ನು ಗಮನಿಸಲು ಓನಿಕ್ಸ್‌ ಗೂಢಚಾರಿ ಮಾಹಿತಿ ವ್ಯವಸ್ಥೆಯನ್ನು ಸಹಾ ಹೊಂದಿದೆ. ಶೀತಲ ಸಮರದ ಕೊನೆಯ ಭಾಗದಲ್ಲಿ ಸೈನಿಕ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಇಲ್ಲವೇ ಸಮಗ್ರ ಸೇನಾಪಡೆಯನ್ನೇ ನಿಷೇಧಿಸಲು ಯತ್ನಗಳು ನಡೆದವು (ಸೇನಾಪಡೆ ರಹಿತ ಸ್ವಿಟ್ಜರ್ಲೆಂಡ್‌ಗಾಗಿ ಗುಂಪನ್ನು ನೋಡಿ). 1989ರ ನವೆಂಬರ್‌ 26ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಗಮನಾರ್ಹ ಜನಾಭಿಪ್ರಾಯ ಸಂಗ್ರಹಣೆ ನಡೆದಾಗ ಈ ವಿಚಾರ ಸೋಲು ಕಂಡರೂ ಸಹಾ, ಈ ಬಗೆಗೆ ಜನರ ಒಲವು ಹೆಚ್ಚಾಗಿಯೇ ಇತ್ತು. ಹಿಂದೆಯೇ ಉದ್ದೇಶಿಸಿದ್ದ ಆದರೆ 9/11 ದಾಳಿಯ ನಂತರ ನಡೆದ ಇದೇ ಮಾದರಿಯ ಜನಾಭಿಪ್ರಾಯ ಸಂಗ್ರಹಣೆಯು 77%ಕ್ಕೂ ಹೆಚ್ಚಿನ ಮತಗಳಿಂದ ಸೋಲು ಕಂಡಿತು. ಭೂಗೋಳ ಆಲ್ಫ್ಸ್‌ ಪರ್ವತ ಶ್ರೇಣಿಯ ಉತ್ತರ ಮತ್ತು ದಕ್ಷಿಣ ಬದಿಗಳಲ್ಲಿ ಹರಡಿರುವ ಸ್ವಿಟ್ಜರ್ಲೆಂಡ್‌‌, ಕೇವಲ 41,285 ಚದರ ಕಿಲೋಮೀಟರ್‌ಗಳ (15,940 ಚ ಮೈ) ಸೀಮಿತ ವ್ಯಾಪ್ತಿಯಲ್ಲಿ ವೈವಿಧ್ಯಮಯ ಮಾದರಿಯ ವಿಶಾಲದೃಶ್ಯ ಮತ್ತು ಹವಾಗುಣವನ್ನು ಹೊಂದಿದೆ. ಸರಾಸರಿ ಜನಸಾಂದ್ರತೆ ಪ್ರತಿ ಚದರ ಕಿಲೋಮೀಟರ್‌(622/ಚ ಮೈ)ಗೆ 240 ಮಂದಿಯ ಹಾಗೆ ಸುಮಾರು 7.6 ಮಿಲಿಯನ್‌ ಜನಸಂಖ್ಯೆಯನ್ನು ಹೊಂದಿದೆ. ಆದರೂ ಪರ್ವತ ಪ್ರದೇಶಗಳಿರುವ ರಾಷ್ಟ್ರದ ದಕ್ಷಿಣ ಭಾಗವು ಮೇಲ್ಕಂಡ ಸರಾಸರಿಗಿಂತ ಕಡಿಮೆ ನಿಬಿಡತೆಯನ್ನು ಹೊಂದಿದ್ದರೆ, ಉತ್ತರ ಭಾಗ ಮತ್ತು ದಕ್ಷಿಣ ಕೊನೆಗಳು ಸರಿಸುಮಾರು ಹೆಚ್ಚಿನ ಸಾಂದ್ರತೆಯನ್ನು ಹೊಂದಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಲ್ಲಿನ ಭಾಗಶಃ ಅರಣ್ಯವಿರುವ ಮತ್ತು ಭಾಗಶಃ ಅರಣ್ಯಮುಕ್ತ ಪ್ರದೇಶಗಳೊಂದಿಗೆ ಅನೇಕ ದೊಡ್ಡ ಸರೋವರಗಳೂ ಇರುವ ಆರೋಗ್ಯಕಾರಿ ಪರ್ವತ ಪ್ರದೇಶಗಳು. ಸ್ವಿಟ್ಜರ್ಲೆಂಡ್‌‌ ಮೂರು ವಿಧದ ಮೂಲಭೂತ ಭೂಲಕ್ಷಣಗಳನ್ನು ಹೊಂದಿದೆ: ದಕ್ಷಿಣದಲ್ಲಿ ಸ್ವಿಸ್ ಆಲ್ಫ್ಸ್‌, ಸ್ವಿಸ್ ಪ್ರಸ್ಥಭೂಮಿ ಅಥವಾ "ಮಧ್ಯನಾಡು", ಮತ್ತು ಉತ್ತರದಲ್ಲಿ ಜ್ಯೂರಾ ಪರ್ವತಗಳು. ಆಲ್ಫ್ಸ್‌ ಪರ್ವತಗಳು ಸುಮಾರು ರಾಷ್ಟ್ರದ ಒಟ್ಟು ವಿಸ್ತೀರ್ಣದ 60%ನಷ್ಟು ವಿಸ್ತೀರ್ಣವನ್ನು ಹೊಂದಿ ಎತ್ತರದ ಪರ್ವತ ಶ್ರೇಣಿ ರಾಷ್ಟ್ರದ ದಕ್ಷಿಣಾರ್ಧದುದ್ದಕ್ಕೂ ಹರಡಿಕೊಂಡಿವೆ. ಸ್ವಿಸ್ ಆಲ್ಫ್ಸ್‌ನ ಎತ್ತರದ ಶೃಂಗಗಳಲ್ಲಿ, 4,634 ಮೀಟರ್‌(15,203 ಅಡಿ)ಗಳ ಎತ್ತರವಿರುವ ಡುಪೋರ್‌ಸ್ಪಿಟ್ಸ್‌ ಅತಿ ಎತ್ತರದ್ದಾಗಿದ್ದು, ಹಿಮನದಿ ಮತ್ತು ಜಲಪಾತಗಳನ್ನು ಹೊಂದಿರುವ ಅಸಂಖ್ಯ ಕಣಿವೆಗಳನ್ನು ಹೊಂದಿದೆ. ಇವುಗಳಿಂದ ಅನೇಕ ಪ್ರಮುಖ ಐರೋಪ್ಯ ನದಿಗಳಾದ ರೈನ್‌, ರೋನ್‌, ಇನ್‌, ಆರೆ ಮತ್ತು ಟಿಕಿನೊ ನದಿಗಳ ಮೂಲತೊರೆಗಳು ಅಂತಿಮವಾಗಿ ಅತಿ ದೊಡ್ಡ ಸ್ವಿಸ್ ಸರೋವರಗಳಾದ ಜಿನೀವಾ ಸರೋವರ (ಲಾಕ್‌ ಲೆಮನ್‌), ಜ್ಯೂರಿಚ್‌ ಸರೋವರ, ನ್ಯೂಚಾಟೆಲ್‌ ಸರೋವರ, ಮತ್ತು ಕಾನ್‌ಸ್ಟಾನ್ಸ್‌ಗಳಿಗೆ ಸೇರುತ್ತವೆ. ಅತಿ ಹೆಚ್ಚು ಪ್ರಸಿದ್ಧವಾದ ಪರ್ವತವೆಂದರೆ ವಲಾಯಿಸ್‌ನಲ್ಲಿರುವ ಮ್ಯಾಟ್ಟರ್‌ಹಾರ್ನ್‌ (4,478 ಮೀ) ಮತ್ತು ಇಟಲಿಯ ಗಡಿಯಲ್ಲಿರುವ ಪೆನ್ನೈನ್‌ ಆಲ್ಫ್ಸ್‌. ಇನ್ನೂ ಎತ್ತರದ ಪರ್ವತಗಳು ಈ ಪ್ರದೇಶದಲ್ಲಿವೆ, ಅವೆಂದರೆ ಡುಪೋರ್‌ಸ್ಪಿಟ್ಸ್‌ (4,634 ಮೀ), ಡಾಮ್‌ (4,545 ಮೀ) ಮತ್ತು ವೇಯಿಸ್‌ಹಾರ್ನ್‌ (4,506 ಮೀ). ಆಳದಲ್ಲಿರುವ ಹಿಮನದಿಗಳಿರುವ ಲಾಟರ್‌ಬ್ರುನೆನ್‌ ಕಣಿವೆಯ ಮೇಲಿರುವ ಬರ್ನ್‌ ಪ್ರಾಂತ್ಯ ಆಲ್ಫ್ಸ್‌ ಭಾಗವು 72 ಜಲಪಾತಗಳನ್ನು ಹೊಂದಿದ್ದು ಜುಂಗ್‌ಫ್ರಾವ್‌ (4,158 ಮೀ) ಮತ್ತು ಐಗರ್‌, ಮತ್ತು ಅನೇಕ ಚಿತ್ರೋಪಮವಾದ ಕಣಿವೆಗಳಿರುವ ಪ್ರದೇಶವಾಗಿಯೂ ಹೆಸರು ಮಾಡಿದೆ. ಆಗ್ನೇಯದಲ್ಲಿ ಗ್ರಾವುಬುಂಡೆನ್‌ ಕ್ಯಾಂಟನ್‌‌ನ St. ಮೋರಿಟ್ಜ್‌ ಪ್ರದೇಶವನ್ನು ಹೊಂದಿರುವ ಉದ್ದವಾದ ಪ್ರಸಿದ್ಧ ಎಂಗಾಡಿನ್‌ ಕಣಿವೆಯಿದೆ; ನೆರೆಹೊರೆಯಲ್ಲಿರುವ ಬರ್ನಿನಾ ಆಲ್ಫ್ಸ್‌ನ ಅತ್ಯುನ್ನತ ಶೃಂಗವೆಂದರೆ ಪಿಜ್‌ ಬರ್ನಿನಾ (4,049 ಮೀ). ರಾಷ್ಟ್ರದ ಒಟ್ಟು ವಿಸ್ತೀರ್ಣದ 30% ವಿಸ್ತೀರ್ಣದಲ್ಲಿ ಹರಡಿರುವ ರಾಷ್ಟ್ರದ ಉತ್ತರ ಭಾಗವು ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿದ್ದು ಮಧ್ಯನಾಡು ಎಂದು ಕರೆಯಲ್ಪಡುತ್ತದೆ. ಇದು ಉನ್ನತ ಮುಕ್ತ ಹಾಗೂ ಪರ್ವತ ಪ್ರದೇಶವಿರುವ ವಿಶಾಲದೃಶ್ಯಗಳನ್ನು ಹೊಂದಿದೆ. ಈ ಪ್ರದೇಶವು ಭಾಗಶಃ ಅರಣ್ಯವನ್ನು, ಭಾಗಶಃ ಮೇಯುತ್ತಿರುವ ಪಶುಹಿಂಡುಗಳಿರುವ ಮುಕ್ತ ಹುಲ್ಲುಗಾವಲು ಅಥವಾ ತರಕಾರಿ ಮತ್ತು ಹಣ್ಣು ಬೆಳೆಯುವ ಜಮೀನುಗಳನ್ನು ಹೊಂದಿದ್ದರೂ ಇದು ಪರ್ವತಮಯವಾಗಿದೆ. ಅನೇಕ ದೊಡ್ಡ ಸರೋವರಗಳು ಇಲ್ಲಿಯೇ ಇವೆ ಮತ್ತು ಅತಿ ದೊಡ್ಡ ಸ್ವಿಸ್ ಮಹಾನಗರಗಳೂ ಸಹಾ ರಾಷ್ಟ್ರದ ಇದೇ ಭಾಗದಲ್ಲಿವೆ. ಸ್ವಿಟ್ಜರ್ಲೆಂಡ್‌‌ನ ಪಶ್ಚಿಮದಲ್ಲಿರುವ ಜಿನೀವಾ ಸರೋವರ(ಫ್ರೆಂಚ್‌ನಲ್ಲಿ ಲಾಕ್‌ ಲೆಮನ್‌ ಎಂದು ಕರೆಯಲ್ಪಡುವ)ವು ಅತಿ ದೊಡ್ಡ ಸರೋವರವಾಗಿದೆ. ರೋನ್‌ ನದಿಯು ಜಿನೀವಾ ಸರೋವರದ ಪ್ರಮುಖ ಉಪನದಿಯಾಗಿದೆ. ಸ್ವಿಸ್ ಹವಾಗುಣವು ಸಾಧಾರಣವಾಗಿ ಸಮಶೀತೋಷ್ಣತೆಯನ್ನು ಹೊಂದಿದ್ದು, ಪರ್ವತದ ತುದಿಗಳಲ್ಲಿನ ವಿಪರೀತ ಶೈತ್ಯದಿಂದ ಹಿಡಿದು ಸ್ವಿಟ್ಜರ್ಲೆಂಡ್‌‌ನ ದಕ್ಷಿಣಾಗ್ರ ತುದಿಯಲ್ಲಿ ಮೆಡಿಟರೇನಿಯನ್‌ ಹವಾಗುಣಕ್ಕೆ ಸಮೀಪದ ಆಹ್ಲಾದಕರ ವಾತಾವರಣವನ್ನು ಹೊಂದಿರುವಂತೆ ಪ್ರದೇಶ ಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಬೇಸಿಗೆಯು ಸಾಧಾರಣವಾಗಿ ಬೆಚ್ಚಗೆ ಮತ್ತು ತೇವಾಂಶದಿಂದ ಕೂಡಿದ್ದು ಆಗಾಗ್ಗೆ ಆವರ್ತಕ ಮಳೆಯಾಗುವುದರಿಂದ ಹುಲ್ಲುಗಾವಲು ಹಾಗೂ ಮೇಯುವಿಕೆ ಅತ್ಯಂತ ಪ್ರಶಸ್ತವಾಗಿರುವ ಪ್ರದೇಶವಾಗಿದೆ. ಪರ್ವತ ಪ್ರದೇಶಗಳಲ್ಲಿನ ಚಳಿಗಾಲದಲ್ಲಿ ಸೂರ್ಯ ಮತ್ತು ಹಿಮವರ್ಷಗಳ ನಡುವೆ ಸ್ಥಿತ್ಯಂತರವಾಗುತ್ತಿದ್ದರೆ ಇತ್ತ ಕೆಳ ಪ್ರದೇಶಗಳು ಮೋಡ ಮತ್ತು ಇಬ್ಬನಿಗಳಿಂದಾವೃತವಾಗಿರುತ್ತವೆ. ಇಟಲಿಯ ಕಡೆಯಿಂದ ಆಲ್ಫ್ಸ್‌ ಮೇಲೆ ಬರುವ ಬೆಚ್ಚನೆಯ ಮೆಡಿಟರೇನಿಯನ್‌ ಬೀಸು ಗಾಳಿಯಿಂದ ಕೂಡಿರುವ ಫಾನ್‌ ಎಂದು ಹೆಸರಾದ ವಾತಾವರಣದ ವಿದ್ಯಮಾನವು ವರ್ಷದ ಎಲ್ಲಾ ಸಮಯಗಳಲ್ಲೂ, ಮಳೆಗಾಲದಲ್ಲೂ ಕೂಡ ಸಂಭವಿಸುತ್ತದೆ. ವಲಾಯಿಸ್‌‌ ನ ದಕ್ಷಿಣ ಕಣಿವೆ ಪ್ರದೇಶಗಳಲ್ಲಿ ಒಣ ಪರಿಸ್ಥಿತಿಯಿರುತ್ತದೆ. ಇಲ್ಲಿ ಕೇಸರಿ ಬೆಳೆಯಲಾಗುತ್ತದಲ್ಲದೇ, ಅನೇಕ ಮದ್ಯ ತಯಾರಿಸಲು ಬಳಸುವ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಗ್ರಾವುಬುಂಡೆನ್‌ ಸಹಾ ಒಣ ಹವಾಗುಣ ವನ್ನು ಹೊಂದಿದ್ದು ಅಲ್ಪ ಪ್ರಮಾಣದಲ್ಲಿ ತಂಪಾಗಿದ್ದರೂ, ಚಳಿಗಾಲದಲ್ಲಿ ಬಹಳಷ್ಟು ಹಿಮಪಾತವಾಗುತ್ತದೆ. ಆರ್ದ್ರ ಪರಿಸ್ಥಿತಿಯು ಆಲ್ಫ್ಸ್‌ನ ಶೃಂಗ ಪ್ರದೇಶಗಳಲ್ಲಿರುತ್ತದೆ ಮತ್ತು ಟಿಕಿನೊ ಕ್ಯಾಂಟನ್‌ನಲ್ಲಿ ಸಾಕಷ್ಟು ಬಿಸಿಲಿದ್ದರೂ ಆಗಿಂದಾಗ್ಗೆ ಜೋರು ಮಳೆಯೂ ಬರುತ್ತಿರುತ್ತದೆ. ಸ್ವಿಟ್ಜರ್ಲೆಂಡ್‌‌ನ ಪೂರ್ವ ಭಾಗವು ಪಶ್ಚಿಮ ಭಾಗಕ್ಕಿಂತ ಹೆಚ್ಚಿಗೆ ತಂಪಾಗಿದ್ದರೂ, ಯಾವುದೇ ಪರ್ವತ ಪ್ರದೇಶಗಳ ಎತ್ತರದ ಭಾಗಗಳಲ್ಲಿ ವರ್ಷದ ಎಲ್ಲಾ ಸಮಯಗಳಲ್ಲಿಯೂ ತಂಪಾದ ಹವೆಯನ್ನು ಅನುಭವಿಸಬಹುದಾಗಿದೆ. ಹಿಮಪಾತವು ವಾರ್ಷಿಕವಾಗಿ ಸಮಾಂತರವಾಗಿ ಹರಡಿದ್ದರೂ ಸ್ಥಳೀಯ ಹವಾಮಾನಕ್ಕನುಗುಣವಾಗಿ ವಿವಿಧ ಋತುಗಳಲ್ಲಿ ಅಲ್ಪ ವ್ಯತ್ಯಾಸಗಳಾಗುತ್ತಿರುತ್ತವೆ. ಶರತ್ಕಾಲವು ಸಾಮಾನ್ಯವಾಗಿ ಅತಿ ಹೆಚ್ಚಿನ ಒಣ ಋತುವಾಗಿದ್ದು, ಸ್ವಿಟ್ಜರ್ಲೆಂಡ್‌‌ನ ಹವಾಗುಣದ ವೈವಿಧ್ಯತೆಯು ವರ್ಷದಿಂದ ವರ್ಷಕ್ಕೆ ಬದಲಾಯಿಸುವುದರಿಂದ ಮುನ್ಸೂಚನೆ ನೀಡುವುದು ಕಷ್ಟದಾಯಕ. ಸ್ವಿಟ್ಜರ್ಲೆಂಡ್‌‌ನ ಪರಿಸರ ವ್ಯವಸ್ಥೆಯು ಸೂಕ್ಷ್ಮ ಪರಿಸರವನ್ನು ಹೊಂದಿದ್ದು, ಎತ್ತರದ ಪರ್ವತಗಳಿಂದ ಪ್ರತ್ಯೇಕಿಸಲ್ಪಟ್ಟ ಅನೇಕ ಸೂಕ್ಷ್ಮ ಕಣಿವೆಗಳನ್ನು ಹೊಂದಿವೆ. ಅನೇಕ ಬಾರಿ ಇದು ಪ್ರತ್ಯೇಕವಾದ ಪರಿಸರ ವ್ಯವಸ್ಥೆಗೆ ಕಾರಣೀಭೂತವಾಗಿರುತ್ತದೆ. ಪರ್ವತ ಪ್ರದೇಶಗಳೇ ಸಾಕಷ್ಟು ಮಟ್ಟಿಗೆ ಸೂಕ್ಷ್ಮ ಪರಿಸರವನ್ನು ಹೊಂದಿರುತ್ತವೆ. ಇಂತಹಾ ಪ್ರದೇಶಗಳು, ಇತರೆ ಎತ್ತರದ ಸ್ಥಳಗಳಲ್ಲಿ ಅಲಭ್ಯವಾಗಿರುವ ಅನೇಕ ಶ್ರೀಮಂತ ಸಸ್ಯ ಪ್ರಭೇದಗಳನ್ನು ಹೊಂದಿರುವುದಲ್ಲದೇ ಸ್ಥಳ ಭೇಟಿಗೆ ಬರುವ ಸಂದರ್ಶಕರಿಂದ ಹಾಗೂ ಪ್ರಾಣಿಗಳ ಮೇಯುವಿಕೆಯಿಂದ ಬಹಳಷ್ಟು ಒತ್ತಡವನ್ನು ಅನುಭವಿಸುತ್ತವೆ. ಸ್ವಿಟ್ಜರ್ಲೆಂಡ್‌‌ನ ಪರ್ವತ ಪ್ರದೇಶಗಳಲ್ಲಿನ ವೃಕ್ಷಗಳ ಸಾಲು ಇತ್ತೀಚಿನ ವರ್ಷಗಳಲ್ಲಿ ಪ್ರದೇಶದ ಕೆಳಭಾಗಕ್ಕೂ ವ್ಯಾಪಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪಶುಗಳ ಹಿಂಡಿನ ಹಾಗೂ ಅವುಗಳ ಮೇಯುವಿಕೆಯಿಂದುಂಟಾಗುತ್ತಿದ್ದ ಒತ್ತಡದ ಇಳಿಕೆ. ವಾಣಿಜ್ಯ ಸ್ವಿಟ್ಜರ್ಲೆಂಡ್‌‌ ಆಧುನಿಕ ಮತ್ತು ವಿಶ್ವದಲ್ಲೇ ಅತ್ಯಧಿಕ ಬಂಡವಾಳಶಾಹಿ ಆರ್ಥಿಕತೆಯನ್ನು ಹೊಂದಿರುವುದಲ್ಲದೇ ಸ್ಥಿರತೆಯನ್ನು ಸಹಾ ಕಾಪಾಡಿಕೊಂಡಿದೆ. ಈ ರಾಷ್ಟ್ರವು ಐರ್‌ಲೆಂಡ್‌ನ್ನು ಬಿಟ್ಟರೆ ಎರಡನೇ ಉನ್ನತ ಐರೋಪ್ಯ ಶ್ರೇಯಾಂಕವನ್ನು ಆರ್ಥಿಕ ಸ್ವಾತಂತ್ರ್ಯ 2008ರ ಪಟ್ಟಿ(ಪರಿವಿಡಿ)ಯಲ್ಲಿ ಹೊಂದಿರುವುದಲ್ಲದೇ, ಸಾರ್ವಜನಿಕ ಸೇವೆಗಳ ಮೂಲಕ ಹೆಚ್ಚಿನ ಪ್ರಮಾಣದ ವ್ಯಾಪಕತೆಯನ್ನು ಹೊಂದಿದೆ. ದೊಡ್ಡದಾದ ಪಾಶ್ಚಿಮಾತ್ಯ ಐರೋಪ್ಯ ಮತ್ತು ಜಪಾನ್‌ ಆರ್ಥಿಕತೆಗಳಿಗಿಂತ ಹೆಚ್ಚಿನ ನಾಮಮಾತ್ರ ತಲಾ GDPಯನ್ನು ಹೊಂದಿದ್ದು, ಲಕ್ಸೆಂಬರ್ಗ್‌, ನಾರ್ವೆ, ಕತಾರ್‌, ಐಸ್‌ಲೆಂಡ್‌ ಮತ್ತು ಐರ್‌ಲೆಂಡ್‌ಗಳ ನಂತರ 6ನೇ ಶ್ರೇಯಾಂಕವನ್ನು ಪಡೆದಿದೆ. ] ಖರೀದಿ ಸಾಮರ್ಥ್ಯದ ಹೋಲಿಕೆಗೆ ಹೊಂದಿಸಿದರೆ, ಸ್ವಿಟ್ಜರ್ಲೆಂಡ್‌‌ ತಲಾ GDPಯ ಪ್ರಕಾರ ವಿಶ್ವದಲ್ಲೇ 15ನೇ ಶ್ರೇಯಾಂಕವನ್ನು ಪಡೆಯುತ್ತದೆ. ವಿಶ್ವ ಆರ್ಥಿಕ ಸಂಘಟನೆಯ ವಿಶ್ವ ಸ್ಪರ್ಧಾತ್ಮಕತೆಯ ವರದಿಯು ಸ್ವಿಟ್ಜರ್ಲೆಂಡ್‌‌ನ ಆರ್ಥಿಕತೆಯ ಸ್ಪರ್ಧಾತ್ಮಕತೆಗೆ ಪ್ರಸಕ್ತ ವಿಶ್ವದಲ್ಲೇ ಎರಡನೇ ಅತಿ ಹೆಚ್ಚಿನ ಶ್ರೇಯಾಂಕವನ್ನು ನೀಡಿದೆ. 20ನೇ ಶತಮಾನದ ಬಹುಭಾಗದಲ್ಲಿ, ಸ್ವಿಟ್ಜರ್ಲೆಂಡ್‌‌ ಗಮನಾರ್ಹ ವ್ಯತ್ಯಾಸ ದೊಂದಿಗೆ ಯೂರೋಪ್‌ನ ಅತಿ ಶ್ರೀಮಂತ ರಾಷ್ಟ್ರವಾಗಿತ್ತು. 2005ರಲ್ಲಿ ಸ್ವಿಟ್ಜರ್ಲೆಂಡ್‌‌ನಲ್ಲಿನ ಮಧ್ಯಮ ಕೌಟುಂಬಿಕ ಆದಾಯವನ್ನು 95,000 CHF ಎಂದು ಅಂದಾಜಿಸಲಾಗಿತ್ತು, ಇದು ಖರೀದಿ ಸಾಮರ್ಥ್ಯ ಹೋಲಿಕೆಯಲ್ಲಿ ಸರಿಸುಮಾರು 81,000 USD (ನವೆಂ. 2008ರ ವಿನಿಮಯ ದರದಂತೆ)ರಷ್ಟು ಆಗುತ್ತದೆ, ಕ್ಯಾಲಿಫೋರ್ನಿಯಾದಂತಹಾ ಶ್ರೀಮಂತ ಅಮೇರಿಕನ್‌ ಸಂಸ್ಥಾನಗಳಿಗೆ ಸಮಾನವಾಗುತ್ತದೆ. ಸ್ವಿಟ್ಜರ್ಲೆಂಡ್‌‌ ಅನೇಕ ಬಹುದೊಡ್ಡ ಅಂತರರಾಷ್ಟ್ರೀಯ ಸಂಘಟನೆಗಳಿಗೆ ನೆಲೆಯಾಗಿದೆ. ಆದಾಯದ ಪ್ರಕಾರ ಅತಿ ದೊಡ್ಡ ಸ್ವಿಸ್ ಕಂಪೆನಿಗಳೆಂದರೆ ಗ್ಲೆನ್‌ಕೋರ್‌, ನೆಸ್ಲೆ, ನೊವಾರ್ಟಿಸ್‌, ಹಾಫ್‌ಮನ್‌-ಲಾ ರೋಕೆ, ABB ಮತ್ತು ಅಡೆಕ್ಕೋಗಳು. ಗಮನಾರ್ಹವಾದ ಉಳಿದ ಕಂಪೆನಿಗಳೆಂದರೆ UBS AG, ಜ್ಯೂರಿಚ್‌ ವಾಣಿಜ್ಯ ಸೇವೆಗಳು, ಕ್ರೆಡಿಟ್‌ ಸ್ಯೂಸ್ಸೆ, ಸ್ವಿಸ್ ರೇ, ಮತ್ತು ಸ್ವಾಚ್‌ ಸಮೂಹ. ಸ್ವಿಟ್ಜರ್ಲೆಂಡ್‌‌ ವಿಶ್ವದಲ್ಲೇ ಅತ್ಯಂತ ಸಶಕ್ತವಾದ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರವಾಗಿ ಶ್ರೇಯಾಂಕಿತವಾಗಿದೆ. ರಾಸಾಯನಿಕ, ಆರೋಗ್ಯ ಮತ್ತು ಔಷಧೀಯ, ಅಳತೆಯ ಉಪಕರಣಗಳು, ಸಂಗೀತ ಉಪಕರಣಗಳು, ಸ್ಥಿರಾಸ್ತಿ, ಬ್ಯಾಂಕಿಂಗ್‌ ಮತ್ತು ವಿಮೆ, ಪ್ರವಾಸೋದ್ಯಮ, ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಸ್ವಿಟ್ಜರ್ಲೆಂಡ್‌‌ನ ಪ್ರಮುಖ ಕೈಗಾರಿಕೆಗಳಾಗಿವೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ಸರಕೆಂದರೆ ರಾಸಾಯನಿಕಗಳು (ರಫ್ತಾಗುವ ಸರಕುಗಳ 34%ರಷ್ಟು), ಯಂತ್ರಗಳು/ವಿದ್ಯುನ್ಮಾನ ಉಪಕರಣಗಳು (20.9%ರಷ್ಟು), ಮತ್ತು ನಿಷ್ಕೃಷ್ಟ ಅಳತೆಯ ಉಪಕರಣಗಳು/ಕೈಗಡಿಯಾರಗಳು (16.9%ರಷ್ಟು). ರಫ್ತಾಗುವ ಸೇವೆಗಳು ರಫ್ತಾಗುವ ಸರಕುಗಳ ಮೂರನೇ ಒಂದರಷ್ಟು ವಿನಿಮಯ ಗಳಿಸುತ್ತವೆ. ಸ್ವಿಟ್ಜರ್ಲೆಂಡ್‌‌ನಲ್ಲಿ ಸುಮಾರು 3.8 ಮಿಲಿಯನ್‌ ಮಂದಿ ಕೆಲಸ ಮಾಡುತ್ತಾರೆ. ಸ್ವಿಟ್ಜರ್ಲೆಂಡ್‌‌ ನೆರೆಹೊರೆಯ ರಾಷ್ಟ್ರಗಳಿಗಿಂತ ಹೆಚ್ಚಿನ ಹೊಂದಿಕೆಯಾಗಬಲ್ಲ ಔದ್ಯೋಗಿಕ ಮಾರುಕಟ್ಟೆಯನ್ನು ಹೊಂದಿರುವುದರಿಂದ ಇಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆ ಪ್ರಮಾಣದಲ್ಲಿದೆ. ನಿರುದ್ಯೋಗದ ಪ್ರಮಾಣವು ಜೂನ್‌ 2000ರಲ್ಲಿನ 1.7%ನಷ್ಟು ಕಡಿಮೆ ಪ್ರಮಾಣದಿಂದ, 3.9%ರಷ್ಟು ಶೃಂಗ ಪ್ರಮಾಣಕ್ಕೆ ಸೆಪ್ಟೆಂಬರ್‌ 2004ರಲ್ಲಿ ತಲುಪಿತು. ಇದು ಭಾಗಶಃ 2003ರ ಮಧ್ಯದಲ್ಲಿನ ಆರ್ಥಿಕ ಸ್ಥಿತ್ಯಂತರದಿಂದಾಗಿದ್ದು, ಪ್ರಸಕ್ತ ನಿರುದ್ಯೋಗ ಪ್ರಮಾಣವು ಏಪ್ರಿಲ್‌ 2009ರ ಗಣನೆಯಂತೆ 3.4%ರಷ್ಟಿದೆ. ವಲಸೆಯಿಂದಾದ ನಿವ್ವಳ ಜನಸಂಖ್ಯಾ ಏರಿಕೆಯು ಸಾಕಷ್ಟು ಹೆಚ್ಚಿದ್ದು 2004ರಲ್ಲಿ ಜನಸಂಖ್ಯೆಯ 0.52%ರಷ್ಟಿತ್ತು. ವಿದೇಶಿ ನಾಗರಿಕರ ಜನಸಂಖ್ಯೆಯು 2004 ರ ಹೊತ್ತಿಗೆ 21.8%ರಷ್ಟಿದ್ದು, ಇದು ಆಸ್ಟ್ರೇಲಿಯಾದ ಪ್ರಮಾಣಕ್ಕೆ ಸಮಾನವಾಗಿದೆ. ಕಾರ್ಯನಿರತ ಪ್ರತಿ ಗಂಟೆಯ GDPಯು ವಿಶ್ವದಲ್ಲೇ 17ನೇ ಹೆಚ್ಚಿನ ಪ್ರಮಾಣದ್ದಾಗಿದ್ದು, 2006ರಲ್ಲಿ 27.44 ಅಂತರರಾಷ್ಟ್ರೀಯ ಡಾಲರ್‌ಗಳಷ್ಟಿತ್ತು. ಸ್ವಿಟ್ಜರ್ಲೆಂಡ್‌‌ ಅಗಾಧವಾದ ಖಾಸಗಿ ವಲಯದ ಆರ್ಥಿಕತೆಯನ್ನು ಹೊಂದಿದ್ದು ಪಾಶ್ಚಿಮಾತ್ಯ ಮಾನದಂಡಗಳ ಪ್ರಕಾರ ಅತಿ ಕಡಿಮೆ ತೆರಿಗೆ ದರಗಳನ್ನು ಹೊಂದಿದೆ; ಒಟ್ಟಾರೆ ತೆರಿಗೆಯ ಪ್ರಮಾಣವು ಅಭಿವೃದ್ಧಿ ಹೊಂದಿದ ದೇಶಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಸ್ವಿಟ್ಜರ್ಲೆಂಡ್‌‌ ಉದ್ದಿಮೆ ನಡೆಸಲು ಸುಲಭವಾದ ಸ್ಥಳವಾಗಿದೆ; ಸರಾಗ ಉದ್ದಿಮೆ ಸ್ಥಾಪನೆಯ ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್‌‌ 178 ರಾಷ್ಟ್ರಗಳಲ್ಲಿ 16ನೇ ಶ್ರೇಯಾಂಕವನ್ನು ಪಡೆದಿದೆ. ಸ್ವಿಟ್ಜರ್ಲೆಂಡ್‌‌ 1990ರ ದಶಕದಲ್ಲಿ ಪ್ರಗತಿಯಲ್ಲಿ ನಿಧಾನ ಗತಿಯನ್ನು ಕಂಡಿತು. 2000ನೇ ದಶಕದ ಆರಂಭದಲ್ಲಿ ಆರ್ಥಿಕ ಸುಧಾರಣೆಗಳಿಗೆ ಹೆಚ್ಚಿನ ಬೆಂಬಲ ದೊರಕಿತು ಮತ್ತು ಐರೋಪ್ಯ ಒಕ್ಕೂಟದ ಜೊತೆಗೆ ಸಾಮರಸ್ಯ ಹೊಂದಲು ಸಾಧ್ಯವಾಯಿತು. ಕ್ರೆಡಿಟ್‌ ಸ್ಯೂಸ್ಸೆನ ಪ್ರಕಾರ, ಕೇವಲ ಸುಮಾರು 37%ರಷ್ಟು ಜನರು ಮಾತ್ರ ಸ್ವಂತ ಗೃಹಗಳನ್ನು ಹೊಂದಿದ್ದು, ಇದು ಯೂರೋಪ್‌ನಲ್ಲಿ ಅತಿ ಕಡಿಮೆ ಗೃಹ ಮಾಲಿಕತ್ವದ ಪ್ರಮಾಣವಾಗಿದೆ. ಜರ್ಮನಿಯ 113% ಮತ್ತು 104%ರ ಪ್ರಮಾಣಕ್ಕೆ ಹೋಲಿಸಿದಾಗ ಗೃಹಬಳಕೆ ಮತ್ತು ಆಹಾರ ಬೆಲೆ ಪ್ರಮಾಣಗಳು 2007ರಲ್ಲಿನ EU-25 ಪಟ್ಟಿಯ ಪ್ರಕಾರ 171% ಮತ್ತು 145%ರಷ್ಟಿದೆ. ಸ್ವಿಟ್ಜರ್ಲೆಂಡ್‌‌ನ ಮುಕ್ತ ವ್ಯಾಪಾರ ನೀತಿಗೆ ಹೊರತಾಗಿರುವ ಕೃಷಿ ಸಂರಕ್ಷಣೆ ವ್ಯವಸ್ಥೆಯು ಹೆಚ್ಚಿದ ಆಹಾರ ಬೆಲೆಗಳಿಗೆ ಮೂಲ ಕಾರಣವಾಗಿದೆ. OECD ಯ ಪ್ರಕಾರ ಉತ್ಪಾದನಾ ಮಾರುಕಟ್ಟೆಯ ಉದಾರೀಕರಣವು ಅನೇಕ EU ರಾಷ್ಟ್ರಗಳಿಗೆ ಹೋಲಿಸಿದರೆ ಹಿನ್ನಡೆಯಲ್ಲಿದೆ. ಇಷ್ಟೆಲ್ಲಾ ಆದರೂ, ದೇಶೀಯ ಖರೀದಿ ಸಾಮರ್ಥ್ಯವು ವಿಶ್ವದಲ್ಲೇ ಅತ್ಯುತ್ತಮವಾದುದಾಗಿದೆ. ಕೃಷಿಯನ್ನು ಹೊರತುಪಡಿಸಿದರೆ, ಐರೋಪ್ಯ ಒಕ್ಕೂಟ ಮತ್ತು ಸ್ವಿಟ್ಜರ್ಲೆಂಡ್‌‌ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಪ್ರತಿಬಂಧಕಗಳ ಪ್ರಮಾಣ ಕಡಿಮೆ ಎಂದೇ ಹೇಳಬಹುದು. ಇಷ್ಟೇ ಅಲ್ಲದೇ ಸ್ವಿಟ್ಜರ್ಲೆಂಡ್ ವಿಶ್ವದಾದ್ಯಂತ ಮುಕ್ತ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಸ್ವಿಟ್ಜರ್ಲೆಂಡ್‌‌ ಐರೋಪ್ಯ ಮುಕ್ತ ವ್ಯಾಪಾರ ಸಂಘದ (EFTA) ಸದಸ್ಯ ರಾಷ್ಟ್ರವಾಗಿದೆ. ಶಿಕ್ಷಣ ವಿಜ್ಞಾನ ಮತ್ತು ತಂತ್ರಜ್ಞಾನ ಸ್ವಿಟ್ಜರ್ಲೆಂಡ್‌‌ನ ಸಂವಿಧಾನವು ಶಾಲಾ ವ್ಯವಸ್ಥೆಯ ಜವಾಬ್ದಾರಿಯನ್ನು ಕ್ಯಾಂಟನ್‌ಗಳಿಗೆ ವಹಿಸಿರುವುದರಿಂದ ಸ್ವಿಟ್ಜರ್ಲೆಂಡ್‌ನ‌ಲ್ಲಿನ ಶಿಕ್ಷಣ ವ್ಯವಸ್ಥೆಯು ವೈವಿಧ್ಯಮಯವಾಗಿದೆ. ಅಲ್ಲಿ ಅನೇಕ ಖಾಸಗಿ ಅಂತರರಾಷ್ಟ್ರೀಯ ಶಾಲೆಗಳೂ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಎರಡೂ ಮಾದರಿಯ ಶಾಲೆಗಳಿವೆ. ಎಲ್ಲಾ ಕ್ಯಾಂಟನ್‌ಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಕನಿಷ್ಟ ವಯಸ್ಸು ಆರು ವರ್ಷಗಳೆಂದು ನಿಗದಿಪಡಿಸಲಾಗಿದೆ. ಶಾಲೆಗಳ ಮೇಲೆ ಆಧಾರಿತವಾಗಿ ಪ್ರಾಥಮಿಕ ಶಿಕ್ಷಣವು ನಾಲ್ಕು ಅಥವಾ ಐದನೇ ತರಗತಿಯವರೆಗೆ ಮುಂದುವರೆಯುತ್ತದೆ. ಸಾಂಪ್ರದಾಯಿಕವಾಗಿ ಶಾಲೆಗಳಲ್ಲಿ ಕಲಿಸುವ ಪ್ರಥಮ ವಿದೇಶಿ ಭಾಷೆಯು ಸಾಮಾನ್ಯವಾಗಿ ಇತರೆ ರಾಷ್ಟ್ರಗಳ ರಾಷ್ಟ್ರಭಾಷೆಯಾಗಿದ್ದರೂ, ಇತ್ತೀಚೆಗೆ (2000ರಲ್ಲಿ) ಕೆಲ ಕ್ಯಾಂಟನ್‌ಗಳು ಮೊದಲಿಗೆ ಆಂಗ್ಲ ಭಾಷೆಯನ್ನು ಪ್ರಪ್ರಥಮ ಬಾರಿಗೆ ಪರಿಚಯಿಸಿದವು. ಪ್ರಾಥಮಿಕ ಶಿಕ್ಷಣದ ಕೊನೆಗೆ (ಅಥವಾ ಮಾಧ್ಯಮಿಕ ಶಿಕ್ಷಣದ ಆರಂಭದಲ್ಲಿ), ವಿದ್ಯಾರ್ಥಿಗಳು ಅವರವರ ಸಾಮರ್ಥ್ಯಾನುಸಾರವಾಗಿ, ಅನೇಕ (ಸಾಧಾರಣವಾಗಿ ಮೂರು) ವಿಭಾಗಗಳಲ್ಲಿ ಪ್ರತ್ಯೇಕಿಸಲ್ಪಡುತ್ತಾರೆ. ವೇಗವಾಗಿ ಕಲಿಯಬಲ್ಲ ವಿದ್ಯಾರ್ಥಿಗಳು ಉನ್ನತ ತರಬೇತಿಗಳನ್ನು ಪಡೆದು ಉನ್ನತ ಶಿಕ್ಷಣಕ್ಕಾಗಿ ಹಾಗೂ ಮತುರಾ ಗೆಂದು ತಯಾರಾಗುತ್ತಾರೆ. ಆದರೆ ಸ್ವಲ್ಪ ನಿಧಾನವಾಗಿ ವಿದ್ಯೆಯನ್ನು ಅರಗಿಸಿಕೊಳ್ಳುವ ವಿದ್ಯಾರ್ಥಿಗಳು, ಹೆಚ್ಚಿನ ಮಟ್ಟಿಗೆ ಅವರವರ ಅಗತ್ಯಕ್ಕನುಸಾರವಾಗಿ ಅಳವಡಿಸಿದ ಶಿಕ್ಷಣವನ್ನು ಪಡೆಯುತ್ತಾರೆ. ಸ್ವಿಟ್ಜರ್ಲೆಂಡ್‌‌ನಲ್ಲಿ ಒಟ್ಟು 12 ವಿಶ್ವವಿದ್ಯಾಲಯಗಳಿದ್ದು, ಅವುಗಳಲ್ಲಿ ಹತ್ತು ವಿವಿಗಳನ್ನು ಕ್ಯಾಂಟನ್ ಮಟ್ಟದಲ್ಲಿ ನಿರ್ವಹಿಸಲಾಗುವುದಲ್ಲದೇ, ಸಾಧಾರಣವಾಗಿ ತಾಂತ್ರಿಕವಲ್ಲದ ವಿಷಯಗಳನ್ನು ಕಲಿಸಲಾಗುತ್ತದೆ. ಬಸೆಲ್‌ ನಲ್ಲಿ ಸ್ವಿಟ್ಜರ್ಲೆಂಡ್‌‌ನ ಪ್ರಥಮ ವಿಶ್ವವಿದ್ಯಾಲಯವನ್ನು 1460ರಲ್ಲಿ (ಔಷಧೀಯ ಬೋಧನಾಂಗದೊಂದಿಗೆ) ಸ್ಥಾಪಿಸಲಾಯಿತು. ಈ ನಗರವು ಸ್ವಿಟ್ಜರ್ಲೆಂಡ್‌ನಲ್ಲಿ ರಾಸಾಯನಿಕ ಮತ್ತು ವೈದ್ಯಕೀಯ ‌‌ಸಂಶೋಧನೆಗಳ ಪರಂಪರೆಯನ್ನು ಹೊಂದಿದೆ. ಸರಿಸುಮಾರು 25,000 ವಿದ್ಯಾರ್ಥಿಗಳಿರುವ ಜ್ಯೂರಿಚ್‌ ವಿಶ್ವವಿದ್ಯಾಲಯವು ಸ್ವಿಟ್ಜರ್ಲೆಂಡ್‌‌ನ ಅತಿ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಒಕ್ಕೂಟ ಸರ್ಕಾರದಿಂದ ಆರ್ಥಿಕ ಬೆಂಬಲವನ್ನು ಪಡೆದ ಎರಡು ಸಂಸ್ಥೆಗಳೆಂದರೆ (1855ರಲ್ಲಿ ಸ್ಥಾಪಿತವಾದ)ಜ್ಯೂರಿಚ್‌ನ ETHZ ಮತ್ತು ಲಾಸನ್ನೆಯ EPFL (1969ರಲ್ಲಿ ಸ್ಥಾಪಿತವಾಗಿದ್ದರೂ, ಮೊದಲು ಲಾಸನ್ನೆ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿತ್ತು). ಇವೆರಡೂ ಸಂಸ್ಥೆಗಳು ಉತ್ತಮ ಅಂತರರಾಷ್ಟ್ರೀಯ ಪ್ರಖ್ಯಾತಿಯನ್ನು ಪಡೆದಿವೆ. 2008ರಲ್ಲಿ ಜ್ಯೂರಿಚ್‌ನ ETH ಪ್ರಕೃತಿ ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ಶಾಂಘಾಯ್‌ ವಿಶ್ವದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಶ್ರೇಯಾಂಕ ದ ಪಟ್ಟಿಯಲ್ಲಿ 15ನೇ ಶ್ರೇಯಾಂಕವನ್ನು ಪಡೆದರೆ, ಲಾಸನ್ನೆಯ EPFL ತಾಂತ್ರಿಕತೆ/ತಂತ್ರಜ್ಞಾನ ಮತ್ತು ಗಣಕ ವಿಜ್ಞಾನ ಕ್ಷೇತ್ರಗಳಲ್ಲಿ 18ನೇ ಸ್ಥಾನವನ್ನು ಅದೇ ಪಟ್ಟಿಯಲ್ಲಿ ಪಡೆಯಿತು. ಇವುಗಳಷ್ಟೇ ಅಲ್ಲದೇ ಅನೇಕ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯಗಳೂ ಇವೆ. ಪದವಿ ಪೂರ್ವ ಹಾಗೂ ನಂತರದ ಶಿಕ್ಷಣದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಸ್ಟ್ರೇಲಿಯಾ ನಂತರದ ಎರಡನೇ ಅತಿ ದೊಡ್ಡ ಸ್ಥಾನವನ್ನು ಸ್ವಿಟ್ಜರ್ಲೆಂಡ್‌‌ ಹೊಂದಿದೆ. ವಿಶ್ವವಿಖ್ಯಾತ ಭೌತವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌ರು ಬರ್ನ್‌ನಲ್ಲಿ ಕಾರ್ಯಪ್ರವೃತ್ತರಾಗಿದ್ದಾಗ ಸಂಶೋಧಿಸಿದ ಸಾಪೇಕ್ಷತಾ ಸಿದ್ಧಾಂತಕ್ಕಾಗಿ ನೀಡಿದ ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯೂ ಸೇರಿದಂತೆ ಅನೇಕ ನೊಬೆಲ್‌ ಪ್ರಶಸ್ತಿಗಳನ್ನು ಸ್ವಿಸ್ ವಿಜ್ಞಾನಿಗಳಿಗೆ ನೀಡಲಾಗಿದೆ. ಇತ್ತೀಚಿನ ವ್ಲಾಡಿಮಿರ್‌ ಪ್ರಿಲಾಗ್‌, ಹೇನ್‌ರಿಕ್‌ ಅರ್ನೆಸ್ಟ್‌, ರಿಚರ್ಡ್‌ ಅರ್ನೆಸ್ಟ್‌, ಎಡ್ಮಂಡ್‌ ಫಿಶರ್‌, ರಾಲ್ಫ್‌ ಜಿಂಕರ್‌ನ್ಯಾಗೆಲ್‌ ಮತ್ತು ಕುರ್ಟ್‌ ವುತ್ರಿಚ್‌ಗಳು ಸಹಾ ವೈಜ್ಞಾನಿಕ ಸಂಶೋಧನೆಗಳಿಗೆ ನೊಬೆಲ್‌ ಪ್ರಶಸ್ತಿಯನ್ನು ಪಡೆದರು. ಒಟ್ಟಾರೆಯಾಗಿ ಸ್ವಿಟ್ಜರ್ಲೆಂಡ್‌‌ನೊಂದಿಗೆ ಸಂಬಂಧಿಸಿದ 113 ನೊಬೆಲ್‌ ಪ್ರಶಸ್ತಿ ವಿಜೇತರಿದ್ದಾರೆ ಮತ್ತು ಸ್ವಿಟ್ಜರ್ಲೆಂಡ್‌‌ನಲ್ಲಿರುವ ಸಂಸ್ಥೆಗಳಿಗೆ 9 ಬಾರಿ ನೊಬೆಲ್‌ ಶಾಂತಿ ಪ್ರಶಸ್ತಿ ಸಂದಿದೆ. ಜಿನೀವಾ ಕಣ ಭೌತಶಾಸ್ತ್ರದ ಸಂಶೋಧನೆಗೆಂದು ಮೀಸಲಾದ ವಿಶ್ವದ ಅತಿ ದೊಡ್ಡ ಪ್ರಯೋಗಾಲಯವಾದ CERN ನ್ನು ಹೊಂದಿದೆ. ಮತ್ತೊಂದು ಪ್ರಮುಖ ಸಂಶೋಧನಾ ಕೇಂದ್ರವೆಂದರೆ ಪಾಲ್‌ ಷೆರ್ರರ್‌ ಸಂಸ್ಥೆ. ಗಮನಾರ್ಹ ಅವಿಷ್ಕಾರಗಳೆಂದರೆ ಲಿಸರ್ಜಿಕ್‌ ಆಸಿಡ್‌ ಡೈಥೈಲಮೈಡ್‌ (LSD), ಸ್ಕ್ಯಾನಿಂಗ್‌ ಟನಲಿಂಗ್‌ ಸೂಕ್ಷ್ಮದರ್ಶಕ (ನೊಬೆಲ್‌ ಪ್ರಶಸ್ತಿ ವಿಜೇತ) ಅಥವಾ ಬಹು ಜನಪ್ರಿಯ ವೆಲ್ಕ್ರೋ. ಆಗಸ್ಟೆ ಪಿಕ್ಕಾರ್ಡ್‌ನ ಒತ್ತಡೀಕೃತ ಬಲೂನ್‌ ಮತ್ತು ಜ್ಯಾಕ್ವಿಸ್‌ ಪಿಕ್ಕಾರ್ಡ್‌ಗೆ ವಿಶ್ವದ ಸಾಗರಗಳ ಆಳದ ತಾಣವನ್ನು ಮುಟ್ಟಲು ಸಾಧ್ಯವಾಗಿಸಿದ ಬ್ಯಾಥಿಸ್ಕೇಫ್‌ನಂತಹಾ ಕೆಲವೊಂದು ತಂತ್ರಜ್ಞಾನಗಳು ಹೊಸದೊಂದು ಲೋಕವನ್ನೇ ತೆರೆದವು. ಸ್ವಿಟ್ಜರ್ಲೆಂಡ್‌‌ ಬಾಹ್ಯಾಕಾಶ ಸಂಸ್ಥೆ ಎಂಬ ಸ್ವಿಸ್ ಬಾಹ್ಯಾಕಾಶ ಕಚೇರಿಯು ಅನೇಕ ಬಾಹ್ಯಾಕಾಶ ತಂತ್ರಜ್ಞಾನಗಳು ಹಾಗೂ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದೆ. ಇದರೊಂದಿಗೆ ಈ ರಾಷ್ಟ್ರವು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯನ್ನು 1975ರಲ್ಲಿ ಸ್ಥಾಪಿಸಿದ 10 ರಾಷ್ಟ್ರಗಳಲ್ಲಿ ಒಂದಾಗಿರುವುದಲ್ಲದೇ, ESAನ ಒಟ್ಟು ಆಯವ್ಯಯದ ಏಳನೇ ಅತಿ ದೊಡ್ಡ ದೇಣಿಗೆದಾರನಾಗಿದೆ. ಖಾಸಗಿ ಕ್ಷೇತ್ರದಲ್ಲಿ, ಓರ್ಲಿಕೊನ್‌ ಸ್ಪೇಸ್‌ ಅಥವಾ ಗಗನ ನೌಕೆಯ ಭಾಗಗಳನ್ನು ಉತ್ಪಾದಿಸುವಂತಹಾ ಮ್ಯಾಕ್ಸನ್‌ ಮೋಟಾರ್ಸ್ ನಂತಹ ಅನೇಕ ಕಂಪೆನಿಗಳು ಬಾಹ್ಯಾಕಾಶ ಉದ್ದಿಮೆಯಲ್ಲಿ ತೊಡಗಿಕೊಂಡಿವೆ. ಸ್ವಿಟ್ಜರ್ಲೆಂಡ್‌‌ ಮತ್ತು ಐರೋಪ್ಯ ಒಕ್ಕೂಟ ಡಿಸೆಂಬರ್ 1992ರಲ್ಲಿ ಸ್ವಿಟ್ಜರ್ಲೆಂಡ್‌‌, ಐರೋಪ್ಯ ಆರ್ಥಿಕ ವಲಯದ ಸದಸ್ಯತ್ವದ ವಿರುದ್ಧ ಮತ ಹಾಕಿತು, ಆದರೂ ಇದು ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಐರೋಪ್ಯ ಒಕ್ಕೂಟ(EU) ಹಾಗೂ ಐರೋಪ್ಯ ರಾಷ್ಟ್ರಗಳ ಜೊತೆಗೆ ಒಳ್ಳೆಯ ಸಂಬಂಧವನ್ನು ಉಳಿಸಿಕೊಂಡು ಬಂದಿದೆ. ಮಾರ್ಚ್ 2001ರಲ್ಲಿ, EU ಜೊತೆಗೆ ಸೇರಲು ನಡೆಸಿದ ಮಾತುಕತೆಗೆ ವಿರುದ್ಧವಾಗಿ ಸ್ವಿಸ್ ಜನರು ಮತ ಹಾಕಿದರು. ಇತ್ತೀಚಿನ ವರ್ಷಗಳಲ್ಲಿ, ಸ್ವಿಸ್ ತನ್ನ ಆರ್ಥಿಕ ಪದ್ಧತಿಗಳ ವಿಚಾರದಲ್ಲಿ ಬಹಳಷ್ಟು ರೀತಿಯಲ್ಲಿ EUನ ಅನುಕರಣೆ ಮಾಡುತ್ತಿದ್ದು ಅಂತರರಾಷ್ಟ್ರೀಯ ಪೈಪೋಟಿಯನ್ನು ಹೆಚ್ಚಿಸಲು ಪ್ರಯತ್ನ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸ್ಥಿತಿಯು ವರ್ಷಕ್ಕೆ 3%ರಷ್ಟು ಬೆಳೆಯುತ್ತಿದೆ. ಸ್ವಿಸ್ ಸರ್ಕಾರದ ಕೆಲವು ದೀರ್ಘಾವಧಿಯ ಉದ್ದೇಶಗಳಲ್ಲಿ ಸಂಪೂರ್ಣ EU ಸದಸ್ಯತ್ವವೂ ಕೂಡ ಒಂದಾಗಿದೆ, ಆದರೂ ಸಂಪ್ರದಾಯವಾದಿಗಳು SVP ಇದರ ವಿರುದ್ದ ಧ್ವನಿಯೆತ್ತಿದ್ದಾರೆ. ದಕ್ಷಿಣದ ಫ್ರೆಂಚ್-ಭಾಷಿಕ ವಲಯಗಳು ಹಾಗೂ ದೇಶದ ಕೆಲವು ನಗರ ವಲಯಗಳು EU ಕಡೆಗೆ ಹೆಚ್ಚು ಒಲವು ತೋರಿದಂತೆ ಕಂಡರೂ, ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಅದರ ಪ್ರಮಾಣ ನಗಣ್ಯವಾಗಿದೆ. ಏಕೀಕರಣದ ಕಾರ್ಯಾಲಯವನ್ನು ಸರ್ಕಾರವು ವಿದೇಶಾಂಗ ಇಲಾಖೆ ಮತ್ತು ಆರ್ಥಿಕ ಇಲಾಖೆಗಳಡಿ ಬರುವಂತೆ ರಚಿಸಿದೆ. ಸ್ವಿಟ್ಜರ್ಲೆಂಡ್‌‌‌ನ ಪ್ರತ್ಯೇಕೀಕರಣದಿಂದಾಗುವ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಿ ವ್ಯಾಪಾರವನ್ನು ಮತ್ತಷ್ಟು ಉದಾರೀಕರಣಗೊಳಿಸಲು ಯುರೋಪ್‌ನ ಉಳಿದ ಭಾಗ, ಬರ್ನ್‌ ಮತ್ತು ಬ್ರುಸೆಲ್ಸ್‌ನಲ್ಲಿ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. 1999ರಲ್ಲೇ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತಾದರೂ 2001ರಿಂದೀಚೆಗೆ ಕಾರ್ಯಗತಗೊಳಿಸಲಾಯಿತು. ಪ್ರಥಮ ಸರಣಿಯ ದ್ವಿಪಕ್ಷೀಯ ಒಪ್ಪಂದಗಳಲ್ಲಿ ಮಾನವ ಸಂಪನ್ಮೂಲಗಳ ಮುಕ್ತ ಸಂಚಾರ ಮತ್ತು 2004ರಲ್ಲಿ ಎರಡನೆ ಸರಣಿಯಲ್ಲಿ ಒಂಬತ್ತು ಕ್ಷೇತ್ರಗಳಿಗೆ ಅನುಮೋದನೆ ನೀಡಿ ಸಹಿ ಹಾಕಲಾಯಿತು. ಎರಡನೆ ಸರಣಿಯು ಷೆಂಗೆನ್‌‌‌‌ ಸಂಧಾನ ಮತ್ತು ಡಬ್ಲಿನ್ ಅಧಿವೇಶನಗಳನ್ನು ಒಳಗೊಂಡಿದ್ದು, ಮತ್ತಷ್ಟು ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಮಾತುಕತೆಯನ್ನು ಮುಂದುವರಿಸಿದ್ದಾರೆ. 2006ರಲ್ಲಿ, ಸ್ವಿಟ್ಜರ್ಲೆಂಡ್‌‌ ಪೂರ್ವ ಯುರೋಪ್‌ನ ಬಡ ದೇಶಗಳ ಮತ್ತು ಸಮಗ್ರ EUನ ಬೆಳವಣಿಗೆಗೆ ಧನಾತ್ಮಕ ಒಪ್ಪಂದ ಹಾಗೂ ಸಹಕಾರಗಳ ಅಂಗವಾಗಿ ಒಂದು ಶತಕೋಟಿ ಫ್ರಾಂಕ್‍ಗಳ ಹೂಡಿಕೆಗೆ ಒಪ್ಪಿಕೊಂಡಿತು‌. ಇನ್ನಷ್ಟು ಜನಾಭಿಪ್ರಾಯ ದೊರೆತ ನಂತರ ರೊಮೇನಿಯಾ ಮತ್ತು ಬಲ್ಗೇರಿಯಾಗಳಿಗೆ 300 ದಶಲಕ್ಷ ಫ್ರಾಂಕ್‌ಗಳ ಸಹಕಾರ ನೀಡುವುದಾಗಿ ತಿಳಿಸಿದೆ. ಹಲವು ಬಾರಿ ಸ್ವಿಸ್‌, ತೆರಿಗೆ ದರಗಳನ್ನು ಹೆಚ್ಚಿಸಿ ಮತ್ತು ಬ್ಯಾಂಕಿಂಗ್ ದತ್ತದ ರಹಸ್ಯ ವ್ಯವಸ್ಥೆಯನ್ನು ಸಡಿಲಗೊಳಿಸಿ EUನಾದ್ಯಂತ ಸಮಾನತೆ ಕಾಯ್ದುಕೊಳ್ಳುವಂತೆ EU ಮತ್ತು ಅಂತರರಾಷ್ಟ್ರೀಯ ಸಮುದಾಯಗಳು ಒತ್ತಡ ಹೇರಿವೆ. ವಿದ್ಯುಚ್ಛಕ್ತಿ ಮಾರುಕಟ್ಟೆಯನ್ನು ಮುಕ್ತವಾಗಿಸುವುದು, ಐರೋಪ್ಯ GNSS ಗೆಲಿಲಿಯೋ ಯೋಜನೆಗಳಲ್ಲಿ ಭಾಗಿಯಾಗುವುದು, ಐರೋಪ್ಯ ರೋಗ ನಿಯಂತ್ರಣ ಮತ್ತು ಆಹಾರೋತ್ಪನ್ನಗಳ ಮಾನ್ಯತೆ ದೃಢೀಕರಣ ಕೇಂದ್ರಕ್ಕೆ ಸಹಕಾರ ನೀಡುವುದೂ ಸೇರಿದಂತೆ ನಾಲ್ಕು ವಲಯಗಳಲ್ಲಿ ಪ್ರಸಕ್ತವಾಗಿ ಪೂರ್ವಭಾವಿ ಮಾತುಕತೆಗಳು ನಡೆಯುತ್ತಿವೆ. ಐರೋಪ್ಯ ಒಕ್ಕೂಟದ ಗೃಹ ಖಾತೆ ಸಚಿವಾಲಯ ಡಿಸೆಂಬರ್ 12 2008ರಿಂದ, ಸ್ವಿಟ್ಜರ್ಲೆಂಡ್‌‌‌ಗೆ ಷೆಂಗೆನ್‌‌ ಪಾಸ್‌ಪೋರ್ಟ್ ಮುಕ್ತ ವಲಯದ ಪ್ರವೇಶಾನುಮತಿ ನೀಡಲಾಗಿದೆ ಎಂದು ಬ್ರುಸೆಲ್ಸ್‌ನಲ್ಲಿ ನವಂಬರ್ 27 2008ರಂದು ಪ್ರಕಟಿಸಿತು. ಭೂ-ಗಡಿಯ ತಪಾಸಣಾ ಶಿಬಿರಗಳಲ್ಲಿನ ನಿಯಂತ್ರಣವು ಸರಕು ಸಾಗಾಟಗಳಿಗೆ ಮಾತ್ರ ಸೀಮಿತವಾಗಿದ್ದು ಜನರ ಓಡಾಟಕ್ಕೆ ಯಾವುದೇ ನಿಯಂತ್ರಣವಿರುವುದಿಲ್ಲ, ಆದರೆ 29 ಮಾರ್ಚ್ 2009ರ ತನಕ ಷೆಂಗೆನ್‌‌ ದೇಶದ ಪ್ರಜೆಗಳನ್ನು ಪಾಸ್‌ಪೋರ್ಟ್ ಹೊಂದಿರುವುದರ ಬಗ್ಗೆ ತಪಾಸಣೆಗೊಳಪಡಿಸಲಾಗುತ್ತದೆ. ಮೂಲಭೂತ ವ್ಯವಸ್ಥೆ ಮತ್ತು ಪರಿಸರ ಸ್ವಿಟ್ಜರ್ಲೆಂಡ್‌‌‌ನಲ್ಲಿ 56% ಜಲವಿದ್ಯುಚ್ಛಕ್ತಿಯಿಂದ 39% ಪರಮಾಣು ವಿದ್ಯುಚ್ಛಕ್ತಿಯಿಂದ, ಮತ್ತು 5%ರಷ್ಟು ಸಾಂಪ್ರದಾಯಿಕ ಶಕ್ತಿ ಮೂಲಗಳಿಂದ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತಿರುವುದರಿಂದ ಬಹುಪಾಲು ಇದು CO2-ಮುಕ್ತ ವಿದ್ಯುಚ್ಛಕ್ತಿ-ಉತ್ಪಾದನಾ ಜಾಲವಾಗಿದೆ. 18 ಮೇ 2003ರಲ್ಲಿ, ಮೊರಾಟೋರಿಯಂ ಪ್ಲಸ್‌ ಎಂಬ ಸಂಘಟನೆಯು ಉದ್ದೇಶಿಸಿದಂತೆ ಹೊಸ ಪರಮಾಣು ಶಕ್ತಿ ಸ್ಥಾವರ(41.6% ಬೆಂಬಲ ಮತ್ತು 58.4% ವಿರೋಧದೊಂದಿಗೆ) ಗಳ ನಿರ್ಮಾಣದ ಮೇಲೆ ನಿಷೇಧ ಮತ್ತು ಪರಮಾಣು ಬಳಕೆಯಿಲ್ಲದ ವಿದ್ಯುಚ್ಛಕ್ತಿ ಉತ್ಪಾದನೆ (33.7% ಬೆಂಬಲ ಮತ್ತು 66.3% ವಿರೋಧದೊಂದಿಗೆ) ಇವೆರಡೂ ಪರಮಾಣು ವಿರೋಧಿ ಚಟುವಟಿಕೆಗಳು ಸ್ಥಗಿತಗೊಂಡವು. ಹೊಸ ಪರಮಾಣು ಶಕ್ತಿ ಸ್ಥಾವರಗಳ ನಿರ್ಮಾಣಕ್ಕೆ ಹೇರಿದ್ದ ತಾತ್ಕಾಲಿಕ ನಿಷೇಧವು 1990ರಲ್ಲಿ ನಡೆದ ಹತ್ತು ವರ್ಷಗಳ ಹಿಂದಿನ ಸಾರ್ವಜನಿಕರ ಸ್ವಪ್ರೇರಣೆಯ ಫಲವಾಗಿ 54.5% ಸಕಾರಾತ್ಮಕ ಹಾಗೂ 45.5% ನಕಾರಾತ್ಮಕ ಪ್ರತಿಕ್ರಿಯೆ ಪಡೆದ ಜನಾಭಿಪ್ರಾಯದಂತೆ ಆಗಿದೆ. ಹೊಸ ಪರಮಾಣು ಸ್ಥಾವರವನ್ನು ಬರ್ನ್‌‌‌‌‌‌‌‌ನ ಕ್ಯಾಂಟನ್‌ನಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಪರಿಸರ, ಸಾರಿಗೆ, ಇಂಧನ ಮತ್ತು ಸಂಪರ್ಕ ಸಂಯುಕ್ತ ಇಲಾಖೆಗಳಲ್ಲಿನ (DETEC) ಇಂಧನ ಸರಬರಾಜು ಮತ್ತು ಇಂಧನ ಬಳಕೆಗೆ ಸಂಬಂಧಿಸಿದಂತೆ ಎಲ್ಲದಕ್ಕೂ ದಿ ಸ್ವಿಸ್ ಫೆಡರಲ್ ಆಫೀಸ್ ಆಫ್ ಎನರ್ಜಿ(SFOE) ಜವಾಬ್ದಾರಿಯಾಗಿದೆ. ಈ ನಿಯೋಗವು 2050ರೊಳಗೆ ದೇಶದ ಇಂಧನ ಬಳಕೆಯನ್ನು ಅರ್ಧಕ್ಕೆ ಇಳಿಸಲು 2000-ವ್ಯಾಟ್‌ ಸಮುದಾಯ ಯೋಜನೆಗೆ ಬೆಂಬಲ ನೀಡುತ್ತಿದೆ. ಸ್ವಿಸ್ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಭೂ ಸಂಚಾರ ಮಾರ್ಗಗಳು ರಸ್ತೆ ಸುಂಕ ಮತ್ತು ವಾಹನಗಳ ತೆರಿಗೆಗಳಿಂದ ಆದಾಯ ಪಡೆಯುತ್ತಿವೆ. ಸ್ವಿಸ್‌ನ ಜರ್ಮನಿ /ಫ್ರಾನ್ಸ್‌ ಮಾದರಿಯ ಮೋಟಾರು ಹೆದ್ದಾರಿ ವ್ಯವಸ್ಥೆ ಬಳಸಲು ಕಾರು ಮತ್ತು ಸರಕು ಸಾಗಣೆ ವಾಹನಗಳೆರಡಕ್ಕೂ ಸೇರಿ—ವಾರ್ಷಿಕ 40 ಸ್ವಿಸ್ ಫ್ರಾಂಕ್‌ ಕೊಟ್ಟು ವಿಗ್ನೆಟ್ಟೆಗಳನ್ನು (ಸುಂಕದ ಚೀಟಿಗಳು) ಖರೀದಿಸಬೇಕಾಗುತ್ತದೆ. ಸ್ವಿಸ್‌ನ ಜರ್ಮನಿ ಮಾದರಿಯ ಮೋಟಾರು ಹೆದ್ದಾರಿ ವ್ಯವಸ್ಥೆಯ ಒಟ್ಟು ಉದ್ದ 1,638 km(2000ರ ಗಣನೆಯಂತೆ) ಮತ್ತು, ವಿಸ್ತೀರ್ಣ 41,290 km² ಇದ್ದು, ಪ್ರಪಂಚದ ಅತಿ ಹೆಚ್ಚು ಸಾಂದ್ರತೆಯುಳ್ಳ ಮೋಟಾರು ಹೆದ್ದಾರಿಗಳಲ್ಲಿ ಇದೂ ಒಂದಾಗಿದೆ. ಜ್ಯೂರಿಚ್‌ ವಿಮಾನ ನಿಲ್ದಾಣ ಸ್ವಿಟ್ಜರ್ಲೆಂಡ್‌‌‌ನ ಅತಿ ದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, 2007ರಲ್ಲಿ 20.7 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ. ಜಿನೀವಾ ಕಾಯಿಂಟ್ರಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು 10.8 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ ಮತ್ತು ಯುರೋ ವಿಮಾನ ನಿಲ್ದಾಣ ಬಸೆಲ್-ಮ್ಯೂಲ್‌ಹೌಸ್-ಫೈರ್‌ಬರ್ಗ್ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು 4.3 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿತ್ತು. ಇವೆರಡೂ ವಿಮಾನ ನಿಲ್ದಾಣಗಳನ್ನು ಫ್ರಾನ್ಸ್‌‌ನೊಂದಿಗೆ ಹಂಚಿಕೊಂಡಿದೆ. ಸ್ವಿಟ್ಜರ್ಲೆಂಡ್‌‌‌‌‌‌‌‌‌‌‌‌‌‌ನ ರೈಲ್ವೆ ಮಾರ್ಗವು 5,063 km ಉದ್ದವಿದ್ದು ವಾರ್ಷಿಕ 350 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತವೆ. 2007ರಲ್ಲಿ, ಪ್ರತಿ ಸ್ವಿಸ್ ಪ್ರಜೆ ರೈಲಿನಲ್ಲಿ ಸರಾಸರಿ 2,103 kmಗಳಷ್ಟು ಪ್ರಯಾಣಿಸಿ, ಅತ್ಯಂತ ಉತ್ಸುಕ ರೈಲ್ವೇ ಬಳಕೆದಾರರು ಎನಿಸಿಕೊಂಡಿದ್ದಾರೆ. 366 km ಉದ್ದದ ನ್ಯಾರೋ ಗೇಜಿನ ರೈಲ್ವೆ ಸೇರಿದಂತೆ ಪ್ರಪಂಚದ ಕೆಲವು ಪಾರಂಪರಿಕ ಮಾರ್ಗಗಳು ಮತ್ತು ಗ್ರಾವುಬುಂಡೆನ್‌ ರೈಲ್ವೆ ಮಾರ್ಗವನ್ನು ರೇಟಿಯನ್ ರೈಲ್ವೇಸ್‌‌ನವರು ನಡೆಸಿಕೊಂಡು ಬರುತ್ತಿದ್ದರೆ, ಉಳಿದೆಲ್ಲ ಮಾರ್ಗಗಳನ್ನು ಒಕ್ಕೂಟ ರೈಲ್ವೇಸ್‌‌ನವರು ನಡೆಸಿಕೊಂಡು ಬರುತ್ತಿದ್ದಾರೆ. ಆಲ್ಪ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ಸುರಂಗ ಮಾರ್ಗವು ಉತ್ತರದಿಂದ ದಕ್ಷಿಣಕ್ಕೆ ತೆಗೆದುಕೊಳ್ಳುವ ಪ್ರಯಾಣ ಸಮಯವನ್ನು ಉಳಿತಾಯ ಮಾಡುತ್ತದೆ. ಸ್ವಿಟ್ಜರ್ಲೆಂಡ್‌‌‌ ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್ಬಳಕೆ ನಿಯಮಾವಳಿಗಳನ್ನು ರಚಿಸಿ, ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್ಬಳಕೆಯಲ್ಲಿ ಹೆಚ್ಚು ಸಕ್ರಿಯವಾಗಿ, ಅಂದರೆ 66% ರಿಂದ 96% ನಷ್ಟು ಪುನರ್ಬಳಸಹುದಾದ ವಸ್ತುಗಳನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಲಾಗುತ್ತದೆ. ತ್ಯಾಜ್ಯ ಪುನರ್ಬಳಸುವ ರಾಷ್ಟ್ರಗಳಲ್ಲಿ ಇದು ಮುಂಚೂಣಿಯಲ್ಲಿದೆ. ಸ್ವಿಟ್ಜರ್ಲೆಂಡ್‌‌‌ನ ಕೆಲವು ಪ್ರದೇಶಗಳಲ್ಲಿ, ಗೃಹ ತ್ಯಾಜ್ಯಗಳ ವಿಲೇವಾರಿಗೆ ಹಣ ಕೊಡಬೇಕಾಗುತ್ತದೆ. ಕಸವನ್ನು (ಬ್ಯಾಟರಿಯಂತಹ ಹಾನಿಕಾರಕ ವಸ್ತುಗಳನ್ನು ಬಿಟ್ಟು) ರಸೀದಿ ಚೀಟಿಯನ್ನು ಅಂಟಿಸಿರುವ, ಅಥವಾ ಅಧಿಕೃತವಾಗಿ ಹಣಕೊಟ್ಟು ಖರೀದಿಸಿರುವ ಚೀಲಗಳಲ್ಲಿದ್ದರೆ ಮಾತ್ರ ಸಂಗ್ರಹಿಸಲಾಗುತ್ತದೆ. ಪುನರ್ಬಳಕೆ ಉಚಿತವಾಗಿ ನಡೆಯುವುದರಿಂದ, ಈ ರೀತಿಯ ಸಂಗ್ರಹಣೆಯಿಂದ ಪುನರ್ಬಳಕೆಯ ಕೆಲಸಕ್ಕೆ ವಿನಿಯೋಗವಾಗುವಂತೆ ಹಣ ಸಂಗ್ರಹಣೆಯಾಗುತ್ತದೆ. ಹಣ ಕೊಟ್ಟು ಖರೀದಿಸದಿದ್ದ ಚೀಲಗಳೇನಾದರೂ ಸಿಕ್ಕರೆ, ಸ್ವಿಸ್ ಆರೋಗ್ಯ ಅಧಿಕಾರಿಗಳು ಮತ್ತು ಪೋಲೀಸರು ಅವುಗಳು ಎಲ್ಲಿಂದ ಬಂದಿದೆಯೆಂದು ತಿಳಿಯಲು ಸುಳಿವುಗಳು ಅಂದರೆ ಹಳೆ ರಶೀದಿಗಳನ್ನು ಹುಡುಕಿ ಪತ್ತೆ ಹಚ್ಚಿ, ಅಂತಹವರಿಗೆ ಸುಮಾರು 200 ರಿಂದ 500 CHFಗಳನ್ನು ದಂಡವಾಗಿ ವಿಧಿಸುತ್ತಾರೆ. ಜನಗಣತಿ ಹಲವು ಪ್ರಮುಖ ಯುರೋಪಿನ ಸಂಸ್ಕೃತಿಗಳು ಸ್ವಿಟ್ಜರ್ಲೆಂಡ್‌‌‌ನ ಸಂಸ್ಕೃತಿ ಮತ್ತು ಭಾಷೆಗಳ ಮೇಲೆ ಪ್ರಭಾವ ಬೀರಿವೆ. ಸ್ವಿಟ್ಜರ್ಲೆಂಡ್‌‌‌ನಲ್ಲಿ ನಾಲ್ಕು ಅಧಿಕೃತ ಭಾಷೆಗಳಿವೆ: ಜರ್ಮನ್ (ಒಟ್ಟು ಜನ ಸಂಖ್ಯೆಯಲ್ಲಿ 63.7%, ಜೊತೆಗೆ ವಿದೇಶೀ ವಲಸಿಗರು; ಅದರಲ್ಲಿ 72.5% ಸ್ವಿಸ್ ಪೌರತ್ವ ಹೊಂದಿದ ವಲಸಿಗರು, 2000ನೇ ಇಸವಿಯಂತೆ) ಉತ್ತರಕ್ಕೆ, ಪೂರ್ವ ಮತ್ತು ಮಧ್ಯ ಭಾಗದಲ್ಲಿ; ಪಶ್ಚಿಮಕ್ಕೆ ಫ್ರೆಂಚ್ (20.4%; 21.0%); ದಕ್ಷಿಣಕ್ಕೆ ಇಟಾಲಿಯನ್ (6.5%; 4.3%). ರೋಮಾಂಶ್‌ , ರೋಮನ್ ಭಾಷೆಯಾಗಿದ್ದು ಅಲ್ಪ ಸಂಖ್ಯಾತರು ಆಗ್ನೇಯ ಕ್ಯಾಂಟನ್‌ನ ಗ್ರಾವುಬುಂಡೆನ್‌ನಲ್ಲಿ ಸ್ಥಳೀಯವಾಗಿ ಮಾತನಾಡಲು ಬಳಸುತ್ತಾರೆ(0.5%; 0.6%), ಸಂಯುಕ್ತ ರಾಷ್ಟ್ರೀಯ ಶಾಸನವು ಜರ್ಮನ್, ಫ್ರೆಂಚ್‌ ಮತ್ತು ಇಟಾಲಿಯನ್ ಭಾಷೆಗಳ ಜೊತೆಗೆ (ಶಾಸನದ 4ನೇ ಕಲಮು) ರೋಮಾಂಶ್‌ ಭಾಷೆ (70ನೇ ಕಲಮು)ಯನ್ನು ಅಧಿಕೃತ ಭಾಷೆ ಎಂದಿದೆ, ಆದರೆ ಒಕ್ಕೂಟ ಕಾನೂನುಗಳು ಮತ್ತು ಬೇರೆ ಅಧಿಕೃತ ಕಾಯಿದೆಗಳು ಈ ಭಾಷೆಗಳಲ್ಲಿ ಆಗಬೇಕೆಂದೇನೂ ಇಲ್ಲ. ಒಕ್ಕೂಟ ಸರಕಾರವು ತನ್ನ ಅಧಿಕೃತ ಭಾಷೆಗಳಲ್ಲಿ ಆಡಳಿತ ನಡೆಸಲು ತೀರ್ಮಾನಿಸಿದೆ, ಮತ್ತು ಒಕ್ಕೂಟ ಸಂವಿಧಾನದಲ್ಲಿ ಜರ್ಮನ್, ಫ್ರೆಂಚ್‌ ಮತ್ತು ಇಟಾಲಿಯನ್‌ಗಳಿಗೆ ಏಕಕಾಲಿಕ ಭಾಷಾಂತರ ನಡೆಸಲಾಗುತ್ತದೆ. ಸ್ವಿಟ್ಜರ್ಲೆಂಡ್‌‌‌ನಲ್ಲಿ ಬಳಸುವ ಸ್ವಿಸ್‌ ಜರ್ಮನ್‌ ಎಂದು ಕರೆಯಲಾಗುವ ಭಾಷೆಯು ಅಲೆಮಾನ್ನಿಕ್‌ ಪ್ರಾಂತ್ಯಭಾಷೆಗಳ ಗುಂಪಿನ ಮುಂದಾಳು ಭಾಷೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪತ್ರ ವ್ಯವಹಾರದಿಂದ ಹಿಡಿದು ರೇಡಿಯೋ ಮತ್ತು ಟಿವಿ ವಾಹಿನಿಗಳೂ ಸ್ವಿಸ್ ದರ್ಜೆಯ ಜರ್ಮನ್‌‌ಅನ್ನು ಬಳಸುತ್ತವೆ. ಅಂತೆಯೇ, ಫ್ರೆಂಚ್‌‌ಅನ್ನು ಕೆಲವು ಹಳ್ಳಿಗಳು ಪ್ರಾಂತ್ಯ ಭಾಷೆಯನ್ನಾಗಿಸಿಕೊಂಡಿರುವ ಫ್ರಾಂಕೊ-ಪ್ರಾಂತ್ಯಗಳಿದ್ದು ಅವುಗಳನ್ನು"ಸ್ಯೂಸ್ಸಿ ರೋಮ್ಯಾಂಡೆ" ಎನ್ನುತ್ತಾರೆ, ಅವುಗಳೆಂದರೆ ವಾಡೋಯಿಸ್, ಗ್ರೂಎರಿಯನ್, ಜುರಾಸ್ಸಿಯನ್, ಎಂಪ್ರೊ, ಫ್ರೆಬರ್ಗಿಸ್, ನ್ಯೂಚಾಟೆಲೋಯಿಸ್, ಮತ್ತು ಇಟಾಲಿಯನ್ ಮಾತನಾಡುವಲ್ಲಿ, ಟಿಕಿನೀಸ್ (ಲಂಬಾರ್ಡ್‌ನ ಪ್ರಾಂತ್ಯ ಭಾಷೆ). ಅಧಿಕೃತ ಭಾಷೆಗಳು (ಜರ್ಮನ್, ಫ್ರೆಂಚ್‌ ಮತ್ತು ಇಟಾಲಿಯನ್) ಕೆಲವು ಪದಗಳನ್ನು ಸೇರಿಸಿಕೊಂಡಿವೆ. ಅವುಗಳು ಸ್ವಿಟ್ಜರ್ಲೆಂಡ್‌‌‌ನ ಹೊರಗೆ ಅರ್ಥವಾಗುವುದಿಲ್ಲ, ಉದಾ., ಪದಗಳ ಭಾಷೆಯಿಂದ (ಫ್ರೆಂಚ್‌‌ನಿಂದ ಜರ್ಮನ್ ಬಿಲೆಟ್ಟೆ ), ಅದೇ ರೀತಿಯ ಕೆಲವು ಪದಗಳು ಬೇರೆ ಭಾಷೆಗಳಿಂದ (ಇಟಾಲಿಯನ್‌‌ನಲ್ಲಿ ಅಜಿಯಾನೆ ಯನ್ನು ಆಕ್ಟ್ ಬದಲು ಜರ್ಮನ್‌ನ ಅಕಿಟೋನ್ ನಂತೆ ಡಿಸ್ಕೌಂಟ್ ಗೆ ಬಳಸುತ್ತಾರೆ). ಸ್ವಿಸ್ ಪ್ರಜೆಗಳಿಗೆ ಬೇರೆ ರಾಷ್ಟ್ರೀಯ ಭಾಷೆಗಳಲ್ಲಿ ಒಂದನ್ನು ಶಾಲಾ ಹಂತದಲ್ಲಿ ಕಲಿಯುವುದು ಕಡ್ಡಾಯವಾಗಿರುವುದರಿಂದ, ಅವರು ಕನಿಷ್ಟ ಪಕ್ಷ ಎರಡು ಭಾಷೆಗಳನ್ನಾದರೂ ಬಲ್ಲವರಾಗಿರುತ್ತಾರೆ. ವಿದೇಶಿ ನಾಗರೀಕರು ಮತ್ತು ತಾತ್ಕಾಲಿಕ ವಿದೇಶಿ ಕೆಲಸಗಾರರು ಜನಸಂಖ್ಯೆ 22%ನಷ್ಟಿದ್ದು, ಇವರೆಲ್ಲರೂ (60%) ಐರೋಪ್ಯ ಒಕ್ಕೂಟ ಅಥವಾ EFTA ದೇಶಗಳಿಂದ ಬಂದವರಾಗಿರುತ್ತಾರೆ. ಒಟ್ಟು ವಿದೇಶೀಯರಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಇಟಲಿಯವರು 17,3%ರಷ್ಟು ಇದ್ದು, ನಂತರದ ಸ್ಥಾನದಲ್ಲಿ ಜರ್ಮನ್‌‌ರು (13,2%), ಸೈಬೀರಿಯಾ ಮತ್ತು ಮಾಂಟೆನಿಗ್ರೋ (11,5%) ಮತ್ತು ಪೊರ್ಚುಗಲ್ (11,3%) ಗಳಿಂದ ಬಂದ ವಲಸಿಗರು ಇದ್ದಾರೆ. ಏಷಿಯನ್‌ ಮೂಲದವರಲ್ಲಿ ಹೆಚ್ಚಾಗಿ ಶ್ರೀಲಂಕಾದಿಂದ ಬಂದ ವಲಸೆ ಬಂದ ತಮಿಳು ಸಂತ್ರಸ್ತರು ಕಂಡುಬರುತ್ತಾರೆ. 2000ರಲ್ಲಿ, ಕೆಲವು ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಅದರಲ್ಲೂ ಹೆಚ್ಚಾಗಿ ರಾಜಕೀಯ ಚಟುವಟಿಕೆಗಳು ಹೆಚ್ಚುತ್ತಿರುವ ವಲಸಿಗರು ಕಂಡು ಕ್ಸೆನೋಫೋಬಿಯಾ ಬಂದವರಂತೆ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿದೇಶೀ ಪ್ರಜೆಗಳು, ಸಾಮಾನ್ಯವಾಗಿ ಸಮಸ್ಯೆಯಿಲ್ಲದೆ ಹೊಂದಿಕೊಳ್ಳುವ ವಿದೇಶೀಯರು, ಸ್ವಿಟ್ಜರ್ಲೆಂಡ್‌ನ ಮುಕ್ತ ಜೀವನಶೈಲಿಯನ್ನು ಎತ್ತಿ ಹಿಡಿದಿದೆ. ಆರೋಗ್ಯ 2006ರ ಅಂದಾಜಿನಂತೆ ಜನ್ಮಸಮಯದಲ್ಲಿನ ಜೀವಿತಾವಧಿ ಗಂಡಿಗೆ 79 ವರ್ಷಗಳಾದರೆ, ಹೆಣ್ಣಿಗೆ 84 ವರ್ಷಗಳಿದ್ದು, ಇದು ಪ್ರಪಂಚದಲ್ಲೇ ಅತಿ ಹೆಚ್ಚಾಗಿದೆ. ಸ್ವಿಸ್ ಪ್ರಜೆಗಳು ಕಡ್ಡಾಯ ಸಾರ್ವತ್ರಿಕ ಆರೋಗ್ಯ ವಿಮೆಗೆ ಒಳಪಟ್ಟಿರುವುದರಿಂದ, ಅದನ್ನು ಬಳಸಿಕೊಂಡು ಅವರಿಗೆ ಅನೇಕ ವಿಧದ ಆಧುನಿಕ ವೈದ್ಯಕೀಯ ಸೇವೆಗಳನ್ನು ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಆರೋಗ್ಯಸೇವಾ ವ್ಯವಸ್ಥೆಯನ್ನು ಬೇರೆ ಮುಂದುವರಿದ ಐರೋಪ್ಯ ರಾಷ್ಟ್ರಗಳೊಂದಿಗೆ ಹೋಲಿಸಬಹುದಾಗಿದ್ದು ಸೇವಾಕಾಂಕ್ಷಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 1990ರಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು 2003ರಲ್ಲಿ ಒಟ್ಟು GDPಯ 11.5%ಯಷ್ಟಿತ್ತು ಮತ್ತು, ನೀಡಲಾಗುತ್ತಿರುವ ಆರೋಗ್ಯ ಸೇವೆಗಳ ಶುಲ್ಕ ಹೆಚ್ಚುತ್ತಿರುವುದರಿಂದ ಆರೋಗ್ಯಕ್ಕಾಗಿ ಜಾಸ್ತಿ ಖರ್ಚು ಮಾಡಲಾಗುತ್ತಿದ್ದು , ನಾಗರೀಕರ ವಯೋಗುಣಗಳಿಗನುಗುಣವಾಗಿ ಮತ್ತು ಹೊಸ ಆರೋಗ್ಯಸೇವಾ ತಂತ್ರಜ್ಞಾನಗಳು ಬಂದಂತೆ, ಆರೋಗ್ಯ ಸೇವೆಗಳ ವೆಚ್ಚ ಮತ್ತಷ್ಟು ಜಾಸ್ತಿಯಾಗುತ್ತವೆ. ನಗರೀಕರಣ ಮುಕ್ಕಾಲು ಭಾಗದಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ ಕೇವಲ 70 ವರ್ಷಗಳಲ್ಲಿ ಸ್ವಿಟ್ಜರ್ಲೆಂಡ್‌‌ನಲ್ಲಿದ್ದ ಹಳ್ಳಿಗಳೆಲ್ಲ ನಗರಗಳಾಗಿ ಮಾರ್ಪಟ್ಟಿವೆ. ಸ್ವಿಸ್‌ನಲ್ಲಿ ಕಳೆದ 2,000 ವರ್ಷಗಳಲ್ಲಾಗಿದ್ದಷ್ಟು ಭೂ ಪ್ರದೇಶದ ಮಾರ್ಪಾಟುಗಳು 1935ರಿಂದೀಚೆಗೆ ನಗರೀಕರಣಗೊಳ್ಳಲು ನಡೆದಿವೆ. ನಗರಗಳ ಅವ್ಯವಸ್ಥಿತ-ಬೆಳವಣಿಗೆಯು ಪ್ರಸ್ಥಭೂಮಿ, ಜ್ಯೂರಾ ಮತ್ತು ಆಲ್ಪೈನ್ ಬೆಟ್ಟಗಳ ಮೇಲೆ ಪರಿಣಾಮ ಬೀರಿದೆಯಲ್ಲದೆ ಭೂ-ಬಳಕೆಯ ವಿಚಾರಗಳಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಹಾಗೂ ಚರ್ಚೆ ನಡೆದಿದೆ. 21ನೇ ಶತಮಾನದ ಆರಂಭದಿಂದಲೂ, ಹಳ್ಳಿಗಾಡಿಗಿಂತ ನಗರಗಳಲ್ಲಿನ ಜನಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಸ್ವಿಟ್ಜರ್ಲೆಂಡ್‌‌ನಲ್ಲಿ ನಗರಗಳ ಸಾಂದ್ರತೆ ಹೆಚ್ಚಾಗಿದ್ದು, ದೊಡ್ಡ, ಮಧ್ಯಮ ಹಾಗೂ ಸಣ್ಣ ನಗರಗಳು ಒಂದಕ್ಕೊಂದು ಪೂರಕವಾಗಿವೆ. ಪ್ರಸ್ಥಭೂಮಿಯು ಹೆಚ್ಚು ಜನ ಸಾಂದ್ರಿತ ಅಂದರೆ ಪ್ರತಿ km2ಗೆ 450 ಜನರಿದ್ದು ಎಲ್ಲ ತರಹದ ಭೂ ಪ್ರದೇಶಗಳಲ್ಲಿಯೂ ಮನುಷ್ಯನ ಇರುವಿಕೆಯನ್ನು ತೋರಿಸುತ್ತದೆ. ಅತಿ ಹೆಚ್ಚು ಜನಸಂದಣಿಯಿರುವ ಮೆಟ್ರೊಪೋಲಿಟನ್ ನಗರಗಳು ಕ್ರಮವಾಗಿ, ಜ್ಯೂರಿಚ್‌ , ಜಿನೀವಾ -ಲಾಸನ್ನೆ, ಬಸೆಲ್ ಮತ್ತು ಬರ್ನ್ ಇನ್ನೂ ಹೆಚ್ಚುತ್ತಿವೆ. ಅಂತರರಾಷ್ಟ್ರೀಯ ಹೋಲಿಕೆಯಲ್ಲಿ ಈ ನಗರ ಪ್ರದೇಶಗಳು ಅವುಗಳ ಜನಸಂಖ್ಯೆಗಿಂತ ಹೆಚ್ಚು ಪ್ರಾಮುಖ್ಯತೆ ಹೊಂದಿವೆ. ಇದರ ಜೊತೆಗೆ ಎರಡು ನಗರಗಳಾದ ಜ್ಯೂರಿಚ್‌ ಮತ್ತು ಜಿನೀವಾ, ಉನ್ನತ ಮಟ್ಟದ ಜೀವನ ಶೈಲಿಗೆ ಹೆಸರುವಾಸಿಯಾಗಿವೆ. ಧರ್ಮ ಸ್ವಿಟ್ಜರ್ಲೆಂಡ್‌‌ಗೆ‌ ಯಾವುದೇ ಅಧಿಕೃತವಾದ ರಾಷ್ಟ್ರೀಯ ಧರ್ಮವಿಲ್ಲ, ಆದರೂ ಕೆಲವು ಕ್ಯಾಂಟನ್‌ಗಳು (ಜಿನೀವಾ ಮತ್ತು ನ್ಯೂಚಾಟೆಲ್‌ಗಳನ್ನು ಹೊರತುಪಡಿಸಿ) ಎಲ್ಲ ಸಂದರ್ಭಗಳಲ್ಲಿಯೂ ಕ್ಯಾಥೊಲಿಕ್‌ ಚರ್ಚು ಮತ್ತು ಸ್ವಿಸ್‌ನ ಸುಧಾರಿತ ಚರ್ಚುಗಳು ಸೇರಿದಂತೆ ಅಧಿಕೃತವಾಗಿ ಚರ್ಚುಗಳೊಂದಿಗೆ ಗುರುತಿಸಿಕೊಂಡಿವೆ. ಈ ಚರ್ಚುಗಳು, ಮತ್ತು ಕೆಲವು ಕ್ಯಾಂಟನ್‌ಗಳಲ್ಲಿ ಹಳೆಯ ಕ್ಯಾಥೊಲಿಕ್‌ ಚರ್ಚುಗಳು ಮತ್ತು ಯಹೂದ್ಯ ಸಮುದಾಯಗಳು, ಮತಾನುಯಾಯಿಗಳಿಂದ ಸಂಗ್ರಹಿಸಿದ ಹಣದಿಂದ ನಡೆಯುತ್ತವೆ. ಸ್ವಿಟ್ಜರ್ಲೆಂಡ್‌‌‌ನಲ್ಲಿ ಕ್ರೈಸ್ತ ಧರ್ಮವು ಪ್ರಧಾನ ಧರ್ಮವಾಗಿದ್ದು, ಕ್ಯಾಥೊಲಿಕ್‌ ಚರ್ಚ್‌ (ಒಟ್ಟು ಜನಸಂಖ್ಯೆಯಲ್ಲಿ 41.8% ) ಮತ್ತು ಹಲವು ಪ್ರೊಟೆಸ್ಟೆಂಟ್‌ (35.3%) ಪಂಥಗಳಾಗಿ ವಿಂಗಡಣೆಯಾಗಿದೆ. ವಲಸೆ ಬಂದಿರುವ ಇಸ್ಲಾಮ್ (4.3%, ಪ್ರಧಾನವಾಗಿ ಕಸೊವರ್ಸ್ ಮತ್ತು ತುರ್ಕರು) ಮತ್ತು ಪೂರ್ವದ ಸಂಪ್ರದಾಯವಾದಿ (1.8%) ಅಲ್ಪಸಂಖ್ಯಾತ ಧರ್ಮಗಳು ತಕ್ಕಷ್ಟು ಮಟ್ಟಿಗೆ ಇವೆ. 2005ರ ಯುರೊಬಾರೊಮೀಟರ್ ಸಮೀಕ್ಷೆಯಿಂದ 48% ಆಸ್ತಿಕರು, 39% "ಆತ್ಮ ಅಥವಾ ಪ್ರೇರಣಾ ಶಕ್ತಿಯನ್ನು" ನಂಬುವುದಾಗಿ ಹೇಳಿಕೊಂಡರೆ , 9% ನಾಸ್ತಿಕರು ಮತ್ತು 4% ಆಜ್ಞೇಯತಾವಾದಿಗಳಿರುವುದಾಗಿ ತಿಳಿದು ಬಂದಿದೆ. ಇತಿಹಾಸದುದ್ದಕ್ಕೂ ಪ್ರೊಟೆಸ್ಟೆಂಟ್‌ಗಳು ಹಾಗೂ ದೇಶದ ಬಹುಭಾಗಗಳಲ್ಲಿ ಬಿಡಿಬಿಡಿಯಾಗಿ ಹರಡಿ ಹೋಗಿರುವ ಬಹುಸಂಖ್ಯಾತ ಕ್ಯಾಥೊಲಿಕ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಗಳ ನಡುವೆ ಸರಿಯಾದ ಸಮತೋಲನ ಕಾಯ್ದುಕೊಂಡು ಬಂದಿದೆ. ಅಪ್ಪೆನ್ಜೆಲ್‌‌ ‌‌‌ಎಂಬ ಒಂದು ಕ್ಯಾಂಟನ್, 1597ರಲ್ಲಿ ಅಧಿಕೃತವಾಗಿ ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌ ಭಾಗ‌ಗಳೆಂದು ವಿಭಜಿತವಾಯಿತು. ದೊಡ್ಡ ನಗರಗಳಲ್ಲಿ (ಬರ್ನ್, ಜ್ಯೂರಿಚ್‌ ಮತ್ತು ಬಸೆಲ್) ಪ್ರೊಟೆಸ್ಟೆಂಟ್‌ ಪ್ರಬಲವಾದರೆ, ಮಧ್ಯ ಸ್ವಿಟ್ಜರ್ಲೆಂಡ್‌‌ ಹಾಗೂ ಟಿಕಿನೊ, ಸಾಂಪ್ರದಾಯಿಕವಾಗಿ ಕ್ಯಾಥೊಲಿಕ್‌‌ಗಳಾಗಿವೆ. ಸಾಂಡರ್‌ಬಂಡ್ಸ್‌ಕ್ರೀಗ್‌ ಕ್ಯಾಂಟನ್‌ನಲ್ಲಿ ನಡೆದ ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌‌ಗಳ ಘರ್ಷಣೆಗಳಿಂದ ಎಚ್ಚೆತ್ತ ಸರ್ಕಾರವು 1848ರ ಸ್ವಿಸ್ ಸಂವಿಧಾನದಲ್ಲಿ, ಸಹಭಾಗಿತ್ವ ರಾಷ್ಟ್ರದ ಕಲ್ಪನೆಯನ್ನು ಇಟ್ಟುಕೊಂಡು, ಕ್ಯಾಥೊಲಿಕ್‌‌ ಮತ್ತು ಪ್ರೊಟೆಸ್ಟೆಂಟ್‌‌ಗಳ ಶಾಂತಿಯುತ ಸಹಬಾಳ್ವೆಗೆ ಅನುಕೂಲವಾಗುವಂತೆ ಬದಲಾವಣೆಗಳನ್ನು ಮಾಡಿದೆ. 1980ರಲ್ಲಿ ಪ್ರೇರಿತವಾದ ಸಂಪೂರ್ಣ ಚರ್ಚುಗಳ ಮತ್ತು ರಾಷ್ಟ್ರದ ವಿಂಗಡಣೆಯು, ಕೇವಲ 21.1% ಮತ ಬೆಂಬಲದೊಂದಿಗೆ ಸ್ಪಷ್ಟವಾಗಿ ತಿರಸ್ಕರಿಸಲ್ಪಟ್ಟಿತು. ಸಂಸ್ಕೃತಿ ಸ್ವಿಟ್ಜರ್ಲೆಂಡ್‌‌‌ನ ಸಂಸ್ಕೃತಿಯು ಮೇಲೆ ನೆರೆಯ ಪರಿಣಾಮ ಬೀರಿದ್ದು, ವರ್ಷ ಕಳೆದಂತೆ ಕೆಲವು ಪ್ರಾಂತೀಯ ವ್ಯತ್ಯಾಸಗಳೊಂದಿಗೆ ಆ ಸಂಸ್ಕೃತಿಯು ವೈಶಿಷ್ಟ್ಯವಾಗಿ ಮತ್ತು ಸ್ವತಂತ್ರ ಪರಂಪರೆಯಾಗಿ ಬೆಳೆದುಬಂದಿದೆ. ವಿಶೇಷವಾಗಿ, ಫ್ರೆಂಚ್‌ -ಭಾಷಿಕ ವಲಯಗಳು ಫ್ರೆಂಚ್‌ ಸಂಸ್ಕೃತಿಯತ್ತ ಹೆಚ್ಚು ವಾಲಿದ್ದು EU ಪರವಾಗಿದ್ದಾರೆ. ಸ್ವಿಸ್ ಹಿಂದಿನಿಂದಲೂ ಮಾನವಿಕ ಪರಂಪರೆಯಾಗಿದೆ, ಕಾರಣ ಸ್ವಿಟ್ಜರ್ಲೆಂಡ್‌‌‌ ರೆಡ್ ಕ್ರಾಸ್‍‌ ಚಳುವಳಿಯ ಮತ್ತು ಒಕ್ಕೂಟ ರಾಷ್ಟ್ರಗಳ ಮಾನವ ಹಕ್ಕುಗಳ ಸಮಿತಿಯ ತವರು. ಸ್ವಿಸ್ ಜರ್ಮನ್‌ ಭಾಷಿಕ ವಲಯಗಳು ಜರ್ಮನ್ ಸಂಸ್ಕೃತಿಯತ್ತ ವಾಲಿದರೂ, ಪ್ರಾಂತ್ಯ ಭಾಷೆಗಳಾದ ಉನ್ನತ ಜರ್ಮನ್‌ ಮತ್ತು ಸ್ವಿಸ್ ಜರ್ಮನ್‌‌‌‌‌‌‌‌ಗಳಲ್ಲಿ ಭಿನ್ನತೆ ಇರುವುದರಿಂದ ಜರ್ಮನ್-ಭಾಷಿಕ ಸ್ವಿಸ್ ಪ್ರಜೆಗಳು ತಮ್ಮನ್ನು ಸ್ವಿಸ್‌ಗಳೆಂದೇ ಗುರುತಿಸಿಕೊಳ್ಳುತ್ತಾರೆ. ಇಟಾಲಿಯನ್‌-ಭಾಷಿಕ ವಲಯಗಳು ಹೆಚ್ಚಾಗಿ ಇಟಾಲಿಯನ್‌ ಸಂಸ್ಕೃತಿಯನ್ನು ಹೊಂದಿವೆ. ಒಂದು ಪ್ರಾಂತ್ಯವು ತನ್ನ ಭಾಷೆಯನ್ನು ಮಾತನಾಡುವ ನೆರೆಯ ರಾಷ್ಟ್ರದೊಂದಿಗೆ ಸಾಂಸ್ಕೃತಿಕವಾಗಿಯೂ ಸಹ ಸಂಬಂಧವಿರಿಸಿಕೊಳ್ಳುತ್ತದೆ. ಸ್ವಿಟ್ಜರ್ಲೆಂಡ್‌‌ನ ಪೂರ್ವ ಬೆಟ್ಟಗಳಲ್ಲಿ ಭಾಷಾವಾರು ಪ್ರತ್ಯೇಕವಾಗಿರುವ ರೋಮಾಂಶ್‌‌ ‌ ಸಂಸ್ಕೃತಿಯು ದೃಢವಾಗಿದ್ದು, ತನ್ನ ಅಪರೂಪದ ಭಾಷಾ ಪರಂಪರೆಯನ್ನು ಉಳಿಸಲು ಪ್ರಯತ್ನಿಸುತ್ತಿದೆ. ಅನೇಕ ಬೆಟ್ಟ ಪ್ರದೇಶಗಳು ಚಳಿಗಾಲದಲ್ಲಿ ಸ್ಕೀ ರೆಸಾರ್ಟ್ ಸಂಸ್ಕೃತಿ, ಮತ್ತು ಬೇಸಿಗೆಯಲ್ಲಿ ಹೈಕಿಂಗ್‌ (ಪರ್ಯಟನ) ಸಂಸ್ಕೃತಿಯ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿವೆ. ಕೆಲವು ಪ್ರದೇಶಗಳಲ್ಲಿ ವರ್ಷಪೂರ್ತಿ ಮನರಂಜನಾ ಸಂಸ್ಕೃತಿಯಿದ್ದು ಪ್ರವಾಸೋದ್ಯಮಕ್ಕೆ ಒಂದು ಆಕರ್ಷಣೆಯಾಗಿದೆ, ವಸಂತ ಕಾಲ ಮತ್ತು ಶರತ್ಕಾಲದಲ್ಲಿ ಕೆಲವೇ ಪ್ರವಾಸಿಗರಿದ್ದರೂ ಸ್ವಿಸ್‌‌ಗಳು ಹೆಚ್ಚಾಗಿ ಬರುತ್ತಾರೆ. ಅನೇಕ ಪ್ರದೇಶಗಳಲ್ಲಿ ಪಾರಂಪರಿಕ ರೈತಾಪಿ ವರ್ಗ ಮತ್ತು ದನಗಾಹಿಗಳು ಅಧಿಕವಾಗಿ ಕಂಡು ಬರುತ್ತಾರೆ ಮತ್ತು ಸಣ್ಣ ತೋಟಗಳು ನಗರಗಳ ಹೊರ ವಲಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಚಿತ್ರೋದ್ಯಮದಲ್ಲಿ, ಅನೇಕ ಅಮೆರಿಕನ್‌ ನಿರ್ಮಿತ ಕಾರ್ಯಕ್ರಮಗಳು ಬರುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಸ್ವಿಸ್ ಚಿತ್ರಗಳು ಲಾಭಗಳಿಸುತ್ತಿವೆ. ದೇಶದ ಎಲ್ಲಾ ಸಂಸ್ಥೆಗಳಲ್ಲಿಯೂ ಜಾನಪದ ಕಲೆ ಜೀವಂತವಾಗಿದೆ. ಸ್ವಿಟ್ಜರ್ಲೆಂಡ್‌‌ ಸಂಗೀತ, ನೃತ್ಯ, ಕಾವ್ಯ, ಮರಗೆಲಸ ಮತ್ತು ಕಸೂತಿಗಳಿಗೆ ಪ್ರಸಿದ್ದವಾಗಿದೆ. ಆಲ್ಫೋರ್ನ್, ಮರದಿಂದ ಮಾಡಲ್ಪಟ್ಟ ಕಹಳೆ-ಮಾದರಿಯ ಸಂಗೀತ ಸಾಧನವು, ಸಂಗೀತಕ್ಕೆ ಸ್ವಾಭಾವಿಕತೆ ನೀಡಲು ಮತ್ತು ಪಾರಂಪರಿಕ ಅಕಾರ್ಡಿಯನ್‌‌ನ ಸಾಕಾರರೂಪವಾಗಿದ್ದು ಸ್ವಿಸ್ ಸಂಗೀತಕ್ಕೆ ಮೆರುಗು ನೀಡುತ್ತದೆ. ಸಾಹಿತ್ಯ ಪ್ರಮುಖವಾಗಿ 1291ರಲ್ಲಿ ಸ್ಥಾಪಿತವಾದ ಈ ಒಕ್ಕೂಟವು ಆಗಿನಿಂದ ಜರ್ಮನ್‌-ಭಾಷಿಕ ವಲಯಗಳನ್ನು ಒಳಗೊಂಡಿದ್ದು ಸಾಹಿತ್ಯ ಪ್ರಕಾರದ ಪ್ರಾಚೀನ ರೂಪಗಳು ಕೂಡ ಜರ್ಮನ್‌ನಲ್ಲಿವೆ. 18ನೇ ಶತಮಾನದಲ್ಲಿ ಫ್ರೆಂಚ್‌ ಭಾಷೆ ಬರ್ನ್ ಹಾಗೂ ಉಳಿದ ಕಡೆಗಳಲ್ಲಿ‌ ಜನಪ್ರಿಯವಾದ್ದರಿಂದ, ಫ್ರೆಂಚ್‌ -ಭಾಷಿಕ ಮಿತ್ರ ದೇಶಗಳು ಮತ್ತು ಸಾಮಂತ ಪ್ರದೇಶಗಳು ಹಿಂದೆಂದಿಗಿಂತ ಹೆಚ್ಚು ಗುರುತಿಸಲ್ಪಟ್ಟವು. ಸ್ವಿಸ್ ಜರ್ಮನ್‌ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದವಾದವರು ಜರೇಮಿಯಾಸ್ ಗಥೆಲ್ಫ್‌ (1797-1854) ಮತ್ತು ಗಾಟ್‌ಫ್ರೆಡ್‌ ಕೆಲ್ಲರ್‌ (1819-1890). 20ನೇ ಶತಮಾನದ ಸ್ವಿಸ್ ಸಾಹಿತ್ಯದಲ್ಲಿ ನಿಸ್ಸಂಶಯವಾದ ದೈತ್ಯಕೃತಿಗಳೆಂದರೆ ಮ್ಯಾಕ್ಸ್‌ ಫ್ರಿಷ್‌‌ (1911-91) ಮತ್ತು ಫ್ರೆಡ್ರಿಕ್ ಡ್ಯುರೆನ್‌ಮ್ಯಾಟ್ (1921-90), ಕೃತಿಗಳಾದ ದೈ ಫಿಸಿಕೆರ್‌(ದಿ ಫಿಸಿಸಿಸ್ಟ್) ಮತ್ತು ದಾಸ್ ವರ್ಸ್‌ಪ್ರಚೆನ್‌ (ದ ಪ್ಲೆಡ್ಜ್), 2001ರಲ್ಲಿ ಹಾಲಿವುಡ್ ಚಿತ್ರವಾಗಿ ಬಿಡುಗಡೆಯಾದವು. ಪ್ರಸಿದ್ದ ಫ್ರೆಂಚ್‌ -ಭಾಷಿಕ ಬರಹಗಾರರೆಂದರೆ ಜೀನ್‌-ಜಾಕ್ವೆಸ್‌ ರವ್‌ಸ್ಸಾವ್‌ (1712-1778) ಮತ್ತು ಜರ್ಮೈನೇ ಡಿ ಸ್ಟೀಲ್‌ (1766-1817). ಇತ್ತೀಚಿನ ಬರಹಗಾರರಾದ ಚಾರ್ಲ್ಸ್‌ ಫರ್ಡಿನೆಂಡ್‌ ರಾಮುಜ್‌ (1878-1947) ಕಾದಂಬರಿಗಳಲ್ಲಿ , ರೈತಾಪಿ ಮತ್ತು ಗುಡ್ಡಗಾಡುಗಳಲ್ಲಿ ವಾಸಿಸುವ ಜನಗಳು ನಡೆಸುವ ಕಷ್ಟಕರ ವಾತಾವರಣದಲ್ಲಿನ ಜೀವನದ ಬಗ್ಗೆ ಹೇಳಲಾಗಿದೆ ಮತ್ತು ಬ್ಲೇಸ್‌ ಸೆಂಡ್ರಾರ್ಸ್ (ಮೊದಲು ಫ್ರೆಡ್ರಿಕ್‌ ಸ್ಹಾಸರ್‌, 1887-1961). ಇಟಾಲಿಯನ್‌ ಮತ್ತು ರೋಮಾಂಶ್‌-ಭಾಷಿಕ ಲೇಖಕರು ಒಳ್ಳೆಯ ಕೊಡುಗೆ ನೀಡಿದ್ದಾರೆ ಆದರೆ ಅವುಗಳು ಕಡಿಮೆ ಸಂಖ್ಯೆಯಲ್ಲಿವೆ. ಸುಪ್ರಸಿದ್ದವಾದ ಸ್ವಿಸ್ ಸಾಹಿತ್ಯ ರಚನೆಯೆಂದರೆ, ಹೈಡಿ , ತನ್ನ ತಾತನ ಜೊತೆ ಆಲ್ಪ್ಸ್‌ನಲ್ಲಿ ವಾಸಿಸುತ್ತಿದ್ದ ಒಂದು ಅನಾಥ ಹುಡುಗಿಯ ಕಥೆ, ಅತಿ ಹೆಚ್ಚು ಜನಪ್ರಿಯವಾದ ಮಕ್ಕಳ ಕೃತಿಗಳಲ್ಲಿ ಇದೂ ಒಂದಾಗಿದ್ದು, ಸ್ವಿಟ್ಜರ್ಲೆಂಡ್‌‌ನ ಸಂಕೇತವಾಗಿ ಹೊರಹೊಮ್ಮಿದೆ. ಅದರ ಲೇಖಕಿಯಾದ, ಜೊಹಾನ ಸ್ಪೈರಿ (1827-1901), ಅದೇ ರೀತಿಯ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಮಾಧ್ಯಮ ಪತ್ರಿಕಾ ಸ್ವಾತಂತ್ರ್ಯ ಮತ್ತು ಮುಕ್ತ ಅಭಿವ್ಯಕ್ತಿಯ ಹಕ್ಕು ಭರವಸೆಯನ್ನು ಸ್ವಿಟ್ಜರ್ಲೆಂಡ್‌‌ನ ಒಕ್ಕೂಟ ಸಂವಿಧಾನವು ಕೊಟ್ಟಿದೆ‌. ಸ್ವಿಸ್ ವಾರ್ತಾ ಸಂಸ್ಥೆ (SNA) ಮೂರು ರಾಷ್ಟ್ರೀಯ ಭಾಷೆಗಳಲ್ಲಿ—ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ದಿನದ ಎಲ್ಲ ಸಮಯದಲ್ಲಿಯೂ ಪ್ರಸಾರ ಮಾಡುತ್ತದೆ. SNAಯು ಎಲ್ಲ ಸ್ವಿಸ್ ಮಾಧ್ಯಮ ಹಾಗೂ ಹಲವು ವಿದೇಶೀ ಮಾಧ್ಯಮ ಸೇವೆಗಳಿಗೆ ಅನೇಕ ತರಹದ ಸುದ್ದಿಯನ್ನು ಒದಗಿಸುತ್ತಿದೆ. ಸ್ವಿಟ್ಜರ್ಲೆಂಡ್‌‌ ಐತಿಹಾಸಿಕವಾಗಿ ಸುದ್ದಿ ಪತ್ರಿಕೆಗಳ ಸಂಖ್ಯೆಯನ್ನು ತನ್ನ ಗಾತ್ರ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುತ್ತಾ ಬಂದಿದೆ. ಬಹಳ ಬೇಡಿಕೆಯಿರುವ ಪತ್ರಿಕೆಗಳೆಂದರೆ ಜರ್ಮನ್‌-ಭಾಷೆಯ ತಜಸ್‌-ಅನ್ಸಿಜರ್‌ ಮತ್ತು ನ್ಯೂಯೆ ಜ್ಯುಚೆರ್‌‌ ಗ್ಸೈಟುಂಗ್ NZZ, ಮತ್ತು ಫ್ರೆಂಚ್‌ -ಭಾಷೆಯ ಲಿ ಟೆಂಪ್ಸ್‌, ಇದಲ್ಲದೇ ಎಲ್ಲ ನಗರಗಳೂ ತನ್ನದೇ ಆದ ಸ್ಥಳೀಯ ಸುದ್ದಿ ಪತ್ರಿಕೆಗಳನ್ನು ಹೊಂದಿವೆ. ಸಾಂಸ್ಕೃತಿಕ ವೈವಿಧ್ಯತೆಯು ದೊಡ್ಡ ಸಂಖ್ಯೆಯ ಸುದ್ದಿ ಪತ್ರಿಕೆಗಳಿಗೆ ಕಾರಣವಾಗಿದೆ. ಪತ್ರಿಕಾ ಮಾಧ್ಯಮಗಳಿಗೆ ಹೋಲಿಸಿದಾಗ, ಪ್ರಸರಣಾ ಮಾಧ್ಯಮಗಳು ಹೆಚ್ಚಾಗಿ ಸರ್ಕಾರದ ಅಧೀನಕ್ಕೆ ಒಳಪಡುತ್ತವೆ. ಸ್ವಿಸ್ ಪ್ರಸರಣಾ ಸಂಸ್ಥೆಯು, ಇತ್ತೀಚೆಗೆ ತನ್ನ ಹೆಸರನ್ನು SRG SSR ಇದೀ ಸ್ಯುಸ್ಸೆ ಎಂದು ಬದಲಾಯಿಸಿಕೊಂಡಿದ್ದು, ರೇಡಿಯೋ ಮತ್ತು ದೂರದರ್ಶನದ ಕಾರ್ಯಕ್ರಮಗಳ ನಿರ್ಮಾಣ ಮತ್ತು ಪ್ರಸಾರವನ್ನು ನೋಡಿಕೊಳ್ಳುತ್ತದೆ. SRG SSR ಕಾರ್ಯಾಗಾರ ಘಟಕವು ಅನೇಕ ಭಾಷಾ ಪ್ರದೇಶಗಳಲ್ಲಿ ವಿಂಗಡಣೆಯಾಗಿವೆ. ರೇಡಿಯೋ ಕಾರ್ಯಕ್ರಮಗಳು ಆರು ಕೇಂದ್ರೀಯ ಮತ್ತು ನಾಲ್ಕು ಸ್ಥಳೀಯ ಕಾರ್ಯಾಗಾರಗಳಲ್ಲಿ ಹಾಗೂ ದೂರದರ್ಶನದ ಕಾರ್ಯಕ್ರಮಗಳು ಜಿನೀವಾ , ಜ್ಯೂರಿಚ್‌ ಮತ್ತು ಲುಗಾನೊಗಳಲ್ಲಿ ನಿರ್ಮಾಣವಾಗುತ್ತವೆ. ವ್ಯಾಪಕ ಕೇಬಲ್ ಜಾಲವಿರುವುದರಿಂದ ಸ್ವಿಸ್‌ ಪ್ರಜೆಗಳಿಗೆ ನೆರೆ ರಾಷ್ಟ್ರಗಳ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವಾಗಿದೆ. ಕ್ರೀಡೆ ಸ್ಕೀಯಿಂಗ್ ಮತ್ತು ಪರ್ವತಾರೋಹಣವನ್ನು ಹೆಚ್ಚಾಗಿ ಸ್ವಿಸ್ ಪ್ರಜೆಗಳು ಮತ್ತು ವಿದೇಶೀಯರು ಇಷ್ಟಪಡುತ್ತಾರೆ, ಎತ್ತರದ ಶಿಖರಗಳು ಪರ್ವತಾರೋಹಿಗಳನ್ನು ಪ್ರಪಂಚದ ಎಲ್ಲ ಭಾಗಗಳಿಂದ ಆಕರ್ಷಿಸುತ್ತವೆ. ಹಾಟ್ ರೂಟ್ ಅಥವಾ ಪಟ್ರೌಲಿ ಡೆಸ್ ಹಿಮನದಿಯಲ್ಲಿನ ಸ್ಕೀಯಿಂಗ್‌ ಸ್ಪರ್ಧೆಯು ಅಂತರರಾಷ್ಟೀಯ ಪ್ರಖ್ಯಾತಿ ಹೊಂದಿದೆ. ಯುರೋಪಿನಲ್ಲಿರುವಂತೆಯೇ, ಅನೇಕ ಸ್ವಿಸ್‌ಗಳು ಫುಟ್‌ಬಾಲ್ ಪಂದ್ಯಕ್ಕೆ ಅಭಿಮಾನಿಗಳಾಗಿದ್ದು, ರಾಷ್ಟ್ರೀಯ ತಂಡ ಅಥವಾ 'Nati'ಗೆ ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಾರೆ. ಸ್ವಿಸ್ ತಂಡ ಕ್ವಾರ್ಟರ್‌ ಫೈನಲ್ಸ್‌‌ಗೂ ಮುನ್ನವೇ ಸೋತರೂ ಸ್ವಿಟ್ಜರ್ಲೆಂಡ್‌,‌ ಆಸ್ಟ್ರಿಯಾದೊಂದಿಗೆ ಯುರೊ 2008ರ ಫುಟ್‌ಬಾಲ್ ಸ್ಪರ್ಧೆಗಳಿಗೆ ಆತಿಥ್ಯ ವಹಿಸಿಕೊಂಡಿತ್ತು. ಮತ್ತೊಂದು ಕಡೆ ಸ್ವಿಸ್ ತಂಡವು 2005ರಲ್ಲಿ ನಡೆದ ಬೀಚ್ ಫುಟ್‌ಬಾಲ್‌ನಲ್ಲಿ ಯುರೊ ಬೀಚ್ ಸಾಕರ್‌ ಕಪ್ಅನ್ನು ಗೆದ್ದರೆ, 2008ರಲ್ಲಿ ನಡೆದ ಬೀಚ್ ಸಾಕರ್‌‌ ಪಂದ್ಯದಲ್ಲಿ ರನ್ನರ್‌-ಅಪ್‌ ಆದರು. ಅನೇಕ ಸ್ವಿಸ್‌ಗಳು ಐಸ್ ಹಾಕಿಯನ್ನು ಇಷ್ಟಪಡುತ್ತಾರೆ ಮತ್ತು 12 ಕ್ಲಬ್‌ಗಳಲ್ಲಿ ಯಾವುದಾದರೂ ಒಂದನ್ನು ಲೀಗ್ Aನಲ್ಲಿ ಬೆಂಬಲಿಸುತ್ತಾರೆ. ಏಪ್ರಿಲ್ 2009ರಲ್ಲಿ, ಸ್ವಿಟ್ಜರ್ಲೆಂಡ್‌‌ 2009ರ IIHF ವಿಶ್ವ ಚಾಂಪಿಯನ್‌ಶಿಪ್‌ ಅನ್ನು ಸತತ 10ನೇ ಬಾರಿಗೆ ನಡೆಸಿಕೊಟ್ಟಿದೆ. ಸ್ವಿಸ್ ತಂಡದ ಇತ್ತೀಚಿನ ಸಾಧನೆಯೆಂದರೆ 1953ರಲ್ಲಿ ನಡೆದ ಐಸ್ ಹಾಕಿಯಲ್ಲಿ, ಕಂಚಿನ ಪದಕವನ್ನು ಗೆದ್ದಿದ್ದು. ಸ್ವಿಟ್ಜರ್ಲೆಂಡ್‌‌ಅಲಿಂಗಿ ಎಂಬ ದೋಣಿ ನಡೆಸುವ ತಂಡ ಹೊಂದಿದ್ದು, ಅದು 2003ರಲ್ಲಿ ಅಮೆರಿಕನ್ ಕಪ್‌ಅನ್ನು ಗೆದ್ದು, 2007ರಲ್ಲಿಯೂ ದಾಖಲೆಯನ್ನು ಉಳಿಸಿಕೊಂಡಿದೆ. ಕಳೆದ 30 ವರ್ಷಗಳಿಂದ ಕರ್ಲಿಂಗ್‌ ಜನಪ್ರಿಯ ಚಳಿಗಾಲದ ಪಂದ್ಯವಾಗಿದ್ದು, ಸ್ವಿಸ್ ತಂಡಗಳು 2 ಮಹಿಳೆಯರ ಮತ್ತು 3 ವಿಶ್ವ ಪುರುಷರ ಕರ್ಲಿಂಗ್ ಚಾಂಪಿಯನ್‌ಶಿಪ್‌ಅನ್ನು ತನ್ನದಾಗಿಸಿಕೊಂಡಿದೆ. 1998ರಲ್ಲಿ ನಡೆದ ನಗಾನೊ ಚಳಿಗಾಲದ ಓಲಂಪಿಕ್ಸ್‌ನಲ್ಲಿ ಸ್ವಿಸ್ ಪುರುಷರ ತಂಡವು ಡೊಮಿನಿಕ್ ಆಂಡ್ರೆಸ್‌ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಇತ್ತೀಚೆಗೆ ಗಾಲ್ಫ್‌ ಕ್ರೀಡೆಯು ಜನಪ್ರಿಯವಾಗುತ್ತಿದ್ದು, 35ಕ್ಕೂ ಹೆಚ್ಚು ಗಾಲ್ಫ್ ಮೈದಾನಗಳು ಈಗಾಗಲೇ ಬಳಕೆಯಲ್ಲಿದ್ದು, ಇನ್ನೂ ಹೆಚ್ಚಿಸಲು ಉದ್ದೇಶಿಸಲಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಸ್ವಿಸ್‌ನ ಟೆನ್ನಿಸ್ ಆಟಗಾರರಾದ ರೋಜರ್ ಫೆಡರರ್ ಮತ್ತು ಮಾರ್ಟಿನಾ ಹಿಂಗಿಸ್‌‌, ಗ್ರ್ಯಾಂಡ್‌ ಸ್ಲಾಮ್‌ ಸಿಂಗಲ್ಸ್‌‌ನಲ್ಲಿ ಹೆಚ್ಚು ಬಾರಿ ಚಾಂಪಿಯನ್‌‌ಶಿಪ್‌‌ ಗಳಿಸಿದ್ದಾರೆ. ಈಗಿನ ಐಸ್ ಸ್ಕೇಟರ್‌ಗಳಲ್ಲಿ ಸ್ವಿಸ್‌ನ ಸ್ಟೀಫನ್ ಲಾಂಬಿಯೆಲ್‌ ಪ್ರಪಂಚದ ಅತ್ಯುತ್ತಮ ಆಟಗಾರರಾಗಿದ್ದಾರೆ. ಸ್ವಿಸ್‌ನ ಆಂಡ್ರೆ ಬಸ್ಸರ್ಟ್‌ ಯಶಸ್ವಿ ವೃತ್ತಿಪರ ಗಾಲ್ಫ್‌ ಆಟಗಾರರಾಗಿದ್ದಾರೆ. ಇಷ್ಟಲ್ಲದೆ ಸ್ವಿಸ್ ಇನ್ನೂ ಕೆಲವು ಪಂದ್ಯಗಳಾದ ಫೆನ್ಸಿಂಗ್‌‌ (ಮಾರ್ಸೆಲ್‌ ಫಿಶರ್), ಸೈಕ್ಲಿಂಗ್‌ (ಫ್ಯಾಬಿಯನ್ ಕೆನ್ಸೆಲ್ಲಾರ), ವ್ಹೈಟ್‌ವಾಟರ್ ಸ್ಲಾಲಮ್‌ (ರೊನ್ನಿಯೇ ದುರೆನ್ಮತ್—ಕೆನೋಯೆ, ಮ್ಯಾಥಿಯಸ್ ರಾತೆನ್ಮಂಡ್—ಕಾಯಕ್), ಐಸ್ ಹಾಕಿ (ಸ್ವಿಸ್ ರಾಷ್ಟ್ರೀಯ ಲೀಗ್), ಬೀಚ್ ವಾಲಿಬಾಲ್‌ (ಸಾಶ ಹ್ಯೇಯರ್, ಮಾರ್ಕಸ್‌ ಎಗ್ಗೆರ್, ಪಾವೆಲ್ ಮತ್ತು ಮಾರ್ಟಿನ್ ಲಸಿಗ), ಮತ್ತು ಸ್ಕೀಯಿಂಗ್‌, (ಬರ್ನಾರ್ಡ್ ರಸ್ಸಿ, ಪಿರ್ಮಿನ್ ಜರ್‍‌‌ಬ್ರಿಗೆನ್ನ್, ಡಿಡಿಯರ್ ಕ್ಯುಷೆ)ಗಳಲ್ಲಿ ಯಶಸ್ವಿಯಾಯಿತು. 1955ರ ಲೀ ಮಾನ್ಸ್ ದುರ್ಘಟನೆಯ ನಂತರ ಪರ್ವತಾರೋಹಣ ಪಂದ್ಯಗಳನ್ನು ಬಿಟ್ಟು ಉಳಿದ ಮೋಟರ್‌ಸ್ಪೋರ್ಟ್ಸ್‌ ಆಟದ ಮೈದಾನಗಳು ಮತ್ತು ಪಂದ್ಯಗಳನ್ನು ಸ್ವಿಟ್ಜರ್ಲೆಂಡ್‌‌‌ನಲ್ಲಿ ನಿಷೇಧಿಸಲಾಗಿದೆ. ಆದರೆ ಈ ನಿಷೇಧವನ್ನು ಜೂನ್‌ 2007ರಲ್ಲಿ ರದ್ದುಮಾಡಲಾಯಿತು. ಈ ಸಂದರ್ಭದಲ್ಲಿಯೂ, ದೇಶವು ಯಶಸ್ವೀ ಸ್ಪರ್ಧಾ ಚಾಲಕರುಗಳಾದ ಕ್ಲೆ ರೆಗ್ಗಾಜೋನಿ, ಜೊ ಸಿಫರ್ಟ್‌ ಮತ್ತು ವಿಶ್ವ ಟೂರಿಂಗ್ ಕಾರ್ ಚಾಂಪಿಯನ್‌ಶಿಪ್‌ನ ಯಶಸ್ವೀ ಚಾಲಕ ಅಲೆನ್ ಮೆನುರನ್ನು ಹೊಂದಿದೆ. ಸ್ವಿಟ್ಜರ್ಲೆಂಡ್‌ನ ಚಾಲಕ ನೀಲ್ ಜಾನಿಯವರು 2007-08ರಲ್ಲಿ ನಡೆದ A1GP ವಿಶ್ವ ಮೋಟಾರ್‌ಸ್ಪೋರ್ಟ್ ಕಪ್‌ ಅನ್ನು ತನ್ನದಾಗಿಸಿಕೊಂಡಿದ್ದಾರೆ. ಸ್ವಿಸ್‌ನ ಮೋಟಾರ್‌ ಸೈಕಲ್ ರೇಸರ್‌ ಥಾಮಸ್‌ ಲೂಥಿ 2005ರಲ್ಲಿ ನಡೆದ MotoGP 125cc ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್‌‍‌ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಫಾರ್ಮುಲಾ ಒನ್‌ ಮತ್ತು ವಿಶ್ವ ರ್ಯಾಲಿ ಚಾಂಪಿಯನ್‌ಶಿಪ್‌ನ ವಿಖ್ಯಾತ ಚಾಲಕರಾದ ಮೈಕೆಲ್‌ ಷೂಮೇಕರ್, ನಿಕ್‌ ಹೇಯ್ಡ್‌ಫೆಲ್ಡ್ಡ್, ಕಿಮಿ ರಾಯ್ಕೊನೆನ್‌, ಫರ್ನ್ಯಾಂಡೊ ಅಲನ್ಸೊ, ಲ್ಯೂಯಿಸ್‌ ಹ್ಯಾಮಿಲ್ಟನ್‌ ಮತ್ತು ಸೆಬಾಸ್ಟಿಯನ್‌ ಲೋಬ್‌ ಎಲ್ಲರೂ ಸ್ವಿಟ್ಜರ್ಲೆಂಡ್‌‌‌ ನಲ್ಲಿ ಮನೆಗಳನ್ನು, ಕೆಲ ಬಾರಿ ತೆರಿಗೆ ಕಾರಣಗಳಿಗಾಗಿಯಾದರೂ ಖರೀದಿಸಿದ್ದಾರೆ. ಪುರಾತನ ಪಂದ್ಯಗಳಲ್ಲಿ ಸ್ವಿಸ್ ಕುಸ್ತಿ ಅಥವಾ "ಶ್ವಿನ್‌ಜೆನ್‌" ಕೂಡ ಒಂದಾಗಿದೆ. ಇದು ಒಂದು ಹಳೆಯ ಸಂಪ್ರದಾಯವಾಗಿದ್ದು ಮಧ್ಯ ಹಳ್ಳಿಗಾಡಿನ ಕ್ಯಾಂಟನ್‌ಗಳು ಮತ್ತು ಕೆಲವು ಕಡೆಗಳಲ್ಲಿ ಇದನ್ನು ರಾಷ್ಟ್ರೀಯ ಪಂದ್ಯವೆಂದು ಪರಿಗಣಿಸಲಾಗಿದೆ. ಹಾರ್ನುಸ್ಸೆನ್‌ ಸ್ವಿಸ್‌ನ ಮತ್ತೊಂದು ದೇಶೀಯ ಪಂದ್ಯವಾಗಿದ್ದು, ಬೇಸ್‌ಬಾಲ್ ಮತ್ತು ಗಾಲ್ಫ್‌ನ ಮಿಶ್ರಣದಂತಿದೆ. ಸ್ವಿಸ್‌ನ ಸ್ಟೇಯ್ನ್‌ಸ್ಟಾಸ್ಸೆನ್‌‌ ಗುಂಡು ಎಸೆತ ಪಂದ್ಯದಂತೆಯೇ ಇದ್ದು, ಭಾರದ ಕಲ್ಲುಗಳನ್ನು ಎಸೆಯುವ ಸ್ಪರ್ಧೆಯಾಗಿದ್ದು, ಸ್ಟೇಯ್ನ್‌ಸ್ಟಾಸ್ಸೆನ್‌ ಪುರಾತನ ಕಾಲದಿಂದಲೂ ಕೇವಲ ಆಲ್ಪೈನ್‌ ಜನಾಂಗದವರು ಮಾತ್ರ ನಡೆಸುತ್ತಾ ಬಂದಿದ್ದು, 13ನೇ ಶತಮಾನದಲ್ಲಿ ಬಸೆಲ್‌ನಲ್ಲಿ ನಡೆಸಿದ್ದ ಬಗ್ಗೆ ಉಲ್ಲೇಖಿಸಲಾಗಿದೆ. 1805ರಲ್ಲಿ ಪ್ರಥಮ ಬಾರಿಗೆ ಉನ್‌ಸ್ಪನ್ನೆನ್‌ಫೆಸ್ಟ್‌‌ನಲ್ಲಿ ನಡೆಸಲಾಗಿದ್ದು, 83.5 kg ಭಾರದ ಕಲ್ಲಿಗೆ ಉನ್‌ಸ್ಪನ್ನೆನ್‌‌ಸ್ಟೆನ್‌ ಎಂದು ಹೇಳಲಾಗಿದೆ. ಆಹಾರ ಸ್ವಿಟ್ಜರ್ಲೆಂಡ್‌‌ನ ಬಹು-ಪಾಕ ಪದ್ದತಿಯನ್ನು ಹೊಂದಿದೆ. ಭಕ್ಷ್ಯಗಳಾದ ಫಂಡ್ಯು, ರಾಕ್ಲೆಟ್ಟೆ ಅಥವಾ ರೊಸ್ಟಿ ದೇಶದ ಎಲ್ಲ ಕಡೆಗಳಲ್ಲಿಯೂ ಲಭ್ಯವಾಗುತ್ತವೆ, ಕೆಲವು ಪ್ರದೇಶವು ಹವಾಗುಣ ಮತ್ತು ಭಾಷೆಗಳ ಭಿನ್ನತೆಯಂತೆ ತನ್ನದೇ ಆದ ಭೋಜನ ಕಲೆ ಮತ್ತು ಶಾಸ್ತ್ರವನ್ನು ರೂಢಿ ಮಾಡಿಕೊಂಡಿದೆ. ಸಾಂಪ್ರದಾಯಿಕ ಸ್ವಿಸ್ ಆಹಾರ ಪದ್ಧತಿಯಲ್ಲಿ, ಇತರೆ ಐರೋಪ್ಯ ರಾಷ್ಟ್ರಗಳಲ್ಲಿ ಬಳಸುವ ರೀತಿಯ ಪದಾರ್ಥಗಳನ್ನೇ ಬಳಸಲಾಗುತ್ತದೆ , ಅವುಗಳೆಂದರೆ ಡೈರಿ ಉತ್ಪನ್ನಗಳು ಹಾಗೂ ಬೆಣ್ಣೆಯಂತಹ ಗ್ರುಯರೆ ಅಥವಾ ಎಮೆಂಟಲ್‌ಅನ್ನು, ಗ್ರುಯರೆ ಮತ್ತು ಎಮೆಂಟಲ್ ಕಣಿವೆಗಳಲ್ಲಿ ಉತ್ಪಾದಿಸಲಾಗುತ್ತದೆ. ಸ್ವಿಟ್ಜರ್ಲೆಂಡ್‌‌ ‌ನಲ್ಲಿ 18ನೇ ಶತಮಾನದಲ್ಲೇ ಚಾಕೋಲೆಟ್ ಉತ್ಪಾದಿಸಲಾಯಿತಾದರೂ ಖ್ಯಾತಿ ಗಳಿಸಿದ್ದು ಮಾತ್ರ 19ನೇ ಶತಮಾನದ ಅಂತ್ಯದಲ್ಲಿ, ಆಧುನಿಕ ಪದ್ಧತಿಗಳಾದ ಕಂಚಿಂಗ್‌ ಮತ್ತು ಟೆಂಪರಿಂಗ್ ಕಂಡುಹಿಡಿದು ಉತ್ಪಾದನಾ ಗುಣಮಟ್ಟವನ್ನು ಹೆಚ್ಚಿಸಿದ ನಂತರವಷ್ಟೇ. 1875ರಲ್ಲಿ ಡೇನಿಯಲ್‌ ಪೀಟರ್‌ ಹಾಲಿನ ಚಾಕೋಲೆಟ್‌ಅನ್ನು ಕಂಡುಹಿಡಿದ ನಂತರ ಅದು ಉತ್ತುಂಗಕ್ಕೇರಿತು. ಸ್ವಿಸ್ ವೈನ್‌ ಮುಖ್ಯವಾಗಿ ವಲಾಯಿಸ್‌, ವಾಡ್‌ (ಲಾವಾಕ್ಸ್‌), ಜಿನೀವಾ ಮತ್ತು ಟಿಕಿನೊಗಳಲ್ಲಿ ಉತ್ಪಾದಿಸಲಾಗುತ್ತದೆ, ಇದರಲ್ಲಿ ಬಿಳಿ ವೈನ್‌ ಕೂಡ ಸ್ವಲ್ಪ ಮಟ್ಟಿಗೆ ಸೇರಿದೆ. ದ್ರಾಕ್ಷಿ ತೋಟಗಳನ್ನು ಸ್ವಿಟ್ಜರ್ಲೆಂಡ್‌‌ನಲ್ಲಿ‌ ರೋಮ್‌ನ ಕಾಲದಿಂದರೂ ಬೆಳೆಸಲಾಗುತ್ತಿದ್ದು, ತುಂಬಾ ಹಳೆಯ ಕಾಲದ ಕುರುಹುಗಳನ್ನು ಕಾಣಬಹುದಾಗಿದೆ. ಸುಪ್ರಸಿದ್ಧವಾದ ವಿಧಗಳೆಂದರೆ ಚಾಸ್ಸೆಲಾಸ್ (ವಲಾಯಿಸ್‌ನಲ್ಲಿ ಫೆನ್‌ಡೆಂಟ್ ಎನ್ನಲಾಗುತ್ತದೆ) ಮತ್ತು ಪಿನೋಟ್ ನಾಯಿರ್‌. ಇವುಗಳಲ್ಲಿ ಟಿಕಿನೊದಲ್ಲಿ ಉತ್ಪಾದಿಸಲಾಗುವ ಮೆರ್ಲೊಟ್‌ ಪ್ರಮುಖ ವಿಧವಾಗಿದೆ. ಇದನ್ನು ನೋಡಿರಿ ಸ್ವಿಟ್ಜರ್ಲೆಂಡ್‌ಗೆ‌-ಸಂಬಂಧಿಸಿದ ಲೇಖನಗಳ ಪರಿವಿಡಿ ಆಕರಗಳು ಚರ್ಚ್‌‌‌, ಕ್ಲೈವ್‌‌‌‌‌‌‌‌‌ H. (2004) '' ಮತ್ತು ದ ಪೊಲಿಟಿಕ್ಸ್ ಆಂಡ್ ಗವರ್ನಮೆಂಟ್ ಆಫ್ ಸ್ವಿಟ್ಜರ್ಲೆಂಡ್‌‌‌.ಪಾಲ್‌ಗ್ರೇವ್‌ ಮ್ಯಾಕ್‌ಮಿಲನ್‌‌‌ ISBN 0-333-69277-2. ಡಾಲ್ಟನ್‌, O.M. (1927) ದ ಹಿಸ್ಟರಿ ಆಫ್‌‌ ದ ಫ್ರಾಂಕ್ಸ್, ಬೈ ಗ್ರೆಗರಿ ಆಫ್ ಟೂರ್ಸ್ . ಆಕ್ಸ್‌ಫರ್ಡ್: ಕ್ಯಾಲೆಂಡರ್ ಮುದ್ರಣಾಲಯ. ಫಹ್‌ರ್ನಿ, ಡೈಯೆಟರ್‌‍‌‍‌. (2003) ಆನ್ ಔಟ್‌ಲೈನ್ ಹಿಸ್ಟರಿ ಆಫ್‌ ಸ್ವಿಟ್ಜರ್ಲೆಂಡ್‌‌. ಫ್ರಮ್‌ ದ ಆರಿಜಿನ್ಸ್‌ ಟು ದ ಪ್ರಸೆಂಟ್‌ ಡೇ . 8ನೇ ವಿಸ್ತೃತ ಆವೃತ್ತಿ. ಪ್ರೊ ಹೆಲ್ವೇಶಿಯಾ, ಜ್ಯೂರಿಚ್‌ . ISBN 3-908102-61-8 ಹಿಸ್ಟಾರಿಕಲ್ ಡಿಕ್ಷನರಿ ಆಫ್‌ ಸ್ವಿಟ್ಜರ್ಲೆಂಡ್‌‌ (2002–). ಸ್ವಿಟ್ಜರ್ಲೆಂಡ್‌‌ನ ಮೂರು ರಾಷ್ಟೀಯ ಭಾಷೆಗಳಲ್ಲಿ ಒಂದೇ ಬಾರಿಗೆ ವಿದ್ಯುನ್ಮಾನ ಮತ್ತು ಮುದ್ರಣ ರೂಪಗಳಲ್ಲಿ‌ ಪ್ರಕಟಿಸಲಾಯಿತು. ಹೊರಗಿನ ಕೊಂಡಿಗಳು ಸರ್ಕಾರ ಸ್ವಿಸ್ ಒಕ್ಕೂಟದ ಸರ್ಕಾರಿ ಸಂಸ್ಥೆಗಳು Chief of State and Cabinet Members ಸ್ವಿಟ್ಜರ್ಲೆಂಡ್‌ನ ಇರುವಿಕೆ ‌ swissworld.org, ಸ್ವಿಟ್ಜರ್ಲೆಂಡ್‌ನ ಮಾಹಿತಿ ತಾಣ ಸ್ವಿಸ್ ಅಂಕಿಅಂಶಗಳು, ಸ್ವಿಸ್‌ ಒಕ್ಕೂಟ ಅಂಕಿಅಂಶಗಳ ಕಛೇರಿಯ ಅಧಿಕೃತ ಅಂತರ್ಜಾಲ ತಾಣವಾಗಿದೆ. Reference ಎನ್ಸೈಕ್ಲೋಪಿಡಿಯಾ ಬ್ರಿಟಾನಿಕ ದಲ್ಲಿ ಸ್ವಿಟ್ಜರ್ಲೆಂಡ್‌‌ ನ ಉಲ್ಲೇಖ UCB ಗ್ರಂಥಾಲಯಗಳ ಸರ್ಕಾರಿ ಪ್ರಕಾಶನಗಳಲ್ಲಿ '' ಸ್ವಿಟ್ಜರ್ಲೆಂಡ್‌‌ ಭೂಗೋಳ ಒಕ್ಕೂಟದ ಭೂಲಕ್ಷಣ ಶಾಸ್ತ್ರ ಕಛೇರಿ. ಪರಸ್ಪರ ಶೋಧ ನಡೆಸಬಹುದಾದ ನಕ್ಷೆಗಳು (search.ch) ಇತಿಹಾಸ ಸ್ವಿಟ್ಜರ್ಲೆಂಡ್‌‌ನ ಐತಿಹಾಸಿಕ ಅರ್ಥಕೋಶ ‌ ಸ್ವಿಟ್ಜರ್ಲೆಂಡ್‌‌ನ‌ ಚರಿತ್ರೆ ಸುದ್ದಿ ಮಾಧ್ಯಮ ನ್ಯೂಯೆ ಜಷೆರ್‌ ಗ್ಸೈಟುಂಗ್‌ , ಸ್ವಿಸ್ ದೈನಿಕ ಸುದ್ದಿ ಪತ್ರಿಕೆ ಲೀ ಟೆಂಪ್ಸ್‌ , ಸ್ವಿಸ್ ದೈನಿಕ ಸುದ್ದಿ ಪತ್ರಿಕೆ ಕರ್ರೇರೆ ದೆಲ್‌ ಟಿಕಿನೊ , ಸ್ವಿಸ್ ದೈನಿಕ ಸುದ್ದಿ ಪತ್ರಿಕೆ swissinfo.ch, ಸ್ವಿಸ್ ಸಮಾಚಾರಗಳು - ವಿಶ್ವದಾದ್ಯಂತ expatinch.com, ಸ್ವಿಸ್ ಮಾಧ್ಯಮ ಸಂಪನ್ಮೂಲಗಳ ಪುಟ. ಶಿಕ್ಷಣ ಸ್ವಿಸ್‌ನ ಶಾಲಾ ವ್ಯವಸ್ಥೆ ಸ್ವಿಟ್ಜರ್ಲೆಂಡ್‌‌‌ನ ವಿಶ್ವವಿದ್ಯಾನಿಲಯಗಳು ವಿಜ್ಞಾನ, ಸಂಶೋಧನೆ ಮತ್ತು ತಾಂತ್ರಿಕತೆ ಸಂಶೋಧನೆ ಮತ್ತು ಬದಲಾವಣೆಗಳಿಗೆ ಸ್ವಿಸ್ ಜಾಲತಾಣ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಆಡಳಿತ ಕಛೇರಿ, SER ಸ್ವಿಸ್ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ CTI, ತಾಂತ್ರಿಕ ಮತ್ತು ನವೀನ ಉತ್ಪಾದನೆಗಳ ಆಯೋಗ ಒಕ್ಕೂಟ ರಾಷ್ಟ್ರಗಳು ಸ್ವಿಟ್ಜರ್ಲೆಂಡ್‌‌ ಉದಾರ ಪ್ರಜಾಪ್ರಭುತ್ವಗಳು ಭೂಪ್ರದೇಶದಿಂದ ಆವೃತವಾಗಿರುವ ದೇಶಗಳು ಫ್ರೆಂಚ್‌ -ಭಾಷಿಕ ದೇಶಗಳು ಜರ್ಮನ್‌-ಭಾಷಿಕ ದೇಶಗಳು ಇಟಾಲಿಯನ್‌-ಭಾಷಿಕ ದೇಶಗಳು 1291ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರಾಂತ್ಯಗಳು ಯುರೋಪಿನ ಒಕ್ಕೂಟ
2174
https://kn.wikipedia.org/wiki/%E0%B2%9C%E0%B2%B0%E0%B3%8D%E0%B2%AE%E0%B2%A8%E0%B2%BF
ಜರ್ಮನಿ
ಜರ್ಮನಿ (ಜರ್ಮನ್: ದೊಯಿಚ್ಲಂತ್), ಅಧಿಕೃತವಾಗಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಕೇಂದ್ರ-ಪಶ್ಚಿಮ ಯುರೋಪ್ ನಲ್ಲಿ ಫೆಡರಲ್ ಸಂಸದೀಯ ಗಣತಂತ್ರ ದೇಶವಾಗಿದೆ.ಇದು 16 ಘಟಕ ರಾಜ್ಯಗಳನ್ನು ಒಳಗೊಂಡಿದೆ. 3,57,021 ಚದರ ಕಿಲೋಮೀಟರ್ (1,37,847 ಚದರ ಮೈಲಿ) ನಷ್ಟು ಪ್ರದೇಶವನ್ನು ಒಳಗೊಂಡಿದೆ ಮತ್ತು ಹೆಚ್ಚಾಗಿ ಸಮಶೀತೋಷ್ಣ ಕಾಲೋಚಿತ ಹವಾಮಾನವನ್ನು ಹೊಂದಿದೆ. 82 ದಶಲಕ್ಷ ನಿವಾಸಿಗಳನ್ನು ಹೊಂದಿರುವ ಜರ್ಮನಿ ಯುರೋಪಿನ ಅತ್ಯಂತ ಜನನಿಬಿಡ ಸದಸ್ಯ ದೇಶವಾಗಿದೆ. ಅಮೇರಿಕಾದ ನಂತರ ಇದು ವಿಶ್ವದ ಎರಡನೇ ಅತ್ಯಂತ ಜನಪ್ರಿಯ ವಲಸೆ ತಾಣವಾಗಿದೆ.ಜರ್ಮನಿಯ ರಾಜಧಾನಿ ಮತ್ತು ದೊಡ್ಡ ಮಹಾನಗರ ಬರ್ಲಿನ್. ಇತರೆ ಪ್ರಮುಖ ನಗರಗಳು ಹ್ಯಾಂಬರ್ಗ್, ಮ್ಯೂನಿಚ್, ಕಲೋನ್, ಫ್ರಾಂಕ್ಫರ್ಟ್, ಸ್ಟಟ್ಗಾರ್ಟ್ ಮತ್ತು ಡಸೆಲ್ಡಾರ್ಫ್ ಸೇರಿವೆ.ಯುರೋಪ್ ಖಂಡದ ಕೇಂದ್ರದಲ್ಲಿರುವ ಈ ರಾಷ್ಟ್ರವು ವಿಶ್ವದ ಅಗ್ರ ಔದ್ಯೋಗಿಕ ದೇಶಗಳಲ್ಲಿ ಒಂದು. ಪದ ವ್ಯುತ್ಪತ್ತಿ ಜರ್ಮನಿ ಎಂಬ ಇಂಗ್ಲಿಷ್ ಪದವು ಲ್ಯಾಟಿನ್ ಜರ್ಮೇನಿಯಾದಿಂದ ಬಂದಿದೆ, ಜೂಲಿಯಸ್ ಸೀಸರ್ ಇದನ್ನು ರೈನ್‌ನ ಪೂರ್ವದ ಜನರಿಗೆ ಅಳವಡಿಸಿಕೊಂಡ ನಂತರ ಬಳಕೆಗೆ ಬಂದಿತು. ಸಂಕ್ಷಿಪ್ತ ಇತಿಹಾಸ ಪ್ರಾಚೀನ ಪ್ರಾಚೀನ ಮಾನವರು ಜರ್ಮನಿಯಲ್ಲಿ ಕನಿಷ್ಠ 600,000 ವರ್ಷಗಳ ಹಿಂದೆ ಇದ್ದರು. [12] ಮೊದಲ ಆಧುನಿಕವಲ್ಲದ ಮಾನವ ಪಳೆಯುಳಿಕೆ (ನಿಯಾಂಡರ್ತಲ್) ಅನ್ನು ನಿಯಾಂಡರ್ ಕಣಿವೆಯಲ್ಲಿ ಕಂಡುಹಿಡಿಯಲಾಯಿತು. [13] ಆಧುನಿಕ ಮಾನವರ ದಿನಾಂಕದ ಪುರಾವೆಗಳು ಸ್ವಾಬಿಯನ್ ಜುರಾದಲ್ಲಿ ಕಂಡುಬಂದಿವೆ, ಇದರಲ್ಲಿ 42,000 ವರ್ಷಗಳಷ್ಟು ಹಳೆಯದಾದ ಕೊಳಲುಗಳು ಸೇರಿವೆ, ಇದು ಇದುವರೆಗೆ ಕಂಡುಬರುವ ಅತ್ಯಂತ ಹಳೆಯ ಸಂಗೀತ ವಾದ್ಯಗಳು, [14] 40,000 ವರ್ಷಗಳಷ್ಟು ಹಳೆಯದಾದ ಲಯನ್ ಮ್ಯಾನ್, [15] ಮತ್ತು 35,000 ವರ್ಷಗಳು ಹೋಲ್ಡ್ ಫೆಲ್ಸ್ನ -ಲ್ಡ್ ವೀನಸ್. [16] ಯುರೋಪಿಯನ್ ಕಂಚಿನ ಯುಗದಲ್ಲಿ ರಚಿಸಲಾದ ನೆಬ್ರಾ ಸ್ಕೈ ಡಿಸ್ಕ್ ಅನ್ನು ಜರ್ಮನ್ ಸೈಟ್‌ಗೆ ಕಾರಣವೆಂದು ಹೇಳಲಾಗಿದೆ. ಷುಲ್ಜ್, ಹ್ಯಾಗನ್ (1998). ಒಂಭತ್ತನೇ ಶತಮಾನದಿಂದ ಕ್ರಿ.ಶ. 486 ಫ್ರಾಂಕಿಷ್ ರಾಜ ಕ್ಲೋವಿಸ್ ರೋಮನ್ ಪ್ರಾಂತ್ಯದ ಗೌಲ್ ಅನ್ನು ಆಕ್ರಮಿಸಿಕೊಂಡನು. ಕ್ಲೋವಿಸ್ ರೋಮನ್ ಜೀವನದ ವೈಶಿಷ್ಟ್ಯಗಳನ್ನು ಪಶ್ಚಿಮ ಜರ್ಮನಿಗೆ ಪರಿಚಯಿಸಿದ. ಕ್ರಿ.ಶ. 9 ರಲ್ಲಿ ಜರ್ಮನಿಕ್ ಯೋಧರು ಟ್ಯೂಟೋಬರ್ಗ್ ಅರಣ್ಯ ಯುದ್ಧದಲ್ಲಿ ರೋಮನ್ ಪಡೆಗಳನ್ನು ನಿರ್ಣಾಯಕವಾಗಿ ಸೋಲಿಸಿದರು. ಕ್ರಿ.ಶ. 843 ವರ್ಡೂನ್ ಒಪ್ಪಂದವು ಚಾರ್ಲ್‌ಮ್ಯಾಗ್ನೆ ಸಾಮ್ರಾಜ್ಯವನ್ನು ಮೂರು ರಾಜ್ಯಗಳಾಗಿ ವಿಂಗಡಿಸಿತು. ಜರ್ಮನ್ ಸಾಮ್ರಾಜ್ಯವು ಶೀಘ್ರದಲ್ಲೇ ಐದು ಡಚೀಸ್ಗಳಾಗಿ ವಿಂಗಡಿಸಲ್ಪಟ್ಟಿತು. ಕ್ರಿ.ಶ. 962 ಒಟ್ಟೊ I ಆಚೆನ್ನಲ್ಲಿ ಪವಿತ್ರ ರೋಮನ್ ಚಕ್ರವರ್ತಿಯಾಗಿ ಪಟ್ಟಾಭಿಷೇಕ ಮಾಡಲಾಯಿತು. 1075 ಹೆನ್ರಿ IV ಮತ್ತು ಪೋಪ್ ಗ್ರೆಗೊರಿ VII ರ ನಡುವಿನ ವಿವಾದವು ಚರ್ಚ್ ಅಧಿಕಾರವನ್ನು ಸ್ಪರ್ಧಿಸುವ ಅಂತರ್ಯುದ್ಧಗಳ ಸರಣಿಯನ್ನು ಪ್ರಾರಂಭಿಸಿತು. ಕ್ರಿ.ಶ.1300 ರ ದಶಕವು ಉತ್ತರ ಜರ್ಮನಿಯಲ್ಲಿ ಹ್ಯಾನ್ಸಿಯಾಟಿಕ್ ಲೀಗ್ ಸರ್ವೋಚ್ಚ ವಾಣಿಜ್ಯ ಮತ್ತು ಮಿಲಿಟರಿ ಶಕ್ತಿಯಾಗಿತ್ತು. ಬ್ಲ್ಯಾಕ್ ಡೆತ್, ಪಿಡುಗು ಮತ್ತು ಇದು ಪ್ಲೇಗ್ ಎಂದೂ ಕರೆಯಲ್ಪಡುತ್ತದೆ, ಮಾನವ ಇತಿಹಾಸದಲ್ಲಿ ದಾಖಲಾದ ಅತ್ಯಂತ ಮಾರಕ ಸಾಂಕ್ರಾಮಿಕ ರೋಗವಾಗಿದೆ, ಇದರ ಪರಿಣಾಮವಾಗಿ ಯುರೇಷಿಯಾ ಮತ್ತು ಉತ್ತರ ಆಫ್ರಿಕಾದಲ್ಲಿ 75-200 ದಶಲಕ್ಷ ಜನರು(ಸುಮಾರು ೨೦ ಕೋಟಿ ಜನರು) ಸಾವನ್ನಪ್ಪಿದರು, ಯುರೋಪಿನಲ್ಲಿ 1347 ರಿಂದ 1351 ರವರೆಗೆ ಬಾಧಿಸಿತು . 1517ರಲ್ಲಿ ಮಾರ್ಟಿನ್ ಲೂಥರ್ ಪ್ರೊಟೆಸ್ಟಂಟ್ ಸುಧಾರಣೆಯನ್ನು ಪ್ರಾರಂಭಿಸಿದರು. ಕ್ರಿ.ಶ.1555 ಆಗ್ಸ್‌ಬರ್ಗ್‌ನ ಶಾಂತಿ ರಾಜಕುಮಾರರು ತಮ್ಮ ಭೂಮಿಗೆ ಲುಥೆರನಿಸಂ ಅಥವಾ ಕ್ಯಾಥೊಲಿಕ್ ಧರ್ಮವನ್ನು ಆಯ್ಕೆ ಮಾಡುವ ಹಕ್ಕನ್ನು ಗುರುತಿಸಿತು. 1648 ವೆಸ್ಟ್ಫಾಲಿಯಾದ ಶಾಂತಿ ಮೂವತ್ತು ವರ್ಷಗಳ ಯುದ್ಧವನ್ನು ಕೊನೆಗೊಳಿಸಿತು. ಕ್ರಿ.ಶ.1740 ಫ್ರೆಡೆರಿಕ್ ದಿ ಗ್ರೇಟ್ ಪ್ರಶ್ಯದ ರಾಜನಾದನು ಮತ್ತು ಪ್ರಶ್ಯವನ್ನು ಒಂದು ದೊಡ್ಡ ಶಕ್ತಿಯಾಗಿ ನಿರ್ಮಿಸಲು ಪ್ರಾರಂಭಿಸಿದನು. 1806 ಕಾನ್ಫಿಡರೇಶನ್ ಆಫ್ ದಿ ರೈನ್ ಸ್ಥಾಪನೆಯೊಂದಿಗೆ ಪವಿತ್ರ ರೋಮನ್ ಸಾಮ್ರಾಜ್ಯ ಕೊನೆಗೊಂಡಿತು. ಕ್ರಿ.ಶ. 1815 ವಿಯೆನ್ನಾದ ಕಾಂಗ್ರೆಸ್‌ನಲ್ಲಿ ಜರ್ಮನ್ ಒಕ್ಕೂಟವನ್ನು ರಚಿಸಲಾಯಿತು. ಕ್ರಿ.ಶ.1848 ರಲ್ಲಿ ಜರ್ಮನಿಯಾದ್ಯಂತ ಕ್ರಾಂತಿಗಳು ವ್ಯಾಪಿಸಿದವು. ಜರ್ಮನಿಯ ಮೊದಲ ರಾಷ್ಟ್ರೀಯ ಅಸೆಂಬ್ಲಿ ಫ್ರಾಂಕ್‌ಫರ್ಟ್‌ನಲ್ಲಿ ಹೆಚ್ಚು ಏಕೀಕೃತ ದೇಶವನ್ನು ರಚಿಸುವ ಭರವಸೆಯಲ್ಲಿ ಸಭೆ ಸೇರಿತು, ಆದರೆ ಕ್ರಾಂತಿಗಳನ್ನು ಹತ್ತಿಕ್ಕಲಾಯಿತು. ಕ್ರಿ.ಶ.1871 ರಲ್ಲಿ ಪ್ರಶ್ಯನ್ ಪ್ರಧಾನಿ ಒಟ್ಟೊ ವಾನ್ ಬಿಸ್ಮಾರ್ಕ್ ಜರ್ಮನ್ ಸಾಮ್ರಾಜ್ಯವನ್ನು ಸ್ಥಾಪಿಸಿದಂತೆ ಯುನೈಟೆಡ್ ಜರ್ಮನಿಯ ಕನಸನ್ನು ನನಸಾಗಿಸಿದರು. ಕ್ರಿ.ಶ.1914-1918 ಮೊದಲನೆಯ ಮಹಾಯುದ್ಧದಲ್ಲಿ ಜರ್ಮನಿ ಕೇಂದ್ರ ಶಕ್ತಿಗಳ ಪ್ರಮುಖ ಹೋರಾಟಗಾರ. 1.5 ದಶಲಕ್ಷಕ್ಕೂ ಹೆಚ್ಚು ಜರ್ಮನ್ ಸೈನಿಕರು ಕೊಲ್ಲಲ್ಪಟ್ಟರು. ಮಾರ್ಟಿನ್ ಲೂಥರ್ ಮಾರ್ಟಿನ್ ಲೂಥರ್, (10 ನವೆಂಬರ್ 1483– 18 ಫೆಬ್ರವರಿ 1546) 10 ನವೆಂಬರ್ 1483 ರಂದು ಐಸ್ಲೆಬೆನ್‌ನಲ್ಲಿ ಜನಿಸಿದರು. ಅವರು ಜರ್ಮನ್ ಧರ್ಮಶಾಸ್ತ್ರದ ಪ್ರಾಧ್ಯಾಪಕರು, ಸಂಯೋಜಕ, ಪಾದ್ರಿ, ಅಗಸ್ಟಿನಿಯನ್ ಸನ್ಯಾಸಿ ಮತ್ತು ಪ್ರೊಟೆಸ್ಟಂಟ್ ಸುಧಾರಣೆಯಲ್ಲಿ ಮೂಲ ವ್ಯಕ್ತಿ. 1507 ರಲ್ಲಿ ಲೂಥರ್ ಅವರನ್ನು ಪೌರೋಹಿತ್ಯಕ್ಕೆ ನೇಮಿಸಲಾಯಿತು. ರೋಮನ್ ಕ್ಯಾಥೊಲಿಕ್ ಚರ್ಚಿನ ಹಲವಾರು ಬೋಧನೆಗಳು ಮತ್ತು ಆಚರಣೆಗಳನ್ನು ತಿರಸ್ಕರಿಸಲು ಅವರು ಬಂದರು; ನಿರ್ದಿಷ್ಟವಾಗಿ ಹೇಳುವುದಾದರೆ, ಅವರು ಭೋಗದ ಬಗ್ಗೆ ಚರ್ಚಿನ ಅಭಿಪ್ರಾಯವನ್ನು ವಿರೋಧಿಸಿದರು. ಅವರ ಬರಹಗಳು ಪ್ರೊಟೆಸ್ಟಂಟ್ ಸುಧಾರಣೆಗೆ ಪ್ರೇರಣೆ ನೀಡಿತು. ಪಾದ್ರಿಗಳು 'ಭೋಗಪತ್ರಗಳನ್ನು (Indulgences')(ದೇವನ ಕ್ಷಮಾಪತ್ರಗಳು) ಮಾರುವ ಬಗ್ಗೆ ಲೂಥರ್ ಹೆಚ್ಚು ಕೋಪಗೊಂಡರು - ಪಾಪದ ಶಿಕ್ಷೆಯಿಂದ ವಿಮೋಚನೆ ನೀಡುವ ಭರವಸೆ ನೀಡಿದ, ಇನ್ನೂ ಜೀವಂತವಾಗಿರುವ ಯಾರಿಗಾದರೂ ಅಥವಾ ಮರಣ ಹೊಂದಿದ ಮತ್ತು ಶುದ್ಧೀಕರಣದಲ್ಲಿದ್ದಾರೆ ಎಂದು ನಂಬಲಾದವರಿಗೆ ಪಾದ್ರಿಗಳು(ಉನ್ನತ ಗುರು ಪೋಪ್‍ರು) ಪಾಪದ ಶಿಕ್ಷೆಯಿಂದ ವಿಮೋಚನೆ ನೀಡುವ ಭರವಸೆ ನೀಡುವುದನ್ನು ವಿರೋಧಿಸಿದರು. 31 ಅಕ್ಟೋಬರ್ 1517 ರಂದು, ಚರ್ಚಿನ ತಪ್ಪುನೆಡೆ ಬಗ್ಗೆ ಅವರು ತಮ್ಮ '95 ಪ್ರಬಂಧಗಳನ್ನು 'ಪ್ರಕಟಿಸಿದರು, ಪಾಪಲ್ ನಿಂದನೆ ಮತ್ತು ಭೋಗಗಳ ಮಾರಾಟದ ಮೇಲೆ ದಾಳಿ ಮಾಡಿದರು. 1534 ರಲ್ಲಿ, ಲೂಥರ್ ಬೈಬಲ್‌ನ ಸಂಪೂರ್ಣ ಅನುವಾದವನ್ನು ಜರ್ಮನ್ ಭಾಷೆಗೆ ಪ್ರಕಟಿಸಿದರು, ಜನರು ಅದನ್ನು ತಮ್ಮ ಭಾಷೆಯಲ್ಲಿ ಓದಲು ಸಾಧ್ಯವಾಗುತ್ತದೆ ಎಂಬ ಅವರ ನಂಬಿಕೆಯನ್ನು ಒತ್ತಿಹೇಳಿದರು. ಅನುವಾದವು ಜರ್ಮನ್ ಭಾಷೆಯ ಹರಡುವಿಕೆ ಮತ್ತು ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿತು. ಲೂಥರ್‌ನ ಪ್ರಭಾವವು ಉತ್ತರ ಮತ್ತು ಪೂರ್ವ ಯುರೋಪಿನಾದ್ಯಂತ ಹರಡಿತು ಮತ್ತು ಅವನ ಖ್ಯಾತಿಯು ವಿಟ್ಟನ್‌ಬರ್ಗ್‌ನನ್ನು ಬೌದ್ಧಿಕ ಕೇಂದ್ರವನ್ನಾಗಿ ಮಾಡಿತು. ತಮ್ಮ ಅಂತಿಮ ವರ್ಷಗಳಲ್ಲಿ ಅವರು ಸುಧಾರಣಾ ಚಳವಳಿಯ ಆಮೂಲಾಗ್ರ ವಿಭಾಗವಾದ ಯಹೂದಿಗಳು, ಪೋಪಸಿ ಮತ್ತು ಅನಾಬಾಪ್ಟಿಸ್ಟ್‌ಗಳ ವಿರುದ್ಧ ವಿವಾದಗಳನ್ನು ಕುರಿತು ಬರೆದರು. ಹೀಗೆ 1517 ರಲ್ಲಿ ಜರ್ಮನಿಯಲ್ಲಿ ಪ್ರೊಟೆಸ್ಟಾಂಟಿಸಂ (ಪ್ರೊಟೆಸ್ಂಟ್ ಕ್ರಿಸ್ಟಿಯಾನಿಟಿ) ಪ್ರಾರಂಭವಾಯಿತು, ರೋಮನ್ ಕ್ಯಾಥೊಲಿಕ್ ಚರ್ಚ್ 'ಭೋಗಪತ್ರಗಳನ್ನು (Indulgences') ಮಾರಾಟದಲ್ಲಿನ ದುರುಪಯೋಗದ ವಿರುದ್ಧದ ಪ್ರತಿಕ್ರಿಯೆಯಾಗಿ ಪ್ರೊಟೆಸ್ಟಾಂಟಿಸಂ ಪ್ರಾರಂಭವಾಯಿತು ಪ್ರೊಟೆಸ್ಟಾಂಟಿಸಮ್ ಅಥವಾ ಪ್ರತಿಭಟನಾಕಾರ ಕ್ರಿಶ್ಚಿಯನ್ ಧರ್ಮವು ಕ್ರಿಶ್ಚಿಯನ್ ಧರ್ಮದ ಎರಡನೇ ಅತಿದೊಡ್ಡ ವಿಭಾಗವಾಗಿದೆ, ಇದು ವಿಶ್ವದಾದ್ಯಂತ ಒಟ್ಟು 800 ಮಿಲಿಯನ್‌ನಿಂದ 1 ಬಿಲಿಯನ್ (10 ಕೋಟಿ) ಅನುಯಾಯಿಗಳನ್ನು ಹೊಂದಿದೆ ಅಥವಾ ಎಲ್ಲಾ ಕ್ರೈಸ್ತರಲ್ಲಿ ಸುಮಾರು 37% (೩೩.೩%?)ನಷ್ಟು ಇದೆ. ಒಂದನೆಯ ಮಹಾಯುದ್ಧ(1914-18):ಯುದ್ಧಮುಕ್ತಾಯದ ಕೌಲು- ಪ್ಯಾರಿಸ್ ಸಮ್ಮೇಳನ 28 ಜೂನ್ 1914 ರಂದು ಆಸ್ಟ್ರಿಯಾದ ದೊರೆ ರಾಜಕುಮಾರನ ಹತ್ಯೆಯು ಆಸ್ಟ್ರಿಯನ್ ಸಾಮ್ರಾಜ್ಯಕ್ಕೆ ಸೆರ್ಬಿಯಾದ ಮೇಲೆ ದಾಳಿ ಮಾಡಲು ಮತ್ತು ಮೊದಲನೆಯ ಮಹಾಯುದ್ಧವನ್ನು ಪ್ರಚೋದಿಸುವ ನೆಪವನ್ನು ಒದಗಿಸಿತು. ನಾಲ್ಕು ವರ್ಷಗಳ ಯುದ್ಧದ ನಂತರ, ಸುಮಾರು ಎರಡು ಮಿಲಿಯನ್ ಜರ್ಮನ್ ಸೈನಿಕರು ಕೊಲ್ಲಲ್ಪಟ್ಟರು, ಸಾಮಾನ್ಯ ಕದನವಿರಾಮದ ಒಪ್ಪಂದದಿಂದ ಹೋರಾಟ ಕೊನೆಗೊಂಡಿತು. ಜರ್ಮನ್ ಕ್ರಾಂತಿಯಲ್ಲಿ (ನವೆಂಬರ್ 1918), ಚಕ್ರವರ್ತಿ ವಿಲ್ಹೆಲ್ಮ್ II ಮತ್ತು ಆಳುವ ರಾಜಕುಮಾರರು ತಮ್ಮ ಸ್ಥಾನಗಳನ್ನು ತ್ಯಜಿಸಿದರು ಮತ್ತು ಜರ್ಮನಿಯನ್ನು ಫೆಡರಲ್ ಗಣರಾಜ್ಯವೆಂದು ಘೋಷಿಸಲಾಯಿತು. ಜರ್ಮನಿಯ ಹೊಸ ನಾಯಕತ್ವವು ಮಿತ್ರರಾಷ್ಟ್ರಗಳ ಸೋಲನ್ನು ಒಪ್ಪಿಕೊಂಡು 1919 ರಲ್ಲಿ ವರ್ಸೈಲ್ಸ್ ಒಪ್ಪಂದಕ್ಕೆ ಸಹಿ ಹಾಕಿತು. ಜರ್ಮನ್ನರು ಈ ಒಪ್ಪಂದವನ್ನು ಅವಮಾನಕರವೆಂದು ಗ್ರಹಿಸಿದರು, ಇದು ಅಡಾಲ್ಫ್ ಹಿಟ್ಲರನ ಉದಯಕ್ಕೆ ಪ್ರಭಾವಶಾಲಿ ಕಾರಣ ಎಂದು ಇತಿಹಾಸಕಾರರು ಎಂದು ಭಾವಿಸಿದರು. ಜರ್ಮನಿ ತನ್ನ ಯುರೋಪಿಯನ್ ಭೂಪ್ರದೇಶದ ಸುಮಾರು 13% ನಷ್ಟು ಭಾಗವನ್ನು ಕಳೆದುಕೊಂಡಿತು ಮತ್ತು ಆಫ್ರಿಕಾ ಮತ್ತು ದಕ್ಷಿಣ ಸಮುದ್ರದಲ್ಲಿನ ತನ್ನ ಎಲ್ಲಾ ವಸಾಹತುಶಾಹಿ ಆಸ್ತಿಯನ್ನು ಬಿಟ್ಟುಕೊಟ್ಟಿತು. ಪ್ಯಾರಿಸ್ ಸಮ್ಮೇಳನ - ಒಂದನೆಯ ಮಹಾಯುದ್ಧವನ್ನು (1914-18) ಕೊನೆಗೊಳಿಸುವ ಕೌಲುಗಳ ರಚನೆಗಾಗಿ 1919-20 ರಲ್ಲಿ ಪ್ಯಾರಿಸಿನಲ್ಲಿ ಸಮಾವೇಶಗೊಂಡಿದ್ದ ಸಮ್ಮೇಳನ. ಜರ್ಮನಿ ಮತ್ತು ಅದರೊಂದಿಗೆ ಕೂಡಿದ್ದ ರಾಷ್ಟ್ರಗಳ ವಿರುದ್ಧ ಹೋರಾಟ ನಡೆಸಿದ್ದು ಇಲ್ಲವೆ ಆ ಕೇಂದ್ರಶಕ್ತಿಗಳೊಂದಿಗೆ ರಾಯಭಾರ ಸಂಬಂಧವನ್ನು ಕಡಿದುಕೊಂಡಿದ್ದ ಮತ್ತು ಯಾವ ಪಕ್ಷಕ್ಕೂ ಸೇರದೆ ತಟಸ್ಥವಾಗಿದ್ದ ರಾಷ್ಟ್ರಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಸೇರಿದ್ದರು. ಹಿನ್ನೆಲೆ 1918 ರ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಜರ್ಮನಿ ಹಾಗೂ ಅದರೊಂದಿಗೆ ಸೇರಿದ್ದ ಬಲ್ಗೇರಿಯ, ತುರ್ಕಿ, ಆಸ್ಟ್ರಿಯ-ಹಂಗೇರಿ ದೇಶಗಳು ಯುದ್ಧದಲ್ಲಿ ಸೋಲುವ ಸ್ಥಿತಿ ತಲುಪಿದ್ದವು. ತನ್ನ ಎಲ್ಲ ಮಿತ್ರ ರಾಷ್ಟ್ರಗಳೂ ಕುಸಿದುಬಿದ್ದಾಗ ತಾನೂ ಬೇಷರತ್ತಾಗಿ ಶರಣಾಗತವಾಗುವುದು ಜರ್ಮನಿಗೆ ಅನಿವಾರ್ಯವಾಗಿತ್ತು. ಕೇಂದ್ರಶಕ್ತಿಗಳ ವಿರುದ್ಧ ಯುದ್ಧನಿರತವಾಗಿದ್ಧ ಮಿತ್ರರಾಷ್ಟ್ರಗಳೊಂದಿಗೆ ಶಾಂತಿ ಮಾಡಿಕೊಳ್ಳಲು ಜರ್ಮನಿ ಹಾತೊರೆಯುತ್ತಿತ್ತು. ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ವುಡ್‍ರೋ ವಿಲ್ಸನರು ಶಾಂತಿಸ್ಥಾಪನೆಗೆ ಅಗತ್ಯವಾದ ಹದಿನಾಲ್ಕು ಅಂಶಗಳನ್ನು ಸೂಚಿಸಿದರು. ಜರ್ಮನಿ ಶಾಂತಿ ಭಿಕ್ಷೆಯನ್ನು ಯಾಚಿಸಿ 1918 ರ ಅಕ್ಟೋಬರ್ 4 ರಂದು ಸ್ವಿಸ್ ಸರ್ಕಾರದ ಮೂಲಕ ವಿಲ್ಸನರಿಗೆ ಪತ್ರ ಕಳಿಸಿತು. ವಿಧಿಸಿದ ಎಲ್ಲ ಹದಿನಾಲ್ಕು ಅಂಶಗಳನ್ನೂ ಜರ್ಮನಿ ಒಪ್ಪಿಕೊಳ್ಳಬೇಕು. ಮಿತ್ರ ಸೇನಾಧಿಕಾರಿಗಳ ನೇತೃತ್ವದಲ್ಲಿ ಮಿತ್ರರಾಷ್ಟ್ರಗಳ ಪ್ರದೇಶಗಳ ಆಕ್ರಮಣವನ್ನು ಜರ್ಮನಿ ತೆರವು ಮಾಡಬೇಕು, ನ್ಯಾಯ ಬಾಹಿರವಾದ ಹಾಗೂ ಅಮಾನುಷವಾದ ಎಲ್ಲ ಕ್ರಮಗಳನ್ನೂ ಜರ್ಮನಿ ಕೊನೆಗೊಳಿಸಿ ಜಲಾಂತರ್ಗಾಮಿ ಯುದ್ಧವನ್ನು ತೊರೆಯಬೇಕು. ಯುದ್ಧಕ್ಕೆ ಕಾರಣವಾದ ಬೇಜವಾಬ್ದಾರಿ ಸರ್ಕಾರವನ್ನು ಜರ್ಮನಿ ವಿಸರ್ಜಿಸಬೇಕು ಎಂಬ ಷರತ್ತುಗಳಿಗೆ ಜರ್ಮನಿ ಒಪ್ಪುವುದಾದರೆ ಮಾತ್ರ ಶಾಂತಿ ಸಂಧಾನಕ್ಕೆ ಒಡಂಬಡಬಹುದೆಂದು ವಿಲ್ಸನರು ಜರ್ಮನ್ ಪತ್ರಕ್ಕೆ ಉತ್ತರ ಕಳಿಸಿದರು. ಈ ಷರತ್ತುಗಳಿಗೆ ಸಮ್ಮತಿಸದೆ ಜರ್ಮನಿಯ ಜನರಲ್ ಎರಿಕ್ ಲೂಡೆಂಡಾರ್ಫ್ ರಾಜೀನಾಮೆ ನೀಡಿದ. ಅದರೆ ಅಲ್ಲಿಯ ಅ ಸೈನಿಕ ಸರ್ಕಾರ ಈ ಷರತ್ತುಗಳಿಗೆ ಒಪ್ಪಿ ಅಕ್ಟೋಬರ್ 20 ರಂದು ಪತ್ರ ಕಳಸಿತು. ಅದಾಗ್ಯೂ ಜರ್ಮನಿ ನ್ಯಾಯಬಾಹಿರವಾದ ಹಾಗೂ ಅಮಾನುಷವಾದ ಕೃತ್ಯಗಳನ್ನೆಸಗುತ್ತಿದೆಯೆಂಬ ಆಪಾದನೆಯನ್ನು ಅದು ನಿರಾಕರಿಸಿತು. ವಿಲ್ಸನರು ಈ ವಿಷಯವನ್ನು ಮಿತ್ರ ರಾಷ್ಟ್ರಗಳಿಗೆ ಒಪ್ಪಿಸಿದರು. ಜರ್ಮನಿಯೊಂದಿಗೆ ಶಾಂತಿ ಕೌಲು ಮಾಡಿಕೊಳ್ಳಬಹುದೇ, ವಿಲ್ಸನರ ಹದಿನಾಲ್ಕು ಅಂಶಗಳು ಸಂಧಾನಕ್ಕೆ ಆಧಾರವಾಗಬಹುದೇ ಎಂಬುದು ಮಿತ್ರರಾಷ್ಟ್ರಗಳಲ್ಲಿ ಚರ್ಚೆಯಾಯಿತು. ಜರ್ಮನಿಯೊಂದಿಗೆ ಶಾಂತಿ ಮಾಡಿಕೊಳ್ಳುವುದು ಸಾಧುವೇ ಅಲ್ಲವೇ ಎಂಬ ಬಗ್ಗೆ ಸೇನಾ ಮುಖ್ಯರೊಂದಿಗೂ ಸಮಾಲೋಚನೆ ನಡೆಸಲಾಯಿತು. ಜರ್ಮನಿಯ ರಾಜಧಾನಿಯಾದ ಬರ್ಲಿನ್ನನ್ನು ಮಿತ್ರ ಸೇನೆಗಳು ಆಕ್ರಮಿಸಿಕೊಂಡು ಆ ದೇಶ ಸಂಪೂರ್ಣವಾಗಿ ಶರಣಾದಾಗಲೂ ಇವಕ್ಕಿಂತ ಭಿನ್ನವಾದ ಷರತ್ತುಗಳನ್ನು ಹಾಕುವುದು ಸಾಧ್ಯವಿಲ್ಲವಾದ್ದರಿಂದ ಈ ಷರತ್ತುಗಳಿಗೆ ಅನುಗುಣವಾಗಿ ಜರ್ಮನಿಯೊಂದಿಗೆ ಈಗಲೇ ಶಾಂತಿ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲವೆಂದು ಸೇನಾ ಮುಖ್ಯರ ಅಭಿಪ್ರಾಯಪಟ್ಟರು. ಅನಾವಶ್ಯಕವಾಗಿ ಪ್ರಾಣಹಾನಿ ತಪ್ಪಿಸುವುದು ಇದರಿಂದ ಸಾಧ್ಯವಾಗುವುದೆಂಬುದು ಅವರ ಭಾವನೆಯಾಗಿತ್ತು. ವಿಲ್ಸನರು ಸೂಚಿಸಿದ್ದ ಹದಿನಾಲ್ಕು ಅಂಶಗಳು ಅಮೇರಿಕ ಅಧ್ಯಕ್ಷ ವಿಲ್ಸನರು ಸೂಚಿಸಿದ್ದ ಹದಿನಾಲ್ಕು ಅಂಶಗಳು ಶಾಂತಿಗೆ ಆಧಾರವಾಗಬಹುದೇ ಎಂಬ ವಿಚಾರವಾಗಿ ಮಿತ್ರನಾಯಕರಲ್ಲಿ ಒಮ್ಮತವಿರಲಿಲ್ಲ. ಕೊನೆಗೆ ಕೆಲವು ಉಪಾಧಿಗಳೊಂದಿಗೆ ಇವನ್ನು ಒಪ್ಪಲಾಯಿತು. ಅಂತೆಯೇ ವಿಲ್ಸನರು ನವೆಂಬರ್ 5 ರಂದು ಮಿತ್ರರಾಷ್ಟ್ರಗಳ ಉತ್ತರವನ್ನು ಜರ್ಮನ್ ಸರ್ಕಾರಕ್ಕೆ ತಿಳಿಸಿದರು. ಜರ್ಮನಿಯೊಂದಿಗೆ ಯುದ್ಧವಿರಾಮ ಒಡಂಬಡಿಕೆಯನ್ನೂ ಶಾಂತಿ ಕೌಲನ್ನೂ ಮಾಡಿಕೊಳ್ಳಲು ಮಿತ್ರ ಹಾಗೂ ಸಹಯೋಗಿ ರಾಜ್ಯಗಳು ಒಪ್ಪಿವೆಯೆಂದು ಇದರಲ್ಲಿ ಸೂಚಿಸಲಾಗಿತ್ತು. ಅಧ್ಯಕ್ಷ ವಿಲ್ಸನರ ಜನವರಿ 8 ರ ಮತ್ತು ಅನಂತರ ಭಾಷಣಗಳಿಗೆ ಅನುಗುಣವಾಗಿ. ಆದರೆ ಸಾಗರಗಳ ಸ್ವಾತಂತ್ರ್ಯ ಹಾಗೂ ಆಕ್ರಮಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಕೆಲವು ಉಪಾಧಿಗಳೊಂದಿಗೆ ಈ ಒಪ್ಪಿಗೆ ನೀಡಲಾಯಿತು. ಯುದ್ಧ ವಿರಾಮ ಒಪ್ಪಂದಕ್ಕೆ ಪೂರ್ವದ ಈ ಒಡಂಬಡಿಕೆಯೇ ಶಾಂತಿಯ ಕೌಲಿಗೆ ತಳಹದಿಯಾಗತಕ್ಕದೆಂಬುದನ್ನು ಎರಡೂ ಪಕ್ಷಗಳು ಒಪ್ಪಿದವು. ಮುಖ್ಯ ಮಿತ್ರ ಹಾಗೂ ಸಹಯೋಗಿ ರಾಜ್ಯಗಳಾದ ಫ್ರಾನ್ಸ್, ಬ್ರಿಟನ್, ಇಟಲಿ, ಜಪಾನ್, ಅಮೆರಿಕ ಸಂಯುಕ್ತ ಸಂಸ್ಥಾನ-ಇವು ಡಿಸೆಂಬರ್ ತಿಂಗಳಲ್ಲಿ ಪರಸ್ಪರ ಸಮಾಲೋಚನೆ ನಡೆಸಿದವು. ಪ್ರಥಮ ಸಕಲ ಸದಸ್ಯ ಸಭೆ ಸಮಾವೇಶಗೊಂಡದ್ದು 1919 ರ ಜನವರಿ 18 ರಂದು. ಜನವರಿ 12 ರಂದು ಸರ್ವೋಚ್ಚ ಯುದ್ಧ ಮಂಡಲಿಯ ಸಭೆ ಪ್ಯಾರಿಸಿನಲ್ಲಿ ಸೇರಿತ್ತು. ಬ್ರಿಟನ್, ಫ್ರಾನ್ಸ್, ಇಟಲಿ, ಅಮೆರಿಕಗಳ ಪ್ರತಿನಿಧಿಗಳಿಂದ ಕೂಡಿದ ಮಂಡಲಿಯಿದು. ಸಮ್ಮೇಳನದ ಸರ್ವೊಚ್ಚ ಮಂಡಲಿಗೆ ಜಪಾನನ್ನೂ ಸೇರಿಸಬಹುದೆಂಬುದು ಈ ಮಂಡಲಿಯ ಸಭೆಯ ಮುಖ್ಯ ತೀರ್ಮಾನ. ಶಾಂತಿಯ ಷರತ್ತುಗಳನ್ನು ನಿರ್ಣಯಿಸುವ ಕಾರ್ಯದಲ್ಲಿ ಭಾಗವಹಿಸುವ ಬಯಕೆ ಹಲವು ರಾಷ್ಟ್ರಗಳಿಗಿತ್ತು. ಕೇಂದ್ರಶಕ್ತಿಗಳ ವಿರುದ್ಧ ಹೋರಾಡಿದ ಬೆಲ್ಚಿಯಮ್, ಸರ್ಬಿಯ, ರುಮೇನಿಯ, ಗ್ರೀಸ್ ಮತ್ತು ಇತರ ರಾಜ್ಯಗಳಿಗೆ ಮತ ಚಲಾಯಿಸುವ ಅಧಿಕಾರ ನೀಡಲಾಯಿತು. ಯುದ್ಧದಲ್ಲಿ ತಟಸ್ಥವಾಗಿದ್ದರೂ ಶಾಂತಿಯ ಕೌಲು ರೂಪಿತವಾಗುವಾಗ ತಮ್ಮ ಹಿತಗಳನ್ನು ರಕ್ಷಿಸಿಕೊಳ್ಳಬಯಸಿದ ರಾಜ್ಯಗಳೂ ಇದ್ದುವು. ಇವಕ್ಕೆಲ್ಲ ಪ್ರಮುಖ ಸ್ಥಾನ ನೀಡುವುದಂತೂ ಅಸಾಧ್ಯವಾಗಿತ್ತು. ಈ ರಾಜ್ಯಗಳ ಹಿಡಿತಗಳಿಗೆ ಸಂಬಂಧಿಸಿದ ಪ್ರಶ್ನೆ ಚರ್ಚೆಯಾಗುವಾಗ ಇವುಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿರಲು ಅವಕಾಶ ನೀಡಲಾಯಿತು. ಪಂಚ ಪ್ರಮುಖ ರಾಜ್ಯಗಳು ಈ ಪ್ರಶ್ನೆಯನ್ನು ಇತ್ಯರ್ಥ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡವು. ವಿವಿಧ ರಾಜ್ಯಗಳ ಸೇನಾಬಲ, ಯುದ್ಧದಲ್ಲಿ ಅವುಗಳ ಪಾತ್ರ ಇವುಗಳಿಗೆ ಅನುಗುಣವಾಗಿ ಸ್ಥಾನಗಳನ್ನು ನಿಗದಿ ಮಾಡಲಾಯಿತು. ಸಕಲ ಸದಸ್ಯ ಸಭೆಯಲ್ಲಿ ಐದು ಪ್ರಧಾನ ರಾಜ್ಯಗಳಿಗೆ ತಲಾ ಐದು, ಬೆಲ್ಜಿಯಮ್, ಸರ್ಬಿಯ, ಬ್ರಜಿಲ್‍ಗಳಿಗೆ ತಲಾ ಮೂರು, ಕೆನಡ, ಆಸ್ಟ್ರೇಲಿಯ, ದಕ್ಷಿಣ ಅಫ್ರಿಕ, ಭಾರತ, ಚೀನ, ಚೆಕೊಸ್ಲೊವಾಕಿಯ, ಪೋಲೆಂಡ್, ಗ್ರೀಸ್, ಹೆಜಾಜ್, ಪೋರ್ಚುಗಲ್, ರುಮೇನಿಯ, ಸಯಾಮ್ (ಈಗಿನ ಥೈಲೆಂಡ್)ಗಳಿಗೆ ತಲಾ ಎರಡು: ನ್ಯೂಜಿಲೆಂಡ್, ಬೊಲಿವಿಯ, ಕ್ಯೂಬ, ಎಕ್ವಡಾರ್, ಗ್ವಾಟೆಮಾಲ, ಹೈಟಿ, ಹಾಂಡುರಾಸ್, ಲೈಬೀರಿಯ, ನಿಕರಾಗ್ವ, ಪನಾಮಾ, ಪೆರು, ಉರುಗ್ವೆ ರಾಜ್ಯಗಳಿಗೆ ತಲಾ ಒಂದು-ಹೀಗೆ ಸ್ಥಾನಗಳು ನಿಗದಿಯಾದವು. ಸಕಲ ಸದಸ್ಯ ಸಭೆ: 1919 ಜನವರಿ 18 ರಂದು ಪ್ರಥಮ ಸಕಲ ಸದಸ್ಯರ ಸಭೆ ಸೇರಿದಾಗ ಅದು ನಡೆಸಿದ ಕಲಾಪವೆಂದರೆ, ಸರ್ವೋಚ್ಚ ಮಂಡಳಿಯ ನಿರ್ಧಾರಗಳಿಗೆಲ್ಲ ಒಪ್ಪಿಗೆ ನೀಡುವುದು. ಫ್ರಾನ್ಸಿನ ಪ್ರಧಾನಿಯಾಗಿದ್ದ ಕ್ಲೇಮಾನ್ಸೋ ಅವರನ್ನು ಸಭೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸರ್ವೋಚ್ಚ ಮಂಡಲಿಯಿಂದ ಮುಂಚೆಯೇ ಆರಿಸಲ್ಪಟ್ಟವರೊಬ್ಬರು ಮಹಾ ಕಾರ್ಯದರ್ಶಿಯಾಗಿ ನೇಮಕಗೊಂಡರು. ಐದು ಪ್ರಧಾನ ರಾಷ್ಟ್ರಗಳ ಪ್ರತಿನಿಧಿಗಳನ್ನೊಳಗೊಂಡ ಕೌಲು ರಚನಾ ಸಮಿತಿಯೊಂದನ್ನು ರಚಿಸಲಾಯಿತು. ಐದು ಪ್ರಮುಖ ರಾಷ್ಟ್ರಗಳೇ ಹೀಗೆ ಎಲ್ಲ ಅಧಿಕಾರವನ್ನೂ ತಮ್ಮಲ್ಲೇ ಇಟ್ಟುಕೊಂಡದ್ದು ಸಣ್ಣ ರಾಷ್ಟ್ರಗಳಿಗೆ ಹಿಡಿಸಲಿಲ್ಲ. ಆದರೆ ಅವುಗಳ ಪ್ರತಿಭಟನೆಯನ್ನು ದೊಡ್ಡ ರಾಷ್ಟ್ರಗಳು ಲೆಕ್ಕಿಸಲಿಲ್ಲ. ಶಾಂತಿ ಸಮ್ಮೇಳನದ ಪ್ರಮುಖ ಕಾರ್ಯವೆಂದರೆ ಶಾಂತಿಯ ಸ್ಥಾಪನೆ. ಇದರ ಜೊತೆಗೆ ಅದು ಅತ್ಯಂತ ಪರಿಣಾಮಕಾರಿಯಾದ ಇನ್ನೂ ಹಲವಾರು ಹೊಣೆಗಳನ್ನು ನಿರ್ವಹಿಸಬೇಕಾಗಿತ್ತು. ಜರ್ಮನ್ ಸೇನೆಯ ಆಕ್ರಮಣದ ತೆರವು, ಜರ್ಮನಿಯಲ್ಲಿ ಬಂಧಿತರಾಗಿದ್ದ ಮಿತ್ರರಾಜ್ಯಗಳವರ ವಿಮೋಚನೆ, ನಿಗದಿಯಾದ ಶಸ್ತ್ರಾಸ್ತ್ರಗಳು, ವಿಮಾನಗಳು, ಕೃಷಿಯಂತ್ರ, ರೈಲ್ವೆ ಸಲಕರಣೆ ಮುಂತಾದವನ್ನು ಜರ್ಮನಿ ಒಪ್ಪಿಸುವುದು_ಮುಂತಾದವುಗಳ ಉಸ್ತುವಾರಿಯ ಹೊಣೆ ಮಿತ್ರ ರಾಜ್ಯಗಳ ಯುದ್ಧವಿರಾಮ ಆಯೋಗದ ಕಾರ್ಯಭಾರವಾಗಿತ್ತು. ಈ ಆಯೋಗಕ್ಕೆ ಯುಕ್ತ ಆದೇಶ ನೀಡುವುದೂಶಾಂತಿ ಸಮ್ಮೇಳನದ ಹೊಣೆ ಅಲ್ಲದೆ ಪೋಲೆಂಡ್, ಜರ್ಮನಿ, ಹಂಗರಿ, ಚೆಕೊಸ್ಲೊವಾಕಿಯ ಮತ್ತು ರುಮೇನಿಯ ರಾಜ್ಯಗಳ ಮೇಲೆ ಅಧಿಕಾರ ಚಲಾಯಿಸುವ ಮತ್ತು ಸರ್ವೋಚ್ಚ ಆರ್ಥಿಕ ಮಂಡಳಿಯನ್ನು ನಿಯಂತ್ರಿಸುವ ಜವಾಬ್ದಾರಿಯೂ ಶಾಂತಿ ಸಮ್ಮೇಳನದ್ದೇ ಆಗಿತ್ತು. ಸರ್ವೋಚ್ಚ ಆರ್ಥಿಕ ಮಂಡಳಿಯ ರಚನೆಯಾದ್ದು ಅಮೆರಿಕದ ಅಧ್ಯಕ್ಷ ವಿಲ್ಸನರ ಸಲಹೆಯ ಮೇರೆಗೆ, ಶಾಂತಿ ಸಂಧಾನಗಳು ಪೂರೈಸುವ ತನಕ ಕೈಗೊಳ್ಳಬೇಕಾದ ಆರ್ಥಿಕ ಕ್ರಮಗಳ ಬಗ್ಗೆ ಸಮ್ಮೇಳನಕ್ಕೆ ಸಲಹೆ ನೀಡುವುದೇ ಆರ್ಥಿಕ ಮಂಡಲಿಯ ಕೆಲಸ. ಯುದ್ಧದಿಂದ ನಾಶಗೊಂಡಿದ್ದ ಪ್ರದೇಶಗಳ ಪುನರ್ರಚನೆಗೆ ಅಗತ್ಯವಾದ ಸಾಮಗ್ರಿಯ ಪೂರೈಕೆ, ಕ್ಷಾಮಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಿಕೆ, ಮಿತ್ರರಾಷ್ಟ್ರಗಳು ಆಕ್ರಮಿಸಿಕೊಂಡಿದ್ದ ಜರ್ಮನ್ ಪ್ರದೇಶಗಳ ಆರ್ಥಿಕ ನಿರ್ವಹಣೆ ಮುಂತಾದ ಮುಖ್ಯ ಕಾರ್ಯಭಾರಗಳನ್ನು ಆರ್ಥಿಕ ಮಂಡಲಿ ಕೈಗೊಂಡಿತು. ಯೋರೋಪಿನ ಸ್ಥಿತಿ ಈ ನಡುವೆ ಜರ್ಮನಿ ಪೋಲೆಂಡ್ ಚೆಕೊಸ್ಲೊವಾಕಿಯಗಳಲ್ಲಿ ಗಲಭೆಗಳಾಗುತ್ತಿದ್ದವು. ಹಂಗರಿ ರುಮೇನಿಯ ನಡುವೆಯೂ, ಚೆಕೊಸ್ಲೊವಾಕಿಯ ಮತ್ತು ಪೋಲೆಂಡ್ ನಡುವೆಯೂ ಸಣ್ಣ ಪುಟ್ಟ ವಾಜ್ಯಗಳಿದ್ದುವು. ಇವುಗಳ ಬಗ್ಗೆಯೂ ಶಾಂತಿ ಸಮ್ಮೇಳನ ಯುಕ್ತ ನಿರ್ಣಯ ಮಾಡಬೇಕಾಯಿತು. ಸಮ್ಮೇಳನದಲ್ಲಿ ಪರಿಶೀಲನೆಗೆ ಒಳಗಾದ ಅಂಶಗಳು ಇವು: 1. ಯುದ್ಧದ ಹೊಣೆ ಮತ್ತು ಯುದ್ಧಕಾಲದಲ್ಲಿ ನಡೆದ ಅಕ್ರಮಗಳು ಮತ್ತು ಅತ್ಯಾಚಾರಗಳು. 2. ನಷ್ಟ ಪರಿಹಾರ, ಅಂತರ ರಾಷ್ಟ್ರೀಯ ಕಾರ್ಮಿಕ ಕಾನೂನು, 3. ಬಂದರುಗಳು, ಜಲಮಾರ್ಗಗಳು, ರೈಲುಮಾರ್ಗಗಳು. ಅಂತರರಾಷ್ಟ್ರೀಯ ನಿಯಂತ್ರಣ, 4. ಹಣಕಾಸಿನ ಪ್ರಶ್ನೆಗಳು, 5. ಆರ್ಥಿಕ ಪ್ರಶ್ನೆಗಳು, 6. ವಾಯುಯಾನ. 7. ನೌಕಾ ಮತ್ತು ಸೇನಾ ವ್ಯವಹಾರಗಳು. 8. ಪ್ರದೇಶಗಳನ್ನು ಕುರಿತ ಸಮಸ್ಯೆಗಳು. ಉದಾ. ಚೆಕೊಸ್ಲೊವಾಕಿಯ, ಪೋಲೆಂಡ್, ರುಮೇನಿಯ, ಯುಗೊಸ್ಲಾವಿಯ, ಗ್ರೀಸ್, ಅಲ್ಬೇನಿಯ, ಬೆಲ್ಜಿಯಮ್, ಡೆನ್‍ಮಾರ್ಕ್, ಸಾರ್‍ಪ್ರದೇಶ, ಅಲ್ಸೇಸ್_ಲೊರೇನ್ ಪ್ರದೇಶ. ಸಕಲ ಸದಸ್ಯರ ಸಭೆಯ ಎರಡನೆಯ ಅಧಿವೇಶನ ಸಕಲ ಸದಸ್ಯರ ಸಭೆಯ ಎರಡನೆಯ ಅಧಿವೇಶನದ ಪ್ರಮುಖ ಕಲಾಪವೆಂದರೆ ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್ಸ್) ಸ್ಥಾಪನೆಯನ್ನು ಕುರಿತದ್ದು. ಸರ್ವೋಚ್ಚ ಮಂಡಲಿಯ ಶಿಫಾರಸಿನಂತೆ ಇದಕ್ಕಾಗಿ ಒಂದು ಆಯೋಗದ ನೇಮಕವಾಯಿತು. ರಾಷ್ಟ್ರಗಳ ಕೂಟದ ಒಡಂಬಡಿಕೆಯನ್ನು ಸಮ್ಮೇಳನ ಚರ್ಚಿಸಿ ನಿರ್ಣಯಿಸಿದ್ದು ಸಮ್ಮೇಳನದ ಒಂದು ಪ್ರಮುಖ ಸಾಧನೆ. ಆದರೆ ಫ್ರಾನ್ಸ್, ಬ್ರಿಟನ್, ಇಟಲಿ, ಅಮೆರಿಕ ಈ ನಾಲ್ಕು ದೇಶಗಳೇ ಅನೇಕ ಪ್ರಶ್ನೆಗಳನ್ನು ಇತ್ಯರ್ಥ ಮಾಡಿ ಮಹಾಸಭೆಯ ಮುಂದೆ ಇಟ್ಟು ಜರ್ಮನಿಯನ್ನು ಸಂಪೂರ್ಣವಾಗಿ ನಿರ್ವೀರ್ಯಗೊಳಿಸಬೇಕೆಂಬುದು ಫ್ರಾನ್ಸಿನ ಇಚ್ಛೆಯಾಗಿತ್ತು. ರೈನ್ ಲ್ಯಾಂಡನ್ನೂ ಕೊಲೇನ್, ಕೊಬ್ಲಿನ್‍ಜ್ ಮತ್ತು ಮೇನ್ಸ್‍ನ ಹತೋಟಿಯನ್ನು ಮಿತ್ರರಾಷ್ಟ್ರಗಳ ವಶದಲ್ಲೇ ಮುಂದುವರಿಸಬೇಕೆಂಬುದಾಗಿ ಫ್ರಾನ್ಸ್ ವಾದಿಸಿತು. ಜರ್ಮನರು ತಮ್ಮ ಗಣಿಗಳನ್ನು ನಾಶಗೊಳಿಸಿದ್ದರಿಂದ ಇದಕ್ಕೆ ಪರಿಹಾರವಾಗಿ ಸಾರ್ ಪ್ರದೇಶ ಸಂಪೂರ್ಣವಾಗಿ ತಮ್ಮದಾಗಬೇಕೆಂದೂ ಫ್ರೆಂಚರು ವಾದಿಸಿದರು. ಡ್ಯಾನ್ ಜಿóಗ್ ಮತ್ತು ಅದರ ಮಾರ್ಗಗಳು ತನಗೆ ಸೇರಬೇಕೆಂಬ ಪೋಲೆಂಡಿನ ಬೇಡಿಕೆಯನ್ನೂ ಫ್ರಾನ್ಸ್ ಸಮರ್ಥಿಸಿತು. ರೈನ್ ನದಿಯ ಎಡದಂಡೆಯೂ ಬಲದಂಡೆಯ ಒಂದು ವಿಶಾಲ ಭಾಗವೂ ನಿಸ್ಸೇನೀ ಕೃತವಾಗಬೇಕೆಂಬುದಾಗಿ ಒಪ್ಪಿಗೆಯಾಯಿತು. ಜರ್ಮನಿ ಆಸ್ಟ್ರಿಯಾಗಳು ಒಂದಾಗದಂತೆ ನಿಷೇಧ ವಿಧಿಸಲಾಯಿತು. ಸಾರ್ ಕಲ್ಲಿದ್ದಲು ಗಣಿ ಫ್ರಾನ್ಸಿಗೆ ಸೇರಬೇಕೆಂಬುದಕ್ಕೂ ಸಮ್ಮತಿ ದೊರಕಿತು. ಆದರೆ ಅಲ್ಲಿ ಆರೂವರೆ ಲಕ್ಷ ಜರ್ಮನರು ಇದ್ದದ್ದರಿಂದ ಹದಿನೈದು ವರ್ಷಗಳ ಕಾಲ ಆ ಪ್ರದೇಶ ರಾಷ್ಟ್ರಗಳ ಕೂಟದ ಹತೋಟಿಗೆ ಒಳಪಡಬೇಕೆಂದು ನಿರ್ಣಯಿಸಲಾಯಿತು. ಅನಂತರ ಆ ಪ್ರದೇಶದ ಜನರ ಅಭಿಪ್ರಾಯದಂತೆ ಅದರ ಭವಿಷ್ಯವನ್ನು ನಿರ್ಧರಿಸಬೇಕೆಂದೂ ತೀರ್ಮಾನಿಸಲಾಯಿತು. ಯುದ್ಧ ಪರಿಹಾರದ ಸಮಸ್ಯೆಯನ್ನು ನಾಲ್ವರ ಮಂಡಲಿ ಸಮರ್ಪಕವಾಗಿ ತೀರ್ಮಾನಿಸಲಾಗಲಿಲ್ಲ. ಜರ್ಮನಿ ಸಂಪೂರ್ಣವಾಗಿ ನಿಶ್ಯಕ್ತವಾಗಿದ್ದದ್ದರಿಂದ ಭಾರಿ ಪರಿಹಾರ ನೀಡಬೇಕೆಂದು ಅದನ್ನು ಒತ್ತಾಯಿಸುವುದು ಸರಿಯಲ್ಲವೆಂಬುದು ಇಂಗ್ಲೆಂಡ್ ಮತ್ತು ಅಮೆರಿಕದ ಅಭಿಪ್ರಾಯವಾಗಿತ್ತು. ಆದರೆ, ಫ್ರಾನ್ಸಿನ ಅಭಿಪ್ರಾಯವನ್ನೇ ಒಪ್ಪಬೇಕಾಯಿತು. ಜರ್ಮನಿಯ ಸಾಮಥ್ರ್ಯಕ್ಕೆ ಅನುಗುಣವಾದ ಪರಿಹಾರವನ್ನು ಅದರಿಂದ ಪಡೆಯಲೇಬೇಕೆಂದು ತೀರ್ಮಾನಿಸಲಾಯಿತು. ಡ್ಯಾನ್‍ಜಿಗ್ ರಾಷ್ಟ್ರಗಳ ಕೂಟದ ರಕ್ಷಣೆಯಲ್ಲಿ ಸ್ವತಂತ್ರ ನಗರವಾಗಿರತಕ್ಕದ್ದೆಂದೂ ಆದರೆ, ಪೋಲೆಂಡಿನಿಂದ ಬಾಲ್ಟಿಕ್ ಸಮುದ್ರಕ್ಕೆ ಪ್ರವೇಶ ದೊರಕಬೇಕೆಂದೂ ತೀರ್ಮಾನಿಸಲಾಯಿತು. ಹೀಗೆ ಪ್ರಮುಖ ಮಿತ್ರ ರಾಷ್ಟ್ರಗಳು ತಂತಮ್ಮಲ್ಲೇ ಬಹುತೇಕ ಪ್ರಶ್ನೆಗಳ ಇತ್ಯರ್ಥ ಮಾಡಿಕೊಂಡ ಮೇಲೆ ಏಪ್ರಿಲ್ 25 ರಂದು ವರ್ಸೇಲ್ಸ್‍ನಲ್ಲಿ ಹಾಜರಾಗಲು ಜರ್ಮನಿಯ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಯಿತು. ಈ ನಡುವೆ ಇಟಲಿ, ಬೆಲ್ಜಿಯಮ್, ಯುಗೋಸ್ಲಾವಿಯ ಮತ್ತು ಜಪಾನ್ ದೇಶಗಳು ಕೆಲವು ತಕರಾರುಗಳನ್ನು ಹಾಕಿದವು. ಅದನ್ನೂ ಪರಿಹರಿಸಲಾಯಿತು. ವರ್ಸೇಲ್ಸ್ ಕೌಲು: ಜರ್ಮನಿಯೊಂದಿಗೆ ಕೌಲಿನ ಕರಡನ್ನು ಜರ್ಮನಿಯ ಮುಖ್ಯ ಪ್ರತಿನಿಧಿಯಾದ ಕೌಂಟ್ ಅರ್ಲಿಜ್ ಫಾನ್ ಬ್ರೊಕ್‍ಡೋರ್ಫ್ - ರಾಂಟ್‍ಸೌಗೆ *1919 ರ ಮೇ 7 ರಂದು ಟೈಯನಾನ್‍ನಲ್ಲಿ ಒಪ್ಪಿಸಲಾಯಿತು. ಜರ್ಮನ್ ಪ್ರತಿನಿಧಿ ಈ ಕೌಲಿನ ಷರತ್ತಗಳನ್ನು ಪ್ರಬಲವಾಗಿ ವಿರೋಧಿಸಿದರು. ಕಳೆದ ಆರು ತಿಂಗಳುಗಳಲ್ಲಿ ಜರ್ಮನಿಯ ದಿಗ್ಬಂಧನದಿಂದಾಗಿ ಹಲವು ಸಹಸ್ರ ಮಂದಿ ಮಡಿದಿದ್ದಾರೆ. ಅಪರಾಧ ಮತ್ತು ಶಿಕ್ಷೆಯ ಮಾತಾಡುವ ನೀವು ಇದನ್ನು ಕುರಿತು ಯೋಚಿಸಬೇಕು ಎಂದರು. ಯುದ್ಧ ನಿಲುಗಡೆ ಒಪ್ಪಂದದಲ್ಲಿ ಸಮ್ಮತಿಸಲಾದ ಹೊಣೆಗಳನ್ನು ನಿರ್ವಹಿಸಲು ತಾವು ಒಪ್ಪುವುದಾಗಿಯೂ ಬೆಲ್ಜಿಯಮ್ ಮತ್ತು ಫ್ರಾನ್ಸಿನಲ್ಲಿ ನಾಶವಾದ ಪ್ರದೇಶಗಳ ಪುನರ್ ವ್ಯವಸ್ಥೆಗಾಗಿ ತಾವು ಹೊಣೆ ಎಂದೂ ಹೇಳಿದರು. ಆದರೆ, ದ್ವೇಷದ ಆಧಾರದ ಮೇಲೆ ರಚಿತವಾದ ಕೌಲು ಇದು ಎಂಬುದು ಅವರ ಭಾವನೆಯಾಗಿತ್ತು. ಯುದ್ಧ ಪರಿಹಾರ ಬಲು ಭಾರವೆಂದೂ ಪೂರ್ವಭಾವಿ ಒಪ್ಪಂದಕ್ಕೆ ಇದು ವಿರುದ್ಧವಾಗಿದೆ ಎಂದೂ ಜರ್ಮನರು ವಾದಿಸಿದರು. ಆದರೆ, ಮಿತ್ರರಾಷ್ಟ್ರಗಳು ಈ ವಾದವನ್ನೆಲ್ಲ ತಳ್ಳಿ ಹಾಕಿದರು. ಜೂನ್ 28 ರಂದು ವರ್ಸೇಲ್ಸ್‍ನಲ್ಲಿ ಕೌಲಿನ ಸಹಿಯಾಯಿತು. ಸಮ್ಮೇಳನದ ಇನ್ನೊಂದು ಪ್ರಮುಖ ತೀರ್ಮಾನವೆಂದರೆ ಜರ್ಮನಿಗೆ ಸೇರಿದ ವಸಾಹತುಗಳನ್ನು ಕುರಿತದ್ದು. ಜರ್ಮನ್ ಸಾಮ್ರಾಜ್ಯವೆಲ್ಲ ಕಳೆದು ಹೋಯಿತು. ಅದರ ಹಲವು ಪ್ರದೇಶಗಳ ಆಡಳಿತವನ್ನು ಇತರ ಪ್ರಮುಖ ಯೂರೋಪಿಯನ್ ದೇಶಗಳು ವಹಿಸಿಕೊಂಡವು. ರಾಷ್ಟ್ರಗಳ ಕೂಟದ ಪರವಾಗಿ ಇವು ಆಡಳಿತ ನಡೆಸುವ ವ್ಯವಸ್ಥೆ ರೂಪಿತವಾದ್ದು ಈ ಸಮ್ಮೇಳನದಲ್ಲೇ. ಅಡಾಲ್ಫ್ ಹಿಟ್ಲರ್ ನಾಜಿಗಳ ಅಧಿಕಾರ 1918-1919 ವರ್ಸೈಲ್ಸ್ ಒಪ್ಪಂದದ ಅಡಿಯಲ್ಲಿ ಜರ್ಮನಿಯು ಕಠಿಣ ಷರತ್ತುಗಳನ್ನು ಸ್ವೀಕರಿಸಲು ಒತ್ತಾಯಿಸಲಾಯಿತು, ಅದು ಮೊದಲನೆಯ ಮಹಾಯುದ್ಧವನ್ನು ಕೊನೆಗೊಳಿಸಿತು. ವೀಮರ್ ಗಣರಾಜ್ಯವನ್ನು ಸ್ಥಾಪಿಸಲಾಯಿತು. 1933 ಅಡಾಲ್ಫ್ ಹಿಟ್ಲರ್ ಮತ್ತು ರಾಷ್ಟ್ರೀಯ ಸಮಾಜವಾದಿ ಪಕ್ಷ (ನಾಜಿಗಳು) ಅಧಿಕಾರ ವಹಿಸಿಕೊಂಡರು. ಕ್ರಿ.ಶ. 1939 ರಲ್ಲಿ ಜರ್ಮನಿಯು ಎರಡನೇ ವಿಶ್ವಯುದ್ಧವನ್ನು ಪ್ರಾರಂಭಿಸಿ ಪೋಲೆಂಡ್ ಮೇಲೆ ಆಕ್ರಮಣ ಮಾಡಿತು. ಎರಡನೇ ಮಹಾಯುದ್ಧ ಅಡಾಲ್ಫ್ ಹಿಟ್ಲರ್ ನೇತೃತ್ವದ ನಾಜಿ ಪಕ್ಷವು 1932 ರಲ್ಲಿ ವಿಶೇಷ ಚುನಾವಣೆಯಲ್ಲಿ ಜಯಗಳಿಸಿತು ಮತ್ತು ಹಿಂಡೆನ್ಬರ್ಗ್ 30 ಜನವರಿ 1933 ರಂದು ಹಿಟ್ಲರನನ್ನು ಜರ್ಮನಿಯ ಕುಲಪತಿಯನ್ನಾಗಿ ನೇಮಿಸಿತು. ರೀಚ್‌ಸ್ಟ್ಯಾಗ್ ಬೆಂಕಿಯ ನಂತರ, ಒಂದು ತೀರ್ಪು ಮೂಲಭೂತ ನಾಗರಿಕ ಹಕ್ಕುಗಳನ್ನು ರದ್ದುಗೊಳಿಸಿತು ಮತ್ತು ಮೊದಲ ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್ ತೆರೆಯಿತು. ಸಕ್ರಿಯಗೊಳಿಸುವ ಕಾಯಿದೆ ಹಿಟ್ಲರ್‌ಗೆ ಅನಿಯಂತ್ರಿತ ಶಾಸಕಾಂಗ ಅಧಿಕಾರವನ್ನು ನೀಡಿತು, ಸಂವಿಧಾನವನ್ನು ಅತಿಕ್ರಮಿಸಿತು; ಅವರ ಸರ್ಕಾರವು ಕೇಂದ್ರೀಕೃತ ನಿರಂಕುಶ ಪ್ರಭುತ್ವವನ್ನು ಸ್ಥಾಪಿಸಿತು, ಲೀಗ್ ಆಫ್ ನೇಷನ್ಸ್‌ನಿಂದ ಹಿಂದೆ ಸರಿಯಿತು ಮತ್ತು ದೇಶದ ಮರುಸಂಗ್ರಹವನ್ನು ನಾಟಕೀಯವಾಗಿ ಹೆಚ್ಚಿಸಿತು. ಆರ್ಥಿಕ ನವೀಕರಣಕ್ಕಾಗಿ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮವು ಸಾರ್ವಜನಿಕ ಕಾರ್ಯಗಳ ಮೇಲೆ ಕೇಂದ್ರೀಕರಿಸಿದೆ, ಅದರಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಜರ್ಮನ್ ಆಟೋಬ್ಯಾನ್‌ಗಳು. 1935 ರಲ್ಲಿ, ಆಡಳಿತವು ವರ್ಸೇಲ್ಸ್ ಒಪ್ಪಂದದಿಂದ ಹಿಂದೆ ಸರಿಯಿತು ಮತ್ತು ಯಹೂದಿಗಳು ಮತ್ತು ಇತರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನ್ಯೂರೆಂಬರ್ಗ್ ಕಾನೂನುಗಳನ್ನು ಪರಿಚಯಿಸಿತು. ಜರ್ಮನಿಯು 1935 ರಲ್ಲಿ ಸಾರ್‌ನ ನಿಯಂತ್ರಣವನ್ನು ಪುನಃ ಪಡೆದುಕೊಂಡಿತು, 1936 ರಲ್ಲಿ ರೈನ್‌ಲ್ಯಾಂಡ್ ಅನ್ನು ಮರುಸಂಗ್ರಹಿಸಿತು, 1938 ರಲ್ಲಿ ಆಸ್ಟ್ರಿಯಾವನ್ನು ಸ್ವಾಧೀನಪಡಿಸಿಕೊಂಡಿತು, 1938 ರಲ್ಲಿ ಮ್ಯೂನಿಚ್ ಒಪ್ಪಂದದೊಂದಿಗೆ ಸುಡೆಟೆನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಂಡಿತು, ಮತ್ತು ಒಪ್ಪಂದವನ್ನು ಉಲ್ಲಂಘಿಸಿ ಮಾರ್ಚ್ 1939 ರಲ್ಲಿ ಜೆಕೊಸ್ಲೊವಾಕಿಯಾವನ್ನು ಆಕ್ರಮಿಸಿಕೊಂಡಿತು. ಯಹೂದಿ ವ್ಯವಹಾರಗಳ ನಾಶ, ಮತ್ತು ಯಹೂದಿ ಜನರ ಸಾಮೂಹಿಕ ಬಂಧನ. ಆಗಸ್ಟ್ 1939 ರಲ್ಲಿ, ಹಿಟ್ಲರನ ಸರ್ಕಾರವು ಮೊಲೊಟೊವ್-ರಿಬ್ಬನ್ಟ್ರಾಪ್ ಒಪ್ಪಂದದ ಬಗ್ಗೆ ಮಾತುಕತೆ ನಡೆಸಿತು, ಅದು ಪೂರ್ವ ಯುರೋಪನ್ನು ಜರ್ಮನ್ ಮತ್ತು ಸೋವಿಯತ್ ಕ್ಷೇತ್ರಗಳಾಗಿ ಪ್ರಭಾವಿಸಿತು. 1 ಸೆಪ್ಟೆಂಬರ್ 1939 ರಂದು, ಜರ್ಮನಿ ಪೋಲೆಂಡ್ ಮೇಲೆ ಆಕ್ರಮಣ ಮಾಡಿತು, ಯುರೋಪಿನಲ್ಲಿ ಎರಡನೇ ಮಹಾಯುದ್ಧವನ್ನು ಪ್ರಾರಂಭಿಸಿತು; ಬ್ರಿಟನ್ ಮತ್ತು ಫ್ರಾನ್ಸ್ ಸೆಪ್ಟೆಂಬರ್ 3 ರಂದು ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದವು. 1940 ರ ವಸಂತ Germany ತುವಿನಲ್ಲಿ, ಜರ್ಮನಿ ಡೆನ್ಮಾರ್ಕ್ ಮತ್ತು ನಾರ್ವೆ, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಲಕ್ಸೆಂಬರ್ಗ್ ಮತ್ತು ಫ್ರಾನ್ಸ್ ಅನ್ನು ವಶಪಡಿಸಿಕೊಂಡಿತು, ಫ್ರೆಂಚ್ ಸರ್ಕಾರವು ಕದನವಿರಾಮಕ್ಕೆ ಸಹಿ ಹಾಕುವಂತೆ ಒತ್ತಾಯಿಸಿತು. ಅದೇ ವರ್ಷದಲ್ಲಿ ಬ್ರಿಟನ್ ಕದನದಲ್ಲಿ ಜರ್ಮನ್ ವಾಯುದಾಳಿಗಳನ್ನು ಬ್ರಿಟಿಷರು ಹಿಮ್ಮೆಟ್ಟಿಸಿದರು. 1941 ರಲ್ಲಿ, ಜರ್ಮನ್ ಪಡೆಗಳು ಯುಗೊಸ್ಲಾವಿಯ, ಗ್ರೀಸ್ ಮತ್ತು ಸೋವಿಯತ್ ಒಕ್ಕೂಟವನ್ನು ಆಕ್ರಮಿಸಿದವು. 1942 ರ ಹೊತ್ತಿಗೆ, ಜರ್ಮನಿ ಮತ್ತು ಇತರ ಆಕ್ಸಿಸ್ ಶಕ್ತಿಗಳು ಯುರೋಪ್ ಮತ್ತು ಉತ್ತರ ಆಫ್ರಿಕಾದ ಹೆಚ್ಚಿನ ಭಾಗವನ್ನು ನಿಯಂತ್ರಿಸುತ್ತಿದ್ದವು, ಆದರೆ ಸ್ಟಾಲಿನ್‌ಗ್ರಾಡ್ ಕದನದಲ್ಲಿ ಸೋವಿಯತ್ ವಿಜಯದ ನಂತರ, ಮಿತ್ರರಾಷ್ಟ್ರಗಳ ಉತ್ತರ ಆಫ್ರಿಕಾವನ್ನು ಪುನಃ ವಶಪಡಿಸಿಕೊಂಡವು ಮತ್ತು 1943 ರಲ್ಲಿ ಇಟಲಿಯ ಮೇಲೆ ಆಕ್ರಮಣ ಮಾಡಿದ ನಂತರ, ಜರ್ಮನ್ ಪಡೆಗಳು ಪುನರಾವರ್ತಿತ ಮಿಲಿಟರಿ ಸೋಲುಗಳನ್ನು ಅನುಭವಿಸಿದವು. 1944 ರಲ್ಲಿ, ಸೋವಿಯತ್ ಪೂರ್ವ ಯುರೋಪಿಗೆ ತಳ್ಳಲ್ಪಟ್ಟಿತು; ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಫ್ರಾನ್ಸ್‌ಗೆ ಬಂದಿಳಿದು ಜರ್ಮನಿಗೆ ಪ್ರವೇಶಿಸಿದವು. ಬರ್ಲಿನ್ ಕದನದಲ್ಲಿ ಹಿಟ್ಲರನ ಆತ್ಮಹತ್ಯೆಯ ನಂತರ, ಜರ್ಮನಿ 8 ಮೇ 1945 ರಂದು ಶರಣಾಯಿತು, ಯುರೋಪಿನಲ್ಲಿ ಎರಡನೇ ಮಹಾಯುದ್ಧ ಕೊನೆಗೊಂಡಿತು. ಎರಡನೆಯ ಮಹಾಯುದ್ಧದ ನಂತರ, ನ್ಯೂರೆಂಬರ್ಗ್ ಪ್ರಯೋಗಗಳಲ್ಲಿ ನಾಜಿ ಅಧಿಕಾರಿಗಳನ್ನು ಯುದ್ಧ ಅಪರಾಧಗಳಿಗಾಗಿ ವಿಚಾರಣೆಗೆ ಒಳಪಡಿಸಲಾಯಿತು. ಜರ್ಮನಿಯ ವಿಭಜನೆ: ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿ . ಕ್ರಿ.ಶ.1945 ರಲ್ಲಿ ಮಿತ್ರಪಕ್ಷಗಳು ಜರ್ಮನಿಯನ್ನು ಸೋಲಿಸಿ ಅದನ್ನು ಆಕ್ರಮಿಸಿಕೊಂಡವು ಮತ್ತು ಅದನ್ನು ನಾಲ್ಕು ವಲಯಗಳಾಗಿ ವಿಂಗಡಿಸಿದವು. ನಾರೆ ಯುದ್ಧ ಅಪರಾಧಿಗಳನ್ನು ನ್ಯೂರೆಂಬರ್ಗ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಕ್ರಿ.ಶ.1949 ರಲ್ಲಿ ಜರ್ಮನಿಯನ್ನು ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿ ಎಂದು ವಿಂಗಡಿಸಲಾಯಿತು. ಪೂರ್ವ ಜರ್ಮನಿಯ ಬರ್ಲಿನ್ ಅನ್ನು ಎರಡು ರಾಷ್ಟ್ರಗಳ ನಡುವೆ ವಿಭಜಿಸಲಾಯಿತು. 1955 ರಲ್ಲಿ ಪೂರ್ವ ಜರ್ಮನಿ ಕಮ್ಯುನಿಸ್ಟ್ ರಾಜ್ಯವಾದರೆ, ಪಶ್ಚಿಮ ಜರ್ಮನಿ ಸಂಸದೀಯ ಗಣರಾಜ್ಯವಾಯಿತು. 1961 ರಲ್ಲಿ ಪೂರ್ವ ಜರ್ಮನ್ ಸರ್ಕಾರ ಬರ್ಲಿನ್ ಗೋಡೆಯನ್ನು ನಿರ್ಮಿಸಿತು. 1989 ಪೂರ್ವ ಜರ್ಮನ್ ಸರ್ಕಾರ ಬರ್ಲಿನ್ ಗೋಡೆಯನ್ನು ತೆರೆಯಿತು. 1990ರಲ್ಲಿ ಪಶ್ಚಿಮ ಜರ್ಮನಿಯ ಸರ್ಕಾರದ ಅಡಿಯಲ್ಲಿ ಜರ್ಮನಿಯನ್ನು ಔಪಚಾರಿಕವಾಗಿ ಮತ್ತೆ ಒಂದುಗೂಡಿಸಲಾಯಿತು. 1991 ರಲ್ಲಿ ಪುನರೇಕೀಕರಣದ ವೆಚ್ಚಗಳು ನಿರೀಕ್ಷೆಗಿಂತ ಹೆಚ್ಚಿನದಾಗಿದೆ. ಪೂರ್ವ ಜರ್ಮನಿಯ ಮಾಜಿ ನಾಯಕ ಎರಿಕ್ ಹೊನೆಕರ್ ಅವರು ಕಾನೂನು ಕ್ರಮ ಜರುಗಿಸುವುದನ್ನು ತಪ್ಪಿಸಲು ದೇಶವನ್ನು ಬಿಟ್ಟು ಓಡಿಹೋದರು. ಸ್ಟಾಸಿಯ (ಪೂರ್ವ ಜರ್ಮನ್ ರಹಸ್ಯ ಪೊಲೀಸ್) ಫೈಲ್‌ಗಳನ್ನು ತೆರೆಯಲಾಯಿತು, ಮತ್ತು ಅನೇಕ ಜನರು ಸ್ಟಾಸಿ ಮಾಹಿತಿದಾರರು ಎಂದು ಆರೋಪಿಸಲಾಯಿತು. 1992 ರಲ್ಲಿ ನವ-ನಾಜಿ ಮತ್ತು ಜನಾಂಗೀಯ ಗುಂಪುಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡವು ಮತ್ತು ಟರ್ಕಿಯ ವಲಸಿಗರ ವಿರುದ್ಧ 2,500 ಕ್ಕೂ ಹೆಚ್ಚು ಹಿಂಸಾಚಾರಗಳನ್ನು ಎಸಗಿದವು. 1994 ರಲ್ಲಿ ಅಮೆರಿಕನ್, ಬ್ರಿಟಿಷ್, ಫ್ರೆಂಚ್ ಮತ್ತು ರಷ್ಯಾದ ಪಡೆಗಳು ಸುಮಾರು 40 ವರ್ಷಗಳ ನಂತರ ಅಲ್ಲಿನ ಔಪಚಾರಿಕವಾಗಿ ಬರ್ಲಿನ್‌ನಿಂದ ಹೊರಬಂದವು. 1995 ರಲ್ಲಿ ಬೋಸ್ನಿಯಾ ಮತ್ತು ಹರ್ಜೆಗೋವಿನಾಗೆ ಶಾಂತಿಪಾಲನಾ ಪಡೆಯನ್ನು ಕಳುಹಿಸಲು ಜರ್ಮನಿ ನಿರ್ಧರಿಸಿತು. 1997 ರಲ್ಲಿ ಎರಡನೆಯ ಮಹಾಯುದ್ಧದ ನಂತರ ನಿರುದ್ಯೋಗ ಗರಿಷ್ಠ ಮಟ್ಟವನ್ನು ತಲುಪಿತ್ತು.ಕ್ರಿ.ಶ. 1998ರಲ್ಲಿ ಅಧಿಕಾರದಲ್ಲಿದ್ದ 16 ವರ್ಷಗಳ ನಂತರ, ಹೆಲ್ಮಟ್ ಕೊಹ್ಲ್ ಅವರನ್ನು ಗೆರ್ಹಾರ್ಡ್ ಶ್ರೋಡರ್ ಮತ್ತು ಸಮಾಜವಾದಿ ನೇತೃತ್ವದ ಒಕ್ಕೂಟದ ಪರವಾಗಿ ಕಚೇರಿಯಿಂದ ಮತ ಚಲಾಯಿಸಲಾಯಿತು. ಯುರೋಪಿಯನ್ ಒಕ್ಕೂಟದಲ್ಲಿ ಕ್ರಿ.ಶ. 1999 ಜರ್ಮನಿ ಯುರೋ ಎಂಬ ಏಕ ಯುರೋಪಿಯನ್ ಕರೆನ್ಸಿಯ ಸ್ಥಾಪಕ ಸದಸ್ಯರಾದರು. ಕೊಸೊವೊದಲ್ಲಿ ಫೆಡರಲ್ ರಿಪಬ್ಲಿಕ್ ಆಫ್ ಯುಗೊಸ್ಲಾವಿಯ ವಿರುದ್ಧ ನ್ಯಾಟೋ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ಜರ್ಮನಿ ಭಾಗವಹಿಸುತ್ತದೆ. ಜೋಹಾನ್ಸ್ ರೌ ಅಧ್ಯಕ್ಷರಾಗುತ್ತಾರೆ. ಭ್ರಷ್ಟಾಚಾರದ ಹಗರಣದಲ್ಲಿ ಪಾಲ್ಗೊಂಡಿದ್ದಕ್ಕಾಗಿ 2001 ರ ಹೆಲ್ಮಟ್ ಕೊಹ್ಲ್‌ಗೆ ಜರ್ಮನ್ ನ್ಯಾಯಾಲಯ ದಂಡ ವಿಧಿಸಿತು. ಪುರಕ ಮಾಹಿತಿ ಸೋತುಗೆದ್ದ ಸಮರೋತ್ತರ ಕಥನ- ಸುಧೀಂದ್ರ;೧೯-೫-೨೦೨೦ ಉಲ್ಲೇಖಗಳು ಯುರೋಪ್ ಖಂಡದ ದೇಶಗಳು ಜರ್ಮನಿ
2175
https://kn.wikipedia.org/wiki/%E0%B2%87%E0%B2%9F%E0%B2%B2%E0%B2%BF
ಇಟಲಿ
ಇಟಲಿ ಅಥವಾ ಇತಾಲಿಯ (ಇಟಾಲಿಯನ್: ಇತಾಲಿಯ), ಅಧಿಕೃತವಾಗಿ ಇಟಾಲಿಯನ್ ಗಣರಾಜ್ಯ ಅಥವಾ ಇತಾಲಿಯದ ಗಣರಾಜ್ಯ, ಇದು ಪಾಶ್ಚಾತ್ಯ ಮತ್ತು ದಕ್ಷಿಣ ಯೂರೋಪಿನ ಒಂದು ದೇಶ. ಖ್ಯಾತ ರೋಮಕ ಸಾಮ್ರಾಜ್ಯ ಮಾತೃಸ್ಥಾನವಾದ ಇಟಲಿ ಮೆದಿತೆರನೀಯ ಸಾಗರದಲ್ಲಿ ಚಾಚಿ ನಿಂತಿರುವ ಬಹು ಸಣ್ಣ ಪರ್ಯಾಯದ್ವೀಪವಾಗಿದೆ. ಗಾತ್ರದಲ್ಲಿ ಚಿಕ್ಕದಾದರೂ ಹಿಂದಿನ ಕಾಲದಲ್ಲಿ ಇದು ಹೊಂದಿದ್ದ ವ್ಯಾಪ್ತಿ ಅಚ್ಚರಿಗೊಳಿಸುವಂಥದು. ರೋಮಕ ಸಾಮ್ರಾಜ್ಯಕ್ಕಿದ್ದ ವಿಸ್ತಾರ ಮತ್ತು ಅಚ್ಚುಗಟ್ಟು ಬೇರಾವ ಸಾಮ್ರಾಜ್ಯಕ್ಕೂ ಬರಲಾರದು. ರೋಮ ತನ್ನ ಉಚ್ಛ್ರಾಯಸ್ಥಿತಿಯಲ್ಲಿ ಅಂದಿನ ನಾಗರಿಕ ಪ್ರಪಂಚವನ್ನೆಲ್ಲ ಏಕಚ್ಛತ್ರದಡಿ ಸಂವರಿಸಿ ಆಳಿತು. ಅದರ ವೈಭವ ಅನನ್ಯವಾದುದು; ಶಕ್ತಿ ಅದಮ್ಯವಾದುದು. ವಿಸ್ತಾರವಾದ ತನ್ನ ಸಾಮ್ರಾಜ್ಯದಲ್ಲಿ ಅದು ಏರ್ಪಡಿಸಿದ ಆಡಳಿತ ವ್ಯವಸ್ಥೆ, ನ್ಯಾಯ, ಜೀವನಕ್ರಮ-ಇವು ಇಡೀ ಸಾಮ್ರಾಜ್ಯದ ಐಕ್ಯಕ್ಕೆ ಸಹಾಯಕವಾದುವು. ರೋಮದಿಂದ ನಡೆದ ಈ ಬೃಹತ್ ವ್ಯವಹಾರಕ್ಕೆ ಇಟಲಿಯ ಭೂಮಿ ಆಶ್ರಯ ಕೊಟ್ಟಿತು. ರೋಮಕರ ಚರಿತ್ರೆ, ನಾಗರಿಕತೆ, ಸಂಸ್ಕೃತಿ, ಕಲೆ ಮೊದಲಾದ ವಿಷಯಗಳು ಅಲ್ಲಲ್ಲಿ ಪ್ರತ್ಯೇಕವಾಗಿ ಬಂದಿವೆ. ಇಲ್ಲಿ ಇಟಲಿಯ ಬಗ್ಗೆ ಬಂದಿರುವ ಲೇಖನಗಳಲ್ಲೂ ಆ ವಿಷಯಗಳ ಸಂಗ್ರಹ ನಿರೂಪಣೆ ಇದೆ. ಇಲ್ಲಿನ ಲೇಖನಗಳ ವ್ಯವಸ್ಥೆ ಹೀಗಿದೆ. ಇಟಲಿ ಎಂಬ ಲೇಖನದಲ್ಲಿ ಅದರ ಭೌಗೋಳಿಕ, ವಾಣಿಜ್ಯ ವಿಷಯಿಕ ವಿವರಗಳಿವೆ. ಇಟಲಿಯ ಇತಿಹಾಸ, ಕಲೆ, ಛಂದಸ್ಸು, ಭಾಷೆ, ಸಂಗೀತ, ಸಾಹಿತ್ಯ, ಸಾಹಿತ್ಯ ವಿಮರ್ಶೆಗಳ ಬಗ್ಗೆ ಪ್ರತ್ಯೇಕ ಶೀರ್ಷಿಕೆಗಳಿವೆ. ಇಟಲಿಯ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಕೆಲ ವಿಷಯಗಳು ಈ ಹರಹಿನಲ್ಲಿ ಬಂದಿವೆಯಾದರೂ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ವಿವರಗಳನ್ನು ಆಯಾ ವ್ಯಕ್ತಿಗಳನ್ನು ಕುರಿತ ಲೇಖನಗಳಲ್ಲಿ ಕೊಟ್ಟಿದೆ. ಇಟಲಿಯು ೩೦೧೨೩೦km2 (೧೧೬೩೧೦ ಚದರ ಮೈಲಿ) ವಿಸ್ತೀರ್ಣವನ್ನು ಹೊಂದಿದೆ, ಸುಮಾರು ೬೦ ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಇದು ಯುರೋಪಿ ಒಕ್ಕೂಟದ ಮೂರನೇ-ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸದಸ್ಯ ರಾಷ್ಟ್ರವಾಗಿದೆ. ಯುರೋಪ್‌ನಲ್ಲಿ ಆರನೇ-ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಇಟಾಲಿಯನ್ ಪರ್ಯಾಯ ದ್ವೀಪವು ಐತಿಹಾಸಿಕವಾಗಿ ಹಲವಾರು ಪ್ರಾಚೀನ ಜನರ ಸ್ಥಳೀಯ ಸ್ಥಳವಾಗಿದೆ ಮತ್ತು ಇತಿಹಾಸದುದ್ದಕ್ಕೂ ವಲಸೆ ಬಂದ ಅಸಂಖ್ಯಾತ ಜನರು ಮತ್ತು ಸಂಸ್ಕೃತಿಗಳ ತಾಣವಾಗಿದೆ. ಪ್ರಾಚೀನ ರೋಮಕ ರಾಜ್ಯವು ಲ್ಯಾಟಿಯಮ್‌ನಲ್ಲಿ ಹುಟ್ಟಿಕೊಂಡಿತು ಮತ್ತು ರೋಮಕೀಕರಣದ ಪ್ರಕ್ರಿಯೆಯ ಮೂಲಕ ಪೆನಿನ್ಸುಲ ಮತ್ತು ಮೆದಿತೆರನೀಯ ಜಲಾನಯನ ಪ್ರದೇಶದ ಸುತ್ತಲಿನ ಪ್ರದೇಶಗಳಾದ್ಯಂತ ವಿಸ್ತರಿಸಿತು. ಮೊದಲ ಶತಮಾನದ ಬಿಸಿಯ ಹೊತ್ತಿಗೆ, ರೋಮನ್ ಸಾಮ್ರಾಜ್ಯವು ಯುರೋಪ್, ಉತ್ತರ ಆಫ್ರಿಕಾ ಮತ್ತು ಸಮೀಪದ ಪೂರ್ವದಾದ್ಯಂತ ತನ್ನ ಪ್ರದೇಶವನ್ನು ವಿಸ್ತರಿಸಿತು, ಪ್ಯಾಕ್ಸ್ ರೊಮಾನಾವನ್ನು ಸ್ಥಾಪಿಸಿತು. ಆರಂಭಿಕ ಮಧ್ಯಯುಗದಲ್ಲಿ, ಪಶ್ಚಿಮ ರೋಮಕ ಸಾಮ್ರಾಜ್ಯವು ಕುಸಿಯಿತು, ಕ್ರೈಸ್ತ ಇಗರ್ಜಿಯು ಹುಟ್ಟಿಕೊಂಡಿತು ಮತ್ತು ಇಟಲಿಯು ಸುತ್ತಮುತ್ತಲಿನ ಬುಡಕಟ್ಟುಗಳಿಂದ ಆಂತರಿಕ ವಲಸೆಯನ್ನು ಅನುಭವಿಸಿತು. ೧೧ ನೇ ಶತಮಾನದ ವೇಳೆಗೆ, ಇಟಾಲಿಯನ್ ನಗರ-ರಾಜ್ಯಗಳು ಮತ್ತು ಕಡಲ ಗಣರಾಜ್ಯಗಳು ವಿಸ್ತರಿಸಿದವು, ವಾಣಿಜ್ಯದ ಮೂಲಕ ನವೀಕೃತ ಸಮೃದ್ಧಿಯನ್ನು ತಂದವು ಮತ್ತು ಆಧುನಿಕ ಬಂಡವಾಳಶಾಹಿಗೆ ಅಡಿಪಾಯವನ್ನು ಹಾಕಿದವು. ಇಟಾಲಿಯನ್ ನವೋದಯವು ೧೫ ಮತ್ತು ೧೬ ನೇ ಶತಮಾನಗಳಲ್ಲಿ ಫ್ಲಾರೆನ್ಸ್‌ನಲ್ಲಿ ಪ್ರವರ್ಧಮಾನಕ್ಕೆ ಬಂದಿತು ಮತ್ತು ಯುರೋಪಿನ ಉಳಿದ ಭಾಗಗಳಿಗೆ ಹರಡಿತು. ಇಟಾಲಿಯನ್ ಪರಿಶೋಧಕರು ದೂರದ ಪೂರ್ವ ಮತ್ತು ಹೊಸ ಪ್ರಪಂಚಕ್ಕೆ ಹೊಸ ಮಾರ್ಗಗಳನ್ನು ಕಂಡುಹಿಡಿದರು, ಇದು ಯುರೋಪಿಯನ್ ಏಜ್ ಆಫ್ ಡಿಸ್ಕವರಿಯನ್ನು ಪ್ರಾರಂಭಿಸಲು ಸಹಾಯ ಮಾಡಿದರು. ಆದಾಗ್ಯೂ, ಇತರ ಅಂಶಗಳ ನಡುವೆ ಇಟಾಲಿಯನ್ ನಗರ-ರಾಜ್ಯಗಳ ನಡುವಿನ ಶತಮಾನಗಳ ಪೈಪೋಟಿ ಮತ್ತು ಒಳಜಗಳಗಳು ಆಧುನಿಕ ಅವಧಿಯ ಅಂತ್ಯದವರೆಗೂ ಪರ್ಯಾಯ ದ್ವೀಪವನ್ನು ಹಲವಾರು ರಾಜ್ಯಗಳಾಗಿ ವಿಂಗಡಿಸಲಾಗಿದೆ. ಇಟಲಿಯ ವಾಣಿಜ್ಯ ಮತ್ತು ರಾಜಕೀಯ ಶಕ್ತಿಯು ೧೭ನೇ ಮತ್ತು ೧೮ನೇ ಶತಮಾನಗಳಲ್ಲಿ ಕ್ಯಾಥೋಲಿಕ್ ಚರ್ಚ್‌ನ ಅವನತಿ ಮತ್ತು ಮೆಡಿಟರೇನಿಯನ್ ಅನ್ನು ದಾಟಿದ ವ್ಯಾಪಾರ ಮಾರ್ಗಗಳ ಪ್ರಾಮುಖ್ಯತೆಯೊಂದಿಗೆ ಗಮನಾರ್ಹವಾಗಿ ಕ್ಷೀಣಿಸಿತು. ಹೆಸರು "ಇತಾಲಿಯಾ" ಎಂಬ ಹೆಸರಿನ ವ್ಯುತ್ಪತ್ತಿಯ ಊಹೆಗಳು. ಇದು ಪ್ರಾಚೀನ ಯವನಭಾಷೆಯ ಮೂಲಕ ಓಸ್ಕನ್ ವಿತೆಲಿಯು 'ಕಾಳುಗಳ ಭೂಮಿ' (cf. ಲತೀನಿ ವಿತುಲುಸ್ "ಕರು", ಉಂಬ್ ವಿತ್ಲೊ "ಕರು")ವಿನಿಂದ ಎರವಲು ಪಡೆಯಲಾಗಿದೆ. ಸಿರಾಕೂಸ್ ನ ಆಂತಿಯೋಖುಸ್ ಇನ ಪ್ರಕಾರ, ಪ್ರಾಚೀನ ಯವನರು ಇತಾಲಿಯ ಎಂಬ ಪದವನ್ನು ಆರಂಭದಲ್ಲಿ ಬ್ರೂತ್ತಿಯುಮ್ ಪೆನಿನ್ಸುಲೆಯ ದಕ್ಷಿಣ ಭಾಗದ ಆಧುನಿಕ ಪ್ರಾಂತ್ಯದ ರೆಗ್ಗಿಯೊ ಮತ್ತು ದಕ್ಷಿಣ ಇಟಲಿಯ ಕಾತನ್ಜಾರೊ ಮತ್ತು ವಿಬೊ ವಲೆಂತಿಯದ ಪ್ರಾಂತ್ಯಗಳ ಭಾಗವನ್ನು ಉಲ್ಲೇಖಿಸಲು ಬಳಸುತ್ತಿದ್ದರು. ಅದೇನೇ ಇದ್ದರೂ, ಅವನ ಸಮಯದಲ್ಲಿ ಓವೆನೋತ್ರಿಯದ ಮತ್ತು "ಇಟಲಿ" ಎಂಬ ದೊಡ್ಡ ಪರಿಕಲ್ಪನೆಯು ಸಮಾನಾರ್ಥಕವಾಗಿದ್ದವು, ಮತ್ತು ಈ ಹೆಸರು ಲುಕಾನಿಯದ ಹೆಚ್ಚಿನ ಭಾಗಕ್ಕೂ ಅನ್ವಯಿಸುತ್ತದೆ. ಸ್ತ್ರಾಬೋನ ಗೆಯೋಗ್ರಾಫಿಕದ ಪ್ರಕಾರ, ರೋಮಕ ಗಣರಾಜ್ಯದ ವಿಸ್ತರಣೆಯ ಮೊದಲು, ಪ್ರಾಚೀನ ಯವನರು ಈ ಹೆಸರನ್ನು ಮೆಸ್ಸಸೀನ ಜಲಸಂಧಿ ಮತ್ತು ಸಲೆರ್ನೊ ಕೊಲ್ಲಿ ಮತ್ತು ತರಾಂತೊ ಕೊಲ್ಲಿಯನ್ನು ಸಂಪರ್ಕಿಸುವ ರೇಖೆಯ ನಡುವಿನ ಭೂಮಿಯನ್ನು ಸೂಚಿಸಲು ಬಳಸುತ್ತಿದ್ದರು, ಇದು ಪ್ರಸ್ತುತ ಕ್ಯಾಲಬ್ರಿಯಾ ಪ್ರದೇಶಕ್ಕೆ ಅನುಗುಣವಾಗಿರುತ್ತದೆ. ಪ್ರಾಚೀನ ಯವನರು ಕ್ರಮೇಣ "ಇತಾಲಿಯ" ಎಂಬ ಹೆಸರನ್ನು ದೊಡ್ಡ ಪ್ರದೇಶಕ್ಕೆ ಅನ್ವಯಿಸಲು ಬಂದರು ದಕ್ಷಿಣದಲ್ಲಿ "ಯವನ ಇತಾಲಿಯದ" ಜೊತೆಗೆ, ಮಧ್ಯ ಇತಾಲಿಯ ಬೇರೆಬೇರೆ ಪ್ರದೇಶಗಳನ್ನು ಒಳಗೊಂಡ "ಎತ್ರುಸಕೀಯ ಇತಾಲಿಯದ" ಅಸ್ತಿತ್ವವನ್ನು ಇತಿಹಾಸಕಾರರು ಸೂಚಿಸಿದ್ದಾರೆ. ರೋಮಕ ಇತಾಲಿಯದ, ಇತಾಲಿಯ ಗಡಿಗಳು ಉತ್ತಮವಾಗಿ ಸ್ಥಾಪಿತವಾಗಿವೆ. ಕಾತೊನ ಒರೀಗಿನೆಸ್, ಲತೀನಿ ಭಾಷೆಯಲ್ಲಿ ರಚಿತವಾದ ಇತಿಹಾಸದ ಮೊದಲ ಕೃತಿ, ಇತಾಲಿಯವನ್ನು ಆಲ್ಪ್ಸ್‌ನ ದಕ್ಷಿಣದಲ್ಲಿರುವ ಸಂಪೂರ್ಣ ಪರ್ಯಾಯ ದ್ವೀಪ ಎಂದು ವಿವರಿಸಲಾಗಿದೆ. ಕಾತೊ ಮತ್ತು ಹಲವಾರು ರೋಮಕ ಲೇಖಕರ ಪ್ರಕಾರ, ಆಲ್ಪ್ಸ್ "ಇತಾಲಿಯದ ಗೋಡೆಗಳನ್ನು" ರೂಪಿಸಿತು. ಪಾಶ್ಚಿಮಾತ್ಯ ರೋಮಕ ಸಾಮ್ರಾಜ್ಯದ ಪತನದ ನಂತರ, ಒಸ್ಟ್ರೋಗೋತ್ಸ್ ಆಕ್ರಮಣದಿಂದ ಉಂಟಾದ ಇತಾಲಿಯದ ರಾಜ್ಯವನ್ನು ರಚಿಸಲಾಯಿತು. ಲೊಂಬಾರ್ಡ್ ಆಕ್ರಮಣಗಳ ನಂತರ, "ಇತಾಲಿಯ" ಅನ್ನು ಅವರ ರಾಜ್ಯದ ಹೆಸರಾಗಿ ಮತ್ತು ಪವಿತ್ರ ರೋಮಕ ಸಾಮ್ರಾಜ್ಯದೊಳಗೆ ಅದರ ಉತ್ತರಾಧಿಕಾರಿ ಸಾಮ್ರಾಜ್ಯಕ್ಕೆ ಹೆಸರಿಸಲಾಯಿತು, ಇದು ನಾಮಮಾತ್ರವಾಗಿ ೧೮೦೬ ರವರೆಗೆ ಮುಂದುವರೆಯಿತು, ಆದರೂ ಇದು ಬಣ ರಾಜಕೀಯದಿಂದ ಸಾಮ್ರಾಜ್ಯವನ್ನು ಆರೋಹಣಕ್ಕೆ ವಿರುದ್ಧವಾಗಿ ವಿಘಟಿಸಿತು. ೧೩ನೇ ಶತಮಾನದಲ್ಲಿ ನಗರ ಗಣರಾಜ್ಯವಾಯಿತು. ಮೇಲ್ಮೈಲಕ್ಷಣ ಇಟಲಿಯ ಮುಖ್ಯ ಭೂಭಾಗವನ್ನು ಖಂಡಾಂತರ ಪ್ರದೇಶವೆಂದೂ ಪರ್ಯಾಯದ್ವೀಪಪ್ರದೇಶವೆಂದೂ ಎರಡು ಭಾಗಗಳಾಗಿ ವಿಂಗಡಿಸಬಹುದು. ಉತ್ತರದಲ್ಲಿ ಆಲ್ಪ್ಸ್‍ಪರ್ವತದ ದಕ್ಷಿಣದ ಇಳುಕಲೂ ದಕ್ಷಿಣಭಾಗದಲ್ಲಿ ಅಪೆನೈನ್ ಪರ್ವತಗಳ ಉತ್ತರದ ಇಳಿಜಾರು ಇಟಲಿಯ ಖಂಡಾಂತರ ಪ್ರದೇಶವನ್ನು ಅಡಕತ್ತರಿಯಂತೆ ಹಿಡಿದುಕೊಂಡಿವೆ. ಪರ್ಯಾಯದ್ವೀಪಪ್ರದೇಶದಲ್ಲಿ ಅಪೆಮಾಂಟಿರೋಸದ ಎತ್ತರ ೧೫೨೧೭ ಅಡಿ. ಇಟಲಿಯ ಪ್ರದೇಶದಲ್ಲಿ ಇರುವ ಶಿಖರಗಳ ಪೈಕಿ ಗ್ರಾನ್ ಪಾರಾಡಿಸೊ (೧೩೬೫೨) ಅತ್ಯಂತ ಉನ್ನತವಾದದ್ದು. ಮಧ್ಯ ಆಲ್ಪ್ಸ್ ಪಶ್ಚಿಮ ಭಾಗದಷ್ಟು ಎತ್ತರವಾಗಿಲ್ಲ. ಪೂರ್ವಭಾಗ ಇನ್ನೂ ತಗ್ಗು; ಆದರೆ ಸುಂದರ. ತೀರ ಪೂರ್ವದಲ್ಲಿ ಪೂರ್ವ-ಪಶ್ಚಿಮವಾಗಿ ಹಬ್ಬಿರುವ ಕಣಿವೆಗಳಲ್ಲಿ ಹರಿಯುವ ಹೊಳೆಗಳ ನೀರು ನಿಂತು ಸರೋವರವಾಗಿ ಪರಿಣಮಿಸಿ, ನೋಡಲು ರಮಣೀಯ. ಪಶ್ಚಿಮದಲ್ಲಿ ೧೦೦೦ ದಿಂದ ೧೭೦೦ ಅಡಿಗಳವರೆಗೆ ಮೇಲೆದ್ದು ಪೂರ್ವದಲ್ಲಿ ೩೦೦ ರಿಂದ ೬೦೦ ಅಡಿಗಳವರೆಗೆ ತಗ್ಗಿ ಹಬ್ಬಿರುವ ಉತ್ತರದ ಬಯಲಿನ ಪಶ್ಚಿಮ ಭಾಗದಲ್ಲಿ ಪೋ ನದಿಯೂ ಅದರ ಉಪನದಿಗಳೂ ಪೂರ್ವಾಭಿಮುಖವಾಗಿ ಹರಿಯುತ್ತವೆ. ಪೂರ್ವದಲ್ಲಿ ಪೋ ಜೊತೆಗೆ ಅನೇಕ ಸ್ವತಂತ್ರ ನದಿಗಳಿವೆ. ಇಟಲಿಯ ಪರ್ಯಾಯದ್ವೀಪ ಭಾಗವನ್ನು ಕಬ್ಬಿನ ಗಿಣ್ಣುಗಳಂತೆ ಮೂರು ಭಾಗಗಳಾಗಿ ವಿಂಗಡಿಸಬಹುದು. ಈ ಪ್ರದೇಶದ ಪಶ್ಚಿಮಭಾಗವನ್ನು ಅನೇಕ ಸ್ವಾಭಾವಿಕ ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಕಂಪ ನದಿಯ ಮೈದಾನದಲ್ಲಿ ಫ್ಲೆಗ್ರೀನ್ ಫೀಲ್ಡ್ಸ್ ಮತ್ತು ವಿಸೊವಿಯಸ್ ಅಗ್ನಿಪರ್ವತಗಳಿವೆ. ಇವು ಇನ್ನೂ ಜೀವಂತವಾಗಿವೆ; ನೇಪಲ್ಸ್ ಪಟ್ಟಣಕ್ಕೆ ಹತ್ತಿರದಲ್ಲೇ ಇವೆ. ಅಪೆನೈನ್ ಪರ್ವತಶ್ರೇಣಿಯಲ್ಲಿ ಅನೇಕ ಬಗೆಯ ಬಂಡೆಗಳಿವೆ. ಅಪೆನೈನ್ ಶ್ರೇಣಿಗಳು ಉತ್ತರದಲ್ಲಿ ಕಿರಿದಾಗಿಯೂ ಮಧ್ಯದಲ್ಲಿ ದಪ್ಪಗೂ ಎತ್ತರವಾಗಿಯೂ ಮುಂದೆ ತಗ್ಗಿಯೂ ಇವೆ. ಇಟಲಿಯ ನದಿಗಳ ಪ್ರವಾಹಗಳು ವರ್ಷಾದ್ಯಂತ ಒಂದೇ ಸಮನಾಗಿರುವುದಿಲ್ಲ. ಉತ್ತರದ ನದಿಗಳಲ್ಲಿ ಈ ಏರುಪೇರು ದಕ್ಷಿಣದ ನದಿಗಳಷ್ಟು ಅಧಿಕವಲ್ಲ. ಆಲ್ಪ್ಸ್ ಮೇಲ್ಭಾಗದಲ್ಲಿ ಹುಟ್ಟಿ ಹರಿಯುವ ನದಿಗಳು ಮುಂಬೇಸಗೆಯಲ್ಲಿ ಕರಗಿದ ಹಿಮನೀರಿನಿಂದ ಕೂಡಿ ಉಬ್ಬಿ ಹರಿಯುತ್ತದೆ. ಆಲ್ಪ್ಸ್‍ಪರ್ವತಗಳ ಕೆಳಪ್ರದೇಶದಲ್ಲಿ ಹುಟ್ಟುವ ನದಿಗಳಲ್ಲಿ ವರ್ಷಕ್ಕೆ ಎರಡು ಬಾರಿ ಪ್ರವಾಹ. ಮುಂಬೇಸಗೆಯಲ್ಲಿ ಹಿಮ ಕರಗಿ ನೀರು ಹರಿದರೆ ಬೇಸಗೆಯ ಕೊನೆಭಾಗದಲ್ಲೂ ಶರತ್ಕಾಲದ ಆದಿಭಾಗದಲ್ಲೂ ಬೀಳುವ ಮಳೆಯಿಂದ ತುಂಬು ಹರಿವಿರುತ್ತದೆ. ಉತ್ತರದ ಮೈದಾನದ ದಕ್ಷಿಣದಲ್ಲಿ ಹುಟ್ಟಿ ಪೋ ನದಿಯಲ್ಲಿ ಸಂಗಮವಾಗುವ ನದಿಗಳಲ್ಲಿ ಮಾರ್ಚಿಯಲ್ಲೂ ಸೆಪ್ಟಂಬರಿನಲ್ಲೂ ಪ್ರವಾಹ. ಜುಲೈ ತಿಂಗಳಿಂದ ಸೆಪ್ಟೆಂಬರ್ ವರೆಗೆ ಅವುಗಳ ನೀರಿನ ಮಟ್ಟ ಕಡಿಮೆ. ಮಧ್ಯ ಇಟಲಿಯ ನದಿಗಳಿಗೆ ವಸಂತಋತುವೇ ಪ್ರವಾಹಕಾಲ. ಜುಲೈಯಿಂದ ಸೆಪ್ಟೆಂಬರ್‍ವರೆಗೆ ತಗ್ಗಿದ ಮಟ್ಟ. ನವೆಂಬರಿನಲ್ಲಿ ಸ್ವಲ್ಪ ಪ್ರವಾಹ. ದಕ್ಷಿಣ ಇಟಲಿಯ ನದಿಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಪ್ರವಾಹದ ಭೋರ್ಗರೆತ. ವಾಯುಗುಣ ಇಟಲಿಯ ಹವಾಮಾನವು ಉತ್ತರವನ್ನು ಹೊರತುಪಡಿಸಿ ಇಟಲಿಯನ್ನು ಸುತ್ತುವರೆದಿರುವ ಮೆಡಿಟರೇನಿಯನ್ ಸಮುದ್ರದ ದೊಡ್ಡ ನೀರಿನ ದೇಹದಿಂದ ಪ್ರಭಾವಿತವಾಗಿರುತ್ತದೆ. ಈ ಸಮುದ್ರಗಳು ಇಟಲಿಗೆ ಶಾಖ ಮತ್ತು ತೇವಾಂಶದ ಜಲಾಶಯವಾಗಿದೆ. ದಕ್ಷಿಣ ಸಮಶೀತೋಷ್ಣ ವಲಯದೊಳಗೆ, ಅವರು ಪ್ರದೇಶದ ಭೂರೂಪಶಾಸ್ತ್ರದ ಕಾರಣದಿಂದಾಗಿ ಸ್ಥಳೀಯ ವ್ಯತ್ಯಾಸಗಳೊಂದಿಗೆ ಮೆಡಿಟರೇನಿಯನ್ ಹವಾಮಾನವನ್ನು ನಿರ್ಧರಿಸುತ್ತಾರೆ, ಇದು ವಿಶೇಷವಾಗಿ ಹೆಚ್ಚಿನ ಒತ್ತಡದ ಪರಿಸ್ಥಿತಿಗಳಲ್ಲಿ ಅದರ ತಗ್ಗಿಸುವ ಪರಿಣಾಮಗಳನ್ನು ಅನುಭವಿಸುವಂತೆ ಮಾಡುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಅಕ್ಷಾಂಶದಲ್ಲಿ ಸುಮಾರು ಹತ್ತು ಡಿಗ್ರಿಗಳ ಅಂತರವಿರುವುದರಿಂದಲೂ ಮೈಮೇಲೆ ಬಹು ತೀವ್ರ ಉಬ್ಬು ತಗ್ಗುಗಳಿರುವುದರಿಂದಲೂ ಇಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ವಾಯುಗುಣದಲ್ಲಿ ಬಹಳ ವ್ಯತ್ಯಾಸಗಳಿವೆ. ಸಮುದ್ರಕ್ಕಿರುವ ದೂರವೂ ಈ ವ್ಯತ್ಯಾಸಗಳಿಗೆ ಒಂದು ಕಾರಣ. ಸಮುದ್ರಪ್ರಭಾವಕ್ಕೆ ಒಳಗಾದ ಪ್ರದೇಶದಲ್ಲಿ ಮಳೆ ಹೆಚ್ಚು; ಹವೆ ಹಿತಕರ. ಎತ್ತರ ಪ್ರದೇಶ ಹೆಚ್ಚು ತಂಪು; ಅಲ್ಲಿ ಮಳೆಯೂ ಹೆಚ್ಚು. ಪರ್ವತಗಳ ಪೂರ್ವ ಬದಿಯಲ್ಲಿ ಮಳೆ ಕಡಿಮೆ. ಇದು ಮಳೆನೆರಳು ಪ್ರದೇಶ. ಉತ್ತರ ಮೈದಾನದ ಪಶ್ಚಿಮಭಾಗದಲ್ಲಿರುವ ಟುರಿನ್ನಿನಲ್ಲಿ ವರ್ಷದ ಕನಿಷ್ಠ ಮಧ್ಯಮ ಉಷ್ಣತೆ ೧೭೦ ಫ್ಯಾ. ನಷ್ಟು ಕೆಳಗಿರುತ್ತದೆ. ದಕ್ಷಿಣದ ಮೆಸ್ಸಿನ ಜಲಸಂಧಿಯ ಆಚೀಚೆ ಪ್ರದೇಶದಲ್ಲಿ ಚಳಿಗಾಲದಲ್ಲಿ ೫೩೦ ಫ್ಯಾ. ನಷ್ಟು ಹೆಚ್ಚು ಉಷ್ಣತೆಯಿರುತ್ತದೆ. ಬೇಸಗೆಯಲ್ಲಿ ಟರಾಂಟೊ ಖಾರಿಯ ಸುತ್ತಣ ಪ್ರದೇಶದಲ್ಲಿ ಅತಿ ಹೆಚ್ಚು ಉಷ್ಣತೆಯೂ (೭೭.೫ ಫ್ಯಾ.) ಆಲ್ಪ್ಸ್ ತಲೆಗಳ ಮೇಲೆ ಅತ್ಯಂತ ತಂಪೂ ಇರುತ್ತದೆ. ಕರಾವಳಿ ಪ್ರದೇಶ ತಗ್ಗಾಗಿರುವುದರಿಂದ ಅಲ್ಲಿ ಬೇಸಗೆಯಲ್ಲಿ ಉಷ್ಣತೆ ಹೆಚ್ಚು. ಇಟಲಿಯ ಎಲ್ಲ ಕಡೆಗೂ ಹಿಮಬೀಳುವುದಾದರೂ ದಕ್ಷಿಣದಲ್ಲಿ ಇದು ವಿರಳ. ಉತ್ತರದ ಆಲ್ಪ್ಸ್ ಪ್ರದೇಶದಲ್ಲಿ ಪರಮಾವಧಿ ಮಳೆ (೧೨೦೦); ತಗ್ಗು ಪ್ರದೇಶದಲ್ಲಿ ತೀರಕಡಿಮೆ (೧೫”). ಪಶ್ಚಿಮ ಮಾರುತಗಳೇ ಮೋಡ ವಾಹಕಗಳಾಗಿದ್ದರಿಂದ ಪಶ್ಚಿಮದಲ್ಲಿ ಮಳೆ ಹೆಚ್ಚು. ಪೂರ್ವಭಾಗ ಶುಷ್ಕ. ಇಟಲಿಯ ದಕ್ಷಿಣಾರ್ಧದಲ್ಲಿ ಮೆಡಿಟರೇನಿಯನ್ ವಾಯುಗುಣಕ್ಕೆ ಅನುಗುಣವಾಗಿ ಮಳೆ ಬೀಳುತ್ತದೆ. ಎಂದರೆ ಚಳಿಗಾಲದಲ್ಲಿ ಮಳೆ; ಬೇಸಗೆಯಲ್ಲಿ ತೇವವಿರುವುದಿಲ್ಲ. ಉತ್ತರಕ್ಕೆ ಹೋದಂತೆಲ್ಲ ವರ್ಷಕ್ಕೆ ಎರಡು ಮಳೆಗಾಲ; ಶರತ್ ಹಾಗೂ ವಸಂತಋತುಗಳಲ್ಲಿ ಮಳೆ ಅಧಿಕ. ಆದಾಗ್ಯೂ ಚಳಿಗಾಲದಲ್ಲೇ ಮಳೆಯ ಪ್ರಮಾಣ ಹೆಚ್ಚು. ಆದರೆ ಬೇಸಗೆಯ ಒಣಹವೆಯ ಅವಧಿ ಉತ್ತರಕ್ಕೆ ಹೋದಂತೆಲ್ಲ ಕಿರಿದಾಗುತ್ತದೆ. ಪೋ ನದಿಯ ಉತ್ತರಕ್ಕೆ ಚಳಿಗಾಲದಲ್ಲೇ ಮಳೆಯ ಕನಿಷ್ಠ ಪ್ರಮಾಣ. ಈ ಮೈದಾನದಲ್ಲಿ ಚಳಿಗಾಲ, ಬೇಸಗೆಕಾಲಗಳೆರಡರಲ್ಲೂ ಸಾಮಾನ್ಯವಾಗಿ ಒಣ ಹವೆ ಇರುವುದು ಸ್ವಾರಸ್ಯದ ಸಂಗತಿಯಾಗಿದೆ. ಆಲ್ಪ್ಸ್‍ಪರ್ವತದ ಶೃಂಗ ಪ್ರದೇಶಗಳಾದರೂ ಸದಾ ದಟ್ಟವಾದ ಹಿಮಕವಚವನ್ನು ಹೊದ್ದಿರುತ್ತವೆ. ಅಷ್ಟು ಎತ್ತರವಲ್ಲದ ಅಪೆನೈನ್ ಪರ್ವತ ಶ್ರೇಣಿಗಳ ವಿಶಾಲ ಪ್ರದೇಶಗಳಲ್ಲಿ ವರ್ಷದಲ್ಲಿ ಮೂರು ನಾಲ್ಕು ತಿಂಗಳುಗಳ ಕಾಲ ಹಿಮ ಇರುತ್ತದೆ. ಅದೇ ಉತ್ತರ ಭಾಗದ ಬಯಲು ಭೂಮಿಯಲ್ಲಿ ವರ್ಷದ ಕೇವಲ ಹತ್ತುದಿನ ಹಿಮ ಕಂಡರೆ ಹೆಚ್ಚು. ವಾಯುಗುಣದ ಹಿತಾಹಿತಗಳನ್ನೂ ಜೀವನ ಸೌಲಭ್ಯಗಳನ್ನೂ ವ್ಯವಸಾಯ, ಕೈಗಾರಿಕೆಗಳ ಸೌಕರ್ಯಗಳನ್ನೂ ಗಮನಿಸಿ ಜನ ನೆಲೆನಿಲ್ಲುತ್ತ ಹೋಗಿರುವುದನ್ನು ಇಲ್ಲಿ ಕಾಣಬಹುದು. ಸ್ವಾಭಾವಿಕ ಸಸ್ಯವರ್ಗ ಮಧ್ಯ ಐರೋಪ್ಯ ಹಾಗೂ ಮೆಡಿಟರೇನಿಯನ್ ಪ್ರದೇಶಗಳೆರಡೂ ಇಟಲಿಯಲ್ಲಿ ಒಂದರ ಮೇಲೊಂದು ಪ್ರಸರಿಸಿವೆ. ಶಂಕುವಿನಾಕಾರದ (ಕೊನಿಫರಸ್) ಮರಗಳಿಂದಲೂ ಅಗಲೆಲೆಯ ಪರ್ಣಪಾತೀ ವೃಕ್ಷಗಳಿಂದಲೂ ಕೂಡಿದ ಕಾಡುಗಳು, ಕುರುಚಲು ಕಾಡುಗಳು, ಹಸಿರು ಹುಲ್ಲುಗಾವಲುಗಳು ಮಧ್ಯ ಐರೋಪ್ಯ ಪ್ರದೇಶದ ಲಕ್ಷಣ. ಶರತ್ಕಾಲದಲ್ಲಿ ಬುಡದವರೆಗೂ ಸತ್ತು ಮತ್ತೆ ಬೆಳೆಯುವ ಸಸ್ಯಗಳು ಇಲ್ಲಿ ಅಧಿಕ. ಶಂಕುವಿನಾಕಾರದ ಮರಗಳೊ ದಪ್ಪನಾದ ಅಗಲೆಲೆಯ ನಿತ್ಯ ಹಸರು ವೃಕ್ಷಗಳೂ ವಾರ್ಷಿಕ ಸಸ್ಯಗಳೂ ಗೆಡ್ಡೆಯಿಂದ ಬೆಳೆಯುವ ಗಿಡಗಳೂ ಬೇಸಗೆಯಲ್ಲಿ ಒಣಗುವ ಹುಲ್ಲುಗಾವಲುಗಳೂ ಮೆಡಿಟರೇನಿಯನ್ ಪ್ರದೇಶದಲ್ಲಿ ಸಾಮಾನ್ಯ. ಇವೆರಡು ಸ್ವಾಭಾವಿಕ ವಿಭಾಗಗಳನ್ನೂ ಪ್ರತ್ಯೇಕಿಸುವ ಖಚಿತ ಗೆರೆ ಎಳೆಯುವುದು ಅಸಾಧ್ಯವಾದರೂ ಇಟಲಿಯ ಆಲ್ಪ್ಸ್ ಪ್ರದೇಶವನ್ನೂ ಉತ್ತರ ಮೈದಾನದ ಹೆಚ್ಚಿನ ಭಾಗವನ್ನೂ ಮಧ್ಯೆಐರೋಪ್ಯ ಪ್ರದೇಶಕ್ಕೂ ಪರ್ಯಾಯದ್ವೀಪ ಭಾಗವನ್ನು ಮೆಡಿಟರೇನಿಯನ್ ಪ್ರದೇಶಕ್ಕೂ ಸೇರಿಸಬಹುದು. ಇಟಲಿಯ ಪೂರ್ವ ಕರಾವಳಿ ಭಾಗವನ್ನು ಮೆಡಿಟರೇನಿಯನ್ ಪ್ರದೇಶದಲ್ಲೇ ವಿಶಿಷ್ಟವಾದದ್ದೆಂದು ಪರಿಗಣಿಸಬೇಕು. ಅಪೆನೈನ್ ಪರ್ವತಶ್ರೇಣಿಗಳ ಮೇಲೂ ಸಿಸಿಲಿಯ ಎಟ್ನ ಪರ್ವತದ ಮೇಲೂ ಪರ್ಣಪಾತೀ ವೃಕ್ಷಗಳ ಕಾಡುಗಳು ಅಧಿಕ. ಇಟಲಿಯ ಅನೇಕ ಭಾಗಗಳಲ್ಲಿ ಕುರುಚಲು ಗಿಡಗಳು ಸಾಮಾನ್ಯ. ಪ್ರಾಣಿವರ್ಗ ಇಟಲಿಯ ಪ್ರಾಣಿಗಳಿಗೂ ಮಧ್ಯ ಯೂರೋಪ್ ಬಾಲ್ಕನ್ ಹಾಗೂ ಆಫ್ರಿಕಾ ಪ್ರದೇಶಗಳ ಪ್ರಾಣಿಗಳಿಗೂ ರೂಪಸಾಮ್ಯವುಂಟು. ಆದರೆ ಪ್ರಾಣಿಗಳಿಗೆ ಆತ್ಮವಿಲ್ಲವೆಂದೂ ಆದ್ದರಿಂದ ಅವು ಮಾನವಾನುಕಂಪಕ್ಕೆ ಅನರ್ಹವೆಂದೂ ಅವುಗಳ ಬಗ್ಗೆ ಉಪಯುಕ್ತತೆಯ ದೃಷ್ಟಿಯಿಂದ ಮಾತ್ರ ವರ್ತಿಸಬೇಕೆಂದೂ ಇಟಾಲಿಯನ್ನರು ಭಾವಿಸಿರುವುದರಿಂದ ಇಲ್ಲಿ ಅವು ವಿರಳ. ಬೇಟೆಯಾಡಲು ಎಲ್ಲರಿಗೂ ಹಕ್ಕುಂಟು. ಜಮೀನಿನ ಒಡೆಯನಿಗೆ ತನ್ನ ನೆಲದ ಮೇಲಿನ ಪ್ರಾಣಿಗಳ ಮೇಲೆ ಯಾವ ಸ್ವಾಮ್ಯವೂ ಇಲ್ಲ. ಆಹಾರದ ಕೊರತೆಯನ್ನು ತುಂಬಿಕೊಳ್ಳುವ ಸಲುವಾಗಿ ಪ್ರಾಣಿಗಳನ್ನು ಬೇಟೆಯಾಡುವುದು ಸಾಮಾನ್ಯ. ಹೀಗಾಗಿ ಎಲ್ಲೋ ಕೆಲವೆಡೆಗಳಲ್ಲಿ ಮಾತ್ರ ಪ್ರಾಣಿಗಳು ಇನ್ನೂ ಉಳಿದುಕೊಂಡಿವೆ. ಕರಡಿಗಳು ಅಬ್ರುಜಿ ಎಂಬಲ್ಲಿ ಇನ್ನೂ ಕಾಣಸಿಗುತ್ತವೆ. ತೋಳಗಳು ಅಪೆನೈನ್ ಶ್ರೇಣಿಗಳಲ್ಲಿ ಹೆಚ್ಚಾಗಿವೆ. ಸಣ್ಣಜಾತಿಯ ಜಿಂಕೆಗಳು (ರೋ) ಕಾಡುಗಳಲ್ಲಿ ಉಳಿದುಬಂದಿವೆ. ವೆನಿಸ್ ಬಳಿಯ ಆಲ್ಪ್ಸ್ ಪ್ರದೇಶದಲ್ಲಿ ಸಾರಂಗಗಳೂ ಆಲ್ಪ್ಸ್ ಪ್ರದೇಶದ ಎಲ್ಲೆಡೆಗಳಲ್ಲೂ ಪಾಮಾಯ್ ಮೃಗಗಳೂ ಅಲ್ಲಲ್ಲಿ ಕಾಡುಹಂದಿಗಳೂ ಇವೆ. ಹಲ್ಲಿಗಳು ಅಸಂಖ್ಯಾತ. ಬೆಟ್ಟಗಾಡುಗಳಲ್ಲಿ ಹಾವುಗಳು ಧಾರಾಳ. ಸಾವಿರಕಾಲುಗಳೂ (ಸ್ಕಾಲೊಪೇಂಡ್ರ) ಸಣ್ಣ ಚೇಳುಗಳೂ ಹೆಜ್ಜೇಡಗಳೂ (ಟರಾಂಟ್ಯುಲ) ಹಾರುಜೇಡಗಳೂ ಇಲ್ಲಿನ ವಿಷಜಂತುಗಳು, ನಾನಾ ಬಗೆಯ ಸೊಳ್ಳೆಗಳೂ ಇವೆ. ಆದರೆ ಮಲೇರಿಯ ಮೂಲೋತ್ಪಾಟನವಾಗಿರುವುದರಿಂದ ಭಯವಿಲ್ಲ. ವ್ಯವಸಾಯ ಇಟಲಿ ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿಯ ಆರ್ಥಿಕ ವ್ಯವಸ್ಥೆಗೆ ವ್ಯವಸಾಯವೇ ತಳಹದಿ. ದೇಶದ ೯೦% ರಷ್ಟು ಭಾಗ ಬೇಸಾಯದ ನೆಲದಿಂದಲೂ ಅರಣ್ಯಗಳಿಂದಲೂ ಕೂಡಿದೆ. ದೇಶದ ದುಡಿಯುವ ಜನರಲ್ಲಿ ೨/೫ ಭಾಗ ವ್ಯವಸಾಯದಲ್ಲೂ ಅರಣ್ಯೋದ್ಯಮದಲ್ಲೂ ನಿರತರಾಗಿದ್ದಾರೆ. ೧೯೫೩ರ ಭೂಸುಧಾರಣಾಕಾಯಿದೆಯ ಪ್ರಕಾರ ಜಮೀನನ್ನು ವಶಪಡಿಸಿಕೊಂಡು ೧೯೬೩ರಲ್ಲಿ ಸುಮಾರು ೧೮೦೦೦೦೦ ಎಕರೆ ಜಮೀನನ್ನು ಪುನರ್ವಿಂಗಡಿಸಿಯೂ ೧೬೦೦೦೦೦ ಎಕರೆ ಜಮೀನನ್ನು ಹೊಸದಾಗಿಯೂ ರೈತರಿಗೆ ನೀಡಲಾಯಿತು. ದೇಶದ ನಾನಾ ಕಡೆಗಳಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಆಲ್ಪೈನ್ ಜಿಲ್ಲೆಗಳು ಅರಣ್ಯ, ಹಣ್ಣಿನ ತೋಟ ಹಾಗೂ ಗೋಮಾಳಗಳಿಗೆ ಪ್ರಸಿದ್ಧ. ಪೋ ಕಣಿವೆ ಪ್ರದೇಶಗಳಲ್ಲಿ ಧಾನ್ಯ ಹಾಗೂ ಹುಲ್ಲು ಬೆಳೆಯುತ್ತಾರೆ. ಬೆಟ್ಟಗಳ ಮಧ್ಯ ಹಾಗೂ ದಕ್ಷಿಣ ಭಾಗದಲ್ಲಿ ದವಸ ಧಾನ್ಯಗಳನ್ನು, ಆಲಿವ್ ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ಕಾಲುವೆ ವ್ಯವಸ್ಥೆ ನೀರಾವರಿ ವ್ಯವಸ್ಥೆ ತುಂಬ ಸಮರ್ಪಕವಾಗಿದೆ. ಪರಿಮಾಣದ ದೃಷ್ಟಿಯಿಂದ ಗೋಧಿ, ಬೀಟ್‍ರೂಟ್, ಆಲೂಗೆಡ್ಡೆ, ಜೋಳ, ಟೊಮ್ಯಾಟೊ, ಅಕ್ಕಿ, ಓಟ್ಸ್, ಬಾರ್ಲಿ, ಸಣ್ಣಗೋದಿ, ಹೊಗೆಸೊಪ್ಪು, ಸೆಣಬು-ಇವು ಮುಖ್ಯವಾದ ಬೆಳೆಗಳು. ಅಲ್ಲದೆ ಕಿತ್ತಲೆ ಹಾಗೂ ನಿಂಬೆಹಣ್ಣುಗಳನ್ನು ಹೇರಳವಾಗಿ ಬೆಳೆಯುತ್ತಾರೆ. ದ್ರಾಕ್ಷಾರಸ ಹಾಗೂ ಆಲಿವ್ ಎಣ್ಣೆಗಳ ಉತ್ಪಾದನೆಯಲ್ಲಿ ಪ್ರಸಿದ್ಧವಾದ ರಾಷ್ಟ್ರಗಳ ಪೈಕಿ ಇಟಲಿಗೆ ಎರಡನೆಯ ಸ್ಥಾನ. ದೇಶದ ಎಲ್ಲ ಭಾಗಗಳಲ್ಲೂ ಸುಮಾರು ೧೦೦೦೦೦೦೦ ದನಕರುಗಳನ್ನೂ ಅಷ್ಟೇ ಪ್ರಮಾಣದಲ್ಲಿ ಕುರಿ, ಮೇಕೆ, ಹಂದಿಗಳನ್ನೂ ನೋಡಬಹುದಾಗಿದೆ. ಉಳಿದ ಪ್ರಾಣಿ ಸಂಪತ್ತೆಂದರೆ ಕತ್ತೆ, ಕುದುರೆ ಹಾಗೂ ಹೇಸರಗತ್ತೆ. ಇಟಲಿಯಲ್ಲಿ ದೊರಕುವ ಖನಿಜಸಂಪತ್ತು ಅಷ್ಟೇನೂ ಆಶಾದಾಯಕವಾದುದಲ್ಲ. ಗಂಧಕ ಹಾಗೂ ಪಾದರಸ ಹೇರಳವಾಗಿ ಸಮೃದ್ಧವಾಗಿ ದೊರಕುತ್ತದೆ. ಇಟಲಿ ಇದನ್ನು ಹೇರಳವಾಗಿ ರಫ್ತುಮಾಡುತ್ತದೆ. ಪ್ರಪಂಚದ ೧/೩ ಭಾಗದಷ್ಟು ಪಾದರಸ ಇಟಲಿಯಲ್ಲಿ ಉತ್ಪಾದನೆಯಾಗುತ್ತದೆ. ಕಬ್ಬಿಣ, ಸತು, ಸೀಸ, ಮ್ಯಾಂಗನೀಸ್ ಮತ್ತು ಅಲ್ಯೂಮಿನಿಯಂ ಅದುರುಗಳ ಉತ್ಪಾದನೆಯೂ ಇದೆ. ಆದರೆ ಕೈಗಾರಿಕೆಗೆ ಬೇಕಾದ ಕಬ್ಬಿಣದ ಅದುರು ಹಾಗೂ ಕಲ್ಲಿದ್ದಲು ಸಾಕಷ್ಟು ದೊರಕದಿರುವುದು ದೇಶದ ಕೈಗಾರಿಕೋದ್ಯಮಕ್ಕೆ ಭಾರಿ ಪೆಟ್ಟು. ಕೆಲವು ಮುಖ್ಯ ಗಣಿಗಳು ಸಿಸಿಲಿ, ಸಾರ್ಡಿನಿಯ, ಟಸ್ಕನಿ, ಲೊಂಬಾರ್ಡಿಗಳಲ್ಲಿವೆ. ಸಿಸಿಲಿಯಲ್ಲಿ ಅನೇಕ ಸಮೃದ್ಧ ಎಣ್ಣೆ ಬಾವಿಗಳು ದೊರಕಿವೆ. ಆ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಯೂರೋಪಿನಲ್ಲೇ ಅತಿ ಪ್ರಮುಖವಾದ ಎಣ್ಣೆ ದೊರಕುವ ಪ್ರದೇಶಗಳನ್ನಾಗಿ ಮಾಡುವ ಯೋಜನೆ ಹಾಕಿಕೊಂಡು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಜಲವಿದ್ಯುಚ್ಛಕ್ತಿಯನ್ನು ಅಧಿಕವಾಗಿ ಉತ್ಪಾದಿಸಲಾಗುತ್ತಿದೆ. ದೇಶದ ಕೈಗಾರಿಕೋದ್ಯಮಗಳು ಇಟಲಿಯ ಉತ್ತರಭಾಗದಲ್ಲಿ ಹೆಚ್ಚಾಗಿವೆ. ಆದರೆ ಇತ್ತೀಚೆಗೆ ದಕ್ಷಿಣದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಉತ್ಪಾದನೆ ಹೆಚ್ಚಿಸಬೇಕೆಂದು ನಿಯೋಜಿತ ಯೋಜನೆಯನ್ನು ಹಾಕಿಕೊಂಡು ದೇಶ ಮುಂದುವರಿಯುತ್ತಿದೆ. ಇಟಲಿಯ ಕೈಗಾರಿಕಾ ಕ್ಷೇತ್ರದಲ್ಲಿ ಪ್ರಮುಖವಾದದ್ದು ಎಂದರೆ ಬಟ್ಟೆ ಕೈಗಾರಿಕೆ. ಈ ಕೈಗಾರಿಕೆ ದೇಶದಲ್ಲಿ ಬಹುತೇಕ ಜನರಿಗೆ ಉದ್ಯೋಗ ನೀಡಿದೆ. ಈ ಕೈಗಾರಿಕೋದ್ಯಮದಲ್ಲಿ ಮುಖ್ಯವಾಗಿ ಸಿಲ್ಕ್, ಉಣ್ಣೆ ಮತ್ತು ಹತ್ತಿ ಹಾಗೂ ಕೃತಕನೂಲಿನ ಬಟ್ಟೆಗಳ ಉತ್ಪಾದನೆ ಹೆಚ್ಚಾಗಿದೆ. ರಾಸಾಯನಿಕ ವಸ್ತು, ಸಕ್ಕರೆ ಹಾಗೂ ಮೋಟಾರ್ ಕಾರು, ಕೈಗಾರಿಕೆಗಳು ಪ್ರಮುಖವಾದ ಉದ್ಯಮಗಳಾಗಿವೆ. ವೈರ್‍ಲೆಸ್ ಮತ್ತು ಬೆರಳಚ್ಚು ಯಂತ್ರ, ವ್ಯವಸಾಯಕ್ಕೆ ಬೇಕಾದ ಉಪಕರಣ ಬೈಸಿಕಲ್ಲು, ಮೋಟಾರ್ ಸೈಕಲ್ಲು-ಇವು ಕೈಗಾರಿಕೋದ್ಯಮದ ಇತರ ಉತ್ಪಾದಿತ ವಸ್ತುಗಳು. (ನೋಡಿ- ಇಟಲಿಯ-ಆರ್ಥಿಕ-ವ್ಯವಸ್ಥೆ) ಜನಜೀವನ ಬಹುಪುರಾತನ ಕಾಲದಿಂದ ಇಟಲಿಗೆ ಅನೇಕ ಜನಾಂಗಗಳು ಬಂದು ಸೇರಿವೆ. ಆರ್ಯರು, ಕೆಲ್ಟರು, ಗೋಥರು, ಇಟ್ರಸ್ಕನರು ಮುಂತಾದ ಜನಾಂಗಗಳ ಜನರು ಇಟಲಿಯ ಮೇಲೆ ದಾಳಿ ನಡೆಸಿದರು. ಪ್ರತಿಯೊಂದು ದಾಳಿಯ ಅನಂತರವೂ ಅವರಲ್ಲಿ ಸ್ವಲ್ಪಜನ ಅಲ್ಲೇ ನೆಲೆಯೂರಿದರು. ಹೀಗೆ ಇಟಲಿಯಲ್ಲಿ ಅನೇಕ ಜನಾಂಗಗಳ ಮಿಶ್ರಣವಾಗುತ್ತ ಬಂದಿದೆ. ಈಗ ಅದು ತನ್ನದೇ ಆದ ಕೆಲವು ವಿಶಿಷ್ಟ ಲಕ್ಷಣಗಳಿಂದ ಕೂಡಿದೆ. ಇಂದಿಗೂ ಇಟಲಿಯ ಜನರಲ್ಲಿ ವೈವಿಧ್ಯವನ್ನು ಕಾಣಬಹುದು. ದೇಶದ ಒಟ್ಟು ವಿಸ್ತೀರ್ಣದ ದೃಷ್ಟಿಯಿಂದ ಇಟಲಿಯಲ್ಲಿ ಇತರ ರಾಷ್ಟ್ರಗಳಿಗಿಂತ ಹೆಚ್ಚಿನ ಜನಸಾಂದ್ರತೆ ಇಲ್ಲದಿದ್ದರೂ ಪರ್ವತಮಯ ಪ್ರದೇಶದಿಂದಾಗಿ ಜನವಸತಿ ಕೆಲವೇ ಅತಿ ಹೆಚ್ಚಾಗಿದೆ. ಈಗಂತೂ ಇದೊಂದು ಸಮಸ್ಯೆಯೇ ಆಗಿ ಪರಿಣಮಿಸಿದೆ. ೧೯೩೬ರಲ್ಲಿ ಪ್ರತಿ ಚ.ಮೈ.ಗೆ ೩೫೦ ಮಂದಿ ಇದ್ದರು. ೧೯೬೧ರಲ್ಲಿ ಇದು ೪೩೫ಕ್ಕೇರಿತು. ೧೯೬೧ರ ಗಣತಿಯಂತೆ ಪ್ರತಿ ಚ.ಮೈ.ಗೆ ೮೦ ರಿಂದ ೯೦೭ರವರೆಗೆ ವಿವಿಧ ರೀತಿಯಲ್ಲಿ ಜನಸಾಂದ್ರತೆ ಹರಡಿತ್ತು. ಈಗ ಜನಸಂಖ್ಯೆಯ ಏರಿಕೆಯ ಪ್ರಮಾಣ ಅಷ್ಟಾಗಿಲ್ಲ. ೧೯೩೮ರಿಂದ ೧೯೬೧ರ ವರೆಗೆ ಜನನ ಪ್ರಮಾಣ ಸಾಕಷ್ಟು ಇಳಿಯಿತು. ಆದರೆ ಸುಧಾರಿತ ವೈದ್ಯಕೀಯ ಸೌಲಭ್ಯದಿಂದಾಗಿ ನೈಸರ್ಗಿಕ ಮರಣಗಳ ಸಂಖ್ಯೆಯೂ ಇಳಿಯಿತು. ಹೀಗಾಗಿ ಒಟ್ಟಿನಲ್ಲಿ ಜನಸಂಖ್ಯೆಯ ಏರಿಕೆಯ ಪ್ರಮಾಣ ತಕ್ಕಮಟ್ಟಿಗೆ ಇತ್ತು. ಇಲ್ಲಿನ ಜನ ಮೊದಲಿನಿಂದಲೂ ಅಧಿಕಸಂಖ್ಯೆಯಲ್ಲಿ ಹೊರಕ್ಕೆ ವಲಸೆ ಹೋಗುತ್ತಿದ್ದುದರಿಂದ ಜನಸಂಖ್ಯೆಯ ಏರಿಕೆ ಅತಿಯಾಗಿ ಪರಿಣಮಿಸಿಲ್ಲವೆನ್ನಬಹುದು. ಇಟಲಿಯ ಬಹುಸಂಖ್ಯಾತ ಪ್ರಜೆಗಳು ಅಮೆರಿಕಕ್ಕೂ ಯೂರೋಪಿನ ಇತರ ರಾಷ್ಟ್ರಗಳಿಗೂ ವಲಸೆ ಹೋಗುವುದು ಸಾಮಾನ್ಯವಾಗಿತ್ತು. ಈಗ ಈ ರೀತಿ ವಲಸೆ ಹೋಗುವವರ ಸಂಖ್ಯೆ ತಗ್ಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಧರ್ಮ ಇಟಲಿಯನ್ನು ರೋಮನ್ ಕೆಥೊಲಿಕ್ ರಾಷ್ಟ್ರವೆಂದೇ ಹೇಳಬಹುದು. ಇಲ್ಲಿಯ ಜನರಲ್ಲಿ ೯೫%ಕ್ಕೂ ಹೆಚ್ಚು ಜನ ಕೆಥೊಲಿಕರು. ಪ್ರಾಟೆಸ್ಟಂಟರೂ ಜ್ಯೂಗಳೂ ಇತರ ಮತಾವಲಂಬಿಗಳೂ ಅಲ್ಪಸಂಖ್ಯೆಯಲ್ಲಿದ್ದಾರೆ. ಕೆಥೊಲಿಕ್ ಮತವನ್ನು ರಾಷ್ಟ್ರೀಯಮತವೆಂದು ಪರಿಗಣಿಸಲಾಗಿದೆ. ಆದರೆ ಇತರ ಮತಗಳನ್ನೂ ಇದಕ್ಕೆ ಸರಿಸಮನಾಗಿಯೇ ಕಾಣಲಾಗುತ್ತದೆ. ಇಲ್ಲಿನ ಶಾಖೆಗಳಲ್ಲಿ ಕೆಥೊಲಿಕ್ ಧಾರ್ಮಿಕ ಶಿಕ್ಷಣ ಕಡ್ಡಾಯವಾಗಿದೆ. ಈ ಶಿಕ್ಷಣದ ಹೊಣೆಯನ್ನು ಚರ್ಚುಗಳು ನಿರ್ವಹಿಸುತ್ತವೆ. ಧರ್ಮಾಧಿಕಾರಿಗಳಿಗೆ ರಾಜ್ಯದ ಬೊಕ್ಕಸದಿಂದಲೇ ವೇತನ ಕೊಡಲಾಗುವುದು. ಧರ್ಮಾಧಿಕಾರಿಗಳನ್ನು (ಪ್ರೀಸ್ಟ, ಬಿಷಪ್, ಆರ್ಚ್‍ಬಿಷಪ್ ಮುಂತಾದವರು) ಪೋಪರೇ ನಿಯಮಿಸುತ್ತಾರೆ. ಆದರೆ ನೇಮಕದ ಮೊದಲು ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರದ ಅಂಗೀಕಾರಕ್ಕಾಗಿ ಕಳಿಸಲಾಗುವುದು. ಕೆಥೊಲಿಕ್ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಬರದ ಇನ್ನಾವುದೇ ಧರ್ಮದ ಧಾರ್ಮಿಕ ಕಾರ್ಯಗಳಿಗೆ ಇಲ್ಲಿ ಮಾನ್ಯತೆ ಇದೆ. ಮೊದಲು ದಕ್ಷಿಣದ ಕೆಲವೇ ನಗರಗಳಲ್ಲಿ ದಟ್ಟೈಸಿದ್ದ ಜನ ಈಗ ಉತ್ತರದ ಬಯಲುಗಳಲ್ಲಿ ಸ್ಥಾಪಿಸಲಾಗುತ್ತಿರುವ ಕೈಗಾರಿಕಾ ಕೇಂದ್ರಗಳಿಗೆ ಹೋಗುತ್ತಿದ್ದಾರೆ. ಉತ್ತರದ ಕೆಲವೇ ಕಡೆ ಹೆಚ್ಚಾಗಿದ್ದ ಜನಸಂಖ್ಯೆ ಈಗ ಎಲ್ಲ ಕಡೆಗೆ ಹರಡಿ ಒಂದು ರೀತಿಯ ಸಮತೋಲ ಏರ್ಪಟ್ಟಿದೆ. ರೋಮ್, ಮಿಲಾನ್, ನೇಪಲ್ಸ್, ಟ್ಯೂರಿನ್, ಜಿನೋವ, ಫ್ಯಾರೆನ್ಸ್, ವೆನಿಸ್ ಮುಂತಾದವು ಹೆಚ್ಚು ಜನಸಂಖ್ಯೆ ಇರುವ ಮುಖ್ಯ ನಗರಗಳು. (ವಿವರಗಳಿಗೆ ಆಯಾ ನಗರಗಳನ್ನು ಕುರಿತ ಶೀರ್ಷಿಕೆಗಳನ್ನು ನೋಡಿ). ಆಡಳಿತ ವ್ಯವಸ್ಥೆ ೧೯೪೬ರ ಜೂನ್ ೧೦ರಿಂದ ಇಟಲಿ ಗಣರಾಜ್ಯವಾಗಿದೆ. ದ್ವಿತೀಯ ಮಹಾ ಯುದ್ಧದಲ್ಲಿ ಪರಾಜಯಗೊಂಡ ಮೇಲೆ ೧೯೪೬ರ ಜೂನ್ ೨ರಂದು ಇಟಲಿಯಲ್ಲಿ ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ೫೪.೩% ಜನ ಗಣರಾಜ್ಯದ ಪರವಾಗಿಯೂ ೪೫.೭% ಜನ ಅರಸೊತ್ತಿಗೆ ಉಳಿಸಿಕೊಳ್ಳಬೇಕೆಂದೂ ಅಭಿಪ್ರಾಯಪಟ್ಟರು. ಸಂವಿಧಾನ ಸಭೆಗೆ ಪ್ರಥಮ ಬಾರಿಗೆ ಚುನಾವಣೆ ನಡೆಯಿತು (೧೯೪೬). ೫೫೬ ಸದಸ್ಯರುಳ್ಳ ಸಭೆ ಸಿನಾಲರ ಎನ್ರಿಕೋ ಡಿ. ನೀಕೋಲಾನನ್ನು ಅಧ್ಯಕ್ಷನನ್ನಾಗಿ ಆರಿಸಿತು. ಹೊಸ ಸಂವಿಧಾನ ರೂಪಿಸಿ ಶಾಂತಿ ಒಡಂಬಡಿಕೆಯನ್ನು ಕ್ರಮಬದ್ದಗೊಳಿಸಿದ್ದು ಇದರ ಮುಖ್ಯ ಕೆಲಸ. ೧೯೪೭ರ ಡಿಸೆಂಬರ್ ೨೭ರಂದು ನೂತನ ಸಂವಿಧಾನ ಅಂಗೀಕೃತವಾಯಿತು. ೧೯೪೮ರ ಜನವರಿ ೧ರಿಂದ ಅದು ಜಾರಿಗೆ ಬಂತು. ಗ್ರೇಟ್ ಬ್ರಿಟನ್, ಫ್ರಾನ್ಸ್, ಅಮೆರಿಕ ಸಂಯುಕ್ತ ಸಂಸ್ಥಾನಗಳ ಅನುಭವವನ್ನೂ ಉದಾಹರಣೆಗಳನ್ನೂ ಇಟಲಿಯ ಸಂವಿಧಾನ ಪ್ರತಿಬಿಂಬಿಸುತ್ತದೆ. ಇಟಲಿ ಈ ಸಂವಿಧಾನಕ್ಕನುಗುಣವಾಗಿ ರೂಪಿತವಾದ ಪ್ರಜಾಸತ್ತಾತ್ಮಕ ಗಣರಾಜ್ಯ. ಪರಮಾಧಿಕಾರ ಜನತೆಗೆ ಸೇರಿದ್ದಾದರೂ ಅವರು ಸಂವಿಧಾನಕ್ಕೆ ಬದ್ಧರಾಗಿ ತಮ್ಮ ಹಕ್ಕು ಚಲಾಯಿಸುತ್ತಾರೆ. ಇಟಲಿಯಲ್ಲಿ ದ್ವಿಸದನ ಪದ್ಧತಿಯ ರಾಷ್ಟ್ರೀಯ ಪಾರ್ಲಿಮೆಂಟ್ ಇದೆ. ಮೊದಲನೆಯದು ಚೇಂಬರ್ ಆಪ್ ಡೆಪ್ಯುಟೀಸ್, ಎರಡನೆಯದು ಸೆನೆಟ್. ಚೇಂಬರಿಗೆ ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ೨೧ ವರ್ಷಕ್ಕೆ ಕಡಿಮೆಯಿಲ್ಲದ ಸ್ತ್ರೀ-ಪುರುಷರೆಲ್ಲ ಮತದಾನಕ್ಕೆ ಅರ್ಹರು. ಚೇಂಬರ್ ಆಫ್ ಡೆಪ್ಯುಟೀಸ್‍ಗೆ ಸದಸ್ಯರಾಗುವವರ ಕನಿಷ್ಠ ವಯೋಮಿತಿ ೨೫ ವರ್ಷ. ೮೦೦೦೦೦ ಜನರಿಗೆ ಒಬ್ಬ ಪ್ರತಿನಿಧಿಯಿದ್ದಾನೆ (ಡೆಪ್ಯುಟಿ). ಸೆನೆಟ್ಟಿಗೆ ಆರು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ೨೦೦೦೦೦ ಜನರಿಗೆ ಒಬ್ಬ ಪ್ರತಿನಿಧಿಯಿರುತ್ತಾನೆ. ಅಧ್ಯಕ್ಷನ ಕನಿಷ್ಠ ವಯೋಮಿತಿ ೫೫ ವರ್ಷ, ಎರಡು ಸದನಗಳ ಸದಸ್ಯರೂ ಪ್ರಾದೇಶಿಕ ಕೌನ್ಸಿಲ್‍ನ ಸದಸ್ಯರೂ ಸೇರಿ ಸಂಯುಕ್ತಾದಿವೇಶನದಲ್ಲಿ ಗಣರಾಜ್ಯದ ಅಧ್ಯಕ್ಷನನ್ನು ಆರಿಸುತ್ತಾರೆ. ಈ ರೀತಿ ಆಯ್ಕೆಗೊಂಡ ಅಧ್ಯಕ್ಷನ ಅಧಿಕಾರಾವಧಿ ೭ ವರ್ಷ. ಆತನಿಗೆ ಪಾರ್ಲಿಮೆಂಟನ್ನು ವಿಸರ್ಜಿಸುವ ಅಧಿಕಾರವಿದೆ. ಆದರೆ ತನ್ನ ಅಧಿಕಾರಾವಧಿಯ ಕೊನೆಯ ಆರು ತಿಂಗಳಲ್ಲಿ ಆತ ಈ ಅಧಿಕಾರ ಚಲಾಯಿಸಲಾರ. ತನ್ನ ಅಧ್ಯಕ್ಷಾಧಿಕಾರದ ಕಾರಣದಿಂದ ಆತ ಸೆನೆಟ್ಟಿನ ಜೀವಾವಧಿ ಸದಸ್ಯ. ವಿಜ್ಞಾನ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಗಣ್ಯರಾದ ನಾಗರಿಕರನ್ನು ಆತ ಸೆನೆಟ್ಟಿನ ಅಜೀವ ಸದಸ್ಯರನ್ನಾಗಿ ನಾಮಕರಣ ಮಾಡಬಹುದು. ಇಟಲಿಯ ಅಧ್ಯಕ್ಷ ರಾಷ್ಟ್ರೈಕದ ಪ್ರತೀಕ. ಆತನೇ ರಾಷ್ಟ್ರಸೇನೆಗಳ ಮಹಾ ದಂಡನಾಯಕ. ಅಪರಾಧಿಗಳಿಗೆ ವಿಧಿಸಿದ ಶಿಕ್ಷೆಯನ್ನು ಕಡಿಮೆ ಮಾಡುವುದು, ಅವರಿಗೆ ಕ್ಷಮಾದಾನ ಮಾಡುವುದು ಮೊದಲಾದುವು ಆತನ ಅಧಿಕಾರವ್ಯಾಪ್ತಿಗೊಳಪಡುತ್ತವೆ. ಇಟಲಿಯ ಪ್ರಧಾನ ಮಂತ್ರಿಗೆ ಮಂತ್ರಿಮಂಡಲದ ಅಧ್ಯಕ್ಷನೆಂದು ಹೆಸರಿದೆ. ಆತನ ಸಲಹೆಯ ಮೇರೆಗೆ ಮಂತ್ರಿಮಂಡಲದ ಇತರ ಸದಸ್ಯರನ್ನು ನೇಮಿಸುವುದು ಅಧ್ಯಕ್ಷನ ಕರ್ತವ್ಯ. ಇಟಲಿಯ ಮಂಡಲ ಎರಡೂ ಶಾಸಕಾಂಗಗಳ ವಿಶ್ವಾಸ ಗಳಿಸಿರಬೇಕು. ಮಂತ್ರಿಮಂಡಲದ ಅಧ್ಯಕ್ಷ ಸಂವಿಧಾನಕ್ಕನುಗುಣವಾಗಿ ಸರ್ಕಾರದ ನೀತಿ ರೂಪಿಸುತ್ತಾನೆ. ಪ್ರತಿಯೊಬ್ಬ ಮಂತ್ರಿಗೂ ವೈಯಕ್ತಿಕ ಹೊಣೆಗಾರಿಕೆಯೊಂದಿಗೆ ಸಂಯುಕ್ತ ಹೊಣೆಗಾರಿಕೆಯೂ ಇರುತ್ತದೆ. ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಜನತೆಯ ಹೆಸರಿನಲ್ಲಿ ನ್ಯಾಯ ನೀಡಲಾಗುವುದು. ನ್ಯಾಯಾಧೀಶ ಕಾಯಿದೆಯ ಪರಿಮಿತಿಗೆ ಒಳಗಾಗಿರುತ್ತಾನೆ. ನ್ಯಾಯಾಲಯ ಕಾರ್ಯಾಂಗದಿಂದ ಸ್ವತಂತ್ರವಾಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಸಂವಿಧಾನ ಸಂಬಂಧವಾದ ಬಿಕ್ಕಟ್ಟು ಉಂಟಾದಾಗ, ಅದನ್ನು ೧೫ ಜನರ ಸಂವಿಧಾನ ನ್ಯಾಯಾಲಯ ಪರಿಹರಿಸುತ್ತದೆ. ಇದರಲ್ಲಿ ⅓ ಸದಸ್ಯರನ್ನು ಅಧ್ಯಕ್ಷ ನಾಮಕರಣ ಮಾಡಿರುತ್ತಾನೆ. ⅓ ಸದಸ್ಯರನ್ನು ಶಾಸಕಾಂಗದ ಎರಡು ಮನೆಗಳು ಆರಿಸುತ್ತವೆ. ಉಳಿದ ⅓ ಸದಸ್ಯರನ್ನು ಸರ್ವೋನ್ನತ ನ್ಯಾಯಾಂಗ ಸಮಿತಿ ಆರಿಸುತ್ತದೆ. ಈ ಸದಸ್ಯರ ಅಧಿಕಾರಾವಧಿ ೧೨ ವರ್ಷ. ಅಧಿಕಾರಾವಧಿ ಮುಗಿದ ತಕ್ಷಣವೇ ಅವರನ್ನು ಪುನರ್ ನೇಮಕ ಮಾಡಲಾಗುವುದಿಲ್ಲ. ಅಧಿಕಾರದ ವಿಕೇಂದ್ರೀಕರಣಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ತಮ್ಮ ಕಕ್ಷೆಯಲ್ಲಿ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಪ್ರಾದೇಶಿಕ ಸಮಿತಿಗಳಿಗೆ ಅವಕಾಶವಿದೆ. ಇಟಲಿಯನ್ನು ಐದು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಸಂವಿಧಾನದಲ್ಲಿ ೧೯ ವಿಭಾಗಗಳಿಗೆ ಅವಕಾಶವಿದ್ದರೂ ಮಹಾಯುದ್ಧದ ಅನಂತರ ಇದು ಪ್ರತ್ಯೇಕತೆಗೆ ಅವಕಾಶ ನೀಡಬಹುದೆಂದು ಈ ವಿಂಗಡಣೆಯನ್ನು ಸೀಮಿತಗೊಳಿಸಲಾಗಿದೆ. ಕ್ರಿಶ್ಚಿಯನ್ ಡೆಮೊಕ್ರಾಟಿಕ್ ಪಕ್ಷ ಮೊದಲು ಸ್ವತಂತ್ರ ರಾಜ್ಯ ರಚನೆಗೆ ಸಲಹೆ ನೀಡಿತ್ತು. ಅನಂತರ ಅದೇ ಪಕ್ಷ ಇದನ್ನು ವಿರೋಧಿಸಿತು. ರಾಜ್ಯಗಳ ಅಧಿಕಾರ ಕಕ್ಷೆಯಲ್ಲಿ ಸ್ಥಳೀಯ ಆಡಳಿತ, ಪೊಲೀಸ್, ಮಾರುಕಟ್ಟೆ, ಸಾರ್ವಜನಿಕ ಕಲ್ಯಾಣ, ನಗರ, ಶಿಕ್ಷಣ, ಸಾರಿಗೆಸಂಪರ್ಕ, ವ್ಯವಸಾಯ, ಅರಣ್ಯ-ಇವು ಬರುತ್ತವೆ. ಆಡಳಿತದ ಕಾರ್ಯನಿರ್ವಹಣೆಗೆ ಕೆಲವೊಂದು ತೆರಿಗೆಯನ್ನು ವಿಧಿಸಬಹುದು. ಕೇಂದ್ರಕ್ಕೆ ಬರುವ ಕಂದಾಯದಲ್ಲಿ ಕೆಲವೊಂದು ಭಾಗಗಳನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಪ್ರತಿಯೊಂದು ಪ್ರದೇಶಕ್ಕೂ ಒಂದು ಪ್ರಾದೇಶಿಕ ಕೌನ್ಸಿಲ್ ಇದೆ. ಅದಕ್ಕೊಂದು ಕಾರ್ಯನಿರ್ವಾಹಕ ಸಮಿತಿ ಮತ್ತು ಅಧ್ಯಕ್ಷ ಇರುತ್ತಾನೆ. ಪ್ರಾದೇಶಿಕ ಕೌನ್ಸಿಲ್ ಚೇಂಬರಿಗೆ ಮಸೂದೆಗಳನ್ನು ಕಳಿಸಬಹುದು. ಕೇಂದ್ರದ ಅಧ್ಯಕ್ಷ ಪ್ರಾದೇಶಿಕ ಮಂಡಲಿಯನ್ನು ಯಾವಾಗ ಬೇಕಾದರೂ ವಿಸರ್ಜಿಸಬಹುದಾಗಿದೆ. ಪ್ರತಿಯೊಂದು ಪ್ರದೇಶಕ್ಕೂ ಒಬ್ಬ ಆಯುಕ್ತನನ್ನು (ಕಮೀಷನರ್) ನೇಮಿಸಿದೆ. ನ್ಯಾಯಾಂಗ, ಆಡಳಿತ ಮತ್ತು ಲೆಕ್ಕಪತ್ರ, ಮುಂಗಡಪತ್ರಗಳ ತಪಾಸಣೆ-ಇವಕ್ಕೆ ಒಂದೊಂದು ಸಮಿತಿಯಿದೆ. ಸುಗ್ರೀವಾಜ್ಞೆಗಳನ್ನು ಹೊರಡಿಸಿದಾಗ ತಕ್ಷಣ ಸಂಸತ್ತಿನ ಅನುಮತಿ ಪಡೆಯಬೇಕೆಂಬ ವಿಧಿಯಿದೆ. ಆಗ ಸಂಸತ್ತಿನ ಅಧಿವೇಶನ ನಡೆಯುತ್ತಿಲ್ಲವಾದರೆ ಅದು ಐದು ದಿನಗಳಲ್ಲಿ ಸೇರುವಂತೆ ಏರ್ಪಾಡಾಗಬೇಕು. ೬೦ ದಿನಗಳೊಳಗೆ ಸುಗ್ರೀವಾಜ್ಞೆ ಕಾಯಿದೆಯಾಗದಿದ್ದಲ್ಲಿ ಅದು ಜಾರಿಯಲ್ಲಿರುವುದಿಲ್ಲ. ಪ್ರಾಪ್ತವಯಸ್ಕರಿಗೆಲ್ಲ ಮತದಾನದ ಹಕ್ಕಿದೆ. ರಹಸ್ಯ ಮತದಾನ ಪದ್ಧತಿಯಿದೆ. ಮತ ಚಲಾಯಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೆಂದು ಪರಿಗಣಿಸಲಾಗಿದೆ. ಭಾಷೆ, ಧರ್ಮ, ರಾಜಕೀಯ, ಸಾಮಾಜಿಕ ಬೇಧಗಳಿಲ್ಲದೆ ಎಲ್ಲ ಪ್ರಜೆಗಳಿಗೂ ಸಮಾನ ಸಂಬಳ ನೀಡಬೇಕೆಂಬ ತತ್ತ್ವವೂ ಅಂಗೀಕೃತವಾಗಿದೆ. ಯಾರಿಗೂ ಶ್ರೀಮಂತಿಕೆಯ ಬಿರುದುಗಳನ್ನು ನೀಡಲಾಗುವುದಿಲ್ಲ. ಮಾನವನ ವ್ಯಕ್ತಿತ್ವದ ಬೆಳವಣಿಗೆಗೆ ಅಡ್ಡಿ ಆತಂಕಗಳನ್ನೊಡ್ಡುವ ಆರ್ಥಿಕ, ಸಾಮಾಜಿಕ ಅಸಮತೆಗಳನ್ನು ತೊಡೆದು ಹಾಕುವುದು ಕರ್ತವ್ಯವೆಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಜನತೆಗೆ ಉದ್ಯೋಗದ ಹಕ್ಕನ್ನು ಅಂಗೀಕರಿಸಲಾಗಿದೆ. ಸಮಾಜದ ನೈತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಲು ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆಯಾದರೂ ರೋಮನ್ ಕೆಥೊಲಿಕ್ ಪಂಥವನ್ನು ದೇಶದ ಅಧಿಕೃತ ಧರ್ಮವೆಂದು ಪರಿಗಣಿಸಲಾಗಿದೆ. ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಉಂಟು. ಗುಪ್ತ ಸಂಘಗಳನ್ನೂ ಸೈನ್ಯ ಮಾದರಿಯ ಕೂಟಗಳನ್ನೂ ನಿಷೇಧಿಸಲಾಗಿದೆ. ಫ್ಯಾಸಿಸ್ಟ್ ಪಕ್ಷವನ್ನು ಪುನಃ ಸಂಘಟಿಸಲು ಅವಕಾಶವಿಲ್ಲ. ರಾಜಮನೆತನದವರು ದೇಶ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಪ್ರಜೆಗಳು ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಲ್ಲ. ಪಾಲಕರು ತಮ್ಮ ಮಕ್ಕಳ ಪಾಲನೆ ಪೋಷಣೆ ಮಾಡುವುದರೊಂದಿಗೆ ಅವರಿಗೆ ಶಿಕ್ಷಣ ನೀಡಬೇಕು. ಕಾರ್ಮಿಕ ಸಂಘಟನೆ ಮತ್ತು ಮುಷ್ಕರದ ಹಕ್ಕು ಅಂಗೀಕೃತ. ವೈಯಕ್ತಿಕ ಆಸ್ತಿ ಹೊಂದಲು ಅಭ್ಯಂತರವಿಲ್ಲ. ವ್ಯಕ್ತಿಯ ಶಕ್ತಿಗೆ ಅನುಸಾರವಾಗಿ ತೆರಿಗೆ ವಿಧಿಸಲಾಗುತ್ತದೆ. ಸಂವಿಧಾನದ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಶಾಸಕಾಂಗದ ಎರಡು ಸಭೆಗಳೂ ಸಂಯುಕ್ತಾಧಿವೇಶನದಲ್ಲಿ ಸೇರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದು. ಎರಡನೆಯ ಬಾರಿ ಮತಕ್ಕೆ ಹಾಕಿದಾಗ ಎರಡೂ ಸಭೆಗಳು ಬಹುಮತದಿಂದ ಅದನ್ನು ಒಪ್ಪಬೇಕು. ಸಂವಿಧಾನ ನ್ಯಾಯಾಲಯವೊಂದರ ನಿರ್ಮಾಣಕ್ಕೂ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ. ಶಾಸನಗಳ ಕ್ರಮಬದ್ಧತೆಯನ್ನು ಆ ನ್ಯಾಯಾಲಯ ಪರಿಶೀಲಿಸುತ್ತದೆ. ಆಡಳಿತಾನುಕೂಲಕ್ಕಾಗಿ ಜಿಲ್ಲಾ ನ್ಯಾಯಾಲಯಗಳೂ ಇವೆ. ೧೯೪೭ರ ಸಂವಿಧಾನಕ್ಕನುಗುಣವಾಗಿ ಸೈನ್ಯದ ಗಾತ್ರವನ್ನು ಕಡಿಮೆ ಮಾಡಲಾಗಿದೆ. ಅಲ್ಲದೆ ಪರಮಾಣು ಅಸ್ತ್ರಗಳ ತಯಾರಿಕೆಯನ್ನು ಪ್ರತಿಬಂಧಿಸಲಾಗಿದೆ. ಮಧ್ಯಮ ಮತ್ತು ದೊಡ್ಡ ಪ್ರಮಾಣದ ಟ್ಯಾಂಕುಗಳ ಸಂಖ್ಯೆಯನ್ನು ಮಿತಿಗೊಳಿಸಿದ್ದು, ನೌಕೆಗಳ ಸಾಮಥ್ರ್ಯವನ್ನೂ ಮೊಟಕು ಮಾಡಲಾಗಿದೆ. ವಿಶ್ವಸಂಸ್ಥೆಯ ಪೂರ್ವಾನುಮತಿಯಿಲ್ಲದೆ ಈ ಸಂಖ್ಯೆಯನ್ನು ಏರಿಸಲಾಗದು. ೧೯೪೭ರಿಂದ ಇಚೆಗೆ ಇಲ್ಲಿಯ ಸರ್ಕಾರ ಪ್ರಬಲವಾಗಿದೆ. ಎರಡು ಮಹಾಯುದ್ಧಗಳ ಅನಂತರ ಇಟಲಿ ಇದೀಗ ಆರ್ಥಿಕರಂಗದಲ್ಲಿ ಚೇತರಿಸಿಕೊಳ್ಳುತ್ತಿದೆ. ಈಗ ಇದು ಉತ್ತರ ಅಟ್ಲಾಂಟಿಕ್ ಕೌಲು ವ್ಯವಸ್ಥೆ (ನ್ಯಾಟೋ) ಮತ್ತು ಐರೋಪ್ಯ ಆರ್ಥಿಕ ಸಹಕಾರ ಸಂಘಗಳ (ಇ.ಇ.ಸಿ) ಸದಸ್ಯ ರಾಷ್ಟ್ರ. ಉಲ್ಲೇಖಗಳು ಯುರೋಪಿಯನ್ ಇತಿಹಾಸ - ಬಿ.ಎಸ್.ಉಮಾಮಹೇಶ್ವರ ಯುರೋಪ್ ಖಂಡದ ದೇಶಗಳು ವಿಕಿ ಇ-ಲರ್ನಿಂಗ್‍ನಲ್ಲಿ ವಿಸ್ತರಿಸಿದ ಲೇಖನ
2177
https://kn.wikipedia.org/wiki/%E0%B2%B2%E0%B3%80%E0%B2%9A%E0%B3%8D%E0%B2%9F%E0%B3%86%E0%B2%A8%E0%B3%8D%E0%B2%B8%E0%B3%8D%E0%B2%9F%E0%B3%80%E0%B2%A8%E0%B3%8D
ಲೀಚ್ಟೆನ್ಸ್ಟೀನ್
ಲೀಚ್ಟೆನ್ಸ್ಟೀನ್ ಪಶ್ಚಿಮ ಯುರೋಪ್ನಲ್ಲಿರುವ ಪುಟ್ಟ ರಾಷ್ಟ್ರ. ಅದರ ವಿಸ್ತೀರ್ಣ ಕೇವಲ ಸುಮಾರು ೧೬೦ ಚದರ ಕಿ.ಮಿ., ಮತ್ತು ಅದರ ಅಂದಾಜು ಜನಸಂಖ್ಯೆ ೩೫,೦೦೦ ದಷ್ಟು. ಫ಼ಾಡೂಟ್ಸ್ ಅದರ ರಾಜಧಾನಿಯಾಗಿದೆ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು Official Portal of the Principality of Liechtenstein The Princely House of Liechtenstein Website of the Parliament of Liechtenstein Website of the Government of Liechtenstein Official tourism website of Liechtenstein Statistics Liechtenstein Liechtenstein from UCB Libraries GovPubs Liechtenstein profile from the BBC News ಯುರೋಪ್ ಖಂಡದ ದೇಶಗಳು
2178
https://kn.wikipedia.org/wiki/%E0%B2%96%E0%B2%82%E0%B2%A1
ಖಂಡ
ಖಂಡಗಳು - ವಿಶ್ವದಲ್ಲಿನ ಎಲ್ಲಾ ದೇಶಗಳನ್ನು ಪ್ರಾಂತೀಯವಾಗಿ ವಿಂಗಡಿಸಿರುವ ಭಾಗಗಳು. ಲ್ಯಾಟಿನ್ ಭಾಷೆಯ 'ಕಾಂಟಿನಿಯರ್'(ಎಲ್ಲವನ್ನು ಒಟ್ಟಿಗೆ ಹಿಡಿದಿಡು) (continere) ಪದದಿಂದ ಆಂಗ್ಲದ 'ಕಾಂಟಿನೆಂಟ್'(continent) ಪದವು ರೂಪಗೊಂಡಿದ್ದು ಒಂದು ವಿಶಾಲ ಭೂಮಿ ಪ್ರದೇಶದ ಅರ್ಥ ಕೊಡುತ್ತದೆ. ಕನ್ನಡದಲ್ಲಿ ಖಂಡ ಎನ್ನುವ ಪದ ಬಳಕೆಯಲ್ಲಿದೆ. ವಿವಿಧ ಖಂಡ ವ್ಯವಸ್ಥೆಗಳು ೭ ಖಂಡಗಳು ಏಷ್ಯಾ - ಆಫ್ರಿಕ - ಆಸ್ಟ್ರೇಲಿಯಾ - ಅಂಟಾರ್ಟಿಕಾ - ಯುರೋಪ್ - ಉತ್ತರ ಅಮೆರಿಕ - ದಕ್ಷಿಣ ಅಮೆರಿಕ ಏಷ್ಯಾ - ಆಫ್ರಿಕ - ಓಶನಿಯಾ - ಅಂಟಾರ್ಟಿಕಾ - ಯುರೋಪ್ - ಉತ್ತರ ಅಮೆರಿಕ - ದಕ್ಷಿಣ ಅಮೆರಿಕ ೬ ಖಂಡಗಳು ಆಫ್ರಿಕ - ಅಂಟಾರ್ಟಿಕಾ - ಓಶನಿಯಾ - ಯುರೇಶಿಯಾ - ಉತ್ತರ ಅಮೆರಿಕ - ದಕ್ಷಿಣ ಅಮೆರಿಕ ಆಫ್ರಿಕ - ಅಮೆರಿಕ - ಅಂಟಾರ್ಟಿಕಾ - ಏಷ್ಯಾ - ಓಶನಿಯಾ - ಯುರೋಪ್ ೫ ಖಂಡಗಳು ಆಫ್ರಿಕ - ಅಮೆರಿಕ - ಓಶನಿಯಾ - ಅಂಟಾರ್ಟಿಕಾ - ಯುರೇಶಿಯಾ ಆಫ್ರಿಕ - ಅಮೆರಿಕ - ಓಶನಿಯಾ - ಯುರೋಪ್ - ಏಷ್ಯಾ ೪ ಖಂಡಗಳು ಅಮೆರಿಕ - ಓಶನಿಯಾ - ಅಂಟಾರ್ಟಿಕಾ - ಯುರಾಫ್ರಿಶಿಯಾ ಇವುಗಳನ್ನೂ ನೋಡಿ ಗ್ರೀನ್‌ಲ್ಯಾಂಡ್ ಪ್ಯಾಂಜಿಆ ಗೋಂಡ್ವಾನ ಖಂಡ ಟೇಥಿಸ ಭಾರತೀಯ ಉಪಖಂಡ ಬಾಹ್ಯ ಸಂಪರ್ಕ ಲಿವಿಯೋ ಕ್ಯಟುಲ್ಲೋ ಸ್ಟೆಕ್ಕೋನಿಯವರ "ಭೂಮಿಯ ನಕ್ಷೆ" (Internet Archive) ಭೂಗೋಳ
2179
https://kn.wikipedia.org/wiki/%E0%B2%86%E0%B2%B8%E0%B3%8D%E0%B2%9F%E0%B3%8D%E0%B2%B0%E0%B2%BF%E0%B2%AF
ಆಸ್ಟ್ರಿಯ
ಆಸ್ಟ್ರಿಯ (ಜರ್ಮನ್:Österreich) ಅಧಿಕೃತವಾಗಿ ಆಸ್ಟ್ರಿಯ ಗಣರಾಜ್ಯ (ಜರ್ಮನ್:Republik Österreich) ಮಧ್ಯ ಯುರೋಪ್‍ನಲ್ಲಿರುವ ಒಂದು ನೆಲಾವೃತ ದೇಶ. ಇದರ ಉತ್ತರದಲ್ಲಿ ಜರ್ಮನಿ ಮತ್ತು ಚೆಕ್ ಗಣರಾಜ್ಯ; ಪೂರ್ವದಲ್ಲಿ ಸ್ಲೊವಾಕಿಯ ಮತ್ತು ಹಂಗರಿ; ದಕ್ಷಿಣದಲ್ಲಿ ಸ್ಲೊವೇನಿಯ ಮತ್ತು ಇಟಲಿ ಹಾಗು ಪಶ್ಚಿಮದಲ್ಲಿ ಸ್ವಿಟ್ಜರ್‍ಲ್ಯಾಂಡ್ ಮತ್ತು ಲೈಕ್ಟೆನ್‍ಸ್ಟೈನ್ ದೇಶಗಳಿವೆ. ಇದರ ರಾಜಧಾನಿ ದನುಬೆ ನದಿಯ ತೀರದಲ್ಲಿರುವ ವಿಯೆನ್ನ ನಗರ. ಇತಿಹಾಸ ಈಗ ಇದು ಮಧ್ಯ ಯುರೋಪಿನ ಒಂದು ಸಣ್ಣ ರಾಜ್ಯವಾದರೂ ಹಿಂದೆ ಕೆಲಕಾಲ ದೊಡ್ಡ ಸಾಮ್ರಾಜ್ಯದ ಕೇಂದ್ರವಾಗಿತ್ತು. ಇದರ ಆಗುಹೋಗುಗಳು ಮಧ್ಯಯುರೋಪಿನ ಇತರ ರಾಜ್ಯಗಳ ಇತಿಹಾಸದೊಂದಿಗೆ ಹೆಣೆದುಕೊಂಡಿವೆ. ಪುರಾತನ ಶಿಲಾಯುಗದಿಂದಲೂ ಇಲ್ಲಿ ಜನರು ವಾಸಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಪ್ರ.ಶ.ಪು.14ರಲ್ಲಿ ರೋಮನ್ನರು ಡ್ಯಾನ್ಯೂಬ್ ನದಿಗೆ ದಕ್ಷಿಣಕ್ಕಿರುವ ಭಾಗವನ್ನೆಲ್ಲ ಸ್ವಾಧೀನಪಡಿಸಿಕೊಂಡು ನಾರಿಕಂ ಮತ್ತು ಪೆನೋನಿಯ ಎಂಬ ಎರಡು ಪ್ರಾಂತ್ಯಗಳನ್ನು ನಿರ್ಮಿಸಿದರು. ಪೆನೋನಿಯದಲ್ಲಿದ್ದ ವಿಂಡೊಬೋನ ಎಂಬ ನಗರವೇ ಇಂದಿನ ವಿಯನ್ನ. ಡ್ಯಾನ್ಯೂಬ್ ನದಿಗೆ ಉತ್ತರದಲ್ಲಿರುವ ಪ್ರಾಂತ್ಯವನ್ನು ಮಾರ್ಕೊಮ್ಯಾನಿ ಎಂಬ ಜನರು ಆಕ್ರಮಿಸಿದರು. ಮುಂದೆ ಐದಾರು ಶತಮಾನಗಳ ಅವಧಿಯಲ್ಲಿ ವ್ಯಾಂಡರು, ಗಾಥರು, ಹೂಣರು, ಲಂಬಾರ್ಡರು, ಆವಾರರು ಈ ದೇಶಕ್ಕೆ ನುಗ್ಗಿ ಬಂದು ಕೆಲಕಾಲ ಆಕ್ರಮಿಸಿ ನಿಂತರು. 8ನೆಯ ಶತಮಾನದ ಅಂತ್ಯಭಾಗದಲ್ಲಿ ಸಾಮ್ರಾಟ ಚಾರ್ಲ್ಸ್ ಮಹಾಶಯ ಆವಾರರನ್ನು ಸೋಲಿಸಿ ಈಸ್ಟ್ ಮಾರ್ಕ್ ಎಂಬ ಪ್ರಾಂತ್ಯವನ್ನು ನಿರ್ಮಿಸಿದ. ಆಸ್ಟ್ರಿಯ ಸಾಮ್ರಾಜ್ಯದ ಇತಿಹಾಸ ಇಲ್ಲಿಂದ ಪ್ರಾರಂಭವಾಗುತ್ತದೆಂದು ಅನೇಕರ ಅಭಿಪ್ರಾಯ. ಮುಂದೆ ಹಂಗರಿಯವರು ಇಲ್ಲಿಗೆ ನುಗ್ಗಿ ಭೀಕರ ಹಾವಳಿ ನಡೆಸಿದರು; ಆಸ್ಟ್ರಿಯ ಹೇಳ ಹೆಸರಿಲ್ಲದಾಗುತ್ತದೆಂಬ ಭಯ ತಲೆದೋರಿತು. ಆದರೆ 955ರಲ್ಲಿ ಆಟೊ ಮಹಾಶಯ ಅವರನ್ನು ಆಗ್ಸ್ ಬರ್ಗ್ ಕದನದಲ್ಲಿ ಸೋಲಿಸಿ ಈಸ್ಟ್ ಮಾರ್ಕ್ ಪ್ರಾಂತ್ಯವನ್ನು ಪುನರುಜ್ಜೀವನಗೊಳಿಸಿದ. 973ರಲ್ಲಿ, ಬೇಬನ್ಬರ್ಗ್ ವಂಶದ ಲಿಯೋಪಾಲ್ಡ್ ಎಂಬುವನಿಗೆ ಮಾರ್ಗ್ರೇವ್ ಅಥವಾ ಗಡಿನಾಡಿನ ಸೈನಿಕ ಮಂಡಲಾಧಿಪತಿ ಎಂಬ ಹೆಚ್ಚಿನ ಬಿರುದನ್ನು ಕೊಟ್ಟ. ಈ ಪ್ರಾಂತಾಧಿಪತಿಗಳ ಆಳ್ವಿಕೆಯಲ್ಲಿ ಈಸ್ಟ್ ಮಾರ್ಕ್ ವಿಸ್ತರಿಸಲ್ಪಟ್ಟಿತಲ್ಲದೆ ಆಂತರಿಕ ಭದ್ರತೆಯನ್ನೂ ಪಡೆಯಿತು. 12ನೆಯ ಶತಮಾನದಲ್ಲಿ ದಕ್ಷಿಣದ ಕೆಲವು ಪ್ರದೇಶಗಳನ್ನೂ ಸೇರಿಸಿ ಅದನ್ನು ಡ್ಯೂಕ್ಡಂ ಅಥವಾ ವಂಶಾನುಗತ ಶ್ರೀಮಂತಪದವಿ ಹೊಂದಿರುವವರ ರಾಜ್ಯವನ್ನಾಗಿ ಪರಿವರ್ತಿಸಲಾಯಿತು. ಹೆನ್ರಿ ಜ್ಯಾಸೊಮಿರ್ಗಾಟ್ ಎಂಬಾತ ಸಾಮಂತನಾದ. ಈ ಮನೆತನದ ಅಧಿಪತಿಗಳು ಸಮರ್ಥರಾಗಿದ್ದು, ರಾಜ್ಯವನ್ನು ವಿಸ್ತರಿಸಿದರು. ಇವರಲ್ಲಿ 6ನೆಯ ಲಿಯೊಪಾಲ್ಡ್ ಎಂಬುವನು ಮಾಗ್ಯಾರರ ಮತ್ತು ಮುಸ್ಲಿಮರ ಹಾವಳಿಯನ್ನು ತಡೆಗಟ್ಟಿದ. ಅವನ ತರುವಾಯ ಬಂದ ಫ್ರೆಡರಿಕ್ ಮಾಗ್ಯಾರರ ವಿರುದ್ಧ ನಡೆದ ಕದನದಲ್ಲಿ (1246) ಮಡಿದ. ಇಲ್ಲಿಗೆ ಬೇಬನ್ಬರ್ಗ್ ವಂಶದವರ ಆಳ್ವಿಕೆ ಕೊನೆಗಂಡಿತು. ಕೊಂಚಕಾಲ ಆಸ್ಟ್ರಿಯದಲ್ಲಿ ಪ್ರಭುಗಳೇ ಇರಲಿಲ್ಲ. ಈ ಗೊಂದಲದಲ್ಲಿ, ಬೊಹಿಮಿಯದ ದೊರೆ ಒಟೇಕರ್ ರಾಜ್ಯವನ್ನು ಸ್ವಾಧೀನಪಡಿಸಿಕೊಂಡ. ಹ್ಯಾಬ್್ಸಬರ್ಗ್ ಚಕ್ರವರ್ತಿ 1ನೆಯ ರಡೋಲ್ಫನ ಸಾರ್ವಭೌಮತ್ವವನ್ನು ಆತ ಒಪ್ಪಲಿಲ್ಲವಾದ್ದರಿಂದ ಯುದ್ಧ ಪ್ರಾರಂಭವಾಯಿತು. ಮಾರ್ಚ್ಫೀಲ್್ಡ ಕದನದಲ್ಲಿ ಒಟೇಕರ್ ಮಡಿದ. ಆಸ್ಟ್ರಿಯ ಹ್ಯಾಬ್್ಸಬರ್ಗ್ ರಾಜಮನೆತನದ ಆಳ್ವಿಕೆಗೆ ಬಂತು. ರಡೋಲ್ಫನ ಮಗ ಆಲ್ಬರ್ಟ್ ಆಸ್ಟ್ರಿಯದ ಡ್ಯೂಕನಾದ. ಈ ಮನೆತನದವರ ಆಳ್ವಿಕೆಯಲ್ಲಿ ಆಸ್ಟ್ರಿಯದ ಇತಿಹಾಸ ಭವ್ಯವಾಗಿ 1282-1318ರವರೆಗೂ ಅವಿಚ್ಛಿನ್ನವಾಗಿ ಸಾಗಿತು. 1330ರಲ್ಲಿ ದೊರೆಯಾದ 2ನೆಯ ಆಲ್ಬರ್ಟನ ಕಾಲದಲ್ಲೇ ರಾಜ್ಯ ವಿಸ್ತರಣೆ ಪ್ರಾರಂಭವಾಯಿತು. ಕಾರಿಂಥಿಯ, ಟೈರಾಲ್ ಮುಂತಾದ ನೆರೆಯ ರಾಜ್ಯಗಳು ಆಸ್ಟ್ರಿಯಕ್ಕೆ ಸೇರಿದುವು. ಐದನೆಯ ಆಲ್ಬರ್ಟ್ ಸಿಜಸ್ಮಂಡ್ ಚಕ್ರವರ್ತಿಯ ಮಗಳನ್ನು ಮದುವೆಯಾಗಿ ಹಂಗರಿ ಬೊಹಿಮಿಯ ರಾಜ್ಯಗಳಿಗೂ ದೊರೆಯಾದ; ಎರಡನೆಯ ಆಲ್ಬರ್ಟ್ ಎಂಬ ಹೆಸರಿನಿಂದ ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯೂ ಆದ. ಮುಂದೆ, ಆಸ್ಟ್ರಿಯದ ಹ್ಯಾಬ್್ಸಬರ್ಗ್ ರಾಜರು (1740-45ರ ಅವಧಿಯಲ್ಲಿ ಹೊರತು) 1806ರವರೆಗೂ ಪವಿತ್ರ ರೋಮನ್ ಸಾಮ್ರಾಟರೂ ಆಗಿದ್ದರು. ಹೀಗೆ ಆಸ್ಟ್ರಿಯದ ಚರಿತ್ರೆ ಆ ಸಾಮ್ರಾಜ್ಯದ ಇತಿಹಾಸದೊಂದಿಗೆ ಹೆಣೆದುಕೊಂಡಿದೆ (ಪವಿತ್ರ-ರೋಮನ್-ಸಾಮ್ರಾಜ್ಯ). ಈ ಕಾಲದಲ್ಲಿ ಆಸ್ಟ್ರಿಯದ ಐತಿಹಾಸಿಕ ಪ್ರಾಮುಖ್ಯ ಕಂಡುಬರುವುದು ಒಂದೇ ಸಮನಾಗಿ ನಡೆಯುತ್ತಿದ್ದ ಮುಸ್ಲಿಮರ ದಾಳಿಯನ್ನು ತಡೆಗಟ್ಟಿದ್ದರಲ್ಲಿ. ಇಡೀ ಯುರೋಪನ್ನೇ ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಮುಸ್ಲಿಮರು ಮೇಲಿಂದ ಮೇಲೆ ಆಸ್ಟ್ರಿಯದ ಮೇಲೆ ನುಗ್ಗುತ್ತಿದ್ದರು. ಅವರ ಹಾವಳಿ ನಿಂತಿದ್ದು 1689ರಲ್ಲಿ, ಅವರು ವಿಯನ್ನ ನಗರಕ್ಕೆ ಮುತ್ತಿಗೆ ಹಾಕಿ ಪರಾಭವ ಹೊಂದಿದಮೇಲೆ. ಹೀಗೆ ಆಸ್ಟ್ರಿಯ ಆ ದಾಳಿಗೆ ತಡೆರಾಜ್ಯವಾಗಿ ನಿಂತಿದ್ದರಿಂದ ಮಧ್ಯ ಮತ್ತು ಪಶ್ಚಿಮ ಯುರೋಪಿನ ರಾಜ್ಯಗಳು ನಿರುಪಾಧಿಕವಾಗಿ ಬೆಳೆಯಲನುಕೂಲವಾಯಿತು. ಆದರೆ 17ನೆಯ ಶತಮಾನದಲ್ಲಿ ಆಸ್ಟ್ರಿಯ ಮತೀಯ ಮತ್ತು ರಾಜಕೀಯ ಗೊಂದಲಕ್ಕೆ ಸಿಕ್ಕಿ ತನ್ನ ಪ್ರಾಮುಖ್ಯ ಕಳೆದುಕೊಳ್ಳುತ್ತ ಬಂತು. 1618-48ರ ವರೆಗೆ ನಡೆದ 30 ವರ್ಷಗಳ ಯುದ್ಧದಲ್ಲಿ ಯುರೋಪಿನ ಪ್ರಮುಖ ರಾಷ್ಟ್ರಗಳೆಲ್ಲ ಭಾಗವಹಿಸಿದುವು. ಜರ್ಮನಿ ಜನಶೂನ್ಯವಾಗಿ ದಟ್ಟದಾರಿದ್ರ್ಯದ ದೇಶವಾಯಿತು; ಪವಿತ್ರ ರೋಮನ್ ಸಾಮ್ರಾಜ್ಯ ಹೆಸರಿಗೆ ಮಾತ್ರ ಸಾಮ್ರಾಜ್ಯವಾಗುಳಿಯಿತು; ಆಸ್ಟ್ರಿಯದ ಪ್ರಾಮುಖ್ಯ ಕುಂದತೊಡಗಿತು. ಈ ವಿಪ್ಲವದ ಲಾಭ ಪಡೆದು ಪ್ರಗತಿ ಹೊಂದಿದ ರಾಷ್ಟ್ರ ಫ್ರಾನ್ಸ್ ಒಂದೇ. ಇಂಗ್ಲೆಂಡ್, ಫ್ರಾನ್ಸ್ ಮುಂತಾದ ರಾಷ್ಟ್ರಗಳು ಬಲಗೊಂಡದ್ದರಿಂದ ಕಾಲಧರ್ಮಕ್ಕೆ ವಿರುದ್ಧವಾದ ಪವಿತ್ರ ರೋಮನ್ ಸಾಮ್ರಾಜ್ಯ ಉಳಿಯುವುದು ಸಾಧ್ಯವೇ ಇರಲಿಲ್ಲ. ಆದರೂ 1701-14 ರವರೆಗೆ ಸ್ಪೇನ್ ವಾರಸಯುದ್ಧದ ಪರಿಣಾಮವಾಗಿ ಆಸ್ಟ್ರಿಯ, ನೆದರ್ಲೆಂಡ್ಸ್, ಮಿಲಾನ್, ನೇಪಲ್ಸ್ , ಮಾಂಟುಅ ಮತ್ತು ಸಿಸಿಲಿಗಳನ್ನು ಪಡೆಯಿತು. ರಾಷ್ಟ್ರೀಯತಾಭಾವನೆ ಬೆಳೆಯುತ್ತಿದ್ದ ಆ ಕಾಲದಲ್ಲಿ ಇದು ಉಳಿಯುವುದೂ ಸಾಧ್ಯವಿರಲಿಲ್ಲ. 18ನೆಯ ಶತಮಾನದ ಪ್ರಥಮಾರ್ಧದಲ್ಲಿ, 30 ವರ್ಷದ ಯುದ್ಧದ ಪರಿಣಾಮವಾಗಿ ಕುಂದಿದ್ದ ಜರ್ಮನಿಯಲ್ಲಿ ಪ್ರಷ್ಯರಾಜ್ಯ ತಲೆಯೆತ್ತಿ ಬಹುಬೇಗ ಬೆಳೆಯಿತು. ಈ ಮಧ್ಯೆ ಆಸ್ಟ್ರಿಯದಲ್ಲಿ ಪುತ್ರಸಂತಾನವಿಲ್ಲದೆ ದೊರೆ ಆರನೆಯ ಚಾರ್ಲ್ಸ್ ಕಾಲವಾದ (1740). ಇದಕ್ಕೆ ಮುಂಚೆ ಆತ ರಾಜ್ಯದ ಮೂಲಾಧಾರ ಶಾಸನದಲ್ಲಿ (ಪ್ರ್ಯಾಗ್ಮಾಟಿಕ್ ಸ್ಯಾಂಕ್ಷನ್) ತನ್ನ ಮಗಳು ಮೇರಿಯ ಥೆರೀಸಾ ಮುಂದಿನ ರಾಣಿಯಾಗುವುದಕ್ಕೆ ಪ್ರಮುಖ ರಾಷ್ಟ್ರಗಳ ಒಪ್ಪಿಗೆ ಪಡೆದಿದ್ದ. ಆದರೆ 6ನೆಯ ಚಾರ್ಲ್ಸ್ ಕಾಲವಾದ ಕೂಡಲೇ ಆ ಮೂಲಾಧಾರ ಶಾಸನವನ್ನು ಕಡೆಗಣಿಸಿ ಪ್ರಷ್ಯದ ದೊರೆ ಫ್ರೆಡರಿಕ್ ಆಸ್ಟ್ರಿಯಕ್ಕೆ ಸೇರಿದ ಸೈಲೀಷಿಯವನ್ನು ಆಕ್ರಮಿಸಿದ. ಯುರೋಪಿನ ಕೆಲವು ರಾಷ್ಟ್ರಗಳು ಫ್ರೆಡರಿಕ್ನ ಕಡೆ ಸೇರಿದುವು. ಆದರೂ ಎದೆಗುಂದದೆ ಮೇರಿ ಶತ್ರುಗಳನ್ನೆದುರಿಸಿದಳು. 1748ರಲ್ಲಿ ಯುದ್ಧ ನಿಂತಿತು; ಏ-ಲಾ-ಷ್ಯಾಪೆಲ್ ಒಪ್ಪಂದದ ಪ್ರಕಾರ ಸೈಲೀಷಿಯವನ್ನು ಫ್ರೆಡರಿಕ್ಗೆ ಬಿಟ್ಟುಕೊಡಬೇಕಾದರೂ ಮಿಕ್ಕ ಪ್ರಾಂತ್ಯಗಳು ಆಸ್ಟ್ರಿಯಕ್ಕೇ ಉಳಿದುವು. 18ನೆಯ ಶತಮಾನದ ಉತ್ತರಾರ್ಧದಲ್ಲಿ ಯುರೋಪಿನಲ್ಲಿ ಕ್ರಾಂತಿಕಾರಕ ಘಟನೆಗಳು ಜರುಗಿದುವು. ಫ್ರೆಡರಿಕ್ ಮಹಾಶಯನ ಆಳ್ವಿಕೆಯಲ್ಲಿ ಪ್ರಷ್ಯ ಅಭಿವೃದ್ಧಿ ಹೊಂದಿ ಆಸ್ಟ್ರಿಯದ ಪ್ರಬಲ ಪ್ರತಿಸ್ಪರ್ಧಿಯಾಗಿ ನಿಂತಿತು. ರಾಷ್ಟೀಯತಾಭಾವನೆ ಎಲ್ಲ ದೇಶಗಳಿಗೂ ವ್ಯಾಪಿಸಿ ಸಾಮ್ರಾಜ್ಯ ಭಾವನೆ ಕ್ಷೀಣಿಸಿತು. ಫ್ರಾನ್ಸಿನ ಮಹಾಕ್ರಾಂತಿ ಉಗ್ರಸ್ವರೂಪ ತಾಳಿ, ಈ ಭಾವನೆಗೆ ಪುರಕವಾದ ಪೆಟ್ಟುಕೊಟ್ಟಿತು. ಕೊನೆಗೆ ನೆಪೋಲಿಯನ್ ಇಡೀ ಯುರೋಪನ್ನೇ ಗೆದ್ದು ರಾಜ್ಯಗಳನ್ನೆಲ್ಲ ಅಸ್ತವ್ಯಸ್ತಗೊಳಿಸಿ 1815ರಲ್ಲಿ ವಾಟರ್ ಲೂ ಕದನದಲ್ಲಿ ಪರಾಭವ ಹೊಂದಿದಾಗ ಸಾಮ್ರಾಜ್ಯತ್ವ ಅಳಿದು ರಾಷ್ಟ್ರೀಯತೆ ಸ್ಥಿರವಾಗಿ ನೆಲೆಸುವುದಕ್ಕೆ ಅನುಕೂಲವಾಯಿತು. 1806ರಲ್ಲೇ ಪವಿತ್ರ ರೋಮನ್ ಸಾಮ್ರಾಜ್ಯ ಕೊನೆಗೊಂಡಿತ್ತು. ಆಸ್ಟರ್ಲಿಟ್ಟ ಕದನದಲ್ಲಿ ನೆಪೋಲಿಯನ್ನನಿಂದ ಆಸ್ಟ್ರಿಯ ತೀವ್ರ ಸೋಲು ಅನುಭವಿಸಿತ್ತು. ನೆಪೋಲಿಯನ್ನನ ಒತ್ತಡದ ಮೇರೆಗೆ ಆಸ್ಟ್ರಿಯ ದೊರೆ 1ನೆಯ ಫ್ರಾನ್ಸಿಸ್ ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯ ಸ್ಥಾನವನ್ನು ತ್ಯಜಿಸಿದ್ದನು. 19ನೆಯ ಶತಮಾನದ ಮೊದಲ ದಶಕಗಳಲ್ಲಿ ಆಸ್ಟ್ರಿಯದ ಪ್ರಧಾನಿ ಮೆಟರ್ನಿಕ್ ತನ್ನ ದೇಶದ ಪ್ರಾಧಾನ್ಯವನ್ನು ಕಾಪಾಡಲು ಬಹುವಾಗಿ ಶ್ರಮಿಸಿದ. ಆದರೆ 1848ರಲ್ಲಿ ಯುರೋಪಿನಾದ್ಯಂತ ನಡೆದ ಕ್ರಾಂತಿಯ ಪರಿಣಾಮವಾಗಿ ಆಸ್ಟ್ರಿಯ ಕ್ಷೀಣಿಸಿತು. ಅದೇ ವರ್ಷ ಮೆಟರ್ನಿಕ್ ದೇಶಾಂತರ ಹೋಗಬೇಕಾಯಿತು. ಆದರೂ ದೊರೆ ಫ್ರಾನ್ಸಿಸ್ ಜೋಸೆಫ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ನಿರಂಕುಶಪ್ರಭುವಾಗಿ ಆಳಿದ. 1859ರಲ್ಲಿ ಇಟಲಿಯೊಂದಿಗೆ ನಡೆದ ಯುದ್ಧದಲ್ಲಿ ಆಸ್ಟ್ರಿಯ ಲಾಂಬಾರ್ಡಿಯನ್ನು ಕಳೆದುಕೊಂಡಿತು. 1866ರಲ್ಲಿ ಪ್ರಷ್ಯದೊಂದಿಗೆ ಸಪ್ತವಾರಗಳ ಯುದ್ಧವಾಗಿ ವೆನೀಷಿಯವನ್ನು ಕಳೆದುಕೊಳ್ಳಬೇಕಾಯಿತು. 1867ರಲ್ಲಿ ಆಸ್ಟ್ರಿಯಕ್ಕೆ ಸೇರಿದ ರಾಜ್ಯಗಳ ಪುನರ್ವ್ಯವಸ್ಥೆ ನಡೆದು ಆಸ್ಟ್ರಿಯ-ಹಂಗರಿ ರಾಜ್ಯ ಸ್ಥಾಪನೆಯಾಯಿತು. ಇದು ಒಂದನೆಯ ಮಹಾಯುದ್ಧ ಮುಗಿಯುವವರೆಗೂ ನಡೆದುಬಂದು ಹಂಗರಿ ಪತ್ಯೇಕವಾಯಿತು. 1918ರಲ್ಲಿ ಒಂದನೆಯ ಮಹಾಯುದ್ಧ ಮುಗಿದಮೇಲೆ ಮಾಡಿದ ರಾಜ್ಯವ್ಯವಸ್ಥೆಯಲ್ಲಿ ಆಸ್ಟ್ರಿಯ ಪ್ರಜಾರಾಜ್ಯವಾಗಿ ಪರಿವರ್ತನೆಗೊಂಡಿತು. 1920ರಲ್ಲಿ ಅದು ಸಂವಿಧಾನವನ್ನು ಅಳವಡಿಸಿಕೊಂಡಿತು. ಅದರ ಎಲ್ಲೆಗಳೂ ನಿಗದಿಮಾಡಲ್ಪಟ್ಟವು. 60 ಲಕ್ಷ ಜನಸಂಖ್ಯೆ ಹೊಂದಿದ (ಅದರ ಪೈಕಿ 20 ಲಕ್ಷ ಜನ ವಿಯನ್ನದಲ್ಲೇ ಇದ್ದರು) ಸಣ್ಣ ರಾಜ್ಯವಾಗುಳಿಯಿತು. ಆರ್ಥಿಕಾಭಿವೃದ್ಧಿಗೆ ಬೇಕಾದ ಸಂಪನ್ಮೂಲಗಳಿಲ್ಲ; ಆಹಾರ ಪದಾರ್ಥಗಳಿಗೆ ಕೊರತೆ, ವಾಣಿಜ್ಯ ಬೆಳೆಯಲು ಆವಶ್ಯಕವಾದ ಅನುಕೂಲತೆಗಳಿಲ್ಲ; ಹೀಗೆ ಈ ಹೊಸ ಆಸ್ಟ್ರಿಯದಲ್ಲಿ ರಾಜಕೀಯ ಕ್ಷೋಭೆ, ನಿರುದ್ಯೋಗ, ದಾರಿದ್ರ್ಯ, ದಿವಾಳಿತನ, ಹೆಚ್ಚಿದುವು. ಅಲ್ಲಿನ ರಾಜಕೀಯದಲ್ಲಿ ಮೂರು ಪರಸ್ಪರ ತೀರ ವಿರುದ್ಧ ಪಕ್ಷಗಳಾದುವು. ಈ ಪಕ್ಷಗಳು ಪ್ರತ್ಯೇಕ ಸೈನ್ಯಗಳನ್ನೂ ಹೊಂದಿದ್ದುವು. ಕೊನೆಗೆ ವಿಯನ್ನದಲ್ಲಿ 1927ರಲ್ಲಿ ದೊಂಬಿಗಳಾದುವು. 1934ರಲ್ಲಿ ಡಾಲ್ಫಸ್ ಎಂಬಾತ ಅಧಿಕಾರಯುಕ್ತ ಸರ್ಕಾರ ರಚಿಸಿದ. ಜರ್ಮನಿಯಲ್ಲಿ ಪ್ರಬಲನಾಗಿದ್ದ ಹಿಟ್ಲರ್ ಸ್ಥಳೀಯ ನಾಜಿಪಕ್ಷದ ಬೆಂಬಲದಿಂದ 1938ರಲ್ಲಿ ಆಸ್ಟ್ರಿಯವನ್ನಾಕ್ರಮಿಸಿದನು. 1940ರಲ್ಲಿ ಅದು ಜರ್ಮನಿಯಲ್ಲಿ ವಿಲೀನಗೊಂಡಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಆಸ್ಟ್ರಿಯ ಜರ್ಮನಿಯ ಒಂದು ಹೊರಪ್ರಾಂತ್ಯವಾಗುಳಿಯಿತು. 1945ರಲ್ಲಿ ಯುದ್ಧ ಮುಗಿದು ಮಿತ್ರರಾಷ್ಟ್ರಗಳು ಅದನ್ನು ಆಕ್ರಮಿಸಿಕೊಂಡಮೇಲೆ ಅಲ್ಲಿ ಒಂದು ಪ್ರಜಾಸರ್ಕಾರವನ್ನು ಸ್ಥಾಪಿಸಲಾಯಿತು. ಸಮರ್ಥನಾದ ಕಾರ್ಲ್ ರೆನ್ನರ್ ಪ್ರಧಾನಿಯಾದ. ಮೇ 1955ರಲ್ಲಿ ಸ್ವತಂತ್ರ ಪ್ರಜಾಸತ್ತಾತ್ಮಕ ಆಸ್ಟ್ರಿಯ ತಲೆ ಎತ್ತಿತು. ಅಕ್ಟೋಬರ್ 1955ರಲ್ಲಿ ಎಲ್ಲ ಮಿತ್ರರಾಷ್ಟ್ರಗಳೂ ಅಲ್ಲಿಂದ ಕಾಲ್ತೆಗೆದುವು. 1938ರಲ್ಲಿ ಕಳೆದುಕೊಂಡ ಸ್ವಾತಂತ್ರ್ಯವನ್ನು ಈಗ ಅದು ಪಡೆಯಿತು. ಒಪ್ಪಂದದ ಪ್ರಕಾರ ಕೊನೆಯವರೆಗೂ ಆಸ್ಟ್ರಿಯ ತಟಸ್ಥ ರಾಷ್ಟ್ರವಾಗಿ ಉಳಿಯಲು ಒಪ್ಪಿತು. 1955ರಲ್ಲಿಯೇ ವಿಶ್ವಸಂಸ್ಥೆಯನ್ನು ಸೇರಿತು. ಆಸ್ಟ್ರಿಯದ ತಟಸ್ಥ ನಿಲುವಿನ ಫಲವಾಗಿ 1972ರಲ್ಲಿ ಆಸ್ಟ್ರಿಯದ ಕುರ್ಟ್ವಾಲ್ಡ್ ಹೀಮ್ ವಿಶ್ವಸಂಸ್ಥೆಯ ಪ್ರಧಾನಕಾರ್ಯದರ್ಶಿಯಾಗಿ ಆಯ್ಕೆಯಾದನು. 1995ರಲ್ಲಿ ಆಸ್ಟ್ರಿಯ ಐರೋಪ್ಯ ಒಕ್ಕೂಟದ ಸದಸ್ಯದೇಶವಾಯಿತು. ಆದರೆ ಇದು ನ್ಯಾಟೊ ಸದಸ್ಯತ್ವ ಪಡೆದಿಲ್ಲ. ಮೇಲ್ಮೈ ಲಕ್ಷಣ ವಿಸ್ತೀರ್ಣ 83,872 ಚ.ಕಿಮೀ. ಜನಸಂಖ್ಯೆ 8,356,707 (2009). ಉತ್ತರಕ್ಕೆ 46º220-49º10 (293 ಕಿಮೀ) ಹಾಗೂ ಪೂರ್ವಕ್ಕೆ 9º220-17º 100 (576 ಕಿಮೀ.) ವಿಸ್ತಾರವಿದೆ. ದೇಶದ ಗಡಿ 2,635ಕಿಮೀ ಉದ್ದವಿದೆ. ಉತ್ತರಕ್ಕೆ ಜರ್ಮನಿ ಮತ್ತು ಜೆಕ್ ಗಣರಾಜ್ಯ, ವಾಯವ್ಯಕ್ಕೆ ಸ್ಲಾವೇಕಿಯ, ಆಗ್ನೇಯಕ್ಕೆ ಹಂಗರಿ, ದಕ್ಷಿಣಕ್ಕೆ ಇಟಲಿ ಹಾಗೂ ಸ್ಲೋವೇನಿಯ, ಪೂರ್ವ ಮತ್ತು ಪಶ್ಚಿಮಕ್ಕೆ ಸ್ವಿಟ್ಜರ್ಲೆಂಡ್‍ಗಳಿವೆ. ಪರ್ವತಮಯ ದೇಶ ಪೂರ್ವ ಆಲ್ಪ್ಸ್ ನ ಬಹು ಭಾಗ ಆಸ್ಟ್ರಿಯದಲ್ಲಿದೆ. 13º ಪೂರ್ವ ರೇಖಾಂಶದ ಪೂರ್ವಭಾಗದಲ್ಲಿ ಎತ್ತರ ಕಡಿಮೆಯಾಗುತ್ತ ಬಂದು ಡ್ಯಾನ್ಯೂಬ್ ಕಣಿವೆಯನ್ನು ಸೇರಿಕೊಳ್ಳುತ್ತದೆ. ಆಸ್ಟ್ರಿಯದ ಆಲ್ಪ್ಸ್ ಪರ್ವತಗಳನ್ನು ಉತ್ತರ ಆಲ್ಪ್ಸ್ ಮತ್ತು ಮಧ್ಯ ಆಲ್ಪ್ಸ್ ಎಂದು 3 ಭಾಗಗಳಾಗಿ ವಿಂಗಡಿಸಬಹುದು. ಆಲ್ಪ್ಸ್ ನಲ್ಲಿಯ ಗ್ರೊಸ್ಸಿಲಾಕ್ನರ ಶಿಖರ 3,797ಮೀ ಎತ್ತರವಿದೆ. ಮುಖ್ಯ ನದಿಯಾದ ಡ್ಯಾನ್ಯೂಬ್ನಲ್ಲಿ 350ಕಿಮೀ ಹಡಗಿನಲ್ಲಿ ಸಂಚರಿಸಬಹುದು. ಇನ್ನೆ, ಡ್ರಾವ ಮತ್ತು ಮೂರ್ ಇತರ ಮುಖ್ಯ ನದಿಗಳು. ಅಲ್ಲದೆ ಅನೇಕ ದೊಡ್ಡ ಸರೋವರಗಳೂ ಇವೆ. ಉತ್ತರ ಹಾಗೂ ಈಶಾನ್ಯದ ಕಡೆ ವಿಯನ್ನ ಮೈದಾನವನ್ನು ಸೇರುವುದು. ಪರ್ವತಗಳ ತಪ್ಪಲುಗಳು ಸಸ್ಯವರ್ಗದಿಂದ ಕೂಡಿವೆ. ಇವುಗಳಿಂದಾಗಿ ಪಶ್ಚಿಮ ಹಂಗರಿ ಭಾಗಗಳಲ್ಲಿ ಹಳ್ಳ ತಿಟ್ಟುಗಳು ವಿಪುಲ. ಅನೇಕ ಕಣಿವೆಗಳಿಂದ ಛಿದ್ರವಾಗಿರುವ ಎತ್ತರದ ಪ್ರದೇಶಗಳಲ್ಲಿ ಸುಣ್ಣಕಲ್ಲು ಹೇರಳವಾಗಿದೆ. ಹವಾಮಾನ ಮೇಲ್ಮೈಲಕ್ಷಣದ ವೈವಿಧ್ಯ, ಸನ್ನಿವೇಶ ಇವು ಆಸ್ಟ್ರಿಯದಲ್ಲಿ ವಿವಿಧ ರೀತಿಯ ವಾಯುಗುಣಕ್ಕೆ ಕಾರಣವಾಗಿವೆ. ದಕ್ಷಿಣ ಭಾಗದಲ್ಲಿ ಮೆಡಿಟರೇನಿಯನ್ ವಾಯುಗುಣ, ಪೂರ್ವ ಭಾಗದಲ್ಲಿ ಖಂಡಾಂತರ ವಾಯುಗುಣ ಇವೆ. ಸರಾಸರಿ ಉಷ್ಣತೆ ಅತಿ ಕಡಿಮೆಯೆಂದರೆ ಜನವರಿಯಲ್ಲಿ 9º ಫ್ಯಾ. ಮತ್ತು ಅತಿ ಹೆಚ್ಚೆಂದರೆ ಜುಲೈನಲ್ಲಿ 68º ಫ್ಯಾ. ಇರುತ್ತದೆ. ಮಳೆಯ ಪ್ರಮಾಣ 75-175 ಸೆಂಮೀ. ಪಶ್ಚಿಮ ಆಸ್ಟ್ರಿಯ ವಾಯುಗುಣ ಸೌಮ್ಯ ಮತ್ತು ಹಿತಕರ. ದಕ್ಷಿಣದಿಂದ ಬೀಸುವ ಸ್ಥಳೀಯ ಫೋಹ್ನಗಾಳಿಗಳು ಹಿಮಕರಗಿಸುತ್ತವೆ. ಸಸ್ಯ ಮತ್ತು ಪ್ರಾಣಿ ಸಂಪತ್ತು ಆಸ್ಟ್ರಿಯದ ಪುರ್ವದ ಇಳಿಜಾರುಗಳಲ್ಲಿ ಅಗಲವಾದ ಎಲೆಯುಳ್ಳ ಮರಗಳು ಅತಿ ಎತ್ತರಕ್ಕೆ ಬೆಳೆಯುತ್ತವೆ. ಎತ್ತರ ಪ್ರದೇಶಗಳಲ್ಲಿ ಮೊನಚಾದ ಹಾಗೂ ಆಲ್ಪೈನ್ ಹುಲ್ಲುಗಾವಲಿನ ಸಸ್ಯವರ್ಗವಿದೆ. ಬೀಚ್, ಬರ್ಚ್ ಮತ್ತು ಓಕ್ ಮುಂತಾದ ಎಲೆ ಉದುರುವ ಮರಗಳು ಮತ್ತು ಇತರೆ ಶಂಕು ಮರಗಳು ಬೆಳೆಯುತ್ತವೆ. ಅನೇಕ ಬಗೆಯ ವನ್ಯಮೃಗಗಳಿವೆ. ಕಾಡುಜಿಂಕೆಗಳು ವಿರಳ. ಚಿಗರಿ, ಮೊಲ, ಗ್ರೌಸ್, ಕವಜುಗ ಮತ್ತು ಫೆಸೆಂಟ್ ಹಕ್ಕಿಗಳು ಹೇರಳವಾಗಿವೆ. ವ್ಯವಸಾಯ ದೇಶದ ಅರ್ಧ ಭಾಗದಷ್ಟು ಭೂಮಿ ವ್ಯವಸಾಯಕ್ಕೆ ಯೋಗ್ಯವಾಗಿದೆ. ಸು. 1/3 ಅರಣ್ಯ ಪ್ರದೇಶಗಳಿಂದ ತುಂಬಿದೆ. ಪಶುಪಾಲನೆ ಜನರ ಮುಖ್ಯ ಕಸಬು. ಆಲ್ಪ್ಸ್ ಹಾಗೂ ಡ್ಯಾನ್ಯೂಬ್ಗಳ ನಡುವಿನ ಫಲವತ್ತಾದ ಭೂಮಿಯಲ್ಲಿ ಮೆಕ್ಕೆಜೋಳ ಮತ್ತು ಇತರ ಗಡ್ಡೆ ಬೆಳೆಗಳನ್ನು ಬೆಳೆಯುತ್ತಾರೆ. ಶೇ. 30 ರಷ್ಟು ಜನ ಆಧುನಿಕ ಕೃಷಿಯಲ್ಲಿ ತೊಡಗಿದ್ದಾರೆ. ಮುಖ್ಯ ಬೆಳೆಗಳಾದ ಗೋದಿ, ರೈ, ಓಟ್ಸ್, ಬಾರ್ಲಿ, ಆಲೂಗೆಡ್ಡೆ, ಮೆಕ್ಕೆಜೋಳ, ಸಕ್ಕರೆ ಗೆಡ್ಡೆಗಳು ಮತ್ತು ಹೈನು ಉತ್ಪನ್ನಗಳಾದ ಹಾಲು, ಬೆಣ್ಣೆ, ತುಪ್ಪಗಳನ್ನು ಹೆಚ್ಚಾಗಿ ಉತ್ಪಾದಿಸಿ ರಫ್ತು ಮಾಡುತ್ತಾರೆ. ಜನಾಂಗಗಳು ಆಸ್ಟ್ರಿಯದಲ್ಲಿ ಮುಖ್ಯವಾಗಿ ಡಿನಾರಿಕರು, ನಾರ್ಡಿಕರು, ಆಲ್ಪೈನರು ಮತ್ತು ಪುರ್ವಬಾಲ್ಟಿಕರು ಎಂಬ ನಾಲ್ಕು ಜನಾಂಗಗಳಿವೆ. ಡಿನಾರಿಕರು ಎತ್ತರವಾಗಿಯೂ ಕಪ್ಪಾಗಿಯೂ ನಾರ್ಡಿಕರು ತೆಳ್ಳಗೆ ಎತ್ತರವಾಗಿ ಸುಂದರವಾಗಿಯೂ ಆಲ್ಪೈನರು ಗಟ್ಟಿಮುಟ್ಟಾಗಿ ಕುಳ್ಳಾಗಿಯೂ ಪುರ್ವಬಾಲ್ಟಿಕರು ಮಧ್ಯಮ ಎತ್ತರದವರಾಗಿಯೂ ಇದ್ದಾರೆ. ಹಂಗರಿ ಗಡಿಯ ಬರ್ಗನ್ಲೆಂಡಿನಲ್ಲಿ ಕ್ರೋಚ್ ಮತ್ತು ಮಾಗ್ಯಾರರು, ಯುಗೊಸ್ಲಾವ್ ಗಡಿಯ ಸ್ಟೀರಿಯ ಮತ್ತು ಕಾರಿಂಥಿಯ ಪ್ರದೇಶಗಳಲ್ಲಿ ಸ್ಲೋವನ್ನರೂ ಇದ್ದಾರೆ. ಜೆಕೊಸ್ಲೊವಾಕ್ನಲ್ಲಿ ರುಥೇನಿಯನ್ನರು, ರೂಮೇನಿಯನ್ನರು, ಸರ್ಬಿಯನ್ನರು ಮತ್ತು ಇಟ್ಯಾಲಿಯನ್ನರು ಸ್ವಲ್ಪ ಪ್ರಮಾಣದಲ್ಲಿದ್ದಾರೆ. ಖನಿಜ ಮತ್ತು ಕೈಗಾರಿಕೆ ಚಿನ್ನ, ಬೆಳ್ಳಿ, ಕಬ್ಬಿಣ, ಸೀಸ, ಸತು ಹಾಗೂ ತಾಮ್ರ ಇಲ್ಲಿ ದೊರಕುವ ಮುಖ್ಯ ಖನಿಜಗಳು. ಕಲ್ಲಿದ್ದಲು ಅಲ್ಪ ಪ್ರಮಾಣದಲ್ಲಿ ದೊರಕುತ್ತದೆ. ಜಲವಿದ್ಯುಚ್ಛಕ್ತಿ ಹೇರಳವಾಗಿರುವುದರಿಂದ ಕಲ್ಲಿದ್ದಲಿನ ಕೊರತೆ ಕಾಣದು. ದೇಶದ ವಿದ್ಯುಚ್ಛಕ್ತಿಯಲ್ಲಿ ಶೇ.66 ಭಾಗ ಜಲವಿದ್ಯುತ್ನಿಂದ ಪುರೈಕೆಯಾಗುತ್ತದೆ. ಮುಖ್ಯವಾದ ಕೈಗಾರಿಕೆಗಳೆಂದರೆ ಮರದ ಸಾಮಾನುಗಳನ್ನು ತಯಾರಿಸುವುದು. ಕಾಗದ, ಕಬ್ಬಿಣ ಹಾಗೂ ಉಕ್ಕಿನ ತಯಾರಿಕೆ, ಪೆಟ್ರೋಲಿಯಂ ಶುದ್ಧೀಕರಣ, ರಾಸಾಯನಿಕ ಉತ್ಪತ್ತಿ, ಗಿರಣಿಗಳು, ಚರ್ಮ ಹದಮಾಡುವುದು, ಸೆರಾಮಿಕ್ಸ್, ಗಾಜು, ವಿದ್ಯುದುಪಕರಣಗಳ ತಯಾರಿಕೆ, ರೈಲ್ವೆ ಎಂಜಿನ್ ತಯಾರಿಕೆ ಇತ್ಯಾದಿ. ವ್ಯಾಪಾರ ಆಸ್ಟ್ರಿಯ ಈಗ ಯುರೋಪಿನ ಮುಖ್ಯ ಪ್ಯಾಪಾರ ಕೇಂದ್ರವಾಗಿದೆ. ವಿಯೆನ್ನಾ ನಗರವು ಆಧುನಿಕ ವ್ಯವಹಾರಗಳಲ್ಲಿ ಮುಂಚೂಣಿಯಲ್ಲಿದೆ. ಆಸ್ಟ್ರಿಯ ಕಚ್ಚಾ ಪದಾರ್ಥಗಳನ್ನು ಹೆಚ್ಚಾಗಿ ರವಾನಿಸುವುದು. ಆಮದು ವಸ್ತುಗಳಲ್ಲಿ ಆಹಾರ, ಪಾನೀಯ ಹಾಗೂ ಯಂತ್ರೋಪಕರಣಗಳು ಮುಖ್ಯ. ಧರ್ಮ ಮತ್ತು ಭಾಷೆ ರಾಜಧಾನಿ ವಿಯನ್ನ. ರೈಲು ಹಾಗೂ ಇತರ ಸಂಚಾರ ಮಾರ್ಗಗಳ ಕೇಂದ್ರ, ಜರ್ಮನ್ ಮುಖ್ಯ ಭಾಷೆ (99%), ಸ್ಲೋವೇನಿಯನ್, ಹಂಗೇರಿಯನ್ ಕ್ರೋಚಿಯನ್ ಮತ್ತು ಬವೇರಿಯನ್ಗಳನ್ನಾಡುವವರೂ ಇದ್ದಾರೆ. ಅವರ ಸಂಖ್ಯೆ ಅಲ್ಪ. ರೋಮನ್ ಕೆಥೊಲಿಕರೇ ಹೆಚ್ಚು (90%); ಉಳಿದವರು ಪ್ರಾಟೆಸ್ಟೆಂಟರು, ಯೆಹೂದ್ಯರು, ಗ್ರೀಕರು ಮುಂತಾದವರು. ಸಂಚಾರ ರೈಲ್ವೆ ಕೇಂದ್ರ ಹಾಗೂ ಪ್ರಾಂತೀಯ ಹೆದ್ದಾರಿಗಳು ಸರ್ಕಾರದ ಆಡಳಿತಕ್ಕೆ ಒಳಪಟ್ಟಿವೆ. ವಿಯೆನ್ನ-ಸಾಲ್ಜ್ ಬರ್ಗ್ ಹೆದ್ದಾರಿ (347ಕಿಮೀ) ಪಶ್ಚಿಮ ಜರ್ಮನಿಗೆ ಸಂಪರ್ಕ ಒದಗಿಸುತ್ತದೆ. ಡ್ಯಾನ್ಯೂಬ್ ನದಿ ಜಲಸಾರಿಗೆಗೆ ಮುಖ್ಯವಾಗಿದೆ. ರಷ್ಯದೊಡನೆ ಮಾಡಿಕೊಂಡ 1956ರ ಒಪ್ಪಂದದ ಪ್ರಕಾರ ಆಸ್ಟ್ರಿಯದ ಹಡಗುಗಳು ಕಪ್ಪು ಸಮುದ್ರದವರೆಗೂ ಪ್ರವಾಸ ಮಾಡುತ್ತವೆ. ಗ್ರಾಜ್, ಇನ್ಸ್ ಬ್ರುಕ್, ಕ್ಲಾಗೆನ್ಫರ್ಟ್, ಲಿಂಜ್, ಸಾಲ್ಜ್ ಬರ್ಗ್ ಮತ್ತು ಸ್ಕ್ವೆಚಾದ್ಗಳಲ್ಲಿ (ವಿಯನ್ನದ ಹತ್ತಿರ) ವಿಮಾನ ನಿಲ್ದಾಣಗಳಿವೆ. ಆಸ್ಟ್ರಿಯ ದೇಶದ ಸಾರಿಗೆ ಹೆಚ್ಚಾಗಿ ಇಟಲಿಯ ಟ್ರೇಸ್ಟ್ ಬಂದರಿನ ಮುಖಾಂತರವೂ ಪಶ್ಚಿಮ ಜರ್ಮನಿಯ ಹ್ಯಾಂಬರ್ಗ್ ಮತ್ತು ಬ್ರೆಮನ್ ಬಂದರುಗಳ ಮುಖಾಂತರವೂ ನಡೆಯುವುದು. ಆಡಳಿತ ವ್ಯವಸ್ಥೆ ಆಸ್ಟ್ರಿಯದಲ್ಲಿ 9 ಪ್ರಾಂತ್ಯಗಳಿವೆ. ಬರ್ಗನ್ಲೆಂಡ್, ಕಾರಿಂಥಿಯ, ಕೆಳ ಆಸ್ಟ್ರಿಯ, ಸಾಲ್ಸ್ ಬರ್ಗ್, ಸ್ಟೀರಿಯ, ಟೈರೋಲ್, ಮೇಲಿನ ಆಸ್ಟ್ರಿಯ, ವಿಯನ್ನ ಮತ್ತು ವೊರಾರ್್ಲ ಬರ್ಗ್. ರಾಷ್ಟ್ರಾಧ್ಯಕ್ಷ ಜನರಿಂದ ಚುನಾಯಿಸಲ್ಪಡುತ್ತಾನೆ. ಆತನ ಅಧಿಕಾರಾವಧಿ 6 ವರ್ಷ. ಅಧ್ಯಕ್ಷ ಛಾನ್ಸಲರ್ನನ್ನು ನೇಮಿಸುತ್ತಾನೆ. ಛಾನ್ಸಲರನ ಅವಧಿ ಹೆಚ್ಚೆಂದರೆ 4 ವರ್ಷ. ಅಧ್ಯಕ್ಷನೇ ಮಂತ್ರಿಗಳನ್ನು ಆರಿಸುತ್ತಾನೆ. ಮಂತ್ರಿಮಂಡಲ ಸಂಸತ್ತಿಗೆ ವಿಧೇಯವಾಗಿರುತ್ತದೆ. ಕೇಂದ್ರಸಂಸತ್ತಿನ ಮಂಡಳ ಜನಸಂಖ್ಯೆಯ ಪ್ರಮಾಣದ ಮೇಲೆ ಪ್ರಾಂತೀಯ ಶಾಸನಸಭೆಗಳು ಚುನಾಯಿಸಿ ಕಳಿಸಿದ 63 ಸದಸ್ಯರನ್ನು ಹೊಂದಿದೆ. ಕೆಳಮನೆಯಾದ ರಾಷ್ಟ್ರೀಯ ಮಂಡಳಿ, ಜನರಿಂದ ಚುನಾಯಿಸಲ್ಪಟ್ಟ 183 ಸದಸ್ಯರನ್ನು ಹೊಂದಿದೆ. ಪ್ರತಿ ಪ್ರಾಂತ್ಯ ಜನರಿಂದ ಚುನಾಯಿಸಲ್ಪಟ್ಟ ಒಮ್ಮನೆಯ ಶಾಸನ ಸಭೆಯನ್ನು ಪಡೆದಿದೆ. ಪ್ರಾಂತೀಯ ಸಭೆ ಚುನಾಯಿಸಿದ ಗವರ್ನರೇ ಪ್ರಾಂತ್ಯದ ಮುಖ್ಯಸ್ಥ. ನ್ಯಾಯಾಂಗ-232 ಕೋರ್ಟುಗಳನ್ನೂ 19 ಪ್ರಾಂತೀಯ ಮತ್ತು ಜಿಲ್ಲಾಕೋರ್ಟು ಗಳನ್ನೂ 4 ಉಚ್ಚ ಪ್ರಾಂತೀಯ ಕೋರ್ಟುಗಳನ್ನೂ ವಿಯನ್ನದಲ್ಲಿ ಪ್ರಧಾನ ಕೋರ್ಟನ್ನೂ ಪಡೆದಿದೆ. ಬಾಹ್ಯ ಸಂಪರ್ಕಗಳು Austria entry at Encyclopædia Britannica Austria information from the United States Department of State Austria at UCB Libraries GovPubs Information on Austria Sorted by regions. Choose from 5 languages. Austria profile from the BBC News Key Development Forecasts for Austria from International Futures Government Federal Chancellery of Austria official government portal AEIOU Austria Albums (in German, English) Chief of State and Cabinet Members Austrian Law Information on Austrian Law Trade World Bank Summary Trade Statistics Austria Travel Austria.info Official homepage of the Austrian National Tourist Office Austria.mu Homepage of the Austrian Museums TourMyCountry.com Website on Austrian culture, cuisine and tourist attractions Europe Pictures – Austria ಉಲ್ಲೇಖಗಳು ಯುರೋಪ್ ಖಂಡದ ದೇಶಗಳು ಆಸ್ಟ್ರಿಯ
2181
https://kn.wikipedia.org/wiki/%E0%B2%86%E0%B2%AB%E0%B3%8D%E0%B2%B0%E0%B2%BF%E0%B2%95%E0%B2%BE
ಆಫ್ರಿಕಾ
ಆಫ್ರಿಕಾ - ಪ್ರಪಂಚದ ಏಳು ಖಂಡಗಳಲ್ಲಿ ಒಂದು. ಇದು, ವಿಸ್ತಾರ ಮತ್ತು ಜನಸಂಖ್ಯೆಯ ಆಧಾರವಾಗಿ ಎರಡನೆಯ ಅತಿ ದೊಡ್ಡ ಖಂಡವಾಗಿದೆ. ಪ್ರಾಂತ್ಯಗಳು ಮತ್ತು ರಾಷ್ಟ್ರಗಳು ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ. ಆಫ್ರಿಕಾದ ಇತಿಹಾಸ: ಆಫ್ರಿಕಾ (೧೧ ಏಪ್ರಿಲ್ ೨೦೦೯) ಆಫ್ರಿಕಾ ಖಂಡವು ಪೂವರ್ಾರ್ಧಗೋಳದಲ್ಲಿರುವ ವಿಸ್ತೀರ್ಣದಲ್ಲಿ ಏಷ್ಯಾ ಖಂಡಕ್ಕೆ ಎರಡನೆಯದು. ಇಡೀ ಜಗತ್ತಿನ ಒಟ್ಟು ಭೂಭಾಗದ ಐದನೇ ಒಂದು ಭಾಗವನ್ನು ಇದು ಆಕ್ರಮಿಸಿದ್ದು ವಿಸ್ತೀರ್ಣದಲ್ಲಿ ಯೂರೋಪಿನ ಮೂರು ಪಟ್ಟು ಇದೆ. ಉತ್ತರದಿಂದ ದಕ್ಷಿಣಕ್ಕೆ ಸುಮಾರು 5,000 ಮೈಲಿ ಉದ್ದವೂ ಪೂರ್ವ ಪಶ್ಚಿಮವಾಗಿ 4,500 ಮೈಲಿಗಳಷ್ಟು ಅಗಲವಾಗಿಯೂ ಇದೆ. ಕಳೆದ ಮೂರು-ನಾಲ್ಕು ಶತಮಾನಗಳಲ್ಲಿ ಆಫ್ರಿಕಾ ಖಂಡದ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಲೂಟಿ ಮಾಡಿ ಅಭಿವೃದ್ಧಿಗೆ ಕಡಿವಾಣ ಹಾಕಿದ್ದರ ಫಲವಾಗಿ ಈ ಭೂಭಾಗಕ್ಕೆ ಕಗ್ಗತ್ತಲೆಯ ಖಂಡವೆಂಬ ಹಣೆಪಟ್ಟಿ ನೀಡಲಾಗಿದೆ. ಆಫ್ರಿಕಾದಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಚಿನ್ನ, ದಂತ, ವಜ್ರ ಮುಂತಾದ ಕಣ್ಣು ಕೋರೈಸುವ ಸಂಪತ್ತನ್ನು ದೋಚಲು ವ್ಯಾಪಾರದ ಸೋಗು ಹಾಕಿಕೊಂಡು ಪೋರ್ಚುಗೀಸರು, ಡಚ್ಚರು ಮತ್ತು ಫ್ರೆಂಚರು ಈ ಭೂಖಂಡಕ್ಕೆ ಬಂದಿಳಿದರು. ಆಫ್ರಿಕಾದ ವಿವಿಧ ಜನಾಂಗ ಮತ್ತು ಬುಡಕಟ್ಟುಗಳ ನಡುವಿನ ವೈರುಧ್ಯ-ವೈಮನಸ್ಯಗಳನ್ನು ಬಳಸಿಕೊಂಡು ಮಿಲಿಟರಿ ಬಲದಿಂದ ತಮ್ಮ ಯಜಮಾನಿಕೆಯನ್ನು ಹೇರುವಲ್ಲಿ ಯಶಸ್ವಿಯಾದರು. ಕಾಲಕ್ರಮೇಣ ವಸಾಹತುಗಳಾಗಿ ಪರಿವರ್ತಿತಗೊಂಡ ಈ ಭೂಭಾಗದಲ್ಲಿ ಪೋಚರ್ುಗೀಸರು ಪಶ್ಚಿಮ ಆಫ್ರಿಕಾದ ಕರಾವಳಿ ಪ್ರದೇಶದಲ್ಲಿ, ಫ್ರೆಂಚರು ವಾಯುವ್ಯ ಪ್ರದೇಶದಲ್ಲಿ, ಬ್ರಿಟಿಷರು ಪೂರ್ವದಲ್ಲಿ, ಡಚ್ಚರು ದಕ್ಷಿಣದಲ್ಲಿ, ಬೆಲ್ಜಿಯನ್ನರು ಮಧ್ಯ ಆಫ್ರಿಕಾದಲ್ಲಿ, ಇಟಾಲಿಯನ್ನರು ಉತ್ತರ ಆಫ್ರಿಕಾ ಪ್ರದೇಶಗಳನ್ನು ತಮ್ಮ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದ್ದರು. 19 ನೇ ಶತಮಾನದ ಕೊನೆಯ ಭಾಗದಲ್ಲಿ ತೃತೀಯ ರಾಷ್ಟ್ರಗಳನ್ನು ವಸಾಹತುಗೊಳಿಸುತ್ತಾ ಬಂಡವಾಳವು ಅಗಾಧ ಮಟ್ಟದಲ್ಲಿ ಬೆಳೆಯತೊಡಗಿತ್ತು. ವಿಶ್ವದ ಭೂಭಾಗಗಳನ್ನು ಹಂಚಿಕೊಳ್ಳಲು ಯೂರೋಪಿನ ಬಂಡವಾಳಶಾಹಿ ರಾಷ್ಟ್ರಗಳ ನಡುವೆ ಇನ್ನಿಲ್ಲದಂಥ ಸ್ಪರ್ಧೆ ಏರ್ಪಟ್ಟಿತು. ಈ ಹಿನ್ನೆಲೆಯಲ್ಲಿ ಆಫ್ರಿಕಾದ ರಾಷ್ಟ್ರಗಳನ್ನು ವಸಾಹತುಗಳನ್ನಾಗಿ ತೀವ್ರಗತಿಯಲ್ಲಿ ಪರಿವರ್ತಿಸಲಾಯಿತು. 1876 ರ ಹೊತ್ತಿಗೆ ಆಫ್ರಿಕಾದ ಹತ್ತನೇ ಒಂದು ಭಾಗವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದ್ದರೆ, 1900 ರ ಹೊತ್ತಿಗೆ ಹತ್ತನೆ ಒಂಬತ್ತರಷ್ಟು ಭಾಗವನ್ನು ವಶಪಡಿಸಿಕೊಳ್ಳಲಾಗಿತ್ತು. ಆಫ್ರಿಕಾ ಭೂಖಂಡ ಹಂಚಿಕೆಗಾಗಿ ಕಾದಾಟ ಈಜಿಪ್ಟ್ನ ಕೈರೋದಿಂದ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ವರೆಗೆ ಪೂರ್ಣ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿದ್ದ ಇಂಗ್ಲೆಂಡ್ನ ಆಸೆ ಮೊದಲನೆ ವಿಶ್ವ ಮಹಾಯುದ್ದ ನಂತರವಷ್ಟೆ ಕೈಗೂಡಿತು. ಈಜಿಪ್ಟ್ನ್ನು ಆಕ್ರಮಿಸಿಕೊಳ್ಳುವಾಗಲೇ ಪೂರ್ವ ಸೂಡಾನ್ನೊಳಗೂ ಇಂಗ್ಲೆಂಡ್ ಒಳ ನುಸುಳಿಕೊಂಡಿತು. ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಾದ ಘಾನಾ ಮತ್ತು ನೈಜೀರಿಯಾದ ಭೂಭಾಗಗಳ ಮೇಲೆ ಇಂಗ್ಲೆಂಡ್ ಆಕ್ರಮಣಕಾರಿ ಯುದ್ದಗಳನ್ನು ಹೂಡಿತ್ತು. ಫ್ರಾನ್ಸ್ ಕೂಡ ಆಫ್ರಿಕಾದಲ್ಲಿ ಅತಿ ದೊಡ್ಡ ವಸಾಹತು ಸಾಮ್ರಾಜ್ಯವನ್ನೇ ಹೊಂದಿತ್ತು. ಅಲ್ಜೀರಿಯಾದಿಂದ ಆರಂಭಿಸಿ ತುನಿಷಿಯಾ, ಮೊರಾಕೊ ಮತ್ತು ಸೆನೆಗಲ್ಗಳನ್ನು ಫ್ರಾನ್ಸ್ ವಸಾಹತುವನ್ನಾಗಿಸಿತು. ಜರ್ಮನಿಯು ಆಫ್ರಿಕಾದ ಕೆಲವು ಬುಡಕಟ್ಟು ನಾಯಕರುಗಳ ಮೇಲೆ ಅಸಮ್ಮತ ಒಪ್ಪಂದಗಳನ್ನು ಹೇರಿ ಪೂರ್ವ ಆಫ್ರಿಕಾದ ಭಾಗಗಳನ್ನು ಒಳಗೊಂಡಂತೆ ಪಶ್ಚಿಮದ ಟೋಗೋ, ಮತ್ತು ಕೆಮರೂನ್ಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತು. ಇಟಲಿಯೂ ಸಹ ಇಥಿಯೋಪಿಯಾ ವಿರುದ್ದ ಯುದ್ದ ಘೋಷಣೆಯಿಲ್ಲದೆ ಮಿಲಿಟರಿ ದಾಳಿ ನಡೆಸಿತು. ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳೊಂದಿಗೆ ಒಡಗೂಡಿ ಇಟಲಿಯು ಸೋಮಾಲಿಯಾವನ್ನು ವಿಭಜನೆ ಮಾಡಿತು. ಪೋಚರ್ುಗಲ್ ಮತ್ತು ಸ್ಪೇನ್ಗಳು ಆಫ್ರಿಕಾದ ಹಲವು ಸಂಖ್ಯೆಯ ಭೂಭಾಗಗಳನ್ನು ಆಕ್ರಮಿಸಿಕೊಂಡಿದ್ದವು. ಬೆಲ್ಜಿಯಂ ಕಾಂಗೋವನ್ನು 1908 ರಲ್ಲಿ ವಸಾಹತುವನ್ನಾಗಿಸಿತು. ಮೊದಲನೆ ಮಹಾಯುದ್ದಕ್ಕೆ ಮೊದಲು ಆಫ್ರಿಕಾದ ಎರಡು ರಾಷ್ಟ್ರಗಳಷ್ಟೆ - ಇಥಿಯೋಪಿಯಾ ಮತ್ತು ಲೈಬೀರಿಯಾ - ಸ್ವತಂತ್ರವಾಗಿದ್ದವು. ಸಾಮಾಜಿಕವಾಗಿ ಮತ್ತು ಆಥರ್ಿಕವಾಗಿ ಹಿಂದುಳಿದಿದ್ದು ಹಾಗೂ ಆಫ್ರಿಕನ್ ರಾಷ್ಟ್ರಗಳ ಮಿಲಿಟರಿ ದೌರ್ಬಲ್ಯ ಮತ್ತು ಆಫ್ರಿಕನ್ನರ ಅನೈಕ್ಯತೆಯು ಯೂರೋಪಿಯನ್ನರ ವಿರುದ್ದ ಆಫ್ರಿಕನ್ನರು ಸೋತದ್ದಕ್ಕೆ ಪ್ರಮುಖ ಕಾರಣ. ಸಾಮ್ರಾಜ್ಯಶಾಹಿ ರಾಷ್ಟ್ರಗಳು ಆಫ್ರಿಕಾದ ಜನತೆಯನ್ನು ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುತ್ತಿದ್ದವು. ಕೆಲವು ಪಾಳೇಗಾರಿ ದೊರೆಗಳನ್ನು ಒಮ್ಮೆ ಮೇಲೇರಿಸುತ್ತಾ ಮತ್ತೆ ಕೆಲವೊಮ್ಮೆ ಕೆಳದೂಡುತ್ತಿದ್ದವು. ಆಫ್ರಿಕಾವನ್ನು ವಿಭಜಿಸಿದ ನಂತರ ಯೂರೋಪಿಯನ್ ರಾಷ್ಟ್ರಗಳು ಅದನ್ನು 'ಅಭಿವೃದ್ಧಿ' ಪಡಿಸಲು ಶುರು ಮಾಡಿದವು. ತಮ್ಮ ರಾಷ್ಟ್ರಗಳಿಗೆ ಕೃಷಿ ಮತ್ತು ಕಚ್ಛಾ ವಸ್ತುಗಳನ್ನು ಸರಬರಾಜು ಮಾಡುವ ನೆಲೆಗಳನ್ನಾಗಿ ಆಫ್ರಿಕಾದ ವಸಾಹತುಗಳನ್ನು ಪರಿವತರ್ಿಸಲಾಯಿತು. ವಸಾಹತುಗಳ ಜನತೆಯು ಕ್ರೂರ ಶೋಷಣೆಗೆ ಬಲಿಯಾದರು. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಆಫ್ರಿಕಾದ ವಸಾಹತು ರಾಷ್ಟ್ರದೊಳಗೆ ಬಂಡವಾಳದ ಬೃಹತ್ ಪ್ರಮಾಣದಲ್ಲಿ ಹರಿಯತೊಡಗಿತು. ಈ ಮೊದಲು ಆಫ್ರಿಕಾದ ರೈತನು ತನ್ನ ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತನಾಗಿದ್ದನು. ವಸಾಹತುಶಾಹಿಯ ಪ್ರವೇಶದಿಂದಾಗಿ ಆಫ್ರಿಕಾದ ಹಲವು ರಾಷ್ಟ್ರಗಳಲ್ಲಿ ರಪ್ತು ಮಾಡುವ ಬೆಳೆಗಳ ಉತ್ಪಾದನೆಗೆ ತಳಪಾಯ ಹಾಕಲಾಯಿತು. ಈಜಿಪ್ಟ್ನಲ್ಲಿ ಹತ್ತಿ, ಸೆನೆಗಲ್ನಲ್ಲಿ ಕಡ್ಲೆಕಾಯಿ ಮತ್ತು ನೈಜೀರಿಯಾದಲ್ಲಿ ಕೋಕೋ ಮತ್ತು ತಾಳೆ ಎಣ್ಣೆ, ಇತ್ಯಾದಿ. ದಕ್ಷಿಣ ಆಫ್ರಿಕಾದಲ್ಲಿ ಚಿನ್ನ ಮತ್ತು ವಜ್ರ ಗಣಿಗಾರಿಕೆಗೆ ಪ್ರಾಶಸ್ತ್ಯ ನೀಡಲಾಯಿತು. ಇದರಿಂದಾಗಿ ಈ ರಾಷ್ಟ್ರಗಳ ಆಥರ್ಿಕತೆಯು ವಿಶ್ವ ಆಥರ್ಿಕತೆಯೊಂದಿಗೆ ಕೊಂಡಿ ಏರ್ಪಡಿಸಿಕೊಂಡಿತು. ಆಫ್ರಿಕಾವನ್ನು ವಿಶ್ವ ಮಾರುಕಟ್ಟೆಗೆ ಎಳೆದು ತಂದು ಅಲ್ಲಿನ ಸಾರಿಗೆ ಮತ್ತು ಸಂಪರ್ಕವನ್ನು ಅದರ ಸಂಪತ್ತನ್ನು ಹೊರಸಾಗಿಸುವ ಅವಶ್ಯಕತೆಗನುಗುಣವಾಗಿ ಅಭಿವೃದ್ಧಿ ಗೊಳಿಸಿದವು. ನೈಸಗರ್ಿಕ ಮತ್ತು ಮಾನವ ಸಂಪನ್ಮೂಲಗಳನ್ನು ಹಿಗ್ಗಾ ಮುಗ್ಗಾ ದೋಚಲಾಯಿತು. ಆರಂಭದಲ್ಲಿ ಯೂರೋಪಿಯನ್ ಕಬಳಿಕೆದಾರರು 780 ಲಕ್ಷ ಹೆಕ್ಟೇರ್ ಭೂಮಿಯನ್ನು ಆಕ್ರಮಿಸಿಕೊಂಡಿದ್ದರು. ಫಾರ್ಮನೀರ್ ಕಂಪನಿಯೊಂದೇ 1.4 ಲಕ್ಷ ಭೂಮಿಯನ್ನು ಆಕ್ರಮಿಸಿಕೊಂಡಿತ್ತು. 1913 ರ ಹೊತ್ತಿಗೆ ಮೊರಾಕ್ಕೋದಲ್ಲಿ 1.0 ಲಕ್ಷ ಹೆಕ್ಟೇರ್ ಭೂಮಿಯನ್ನು ವಿದೇಶಿ ಕಂಪನಿಗಳು ಕಬಳಿಸಿದ್ದವು. ಮೊದಲನೆ ವಿಶ್ವ ಮಹಾಯುದ್ದ ಜರುಗಲು ಆಫ್ರಿಕಾದಲ್ಲಿನ ವಸಾಹತುಗಳಿಗಾಗಿ ಸಾಮ್ರಾಜ್ಯಶಾಹಿ ದೇಶಗಳ ನಡುವೆ ನಡೆದ ಕಿತ್ತಾಟವೂ ಒಂದು ಪ್ರಮುಖ ಕಾರಣವಾಗಿತ್ತು. ಸೂಯೆಜ್ ಕಾಲುವೆ ನಿಮರ್ಾಣ ಮಾಡಿ ತಮ್ಮ ವ್ಯಾಪಾರಕ್ಕಾಗಿ ಈ ಜಲ ಮಾರ್ಗವನ್ನು ಬಳಸಿಕೊಂಡು ಬ್ರಿಟಿಷರು ಮತ್ತು ಫ್ರೆಂಚರು ವ್ಯಾಪಾರ ದ್ವಿಗುಣ ಮಾಡಿಕೊಳ್ಳಲು ಯೋಜಿಸಿದ್ದರು. ಆದರೆ ಜರ್ಮನ್-ತುರ್ಕರು ಇದನ್ನು ಬಲವಾಗಿ ವಿರೋಧಿಸಿದರೂ, ಈ ಪ್ರತಿರೋಧವನ್ನು ಯಶಸ್ವಿಯಾಗಿ ಹತ್ತಿಕ್ಕಲಾಯಿತು. ಯುದ್ದ ಸಮಯದಲ್ಲಿ ಆಫ್ರಿಕಾವು ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳಿಗೆ ಮಾನವ ಸಂಪನ್ಮೂಲ ಮತ್ತು ನೈಸಗರ್ಿಕ ಸಂಪನ್ಮೂಲಗಳನ್ನು ಸರಬರಾಜು ಮಾಡುವ ಪ್ರಧಾನ ಆಕರವಾಗಿತ್ತು. ಈ ಸಮಯದಲ್ಲಿ ಮಿಲಿಯನ್ಗಟ್ಟಲೆ ಆಹಾರ ಸಾಮಗ್ರಿ ಮತ್ತು ತರಕಾರಿ ಹಾಗೂ ಖನಿಜ ವಸ್ತುಗಳನ್ನು ತಮ್ಮ ವಶದಲ್ಲಿದ್ದ ಆಫ್ರಿಕಾದಿಂದ ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳು ಸರಬರಾಜು ಮಾಡಿಕೊಂಡವು. ಆಫ್ರಿಕಾದ ವಸಾಹತುವಿನ ಐದು ಲಕ್ಷಕ್ಕೂ ಹೆಚ್ಚು ಬುಡಕಟ್ಟು ಜನರನ್ನು ಫ್ರೆಂಚ್ ಸೇನೆಯು ತನ್ನ ಸೇನೆಯಲ್ಲಿ ಹೊಂದಿತ್ತು. ಬ್ರಿಟಿಷ್ ಸೇನೆಯು ಸುಮಾರು ಮೂರು ಲಕ್ಷ ಆಫ್ರಿಕನ್ನರನ್ನು ಸಿದ್ದ ಪಡಿಸಿತ್ತು. ಜರ್ಮನ್ ಸೇನೆಯು ಸುಮಾರು 20,000 ಆಫ್ರಿಕನ್ ಸೈನಿಕರು ಮತ್ತು 20,000 ಬುಡಕಟ್ಟು ಜನರನ್ನು ತನ್ನ ಬಗಲಿಗೆ ಹಾಕಿಕೊಂಡಿತ್ತು. ವಸಾಹತುಶಾಹಿ ರಾಷ್ಟ್ರಗಳು ಯುದ್ದದಲ್ಲಿ ತಮ್ಮ ಮೇಲೆ ಬಿದ್ದ ಅಪಾರ ಹೊರೆಯನ್ನು ಆಫ್ರಿಕಾದ ಜನತೆಯ ಮೇಲೆ ವಗರ್ಾಯಿಸಿದವು. ಶೋಷಣೆಯ ಸ್ವರೂಪ ವ್ಯಾಪಿಸಿತೊಡಗುತ್ತಿದ್ದಂತ,ೆ ತೀವ್ರಗೊಂಡ ವಸಾಹತುಶಾಹಿ ರಾಷ್ಟ್ರಗಳ ದೌರ್ಜನ್ಯದ ವಿರುದ್ದ ಜನತೆಯು ಇದಿರು ನಿಲ್ಲುವಂತೆ ಪ್ರೇರೇಪಿಸಿತು. ಬ್ರಿಟಿಷ್ ಮತ್ತು ಫ್ರೆಂಚ್ ವಸಾಹತುಗಳಲ್ಲಿ ರಾಷ್ಟ್ರೀಯ ವಿಮೋಚನಾ ಚಳುವಳಿಯು ತೀವ್ರಗೊಂಡಿತು. ಸೂಡಾನ್, ನೈಜೀರಿಯಾ, ಲಿಬಿಯಾಗಳಲ್ಲಿ ಜನರು ಬಂಡಾಯವೆದ್ದರು. ಅಲ್ಜಿರೀಯಾ, ತುನೀಷಿಯಾ, ಮೊರಾಕೊಗಳ ಜನತೆ ಫ್ರೆಂಚ್ ಸೇನೆಯ ವಿರುದ್ದ ಕಾದಾಡತೊಡಗಿದರು. ಪ್ರಥಮ ಮಹಾಯುದ್ದ ಪರಿಣಾಮ ಆಫ್ರಿಕಾದ ರಾಜಕೀಯ ಭೂಪಟವನ್ನು ಪುನರ್-ರಚಿಸಲಾಯಿತು. ಈ ಮೊದಲು ಜರ್ಮನಿಯ ತೆಕ್ಕೆಯಲ್ಲಿದ್ದ ವಸಾಹತು ಪ್ರದೇಶಗಳನ್ನು 'ಲೀಗ್ ಆಫ್ ನೇಷನ್' ಮುಖಾಂತರ ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಂಗಳಿಗೆ ವಹಿಸಿಕೊಡಲಾಯಿತು. ದಕ್ಷಿಣ ಆಫ್ರಿಕಾ ಒಕ್ಕೂಟ, ಟೋಗೋ ಮತ್ತು ಕೆಮರೂನ್ಗಳ 'ಲೀಗ್ ಆಫ್ ನೇಷನ್'ನ ಸದಸ್ಯತ್ವವನ್ನು ರದ್ದುಗೊಳಿಸಿ ಅವುಗಳನ್ನು ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳಿಗೆ ಹಂಚಲಾಯಿತು. ಪ್ರಥಮ ವಿಶ್ವ ಯುದ್ದಾನಂತರ ವಿದೇಶಿ ಬಂಡವಾಳವು ಆಫ್ರಿಕಾದ ರಾಷ್ಟ್ರಗಳಲ್ಲಿ ಸ್ವೇಚ್ಛಾಚಾರದಿಂದ ಹರಿದಾಡಲಾರಂಭಿಸಿತು. ವಸಾಹತುಶಾಹಿ ರಾಷ್ಟ್ರಗಳು ಹಳೆಯ ಬಂಡವಾಳಶಾಹಿ-ಪೂರ್ವ ಸಂಬಂಧಗಳನ್ನೇ ಮುಂದುವರಿಸಲು ಯತ್ನಿಸಿದ್ದವು. ಆ ರಾಷ್ಟ್ರಗಳಲ್ಲಿ ದೇಶೀಯ ಬಂಡವಾಳಶಾಹಿಯು ಬೆಳೆಯದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಯಿತು. ಪಾಳೇಗಾರಿ ಮತ್ತು ಪಾಳೇಗಾರಿ-ಪೂರ್ವ ಶೋಷಣೆಯ ವಿಧಾನಗಳನ್ನು ಅನುಸರಿಸಲಾಯಿತು. ಗಣಿಗಾರಿಕೆ, ಮತ್ತು ಸಣ್ಣ ಕೈಗಾರಿಕೆಗಳನ್ನು ಹೊರತುಪಡಿಸಿದರೆ, ಇನ್ನಾವುದೇ ಬೃಹತ್ ಕೈಗಾರಿಕಾ ರಂಗದಲ್ಲಿ ದೇಶೀಯ ಬಂಡವಾಳವು ತಲೆ ಎತ್ತದಂತೆ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಕಠಿಣ ಕ್ರಮ ಕೈಗೊಂಡವು. ಏಕಮುಖ ಕೃಷಿ ಮತ್ತು ಕಚ್ಚಾ ವಸ್ತು ತಯಾರಿಕೆ ಆಧಾರಿತ ಆಥರ್ಿಕತೆಯನ್ನು ವಸಾಹತು ಶಾಹಿ ರಾಷ್ಟ್ರಗಳು ಬಲಗೊಳಿಸಿದವು. ಆಫ್ರಿಕಾದ ಸಮಾಜದಲ್ಲಿ ಆಂತರಿಕವಾಗಿ ಪ್ರಮುಖ ಬದಲಾವಣೆಗಳು ಜರುಗತೊಡಗಿದವು. ಅತಿ ಹೆಚ್ಚು ಹಿಂದುಳಿದ ಆಫ್ರಿಕಾದಲ್ಲಿ ಬಂಡವಾಳಶಾಹಿ-ಪೂರ್ವದ ಸಂಬಂಧಗಳ ಮೇಲೆ ಪ್ರಹಾರಗಳು ಹೆಚ್ಚಾದವು. ಈ ಹಂತದಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಉದ್ದಿಮೆದಾರ ಮತ್ತು ಕಾಮರ್ಿಕ ವರ್ಗಗಳು ಅಸ್ತಿತ್ವಕ್ಕೆ ಬಂದವು. ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಳು ಎರಡನೇ ಮಹಾಯುದ್ದ ಸಮಯದಲ್ಲಿ ಗಣಿಗಾರಿಕೆ ಮತ್ತು ಉತ್ಪಾದನಾ ಕೈಗಾರಿಕೆಗಳ ಅಭಿವೃದ್ಧಿಯಾಯಿತು. ಹಲವು ವಿಧದ ಕಚ್ಛಾ ವಸ್ತುಗಳ ಉತ್ಪಾದನೆಯಾಯಿತು. ಖನಿಜ ಸಂಪತ್ತುಗಳ ಶೋಧನೆಯಾಯಿತು. ಆಫ್ರಿಕಾದಿಂದ ಹೆಚ್ಚೆಚ್ಚು ಯುದ್ದ ಸಾಮಗ್ರಿಗಳು ಮತ್ತು ಗಣಿ ಸಂಪತ್ತುಗಳನ್ನು ಸಂಸ್ಕರಿಸಿ ಸಾಗಿಸುತ್ತಿದ್ದರಿಂದ 1940-45ರ ಅವಧಿಯಲ್ಲಿ ಆಫ್ರಿಕಾದ ನಗರಗಳು ಮೂರುಪಟ್ಟು ನಾಲ್ಕುಪಟ್ಟು ಹೆಚ್ಚಾದವು. ನೈಸಗರ್ಿಕ ಮತ್ತು ಮಾನವ ಸಂಪನ್ಮೂಲಗಳನ್ನು ಆಫ್ರಿಕಾದಿಂದ ಸಾಗಣೆ ಮಾಡುವ ಸಲುವಾಗಿ ಜೀವನಕ್ಕಾಗಿ ಕೃಷಿ ಮಾಡುತ್ತಿದ್ದ ಮತ್ತು ಸಣ್ಣ ಕೈಗಾರಿಕೆಗಳಿದ್ದ ಆಫ್ರಿಕಾದ ಆಥರ್ಿಕ ತಳಪಾಯವನ್ನು ಬೃಹತ್ ಮಟ್ಟದ ರಪ್ತು-ಆಧಾರಿತ ಆಥರ್ಿಕತೆಯನ್ನಾಗಿ ಪರಿವತರ್ಿಸಲಾಯಿತು. ಈ ಮಧ್ಯೆ, ಏಷ್ಯಾದಿಂದ ಬರುತ್ತಿದ್ದ ಲಾಭಕ್ಕೆ ಪೆಟ್ಟು ಬಿದ್ದ ನಂತರ ಪ್ರಪಂಚದ ಸುಲಿಗೆಕೋರರ ದೃಷ್ಟಿ ಆಫ್ರಿಕಾ ವಸಾಹತುವಿನತ್ತ ಹೆಚ್ಚೆಚ್ಚು ಹರಿಯಿತು. ಇದರಿಂದಾಗಿ ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಂಸ್ಕೃತಿಯನ್ನು ನಾಶಗೊಳಿಸಿ ರೈತಾಪಿಯನ್ನು ಬಲವಂತವಾಗಿ ಕೈಗಾರಿಕಾ ಕಾಮರ್ಿಕರನ್ನಾಗಿಸಲಾಯಿತು. ಹಳ್ಳಿಗರನ್ನು ಗಣಿಗಳು, ರೈಲು-ರಸ್ತೆಗಳು ಮತ್ತು ಸಂಸ್ಕರಣಾ ಘಟಕಗಳಲ್ಲಿ ಕೆಲಸ ಮಾಡಲು ಯೋಗ್ಯವಿರುವ 'ಕ್ರೂರಪಶು' ಗಳೆಂದು ಪರಿಗಣಿಸಲಾಗುತ್ತಿತ್ತು. ಕಾಮರ್ಿಕ ಪಡೆಯನ್ನು ನಿಮರ್ಿಸಲು ಎರಡು ವಿಧಾನಗಳನ್ನು ಬಳಸಲಾಗುತ್ತಿತ್ತು. ಮೊದಲನೆಯದು, ಹೆಚ್ಚೆಚ್ಚು ತೆರಿಗೆಯನ್ನು ವಿಧಿಸಿ ಅದನ್ನು ಹಣದ ರೂಪದಲ್ಲೇ ಪಾವತಿಸುವಂತೆ ಮಾಡಿದ್ದು. ಈ ತೆರಿಗೆ ಪಾವತಿಸಲು ಹಣಕ್ಕಾಗಿ ಆಫ್ರಿಕನ್ನರು ಯೂರೋಪ್ ಅಥವಾ ಅಮೇರಿಕಾದ ಕಂಪನಿಗಳಲ್ಲಿ ಕೆಲಸಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದರು. ಬಹುತೇಕ ವಸಾಹತುಗಳಲ್ಲಿ ಆಫ್ರಿಕನ್ನರ ಭೂಮಿ ಮೇಲಿನ ಒಡೆತನ ಶೇಕಡಾ 10ಕ್ಕೆ ಮಾತ್ರ ಸೀಮಿತವಾಗಿತ್ತು. ಉಳಿದ ಭೂಮಿಯನ್ನು ರಪ್ತು-ಆಧಾರಿತ ಬೆಳೆ ಬೆಳೆಯಲು ಅಗತ್ಯಕ್ಕಿಂತ ಅಗಾಧವಾದ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಮತ್ತು ವಸಾಹತುಶಾಹಿಗಳಿಗೆ ನೀಡಿದ್ದರಿಂದ ಸ್ವಾವಲಂಬಿಯಾಗಿದ್ದ ಆಫ್ರಿಕಾ ಆಹಾರಕ್ಕಾಗಿ ಆಮದು ಮಾಡಿಕೊಳ್ಳಬೇಕಾಯಿತು. ಎರಡನೆಯದು, ಬಲಾತ್ಕಾರದಿಂದ ಕಾಮರ್ಿಕರನ್ನು ನೇಮಿಸಿಕೊಳ್ಳುವುದು ಅಥವಾ ಆಧುನಿಕ ಗುಲಾಮಗಿರಿ. ಹಳ್ಳಿಗಳಿಂದ ಅಪಹರಿಸಿದ ಜನರನ್ನು ಗುತ್ತಿಗೆದಾರರ ನೆರವಿನಿಂದ ಬಲವಂತವಾಗಿ ಕಾಮರ್ಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಆರೋಗ್ಯ ಸಂರಕ್ಷಣೆ, ನೈರ್ಮಲ್ಯ ವ್ಯವಸ್ಥೆ, ಕುಡಿಯುವ ನೀರು, ಮುಂತಾದ ಅತ್ಯವಶ್ಯ ಸೌಲಭ್ಯಗಳಿಲ್ಲದೆ ಹಂದಿಗೂಡಿನಂಥಹ ವಸತಿಗಳಲ್ಲಿ ವಾಸವಾಗಿದ್ದುಕೊಂಡು ದೀಘರ್ಾವಧಿ ಸಮಯ ಕೆಲಸ ಮಾಡುತ್ತಾ ಕುಟುಂಬದ ಸಂಪರ್ಕವಿಲ್ಲದೆ ಕಾಮರ್ಿಕರ ಜೀವನ ಹೀನಾಯ ಸ್ಥಿತಿಯಲ್ಲಿತ್ತು. ಇಂಥಹ ಕ್ರೂರ ಸ್ಥಿತಿಗಳಿಂದಾಗಿ ಉತ್ತಮ ವೇತನ, ಉತ್ತಮ ದುಡಿಯುವ ವಾತಾವರಣಕ್ಕಾಗಿ ಮತ್ತು ಗುಲಾಮಗಿರಿಯನ್ನು ಕೊನೆಗಾಣಿಸಲು ಕಾಮರ್ಿಕ ಸಂಘಟನೆಗಳು 1920ರ ದಶಕದಲ್ಲಿ ತುನೀಷಿಯಾ, ಜಾಂಬಿಯಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಬೆಳೆದುಬಂದವು. ಆರಂಭದ ಕಾಮರ್ಿಕ ಸಂಘಟನೆಗಳು ಕಾನೂನುಬಾಹಿರವಾಗಿದ್ದು ಮುಷ್ಕರಗಳನ್ನು ನಡೆಸುವವರಿಗೆ ಆಮಿಷವನ್ನೊಡ್ಡಲಾಗುತ್ತಿತ್ತು, ಇದಕ್ಕೆ ಬಗ್ಗದಿದ್ದರೆ ದಂಡನೆಗೊಳಪಡಿಸಲಾಗುತ್ತಿತ್ತು. ಮುಷ್ಕರಗಳಲ್ಲಿ ಡಜನ್ಗಟ್ಟಲೆ ಕಾಮರ್ಿಕರನ್ನು ಕೊಂದು ನೂರಾರು ಮಂದಿಯನ್ನು ಬಂಧಿಸಿ ಅವರನ್ನು ಮತ್ತೆ ಆಧುನಿಕ ಗುಲಾಮಗಿರಿಗೆ ದೂಡಲಾಗುತ್ತಿತ್ತು. ಸಾಮ್ರಾಜ್ಯಶಾಹಿ ಮತ್ತು ಖಾಸಗಿ ಕಂಪನಿಗಳ ದುರಾಸೆ ಮತ್ತು ಶೋಷಣೆ ಹೆಚ್ಚಾದಂತೆ, ದುಡಿಯುವ ಜನತೆಯ ಐಕ್ಯತೆ ಗಟ್ಟಿಗೊಂಡಿತು. ಸಾಮ್ರಾಜ್ಯಶಾಹಿ ಗುಲಾಮತನದ ವಿರುದ್ದದ ಹೋರಾಟದಲ್ಲಿ ಮೊದಲಿಗೆ ದೇಶೀಯ ಬಂಡವಾಳಶಾಹಿ ಮತ್ತು ಬುದ್ದಿಜೀವಿಗಳ ನೇತೃತ್ವದಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳನ್ನು ಸ್ಥಾಪಿಸಲಾಯಿತು. 1920ರಲ್ಲಿ ಅಲ್ಜೀರಿಯಾ, ತುನೀಷಿಯಾ ಮತ್ತು ಮೊರಾಕೋಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳನ್ನು ಸ್ಥಾಪಿಸಲಾಯಿತು. ಎಲ್ಲೆಡೆ ವ್ಯಾಪಿಸುತ್ತಿದ್ದ ಸಾಮ್ರಾಜ್ಯಶಾಹಿ-ವಿರೋಧಿ ಚಳುವಳಿಗಳಲ್ಲಿ ಉತ್ತರ ಆಫ್ರಿಕಾದ ರಾಷ್ಟ್ರಗಳಾದ ಈಜಿಪ್ಟ್, ಸೂಡಾನ್, ಮೊರಾಕೋ ಮುಂಚೂಣಿಯಲ್ಲಿದ್ದವು. ಪೂರ್ವ ಆಫ್ರಿಕನ್ ಒಕ್ಕೂಟವನ್ನು ಕೀನ್ಯಾದಲ್ಲಿ ಸ್ಥಾಪಿಸಲಾಯಿತು. ದಕ್ಷಿಣ ಆಫ್ರಿಕಾ ಒಕ್ಕೂಟದಲ್ಲಿ ಅಂಗೋಲಾ, ಕಾಂಗೋ, ಇಟಾಲಿಯನ್ ಸೋಮಾಲಿಲ್ಯಾಂಡ್ ಮತ್ತು ಚಡ್, ಇನ್ನಿತರ ಪ್ರದೇಶಗಳಲ್ಲಿ ರೈತಾಪಿಯ ಗಲಭೆಗಳಿಂದ ಮತ್ತು ದೊಡ್ಡ ನಗರಗಳಲ್ಲಿ ನಡೆದ ಮುಷ್ಕರ ಮತ್ತು ಪ್ರದರ್ಶನಗಳಿಂದ ಬಂಡಾಯವು ತೀವ್ರ ಸ್ವರೂಪವನ್ನು ಪಡಕೊಂಡು ಆಳುವ ವರ್ಗಗಳಿಂದ ಕೆಲವು ವಿನಾಯಿತಿಗಳನ್ನು ಪಡೆಯಲು ಸಾಧ್ಯವಾಗಿತ್ತು. ಇಟಲಿಯು ಇಥಿಯೋಪಿಯಾದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹಲವು ಆಫ್ರಿಕನ್ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ಜರುಗಿದವು. ದ್ವಿತೀಯ ಮಹಾಯುದ್ದ ಸಮಯದಲ್ಲಿ ಆಫ್ರಿಕಾದ ಎಲ್ಲ ರಾಷ್ಟ್ರಗಳ ಮೇಲೂ ಯುದ್ದವನ್ನು ಹೇರಲಾಯಿತು. 1930ರ ದಶಕದಲ್ಲಿ ಆಫ್ರಿಕಾವು ಫ್ಯಾಸಿಸ್ಟ್ ಆಕ್ರಮಣವನ್ನು ಎದುರಿಸಬೇಕಾಯಿತು. ಈಜಿಪ್ಟ್, ಲಿಬ್ಯಾ, ತುನೀಷಿಯಾ, ಇಥಿಯೋಪಿಯಾ, ಸೋಮಾಲಿಲ್ಯಾಂಡ್, ಸೂಡಾನ್ ಮತ್ತು ಕೀನ್ಯಾ ಭೂಪ್ರದೇಶಗಳಲ್ಲಿ ಯುದ್ದ ಚಟುವಟಿಕೆಗಳು ಜರುಗಿದವು. ಲಕ್ಷೊಪಲಕ್ಷ ಸಂಖ್ಯೆಯ ಆಫ್ರಿಕಾ ಸೈನಿಕರು ಬ್ರಿಟನ್ ಮತ್ತು ಜಪಾನ್ ಸೇನೆಯ ಭಾಗವಾಗಿ ಯುದ್ದಗಳಲ್ಲಿ ಕಾದಾಡಿದರು. ಆಫ್ರಿಕಾದಲ್ಲಿನ ಇಟಾಲಿಯನ್ ಮತ್ತು ಜರ್ಮನ್ ಫ್ಯಾಸಿಸಂ ವಿರುದ್ದ ನಡೆದ ಹೋರಾಟಗಳಲ್ಲಿ ಆಫ್ರಿಕಾದ ವಸಾಹತುಗಳು ಗಣನೀಯ ಮಿಲಿಟರಿ ಕೊಡುಗೆ ನೀಡಿವೆ. ಅಮೇರಿಕಾ ಮತ್ತು ಯೂರೋಪ್ ವಸಾಹತುಶಾಹಿ ರಾಷ್ಟ್ರಗಳಿಗೆ ಎರಡನೇ ಮಹಾಯುದ್ದವು ನಾಜಿವಾದದ ವಿರುದ್ದವಿದ್ದರೆ, ಆಫ್ರಿಕಾದ ಸೈನಿಕರಿಗೆ ವರ್ಣಭೇಧ ನೀತಿ ಮತ್ತು ವಸಾಹತುಶಾಹಿಯ ವಿರುದ್ದದ ಯುದ್ದವಾಗಿತ್ತು. ಭಾರತದಲ್ಲಿ ಬ್ರಿಟಿಷರಿಗಾಗಿ ಸೇವೆ ಸಲ್ಲಿಸುತ್ತಿದ್ದ ನೈಜೀರಿಯಾದ ಸೈನಿಕನೊಬ್ಬ 1945ರಲ್ಲಿ ತಾನು ಮನೆಗೆ ಬರೆದ ಪತ್ರದಲ್ಲಿ ಈ ರೀತಿ ದಾಖಲಿಸಿದ್ದಾನೆ: ವಿದೇಶದಲ್ಲಿರುವ ನಾವೆಲ್ಲ ಸೈನಿಕರು ಹೊಸ ವಿಚಾರದೊಂದಿಗೆ ವಾಪಸು ಬರುತ್ತಿದ್ದೇವೆ. ನಾವೆಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿವೆಂದು ನಮಗೆ ತಿಳಿಸಲಾಗಿದೆ. ನಮಗೆ ಸ್ವಾತಂತ್ರ್ಯ ಬೇಕಷ್ಟೆ. ಬಿಳಿಯ ಸೈನಿಕರೊಂದಿಗೆ ಸರಿಸಮಾನರಾಗಿ ಆಫ್ರಿಕಾದ ಸೈನಿಕರು ಹೋರಾಡಿದರು. ದೂರ ಪ್ರದೇಶಗಳಲ್ಲಿ ಯುದ್ದಗಳನ್ನು ಗೆದ್ದರು. ಹಲವರು ಓದಲು, ಬರೆಯಲು ಕಲಿತರು, ತಾಂತ್ರಿಕ ಪರಿಣತಿ ಪಡೆದರು. ಇದರಿಂದ ಬಿಳಿಯರು ಮಾತ್ರವೇ ಶ್ರೇಷ್ಟರೆಂಬುದು ಅಸಂಬದ್ಧವೆನಿಸಿತವರಿಗೆ. ಹೀಗಾಗಿ ಸ್ವಾತಂತ್ರ್ಯದ ವಿಚಾರಗಳನ್ನು ಅವರು ಅತ್ಯುತ್ಸಾಹದಿಂದ ಸ್ವಾಗತಿಸಿದರು. ಕ್ರಾಂತಿಕಾರಿ ವಿಚಾರಗಳನ್ನು ಹೊಂದಿರುವ ಕಾಮರ್ಿಕರ ಪಕ್ಷ ಮಾತ್ರವೇ ಪೂರ್ಣ ಸ್ವಾತಂತ್ರ್ಯ ಗಳಿಸಲು ಸಾಧ್ಯವೆಂದು ಅಲ್ಜಿರೀಯಾ ಸ್ವಾತಂತ್ರ್ಯ ಹೋರಾಟಗಾರರು ನಂಬಿದ್ದರು. ಆರಂಭಿಕ ಕಾಮರ್ಿಕ ಸಂಘಟನೆಗಳ ನಾಯಕರೆಲ್ಲ ಕಮ್ಯುನಿಸ್ಟರೇ ಆಗಿದ್ದು ಯೂರೋಪಿನ ಸಮಾಜವಾದಿ ಚಳುವಳಿಗಳೊಂದಿಗೆ ಸಂಪರ್ಕ ಹೊಂದಿದ್ದರು. ಭಾರತ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳು ರಾಷ್ಟ್ರೀಯ ವಿಮೋಚನಾ ಕ್ರಾಂತಿಗಳಲ್ಲಿ ಯಶಗಳಿಸಿದ್ದು ಮತ್ತು ರಷ್ಯಾ, ಚೀನಾ, ವಿಯೆಟ್ನಾಂ, ಉತ್ತರ ಕೊರಿಯಾಗಳು ಸಮಾಜವಾದಿ ರಾಷ್ಟ್ರಗಳಾಗಿ ಪರಿವರ್ತನೆಯಾದದ್ದು ಆಫ್ರಿಕಾದ ರಾಷ್ಟ್ರಗಳಿಗೆ ಮತ್ತಷ್ಟು ಪ್ರೇರಣೆ ನೀಡಿದವು. ವಿಮೋಚನಾ ಹೋರಾಟ ಸಮಯದಲ್ಲಿ ಆಫ್ರಿಕಾದ ಜನತೆಯು ಒಗ್ಗೂಡಲಾರಂಭಿಸಿದರು. ಅವರ ಸಾಮಾಜಿಕ ಪ್ರಜ್ಞೆಯು ಬೆಳೆಯತೊಡಗಿತು ಮತ್ತು ಬುದ್ದಿಮತ್ತೆಯ ಮಿಲಿಟರಿ ಕಮ್ಯಾಂಡರ್ಗಳು ಮತ್ತು ನಾಯಕರು ಉತ್ತುಂಗಕ್ಕೆ ಬರತೊಡಗಿದರು. ಆದರೂ ವಸಾಹತುಶಾಹಿ ಶಕ್ತಿಗಳ ಪ್ರಹಾರವನ್ನು ತಾಳಲಾರದೆ, ಆದಾಯ ಗಳಿಸುವ ಹಾದಿಗಳಿಲ್ಲದೆ ಹಸಿವು ಮತ್ತು ಹಲವು ರೋಗರುಜಿನಗಳಿಂದ ಲಕ್ಷೊಪಲಕ್ಷ ಸಂಖ್ಯೆಯ ಆಫ್ರಿಕನ್ನರು ಸಾವನ್ನಪ್ಪುತ್ತಿದ್ದರು. ರಪ್ತು-ಆಧಾರಿತ ಕೈಗಾರಿಕೆಗಳು ಹೆಚ್ಚಾದಂತೆ ಕಾರ್ಮಿಕ ಸಂಖ್ಯೆಯಲ್ಲಿ ಹೆಚ್ಚಳವಾಯಿತು. 1950ರ ದಶಕದಲ್ಲಿ 4.0 ಲಕ್ಷ ಸ್ವ-ಇಚ್ಚಾ ಕಾಮರ್ಿಕರಿದ್ದರೆ ಸುಮಾರು 3.8 ಲಕ್ಷ ಗುತ್ತಿಗೆ ಕಾರ್ಮಿಕರಿದ್ದರು ಎಂದು ಅಂಗೋಲಾದ ವಸಾಹತುಶಾಹಿ ಸರ್ಕಾರದ ವರದಿಗಳೇ ತಿಳಿಸುತ್ತವೆ. ಆಫ್ರಿಕಾದಾದ್ಯಂತ ಈ ಪ್ರಮಾಣದ ಗುತ್ತಿಗೆ ಕಾಮರ್ಿಕರ ಸಂಖ್ಯೆ ಸರ್ವ ಸಾಮಾನ್ಯವಾಗಿತ್ತು. ನಿಧಾನವಾಗಿ ಆಫ್ರಿಕಾದಲ್ಲಿ ತಳವೂರಿದ್ದ ವಸಾಹತು ವ್ಯವಸ್ಥೆಯು ಶಿಥಿಲಗೊಳ್ಳತೊಡಗಿತು. ಫ್ಯಾಸಿಸ್ಟ್ ರಾಷ್ಟ್ರಗಳ ಕೂಟವನ್ನು ಸೋವಿಯನ್ ಸೇನೆ ಮತ್ತು ಮೈತ್ರಿಕೂಟವು ಹೀನಾಯವಾಗಿ ಸೋಲಿಸಿದ್ದು ಆಫ್ರಿಕಾವು ರಾಜಕೀಯವಾಗಿ ಜಾಗೃತಗೊಳ್ಳಲು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿತು. ದ್ವಿತೀಯ ಮಹಾಯುದ್ದ ನಂತರದಲ್ಲಿ ವಸಾಹತು ರಾಷ್ಟ್ರಗಳಲ್ಲಿ ವಿಮೋಚನೆಗಾಗಿ ಹೋರಾಡುವ ರಾಜಕೀಯ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಇವುಗಳಿಗೆ ವ್ಯತಿರಿಕ್ತವಾಗಿ ವಸಾಹತು-ಪರ ಪಕ್ಷಗಳು ಮತ್ತು ಗುಂಪುಗಳನ್ನು ಸಹ ಸ್ಥಾಪಿಸಲಾಯಿತು. ಈ ಗುಂಪುಗಳು ಪ್ರಮುಖವಾಗಿ ಬಂಡವಾಳಗಾರರಾಗಿ ಪರಿವತರ್ಿತಗೊಂಡಿದ್ದ ಪಾಳೇಗಾರಿ ದೊರೆಗಳನ್ನು ಬೆಂಬಲಿಸುತ್ತಿದ್ದವು. ಆಫ್ರಿಕಾದ ರಾಷ್ಟ್ರಗಳಲ್ಲಿ ಸ್ವಾತಂತ್ರ್ಯ ಹೋರಾಟವು ವಿವಿಧ ರೂಪಗಳಲ್ಲಿತ್ತು. ಬಹುತೇಕ ವಸಾಹತುಗಳಲ್ಲಿ ಅದು ಪ್ರತಿಭಟನೆಗಳು, ಮುಷ್ಕರ ಮತ್ತು ನಾಗರೀಕ ಅಸಹಕಾರ ಚಳುವಳಿಯ ರೂಪದಲ್ಲಿತ್ತು. ಇನ್ನೂ ಕೆಲವು ರಾಷ್ಟ್ರಗಳಲ್ಲಿ ಬಂಡಾಯಗಳು, ಗೆರಿಲ್ಲಾ ಹೋರಾಟಗಳು ನಡೆದವು. ಈಜಿಪ್ಟ್ನಲ್ಲಿ ಸಶಸ್ತ್ರ ಹೋರಾಟಗಳು ಜರುಗಿದವು. ಆಫ್ರಿಕಾದ ವಿಮೋಚನೆಯಲ್ಲಿ ಪ್ರಧಾನ ಪಾತ್ರವಹಿಸಿದ ಅಂಶವೆಂದರೆ ಕಾರ್ಮಿಕ ಸಂಘಟನೆಗಳ ಬೆಳವಣಿಗೆ ಮತ್ತು ಅಭಿವೃದ್ಧಿ. 20ನೇ ಶತಮಾನದ ಪ್ರಾರಂಭದಲ್ಲಿ ವಸಾಹತುಶಾಹಿ ಶೋಷಣೆಯ ಸಂಕಷ್ಟಮಯ ಪರಿಸ್ಥಿತಿಯಿಂದಾಗಿ ಆಫ್ರಿಕಾದ ಕಾರ್ಮಿಕ ಸಂಘಟನೆಗಳು ಸೆಟೆದೆದ್ದು ಬಂದವು. ಮೊರಾಕೋ ಮತ್ತು ತುನೀಷಿಯಗಳಲ್ಲಿ ಬೆಳೆದು ಬಂದ ಸಶಸ್ತ್ರ ಚಳುವಳಿಯಿಂದಾಗಿ 1956ರಲ್ಲಿ ಫ್ರೆಂಚ್ ಸರಕಾರವು ಸ್ವಾತಂತ್ರ್ಯ ಘೋಷಿಸಬೇಕಾಯಿತು. ಇಟಲಿಯ ವಸಾಹತುವಾಗಿದ್ದ ಲಿಬ್ಯಾವನ್ನು ನಂತರ ಬ್ರಿಟಿಷ್ ಸೇನೆಗಳು ವಶಪಡಿಸಿಕೊಂಡವು. ಏಳು ವರ್ಷಗಳವರೆಗೆ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ 15 ಲಕ್ಷ ಜನರನ್ನು ಕಳೆದುಕೊಂಡಿದ್ದ ಅಲ್ಜಿರೀಯಾ ಅಂತಿಮವಾಗಿ 1962ರಲ್ಲಿ ಯಶಗಳಿಸಿತು. ಜ್ಯೂಲಿಯಸ್ ನೈರೇರೆಯವರು ಟಾಂಜೇನಿಯಾ ದೇಶದಲ್ಲಿ ತಾಂಗಾನಿಕಾ ಆಫ್ರಿಕನ್ ನ್ಯಾಷನಲ್ ಯೂನಿಯನ್ ಒಂದನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ನೀಡಿದರು. ಅವರು ಆ ದೇಶದ ಮೊದಲ ಅಧ್ಯಕ್ಷರೂ (1962-1985) ಆಗಿದ್ದರು. ಇಡಿ ಆಫ್ರಿಕಾಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕತ್ವ ನೀಡಿದರು. ಜಿಂಬಾಬ್ವೆ, ಮೊಜಾಂಬಿಕ್, ಅಂಗೋಲಾ ಮತ್ತು ಬಿಗಾಂಡಾದ ಸ್ವಾತಂತ್ರ್ಯ ಹೋರಾಟದ ಗೆರಿಲ್ಲಾ ನೆಲೆಗಳಿಗೆ ಸಹಾಯ ಒದಗಿಸಿದ್ದರು. ಬೆಲ್ಜಿಯನ್ ಕಾಂಗೋ (ಪ್ರಸ್ತುತ ಝೈರೇ) ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮುಂಚೂಣಿ ನಾಯಕತ್ವ ನೀಡಿದವರೆಂದರೆ ಪ್ಯಾಟ್ರಿಕ್ ಲೂಮುಂಬಾ ರವರು. 1959ರಲ್ಲಿ ಬೆಲ್ಜಿಯಂ ಸಕರ್ಾರವು ಕಾಂಗೋ ದೇಶಕ್ಕೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ತಮ್ಮ ಬಾಲಂಗೋಚಿಗಳಿಗೆ ನೀಡುವ ಪ್ರಯತ್ನವನ್ನು ಲೂಮುಂಬಾ ನಾಯಕತ್ವದ ಪಕ್ಷವು ವಿರೋಧಿಸಿತು. ತೀವ್ರ ಚಳುವಳಿಗಳಿಂದಾಗಿ ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಲೂಮುಂಬಾ ಪ್ರಧಾನಮಂತ್ರಿಯಾದರೂ ಪ್ರತ್ಯೇಕತಾವಾದದ ದನಿಯೆತ್ತಿ ಬಂಡಾಯ ಸಾರಿದ ಕಟಿಂಗಾ ಪ್ರಾಂತ್ಯಕ್ಕೆ ಬೆಂಬಲವಾಗಿ ಬೆಲ್ಜಿಯನ್ ಸೇನೆ ನಿಂತಿತು. ಇದರ ವಿರುದ್ದ ಲೂಮುಂಬಾ ವಿಶ್ವ ಸಂಸ್ಥೆಗೆ ದೂರಿತ್ತರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂದಿನ ಅಧ್ಯಕ್ಷ ಈಸಬವು ಲೂಮುಂಬಾ ಸಕರ್ಾರವನ್ನು ವಜಾ ಮಾಡಿದರು. ಈ ಅವಕಾಶ ಬಳಸಿಕೊಂಡು ಮಿಲಿಟರಿ ನಾಯಕರು ಅಧಿಕಾರ ಗ್ರಹಣ ಮಾಡಿದರು. ನಂತರದಲ್ಲಿ ಲೂಮುಂಬಾರನ್ನು ಹತ್ಯೆ ಮಾಡಲಾಯಿತು. ಇದರ ಹಿಂದೆ ಅಮೇರಿಕಾದ ಗೂಢಾಚಾರ ಸಂಸ್ಥೆ ಸಿಐಎ ಯ ಪ್ರಧಾನ ಪಾತ್ರವಿದೆ ಎನ್ನಲಾಗುತ್ತದೆ. ಘಾನಾದಲ್ಲಿ ಮುಂಚೂಣಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಕ್ವಾಮೆ ಎನ್ ಕ್ರೂಮಾರವರು ಸ್ವತಂತ್ರ ಘಾನಾದ ಅಧ್ಯಕ್ಷರಾದರು. ಅವರು ಇಡೀ ಆಫ್ರಿಕಾವನ್ನು ಸಾಮ್ರಾಜ್ಯಶಾಹಿ-ವಸಾಹತುಶಾಹಿಯಿಂದ ಬಿಡುಗಡೆ ಮಾಡುವ ಉದ್ದೇಶದಿಂದ ಆಫ್ರಿಕಾದ ಐಕ್ಯತೆಗಾಗಿ ಶ್ರಮಿಸಿದರು. ಈ ನಿಟ್ಟಿನಲ್ಲಿ ಅವರು ಹಲವು ರಾಷ್ರಗಳ ಬೆಂಬಲ ಗಳಿಸಿ ಆಫ್ರಿಕಾ ಐಕ್ಯತಾ ಸಂಘಟನೆ (ಓಎಯು) ನ್ನು 1963ರಲ್ಲಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1960ರ ಹೊತ್ತಿಗೆ 17 ರಾಷ್ಟ್ರಗಳು ಸ್ವತಂತ್ರಗೊಂಡವು. 1970ರ ಹೊತ್ತಿಗೆ ಬಹುತೇಕ ರಾಷ್ಟ್ರಗಳು ಸ್ವಾತಂತ್ರ್ಯ ಪಡೆದವು. 1961ರಲ್ಲಿ ಅಂಗೋಲಾದಲ್ಲಿ, 1964ರ್ಲಿ ಜುನಿಯಾ ಮತ್ತು 1964ರಲ್ಲಿ ಮೊಜಾಂಬಿಕ್ಗಲ್ಲಿ ಪೋರ್ಚುಗೀಸರ ವಿರುದ್ದ ಸಶಸ್ತ್ರ ಹೋರಾಟ ನಡೆಯಿತು. ಆಫ್ರಿಕಾದ ದಕ್ಷಿಣ ಭಾಗದಲ್ಲಿ ಯಥೇಚ್ಛವಾದ ಖನಿಜ ಸಂಪತ್ತು ದೊರೆಯುತ್ತಿದ್ದರಿಂದ ಪಶ್ಚಿಮ ರಾಷ್ಟ್ರಗಳ ಕಣ್ಣೆಲ್ಲ ಅಲ್ಲಿತ್ತು. 1960ರ ದಶಕದಿಂದೀಚೆಗೆ ದಕ್ಷಿಣ ಆಫ್ರಿಕಾದೊಂದಿಗೆ ಹೆಚ್ಚು ಬಂಡವಾಳ ಹೂಡುವ ಮತ್ತು ವ್ಯಾಪಾರ ಬಾಂಧವ್ಯ ಹೊಂದಿದ್ದ ಬ್ರಿಟನ್, ಅಮೇರಿಕಾಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿತು. ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಗಳು ಜಿಂಬಾಬ್ವೆ, ಅಂಗೋಲಾ, ಮೊಜಾಂಬಿಕ್ ಮತ್ತು ನಮೀಬಿಯಾದ ಭೂಭಾಗಗಳಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿದ್ದವು. ಜಿಂಬಾಬ್ವೆ ಮತ್ತು ನಮೀಬಿಯಾಗಳಲ್ಲಿ ಗೆರಿಲ್ಲಾ ಯುದ್ದ ಚಟುವಟಿಕೆಗಳು ತೀವ್ರ ಸ್ವರೂಪ ಪಡಕೊಂಡದ್ದರಿಂದ ಅಲ್ಲಿ ಚುನಾವಣೆ ನಡೆಸಲು ಅಮೇರಿಕಾ ಒಪ್ಪದೆ ಅನ್ಯ ಮಾರ್ಗವಿರಲಿಲ್ಲ. 1975ರಲ್ಲಿ ಅಂಗೋಲಾವು ಸ್ವತಂತ್ರ ಗಳಿಸಿತು. ಸ್ವಾತಂತ್ರ್ಯಗೊಂಡ ಬಳಿಕ ಅಂಗೋಲಾದಲ್ಲಿ ಮಾಕ್ಸರ್್ವಾದಿ ಪಕ್ಷವು ಅಧಿಕಾರಕ್ಕೆ ಬಂದಿತು. ಆದರೆ ಕೆಲವೇ ವರ್ಷಗಳಲ್ಲಿ ಜೋನಾಸ್ ಸವಿಂಬಿ ಎಂಬುವನ ನಾಯಕತ್ವದಲ್ಲಿ ಯೂನಿಟಾ ಎಂಬ ಹೆಸರಿನ ಚಳುವಳಿಯು ಆರಂಭಗೊಂಡು ಹೊಸ ಸಕರ್ಾರದ ವಿರುದ್ದ ಗೆರಿಲ್ಲಾ ಯುದ್ದ ನಡೆಸಿತು. ಈ ಚಳುವಳಿಗೆ ಬಿಳಿಯ ಜನಾಂಗದ ನೇತೃತ್ವ ಹೊಂದಿದ್ದ ದಕ್ಷಿಣ ಆಫ್ರಿಕಾ ಸಕರ್ಾರವು ಸೇರಿದಂತೆ ಅಮೇರಿಕಾ ಮತ್ತು ಯೂರೋಪ್ ರಾಷ್ರಗಳು ಬೆಂಬಲ ನೀಡಿದ್ದವು. ಅಂಗೋಲಾದ ಸಕರ್ಾರವನ್ನು ರಕ್ಷಿಸುವ ಸಲುವಾಗಿ ಕ್ಯೂಬಾ ಮತ್ತು ಸೋವಿಯತ್ ರಷ್ಯಾ ನೆರವು ನೀಡಿದವು. ಆದರೂ 1991 ರ ಸಂಧಾನಗಳು ಮತ್ತು 1992ರ ಚುನಾವಣೆಗಳು ಕೂಡ ಈ ನಾಗರೀಕ ಯುದ್ದವನ್ನು ಕೊನೆಗಾಣಿಸುವಲ್ಲಿ ವಿಫಲವಾದವು. 1998-99 ರ ಹೊತ್ತಿಗೆ ಅಂಗೋಲಾದ ಶೇ. 60ರಷ್ಟು ಪ್ರದೇಶದ ಮೇಲೆ ಯೂನಿಟಾ ಸಂಘಟನೆಯು ನಿಯಂತ್ರಣದ ಹೊಂದಿದ್ದು, ಗಂಭೀರವಾದ ಹೋರಾಟಗಳು ನಡೆದು ತೀವ್ರ ಸ್ವರೂಪ ಪಡೆದುಕೊಂಡಿದ್ದವು. ಅಂಗೋಲಾದ ಸೇನೆಯು ಯೂನಿಟಾ ನೆಲೆಗಳ ಮೇಲೆ ಬೃಹತ್ ಪ್ರಮಾಣದ ದಾಳಿ ನಡೆಸಿ ಶತ್ರುಪಡೆಗಳನ್ನು ಬಹುತೇಕ ಧ್ವಂಸಗೊಳಿಸಿತು. ಆದರೂ, 2002ರಲ್ಲಿ ಸವಿಂಬಿಯು ಮರಣಗೊಂಡ ನಂತರವಷ್ಟೆ ನಾಗರೀಕ ಯುದ್ದವು ಅಂತ್ಯಕಂಡಿತು. ಯೂನಿಟಾ ಸಂಘಟನೆಯು ತನ್ನ ಸೇನೆಯನ್ನು ನಾಶ ಮಾಡಿ ತಾನೊಂದು ರಾಜಕೀಯ ಪಕ್ಷವೆಂದು ಘೋಷಿಸಿಕೊಂಡಿತು. ಅಂಗೋಲಾದಲ್ಲಿ ಕಳೆದ 25 ವರ್ಷಗಳಲ್ಲಿ ನಡೆದ ನಿರಂತರ ನಾಗರೀಕ ಯುದ್ದಗಳಿಂದಾಗಿ 15ಲಕ್ಷಕ್ಕೂ ಹೆಚ್ಚು ಮಂದಿ ಮರಣಹೊಂದಿದ್ದಾರೆ. ದಕ್ಷಿಣ ಆಫ್ರಿಕಾದ ಬಿಳಿಯರ ಸಕರ್ಾರವು ನಮೀಬಿಯಾವನ್ನು ಆಕ್ರಮಿಸಿಕೊಂಡಿತ್ತು. ದಕ್ಷಿಣ ಆಫ್ರಿಕಾ ಸೇನೆಯ ವಿರುದ್ದ ನೈರುತ್ಯ ಪೊಲೀಸ್ ಸಂಘಟನೆಯು ಸ್ಯಾಮ್ ನೂಜೋಮಾರವರ ನಾಯಕತ್ವದಲ್ಲಿ ಅವಿರತ ಹೋರಾಟ ನಡೆಸಿತು. ಇದರ ಫಲವಾಗಿ ಸ್ಯಾಮ್ ನೂಜೋಮಾರವರು 1990ರಲ್ಲಿ ಸ್ವಾತಂತ್ರ್ಯ ಗಳಿಸಿದ ನಮೀಬಿಯಾದ ಅಧ್ಯಕ್ಷರಾಗಿ ಆಯ್ಕೆಯಾದರು. ನಮೀಬಿಯಾವು ಅಂಗೋಲಾ ಸಕರ್ಾರದೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿನ ಬಂಡುಕೋರ ಯೂನಿಟಾ ಸಂಘಟನೆಯ ವಿರುದ್ದ ಹೋರಾಡಲು ಬೆಂಬಲ ನೀಡಿತು. ಯೂನಿಟಾ ಸೇನೆಯ ಮೇಲೆ ದಾಳಿ ನಡೆಸಲು ನಮೀಬಿಯಾ ತನ್ನ ಭೂನೆಲೆಗಳನ್ನು ಅಂಗೋಲಾ ಸೇನೆಗೆ ನೀಡಿತು. ಅಂಗೋಲಾದ ಯುದ್ದದಿಂದಾಗಿ ಸಾವಿರಾರು ಸಂಖ್ಯೆಯ ನಿರಾಶ್ರಿತರು ನಮೀಬಿಯಾದಲ್ಲಿ ಆಶ್ರಯ ಪಡೆದರು. 2001ರಲ್ಲಿ ಸುಮಾರು 30,000 ಅಂಗೋಲಾ ನಿರಾಶ್ರಿತರು ನಮೀಬಿಯಾದಲ್ಲಿದ್ದರು. ನಮೀಬಿಯಾದಲ್ಲಿ ಶೇ. 20ರಷ್ಟು ಜನತೆ ಶೇ. 75ರಷ್ಟು ಭೂಮಿಯನ್ನು ಹೊಂದಿದ್ದಾರೆ. ಭೂಸುಧಾರಣೆಯು ಅತ್ಯಂತ ಪ್ರಮುಖವಾದ ವಿಷಯವಾಗಿದ್ದು ತೀರಾ ನಿಧಾನಗತಿಯಲ್ಲಿ ಭೂಸುಧಾರಣಾ ಕಾರ್ಯವು ಸಾಗುತ್ತಿದೆ. 2003ರಲ್ಲಿ ಹಿಫಿಕೆಪುನ್ಯೆ ಪೊಹಂಬಾರವರು ನಮೀಬಿಯಾದ ಅಧ್ಯಕ್ಷರಾಗಿ ಚುನಾಯಿತರಾದರು. ದಕ್ಷಿಣ ಆಫ್ರಿಕಾ ವರ್ಣಭೇಧ ನೀತಿಯಿರುವ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ಜನಾಂಗವು ಸಾಮ್ರಾಜ್ಯಶಾಹಿ ರಾಷ್ಟ್ರಗಳಾದ ಅಮೇರಿಕಾ, ಇಂಗ್ಲೆಂಡ್, ಮತ್ತು ಜರ್ಮನಿಗಳಿಂದ ಬೆಂಬಲ ಪಡೆದಿತ್ತು. ದಕ್ಷಿಣ ಆಫ್ರಿಕಾದ ಸಾಮಾಜಿಕ ಮತ್ತು ಆಥರ್ಿಕ ರಚನೆ ಹೇಗಿತ್ತೆಂದರೆ, ಅದು ವಸಾಹತುವಾಗಿರದಿದ್ದರೂ, ವಿದೇಶಿ ಬಿಳಿಯ ಜನಾಂಗವು ಸಣ್ಣ ಸಂಖ್ಯೆಯಲ್ಲಿದ್ದರೂ, ಬಹುಸಂಖ್ಯಾತ ಜನತೆಯನ್ನು ದಮನ ಮಾಡುತ್ತಿತ್ತು. ಆ ದೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡದ್ದು ದೂರದಲ್ಲೆಲ್ಲೂ ಇರುವ ಅನ್ಯರಾಷ್ಟ್ರವಾಗಿರದೆ, ತನ್ನದೇ ಗಡಿಯೊಳಗಿರುವ ಬಿಳಿಯ ಜನಾಂಗವಾಗಿತ್ತು. ದಕ್ಷಿಣ ಆಫ್ರಿಕಾದ ಕಾಮರ್ಿಕರ ಸಂಖ್ಯೆಯು ಹೆಚ್ಚಳಗೊಂಡಂತೆ ಸ್ವಾತಂತ್ರ್ಯಕ್ಕಾಗಿ ಮುಷ್ಕರಗಳನ್ನು ನಡೆಸಲಾಯಿತು. ಇದರೊಂದಿಗೆ ಸ್ಟೀವ್ ಬೈಕೊರವರ ಕಪ್ಪು ಜನಾಂಗದ ಪ್ರಜ್ಞೆಯ ಚಳುವಳಿ ಮತ್ತು ವಿದ್ಯಾಥರ್ಿ ನೇತೃತ್ವದ ಚಳುವಳಿಗಳು ತೀವ್ರಗೊಂಡವು. 1985ರಲ್ಲಿ ದಕ್ಷಿಣ ಆಫ್ರಿಕಾ ಕಾಮರ್ಿಕ ಸಂಘಟನೆಗಳ ಒಕ್ಕೂಟವನ್ನು (ಕೊಸಾಟು) ಸ್ಥಾಪಿಸಲಾಯಿತು. ಇದು ಸ್ವಾತಂತ್ರ್ಯ ಚಳುವಳಿಗೆ ಇನ್ನಿಲ್ಲದಂಥ ಸೆರ್ಯ ನಿಡಿತು. ಈ ಒಕ್ಕೂಟವು ಒಂದು ಮಾದರಿ ಸಂಘಟನೆಯಾಗಿ ನಮೀಬಿಯಾ, ಜಾಂಬಿಯಾ, ಜಿಂಬಾಬ್ವೆ ಮತ್ತು ಸ್ವಾಜಿಲ್ಯಾಂಡ್ ಗಳಲ್ಲಿನ ಕಾಮರ್ಿಕ ಸಂಘಟನೆಗಳಿಗೆ ನೇರವಾದ ನೆರವು ಮತ್ತು ನಿದರ್ೇಶನಗಳನ್ನು ನೀಡಿತು. ಆದರೂ ದಕ್ಷಿಣ ಆಫ್ರಿಕಾ ಸಕರ್ಾರದ ನಾಯಕನಾಗಿದ್ದ ಪಿ.ಡಬ್ಲ್ಯೂ ಬೋಥಾನು ಇದಕ್ಕೆ ಮಣಿಯದೆ ತುತರ್ು ಪರಿಸ್ಥಿತಿ ಹೇರಿದನು. ಧೃತಿಗೆಡದ ಕಾಮರ್ಿಕರ ನೇತೃತ್ವದಲ್ಲಿ ಜನರು ಬೀದಿಗಳಲ್ಲಿ ಹೆಚ್ಚೆಚ್ಚು ನೆರೆಯಲಾರಂಭಿಸಿದರು, ಕಾಖರ್ಾನೆಗಳು ಮುಷ್ಕರದಿಂದ ಗರಬಡಿದಂತೆ ನಿಂತವು. ವರ್ಣಭೇದ ನೀತಿಯನ್ನು ಹತ್ತಿಕ್ಕುವಂತೆ ಮತ್ತು ಕರಿಯರಿಗೂ ಕೂಡ ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ದಕ್ಷಿಣ ಆಫ್ರಿಕಾದ ಜನತೆಯೂ ಸೇರಿದಂತೆ ಪ್ರಪಂಚದ ಎಲ್ಲ ಮೂಲೆಗಳಿಂದ ಒತ್ತಡ ಬರಲಾರಂಭಿಸಿತು. ಹಲವು ದೇಶಗಳು ಆಥರ್ಿಕ ದಿಗ್ಪ್ಬಂಧನ ವಿಧಿಸಿದವು. 1989ರಲ್ಲಿ ಪಿ.ಡಬ್ಲ್ಯೂ ಬೋಥಾರವರ ಸ್ಥಾನದಲ್ಲಿ ಎಫ್ ಡಬ್ಲ್ಯೂ ಡಿ ಕ್ಲಕರ್್ ಎಂಬುವನು ಅಧ್ಯಕ್ಷನಾದನು. ಒಂದೆಡೆ, ನೆಲ್ಸನ್ ಮಂಡೇಲಾ, ಆಲಿವರ್ ಟ್ಯಾಂಬೊ, ಮತ್ತು ವಾಲ್ಟರ್ ಸಿಸುಲು ರವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸಂಘಟನೆಗೆ ನಾಯಕತ್ವ ನೀಡಿದ್ದರು. 1990ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮತ್ತು ದಕ್ಷಿಣ ಆಫ್ರಿಕಾದ ಕಮ್ಯುನಿಸ್ಟ್ ಪಕ್ಷಗಳ ಮೇಲೆ ವಿಧಿಸಿದ್ದ ನಿರ್ಬಂಧವನ್ನು ರದ್ದುಗೊಳಿಸಲಾಯಿತು. ಇದರೊಂದಿಗೆ ಈ ಪಕ್ಷಗಳು ತಮ್ಮ ಹಿಂಸಾತ್ಮಕ ಹೋರಾಟವನ್ನು ಕೈಬಿಟ್ಟವು. ಮತ್ತೊಂದೆಡೆ, ಈ ಒತ್ತಡದ ಪರಿಣಾಮ 1990ರ ಹೊತ್ತಿಗೆ ವರ್ಣ ಭೇದ ನೀತಿಯ ವಿರುದ್ದ ಹೋರಾಡುತ್ತಿದ್ದ ನೇತಾರ ನೆಲ್ಸನ್ ಮಂಡೇಲಾರನ್ನು ಬಿಡುಗಡೆ ಮಾಡಿ ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. 1994ರಲ್ಲಿ ನಡೆದ ಚುನಾವಣೆಯಲ್ಲಿ ನೆಲ್ಸನ್ ಮಂಡೇಲಾ ನೇತೃತ್ವದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ನ್ಯಾಷನಲ್ ಪಕ್ಷ ಮತ್ತು ಇಂಕತ ಫ್ರೀಡಂ ಪಕ್ಷಗಳೊಂದಿಗೆ ಒಡಗೂಡಿ ಮೈತ್ರಿ ಸಕರ್ಾರವನ್ನು ರಚಿಸಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ಹೊಸ ಸಕರ್ಾರವು ಜುಲು ಎಂಬ ಅಲ್ಪಸಂಖ್ಯಾತ ಜನತೆಯ ಹಿತಕಾಯಲಾರದೆಂದು ಇಂಕತ ಫ್ರೀಡಂ ಪಕ್ಷವು 1996ರಲ್ಲಿ ತನ್ನ ಬೆಂಬಲವನ್ನು ವಾಪಸು ಪಡೆದುಕೊಂಡಿತು. ಈ ಪಕ್ಷದ ನಾಯಕ ಮಾಂಗೊಸುತು ಬುತೆಲೆಜಿಯ ನೇತೃತ್ವದಲ್ಲಿ ಜುಲು ಜನಾಂಗದ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಜನಾಂಗೀಯ ಘರ್ಷನೆಗಳು ನಡೆದವು. 1999ರಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಜಯಭೇರಿ ಬಾರಿಸಿ ಶೇಕಡಾ 66ರಷ್ಟು ಮತ ಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ತಬೋ ಮುಬೆಕಿ ಯವರು ಆಫ್ರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ 2004ರಲ್ಲಿ ನಡೆದ ಚುನಾವಣೆಯಲ್ಲೂ ಕೂಡ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಜಯಗಳಿಸಿದರೂ ಸಂವಿಧಾನಕ್ಕೆ ತಿದ್ದುಪಡಿ ತರಲು ಅವಶ್ಯವಿರುವ ಮೂರನೇ ಎರಡರಷ್ಟು ಸ್ಥಾನಗಳನ್ನು ಗಳಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಕಮ್ಯುನಿಸ್ಟ್ ಪಕ್ಷವು ಕಾಮರ್ಿಕ ಸಂಘಟನೆಗಳ ಚಳುವಳಿ ಮತ್ತು ಹೋರಾಟಗಳ ಮೂಲಕ ತನ್ನ ಪ್ರಭಾವವನ್ನು ವಿಸ್ತೃತಗೊಳಿಸುತ್ತಿದೆ. ವಸಾಹತು ರಾಷ್ಟ್ರಗಳು ರಾಜಕೀಯ ಸ್ವಾತಂತ್ರ್ಯ ಪಡೆದದ್ದೇನೂ ವಸಾಹತುಶಾಹಿಯು ಅಂತಿಮ ಸೋಲನುಭವಿಸಿತು ಎಂದೇನಲ್ಲ. ಆದರೆ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಹೊಸ ರೂಪದ ವಸಾಹತು ನೀತಿಯನ್ನು ಜನತೆಗಳ ಮೇಲೆ ಹರಿಯಬಿಟ್ಟಿತು. ಸಾಲ ನಿಧಿ ಮತ್ತು ಇನ್ನಿತರ ಹೆಸರಿನಲ್ಲಿ ಆಥರ್ಿಕ ಗುಲಾಮಗಿರಿಯನ್ನು ಆಧುನಿಕ ನಾಗರೀಕ ಚೌಕಟ್ಟಿಗೆ ಅಳವಡಿಸಿತು. ಆಫ್ರಿಕಾದ ಜನತೆಯಲ್ಲಿ ಬೇರೂರಿರುವ ಆಥರ್ಿಕ ಹಿಂದುಳಿಕೆ, ಅಸ್ಥಿರ ರಾಜಕೀಯ, ತಂತ್ರಜ್ಞರ ಕೊರತೆ, ಮತ್ತು ಮಿಲಿಯಗಟ್ಟಲೆ ಜನರ ಪ್ರಜ್ಞೆಯಲ್ಲಿ ಬುಡಕಟ್ಟು ಸಿದ್ದಾಂತದ ಪ್ರಭಾವ - ಈ ದೌರ್ಬಲ್ಯಗಳನ್ನು ಬಳಸಿಕೊಂಡು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಹೆಚ್ಚೆಚ್ಚು ಶೋಷಿಸಿಲಾರಂಭಿಸಿದವು. ರಾಷ್ಟ್ರೀಯ ವಿಮೋಚನಾ ಚಳುವಳಿಗಳನ್ನು ವಿಭಜಿಸಲು ಯತ್ನಿಸಿದವು. ಇದಕ್ಕೆ ಉದಾಹರಣೆಯೆಂದರೆ ಪ್ರ್ಯಾಟ್ರಿಸ್ ಲುಮುಂಬಾ ನೇತೃತ್ವದ ಕಾಂಗೋ ಸಕರ್ಾರದ ಪ್ರಗತಿಪರ ನೀತಿಗಳ ವಿರುದ್ದ ವಿದೇಶಿ ಶಕ್ತಿಗಳು ಆಕ್ರಮಣ ಮಾಡಿದ್ದು. ಆಫ್ರಿಕಾ ಒಕ್ಕೂಟದ ರಾಷ್ಟ್ರಗಳ ಸಕರ್ಾರವನ್ನು ನಿರಂತರವಾಗಿ ಅಸ್ಥಿರಗೊಳಿಸುತ್ತಾ ಕೈಗೊಂಬೆ ಸಕರ್ಾರಗಳನ್ನು ಸ್ಥಾಪಿಸಲು ಯತ್ನಿಸಿದವು. ಆಂಗ್ಲೋ-ಫ್ರೆಂಚ್-ಇಸ್ತ್ರೇಲ್ ದಾಳಿ ವಿರುದ್ದ ಈಜಿಪ್ಟಿನ ಜನತೆಯು ಜಯಗಳಿಸುವಲ್ಲಿ ಸೋವಿಯತ್ ಒಕ್ಕೂಟದ ಬೆಂಬಲವು ನಿಣರ್ಾಯಕವಾಗಿತ್ತು. 1970ರ ಹೊತ್ತಿಗೆ ಸೋವಿಯತ್ ರಷ್ಯಾವು 34 ಆಫ್ರಿಕನ್ ರಾಷ್ಟ್ರಗಳೊಡನೆ ಸಂಬಂಧ ಬೆಳೆಸಿತ್ತು. ಆಥರ್ಿಕ, ತಾಂತ್ರಿಕ ಮತ್ತು ಇನ್ನಿತರ ನೆರವನ್ನು ಅದು ನೀಡಿತ್ತು. ಅದರ ನೆರವಿಂದಾಗಿ ಆಫ್ರಿಕಾದಲ್ಲಿ ಸ್ವತಂತ್ರಗೊಂಡ ರಾಷ್ಟ್ರಗಳ ಅಧಿಕಾರದಡಿಯಲ್ಲಿ ಪ್ರಥಮ ಬಾರಿಗೆ 125 ಕೈಗಾರಿಕಾ ಘಟಕಗಳು ಸೇರಿದಂತೆ 320 ವಾಣಿಜ್ಯ ಘಟಕಗಳನ್ನು ನಿಮರ್ಿಸಲಾಯಿತು. ಆ ಸಮಯದಲ್ಲಿ 5,000 ಕ್ಕೂ ಮೀರಿ ಆಫ್ರಿಕನ್ ವಿದ್ಯಾಥರ್ಿಗಳು ಸೋವಿಯತ್ ರಷ್ಯಾದಲ್ಲಿ ಅಭ್ಯಸಿಸುತ್ತಿದ್ದರು. 1970ರ ಹೊತ್ತಿಗೆ ಸ್ವತಂತ್ರ ಆಫ್ರಿಕನ್ ರಾಷ್ಟ್ರಗಳ ಸಂಖ್ಯೆಯು 41 ನ್ನು ಮುಟ್ಟಿತು. ಆಫ್ರಿಕಾದ ರಾಜಕೀಯ ಹಾದಿ ಮತ್ತು ಸ್ವಾತಂತ್ರ್ಯಾ ನಂತರದ ಆಫ್ರಿಕಾ ಆಫ್ರಿಕಾದಲ್ಲಿ ದುಡಿಯುವ ವರ್ಗವು ಸಣ್ಣ ವಿಭಾಗವಾಗಿತ್ತು. ರಾಜಕೀಯ ಅಧಿಕಾರವು ಸಣ್ಣ ಪುಟ್ಟ ಬಂಡವಾಳಿಗರ ಕೈಯಲ್ಲಿತ್ತು. ಆಫ್ರಿಕಾದ ಹಲವು ದೇಶಗಳು ಪ್ರಮುಖವಾಗಿ ಮೂರು ಸೈದ್ದಾಂತಿಕ ರಾಜಕೀಯ ಕವಲು ಹಾದಿಯಲ್ಲಿ ಮುನ್ನಡೆದವು. ಮೊದಲ ಎರಡು ವಿಭಾಗದಲ್ಲಿ ಸಮಾನತೆಯುಳ್ಳ ಸಮಾಜ ನಿಮರ್ಾಣಕ್ಕಾಗಿ ದೂರದೃಷ್ಟಿ ಹೊಂದಿದ್ದ ನಾಯಕರನ್ನು ಕಾಣಬಹುದಾಗಿದೆ. ಈ ನಾಯಕರು ಸಮಾನತೆ ಮತ್ತು ಸ್ವಾವಲಂಬನೆಗೆ ಮಹತ್ವ ನೀಡಿದರು. ತಮ್ಮ ದೇಶದ ಆಥರ್ಿಕತೆಯನ್ನು ವಸಾಹತುಶಾಹಿಯ ಸರಪಳಿಯಿಂದ ಬಂಧಮುಕ್ತಗೊಳಿಸಲು ಆಸ್ಥೆ ವಹಿಸಿದರು. ಮೊದಲನೆಯದಾಗಿ ಆಫ್ರೋ-ಮಾಕ್ಸರ್್ವಾದಿ ಸಿದ್ದಾಂತದಲ್ಲಿ ಕೆಲಮಟ್ಟಿಗೆ ನಂಬಿಕೆಯಿಟ್ಟಿದ್ದ ರಾಷ್ಟ್ರಗಳೆಂದರೆ: ಅಂಗೋಲಾ, ಇಥಿಯೋಪಿಯಾ, ಜಿನಿಯಾ ಬಿಸ್ಸಾವು, ಕೇಪ್ ವಡರ್್ ಮತ್ತು ಪ್ರಿನ್ಸಿಪ್ ದ್ವೀಪಗಳು, ಮೊಜಾಂಬಿಕ್, ಬಿನಿನ್, ಮಲಗಯ್, ಸೋಮಾಲಿಯಾ, ಬುಕರ್ಿನಾಫಾಸೋ ಮತ್ತು ಕಾಂಗೋ. ಇದರ ಪ್ರತಿಪಾದಕರು ತಮ್ಮ ಸಿದ್ದಾಂತವನ್ನು ವಸಾಹತು-ಪೂರ್ವ ಆಫ್ರಿಕಾದ, ಪ್ರಮುಖವಾಗಿ ಆಸ್ತಿಯ ಮೇಲೆ ಸಾಮೂಹಿಕ ಒಡೆತನ ಹೊಂದಿದ್ದ ಆದಿಮ ಕಮ್ಯುನಿಸ್ಟ್ ಸಮಾಜದ ದೃಷ್ಟಿಕೋನ ಹೊಂದಿದ್ದರು. ಆದರೆ ವಸಾಹತುಶಾಹಿಯು ಆಫ್ರಿಕಾದ ಸಮಾಜದೊಳಗೆ ಮಾಡಿದ್ದ ಮಾಪರ್ಾಡುಗಳನ್ನು ಮತ್ತು ಸಮಾಜದ ವಿಭಜನೆಯನ್ನು ಇವರು ಕಡೆಗಣಿಸಿದ್ದರು. ಈ ಸಿದ್ದಾಂತವು ಯಾವುದೇ ಕಾಮರ್ಿಕ ಚಳುವಳಿಯ ವಿಸéರಣೆಯಾಗಿರದೆ ರಾಷ್ಟ್ರೀಯ ವಿಮೋಚನೆ, ಪ್ರಜಾಸತ್ತಾತ್ಮಕ ಚಳುವಳಿಗಳು ಮತ್ತು ವಸಾಹತುಶಾಹಿ-ವಿರೋಧಿ ಚಳುವಳಿಯೊಂದಿಗೆ ಮೂಡಿಬಂದಿತು. ಎರಡನೆಯದಾಗಿ, ಮಾಕ್ಸರ್್ವಾದಿ-ಸಮಾಜವಾದಿಗಳೆಂದು ಕರೆಯಲ್ಪಡುತ್ತಿದ್ದ ರಾಷ್ಟ್ರಗಳೆಂದರೆ: ಟ್ಯಾಂಜೇನಿಯಾ(ಜೂಲಿಯಸ್ ನ್ಯೇರೇರೆ), ಘಾನಾ(ಕ್ವಾಮೆ ಎನ್ಕ್ರೂಮಾ), ಜಾಂಬಿಯಾ(ಕೆನೆತ್ ಕೌಂಡ), ಜಿಂಬಾಬ್ವೆ (ರಾಬಟರ್್ ಮುಗಾಬೆ), ಜಿನಿಯಾ(ಸಿಕಾವೊ ಟೌರೆ), ಮತ್ತು ಉಗಾಂಡಾ(ಮಿಲ್ಟನ್ ಒಬೊಟು). ಮಾಕ್ಸರ್್ವಾದಿ-ಸಮಾಜವಾದಿಗಳು ಮಾಕ್ಸ್ವಾದ-ಲೆನಿನ್ವಾದವನ್ನು ಒಪ್ಪಿ ತಮ್ಮ ನಿರ್ಣಯಗಳನ್ನು ಕೆಲಮಟ್ಟಿಗೆ ವಿಶ್ವದ ಮುಂಚೂಣಿ ಕಮ್ಯುನಿಸ್ಟ್ ರಾಷ್ಟ್ರಗಳಾದ ಯುಎಸ್ಎಸ್ಆರ್, ಕ್ಯೂಬಾ, ವಿಯೆಟ್ನಾಂ ಮತ್ತು ಚೀನಾ ದೇಶಗಳ ನಿಲುಮೆಯ ಆಧಾರದಲ್ಲಿ ಕೈಗೊಳ್ಳುತ್ತಿದ್ದವು. 1970 ರ ದಶಕದ ಕೊನೆಯ ಹೊತ್ತಿಗೆ ಇಥಿಯೋಪಿಯಾ, ಅಂಗೋಲಾ ಮತ್ತು ಮೊಜಾಂಬಿಕ್ಗಳಲ್ಲಿ ಸಮಾಜವಾದಿ ಅಥವಾ ಮಾಕ್ಸರ್್ವಾದಿ ಗುಂಪುಗಳು ಜಯಗಳಿಸಿದ ನಂತರ ತಮ್ಮ ಹಿತಾಸಕ್ತಿಗೆ ಪೆಟ್ಟುಬೀಳುವುದೆಂದು ಪಾಶ್ಚಿಮಾತ್ಯ ದೇಶಗಳಿಗೆ ನಡುಕ ಉಂಟಾಗಿತ್ತು. ಸೋಮಾಲಿಯಾ, ನಮೀಬಿಯಾ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಸಹ ಅದೇ ಹಾದಿ ತುಳಿಯುವ ಎಲ್ಲ ಸಾಧ್ಯತೆಗಳೂ ಇದ್ದವು. ಆಫ್ರಿಕಾದ ಸಮಾಜವಾದಿಗಳು ಮತ್ತು ಮಾಕ್ಸರ್್ವಾದಿಗಳು ತಮ್ಮ ಮುಂದಿದ್ದ ಕಾರ್ಯಭಾರವನ್ನು ಮನಗಂಡಿದ್ದರು. ಸಮಾಜಕಲ್ಯಾಣ ಸೇವೆಗಳನ್ನು ವಿಸ್ತರಿಸುವುದು ಮತ್ತು ಭೂ-ಸುಧಾರಣೆ ಜಾರಿಗೊಳಿಸಿ ಉತ್ಪಾದನೆಯನ್ನು ಆಧುನಿಕಗೊಳಿಸುವುದು ಸೇರಿದಂತೆ ಇನ್ನಿತರ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಸಕ್ತಿ ಹೊಂದಿದ್ದರು. ಹೀಗೆ ಅಂಗೋಲಾ, ಮೊಜಾಂಬಿಕ್, ಇಥಿಯೋಪಿಯಾ, ಜಿನಿಯಾ ಬಿಸ್ಸಾವು, ಮತ್ತು ಕಾಂಗೋ ದೇಶಗಳು ಕೃಷಿಯಲ್ಲಿ ಬದಲಾವಣೆ ತರುವುದರೊಂದಿಗೆ ಆಥರ್ಿಕಾಭಿವೃದ್ಧಿಗಾಗಿ ಮತ್ತು ಸಾರ್ವಜನಿಕ ಉದ್ದಿಮೆಗಳ ಅಭಿವೃದ್ಧಿಗಾಗಿ ಶ್ರಮಿಸಲಾರಂಭಿಸಿದ್ದವು. ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಸಾಮಾಜಿಕ ಭದ್ರತೆಯಂಥಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ವೈಯುಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಸಂಪನ್ಮೂಲದ ಅಭಿವೃದ್ಧಿಯಾಗುತ್ತದೆಂದು ನಿರೀಕ್ಷಿಸಲಾಗಿತ್ತು. ಆದರೆ, ಆಥರ್ಿಕತೆಯನ್ನು ಪುನರ್-ರಚಿಸುವ ಅವರ ಯೋಜನೆಗಳೆಲ್ಲ ನಿರಂತರವಾದ ಸಮಾಜ-ಘಾತುಕ ಚಟುವಟಿಕೆಗಳು, ಅಂತ:ಕಲಹ, ಆಕ್ರಮಣ ಮತ್ತು ಬಂಡುಕೋರರ ಉಪಟಳಗಳಿಂದ ಆ ನಿಟ್ಟಿನಲ್ಲಿ ಯಾವೊಂದು ಪ್ರಗತಿಯನ್ನು ಸಹ ಕಾಣಲು ಸಾಧ್ಯವಾಗಲಿಲ್ಲ. ಅಮೇರಿಕಾ-ಬೆಂಬಲಿತ ವಿರೋಧಿ ಶಕ್ತಿಗಳು ಮತ್ತು ದಕ್ಷಿಣ ಆಫ್ರಿಕಾದ ವರ್ಣಭೇದ ಆಡಳಿತವು ಸಶಸ್ತ್ರ ಹೋರಾಟ ನಡೆಸಿ ಅಂಗೋಲಾ ಮತ್ತು ಮೊಜಾಂಬಿಕ್ಗಳ ಮಾಕ್ಸರ್್ವಾದಿ ಸಕರ್ಾರಗಳನ್ನು ಕೆಳಗುರುಳಿಸಿದವು. ಹಾಗೆಯೇ, ಇಥಿಯೋಪಿಯಾ ಮತ್ತು ಸೋಮಾಲಿಯಾಗಳು ಸಶಸ್ತ್ರ ಬಿಕ್ಕಟ್ಟು, ಅಂತ:ಕಲಹ ಮತ್ತು ಪ್ರತ್ಯೇಕತಾವಾದಿಗಳ ವಿರೋಧವನ್ನು ಎದುರಿಸಬೇಕಾಯಿತು. ಈ ದೇಶ-ವಿರೋಧಿ ಶಕ್ತಿಗಳನ್ನು ಹತ್ತಿಕ್ಕಲು ಅಲ್ಲಿನ ಸಕರ್ಾರಗಳು ಕ್ರಮ ಕೈಗೊಂಡವಾದರೂ ವಿರೋಧಿ ಶಕ್ತಿಗಳ ಕೈಮೇಲಾಗಿ ಸವರ್ಾಧಿಕಾರಿ ಪ್ರವೃತ್ತಿಗಳು ಮೂಡಿಬಂದವು. ಮೂರನೆಯದಾಗಿ, ಸಾಮ್ರಾಜ್ಯಶಾಹಿ ಆಥರ್ಿಕತೆಯ ಜೊತೆಜೊತೆಗೆ ತಮ್ಮ ಆಥರ್ಿಕತೆಯನ್ನು ಮುನ್ನಡೆಸಿದಲ್ಲಿ, ಅದರೊಂದಿಗೆ ಹೆಚ್ಚೆಚ್ಚು ಸಂಬಂಧ ಹೊಂದಿದಲ್ಲಿ ತಮ್ಮ ದೇಶವೂ ಅಭಿವೃದ್ದಿ ಹೊಂದಿದ ರಾಷ್ಟ್ರವಾಗುತ್ತದೆಂದು ಬೊಗಳೆ ಬಿಡುತ್ತಾ ವಿದೇಶೀ ಶಕ್ತಿಗಳೊಂದಿಗೆ ಶಾಮೀಲಾಗಿ ತಮ್ಮ ಸಂಪತ್ತನ್ನು ವೃದ್ದಿಸಿಕೊಳ್ಳುತ್ತಿದ್ದ ರಾಷ್ಟ್ರೀಯವಾದಿ ನಾಯಕರು. ಈ ರಾಷ್ರಗಳಲ್ಲಿ ಸಮಾನತೆಗಿಂತ ಹೆಚ್ಚಾಗಿ ಆಥರ್ಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲಾಯಿತು. ಖಾಸಗಿ ಕ್ಷೇತ್ರಕ್ಕೆ ಹೆಚ್ಚಿನ ನೆರವು ನೀಡಲಾಯಿತು. ರಪ್ತು ಬೆಳೆಗಳ ಉತ್ಪಾದನೆಯನ್ನು ವಿಸ್ತರಿಸಲಾಯಿತು. ಉದಾಹರಣೆಗೆ, ಕೀನ್ಯಾದಲ್ಲಿ ಕಾಫಿ ಮತ್ತು ಟೀ ಬೆಳೆಯನ್ನು ವಿಸ್ತರಿಸಿ ಹೆಚ್ಚಿನ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲಾಯಿತು. ಈ ರಾಷ್ರಗಳು ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ ಮತ್ತು ಜಪಾನ್ ದೇಶಗಳೊಂದಿಗೆ ಹೆಚ್ಚಿನ ಸಂಬಂಧವಿಟ್ಟುಕೊಂಡು ಸಮಯ ಬಂದಾಗಲೆಲ್ಲ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಈ ದೇಶಗಳ ಪರ ದನಿಯೆತ್ತುತ್ತಿದ್ದವು. ಕೀನ್ಯಾ, ನ್ಶೆಜೀರಿಯಾ, ಘಾನಾ, ಐವರಿ ಕೋಸ್ಟ್ ಮತ್ತು ಸೆನೆಗಲ್ ದೇಶದ ರಾಷ್ಟ್ರೀಯವಾದಿ ನಾಯಕರು ತಾವು ಅನುಸರಿಸಿದ ನೀತಿಗಳಲ್ಲಿ ದೋಷವಿದೆಯೆಂದು ಕಾಲಕ್ರಮೇಣ ಒಪ್ಪಿಕೊಳ್ಳುವ ಹಂತಕ್ಕೆ ಬಂದಿವೆ. ಆಫ್ರಿಕಾದ ದೇಶಗಳು ರಾಜಕೀಯ ಸ್ವಾತಂತ್ರ್ಯ ಪಡೆದರೂ ಆಥರ್ಿಕ ಸ್ವಾತಂತ್ರ್ಯ ಪಡೆದವೆಂದು ಹೇಳಲಾಗದು. ಆಪ್ರಿಕಾದ ದೇಶಗಳಲ್ಲಿ ಅಧಿಕಾರವನ್ನು ಶಾಂತಿಯುತವಾಗಿ ಸಾಮ್ರಾಜ್ಯಶಾಹಿ ರಾಷ್ಟ್ರಗಳು ವಗರ್ಾಯಿಸಿದ್ದನ್ನು 'ನವ-ವಸಾಹತುಶಾಹಿ ಪರಿಹಾರ' ಎಂಧಲೂ ಕರೆಯಲಾಗುತ್ತದೆ. ಏಕೆಂದರೆ ಹೊಸ ಸಕರ್ಾರಗಳಿಗೆ ದೊರಕಿರುವ ಆಥರ್ಿಕ ಮತ್ತು ರಾಜಕೀಯ ಸ್ವಾತಂತ್ರ್ಯದತ್ತ ಗಮನಹರಿಸಿದಾಗ ವಿದೇಶಿ ಕಂಪನಿಗಳ ಆಥರ್ಿಕ ಹಿತಾಸಕ್ತಿಗಳನ್ನು ಬಹುವಾಗಿ ಸಂರಕ್ಷಿಸಿರುವುದು ಮತ್ತು ವಿದೇಶಿ ರಾಷ್ಟ್ರಗಳ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಂಡಿರುವುದು ಕಂಡುಬರುತ್ತದೆ. ನೈಸಗರ್ಿಕ ವಿಕೋಪಗಳೊಂದಿಗೆ ಫಲವತ್ತತೆಯಿಲ್ಲದ ಭೂಮಿಗಳಲ್ಲಿ ರೈತರು ಬೇಸಾಯ ಮಾಡಬೇಕಾಗಿತ್ತು. ಜನತೆಗೆ ಅವಶ್ಯವಿರುವ ಬೆಳೆಗಳ ಬದಲು ವಿದೇಶಿ ರಾಷ್ಟ್ರಗಳಿಗೆ ಅಗತ್ಯವಿರುವ ಬೆಳೆಗಳನ್ನು ಬೆಳೆಯುವಂತೆ ಅವರನ್ನು ಬಲವಂತಗೊಳಿಸಲಾಗುತ್ತಿತ್ತು. ಅಗಾಧ ತೆರಿಗೆ, ಕಡ್ಡಾಯವಾಗಿ ನಿದರ್ಿಷ್ಟ ಬೆಳೆ ಬೆಳೆಯುವುದು, ಬಲವಂತ ಕೆಲಸ ಮತ್ತು ದೈಹಿಕ ಕಿರುಕುಳ ಗಳಿಂದಾಗಿ ತಮ್ಮ ಭೂಮಿಯ ಫಲವತ್ತತೆ ಕಳೆದುಕೊಳ್ಳುವ ಮತ್ತು ಕ್ಷಾಮಕ್ಕೀಡಾಗುವಂಥಹ ವಿದೇಶಿ ಕಂಪನಿಗಳಿಗೆ ಅವಶ್ಯವಿರುವ ಬೆಳೆಗಳನ್ನು ರೈತರು ಬೆಳೆಯಬೇಕಾಗಿತ್ತು. ಆಫ್ರಿಕಾದ ದೇಸಿ ಸಂಸ್ಕೃತಿಯನ್ನು ವಿದೇಶಿ ಆಳ್ವಿಕೆಯು ನಾಶ ಮಾಡತೊಡಗಿತ್ತು. ಆಫ್ರಿಕಾದ ಉಪಖಂಡವನ್ನು ಫೆಂಚ್ ಮಾತನಾಡುವ ಪ್ರದೇಶ, ಇಂಗ್ಲೀಷ್ ಮಾತನಾಡುವ ಪ್ರದೇಶ ಮತ್ತು ಅರಬ್ ಮಾತನಾಡುವ ಪ್ರದೇಶಗಳೆಂದೇ ವಿಂಗಡಿಸಿ ಕರೆಯಲಾಗುತ್ತಿತು. ಸ್ವತಂತ್ರಗೊಂಡ ಆಫ್ರಿಕಾ ರಾಷ್ರಗಳ ಜನರಲ್ಲಿ ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆ ಕುರಿತಂತೆ ಗೌರವ ಮೂಡಿತ್ತು. ಏಕೆಂದರೆ, ಈ ಭಾಷೆ ಮಾತನಾಡಬಲ್ಲವರು ಅಥವಾ ಕಲಿತವರು ವಿಶೇಷ ಆಥರ್ಿಕ ಮತ್ತು ರಾಜಕೀಯ ವಿನಾಯಿತಿಗಳನ್ನು ಸುಲಭವಾಗಿ ಪಡೆಯಬಹುದಿತ್ತು. ಸ್ವಾತಂತ್ರ್ಯಾನಂತರದಿಂದಲೂ, ಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಪೂರ್ಣ ಜವಾಬ್ದಾರಿ ಹೊರಲು ಸಕರ್ಾರಗಳು ಅಸಮರ್ಥವಾಗಿದ್ದವು. ಮಧ್ಯಮ ಕುಶಲಕಮರ್ಿಗಳು, ಶ್ರೀಮಂತ ರೈತರು, ಅಧಿಕಾರಿಗಳು, ಮತ್ತು ದೇಶ-ವಿದೇಶಗಳಲ್ಲಿ ಖಾಸಗಿ ಕಂಪನಿಗಳಲ್ಲಿ ದುಡಿದು ಹಣ ಗಳಿಸಿದ್ದವರಿಂದ ಖಾಸಗಿ ಬಂಡವಾಳ ಹೂಡಿಕೆಗಾಗಿ ಸಕರ್ಾರ ಯತ್ನಿಸುತ್ತಿತ್ತು. ಸ್ಥಳೀಯವಾಗಿ ದೊಡ್ಡ ಬಂಡವಾಳಿಗರಿಲ್ಲದ್ದರಿಂದ ಸಣ್ಣ ಕೈಗಾರಿಕೆಗಳು ಸ್ಥಾಪನೆಗೊಂಡು ವಿದೇಶಿ ಬಂಡವಾಳದೊಂದಿಗೆ ಕೈಜೋಡಿಸಿದವು. ಸ್ವಾತಂತ್ರ್ಯ ಗಳಿಸಿದ ಕೆಲವೇ ವರ್ಷಗಳಲ್ಲಿ ಆಫ್ರಿಕಾ ದೇಶಗಳು ಸಂವಿಧಾನದಲ್ಲಿ ಭಾರಿ ಬದಲಾವಣೆ ಮಾಡಿದವು. ಅಧಿಕಾರವು ಪ್ರಜೆಗಳಿಂದ ಮಿಲಿಟರಿಗೆ ವಗರ್ಾವಣೆಗೊಂಡು ಸವರ್ಾಧಿಕಾರಿ ಧೋರಣೆ ಬೆಳೆದುಬಂದಿತು. ಹಲವಾರು ಆಳುವ ನಾಯಕರು ಸಂವಿಧಾನವನ್ನು ತಿರುಚಿ ತಮ್ಮ ವೈಯುಕ್ತಿಕ ನಿರಂಕುಶ ಅಧಿಕಾರವನ್ನು ಜಾರಿ ತಂದರು. ಚುನಾವಣೆಗಳನ್ನು ನಡೆಸಲಾಯಿತಾದರೂ ಅದರಲ್ಲಿ ಭಾಗವಹಿಸಿದವರಿಗೆ ಪಯರ್ಾಯವಾದ ಪ್ರಜಾಸತ್ತಾತ್ಮಕ ಆಯ್ಕೆಗಳಿರಲಿಲ್ಲ. ಉದಾಹರಣೆಗೆ, ಕೀನ್ಯಾದ ಏಕ ಪಕ್ಷದ ಆಳ್ವಿಕೆಯಲ್ಲಿ ಸಕರ್ಾರದ ನೀತಿಗಳನ್ನು ಬದಲಿಸುವ ಆಯ್ಕೆ ಮತದಾರರಿಗಿರಲಿಲ್ಲ. ಹೆಚ್ಚೆಂದರೆ ಆ ಸಮಯದಲ್ಲಿ ಆಳುತ್ತಿದ್ದ ಕೀನ್ಯಾ ಆಫ್ರಿಕನ್ ರಾಷ್ಟ್ರೀಯ ಒಕ್ಕೂಟ ಪಕ್ಷವು ನಿಲ್ಲಿಸಿದ್ದ ಅಭ್ಯಥರ್ಿಗಳಲ್ಲಿ ಯಾವುದಾದರೊಂದು ಅಭ್ಯಥರ್ಿಯನ್ನು ಮತದಾರರು ಆಯ್ಕೆ ಮಾಡಬಹುದಿತ್ತಷ್ಟೆ. ಬಹುತೇಕ ಆಫ್ರಿಕನ್ ರಾಷ್ಟ್ರಗಳಲ್ಲಿನ ಬಡಜನತೆಯು ಆಥರ್ಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ತತ್ತರಿಸಿ ಹೋದರು. ಬಡತನ, ಹಸಿವು ಮತ್ತು ಅಪೌಷ್ಟಿಕತೆಯಿಂದ ಜನರು ನರಳುತ್ತಿದ್ದರು. ತೀರಾ ಕಡಿಮೆ ಅಭಿವೃದ್ಧಿ ಹೊಂದಿರುವ ವಿಶ್ವ ರಾಷ್ಟ್ರಗಳ ಪಟ್ಟಿಯಲ್ಲಿ 30ರಲ್ಲಿ 21 ರಾಷ್ಟ್ರಗಳು ಆಫ್ರಿಕಾ ಖಂಡಕ್ಕೆ ಸೇರಿವೆ. 1970-80ರ ದಶಕದಲ್ಲಿ ಆಫ್ರಿಕಾದ 20 ರಾಷ್ಟ್ರಗಳ ಒಟ್ಟಾರೆ ಆಂತರಿಕ ಉತ್ಪನ್ನವು ಹಿಮ್ಮುಖ ದರದಲ್ಲಿತ್ತು. 1970 ರಿಂದೀಚೆಗೆ, ಬಹುತೇಕ ರಾಷ್ಟ್ರಗಳ ಹಣದುಬ್ಬರದ ದರವು ಎರಡಂಕೆಯಲ್ಲಿದೆ. ತಲಾದಾಯವು ಒಂದೇ ಮಟ್ಟದಲ್ಲಿದೆ. ಯೂರೋಪ್ ರಾಷ್ರಗಳಲ್ಲಿ ಪ್ರತಿ ಹಸುವಿಗೆ ದಿನವೊಂದಕ್ಕೆ 2 ಡಾಲರ್ ಸಹಾಯಧನ ದೊರೆಯುತ್ತದೆಯಾದರೂ ಇದು ಆಫ್ರಿಕಾದ ಪ್ರತಿ ಕುಟುಂಬದ ಆದಾಯಕ್ಕಿಂತ ಎರಡಷ್ಟು. ಉತ್ಪಾದನಾ ಅಥವಾ ಕೃಷಿ ಕ್ಷೇತ್ರದ ಬೆಳವಣಿಗೆ ನಿರಾಶಾದಾಯಕವಾಗಿದೆ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲದ ಮೊತ್ತ 1970ರಲ್ಲಿ 902 ಕೋಟಿ ಅಮೇರಿಕನ್ ಡಾಲರ್ಗಳಷ್ಟು ಇದ್ದದ್ದು 1978ರಲ್ಲಿ 4960 ಕೋಟಿ ಡಾಲರ್ ಬೆಳೆದಿತ್ತು. ನಿರುದ್ಯೋಗವು ಶೇ. 10ರಿಂದ ಶೇ. 50ಕ್ಕೇರಿತ್ತು. ಕೆಲವು ರಾಷ್ಟ್ರಗಳಲ್ಲಿ ಶೇ. 40ರಷ್ಟು ಜನತೆಗೆ ವಸತಿ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ, ಇಂಧನ ಮತ್ತು ಶೈಕ್ಷಣಿಕ ಸೌಲಭ್ಯಗಳು ದೊರಕೇ ಇಲ್ಲ. ಉತ್ಪಾದನೆಯನ್ನು ಮತ್ತಷ್ಟು ಅಭಿವೃಧ್ಧಿ ಪಡಿಸುವತ್ತ ಗಮನಹರಿಸದೆ ಜನತೆಯನ್ನು ಹೀರಿ ಹಿಪ್ಪೆ ಮಾಡಿ ಆಫ್ರಿಕಾದ ಸಣ್ಣ ಬಂಡವಾಳಿಗರು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಲಾಭ ಗಳಿಸುತ್ತಿದ್ದವು. ಆಫ್ರಿಕಾ ರಾಷ್ಟ್ರಗಳು ಈ ಹಿಂದಿನ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಮೇಲೆ ಎಂದಿನಂತೆ ಆರ್ಥಿಕವಾಗಿ ಅವಲಂಬನೆಯನ್ನು ಮುಂದುವರೆಸುವಂತಾಯಿತು. ಕೀನ್ಯಾ, ಜಾಂಬಿಯಾ ಮತ್ತು ಸೆನೆಗಲ್ಗಳು ಒಂದೆಡೆ ಮಾಕ್ಸರ್್ವಾದಿ ಸಿದ್ದಾಂತವನ್ನು ಖಂಡಿಸುತ್ತಾ ತಾವು ಸಮಾಜವಾದಿಗಳೆಂದು ಘೋಷಿಸಿಕೊಂಡವು. ಆದರೆ 1980ರ ಹೊತ್ತಿಗೆ ಕೀನ್ಯಾದಲ್ಲಿ ಆಳುವ ಮೇಲ್ಸ್ತರದವರು ರಾಜಕೀಯ ಅಧಿಕಾರವನ್ನು ತಮ್ಮ ಸ್ವತ್ತಾಗಿಸಿಕೊಂಡು ಸಂಪತ್ತನ್ನು ಲೂಟಿ ಮಾಡಿದರು. ಅಧಿಕಾರಶಾಹಿ ಮತ್ತು ಸರಕಾರದೊಂದಿಗೆ ಸಂಪರ್ಕವಿದ್ದ ಮೇಲ್ಸ್ತರದವರು ದೇಶದ ಆದಾಯದ ಬಹುತೇಕ ಪಾಲನ್ನು ಭ್ರಷ್ಟತೆಯಿಂದ ಸೂರೆ ಮಾಡಿದರು. 1980 ಮತ್ತು 1990ರ ದಶಕದಲ್ಲಿ ಕೀನ್ಯಾದ ಪ್ರಮುಖ ರಾಜಕೀಯ ನಾಯಕರುಗಳ ಭ್ರಷ್ಟಾಚಾರ ಯಾವ ಹಂತ ತಲುಪಿತ್ತೆಂದರೆ, ಇದರಿಂದ ಸಕರ್ಾರದಲ್ಲಿ ಹಣಕಾಸು ಕೊರತೆಯುಂಟಾಗಿ ಹಣದುಬ್ಬರ ತೀರಾ ದೊಡ್ಡ ಮಟ್ಟ ತಲುಪಿತು. 1978 ಮತ್ತು 1990ರ ನಡುವೆ ಆಫ್ರಿಕಾ ಖಂಡದ ಸರಾಸರಿ ತಲಾ ಆದಾಯವು 854 ಡಾಲರ್ಗಳಿಂದ 565 ಡಾಲರ್ಗಿಳಿಯಿತು. 1981 ಮತ್ತು 1990ರ ನಡುವೆ ಕಡಿಮೆ ಅಭಿವೃದ್ಧಿ ಹೊಂದಿರುವ ಆಫ್ರಿಕಾದ ರಾಷ್ಟ್ರಗಳ ಸಂಖ್ಯೆ 21ರಿಂದ 28ಕ್ಕೇರಿತು. 1978 ಮತ್ತು 1988ರ ನಡುವೆ ಒಟ್ಟಾರೆ ದೇಶೀಯ ಆಂತರಿಕ ಉತ್ಪನ್ನವು(ಜಿಡಿಪಿ) ಶೇ. 3.03ರಿಂದ ಶೇ. 0.7 ಕ್ಕಿಳಿಯಿತು. ಅಕ್ಷರಸ್ಥರ ಸಂಖ್ಯೆಯು 1962ರಲ್ಲಿದ್ದ 142 ಮಿಲಿಯನ್ನಿಂದ 1985 ರಲ್ಲಿ 165 ಮಿಲಿಯನ್ ಆಗಿದೆಯಷ್ಟೆ. ಆಫ್ರಿಕಾದ ಆಯವ್ಯಯ ಕೊರತೆಯು 1978ರಲ್ಲಿ 3.9 ಬಿಲಿಯನ್ ಡಾಲರ್ಗಳಿಂದ 1988ರ ಹೊತ್ತಿಗೆ 20.3 ಬಿಲಿಯನ್ ಮುಟ್ಟಿತ್ತು. ವಿದೇಶಿ ಸಾಲವು 1978ರಲ್ಲಿ 48.3 ಬಿಲಿಯನ್ ಡಾಲರ್ನಿಂದ ಏರಿಕೆ ಕಂಡು 1980ರಲ್ಲಿ 230 ಬಿಲಿಯನ್ ಡಾಲರ್ ಮತ್ತು 1990ರ ಹೊತ್ತಿಗೆ 260 ಬಿಲಿಯನ್ ಡಾಲರ್ ತಲುಪಿತು. 1980ರಲ್ಲಿ ಶೇ. 5.3 ರಷ್ಟಿದ್ದ ನಿರುದ್ಯೋಗ ದರವು 1990ರ ಹೊತ್ತಿಗೆ ಶೇ. 13ರಷ್ಟು ಹೆಚ್ಚಿತು. ಹೀಗೆ 1970ರ ದಶಕದ ನಂತರ ಐಎಂಎಫ್, ವಿಶ್ವಬ್ಯಾಂಕ್ ಮತ್ತು ಬಹುರಾಷ್ಟ್ರೀಯ ಕಂಪನಿಗಳು, ಹಾಗೂ ವಾಣಿಜ್ಯ ಹಣಕಾಸು ಬ್ಯಾಂಕುಗಳ ಕೂಟವು ವಸಾಹತುಶಾಹಿಯ ಸಿದ್ದಾಂತ ಮತ್ತು ಆಕ್ರಮಣಗಳನ್ನು ನಡೆಸುತ್ತಾ ಬಂದಿತು. ಈ ಕೂಟವನ್ನು ನವ-ವಸಾಹತುಶಾಹಿ ಎಂದು ಕರೆಯಲಾಗುತ್ತದೆ. ಅಂಗೋಲಾ, ಮೊಜಾಂಬಿಕ್, ಇಥಿಯೋಪಿಯಾ ಮತ್ತು ಇತರೆ ರಾಷ್ಟ್ರಗಳು ತಮ್ಮ ಮೇಲೆ ನೇರವಾಗಿ ಆಕ್ರಮಣ ಮಾಡುತ್ತಿರುವ ನ್ಯಾಟೋ ಶಕ್ತಿಯ ವಿರುದ್ದ ಸೆಣಸಬೇಕಾಯಿತು. ಜೊತೆಗೆ ನವ-ವಸಾಹತುಶಾಹಿಯಿಂದ ಹಣಕಾಸು ನೆರವು ಮತ್ತು ಶಸ್ತ್ರಾಸ್ತ್ರ ಪಡೆಯುತ್ತಿರುವ ಸಶಸ್ತ್ರಧಾರಿ ಬಂಡಾಯಗಾರರನ್ನು ಸಹ ಆ ರಾಷ್ಟ್ರಗಳು ಎದುರಿಸಬೇಕಾಯಿತು. ಆಫ್ರಿಕಾದಲ್ಲಿ ಬಡತನ ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಇತರೆ ಪ್ರದೇಶಗಳಿಗೆ ಆಫ್ರಿಕಾದ ಅಭಿವೃದ್ಧಿ ಸೂಚ್ಯಂಕಗಳನ್ನು ಹೋಲಿಸಿದಲ್ಲಿ ಆಘಾತಕಾರಿ ಅಂಶಗಳು ಹೊರಬೀಳುತ್ತವೆ. ಪ್ರದೇಶ ತಲಾ ಆದಾಯ ಜಿಡಿಪಿಯ ಬೆಳವಣಿಗೆ (ಶೇಕಡಾವಾರು) 1965-73 1973-78 1980-89 ಆಫ್ರಿಕಾ ಖಂಡ 3.2 0.1 - 2.2 ಪೂರ್ವ ಏಷ್ಯಾ 5.1 4.7 6.7 ದಕ್ಷಿಣ ಏಷ್ಯಾ 1.2 1.7 3.2 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬೀಯನ್ 3.7 2.6 - 0.6 ಮೂಲ: ವಿಶ್ವ ಅಭಿವೃದ್ಧಿ ವರದಿ 1990 : ಬಡತನ (ವಾಷಿಂಗ್ಟನ್, 1990) ಕಳೆದ 25 ವರ್ಷಗಳುದ್ದಕ್ಕೂ ಆಫ್ರಿಕಾದ ಅಭಿವೃದ್ಧಿಗಾಗಿ ತಾವು ನಿರಂತರ ನೆರವು ಮತ್ತು ಅನುದಾನ ನೀಡುತ್ತಿರುವೆವೆಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮತ್ತು ವಿದೇಶಿ ಹಣಕಾಸು ಸಂಸ್ಥೆಗಳು ಬೊಗಳೆ ಹೊಡೆದರೂ ಆಫ್ರಿಕಾದ ಮುಕ್ಕಾಲು ಪಾಲು ಜನತೆ ಇನ್ನೂ ಬಡತನದ ದವಡೆಯಲ್ಲಿದ್ದಾರೆ. ಉದಾಹರಣೆಗ, ಇಥಿಯೋಪಿಯಾದ ಒಟ್ಟಾರೆ ಜನಸಂಖ್ಯೆಯು 1993ರಲ್ಲಿ 53.2 ಮಿಲಿಯನ್ ಇದ್ದು ಅದರಲ್ಲಿ ಬಡಜನತೆಯ ಸಂಖ್ಯೆ 20 ಮಿಲಿಯನ್ಗೂ ಹೆಚ್ಚಿದ್ದಾರೆ. ಅದಕ್ಕೆ ನಿರಾಶ್ರಿತರು, ಭೂರಹಿತರು ಮತ್ತು ಯುದ್ದದಿಂದ ನಿರಾಶ್ರಿತರಾದವರ ಸಂಖ್ಯೆಯನ್ನು ಸೇರಿಸಿದಲ್ಲಿ ಬಡಜನತೆಯ ಸಂಖ್ಯೆ 52 ಮಿಲಿಯನ್ ಮುಟ್ಟುತ್ತದೆ. ಹೀಗೆ ಇಥಿಯೋಪಿಯಾದಲ್ಲಿ ಶೇ. 97ರಷ್ಟು ಬಡಜನತೆಯಿದ್ದಾರೆ. ಸಿಯಾರ್ ಲಿಯೋನ್ನಲ್ಲಿ ಆದಾಯ ಗಳಿಕೆಯು ಅಸಮಾನವಾಗಿದೆ. 1993ರ ಅಂದಾಜಿನ ಪ್ರಕಾರ ಮೂರನೇ ಎರಡರಷ್ಟು ಜನ ಬಡತನದಲ್ಲಿದ್ದು ಬಹುತೇಕ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ವಯಸ್ಕರ ಅನಕ್ಷರತೆಯು ಶೇ. 79ರಷ್ಟಿದ್ದು ಇದು ಆಫ್ರಿಕಾ ಖಂಡದಲ್ಲಿ ಹೆಚ್ಚಿನ ಪ್ರಮಾಣದ್ದು. ಪ್ರಾಥಮಿಕ ಶಿಕ್ಷಣಕ್ಕೆ ಸೇರುವವರ ಸಂಖ್ಯೆ ಇಡೀ ಖಂಡದಲ್ಲೇ ಕಡಿಮೆ ಪ್ರಮಾಣದ್ದಾಗಿದೆ. ಈ ನಡುವೆ, ಶ್ರೀಮಂತ ಕೃಷಿ ಪ್ರದೇಶವನ್ನು ಹೊಂದಿದ್ದರೂ ಜನಾಂಗೀಯ ಅಂತಃಕಲಹದಿಂದಾಗಿ ಶೇ. 15ರಿಂದ 20ರಷ್ಟು ಜನತೆ ನಿರಾಶ್ರಿತರಾಗಿದ್ದಾರೆ. ಉಗಾಂಡಾದಲ್ಲಿ ಶೇ. 93ರಷ್ಟು ಬಡವರಿದ್ದು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಬಡತನವು ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿದ್ದು ತೀವ್ರ ಸ್ವರೂಪದಲ್ಲಿದೆ. ಪುರುಷರ ಜೀವಿತಾವಧಿಯು ಇಡೀ ಖಂಡದಲ್ಲೇ ಕಡಿಮೆ ಪ್ರಮಾಣದಲ್ಲಿದೆ. ಇದರೊಂದಿಗೆ ದುರದೃಷ್ಟವಶಾತ್ ಏಡ್ಸ್ ರೋಗವು ಕೂಡ ಕೈಜೋಡಿಸಿ ಸಾವಿನ ಸಂಖ್ಯೆಯನ್ನು ಇಮ್ಮಡಿಗೊಳಿಸಿದೆ. ಘಾನಾದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಬಡತನವು ಪಟ್ಟಣ ಪ್ರದೇಶಗಳಿಗಿಂತ 13ಪಟ್ಟು ಹೆಚ್ಚಿನದು. ಕಡಿಮೆ ಉತ್ಪಾದನಾ ಸಮಸ್ಯೆಯು ಇನ್ನೂ ಅರ್ಧ ಶತಮಾನ ಕಾಲ ಹಾಗೆಯೇ ಮುಂದುವರೆಯುತ್ತದೆಂದು ಅಭಿಪ್ರಾಯ ಪಡಲಾಗಿದೆ. ನಮೀಬಿಯಾದಲ್ಲಿ ಆದಾಯ ಹಂಚಿಕೆಯು ತೀವ್ರತರದ ಅಸಮಾನತೆಯಿಂದ ಕೂಡಿದ್ದು ಸಂಪೂರ್ಣ ಬಡತನವು ವ್ಯಾಪಕವಾಗಿ ಹಬ್ಬಿದೆ. ಅಲ್ಲಿನ ಶೇ. 5ರಷ್ಟು ಶ್ರೀಮಂತರು ಜಿಡಿಪಿಯ ಶೇ. 70ರಷ್ಟನ್ನು ನಿಯಂತ್ರಿಸಿದರೆ ಶೇ. 55ರಷ್ಟು ಬಡವರು ಬರೆ ಶೇ. 3ರಷ್ಟು ಹೊಂದಿದ್ದಾರೆ. ಮಹಿಳೆಯು ಗಂಭೀರ ಬಡತನದಿಂದ ಜಂಜರಿತಳಾಗಿದ್ದಾಳೆ. ವಿಶ್ವಬ್ಯಾಂಕ್ ಬೃಹತ್ ಮಟ್ಟದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಟಾಂಜೇನಿಯಾದ ಜೀವನ ಗುಣಮಟ್ಟ ದರವು 1969 ಮತ್ತು 1983ರ ನಡುವಿನ ವರ್ಷಗಳಲ್ಲಿ (ಸರಾಸರಿ ವಾಷರ್ಿಕ) ಶೇ. 2.5ರಷ್ಟು ಇಳಿಮುಖಗೊಂಡಿತು. ಇದೇ ಅವಧಿಯಲ್ಲಿ ನಗರ ಪ್ರದೇಶದ ಕೂಲಿದರ ಶೇ. 65 ರಷ್ಟು ಕುಸಿತಕಂಡಿತು. ಸಾಮಾನ್ಯ ಜನರು ಮಾಂಸ, ಡೈರಿ ಉತ್ಪನ್ನ, ತರಕಾರಿಗಳಿಂದ ದೂರಸರಿದು ಕಳಪೆ ಆಹಾರ ಪದಾರ್ಥಗಳೆಡೆಗೆ ಸರಿದರು. ಹೆಚ್ಚು ಜನಸಂಖ್ಯೆ ಹೊಂದಿದ್ದು ಶ್ರೀಮಂತ ರಾಷ್ಟ್ರವೂ ಆಗಿರುವ ನೈಜೀರಿಯಾದಲ್ಲಿ 1980ರಲ್ಲಿ ಆಹಾರ ಬಳಕೆಯು ಶೇ. 7ರಷ್ಟು ಕಡಿಮೆಗೊಂಡು ಅಲ್ಲಿನ ಜೀವನ ಗುಣಮಟ್ಟವು 1950ರ ಪ್ರಮಾಣಕ್ಕಿಂತ ಕೆಳಗಿದ್ದಿತು. 1980ರ ದಶಕದ ಆಥರ್ಿಕ ಬಿಕ್ಕಟ್ಟಿನ ಪರಿಣಾಮವಾಗಿ ಅಲ್ಲಿನ ಪ್ರಗತಿಯು ಕಳೆದ 20 ವರ್ಷಗಳ ಹಿಂದಿನ ಮಟ್ಟ ತಲುಪಿತು. ಜಾಂಬಿಯಾದಲ್ಲಿ ಶೇ. 80ರಷ್ಟು ಗ್ರಾಮೀಣವಾಸಿಗಳು ಬಡತನದಲ್ಲಿದ್ದಾರೆ. ನಿರಂತರವಾಗಿ ಹಳ್ಳಿಗಾಡಿನಿಂದ ನಗರ ಪ್ರದೇಶದೆಡೆಗೆ ಮತ್ತು ವಿದೇಶಕ್ಕೆ ಹಣ ಹರಿದು ಹೋದದ್ದೇ ಬಡತನಕ್ಕೆ ಕಾರಣವಾಗಿತ್ತು. ಇತರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ರಗಳಿಗೆ ಹೋಲಿಸಿದಲ್ಲಿ ದಕ್ಷಿಣ ಆಫ್ರಿಕಾದ ಬಡತನ ಪ್ರಮಾಣವು 1980 ಮತ್ತು 1990 ರ ದಶಕಗಳ ನಡುವೆ ಹೆಚ್ಚಳಗೊಂಡಿತು. ಜನಸಂಖ್ಯೆ ಬೆಳೆಯತೊಡಗಿತು, ನಗರಗಳು ವಿಸ್ತರಣೆಗೊಂಡವು ಮತ್ತು ಆಹಾರ ಧಾನ್ಯಗಳಿಗಾಗಿ ವಿದೇಶದ ಮೇಲಿನ ಅವಲಂಬನೆಯು ಹೆಚ್ಚತೊಡಗಿತು. 1980ರ ದಶಕದಲ್ಲಿ ಆಫ್ರಿಕಾದ ಬಹುತೇಕ ಎಲ್ಲ ಬಡರಾಷ್ಟ್ರಗಳು ಸಾಲ ಮರುಪಾವತಿಸಲಾಗದೆ ದಿವಾಳಿ ಎದ್ದಾಗ ಹಳೆಸಾಲ ತೀರಿಸಲು ಹೊಸ ಸಾಲ ನೀಡಲಾಯಿತು. ತಮ್ಮ ರಾಷ್ಟ್ರದ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಗಳಿಗಿಂತ ಸಾಲ ಮರುಪಾವತಿಗಾಗಿ ಹೆಚ್ಚಿನ ವೆಚ್ಚ ಭರಿಸಿವೆ. ಉದಾಹರಣೆಗೆ, ದೇಶದ ಜಿಡಿಪಿಯಲ್ಲಿ ಸರಾಸರಿ ಆಫ್ರಿಕಾದ ಸಾಲ ಮರುಪಾವತಿ ಶೇಕಡಾ 16ರಷ್ಟಿದ್ದರೆ, ಶಿಕ್ಷಣ, ರಕ್ಷಣೆ ಮತ್ತು ಆರೋಗ್ಯಕ್ಕೆ ಅದಕ್ಕಿಂತಲೂ ಕಡಿಮೆ ಹಣ ಹಂಚಿಕೆಯಾಗುತ್ತಿತ್ತು. ಸಾಲ ಮರುಪಾವತಿಯ ಒತ್ತಡದಿಂದಾಗಿ ಬಲಿಪಶುಗಳಾದವರೆಂದರೆ ಮಕ್ಕಳು, ಅಂಗವಿಕಲರು ಮತ್ತು ಮಹಿಳೆಯರು. ಅಪೌಷ್ಟಿಕತೆ, ಮಾನಸಿಕ ಒತ್ತಡ, ನಿರುದ್ಯೋಗ, ಹಸಿವು ಮತ್ತು ದಾರಿದ್ರ್ಯಗಳಿಂದಾಗಿ ಈ ವರ್ಗದ ಜನತೆಗೆ ತಕ್ಷಣದ ಹೊಡೆತ ಬಿದ್ದಿತು. ಉದಾಹರಣೆಗೆ, ಆಫ್ರಿಕಾದಲ್ಲಿ ಏಡ್ಸ್ ರೋಗವು ವ್ಯಾಪಕ ಪ್ರಮಾಣದಲ್ಲಿ ಹಬ್ಬಲು ವಿಶ್ವ ಬ್ಯಾಂಕಿನ ಆಥರ್ಿಕ ನೀತಿಗಳೇ ಕಾರಣವೆಂದು ಅಮೇರಿಕಾ ರೋಗ ನಿಯಂತ್ರಣ ಸಂಸ್ಥೆಯು ಒಂದೊಮ್ಮೆ ದೂರಿತ್ತು. ಆರೋಗ್ಯ ಕ್ಷೇತ್ರದಲ್ಲಿ ಒಂದೆಡೆ ಸಕರ್ಾರವು ಸಹಾಯಧನವನ್ನು ಕಡಿತಗೊಳಿಸಿ ಮತ್ತೊಂದೆಡೆ ಬಳಕೆದಾರರ ಶುಲ್ಕವನ್ನು ಹೆಚ್ಚಿಸಿದ್ದರಿಂದ ಆರೋಗ್ಯ ಮತ್ತು ಶಿಕ್ಷಣ ಸೇವೆಯನ್ನು ಬಳಸುವವರ ಸಂಖ್ಯೆ ಕುಸಿದು ಬಿದ್ದಿತು. 'ಮಾನವ ಸಂಪನ್ಮೂಲದ ಸರೋವರ' ವಾಗಬೇಕಿದ್ದ ಆಫ್ರಿಕಾ ಹಿಂಸೆಯಿಂದ ನರಳುತ್ತಿರುವವರ ಕೂಪವಾಯಿತು. ಆಫ್ರಿಕಾದಲ್ಲಿ ಜನಾಂಗೀಯ ಘರ್ಷಣೆ 20 ನೇ ಶತಮಾನದಲ್ಲಿ ಆಫ್ರಿಕಾದಲ್ಲಿ ನಡೆದಿರುವ ಜನಾಂಗೀಯ ಕಲಹಗಳು ಆಫ್ರಿಕಾದ ಇತಿಹಾಸದಲ್ಲೇ ಕಂಡಿರದ ಮಾರಣಹೋಮಗಳನ್ನು ಮತ್ತು ಕಗ್ಗೊಲೆಗಳನ್ನು ಉಂಟು ಮಾಡಿವೆ. ವಿಶ್ವದಲ್ಲೇ ಅತಿ ಹೆಚ್ಚು ನಿರಾಶ್ರಿತರನ್ನು ಆಫ್ರಿಕಾ ಹೊಂದಿತ್ತು. 1992ರಲ್ಲಿ ನಿರಾಶ್ರಿತರ ಸಂಖ್ಯೆ 50 ಲಕ್ಷ ಮೀರಿತ್ತು. 23ಲಕ್ಷ ಜನಸಂಖ್ಯೆಯಿರುವ ಲೈಬೀರಿಯಾದಂಥಹ ಚಿಕ್ಕ ದೇಶದಲ್ಲಿ ಬರೇ 4 ವರ್ಷಗಳಲ್ಲಿ ಸುಮಾರು 2.50 ಲಕ್ಷ ಜನರು ಅಂತಃಕಲಹದಿಂದ ಅಸು ನೀಗಿದ್ದಾರೆ. 1993ರಲ್ಲಿ ಘಾನಾದಲ್ಲಿ ನಡೆದ ರಕ್ತಪಾತದಲ್ಲಿ ಬುಡಕಟ್ಟು ಗುಂಪುಗಳ 6000 ಮಂದಿ ಹತ್ಯೆಯಾಗಿದ್ದು 200 ಹಳ್ಳಿಗಳು ನಾಶಗೊಂಡು 15000 ಮಂದಿ ನಿರಾಶ್ರಿತರಾಗಿದ್ದಾರೆ. ಸಿಯಾರ ಲಿಯೋನ್ ಪ್ರಾಂತ್ಯದಲ್ಲಿ ನಡೆದ ಸಶಸ್ತ್ರ ಕಾದಾಟದಿಂದ ಅಂದಾಜು 35,000 ನಿರಾಶ್ರಿತರು ಒಂದೇ ವಾರದಲ್ಲಿ ಪಕ್ಕದ ಜಿನಿಯಾ ಗಡಿಗೆ ನುಸುಳಿದ್ದಾರೆ. 1980ರ ದಶಕದಲ್ಲಿ ಅಂಗೋಲಾ ಮತ್ತು ಮೊಜಾಂಬಿಕ್ಗಳಲ್ಲಿ ನಡೆದ ವಿಶ್ವದಲ್ಲೇ ದೀಘರ್ಾವಧಿ ಜನಾಂಗೀಯ ಕಲಹದಲ್ಲಿ 15 ಲಕ್ಷ ಜನ ಸಾವನ್ನಪ್ಪಿದ್ದಾರೆ. ಸೂಡಾನ್ನಲ್ಲಿ ಕಳೆದ 10 ವರ್ಷಗಳಲ್ಲಿ ಯುದ್ದ ಮತ್ತು ಕ್ಷಾಮಗಳಿಂದ 5ಲಕ್ಷ ಜನ ಸಾವನ್ನಪ್ಪಿದ್ದಾರೆ. 1988ರ ಒಂದೇ ವರ್ಷದಲ್ಲಿ 2.5ಲಕ್ಷ ಜನ ಸತ್ತರು. ಈ ಜನಾಂಗೀಯ ಕಲಹಗಳು ಆಫ್ರಿಕಾದ ಅಭಿವೃದ್ಧಿಗೆ ತೊಡಕಾಗಿದ್ದು ರಾಷ್ಟ್ರೀಯ ಐಕ್ಯತೆಗೆ ಪೆಟ್ಟು ನೀಡಿವೆ. ಈ ಜನಾಂಗೀಯ ಕಲಹಗಳು ಹಿಂದಿನ ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ಆಳ್ವಿಕೆಯಿಂದ ಬಳುವಳಿ ಪಡೆದು ಕೊಂಡು ಬಂದಿವೆ. ಇಂಥಹ ಘರ್ಷಣೆಗಳನ್ನು ಹತ್ತಿಕ್ಕಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ರೂಪುಗೊಳಿಸುವಲ್ಲಿ ಆಫ್ರಿಕಾದ ನಾಯಕತ್ವವು ವಿಫಲವಾಗಿದ್ದೇಕೆಂದರೆ ವಿದೇಶಿ ಶಕ್ತಿಗಳ ನಿರಂತರ ಹಸ್ತಕ್ಷೇಪ. ನೈಜೀರಿಯಾದಲ್ಲಿ 1980ರಲ್ಲಿ 60,000 ಮಿಲಿಯನ್ ಡಾಲರ್ನಿಂದ 1987ರ ಹೊತ್ತಿಗೆ 2.0 ಲಕ್ಷ ಮಿಲಿಯನ್ ಡಾಲರ್ನಷ್ಟು ಬಂಡವಾಳ ಹೊರದೇಶಕ್ಕೆ ಹರಿದು ಹೋಗಿ ತೀವ್ರತರದ ಹಾನಿಯುಂಟು ಮಾಡಿತ್ತು. 1970 ರಿಂದೀಚೆಗೆ ಆಫ್ರಿಕಾದ ವಯಸ್ಕರಲ್ಲಿ ಏಡ್ಸ್ ಪ್ರಮಾಣವು 1 ಕೋಟಿ ಜನರಲ್ಲಿ ವ್ಯಾಪಿಸಿದೆ. ಏಡ್ಸ್ ರೋಗವು ವ್ಯಾಪಕವಾಗಿ ಹಬ್ಬಲು ಕಾರಣವೇನೆಂದರೆ, ಅಲ್ಲಿ ವಿವಿಧ ಜನಾಂಗೀಯ ಗುಂಪುಗಳ ನಡುವೆ ನಡೆಯುತ್ತಿರುವ ಕಾದಾಟಗಳು, ಕ್ಷಾಮ ಮತ್ತು ಅಂತಃಕಲಹ. 1970ರಲ್ಲಿ ಸೋಮಾಲಿಯಾದಲ್ಲಿ ಮಿಲಿಟರಿ ಆಳ್ವಿಕೆ ಬಂದಿತು. ಹಾಗೆಯೇ ಇಥಿಯೋಪಿಯಾ 1974ರಲ್ಲಿ ಮತ್ತು ಸೂಡಾನ್ 1969ರಲ್ಲಿ ಮಿಲಿಟರಿ ಆಡಳಿತದ ತೆಕ್ಕೆಗೆ ಸರಿದವು. ಇಥಿಯೋಪಿಯಾದಲ್ಲಿ ಮಾಕ್ಸರ್್ವಾದಿ-ಲೆನಿನ್ವಾದಿ ಪಕ್ಷದ ನಾಯಕ ಮೆಂಗಿಸ್ಟು ಹ್ಯೆಲ್ ಮೆರಿಯಮ್ ಆಳ್ವಿಕೆಯನ್ನು ಕಿತ್ತೊಗೆದು ದೇಶ ವಿಭಜನೆ ಮಾಡಲು ಯತ್ನಿಸಲಾಯಿತು. ಅಂತಿಮವಾಗಿ 1991ರಲ್ಲಿ ಮೆಂಗಿಸ್ಟು ಆಳ್ವಿಕೆಯನ್ನು ಕೊನೆಗಾಣಿಸಲಾಯಿತು. ತನ್ನ ವಿವಾದಿತ ಗಡಿಪ್ರದೇಶಗಳನ್ನು ವಾಪಸು ಪಡೆಯಲು ಅದೀಗ ತಾನೆ ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಿದ್ದ ಎರಿಟ್ರಿಯಾ ದೇಶದ ಮೇಲೆ ಇಥಿಯೋಪಿಯಾವು 1998-99 ರಲ್ಲಿ ಯುದ್ದ ಮಾಡಿತು. 1999ರ ಹೊತ್ತಿಗೆ, ಕೇಂದ್ರೀಯ ಸೋಮಾಲಿ ಭೂಪ್ರದೇಶದಲ್ಲಿ ವಾಯುವ್ಯ ಭೂಭಾಗವು ಸೋಮಾಲಿಲ್ಯಾಂಡ್ ಆಗಿ ವಿಭಜನೆಗೊಂಡು, ದಕ್ಷಿಣ ಭೂಭಾಗವು ಯುದ್ದಕೋರರ ನಡುವೆ ಹರಿದು ಹಂಚಿಹೋಯಿತು. ದಕ್ಷಿಣ ಸೂಡಾನ್ನಲ್ಲಿ ಉತ್ತರದ ಇಸ್ಲಾಂಮಿಕ್ ಪಂಗಡ ಮತ್ತು ದಕ್ಷಿಣ ಜನತೆಯ ನಡುವಿನ ದೀಘರ್ಾವಧಿ ಯುದ್ದ ಇನ್ನೂ ನಡೆಯುತ್ತಲೇ ಇದೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಧಾಮರ್ಿಕ ಅನುಯಾಯಿಗಳ ನಡುವಿನ ಘರ್ಷಣೆಯು ಜನಾಂಗೀಯ ಯುದ್ದಕ್ಕೆ ಹೆಚ್ಚೆಚ್ಚು ಕಾರಣವಾಗಿದೆ. ಸೂಡಾನ್, ಇಥಿಯೋಪಿಯಾ ಮತ್ತು ಸೋಮಾಲಿಯಾಗಳಲ್ಲಿನ ಜನಾಂಗೀಯ ಘರ್ಷಣೆಗಳಿಂದಾಗಿ ಅಲ್ಲಿನ ಜನರೆಲ್ಲ ನಿರಾಶ್ರಿತ ಶಿಬಿರಗಳಲ್ಲೇ ಬಹುತೇಕ ತಮ್ಮೆಲ್ಲ ಜೀವನವನ್ನು ಕಳೆದಿದ್ದಾರೆ. 1994ರಲ್ಲಿ ರುವಾಂಡಾದಲ್ಲಿ ಘೋರವಾದ ಜನಾಂಗೀಯ ಘರ್ಷಣೆ ನಡೆದು ಬಹುಸಂಖ್ಯಾತ ಹುಟು ಜನಾಂಗವು ಅಲ್ಪಸಂಖ್ಯಾತ ಟುಟ್ಸಿ ಜನಾಂಗದ ಮೇಲೆ ಮಿಲಿಟರಿ ಕಗ್ಗೊಲೆ ನಡೆಸಿತು. ಆಫ್ರಿಕಾದ ಮಹಾಯುದ್ದಗಳು ಝೈರೇ ದೇಶ (ಇಂದಿನ ಕಾಂಗೋ)ದ ಮೇಲಿನ ನಿಯಂತ್ರಣಕ್ಕಾಗಿ ವಿವಿಧ ಪಂಗಡಗಳ ನಡುವೆ ಈ ಮಹಾಯುದ್ದಗಳು ಜರುಗಿದವು. ಇದರಲ್ಲಿ ಪ್ರಮುಖವಾಗಿ ನಾಲ್ಕು ಜನಾಂಗಗಳ ಸಶಸ್ತ್ರ ಗುಂಪುಗಳಿವೆ: ಮೊದಲನೆಯ ಗುಂಪಿನಲ್ಲಿ, ರುವಾಂಡ ಮತ್ತು ಬುರುಂಡಿ ದೇಶಗಳಲ್ಲಿ ಟುಟ್ಸಿ ಜನಾಂಗವು ಪ್ರಾಬಲ್ಯ ಹೊಂದಿದೆ. ರುವಾಂಡ ಮತ್ತು ಬುರುಂಡಿಯ ರಾಷ್ಟ್ರೀಯ ಭದ್ರತೆ ಮತ್ತು ನೈಸಗರ್ಿಕ ಸಂಪನ್ಮೂಲಗಳ ಹಂಚಿಕೆಗಾಗಿ ಈ ಸಕರ್ಾರಗಳು ರುವಾಂಡಾದ ಮೈತ್ರಿ ಸೇನೆಯನ್ನು ನಿಮರ್ಿಸಿವೆ. ಈ ಮೈತ್ರಿ ಸೇನೆ ಹಾಗೂ ಟುಟ್ಸಿ ಜನಾಂಗದ ಮಿಲಿಟರಿ ಗುಂಪು ಉಗಾಂಡಾದ ಮೈತ್ರಿ ಸೇನೆಯ ವಿರುದ್ದ ಕಾದಾಡಿತು. ಎರಡನೆಯದು, ಹುಟು ಮೈತ್ರಿ ಕೂಟವು 1994ರಲ್ಲಿ ರುವಾಂಡಾದಲ್ಲಿ ನಡೆದ ನರಮೇಧಕ್ಕೆ ಕಾರಣವಾಗಿದೆ. ಇದರಲ್ಲಿ ರುವಾಂಡಾದ ಹುಟು ಮತ್ತು ಬುರುಂಡಿಯ ದಂಗೆಕೋರ ಗುಂಪುಗಳು ಸೇರಿಕೊಂಡಿವೆ. ಬುರುಂಡಿ ಸಕರ್ಾರವನ್ನು ಕಿತ್ತೊಗೆಯುವುದು, ಕಾಂಗೋದ ಹುಟು ಜನಾಂಗ ಮತ್ತು ಮಾಯಿ-ಮಾಯಿ ಎಂಬ ಹೆಸರಿನ ಮಿಲಿಟರಿ ಗುಂಪಿನ ಮೇಲೆ ಯುದ್ದ ಮಾಡುವುದು ಮತ್ತು ನಿಸರ್ಗದ ಸಂಪತ್ತಿನ ನಿಯಂತ್ರಣ ಇದರ ಉದ್ದೇಶ. ಈ ಕೂಟವು ರುವಾಂಡ ಮತ್ತು ಬುರುಂಡಿಯ ಟುಟ್ಸಿ ಸೇನೆಯ ವಿರುದ್ದ ಸದಾ ಕತ್ತಿ ಮಸೆಯುತ್ತಿದೆ. ಮೂರನೆಯದಾಗಿ, ಉಗಾಂಡಾದ ಮೈತ್ರಿ ಕೂಟವು ಉಗಾಂಡಾ ರಾಷ್ಟ್ರೀಯ ಸೇನೆ ಮತ್ತು ಬಂಡುಕೋರರ ಮೈತ್ರಿ ಕೂಟವಾಗಿದೆ. ಇದು ರಿಪಬ್ಲಿಕ್ ಕಾಂಗೋದ ಈಶಾನ್ಯ ಮತ್ತು ಉತ್ತರ ದಿಕ್ಕಿನ ಕೇಂದ್ರೀಯ ಭಾಗದ ಮೇಲೆ ನಿಯಂತ್ರಣ ಹೊಂದಿದೆ. ಇದರ ಉದ್ದೇಶ ಕಾಂಗೋ ಸಕರ್ಾರದ ಸೇನೆಯ ದಾಳಿಯಿಂದ ತನ್ನ ಸಂಪನ್ಮೂಲ ಮತ್ತು ಭೂಭಾಗವನ್ನು ರಕ್ಷಿಸಿಕೊಳ್ಳುವುದು. ನಾಲ್ಕನೆಯದಾಗಿ, ಕಿನ್ಸಾಶಾ ಮೈತ್ರಿಕೂಟದಲ್ಲಿ ಕಾಂಗೋ ಸಕರ್ಾರ, ಮಾಯಿ-ಮಾಯಿ ಗುಂಪು ಮತ್ತು ಮೈತ್ರಿ ದೇಶಗಳಾದ ಜಿಂಬಾಬ್ವೆ, ಅಂಗೋಲಾ, ಸೂಡಾನ್, ಛಡ್ ಮತ್ತು ನಮೀಬಿಯಾ ದೇಶಗಳು ಒಟ್ಟಿಗಿವೆ. ಈ ಮೈತ್ರಿಕೂಟವು ರಿಪಬ್ಲಿಕ್ ಕಾಂಗೋ ದೇಶದ ಪೂರ್ವ ಮತ್ತು ದಕ್ಷಿಣ ಭಾಗದ ಮೇಲೆ ನಿಯಂತ್ರಣ ಹೊಂದಿದೆ. ತನ್ನ ಗಡಿಯನ್ನು ರಕ್ಷಿಸಿಕೊಂಡು ನೈಸಗರ್ಿಕ ಸಂಪನ್ಮೂಲವನ್ನು ನಿಯಂತ್ರಿಸುವುದು ಇದರ ಉದ್ದೇಶ. ಆಫ್ರಿಕಾದ ಮೊದಲನೇ ಮಹಾಯುದ್ದ ರುವಾಂಡಾದ ಹುಟು ಮತ್ತು ಬುರುಂಡಿಯ ದಂಗೆಕೋರ ಗುಂಪುಗಳು 1994ರಲ್ಲಿ ನಡೆಸಿದ ರುವಾಂಡಾ ನರಮೇಧದ ಅಂತ್ಯದಲ್ಲಿ ರುವಾಂಡಾ ಸಕರ್ಾರಿ ಸೇನೆಯ ಪ್ರತಿದಾಳಿಗೆ ಹೆದರಿ 20 ಲಕ್ಷ ಹುಟು ಜನತೆಯು ನಿರಾಶ್ರಿತರಾಗಿ ರುವಾಂಡಾವನ್ನು ತ್ಯಜಿಸಿ ಪಕ್ಕದ ಝೈರೇ ಮತ್ತು ಟಾಂಜೇನಿಯಾ ದೇಶಗಳಿಗೆ ಓಡಿಹೋದರು. ಇದರಲ್ಲಿ ನರಮೇಧ ನಡೆಸಿದ ಹುಟು ಜನಾಂಗದ ನಾಯಕರು ಇದ್ದರು. ಝೈರೇಯ ಬುಕಾವು, ಗೋಮ ಮತ್ತು ಉವಿರಾ ಪ್ರದೇಶಗಳಲ್ಲಿ ನೆಲೆಯೂರಿದ್ದ ನಿರಾಶ್ರಿತರ ಶಿಬಿರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಈ ನಾಯಕರು ಯಶಸ್ವಿಯಾದರು. ಇವರಿಗೆ ಬುರುಂಡಿಯ ಟುಟ್ಸಿ ಜನಾಂಗದ ಸಕರ್ಾರವನ್ನು ಕಿತ್ತೊಗೆಯಲು ಯತ್ನಿಸುತ್ತಿದ್ದ ಹುಟು ಜನತೆಯ ಸಂಘಟನೆ ಮತ್ತು ಝೈರೇಯ ಅಧ್ಯಕ್ಷ ಮೊಬುಟು ಸೆಸೆ ಸೆಕೊ ರವರು ಬೆಂಬಲವಾಗಿ ನಿಂತರು. ನೆರೆಯ ನೈರೋಬಿ, ಕೀನ್ಯಾ, ಅಮೇರಿಕಾ ಮತ್ತು ಯೂರೋಪ್ ರಾಷ್ರಗಳಿಂದ ಸಂಪನ್ಮೂಲ ಮತ್ತು ಶಸ್ತ್ರಾಸé್ರಗಳನ್ನು ಸಂಗ್ರಹಿಸುತ್ತಾ ನಿರಾಶ್ರಿತ ಜನತೆಗೆ ಮಿಲಿಟರಿ ತರಬೇತಿ ನೀಡಿ ಸನ್ನದ್ದಗೊಳಿಸಿದರು. ಅಂತಿಮವಾಗಿ, ಸೆಂಬ್ಲಮೆಂಟ್ ಡೆಮಕ್ರಟಿಕ್ ಪೋರ್ ಲ ರುವಾಂಡಾ (ಆರ್ಡಿಆರ್) ಎಂಬ ಸಂಘಟನೆಯ ನೇತೃತ್ವದಲ್ಲಿ ರುವಾಂಡಾದ ಹುಟು ಮತ್ತು ಬುರುಂಡಿಯ ದಂಗೆಕೋರ ಗುಂಪುಗಳು ರುವಾಂಡಾ ಸಕರ್ಾರದ ವಿರುದ್ದ 1995-1996ರಲ್ಲಿ ಯುದ್ದ ಸಾರಿದವು. ಇದಕ್ಕೆ ಪ್ರತ್ಯುತ್ತರವಾಗಿ, ಪಾಲ್ ಕಗಾಮೆ ನಾಯಕತ್ವದ ರುವಾಂಡಾ ಸಕರ್ಾರಿ ಸೇನೆಯು ಬಂಡಾಯ ಗುಂಪುಗಳ ನಾಯಕ ಕಬಿಲಾ ಸಹಕಾರದಲ್ಲಿ ಪೂರ್ವ ಝೈರೇಯ ಮೇಲೆ ದಾಳಿಯಿಟ್ಟಿತು. ಆರ್ಡಿಆರ್ ಸೇನಾ ನೆಲೆಗಳನ್ನು ಧ್ವಂಸಗೊಳಿಸಿತು. ಈ ಪ್ರತಿ ದಾಳಿಯಿಂದ ನಿರಾಶ್ರಿತ ಜನತೆ ದಿಕ್ಕೆಟ್ಟು ಚೆಲ್ಲಾಪಿಲ್ಲಿಯಾದರು. 6.0 ಲಕ್ಷ ಜನ ನಿರಾಶ್ರಿತರಾಗಿ ಕಿವುಸ್ ಪ್ರದೇಶಕ್ಕೂ, ಸುಮಾರು 4.0ಲಕ್ಷ ಜನರು ಟಾಂಜೇನಿಯಾಕ್ಕೂ ಓಡಿಹೋದರು. ಸಾವಿರಗಟ್ಟಲೆ ಜನ ಹಸಿವು, ಹಿಂಸೆಗಳಿಂದ ಮರಣ ಹೊಂದಿದರು. ಮೇ, 1997ರಲ್ಲಿ ರಾಜಧಾನಿ ಕಿನ್ಸಾಸಾ ವನ್ನು ಪ್ರವೇಶಿಸಿದಾಕ್ಷಣ ಝೈರೇ ಅಧ್ಯಕ್ಷ ಮೊಬುಟು ಅಲ್ಲಿಂದ ಪರಾರಿಯಾದ. ಯುದ್ದಕ್ಕೆ ಅಂತ್ಯ ಹಾಡಿ ರಿಪಬ್ಲಿಕ್ ಕಾಂಗೋದ ಅಧ್ಯಕ್ಷ ಕಬಿಲಾ ಎಂದು ಘೋಷಿಸಲಾಯಿತು. ಆಫ್ರಿಕಾದ ಎರಡನೇ ಮಹಾಯುದ್ದ ಜಾಂಬಿಯಾ, ಅಂಗೋಲಾ, ಕಾಂಗೋ-ಬೆಜ್ಜವಿಲ್ಲೆ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಛಡ್, ಸೂಡಾನ್, ಬರುಂಡಿ ಮತ್ತು ಟಾಂಜೇನಿಯಾಗಳಲ್ಲಿ ಚದುರಿಹೋಗಿದ್ದ ಹುಟು ಜನಾಂಗದ ಹೋರಾಟಗಾರರು ಮತ್ತೆ ರುವಾಂಡಾ ವಿಮೋಚನಾ ಮೈತ್ರಿ (ಎಎಲ್ಐಆರ್) ಯನ್ನು ಸಂಘಟಿಸಿ ಅದು 1997ರ ಹೊತ್ತಿಗೆ ಕೆಲಸ ಮಾಡಲಾರಂಭಿಸಿತು. ಕಬಿಲಾ ಸಕರ್ಾರದ ವಿರುದ್ದ ಕತ್ತಿ ಮಸೆಯಲಾರಂಬಿಸಿದರು. ಎರಡನೆ ಕಾಂಗೋ ಮಹಾಯುದ್ದವನ್ನು ಆಫ್ರಿಕಾದ ಮಹಾಯುದ್ದವೆಂದೂ ಕರೆಯಲಾಗುತ್ತದೆ. ಆಫ್ರಿಕಾದ 8 ರಾಷ್ಟ್ರಗಳ ನಡುವೆ ನಡೆದ ಈ ಯುದ್ದವು 1998ರಲ್ಲಿ ಆರಂಭವಾಗಿ 2003ರಲ್ಲಿ ಕೊನೆಗೊಂಡಿತು. ಎರಡನೆ ವಿಶ್ವ ಮಹಾಯದ್ದಾನಂತರದಲ್ಲಿ ನಡೆದ ಅತ್ಯಂತ ಬರ್ಭರ ಯುದ್ದ ಇದಾಗಿದ್ದು ಇದರಲ್ಲಿ 25 ಸಶಸ್ತ್ರ ಗುಂಪುಗಳು ಭಾಗಿಯಾಗಿದ್ದು ಸುಮಾರು 38ಲಕ್ಷ ಜನ ಬಹುತೇಕ ಹಸಿವು ಮತ್ತು ಬಡತನದಿಂದ ಅಸುನೀಗಿದ್ದಾರೆ. ಲಕ್ಷಾಂತರ ಜನರು ಈ ಯುದ್ದದಿಂದಾಗಿ ನಿರಾಶ್ರಿತರಾಗಿದ್ದಾರೆ. ರಚಿಸಿ ಲಾರೆಂಟ್ ಕಬಿಲಾ ರನ್ನು ರಿಪಬ್ಲಿಕ್ ಕಾಂಗೋದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅಂಗೋಲಾ, ಜಿಂಬಾಬ್ವೆ, ಛಡ್, ಸೂಡಾನ್ ಮತ್ತು ಲಿಬ್ಯಾಗಳು ಕಬಿಲಾ ಬೆಂಬಲಕ್ಕೆ ನಿಂತವು. ಆದರೆ, 2002ರಲ್ಲಿ ಅವರನ್ನು ಹತ್ಯೆ ಮಾಡಿದ್ದರಿಂದ ಅವರ ಮಗ ಜೋಸೆಫ್ ಕಬಿಲಾರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಮಧ್ಯಂತರ ಸಕರ್ಾರದ ಅವಧಿ ಮುಗಿದ ನಂತರ 2006ರಲ್ಲಿ ಸಾಮಾನ್ಯ ಚುನಾವಣೆ ನಡೆದು ಕಬಿಲಾ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು. ಜಾಗತೀಕರಣ ಯುಗದಲ್ಲಿ ಆಫ್ರಿಕಾ ನ್ಶೆಜೀರಿಯಾವು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಇಡೀ ವಿಶ್ವದಲ್ಲೇ ಹನ್ನೊಂದನೆ ಸ್ಥಾನದಲ್ಲಿದೆ. ನ್ಶೆಜೀರಿಯಾ ಸಕರ್ಾರದ ಶೇ. 80 ರಷ್ಟು ಆದಾಯವು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿದ್ದು ಯೂರೋಪ್ ಮತ್ತು ಅಮೇರಿಕಾಗಳು ಪ್ರಧಾನವಾಗಿ ಆಮದು ಮಾಡಿಕೊಳ್ಳುತ್ತವೆ. ಅಂಗೋಲಾವು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಆಫ್ರಿಕಾದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅದರ ಶೇ. 90ರಷ್ಟು ಆದಾಯವು ಪೆಟ್ರೋಲಿಯಂ ರಪ್ತಿನಿಂದ ಬರುತ್ತಿದೆ. ಚೀನಾ ಈ ದೇಶದ ಪ್ರಮುಖ ಆಮದುದಾರ ರಾಷ್ಟ್ರವೆನಿಸಿದೆ. ಸೂಡಾನ್ ದೇಶವೂ ಕೂಡ ತನ್ನ ಬಹುಪಾಲು ಆದಾಯವನ್ನು ಪೆಟ್ರೋಲಿಯಂ ರಫ್ತಿನಿಂದಾಗಿ ಗಳಿಸುತ್ತಿದೆ. ಆದರೂ ಆಫ್ರಿಕಾದಲ್ಲಿ 1985ರಿಂದೀಚೆಗೆ ಬಡತನ ಮತ್ತು ಮಿಲಿಟರಿ ಗಲಭೆಗಳು ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿವೆ. 1989ರಲ್ಲಿ ಸೋವಿಯತ್ ಒಕ್ಕೂಟವು ವಿಘಟನೆಗೊಂಡದ್ದರಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಫ್ರಿಕಾವನ್ನು ಮತ್ತಷ್ಟು ಮಣಿಸಿ ಹೊಸ ರೂಪದ ಸುಲಿಗೆಕೋರ ಆಥರ್ಿಕ ನೀತಿಗಳನ್ನು ಹೇರಲಾಗುತ್ತಿದೆ. ಒಂದರ್ಥದಲ್ಲಿ ಪ್ರಪಂಚದೆಲ್ಲೆಡೆ ಜಾಗತೀಕರಣ ನೀತಿಯನ್ನು ಜಾರಿಮಾಡುವ ಮೊದಲೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮೊದಲಿಗೆ ಅದನ್ನು ಅನಧಿಕೃತವಾಗಿ ಆಫ್ರಿಕಾ ರಾಷ್ಟ್ರಗಳಲ್ಲಿ 1980ರ ದಶಕದ ಸುಮಾರಿಗೆ ಜಾರಿ ಮಾಡಿದ್ದವೆಂದೇ ಹೇಳಬಹುದು. ಆಫ್ರಿಕನ್ ರಾಷ್ಟ್ರಗಳನ್ನು ಒಂದೇ ಮಾರುಕಟ್ಟೆಗೆ ಎಳೆತರುವುದು ನವ-ವಸಾಹತುವಾದದ ರೂಪಗಳಲ್ಲೊಂದು. ಆಫ್ರಿಕಾದ ರಾಷ್ಟ್ರಗಳ ಸ್ವಾವಲಂಬನೆ ಮತ್ತು ಸ್ವತಂತ್ರ ಆಥರ್ಿಕ ಹಾದಿಗಳನ್ನು ಬುಡಮೇಲುಗೊಳಿಸಿದ ಪಾಶ್ಚಿಮಾತ್ಯ ರಾಷ್ಟ್ರಗಳು, ವಿಶ್ವಬ್ಯಾಂಕ್ ಮತ್ತು ಐಎಂಎಫ್-ಪ್ರೇರಿತ ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮಗಳು, ಉದಾರ ಆಥರ್ಿಕ ನೀತಿ, ಸಾರ್ವಜನಿಕ ಉತ್ಪಾದನಾ ಕ್ಷೇತ್ರವನ್ನು ಕಿತ್ತೊಗೆಯುವುದು, ಮತ್ತು ಮುಕ್ತ ಮಾರುಕಟ್ಟೆ ನೀತಿಗಳನ್ನು ಪರಿಹಾರವೆಂಬಂತೆ ನೀಡಿದವು. ಪಶ್ಚಿಮ ರಾಷ್ಟ್ರಗಳಲ್ಲಿ ಮುಖ್ಯವಾಗಿ ಅಮೇರಿಕಾ, ಬ್ರಿಟನ್ ಮತ್ತು ಫ್ರಾನ್ಸ್ಗಳು ಅಲ್ಲಿ ರಾಜಕೀಯ ಸುಧಾರಣೆ, ಬಹುಪಕ್ಷ ವ್ಯವಸ್ಥೆ, ಪತ್ರಿಕೋದ್ಯಮದ ಮುಕ್ತ ಸ್ವಾತಂತ್ರ್ಯ ಗಳ ನೆಪದಲ್ಲಿ ಮೇಲಿನ ವಿಧಾನಗಳನ್ನು ಪರಿಹಾರ ರೂಪದಲ್ಲಿ ಉಣಬಡಿಸಿದವು. ಜಾಗತೀಕರಣವು ಸ್ಥಳೀಯ ಉತ್ಪಾದನಾ ವ್ಯವಸ್ಥೆಯನ್ನು ಹಾಳುಗೆಡವಿ ಜಾಗತಿಕ ಸ್ಪಧರ್ಾ ಮಾರುಕಟ್ಟೆಯಲ್ಲಿ ಆಫ್ರಿಕಾದ ಉತ್ಪನ್ನಗಳನ್ನು ಮೂಲೆಗೆ ತಳ್ಳಿತು. 1992 ಮತ್ತು 1994ರ ನಡುವೆ ಜಿಂಬಾಬ್ವೆಯ ದೊಡ್ಡ ಜವಳಿ ಕಾಖರ್ಾನೆ ಸ್ಭೆರಿದಂತೆ ಸುಮಾರು 60ಕ್ಕೂ ಹೆಚ್ಚು ಕಾಖರ್ಾನೆಗಳನ್ನು ಮುಚ್ಚಲಾಯಿತು. ರಫ್ತು ಕುಸಿತ ಅಸಮಾನ ವ್ಯಾಪಾರ ನೀತಿಗಳಿಂದ ಆಫ್ರಿಕಾಗೆ ಬಹಳ ಪೆಟ್ಟು ಬಿದ್ದಿತು. ರಪ್ತು ಉತ್ಪನ್ನಗಳಿಗೆ ದೊರಕುತ್ತಿದ್ದ ಬೆಲೆಯು ಆಮದು ಉತ್ಪನ್ನಗಳಿಗೆ ಹೋಲಿಸಿದಲ್ಲಿ ಏನೇನೂ ಇರಲಿಲ್ಲ. ಜಾಗತಿಕ ವ್ಯಾಪಾರದಲ್ಲಿ ಆಫ್ರಿಕಾದ ಪಾಲು ಕುಸಿದು ಹೋಗಲು ಕಾರಣವೆಂದರೆ ಬಹುತೇಕ ರಾಷ್ಟ್ರಗಳು ಕೇವಲ ಕೆಲವೇ ಉತ್ಪನ್ನಗಳ ರಪ್ತಿನ ಮೇಲೆ ಅವಲಂಬಿತವಾಗಿದ್ದವು. ಒಟ್ಟಾರೆ ರಪ್ತಿನಲ್ಲಿ ಶೇ. 75ರಷ್ಟು ಪಾಲು ಒಂದೇ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ರಾಷ್ಟ್ರಗಳೆಂದರೆ: ಅಂಗೋಲ, ಬೊಟ್ಸಾವಾನಾ, ಬುರುಂಡಿ, ಕಾಂಗೋ, ಗ್ಯಾಬನ್, ನೈಜರ್, ನೈಜೀರಿಯಾ, ಸೋಮಾಲಿಯಾ, ಉಗಾಂಡಾ ಮತ್ತು ಜಾಂಬಿಯಾ. ತಮ್ಮ ರಪ್ತು ಪ್ರಮಾಣದಲ್ಲಿ ಕನಿಷ್ಟ ಶೇ. 25 ರಷ್ಟನ್ನು ನಾಲ್ಕಕ್ಕೂ ಹೆಚ್ಚು ಉತ್ಪನ್ನಗಳಿಂದ ಗಳಿಸುವ ರಾಷ್ಟ್ರಗಳೆಂದರೆ: ಗ್ಯಾಂಬಿಯಾ, ಲೆಸೊತೊ, ದಕ್ಷಿಣ ಆಫ್ರಿಕಾ, ಸ್ವಾಜಿಲ್ಯಾಂಡ್, ಟ್ಯಾಂಜೇನಿಯಾ ಮತ್ತು ಜಿಂಬಾಬ್ವೆ. 1980 ರಿಂದ 2000 ರವರೆಗೆ, ಆಫ್ರಿಕಾದ ರಪ್ತು ಪ್ರಮಾಣವು ಕುಸಿತಗೊಂಡು ಸಕ್ಕರೆ ಶೇ. 77 ರಷ್ಟು ಕೋಕೋ ಶೇ. 71, ಕಾಫಿ ಶೇ. 64ರಷ್ಟು ಮತ್ತು ಹತ್ತಿಯು ಶೇ. 47ರಷ್ಟು ಕುಸಿತಗೊಂಡಿದೆ. ಇದೇ ವೇಳೆ ಆಫ್ರಿಕಾದಿಂದ ಅಮೇರಿಕಾಗೆ ರಫ್ತಾಗುವ ಕಡಲೆಕಾಯಿ ಮೇಲಿನ ಆಮದು ಸುಂಕವನ್ನು ಅಮೇರಿಕಾವು ಶೇ. 132 ರಷ್ಟು ಹೆಚ್ಚಿಸಿದೆ. ಈ ಮಧ್ಯೆ ಚೀನಾ ಆಫ್ರಿಕಾ ನಡುವಿನ ಬಾಂಧವ್ಯ ವೃದ್ದಿಸುತ್ತಿದೆ. 1990 ರ ಹೊತ್ತಿಗೆ ಆಫ್ರಿಕಾ-ಚೀನಾದ ವ್ಯಾಪಾರವು ಶೇ. 700 ರಷ್ಟು ಬೆಳವಣಿಗೆ ಹೊಂದಿದೆ. ಅಂಗೋಲಾ, ಸೂಡಾನ್ ಮತ್ತು ಇನ್ನಿತರ ದೇಶಗಳಿಂದ ಚೀನಾ ಪೆಟ್ರೋಲಿಯಂ ನ್ನು ಆಮದು ಮಾಡಿಕೊಳ್ಳುತ್ತಿದೆ. ಅಮೇರಿಕಾ ಮತ್ತು ಫ್ರಾನ್ಸ್ನ ನಂತರ ಚೀನಾ ಅತಿ ದೊಡ್ಡ ವ್ಯಾಪಾರ ಮೈತ್ರಿಯನ್ನು ಏರ್ಪಡಿಸಿದೆ. ಚೀನಾದ ಮೈತ್ರಿಯು ಬರೆ ವ್ಯಾಪಾರೋದ್ದೇಶಕ್ಕೆ ಮಾತ್ರವೇ ಸೀಮಿತವಾಗಿರದೆ, ಆಫ್ರಿಕಾದಲ್ಲಿ ರೈಲು ಮಾರ್ಗ, ಶಾಲೆಗಳು, ರಸ್ತೆಗಳು, ಆಸ್ಪತ್ರೆಗಳು, ಸೇತುವೆಗಳು, ಮತ್ತು ಕಛೇರಿ ನಿಮರ್ಾಣಗಳಂಥಹ ಅಭಿವೃದ್ಧಿ ಕಾರ್ಯಗಳಿಗೂ ಸಹ ನೆರವು ನೀಡುತ್ತಿದೆ. ಆಫ್ರಿಕಾ ಪಡೆದಿದ್ದ 10 ಬಿಲಿಯನ್ ಡಾಲರ್ ಸಾಲವನ್ನು ಚೀನಾ ಇತ್ತೀಚೆಗಷ್ಟೆ ಮನ್ನಾ ಮಾಡಿತು. ಆಫ್ರಿಕಾ ದೇಶಗಳಲ್ಲಿ ಶಾಂತಿ ಪಾಲನೆಗಾಗಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಸುಮಾರು 1,500 ಸೈನಿಕರನ್ನು ಅದು ಕಳುಹಿಸಿದೆ. ಆರೋಗ್ಯ ಸೇವೆ ಒದಗಿಸಲು ತನ್ನ ಡಾಕ್ಟರುಗಳನ್ನು ಆಫ್ರಿಕಾಗೆ ಕಳುಹಿಸಿದೆ. ಆಫ್ರಿಕಾದ ಕಾಮರ್ಿಕರು ಮತ್ತು ವಿದ್ಯಾಥರ್ಿಗಳು ಚೀನಾದ ವಿಶ್ವವಿದ್ಯಾನಿಲಯ ಮತ್ತು ತರಬೇತಿ ಕೇಂದ್ರಗಳಲ್ಲಿ ತರಬೇತು ಪಡೆಯುತ್ತಿದ್ದಾರೆ. ಇನ್ನೊಂದೆಡೆ, ನಿರಂತರವಾಗಿ ಆಫ್ರಿಕನ್ ರಾಷ್ಟ್ರಗಳಿಗೆ ಅಗಾಧ ಪ್ರಮಾಣದ ಸಾಲ ನೀಡುತ್ತಾ ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಪಾರ ಹೊರೆಯನ್ನು ಹೇರಿದವು. ಉದಾಹರಣೆಗೆ, 1990ರಲ್ಲಿ 60 ಬಿಲಿಯನ್ ಡಾಲರ್ ಸಾಲ ಪಡೆದದ್ದಕ್ಕೆ 1997ರ ಹೊತ್ತಿಗೆ ಆಫ್ರಿಕಾದ ರಾಷ್ಟ್ರಗಳು 162 ಬಿಲಿಯನ್ ಡಾಲರ್ ಬಡ್ಡಿ ಸಮೇತ ಸಾಲ ಮರು ಪಾವತಿ ಮಾಡಿದ್ದವು. ಕುತ್ತಿಗೆಯ ಸುತ್ತ ಉಸಿರುಗಟ್ಟುವಂತೆ ಬಿಗಿದಿದ್ದ ಸಾಲವನ್ನು ಮರುಪಾವತಿ ಮಾಡಲಾಗದೆ ಮಿಸುಕಾಡುತ್ತಿದ್ದವು. ಇದರಿಂದಾಗಿ ವಿಶ್ವ ಸಂಸ್ಥೆಯ ವರದಿಯಂತೆ, ಸರಾಸರಿ ಆಫ್ರಿಕಾದ ಕುಟುಂಬಕ್ಕೆ 25 ವರ್ಷಗಳ ಹಿಂದೆ ಸಿಗುತ್ತಿದ್ದ ಆಹಾರಕ್ಕಿಂತ ಶೇಕಡಾ 20ರಷ್ಟು ಕಡಿಮೆ ಆಹಾರ ದೊರಕುತ್ತಿದೆ. ಅಮೇರಿಕಾದ ಪ್ರಜೆಯೊಬ್ಬ ಗಳಿಸುವ ಪ್ರತಿ ಡಾಲರ್ಗೆ ಆಫ್ರಿಕಾದ ಪ್ರಜೆ ಕೇವಲ 0.06 ಡಾಲರ್ ಗಳಿಸುತ್ತಿದ್ದಾನಷ್ಟೆ. 1998ರಲ್ಲಿ ಆಫ್ರಿಕಾವು ಶೇ. 10ರಷ್ಟು ವಿಶ್ವ ಜನಸಂಖ್ಯೆಯನ್ನು ಹೊಂದಿದ್ದರೆ, ಕೇವಲ ಶೇ. 1ರಷ್ಟು ಕೈಗಾರಿಕಾ ಉತ್ಪಾದನೆಯ ಪಾಲನ್ನು ಹೊಂದಿತ್ತು. ಇಸ್ತ್ರೇಲ್ ಮತ್ತು ಬೆಲ್ಜಿಯಂ ದೇಶಗಳು ಅಗಾಧ ಮೊತ್ತದ ಶಸ್ತ್ರಾಸé್ರಗಳನ್ನು ಉಗಾಂಡಕ್ಕೆ ನೀಡಿ ಬದಲಿಗೆ ಅಲ್ಲಿನ ಬೆಲೆಬಾಳುವ ವಜ್ರಗಳನ್ನು ಕೊಳ್ಳೆ ಹೊಡೆಯುತ್ತಿವೆ. ಆಫ್ರಿಕಾ ರಾಷ್ರಗಳಲ್ಲಿ ಮಕ್ಕಳ ಅಪೌಷ್ಟಿಕತೆಯ ಪ್ರಮಾಣವು ಶೇ. 25 ರಿಂದ 50ರವರೆಗೂ ಇದೆ. ಹೆಚ್.ಐ.ವಿ ರೋಗದ ಸೋಂಕಿಗೆ ತುತ್ತಾದವರ ಸಂಖ್ಯೆಯು ವಿಶೇಷವಾಗಿ ಪೂರ್ವ, ಮಧ್ಯ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಎಬೋಲಾದಂಥಹ ಅಪಾಯಕಾರಿ ವೈರಸ್ ರೋಗಗಳನ್ನು ನಿಯಂತ್ರಿಸಲಾಗದೆ ಸಾವಿರಾರು ಆಪ್ರಿಕನ್ನರು ಮರಣವಾದರು. ಪ್ರತಿಭಾ ಪಲಾಯನ: ಪ್ರತಿ ವರ್ಷ ಸುಮಾರು 70,000 ಪರಿಣಿತ ಕೆಲಸಗಾರರು ಆಫ್ರಿಕಾದಿಂದ ಅಭಿವೃದ್ಧಿ ಹೊಂದಿದ ರಾಷ್ರಗಳಿಗೆ ವಲಸೆ ಹೋಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಜಾಂಬಿಯಾವು ತನ್ನ 1400 ಡಾಕ್ಟರುಗಳಲ್ಲಿ ಸುಮಾರು 400 ಮಂದಿಯನ್ನು ಪ್ರತಿಭಾ ಪಲಾಯನದಿಂದಾಗಿ ಕಳೆದುಕೊಂಡಿದೆ. ಉಲ್ಲೇಖ ಆಕರ ಗ್ರಂಥ: 1. ಆಫ್ರಿಕಾ ಇನ್ ದಿ ಟ್ವೆಂಟಿ ಫಸ್ಟ್ ಸೆಂಚುರಿ : ಎ ಫ್ಯೂಚರಿಸ್ಟಿಕ್ ಎಕ್ಸರ್ಸ್ಶೆಜ್ 2. ಕಾಲಿನ್ಸ್ ವಲ್ಡರ್್ ಅಟ್ಲಾಸ್ & ಎನ್ಸೈಕ್ಲೋಪಿಡಿಯ 3. ದಿ ಗ್ರೇಟ್ ಸೋವಿಯತ್ ಎನ್ಸೈಕ್ಲೋಪಿಡಿಯ ೪. ವಿಚ್ ವೇ ಆಫ್ರಿಕಾ?, ಬೆಸಿಲ್ ಡೇವಿಡ್ಸನ್, ಮೂರನೇ ಮುದ್ರಣ, ಪೆಂಗ್ವಿನ್ ಬುಕ್ಸ್, 1973. ೫. ನ್ಯೂ ಥಿಯರೀಸ್ ಆಫ್ ರೆವಲ್ಯೂಷನ್, ಜಾಕ್ ವುಡ್ಸ್, 1977, ಇಂಟರ್ ನ್ಯಾಷನಲ್ ಪಬ್ಲಿಷರ್ಸ್, ನ್ಯೂಯಾಕರ್್. ೬ ದಿ ಸೌತ್ ಆಫ್ರಿಕನ್ ವಕರ್ಿಂಗ್ ಕ್ಲಾಸ್: ಪ್ರೊಡಕ್ಷನ್, ರಿಪ್ರೊಡಕ್ಷನ್ ಅಂಡ್ ಪಾಲಿಟಿಕ್ಸ್, ಪ್ಯಾಟ್ರಿಕ್ ಬಾಂಡ್, ಡಾಲರ್ಿನ್ ಮಿಲ್ಲರ್ ಮತ್ತು ಗ್ರೆಗ್ ರಾಯಟರ್ಸ್, ಸೋಷಿಯಲಿಸ್ಟ್ ರಿಜಿಸ್ಟರ್, 2001. ಮೂಲಗಳು ಬಾಹ್ಯ ಸಂಪರ್ಕಗಳು ಆಫ್ರಿಕಾದ ನಾಗರೀಕತೆ ಆಫ್ರಿಕಾದ ಬಗ್ಗೆ ಆಫ್ರಿಕಾದ ಎಲ್ಲ ರಾಷ್ಟ್ರಗಳ ಬಗ್ಗೆ ಭೂಗೋಳ ಖಂಡಗಳು ವರ್ಗ;ಖಂಡಗಳು ವರ್ಗ;ಇತಿಹಾಸ ಆಫ್ರಿಕಾ
2183
https://kn.wikipedia.org/wiki/%E0%B2%86%E0%B2%A8%E0%B3%86%20%28%E0%B2%9A%E0%B2%A6%E0%B3%81%E0%B2%B0%E0%B2%82%E0%B2%97%29
ಆನೆ (ಚದುರಂಗ)
ಆನೆ ಚದುರಂಗದಲ್ಲಿ ಉಪಯೋಗವಾಗುವ ಕಾಯಿಗಳಲ್ಲಿ ಒಂದು. ಸಾಮಾನ್ಯವಾದ ಚದುರಂಗದ ಆಟಗಳಲ್ಲಿ ಮಂತ್ರಿಯನ್ನು ಬಿಟ್ಟರೆ ಆನೆ ಅತ್ಯಂತ ಪ್ರಬಲವಾದ ಕಾಯಿ. ಪ೦ದ್ಯದ ಪ್ರಾರಂಭದಲ್ಲಿ ಇಬ್ಬರು ಆಟಗಾರರ ಬಳಿಯೂ ಎರಡು ಆನೆಗಳಿರುತ್ತವೆ. ಆನೆ ನೇರ ರೇಖೆಗಳಲ್ಲಿ ಉದ್ದ ಸಾಲುಗಳು ಮತ್ತು ಅಡ್ಡಸಾಲುಗಳ ಮೇಲೆ ಚಲಿಸುತ್ತದೆ.ಆನೆ ಮತ್ತು ರಾಜ - ಎರಡೂ ಕಾಯಿಗಳೂ ಒಟ್ಟಿಗೇ ಚಲಿಸುವ "ಕ್ಯಾಸಲಿಂಗ್" ಎಂಬ ವಿಶೇಷ ನಡೆಯೂ ಉಂಟು. ಆನೆ ಚಲಿಸುವ ರೀತಿಯ ಪರಿಣಾಮವಾಗಿ ಖಾಲಿಯಿರುವ ಉದ್ದ ಸಾಲುಗಳ ತುದಿಯಲ್ಲಿ ಆನೆಯನ್ನು ಸ್ಥಾಪಿಸಲು ಆಟಗಾರರು ಪ್ರಯತ್ನಿಸುತ್ತಾರೆ. ಏಳನೇ ಅಡ್ಡಸಾಲಿನಲ್ಲಿ ಸ್ಥಾಪಿಸಿರುವ ಆನೆ ಬಹಳ ಪ್ರಬಲವಾದ ಪರಿಣಾಮ ಬೀರುತ್ತದೆ. ಚಿತ್ರ ಗ್ಯಾಲರಿ External links Piececlopedia: Rook by Fergus Duniho and Hans Bodlaender ಉಲ್ಲೇಖಗಳು ಚದುರಂಗ ಕ್ರೀಡೆ ಚದುರಂಗದ ಕಾಯಿ
2185
https://kn.wikipedia.org/wiki/%E0%B2%AE%E0%B3%80%E0%B2%B0%E0%B3%8D%20%E0%B2%B8%E0%B3%81%E0%B2%B2%E0%B3%8D%E0%B2%A4%E0%B2%BE%E0%B2%A8%E0%B3%8D%20%E0%B2%96%E0%B2%BE%E0%B2%A8%E0%B3%8D
ಮೀರ್ ಸುಲ್ತಾನ್ ಖಾನ್
ಮೀರ್ ಸುಲ್ತಾನ್ ಖಾನ್ (೧೯೦೫-೧೯೬೬) ಅವರ ಕಾಲದಲ್ಲಿ ಏಷ್ಯಾದ ಅತಿ ಪ್ರಸಿದ್ಧ ಚದುರ೦ಗ ಆಟಗಾರರು. ಈಗಿನ ಲೆಕ್ಕದ೦ತೆ ಅ೦ತಾರಾಷ್ಟ್ರೀಯ ಗ್ರ್ಯಾ೦ಡ್ ಮಾಸ್ಟರ್ ಮಟ್ಟದಲ್ಲಿ ಆಡಿದೆ ಮೊದಲ ಭಾರತೀಯರೂ ಹೌದು (ಇವರು ಆಡುತ್ತಿದ್ದ ಕಾಲದಲ್ಲಿ ಗ್ರ್ಯಾ೦ಡ್ ಮಾಸ್ಟರ್ ಎ೦ಬ ಪದವಿ ಕೊಡುವ ಅಭ್ಯಾಸ ಇನ್ನೂ ಪ್ರಾರ೦ಭವಾಗಿರಲಿಲ್ಲ). ೧೯೦೫ರಲ್ಲಿ ಪಂಜಾಬ್ ನ ಮಿತ್ಥಾ ದಲ್ಲಿ ಜನಿಸಿದ ಸುಲ್ತಾನ್ ಖಾನ್ ಅನಕ್ಷರಸ್ಥರು. ಸರ್ ಉಮರ್ ಹಯಾತ್ ಖಾನ್ ಎ೦ಬ ನವಾಬರ ಮನೆಯಲ್ಲಿ ಕೆಲಸದಲ್ಲಿದ್ದ ಸುಲ್ತಾನ್ ಖಾನರ ಚೆಸ್ ಪ್ರತಿಭೆ ಗಮನಕ್ಕೆ ಬ೦ದ ಮೇಲೆ ಉಮರ್ ಹಯಾತ್ ಖಾನ್ ಇವರಿಗೆ ಆಧುನಿಕ ಚೆಸ್ ಅನ್ನು ಹೇಳಿಕೊಟ್ಟರು. ೧೯೨೮ರಲ್ಲಿ ಅಖಿಲ ಭಾರತೀಯ ಚಾ೦ಪಿಯನ್ ಆದ ಸುಲ್ತಾನ್ ಖಾನ್ ೧೯೨೯ರಲ್ಲಿ ಉಮರ್ ಹಯಾತ್ ಖಾನರೊ೦ದಿಗೆ ಇ೦ಗ್ಲೆ೦ಡಿಗೆ ಹೋದರು. ಅಲ್ಲಿ ಬ್ರಿಟಿಷ್ ಚೆಸ್ ಆಟಗಾರರಾದ ವಿಲಿಯಮ್ ವಿ೦ಟರ್ ಮತ್ತು ಫ್ರೆಡೆರಿಕ್ ಯೇಟ್ಸ್ ಅವರಿ೦ದ ಇನ್ನಷ್ಟು ತರಬೇತಿ ಪಡೆದ ಸುಲ್ತಾನ್ ಖಾನ್ ೧೯೩೦, ೩೧, ೩೩ ರ ಚೆಸ್ ಒಲಿ೦ಪಿಯಾಡ್ ನಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ಪ್ರತಿನಿಧಿಸಿದರು. ೧೯೨೯, ೩೨ ಮತ್ತು ೩೩ ರಲ್ಲಿ ಬ್ರಿಟಿಷ್ ಚೆಸ್ ಚಾ೦ಪಿಯನ್ ಸಹ ಆದರು. ಅನಕ್ಷರಸ್ಥರಾಗಿ ಚೆಸ್ ನ ಆಳವಾದ ಅಧ್ಯಯನ ನಡೆಸದೆ ಇದ್ದರೂ ಅವರು ಆಡುತ್ತಿದ್ದ ಸಾಮರ್ಥ್ಯದಿ೦ದ ಅ೦ದಿನ ಚೆಸ್ ಪ್ರಪ೦ಚದಲ್ಲಿ ಬಹಳಷ್ಟು ಪ್ರಸಿದ್ದಿ ಪಡೆದರು. ಮೂರು ಜನ ವಿಶ್ವ ಚಾ೦ಪಿಯನ್ ರನ್ನು ಪ೦ದ್ಯಗಳಲ್ಲಿ ಸೋಲಿಸಿದ ಯಶಸ್ಸನ್ನೂ ಪಡೆದರು. ೧೯೩೩ರಲ್ಲಿ ಉಮರ್ ಹಯಾತ್ ಖಾನರೊ೦ದಿಗೆ ಭಾರತಕ್ಕೆ ಹಿ೦ದಿರುಗಿದ ಸುಲ್ತಾನ್ ಖಾನ್ ಮತ್ತೆ೦ದೂ ಅಧಿಕೃತವಾಗಿ ಚೆಸ್ ಆಡಲಿಲ್ಲ. ೧೯೬೬ರಲ್ಲಿ ಸರ್ಗೋಧಾ, ಪಾಕಿಸ್ತಾನದಲ್ಲಿ ನಿಧನ ಹೊ೦ದಿದರು. ಬಾಹ್ಯ ಸ೦ಪರ್ಕಗಳು ಮೀರ್ ಸುಲ್ತಾನ್ ಖಾನರ ಪ೦ದ್ಯಗಳು ಮೀರ್ ಸುಲ್ತಾನ್ ಖಾನರ ಅತಿ ಪ್ರಸಿದ್ಧ ಪ೦ದ್ಯ ಭಾರತದ ಚದುರಂಗ ಕ್ರೀಡಾಪಟುಗಳು ಚದುರಂಗ
2188
https://kn.wikipedia.org/wiki/%E0%B2%85%E0%B2%95%E0%B2%BF%E0%B2%B0%E0%B2%BE%20%E0%B2%95%E0%B3%81%E0%B2%B0%E0%B3%8B%E0%B2%B8%E0%B2%BE%E0%B2%B5%E0%B2%BE
ಅಕಿರಾ ಕುರೋಸಾವಾ
ಅಕಿರಾ ಕುರೋಸಾವಾ (黒澤 明 Kurosawa Akira, ಹಾಗೂ 黒沢 明) (ಮಾರ್ಚ್ ೨೩, ೧೯೧೦ – ಸೆಪ್ಟೆಂಬರ್ ೬, ೧೯೯೮)ಜಪಾನಿನ ಪ್ರಮುಖ ನಿರ್ದೇಶಕ, ನಿರ್ಮಾಪಕ, ಹಾಗೂ ಚಿತ್ರಕಥಾ ಲೇಖಕರಾಗಿದ್ದರು. ಇವರ ಚಿತ್ರಗಳು ಜಗತ್ತಿನಾದ್ಯಂತ ಪರಿಣಾಮಕಾರಿ ಮತ್ತು ಶ್ರೇಷ್ಠ ಚಿತ್ರಗಳಲ್ಲಿ ಕೆಲವಾಗಿ ಗುರುತಿಸಲಾಗುತ್ತದೆ. ವಿಶ್ವದಾದ್ಯಂತ ಹಲವಾರು ಪ್ರಸಿದ್ಧ ನಿರ್ದೇಶಕರಿಗೆ ಇವರ ಚಿತ್ರಗಳು ಪ್ರೇರಣೆಯಾಗಿವೆ. ೧೯೪೩ರಲ್ಲಿ ತಮ್ಮ ೩೩ನೇ ವಯಸ್ಸಿನಲ್ಲಿ 'ಸಂಶಿರೋ ಸುಗಾತಾ' ಚಿತ್ರದಿಂದ ನಿರ್ದೇಶನ ಪ್ರಾರಂಭಿಸಿದ ಇವರ ಕೊನೆಯ ಚಿತ್ರ 'ಮದದಾಯೋ' ೧೯೯೯ರಲ್ಲಿ (ಮರಣಾನಂತರ) ಹೊರಬಂದದ್ದು. ಪ್ರಾಚೀನ ಜಪಾನ್ ಕುರಿತು ಇವರು ನಿರ್ದೇಶಿಸಿದ ಹಲವು ಚಿತ್ರಗಳು ಇಂದಿಗೂ ಸಹೃದಯಿಗಳ ಮೆಚ್ಚುಗೆ ಪಡೆದಿವೆ. ಅವುಗಳಲ್ಲಿ ದಿ ಸೆವೆನ್ ಸಮುರಾಯ್, ಸಂಜುರೋ, ಕಾಗೆಮುಶಾ ಕೆಲವು. ಜೀವನ ಮಿಲಿಟರಿ ರಾಜ್ಯಭಾರದ ಜಪಾನ್‌ನಲ್ಲಿ ಬೆಳೆದ ಕುರೋಸಾವಾ, ವಿಶ್ವ ಮಹಾ ಯುದ್ಧ, ಕೆಂಟೋ ಭೂಕಂಪದಿಂದ ತತ್ತರಿಸಿದ ಜಪಾನ್ ನಲ್ಲಿ ತಮ್ಮ ವೃತ್ತಿಯ ಶಿಖರವನ್ನು ತಲುಪಿದವರು, ಕಷ್ಟಕರವಾದ ಕಾಲದಲ್ಲಿ ಛಲದಿಂದ ಮುಂದೆ ಬಂದವರು. ಓದು ಮುಗಿದ ನಂತರ ಹಲವು ದಿನಗಳ ಕಾಲ ಚಿತ್ರ ಕಲಾವಿದನಾಗಿ ದಿನ ಕಳೆದ ಕುರೋಸಾವಾ, ದೃಶ್ಯಕಲೆಯಲ್ಲಿ ಅಪಾರ ಪರಿಣಿತಿಯನ್ನು ಹೊಂದಿದ್ದುದು ಅವರ ಚಿತ್ರಗಳಲ್ಲಿ ಕಂಡುಬರುತ್ತದೆ. ಪ್ರೇರಣೆ ಜಾರ್ಜ್ ಲ್ಯೂಕಾಸ್, ಫ್ರಾಂಸಿಸ್ ಫೋರ್ಡ್ ಕೊಪ್ಪಲಾ, ಸ್ಟೀವನ್ ಸ್ಪೀಲ್ಬರ್ಗ್ ಮುಂತಾದ ವಿಶ್ವವಿಖ್ಯಾತ ನಿರ್ದೇಶಕರಿಗೆ ಇವರು ಪ್ರೇರಣೆಯಾಗಿದ್ದರು. ಇದನ್ನೇ ಸೂಚಿಸುವೆಂಬಂತೆ, ೧೯೮೦ರಲ್ಲಿ ಕುರೋಸಾವಾ ಹಲವು ದಿನಗಳ ನಂತರ ಮತ್ತೊಂದು ಚಿತ್ರವನ್ನು ನಿರ್ದೇಶಿಸಲು ಬಯಸಿದಾಗ ಜಾರ್ಜ್ ಲ್ಯೂಕಾಸ್, ಫ್ರಾಂಸಿಸ್ ಫೋರ್ಡ್ ಕೊಪ್ಪಲಾರವರು ಜೊತೆಯಾಗಿ ಮುಂದೆ ಬಂದು 'ಕಗೆಮುಶಾ' (ನೇಪಥ್ಯದ ಯೋಧ) ಚಿತ್ರಕ್ಕೆ ಹಣದ ನೆರವು ನೀಡಿದರಂತೆ. ಇವರ ಚಿತ್ರ 'ಸೆವೆನ್ ಸಮುರಾಯ್' ಹಿಂದಿಯ 'ಶೋಲೆ', ಮತ್ತು ಇಂಗ್ಲೀಷಿನ 'ಮ್ಯಾಗ್ನಿಫಿಸಿಯೆಂಟ್ ಸೆವೆನ್' ಚಿತ್ರಗಳಿಗೆ ಸ್ಪೂರ್ತಿಯಾಗಿದೆ. ಸ್ಫೂರ್ತಿ ಕುರೊಸಾವಾ, ಪಾಶ್ಚಿಮಾತ್ಯ ಸಾಹಿತ್ಯವನ್ನು ಬಹಳವಾಗಿ ಅಧ್ಯಯನ ಮಾಡಿದವರು. ವಿಲ್ಲಿಯಮ್ ಷೇಕ್‍ಸ್ಪಿಯರ್ ನ ಹಲವು ನಾಟಕಗಳ ಸೊಬಗು ಅಲ್ಲಲ್ಲಿ ಕುರೊಸಾವಾರವರ ಚಿತ್ರಗಳಲ್ಲೂ ಮೂಡಿ ಬರುತ್ತದೆ. ದಂತ ಕಥೆ ಕುರೊಸಾವಾರವರಿಗೆ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಇವರ ಚಿತ್ರ 'ಡೆರ್ಸು ಉಝಾಲಾ' (Dersu Uzala), ಉತ್ತಮ ವಿದೇಶೀ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಇದಲ್ಲದೆ, ಇವರ ಸಾಧನೆಯನ್ನು ಗುರುತಿಸಲು ಆಸ್ಕರ್ ನ 'ಅಜೀವ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ. ಚಿತ್ರಗಳು ಸುಗಾತಾ ಸನ್ಶಿರೋ (೧೯೪೩) ದಿ ಮೋಸ್ಟ ಬ್ಯೂಟಿಫುಲ್ (೧೯೪೪) ಸನ್ಶಿರೋ ಸುಗಾತಾ ಭಾಗ ೨ (೧೯೪೫) They Who tread the Tiger's Tail (ಹುಲಿಯ ಬಾಲದ ಮೇಲೆ ಕಾಲಿಟ್ಟವರು) (೧೯೪೫) No Regrets for Our Youth (೧೯೪೬) One Wonderful Sunday (೧೯೪೬) ಡ್ರಂಕನ್ ಏಂಜಲ್ (೧೯೪೮) The Quiet Duel (೧೯೪೯) Stray Dog (೧೯೪೯) Scandal (೧೯೫೦) ರಾಶೋಮನ್ (೧೯೫೦) ಹಕುಚಿ (೧೯೫೧) ಇಕಿರು aka To Live (೧೯೫೨) The Seven Samurai (ಏಳು ಜನ ಸಮುರಾಯ್) (೧೯೫೪) Record of a Living Being aka I Live in Fear (೧೯೫೫) ದಿ ತ್ರೋನ್ ಆಫ್ ಬ್ಲಡ್ aka Spider Web Castle (೧೯೫೭) The Lower Depths (೧೯೫೭) The Hidden Fortress (೧೯೫೮) The Bad Sleep Well (೧೯೬೦) ಯೊಜಿಂಬೊ aka The Bodyguard (೧೯೬೧) Sanjuro (೧೯೬೨) ಹೈ ಎಂಡ್ ಲೋ aka Heaven and Hell (೧೯೬೩) Red Beard (೧೯೬೫) Dodesukaden (೧೯೭೦) ದೆರ್ಸು ಉಜಲ (೧೯೭೫) ಕಗೆಮುಶ (ನೇಪಥ್ಯದ ಯೋಧ) aka Shadow Warrior (೧೯೮೦) ರಾನ್ (೧೯೮೫) ಕನಸುಗಳು aka Akira Kurosawa's Dreams (೧೯೯೦) Rhapsody in August (೧೯೯೧) ಮದದಾಯೊ aka Not Yet (೧೯೯೩) ಇವನ್ನೂ ನೋಡಿ ರಾಶೋಮನ್ ಜಪಾನ್ ಅಂತರರಾಷ್ಟ್ರೀಯ ಸಿನಿಮಾ :ವರ್ಗ:ಕುರೋಸಾವಾ ಚಿತ್ರಗಳು ಹೊರಗಿನ ಸಂಪರ್ಕಗಳು Profile at Japan Zone Akira Kurosawa Database Bohème Magazine Ikiru: The Art of Living Japanese Film - Kurosawa Akira Kurosawa News and Information ಚಿತ್ರರಂಗ ನಿರ್ದೇಶಕರು ನಿರ್ಮಾಪಕರು ಲೇಖಕರು
2190
https://kn.wikipedia.org/wiki/%E0%B2%8F%E0%B2%B7%E0%B3%8D%E0%B2%AF%E0%B2%BE
ಏಷ್ಯಾ
ಏಷ್ಯಾ ಪ್ರಪಂಚದ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಂಡವಾಗಿದೆ. ಭೂಗೋಳದ ಸುಮಾರು ೮.೭% ಪ್ರದೇಶವನ್ನು ಈ ಖಂಡ ಆವರಿಸಿದೆ ಮತ್ತು ಪ್ರಪಂಚದ ಸುಮಾರು ೬೦% ಜನಸಂಖ್ಯೆಯನ್ನು ಹೊಂದಿದೆ. ಪಾರಂಪರಿಕವಾಗಿ ಏಷ್ಯಾದ ಪಶ್ಚಿಮದ ಪರಿಮಿತಿಯು ಸುಯೆಜ್ ಕಾಲುವೆ, ಯೂರಲ್ ಪರ್ವತ ಶ್ರೇಣಿಯೆಂದು ಹಾಗು ಉತ್ತರ ಪರಿಮಿತಿಯು ಕಾವ್ಕಸಸ್ ಪರ್ವತ ಶ್ರೇಣಿ ಹಾಗು ಕ್ಯಾಸ್ಪಿಯನ್ ಸಮುದ್ರ ಮತ್ತು ಕಪ್ಪು ಸಮುದ್ರ(ಬ್ಲ್ಯಕ್ ಸೀ)ಗಳೆಂದು ಪರಿಗಣಿಸಲ್ಪಡುತ್ತದೆ. ಸಂಯುಕ್ತ ರಾಷ್ಟ್ರ ಸಂಸ್ಥಯು ಏಷ್ಯಾ ಖಂಡವನ್ನು ಈ ಪ್ರಕಾರ ವಿಭಜಿಸುತ್ತದೆ. ಪೂರ್ವ ಏಷ್ಯಾ ಆಗ್ನೇಯ ಏಷ್ಯಾ ದಕ್ಷಿಣ ಏಷ್ಯಾ ಮಧ್ಯ ಏಷ್ಯಾ ಉತ್ತರ ಏಷ್ಯಾ ಪಶ್ಚಿಮ ಏಷ್ಯಾ ಪ್ರಾಂತ್ಯಗಳು ಮತ್ತು ರಾಷ್ಟ್ರಗಳು ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ. Notes: ಭೂಗೋಳ ಖಂಡಗಳು
2193
https://kn.wikipedia.org/wiki/%E0%B2%AF%E0%B3%81%E0%B2%B0%E0%B3%8B%E0%B2%AA%E0%B3%8D
ಯುರೋಪ್
ಯುರೋಪ್ ಪ್ರಪಂಚದ ೭ ಖಂಡಗಳಲ್ಲಿ ಎರಡನೇ ಅತ್ಯಂತ ಚಿಕ್ಕ ಖಂಡ. ಭೂಗೋಳಶಾಸ್ತ್ರದ ಪ್ರಕಾರ ಯುರೋಪ್ ಯುರೇಷ್ಯಾ ಮಹಾಖಂಡದ ಪಶ್ಚಿಮ ದ್ವೀಪಕಲ್ಪ. ಆದರೆ ಸಾಮಾಜಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಇದು ಏಷ್ಯಾದಿಂದ ವಿಭಿನ್ನವಾಗಿರುವುದರಿಂದ ಇದನ್ನು ಪ್ರತ್ಯೇಕ ಖಂಡವಾಗಿ ಪರಿಗಣಿಸಲಾಗುತ್ತದೆ. ೨೫ ಸದಸ್ಯ ರಾಷ್ಟ್ರಗಳ ಯುರೋಪಿನ ಒಕ್ಕೂಟ ಈ ಖಂಡದ ಅತಿ ದೊಡ್ಡ ರಾಜಕೀಯ ಮತ್ತು ಆರ್ಥಿಕ ಒಕ್ಕೂಟ. ಪ್ರಾಂತ್ಯಗಳು ಮತ್ತು ರಾಷ್ಟ್ರಗಳು ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆಯ ಪ್ರಕಾರ ಈ ಖಂಡದಲ್ಲಿರುವ ದೇಶಗಳು ಹೀಗಿವೆ. ಉಲ್ಲೇಖಗಳು ಖಂಡಗಳು ಭೂಗೋಳ
2194
https://kn.wikipedia.org/wiki/%E0%B2%89%E0%B2%A4%E0%B3%8D%E0%B2%A4%E0%B2%B0%20%E0%B2%85%E0%B2%AE%E0%B3%87%E0%B2%B0%E0%B2%BF%E0%B2%95
ಉತ್ತರ ಅಮೇರಿಕ
ಪ್ರಾಂತ್ಯಗಳು ಮತ್ತು ರಾಷ್ಟ್ರಗಳು ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ. Notes: Sources: GeoHive: The population of continents, regions and countries ಖಂಡಗಳು
2195
https://kn.wikipedia.org/wiki/%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3%20%E0%B2%85%E0%B2%AE%E0%B3%87%E0%B2%B0%E0%B2%BF%E0%B2%95
ದಕ್ಷಿಣ ಅಮೇರಿಕ
ದಕ್ಷಿಣ ಅಮೇರಿಕ - ಪೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ, ಮತ್ತು ಅಟ್ಲಾಂಟಿಕ್ ಸಾಗರದ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಖಂಡ. ಇದರ ಉತ್ತರ ಭಾಗಕ್ಕೆ ಉತ್ತರ ಅಮೇರಿಕ ಖಂಡ ಮತ್ತು ಕೆರಿಬ್ಬಿಯನ್ ಸಮುದ್ರವು ಇವೆ. ಅಮೆರಿಗೊ ವೆಸ್ಪುಚಿ ಎಂಬ ಯೂರೋಪಿಯನ್ ನಾವಿಕ ಮೊದಲ ಬಾರಿಗೆ ಅಮೆರಿಕ ಖಂಡಗಳು "ಪೂರ್ವ ಇಂಡೀಸ್" ಅಲ್ಲ, ಒಂದು ವಿಶಿಷ್ಟ ಖಂಡ ಎಂದು ತಿಳಿಸಿಕೊಟ್ಟನು. ಈ ಕಾರಣದಿಂದ ಈ ಖಂಡಗಳನ್ನು ಇವನ ಹೆಸರನ್ನು ಆಧರಿಸಿ "ಅಮೆರಿಕ" ಎಂದು ಕರೆಯಲಾಗಿದೆ. ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣ ೧,೭೮,೪೦,೦೦೦ ಚದರ ಕಿ.ಮಿ. ಅಥವಾ ಭೂಮಿಯ ಶೇಕಡಾ ೩.೫% ರಷ್ಟು. ೨೦೦೫ರಲ್ಲಿ ಇದರ ಜನಸಂಖ್ಯೆ ಸುಮಾರು ೩೭,೧೦,೦೦,೦೦೦. ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣವು ಏಷ್ಯಾ, ಆಫ್ರಿಕಾ, ಮತ್ತು ಉತ್ತರ ಅಮೆರಿಕ ಖಂಡಗಳ ನಂತರ ನಾಲ್ಕನೇ ಅತಿದೊಡ್ಡದಾಗಿದೆ. ಜನಸಂಖ್ಯೆ ದೃಷ್ಟಿಯಿಂದ ಇದಕ್ಕೆ ಐದನೆಯ ಸ್ಥಾನವಿದೆ. ದಕ್ಷಿಣ ಅಮೇರಿಕ ಒಂದು ಆಗಿದೆ ಖಂಡದ ಸಂಪೂರ್ಣವಾಗಿ ಪಶ್ಚಿಮ ಖಗೋಳಾರ್ಧದ [ಟಿಪ್ಪಣಿ 7] ಮತ್ತು ಹೆಚ್ಚಾಗಿ ದಕ್ಷಿಣ ಗೋಳಾರ್ಧ ತುಲನಾತ್ಮಕವಾಗಿ ಸ್ವಲ್ಪ ಭಾಗವನ್ನು, ಉತ್ತರ ಗೋಳಾರ್ಧದ . ದಕ್ಷಿಣ ಇದನ್ನು ವಿವರಿಸಬಹುದು ಉಪಖಂಡದ ಆಫ್ ಅಮೆರಿಕಾ . ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಡೈನಾಮಿಕ್ಸ್‌ನಿಂದ (ನಿರ್ದಿಷ್ಟವಾಗಿ, ಬ್ರೆಜಿಲ್‌ನ ಏರಿಕೆ) ಇತರ ಪ್ರದೇಶಗಳಿಗೆ ಬದಲಾಗಿ ( ಲ್ಯಾಟಿನ್ ಅಮೆರಿಕ ಅಥವಾ ಸದರ್ನ್ ಕೋನ್‌ನಂತೆ ) ದಕ್ಷಿಣ ಅಮೆರಿಕದ ಉಲ್ಲೇಖ ಹೆಚ್ಚಾಗಿದೆ. [6] [ ಹೆಚ್ಚುವರಿ ಉಲ್ಲೇಖ (ಗಳು) ಅಗತ್ಯವಿದೆ ] ದಕ್ಷಿಣ ಅಮೇರಿಕ ದಕ್ಷಿಣ ಅಮೆರಿಕಾ (ಆರ್ಥೋಗ್ರಾಫಿಕ್ ಪ್ರೊಜೆಕ್ಷನ್) .svg ಪ್ರದೇಶ 17,840,000 ಕಿಮೀ 2 (6,890,000 ಚದರ ಮೈಲಿ) ( 4 ನೇ ) ಜನಸಂಖ್ಯೆ 423,581,078 (2018; 5 ನೇ ) [1] [2] ಜನಸಂಖ್ಯಾ ಸಾಂದ್ರತೆ 21.4 / ಕಿಮೀ 2 (56.0 / ಚದರ ಮೈಲಿ) ಜಿಡಿಪಿ ( ಪಿಪಿಪಿ ) $ 6.53 ಟ್ರಿಲಿಯನ್ (2021 ಅಂದಾಜು; 5 ನೇ) [3] ಜಿಡಿಪಿ (ನಾಮಮಾತ್ರ) 90 2.90 ಟ್ರಿಲಿಯನ್ (2021 ಅಂದಾಜು; 4 ನೇ ) [4] ತಲಾವಾರು ಜಿಡಿಪಿ , 7 6,720 (2021 ಅಂದಾಜು; 5 ನೇ ) [5] ದೆವ್ವ ದಕ್ಷಿಣ ಅಮೆರಿಕನ್ ದೇಶಗಳು 12–14 ಅರ್ಜೆಂಟೀನಾ ಬೊಲಿವಿಯಾ ಬ್ರೆಜಿಲ್ ಚಿಲಿ ಕೊಲಂಬಿಯಾ ಈಕ್ವೆಡಾರ್ ಫ್ರಾನ್ಸ್ (ಭಾಗಶಃ, ಫ್ರೆಂಚ್ ಗಯಾನಾ [ಟಿಪ್ಪಣಿ 1] ) ಗಯಾನಾ ಪನಾಮ [ಟಿಪ್ಪಣಿ 2] ಪರಾಗ್ವೆ ಪೆರು ಸುರಿನಾಮ್ ಟ್ರಿನಿಡಾಡ್ ಮತ್ತು ಟೊಬಾಗೊ [ಟಿಪ್ಪಣಿ 3] ಉರುಗ್ವೆ ವೆನೆಜುವೆಲಾ ಅವಲಂಬನೆಗಳು ಬಾಹ್ಯ (1–3) ಬೌವೆಟ್ ದ್ವೀಪ [ಟಿಪ್ಪಣಿ 4] ( ನಾರ್ವೆ ) ಫಾಕ್ಲ್ಯಾಂಡ್ ದ್ವೀಪಗಳು ( ಯುನೈಟೆಡ್ ಕಿಂಗ್‌ಡಮ್ ) ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳು [ಟಿಪ್ಪಣಿ 5] ( ಯುನೈಟೆಡ್ ಕಿಂಗ್‌ಡಮ್ ) ಆಂತರಿಕ (1–5) ಅರುಬಾ [ಟಿಪ್ಪಣಿ 3] ( ನೆದರ್ಲ್ಯಾಂಡ್ಸ್ ) ಅಸೆನ್ಶನ್ ದ್ವೀಪ [ಟಿಪ್ಪಣಿ 6] ( ಯುನೈಟೆಡ್ ಕಿಂಗ್‌ಡಮ್ ) ಬೊನೈರ್ [ಟಿಪ್ಪಣಿ 3] ( ನೆದರ್ಲ್ಯಾಂಡ್ಸ್ ) ಕುರಾಕಾವೊ [ಟಿಪ್ಪಣಿ 3] ( ನೆದರ್ಲ್ಯಾಂಡ್ಸ್ ) ಭಾಷೆಗಳು ಸ್ಪ್ಯಾನಿಷ್ , ಪೋರ್ಚುಗೀಸ್ , ಗೌರಾನಾ , ಇಂಗ್ಲಿಷ್ , ಫ್ರೆಂಚ್ , ಡಚ್ , ಕ್ವೆಚುವಾ , ಐಮಾರಾ , ಮಾಪುಡುಂಗನ್ , ಇತರ ಭಾಷೆಗಳು ಸಮಯ ವಲಯಗಳು ಯುಟಿಸಿ -2 ರಿಂದ ಯುಟಿಸಿ -5 ದೊಡ್ಡ ನಗರಗಳು ದಕ್ಷಿಣ ಅಮೆರಿಕಾದಲ್ಲಿನ ನಗರಗಳ ಪಟ್ಟಿ ಪಟ್ಟಿ ಸಾವೊ ಪಾಲೊ ಲಿಮಾ ಬೊಗೊಟೊ ರಿಯೊ ಡಿ ಜನೈರೊ ಸ್ಯಾಂಟಿಯಾಗೊ ಕ್ಯಾರಕಾಸ್ ಬ್ಯೂನಸ್ ಸಾಲ್ವಡಾರ್ ಬ್ರೆಸಲಿಯಾ ಫೋರ್ಟಲೆಜಾ ಯುಎನ್ ಎಂ 49 ಕೋಡ್ 005- ದಕ್ಷಿಣ ಅಮೆರಿಕಾ 419- ಲ್ಯಾಟಿನ್ ಅಮೆರಿಕ 019 - ಅಮೆರಿಕ 001 - ವಿಶ್ವ 2018 ರ ಪ್ರಕಾರ ದಕ್ಷಿಣ ಅಮೆರಿಕಾದ ನಕ್ಷೆ ಭೌತಿಕ, ರಾಜಕೀಯ ಮತ್ತು ಜನಸಂಖ್ಯಾ ಗುಣಲಕ್ಷಣಗಳನ್ನು ತೋರಿಸುತ್ತದೆ ಇದು ಪಶ್ಚಿಮಕ್ಕೆ ಪೆಸಿಫಿಕ್ ಮಹಾಸಾಗರ ಮತ್ತು ಉತ್ತರ ಮತ್ತು ಪೂರ್ವದಲ್ಲಿ ಅಟ್ಲಾಂಟಿಕ್ ಸಾಗರದಿಂದ ಗಡಿಯಾಗಿದೆ ; ಉತ್ತರ ಅಮೆರಿಕಾ ಮತ್ತು ಕೆರಿಬಿಯನ್ ಸಮುದ್ರ ವಾಯುವ್ಯದಲ್ಲಿದೆ. ಇದು ಹನ್ನೆರಡು ಸಾರ್ವಭೌಮ ರಾಜ್ಯಗಳನ್ನು ಒಳಗೊಂಡಿದೆ: ಅರ್ಜೆಂಟೀನಾ , ಬೊಲಿವಿಯಾ , ಬ್ರೆಜಿಲ್ , ಚಿಲಿ , ಕೊಲಂಬಿಯಾ , ಈಕ್ವೆಡಾರ್ , ಗಯಾನಾ , ಪರಾಗ್ವೆ , ಪೆರು , ಸುರಿನಾಮ್ , ಉರುಗ್ವೆ ಮತ್ತು ವೆನೆಜುವೆಲಾ ; ಒಂದು ಪ್ರದೇಶದಲ್ಲಿ ಆಫ್ ಫ್ರಾನ್ಸ್ : ಫ್ರೆಂಚ್ ಗಯಾನ [ಟಿಪ್ಪಣಿ 8]; ಮತ್ತು ಸಾರ್ವಭೌಮ ರಾಜ್ಯದ ಅವಲಂಬನೆಗಳು . ಪ್ರಮುಖ ಅವಲಂಬನೆ ಇವೆ ಫಾಕ್ಲ್ಯಾಂಡ್ ದ್ವೀಪಗಳು , ಒಂದು ಬ್ರಿಟಿಷ್ ಓವರ್ಸೀಸ್ ಟೆರಿಟರಿ . ಜೊತೆಗೆ, ಎಬಿಸಿ ದ್ವೀಪಗಳು ಆಫ್ ನೆದರ್ಲ್ಯಾಂಡ್ಸ್ನ ರಾಜ್ಯಗಳಲ್ಲಿ , ಅಸೆನ್ಶನ್ ದ್ವೀಪ (ಅವಲಂಬನೆ ಸೈಂಟ್ ಹೆಲೆನಾ, ಅಸೆನ್ಶನ್ ಮತ್ತು ಟ್ರಿಸ್ಟನ್ ಡ ಕುನ್ಹ , ಒಂದು ಬ್ರಿಟಿಷ್ ಓವರ್ಸೀಸ್ ಟೆರಿಟರಿ ,) ಬೋವೆಟ್ ದ್ವೀಪ ( ಅವಲಂಬನೆ ಆಫ್ ನಾರ್ವೆ ), ಪನಾಮ , ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ ಸ್ಯಾಂಡ್ವಿಚ್ ದ್ವೀಪಗಳು ( ಬ್ರಿಟಿಷ್ ಸಾಗರೋತ್ತರ ಪ್ರದೇಶ ), ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊ ಇದನ್ನು ದಕ್ಷಿಣ ಅಮೆರಿಕದ ಭಾಗಗಳೆಂದು ಪರಿಗಣಿಸಬಹುದು. ದಕ್ಷಿಣ ಅಮೇರಿಕ ಒಂದು ಹೊಂದಿದೆ ಪ್ರದೇಶ 17.840.000 ಚದರ ಕಿಲೋಮೀಟರ್ (6,890,000 ಚದರ ಮೈಲಿ). 2018 ರ ಹೊತ್ತಿಗೆ ಇದರ ಜನಸಂಖ್ಯೆ 423 ದಶಲಕ್ಷಕ್ಕಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. [1] [2] ದಕ್ಷಿಣ ಅಮೆರಿಕಾ ಪ್ರದೇಶದಲ್ಲಿ ( ಏಷ್ಯಾ , ಆಫ್ರಿಕಾ ಮತ್ತು ಉತ್ತರ ಅಮೆರಿಕಾದ ನಂತರ) ನಾಲ್ಕನೇ ಸ್ಥಾನದಲ್ಲಿದೆ ಮತ್ತು ಜನಸಂಖ್ಯೆಯಲ್ಲಿ ಐದನೇ ಸ್ಥಾನದಲ್ಲಿದೆ (ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಉತ್ತರ ಅಮೆರಿಕಾದ ನಂತರ). ಬ್ರೆಜಿಲ್ ಇದುವರೆಗೆ ಹೆಚ್ಚು ಜನಸಂಖ್ಯೆ ಹೊಂದಿರುವ ದಕ್ಷಿಣ ಅಮೆರಿಕಾದ ದೇಶವಾಗಿದ್ದು, ಖಂಡದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿದೆ, ನಂತರದ ಸ್ಥಾನದಲ್ಲಿ ಕೊಲಂಬಿಯಾ, ಅರ್ಜೆಂಟೀನಾ, ವೆನೆಜುವೆಲಾ ಮತ್ತು ಪೆರು ಇವೆ. ಇತ್ತೀಚಿನ ದಶಕಗಳಲ್ಲಿ, ಬ್ರೆಜಿಲ್ ಸಹ ಖಂಡದ ಜಿಡಿಪಿಯ ಅರ್ಧದಷ್ಟು ಉತ್ಪಾದಿಸಿದೆ ಮತ್ತು ಮೊದಲ ಪ್ರಾದೇಶಿಕ ಶಕ್ತಿಯಾಗಿದೆ. [6] ಹೆಚ್ಚಿನ ಜನಸಂಖ್ಯೆಯು ಖಂಡದ ಪಶ್ಚಿಮ ಅಥವಾ ಪೂರ್ವ ಕರಾವಳಿಯ ಬಳಿ ವಾಸಿಸುತ್ತಿದ್ದರೆ, ಆಂತರಿಕ ಮತ್ತು ದೂರದ ದಕ್ಷಿಣವು ವಿರಳ ಜನಸಂಖ್ಯೆ ಹೊಂದಿದೆ. ಪಶ್ಚಿಮ ದಕ್ಷಿಣ ಅಮೆರಿಕಾದ ಭೌಗೋಳಿಕತೆಯು ಆಂಡಿಸ್ ಪರ್ವತಗಳಿಂದ ಪ್ರಾಬಲ್ಯ ಹೊಂದಿದೆ ; ಇದಕ್ಕೆ ವ್ಯತಿರಿಕ್ತವಾಗಿ, ಪೂರ್ವ ಭಾಗವು ಎತ್ತರದ ಪ್ರದೇಶಗಳು ಮತ್ತು ಅಮೆಜಾನ್ , ಒರಿನೊಕೊ ಮತ್ತು ಪರಾನೆಯಂತಹ ನದಿಗಳು ಹರಿಯುವ ವಿಶಾಲ ತಗ್ಗು ಪ್ರದೇಶಗಳನ್ನು ಒಳಗೊಂಡಿದೆ . ಖಂಡದ ಬಹುಪಾಲು ಉಷ್ಣವಲಯದಲ್ಲಿದೆ . ಖಂಡದ ಸಾಂಸ್ಕೃತಿಕ ಮತ್ತು ಜನಾಂಗೀಯ ಮೇಲ್ನೋಟ ಪರಸ್ಪರ ತನ್ನ ಮೂಲವನ್ನು ಹೊಂದಿದೆ ಸ್ಥಳೀಯ ಜನರು ಯುರೋಪ್ನ ದಿಗ್ವಿಜಯೇತರ ಜೊತೆ, ಹೆಚ್ಚು ಸ್ಥಳೀಯವಾಗಿ ಮತ್ತು ವಲಸೆಗಾರರು ಮತ್ತು, ಆಫ್ರಿಕನ್ ಗುಲಾಮರು . ವಸಾಹತುಶಾಹಿಯ ಸುದೀರ್ಘ ಇತಿಹಾಸವನ್ನು ಗಮನಿಸಿದರೆ , ದಕ್ಷಿಣ ಅಮೆರಿಕನ್ನರಲ್ಲಿ ಹೆಚ್ಚಿನವರು ಪೋರ್ಚುಗೀಸ್ ಅಥವಾ ಸ್ಪ್ಯಾನಿಷ್ ಭಾಷೆಯನ್ನು ಮಾತನಾಡುತ್ತಾರೆ , ಮತ್ತು ಸಮಾಜಗಳು ಮತ್ತು ರಾಜ್ಯಗಳು ಪಾಶ್ಚಿಮಾತ್ಯ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತವೆ . ಯುರೋಪ್, ಏಷ್ಯಾ ಮತ್ತು ಆಫ್ರಿಕಾಗಳಿಗೆ ಸಂಬಂಧಿಸಿದಂತೆ, 20 ನೇ ಶತಮಾನದ ದಕ್ಷಿಣ ಅಮೆರಿಕಾವು ಕೆಲವು ಯುದ್ಧಗಳನ್ನು ಹೊಂದಿರುವ ಶಾಂತಿಯುತ ಖಂಡವಾಗಿದೆ. [7] ವಿವರಣೆ ದಕ್ಷಿಣ ಅಮೆರಿಕಾದಲ್ಲಿ ಭೂಗೋಳದಲ್ಲೇ ಅತಿ ಎತ್ತರದ ಜಲಪಾತ (ಏಂಜೆಲ್ ಜಲಪಾತ), ನೀರಿನ ಪರಿಮಾಣದ ದೃಷ್ಟಿಯಿಂದ ಅತಿ ದೊಡ್ಡ ನದಿ (ಅಮೆಜಾನ್ ನದಿ), ಅತಿ ಉದ್ದದ ಪರ್ವತ ಶ್ರೇಣಿ (ಆಂಡೀಸ್ ಶ್ರೇಣಿ), ಅತಿ ಹೆಚ್ಚು ಆರ್ದ್ರವಾಗಿರುವ ಮರುಭೂಮಿ (ಅಟಕಾಮ), ಅತಿ ದೊಡ್ಡ ದಟ್ಟ ಕಾಡು (ಅಮೆಜಾನ್ ಕಾಡು), ಅತಿ ಎತ್ತರದ ರಾಜಧಾನಿ (ಲಾ ಪಾಜ್, ಬೊಲಿವಿಯಾದ ರಾಜಧಾನಿ), ವಾಣಿಜ್ಯ ಹಡಗುಗಳನ್ನು ಸಾಗಿಸಬಹುದಾದಂಥ ಅತಿ ಎತ್ತರದ ಸರೋವರ (ಟಿಟಿಕಾಕಾ ಸರೋವರ), ಮತ್ತು ಭೂಮಿಯಲ್ಲೇ ಅತಿ ದಕ್ಷಿಣದಲ್ಲಿರುವ ನಗರ (ಪ್ಯೂರ್ತೋ ತೋರೋ, ಚಿಲಿ ದೇಶದ ಗರ), ಇವುಗಳು ಕಂಡುಬರುತ್ತವೆ. ರಾಷ್ಟ್ರಗಳು ಮತ್ತು ಪ್ರಾಂತ್ಯಗಳು ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ವಿಂಗಡಿಸಲಾಗಿದೆ. Notes: ಉಲ್ಲೇಖ "South America". The Columbia Gazetteer of the World Online. 2005. New York: Columbia University Press. ಬಾಹ್ಯ ಸಂಪರ್ಕಗಳು ಭೂಗೋಳ ದಕ್ಷಿಣ ಅಮೆರಿಕದ ಭೌತಿಕ ನಕ್ಷೆ ಭೂಗೋಳ ಖಂಡಗಳು ದಕ್ಷಿಣ ಅಮೇರಿಕ
2198
https://kn.wikipedia.org/wiki/%E0%B2%85%E0%B2%AE%E0%B3%86%E0%B2%B0%E0%B2%BF%E0%B2%95
ಅಮೆರಿಕ
ಅಮೆರಿಕಸ್ ಅಥವಾ ಅಮೆರಿಕ ವು, ಪಶ್ಚಿಮ ಗೋಳಾರ್ಧದಲ್ಲಿರುವ ಭೂಪ್ರದೇಶ. ಅದು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಖಂಡಗಳು, ದ್ವೀಪ ಪ್ರದೇಶಗಳು ಮತ್ತು ಪ್ರಾಂತ್ಯಗಳನ್ನು ಒಳಗೊಂಡ ಹೊಸ ಜಗತ್ತಾಗಿ ರೂಪುಗೊಂಡಿದೆ. ಅಮೆರಿಕ ಎಂಬ ಪದವು ಆಂಗ್ಲಭಾಷೆಯಲ್ಲಿ ವಿಭಿನ್ನಾರ್ಥ ನೀಡುತ್ತದೆಯಾದರೂ, ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಈ ಪದದಿಂದ ಹೆಚ್ಚಾಗಿ ಮತ್ತು ಸಾಮಾನ್ಯವಾಗಿ ಪ್ರಬೋಧಿಸುತ್ತಾರೆ. ಪೃಥ್ವಿಯ ಒಟ್ಟು ಮೇಲ್ಮೈಯ ಶೇಕಡ 8.3 ರಷ್ಟು ಪ್ರದೇಶವನ್ನು ಅಮೆರಿಕ ಆವರಿಸಿಕೊಂಡಿದೆ ( ಶೇಕಡ 28.4 ರಷ್ಟೂ ಭೂಭಾಗ) ಮತ್ತು ಒಟ್ಟು ಜನಸಂಖ್ಯೆಯ ಶೇಕಡ 13.5 ರಷ್ಹ್ಟು ಜನಸಾಂದ್ರತೆಯನ್ನು ಹೊಂದಿದೆ(ಸುಮಾರು 900 ಮಿಲಿಯನ್ ಜನಸಂಖ್ಯೆ). ಅಮೇರಿಕಾ ದೇಶವನ್ನು ಕೊಲಂಬಸ್ ಸಮುದ್ರದ ಮೂಲಕ ಅನ್ವೇಷಿಸಿದ್ದರು. ಇತಿಹಾಸ ರಚನೆ ಗೊಂಡ್ವಾನಾಲ್ಯಾಂಡ್ ಬೃಹತ್ ಖಂಡದಲ್ಲಿದ್ದ ದಕ್ಷಿಣ ಅಮೆರಿಕವು 135 ಮಿಲಿಯನ್ ವರ್ಷಗಳ ಹಿಂದೆ (ಎಂಎ)ವಿಭಜನೆಯಾಗಿ, ಸ್ವತಂತ್ರ ಖಂಡವಾಗಿ ರೂಪುಗೊಂಡಿತು. 15 ಮಿಲಿಯನ್ ವರ್ಷಗಳ ಆರಂಭದಲ್ಲಿ, ವೆಸ್ಟ್ ಇಂಡೀಸ್ ದ್ವೀಪ ಮತ್ತು ಪೆಸಿಫಿಕ್ ಸಾಗರದ ನಡುವಿನ ಅಪ್ಪಳಿಕೆಯ ಪರಿಣಾಮವಾಗಿ ಈ ಭಾಗದ ಗಡಿಯುದ್ಧಕ್ಕೂ ಸರಣಿ ಜ್ವಾಲಾಮುಖಿಗಳು ಸಂಭವಿಸಿ, ಹಲವಾರು ದ್ವೀಪಪ್ರದೇಶಗಳು ಸೃಷ್ಟಿಯಾದವು. ಮಧ್ಯ ಅಮೆರಿಕದ ದ್ವೀಪ ಸಮುದಾಯದ ಕಣಿವೆಗಳಲ್ಲಿ ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಅಳಿದುಳಿದ ಭೂಭಾಗ ಆವೃತಗೊಂಡಿದೆ. ಜೊತೆಗೆ ನಿರಂತರ ಜ್ವಾಲಾಮುಖಿಯಿಂದ ಹೊಸ ಭೂಭಾಗ ಸೃಷ್ಟಿಯಾಗಿದೆ. 3 ಮಿಲಿಯನ್ ವರ್ಷಗಳಲ್ಲಿ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕವನ್ನು ಪನಾಮಾ ಭೂಸಂಧಿಗೆ ಜೋಡಿಸಿದ ತರುವಾಯ, ಏಕೈಕ ಅಮೆರಿಕ ಭೂಪ್ರದೇಶವನ್ನು ರೂಪಿಸಲಾಯಿತು. ವಸಾಹತು ಶಿಲಾಯುಗದ ಭಾರತೀಯರು ಅಮೆರಿಕ ಮತ್ತು ಅಲ್ಲಿನ ಎಲ್ಲಾ ಭಾಗಗಳಿಗೆ ವಲಸೆ ಹೋಗಿರುವ ನಿಖರ ದಿನಾಂಕ ಮತ್ತು ಸಂಚರಿಸಿರುವ ಮಾರ್ಗಗಳ ಕುರಿತು ಸಂಶೋಧನೆ ಮತ್ತು ಸಮಾಲೋಚನೆ ನಡೆಯುತ್ತಿದೆ. 17 ಸಾವಿರ ವರ್ಷಗಳ ಹಿಂದೆ, ಶಾಶ್ವತ ಹಿಮ ಪದರ ಆವೃತವಾದ ಪರಿಣಾಮವಾಗಿ, ಅಮೆರಿಕದ ಸಾಗರ ಮಟ್ಟ ಗಣನೀಯವಾಗಿ ಕುಸಿದಿತ್ತು. ಆ ಸಂದರ್ಭದಲ್ಲಿ, ಸುಮಾರು ೪೦ ಸಾವಿರದಷ್ಟಿದ್ದ ಭಾರತೀಯ ಮೂಲದ ಈ ಪೂರ್ವಜರು, ಪೂರ್ವ ಸೈಬೀರಿಯಾ ಮತ್ತು ಈಗಿನ ಅಲಸ್ಕಾ ನಡುವೆ ಇರುವ ಬೆರಿಂಜಿಯಾ ಭೂಸೇತುವೆಯ ಕಡೆಗೆ ವಲಸೆ ಹೋಗಿದ್ದರು ಎಂಬ ಸಾಂಪ್ರದಾಯಿಕ ನಂಬಿಕೆ ಅಥವಾ ಸಿದ್ಧಾಂತ ಇದೆ. ಅಲ್ಲದೆ, ಇವರು ಲಾರೆಂಟೈಡ್ ಮತ್ತು ಕಾರ್ಡಿಲ್ಲೆರನ್ ಹಿಮ ಪದರಗಳ ಮಧ್ಯೆ ಹಾದು ಹೋಗಿರುವ ಹಿಮಮುಕ್ತ ಮಾರ್ಗಗಳಲ್ಲಿ ಸಂಚರಿಸಲು ಪ್ಲೆಸ್ಟೊಸಿನ್ ಮೆಗಾಫಾನ ಸಸ್ತನಿಯಂತಹ ದೊಡ್ಡ ದೊಡ್ಡ ಪ್ರಾಣಿಗಳನ್ನು ಅವಲಂಬಿಸುತ್ತಿದ್ದರು ಎಂದು ನಂಬಲಾಗಿದೆ. ಪ್ರಸ್ತಾಪಿಸಲಾಗಿರುವ ಮತ್ತೊಂದು ಮಾರ್ಗವೆಂದರೆ, ಅವರು ಕಾಲ್ನಡಿಗೆ ಅಥವಾ ಪ್ರಾಚೀನ ದೋಣಿಗಳನ್ನು ಬಳಸಿ, ಪೆಸಿಫಿಕ್ ವಾಯವ್ಯ ಕರಾವಳಿಯಿಂದ ದಕ್ಷಿಣ ಅಮೆರಿಕಕ್ಕೆ ವಲಸೆ ಹೋಗಿದ್ದರು. ಕೊನೆಯಲ್ಲಿ ಪ್ರಸ್ತಾಪಿಸಲಾಗಿರುವ ಮಾರ್ಗಕ್ಕೆ ಸಂಬಂಧಿಸಿದ ಪುರಾವೆಗಳನ್ನು, ಕೊನೆಯ ಹಿಮಯುಗದಲ್ಲಿ ನೂರಾರು ಮೀಟರ್‍ನಷ್ಟು ಏರಿಕೆಯಾದಸಮುದ್ರ ಮಟ್ಟದ ಆಧಾರದ ಮೇಲೆ ಒದಗಿಸಲಾಗಿದೆ. ಸುಮಾರು 16,500 ವರ್ಷಗಳ ಹಿಂದೆ ಬೆರಿಂಜಿಯಾ (ಪೂರ್ವ ಅಲಸ್ಕಾ)ಕ್ಕೆ ವಲಸೆ ಹೋದ ಶಿಲಾಯುಗದ ಭಾರತೀಯರ ಸಂಖ್ಯೆ 40,000 ಪ್ರಮಾಣದಲ್ಲಿ ಇದ್ದಿರಬಹುದು ಎಂಬುದು ಪುರಾತನವಸ್ತು ಶಾಸ್ತ್ರಜ್ಞರ ತರ್ಕ. ವಲಸೆಯ ಕಾಲದ ಬಗ್ಗೆ ಸುದೀರ್ಘ ಚರ್ಚೆಗಳು ನಡೆಯುತ್ತಿದ್ದು, ಇದರ ಬಗ್ಗೆ ನಿಖರ ಮಾಹಿತಿ ಹೊರಬೀಳಲು ಹಲವು ವರ್ಷಗಳೇ ಬೇಕಾಗಬಹುದು. ಮಧ್ಯ ಏಷ್ಯಾದ ಹುಟ್ಟು ಅಥವಾ ವಿಕಾಸ ಮತ್ತು ಕೊನೆಯ ಹಿಮಯುಗದ ಅಂತ್ಯಭಾಗದ ಅವಧಿಯಲ್ಲಿ ಅಮೆರಿಕದ ವ್ಯಾಪಕ ನೆಲೆಯ ಕಾಲಮಾನ ಕುರಿತು ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸುಮಾರು 16,000 — 13,000 ವರ್ಷಗಳ ಅವಧಿಗೆ ತಡ ಗರಿಷ್ಟ ಹಿಮಯುಗ ಎಂದು ಉಲ್ಲೇಖಿಸಲಾಗಿದೆ. ಎಸ್ಕಿಮೊ ಜನರು ಉತ್ತರ ಅಮೆರಿಕದ ಶೀತ ವಲಯ ಅಥವಾ ಆರ್ಕ್ಟಿಕ್ ಭಾಗಕ್ಕೆ ವಲಸೆ ಹೋಗಿದ್ದರು. ಕ್ರಿಸ್ತಶಕ 1000 ಇಸವಿ (Common Era) ಯಲ್ಲಿ ನಡೆದ ಮತ್ತೊಂದು ವಲಸೆ ಇದಾಗಿದೆ. ಉತ್ತರ ಅಮೆರಿಕಕ್ಕೆ ಎಸ್ಕಿಮೊ ಜನರು ವಲಸೆ ಬಂದ ಸಮಯದಲ್ಲೇ, ಸ್ಕಾಂಡಿನೇವಿಯಾದ ವಸಾಹತುಗಾರರು(ವೈಕಿಂಗ್ ಸೆಟ್ಲರ್ಸ್) 982 ರಲ್ಲಿ ಗ್ರೀನ್ ಲ್ಯಾಂಡ್ ಮತ್ತು ವಿನ್ ಲ್ಯಾಂಡ್ಗೆ ಬರಲಾರಂಭಿಸಿದರು. ನಂತರ ಈ ವಸಾಹತುಗಾರರು ಕ್ರಿಸ್ತಶಕ 1500ರ ವೇಳೆಗೆ ವಿನ್ ಲ್ಯಾಂಡ್ ತೊರೆದು, ಗ್ರೀನ್ ಲ್ಯಾಂಡ್ ನಿಂದಲೂ ನಾಪತ್ತೆಯಾದರು. ಪೂರ್ವ-ಕೊಲಂಬಿಯಾ ಯುಗ ಅಮೆರಿಕ ಖಂಡಗಳ ಮೇಲೆ ಮಹತ್ವಪೂರ್ಣ ಎನ್ನಲಾದ ಐರೋಪ್ಯ ಪ್ರಭಾವ ಮತ್ತು ಸಂಸ್ಕೃತಿ ಕಾಣಿಸಿಕೊಳ್ಳುವ ಮುನ್ನವೇ, ಅಮೆರಿಕ ಇತಿಹಾಸ ಮತ್ತು ಪೂರ್ವ ಇತಿಹಾಸದ ಎಲ್ಲಾಕಾಲಮಾನಗಳನ್ನು ಪೂರ್ವ ಕೊಲಂಬಿಯಾ ಯುಗ ಒಳಗೊಂಡಿತ್ತು. ಪೂರ್ವ ಆಧುನಿಕ ಕಾಲದಲ್ಲಿ ಪೂರ್ವ ಶಿಲಾಯುಗದಿಂದ ಹಿಡಿದು ಐರೋಪ್ಯ ವಸಾಹತು ಕಾಲದವರೆಗಿನ ಮೂಲ ನೆಲೆಯನ್ನೂ ಇದು ಒಳಗೊಂಡಿದೆ. ಅಮೆರಿಕದ ಸ್ಥಳೀಯ ಮಹಾನ್ ನಾಗರಿಕತೆಯನ್ನು ಬಣ್ಣಿಸುವ ಅರ್ಥದಲ್ಲಿ ಸಾಮಾನ್ಯವಾಗಿ ಪೂರ್ವ ಕೊಲಂಬಿಯಾ ಯುಗದ ಪದವನ್ನು ವಿಶೇಷವಾಗಿ, ಪದೇಪದೇ ಬಳಸುತ್ತಾರೆ. ಅವುಗಳೆಂದರೆ, ಮೆಸೊಅಮೆರಿಕ (ಮೆಸೋಅಮೇರಿಕಾ) ಅಂದರೆ ಮೆಕ್ಸಿಕೊ ಮತ್ತು ಸೆಂಟ್ರಲ್ ಅಮೆರಿಕ ಒಳಗೊಂಡ ಸಾಂಸ್ಕೃತಿಕ ಪ್ರಾಂತ್ಯ (ದ ಓಲ್ಮ್ಯಾಕ್, ದ ಟಾಲ್ಟೆಕ್, ದ ಟಿಯೋಟಿಹುಅಕ್ಯಾನೊ, ದ ಝಾಪೊಟೆಕ್, ದ ಮಿಕ್ಸ್‌ಟೆಕ್, ದ ಆಝ್‌ಟೆಕ್, ಮತ್ತು ದ ಮಾಯಾ) ಮತ್ತು ದಕ್ಷಿಣ ಅಮೆರಿಕದ ಪರ್ವತ ಪ್ರಾಂತ್ಯ ಆಂಡೆಸ್ (ಇಂಕಾ, ಮೊಚೆ, ಚಿಬ್‌ಚಾ, ಕೇನರೀಸ್). ಪೂರ್ವ ಕೊಲಂಬಿಯಾದ ಬಹಳಷ್ಟು ನಾಗರಿಕತೆಗಳು ಅರ್ಥಪೂರ್ಣವಾದ ಗುಣಲಕ್ಷಣಗಳು ಮತ್ತು ವಿಶೇಷತೆಗಳನ್ನು ಹುಟ್ಟುಹಾಕಿವೆ. ಶಾಶ್ವತ ನಗರ ವಾಸ ಅಥವಾ ವಸಾಹತು, ಕೃಷಿ, ನಾಗರಿಕ ಮತ್ತು ಸ್ಮಾರಕ ವಾಸ್ತುಶಿಲ್ಪ ಮತ್ತು ಸಮುದಾಯದ ಸಂಕೀರ್ಣ ವರ್ಗಶ್ರೇಣಿ ಪದ್ಧತಿ ಅವುಗಳಲ್ಲಿ ಮುಖ್ಯವಾದವು. ಕಾಯಂ ಆಗಿ ನೆಲಸಲು ಮೊದಲು ಬಂದ ಯೂರೋಪಿಯನ್ನರ ಆಗಮನದ ಸಂದರ್ಭದಲ್ಲೇ (15ನೇ ಶತಮಾನದ ಅಂತ್ಯ ಮತ್ತು 16ನೇ ಶತಮಾನದ ಆರಂಭ) ಬಹಳಷ್ಟು ಈ ನಾಗರಿಕತೆಗಳು ಸಂಪೂರ್ಣ ನಶಿಸಿಹೋದವು. ಈ ನಾಗರಿಕತೆಗಳನ್ನು ಪುರಾತನ ವಸ್ತು ಶಾಸ್ತ್ರದ ಮೂಲಕ ಮಾತ್ರ ತಿಳಿಯಬಹುದಾಗಿದೆ. ಪ್ರಸ್ತುತ ಸಂದರ್ಭಕ್ಕೆ ಸಮಕಾಲೀನವಾಗಿರುವ ಉಳಿದ ನಾಗರಿಕತೆಗಳನ್ನು ಇತಿಹಾಸದಲ್ಲಿ ದಾಖಲಾಗಿರುವ ಕಾಲಮಾನಗಳಿಂದ ತಿಳಿಯಬಹುದಾಗಿದೆ. ಕೆಲವೊಂದು, ಉದಾಹರಣೆಗೆ ಮಾಯಾ ನಾಗರಿಕತೆಯು, ಸ್ವಂತ ಲಿಖಿತ ದಾಖಲೆಗಳನ್ನು ಹೊಂದಿದೆ. ಆದಾಗ್ಯೂ, ಈ ದಾಖಲೆಗಳನ್ನು ಗಮನಿಸಿದ ಬಹುಪಾಲು ಯೂರೋಪಿಯನ್ನರು, ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಬಹುಪಾಲು ದಾಖಲೆಗಳನ್ನು ಕ್ರೈಸ್ತರ ಚಿತೆಗೆ ಎಸೆದು ನಾಶಪಡಿಸಿದ್ದಾರೆ. ಬಚ್ಚಿಟ್ಟಿದ್ದ ಕೆಲವೇ ಕೆಲವು ದಾಖಲೆ ಪತ್ರಗಳು ಮಾತ್ರ ಈಗ ಲಭ್ಯವಿವೆ. ಪುರಾತನ ಸಂಸ್ಕೃತಿ ಮತ್ತು ಜೀವನ ಕ್ರಮದ ಬಗ್ಗೆ ಅಧ್ಯಯನ ನಡೆಸುವ ಆಧುನಿಕ ಇತಿಹಾಸಕಾರರಿಗೆ ಈ ದಾಖಲೆಗಳೇ ಈಗ ಮೂಲ ಪರಿಕರಗಳಾಗಿವೆ. ಅಮೇರಿಕ ಮತ್ತು ಯೂರೋಪಿನ ಸ್ಥಳೀಯ ದಾಖಲೆಗಳು ಮತ್ತು ಲೆಕ್ಕಪತ್ರಗಳ ಪ್ರಕಾರ, ಯೂರೋಪ್ ಯುದ್ಧ ಅಥವಾ ಕದನದ ಸಂದರ್ಭದಲ್ಲಿನ ಅಮೆರಿಕ ನಾಗರಿಕತೆಯು ಹಲವು ಹೃದಯಸ್ಪರ್ಶಿ ಸಾಧನೆಯ ಸಿದ್ಧಿಗಳನ್ನು ಹೊಂದಿತ್ತು. ಉದಾಹರಣೆಗೆ, ಆಝ್ ಟೆಕ್ ( ಸೆಂಟ್ರಲ್ ಮೆಕ್ಸಿಕೊದಲ್ಲಿ ಆಝ್‌ಟೆಕ್ ಜನಾಂಗೀಯರು ಹೊಂದಿದ್ದ ನಾಗರೀಕತೆ) ಜನಾಂಗೀಯರು ಟೆನೊಕ್ ಟಿಟ್ಲನ್ ಹೆಸರಿನಲ್ಲಿ ಸುಂದರ ನಗರವನ್ನು ನಿರ್ಮಿಸಿದ್ದರು. ಅದೀಗ ಮೆಕ್ಸಿಕೊ ನಗರದಲ್ಲಿ ಅಂದಾಜು 2 ಲಕ್ಷ ಜನಸಂಖ್ಯೆ ಹೊಂದಿರುವ ವಿಶ್ವದ ಅತ್ಯಂತ ಆಕರ್ಷಕ ಪುರಾತನ ತಾಣವಾಗಿ ಗಮನ ಸೆಳೆದಿದೆ. ಅಮೆರಿಕ ನಾಗರಿಕತೆಯು ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲೂ ತನ್ನದೇ ಆದ ವಿಶೇಷ ಛಾಪು ಹೊತ್ತಿದೆ. ಅಮೆರಿಕದಲ್ಲಿ ಯೂರೋಪಿಯನ್ನರ ವಸಾಹತು 1492 ರಲ್ಲಿ ಕ್ರಿಸ್ಟೋಫರ್ ಕೊಲಂಬಸ್ ಯಾತ್ರೆ ಕೈಗೊಂಡ ಸ್ವಲ್ಪ ದಿನಗಳ ತರುವಾಯ, ಬೃಹತ್ ಪ್ರಮಾಣದಲ್ಲಿ ಅಮೆರಿಕಕ್ಕೆ ಯೂರೋಪಿಯನ್ನರ ವಸಾಹತು ಆರಂಭವಾಯಿತು. ಯೂರೋಪಿಯನ್ನರು ಮತ್ತು ಆಫ್ರಿಕನ್ನರು ತಮ್ಮ ಜೊತೆ ಹೊಸಹೊಸ ರೋಗಗಳನ್ನು ತಂದ ಪರಿಣಾಮವಾಗಿ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಹಲವು ನಿವಾಸಿಗಳು ಸಾವನ್ನಪ್ಪಿದರು, ಇದರಿಂದಾಗಿ ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಮೂಲ ಅಮೆರಿಕನ್ನರ ಜನಸಂಖ್ಯೆ ಗಣನೀಯವಾಗಿ ಕುಸಿಯಿತು, ಆದಾಗ್ಯೂ ಯೂರೋಪಿಯನ್ನರ ಸಂಪರ್ಕ ಉತ್ತಮವಾಗೇ ಇತ್ತು. ಅಮೆರಿಕ ಮೂಲನಿವಾಸಿಗಳು ಮತ್ತು ಯೂರೋಪಿನ ವಸಾಹತುದಾರರ ನಡುವೆ ವ್ಯಾಪಕ ಸಂಘರ್ಷವೇ ಉಂಟಾಯಿತು. ಇದರ ಪರಿಣಾಮವಾಗಿ, ಡೇವಿಡ್ ಸ್ಟಾನರ್ಡ್ ಎಂಬಾತ ಸ್ಥಳೀಯ ಜನರ ನರಮೇಧಕ್ಕೆ ಕರೆ ನೀಡಿದ. ಪೂರ್ವ ಯೂರೋಪಿಯನ್ ವಲಸೆಗಾರರು ಅಮೆರಿಕದಲ್ಲಿ ಕಾಲೋನಿಗಳನ್ನು ಸ್ಥಾಪಿಸುವ ಸರ್ಕಾರದ ಪ್ರಾಯೋಜಕತ್ವದ ಪ್ರಯತ್ನಗಳಲ್ಲಿ ಪದೇಪದೇ ಭಾಗಿಯಾಗಿದ್ದರು. ಧಾರ್ಮಿಕ ಕಿರುಕುಳ ತಾಳಲಾರದೆ ಊರು ಬಿಟ್ಟು ಓಡಿ ಬರುವವರು ಮತ್ತು ಆರ್ಥಿಕ ಅವಕಾಶ ಅರಸಿ ಬರುವವರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ವಲಸೆ ಬರುವವರ ಸಂಖ್ಯೆಯೂ ಹೆಚ್ಚತೊಡಗಿತು. ಮಿಲಿಯನ್ ಗಟ್ಟಲೆ ಜನರನ್ನು ಅಮೆರಿಕಕ್ಕೆ ಬಲತ್ಕಾರವಾಗಿ ಸಾಗಿಸಲಾಯಿತು. ಅವರನ್ನು ಅಮೆರಿಕದಲ್ಲಿ ಗುಲಾಮರು, ಕೈದಿಗಳು ಮತ್ತು ಕರಾರಿನ ಸೇವಕರ ಕೆಲಸಗಳಿಗೆ ದೂಡಲಾಯಿತು. ಅಭಿದಾನ ಈ ಭೂಭಾಗಕ್ಕೆ ಅಮೆರಿಕ ಹೆಸರಿನ ಮೊಟ್ಟಮೊದಲ ಬಳಕೆ ಆಗಿದ್ದು ೧೫೦೭ ಏಪ್ರಿಲ್ 25ರಂದು. ಹನ್ನೆರಡು ವಲಯಗಳನ್ನು ಒಳಗೊಂಡ ಅಮೆರಿಕ ನಕ್ಷೆಯು ಮೊದಲು ಸಣ್ಣ ಭೂಪಟದಲ್ಲಿ ಕಾಣಿಸಿಕೊಂಡಿತು. ನಂತರ, ಜರ್ಮನ್ ನಕ್ಷೆಗಾರ ಮಾರ್ಟಿನ್ ವಾಲ್ಡ್ ಸೀಮುಲ್ಲರ್, ಫ್ರಾನ್ಸ್ ನ ಸೈಂಟ್-ಡೆಸ್-ವೊಗಸ್ ನಲ್ಲಿ ಬೃಹತ್ ಗೋಡೆಯ ಮೇಲೆ ರಚಿಸಿದ ಭೂಪಟದಲ್ಲಿ ಅದು ವಿಜೃಂಭಿಸಿತು. ಇದಕ್ಕೆ ಪೂರಕವಾಗಿ Cosmographiae Introductio ಕೃತಿ ಉಲ್ಲೇಖಿಸಿರುವಂತೆ, ಬುದ್ಧಿವಂತ ಎಂದು ಗುರುತಿಸಿಕೊಂಡಿದ್ದ ’ಅಮೆರಿಕಸ್ ’ ಎಂಬ ವ್ಯಕ್ತಿ ಈ ಭೂಪ್ರದೇಶವನ್ನು ಕಂಡು ಹಿಡಿದ ನಂತರ, ಅಮೆರಿಜ್, ಲ್ಯಾಂಡ್ ಆಫ್ ಅಮೆರಿಕಸ್ ಅಥವಾ ಅಮೆರಿಕಾ ಬಗ್ಗೆ ಆಕ್ಷೇಪಿಸಲು ಯಾರಿಗೂ ಹಕ್ಕಿಲ್ಲ. ಯೂರೋಪ್ ಮತ್ತು ಏಷ್ಯಾ ಖಂಡಗಳೆರಡಕ್ಕೂ ಮಹಿಳೆಯಿಂದ ಹೆಸರು ಬಂದಿದೆ. ಫ್ಲೋರಂಟೈನ್ ಸಂಶೋಧಕ ಅಮೇರಿಗೋ ವೆಸ್‌ಪುಸಿಯ ಹೆಸರಿನ ಲ್ಯಾಟಿನ್ ರೂಪವೇ ಅಮೇರಿಕಸ್ ವೆಸ್ಪುಸಿಯಸ್ , ಮತ್ತು ಅಮೆರಿಕಸ್ ಪದದ ಸ್ತ್ರೀಲಿಂಗವೇ ಅಮೆರಿಕ . ಯುವರಾಜ ಅಮಲರಿಕ್ (*Amalareiks) ಎಂಬಾತನ ಹೆಸರಿನ ಇಟಲಿ ರೂಪವೇ ಅಮೆರಿಗೊ , ಇದರರ್ಥ ಅಮಾಲಿಯ ಆಡಳಿತಗಾರ ಎಂಬುದು. ದಕ್ಷಿಣ ಅಮೆರಿಕದ ಕರಾವಳಿ ಭಾಗದಲ್ಲಿ ವೆಸ್ಪುಸ್ಸಿ ಸಮುದ್ರಯಾನ ನಡೆಸಿದ್ದ ಹಾಗೆಯೇ ಹೆಸರಿಡುವ ವಿಷಯದಲ್ಲಿ ಆತನ ಪಾತ್ರ ಏನು ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಈ ನೂತನ ಭೂಭಾಗಕ್ಕೆ ಅವನ ಹೆಸರು ಇಡಲು ವ್ಯಾಪಕ ಸೂಚನೆಗಳು ಪ್ರಸ್ತಾಪವಾದ ಬಗ್ಗೆ ಆತನಿಗೆ ತಿಳಿದಿರಲಿಲ್ಲ ಎಂದು ಕೆಲವು ಮೂಲಗಳು ಹೇಳುತ್ತವೆ. ಕೆಲವರು ಸುಳ್ಳುಪತ್ರ ಎಂದು ಪ್ರತಿಪಾದಿಸಿದ್ದ ಸೊಡೆರಿನಿ ಪತ್ರದಿಂದ ವಾಲ್ಡ್ ಸೀ ಮುಲ್ಲರ್ ತಪ್ಪು ಅಭಿಪ್ರಾಯ ಹೊಂದಿದ್ದಿರಲೂಬಹುದು. ಇದರ ಪರಿಣಾಮವಾಗಿ, ಈ ಭೂಭಾಗವನ್ನು ಮೊಟ್ಟಮೊದಲು ಅಮೆರಿಗೊ ವೆಸ್ಪುಸ್ಸಿ ಕಂಡುಹಿಡಿದ. ಈ ಭೂಭಾಗದ ಅಸ್ತಿತ್ವ ಇರುವುದನ್ನು ಮೊಟ್ಟಮೊದಲ ಬಾರಿಗೆ ನವೋದಯ ಯುಗದ ಯಾತ್ರಿಕರ ಗಮನ ಸೆಳೆದ ಕ್ರಿಸ್ಟೋಫರ್ ಕೊಲಂಬಸ್, 1506 ರಲ್ಲಿ ಕೊನೆಯುಸಿರೆಳೆದ (ಕೊನೆಯಲ್ಲಿ ಆತ ತಾನು ಅಂದುಕೊಂಡು ಹೊರಟಂತೆ ಇಂಡೀಸ್ ಅನ್ನು ಕಂಡುಹಿಡಿದೆ ಮತ್ತು ಕಾಲನಿಯಾಗಿ ಮಾಡಿಕೊಂಡೆ ಎಂದು ನಂಬಿದ್ದ), ಮತ್ತು ಆತ ವಾಲ್ಡ್ ಸೀ ಮುಲ್ಲರ್ ತೀರ್ಮಾನಗಳನ್ನು ವಿರೋಧಿಸಲಿಲ್ಲ. ಭೂಗೋಳ ವಿಸ್ತೀರ್ಣ ಅಮೆರಿಕದ ಉತ್ತರ ಬಿಂದುವಿನಲ್ಲಿ ಕಫೆಕ್ ಲುಬೆನ್ ದ್ವೀಪ ಪ್ರದೇಶವಿದೆ. ಅದು ಪೃಥ್ವಿಯ ಉತ್ತರ ದಿಕ್ಕಿನ ತುದಿಯಲ್ಲಿರುವ ಭೂಭಾಗವಾಗಿದೆ. ದಕ್ಷಿಣ ದಿಕ್ಕಿನ ತುದಿಯಲ್ಲಿ ದಕ್ಷಿಣ ಥುಲೆ ದ್ವೀಪ ಪ್ರದೇಶವಿದೆ, ಆದಾಗ್ಯೂ ಕೆಲವು ಸಮಯ ಅದನ್ನು ಅಂಟಾರ್ಕ್ಟಿಕಾದ ಭಾಗ ಎಂದು ಪರಿಗಣಿಸಲಾಗಿತ್ತು. ಪೂರ್ವ ದಿಕ್ಕಿನ ತುದಿಯಲ್ಲಿ ನಾರ್ಡೊಸ್ಟ್ರಂಡಿಜನ್ ಪ್ರಮುಖ ಭೂಭಾಗವಿದೆ. ಪಶ್ಚಿಮ ದಿಕ್ಕಿನ ತುದಿ ಭಾಗದಲ್ಲಿ ಅಟ್ಟು ದ್ವೀಪ ಪ್ರದೇಶವಿದೆ. ಅಮೆರಿಕದ ಮುಖ್ಯ ಭೂಭಾಗವು ಉತ್ತರದಿಂದ ದಕ್ಷಿಣ ದಿಕ್ಕಿಗೆ ಉದ್ದವಾಗಿ ಚಾಚಿರುವ ಪೃಥ್ವಿಯ ವಿಶಾಲವಾದ ಭೂಪ್ರದೇಶವಾಗಿದೆ. ಅದು, ಉತ್ತರ ಕೆನಡಾದ ಬೂಥಿಯಾ ಪರ್ಯಾಯ ದ್ವೀಪದಿಂದ ಚಿಲಿ ಪೆಟೊಗೊನಿಯಾದ ಕೇಪ್ ಫ್ರೊವರ್ಡ್ ವರೆಗೆ ಸುಮಾರು 14 ಸಾವಿರ ಕಿಲೋಮೀಟರ್ (ಸುಮಾರು 8700 ಮೈಲುಗಳು) ವರೆಗೆ ವ್ಯಾಪಿಸಿದೆ. ಅಮೆರಿಕದ ಪಶ್ಚಿಮ ದಿಕ್ಕಿನ ಪ್ರಮುಖ ಭೂಪ್ರದೇಶವು ಅಲಸ್ಕಾಗೆ ಸೇರಿದ ಸಿವರ್ಡ್ ಪರ್ಯಾಯ ದ್ವೀಪ ಪ್ರದೇಶದ ಕೊನೆಯ ಭಾಗವನ್ನು ಹೊಂದಿದೆ. ಪೂರ್ವ ದಿಕ್ಕಿನ ತುತ್ತತುದಿಯಲ್ಲಿ ಈಶಾನ್ಯ ಬ್ರೆಜಿಲ್ ನ ಪೊಂಟಾ ಡೊ ಸಿಕ್ಸಾಸ್ ಭೂಪ್ರದೇಶ ಇದೆ. ಮೇಲ್ಮೈ ಲಕ್ಷಣ ಅಮೆರಿಕದ ಭೌಗೋಳಿಕ ಹಿನ್ನೆಲೆ ಅಥವಾ ಮೇಲ್ಮೈಲಕ್ಷಣವು ಅಲ್ಲಿನ ಕರಾವಳಿಯಲ್ಲಿರುವ ಪರ್ವತ ಶ್ರೇಣಿ ಮತ್ತು ಬೆಟ್ಟಗುಡ್ಡಗಳಿಂದ ಪ್ರಭಾವಿತವಾಗಿದೆ. ಆಂಡೆಸ್ (Andes) ಪರ್ವತ ಪ್ರದೇಶವು ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯುದ್ದಕ್ಕೂ ವ್ಯಾಪಿಸಿದೆ, ಅಲ್ಲದೆ, ಪಶ್ಚಿಮ ಘಟ್ಟದ ಪರ್ವತ ಶ್ರೇಣಿ ಮತ್ತು ಬೆಟ್ಟಗುಡ್ಡಗಳು ಉತ್ತರ ಅಮೆರಿಕದ ಪಶ್ಚಿಮ ಭಾಗದಲ್ಲಿ ಹರಡಿಕೊಡಿವೆ. 2300 ಕಿಲೋಮೀಟರ್ ಉದ್ದ(1429 ಮೈಲು)ದ ಅಪ್ಪಲಚಿಯಾನ್ ಪರ್ವತ ಶ್ರೇಣಿಯು ಉತ್ತರ ಅಮೆರಿಕದ ಪೂರ್ವ ಕರಾವಳಿಯಲ್ಲಿರುವ ಅಲಬಾಮಾದಿಂದ ನ್ಯೂಫೌಂಡ್ ಲ್ಯಾಂಡ್ ವರೆಗೆ ಚಾಚಿಕೊಂಡಿದೆ. ಅಪ್ಪಲಚಿಯಾನ್ ಪರ್ವತ ಶ್ರೇಣಿಯ ಉತ್ತರ ದಿಕ್ಕಿನಲ್ಲಿ, ಆರ್ಕ್ಟಿಕ್ ಪರ್ವತ ಪ್ರದೇಶವು ಕೆನಡಾದ ಪೂರ್ವ ಕರಾವಳಿಯುದ್ದಕ್ಕೂ ವ್ಯಾಪಿಸಿದೆ. ಕರಾವಳಿ ಪರ್ವತ ಶ್ರೇಣಿಯ ನಡುವೆಯೂ, ಉತ್ತರ ಅಮೆರಿಕ ಸಮತಟ್ಟಾದ ಭೂಪ್ರದೇಶವನ್ನು ಹೊಂದಿದೆ. ಆಂತರಿಕ ಭೂಪ್ರದೇಶ(ಭೌತಿಕ ಗುಣಲಕ್ಷಣ ಹೊಂದಿರುವ ಭೂಮಿಯ ಮೇಲ್ಮೈ)ವು ಉತ್ತರ ಅಮೆರಿಕ ಖಂಡದ ಬಹುಪಾಲು ಭಾಗವನ್ನು ಆವರಿಸಿದೆ. ಕೆನಾಡಾ ಪ್ರಸ್ಥಭೂಮಿಯು ಉತ್ತರ ಅಮೆರಿಕದ 5 ಮಿಲಿಯನ್ ಕಿ.ಮೀ ಸ್ಕ್ವೇರ್ (km²) ಭೂಭಾಗವನ್ನು ಆವರಿಸಿದೆ ಮತ್ತು ಅದು ಸಹಜವಾಗಿ ಸಮತಟ್ಟಾಗಿದೆ. ಅಂತೆಯೇ, ದಕ್ಷಿಣ ಅಮೆರಿಕದ ಈಶಾನ್ಯ ಭಾಗವು ಸಮತಟ್ಟಾದ ಅಮೆಜಾನ್ ನದಿಯನ್ನು ಆವರಿಸಿಕೊಂಡಿದೆ. ಪೂರ್ವ ಕರಾವಳಿಯಲ್ಲಿನ ಬ್ರೆಜಿಲ್ ಪ್ರಸ್ಥಭೂಮಿ ಚಪ್ಪಟ್ಟೆಯಾಗಿ ಕಂಡುಬಂದರೂ, ಭೂ ಮೇಲ್ಮೈ ಆಕಾರದಲ್ಲಿ ತುಸು ಬದಲಾವಣೆಗಳನ್ನು ತೋರುತ್ತದೆ. ದಕ್ಷಿಣ ಕರಾವಳಿಯ ಗ್ರನ್ ಚಕೊ ಮತ್ತು ಪಂಪಸ್ ಭಾಗಗಳು ವಿಶಾಲವಾದ ತಗ್ಗು ಭೂ ಪ್ರದೇಶಗಳನ್ನು ಹೊಂದಿವೆ. ಜಲಶಾಸ್ತ್ರ ಕರಾವಳಿ ಪರ್ವತ ಶ್ರೇಣಿ ಮತ್ತು ಆಂತರಿಕ ಭೂಪ್ರದೇಶದ ಜೊತೆಗೆ, ಅಮೆರಿಕವು ಹಲವಾರು ನದಿ, ಜಲಾಶಯಗಳನ್ನು ಹೊಂದಿದೆ. ದಕ್ಷಿಣ ಅಮೆರಿಕದಲ್ಲಿ ಅಮೆಜಾನ್ ಅತಿದೊಡ್ಡ ನದಿ ಎಂದು ಹೆಸರುವಾಸಿಯಾಗಿದೆ. ಅತಿ ಹೆಚ್ಚು ನೀರು ಹರಿಸುವ ವಿಶ್ವದ ಏಕೈಕ ಅತಿದೊಡ್ಡ ನದಿ ಎಂಬ ಖ್ಯಾತಿಯೂ ಅದಕ್ಕಿದೆ. ಮಿಸ್ಸಿಸ್ಸಿಪ್ಪಿ ನದಿ ಉತ್ತರ ಅಮೆರಿಕದ ಅತಿದೊಡ್ಡ ನದಿ. ಇದು ವಿಶ್ವದ ಎರಡನೇ ಅತಿದೊಡ್ಡ ಜಲಾನಯನ ಪ್ರದೇಶ ಎಂಬ ಖ್ಯಾತಿ ಹೊಂದಿದೆ. ದಕ್ಶಿಣ ಅಮೆರಿಕದ ಎರಡನೇ ಅತಿದೊಡ್ಡ ಜಲಾನಯನ ಪ್ರದೇಶ ಎನಿಸಿರುವ ಪರಾನ ನದಿಯು 2.5 ಮಿಲಿಯನ್ ಚದುರ ಕಿಲೋಮೀಟರ್ ಪ್ರದೇಶವನ್ನು ಆವರಿಸಿಕೊಂಡಿದೆ. ಜನಸಾಂದ್ರತೆ ಜನಸಂಖ್ಯೆ ಅಮೆರಿಕದ ಒಟ್ಟು ಜನಸಂಖ್ಯೆಯು ಸುಮಾರು 85 ಕೋಟಿ 90 ಲಕ್ಶದಷ್ಟಿದೆ. ಈ ಜನಸಂಖ್ಯೆಯನ್ನು ಕೆಳಗಿನಂತೆ ವಿಂಗಡಿಸಲಾಗಿದೆ. ಉತ್ತರ ಅಮೆರಿಕ : 2001 ರಲ್ಲಿ 495 ಮಿಲಿಯನ್ ಮತ್ತು 2002 ರಲ್ಲಿ 501 ಮಿಲಿಯನ್ ( ಸೆಂಟ್ರಲ್ ಅಮೆರಿಕ ಮತ್ತು ಹವಾಯಿ ಸೇರಿ) ಉತ್ತರ ಅಮೆರಿಕ : 2001 ರಲ್ಲಿ 352 ಮಿಲಿಯನ್ ಮತ್ತು 2002 ರಲ್ಲಿ 357 ಮಿಲಿಯನ್ ಇವನ್ನೂ ಗಮನಿಸಿ ಇತ್ತೀಚೆಗೆ ಲಭ್ಯವಾದ ಜನಗಣತಿ ಆಧರಿಸಿದ ವಿಶ್ವಸಂಸ್ಥೆ ಜನಸಂಖ್ಯಾ ಮಾಹಿತಿ : 2007 ಅಮೆರಿಕದಲ್ಲಿನ ರಾಷ್ಟ್ರಗಳು ಮತ್ತು ಜನಸಂಖ್ಯಾ ಪಟ್ಟಿ ಬೃಹತ್ ನಗರ ಕೇಂದ್ರಗಳು ಅಮೆರಿಕದ ಅತ್ಯಂತ ಜನಪ್ರಿಯ ನಗರಗಳೆಂದರೆ ಮೆಕ್ಸಿಕೊ ರಾಜಧಾನಿ ಮೆಕ್ಸಿಕೊ ಸಿಟಿ, ಅಮೆರಿಕ ಸಂಯುಕ್ತ ಸಂಸ್ಥಾನದ ಪೂರ್ವ ಕರಾವಳಿಯಲ್ಲಿ ನೆಲೆ ನಿಂತಿರುವ ನ್ಯೂಯಾರ್ಕ್ ನಗರ, ಬ್ರೆಜಿಲ್ ರಾಜಧಾನಿ ಸಾವ್ ಪಾಲೊ. ಈ ಮೇಲಿನ ಯಾವ ನಗರ ಕೇಂದ್ರ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿದೆ ಎಂಬ ಪರಿಗಣನೆಯು, ಜನಸಂಖ್ಯೆ ಕಂಡು ಹಿಡಿಯಲು ಬಳಸುವ ಮಾನದಂಡವನ್ನು ಆಧರಿಸಿದೆ. ಮಾನವ ವಂಶಶಾಸ್ತ್ರ ಅಮೆರಿಕದ ಜನಸಂಖ್ಯೆಯು ಅಲ್ಲಿನ ಏಳು ಬೃಹತ್ ಜನಾಂಗೀಯ ಗುಂಪುಗಳ ಸಂತತಿ ಮತ್ತು ಅವುಗಳ ಸಂಯೋಗದಿಂದ ಸೃಷ್ಟಿಯಾಗಿದೆ. ಅಮೆರಿಕದ ಸ್ಥಳೀಯ ಜನರೆಂದರೆ ಅಮೆರಿಂಡಿಯನ್ನರು, ಎಸ್ಕಿಮೊಗಳು ಮತ್ತು ಅಲ್ಯುಟರು. ಐರೋಪ್ಯ ಪೀಳಿಗೆಯಲ್ಲಿ ಪ್ರಮುಖರಾದವರೆಂದರೆ, ಸ್ಪಾನಿಷ್, ಬ್ರಿಟಿಷ್, ಐರಿಷ್, ಇಟಲಿ, ಪೋರ್ಚುಗೀಸ್, ಫ್ರೆಂಚ್, ಪೊಲೀಷ್, ಜರ್ಮನ್, ಡಚ್ ಮತ್ತು ಸ್ಕಾಂಡಿನೇವಿಯಾ ಜನರು. ಮಿಶ್ರ ಜಾತಿ(Mestizo)ಯವರೆಂದರೆ, ಐರೋಪ್ಯ ಮತ್ತು ಅಮೆರಿಂಡಿಯನ್ನರ ಮಿಶ್ರ ತಳಿ ಕಪ್ಪು ಆಫ್ರಿಕನ್ನರ ಸಂತತಿಯಲ್ಲಿ, ಮುಖ್ಯವಾಗಿ ಪಶ್ಚಿಮ ಆಫ್ರಿಕಾದ ಪೀಳಿಗೆ ಮುಲಟ್ಟೋಸ್ ಅಂದರೆ, ಕಪ್ಪು ಆಫ್ರಿಕನ್ನರು ಮತ್ತು ಯೂರೋಪಿಯನ್ನರ ಮಿಶ್ರ ಸಂತತಿ ಝಂಬೊಸ್ (ಸ್ಪಾನಿಷ್) ಅಥವಾ ಕಫುಸೊಸ್ (ಪೋರ್ಚುಗೀಸ್), ಕಪ್ಪು ಆಫ್ರಿಕನ್ನರು ಮತ್ತು ಅಮೆರಿಂಡಿಯನ್ನರ ಮಿಶ್ರ ಸಂತತಿ ಅಥವಾ ಪೂರ್ವಜರು. ಏಷ್ಯನ್ನರು, ಅಂದರೆ, ಪೂರ್ವ, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಪೂರ್ವಜರು. ಮಧ್ಯ ಪ್ರಾಚ್ಯನ್ನರು ಅಂದರೆ, ಮಧ್ಯಪ್ರಾಚ್ಯದಿಂದ ಬಂದ ಪೂರ್ವಿಕರು. ಬಹುಸಂಖ್ಯಾತ ಜನರು ಲ್ಯಾಟಿನ್ ಅಮೆರಿಕದಲ್ಲಿ ನೆಲೆಸಿದ್ದಾರೆ, ಪ್ರಭಾವಶಾಲಿ ಸಂಸ್ಕೃತಿ ಹೊಂದಿರುವ ಲ್ಯಾಟಿನ್ ಅಮೆರಿಕದ ಮೂಲಬೇರು ಲ್ಯಾಟಿನ್ ಯೂರೋಪ್ ನಲ್ಲಿದೆ (ಎರಡು ಪ್ರಭಾವಶಾಲಿ ಸ್ಪಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳೂ ಸೇರಿವೆ. ಈ ಭಾಷೆಗಳಿಗೆ ನಿಯೋಲ್ಯಾಟಿನ್ ಎಂದೂ ಕರೆಯುತ್ತಾರೆ), ಇನ್ನೂ ನಿರ್ದಿಷ್ಟವಾಗಿ ಇಬೆರಿಯಾ ರಾಷ್ಟ್ರಗಳಾದ ಪೋರ್ಚುಗಲ್ ಮತ್ತು ಸ್ಪೇನ್ (ಇಬೆರೊ ಅಮೆರಿಕ ಎಂಬ ಸಮಾನಾರ್ಥಕ ಪದ ಬಳಕೆಯೂ ಇದೆ)ನಲ್ಲೂ ಈ ಮೂಲಬೇರು ನೆಲೆಸಿದೆ. ಲ್ಯಾಟಿನ್ ಅಮೆರಿಕವು ಆಂಗ್ಲೊ ಅಮೆರಿಕದೊಂದಿಗೆ ಗುಣಲಕ್ಷಣಗಳಲ್ಲಿ ಹಲವು ವೈರುಧ್ಯಗಳನ್ನು (ಜರ್ಮನ್ನರ ಭಾಷೆ ಇಂಗ್ಲಿಷ್, ಇಲ್ಲಿ ಹೆಚ್ಚು ಬಳಕೆಯಲ್ಲಿದೆ) ಹೊಂದಿದೆ. ಅದು ಕೆನಡಾ (ಫ್ರೆಂಚ್ ಭಾಷಿಕರನ್ನು ಹೊರತುಪಡಿಸಿದ ಕೆನಡಾದ ಮೂಲಬೇರು ಲ್ಯಾಟಿನ್ ಯೂರೋಪ್ (ಫ್ರಾನ್ಸ್)ನಲ್ಲಿದೆ : Québec and Acadia ನೋಡಿ) ಮತ್ತು ಸಂಯುಕ್ತ ಸಂಸ್ಥಾನಗಳನ್ನು ಒಳಗೊಂಡಿದೆ. ಇವೆರದೂ ಪ್ರದೇಶಗಳು ಉತ್ತರ ಅಮೆರಿಕದಲ್ಲಿ ನೆಲೆಗೊಂಡಿದ್ದು, ಅಲ್ಲಿ ಹೆಚ್ಚಾಗಿ ಆಂಗ್ಲೊ-ಸಕ್ಸನ್ ಮತ್ತು ಜರ್ಮನ್ ಬೇರುಗಳು ಇವೆ. ಧರ್ಮ ಅಮೆರಿಕದಲ್ಲಿ ಹೆಚ್ಚಾಗಿ ರೂಢಿಯಲ್ಲಿರುವ ಪ್ರಮುಖ ಧರ್ಮ ಮತ್ತು ನಂಬಿಕೆಗಳು ಕೆಳಕಂಡಂತಿವೆ: ಕ್ರೈಸ್ತ ಧರ್ಮ (ಉತ್ತರ ಅಮೆರಿಕ: 85 ಶೇಕಡ ; ದಕ್ಷಿಣ ಅಮೆರಿಕ 93 ಶೇಕಡ ರೋಮನ್ ಕೆಥೊಲಿಕ್ ಧರ್ಮ: ( ಮೆಕ್ಸಿಕೊದ ಶೇಕಡ 89 ರಷ್ಟು ಜನರು, ಬ್ರೆಜಿಲ್ ನ ಸುಮಾರು ಶೇಕಡ 74 ರಷ್ಟು ಜನರು, ಬ್ರೆಜಿಲ್ ನಲ್ಲಿ ವಿಶ್ವದಲ್ಲೇ ಅತಿಹೆಚ್ಚು ಅಂದರೆ, 182 ಮಿಲಿಯನ್ ರೋಮನ್ ಕೆಥೋಲಿಕ್ ಧರ್ಮದವರಿದ್ದಾರೆ, ಸಂಯುಕ್ತ ಸಂಸ್ಥಾನದ ಜನಸಂಖ್ಯೆಯ ಶೇಕಡ ೨೪ ರಷ್ಟು ಜನ, ಮತ್ತು ಶೇಕಡ ೪೦ ಕ್ಕೂ ಅಧಿಕ ಮಂದಿ ಕೆನಡಾದ ಜನ ಅನುಸರಿಸುತ್ತಿದ್ದಾರೆ. ಪ್ರೊಟೆಸ್ಟಾಂಟ್ ಧರ್ಮ (ಪೋಪನ ಧರ್ಮಕ್ಕೆ ವಿರೋಧಿಯಾದ ಧರ್ಮ) : ( ಸಂಯುಕ್ತ ಸಂಸ್ಥಾನದಲ್ಲಿ ಹೆಚ್ಚು ರೂಢಿಯಲ್ಲಿದೆ, ಅರ್ಧಕ್ಕಿಂತೆ ಹೆಚ್ಚು ಜನರು ಪ್ರೊಟೆಸ್ಟಾಂಟ್ ಧರ್ಮದವರಾಗಿದ್ದಾರೆ, ಮತ್ತು ಕೆನಡಾದಲ್ಲಿ, ಕಾನು ಭಾಗಕ್ಕಿಂತ ಹೆಚ್ಚಿನ ಮಂದಿ ; ಕೆಥೋಲಿಕ್ ಸಮುದಾಯ ಹೆಚ್ಚಿರುವ ಲ್ಯಾಟಿನ್ ಅಮೆರಿಕದಲ್ಲಿ ಕ್ರೈಸ್ತ ಮತ ಪ್ರಚಾರ ಮತ್ತು ಧರ್ಮೋಪದೇಶ ಆಂದೋಲನಗಳು ಹೆಚ್ಚಾಗುವ ಅನಿಶ್ಚಿತತೆಗಳಿವೆ.) ಪೂರ್ವ ಭಾಗದ ಸಂಪ್ರದಾಯಬದ್ಧ ಕ್ರೈಸ್ತರು : (ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ ಮತ್ತು ಅಮೆರಿಕ ಒಟ್ಟು ನಾಗರಿಕರ ಶೇಕಡ 1 ರಷ್ಟು ಮಂದಿ ಇದ್ದಾರೆ ; ಈ ಸಮುದಾಯವು ಕೆನಡಾದಲ್ಲಿ ಇತರೆ ಸಮುದಾಯಕ್ಕಿಂತ ಅತಿವೇಗದಲ್ಲಿ ಬೆಳೆಯುತ್ತಿದೆ ಮತ್ತು ಕೆನಡಾ ಜನಸಂಖ್ಯೆಯ ಸಮಾರು ಶೇಕಡ 3 ರಷ್ಟು ಜನಸಾಂದ್ರತೆಯನ್ನು ಪ್ರತಿನಿಧಿಸುತ್ತಿದೆ. ಅಪಂಥೀಯ ಕ್ರೈಸ್ತರು (Non-denominational Christians) ಮತ್ತು ಇತರೆ ಕ್ರೈಸ್ತರು ( ಸುಮಾರು ೧,೦೦೦ ವಿವಿಧ ಕ್ರೈಸ್ತ ಪಂಥೀಯರು ಮತ್ತು ಪಂಗಡಗಳು ಅಮೆರಿಕದಲ್ಲಿ ರೂಢಿಯಲ್ಲಿವೆ. ನಾಸ್ತಿಕರು : ( ನಿರೀಶ್ವರವಾದಿಗಳು ಮತ್ತು ಆಜ್ಞೇಯತಾವಾದಿಗಳು ಈ ಗುಂಪಿನಲ್ಲಿ ಸೇರಿದ್ದಾರೆ, ಅಲ್ಲದೆ, ಕೆಲವು ರೂಪದ ಆಧ್ಯಾತ್ಮಿಕತೆ ಪ್ರದರ್ಶಿಸುವ ಅಥವಾ ತೋರುವ ಹಾಗೂ ಯಾವುದೇ ಸಂಘಟಿತ ಧರ್ಮದಲ್ಲಿ ಸದಸ್ಯರಾಗಿ ಗುರುತಿಸಿಕೊಳ್ಳದ ಗುಂಪು ಸಹ ಇದರಲ್ಲಿ ಸೇರಿದೆ). ಇಸ್ಲಾಂ ಧರ್ಮ : ( ಕೆನಾಡಾದ ಶೇಕಡ 2 ರಷ್ಟು ಮಂದಿ (580,000 ಜನರು) ಅನುಸರಿಸುತ್ತಿದ್ದಾರೆ, ಅಮೇರಿಕ ಜನಸಂಖ್ಯೆಯ ಶೇಕಡ 0.6 ರಿಂದ 2 ರಷ್ಟು (1,820,೦೦೦ ರಿಂದ 5,000,000+ ಮಂದಿ), ಮತ್ತು ಶೇಕಡ 0.2 ರಷ್ಟು ಮೆಕ್ಸಿಕನ್ನರು (250,೦೦೦ ಮಂದಿ), ಜೊತೆಗೆ, ಉತ್ತರ ಅಮೆರಿಕದ ಒಟ್ಟು ಜನಸಂಖ್ಯೆಯ ಶೇಕಡ 2.5 ರಷ್ಟು ಮಂದಿ ಮುಸ್ಲಿಮರಿದ್ದಾರೆ. ಅತಿಹೆಚ್ಚು ಮುಸ್ಲಿಂ ಸಾಂದ್ರತೆ ಹೊಂದಿರುವ ಉತ್ತರ ಅಮೆರಿಕದ ನಗರಗಳೆಂದರೆ, ಟೊರಂಟೊ, ಲಾಸ್ ಏಂಜಲೀಸ್, ನ್ಯೂಯಾರ್ಕ್, ಡೆಟ್ರಾಯ್ಟ್, ಹೂಸ್ಟನ್, ಚಿಕಾಗೊ, ಫಿಲಡೆಲ್ಫಿಯಾ ಮತ್ತು ವಾಷಿಂಗ್ಟನ್ ಡಿ.ಸಿ. ಹಾಗೂ ಲ್ಯಾಟಿನ್ ಅಮೆರಿಕದ ಎಲ್ಲಾ ನಗರಗಳಲ್ಲಿ ಶೇಕಡ 0.3 ರಷ್ಟು ಮುಸ್ಲಿಮರಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಳವೆಂದರೆ ಅರ್ಜೆಂಟೈನಾ. ಅಲ್ಲಿ 6 ಲಕ್ಷದವರೆಗೆ, ಅಂದರೆ, ಒಟ್ಟು ಜನಸಂಖ್ಯೆಯ ಶೇಕಡ 1.9 ರಷ್ಟು ಮಂದಿ ನೆಲೆಸಿದ್ದಾರೆ. ಯೆಹೂದಿ ಧರ್ಮ : (ಉತ್ತರ ಅಮೆರಿಕದ ಶೇಕಡ 2 ರಷ್ಟು ಮಂದಿ ಅನುಸರಿಸುತ್ತಿದ್ದಾರೆ - ಅಮೆರಿಕ ಜನಸಂಖ್ಯೆಯ ಅಂದಾಜು ಶೇಕಡ 2.5 ರಷ್ಟು ಮತ್ತು ಕೆನಡಿಯನ್ನರ ಶೇಕಡ 1.2 ರಷ್ಟು - ಮತ್ತು ಲ್ಯಾಟಿನ್ ಅಮೆರಿಕನ್ನರ ಶೇಕಡ 0.23 ರಷ್ಟು ಮಂದಿ - ಲ್ಯಾಟಿನ್ ಅಮೆರಿಕದಲ್ಲಿ ಅರ್ಜೆಂಟೈನಾವು ಅತಿಹೆಚ್ಚು ಯೆಹೂದಿ ಜನಸಂಖ್ಯೆಯನ್ನು ಹೊಂದಿದೆ, ಅಲ್ಲಿ 200,000 ಮಂದಿ ಯೆಹೂದಿಗಳಿದ್ದಾರೆ. ಅಮೆರಿಕದಲ್ಲಿರುವ ಇತರೆ ಧರ್ಮಗಳೆಂದರೆ, ಸಿಖ್, ಬುದ್ಧ, ಹಿಂದು, ಬಹಾಯ್, ಸ್ಥಳೀಯವಾಗಿ ರೂಪುಗೊಂಡಿರುವ ವೈವಿಧ್ಯಪೂರ್ಣವಾದ ಹಲವು ಧರ್ಮಗಳು, ಅವುಗಳಲ್ಲಿ ಬಹಳಷ್ಟು ಧರ್ಮಗಳನ್ನು ಸರ್ವ ಚೇತನ ವಾದ, ಮತ್ತೆ ಕೆಲವನ್ನು ಆಫ್ರಿಕಾ ಮತ್ತು ಆಫ್ರಿಕಾ ಮೂಲದಿಂದ ಪಡೆದ ಧರ್ಮಗಳೆಂದು ವರ್ಗೀಕರಿಸಲಾಗಿದೆ. ವಿವಿಧ ಮತ ಪಂಗಡಗಳ ನಂಬಿಕೆಗಳು ಖಂಡದುದ್ದಕ್ಕೂ ರೂಢಿಯಲ್ಲಿರುವುದನ್ನು ಕಾಣಬಹುದಾಗಿದೆ. ಭಾಷೆಗಳು ಅಮೆರಿಕದಲ್ಲಿ ಹಲವು ಭಾಷೆಗಳನ್ನು ಮಾತನ್ನಾಡಲಾಗುತ್ತದೆ. ಅವುಗಳಲ್ಲಿ ಕೆಲವು ಐರೋಪ್ಯ ಮೂಲದಿಂದ ಬಂದವಾದರೆ, ಮತ್ತೆ ಕೆಲವನ್ನು ಸ್ಥಳೀಯ ಜನರು ಮಾತನ್ನಾಡುತ್ತಾರೆ ಅಥವಾ ಹಲವು ನುಡಿಗಟ್ಟುಗಳ ಸಂಯೋಗದಿಂದ ಸೃಷ್ಟಿಯಾದ ಭಾಷೆ, ಉದಾಹರಣೆಗೆ ವಿವಿಧ ನೀಗ್ರೊ ಅಥವಾ ಕ್ರಿಯೋಲ ಸಂತತಿ ಉಪಯೋಗಿಸುವ ಭಾಷೆ ಇಲ್ಲಿ ಬಳಕೆಯಲ್ಲಿವೆ. ಲ್ಯಾಟಿನ್ ಅಮೆರಿಕದ ಪ್ರಭಾವಿಶಾಲಿ ಭಾಷೆ ಎಂದರೆ ಸ್ಪಾನಿಷ್, ಆದಾಗ್ಯೂ, ಲ್ಯಾಟಿನ್ ಅಮೆರಿಕದ ಬೃಹತ್ ರಾಷ್ಟ್ರವೆನಿಸಿರುವ ಬ್ರೆಜಿಲ್ ನಲ್ಲಿ ಮಾತ್ರ ಪೋರ್ಚುಗೀಸನ್ನು ಹೆಚ್ಚಾಗಿ ಮಾತನ್ನಾಡುತ್ತಾರೆ. ಫ್ರೆಂಚ್ ಮತ್ತು ಇಂಗ್ಲಿಷ್ ಮಾತನಾಡುವ ಜನರಿಂದಲೇ ಸುತ್ತುವರಿದಿರುವ ಸಣ್ಣ ಪ್ರದೇಶಗಳು ಲ್ಯಾಟಿನ್ ಅಮೆರಿಕದಲ್ಲಿವೆ, ಅದರಲ್ಲೂ ಬಹುಮುಖ್ಯವಾದವು ಅಂದರೆ ಫ್ರೆಂಚ್ ಗಯಾನಾ ಮತ್ತು ಬೆಲಿಝೆ, ಮತ್ತು ಫ್ರೆಂಚ್ ಮೂಲದ ಹೈಟಿ ಕ್ರಿಯೋಲ ಭಾಷೆ ಅಥವಾ ನೀಗ್ರೊ ಭಾಷೆ ಹೈಟಿ ರಾಷ್ಟ್ರದಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ. ಆಂಗ್ಲೊ ಅಮೆರಿಕಗಿಂತ ಲ್ಯಾಟಿನ್ ಅಮೆರಿಕದಲ್ಲಿ ದೇಶಿಯ ಭಾಷೆಗಳು ಹೆಚ್ಚಿನ ಪ್ರಾಬಲ್ಯ ಹೊಂದಿವೆ, Nahuatl, Quechua, Aymara, ಮತ್ತು Guaraní ಭಾಷೆಗಳು ಅವುಗಳಲ್ಲಿ ಪ್ರಮುಖವಾದವು. ಇತರೆ ಹಲವು ದೇಶಿಯ ಭಾಷೆಗಳನ್ನು ಆಂಗ್ಲೊ-ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕಗಳೆರಡರ ಉದ್ದಗಲಕ್ಕೂ ಅಪರೂಪವಾಗಿ ಮಾತನ್ನಾಡುತ್ತಾರೆ ಹೈಟಿ ಕ್ರಿಯೋಲ ಹೊರತುಪಡಿಸಿದ ಸಾಮಾನ್ಯ ಕ್ರಿಯೋಲ ಭಾಷೆಯನ್ನು ಲ್ಯಾಟಿನ್ ಅಮೆರಿಕದ ವಿವಿಧ ಭಾಗಗಳಲ್ಲಿ ಮಾತನ್ನಾಡುತ್ತಾರೆ. ಹೆಸರೇ ಸೂಚಿಸುವಂತೆ, ಆಂಗ್ಲೊ ಅಮೆರಿಕದ ಪ್ರಬಲ ಭಾಷೆ ಇಂಗ್ಲಿಷ್. ಕೆನಡಾದಲ್ಲಿ ಫ್ರೆಂಚ್ ಸಹ ಅಧಿಕೃತ ಭಾಷೆ, ಕ್ಯುಬೆಕ್ (Québec)ನಲ್ಲಿ ಪ್ರಬಲ ಭಾಷೆಯಾಗಿರುವ ಇದು, ನ್ಯೂ ಬ್ರನ್ ಸ್ವಿಕ್ (New Brunswick)ನಲ್ಲಿ ಇಂಗ್ಲಿಷ್ ಜೊತೆ ಅಧಿಕೃತ ಭಾಷೆಯಾಗಿದೆ. ಅಮೆರಿಕದ ರಾಜ್ಯ ಲೂಸಿಯಾನಾದಲ್ಲಿ ಇದು ಅತಿಮುಖ್ಯ ಭಾಷೆಯಾಗಿದೆ. ನೈಋತ್ಯ ಸಂಯುಕ್ತ ಸಂಸ್ಥಾನದಲ್ಲಿ ಸ್ಪಾನಿಷ್, ತನ್ನ ಅಸ್ತಿತ್ವವನ್ನು ಮುಂದುವರೆಸಿಕೊಂಡು ಬಂದಿದೆ. ಇದು ನ್ಯೂ ಸ್ಪೇನ್ ನ ಪ್ರಾಂತ್ಯದ (Viceroyalty) ಪ್ರತ್ಯೇಕ ಭಾಗದ ರಚನೆಗೆ ಕಾರಣವಾಗಿದೆ, ಅದರಲ್ಲೂ ವಿಶೇಷವಾಗಿ ಕ್ಯಾಲಿಫೋರ್ನಿಯಾ ಮತ್ತು ನ್ಯೂ ಮೆಕ್ಸಿಕೊದಲ್ಲಿ ಅದು ತನ್ನ ಅಸ್ತಿತ್ವ ಮುಂದುಬರೆಸಿಕೊಂಡು ಬಂದಿದೆ. 17 ನೇ ಶತಮಾನದ ತರುವಾಯ ಅಲ್ಲಿ ವಿಭಿನ್ನ ಸ್ಪಾನಿಷ್ ಭಾಷೆಯ ಬಳಕೆಯಾಗುತ್ತಾ ಬಂದಿದೆ. ಲ್ಯಾಟಿನ್ ಅಮೆರಿಕದಿಂದ ವಲಸೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನವರೆಗೆ ಸಂಯುಕ್ತ ಸಂಸ್ಥಾನದ ಉಳಿದ ಭಾಗಗಳಲ್ಲೂ ಸ್ಪಾನಿಷ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಅತ್ಯದಿಕ ಪ್ರಮಾಣದ ವಲಸೆಯಿಂದಾಗಿ ಆಂಗ್ಲೊ ಅಮೆರಿಕದಲ್ಲಿ ಮಹತ್ವದ ಭಾಷಾ ವೈವಿಧ್ಯತೆ ಕಾಣಿಸಿಕೊಂಡಿದೆ, ಸಂಯುಕ್ತ ಸಂಸ್ಥಾನವೊಂದರಲ್ಲೇ 300 ಕ್ಕೂ ಅಧಿಕ ಭಾಷೆಗಳನ್ನು ಮಾತನ್ನಾಡುತ್ತಿರುವುದು ತಿಳಿದು ಬಂದಿದೆ, ಆದರೆ ಬಹುಪಾಲು ಭಾಷೆಗಳನ್ನು ಚಿಕ್ಕ ಪ್ರಾಂತ್ಯಗಳಲ್ಲಿ ಸಣ್ಣ ಸಣ್ಣ ವಲಸೆ ಗುಂಪುಗಳು ಮಾತ್ರ ಬಳಸುತ್ತಿವೆ. ಗಯಾನಾ, ಸುರಿನಾಮೆ ಮತ್ತು ಬೆಲಿಝೆ ರಾಷ್ಟ್ರಗಳು ಆಂಗ್ಲೊ ಅಮೆರಿಕಕ್ಕಾಗಲಿ ಅಥವಾ ಲ್ಯಾಟಿನ್ ಅಮೆರಿಕಕ್ಕಾಗಲಿ ಒಳಪಟ್ಟಿಲ್ಲ ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ. ಏಕೆಂದರೆ, ಉಭಯ ರಾಷ್ಟ್ರಗಳ ನಡುವೆ ಮಹತ್ವದ ಭಾಷಾವಾರು ವ್ಯತ್ಯಾಸ, ಭೌಗೋಳಿಕ ಭಿನ್ನತೆ ಮತ್ತು ಸಂಸ್ಕೃತಿ ಹಾಗೂ ಚಾರಿತ್ರಿಕ ವ್ಯತ್ಯಾಸಗಳಿವೆ. ಗಯಾನಾ ಮತ್ತು ಬೆಲಿಝೆಯಲ್ಲಿ ಇಂಗ್ಲಿಷ್ ಪ್ರಾಥಮಿಕ ಭಾಷೆ, ಸುರಿನಾಮೆಯಲ್ಲಿ ಡಚ್ ಅಧಿಕೃತ ಮತ್ತು ಲಿಖಿತ ಭಾಷೆ. ಸ್ಪಾನಿಷ್ - ಸುಮಾರು 310 ಮಿಲಿಯನ್ ಜನರು ಖಂಡದ ಹಲವು ರಾಷ್ಟ್ರಗಳ ಉದ್ದಗಲಕ್ಕೂ ಮಾತನ್ನಾಡುತ್ತಾರೆ. ಇಂಗ್ಲಿಷ್ - ಸಂಯುಕ್ತ ಸಂಸ್ಥಾನ, ಕೆನಡಾ, ಜಮೈಕ, ಟ್ರಿನಿಡಾಡ್ ಮತ್ತು ಟೊಬಾಗೊ, ಬಹಮಸ್, ಬರ್ಮುಡಾ, ಬೆಲಿಝೆ, ಗಯಾನಾ, ಫಾಕ್ ಲ್ಯಾಂಡ್ಸ್ ಮತ್ತು ವೆಸ್ಟ್ ಇಂಡೀಸ್ ದ್ವೀಪ ಪ್ರದೇಶದ ಹಲವೆಡೆ ಅಂದಾಜು 300 ಮಿಲಿಯನ್ ಜನರು ಈ ಭಾಷೆ ಮಾತನಾಡುತ್ತಾರೆ. ಪೋರ್ಚುಗೀಸ್ - ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಲ್ಲಿ ಸುಮಾರು 185 ಮಿಲಿಯನ್ ಜನರು ಈ ಭಾಷೆ ಮಾತನ್ನಾಡುತ್ತಾರೆ. ಫ್ರೆಂಚ್ - ಕೆನಡಾ ( ಕ್ಯುಬೆಕ್ ನ ಬಹುಸಂಖ್ಯಾತ 7 ಮಿಲಿಯನ್ ಜನರು - ಕ್ಯುಬೆಕ್ ಫ್ರೆಂಚ್ ನೋಡಿ - ನ್ಯೂ ಬ್ರನ್ಸ್ ವಿಕ್ ಮತ್ತು ನೊವ ಸ್ಕಾಟಿಯದ ಅಕಾಡಿಯ ಸಮುದಾಯ), ವೆಸ್ಟ್ ಇಂಡೀಸ್ ದ್ವೀಪ ಪ್ರದೇಶ (ಹೈಟಿ, ಗಾಡೆಲೊಪ್, ಮಾರ್ಟಿನಿಕ್), ಫ್ರೆಂಚ್ ಗಯಾನಾ, ಫ್ರೆಂಚ್ ದ್ವೀಪ ಪ್ರದೇಶದ ಸೈಂಟ್ ಪಿಯರ್ ಮತ್ತು ಮಿಕೆಲಾನ್, ಮತ್ತು ಅಕಾಡಿಯಾನ ( ದಕ್ಷಿಣ ಲೂಸಿಯಾನಾದ ಫ್ರಾಂಕೊಫೋನ್ ಪ್ರದೇಶ, ಸಂಯುಕ್ತ ಸಂಸ್ಥಾನ) ದಲ್ಲಿ ಸುಮಾರು 12 ಮಿಲಿಯನ್ ಜನರು ಈ ಭಾಷೆ ಮಾತನ್ನಾಡುತ್ತಾರೆ. ಕೆಚುವಾ - ಈಕ್ವೆಡರ್, ಪೆರು, ಬೊಲಿವಿಯಾ, ಉತ್ತರ ಚಿಲಿ ಮತ್ತು ವಾಯವ್ಯ ಅರ್ಜೆಂಟೈನಾದ ಸುಮಾರು 10–13 ಮಿಲಿಯನ್ ಜನರು ಸ್ಥಳೀಯ ಭಾಷೆ ಮಾತನ್ನಾಡುತ್ತಾರೆ. ಹೈಟಿ ಕ್ರಿಯೋಲ - ಕ್ರಿಯೋಲ ಭಾಷೆ, ಫ್ರೆಂಚ್ ಮತ್ತು ಆಫ್ರಿಕಾದ ಹಲವು ಹಾಷೆಗಳಲ್ಲಿ ನೆಲೆಸಿದೆ, ಹೈಟಿ ಹಾಗೂ ಕೆನಡಾದಲ್ಲಿ ಚದುರಿರುವ ಹೈಟಿ ಭಾಷಿಕರು ಮತ್ತು ಸಂಯುಕ್ತ ಸಂಸ್ಥಾನದಲ್ಲಿ 6 ಮಿಲಿಯನ್ ಜನರು ಈ ಭಾಷೆ ಆಡುತ್ತಾರೆ. ಗರಾನಿ (avañe'ẽ)- ಪರಾಗ್ವೆ ಮತ್ತು ಅರ್ಜೆಂಟೈನಾ, ಬೊಲಿವಿಯಾ ಮತ್ತು ಬ್ರೆಜಿಲ್ ನ ಆಯಾ ಪ್ರದೇಶಗಳಲ್ಲಿ ಈ ಸ್ಥ ಳೀಯ ಭಾಷೆಯನ್ನು ಮಾತನ್ನಾಡುತ್ತಾರೆ. ಚೀನಿ ಭಾಷೆ - ಇದನ್ನು ಸಂಯುಕ್ತ ಸಂಸ್ಥಾನ, ಕೆನಾಡಾ, ಪೆರು ಮತ್ತು ಪನಾಮಾದಲ್ಲಿ ನೆಲೆಸಿರುವ 5 ಮಿಲಿಯನ್ ಜನರು ಆಡುತ್ತಾರೆ. ಇಟಲಿ ಭಾಷೆ - ಸಂಯುಕ್ತ ಸಂಸ್ಥಾನದಲ್ಲಿರುವ ನ್ಯೂ ಇಂಗ್ಲೆಂಡ್/ಮಿಡ್ ಅಟ್ಲಾಂಟಿಕ್, ಕೆನಾಡಾದ ದಕ್ಷಿಣ ಆಂಟಾರಿಯೊ ಮತ್ತು ಕ್ಯುಬೆಕ್, ಅರ್ಜೆಂಟೈನಾ, ಉರುಗ್ವೆ ಮತ್ತು ಬ್ರೆಜಿಲ್ ಮತ್ತು ಇಟಲಿಯ ಪ್ರಾದೇಶಿಕ ಭಾಷೆಗಳು ಸೇರಿದಂತೆ, ಅವುಗಳೆಂದರೆ, ಟಲಿಯಾ (ಬ್ರೆಜಿಲ್) ಮತ್ತು ಚಿಪಿಲೊ (ಮೆಕ್ಸಿಕೊ)ದ ಸುಮಾರು ೪ ಮಿಲಿಯನ್ ಜನರು ಈ ಭಾಷೆ ಆಡುತ್ತಾರೆ. ಜರ್ಮನ್ - ಸುಮಾರು 2.2 ಮಿಲಿಯನ್ ಜನ. ಸಂಯುಕ್ತ ಸಂಸ್ಥಾನದಲ್ಲೇ 1.1 ಮಿಲಿಯನ್ ಜನರು ಹಾಗೂ ಲ್ಯಾಟಿನ್ ಅಮೆರಿಕದ ಮೆಕ್ಸಿಕೊ, ಬ್ರೆಜಿಲ್, ಅರ್ಜೆಂಟೈನಾ, ಚಿಲಿ ಮತ್ತು ಪರಾಗ್ವೆಯ ಭಾಗಗಳಲ್ಲಿ ಮಾತ್ತೊಂದು ಮಿಲಿಯನ್ ಜನ ಈ ಭಾಷೆಯನ್ನು ಆಡುತ್ತಾರೆ. ಆಯ್ಮರ - ಆಂಡೇಸ್, ಬೊಲಿವಿಯಾ, ಪೆರು ಮತ್ತು ಚಿಲಿಯ ಸುಮಾರು 2.2 ಮಿಲಿಯನ್ ಜನರು ಈ ಸ್ಥಳೀಯ ಭಾಷೆಯನ್ನು ಆಡುತ್ತಾರೆ. ಕ್ವಿಂಚೆ ಮತ್ತು ಇತರೆ ಮಾಯಾ ಭಾಷೆಗಳು - ಗ್ವಾಟೆಮಾಲಾ ಮತ್ತು ದಕ್ಷಿಣ ಮೆಕ್ಸಿಕೊದ ಸುಮಾರು 1.9 ಮಿಲಿಯನ್ ಮಂದಿ ಈ ಸ್ಥಳೀಯ ಭಾಷೆ ಆಡುತ್ತಾರೆ. ನಹುತಾಲ್ - ಸೆಂಟ್ರಲ್ ಮೆಕ್ಸಿಕೊದ 1.5 ಮಿಲಿಯನ್ ಮಂದಿಯ ಸ್ಥಳೀಯ ಭಾಷೆ ಇದಾಗಿದೆ. ಅಲ್ಲದೆ, ಮೆಕ್ಸಿಕೊದ ಅಝ್ಟೆಕ್ ಜನರ ಭಾಷೆಯೂ ಇದಾಗಿತ್ತು. ದ್ವೀಪ ಪ್ರದೇಶದ ಕ್ರಯೋಲ - ಪೂರ್ವ ವೆಸ್ಟ್ ಇಂಡೀಸ್ ದ್ವೀಪ ಪ್ರದೇಶ (ಗಾಡೆಲೊಪ್, ಮಾರ್ಟಿನಿಕ್, ಡೊಮಿನಿಕ, ಸೈಂಟ್ ಲೂಸಿಯಾ) ಮತ್ತು ಫ್ರೆಂಚ್ ಗಯಾನಾದ ಸುಮಾರು 1.2 ಮಿಲಿಯನ್ ಜನರು ಈ ಭಾಷೆ ಆಡುತ್ತಾರೆ. ಜವನೀಸ್ ಭಾಷೆ - ಸುರಿನಾಮೆಯಲ್ಲಿ ಹೆಚ್ಚು ಬಳಕೆಯಲ್ಲಿರುವ ಭಾಷೆ. ಟಗಲಾಗ್ ಭಾಷೆ - ಸ್ಪಾನಿಷ್ ಸಾಮ್ರಾಜ್ಯ ಇದ್ದಾಗಿನಿಂದಲೂ ಈ ಭಾಷೆ ಚಾಲ್ತಿಯಲ್ಲಿದೆ. ಇದನ್ನು ಈಗ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ನೆಲೆಸಿರುವ 1.5 ಮಿಲಿಯನ್ ಜನರು ಆಡುತ್ತಾರೆ. ವಿಯಾಟ್ನಾಮೀಸ್ ಭಾಷೆ - ಇತ್ತೀಚೆಗೆ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಬಂದಿರುವ 1 ಮಿಲಿಯನ್ ಜನರು ಈ ಭಾಷೆಯನ್ನು ಆಡುತ್ತಾರೆ. ಹಲವು ಭಾರತೀಯ ಭಾಷೆಗಳಾದ ಹಿಂದಿ, ಪಂಜಾಬಿಯನ್ನು ಇಂಡೋ-ಕೆರಿಬಿಯನ್ ಜನರು ಹೆಚ್ಚಾಗಿ ಆಡುತ್ತಾರೆ ಮತ್ತು ಕೆನಡಾ, ಸಂಯುಕ್ತ ಸಂಸ್ಥಾನದಲ್ಲಿ ಇವರು ಹೆಚ್ಚಾಗಿ ನೆಲೆಸಿದ್ದಾರೆ. ಕೊರಿಯನ್ ಭಾಷೆ - ಇತ್ತೀಚೆಗೆ ಇದು ಸಂಯುಕ್ತ ಸಂಸ್ಥಾನದಲ್ಲಿ ಪ್ರಧಾನ ಭಾಷೆಯಾಗಿದೆ. ಈ ಭಾಷೆಯನ್ನು 1 ಮಿಲಿಯನ್ ಜನರು ಮಾತನ್ನಾಡುತ್ತಾರೆ. ಜಪಾನೀಸ್ ಭಾಷೆ - ಸಂಯುಕ್ತ ಸಂಸ್ಥಾನದಲ್ಲಿ ಒಂದು ಕಾಲದಲ್ಲಿ ಬಳಕೆಯಲ್ಲಿದ್ದ ಪ್ರಮುಖ ಅಲ್ಪಸಂಖ್ಯಾತ ಭಾಷೆ, ಆದರೆ ಇತ್ತೀಚೆಗೆ ಅಲ್ಲಿ ಜನಸಂಖ್ಯೆ ವಿಮುಖವಾಗಿದೆ. ಬ್ರೆಜಿಲ್ ಮತ್ತು ಪೆರುವಿನಲ್ಲಿ ಇದು ಬಳಕೆಯಲ್ಲಿತ್ತು. ಹಮೊಂಗ್ - ಆಗ್ನೇಯ ಏಷ್ಯಾದ ದೇಶಿ ಭಾಷೆ, ಈ ಭಾಷೆಯನ್ನು ಏಷ್ಯಾದ ಹೊರಗೆ ಅತಿಹೆಚ್ಚು ಮಾತನ್ನಾಡುವವರ ಸಂಖ್ಯೆ ಸಂಯುಕ್ತ ಸಂಸ್ಥಾನದಲ್ಲಿದ್ದಾರೆ. ಅಮೆರಿಕ ಸನ್ನೆ ಭಾಷೆ - ಇದು ಅಮೆರಿಕದ ಕ್ಗ್ರುಡರ ಭಾಷೆ. ಅಲ್ಲಿನ ಸುಮಾರು 1 ಲಕ್ಷದಿಂದ 5 ಲಕ್ಷ ಮಂದಿ ಈ ಭಾಷೆಯನ್ನು ಬಳಸುತ್ತಾರೆ. ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ಬಳಕೆಯಲ್ಲಿರುವ ಪ್ರಾಥಮಿಕ ಭಾಷೆ ಇದಾಗಿದೆ. ಮಪುಡುಂಗನ್ (ಅಥವಾ ಮಪುಚೆ) - ಚಿಲಿ ಮತ್ತು ಅರ್ಜೆಂಟೈನಾದ ಸುಮಾರು 440,000 ಜನರು ಈ ಸ್ಥಳೀಯ ಭಾಷೆ ಆಡುತ್ತಾರೆ. ನವಜೊ - ನೈಋತ್ಯ ಅಮೆರಿಕದಲ್ಲಿರುವ ನವಜೊ ರಾಷ್ಟ್ರ(ಭಾರತದ ಪರಿಮಿತಿ)ದ ಸುಮಾರು 178,೦೦೦ ಮಂದಿ ಈ ಸ್ಥಳೀಯ ಭಾಷೆಯನ್ನು ಆಡುತ್ತಾರೆ. ಕ್ರಿಸ್ತಶಕ 1900ರ ಆರಂಭದಲ್ಲಿ ಕಂಡುಬಂದ ಬುಡಕಟ್ಟು ಜನಾಂಗದ ಪ್ರತ್ಯೇಕತೆಯ ಸಂದರ್ಭದಲ್ಲಿ ಭಾಷೆಯನ್ನು ಎರಡನೇ ವಿಶ್ವಯುದ್ಧದಲ್ಲಿ ಸೇನೆಯ ಸಂಕೇತ ಭಾಷೆಯಾಗಿ ಬಳಸಲಾಗಿತ್ತು. ಡಚ್ - ನೆದರ್ ಲ್ಯಾಂಡ್ಸ್ ದ್ವೀಪ ಪ್ರದೇಶ, ಅರುಬ ಮತ್ತು ಸುರಿನಾಮೆಯಲ್ಲಿ ಅಂದಾಜು 210,೦೦೦ ಜನರು ಈ ಭಾಷೆಯನ್ನು ಬಳಸುತ್ತಾರೆ. ಮಿಸ್ಕಿಟೊ - 180,000 ಕ್ಕೂ ಅಧಿಕ ಮಿಸ್ಕಿಟೊ ಜನರು ಇದನ್ನು ಮಾತನ್ನಾಡುತ್ತಾರೆ. ಅವರು ವೆಸ್ಟ್ ಇಂಡೀಸ್ ದ್ವೀಪ ಕರಾವಳಿಯ ನಿಕರಗುವಾ ಮತ್ತು ಹೊಂಡುರಸ್ ಪೂರ್ವ ದಿಕ್ಕಿನಲ್ಲಿ ನೆಲೆಸಿರುವ ಮೂಲನಿವಾಸಿಗಳಾಗಿದ್ದಾರೆ. ಪೆನ್ಸಿಲ್ವೇನಿಯಾ ಡಚ್ - ಹದಿನೇಳು ಮತ್ತು ಹದಿನೆಂಟನೇ ಶತಮಾನದಲ್ಲಿ ಈಶಾನ್ಯ ಅಮೆರಿಕದ ಪೆನ್ಸಿಲ್ವೇನಿಯಾ ಡಚ್ಚರ ಕೆಲವು ಜನ (ಸಂತತಿ) ಜರ್ಮನ್ ಭಾಷೆಯನ್ನು ಗ್ರಾಮ್ಯ ರೂಪದಲ್ಲಿ ಬಳಸುತ್ತಿದ್ದ ಭಾಷೆಯನ್ನು ಈಗಲೂ ಆಡುತ್ತಾರೆ. ಪೆನ್ಸಿಲ್ವೇನಿಯಾ ಡಚ್ಚರ ಸಂಖ್ಯೆ ಸುಮಾರು 85,000 ಇದೆ. ಇನುಕ್ಟಿಟಟ್ ಮತ್ತು ಇತರೆ ಎಸ್ಕಿಮೊ ಭಾಷೆಗಳು - ಉತ್ತರ ಅಮೆರಿಕದ ಧ್ರುವ ಭಾಗ (ಶೀತ ವಲಯ)ಮತ್ತು ಲಬ್ರೊಡಾರ್ ಉಪಶೀತವಲಯದ ಕೆಲವು ಪ್ರದೇಶಗಳಲ್ಲಿ ಸುಮಾರು 75,೦೦೦ ಮಂದಿ, ಈ ಸ್ಥಳೀಯ ಭಾಷೆಯನ್ನು ಮಾತನ್ನಾಡುತ್ತಾರೆ. ಡ್ಯಾನಿಷ್ - ಮತ್ತು ಗ್ರೀನ್ ಲ್ಯಾಂಡಿಕ್ (ಎಸ್ಕಿಮೊ) - ಇವು ಗ್ರೀನ್ ಲ್ಯಾಂಡ್ ನ ಅಧಿಕೃತ ಭಾಷೆಗಳು, ಬಹುಪಾಲು ಜನರು ಇವೆರದೂ ಭಾಷೆಗಳನ್ನು ಮಾತನ್ನಾಡುತ್ತಾರೆ ( ಅಂದಾಜು 50,೦೦೦ ಮಂದಿ). ಎಸ್ಕಿಮೊ ಪೀಳಿಗೆಗೆ ಸೇರದ ಡ್ಯಾನಿಷ್ ಅಲ್ಪಸಂಖ್ಯಾತ ವಲಸೆಗಾರರು ಡ್ಯಾನಿಷ್ ಭಾಷೆಯನ್ನು ಮೊದಲ ಮತ್ತು ಏಕೈಕ ಭಾಷೆಯಾಗಿ ಬಳಸುತ್ತಾರೆ. ಕ್ರೀ - ಅಲ್ಗೊಂಕ್ವಿ ಭಾಷೆಗಳಿಗೆ ಪರಸ್ಪರ ಸಂಬಂಧಿಸಿದ ಗುಂಪಿನ ಭಾಷೆಗಳಿಗೆ ಕ್ರೀ ಎಂದು ಹೆಸರಿಸಲಾಗಿದೆ, ಕ್ರೀ ಭಾಷೆಯನ್ನು ಕೆನಡಾದಲ್ಲಿ ಸುಮಾರು 50,೦೦೦ ಮಂದಿ ಮಾತನ್ನಾಡುತ್ತಾರೆ. ನಿಕರಾಗುವಾ ಕ್ರಯೋಲ - ನಿಕರಗುವಾದ 30,೦೦೦ ಜನ ಈ ಭಾಷೆ ಮಾತನ್ನಾಡುತ್ತಾರೆ. ಕೆರಿಬಿಯನ್ ಕರಾವಳಿಯಲ್ಲಿ ನೆಲೆಸಿರುವ ಆಫ್ರಿಕನ್ನರು, ಅಮೆರಿಂಡಿಯನ್ನರು ಮತ್ತು ಯೂರೋಪಿಯನ್ನರು ಮೂಲತಃ ಈ ಭಾಷೆಯನ್ನು ಬಳಸುತ್ತಾರೆ. ಗರಿಫುನ (ಅಥವಾ ಗರಿನಗು) - ಕೆರಿಬಿಯನ್ (ವೆಸ್ಟ್ ಇಂಡೀಸ್ ದ್ವೀಪ ಪ್ರದೇಶ) ಕರಾವಳಿಯ ಬೆಲಿಝೆ, ಗ್ವಾಟೆಮಾಲಾ, ಹೊಂಡುರಸ್ ಮತ್ತು ನಿಕರಾಗುವಾದ ಭಾಗಗಳಲ್ಲಿ ನೆಲೆಸಿರುವ ಗರಿಫುನ ಜನರು, ಈ ಸ್ಥಳೀಯ ಭಾಷೆಯನ್ನು ಆಡುತ್ತಾರೆ. ಬಹುಸಂಖ್ಯಾತ ಜನರು ಹೊಂಡುರಸ್ ನಲ್ಲಿ ಜೀವನ ನಡೆಸುತ್ತಿದ್ದಾರೆ. ವೇಲ್ಸ್ - ಅರ್ಜೆಂಟೈನಾದ ಎರಡು ಪಟ್ಟಣಗಳಾದ ಟ್ರೆಲಿ ಮತ್ತು ರಾ(ವ್)ಸನ್ ಗಳಿಗೆ 19ನೇ ಶತಮಾನದ ಅಂತ್ಯದಲ್ಲಿ ವಲಸೆ ಬಂದ ವೇಲ್ಸ್ ಸಮುದಾಯದ 25,೦೦೦ ಜನರು ಮತ್ತು ಪಟ್ಟಣದ ಹಿರಿಯ ನಾಗರಿಕರು ಈ ಭಾಷೆಯನ್ನು ಮಾತನ್ನಾಡುತ್ತಾರೆ. ಚೆರೋಕಿ - ಅಮೆರಿಕದ ಒಕ್ಲಹಾಮಾದ ಒಂದು ಭಾಗದಲ್ಲಿ ಸುಮಾರು 19,000 ಜನರು ಈ ಆಡುಭಾಷೆಯನ್ನು ಬಳಸುತ್ತಾರೆ. ಇಪ್ಪತ್ತನೇ ಶತಮಾನದ ಅಂತ್ಯಭಾಗದಿಂದ ಈ ಭಾಷೆಯು ಮತ್ತೆ ಬಳಕೆಗೆ ಬಂದಿದೆ. ಚೆರೋಕಿ ಭಾಷೆಗೆ ತನ್ನದೇ ಆದ ಅಕ್ಷರಮಾಲೆ ಇದೆ, ಚೆರೋಕಿ ಲಿಖಿತ ಕ್ರಮವನ್ನು ಹೊಂದಿದೆ. ಗುಲ್ಲ್ಹಾ - ಪಶ್ಚಿಮ ಮತ್ತು ಸೆಂಟ್ರಲ್ ಆಫ್ರಿಕಾ ಭಾಷೆಗಳಿಂದ ಹೆಚ್ಚು ಪ್ರಭಾವಿತವಾದ, ಇಂಗ್ಲಿಷ್ ಆಧರಿತ ಗುಲ್ಲ್ಹಾ ಕ್ರಯೋಲ ಭಾಷೆಯನ್ನು ಗುಲ್ಲ್ಹಾ ಜನರು ಮಾತನ್ನಾಡುತ್ತಾರೆ. ಅಮೆರಿಕ ಕರಾವಳಿ ತೀರದಲ್ಲಿರುವ ದಕ್ಷಿಣ ಕರೋಲಿನಾ ಮತ್ತು ಜಾರ್ಜಿಯಾದಲ್ಲಿ ಆಫ್ರಿಕಾ-ಅಮೆರಿಕನ್ನರಾದ ಈ ಜನರು ನೆಲೆಸಿದ್ದಾರೆ. ಸ್ರನನ್ ಟೊಂಗೊ - ಟಕಿಟಕಿ ಎಂದು ಕರೆಯಲ್ಪಡುವ ಈ ಆಡು ಭಾಷೆಯನ್ನು ಹೆಚ್ಚಾಗಿ ಸುರಿನಾಮೆಯಲ್ಲಿ ಉಪಯೋಗಿಸುತ್ತಾರೆ. ಬರವಣಿಗೆಗೆ ಸಾಮಾನ್ಯವಾಗಿ ಈ ಭಾಷೆಯನ್ನು ಬಳಸುವುದಿಲ್ಲ. ಸ್ಪಾನಿಷ್, ಇಂಗ್ಲಿಷ್, ಡಚ್, ಹಿಂದೂಸ್ತಾನಿ ಮತ್ತು ಇತರೆ ಹಲವಾರು ಭಾಷೆಗಳನ್ನು ಆಧರಿಸಿದ ಕ್ರಯೋಲ ಭಾಷೆ ಇದಾಗಿದೆ. ಸ್ಥಳೀಯವಲ್ಲದ ಬಹುಪಾಲು ಭಾಷೆಗಳು ವಿವಿಧ ಪದ ಬಳಕೆ ಮತ್ತು ಭಾಷಾ ಪ್ರಯೋಗಗಳನ್ನು ಹೊಂದಿರುತ್ತವೆ, ಮಾತೃ ರಾಷ್ಟ್ರಕ್ಕಿಂತ ವಿಭಿನ್ನ ಬಳಕೆಯ ಕ್ರಮ ಹೊಂದಿರುತ್ತವೆ, ಆದರೂ ಸಾಮಾನ್ಯವಾಗಿ ಅವುಗಳನ್ನು ಗ್ರಹಿಸಲು ಸಾಧ್ಯ. ಕೆಲವು ಭಾಷೆಗಳು ಸಂಯೋಜನೆಗೊಂಡು, ಅದರ ಪರಿಣಾಮವಾಗಿ ಪರಿಪೂರ್ಣ ಹೊಸ ಭಾಷೆಗಳೇ ಸೃಷ್ಟಿಯಾಗಿವೆ. ಅವುಗಳಲ್ಲಿ ಪಪಿಯಾಮೆಂಟು ಭಾಷೆ ಮುಖ್ಯವಾದುದು. ಇದು ಪೋರ್ಚುಗೀಸ್, ಸ್ಪಾನಿಷ್, ಡಚ್, ಅರವಕ್ ಸ್ಥಳೀಯ ಭಾಷೆ, ಹಲವಾರು ಆಫ್ರಿಕಾ ಭಾಷೆಗಳು ಮತ್ತು ಇತ್ತೀಚಿಗೆ ಇಂಗ್ಲಿಷ್ ಭಾಷೆಗಳ (ಈ ಪ್ರದೇಶಗಳ ವಸಾಹತುಗಾರರನ್ನು ಇದು ಪ್ರತಿನಿಧಿಸುತ್ತದೆ) ಸಂಯೋಜನೆಯಿಂದ ಈ ಭಾಷೆ ಸೃಷ್ಟಿಯಾಗಿದೆ. ವಲಸೆಯ ಏಕೈಕ ಕಾರಣದಿಂದಾಗಿ, ಹಲವಾರು ಸಮುದಾಯಗಳು ವಿಶ್ವದ ಎಲ್ಲಾ ಭಾಗಗಳಲ್ಲಿ ವಿವಿಧ ಭಾಷೆಗಳನ್ನು ಮಾತನ್ನಾಡುತ್ತಿದ್ದಾರೆ, ಅದರಲ್ಲೂ ವಿಶೇಷವಾಗಿ ಸಂಯುಕ್ತ ಸಂಸ್ಥಾನ, ಬ್ರೆಜಿಲ್, ಅರ್ಜೆಂಟೈನಾ ಮತ್ತಿ ಕೆನಡಾ ರಾಷ್ಟ್ರಗಳು ವಲಸೆಗಾರರ ಪ್ರಮುಖ ತಾಣಗಳಾಗಿವೆ. ಶಾಬ್ದಿಕ ನಿರ್ದಿಷ್ಟಾರ್ಥ[ಪರಿಭಾಷಾ ಶಾಸ್ತ್ರ] ಅಮೆರಿಕ/ಅಮೆರಿಕಸ್ ವಿಶ್ವದ ಹಲವು ಭಾಗಗಳಲ್ಲಿ, ಸಂಯುಕ್ತ ಸಂಸ್ಥಾನಕ್ಕೆ ಸಾಮಾನ್ಯವಾಗಿ ಅಮೆರಿಕ ಎಂಬ ಏಕವಾಚಕ ಪದವನ್ನು ಬಳಸುತ್ತಾರೆ, ಆದಾಗ್ಯೂ, ಅಮೆರಿಕಸ್ ಎಂಬ s ಜೊತೆಗಿನ ಬಹುವಾಚಕ ನಿರ್ದಿಷ್ಟ ಉಪಪದವನ್ನು ಪಶ್ಚಿಮ ಗೋಳಾರ್ಧದ ಭೂಪ್ರದೇಶ ಮತ್ತು ಪ್ರಾಂತ್ಯವನ್ನು ಉಲ್ಲೇಖಿಸಲು ಬಳಸುತ್ತಾರೆ. ಅಮೆರಿಕ ಹೆಸರನ್ನು ಒಟ್ಟಾರೆಯಾಗಿ ಮೇಲಿನಂತೆ ಬಳಸುವುದು ಸರ್ವೇಸಾಮಾನ್ಯ; ಉದಾಹರಣೆಗೆ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಐದು ಖಂಡಗಳಿಗೂ ಒಟ್ಟಾರೆಯಾಗಿ ಅಮೆರಿಕ ಹೆಸರನ್ನೇ ಪರಿಗಣಿಸಿದೆ, ಅಲ್ಲದೆ, ಒಲಿಂಪಿಕ್ ಚಿಹ್ನೆಯಲ್ಲೂ ಚಿತ್ರಿಸಿದೆ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಬೇರೆ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ದೇಶಕ್ಕೆ ಅಮೆರಿಕ ಮತ್ತು ಪ್ರಜೆ ಅಥವಾ ನಾಗರಿಕರಿಗೆ ಅಮೆರಿಕನ್ನರು ಎಂದು ಉಲ್ಲೇಖಿಸುತ್ತಾರೆ, ಮೇಲಿನ ಸಂದರ್ಭಗಳಲ್ಲಿ ವಿವಿಧ ಜನರು ಉಪಯೋಗಿಸಿರುವ ಇಂತಹ ಪದಗಳ ದುರ್ಬಳಕೆಗೆ ಅಮೆರಿಕದ ಹಲವು ಮಂದಿ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ, ಅಲ್ಲದೆ, ಈ ರೀತಿಯ ಪದಗಳ ಬಳಕೆಯಾಗುವುದನ್ನು ಆದಷ್ಟು ತಡೆಯಲಾಗುತ್ತಿದೆ. ಕೆನಡಾದಲ್ಲಿ, ಅಲ್ಲಿನ ದಕ್ಷಿಣ ಭಾಗದ ಜನರು ಅಪರೂಪವಾಗಿ ಅಮೆರಿಕ ಪದವನ್ನು ಸಾಮಾನ್ಯವಾಗಿ ಯುನೈಟೆಡ್ ಸ್ಟೇಟ್ಸ್ , ಯು.ಎಸ್. , ಅಥವಾ (ಔಪಚಾರಿಕವಾಗಿ) ಸ್ಟೇಟ್ಸ್ ಪರ್ಯಾಯ ಪದಗಳಿಂದಲೂ ಉಲ್ಲೇಖಿಸುತ್ತಾರೆ. ಇಂಗ್ಲಿಷ್ ಅರ್ಥಕೋಶ ಮತ್ತು ಗ್ರಂಥಗಳಲ್ಲಿ ಅಮೆರಿಕ ಪದ ಬಳಕೆ ಮತ್ತು ಉಚ್ಚಾರಣೆಯಲ್ಲಿ ವ್ಯತ್ಯಾಸಗಳಿವೆ. ಅಮೆರಿಕನ್ ಇಂಗ್ಲಿಷ್ ಬಳಕೆ ಅಮೆರಿಕ ಅಥವಾ ಅಮೆರಿಕಸ್ ಪದಗಳಲ್ಲಿ ಯಾವ ಪದ ಬಳಕೆ ಆಗುತ್ತಿದೆ ಎಂಬದಕ್ಕಿಂತ ಅಮೆರಿಕದಲ್ಲಿ ವಾಸಿಸುತ್ತಿರುವ ಹಲವಾರು ಜನರನ್ನು ವ್ಯಕ್ತಿಗತವಾಗಿ ಗುರುತಿಸಲು ಅಮೆರಿಕನ್ ಪದ ಹೆಚ್ಚಾಗಿ ಬಳಕೆಯಾಗುತ್ತಿದೆ. ಆದಾಗ್ಯೂ, ಅಮೆರಿಕ ಸಂಯುಕ್ತ ಸಂಸ್ಥಾನದ ನಾಗರಿಕರು, ನಿವಾಸಿಗಳು ಅಥವಾ ರಾಷ್ಟ್ರೀಯರನ್ನು ಪರಿಪೂರ್ಣವಾಗಿ ಉಲ್ಲೇಖಿಸಲು ಇಂಗ್ಲಿಷ್ ಮಾತನಾಡುವ ಬಹುಪಾಲು ಭಾಗಗಳಲ್ಲಿ ಅಮೆರಿಕನ್ ಪದ ಬಳಕೆ ಇದೆ. ಇದರ ಜೊತೆಗೆ, ಅಮೆರಿಕನ್ನರು ಎಂದು ಕರೆಸಿಕೊಳ್ಳಲು ಹಲವು ಕೆನಡಿಯನ್ನರು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆನಡಿಯನ್ನರು ಯು.ಎಸ್. ನಾಗರಿಕರು ಎಂಬ ತಪ್ಪು ಗ್ರಹಿಕೆ ಇದಕ್ಕೆ ಕಾರಣ, ಹಾಗೂ ಕೆನಡಿಯನ್ ಇಂಗ್ಲಿಷ್ ಮತ್ತು ಅಮೆರಿಕನ್ ಇಂಗ್ಲಿಷ್ ಪದ ಪ್ರಯೋಗದ ವ್ಯತ್ಯಾಸ ಅರಿಯದ ಹೊರದೇಶದ ಜನರ ತಪ್ಪು ಗ್ರಹಿಕೆಯೂ ಹೌದು. ಸ್ಪಾನಿಷ್ ಬಳಕೆ ಸ್ಪಾನಿಷ್ ನಲ್ಲಿ, ಅಮೆರಿಕ ಎಂದರೆ ಒಂದು ಖಂಡದ ಹೆಸರು. ಈ ಖಂಡವು ಸುಡಾಮೆರಿಕ ಮತ್ತು ನಾರ್ಟೆಅಮೆರಿಕ ಉಪಖಂಡಗಳಿಂದ ರೂಪುಗೊಂಡಿದ್ದು, ಸೆಂಟ್ರೊಅಮೆರಿಕ ಭೂಭಾಗ ಮತ್ತು ಆಂಟಿಲ್ಲಾಸ್ ದ್ವೀಪ ಪ್ರದೇಶವನ್ನೂ ಒಳಗೊಂಡಿದೆ. ಅಮೆರಿಕ ದ ವ್ಯಕ್ತಿಗೆ ಸ್ಪಾನಿಷ್ ನಲ್ಲಿ Americano/a ಎಂಬ ಪದ ಬಳಕೆಯಲ್ಲಿದೆ. ಅಂತೆಯೇ, Europa ದೇಶದ ವ್ಯಕ್ಟಿಗೆ europeo or europea ಎಂಬ ಪದ ಬಳಸುತ್ತಾರೆ. sudamericano/a , centroamericano/a , antillano/a and norteamericano/a ಪದಗಳನ್ನು ವಿಶೇಷವಾಗಿ ವ್ಯಕ್ತಿಯು ವಾಸಿಸುವ ಸ್ಥಳಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದ ನಾಗರಿಕರು americano ಅಥವಾ americana ಪದಕ್ಕೆ ಬದಲಾಗಿ ಸಾಮಾನ್ಯವಾಗಿ estadounidense ಪದವನ್ನು (ಅದರ ಅಕ್ಷರ ಅನುವಾದ ರೂಪ "United-Staten" ಎಂಬುದು) ಬಳಸುತ್ತಾರೆ, ಮತ್ತು ರಾಷ್ಟ್ರದ ಹೆಸರನ್ನು Estados Unidos de Norteamérica ಎಂದು ಅನುವಾದಿಸಲಾಗುತ್ತದೆ. ಜೊತೆಗೆ, norteamericano ಪದವನ್ನು ಸಂಯುಕ್ತ ಸಂಸ್ಥಾನದ ನಾಗರಿಕರನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಈ ಪದವನ್ನು ಮೂಲತ: ಸಂಯುಕ್ತ ಸಂಸ್ಥಾನದ ನಾಗರಿಕರಿಗೆ ಪ್ರಾಥಮಿಕವಾಗಿ, ಉತ್ತರ ಅಮೆರಿಕದ ಇತರೆ ರಾಷ್ಟ್ರಗಳಿಗೆ ಅಪರೂಪವಾಗಿ ಬಳಸಲಾಗುತ್ತಿದೆ. ಪೋರ್ಚುಗೀಸ್ ಬಳಕೆ ಪೋರ್ಚುಗೀಸ್ ನಲ್ಲಿ, ಅಖಂಡ ಅಮೆರಿಕ ವನ್ನು ಪ್ರಸ್ತಾಪಿಸುವಾಗ americano ಪದವನ್ನು ಬಳಸುತ್ತಾರೆ. ಆದರೆ, ಬ್ರೆಜಿಲ್ ಮತ್ತು ಪೋರ್ಚುಗಲ್ ನಲ್ಲಿ, ಇದನ್ನು ಸಂಯುಕ್ತ ಸಂಸ್ಥಾನದ ನಾಗರಿಕರನ್ನು ಉಲ್ಲೇಖಿಸಲು ಉಪಯೋಗಿಸುತ್ತಾರೆ. ಅತ್ಯಲ್ಪ ವಿಭಿನ್ನಾರ್ಥ ನೀಡುವ ಪದ, estadunidense (ಬ್ರೆಜಿಲ್‌ನಲ್ಲಿ ಬಳಸುತ್ತಾರೆ), "United Statian" ನಂತಹ ಪದ ( ಅಥವಾ ಸ್ಪಾನಿಷ್ ಭಾಷೆಯಲ್ಲಿ "estadounidense"), ಮತ್ತು "ianque" - "Yankee" ಪದದ ಪೋರ್ಚುಗೀಸ್ ರೂಪ - ಈ ಪದಗಳನ್ನು ಅಪರೂಪವಾಗಿ ಬಳಸಲಾಗುತ್ತದೆ. ಆದಾಗ್ಯೂ, ದೇಶಕ್ಕೆ ಅಮೆರಿಕ ಪದವನ್ನು ಅಪರೂಪವಾಗಿ ಸಮಾನಾರ್ಥಕ ಪದವಾಗಿ ಬಳಸಲಾಗುತ್ತಿದೆ, ಆದರೆ ಮುದ್ರಣ ಸಂದರ್ಭಗಳನ್ನು ಹೊರತುಪಡಿಸಿದ ಔಪಚಾರಿಕ ಸಂದರ್ಭಗಳಲ್ಲಿ ಅಮೆರಿಕವನ್ನು Estados Unidos da América (ಅಂದರೆ ಅಮೆರಿಕ ಸಂಯುಕ್ತ ಸಂಸ್ಥಾನ ಎಂದರ್ಥ) ಅಥವಾ ಇನ್ನೂ ಸರಳವಾಗಿ, Estados Unidos (ಅಂದರೆ ಸಂಯುಕ್ತ ಸಂಸ್ಥಾನ) ಎಂದು ಕರೆಯುತ್ತಾರೆ. ಪೋರ್ಚುಗಲ್ ಮತ್ತು ಬ್ರೆಜಿಲ್ ನಲ್ಲಿ ಈ ಪದಗಳ ಬಳಕೆಯಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ, ಪೋರ್ಚುಗೀಸರು ಅಮೆರಿಕ ಪದವನ್ನು ರಾಷ್ಟ್ರಕ್ಕೆ ಬಳಸಲು ಹೆಚ್ಚು ಒಲವು ಹೊಂದಿದ್ದಾರೆ. ಫ್ರೆಂಚ್ ಬಳಕೆ américain ಪದವನ್ನು ಸಂಯುಕ್ತ ಸಂಸ್ಥಾನಕ್ಕೆ ಬಳಸಬೇಕೇ ಅಥವಾ ಅಮೆರಿಕನ್ ಖಂಡಗಳಿಗೆ ಬಳಸಬೇಕೇ ಎಂಬ ಗೊಂದಲ ಇಂಗ್ಲಿಷ್‍ನಲ್ಲಿ ಇರುವಂತೆ, ಫ್ರೆಂಚ್‍ನಲ್ಲೂ ಇದೆ. Amérique ನಾಮಪದವನ್ನು ಕೆಲವು ವೇಳೆ ಒಂದು ಸಂಪೂರ್ಣ ಖಂಡಕ್ಕೆ ಉಲ್ಲೇಖಿಸಲಾಗುತ್ತದೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಎರಡು ಖಂಡಗಳಿಗೆ, ದಕ್ಷಿಣ ಮತ್ತು ಉತ್ತರ; ಸಂಯುಕ್ತ ಸಂಸ್ಥಾನವನ್ನು ಸಾಮಾನ್ಯವಾಗಿ les États-Unis d'Amérique , les États-Unis , ಅಥವಾ les USA ಎಂದು ಉಲ್ಲೇಖಿಸಲಾಗುತ್ತದೆ. ಸಂಯುಕ್ತ ಸಂಸ್ಥಾನ ಮತ್ತು ಅಮೆರಿಕ ಖಂಡಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಹುಪಾಲು ಸಂದರ್ಭಗಳಲ್ಲಿ américain ಗುಣವಾಚಕವನ್ನು ಬಳಸಲಾಗುತ್ತದೆ. ಸಂಯುಕ್ತ ಸಂಸ್ಥಾನದ ಅನೇಕ ಲೇಖಕರು ಹೊರತಂದಿರುವ ಇಂಗ್ಲಿಷ್ ಅನುವಾದಿತ ಕೃತಿಗಳಲ್ಲಿ ಪದೇಪದೇ "traduit de l'américain" ಪದವನ್ನು ಬಳಸಿದ್ದಾರೆ. ಸಂಯುಕ್ತ ಸಂಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ವಿಭಿನ್ನಾರ್ಥ ನೀಡದ états-unien , étasunien , ಅಥವಾ étatsunien ಪದಗಳನ್ನು ಅಪರೂಪವಾಗಿ ಬಳಸಲಾಗುತ್ತದೆ. ಡಚ್ ಬಳಕೆ ಡಚ್ ನಲ್ಲಿ ಸಂಯುಕ್ತ ಸಂಸ್ಥಾನಕ್ಕೆ ನಿರ್ದಿಷ್ಟವಾಗಿ Amerika ಪದವನ್ನು ಬಳಸುತ್ತಾರೆ. ಸಂಯುಕ್ತ ಸಂಸ್ಥಾನಕ್ಕೆ ಸಮಾನಾರ್ಥ ನೀಡುವ de Verenigde Staten or de VS ಪದ ಬಳಕೆಯೂ ಇದೆ, Amerika ಪದವನ್ನು ಅಪರೂಪವಾಗಿ Americas ಎಂದು ಪ್ರಸ್ತಾಪಿಸುತ್ತಾರೆ. ಆದರೆ, ಅಮೆರಿಕಸ್ ಗೆ ಈ ಡಚ್ ಪದವೇ (Amerika) ಎಲ್ಲೆಡೆ ಸಾಮಾನ್ಯ ಬಳಕೆಯಲ್ಲಿದೆ. ಇದು ಆಗಾಗ ವಿಭಿನ್ನಾರ್ಥಕ್ಕೆ ಎಡೆಮಾಡುತ್ತದೆ ಮತ್ತು ಅಮೆರಿಕಸ್ ನ ಹಲವು ಆತಂಕಗಳಿಗೆ ಒತ್ತು ನೀಡಿದೆ. ಉತ್ತರ ಮತ್ತು ದಕ್ಷಿಣ ಅಮೆರಿಕಕ್ಕೆ ಡಚ್ಚರು Noord- en Zuid Amerika ಪದವನ್ನು ಬಳಸುತ್ತಾರೆ.ಲ್ಯಾಟಿನ್ ಅಮೆರಿಕವನ್ನು ಸಾಮಾನ್ಯವಾಗಿ Latijns Amerika ಎಂದು, ದಕ್ಷಿಣ ಅಮೆರಿಕವನ್ನು ಆಗಿಂದಾಗ್ಗೆ Zuid Amerika ಎಂದು ಉಲ್ಲೇಖಿಸುತ್ತಾರೆ. amerikaans ಗುಣವಾಚಕವನ್ನು ಸಂಯುಕ್ತ ಸಂಸ್ಥಾನದ ಜನರು ಮತ್ತು ವಿಷಯಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ. ಸಂಯುಕ್ತ ಸಂಸ್ಥಾನ ಅಥವಾ ಅಮೆರಿಕಸ್ ಗೆ ಸಂಬಂಧಿಸಿದ ವಿಷಯಗಳನ್ನು ಪ್ರತ್ಯೇಕವಾಗಿ ಹೇಳಲು ಯಾವುದೇ ಪರ್ಯಾಯ ಪದಗಳಿಲ್ಲ. ಡಚ್ಚರು ಅಮೆರಿಕಸ್ ಗೆ ಪರ್ಯಾಯವಾದ ಸ್ಥಳೀಯ ಪದವನ್ನು ಬಳಸುತ್ತಾರೆ, ಉದಾಹರಣೆಗೆ Argentinian ಪದಕ್ಕೆ ಅವರು Argentijns ಪದವನ್ನು ಬಳಸುತ್ತಾರೆ. ರಷ್ಯನ್ನರ ಬಳಕೆ 19ನೇ ಶತಮಾನದಲ್ಲಿ, ರಷ್ಯಾದಲ್ಲಿ "America" ಪದವನ್ನು ಯೂರೋಪ ಮತ್ತು ಏಷ್ಯಾ ಖಂಡಗಳಿಗೆ ಬಳಸುತ್ತಿದ್ದರು. 20ನೇ ಶತಮಾನದಲ್ಲಿ, ಈ ಸಾಂಪ್ರದಾಯಿಕ ಖಂಡಗಳು ವಿಶ್ವದ ಪ್ರಮುಖ ಭಾಗಗಳಾಗಿ ಗುರುತಿಸಿಕೊಂದವು. ವಿಶಾಲ ಭೂರಾಶಿ ಹೊಂದಿರುವ ಯಾವುದೇ ಆರು ಬೃಹತ್ ಪ್ರದೇಶಗಳನ್ನು ಈಗ "ಖಂಡ" ಎಂಬ ಪದದಿಂದ ವ್ಯಾಖ್ಯಾನಿಸಲಾಗುತ್ತಿದೆ (ಯೂರಾಸಿಯಾ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಂಟಾರ್ಕ್ಟಿಕಾ ಮತ್ತು ಆಸ್ಟ್ರೇಲಿಯಾ). ಈಗ ಅಮೆರಿಕ ಪದವನ್ನು ಸಂಯುಕ್ತ ಸಂಸ್ಥಾನಕ್ಕೆ ಹೆಚ್ಚಾಗಿ ಬಳಸಲಾಗುತ್ತಿದೆ. ರಷ್ಯಾದಲ್ಲಿ ಅಮೆರಿಕಸ್‍ಗೆ ಸಮನಾದ ಬೇರೆ ಯಾವುದೇ ಪದ ಇಲ್ಲ. ದೇಶಗಳು ಮತ್ತು ಪ್ರಾಂತ್ಯಗಳು ಸಾರ್ವಭೌಮ ರಾಜ್ಯಗಳು ಅಮೇರಿಕದಲ್ಲಿ 35 ಸಾರ್ವಭೌಮ ರಾಜ್ಯಗಳಿದ್ದು, ಅದರಲ್ಲಿ 23 ಉತ್ತರ ಅಮೇರಿಕಾದಲ್ಲಿ ಮತ್ತು 12 ದಕ್ಷಿಣ ಅಮೇರಿಕಾದಲ್ಲಿ ಇವೆ: ಕಡಲಾಚೆಯ ಪ್ರದೇಶಗಳು, ಅದೀನ ಪ್ರದೇಶಗಳು, ವಸಾಹತುಗಳು ಈ ಮುಂದಿನ ಪಟ್ಟಿಯು ಅಮೇರಿಕದ "ಸಾರ್ವಭೌಮ ರಾಜ್ಯಗಳ" ಪಟ್ಟಿಯಲ್ಲಿ ಬರದ ಕಡಲಾಚೆಯ ಪ್ರದೇಶಗಳು, ಅದೀನ ಪ್ರದೇಶಗಳು ಮತ್ತು ಇತರ ರಾಜ್ಯಾಡಳಿತ ವ್ಯವಸ್ಥೆಯನ್ನು ತೋರಿಸುತ್ತದೆ. ಅವುಗಳನ್ನು ನಿರ್ವಹಿಸುತ್ತಿರುವ ರಾಜ್ಯಗಳ ಹೆಸರಿನಲ್ಲಿ ಅವುಗಳನ್ನು ಗುಂಪುಗೊಳಿಸಲಾಗಿದೆ. ಅಮೆರಿಕಾದಲ್ಲಿನ ಬಹುರಾಷ್ಟ್ರೀಯ ಸಂಸ್ಥೆಗಳು ಇವನ್ನೂ ಗಮನಿಸಿ ಅಡಿಟಿಪ್ಪಣಿಗಳು ಆಕರಗಳು ಅಮೆರಿಕ ದ ಕೊಲಂಬಿಯಾ ಗೆಜೆಟೀರ್ ಆಫ್ ದ ವರ್ಲ್ಡ್ ಆನ್‌ಲೈನ್ . 2006. ನ್ಯೂಯಾರ್ಕ್‌: ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್‌, 2006. ಅಮೆರಿಕ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ , 15ನೇಯ ಆವೃತ್ತಿ. 1986. (ISBN 0-85229-434-4) ಚಿಕಾಗೊ: ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ, Inc. ಬರ್ಚ್‌ಫಿಲ್ಡ್, ಆರ್. ಡಬ್ಲ್ಯೂ. 2004. ಪೌಲರ್ಸ್ ಮಾಡರ್ನ್ ಇಂಗ್ಲೀಶ್ ಯುಸೇಜ್ . (ISBN 0-19-861021-1) ಆಕ್ಸ್‌ಫರ್ಡ್, ಯುಕೆ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ. ಫೀ, ಮಾರ್ಗೆರಿ ಮತ್ತು ಮ್ಯಾಕ್‌ಅಲ್ಫೈನ್. 1997. ಆಕ್ಸ್‌ಫರ್ಡ್ ಗೈಡ್ ಟು ಕೆನೆಡಿಯನ್ ಯುಸೇಜ್. (ISBN 0-19-541619-8) ಟೊರೊಂಟೊ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ. ಕೇನ್, ಕಟೀ ನಿಟ್ಸ್ ಮೇಕ್ ಲೈಸ್:ಡ್ರೊಗೆಡ, ಸ್ಯಾಂಡ್ ಗ್ರೀಕ್,ಆ‍ಯ್‌೦ಡ್ ದ ಪೊಯಟಿಕ್ಸ್ ಆಫ್ ಕಲೊನಿಯಲ್ ಎಕ್ಸ್‌ಟರ್ಮಿನೇಶನ್ ಕಲ್ಚರಲ್ ಕ್ರಿಟಿಕ್ , ಸಂಖ್ಯೆ. 42 (ಸ್ಪ್ರಿಂಗ್, 1999), ಪು. 81–103 doi:10.2307/1354592 ಪೀಯರ್ಸಾಲ್, ಜುಡಿ ಮತ್ತು ಟ್ರಂಬ್ಲ್, ಬಿಲ್., ಆವೃತ್ತಿ. 2002. ಆಕ್ಸ್‌ಫರ್ಡ್ ಇಂಗ್ಲೀಶ್ ರೆಫರೆನ್ಸ್ ಡಿಕ್ಷನರಿ , 2ನೇಯ ಆವೃತ್ತಿ. (ಮರು.) (ISBN 0-19-860652-4) ಆಕ್ಸ್‌ಫರ್ಡ್, ಯುಕೆ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ. ಚರ್ಚಿಲ್, ವಾರ್ಡ್ ಎ ಲಿಟ್ಲ್ ಮ್ಯಾಟರ್ ಆಫ್ ಜೆನೊಸೈಡ್ ೧೯೯೭ ಸಿಟಿ ಲೈಟ್ಸ್ ಬುಕ್ಸ್ ISBN 0-87286-323-9 ಉತ್ತರ,ಲ್ಯಾಟಿನ್,ಮಧ್ಯ,ಕೇಂದ್ರ,ದಕ್ಷಿಣ,ಸ್ಪಾನಿಶ್,ಮತ್ತು ಆಂಗ್ಲೋ ಅಮೆರಿಕಾ ನಡುವಿನ ಭಿನ್ನತೆ ಏನು? ಭೂ ವಿವರಣೆ ಅಬೌಟ್.ಕಾಮ್‍ನಲ್ಲಿ ಬಾಹ್ಯ ಕೊಂಡಿಗಳು ಜೋನಾಥನ್ ಕೊಹೆನ್‌ರಿಂದ ದ ನೇಮಿಂಗ್ ಆಫ್ ಅಮೆರಿಕಾ: ಫ್ರಾಗ್ಮೆಂಟ್ಸ್ ವಿ ಹ್ಯಾವ್ ಶೋರ್ಡ್ ಅಗೇನೆಸ್ಟ್ ಅವರ್ಸೆಲ್ವ್ಸ್ ಅಮೆರಿಕಾ ರಾಜ್ಯಗಳ ಸಂಸ್ಥೆ ಕೌನ್ಸಿಲ್ ಆನ್ ಹೆಮಿಸ್ಪೆರಿಕ್ ಅಫೇರ್ಸ್ ಅಮೆರಿಕ ಸೂಪರ್‌ಕಾಂಟಿನೆಂಟ್ಸ್ ಖಂಡಗಳು
2205
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF%20%E0%B2%89%E0%B2%AA%E0%B2%96%E0%B2%82%E0%B2%A1
ಭಾರತೀಯ ಉಪಖಂಡ
ಭಾರತೀಯ ಉಪಖಂಡ, ಅಥವಾ ಸರಳವಾಗಿ ಉಪಖಂಡ, ದಕ್ಷಿಣ ಏಷ್ಯಾದ ಭೌಗೋಳಿಕ ಪ್ರದೇಶವಾಗಿದೆ. ಇದು ಭಾರತೀಯ ಫಲಕ (ಟೆಕ್ಟೊನಿಕ್ ಪ್ಲೆಟ್) ಹಿಮಾಲಯದಿಂದ ದಕ್ಷಿಣಕ್ಕೆ ಹಿಂದೂ ಮಹಾಸಾಗರಕ್ಕೆ ಚಾಚಿಕೊಂಡಿದೆ. ಭಾರತೀಯ ಉಪಖಂಡವು ಸಾಮಾನ್ಯವಾಗಿ ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗಳನ್ನು ಒಳಗೊಂಡಿದೆ . ಭೂವೈಜ್ಞಾನಿಕವಾಗಿ, ಭಾರತೀಯ ಉಪಖಂಡವು, ಸುಮಾರು ೫.೫ ಕೊಟಿ ವರ್ಶಗಳ ಹಿಂದಿನ ಕ್ರಟೇಶಿಯಸ್ ಕಾಲದಲ್ಲಿದ್ದ ಗೊಂಡ್ವಾನ ಎಂಬಮಹಾಖಂಡದ ಬಿರುಕುಗೊಂಡ ಒಂದು ಭೂಪ್ರದೆಶಕ್ಕೆ ಸೆರಿದ್ದು. ಭೌಗೋಳಿಕವಾಗಿ, ಇದು ದಕ್ಷಿಣ-ಮಧ್ಯ ಏಷ್ಯಾದ ಪರ್ಯಾಯ ದ್ವೀಪ ಪ್ರದೇಶವಾಗಿದ್ದು, ಉತ್ತರದಲ್ಲ ಹಿಮಾಲಯ, ಪಶ್ಚಿಮದಲ್ಲಿ ಹಿಂದೂ ಕುಶ್ ಮತ್ತು ಪೂರ್ವದಲ್ಲಿ ಅರಕಾನೀಸ್ ನಿಂದ ನಿರೂಪಿಸಲಾಗಿದೆ. ಭಾರತೀಯ ಉಪಖಂಡ ಮತ್ತು ದಕ್ಷಿಣ ಏಷ್ಯಾ ಪದಗಳನ್ನು ಕೆಲವೊಮ್ಮೆ ಈ ಪ್ರದೇಶವನ್ನು ಸೂಚಿಸಲು ಪರ್ಯಾಯವಾಗಿ ಬಳಸಲಾಗುತ್ತದೆ, ಆದರೂ ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯ ಪದವು ಸಾಮಾನ್ಯವಾಗಿ ಅಫ್ಘಾನಿಸ್ತಾನವನ್ನು ಸಹ ಒಳಗೊಂಡಿದೆ. ಹೆಸರು ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನ ಪ್ರಕಾರ, ಉಪಖಂಡ ಎಂಬ ಪದವು "ಒಂದು ಪ್ರತ್ಯೇಕ ಭೌಗೋಳಿಕ, ರಾಜಕೀಯ ಅಥವಾ ಸಾಂಸ್ಕೃತಿಕ ಗುರುತನ್ನು ಹೊಂದಿರುವ ಖಂಡದ ಉಪವಿಭಾಗ" ಹಾಗು "ಒಂದು ಖಂಡಕ್ಕಿಂತಲು ಸ್ವಲ್ಪ ಕಡಿಮೆಯಾದ ದೊಡ್ಡ ಭೂಪ್ರದೇಶ" ಎಂದು ಸೂಚಿಸಲಾಗಿದೆ. ಆರಂಭಿತ ಇಪ್ಪತ್ತನೇ ಶತಮಾನದಿಂದಲು ಹೆಚ್ಚಿನ ಭಾರತ ಪ್ರದೇಶವು ಬ್ರಿಟಿಷ್ ಸಾಮ್ರಾಜ್ಯದ ಆಡಳಿತದಲ್ಲಿದ್ದು ಮತ್ತು ಈ ಉಪಖಂಡ ಎಂಬ ಪದವು ಬ್ರಿಟಿಷ್ ಭಾರತ ಮತ್ತು ಬ್ರಿಟಿಷ್ ಪ್ಯಾರಾಮೌಂಟ್ಸಿ ಅಡಿಯಲ್ಲಿದ್ದ ಸಂಸ್ಥಾನಗಳನ್ನು ಸೂಚಿಸಲು ಸುಲಭವಾಗ್ಗಿದ್ದರಿಂದ ಇದರ ಬಳಕೆಯನ್ನು ಸಾಮಾನ್ಯವಾಗಿ ಭಾರತ ಉಪಖಂಡಕ್ಕೆ ಸೂಚಿಸಲಾಗಿದೆ. ಭಾರತೀಯ ಉಪಖಂಡ ಎಂಬ ಪದವು ಬ್ರಿಟಿಷ್ ಸಾಮ್ರಾಜ್ಯ ಮತ್ತು ಅದರ ಉತ್ತರಾಧಿಕಾರಿಗಳಲ್ಲಿ ಸಾಮಾನ್ಯವಾಗಿದೆ, ಆದರೆ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ದಕ್ಷಿಣ ಏಷ್ಯಾ ಎಂಬ ಪದವು ಹೆಚ್ಚು ಸಾಮಾನ್ಯವಾಗಿದೆ. ಇತಿಹಾಸಕಾರರಾದ ಸುಗತ ಬೋಸ್ ಮತ್ತು ಆಯೇಷಾ ಜಲಾಲ್ ಅವರ ಪ್ರಕಾರ "ಇತ್ತೀಚಿನ ಮತ್ತು ತಟಸ್ಥ ಭಾಷೆಯಲ್ಲಿ" ಭಾರತೀಯ ಉಪಖಂಡವನ್ನು ದಕ್ಷಿಣ ಏಷ್ಯಾ ಎಂದು ಕರೆಯಲ್ಪಟ್ಟಿದೆ . ಇಂಡೋಲಾಜಿಸ್ಟ್ ರೊನಾಲ್ಡ್ ಬಿ. ಇಂಡೆನ್ ಅವರು ದಕ್ಷಿಣ ಏಷ್ಯಾ ಎಂಬ ಪದದ ಬಳಕೆ ಹೆಚ್ಚು ವ್ಯಾಪಕವಾಗಿ ಹರಡುತ್ತಿದೆ ಎಂದು ವಾದಿಸುತ್ತಾರೆ ಏಕೆಂದರೆ ಇದು ಪೂರ್ವ ಏಷ್ಯಾದಿಂದ ಈ ಪ್ರದೇಶವನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ಈ ಪ್ರದೇಶದ ಸಮಕಾಲೀನ ರಾಜಕೀಯ ಗಡಿಗಳನ್ನು ಪ್ರತಿಬಿಂಬಿಸುವುದರಿಂದ ದಕ್ಷಿಣ ಏಷ್ಯಾ ಎಂಬ ಪದವು ಹೆಚ್ಚು ನಿಖರವಾಗ್ಗಿದ್ದು ಭಾರತೀಯ ಉಪಖಂಡ ಪದವನ್ನು ಬದಲಿಸುತ್ತದೆ, ಈ ಪದವು ಪ್ರದೇಶದ ವಸಾಹತು ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿದೆ ಮತ್ತು ಹೆಚ್ಛುವರಿಯಾಗಿ ಈ ಪದವನ್ನು ಇನ್ನೂ ಟೈಪೊಲಾಜಿಕಲ್ ಅಧ್ಯಯನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತದ ವಿಭಜನೆಯ ನಂತರ, ಪಾಕಿಸ್ತಾನದ ನಾಗರಿಕರು (ಇದು 1947 ರಲ್ಲಿ ಬ್ರಿಟಿಷ್ ಭಾರತದಿಂದ ಸ್ವತಂತ್ರವಾಯಿತು) ಮತ್ತು ಬಾಂಗ್ಲಾದೇಶ ನಾಗರಿಕರು (1971 ರಲ್ಲಿ ಪಾಕಿಸ್ತಾನದಿಂದ ಸ್ವತಂತ್ರವಾಯಿತು) ಭಾರತದ ಪ್ರಬಲ ಸ್ಥಾನದಿಂದಾಗಿ ಭಾರತದ ಉಪಖಂಡ ಪದದ ಬಳಕೆಯನ್ನು ಆಕ್ರಮಣಕಾರಿ ಮತ್ತು ಸಂಶಯಾಸ್ಪದವೆಂದು ಗ್ರಹಿಸುತ್ತಾರೆ, ಅದರಂತೆ ಆ ದೇಶಗಳಲ್ಲಿ ಇದನ್ನು ಬಹಳ ಕಡಿಮೆಯಾಗಿ ಬಳಸಲಾಗುತ್ತಿದೆ. ಆದರೆ ಈ ಪ್ರದೇಶದ ಸಾಮಾಜಿಕ-ಸಾಂಸ್ಕೃತಿಕ ಸಾಮ್ಯತೆಗಳಿಂದಾಗಿ ಅನೇಕ ಭಾರತೀಯ ವಿಶ್ಲೇಷಕರು ಈ ಪದವನ್ನು ಬಳಸಲು ಬಯಸುತ್ತಾರೆ. ಈ ಪ್ರದೇಶವನ್ನು "ಏಷ್ಯನ್ ಉಪಖಂಡ", "ದಕ್ಷಿಣ ಏಷ್ಯಾ ಉಪಖಂಡ", ಹಾಗೂ "ಭಾರತ" ಅಥವಾ " ಗ್ರೇಟರ್ ಇಂಡಿಯಾ" ಎಂಬ ಪದಬಳಿಕೆಯಲ್ಲು ಶಾಸ್ತ್ರೀಯ ಮತ್ತು ಪೂರ್ವ ಆಧುನಿಕ ಅರ್ಥದಲ್ಲಿ ಕರೆಯಲಾಗಿದೆ. ಭೂವಿಜ್ಞಾನ ಭಾರತೀಯ ಉಪಖಂಡವು ಹಿಂದೆ ಗೊಂಡ್ವಾನ ಭಾಗವಾಗಿತ್ತು, ಇದು ನಿಯೋಪ್ರೊಟೆರೊಜೊಯಿಕ್ ಮತ್ತು ಆರಂಭಿಕ ಪ್ಯಾಲಿಯೋಜೋಯಿಕ್ ಸಮಯದಲ್ಲಿ ರೂಪುಗೊಂಡ ಸೂಪರ್ ಖಂಡವಾಗಿದೆ. ಮೆಸೊಜೊಯಿಕ್ ಸಮಯದಲ್ಲಿ ಗೊಂಡ್ವಾನಾ ಒಡೆಯಲು ಪ್ರಾರಂಭಿಸಿತು, ಭಾರತೀಯ ಉಪಖಂಡವು ಅಂಟಾರ್ಟಿಕಾದಿಂದ ೧೩-೧೨ ಕೊಟಿ ವರ್ಷಗಳ ಹಿಂದೆ ಮತ್ತು ಮಡಗಾಸ್ಕರ್ ಸುಮಾರು ೯ ಕೊಟಿ ವರ್ಷಗಳ ಹಿಂದೆ ಬೇರ್ಪಟ್ಟಿತು. ಭಾರತೀಯ ಉಪಖಂಡವು ತರುವಾಯ ಉತ್ತರ-ಈಶಾನ್ಯ ದಿಕ್ಕಿಗೆ ಚಲಿಸಿತು, ಸುಮಾರು ೫.೫ ಕೊಟಿ ವರ್ಶಗಳ ಹಿಂದೆ ಪ್ಯಾಲಿಯೊಸೀನ್ ಅಂತ್ಯದಲ್ಲಿ ಯುರೇಷಿಯನ್ ಫಲಕಗಳಿಗೆ (ಟೆಕ್ಟೊನಿಕ್ ಪ್ಲೆಟ್) ಡಿಕ್ಕಿ ಹೊಡೆಯಿತು . ಯುರೇಷಿಯನ್ ಮತ್ತು ಭಾರತೀಯ ಉಪಖಂಡದ ಫಲಕಗಳು ಸಂಧಿಸುವ ವಲಯವು ಭೌಗೋಳಿಕವಾಗಿ ಇಂದಿಗೂ ಸಕ್ರಿಯವಾಗಿದೆ ಹಾಗು ದೊಡ್ಡ ಭೂಕಂಪಗಳಿಗೆ ಒಳಗಾಗುತ್ತದೆ. ಭೌತಿಕವಾಗಿ, ಇದು ದಕ್ಷಿಣ-ಮಧ್ಯ ಏಷ್ಯಾದ ಪರ್ಯಾಯ ದ್ವೀಪ ಪ್ರದೇಶವಾಗಿದ್ದು, ಉತ್ತರದಲ್ಲಿ ಹಿಮಾಲಯ, ಪಶ್ಚಿಮದಲ್ಲಿ ಹಿಂದೂ ಕುಶ್ ಮತ್ತು ಪೂರ್ವದಲ್ಲಿ ಅರಕಾನೀಸ್ ನಿಂದ ನಿರೂಪಿಸಲಾಗಿದೆ. ಇದು ದಕ್ಷಿಣಕ್ಕೆ ಹಿಂದೂ ಮಹಾಸಾಗರದವರೆಗೆ, ನೈರುತ್ಯಕ್ಕೆ ಅರಬ್ಬಿ ಸಮುದ್ರದವರೆಗೆ ಮತ್ತು ಆಗ್ನೇಯಕ್ಕೆ ಬಂಗಾಳ ಕೊಲ್ಲಿ ವರೆಗೆ ವಿಸ್ತರಿಸಿದೆ. ಈ ಪ್ರದೇಶದ ಬಹುಪಾಲು ಭಾರತೀಯ ಫಲಕದ ಮೇಲೆ ನಿಂತಿದೆ ಮತ್ತು ದೊಡ್ಡ ಪರ್ವತ ತಡೆಗಳಿಂದ ಏಷ್ಯಾದ ಉಳಿದ ಭಾಗಗಳಿಂದ ಪ್ರತ್ಯೇಕಿಸಲ್ಪಟ್ಟಿದೆ. ಲಕ್ಕಡಿವ್ ದ್ವೀಪಗಳು, ಮಾಲ್ಡೀವ್ಸ್ ಮತ್ತು ಚಾಗೋಸ್ ದ್ವೀಪಸಮೂಹವು ಭಾರತೀಯ ಫಲಕದಲ್ಲಿರುವ ಹವಳದ ಅಟಾಲ್‌ಗಳು (ಕೊರಲ್ ರೀಫ಼್), ಕೇಸ್ (ತೆಳ ಭಾಗದ ದ್ವೀಪ) ಮತ್ತು ಫಾರೋಗಳ (ದ್ವೀಪಗಳ ಸಮೂಹ) ಮೂರು ಸರಣಿಗಳಾಗಿದ್ದು,ಕ್ರಿಟೇಶಿಯಸ್ ಮತ್ತು ಆರಂಭಿಕ ಸೆನೋಜೋಯಿಕ್ ಸಮಯದಲ್ಲಿಚಾಗೋಸ್ -ಲಕ್ಕಡಿವ್ ರಿಡ್ಜ್, ಜಲಾಂತರ್ಗಾಮಿ ಪರ್ವತಶ್ರೇಣಿಯು ಭಾರತೀಯ ಫಲಕವು ಉತ್ತರದ ದಿಕ್ಚ್ಯುತಿಯ ಮೂಲಕ ರೀಯೂನಿಯನ್ ಹಾಟ್‌ಸ್ಪಾಟ್‌ನಿಂದ ಉತ್ಪತ್ತಿಯಾಯಿತು . ಮಾಲ್ಡೀವ್ಸ್ ದ್ವೀಪಸಮೂಹವು ಜ್ವಾಲಾಮುಖಿ ಬಸಾಲ್ಟ್ ಹೊರಹರಿವಿನ ನೆಲಮಾಳಿಗೆಯಿಂದ ಸುಮಾರು 2000 ಮೀಟರ್ ಆಳದಿಂದ ಲಕ್ಕಾಡಿವ್ಸ್ ಮತ್ತು ಗ್ರೇಟ್ ಚಾಗೋಸ್ ಬ್ಯಾಂಕ್ ನಡುವಿನ ಪರ್ವತದ ಮಧ್ಯ ಭಾಗವನ್ನು ರೂಪಿಸುತ್ತದೆ. ಮಾನವಶಾಸ್ತ್ರಜ್ಞ ಜಾನ್ ಆರ್. ಲುಕೆಕ್ಸ್ ರವರ ಪ್ರಕಾರ "ಭಾರತ ಉಪ್ಪಖಂಡವು ದಕ್ಶಿಣ ಏಶ್ಯಾದ ಭಾಗದ ಬಹುದೊಡ್ದ ಭೂಪ್ರದೇಶವನ್ನು ಒಳಗೊಂಡಿದೆ" ಇತಿಹಾಸಕಾರ ಬಿ.ಎನ್.ಮುಖರ್ಜಿ ಅವರ ಪ್ರಕಾರ, "ಭ್ಹಾರತ ಉಪಖಂಡವು ಒಂದು ಅವಿಭಾಜ್ಯ ಭೌಗೋಳಿಕ ಘಟಕವಾಗಿದೆ." ಭೂಗೋಳಶಾಸ್ತ್ರಜ್ಞ ಡಡ್ಲಿ ಸ್ಟಾಂಪ್ ಪ್ರಕಾರ, "ಭಾರತದ ಉಪಖಂಡವು ಪ್ರಪಂಚದ ಯಾವುದೇ ಮುಖ್ಯ ಭೂಭಾಗಕ್ಕಿಂತ ಪ್ರಕೃತಿಯಿಂದಲೇ ಒಂದು ಪ್ರದೇಶವಾಗಿ ಅಥವಾ 'ಸಾಮ್ರಾಜ್ಯ'ವಾಗಿ ಉತ್ತಮವಾಗಿ ಗುರುತಿಸಲ್ಪಟ್ಟಿದೆ." ದಕ್ಷಿಣ ಏಷ್ಯಾದ ಈ ನೈಸರ್ಗಿಕ ಭೌತಿಕ ಭೂಪ್ರದೇಶವು ಭಾರತೀಯ ಫಲಕದ ಒಣ ಭೂಮಿ ಭಾಗವಾಗಿದ್ದು, ಇದನ್ನು ಯುರೇಷಿಯಾದ ಉಳಿದ ಭಾಗಗಳಿಂದ ತುಲನಾತ್ಮಕವಾಗಿ ಪ್ರತ್ಯೇಕಿಸಲಾಗಿದೆ. ಹಿಮಾಲಯಗಳು (ಪೂರ್ವದಲ್ಲಿ ಬ್ರಹ್ಮಪುತ್ರ ನದಿಯಿಂದ ಪಶ್ಚಿಮದಲ್ಲಿನ ಸಿಂಧೂ ನದಿಯವರೆಗೆ ), ಕರಕೋರಂ (ಪೂರ್ವದಲ್ಲಿ ಸಿಂಧೂ ನದಿಯಿಂದ ಪಶ್ಚಿಮದಲ್ಲಿ ಯಾರ್ಕಂದ್ ನದಿಯವರೆಗೆ ) ಮತ್ತು ಹಿಂದು ಕುಶ್ ಪರ್ವತಗಳು (ಯಾರ್ಕಂಡ್ ನದಿಯಿಂದ ಪಶ್ಚಿಮಕ್ಕೆ) ಅದರ ಉತ್ತರ ಗಡಿಯನ್ನು ರೂಪಿಸುತ್ತವೆ. ಪಶ್ಚಿಮದಲ್ಲಿ ಇದು ಹಿಂದೂ ಕುಶ್, ಸ್ಪಿನ್ ಘರ್ (ಸಫೇದ್ ಕೊಹ್), ಸುಲೈಮಾನ್ ಪರ್ವತಗಳು, ಕೀರ್ತರ್ ಪರ್ವತಗಳು, ಬ್ರಾಹೂಯಿ ಶ್ರೇಣಿ ಮತ್ತು ಪ್ಯಾಬ್ ಶ್ರೇಣಿಯ ಪರ್ವತ ಶ್ರೇಣಿಗಳ ಭಾಗಗಳಿಂದ ಸುತ್ತುವರೆದಿದೆ ಗಡಿಯುದ್ದಕ್ಕೂ ಪಶ್ಚಿಮ ಪಟ್ಟು ಬೆಲ್ಟ್ ( ಸುಲೈಮಾನ್ ರೇಂಜ್ ಮತ್ತು ಚಮನ್ ಫಾಲ್ಟ್ ನಡುವೆ) ಭಾರತೀಯ ಫಲಕದಲ್ಲಿ ಪಶ್ಚಿಮದ ಗಡಿಯಾಗಿದೆ, ಅಲ್ಲಿ, ಪೂರ್ವ ಹಿಂದೂ ಕುಶದಲ್ಲಿ, ಅಫ್ಘಾನಿಸ್ತಾನ -ಪಾಕಿಸ್ತಾನ ಗಡಿ ಇದೆ. ಪೂರ್ವದಲ್ಲಿ, ಇದು ಪಟ್ಕೈ, ನಾಗ, ಲುಶಾಯ್ ಮತ್ತು ಚಿನ್ ಬೆಟ್ಟಗಳಿಂದ ಸುತ್ತುವರಿದಿದೆ. ಹಿಂದೂ ಮಹಾಸಾಗರ ದಕ್ಷಿಣಕ್ಕೆ, ಬಂಗಾಳ ಕೊಲ್ಲಿ ಆಗ್ನೇಯಕ್ಕೆ ಮತ್ತು ಅರಬ್ಬಿ ಸಮುದ್ರವು ನೈತ್ಯದಲ್ಲಿ ಸುತ್ತುವರಿದು ಭಾರತೀಯ ಉಪಖಂಡದ ಗಡಿಯಾಗಿದೆ. ಹಿಮಾಲಯದ ಮೂಲಕ ಹಾದುಹೋಗುವ ದಾರಿ ಕಷ್ಟವಾದ್ದರಿಂದ, ಭಾರತೀಯ ಉಪಖಂಡದ ಸಾಮಾಜಿಕ-ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ಪರಸ್ಪರ ಕ್ರಿಯೆಯು ಹೆಚ್ಚಾಗಿ ವಾಯುವ್ಯದಲ್ಲಿರುವ ಅಫ್ಘಾನಿಸ್ತಾನದ ಕಣಿವೆಗಳ ಮೂಲಕ ನಡೆದಿವೆ, ಹಾಗು ಅದರ ಪೂರ್ವದಲ್ಲಿರುವ ಮಣಿಪುರದ ಕಣಿವೆಗಳು ಮತ್ತು ಸಮುದ್ರ ಮಾರ್ಗಗಳ ಮೂಲಕ ನಡೆದಿವೆ. ಹೆಚ್ಚು ಕಷ್ಟಕರವಾದ ಆದರೆ ಐತಿಹಾಸಿಕವಾಗಿ ಪ್ರಮುಖವಾದ ಸಂವಹನವು ಟಿಬೆಟಿಯನ್ನರಿಂದ ಪ್ರವರ್ತಿತವಾದ ಹಾದಿಗಳ ಮೂಲಕವೂ ಸಂಭವಿಸಿದೆ. ಈ ಮಾರ್ಗಗಳು ಮತ್ತು ಪರಸ್ಪರ ಕ್ರಿಯೆಗಳು ಭಾರತದ ಉಪಖಂಡದಿಂದ ಏಷ್ಯಾದ ಇತರ ಭಾಗಗಳಿಗೆ ಬೌದ್ಧ ಧರ್ಮದ ಹರಡುವಿಕೆಗೆ ಕಾರಣವಾಗಿವೆ. ಮತ್ತು ಇಸ್ಲಾಮಿಕ್ ವಿಸ್ತರಣೆಯು ಎರಡು ರೀತಿಯಲ್ಲಿ ಭಾರತೀಯ ಉಪಖಂಡಕ್ಕೆ ಬಂದಿತು, ಅಫ್ಘಾನಿಸ್ತಾನದ ಮೂಲಕ ಭೂಮಿಯಲ್ಲಿ ಮತ್ತು ಭಾರತೀಯ ಕರಾವಳಿಗೆ ಅರೇಬಿಯನ್ ಸಮುದ್ರದ ಸಮುದ್ರ ಮಾರ್ಗಗಳ ಮೂಲಕ. ಭೌಗೋಳಿಕ ರಾಜಕೀಯ ಆಧುನಿಕ ಭೌಗೋಳಿಕ ರಾಜಕೀಯ ಗಡಿಗಳ ಪ್ರಕಾರ, ಭಾರತೀಯ ಉಪಖಂಡವು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ಅನ್ನು ರೂಪಿಸುತ್ತದೆ, ಜೊತೆಗೆ ಸಮಾವೇಶದ ಪ್ರಕಾರ, ಶ್ರೀಲಂಕಾ ದ್ವೀಪ ರಾಷ್ಟ್ರ ಮತ್ತು ಹಿಂದೂ ಮಹಾಸಾಗರದ ಇತರ ದ್ವೀಪಗಳಾದ ಮಾಲ್ಡೀವ್ಸ್ ಕೂದ ಸೇರಿದೆ. ಕ್ರಿಸ್ ಬ್ರೂಸ್ಟರ್ ಮತ್ತು ವುಲ್ಫ್‌ಗ್ಯಾಂಗ್ ಮೇರ್‌ಹೋಫರ್ ಪ್ರಕಾರ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮತ್ತು ಭೂತಾನ್ ಭಾರತೀಯ ಉಪಖಂಡಗಳಾಗಿವೆ. ಬ್ರೂಸ್ಟರ್ ಮತ್ತು ಮೇರ್‌ಹೋಫರ್ ರವರ ಪ್ರಕಾರ ಅಫ್ಘಾನಿಸ್ತಾನ ಮತ್ತು ಮಾಲ್ಡೀವ್ಸ್ ಪ್ರದೇಶವನ್ನು ಸೇರಿಸಿದ್ದಲ್ಲಿ ಈ ಮಹಾಪ್ರದೇಶವನ್ನು ದಕ್ಷಿಣ ಏಷ್ಯಾ ಎಂದು ಕೂಡ ಉಲ್ಲೇಖಿಸಬಹುದು. ಪಾಕಿಸ್ತಾನ, ಬಾಂಗ್ಲಾದೇಶ, ಕಾಶ್ಮೀರ ಮತ್ತು ಲಕ್ಷದ್ವೀಪ ಹಾಗು ಮಾಲ್ಡೀವ್ಸ್ ದ್ವೀಪ ಸರಪಳಿಗಳು ಸೇರಿದಂತೆ ಉಪಖಂಡದ ಪರಿಧಿಯು ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ, ಆದರೆ ಮಧ್ಯಭಾಗವಾದ ಭಾರತ, ನೇಪಾಳ ಮತ್ತು ಶ್ರೀಲಂಕಾ ಪ್ರದೇಶದಲ್ಲಿ ಹೆಚ್ಚುವರಿ ಜನಾಂಗ ಹಿಂದೂ ಅಥವಾ ಬೌದ್ಧ ಧರ್ಮವನ್ನು ಅವಲಂಬಿಸಿದ್ದಾರೆ. ಈ ದೇಶಗಳಲ್ಲಿ ಹೆಚ್ಚಿನವು ಭಾರತೀಯ ಫಲಕದ ಮೇಲೆ ಅಥವಾ ನಿರಂತರ ಭೂಪ್ರದೇಶದ ಮೇಲೆ ಇರುವುದರಿಂದ, ಇಲ್ಲಿ ಎರಡು ದೇಶಗಳ ನಡುವಿನ ಗಡಿಗಳು ಹೆಚ್ಚಾಗಿ ನದಿ ಅಥವಾ ನಿರ್ಜನ ಪ್ರದೇಶವಾಗಿದೆ. ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ "ಭಾರತೀಯ ಉಪಖಂಡ" ದ ನಿಖರವಾದ ವ್ಯಾಖ್ಯಾನವು ಸ್ವಲ್ಪಮಟ್ಟಿಗೆ ವಿವಾದಾಸ್ಪದವಾಗಿದೆ ಏಕೆಂದರೆ ಯಾವ ದೇಶಗಳು ದಕ್ಷಿಣ ಏಷ್ಯಾ ಅಥವಾ ಭಾರತೀಯ ಉಪಖಂಡದ ಭಾಗವಾಗಿದೆ ಎಂಬುದರ ಕುರಿತು ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ವ್ಯಾಖ್ಯಾನವಿಲ್ಲ. ಭಾರತೀಯ ಉಪಖಂಡ ಅಥವಾ ದಕ್ಷಿಣ ಏಷ್ಯಾ ಎಂದು ಕರೆಯಲಾಗಿದ್ದರೂ, ಈ ಪ್ರದೇಶದ ಭೌಗೋಳಿಕ ವ್ಯಾಪ್ತಿಯ ವ್ಯಾಖ್ಯಾನವು ಬದಲಾಗುತ್ತದೆ. ಅಫ್ಘಾನಿಸ್ತಾನವನ್ನು ಸಾಮಾನ್ಯವಾಗಿ ದಕ್ಷಿಣ ಏಷ್ಯಾದ ಭಾಗವೆಂದು ಪರಿಗಣಿಸಲಾಗಿದ್ದರೂ, ಇದನ್ನು ಸಾಮಾನ್ಯವಾಗಿ ಭಾರತೀಯ ಉಪಖಂಡದಲ್ಲಿ ಸೇರಿಸಲಾಗುವುದಿಲ್ಲ. ಅಫ್ಘಾನಿಸ್ತಾನದ ಕೆಲವು ಭಾಗಗಳು ಕೆಲವೊಮ್ಮೆ ಭಾರತೀಯ ಉಪಖಂಡದಲ್ಲಿ ಮಧ್ಯ ಏಷ್ಯಾ ಮತ್ತು ಭಾರತೀಯ ಉಪಖಂಡದ ವಾಯುವ್ಯ ಭಾಗಗಳ ನಡುವಿನ ಗಡಿ ಪ್ರದೇಶವಾಗಿ ಸೇರಿಕೊಂಡಾಗಲೂ, ಅಫ್ಘಾನಿಸ್ತಾನದ ಸಾಮಾಜಿಕ-ಧಾರ್ಮಿಕ ಇತಿಹಾಸವು ತುರ್ಕಿಕ್ ಪ್ರಭಾವಿತ ಮಧ್ಯ ಏಷ್ಯಾಕ್ಕೆ ಹೆಚ್ಚು ನಿಕಟ ಸಂಬಂಧ ಹೊಂದಿದೆ. ಮಾಲ್ಡೀವ್ಸ್, ಪರ್ಯಾಯ ದ್ವೀಪದ ನೈತ್ಯದಲ್ಲಿರುವ ಒಂದು ಸಣ್ಣ ದ್ವೀಪಸಮೂಹವನ್ನು ಒಳಗೊಂಡಿರುವ ಒಂದು ದೇಶ, ಇದನ್ನು ಹೆಚ್ಚಾಗಿ ಭಾರತೀಯ ಉಪಖಂಡದ ಭಾಗವೆಂದು ಪರಿಗಣಿಸಲಾಗುತ್ತದೆ, ಆದರು ಕೆಲವೊಮ್ಮೆ ಅಂತರರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಮೂಲಗಳಿಂದ ಇದು ಭಾರತ ಉಪಖಂಡದಿಂದ ನೈತ್ಯ ದಿಕ್ಕಿನಲ್ಲಿ ದೂರದಲ್ಲಿರುವ ದ್ವೀಪಗಳ ಗುಂಪುಗಳ್ಳಲಿ ಒಂದು ಎಂದು ಉಲ್ಲೇಖಿಸಲಾಗುತ್ತದೆ ಸಹ ನೋಡಿ ಹಿಂದುಸ್ಥಾನ ಬೃಹತ್ ಭಾರತ ದಕ್ಷಿಣ ಏಷ್ಯಾ ಸಾರ್ಕ್ ಉಲ್ಲೇಖಗಳು   Indian geography Asian geography Earth history South asia Toponyms of India Land of India Land of Asia
2207
https://kn.wikipedia.org/wiki/%E0%B2%AA%E0%B2%BE%E0%B2%95%E0%B2%BF%E0%B2%B8%E0%B3%8D%E0%B2%A4%E0%B2%BE%E0%B2%A8
ಪಾಕಿಸ್ತಾನ
ಪಾಕಿಸ್ತಾನ - ಭಾರತೀಯ ಉಪಖಂಡದಲ್ಲಿನ ದೇಶಗಳಲ್ಲೊಂದು. ದಕ್ಷಿಣ ಏಷ್ಯದ ಒಂದು ದೇಶ. ಪಾಕಿಸ್ತಾನ್ ಇಸ್ಲಾಮಿಕ್ ಗಣರಾಜ್ಯವೆಂದು ಇದರ ಅಧಿಕೃತ ಹೆಸರು. ಪೂರ್ವ ಪಶ್ಚಿಮ ವಾಯವ್ಯ ಹಾಗೂ ಉತ್ತರದಲ್ಲಿ ಇರಾನ್ ಮತ್ತು ಆಫ್ಘಾನಿಸ್ತಾನ, ಈಶಾನ್ಯದಲ್ಲಿ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಭಾರತದ ಜಮ್ಮು-ಕಾಶ್ಮೀರ ಪ್ರದೇಶ, ಪೂರ್ವ ಮತ್ತು ಆಗ್ನೇಯದಲ್ಲಿ ಭಾರತ, ದಕ್ಷಿಣದಲ್ಲಿ ಅರಬ್ಬಿ ಸಮುದ್ರ ಇವೆ. ಉ.ಅ.240 -370 ನಡುವೆ ಹಬ್ಬಿರುವ ಈ ದೇಶದ ವಿಸ್ತೀರ್ಣ 7,96,095 ಚ.ಕಿ.ಮೀ. ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿ ಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಭಾಗವನ್ನು ಇದರಲ್ಲಿ ಸೇರಿಸಿಲ್ಲ. ಪೂರ್ವ ಪಶ್ಚಿಮವಾಗಿ 1287ಕಿ,ಮೀ., ಉತ್ತರ ದಕ್ಷಿಣವಾಗಿ 1505 ಕಿ.ಮೀ. ಇದೆ. ಇದರ ಭೂವಿಸ್ತೀರ್ಣ 778,720 ಚ.ಕಿ.ಮೀ. ಇದ್ದು ಜಲಭಾಗದ ವಿಸ್ತೀರ್ಣ 25,220ಚ.ಕಿ.ಮೀ. ಒಟ್ಟು 803,940 ಚ.ಕಿ.ಮೀ. ಭೂವಿಸ್ತೀರ್ಣವಿರುವ ಇದಕ್ಕೆ 1046 ಚ.ಕಿ.ಮೀ. ಸಮುದ್ರ ತೀರವಿದೆ. ಜನಸಂಖ್ಯೆ 16,24,19,946 (ಜುಲೈ 2005) ರಾಜಧಾನಿ ಇಸ್ಲಾಮಾಬಾದ್. ಪಾಕಿಸ್ತಾನದಲ್ಲಿ ನಾಲ್ಕು ಪ್ರಾಂತ್ಯಗಳಿವೆ : ಬಲೂಚಿಸ್ತಾನ ( ರಾಜಧಾನಿ ಕ್ವೆಟ್ಟ) ವಾಯುವ್ಯ ಸರಹದ್ದು ಪ್ರಾಂತ್ಯ (ಕೇಂದ್ರಾಡಳಿತ ಪಂಗಡ ಪ್ರದೇಶಗಳ ಹೊರತು) ರಾಜಧಾನಿ ಪೆಷಾವರ್ ಪಂಜಾಬ್ ( ರಾಜಧಾನಿ ಲಾಹೋರ್) ಸಿಂಧ್ ( ರಾಜಧಾನಿ ಕರಾಚಿ) ಈ ಪ್ರಾಂತ್ಯಗಳಲ್ಲಿ ಒಟ್ಟು 13 ವಿಭಾಗಗಳು. 51 ಜಿಲ್ಲೆಗಳು ಮತ್ತು ಪಂಗಡ ಪ್ರದೇಶಗಳು ಇವೆ. ಭೌತಿಕ ಭೂಗೋಳ- ಭೂವಿಜ್ಞಾನ ಪಾಕಿಸ್ತಾನದ ವಿಸ್ತೀರ್ಣ 7,96,095 ಚದರ ಕಿಲೋಮೀಟರುಗಳು. ಇಲ್ಲಿ ಭೂವೈಜ್ಞಾನಿಕವಾಗಿ ಪ್ರಾಚೀನ ಜೀವಕಲ್ಪದ ಕೇಂಬ್ರಿಯನ್ ಯುಗದಿಂದ ತೊಡಗಿ ನವ ಜೀವಕಲ್ಪದ ನವೀನ ಯುಗದ ತನಕದ ಶಿಲಾಸಮುದಾಯವನ್ನು ಕಾಣಬಹುದು. ಆದರೆ ಪ್ರಾಚೀನ ಜೀವಕಲ್ಪದ ಆರ್ಡೋವಿಸಿಯನ್, ಸೈಲೂರಿಯನ್, ಡಿವೋನಿಯನ್ ಮತ್ತು ಕೆಳ ಕಾರ್ಬಾನಿಫೆರಸ್ ಯುಗಗಳ ಶಿಲಾಸಮೂಹ ಉತ್ತರ ಹಿಮಾಲಯವನ್ನುಳಿದರೆ ಭಾರತದಲ್ಲಾಗಲಿ ಪಾಕಿಸ್ತಾನದಲ್ಲಾಗಲಿ ರೂಪುಗೊಂಡಿಲ್ಲವೆಂದೇ ಹೇಳಬಹುದು. ಇದರಿಂದಾಗಿ ಪ್ರಾಚೀನ ಜೀವಕಲ್ಪದ ಸುಮಾರು ಮುಕ್ಕಾಲು ಭಾಗ ಭೂ ಚರಿತ್ರೆ ಈ ಎರಡೂ ದೇಶಗಳಲ್ಲಿ ಅಲಭ್ಯ. ಪ್ರಾಚೀನ ಜೀವಕಲ್ಪದ ಮೊದಲ ಯುಗ ಕೇಂಬ್ರಿಯನ್. ಈ ಯುಗದ ಶಿಲಾ ಸಮುದಾಯ ಪಾಕಿಸ್ತಾನದ ಸಾಲ್ಟ್‍ರೇಂಜಿನಲ್ಲಿ ಅತ್ಯಂತ ಶ್ರೇಷ್ಠವಾಗಿ ರೂಪುಗೊಂಡಿದ್ದು ಭಾರತದ ಕೇಂಬ್ರಿಯನ್ ಯುಗಕ್ಕೆ ಇದು ಆದರ್ಶಪ್ರಾಯ ಪ್ರದೇಶವೆನ್ನಿಸಿದೆ. ರಚನಾ ಶಿಲಾಶಾಸ್ತ್ರ ಮತ್ತು ಭೌತ ಭೂವಿಜ್ಞಾನವನ್ನು ಈ ಪ್ರದೇಶದಲ್ಲಿ ಅತ್ಯಂತ ಸಮಂಜಸ ರೀತಿಯಲ್ಲಿ ಅಭ್ಯಸಿಸಬಹುದು. ಇಲ್ಲಿ ಪ್ರಾಚೀನ ಜೀವಿಗಳ ಅವಶೇಷಗಳು ಉತ್ಕ್ರಷ್ಟ ರೀತಿಯಲ್ಲಿ ಇರುವುದರ ಜೊತೆಗೆ ಈ ಪ್ರದೇಶದಲ್ಲಿ ಕಂಡುಬರುವ ಬರಡಾದ ಕೋಡುಗಲ್ಲುಗಳು ಮತ್ತು ಬತ್ತಿದ ತೊರೆಗಳು ಸ್ಥಳದ ಭೂಚಲನೆ ಮತ್ತು ವ್ಯತ್ಯಸ್ತಸ್ಥಿತಿಗಳನ್ನು ಸಾರುವ ಸಮರ್ಪಕ ಭೂದಾಖಲೆಗಳಾಗಿದ್ದು ಈ ಪ್ರದೇಶಕ್ಕೆ ಭೂವಿಜ್ಞಾನದ ಪ್ರದರ್ಶನಾಲಯ ಎಂಬ ಹೆಸರನ್ನು ಅರ್ಥಪೂರ್ಣವಾಗಿ ತಂದಿವೆ. ಸಾಲ್ಟ್‍ರೇಂಜಿನಲ್ಲಿ ಮಟ್ಟಸ ಬೆಟ್ಟದ ಸಮೂಹವೇ ಉಂಟು. ಪೂರ್ವ ರೇಖಾಂಶ 710 ಮತ್ತು 740 ಯ ಮಧ್ಯದಲ್ಲಿ ಜೀಲಮ್ ಮತ್ತು ಸಿಂಧೂ ನದಿಯ ಮಧ್ಯದಲ್ಲಿ ಸರಪಳಿಯಂತೆ ಇದು ಹಾದಿದೆ. ಜೀಲಮ್ ನದಿಯ ಪಶ್ಚಿಮಕ್ಕೆ ಹೆಚ್ಚು ಕಡಿಮೆ ಪೂರ್ವ-ಪಶ್ಚಿಮವಾಗಿ ಓರಣವಾಗಿರುವ ಈ ಶ್ರೇಣಿ ಪಶ್ಚಿಮಕ್ಕೆ ಸಾಗಿದಂತೆ ವಯೋಮಾನದಲ್ಲಿ ಕಿರಿದಾಗುತ್ತ ಹೋಗುತ್ತದೆ. ಉತ್ತರದಲ್ಲಿ ಪಟವಾರ್ ಪ್ರಸ್ಥಭೂಮಿಯ ವರೆಗೆ ವ್ಯಾಪಿಸಿದ್ದು ಸಾಧಾರಣವಾಗಿ 675 ಮೀ ಎತ್ತರದವರೆಗೆ ಚಾಚಿದೆ. ಸಾಲ್ಟ್‍ರೇಂಜಿನಲ್ಲಿ ಕೇಂಬ್ರಿಯನ್ ಶಿಲಾಸಮುದಾಯ ಲವಣ ಶಿಲಾಶ್ರೇಣಿಯಿಂದ ಪ್ರಾರಂಭವಾಗಿ ಊದಾಮರಳು ಶಿಲೆ, ನಿಯೊಬಲಸ್ ಪದರಗಳು, ಮೆಗ್ನೀಸಿಯಮ್ ಮರಳು ಶಿಲಾಸ್ತರಗಳನ್ನು ಹೊಂದಿ ಕೃತಕ ಲವಣ ಸ್ಫಟಿಕದ ಜೇಡುಶಿಲೆಯೊಂದಿಗೆ ಮುಕ್ತಾಯವಾಗುತ್ತದೆ. ಖೆವ್ರಬಳಿ ಜಿಪ್ಸಮ್ ಲವಣಗಳಿಗಾಗಿ ಈಗಾಗಲೇ ಗಣಿಗಾರಿಕೆಯನ್ನು ತೊಡಗಲಾಗುತ್ತಿದೆ. ಇಲ್ಲಿಯ ಲವಣಶಿಲೆಗಳು ನೂರು ಮೀಟರುಗಳಷ್ಟು ಮಂದವಾಗಿದ್ದು ವರ್ಷಂಪ್ರತಿ 150,000 ಟನ್ ಲವಣವನ್ನು ಪೂರೈಸುತ್ತಿವೆ. ನಿಯೊಬಲಸ್ ಪದರಗಳಲ್ಲಿ ಬ್ರೇಕಿಯೊಪೋಡ ಹಾಗೂ ಕೇಂಬ್ರಿಯನ್ ಯುಗದ ಸೂಚಿ ಜೀವಿಗಳಾದ ತ್ರಿಪಾಳಿಗಳ ಅವಶೇಷಗಳಿವೆ. ಇವು ಪ್ರಾಗ್ಜೀವ ವಿಜ್ಞಾನಿಗಳ ಗಮನ ಸೆಳೆದಿವೆ. ಸಾಲ್ಟ್‍ರೇಂಜಿನ ಅತ್ಯಂತ ಕೆಳಸ್ತರವಾದ ಲವಣ ಶಿಲೆಗಳ ಮೇಲೆ ಊದಾಬಣ್ಣದ ಮರಳು ಶಿಲೆ ಸಂಚಯಿಸಿದೆ. ಇವೆರಡರ ಸಂಬಂಧ ಸಾಮಾನ್ಯ ಸಂಚಯನ ಶಿಲಾ ಸಂಬಂಧದಂತಿರದೆ ವಿಭಿನ್ನವಾಗಿದ್ದು ಲವಣ ಶಿಲಾಶ್ರೇಣಿಯ ವಯೋಮಾನ ನಿರ್ಧಾರದಲ್ಲಿ ವ್ಯಾಪಕವಾದ ವಾದ ವಿವಾದಕ್ಕೆ ಎಡೆಗೊಟ್ಟಿದೆ. ಈ ಶ್ರೇಣಿಯನ್ನು ಕೇಂಬ್ರಿಯನ್ ಯುಗಕ್ಕೆ ಸೇರಿಸಬೇಕೆ ಇದು ಹೊಂದಿರುವ ಜೀವ್ಯವಶೇಷದ ಆಧಾರದ ಮೇಲೆ ನವ ಜೀವಕಲ್ಪದ ಇಯೊಸೀನ್ ಯುಗಕ್ಕೆ ಸೇರಿಸಬೇಕೆ ಎಂಬ ಜಿಜ್ಞಾಸೆ ಭೂವಿಜ್ಞಾನ ಚರಿತ್ರೆಯಲ್ಲೇ ಅಭೂತಪೂರ್ವ ಎನ್ನಬಹುದಾದ ವಾದಕ್ಕೆ ಎಡೆ ಮಾಡಿ ಪ್ರಪಂಚದ ಹೆಸರಾಂತ ಭೂವಿಜ್ಞಾನಿಗಳು ಇದರಲ್ಲಿ ಪಾಲ್ಗೊಳ್ಳುವಂತಾಯಿತು. ಲವಣಶಿಲೆ ಅತ್ಯಂತ ಮೃದುವಾಗಿದೆ. ಇದು ಗಟ್ಟಿಯಾದ ಊದಾಮರಳು ಶಿಲೆಯ ಅಡಿ ಒತ್ತರಿಸಲ್ಪಟ್ಟು ಈಗಿನ ಸ್ಥಾನ ಪಡೆದಿದೆ. ಹೀಗಾಗಿ ಇದರ ವಯಸ್ಸು ಕೇಂಬ್ರಿಯನ್ ಯುಗವಾಗಿರಲು ಸಾಧ್ಯವಾಗದು ಎಂಬುದು ಒಂದು ಮತ. ಈ ವಾದವನ್ನು ಪುಷ್ಟೀಕರಿಸಲು ಈ ಪ್ರದೇಶಕ್ಕೆ ಹತ್ತಿರವಿರುವ ಕೊಹಟ್ ಪ್ರದೇಶದ ಇಯೊಸೀನ್ ಯುಗದ ಲವಣ ಗುಂಪನ್ನು ಉದಾಹರಿಸುತ್ತಾರೆ. ಅಲ್ಲದೆ ಪ್ರಖ್ಯಾತ ಭೂಸಸ್ಯ ವಿಜ್ಞಾನಿ ಬೀರ್‍ಬಲ್ ಸಾಹನಿ ಈ ಪ್ರದೇಶದ ಮಾದರಿ ಶಿಲೆಯನ್ನು ಸಂಗ್ರಹಿಸಿ ಅಭ್ಯಸಿಸಿ ಇದರಲ್ಲಿರುವ ಸಸ್ಯಗಳ ಬೀಜ ಮುಂತಾದ ಅಂಶಗಳಿಂದಾಗಿ ಸಾಲ್ಟ್‍ರೇಂಜಿನ ಲವಣಶಿಲಾ ಶ್ರೇಣಿ ಇಯೋಸೀನ್ ಯುಗಕ್ಕೆ ಸೇರುತ್ತದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನ್ಯ ಶಿಲೆಗಳಲ್ಲಿ ಸಂಗ್ರಹಿಸಿದ್ದ ಈ ಅವಶೇಷಗಳು ಮೂಲತಃ ಲವಣ ಶಿಲಾ ಶ್ರೇಣಿಗೆ ಸೇರಿದ ಜೀವ್ಯವಶೇಷಗಳಲ್ಲಿ ಅಂತರ್ಜಲದಿಂದ ಸಾಗಿಸಲ್ಪಟ್ಟು ಲವಣ ಶಿಲೆಗಳಿಗೆ ಪ್ರವಹಿಸಿದಂಥವು. ಅಲ್ಲದೆ ಸಂಚಯನ ಶಿಲಾಸಂಬಂಧವಿರುವ ಲವಣಶ್ರೇಣಿಗಳು ಅನೇಕ ಭಾಗಗಳಲ್ಲಿ ವ್ಯಕ್ತಪಟ್ಟಿವೆಯಾದ್ದರಿಂದ ಲವಣ ಶಿಲಾಶ್ರೇಣಿಯ ವಯಸ್ಸು ಕೇಂಬ್ರಿಯನ್ ಎಂಬುದು ಮತ್ತೊಂದು ಗುಂಪಿನ ವಾದ. ಕೇಂಬ್ರಿಯನ್ ಹಾಗೂ ಇಯೊಸೀನ್ ಯುಗಗಳೆರಡಕ್ಕೂ ಸೇರಿದ ಲವಣ ಶಿಲೆಗಳು ಈಗ ಸಾಲ್ಟ್‍ರೇಂಜಿನಲ್ಲಿ ಬೆಳಕಿಗೆ ಬಂದಿವೆ. ಸಿಂಧ್ ಕಣಿವೆಯ ಬಸ್‍ಮಾಯ್ ಅಪನತಿ (ಆ್ಯಂಟಿಕ್ಲೈನ್) ಮಡಿಕೆಯ ಕೇಂದ್ರ ಭಾಗದ ಭೂ ವೈಜ್ಞಾನಿಕ ಪರಿಶೋಧನೆ ಈ ಪ್ರಾಂತ್ಯದಲ್ಲಿರಬಹುದಾದ ಆರ್ಡೊವಿಸಿಯನ್ ಯುಗದ ಶಿಲಾಸಮೂಹವನ್ನು ಬೆಳಕಿಗೆ ತರುವ ನಿರೀಕ್ಷೆ ಇದೆ. ಇದರ ಹೊರತು ಆರ್ಡೊವಿಸಿಯನ್ ಯುಗದ ಶಿಲೆಗಳು, ಸೈಲೂರಿಯನ್ ಮತ್ತು ಡಿವೋನಿಯನ್ ಶಿಲಾ ಸಮುದಾಯ ಪಾಕಿಸ್ತಾನದ ಮತ್ತಾವ ಭಾಗದಲ್ಲೂ ಪ್ರಕಟವಾಗಿಲ್ಲ. ಕಾರ್ಬಾನಿಫೆರಸ್ ಯುಗದ ಪ್ರಾರಂಭದಲ್ಲಿ ಭಾರತ ಉಪಖಂಡ ಮೊದಲಬಾರಿ ಹಿಮಯುಗವನ್ನು ಅನುಭವಿಸಿತು. ನೀರ್ಗಲ್ಲು ನದಿಗಳು ಹೊತ್ತುಸಾಗಿಸಿದ ಗುಂಡುಗಳು ರಾಜಾಸ್ಥಾನ, ಬಿಹಾರ ಮತ್ತು ಒರಿಸ್ಸ ಪ್ರಾಂತ್ಯಗಳಲ್ಲಿ ಕಂಡುಬರುತ್ತವೆ. ಇಂಥ ಗುಂಡು ಶಿಲೆಗಳು ಪಾಕಿಸ್ತಾನದ ಸಾಲ್ಟ್‍ರೇಂಜಿನಲ್ಲಿ ಕೃತಕ ಲವಣ ಸ್ಫಟಿಕದ ಜೇಡು ಶಿಲಾ ನಿಕ್ಷೇಪಗಳ ಮೇಲೆ ಸಂಚಯಿಸಿವೆ. ಕಾರ್ಬಾನಿಫೆರಸ್ ಯುಗದ ಅಂತ್ಯದ ವೇಳೆಗೆ ಭೂ ಚಲನೆಯಿಂದಾಗಿ ಸಾಲ್ಟ್‍ರೇಂಜಿನ ಬೆಟ್ಟ ಶ್ರೇಣಿಗಳು ಸಂಚಯನದ ತಗ್ಗುಗಳಾಗಿ ಪರಿವರ್ತಿತವಾದುವು. ಈ ಯುಗದಿಂದ ಪ್ರಾರಂಭವಾಗಿ ನವಜೀವ ಕಲ್ಪದ ಇಯೋಸಿನ್ ಯುಗದ ಅಂತ್ಯದವರೆಗೆ ತಗ್ಗು ಅಸ್ತಿತ್ವದಲ್ಲಿದ್ದು ಈ ಅವಧಿಯ ಸಂಚಯನಗಳೆಲ್ಲವನ್ನೂ ಒಳಗೊಂಡಿರುವುದು ವ್ಯಕ್ತವಾಗುತ್ತದೆ. ಇವು ಸಾಲ್ಟ್‍ರೇಂಜಿನ ಪಶ್ಚಿಮಕ್ಕಷ್ಟೇ ಸೀಮಿತವಾಗಿವೆ. ಪೂರ್ವದಲ್ಲಿ ಪರ್ಮಾಕಾರ್ಬಾನಿಫೆರಸ್ ಯುಗದ ಶಿಲೆಗಳು ಕಣ್ಮರೆಯಾಗಿದ್ದು ಕೇಂಬ್ರಿಯನ್ ಯುಗದ ಶಿಲೆಗಳು ಇಯೋಸಿನ್ ಯುಗದ ಶಿಲೆಗಳೊಡನೆ ಸಂಪರ್ಕಿಸಿವೆ. ಇಲ್ಲಿ ಬೃಹತ್ ಸ್ತರಭಂಗದಿಂದಾಗಿ ಇಯೋಸಿನ್ ಯುಗದ ನಮ್ಯೂಲಿಟಿಕ್ ಸುಣ್ಣ ಶಿಲೆಗಳು ಒತ್ತರಿಸಲ್ಪಟ್ಟಿರುವುದೇ ವಿಭಿನ್ನ ಯುಗದ ಶಿಲೆಗಳ ನಡುವೆ ಇಂಥ ವೈಜ್ಞಾನಿಕ ಭೂವೈಜ್ಞಾನಿಕ ಸಂಬಂಧ ಕಂಡುಬರುವುದಕ್ಕೆ ಕಾರಣ. ಉತ್ಕೃಷ್ಟ ಜೀವ್ಯವಶೇಷಗಳನ್ನು ಒಳಗೊಂಡಿರುವ ಸಾಲ್ಟ್‍ರೇಂಜಿನ ಪಶ್ಚಿಮ ಭಾಗವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಕೆಳಭಾಗ ಮರಳು ಶಿಲಾಸ್ತರದಿಂದ ಕೂಡಿದ್ದು ಇದರ ಮೇಲೆ ಸುಣ್ಣ ಶಿಲೆ ಸಂಚಯಿಸಿದೆ. ಇದರಲ್ಲಿ ಸಾಗರಜೀವಿ ಬ್ರೇಕಿಯೊಪೋಡದ ಪ್ರಭೇದವಾದ ಪ್ರಡಕ್ಟಸ್ ಜೀವ್ಯವಶೇಷಗಳು ಹೇರಳವಾಗಿವೆ ಎಂದೇ ಇದರ ಹೆಸರು ಪ್ರಡಕ್ಟಸ್ ಸುಣ್ಣಶಿಲೆ. ಪರ್ಮಿಯನ್ ಯುಗದ ಸಾಗರ ಜನಿತ ಶಿಲಾ ಸಮುದಾಯದ ಪೈಕಿ ಸಾಲ್ಟ್‍ರೇಂಜಿನ ಈ ಸುಣ್ಣ ಶಿಲಾನಿಕ್ಷೇಪಗಳು ಮಾದರಿ ನಿಕ್ಷೇಪಗಳೆಂದೇ ಪರಿಗಣಿಸಲ್ಪಟ್ಟಿವೆ. ಸಾಲ್ಟ್‍ರೇಂಜ್ ಉಳಿದರೆ ಪರ್ಮಾಕಾರ್ಬಾನಿಫೆರಸ್ ಯುಗದ ಶಿಲಾ ಸಮುದಾಯವನ್ನು ಹಜಾರದಲ್ಲಿ ಕಾಣಬಹುದು. ಇಲ್ಲಿ ಅಟಾಕ್ ಮತ್ತು ಡೋಗ್ರಾ ಸ್ಲೇಟುಗಳ ಸಮಕಾಲೀನ ಶಿಲೆಗಳೆನ್ನಿಸಿರುವ ಪುರಾಣ ಯುಗದ ಬುಡಮೇಲಾದ ಸ್ಲೇಟುಗಳ ತುದಿಯನ್ನು ಗುಂಡುಪೆಂಟೆ ಶಿಲೆಗಳು ಆಕ್ರಮಿಸಿವೆ. ನೀರ್ಗಲ್ಲು ನದಿಗಳು ಉಜ್ಜಿರುವ ಗುರುತುಗಳು ಈ ಶಿಲೆಗಳಲ್ಲಿವೆ. ಹೀಗೆ ಇವು ಕಾರ್ಬಾನಿಫೆರಸ್ ಯುಗಕ್ಕೆ ಸೇರಿರುವ ಸ್ಪಷ್ಟ ನಿದರ್ಶನವನ್ನು ಪ್ರದರ್ಶಿಸುತ್ತವೆ. ಮಧ್ಯ ಜೀವಕಲ್ಪದ ಪ್ರಥಮ ಯುಗವಾದ ಟ್ರಯಾಸಿಕ್ಕಿನ ಶಿಲಾ ಸಮುದಾಯ ಪ್ರಧಾನವಾಗಿ ಬಲೂಚಿಸ್ಥಾನ, ಹಜಾರ ಮತ್ತು ಸಾಲ್ಟ್‍ರೇಂಜ್‍ಗಳಲ್ಲಿ ಕಂಡುಬರುತ್ತದೆ. ಬಲೂಚಿಸ್ಥಾನದಲ್ಲಿ ಮೇಲಣ ಟ್ರಯಾಸಿಕ್ ಶಿಲಾ ಸಮುದಾಯ ಪ್ರಕಟವಾಗಿದೆ. ಆದರೆ ಸಾಲ್ಟ್‍ರೇಂಜ್‍ನಲ್ಲಿ ಕೆಳ ಟ್ರಯಾಸಿಕ್ ಮತ್ತು ಮಧ್ಯಟ್ರಯಾಸಿಕ್ ಯುಗದ ಕೆಳಭಾಗ ವಿವರಿಸಲ್ಪಟ್ಟಿದೆ. ಬಲೂಚಿಸ್ಥಾನದ ಕ್ವೆಟ್ಟಾ ಮತ್ತು ಜೋಬ್ ಜಿಲ್ಲೆಗಳಲ್ಲಿ ಮೇಲಣ ಟ್ರಯಾಸಿಕ್ ಶಿಲಾಸಮುದಾಯ ಉಂಟು. ಇಲ್ಲಿ ಅದು ಹೊರಚಾಚುಗಳಾಗಿ ಪ್ರಕಟವಾಗಿದೆ. ಸಾವಿರಾರು ಮೀಟರುಗಳಷ್ಟು ಮಂದವಿರುವ ಜೇಡು, ಸ್ಲೇಟು ಮತ್ತು ಇವುಗಳೊಂದಿಗೆ ಬೆರೆತಿರುವ ಸುಣ್ಣ ಶಿಲೆಗಳಲ್ಲಿ ಶೀರ್ಷಾಪಾದಿಯಾದ ಅಮೊನೈಟ್ ಜೀವ್ಯವಶೇಷಗಳಿವೆ. ಇವು ಅನನುರೂಪವಾಗಿ ಸುಣ್ಣಶಿಲೆಯ ಮೇಲೆ ನಿಂತಿವೆ. ಹಜಾರದ ಟ್ರಯಾಸಿಕ್ ಶಿಲಾ ಸಮುದಾಯ ದಕ್ಷಿಣ ಮತ್ತು ಆಗ್ನೇಯ ದಿಕ್ಕುಗಳಲ್ಲಿ ವ್ಯಾಪಕವಾಗಿ ರೂಪುಗೊಂಡಿದೆ. ಈ ಯುಗದ ಶಿಲೆಗಳು ನೇರವಾಗಿ ಪರ್ಮಾಕಾರ್ಬಾನಿಫೆರಸ್ ಯುಗದ ಸಂಚಿತ ಶಿಲೆಗಳ ಮೇಲೆ ಕೂತಿರುವುದನ್ನು ಕಾಣಬಹುದು. ಅದರಲ್ಲೂ ಹಜಾರದ ಸಿರಬಂದ್ ಪರ್ವತ (ಅಬ್ಬಾಸ್ ಪರ್ವತದ ದಕ್ಷಿಣಕ್ಕಿರುವ ಒಂಟಿ ಪರ್ವತ) ಪರ್ಮೊಕಾರ್ಬಾನಿಕ್ ಫೆರಸ್ ಯುಗದ ಶಿಲೆಗಳಿಂದ ಪ್ರಾರಂಭಿಸಿ ನಮ್ಯೂಲಿಟಿಕ್ ಸುಣ್ಣಶಿಲೆಗಳವರೆಗೆ ಸಂಚಿತ ಶಿಲೆಗಳನ್ನು ಪೇರಿಸಿಕೊಂಡಿರುವುದನ್ನು ಕಾಣಬಹುದು. ಇದರಂತೆ ಹಜಾರದ ದಕ್ಷಿಣ ಗಡಿಸೀಮೆ ಮತ್ತು ಅಟಾಕ್ ಜಿಲ್ಲೆಯ ಕಾಲಚಿತ್ತಾ ಬೆಟ್ಟ ಸಾಲಿನಲ್ಲಿ ಟ್ರಯಾಸಿಕ್ ಯುಗದ ಸುಣ್ಣ ಶಿಲೆಗಳು ನಗ್ನವಾಗಿರುವ ನಮ್ಯೂಲಿಟಿಕ್ ಸುಣ್ಣ ಶಿಲೆಗಳ ಏಕಾವನತ ಮಡಿಕೆಗಳ ಮೇಲೆ ಗುಡ್ಡದೋಪಾದಿಯಲ್ಲಿ ಸಂಚಯಿಸಿವೆ. ಸಾಲ್ಟ್‍ರೇಂಜಿನಲ್ಲಿ ಟ್ರಯಾಸಿಕ್ ಶಿಲಾಸಮುದಾಯ ಚಿದೇರು ಬೆಟ್ಟಗಳಿಂದ ಆರಂಭವಾಗಿ ಪಶ್ಚಿಮದಲ್ಲಿ ಸಿಂಧೂ ನದಿಯಾಚೆಗೆ ಸಾಗಿದೆ. ಕೇವಲ ಕೆಳಟ್ರಯಾಸಿಕ್ ಮತ್ತು ಮಧ್ಯಟ್ರಯಾಸಿಕ್ಕಿನ ಕೆಳಭಾಗದ ಶಿಲೆಗಳನ್ನು ಮಾತ್ರ ಹೊಂದಿರುವ ಈ ಭಾಗದಲ್ಲಿ ಶೀರ್ಷಪಾದಿಗಳ ಜೀವ್ಯಾವಶೇಷಗಳು ಪರಿಪೂರ್ಣ ಬೆಳವಣಿಗೆಯನ್ನು ತೋರುತ್ತದೆ. ಆದರೆ ಸಿಂಧೂ ನದಿಗೆ ಅಡ್ಡಲಾಗಿ ಬೆಳೆದಿರುವ ಸಾಲ್ಟ್‍ರೇಂಜ್ ಭಾಗದಲ್ಲಿ ಟ್ರಯಾಸಿಕ್ ಶಿಲೆಗಳು ಪೂರ್ಣ ಪ್ರಮಾಣದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಅಮೊನೈಟ್ ಪ್ರಭೇದವಾದ ಸೆರಟೈಟ್ ಜೀವಿಗಳ ಅವಶೇಷ ಹೇರಳವಾಗಿರುವುದರಿಂದ ಈ ಸ್ತರಗಳನ್ನು ಸೆರಟೈಟ ಪದರಗಳೆಂದೇ ಗುರುತಿಸಲಾಗಿದೆ. ಇವುಗಳ ಮಂದ ಸುಮಾರು ಮೂವತ್ತು ಮೀ.ಗಳಷ್ಟು ಉಂಟು. ಈ ಸ್ತರಗಳನ್ನು ಮೂವತ್ತ ರಿಂದ ಅರವತ್ತು ಮೀ. ಮಂದದ ಮರಳು ಶಿಲೆ, ಕ್ರೈನಾಯಿಡ್ ಜೀವ್ಯಾವಶೇಷವಿರುವ ಸುಣ್ಣ ಶಿಲೆ ಹಾಗೂ ಶೀರ್ಷಪಾದಿಗಳಿಂದ ತುಂಬಿರುವ ಮಧ್ಯ ಟ್ರಯಾಸಿಕ್ ಯುಗದ ಡಾಲೋಮೈಟ್ ಶಿಲೆಗಳು ಮುಚ್ಚಿವೆ. ಸಾಲ್ಟ್‍ರೇಂಜ್ ಮಧ್ಯ ಟ್ರಯಾಸಿಕ್ ಯುಗದ ಅನಂತರ ಸಾಗರದ ಹಿಂಜರಿತವನ್ನು ಅನುಭವಿಸಿರುವ ಕುರುಹುಗಳನ್ನು ಈ ಪ್ರದೇಶದ ಭೂ ಚರಿತ್ರೆ ತಿಳಿಸುತ್ತದೆ. ಮೇಲಣ ಟ್ರಯಾಸಿಕ್ ಯುಗದ ಹಾಗೂ ಜುರಾಸಿಕ್ ಯುಗದ ಮೊದಲ ಭಾಗದ ತನಕ ಇದೇ ಪರಿಸ್ಥಿತಿ ಇದ್ದದ್ದು ವ್ಯಕ್ತವಾಗುತ್ತದೆ. ಮಧ್ಯ ಜೀವಕಲ್ಪದ ಎರಡನೆಯ ಯುಗವಾದ ಜ್ಯುರಾಸಿಕ್ಕನ ಸಾಗರಜನಿತ ಸಂಚಯನಗಳು ಬಹುರಾಷ್ಟ್ರಗಳಲ್ಲಿ ವಿವರಿಸಲ್ಪಟ್ಟಿವೆ. ಭಾರತದಲ್ಲಿ ರಾಜಾಸ್ತಾನ ಹಾಗೂ ಕಚ್‍ನಲ್ಲಿ ಇಂಥ ಸಂಚಯನಗಳು ಕಂಡುಬರುತ್ತವೆ. ಪಾಕಿಸ್ತಾನದ ಸಾಲ್ಟ್‍ರೇಂಜ್ ಮತ್ತು ಬಲೂಚಿಸ್ಥಾನಗಳಲ್ಲಿ ಇಂಥವೇ ಸಂಚಯನಗಳು ಲಭ್ಯವಿವೆ. ಅವುಗಳಲ್ಲೂ ಬಲೂಚಿಸ್ಥಾನದಲ್ಲಿ ಈ ಯುಗದ ಸಂಚಯನಗಳು ಭೌಗೋಳಿಕವಾಗಿ ಹಾಗೂ ಭೂವೈಜ್ಞಾನಿಕವಾಗಿ ಹೆಚ್ಚು ವ್ಯಾಪ್ತಿಗಳಿಸಿವೆ. ಈ ಯುಗದಲ್ಲಿ ಸಮಸ್ತಭೂಮಿಯ ಸಸ್ಯಪ್ರಾಣಿಗಳ ಸಂತತಿಯಲ್ಲಾದ ಬದಲಾವಣೆಯನ್ನು ಈ ಶಿಲಾ ಸಂಚಯನಗಳು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ. ಹಜಾರದ ಉತ್ತರ ಮತ್ತು ದಕ್ಷಿಣ ಭಾಗಗಳೆರಡರಲ್ಲೂ ಜ್ಯುರಾಸಿಕ್ ಶಿಲೆಗಳು ಕಂಡುಬರುತ್ತವೆ. ಆದರೆ ಇವೆರಡರ ನಡುವೆ ಜೀವ್ಯಾವಶೇಷ ಮತ್ತು ಶಿಲಾ ಸ್ವರೂಪಗಳಲ್ಲಿ ಅಪಾರ ವ್ಯತ್ಯಾಸಗಳಿವೆ. ಉತ್ತರ ಹಜಾರದಲ್ಲಿ ಮರಳುಪೂರಿತ ಶಿಲೆಗಳು ಪ್ರಧಾನವಾಗಿದೆ. ದಕ್ಷಿಣದಲ್ಲಿ ಈ ಯುಗದ ಶಿಲೆಗಳು ಅಟಾಕ್ ಜಿಲ್ಲೆಯ ಕಾಲಚಿತ್ತಾ ಬೆಟ್ಟಸಾಲಿನಲ್ಲಿ ಏಕಪ್ರಕಾರವಾಗಿ ಬಾಗಿರುವ ಮಡಿಕೆಗಳಲ್ಲಿ ಹೊರಚಾಚುಗಳಾಗಿ ವ್ಯಕ್ತಪಟ್ಟಿವೆ. ಯೂರೋಪಿನ ಲಯಾಸ್ ಮತ್ತು ಲೂಲೈಟ್ ಕಾಲಕ್ಕೆ ಸಂಬಂಧಿಸಿದ ಜ್ಯುರಾಸಿಕ್ ಶಿಲೆಗಳು ಬೃಹತ್ ತಗ್ಗಿನಲ್ಲಿ ರೂಪುಗೊಂಡ ಸಂಚಯನಗಳಾಗಿ ಬಲೂಚಿಸ್ತಾನದಲ್ಲಿ ಕಂಡುಬರುತ್ತದೆ. ಸುಣ್ಣ ಜೀವ್ಯವಶೇಷಯುಕ್ತ ಜಿಗುಟು ಸುಣ್ಣ ಶಿಲೆ, ಜೇಡು ಈ ಪ್ರದೇಶದಲ್ಲಿ ಸುಮಾರು 910 ಮೀ. ಮಂದವಾಗಿದ್ದು ಲಯಾಸ್ ಕಾಲದ ಕೆಳಸ್ತರ ಯೂರೋಪಿನಲ್ಲಿ ಕಂಡುಬರುವಂತೆ ಪ್ರಧಾನವಾಗಿ ಶೀರ್ಷಪಾದಿಗಳ ಅವಶೇಷದಿಂದ ಕೂಡಿದೆ. ಸಿಂಧ್ ಮುಂಚೂಣಿವಲಯವಿರುವ ಪೂರ್ವ ಬಲೂಚಿಸ್ತಾನ ಮಧ್ಯಜೀವಕಲ್ಪದ ಎಲ್ಲ ಯುಗಗಳ ಸಂಚಯನವನ್ನು ತಾಕ್ತ್-ಇ-ಸುಲೈಮಾನ್ ಪರ್ವತದಿಂದ ಮೆಕ್ರಾನ್‍ತೀರದವರೆಗೆ ಉನ್ನತ ಪ್ರದೇಶಗಳಲ್ಲಿ ವ್ಯಕ್ತಪಡಿಸುತ್ತದೆ. ಈಗಿನ ಹಿಮಾಲಯ ಪರ್ವತ ಭಾಗದಲ್ಲಿದ್ದ ಟೆಥಿಸ್ ಸಾಗರ ಬಲೂಚಿಸ್ತಾನಕ್ಕೂ ಚಾಚಿದ್ದುದರ ಫಲವಾಗಿ ಮಧ್ಯಜೀವಕಲ್ಪದ ಸಂಚಿತ ಶಿಲೆಗಳು ಹಿಮಾಲಯ ಪರ್ವತದಲ್ಲಿ ಕಂಡುಬರುವಂತೆಯೇ ಬಲೂಚಿಸ್ತಾನದಲ್ಲೂ ಕಂಡುಬರುತ್ತವೆ. ಇಲ್ಲಿನ ಈ ಸಂಚಯನ ಸಮಾಂತರವಾದ ಅಭಿನತಿ (ಸಿನ್ ಕ್ಲೈನ್) ಹಾಗೂ ಅಪನತಿ (ಆ್ಯಂಟಿಕ್ಲೈನ್) ಮಡಿಕೆಗಳಾಗಿ ಅದುಮಲ್ಪಟ್ಟಿದೆ. ಸಾಲ್ಟ್‍ರೇಂಜ್‍ನಲ್ಲಿ ಪ್ರಮುಖವಾಗಿ ಮಧ್ಯ ಹಾಗೂ ಮೇಲಣ ಜ್ಯುರಾಸಿಕ್ ಶಿಲೆಗಳು ವಿವಿಧ ವರ್ಣಪಟ್ಟಿಗಳಿರುವ ಮರಳುಶಿಲೆ, ಹಳದಿ ಸುಣ್ಣ ಶಿಲೆಗಳಿಂದ ಕೂಡಿದ್ದು, ಇವನ್ನು ಕಚ್‍ನ ಚಿನ್ನದ ಲುಲೈಟ್ ನಿಕ್ಷೇಪಕ್ಕೆ ಹೋಲಿಸಬಹುದಾಗಿದೆ. ಈ ಯುಗದ ಅತ್ಯುತ್ತಮ ಸಂಚಯನ ಸಾಲ್ಟ್‍ರೇಂಜ್‍ನ ವಾಯವ್ಯಭಾಗದಲ್ಲಿ ನಮ್ಮಾಲ್ ಮತ್ತು ಕೈರಾಬಾದ್ ಪ್ರದೇಶಗಳಲ್ಲಿ ರೂಪುಗೊಂಡಿದೆ. ಈ ಭಾಗದಲ್ಲಿ ಸಂಚಯನ 350 ಮೀ.ಗಳಷ್ಟು, ಕಾಲಾಭಾಗ್ ಬಳಿ 460 ಮೀ.ಗಳಷ್ಟು, ಷೇಕ್‍ಬುಡೀಗ್ ಬೆಟ್ಟ ಮತ್ತು ಸುರ್ಗಾರ್ ಶ್ರೇಣಿ ಬಳಿ 600 ಮೀ.ಗಳಷ್ಟು ಮಂದವಿದೆ. ಸುರ್ಗಾರ್ ಬಳಿ ಐಸಾಖೇಲ್‍ನ ವಾಯವ್ಯ ಭಾಗ ಸಂಪೂರ್ಣವಾಗಿ ಜ್ಯುರಾಸಿಕ್ ಮತ್ತು ನವಜೀವ ಕಲ್ಪದ ಇಯೋಸಿನ್ ಯುಗದ ಶಿಲೆಗಳಿಂದ ಆವೃತವಾಗಿದೆ. ಈ ಸಮುದಾಯದ ಕೆಳಸ್ತರದಿಂದ ವರ್ಷಂಪ್ರತಿ ಒಂದು ಸಾವಿರ ಟನ್‍ಗಳಷ್ಟು ಲಿಗ್ನೈಟನ್ನು ಉತ್ಪಾದಿಸಲಾಗುತ್ತಿದೆ. ಇದರಲ್ಲಿ ದೊರೆಯುವ ಸಸ್ಯಜೀವ್ಯವಶೇಷಗಳು ಗೋಂಡ್ವಾನ ಕಾಲದ ಜಬ್ಬಲ್‍ಪುರ ಹಂತವನ್ನು ಪ್ರತಿನಿಧಿಸುತ್ತವೆ. ಮಧ್ಯಜೀವಕಲ್ಪದ ಕೊನೆಯ ಯುಗವಾಗಿ ಕ್ರಿಟೇಷಿಯಸ್‍ನಲ್ಲಿ ಜಲಪ್ರಳಯವಾಗಿ ಭೂಮಿಯ ಬಹುಭಾಗ ಸಾಗರದ ಪಾಲಾದದ್ದು ಶಿಲೆ ಹಾಗೂ ಜೀವ್ಯವಶೇಷಗಳೆರಡರಿಂದಲೂ ವ್ಯಕ್ತವಾಗುತ್ತದೆ. ಭಾರತ ಪರ್ಯಾಯ ದ್ವೀಪದಲ್ಲಿ ತಮಿಳುನಾಡಿನಲ್ಲಿ ಉತ್ತತ್ತೂರು, ಅರಿಯಲೂರು, ನಿನ್ನೀಯೂರು ಮತ್ತು ತಿರುಚ್ಚಿರಾಪಳ್ಳಿ ಪ್ರದೇಶ ಸಾಗರದಿಂದ ಆವೃತವಾಗಿದ್ದ ಕುರುಹುಗಳು ಇಂದಿಗೂ ಲಭ್ಯವಿದೆ. ಇದೇ ಕಾಲದಲ್ಲಿ ಉತ್ತರ ಹಿಮಾಲಯ, ಹಜಾರ, ಸಿಂಧ್, ಬಲೂಚಿಸ್ತಾನ, ಸಾಲ್ಟ್‍ರೇಂಜ್, ಅಸ್ಸಾಂ, ಬರ್ಮಗಳ ಬಹುಭಾಗ ಟೆಥಿಸ್ ಸಾಗರದಿಂದ ಆಕ್ರಮಿಸಲ್ಪಟ್ಟು ಈ ಭಾಗಗಳಲ್ಲಿ ಕ್ರಿಟೇಷಿಯಸ್ ನಿಕ್ಷೇಪಗಳನ್ನು ಸಂಚಯಿಸಿದೆ. ವ್ಯಾಪ್ತಿಯಲ್ಲೂ ಈ ಸಂಚಯನಗಳು ಗಮನ ಸೆಳೆಯುತ್ತವೆ. ಹಜಾರದ ಕ್ರಿಟೇಷಿಯಸ್ ಸಂಚಯನ ಮಹಾತಗ್ಗಿನ ಪಶ್ಚಿಮ ಕೊನೆಯನ್ನು ಪ್ರತಿನಿಧಿಸುತ್ತದೆ. ಸಿಂಧ್‍ನ ಲಾಕಿಶ್ರೇಣಿ ಕ್ರಿಟೇಷಿಯಸ್ ಯುಗದ ಮಾದರಿ ಜೀವಿ ಅಥವಾ ಸೂಚ್ಯಜೀವಿ ಎನ್ನಿಸಿದ್ದ ಹಿಪ್ಯೂರೈಟೀಸಿನ ಜೀವ್ಯವಶೇಷವನ್ನು ಹೊಂದಿದ್ದು ಈ ಸಂಚಯನದ ಸಮಕಾಲೀನ ನಿಕ್ಷೇಪಗಳನ್ನು ಇರಾನ್ ಮತ್ತು ಏಷ್ಯ ಮೈನರಿನಲ್ಲಿ ಕಾಣಬಹುದು. ಸಿಸ್-ಇಂಡಸ್-ಸಾಲ್ಟ್‍ರೇಂಜ್‍ನಲ್ಲಿ ಕ್ರಿಟೇಷಿಯಸ್ ಯುಗದ ಸಂಚಯನ ಅಲ್ಪ ಗಾತ್ರದಲ್ಲಿ ಪ್ರಕಟವಾಗಿದೆ. ಇಲ್ಲಿಯ ಜೀವ್ಯಾವಶೇಷ ಸಂಚಿತ ಶಿಲೆಗಳು ಸಿಂಧೂನದಿಯಾಚೆ ಚಿಚಾಲಿಗುಡ್ಡ, ಮಾಕೇರ್‍ವಾಲ್ ಮತ್ತು ಕಾಲಾಬಾಗಿನ ಸುತ್ತಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿವೆ. ನವಜೀವಕಲ್ಪದ ಶಿಲಾ ಸಮುದಾಯ ಸಾಮಾನ್ಯವಾಗಿ ಪರ್ವತರೂಪದಲ್ಲಿ ಕಂಡುಬರುವುದೇ ಹೆಚ್ಚು. ಸಿಂಧ್ ಮತ್ತು ಬಲೂಚಿಸ್ಥಾನದ ದಕ್ಷಿಣ ತುದಿಯಿಂದ ಪ್ರಾರಂಭವಾಗಿ ಭಾರತದ ಪಶ್ಚಿಮ ಮಂಚೂಣಿ ವಲಯಗಳ ಮೂಲಕ ಹಾದು ಟ್ರಾನ್ಸ್ ಇಂಡಸ್ ಶ್ರೇಣಿಗಳ ಮೂಲಕ ಹಜಾರ-ಕಾಶ್ಮೀರದ ಭಾಗವನ್ನು ಪ್ರವೇಶಿಸಿ ವಿಶಾಲವಾಗುತ್ತದೆ. ಇಲ್ಲಿಂದ ನವಜೀವಕಲ್ಪದ ಜಾಡು ಪಂಜಾಬ್, ಕುಮಾವನ್, ನೇಪಾಳಗಳ ಮೂಲಕ ಬ್ರಹ್ಮಪುತ್ರ ನದಿಯ ಕಂದರದಲ್ಲಿ ವಿಲೀನವಾಗುತ್ತದೆ. ಈ ಎಲ್ಲಾ ಭಾಗಗಳಲ್ಲೂ ನವಜೀವಕಲ್ಪದ ಶಿಲಾ ಸಮುದಾಯ ಇಯೊಸೀನ್ ಯುಗದಿಂದ ಪ್ರಾರಂಭಿಸಿ ಪ್ಲೀಸ್ಟೊಸೀನ್ ಯುಗದ ತನಕ ವ್ಯಾಪಿಸಿರುವುದು ಕಂಡುಬರುತ್ತದೆ. ಜೀವ್ಯಾವಶೇಷ ಹಾಗೂ ವ್ಯಾಪ್ತಿಯ ದೃಷ್ಟಿಯಿಂದ ನವಜೀವಕಲ್ಪ ಹೆಚ್ಚು ಮಹತ್ವ ಗಳಿಸಿದೆ. ಉತ್ತರ ಇಂಡಿಯದ ನವಜೀವಕಲ್ಪದ ಭೂವಿಜ್ಞಾನವನ್ನು ಸಂಪೂರ್ಣವಾಗಿ ಪ್ರತಿನಿಧಿಸುವ ಪ್ರದೇಶವೆಂದರೆ ಪಟ್ವಾರ್ ಪ್ರಸ್ಥಭೂಮಿ. ಇದು ಸಿಂಧೂ ನದಿಯ ಪೂರ್ವಕ್ಕೆ ಸಾಲ್ಟ್‍ರೇಂಜ್‍ನಿಂದ ಹಜಾರ ಜಿಲ್ಲೆಯ ಬೆಟ್ಟಗಳ ಪಾದದವರೆಗೆ ಸುಮಾರು 5,000 ಕಿ.ಮೀ.ಗಳಷ್ಟು ಹಬ್ಬಿದೆ. ಸಮುದ್ರಮಟ್ಟದಿಂದ 365-580 ಮೀ. ಎತ್ತರದಲ್ಲಿದೆ. ಈ ಭಾಗದಲ್ಲಿ ನವಜೀವಕಲ್ಪದ ಆಲಿಗೊಸೀನ್ ಯುಗದ ಶಿಲೆಗಳ ಹೊರತು ಎಲ್ಲಾ ಯುಗಗಳ ಶಿಲೆಗಳು ರಾಣಿಕೋಟ್ (ಇಯೊಸೀನ್) ಹಂತದಿಂದ ಪ್ರಾರಂಭಿಸಿ ಪ್ಲೀಸ್ಟೊಸೀನ್ ಯುಗದ ತನಕ ವ್ಯಾಪಿಸಿದೆ. ಇವುಗಳ ಒಟ್ಟಾರೆ ಮಂದ 7,600 ಮೀ.ಗಳಷ್ಟು ಉಂಟು. ಇಲ್ಲಿಯ ಜೀವ್ಯಾವಶೇಷಗಳಿಂದ ನವಜೀವಕಲ್ಪದ ಜೀವಿಗಳ ಚರಿತ್ರೆ ಪೂರ್ತಿಯಾಗಿ ಬೆಳಕಿಗೆ ಬರುತ್ತದೆ. ಈ ಸಂಚಯನವಿಡೀ ಬೃಹತ್ ತಗ್ಗಿನಲ್ಲಾಗಿದೆ. ಇದರ ಉದ್ದ 240 ಕಿಮೀ, ಅಗಲ 110 ಕಿ.ಮೀ. ಎಂದು ಭೂ ವಿಜ್ಞಾನಿಗಳು ಅಂದಾಜುಮಾಡಿದ್ದಾರೆ. ಇದರ ತಳದಲ್ಲಿ ಮಧ್ಯ ಜೀವಕಲ್ಪದ ನಮ್ಯುಲಿಟಿಕ್ ಸುಣ್ಣ ಶಿಲೆ 300 ಮೀ.ಗಳಷ್ಟಿದೆ. ಮೇಲೆ 1800 ಮೀ.ಮಂದದ ಕೊಳಚೆನೀರಿನ ಸಂಚಯನಗಳು ತುಂಬಿವೆ. ಮರ್ರೀ ಸಂಚಯನಗಳೆಂದು ಇವುಗಳಿಗೆ ಹೆಸರುಂಟು. ನದಿನೀರು ಹೊತ್ತುತಂದ ಹಾಗೂ ಗಾಳಿಬೀಸಿ ತಂದ ನಿಕ್ಷೇಪಗಳು (ಸಿವಾಲಿಕ್ ಸಂಚಯನಗಳು) ಮರ್ರೀ ಶ್ರೇಣಿಯ ಮೇಲುಭಾಗವನ್ನು ಆಕ್ರಮಿಸಿವೆ. ಇವುಗಳ ಮಂದ ಸುಮಾರು 5,000 ಮೀ.ಸಿವಾಲಿಕ್ ಸಂಚಯನವನ್ನು ಪ್ಲಿಸ್ಟೊಸೀನ್ ಯುಗದ ಮರಳು ಆವರಿಸಿದೆ. ಪಟ್ವಾರ್ ಮಹಾತಗ್ಗು ಸಿಂಧೂ ಗಂಗಾನದಿಗಳ ಬೃಹತ್ ತಗ್ಗಿನ ಒಂದು ಭಾಗ ಮಾತ್ರ ಎಂಬುದು ಭೂವಿಜ್ಞಾನಿಗಳ ಅಭಿಮತ. ಇದರ ವಿಶಾಲವಾದ ದಕ್ಷಿಣ ಭಾಗವೇ ರಾಜಾಸ್ತಾನದ ತಗ್ಗು ಪ್ರದೇಶವೆಂದು ದೃಢೀಕರಿಸಲಾಗಿದೆ. ಸಿಂಧ್ ಪ್ರಾಂತ್ಯ ಮತ್ತು ಬಲೂಚಿಸ್ತಾನವನ್ನು ಪ್ರತ್ಯೇಕಿಸುವ ಕಿರ್ತಾರ್, ಲಾಕಿ, ಬುಗ್ತಿ, ಸುಲೈಮಾನ್ ಬೆಟ್ಟಗಳಲ್ಲಿಯೂ ನವಜೀವಕಲ್ಪದ ಶಿಲಾಸಮೂಹ ಪ್ರಕಟವಾಗಿದೆ. ರಾಣಿಕೋಟ್ ಹಂತದಿಂದ ಪ್ರಾರಂಭವಾಗುವ ಈ ನಿಕ್ಷೇಪಗಳು ಪಟ್ವಾರ್ ಪ್ರಸ್ಥಭೂಮಿಯ ನಿಕ್ಷೇಪಗಳಂತೆ ಕೆಳ ಪ್ಲೀಸ್ಟೊಸೀನ್ ಯುಗದತನಕ ವ್ಯಾಪಿಸಿವೆ. ಅಭಿವೃದ್ಧಿಯ ದೃಷ್ಟಿಯಿಂದ ಸ್ತನಿಗಳ ವಿಕಾಸ ಉಚ್ಛ್ರಾಯ ಸ್ಥಿತಿಯಲ್ಲಿದ್ದುದನ್ನು ಸಿವಾಲಿಕ್ ಬೆಟ್ಟಗಳ ಜೀವ್ಯಾವಶೇಷಗಳು ಸಾರುತ್ತವೆ. ಮಧ್ಯಮಿಯೊಸೀನ್ ಮತ್ತು ಕೆಳಪ್ಲೀಸ್ಟೋಸಿನ್ ಕಾಲದಲ್ಲಿ ಈ ಬೆಟ್ಟಗಳು ರೂಪುಗೊಂಡಿವೆ. ಸಿಂಧ್ ಮತ್ತು ಸಾಲ್ಟ್‍ರೇಂಜ್ ಪ್ರದೇಶದಲ್ಲಿ ಸಿವಾಲಿಕ್ ಬೆಟ್ಟಗಳ ಪರಿಪೂರ್ಣ ಬೆಳವಣಿಗೆಯನ್ನು ಕಾಣಬಹುದು. ಸಿಂಧೂ ನದಿಯ ಮೆಕ್ಕಲು ಪ್ರದೇಶ 200,000 ಚದರ ಕಿ.ಮೀ ವ್ಯಾಪ್ತಿಗಳಿಸಿದ್ದು, ಇದರಡಿಯಲ್ಲಿ ನವಜೀವಕಲ್ಪದ ಶಿಲಾಸ್ತರ ಇದೆಯೆಂದು ಜಿಯೋಡೆಟಿಕ್ ಸಮೀಕ್ಷೆಯಿಂದ ವ್ಯಕ್ತಪಟ್ಟಿದೆ. ನವಜೀಕಲ್ಪದ ಮಿಯೊಸೀನ್ ಯುಗದಲ್ಲಿ ಉತ್ತುಂಗ ಪರ್ವತ ಹಿಮಾಲಯದ ಉತ್ಥಾನ ಪ್ರಾರಂಭವಾಯಿತು. ಆ ಕಾಲದಲ್ಲಿ ಇಡೀ ಈ ಪ್ರದೇಶ ಹಿಮಾಲಯದ ಮುನ್ತಗ್ಗು ಪ್ರದೇಶವಾಗಿದ್ದು ಅಂದಿನಿಂದಲೂ ಸಂಚಯನ ಪ್ರದೇಶವಾಗಿ ಮಾರ್ಪಟ್ಟಿದೆ. ಆದರೆ ಕೆಳ ಪ್ಲೀಸ್ಟೊಸೀನ್ ಯುಗದಲ್ಲಿ ಹಿಮಾಲಯ ತನ್ನ ಉತ್ಥಾನದ ಪರಮೋಚ್ಛಮಟ್ಟ ತಲುಪಿದಾಗ ಇದರಲ್ಲಿ ಹುಟ್ಟಿದ ನದಿಗಳು ಮುಂದಿನ ತಗ್ಗಿನಲ್ಲಿ ಮೆಕ್ಕಲನ್ನು ತುಂಬಲು ಪ್ರಾರಂಭಿಸಿದುವು. ಹಿಮಾಲಯದ ಮೇಲೇರಿಕೆಗೂ ಈ ಮುನ್ತಗ್ಗು ಪ್ರದೇಶಕ್ಕೂ ಭೂ ವೈಜ್ಞಾನಿಕವಾದ ಸಂಬಂಧವಿದೆ ಎಂಬುದು ಭೂ ವಿಜ್ಞಾನಿಗಳ ಅಭಿಮತ. ಮೇಲ್ಮೈ ಲಕ್ಷಣ ಪಾಕಿಸ್ತಾನದ ಮೇಲ್ವೈ ಲಕ್ಷಣ ವೈವಿಧ್ಯಪೂರಿತವಾದ್ದು, ಪಾಕಿಸ್ತಾನದ ದಕ್ಷಿಣ ಸರಹದ್ದಿನಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತ ಹಾದುಹೋಗುತ್ತದೆ. ಈ ದೇಶದ ಉತ್ತರದಲ್ಲಿ ಹಿಮಾಲಯ ಪರ್ವತ ಶ್ರೇಣಿಗಳು ಹಾಯ್ದಿವೆ. ದಕ್ಷಿಣದಲ್ಲಿ ಮರುಭೂಮಿಗಳು ಹಬ್ಬಿವೆ. ಉತ್ತರ ಮತ್ತು ಪಶ್ಚಿಮಭಾಗಗಳಲ್ಲಿ ಪರ್ವತಗಳಿಂದ ಕೂಡಿರುವ ಈ ದೇಶದಲ್ಲಿ 6,705 ಮೀ.ಗಳಿಗೂ ಎತ್ತರವಾದ 60 ಶಿಖರಗಳಿವೆ. ಪ್ರಪಂಚದ ಅತ್ಯಂತ ದೊಡ್ಡ ನದಿಗಳಲ್ಲೊಂದಾದ ಸಿಂಧೂ ಇಲ್ಲಿ ಹರಿಯುತ್ತದೆ. ಹೀಗೆ ವಿಭಿನ್ನ ಭೌತಲಕ್ಷಣಗಳಿಂದ ಕೂಡಿರುವ ಈ ದೇಶವನ್ನು 6 ನೈಸರ್ಗಿಕ ವಿಭಾಗಗಳಾಗಿ ವಿಂಗಡಿಸಬಹುದು: 1.ಉತ್ತರದ ಪರ್ವತಗಳು, 2.ಉಪಪರ್ವತ ಪ್ರಸ್ಥಭೂಮಿ, 3.ಸಿಂಧೂಬಯಲು, 4.ಬಲೂಚಿಸ್ತಾನ ಪ್ರಸ್ಥಭೂಮಿ, 5.ಪಶ್ಚಿಮದ ಸರಹದ್ದು ಪರ್ವತಗಳು, 6.ಮರುಭೂಮಿ ಪ್ರದೇಶಗಳು. ಉತ್ತರದ ಪರ್ವತಗಳು ಹಿಮಾಲಯ ಮತ್ತು ಹಿಮಾಲಾಯಾಂತರ ಪರ್ವತವಲಯ ಇಡೀ ಉತ್ತರ ಭಾಗವನ್ನು ವ್ಯಾಪಿಸಿವೆ. ವಾಯವ್ಯಕ್ಕೆ ಹಿಂದೂಕುಷ್ ಶ್ರೇಣಿಯ ಆಚೆಗೆ ಪ್ರಪಂಚದ ಛಾವಣಿ ಎನಿಸಿದ ಪಾಮಿರ್ ದಿಣ್ಣೆಯಿದೆ. ಇಲ್ಲಿ ಸೋವಿಯತ್ ಒಕ್ಕೂಟ ಮತ್ತು ಪಾಕಿಸ್ತಾನ ಭೂ ಪ್ರದೇಶಗಳು ಆಫ್ಘಾನಿಸ್ತಾನದ ಕಿರಿದಾದ ಭೂ ಪ್ರದೇಶದಿಂದ ಪ್ರತ್ಯೇಕಗೊಂಡಿದೆ. ಉತ್ತರ ಪರ್ವತವಲಯ ಕೆಲವೆಡೆಗಳಲ್ಲಿ 320 ಕಿಮೀಗಳಷ್ಟು ಅಗಲವಾಗಿವೆ. ಇಲ್ಲಿ 6,096 ಮೀ.ಗಳಿಗಿಂತ ಎತ್ತರವಾದ ಶಿಖರಗಳು ಅಲ್ಲಲ್ಲಿ ಎದ್ದು ನಿಂತಿವೆ. ಈ ಪರ್ವತವಲಯ ಪಾಕಿಸ್ತಾನದ ವಾಯುಗುಣದ ಮೇಲೆ ಗಾಢ ಪ್ರಭಾವ ಬೀರಿದೆ. ಇದು ದಕ್ಷಿಣದಿಂದ ಬೀಸುವ ಮಳೆಯ ಮಾರುತಗಳನ್ನು ತಡೆದು ಇಲ್ಲಿ ಹೆಚ್ಚಿನ ಮಳೆ ಬೀಳಲು ಕಾರಣವಾಗಿದೆ. ಇದರ ಪೂರ್ವಭಾಗ ಮಂಜುಗಡ್ಡೆ ಮತ್ತು ನೀರ್ಗಲ್ಲ ನದಿಗಳಿಂದ ಕೂಡಿದೆ. ಇಲ್ಲಿಯ ಮಂಜುಗಡ್ಡೆಗಳು ಬೇಸಗೆಯಲ್ಲಿ ಕರಗುವುದರಿಂದ ಸಿಂಧೂ ನದಿ ಮತ್ತು ಅದರ ಉಪನದಿಗಳು ಸದಾ ತುಂಬಿ ಹರಿಯುತ್ತವೆ. ಈ ವಲಯದಲ್ಲಿ ಪರ್ವತಗಳ ವಿವಿಧ ಪಂಕ್ತಿಗಳು ಹಬ್ಬಿವೆ. ಉಪಪರ್ವತ ವಲಯ : ಪರ್ವತವಲಯ ಮತ್ತು ಸಿಂಧೂ ನದಿ ಬಯಲಿನ ನಡುವೆ ಇರುವ ಪ್ರದೇಶವನ್ನು 4 ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು: 1.ಸಿಂಧೂ ಆಚೆಗಿನ ಬಯಲು, 2.ಪೊಟ್ವಾರ್ ಪ್ರಸ್ತಭೂಮಿ, ಸಾಲ್ಟ್ ಶ್ರೇಣಿ ಮತ್ತು 4.ಸಿಯಾಲ್‍ಕೋಟ್ ಜಿಲ್ಲೆ. 1. ಸಿಂಧು ಆಚೆಗಿನ ಬಯಲು : ಈ ಪ್ರದೇಶ ಸಿಂಧೂ ನದಿಯ ಪಶ್ಚಿಮಕ್ಕಿರುವ ಪೇಷಾವರ್ ಕಣಿವೆ, ಕೊಹಾಟ್ ಬಯಲು, ಬನ್ನು ಪ್ರಸ್ಥಭೂಮಿ ಇವನ್ನೊಳಗೊಂಡಿದೆ. ಇವುಗಳಲ್ಲಿ ಪೇಷಾವರ್ ಮತ್ತು ಮರ್ಧನ್ ಜಿಲ್ಲೆಗಳನ್ನೊಳಗೊಂಡ ಪೇಷಾವರ್ ಕಣಿವೆ ಅತ್ಯಂತ ಫಲವತ್ತಾದ ವಲಯ. ಇಲ್ಲಿಯ ಹೆಚ್ಚು ಭಾಗ ಒಣಪ್ರದೇಶ. ಇದು ಕುರುಚಲು ಕಾಡುಗಳಿಂದ ಮತ್ತು ತೆಳುಹುಲ್ಲು ನೆಲದಿಂದ ಕೂಡಿದೆ. ಇಲ್ಲಿಯ ಭೂಮಿ ಸಾಮಾನ್ಯವಾಗಿ 305-366 ಮೀ. ಎತ್ತರವಾಗಿದೆ. ಈಚೆಗೆ ವ್ಯಾಪಕ ನೀರಾವರಿ ಯೋಜನೆಯಿಂದ ಲಕ್ಷಾಂತರ ಎಕರೆಗಳು ಸಾಗುವಳಿಯಾಗಿವೆ. ಪೇಷಾವರ್ ಕಣಿವೆಗಿಂತ ಸ್ವಲ್ಪ ಎತ್ತರದಲ್ಲಿರುವ ಕೋಹಾಟ್ ಪ್ರದೇಶದಲ್ಲಿ ಅಲ್ಲಲ್ಲಿ ಸುಣ್ಣದ ಕಲ್ಲಿನ ಏಣುಗಳುಂಟು. ಈ ಪ್ರದೇಶ ಏರುತಗ್ಗಾಗಿದೆ. ಅಲ್ಲಲ್ಲಿ ಹೊಳೆಗಳಿಂದ ಕಣಿವೆಗಳುಂಟಾಗಿದೆ. ಇವು ಆಳದಲ್ಲಿ ಹರಿಯುವುದರಿಂದ ನೀರಾವರಿಗೆ ಅನುಕೂಲವಾಗಿಲ್ಲ. ಮಳೆ ಸುಮಾರು 406 ಮಿ.ಮೀ. ಕೋಹಾಟ್ ಬಯಲಿನ ದಕ್ಷಿಣಕ್ಕಿರುವ ಬನ್ನು ಬಯಲು ಹೆಚ್ಚಾಗಿ ಗುಡ್ಡ ಬೆಟ್ಟಗಳಿಂದ ಕೂಡಿದೆ. ಕೆಲವೆಡೆ ಗೋಡುಮಣ್ಣಿರುವುದನ್ನು ಬಿಟ್ಟರೆ ಉಳಿದಂತೆ ನೆಲ ಮರಳು ಅಥವಾ ಪುಡಿಗಲ್ಲಿನಿಂದ ಕೂಡಿದ್ದು, ವಾರ್ಷಿಕ ಮಳೆ ಸುಮಾರು 279 ಮಿ.ಮೀ ಮಾತ್ರ. 2.ಪೊಟ್ವಾರ್ ಪ್ರಸ್ಥಭೂಮಿ : ಇದು ಸಿಂಧೂ ನದಿಯ ಪೂರ್ವಕ್ಕೆ ಪಂಜಾಬಿನಲ್ಲಿದೆ. ಇದು ಸುಮಾರು 12,800 ಚ.ಕಿಮೀ ವಿಸ್ತಾರವಾಗಿದೆ. ಇದರ ಎತ್ತರ 366 ಮೀ-579 ಮೀ. ಏರುತಗ್ಗುಗಳಿರುವ ಈ ಬಯಲಿನಲ್ಲಿ ಮರಳುಕಲ್ಲು ಹೆಚ್ಚು. ಗಾಳಿಯಿಂದ ಅಲ್ಲಲ್ಲಿ ವಿವಿಧ ಪ್ರಮಾಣದಲ್ಲಿ ಬಂಕೆ ಮಣ್ಣು ಮತ್ತು ಜೇಡುಮಣ್ಣುಗಳು ಸಂಗ್ರಹವಾಗಿವೆ. ಇಲ್ಲಿ 381-635 ಮಿಮೀ ಮಳೆಯಾಗುತ್ತದೆ. ಮಳೆಗಾಲದಲ್ಲಿ ತೊರೆಗಳು ಭೂಮಿಯನ್ನು ಕೊರೆದು ಮಣ್ಣನ್ನು ಕೊಚ್ಚುತ್ತವೆ. ವ್ಯವಸಾಯಕ್ಕೆ ನೆಲ ಅಷ್ಟು ಅನುಕೂಲಕರವಾಗಿಲ್ಲ. ಇಲ್ಲಿ ಸೋವಾನ್ ನದಿ ಹರಿಯುತ್ತದೆ. 3.ಸಾಲ್ಟ್ ಶ್ರೇಣಿ : ಇದು ಪೊಟ್ವಾರ್ ಪ್ರಸ್ಥಭೂಮಿಯಲ್ಲಿ ದಕ್ಷಿಣಕ್ಕೆ ಮತ್ತು ಪಂಜಾಬ್ ಬಯಲುಗಳ ಉತ್ತರಕ್ಕೆ ಇದೆ. ಇಲ್ಲಿಯ ನೆಲದ ಸರಾಸರಿ ಎತ್ತರ ಸಮುದ್ರಮಟ್ಟದಿಂದ 670 ಮೀ. ಇಲ್ಲಿಯ ಅತ್ಯುನ್ನತ ಶಿಖರ ಸಕೆಸರ್‍ನ ಎತ್ತರ 1,500 ಮೀ. ಉಪಪರ್ವತ ವಲಯ ಮತ್ತು ಸಿಂಧೂ ಬಯಲನ್ನು ಪ್ರತ್ಯೇಕಿಸಿರುವ ಈ ಎತ್ತರ ಪ್ರದೇಶ ತೀರ ಬರಡು. ಸಿಂಧೂ ನದಿಯ ಉಪನದಿಗಳು ಹರಿಯುವ ಈ ಪ್ರದೇಶದಲ್ಲಿ ನೆರೆಯ ಬಯಲುಗಳಿವೆ. ಹಳೆಯ ಕಾಲದ ಕಾಲುವೆಗಳಿವೆ. ಪ್ರವಾಹಗಳ ಕೊರೆತದಿಂದಾಗಿ ತಗ್ಗುದಿಣ್ಣೆಗಳು ಹುಟ್ಟಿಕೊಂಡಿವೆ. ಕೆಲವು ರಮಣೀಯ ಸರೋವರಗಳಿವೆ. ಸಸ್ಯವರ್ಗ ವಿರಳ. 4. ಸಿಯಾಲ್‍ಕೋಟ್ ಜಿಲ್ಲೆ : ಇದು ಈಶಾನ್ಯ ಭಾಗದ ಕಿರಿದಾದ ಉಪಪರ್ವತ ವಲಯ. ಭಾರತದ ಸರಹದ್ದಿನಲ್ಲಿರುವ ಈ ಜಿಲ್ಲೆ ಫಲವತ್ತಾದ ವ್ಯವಸಾಯ ಪ್ರದೇಶ. ಇಲ್ಲಿ ಮಣ್ಣಿನ ಸವೆತ ಹೆಚ್ಚು. ಭೂಗರ್ಭಜಲ ಸಂಪನ್ಮೂಲ ಯಥೇಚ್ಛವಾಗಿದೆ. ಸಾಂದ್ರ ವ್ಯವಸಾಯ ರೂಢಿಯಲ್ಲಿದೆ. ಜನಸಾಂದ್ರತೆ ಅಧಿಕ, ಸುಮಾರು 650ರಿಂದ 900 ಮಿಮೀ ವರೆಗೆ ಮಳೆಯಾಗುತ್ತದೆ. ಸಿಂಧೂ ಬಯಲು ಪಟ್ವಾರ್ ಪ್ರಸ್ಥಭೂಮಿಯ ಅಂಚಿನಿಂದ ದಕ್ಷಿಣಕ್ಕೆ ಅರಬ್ಬಿ ಸಮುದ್ರದವರೆಗೂ ಈ ಪ್ರದೇಶ ಹಬ್ಬಿದೆ. ಇದು ಫಲವತ್ತಾದ ಮೆಕ್ಕಲು ಮಣ್ಣಿನಿಂದ ಕೂಡಿದ್ದು, ಇದನ್ನು ಉತ್ತರ ವಲಯ ಮತ್ತು ದಕ್ಷಿಣ ವಲಯ ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಉತ್ತರದಲ್ಲಿ ಸಿಂಧೂ ಮತ್ತು ಅದರ ಉಪನದಿಗಳು ಈ ಬಯಲನ್ನು ಸೀಳಿಕೊಂಡು ಹರಿಯುತ್ತವೆ. ನದಿಗಳ ನಡುವೆ ಭೂಮಿ ಎತ್ತರವಾಗಿದೆ. ಅಲ್ಲಲ್ಲಿ ಮರಳುದಿಣ್ಣೆಗಳಾಗಿವೆ. ಪಂಜಾಬ್ ಪ್ರದೇಶದಲ್ಲಿ ಹರಿಯುವ ಐದು ನದಿಗಳು ಒಂದಾಗಿ ಸೇರಿ ಮಿಥಾನ್‍ಕೋಟ್ ಬಳಿ ಸಿಂಧೂನದಿಯೊಡನೆ ಸಂಗಮಿಸುತ್ತವೆ. ಈ ನದಿಗಳಿಂದಾಗಿರುವ ದೋಆಬ್‍ಗಳ ಪೈಕಿ ಅತ್ಯಂತ ದೊಡ್ಡದು ಸಿಂಧ್ ಸಾಗರ್. ಅದು ಸಿಂಧೂ ಮತ್ತು ಚೀನಾಬ್ ನದಿಗಳ ನಡುವಿನ ಇತರ ಉಪನದಿಗಳ ನಡುವೆ ಇರುವ ದೋಆಬ್‍ಗಳು ಫಲವತ್ತಾಗಿವೆ. ಆಧುನಿಕ ನೀರಾವರಿ ವ್ಯವಸ್ಥೆಯಿಂದಾಗಿ ಈ ಬಯಲು ಪಾಕಿಸ್ತಾನದ ಅತ್ಯಂತ ಸಂಪದ್ಭರಿತ ವ್ಯವಸಾಯ ಕ್ಷೇತ್ರವಾಗಿದೆ. ಸಿಂಧೂ ಬಯಲಿನ ದಕ್ಷಿಣ ವಲಯ ಸಿಂಧ್ ಪ್ರಾಂತ್ಯದಲ್ಲಿದೆ. ಪಶ್ಚಿಮಕ್ಕೆ ಕಿರ್ತಾರ್ ಮತ್ತು ಸುಲೇಮಾನ್ ಪರ್ವತಶ್ರೇಣಿಗಳು, ಪೂರ್ವಕ್ಕೆ ಭಾರತದ ಥಾರ್ ಮರುಭೂಮಿ ವಲಯ ಇವು ಇದರ ಮೇರೆಗಳು. ಇಲ್ಲಿ ಭೂಮಿ ಸಡಿಲವಾಗಿದೆ. ಸಿಂಧೂ ನದಿ ಇಲ್ಲಿ ಆಗಾಗ ಪಾತ್ರ ಬದಲಾಯಿಸುತ್ತದೆ. ಮರಳಿನಿಂದ ಕೂಡಿದ ಈ ವಿಸ್ತಾರವಾದ ಬಯಲಿನಲ್ಲಿ ಫಲವತ್ತಾದ ಮರಳು ಮತ್ತು ಜೇಡಿಮಣ್ಣು ಹೆಚ್ಚು. ಸಿಂಧೂನದಿ ಕಣಿವೆಯಲ್ಲಿ ಮೃದುವಾದ ಕೆಂಪು ಮಿಶ್ರಿತ ಹಾಗೂ ಜೇಡಿ ಮರಳು ಮಿಶ್ರಿತ ಮಣ್ಣಿದೆ. ಇಲ್ಲಿ ಎತ್ತರದ ಶಿಖರಗಳುಂಟು. ಪರ್ವತವಲಯ ಬರಡು ನೆಲ. ಪೂರ್ವದಲ್ಲಿರುವ ಮರುಭೂಮಿಗಳು ತಗ್ಗಾದ ಮರಳು ದಿಣ್ಣೆಗಳಿಂದಲೂ ಸಮತಟ್ಟು ಬಯಲುಗಳಿಂದಲೂ ಕೂಡಿವೆ. ಸಿಂಧೂ ನದಿಯ ಪಶ್ಚಿಮಕ್ಕಿರುವ ಮಾಂಛಾರ್ ಜೌಗು ಸರೋವರ ಸಂಪೂರ್ಣವಾಗಿ ನೀರಿನಿಂದ ತುಂಬಿದಾಗ 518 ಚ.ಕಿಮೀಗಳಷ್ಟು ವಿಸ್ತಾರವಾಗಿರುತ್ತದೆ. ದಕ್ಷಿಣ ಏಷ್ಯದಲ್ಲಿ ಇದು ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ. ಸಿಂಧೂ ನದಿಯ ಮುಖಜಭೂಮಿ ಅನೇಕ ಕಿಮೀ ಗಳಷ್ಟು ಅಗಲವಾಗಿದೆ. ಮುಖಜಭೂಮಿಯ ದಕ್ಷಿಣ ತೀರದಲ್ಲಿ ಸಮುದ್ರದ ಅಲೆಗಳು ಮತ್ತು ನದೀ ಪ್ರವಾಹಗಳಿಂದಾಗಿ ಕೆಲವೊಮ್ಮೆ ನದಿಯಲ್ಲಿ ಹಿನ್ನೀರು 32 ಕಿಮೀ ಗಳಷ್ಟು ದೂರ ಒಳಪ್ರದೇಶದ ಕಡೆ ಏರಿ ನಿಲ್ಲುತ್ತದೆ. ಬಲೂಚಿಸ್ತಾನ ಪ್ರಸ್ಥಭೂಮಿ ಇದು ಸಿಂಧೂ ಬಯಲಿನಿಂದ ಪಶ್ಚಿಮಕ್ಕೆ ಕೋಡಿನಾಕಾರದಲ್ಲಿ ಮುಂಚಾಚಿ ಇರಾನಿನೊಂದಿಗೆ ಸಂಪರ್ಕಿಸುವ ವಿಸ್ತಾರ ಪ್ರದೇಶವನ್ನೊಳಗೊಂಡಿದೆ. ಈ ಪ್ರಸ್ಥಭೂಮಿಯನ್ನು ಪೂರ್ವದಲ್ಲಿ ಸುಲೇಮಾನ್ ಮತ್ತು ಕಿರ್ತಾರ್ ಶ್ರೇಣಿಗಳು ಸಿಂಧೂ ಬಯಲಿನಿಂದ ಬೇರ್ಪಡಿಸಿವೆ. ವಾಯವ್ಯಕ್ಕೆ ತೋಬಕಾಕರ್ ಮತ್ತು ಈಶಾನ್ಯಕ್ಕೆ ಗೋಮಲ್ ನದಿ ಇದರ ಪರಿಮಿತಿಗಳೆನ್ನಬಹುದು. ಪಶ್ಚಿಮಕ್ಕೆ ಇರಾನಿನ ಮಹಾಪ್ರಸ್ಥಭೂಮಿಯ ಭಾಗದಂತಿರುವ ಇದು ಪಾಕಿಸ್ತಾನದ ಗಡಿಯವರೆಗೂ ವ್ಯಾಪಿಸಿದೆ. ಪೂರ್ವದ ಕಿರ್ತಾರ್ ಮತ್ತು ಸುಲೇಮಾನ್ ಶ್ರೇಣಿಗಳು ಉತ್ತರ ದಕ್ಷಿಣವಾಗಿ ಹಬ್ಬಿದ್ದರೆ ದಕ್ಷಿಣ ತೀರಪ್ರದೇಶದ ಮಕ್ರಾನ್ ಬೆಟ್ಟಸಾಲು ಪೂರ್ವ-ಪಶ್ಚಿಮವಾಗಿ ಹಬ್ಬಿದೆ. ಕಾಕರ್ ಬೆಟ್ಟಸಾಲು ಈಶಾನ್ಯ-ನೈಋತ್ಯವಾಗಿ ವ್ಯಾಪಿಸಿದೆ. ಸುಲೇಮಾನ್ ಶ್ರೇಣಿಯಲ್ಲಿರುವ ತಖ್ತ್-ಇ-ಸುಲೇಮಾನ್ ಪರ್ವತದ ಎತ್ತರ 3.353 ಮೀ. ಉಳಿದೆಡೆ 1,829-2,134 ಮೀ. ಎತ್ತರದ ಶಿಖರಗಳು ಅಲ್ಲಲ್ಲಿವೆ. ಸುಲೇಮಾನ್ ಮತ್ತು ತೋಬಕಾಕರ್ ಶ್ರೇಣಿಗಳ ನಡುವೆ ಝೋಬ್ ಮತ್ತು ಬೆಜಿ ಉಪನದಿಗಳ ಜಲಾನಯನ ಪ್ರದೇಶಗಳಿವೆ. ಆಗ್ನೇಯದಲ್ಲಿರುವ ಕಿರ್ತಾರ್ ಶ್ರೇಣಿ ದಕ್ಷಿಣದಲ್ಲಿ 1,219 ಮೀಗಳಿಂದ ಹಿಡಿದು ಉತ್ತರದಲ್ಲಿ 2,438 ಮೀ. ವರೆಗೆ ಎತ್ತರವಾಗಿದೆ. ಕಿರ್ತಾರ್‍ನ ಉತ್ತರ ವಲಯದ ಅತ್ಯಂತ ಎತ್ತರದ ಭಾಗವಾದ ಮತ್ತು ಬಲೂಚಿಸ್ತಾನ ಪ್ರಸ್ಥಭೂಮಿಯ ಮಧ್ಯದಲ್ಲಿರುವ ಕಲಾತ್ ಪೀಠಭೂಮಿಯ ಎತ್ತರ 2,134,-2,438 ಮೀ. ಪಶ್ಚಿಮದ ಸೀಯಾಹಾನ್ ಶ್ರೇಣಿ ಮತ್ತು ವಾಯವ್ಯದ ಜಾಗೈ ಬೆಟ್ಟಗಳ ಕಡೆ ಭೂಮಿಯ ಎತ್ತರ ಕಡಿಮೆಯಾಗುತ್ತ ಹೋಗಿದೆ. ಇಲ್ಲಿ ಸಮತಟ್ಟಾದ ಮರುಭೂಮಿ ಬಯಲುಗಳಿವೆ. ಪಶ್ಚಿಮದ ಬೋಲಾನ್ ಮತ್ತು ಖೋಜಾಕ್ ಕಣಿವೆಗಳಿಂದಾಗಿ ಮೇಲಣ ಪ್ರಸ್ಥಭೂಮಿಯಿಂದ ಕೆಳಗಿನ ಪ್ರಸ್ಥಭೂಮಿ ಬೇರ್ಪಟ್ಟಿದೆ. ಬಲೂಚಿಸ್ಥಾನ ಪ್ರಸ್ಥಭೂಮಿ ಅತ್ಯಂತ ಬರಡು ಪ್ರದೇಶ. ಇಲ್ಲಿ ಜನಸಾಂದ್ರತೆ ಬಲು ವಿರಳ. ಇದು ಇಡೀ ಪಾಕಿಸ್ತಾನದಲ್ಲೇ ತೀರ ಕಡಿಮೆ. ವ್ಯವಸಾಯಕ್ಕೆ ಅಷ್ಟು ಯೋಗ್ಯವಲ್ಲದ ಈ ಪ್ರದೇಶದಲ್ಲಿ ಪ್ರಾಣಿಗಳನ್ನು ಸಾಕುವುದು ಮುಖ್ಯ ಕಸುಬು. ಪಶ್ಚಿಮ ಸರಹದ್ದಿನ ಪರ್ವತಗಳು ಇವು ಬಲೂಚಿಸ್ತಾನ ಪ್ರಸ್ಥಭೂಮಿಯ ಉತ್ತರಕ್ಕಿರುವ ಗೋಮಲ್ ನದಿಯಿಂದ ಮುಂದೆ ಆಫ್ಘಾನಿಸ್ತಾನದ ಗಡಿಯ ಉದ್ದಕ್ಕೂ ಹಿಂದೂಕುಷ್ ಪರ್ವತಶ್ರೇಣಿಯ ಬುಡದವರೆಗೆ ವ್ಯಾಪಿಸಿದೆ. ಹಿಂದೂಕುಷ್‍ನ ಎತ್ತರ ಪರ್ವತ ವಲಯದ ದಕ್ಷಿಣಕ್ಕೆ ಕಾಬೂಲ್ ನದಿಯವರೆಗೂ ಈಶಾನ್ಯ-ನೈಋತ್ಯಾಭಿಮುಖವಾಗಿ ಪರ್ವತ ಸಾಲುಗಳು ಹಬ್ಬಿವೆ. ಕಾಬೂಲ್ ನದಿಯ ಉತ್ತರಕ್ಕೆ ಮತ್ತು ಸ್ವಾಟ್ ನದಿಯ ಪಶ್ಚಿಮಕ್ಕೆ 1,524-1,829 ಮೀ. ಎತ್ತರವಿರುವ ಮೊಹಮಂಡ್ ಬೆಟ್ಟಗಳಿವೆ. ಸ್ವಾಟ್ ನದಿಯ ಪೂರ್ವಕ್ಕಿರುವ ಮಾಲಕಂಡ್ ಶ್ರೇಣಿಸ್ವಾಟ್ ಕಣಿವೆಯನ್ನು ಪೆಷಾವರ್ ಕಣಿವೆಯಿಂದ ಬೇರ್ಪಡಿಸುತ್ತದೆ. ಕಾಬೂಲ್ ನದಿಯ ದಕ್ಷಿಣದಲ್ಲಿರುವ ಸಾಕರಮ್ ಆ ಪ್ರದೇಶದ ಅತ್ಯಂತ ಎತ್ತರವಾದ ಶಿಖರ (4,761 ಮೀ). ಕಾಬೂಲ್ ನದಿಯತ್ತ ಹಬ್ಬಿರುವ ಕಿರಿಯ ಬೆಟ್ಟಸಾಲುಗಳ ದಕ್ಷಿಣದಲ್ಲಿ ಆಫ್ಘಾನಿಸ್ತಾನದ ಗಡಿಯ ಬಳಿ ಇತಿಹಾಸಪ್ರಸಿದ್ಧ ಖೈಬರ್ ಕಣಿವೆ ಇದೆ. ಕಾಬೂಲ್ ನದಿಯ ದಕ್ಷಿಣಕ್ಕೆ ಸಫೆದ್‍ಕೋ ಶ್ರೇಣಿ ಹಬ್ಬಿದೆ. ಸಫೆದ್‍ಕೋ ಶ್ರೇಣಿಯ ಗರಿಷ್ಠ ಎತ್ತರ 4,761 ಮೀ. ಈ ಶ್ರೇಣಿಯನ್ನು ಮೇಲಿನ ಕುರ್ರಮ್ ಕಣಿವೆಯಲ್ಲಿ ಹಬ್ಬಿರುವ, ನೈಋತ್ಯ ಬೆಟ್ಟಸಾಲುಗಳು ತುಂಡರಿಸುತ್ತವೆ. ಖೈಬರ್ ಮತ್ತು ಬೋಲಾನ್ ಕಣಿವೆಗಳ ಮಧ್ಯೆ ಗೋಮಲ್ ಕಣಿವೆ ಇದೆ. ಈ ವಲಯದಲ್ಲಿ ಗೋಮಲ್, ತೋಚಿ ಮತ್ತು ಕುರ್ರಂ ನದಿಗಳು ಹರಿಯುತ್ತವೆ. ಒಟ್ಟಿನಲ್ಲಿ ಪಶ್ಚಿಮ ಸರಹದ್ದು ಪರ್ವತಗಳ ವಲಯ ಕಣಿವೆಗಳಿಂದಲೂ ಮತ್ತು ಪರ್ವತ ಸಾಲುಗಳಿಂದಲೂ ಕೂಡಿದೆ. ಮಾನ್‍ಸೂನ್ ವಲಯದ ಹೊರಗಿರುವ ಈ ಪ್ರದೇಶದಲ್ಲಿ ಮಳೆ ಕಡಿಮೆ. ಸರಾಸರಿ 304-635 ಮಿಮೀ. ಇಲ್ಲಿ ಸಸ್ಯ ಜೀವನ ಸಮೃದ್ಧವಾಗಿಲ್ಲ. ಕಣಿವೆಗಳಲ್ಲಿ ನದಿಗಳ ದಡಗಳಲ್ಲಿ ಇಳಿಜಾರು ತಟ್ಟುಗಳನ್ನು ಮಾಡಿರುವಲ್ಲಿ ಮತ್ತು ಬೆಟ್ಟಗಳ ತಪ್ಪಲಲ್ಲಿ ಮಾತ್ರ ವ್ಯವಸಾಯ ಸಾಧ್ಯ. ಪ್ರಾಣಿ ಸಾಕಣೆ ಮುಖ್ಯ ಕಸಬು. ಹೇಸರಗತ್ತೆ ಇಲ್ಲಿಯ ಮುಖ್ಯ ಹೇರು ಪ್ರಾಣಿ. ಮರುಭೂಮಿ ಪ್ರದೇಶಗಳು, ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ ಪೂರ್ವ-ಪಶ್ಚಿಮವಾಗಿ ಅಲ್ಲಲ್ಲಿ ಕಿರು ಮರುಭೂಮಿಗಳಿವೆ. ಅವುಗಳಲ್ಲಿ ಸಿಂಧ್ ಸಾಗರ್ ದೋಆಬ್ ಮುಖ್ಯವಾದ್ದು. ಅದರ ಮಧ್ಯದಲ್ಲಿರುವ ಥಾಲ್ ಶುದ್ಧ ಮರುಭೂಮಿಯ ಲಕ್ಷಣಗಳಿಂದ ಕೂಡಿದೆ. ಭಾವಲ್‍ಪುರದ ಚೊಲಿಸ್ತಾನ ಇನ್ನೊಂದು ದೊಡ್ಡ ಮರುಭೂಮಿ. ಇನ್ನೂ ದಕ್ಷಿಣಕ್ಕೆ ಸಿಂಧ್ ಪ್ರಾಂತ್ಯದಲ್ಲಿ ಥಾರ್ ಮರುಭೂಮಿ ಇದೆ. ಇದು ಪಶ್ಚಿಮ ಭಾರತದ ಥಾರ್ ಮರುಭೂಮಿಯ ವಿಸ್ತøತ ಪ್ರದೇಶ. ಬಲೂಚಿಸ್ಥಾನದ ಪಶ್ಚಿಮಭಾಗದಲ್ಲೂ ಮರುಭೂಮಿಗಳಿವೆ. ನದಿಗಳು ಪಾಕಿಸ್ತಾನದ ಬಹುಭಾಗ ಮರಳು ಬಯಲು ಮತ್ತು ಬರಡು ಪ್ರದೇಶದಿಂದ ಕೂಡಿದ್ದರೂ ಪ್ರಪಂಚದಲ್ಲೇ ಅಸಾಧಾರಣವೆನ್ನುವಂತೆ ಇಲ್ಲಿ ಅನೇಕ ನದಿಗಳು ತುಂಬಿ ಹರಿಯುತ್ತವೆ. ಹಿಂದೂಕುಷ್ ಮತ್ತು ಹಿಮಾಲಯ ಪರ್ವತ ವಲಯಗಳು ಇಲ್ಲಿಯ ನದಿಗಳಿಗೆ ಸತತವಾಗಿ ಜಲವನ್ನೂಡಿಸುತ್ತವೆ. ಸಿಂಧೂ ಮತ್ತು ಅದರ ಉಪನದಿಗಳು ಬಹುಮಟ್ಟಿಗೆ ಪಾಕಿಸ್ತಾನದ ಸಮಗ್ರ ನದಿ ವ್ಯವಸ್ಥೆಯಾಗಿ ಪರಿಣಮಿಸಿವೆ. ಸಿಂಧೂ ನದಿ ಟಿಬೆಟ್‍ನಲ್ಲಿ ಹುಟ್ಟಿ ವಾಯವ್ಯಾಭಿಮುಖವಾಗಿ ಕಾಶ್ಮೀರವನ್ನು ಹಾಯುತ್ತದೆ. ಅಲ್ಲಿಯ ಕಾರಕೋರಂ ಶ್ರೇಣಿಯಲ್ಲಿ ಬೃಹತ್ ನೀರ್ಗಲ್ಲ ಹೊಳೆಗಳನ್ನು ಕೂಡಿಕೊಂಡು ದಕ್ಷಿಣಾಭಿಮುಖವಾಗಿ ತಿರುಗಿ ಪಾಕಿಸ್ತಾನವನ್ನು ಈಶಾನ್ಯ ಭಾಗದಲ್ಲಿ ಪ್ರವೇಶಿಸುತ್ತದೆ. ಒಟ್ಟು 2,900 ಕಿಮೀಗಳ ಉದ್ದವಿರುವ ಈ ನದಿ ಬೆಟ್ಟ ಗುಡ್ಡಗಳ ಮಧ್ಯೆ ವೇಗವಾಗಿ ಹರಿದು ಮುಂದೆ ತರ್ಬೆಲ ಅಣೆಕಟ್ಟು ಪ್ರದೇಶವನ್ನು ದಾಟುತ್ತದೆ. ಅಟ್ಟಾತ್‍ಗೆ ಸ್ವಲ್ಪ ಮೇಲ್ಭಾಗದಲ್ಲಿ ಆಫ್ಘಾನಿಸ್ತಾನದಿಂದ ಹರಿದು ಬರುವ ಕಾಬೂಲ್ ನದಿ ಸಿಂಧೂ ನದಿಯನ್ನು ಕೂಡುತ್ತದೆ. ಇದು ಕಾಲಾಬಾಗ್ ಬಳಿ ಸಾಲ್ಟ್ ಶ್ರೇಣಿಯನ್ನು ಸೀಳಿಕೊಂಡು ಪಂಜಾಬಿನ ಬಯಲನ್ನು ಪ್ರವೇಶಿಸುತ್ತದೆ. ಸಿಂಧೂ ನದಿ ಪಂಜಾಬಿನ ಬಯಲಿಗೆ ಬರುವಾಗ ಮಂದಗಮನದಿಂದ ದೊಡ್ಡ ಪಾತ್ರದಲ್ಲಿ ತುಂಬಿ ಹರಿಯುತ್ತದೆ. ಇಲ್ಲಿ ಅದಕ್ಕೆ ಪೂರ್ವದ ಕಡೆ ಝೀಲಂ, ಚೀನಾಬ್, ರಾವಿ, ಬೀಯಾಸ, ಸಟ್ಲೆಜ್ ಮೊದಲಾದ ಉಪನದಿಗಳು ಸೇರುತ್ತವೆ. ಇವು ಸೇರಿದ ಮೇಲೆ ಸಿಂಧೂ ಬೃಹತ್ ಸ್ವರೂಪ ತಳೆದು ಹರಿಯುತ್ತದೆ. ಪಾಕಿಸ್ತಾನದ ಪಶ್ಚಿಮಭಾಗದಲ್ಲಿ ಹರಿಯುವ ಸ್ವಾಟ್ ನದಿ ಸಿಂಧುವಿನ ಉಪ ನದಿಯಾದ ಕಾಬೂಲ್ ನದಿಯನ್ನು ಸೇರುತ್ತದೆ. ಪೂರ್ವ ಆಫ್ಘಾನಿಸ್ತಾನದಿಂದ ಹರಿದು ಬರುವ ಗೋಮಲ್ ನದಿ ಡೇರ ಇಸ್ಮೇಲ್ ಖಾನ್ ಬಳಿ ಸಿಂಧೂ ನದಿಯನ್ನು ಸೇರುತ್ತದೆ. ಇದರ ಮುಖ್ಯ ಉಪನದಿ ಝೂಬ್, ವಾಯವ್ಯ ಗಡಿ ಪ್ರಾಂತ್ಯದಲ್ಲಿ ಹರಿಯುವ ತೋಚಿ ನದಿ ಕುರ್ರಂ ನದಿಯೊಡಗೂಡಿ ಬನ್ನು ಪ್ರದೇಶದಲ್ಲಿ ಸಿಂಧೂ ನದಿಯನ್ನು ಸೇರುತ್ತದೆ. ಸಿಂಧ್ ಪ್ರಾಂತ್ಯದಲ್ಲಿ ಈ ನದಿ ತಗ್ಗಿನಲ್ಲಿ ನಿಧಾನವಾಗಿ ಹರಿಯುತ್ತದೆ. ಇದರಿಂದ ನದಿಯ ಪಾತ್ರದಲ್ಲಿ ಮೆಕ್ಕಲು ಮಣ್ಣು ಶೇಖರವಾಗಿ ಅದು ಮರಳು ಬಯಲಿಗಿಂತ ಎತ್ತರವಾಗಿದೆ. ನದಿ ಆಗಾಗ ಪಾತ್ರ ಬದಲಾಯಿಸುವುದರಿಂದ ಇಲ್ಲಿಯ ಬಯಲುಗಳ ಮೇಲ್ಮೈ ಸ್ವರೂಪದ ಮೇಲೆ ಪರಿಣಾಮವುಂಟಾಗುವುದಲ್ಲದೆ ಅಪಾರ ಹಾನಿ ತಟ್ಟುವುದುಂಟು. ಟಟ್ಟಾ ಬಳಿ ನದಿ ಕವಲೊಡೆದು ಕರಾಚಿಗೆ ದಕ್ಷಿಣದಲ್ಲಿ ಸಮುದ್ರ ಸೇರುತ್ತದೆ. ಪಾಕಿಸ್ತಾನದ ಉದ್ದಕ್ಕೂ ಕಾಲುವೆ ತೋಡಿದಂತೆ ಹರಿಯುವ ಸಿಂಧೂ ಮತ್ತು ಅದರ ಉಪನದಿಗಳು ಅಲ್ಲಿಯ ಜನಜೀವನದ ಮೇಲೆ ಅಗಾಧ ಪರಿಣಾಮ ಬೀರಿವೆ. ಈ ವಲಯದ ಹೊರಗಿರುವ ಬಲೂಚಿಸ್ತಾನದ ಪಶ್ಚಿಮ ಮತ್ತು ದಕ್ಷಿಣ ಭಾಗದ ಕೆಲವು ಸಣ್ಣ ನದಿಗಳು ಅರಬ್ಬಿ ಸಮುದ್ರವನ್ನು ಸೇರುತ್ತವೆ. ಅವುಗಳ ಪೈಕಿ ಹಿಂಗೋಲ್ ಅಥವಾ ನಾಲ್ ಮತ್ತು ದಷ್ತ್ ಮುಖ್ಯವಾದವು. ಇನ್ನು ಕೆಲವು ತೊರೆಗಳು ಪಶ್ಚಿಮಕ್ಕೆ ಹರಿದು ದೊಡ್ಡ ನೀರುದಾಣಗಳನ್ನು ಅಥವಾ ಜೌಗುಸರೋವರಗಳನ್ನು ನಿರ್ಮಿಸಿವೆ. ಮಣ್ಣು ಪಾಕಿಸ್ತಾನದ ಮಣ್ಣಿನ ಬಹುಭಾಗ ಒಣ ಮಣ್ಣಿನ ವರ್ಗಕ್ಕೆ ಸೇರಿದೆ. ಅದರಲ್ಲಿ ಕಾರ್ಬೊನೇಟ್ ಅಂಶ ಹೆಚ್ಚಿದ್ದು, ಜೈವಿಕ ವಸ್ತು ಕಡಿಮೆ ಪ್ರಮಾಣದಲ್ಲಿದೆ. ಇದು ಕಡಿಮೆ ಮತ್ತು ಅನಿಶ್ಚಿತ ಮಳೆ ಬೀಳುವ ಭೂಮಿಯ ಲಕ್ಷಣ. ಎತ್ತರದ ಪರ್ವತ ವಲಯದಲ್ಲಿ ಹೆಚ್ಚಾಗಿ ಸುಣ್ಣದಕಲ್ಲು ಮತ್ತು ಮರಳಗಲ್ಲು ಮಿಶ್ರಿತಮಣ್ಣು ಕಂಡುಬರುತ್ತವೆ. ಬನ್ನು ಪ್ರದೇಶದಲ್ಲಿ ಮೃದು ಮರಳು ಹರಡಿದೆ. ಡೇರ ಇಸ್ಮೇಲ್ ಖಾನ್ ಭಾಗದಲ್ಲಿ ಪುಡಿಗಲ್ಲು ಮತ್ತು ಮೆಕ್ಕಲು ಮಣ್ಣಿದೆ. ಹಾಗೂ ಸುಣ್ಣದಕಲ್ಲು ವ್ಯಾಪಿಸಿದೆ. ಸಿಯಾಲ್‍ಕೋಟ್ ಜಿಲ್ಲೆಯಲ್ಲಿ ಫಲವತ್ತಾದ ಮಣ್ಣುಂಟು. ಸಿಂಧೂ ಬಯಲಿನಲ್ಲಿ ಸಿಂಧೂ ನದಿ ಆಗಾಗ ಪಾತ್ರ ಬದಲಾಯಿಸುವುದರಿಂದ ಅಲ್ಲಿ ಕೆಲವು ಕಡೆ ಪ್ರವಾಹದ ಮೆಕ್ಕಲುಮಣ್ಣು ಹರಡಿದೆ. ಸಿಂಧ್‍ನ ಸಿಬಿ ಮತ್ತು ನಾರಾ ಪ್ರದೇಶಗಳಲ್ಲಿ ಸಸ್ಯಾಂಗವಿರುವ ಮತ್ತು ಗೊಬ್ಬರ ಮಣ್ಣಿರುವ ನೆಲವುಂಟು. ಥಾರ್ ಮರುಭೂಮಿ ಪ್ರದೇಶ ಮತ್ತು ಸಿಂಧ್ ಸಾಗರ್ ದೋಅಬ್‍ನ ಜೇಡು ಬೆರೆತ ಮರಳು ಮಣ್ಣಿನಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಅಂಶ ಗಣನೀಯವಾಗಿದೆ. ಸಿಂಧ್‍ನ ತೀರಪ್ರದೇಶದಲ್ಲಿ ಮತ್ತು ಜೌಗು ಹಾಗೂ ಸರೋವರಗಳ ದಡದಲ್ಲಿ ಲವಣಮಿಶ್ರಿತ ಮಣ್ಣುಂಟು. ಮರುಭೂಮಿ ಪ್ರದೇಶಗಳಲ್ಲಿ ಮತ್ತು ಬಲೂಚಿಸ್ತಾನದ ಬಹುಭಾಗದಲ್ಲಿ ಗಾಳಿಯಿಂದ ತೂರಿಬಂದ ಪುಡಿಮಣ್ಣಿನ ಶೇಖರಣೆಗಳಿವೆ. ಅದು ಬಂಕೆ ಮಣ್ಣು ಅಥವಾ ಬಂಕೆ ಮಣ್ಣು ಮಿಶ್ರಿತ ಮೆಕ್ಕಲುಮಣ್ಣಿನಿಂದ ಕೂಡಿದೆ. ವಿಸ್ತಾರ ಪ್ರದೇಶಗಳಲ್ಲಿ ಶುದ್ಧ ಮರಳು ಇದೆ. ಪಾಕಿಸ್ತಾನದಲ್ಲಿ ನದಿ ಕಣಿವೆಗಳು ಮತ್ತು ಬೆಟ್ಟದ ತಪ್ಪಲುಗಳನ್ನು ಬಿಟ್ಟರೆ ಉಳಿದ ಎಡೆ ಇರುವ ಮಣ್ಣು ವ್ಯವಸಾಯಕ್ಕೆ ಅಷ್ಟು ಉತ್ಕøಷ್ಟವಾಗಿಲ್ಲ. ಹೊಸ ಮಣ್ಣಿನಲ್ಲಿ ನೀರಾವರಿ ಬೆಳೆ ಸಾಗುವಳಿ ಮಾಡಿದಾಗ ಉತ್ತೇಜನಕಾರಕ ಫಲ ದೊರೆತಿದೆ. ಮಣ್ಣು ಸಂರಕ್ಷಣೆ ಮತ್ತು ನೀರಾವರಿ ಯೋಜನೆಗಳು ಇಲ್ಲಿಯ ನೆಲದ ಉಪಯುಕ್ತತೆಯನ್ನು ಹೆಚ್ಚಿಸಿವೆ. ವಾಯುಗುಣ ಪಾಕಿಸ್ತಾನ ಕರ್ಕಾಟಕ ಸಂಕ್ರಾಂತಿ ವೃತ್ತದ ಉತ್ತರಕ್ಕೆ ಏಷ್ಯದ ಮುಖ್ಯ ಭೂ ಭಾಗದಲ್ಲಿ ಬರುವುದರಿಂದ ಇಲ್ಲಿಯದು ಖಂಡಾಂತರ ಲಕ್ಷಣದ ವಾಯುಗುಣ, ಇದರ ಗಣನೀಯಭಾಗ ಮಾನ್‍ಸೂನ್ ಮಾರುತವಲಯಕ್ಕೆ ಸೇರಿದ್ದರೂ ಉಪಖಂಡದ ಇತರ ಭಾಗಗಳಿಗೆ ಹೋಲಿಸಿದರೆ ಇಲ್ಲಿ ಮಳೆ ತುಂಬ ಕಡಿಮೆ. ಹಿಮಾಲಯದ ದಕ್ಷಿಣದ ಇಳಿಜಾರು ಮತ್ತು ಉಪಪರ್ವತ ವಲಯದಲ್ಲಿ ಸರಾಸರಿ 750-900 ಮಿಮೀ. ಮಳೆಯಾಗುತ್ತದೆ. ಪಟ್ವಾರ್ ಪ್ರಸ್ಥಭೂಮಿಯಲ್ಲಿ 500 ಮಿಮೀ. ಮಳೆಯಾಗುತ್ತದೆ. ಅಲ್ಲಿಂದ ದಕ್ಷಿಣಕ್ಕೆ ಬಹು ಬರಡು ಪ್ರದೇಶವಿದೆ. ಗುಡ್ಡಗಾಡಿನಲ್ಲಿ 50.8 ರಿಂದ 406.4 ಮಿಮೀ ವರೆಗೆ ಮಳೆ ಬಿದ್ದರೆ, ತೀರ ಪ್ರದೇಶದಲ್ಲಿ 101.6 ರಿಂದ 279.4 ಮಿಮೀ ವರೆಗೆ ಮಳೆ ಬೀಳುತ್ತದೆ. ಸಿಂಧ್‍ನ ಪಶ್ಚಿಮಭಾಗದಲ್ಲಿ ಮತ್ತು ಜಾಕೋಬಾದ್‍ನಲ್ಲಿ 127 ಮಿಮೀ ಗಿಂತ ಕಡಿಮೆ ಮಳೆಯಾಗುತ್ತದೆ. ಪಾಕಿಸ್ತಾನದ ಬಹುಭಾಗ ಒಣಪ್ರದೇಶ. ಪಾಕಿಸ್ತಾನದ ಶ್ರಾಯೀಣ ಮತ್ತು ದೈನಿಕ ಉಷ್ಣತೆಗಳಲ್ಲಿ ತೀವ್ರ ವ್ಯತ್ಯಾಸಗಳಾಗುತ್ತದೆ. ವಿಶೇಷವಾಗಿ ಸಿಂಧ್ ಪ್ರದೇಶದಲ್ಲಿ ಬೇಸಗೆಯಲ್ಲಿ ಉಷ್ಣತೆ ಗರಿಷ್ಠ ಮಟ್ಟ ಮುಟ್ಟುತ್ತದೆ. ಇಡೀ ಉಪಖಂಡದ ಗರಿಷ್ಠ ಉಷ್ಣತೆಯಾದ 52 ಡಿಗ್ರಿ ಸೆ. ಜಾಕೋಬಾದ್‍ನಲ್ಲಿ ದಾಖಲಾಗಿದೆ. ಬಲೂಚಿಸ್ತಾನ್ ಪ್ರಸ್ಥಭೂಮಿಯಲ್ಲಿ ಉಷ್ಣತೆ ಅಧಿಕ. ತೀರದ ಬಯಲುಗಳಲ್ಲಿ ಬೇಸಗೆಯಲ್ಲಿ ಆಗಾಗ ಉಷ್ಣತೆ 46 ಡಿಗ್ರಿ ಸೆ. ದಾಟುತ್ತದೆ. ದಿನದ ಉಷ್ಣತೆಯಲ್ಲಿ ತೀವ್ರ ವ್ಯತ್ಯಾಸಗಳು ಕಂಡುಬರುತ್ತವೆ. ಬೇಸಗೆಯಲ್ಲಿ ಹಗಲಿನಲ್ಲಿ ಬಯಲುಗಳ ಮೇಲೆ ಲೂ ಎಂಬ ಬಿಸಿಮಾರುತಗಳು ಬೀಸುತ್ತವೆ. ದೂಳಿನಿಂದ ಕೂಡಿದ ಬಿರುಗಾಳಿ ಬೀಸಿ ಸಿಡಿಲುಗುಡುಗು ಸಮೇತ ಮಳೆ ತರುವುದುಂಟು. ಇದರಿಂದ ತಾತ್ಕಾಲಿಕವಾಗಿ ಉಷ್ಣತೆ ಕಡಿಮೆಯಾಗುತ್ತದೆ. ಚಳಿಗಾಲ ತಂಪಾಗಿರುತ್ತದೆ. ಕಲಾಟೆ ಮತ್ತು ಕ್ವೆಟ್ಟಾಗಳಲ್ಲಿ ಸ್ವಲ್ಪ ಹಿಮ ಬೀಳುತ್ತದೆ. ಸಸ್ಯಜೀವನ ಕಿಸ್ತಾನದ ಉತ್ತರದ ಪರ್ವತಶ್ರೇಣಿಗಳನ್ನು ಬಿಟ್ಟರೆ ಉಳಿದೆಡೆ ಸಸ್ಯವರ್ಗ ಬಡವಾಗಿದೆ. ಎತ್ತರದ ಪರ್ವತದ ಇಳಿಜಾರುಗಳಲ್ಲಿ ಓಕ್ ಮತ್ತು ಪೈನ್ ಮರಗಳಿಂದ ಕೂಡಿದ ದಟ್ಟವಾದ ಕಾಡುಗಳಿವೆ. ಕುರುಚಲು ಕಾಡುಗಳಿರುವಲ್ಲಿ ಗಡುಸಾದ ನೀಳಹುಲ್ಲು ಮತ್ತು ಪೊದೆಗಳು ವ್ಯಾಪಿಸಿವೆ. ಪಂಜಾಬಿನ ಮರ್ರಿ ಬೆಟ್ಟಗಳಲ್ಲಿ ಉಪೋಷ್ಣ ವಲಯ ಮತ್ತು ಸಮಶೀತೋಷ್ಣ ವಲಯ ಕಾಡುಗಳಿವೆ. ಬಯಲುಗಳಲ್ಲಿ ದೊಡ್ಡ ಮರಗಳು ವಿರಳ. ಬಲೂಚಿಸ್ತಾನದಲ್ಲಿ ಮತ್ತು ಸಾಲ್ಟ್ ಶ್ರೇಣಿ ಹಾಗೂ ಪಶ್ಚಿಮ ಸರಹದ್ದಿನ ಪರ್ವತಗಳ ಸಸ್ಯವರ್ಗದಲ್ಲಿ ಬಹುಮಟ್ಟಿಗೆ ಜೀರೋಫೈಟಿಕ್ ಸಸ್ಯಗಳಿವೆ. ಇಲ್ಲಿ ಪಿಸ್ತಾ, ಆಲಿವ್, ಆಷ್, ವಿಲೋ ಮರಗಳಿವೆ. ಬೆಟ್ಟದ ಇಳಿಜಾರುಗಳಲ್ಲಿ ಜಾಲಿ ಜಾತಿಯ ಮರ ಮತ್ತು ಹುಲ್ಲು ಬೆಳೆದಿವೆ. ಸಿಂಧೂ ಕಣಿವೆಯಲ್ಲಿ ಜಾಲಿ ಜಾತಿ ಮರಗಳು ಮತ್ತು ಉಳಿದೆಡೆ ತಾಳೆ ಜಾತಿ ಮರಗಳು ಇವೆ. ಮೀಸಲು ಕಾಡುಗಳಲ್ಲಿ ಪ್ಲಾಂಟೇಷನ್‍ಗಳಿವೆ. ಕೆಲವೆಡೆ ಹಣ್ಣಿನ ಮರಗಳ ತೋಪುಗಳುಂಟು. ಮಾವು, ದ್ರಾಕ್ಷಿ ಸಸ್ಯಗಳಿವೆ. ಇತ್ತೀಚೆಗೆ ತಂದು ಬೆಳೆಸಿದ ಬಾಳೆ, ಕಿತ್ತಳೆ ವಿಶಿಷ್ಟ ಹಣ್ಣಿನ ಸಸ್ಯಗಳಾಗಿವೆ. ಗುಡ್ಡಗಳಲ್ಲಿ ಗಿಡಮೂಲಿಕೆ, ಗೆಡ್ಡೆಗಳು ಹೇರಳವಾಗಿವೆ. ಬಲೂಚಿಸ್ತಾನದಲ್ಲಿ ಕ್ಷಾಮಕಾಲದಲ್ಲಿ ಹುಲ್ಲುಬೀಜಗಳನ್ನು ತಿನ್ನುತ್ತಿದ್ದರು. ಸಿಂಧೂ ಮತ್ತು ಅದರ ಉಪನದಿಗಳಿಂದ ವ್ಯಾಪಕವಾಗಿ ನೀರಾವರಿ ನಡೆದಿರುವುದರಿಂದ ಬೋಳು ಬಯಲುಗಳಲ್ಲಿ ಕಬ್ಬು, ಗೋಧಿ, ಹತ್ತಿ ಮತ್ತು ಬತ್ತದ ಬೆಳೆಗಳು ವ್ಯಾಪಕವಾಗಿವೆ. ಪ್ರಾಣಿಜೀವನ ಎತ್ತರದ ಪರ್ವತಗಳಲ್ಲಿ ಕಾಡುಪ್ರಾಣಿಗಳು ಅಧಿಕ. ಕಂದು ಕರಡಿ, ಹಿಮಾಲಯದ ಕಪ್ಪು ಕರಡಿ, ಜಿಂಕೆ, ಹಿಮಸಾರಂಗ, ಸೈಬೀರಿಯನ್ ಕಾಡು ಮೇಕೆ ಮತ್ತು ವಿವಿಧ ತಳಿಗಳ ಕಾಡುಕುರಿಗಳು ಇವೆ. ಕೆಲವು ಕಾಡುಗಳಲ್ಲಿ ಜಿಂಕೆ, ಮುಳ್ಳುಹಂದಿ, ಕಾಡುಹಂದಿ, ತೋಳ, ನರಿ, ಕಾಡುಬೆಕ್ಕು ಮೊದಲಾದ ಪ್ರಾಣಿಗಳು ಮತ್ತು ಬಾವಲಿಗಳುಂಟು. ಸಿಂಧ್‍ನಲ್ಲಿರುವ ಮ್ಯಾಂಚಾರ್ ಸರೋವರದಲ್ಲಿ ಅಪಾರ ಸಂಖ್ಯೆಯಲ್ಲಿ ನೀರುಹಕ್ಕಿಗಳಿವೆ. ಕಾಡುಬಾತು, ಹೆಬ್ಬಾತು, ಮರಬಾತು, ಕೊಕ್ಕರೆ ಮೊದಲಾದ ದೊಡ್ಡ ಪಕ್ಷಿಗಳುಂಟು. ವಿವಿಧ ದಂಶಕ ಪ್ರಾಣಿಗಳು ಮತ್ತು ಉರಗಗಳು ದೇಶಾದ್ಯಂತ ಇವೆ. ಮಲಗಿದಾಗ ತನ್ನ ಬಲಿಯ ಉಸಿರೆಳೆದು ಕೊಲ್ಲುತ್ತದೆಂದು ನಂಬಲಾದ ಮಂಡಲದ ಹಾವು ಇದೆ. ಸಿಂಧೂ ನದಿಯ ಹಿನ್ನೀರಿನಲ್ಲಿ ಮತ್ತು ನಾರಾ ಕಾಲುವೆಯಲ್ಲಿ ಮೊಸಳೆಗಳುಂಟು. ಬಲೂಚಿಸ್ತಾನದ ಹಿಂಗಲ್ ನದಿಯ ಮೊಸಳೆಗಳಿವೆ. ನದಿಗಳಲ್ಲಿ ವಿಪುಲವಾಗಿ ಮೀನುಗಳುಂಟು. ಸಮುದ್ರದಲ್ಲಿ ತಿಮಿಂಗಿಲ, ಹಂದಿ ಮೀನು, ಷಾರ್ಕ್, ಸೋಲ್ ಸಾರ್ಡಿನ್ ಮೊದಲಾದ ಮೀನುಗಳಿವೆ. ಪಾಕಿಸ್ತಾನದಲ್ಲಿ ಪ್ರಾಣಿಗಳನ್ನು ಸಾಕುವುದು ಮುಖ್ಯ ಕಸಬುಗಳಲ್ಲೊಂದು. ದನ, ಎಮ್ಮೆ, ಕುರಿ, ಒಂಟೆ, ಕತ್ತೆ, ಕುದುರೆ, ಹೇಸರಗತ್ತೆ ಮೊದಲಾದವನ್ನು ಸಾಕುತ್ತಾರೆ. ಹೇಸರಗತ್ತೆ ಮತ್ತು ಎತ್ತುಗಳನ್ನು ಸಾಗಣೆಗೆ ಬಳಸುತ್ತಾರೆ. ಒಂಟೆಗಳನ್ನು ಸಂಚಾರಕ್ಕೆ ಮತ್ತು ಸಾಂದರ್ಭಿಕವಾಗಿ ಉಳುವುದಕ್ಕೆ ಬಳಸುತ್ತಾರೆ. ಆರ್ಥಿಕತೆ ಪಾಕಿಸ್ತಾನ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ, ಕೃಷಿಯೇ ಇದರ ಬೆನ್ನೆಲುಬು. ಕೃಷಿ ಕ್ಷೇತ್ರದಲ್ಲಿ ಅಪಾರವಾದ ಸಮಸ್ಯೆಗಳನ್ನೆದುರಿಸುತ್ತಿರುವ ಮತ್ತು ಕೈಗಾರಿಕೆಯಲ್ಲಿ ಹಿಂದುಳಿದಿರುವ ರಾಷ್ಟ್ರ ಪಾಕಿಸ್ತಾನ. ಪಾಕಿಸ್ತಾನದ ಜನಸಂಖ್ಯೆಯಲ್ಲಿ ಸೇ.25ರಷ್ಟು ಜನ ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ. ಉಳಿದ ಸೇ.75ರಷ್ಟು ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 20001ರ ಜನಗಣತಿಯ ಪ್ರಕಾರ, 1 ಲಕ್ಷ ಜನಸಂಖ್ಯೆಯನ್ನು ಮೀರಿದ 28 ಪಟ್ಟಣಗಳು ಪಾಕಿಸ್ತಾನದಲ್ಲಿದ್ದುವು. 1961ರಿಂದೀಚೆಗೆ ಪಟ್ಟಣಗಳಲ್ಲಿನ ಜನಸಂಖ್ಯೆ ವಿಪರೀತವಾಗಿ ಬೆಳೆಯುತ್ತ ಇದೆ. ಸರ್ಕಾರ ಕೈಗಾರಿಕೆಗೆ ನೀಡುತ್ತಿರುವ ಪ್ರೋತ್ಸಾಹ ಇದಕ್ಕೆ ಮುಖ್ಯ ಕಾರಣ. ವಿಶ್ವಸಂಸ್ಥೆಯ ಮಾಹಿತಿಯ ಪ್ರಕಾರ ಪಾಕಿಸ್ತಾನ ವಿಶ್ವದ ಅತ್ಯಂತ 20 ಬಡರಾಷ್ಟ್ರಗಳಲ್ಲಿ ಒಂದು. 1970ರಲ್ಲಿ ಈ ದೇಶದಲ್ಲಿಯ ಸರಾಸರಿ ತಲಾ ಆದಾಯ 140 ಡಾಲರ್‍ಗಳಷ್ಟಿತ್ತು. ಆರ್ಥಿಕತೆ ತೀವ್ರವಾಗಿ ಹಿಂದುಳಿದಿರುವ ಕೃಷಿ ಕ್ಷೇತ್ರವನ್ನು ಅವಲಂಬಿಸಬೇಕಾಗಿರುವುದರಿಂದ ಪಾಕಿಸ್ತಾನ ಬಡರಾಷ್ಟ್ರವಾಗಿಯೇ ಮುಂದುವರಿದಿದೆ. ಪಾಕಿಸ್ತಾನದ ಆರ್ಥಿಕ ಇತಿಹಾಸ ಆ ದೇಶದ ಕೃಷಿ ಕ್ಷೇತ್ರ ಹೇಗೆ ಸತತವಾಗಿ ಕಷ್ಟಗಳನ್ನೆದುರಿಸಬೇಕಾಯಿತು ಎಂಬುದನ್ನು ಪ್ರಕಟಿಸುತ್ತದೆ. ಮಳೆಯ ಅನಿಶ್ಚಯತೆ, ವಿಶ್ವಮಾರುಕಟ್ಟೆಯಲ್ಲಿ ಕೃಷಿ ವಸ್ತುಗಳ ಬೆಲೆ ಇಳಿತಾಯ ಇವು ಪಾಕಿಸ್ತಾನವನ್ನು ಕಷ್ಟಕ್ಕೆ ಸಿಲುಕಿಸಿದ ಮುಖ್ಯವಾದ ಅಂಶಗಳಾಗಿವೆ. ಕೃಷಿಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸಾರ್ವತ್ರಿಕವಾಗಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದಕ್ಕಾಗಿ ಪಾಕಿಸ್ತಾನ ಅನೇಕ ಪಂಚವಾರ್ಷಿಕ ಯೋಜನೆಗಳನ್ನು ಕೈಗೊಂಡು ಮುಗಿಸಿದೆ. ಆದರೆ ಈ ಯೋಜನೆಗಳೆಲ್ಲವೂ ಸಂಪೂರ್ಣವಾಗಿ ಯಶಸ್ಸನ್ನು ಸಾಧಿಸಿಲ್ಲ. ಹೀಗಾಗಿ ಪಾಕಿಸ್ತಾನದಲ್ಲೂ ಆರ್ಥಿಕ ಅಭಿವೃದ್ಧಿ ತುಂಬ ಮಂದಗತಿಯಿಂದ ಸಾಗಿದೆ. ಕೃಷಿ ಪಾಕಿಸ್ತಾನದ ಆರ್ಥಿಕತೆಯಲ್ಲಿ ಕೃಷಿಯೇ ಅತ್ಯಂತ ಪ್ರಧಾನವಾದ ಕ್ಷೇತ್ರ 1971-72ರಲ್ಲಿ ಕೃಷಿ, ಅರಣ್ಯ ಮತ್ತು ಮತ್ಸ್ಯ ಕ್ಷೇತ್ರ ಉತ್ಪನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ ಸೇ.41ರಷ್ಟು ಇತ್ತು. ದೇಶದ ಸೇ.80ರಷ್ಟು ಜನ ಕೃಷಿಯನ್ನೇ ಆಧರಿಸಿದ್ದಾರೆ. ವ್ಯವಸಾಯಕ್ಕೆ ಲಭ್ಯವಿರುವ ಭೂಮಿಯನ್ನು ಕುರಿತ ವಿವರಗಳನ್ನು ಕೋಷ್ಟಕ 1 ರಲ್ಲಿ ಕೊಟ್ಟಿದೆ. 1947ರ ಅನಂತರ ಕೃಷಿಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಸಾಧಿಸಲು ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಕೃಷಿ ಉತ್ಪನ್ನದ ಸೂಚ್ಯಂಕ 1948-49ರಲ್ಲಿ 89 ಇದ್ದದ್ದು 1974-75ರ ವೇಳೆಗೆ 186ನ್ನು ಮುಟ್ಟಿತ್ತು. ಆಹಾರ ಪದಾರ್ಥಗಳ ಉತ್ಪಾದನೆಯ ಸೂಚ್ಯಂಕ ಇದೇ ಅವಧಿಯಲ್ಲಿ 100ರಿಂದ 180ಕ್ಕೂ ಆಹಾರೇತರ ಕೃಷಿ ವಸ್ತುಗಳ ಉತ್ಪನ್ನದ ಸೂಚ್ಯಂಕ 100ರಿಂದ 178ಕ್ಕೂ ಏರಿವೆ. 1950ರ ದಶಕದಲ್ಲಿ ಕೃಷಿಕ್ಷೇತ್ರದಲ್ಲಿ ಸೇ. 1.5ರ ದರದಲ್ಲಿ ವಾರ್ಷಿಕ ಬೆಳವಣಿಗೆಯಾಯಿತು. ಎರಡನೆಯ ಪಂಚವಾರ್ಷಿಕ ಯೋಜನೆಯ ಅವಧಿಯಾದ 1960-65ರಲ್ಲಿ ಈ ಕ್ಷೇತ್ರದಲ್ಲಿ ಸೇ. 3.4 ರಂತೆಯೂ 1965-70ರ ಮೂರನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ (1965-70) ಸೇ. 4.1 ರಂತೆಯೂ ವಾರ್ಷಿಕ ಬೆಳವಣಿಗೆಗಳು ಸಾಧಿಸಿದುವು. ಆದರೆ 1970-75ರ ಅವಧಿಯಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡು, ಅದರ ಬೆಳೆವಣಿಗೆಯ ದರ ವರ್ಷಕ್ಕೆ ಸೇ.1ಕ್ಕಿಂತ ಕಡಿಮೆಯಾಯಿತು. ಸರಿಯಾಗಿ ಮಳೆ ಬಾರದ್ದೂ ಆ ಕ್ಷೇತ್ರದಲ್ಲಿ ಹೂಡಿಕೆ ಕಡಿಮೆಯಾದ್ದೂ ಕೃಷಿ ಕ್ಷೇತ್ರದ ಬೆಳೆವಣಿಗೆ ಬಹಳ ಹಿಂದೆ ಬೀಳಲು ಮುಖ್ಯ ಕಾರಣಗಳು. 1972ರ ಮಾರ್ಚ್‍ನಲ್ಲಿ ಸರ್ಕಾರ ಕೈಗೊಂಡ ಭೂಸುಧಾರಣಾ ಯೋಜನೆ ಕೃಷಿ ಕ್ಷೇತ್ರದಲ್ಲಿ ಬಹಳ ಮಹತ್ವದ್ದು. ಭೂಮಿ ಕೆಲವರ ಸ್ವತ್ತಾಗಿದ್ದುದನ್ನು ತಪ್ಪಿಸಿ ಭೂ ಹೀನರಿಗೆ ಇದನ್ನು ಹಂಚುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಈ ಯೋಜನೆಯ ಪ್ರಕಾರ ಭೂ ಒಡೆತನದ ಗರಿಷ್ಠ ಹಾಗೂ ಕನಿಷ್ಠ ಪರಿಮಿತಿಗಳನ್ನು ಗೊತ್ತುಮಾಡಲಾಯಿತು. ಇದರ ಪರಿಣಾಮವಾಗಿ ಸರ್ಕಾರ 9.5 ಲಕ್ಷ ಎಕರೆ ಹೆಚ್ಚುವರಿ ಜಮೀನನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಇದರಲ್ಲಿ 4.39ಲಕ್ಷ ಎಕರೆ ಜಮೀನನ್ನು ಭೂಹೀನರು ಮತ್ತು ಸಣ್ಣ ರೈತರಿಗೆ ಹಂಚಲಾಯಿತು. ಈ ಕಾರ್ಯಕ್ರಮ ಇನ್ನೂ ಮುಂದುವರಿದಿದೆ. ಭೂಸುಧಾರಣೆಯಿಂದ ಕೃಷಿ ಉತ್ಪಾದನೆ ಉತ್ತಮವಾಗುವುದೆಂದು ನಿರೀಕ್ಷಿಸಲಾಗಿದೆ. ಪಂಚವಾರ್ಷಿಕ ಯೋಜನೆಗಳ ಮೂಲಕ ಪಾಕಿಸ್ತಾನದ ಕೃಷಿಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತರಲು ಯತ್ನಿಸಲಾಗಿದೆ. ಕೃಷಿ ವಿಧಾನದಲ್ಲಿ ಬದಲಾವಣೆ, ಹೆಚ್ಚು ನೀರಾವರಿ ಸೌಲಭ್ಯವನ್ನು ಒದಗಿಸುವುದು ಇವು ಮುಖ್ಯವಾದ ಕ್ರಮಗಳು. ಪಾಕಿಸ್ತಾನದ ಕೃಷಿಕರು ಪ್ರಾಚೀನ ಕಾಲದ ಕೃಷಿವ್ಯವಸ್ಥೆಗೆ ಅಂಟಿಕೊಂಡಿರುವುದರಿಂದ ಕೃಷಿಕ್ಷೇತ್ರದಲ್ಲಿ ತೀವ್ರ ಬದಲಾವಣೆಗಳನ್ನುಂಟು ಮಾಡುವುದು ಕಷ್ಟವಾಗಿದೆ. ಆದರೂ ಕೃಷಿ ವಿಧಾನದಲ್ಲಿ ಬದಲಾವಣೆಗಳು ಕ್ರಮಕ್ರಮವಾಗಿ ಕಾಣಿಸಿಕೊಳ್ಳುತ್ತಿವೆ. ಈ ಬದಲಾವಣೆಗೆ ಸರ್ಕಾರದ ಪ್ರಯತ್ನ ಅತ್ಯಂತ ಮುಖ್ಯ ಕಾರಣ. ವೈಜ್ಞಾನಿಕ ಬೇಸಾಯ, ನೀರಾವರಿ ಸೌಲಭ್ಯದ ಹೆಚ್ಚಳ, ಕೃಷಿಗೆ ಯಂತ್ರದ ಅಳವಡಿಕೆ, ಉತ್ತಮ ಬೀಜಗಳ ಪ್ರಯೋಗ, ರಾಸಾಯನಿಕಗಳ ಬಳಕೆಯ ಪ್ರಯತ್ನಗಳು 1950-1975ರ ಅವಧಿಯಲ್ಲಿ ನಡೆದಿವೆ. ಸಾರ್ವತ್ರಿಕವಾಗಿ ಕೃಷಿ ಕ್ಷೇತ್ರದಲ್ಲಿ ಪಾಕಿಸ್ತಾನ ಸಂಪೂರ್ಣವಾಗಿ ಸ್ವಾವಲಂಬಿಯಾಗಿಲ್ಲದಿದ್ದರೂ ಕೆಲವು ಬೆಳೆಗಳ ವಿಷಯದಲ್ಲಿ ಅದು ಸ್ವಾವಲಂಬನೆ ಸಾಧಿಸಿದೆ. 1970ರ ವೇಳೆಗೆ ಪಾಕಿಸ್ತಾನ ಗೋಧಿಯ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆ ಸಾಧಿಸಿಕೊಂಡು, ಅದನ್ನು ರಫ್ತು ಮಾಡುವ ಸ್ಥಿತಿ ತಲುಪಿತ್ತು. ವಾಸ್ತವವಾಗಿ 1960-70ರ ದಶಕದಲ್ಲಿ ಪಾಕಿಸ್ತಾನದಲ್ಲಿ ಹಸಿರುಕ್ರಾಂತಿ ಆಯಿತೆಂದು ಹೇಳಲಾಗಿದೆ. ಈ ಅವಧಿಯಲ್ಲಿ ಅದರ ಅತ್ಯಂತ ಮುಖ್ಯ ಬೆಳೆಗಳಲ್ಲೊಂದಾದ ಗೋಧಿಯ ಉತ್ಪಾದನೆ 40 ಲಕ್ಷ ಟನ್‍ಗಳಿಂದ 64 ಲಕ್ಷ ಟನ್‍ಗಳಿಗೆ ಏರಿತು. ಹತ್ತಿ ಉತ್ಪಾದನೆ 20 ಲಕ್ಷ ಬೇಲ್‍ಗಳಿಂದ 40 ಲಕ್ಷ ಬೇಲ್‍ಗಳಿಗೆ ಏರಿತು. ಆದರೂ ಅಂತರರಾಷ್ಟ್ರೀಯ ಸರಾಸರಿ ಮಟ್ಟಗಳಿಗೆ ಹೋಲಿಸಿದರೆ ಪಾಕಿಸ್ತಾನದ ಈ ಬೆಳೆಗಳ ಉತ್ಪಾದನೆ ಗಣನೀಯವಾಗಿಲ್ಲ. ಕೃಷಿ ಕ್ಷೇತ್ರದಲ್ಲಿ ಇನ್ನೂ ಅಪಾರವಾದ ಬದಲಾವಣೆಗಳ ಅಗತ್ಯವಿದೆ. ಈ ಕ್ಷೇತ್ರದ ಸಮಸ್ಯೆಗಳು ತುಂಬ ಜಟಿಲವಾಗಿದ್ದು, ಅವನ್ನು ಕ್ರಮಕ್ರಮವಾಗಿ ಪರಿಹರಿಸಿಕೊಳ್ಳಬೇಕಾಗಿದೆ. ಪಾಕಿಸ್ತಾನದ ಪಂಚವಾರ್ಷಿಕ ಯೋಜನೆಗಳ ಮೂಲಕ ಕೃಷಿ ಕ್ಷೇತ್ರದಲ್ಲಿ ವಿನಿಯೋಜನೆಯನ್ನು ಹೆಚ್ಚು ಮಾಡಿ, ಅದರ ಸಮಸ್ಯೆಗಳನ್ನು ಬಗೆಹರಿಸಿ, ಉತ್ಪಾದನೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆದಿವೆ. ಗ್ರಾಮೀಣ ಅರ್ಥವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಾಣಿ ಸಾಕಣೆ ಪಾಕಿಸ್ತಾನದ ಅತ್ಯಂತ ಮುಖ್ಯ ಉದ್ಯಮಗಳಲ್ಲಿ ಒಂದು, 1971-72ರಲ್ಲಿ ಈ ಕ್ಷೇತ್ರದ ಉತ್ಪನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ ಸೇ 12ರಷ್ಟು ಇತ್ತು. ಉಣ್ಣೆ ಕೈಗಾರಿಕೆ ಮತ್ತು ಚರ್ಮದ ಕೈಗಾರಿಕೆಗೆ ಕಚ್ಚಾ ಸಾಮಗ್ರಿಯನ್ನು ಒದಗಿಸುವುದರಲ್ಲಿ ಈ ಕ್ಷೇತ್ರದ್ದು ಪ್ರಮುಖ ಪಾತ್ರ. ಮತ್ಸ್ಯ ಉತ್ಪಾದನೆಯೂ ಪಾಕಿಸ್ತಾನದಲ್ಲಿ ಒಂದು ಪ್ರಮುಖ ಉದ್ಯಮ. 1969ರ ಸುಮಾರು 18,000 ಟನ್‍ಗಳಷ್ಟು ಮೀನುಗಳನ್ನು ಹಿಡಿಯಲಾಯಿತು. ಅಲ್ಲಿಂದೀಚೆಗೆ ಈ ಉದ್ಯಮದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಲಾಗುತ್ತಿದೆ. ಇಂದು ಪಾಕಿಸ್ತಾನದಲ್ಲಿ 180,000ಚ.ಕಿ.ಮೀ. (1998) ಬೇಸಾಯದ ಭೂಕ್ಷೇತ್ರವಿದೆ. ಒಟ್ಟು ಕೃಷಿ ಕ್ಷೇತ್ರದಲ್ಲಿ ಸೇ. 27.87 ಕೃಷಿ ಭೂಮಿಯೂ, ಸೇ. 0.87 ಪರಂಪರಾಗತ ಬೆಳೆಗಳನ್ನು ಸೇ 71.26 (2001) ರಷ್ಟು ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೈಗಾರಿಕೆ ಕೃಷಿಯನ್ನು ಬಿಟ್ಟರೆ ಪಾಕಿಸ್ತಾನದ ಅರ್ಥವ್ಯವಸ್ಥೆಯನ್ನು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿರುವ ಕ್ಷೇತ್ರವೆಂದರೆ ಕೈಗಾರಿಕೆ. 1970ರಲ್ಲಿ ಕೈಗಾರಿಕೋದ್ಯಮದಿಂದ ರಾಷ್ಟ್ರೀಯ ಉತ್ಪನ್ನಕ್ಕೆ ಸೇ. 17ರಷ್ಟು ಸಂದಿತು. ಆದರೆ ದೇಶದ ಒಟ್ಟು ಶ್ರಮದ ಕೇವಲ ಸೇ. 10ರಷ್ಟಕ್ಕೆ ಮಾತ್ರ ಕೈಗಾರಿಕೆಗಳು ಉದ್ಯೋಗ ಒದಗಿಸುತ್ತಿವೆ. ಕೈಗಾರಿಕಾ ಕ್ಷೇತ್ರದಲ್ಲಿ ದೊಡ್ಡ ಕೈಗಾರಿಕೆಗಳು ಪ್ರಧಾನ ಪಾತ್ರ. ಕೈಗಾರಿಕೆಗಳ ಒಟ್ಟು ಉತ್ಪಾದನೆಯಲ್ಲಿ ಸೆ.65ರಷ್ಟು ಭಾಗ ದೊಡ್ಡ ಕೈಗಾರಿಕೆಗಳಿಂದಲೇ ಬರುತ್ತಿದೆ. ಪಾಕಿಸ್ತಾನದಲ್ಲಿ ಕೈಗಾರಿಕಾ ಪ್ರಗತಿ 1950ರಿಂದಲೂ ವೇಗವಾಗಿ ನಡೆಯುತ್ತ ಬಂದಿದೆ. ಪ್ರಾರಂಭದಲ್ಲಿ ಅನುಭೋಗ ಸರಕುಗಳ ಉತ್ಪಾದನೆಗೆ ಪ್ರಾಧಾನ್ಯ ನೀಡಿದ್ದರಿಂದ ಈ ಗುಂಪಿನ ಕೈಗಾರಿಕೆಗಳೇ ಪ್ರಮುಖವಾಗಿ ಅಭಿವೃದ್ಧಿಗೊಂಡವು. ಆದರೆ ಅನಂತರ ಈ ಪ್ರಾಧಾನ್ಯ ಬಂಡವಾಳ ಸರಕುಗಳ ಉತ್ಪಾದನೆಗೆ ದೊರೆಯಿತು. 1960ರ ಅನಂತರ ಹೆಚ್ಚಾಗಿ ಬಂಡವಾಳ ಸರಕುಗಳ ಕೈಗಾರಿಕೆಗಳು ಪ್ರಾರಂಭವಾಗಿ ಅಭಿವೃದ್ಧಿಹೊಂದಿವೆ. ಪಾಕಿಸ್ತಾನದ ಪ್ರಥಮ ಉಕ್ಕಿನ ಕೈಗಾರಿಕೆ 1980ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕರಾಚಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕೈಗಾರಿಕೆಗೆ ಸೋವಿಯೆತ್ ದೇಶದ ನೆರವಿದೆ. ಇದು ಉತ್ಪಾದನೆ ಆರಂಭಿಸಿದಾಗ ವರ್ಷಕ್ಕೆ 10 ಲಕ್ಷ ಟನ್ ಉಕ್ಕನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಕ್ರಮೇಣ ಇದನ್ನು 20 ಲಕ್ಷ ಟನ್‍ಗಳಿಗೆ ಏರಿಸುವ ನಿರೀಕ್ಷೆಯಿದೆ. ಸದ್ಯದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಹತ್ತಿಗಿರಣಿಗಳದು ಅತ್ಯಂತ ಮುಖ್ಯವಾದ ಸ್ಥಾನ. ರಾಷ್ಟ್ರೀಯ ಉತ್ಪನ್ನದಲ್ಲಿ ಕೈಗಾರಿಕಾಕ್ಷೇತ್ರದ ಭಾಗದಲ್ಲಿ ಇವುಗಳ ಪಾಲು ಸೇ.33 ಹತ್ತಿ ಗಿರಣಿಗಳಿಂದ ಸುಮಾರು 15 ಲಕ್ಷ ಜನರಿಗೆ ಉದ್ಯೋಗ ದೊರಕಿದೆ. ಈ ದೃಷ್ಟಿಯಿಂದಲೂ ಇವಕ್ಕೆ ಪ್ರಥಮ ಸ್ಥಾನ. 1960-70ರಲ್ಲಿ ನೂಲು ಮತ್ತು ಬಟ್ಟೆಯ ಉತ್ಪಾದನೆ ಗಮನಾರ್ಹವಾಗಿ ಏರಿದೆ. 1960-61ರಲ್ಲಿ ನೂಲಿನ ಉತ್ಪಾದನೆ 16 ಕೋಟಿ ಕಿಲೋಗ್ರಾಂ ಆಗಿತ್ತು. 1970-71ರ ವೇಳೆಗೆ ಇದು 36ಕೋಟಿ ಕಿಲೋಗ್ರಾಂಗಳಿಗೆ ಏರಿತು. ಇದೇ ಅವಧಿಯಲ್ಲಿ ಬಟ್ಟೆಯ ಉತ್ಪಾದನೆ 56 ಕೋಟಿ ಮೀಟರ್‍ಗಳಿಂದ 72 ಕೋಟಿ ಮೀಟರ್‍ಗಳಿಗೆ ಹೆಚ್ಚಿತು. ಬಾಂಗ್ಲಾದೇಶದ ಪ್ರತ್ಯೇಕತೆಯಿಂದಾಗಿ ಪಾಕಿಸ್ತಾನದ ಸೆಣಬಿನ ಕೈಗಾರಿಕೆಗೆ ಭಾರೀ ಪೆಟ್ಟು ತಗಲಿದೆ. ಈ ಉದ್ಯಮದಲ್ಲಿ ಪಾಕಿಸ್ತಾನಕ್ಕೆ ಇದ್ದ ವಿಶ್ವ ಪ್ರಾಧಾನ್ಯ ಈಗ ಇಲ್ಲವಾಗಿದೆ. ಆದ್ದರಿಂದ ಹತ್ತಿ ಬಟ್ಟೆ ಉತ್ಪಾದನೆಯನ್ನು ಬಿಟ್ಟರೆ ಈಗ ಪಾಕಿಸ್ತಾನದ ಪ್ರಮುಖ ಕೈಗಾರಿಕೆಗಳೆಂದರೆ ಉಣ್ಣೆ, ಸಕ್ಕರೆ, ಕಾಗದ, ಹೊಗೆಸೊಪ್ಪು ಮತ್ತು ಚರ್ಮ ಕೈಗಾರಿಕೆಗಳು. ಇವು ಕೈಗಾರಿಕಾ ಕ್ಷೇತ್ರದ ಒಟ್ಟು ಉದ್ಯೋಗಸ್ಥರಲ್ಲಿ ಸೇ. 20ರಷ್ಟು ಮಂದಿಗೆ ಉದ್ಯೋಗವನ್ನು ಒದಗಿಸುತ್ತಿವೆ. 1950ರ ದಶಕದಲ್ಲಿ ವಿದೇಶೀ ವಿನಿಮಯದ ಕೊರತೆ ಪಾಕಿಸ್ತಾನಕ್ಕೆ ವಿಪರೀತವಾದುದರಿಂದ, ಅದು ಆಮದನ್ನು ಅನಿವಾರ್ಯವಾಗಿ ಕಡಿತ ಮಾಡಬೇಕಾಯಿತು. ಹೀಗಾಗಿ ಆಮದು ಬದಲಿ ವಸ್ತುಗಳ ಕೈಗಾರಿಕೆಗೆ ಪಾಕಿಸ್ತಾನ ಹೆಚ್ಚಿನ ಪ್ರಾಧಾನ್ಯ ನೀಡುವುದಕ್ಕೆ ಪ್ರಾರಂಭಿಸಿತು. ಆದರೂ ಪಾಕಿಸ್ತಾನ ಇಂದಿಗೂ ಬಂಡವಾಳ ಸರಕುಗಳನ್ನೂ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿಗಳನ್ನೂ ಹೆಚ್ಚಾಗಿ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. ಕೈಗಾರಿಕೆಗೆ ಅಗತ್ಯವಾದ ಸಂಪನ್ಮೂಲಗಳು ಹೆಚ್ಚಾಗಿ ಲಭ್ಯವಿಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ಪಾಕಿಸ್ತಾನ ಕೈಗಾರಿಕಾ ಕ್ಷೇತ್ರದಲ್ಲಿ ಖಾಸಗಿ ಒಡೆತನವನ್ನು ಮಾನ್ಯ ಮಾಡಿದ್ದರೂ ಕ್ರಮಕ್ರಮವಾಗಿ ಸರ್ಕಾರಿ ವಲಯ ಉದ್ಯಮಗಳು ವಿಸ್ತರಿಸುತ್ತಿವೆ. ಭುಟ್ಟೋ ಆಡಳಿತದ ಅವಧಿಯಲ್ಲಂತೂ ಉದ್ಯಮಗಳ ರಾಷ್ಟ್ರೀಕರಣ ವ್ಯಾಪಕವಾಗಿಯೇ ನಡೆಯಿತು. ತನ್ನ ಪಂಚವಾರ್ಷಿಕ ಯೋಜನೆಗಳಲ್ಲಿ ಸರ್ಕಾರಿ ವಲಯದ ಕೈಗಾರಿಕೆಗಳ ಮೇಲಿನ ಹೂಡಿಕೆಯನ್ನು ಹೆಚ್ಚು ಮಾಡಿಕೊಂಡು ಆ ವಲಯದ ಕೈಗಾರಿಕೆಗಳನ್ನು ವಿಸ್ತರಿಸಿದೆ. 1974-75ರ ವೇಳೆಗೆ ಸರ್ಕಾರಿ ವಲಯದ ಕೈಗಾರಿಕೆಗಳ ಪಾತ್ರ ರಾಷ್ಟ್ರೀಯ ಆರ್ಥಿಕತೆಯಲ್ಲಿ ಗಣನೀಯವಾಗಿತ್ತು. ಸರ್ಕಾರಿ ವಲಯದ ಕೈಗಾರಿಕೆಗಳು ಬೋರ್ಡ್ ಆಫ್ ಇಂಡಸ್ಟ್ರಿಯಲ್ ಮ್ಯಾನೇಜ್‍ಮೆಂಟ್‍ನ ಅಧೀನದಲ್ಲಿವೆ. 1973-74ಕ್ಕೆ ಹೋಲಿಸಿದಂತೆ 1974-75ರಲ್ಲಿ ಸರ್ಕಾರಿ ವಲಯದ ಕೈಗಾರಿಕೆಗಳ ಉತ್ಪಾದನೆ ಸೇ. 21.8ರಷ್ಟು ಹೆಚ್ಚಾಗಿತ್ತು. ಇದೇ ಅವಧಿಯಲ್ಲಿ ಈ ಕೈಗಾರಿಕೆಗಳ ಲಾಭ ರೂ. 17.48 ಕೋಟಿಯಿಂದ ರೂ. 25,45 ಕೋಟಿಗೆ ಏರಿತು. ಮುಂದಿನ ಕೆಲವು ವರ್ಷಗಳಲ್ಲಿ ಸರ್ಕಾರಿ ವಲಯದ ಕೈಗಾರಿಕೆಗಳು ಬಹಳ ವಿಸ್ತಾರವಾಗುವ ಸಾಧ್ಯತೆಯಿದೆ. ಈ ವಿಸ್ತರಣೆಯ ಅಂಗವಾಗಿ ಉಕ್ಕು, ಸಿಮೆಂಟ್, ಭಾರೀ ಇಂಜನಿಯರಿಂಗ್, ಪೆಟ್ರೋ-ರಸಾಯನ ಮತ್ತು ಆಟೊಮೊಬೈಲ್ ಉದ್ಯಮಗಳ ಮೇಲೆ ಮುಂದಿನ ಹಲವು ವರ್ಷಗಳಲ್ಲಿ ರೂ. 288 ಕೋಟಿ ಹೂಡಿಕೆಯ ಯೋಜನೆಯನ್ನು ಬೋರ್ಡ್ ಆಫ್ ಇಂಡಸ್ಟ್ರಿಯಲ್ ಮ್ಯಾನೇಜ್‍ಮೆಂಟ್ ರೂಪಿಸಿಕೊಂಡಿದೆ. ಖಾಸಗಿ ವಲಯದ ಕೈಗಾರಿಕೆಗಳು ಕೇವಲ ಕೆಲವರ ಸ್ವಾಮ್ಯದಲ್ಲಿರುವುದು ಪಾಕಿಸ್ತಾನದ ಕೈಗಾರಿಕಾ ಕ್ಷೇತ್ರದ ಮುಖ್ಯ ಲಕ್ಷಣಗಳಲ್ಲಿ ಒಂದು. ಏಕಸ್ವಾಮ್ಯ ಕೆಲವೇ ಕುಟುಂಬಗಳಲ್ಲಿ ಕೇಂದ್ರೀಕೃತವಾಗಿದೆ. ಈ ಹಿಡಿತವನ್ನು ತಡೆಗಟ್ಟಲು 1960ರಿಂದಲೂ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಇದು ಗಮನಾರ್ಹವಾಗಿಯೇ ಮುಂದುವರಿದು ಕೊಂಡು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯನ್ನು ಕ್ಷಿಪ್ರಗೊಳಿಸಲು ವಿದೇಶಿ ಹೂಡಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಮುಖ್ಯವಾಗಿ ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಜರ್ಮನಿ ಮತ್ತು ಜಪಾನ್ ದೇಶಗಳು ಪಾಕಿಸ್ತಾನದ ನಾನಾ ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿದೆ. 2004ರ ಅಂಕಿ ಅಂಶದ ಗಣನೆಯ ಪ್ರಕಾರ ಕೈಗಾರಿಕೋತ್ಪನ್ನ ಸೇ. 13.1ರಷ್ಟು ಹೆಚ್ಚಳಗೊಂಡಿದೆ. ಗಣಿಗಾರಿಕೆ ಕಲ್ಲಿದ್ದಲು ಪಾಕಿಸ್ತಾನದ ಪ್ರಮುಖ ಖನಿಜ. ಆದರೆ ಗುಣಮಟ್ಟ ಅಷ್ಟು ಉತ್ತಮವಾದ್ದಲ್ಲ. ಅದಕ್ಕೆ ಬೇಡಿಕೆಯೂ ಕಡಿಮೆ. ಈ ಕಾರಣದಿಂದ ಕಲ್ಲಿದ್ದಲು ಗಣಿಗಳಲ್ಲಿ ಅತ್ಯಂತ ದಕ್ಷಮಟ್ಟದ ವರೆಗಿನ ಉತ್ಪಾದನೆ ನಡೆಯುತ್ತಿಲ್ಲ. ಪಾಕಿಸ್ತಾನದ ಕಬ್ಬಿಣದ ಅದುರು ಉತ್ತಮ ಗುಣಮಟ್ಟದ್ದಲ್ಲ. ವ್ಯಾಪಕವಾದ ಕಲ್ಲಿದ್ದಲು ಗಣಿಗಳು ಪಂಜಾಬಿನ ಕಾಲಾಬಾಗ್ ಪ್ರದೇಶದಲ್ಲಿವೆ. ಈ ಪ್ರದೇಶದಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿಸುವ ಯೋಜನೆ ಇದೆ. ಉತ್ತಮವಾದ ಕಬ್ಬಿಣದ ಅದುರು ಬಲೂಚಿಸ್ತಾನ ಪ್ರಾಂತ್ಯದಲ್ಲಿ ಲಭ್ಯವಿದೆಯೆಂದು ಗುರುತಿಸಲಾಗಿದೆ. ಆದರೆ ಈ ನಿಕ್ಷೇಪಗಳಿಂದ ಭಾರೀ ಪ್ರಮಾಣದ ಅದಿರು ಲಭ್ಯವಾಗುವ ಸಾಧ್ಯತೆ ಕಡಿಮೆಯೆಂದು ಭಾವಿಸಲಾಗಿದೆ. ಅತ್ಯಂತ ಸುಲಭವಾಗಿ ಮತ್ತು ಹೇರಳವಾಗಿ ಸುಣ್ಣಕಲ್ಲು ಲಭ್ಯವಿದೆ. ಇದು ಮುಂದೆ ಬೆಳೆಯಬಹುದಾದ ಸಿಮೆಂಟ್ ಉದ್ಯಮಕ್ಕೆ ಅತ್ಯಂತ ಸಹಾಯಕವಾಗುವ ಸಾಧ್ಯತೆಯಿದೆ. ಪಾಕಿಸ್ತಾನದ ಇತರ ಮುಖ್ಯ ಖನಿಜಗಳು ಕ್ರೋಮೈಟ್, ಬಾಕ್ಸೈಟ್ ಸೆಲಿಸ್ಟೈಟ್, ಅಂಟಿಮೋನಿ, ಆರ್‍ಗೋನೈಟ್, ಜಿಪ್ಸಮ್, ಕಲ್ಲುಪ್ಪು ಮತ್ತು ಅಮೃತಶಿಲೆ, ಪಾಕಿಸ್ತಾನದ ತೈಲನಿಕ್ಷೇಪಗಳು ಅತ್ಯಲ್ಪ. ಆದರೆ, ಅನೇಕ ನಿಸರ್ಗ ಅನಿಲ ನಿಕ್ಷೇಪಗಳು ಅತ್ಯಂತ ಶ್ರೀಮಂತವಾದವಾಗಿವೆ. ಸೂಯ್ ಎಂಬಲ್ಲಿಯ ನಿಸರ್ಗ ಅನಿಲ ನಿಕ್ಷೇಪಗಳು ತುಂಬ ಶ್ರೀಮಂತವಾಗಿವೆ. ವಿದ್ಯುಚ್ಛಕ್ತಿ ಜಲವಿದ್ಯುತ್ ಉತ್ಪಾದನೆಯಲ್ಲಿ ಪಾಕಿಸ್ತಾನ ಹೆಚ್ಚಿನ ಪ್ರಗತಿಯನ್ನೇನೂ ಸಾಧಿಸಿಲ್ಲವಾದ್ದರಿಂದ ಶಾಖ ವಿದ್ಯುತ್ ಉತ್ಪಾದನೆಯನ್ನೇ ಹೆಚ್ಚಾಗಿ ಅವಲಂಬಿಸಬೇಕಾಗಿದೆ. 1970ರಲ್ಲಿ ಅತ್ಯಂತ ಹೆಚ್ಚಿನ ಜಲವಿದ್ಯುತ್ ಉತ್ಪಾದಿಸುತ್ತಿದ್ದ ಕೇಂದ್ರವೆಂದರೆ ಝೀಲಮ್ ನದಿಗೆ ಅಡ್ಡಲಾಗಿ ಕಟ್ಟಿರುವ ಮಂಗ್ಲಾ ಕಟ್ಟೆಯ ವಿದ್ಯುತ್ ಉತ್ಪಾದನ ಕೆಂದ್ರ. ಇದರ ಸಾಮಥ್ರ್ಯ 6.5 ಲಕ್ಷ ಕಿ.ವಾ. 1980ರ ವೇಳೆಗೆ ಇದರ ಉತ್ಪಾದನೆ 10 ಲಕ್ಷ ಕಿ.ವಾಗೆ ಏರುವ ನಿರೀಕ್ಷೆಯಿದೆ. 1968ರಲ್ಲಿ ಪ್ರಾರಂಭವಾದ ತಾರ್‍ಬೆಲಾ ಕಟ್ಟೆಯ ವಿದ್ಯುತ್ ಉತ್ಪಾದನಾ ಕೇಂದ್ರವೂ 21 ಲಕ್ಷ ಕಿ.ವಾ. ವಿದ್ಯುತ್ತನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ. ಆದರೆ ಈ ಗಾತ್ರದ ಉತ್ಪಾದನೆಯಿಂದಲೂ ರಾಷ್ಟ್ರಕ್ಕೆ ಅಗತ್ಯವಾದ ವಿದ್ಯುತ್ತಿನ ಪೂರೈಕೆ ಸಂಪೂರ್ಣವಾಗಿ ಲಭಿಸದಿರುವುದರಿಂದ ಪಾಕಿಸ್ತಾನ ಅತ್ಯಂತ ಹೆಚ್ಚಾಗಿ ಶಾಖ ವಿದ್ಯುತ್ ಕೇಂದ್ರಗಳನ್ನೇ ಅವಲಂಬಿಸಬೇಕಾಗಿದೆ. ಜಲ ಹಾಗೂ ಶಾಖ ವಿದ್ಯುತ್ ಉತ್ಪಾದನ ಕೇಂದ್ರಗಳಲ್ಲದೆ, ಕರಾಚಿಯ ಹೊರ ಭಾಗದಲ್ಲಿ 1,37,000 ಕಿ.ವಾ. ಉತ್ಪಾದನಾ ಸಾಮಥ್ರ್ಯದ ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಣು ವಿದ್ಯುತ್, ಶಾಖೋತ್ಪನ್ನ ಮತ್ತು ಜಲೋತ್ಪನ್ನ ಒಟ್ಟು ವಿದ್ಯುತ್ 75.27 ಬಿಲಿಯನ್ ಕಿವಾ. (2003) ಇದ್ದು, 52.66 ಬಿಲಿಯನ್ ಕಿವಾ ವಿದ್ಯುತ್‍ನ ಬೇಡಿಕೆ (2003) ರಲ್ಲಿ ಇದ್ದಿತು. ಹಣಕಾಸು: ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಎಂಬುದು ಪಾಕಿಸ್ತಾನದ ಕೇಂದ್ರೀಯ ಬ್ಯಾಂಕು. 1972ರಲ್ಲಿ ಇದರ ನಿಯಂತ್ರಣಕ್ಕೆ 25 ಅನುಸೂಚಿತ ಬ್ಯಾಂಕುಗಳು ಒಳಪಟ್ಟಿದ್ದುವು. ಪಾಕಿಸ್ತಾನದಲ್ಲಿ ನಾಲ್ಕು ಹಣಕಾಸು ಸಂಸ್ಥೆಗಳು ಅಲ್ಪಾವಧಿ, ದೀರ್ಘಾವಧಿ ಮತ್ತು ಕಟ್ಟಡ ಕಾರ್ಯಗಳಿಗೆ ಅಗತ್ಯವಾದ ಬಂಡವಾಳವನ್ನು ಒದಗಿಸುತ್ತಿವೆ. ಅವು ಪಾಕಿಸ್ತಾನ ಕೈಗಾರಿಕಾ ಉದರಿ ಮತ್ತು ವಿನಿಯೋಜನ ನಿಗಮ(ಪಾಕಿಸ್ತಾನ್ ಇಂಡಸ್ಟ್ರಿಯಲ್ ಕ್ರೆಡಿಟ್ ಅಂಡ್ ಇನ್‍ವೆಸ್ಟ್ ಮೆಂಟ್ ಕಾರ್ಪೊರೇಷನ್), ಪಾಕಿಸ್ತಾನ ಕೈಗಾರಿಕಾಭಿವೃದ್ಧಿ ಬ್ಯಾಂಕ್ (ದಿ ಇಂಡಸ್ಟ್ರಿಯಲ್ ಡೆವೆಲಪ್‍ಮೆಂಟ್ ಬ್ಯಾಂಕ್ ಆಫ್ ಪಾಕಿಸ್ತಾನ್), ಪಾಕಿಸ್ತಾನ ಕೃಷಿ ಅಭಿವೃದ್ಧಿ ಬ್ಯಾಂಕ್ (ಅಗಿಕಲ್ಚರಲ್ ಡೆವೆಲಪ್‍ಮೆಂಟ್ ಬ್ಯಾಂಕ್ ಆಫ್ ಪಾಕಿಸ್ತಾನ್) ಗೃಹ ನಿರ್ಮಾಣ ಹಣಕಾಸು ನಿಗಮ (ಹೌಸ್‍ಬಿಲ್ಡಿಂಗ್ ಫೈನಾನ್ಸ್ ಕಾರ್ಪೊರೇಷನ್). ವಿದೇಶಿ ವ್ಯಾಪಾರ: ಪಾಕಿಸ್ತಾನದ ವಿದೇಶಿ ವ್ಯಾಪಾರ ಹೆಚ್ಚು ಬೆಳೆವಣಿಗೆ ಸಾಧಿಸಿಲ್ಲ. ಪ್ರಾರಂಭದಿಂದಲೂ ಪಾಕಿಸ್ತಾನ ಕೃಷಿಮೂಲ ವಸ್ತುಗಳನ್ನು ರಫ್ತು ಮಾಡುತ್ತ, ಕಚ್ಚಾ ಸಾಮಗ್ರಿ ಮತ್ತು ಬಂಡವಾಳ ಸರಕುಗಳನ್ನು ಆಮದು ಮಾಡಿಕೊಳ್ಳುತ್ತ ಬಂದಿದೆ. ರಫ್ತಿಗಿಂತ ಯಾವಾಗಲೂ ಆಮದು ಹೆಚ್ಚಾಗಿರುವುದರಿಂದ ಮೊದಲಿನಿಂದಲೂ ಪಾಕಿಸ್ತಾನ ವಿದೇಶಿ ವಿನಿಮಯದ ಕೊರತೆಯನ್ನು ಎದುರಿಸುತ್ತಲೇ ಬಂದಿದೆ. ಬಾಂಗ್ಲಾದೇಶ ಪ್ರತ್ಯೇಕವಾಗುವುದಕ್ಕೆ ಮುಂಚೆ ಪಾಕಿಸ್ತಾನದ ಅತ್ಯಂತ ಮುಖ್ಯವಾದ ರಫ್ತು ಸರಕುಗಳು ಸಣಬು, ಹತ್ತಿ, ಉಣ್ಣೆ, ಚರ್ಮ ಮತ್ತು ಚಹ ಆಗಿದ್ದುವು. ಒಟ್ಟು ರಫ್ತಿನ ಆದಾಯದ ಸೇ. 90ರಷ್ಟು ಇವುಗಳಿಂದ ಸಂಪಾದನೆಯಾಗುತ್ತಿತ್ತು. ಆದರೆ ಬಾಂಗ್ಲಾ ಪ್ರತ್ಯೇಕತೆಯಿಂದ ಪಾಕಿಸ್ತಾನ ಸಣಬು ಮತ್ತು ಚಹ ರಫ್ತನ್ನು ಕಳೆದುಕೊಳ್ಳಬೇಕಾಯಿತು. ಪಾಕಿಸ್ತಾನದ ಈಗಿನ ಮುಖ್ಯ ರಫ್ತು ವಸ್ತುಗಳು ಹತ್ತಿ ಮತ್ತು ಹತ್ತಿ ಬಟ್ಟೆ, ಅಕ್ಕಿ, ಚರ್ಮ, ಮೀನು ಮತ್ತು ಜಮಖಾನೆ, ಮುಖ್ಯ ಆಮದುಗಳು ಯಂತ್ರ ಸಲಕರಣೆ, ರಾಸಾಯನಿಕ, ರಸಗೊಬ್ಬರ, ಖಾದ್ಯ ತೈಲ, ಕಬ್ಬಿಣ, ಉಕ್ಕು ಹಾಗೂ ವಿದ್ಯುತ್ ಉಪಕರಣ. ವಿದೇಶಿ ವ್ಯಾಪಾರ ಹಾಗೂ ಆಮದು ರಫ್ತುಗಳು ಸಾರಿಗೆ 1973ರ ವೇಳೆಗೆ ಪಾಕಿಸ್ತಾನದಲ್ಲಿ 8,742 ಕಿಮೀ. ರೈಲ್ವೆ ಮಾರ್ಗಗಳಿದ್ದುವು. 2003ರ ಹೊತ್ತಿಗೆ ಒಟ್ಟು 8163ಕಿ.ಮೀ. ದೂರದ ರೈಲುಮಾರ್ಗವಿತ್ತು. 2004ರಲ್ಲಿ 131 ವಿಮಾನ ನಿಲ್ದಾಣಗಳೂ, 2001ರ ಅಂಕಿ ಅಂಶದ ಪ್ರಕಾರ ಒಟ್ಟು 257,683ಕಿ.ಮೀ. ರಸ್ತೆಗಳೂ ಇದ್ವವು. ಕರಾಚಿಯ ಬಂದರು ಪಾಕಿಸ್ತಾನದಲ್ಲಿ ಅತ್ಯಂತ ಮುಖ್ಯವಾದ್ದು. ಮಕ್ರಾನ್ ಕರಾವಳಿಯಲ್ಲಿ ಮತ್ತೊಂದು ಬಂದರನ್ನು ನಿರ್ಮಿಸಲು ಯೋಜಿಸಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಹಡಗು ಸಾರಿಗೆ ಕಾರ್ಪೊರೇಷನ್ 25 ರಾಷ್ಟ್ರಗಳೊಡನೆ ಹಡಗು ಸಂಪರ್ಕ ಹೊಂದಿದ್ದು ವಿದೇಶಿ ವ್ಯಾಪಾರದಲ್ಲಿ ಗಣನೀಯ ಪಾತ್ರವಹಿಸುತ್ತಿದೆ; ಅದರ ಒಡೆತನದಲ್ಲಿ 60 ವ್ಯಾಪಾರ ಹಡಗುಗಳು ಇವೆ. ಆರ್ಥಿಕ ಯೋಜನೆ ಪಾಕಿಸ್ತಾನ ಆರ್ಥಿಕ ಯೋಜನೆಯ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶವನ್ನಿಟ್ಟುಕೊಂಡಿದೆ. ಅದರ ಪ್ರಥಮ ಆರ್ಥಿಕ ಯೋಜನೆ 1955ರಲ್ಲಿ ಪ್ರಾರಂಭವಾಯಿತು. ಅದರ ವೆಚ್ಚ ರೂ. 971.1 ಕೋಟಿ. ರಾಷ್ಟ್ರೀಯ ವರಮಾನದಲ್ಲಿ ಸೇ.15ರಷ್ಟು ಏರಿಕೆ, ತಲಾ ವರಮಾನದಲ್ಲಿ ಸೇ.7 ರಷ್ಟು ಆಧಿಕ್ಯ. 20 ಲಕ್ಷ ಉದ್ಯೋಗಗಳ ಸೃಷ್ಟಿ, ವಿದೇಶಿ ವ್ಯಾಪಾರದಲ್ಲಿಯ ಕೊರತೆಯ ಸುಧಾರಣೆ-ಇವು ಆ ಯೋಜನೆಯ ಮುಖ್ಯ ಗುರಿಗಳು. ಮೊದಲನೆಯ ಯೋಜನೆಯ ಅವಧಿಯಲ್ಲಿ ಈ ಗುರಿಗಳನ್ನು ಸಾಧಿಸಲಾಗಲಿಲ್ಲ. ಒಂದನೆಯ ಯೋಜನೆಯದಕ್ಕಿಂತ ಸೇ.50ರಷ್ಟು ಹೆಚ್ಚಿನ ವೆಚ್ಚದ ಎರಡನೆಯ ಯೋಜನೆ 1960 ರಲ್ಲಿ ಆರಂಭವಾಯಿತು. ಆ ಯೋಜನೆಯ ವೆಚ್ಚ ರೂ. 1,900 ಕೋಟಿ. ಅದರಲ್ಲಿ ರೂ.1,150 ಕೋಟಿ ಸರ್ಕಾರಿ ವಲಯದ ವೆಚ್ಚ ರೂ.751 ಕೋಟಿ ಖಾಸಗಿ ವಲಯದ್ದು, ಇದು ಒಂದನೆಯ ಯೋಜನೆಗಿಂತ ಹೆಚ್ಚಿನ ಯಶಸ್ಸನ್ನು ಸ್ಥಾಪಿಸಿತು. ರಾಷ್ಟ್ರೀಯ ಉತ್ಪನ್ನದ ಉದ್ದೇಶಿತ ವಾರ್ಷಿಕ ಬೆಳವಣಿಗೆಯ ದರವನ್ನೂ (ಸೇ.4.7) ಮೀರಿ ಸೇ.5.5ರ ವಾರ್ಷಿಕ ಬೆಳೆವಣಿಗೆ ದರ ಸಾಧಿಸಿತು. ಕೃಷಿ ಉತ್ಪನ್ನದಲ್ಲಿ ಸೇ.3.5 ಮತ್ತು ಕೈಗಾರಿಕಾ ಉತ್ಪನ್ನದಲ್ಲಿ ಸೇ.10ರ ವಾರ್ಷಿಕ ಬೆಳೆವಣಿಗೆ ಸಾಧ್ಯವಾಯಿತು. 1965-70ರ ಮೂರನೆಯ ಯೋಜನೆ ಆ ರಾಷ್ಟ್ರದ ದೀರ್ಘಾವಧಿ ಯೋಜನೆಯ ಮೊದಲನೆಯ ಘಟ್ಟವೆಂದು ಹೇಳಲಾಗಿದೆ. 1965ರ ವೇಳೆಗೆ ಸಾಧಿಸಬೇಕಾದ ಗುರಿಗಳ ದೃಷ್ಟಿಯಿಂದ ಯೋಜನೆಯನ್ನು ತಯಾರಿಸಲಾಗಿತ್ತು. 1985 ವೇಳೆಗೆ ರಾಷ್ಟ್ರೀಯ ವರಮಾನವನ್ನು ನಾಲ್ಕರಷ್ಟಕ್ಕೆ ಏರಿಸುವುದು, 200 ಡಾಲರ್‍ಗಳಿಗೆ ತಲಾ ವರಮಾನದ ಏರಿಕೆ, ಸ್ವಾವಲಂಬನೆಯತ್ತ ಮುನ್ನಡೆ, ಪೂರ್ಣೋದ್ಯೋಗದ ಸಾಧನೆ, ಅನಕ್ಷರತೆಯ ನಿರ್ಮೂಲನ-ಇವು ಈ ದೀರ್ಘಕಾಲದ ಗುರಿಗಳು. ಈ ಯೋಜನೆಯ ಅವಧಿಯಲ್ಲಿ ಅನೇಕ ಆರ್ಥಿಕ ಹಾಗೂ ರಾಜಕೀಯ ಸಂಕಷ್ಟಗಳುಂಟಾದುವು. ವಿದೇಶಿ ನೆರವು ಇಳಿಯಿತು. ಪೂರ್ವ ಪಾಕಿಸ್ತಾನದಲ್ಲಿ (ಬಾಂಗ್ಲಾದೇಶ) ತೊಂದರೆ, ಅನಾವೃಷ್ಟಿ, ರಾಜಕೀಯ ಕ್ಷೋಭೆ ಮುಂತಾದವು ಯೋಜನೆಯ ವಿಫಲತೆಗೆ ಕಾರಣಗಳು. 1970ರಲ್ಲಿ ನಾಲ್ಕನೆಯ ಪಂಚವಾರ್ಷಿಕ ಯೋಜನೆ ಆರಂಭವಾಯಿತು. ಸ್ವಾವಲಂಬನೆಯನ್ನು ಸಾಧಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಈ ದೃಷ್ಟಿಯಿಂದ 1970-75ರ ಅವಧಿಯಲ್ಲಿ ಸೇ.6.5ರ ವಾರ್ಷಿಕ ಬೆಳವಣಿಗೆಯನ್ನು ಸಾಧಿಸಬೇಕೆಂದು ನಿರ್ಧರಿಸಲಾಯಿತು. ಯೋಜನೆಯ ವೆಚ್ಚ ರೂ 7,500 ಕೋಟಿ ಎಂದು ನಿಗದಿ ಮಾಡಲಾಯಿತು. ಇದರಲ್ಲಿ ರೂ.4,900 ಕೋಟಿ ಸರ್ಕಾರಿ ವಲಯಕ್ಕೆ ಮೀಸಲಾಗಿತ್ತು. ಆದರೆ 1970-72ರ ರಾಜಕೀಯ ಕ್ಷೋಭೆ, ಬಾಂಗ್ಲಾ ವಿಮೋಚನೆ ಇವುಗಳಿಂದಾಗಿ ಯೋಜನೆ ಕಾರ್ಯಗತವಾಗಲಿಲ್ಲ. ಇದರ ಸ್ಥಾನದಲ್ಲಿ ವಾರ್ಷಿಕ ಯೋಜನೆಗಳು ಜಾರಿಗೆ ಬಂದುವು. ನಿಧಾನವಾದ ಆರ್ಥಿಕ ಬೆಳವಣಿಗೆ, ಅಸಮಾನ ವರಮಾನ ವಿತರಣೆ, ತೀವ್ರವಾದ ಬಡತನ, ವಿದೇಶಿ ವ್ಯಾಪಾರದಲ್ಲಿ ಪ್ರತಿಕೂಲ ಸಿಲ್ಕು, ಶೀಘ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆ ಮುಂತಾದ ಅನೇಕ ಸಮಸ್ಯೆಗಳನ್ನು ಇಂದು ಪಾಕಿಸ್ತಾನ ಎದುರಿಸುತ್ತಿದೆ. (ಸಿ.ಕೆ.ಆರ್.) ಜನಜೀವನ ಮತ್ತು ಸಮಾಜ ಸಮಾಜ, ಕಲೆ, ರಂಜನೆ ಪಾಕಿಸ್ತಾನ ಭೂಭಾಗ ಮಧ್ಯಪ್ರಾಚ್ಯ. ಮಧ್ಯ ಏಷ್ಯ ಮತ್ತು ದಕ್ಷಿಣ ಏಷ್ಯಗಳು ಕೂಡುವ ಸ್ಥಳದಲ್ಲಿದೆ. ಪ್ರಾಚೀನ ಕಾಲದಿಂದಲೂ ವಿವಿಧ ಜನಾಂಗಗಳೂ ಪಂಗಡಗಳೂ ಈ ಪ್ರದೇಶದಲ್ಲಿ ನೆಲಸಿವೆ. ಕೆಲವು ತಮ್ಮ ಛಾಯೆಯನ್ನು ಬಿಟ್ಟುಹೋಗಿವೆ. ಸ್ಥೂಲವಾಗಿ ಇಲ್ಲಿಯ ಜನರನ್ನು ಐದು ಜನಾಂಗಗಳಾಗಿ ವಿಂಗಡಿಸಬಹುದು; ದ್ರಾವಿಡ, ಆಸ್ಟ್ರೊಲಾಯ್ಡ್, ಇಂಡೊ-ಆರ್ಯನ್, ಮಂಗೊಲಾಯ್ಡ್ ಮತ್ತು ಯೂರೋಪಾಯ್ಡ್. ಇಲ್ಲಿಯ ಸಮಾಜವ್ಯವಸ್ಥೆ ಪಿತೃಪ್ರಧಾನವಾದ್ದು. ಹೆಚ್ಚು ಜನರು ದೊಡ್ಡ ಕುಟುಂಬಗಳಲ್ಲಿದ್ದಾರೆ. ಸ್ತ್ರೀಯರು ಉನ್ನತ ಉದ್ಯೋಗಗಳಲ್ಲಿದ್ದರೂ ಸಮಾಜದಲ್ಲಿ ಅವರ ಸ್ಥಾನ ಅಷ್ಟು ಉತ್ತಮವಾಗಿಲ್ಲ. ಶ್ರೀಮಂತ ರೈತರು ಮತ್ತು ಜಮೀದ್ಧಾರರಲ್ಲೂ ಪಟ್ಟಣಗಳ ಮಧ್ಯಮವರ್ಗಗಳಲ್ಲೂ ಪರದಾ ಪದ್ಧತಿ ಇದೆ. ಬಡವರು ಮತ್ತು ವಿದ್ಯಾವಂತ ಶ್ರೀಮಂತರಲ್ಲಿ ಈ ಪದ್ಧತಿ ಕಡಿಮೆಯಾಗುತ್ತಿದೆ. ಬಹುಪಾಲು ಜನರು ಮುಸ್ಲಿಮರು, ಇವರಲ್ಲಿ ನಿರ್ದಿಷ್ಟ ಸಮೂಹಗಳ ಜನರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಪ್ರವೀಣರಾಗಿದ್ದಾರೆ. ಪಾಕಿಸ್ತಾನದ ಸಿಂಧ್, ಪಂಜಾಬ್, ಬಲೂಚಿಸ್ತಾನ ಮತ್ತು ವಾಯವ್ಯ ಸರಹದ್ದು ಪ್ರಾಂತ್ಯಗಳು ಪ್ರತ್ಯೇಕ ಆಡಳಿತ ಘಟಕಗಳಾಗಿರುವಂತೆಯೇ ಐತಿಹಾಸಿಕವಾಗಿ, ಸಾಮಾಜಿಕವಾಗಿ ವಿಶಿಷ್ಟತೆ ಪಡೆದಿವೆ. ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ 1930ರ ದಶಕದಿಂದ ಈಚೆಗೆ ನೀರಾವರಿ ಸೌಲಭ್ಯ ಹೆಚ್ಚಿದಂತೆಲ್ಲ ಆರ್ಥಿಕ ಕ್ರಾಂತಿ ಸಂಭವಿಸಿ ಜೀವನ ಭದ್ರತೆ ನೆಲೆಯೂರಿದೆ. ತೀರಪ್ರದೇಶದಲ್ಲಿ ಮೀನುಗಾರಿಕೆ ಮುಂದುವರಿದಿದೆ. ಕರಾಚಿಯಂಥ ಬೃಹತ್ ನಗರದಿಂದಾಗಿ ಸಿಂಧ್ ಪ್ರಾಂತ್ಯದ ನಗರ ಜನಸಂಖ್ಯೆ 45% ರಷ್ಟಿದೆ (1970). ಪಂಜಾಬ್ ತೀವ್ರಗತಿಯಲ್ಲಿ ಮುನ್ನಡೆಯುತ್ತಿದೆ. ಸಿಂಧ್‍ನಲ್ಲಿ ಕುಸ್ತಿ ಸಮಾರಂಭಗಳು ಜನಪ್ರಿಯ ಮನೋರಂಜನೆಯ ಕಾರ್ಯ ಕ್ರಮಗಳು. ಎತ್ತಿನಗಾಡಿ ಪಂದ್ಯ ಮತ್ತು ಹುಂಜದ ಕಾಳಗಗಳೂ ಕೆಲವು ಪ್ರದೇಶಗಳಲ್ಲಿ ಜನಪ್ರಿಯವಾಗಿವೆ. ಇಲ್ಲಿಯ ಸಂಗೀತ ಪ್ರಾಚೀನ ಕಾಲದಿಂದಲೂ ಪ್ರಸಿದ್ಧ. ಬಲೂಚಿಸ್ತಾನ ಬಹು ವಿರಳ ಜನವಸತಿ ಇರುವ ಪ್ರಾಂತ್ಯ. ಗ್ರಾಮಾಂತರ ಪ್ರದೇಶ ಬರಡು. ಇಲ್ಲಿಯ ಹೆಚ್ಚಿನ ಜನಸಂಖ್ಯೆ ಅಲೆಮಾರಿ ಸ್ವರೂಪದ್ದು. ಬಲೂಚಿಗಳು ಮತ್ತು ಪಠಾಣರು ಇಲ್ಲಿಯ ಮುಖ್ಯ ಪಂಗಡಗಳು. ಇವರಲ್ಲಿ ಪಂಗಡಜೀವನ ಇದೆ. ಗುಂಪಿನ ನಾಯಕರಾಗಿ ಸರ್ದಾರ್ ಅಥವಾ ಖಾನ್ ಇರುತ್ತಾನೆ. ಗುಂಪುಗಳಿಗೆ ಅವುಗಳದೇ ಸಾಮಾಜಿಕ ಸಂಹಿತೆ ಇರುತ್ತದೆ. ಕುದುರೆ ಜೂಜು, ಕುಸ್ತಿ, ಮೇಳಗಳು ಜನಪ್ರಿಯವಾಗಿವೆ. ಬಲೂಚಿಗಳಿಗೆ ಬಲೂಚಿ ದಫ್ತರ್ ಎನ್ನುವ ಪ್ರಾಚೀನ ಮಹಾಕಾವ್ಯವುಂಟು. ಅದನ್ನು ವೃತ್ತಿಗಾಯಕರು ಹಾಡುತ್ತಾರೆ. ಇತರ ಜನಪದ ವೀರಗಾಥಗಳಿವೆ. ವಾಯವ್ಯ ಸರಹದ್ದು ಪ್ರಾಂತ್ಯ ಹಿಂದುಳಿದಿದೆ. ಇಲ್ಲಿ ಪಠಾಣರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇಲ್ಲಿಯ ಸರಹದ್ದು ಮತ್ತು ನೆಲಸು ಜಿಲ್ಲೆಗಳ ನಡುವೆ ಪಂಗಡ ಸ್ವಯಮಾಡಳಿತ ಪ್ರದೇಶಗಳಿವೆ. ಅಲ್ಲಿ ವಾಸಿಸುವವರಿಗೆ ಪಾಕಿಸ್ತಾನದ ಆಂತರಿಕ ಕಾನೂನುಗಳು ಅನ್ವಯವಾಗುವುದಿಲ್ಲ. ಪಂಗಡದ ನ್ಯಾಯಪಾಲನೆ ಮತ್ತಿತರ ವ್ಯವಹಾರಗಳನ್ನು ಜಿರ್ಗಹ ಅಥವಾ ಹಿರಿಯರ ಮಂಡಳಿ ನೋಡಿಕೊಳ್ಳುತ್ತದೆ. ಇಲ್ಲಿ ವಿದ್ಯಾಪ್ರಗತಿ ನಿಧಾನ. ಸಾಮಾಜಿಕ ಬದಲಾವಣೆಗೆ ಪಂಗಡದ ಪ್ರತಿಭಟನೆ ಇದೆ. ಪಠಾಣರು ಧರ್ಮನಿಷ್ಠರೆಂದೂ ಸ್ವಾತಂತ್ರ್ಯ ಪ್ರಿಯರೆಂದೂ ಹೆಸರಾದವರು. ಪ್ರತಿ ಹಳ್ಳಿಗೂ ಒಂದಾದರೂ ಅತಿಥಿಗೃಹವಿದೆ. ನೃತ್ಯ ಜನಪ್ರಿಯ ಮನೋರಂಜನೆ. ಖವಾಲಿ ಭಕ್ತಿಗೀತೆಗಳು ಪಾಕಿಸ್ತಾನದಲ್ಲಿ ಜನಪ್ರಿಯವಾಗಿವೆ. ಕಾವ್ಯವಾಚನ ಇನ್ನೊಂದು ಜನಪ್ರಿಯ ಸಾಂಸ್ಕøತಿಕ ಚಟುವಟಿಕೆ. ಧರ್ಮ : ಪಾಕಿಸ್ತಾನ ಮುಖ್ಯವಾಗಿ ಮುಸ್ಲಿಮರ ದೇಶ. ಅಲ್ಲಿಯ ಜನಸಂಖ್ಯೆಯಲ್ಲಿ 88.1% ಮುಸ್ಲಿಮರು, 5.8% ಅನುಸೂಚಿತ ಹಿಂದೂ ವರ್ಗಗಳು 4.9% ಸವರ್ಣೀಯ ಹಿಂದೂಗಳು, 0.8% ಕ್ರೈಸ್ತರು ಮತ್ತು 0.4% ಬೌದ್ಧರು. ಮುಸ್ಲಿಮರಲ್ಲಿ ಸುನ್ನಿ ಪಂಥದವರು ಬಹುಸಂಖ್ಯಾತರು. ಅಲ್ಪಸಂಖ್ಯೆಯಲ್ಲಿರುವ ಕೆಲವು ಸಣ್ಣ ಪಂಥಗಳನ್ನು ಬಿಟ್ಟರೆ ಮುಸ್ಲಿಮ್‍ರಲ್ಲಿ ಬಹುಮಟ್ಟಿಗೆ ಪುರೋಹಿತ ವರ್ಗವಿಲ್ಲ. ಧರ್ಮಶ್ರದ್ಧೆಯುಳ್ಳ ಯಾವ ಮುಸ್ಲಿಮನಾದರೂ ಇಮಾಮ್ ಅಥವಾ ಮಸೀದಿಯ ಮುಖ್ಯನಾಗಬಹುದು. ಧರ್ಮಪಾರಂಗತರಾದವರಿಗೆ ಮುಲ್ಲಾ, ಮೌಲಾನ ಎಂಬ ಬಿರುದು ಕೊಡುತ್ತಾರೆ. ಸಮಾಜದಲ್ಲಿ ಗೌರವ ಪಡೆದ ಪೀರರ ಸಂಘಟನೆ ಮತ್ತು ಶಿಷ್ಯಪರಂಪರೆ ಇವೆ. ಪಾಕಿಸ್ತಾನ ಧರ್ಮಪ್ರಧಾನ ರಾಜ್ಯ. ಅದನ್ನು ಇಸ್ಲಾಮೀ ಗಣರಾಜ್ಯವೆಂದು ಸರ್ಕಾರ ಘೋಷಿಸಿದೆ. ಅನ್ಯಮತೀಯರಿಗೆ ಧಾರ್ಮಿಕ ಸ್ವಾತಂತ್ರ್ಯವಿದೆ. ಮುಖ್ಯ ಸ್ಥಳಗಳು : ಪಾಕಿಸ್ತಾನ ಪ್ರಾಗೈತಿಹಾಸಿಕ ಕಾಲದ ಸಂಪದ್ಭರಿತ ಅವಶೇಷಗಳಿಂದಲೂ ಅನೇಕ ಐತಿಹಾಸಿಕ ಸ್ಥಳಗಳಿಂದಲೂ ಕೂಡಿದೆ. ಸಿಂಧೂ ಕಣಿವೆ ನಾಗರಿಕತೆಯ ಕಾಲದ ನಗರ ನಿವೇಶನಗಳಾದ ಹರಪ್ಪ, ಮೊಹೆಂಜೊದಾರೋ ಮತ್ತು ಇತರ ಸ್ಥಳಗಳು ಜಗತ್ಪ್ರಸಿದ್ಧವಾಗಿವೆ. ಪಾಕಿಸ್ತಾನದ ಈಶಾನ್ಯ ಭಾಗದಲ್ಲಿ ಪ್ರಾಚೀನ ವಿದ್ಯಾಕೇಂದ್ರವಾದ ತಕ್ಷಶಿಲೆಯ ನಿವೇಶನವಿದೆ. ಮಾಣಿಕ್ಯಾಲಯ, ಪಾವರ್ ಮೊದಲಾದ ಸ್ಥಳಗಳಲ್ಲಿ ಬೌದ್ಧ ಸ್ಮಾರಕಗಳಿವೆ. ಅರೋರ್, ಮುಲ್ತಾನ್, ಜಲಾಲ್‍ಪುರ, ಮಾಲೊತ್, ಹೈದರಾಬಾದ್, ಖೈರ್‍ಪುರ, ಭಾವಲ್‍ಪುರ, ನಂದನ, ಖುಷಾಬ್ ಮೊದಲಾದ ಚಾರಿತ್ರಿಕ ಸ್ಥಳಗಳಿವೆ. ಶಿವಗಂಗಾ, ಹಸನ್ ಅಬ್ದುಲ್, ಕತಸ್ ಸೆಹ್ವಾನ್ ಮೊದಲಾದ ಧಾರ್ಮಿಕಸ್ಥಳಗಳಿವೆ. ಪಾಕಿಸ್ತಾನದ ಮುಖ್ಯ ನಗರಗಳ ಜನಸಂಖ್ಯೆ (2000) ಇಸ್ಲಾಮಾಬಾದ್ (ರಾಜಧಾನಿ) (2,04,364), ಕರಾಚಿ (52,08,170), ಲಾಹೋರ್ (29,52,689), ಹೈದರಾಬಾದ್ (7,51,529) ರಾವಲ್ಪಿಂಡಿ (7,94,843) ಮುಲ್ತಾನ್ (7,36,925), ಪೆಷಾವರ್ (5,06,896), ಸರ್ಗೋದ (2,91,362) ಸಕ್ಕೂರ್ (1,90,551) ಕ್ವೆಟ್ಟ (2,85,719), ಗುರ್ಜನ್‍ವಾಲಾ (6,37,591), ಸಿಯಾಲ್‍ಕೋಟ್ (3,02,009), ಬಹವಲ್‍ಪುರ (1,80,263) ಆರೋಗ್ಯ: ಆರೋಗ್ಯ ಸೌಲಭ್ಯ ಒದಗಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ. 13,400 ವೈದ್ಯರು ಮತ್ತು 4,700 ದಾದಿಯರಿದ್ದಾರೆ (1970), ಜನರಲ್ ಆಸ್ಪತ್ರೆಗಳು, ಡಿಸ್ಪೆನ್ಸರಿಗಳು ಮತ್ತು ಆರೋಗ್ಯಕೇಂದ್ರಗಳನ್ನು ರಾಷ್ಟ್ರಾದ್ಯಂತ ಸ್ಥಾಪಿಸಲಾಗಿದೆ. ಕ್ಷಯರೋಗ ಆಸ್ಪತ್ರೆಗಳು, ಕುಷ್ಠರೋಗ ಆಸ್ಪತ್ರೆಗಳಿವೆ. ದಾದಿಯರ ತರಬೇತಿ ಸಂಸ್ಥೆಗಳಿವೆ. ಕರಾಚಿಯಲ್ಲಿ ಆರೋಗ್ಯ ಶಿಕ್ಷಣ ಬ್ಯೂರೊ ಇದೆ. ಆದರೆ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನೂ ಆರೋಗ್ಯ ಸೌಲಭ್ಯಗಳ ಕೊರತೆಯುಂಟು. ಬಡವರಲ್ಲಿ, ಮಕ್ಕಳಲ್ಲಿ ಪೌಷ್ಟಿಕ ಅಂಶದ ಕೊರತೆ ಮತ್ತು ನೈರ್ಮಲ್ಯದ ಕೊರತೆ ಇವೆ. ಸಂವಿಧಾನ, ಆಡಳಿತ ಸಂವಿಧಾನದ ಇತಿಹಾಸ ಪಾಕಿಸ್ತಾನದ ರಾಜಕೀಯ ಇತಿಹಾಸ ಬ್ರಿಟಿಷ್ ಸಂಸತ್ತಿನಲ್ಲಿ ಅಂಗೀಕರಿಸಲಾದ ಭಾರತ ಸ್ವಾತಂತ್ರ್ಯ ಅಧಿನಿಯಮದ ವಿಧಿಗಳಿಗೆ ಅನುಸಾರವಾಗಿ ಆಗಿನ ವಿಶಾಲ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳಾಗಿ ವಿಭಜಿಸಿದಾಗ, 1947ರ ಆಗಸ್ಟ್ 14 ರಂದು, ಪಾಕಿಸ್ತಾನ ಅಸ್ತಿತ್ವಕ್ಕೆ ಬಂತು. ಪೂರ್ವ ಮತ್ತು ಪಶ್ಚಿಮ ಪ್ರಾಂತ್ಯಗಳನ್ನು ಒಳಗೊಂಡ ಪಾಕಿಸ್ತಾನ ಕಾಮನ್‍ವೆಲ್ತಿನ ಒಂದು ಸಾರ್ವಭೌಮ ರಾಷ್ಟ್ರವಾಗಿತ್ತು. 1956ರ ಮಾರ್ಚ್ 23ರಂದು ಜಾರಿಗೆ ಬಂದ ಸಂವಿಧಾನಕ್ಕೆ ಅನುಸಾರವಾಗಿ ಪಾಕಿಸ್ತಾನ ಇಸ್ಲಾಂ ಗಣರಾಜ್ಯವೆಂಬ ಹೆಸರಿನ ಸಂಯುಕ್ತ ಗಣರಾಜ್ಯವಾಯಿತು. 1958ರ ಅಕ್ಟೋಬರ್ 7 ರಂದು ಅಧ್ಯಕ್ಷ ಇಸ್ಕಂದರ್ ಮಿರ್ಜಾ ಪಾಕಿಸ್ತಾನದ ಸಂಸತ್ತನ್ನು ವಿಸರ್ಜಿಸಿ, ಸಂವಿಧಾನವನ್ನು ರದ್ದು ಮಾಡಿದರು. ಅವರು ಅಕ್ಟೋಬರ್ 27ರಂದು ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದರು. ಆಗ ಆ ಸ್ಥಾನಕ್ಕೆ ಜನರಲ್ ಮಹಮದ್ ಅಯೂಬ್ ಖಾನ್ ಬಂದರು. ಅದಕ್ಕೂ ಮೊದಲೇ ಅವರು ಲಷ್ಕರಿ ಶಾಸನದ ಮುಖ್ಯ ಆಡಳಿತಗಾರರೂ ಸೇನಾ ಮಹಾ ದಂಡನಾಯಕರೂ ಆಗಿದ್ದರು. ಅವರಿಗೆ ಸಹಾಯಕವಾಗಿ ಅಧ್ಯಕ್ಷೀಯ ಸಚಿವ ಸಂಪುಟವಿತ್ತು. 1960ರ ಫೆಬ್ರವರಿಯಲ್ಲಿ ಸ್ಥಳೀಯ ಸಮಿತಿಗಳ ಸುಮಾರು 80,000 ಸದಸ್ಯರು ಅಧ್ಯಕ್ಷ ಅಯೂಬರಲ್ಲಿ ವಿಶ್ವಾಸ ವ್ಯಕ್ತಪಡಿಸಿ, ಅವರು ಮುಂದಿನ 5 ವರ್ಷಗಳ ಕಾಲ ಅಧಿಕಾರದಲ್ಲಿರಲು ಮತ ನೀಡಿದರು. ಸಂವಿಧಾನ ಸಭೆ ಅಸ್ತಿತ್ವಕ್ಕೆ ಬಂತು. 1962ರ ಮಾರ್ಚ್ 1 ರಂದು ಅಧ್ಯಕ್ಷ ಅಯೂಬ್ ಹೊಸ ಸಂವಿಧಾನ ಘೋಷಿಸಿದರು. ಹೊಸ ಸಂವಿಧಾನ ಪ್ರಕಾರ ಪಾಕಿಸ್ತಾನದಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳೆಂಬ ಎರಡು ಪ್ರಾಂತ್ಯಗಳಿದ್ದುವು. ಉರ್ದು ಮತ್ತು ಬಂಗಾಲಿ ಆಡಳಿತ ಭಾಷೆಗಳಾಗಿದ್ದುವು. ಇಸ್ಲಾಮಾಬಾದ್ ರಾಜಧಾನಿ, ಢಾಕ್ಕಾ ಸಂಸದೀಯ ರಾಜಧಾನಿಯಾಗಿತ್ತು. ದೇಶಕ್ಕೆ ಪಾಕಿಸ್ತಾನ್ ಸಂಯುಕ್ತ ಗಣರಾಜ್ಯ (ಪಾಕಿಸ್ತಾನ್ ಇಸ್ಲಾಂ ಗಣರಾಜ್ಯವೆಂಬ ಹೆಸರಿಗೆ ಬದಲಾಗಿ) ಎಂಬ ಹೆಸರು ನೀಡಲಾಯಿತು. ಈ ಸಂವಿಧಾನದಲ್ಲಿ ಸೇನಾಪಡೆಗಳ ನಾಯಕತ್ವ, ಸಚಿವ ಸಂಪುಟದ ನೇಮಕ, ಪ್ರಾಂತೀಯ ರಾಜ್ಯಪಾಲರ ನೇಮಕ ಹೀಗೆ ಸ್ಥೂಲವಾದ ಕಾರ್ಯಾಂಗಾಧಿಕಾರಗಳನ್ನು ಅಧ್ಯಕ್ಷನಿಗೆ ನೀಡಲಾಗಿತ್ತು. ಅಧ್ಯಕ್ಷ ಪಶ್ಚಿಮ ಪಾಕಿಸ್ತಾನದವನಾದರೆ ರಾಷ್ಟ್ರೀಯ ಸಭಾಪತಿ ಪೂರ್ವ ಪಾಕಿಸ್ತಾನದವನಾಗಿರಬೇಕು. ಇಲ್ಲವೇ ವಿಲೋಮವಾಗಿರಬಹುದು. ಸಂವಿಧಾನ ತಿದ್ದುಪಡಿಗೆ ರಾಷ್ಟ್ರೀಯ ಸಭೆಯ 2/3ರಷ್ಟು ಬಹುಮತ ಅಗತ್ಯ. ತಿದ್ದುಪಡಿಯನ್ನು ನಿರಾಕರಿಸುವ ಅಧಿಕಾರವನ್ನು ಅಧ್ಯಕ್ಷ ಚಲಾಯಿಸಿದರೆ ಅಸೆಂಬ್ಲಿ (3/4 ರಷ್ಟು ಬಹುಮತದಿಂದ) ಅಧ್ಯಕ್ಷನ ನಿರಾಕರಣೆಯನ್ನು ತಳ್ಳಿ ಹಾಕಬಹುದು. ಇದನ್ನು ಅಧ್ಯಕ್ಷ ಪ್ರಜಾ ನಿರ್ಧಾರಕ್ಕೆ ಒಪ್ಪಿಸಬಹುದು ಅಥವಾ ಅಸೆಂಬ್ಲಿಯನ್ನು ವಿಸರ್ಜಿಸಬಹುದು. ಆತ ಅಸೆಂಬ್ಲಿಯನ್ನು ವಿಸರ್ಜಿಸಿದರೆ, 120 ದಿನಗಳೊಳಗಾಗಿ ತಾನಾಗಿಯೇ ಪುನರ್‍ಚುನಾವಣೆಯನ್ನು ಕೋರಬೇಕು. ಇವು ಈ ಸಂವಿಧಾನದ ಕೆಲವು ಮುಖ್ಯ ಅಂಶಗಳು. ಹೊಸ ಸಂವಿಧಾನಕ್ಕೆ ಅನುಸಾರವಾಗಿ ಅಧ್ಯಕ್ಷ ಅಯೂಬ್ ಘೋಷಿಸಿದಂತೆ 1965ರ ಮಾರ್ಚ್ 23ರ ರಾಷ್ಟ್ರೀಯ ಸಭೆಯ ಚುನಾವಣೆಗಳಲ್ಲಿ ಪಾಕಿಸ್ತಾನ ಮುಸ್ಲಿಂಲೀಗ್ ನಿಚ್ಚಳ ಬಹುಮತ ಗಳಿಸಿತು. 1970ರ ಮಾರ್ಚ್ 23ರಂದು ನಡೆಯಬೇಕಾದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಇಚ್ಛಿಸುವುದಿಲ್ಲವೆಂದು ಅಧ್ಯಕ್ಷ ಅಯೂಬ್ ಪ್ರಕಟಿಸಿದ್ದರು. ಜನರಲ್ ಎ.ಎಮ್.ಯಹ್ಯಾ ಖಾನರು ತತ್‍ಕ್ಷಣದಲ್ಲೇ ಇಡೀ ದೇಶದಲ್ಲಿ ಲಷ್ಕರಿ ಶಾಸನ ಘೋಷಿಸಿ ಅಧ್ಯಕ್ಷರಾದರಲ್ಲದೆ ಮುಖ್ಯ ಆಡಳಿತಗಾರರೂ ಆದರು. ಪಾಕಿಸ್ತಾನದ ರಾಜ್ಯ ವ್ಯವಸ್ಥಾ ಸಭೆಗೆ 1970ರ ಡಿಸೆಂಬರ್ 7 ರಂದು ಮಹಾ ಚುನಾವಣೆಗಳು ನಡೆದುವು. ಒಬ್ಬ ವ್ಯಕ್ತಿಗೆ ಒಂದು ಮತ ಹಾಗೂ ಸಾರ್ವತ್ರಿಕ ವಯಸ್ಕ ಮತದಾನ ತತ್ವಗಳನ್ನು ಆಧರಿಸಿದ ಗುಪ್ತ ಮತದಾನವದು. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು 16 ಮಂದಿ ಸ್ವತಂತ್ರರು ರಾಜ್ಯ ವ್ಯವಸ್ಥಾ ಸಭೆಯಲ್ಲಿ ಸ್ಥಾನ ಗಳಿಸಿದರು. ಷೇಖ್ ಮುಜೀಬುರ್ ರಹಮಾನರ ಧುರೀಣತ್ವದಲ್ಲಿ ಅವಾಮಿ ಲೀಗ್ 167 ಸ್ಥಾನ ಗಳಿಸಿತು. eóÉಡ್.ಎ.ಭುಟ್ಟೋರ ನಾಯಕತ್ವದಲ್ಲಿ ಪೀಪಲ್ಸ್ ಪಕ್ಷ 90 ಸ್ಥಾನ ಗಳಿಸಿತು. 1970ರ ಅಧಿನಿಯಮದ ಚೌಕಟ್ಟಿನಲ್ಲೆ ರಾಷ್ಟ್ರೀಯ ಸಭೆ 12 ದಿನಗಳೊಳಗಾಗಿ ಸಂವಿಧಾನ ರೂಪಿಸಬೇಕಾಗಿತ್ತು. ಸಭೆ 1971ರ ಮಾರ್ಚ್ 30ರಂದು ಸಮಾವೇಶಗೊಳ್ಳಬೇಕೆಂದು ಅಧ್ಯಕ್ಷರಿಂದ ನಿರ್ಧಾರವಾಗಿತ್ತು. ಸಂವಿಧಾನ ರೂಪಣೆಗೆ ಸಂಬಂಧಿಸಿದಂತೆ ಸಾಮಾನ್ಯ ಒಪ್ಪಂದಕ್ಕೆ ಬರುವ ದೃಷ್ಟಿಯಿಂದ ನಡುಗಾಲದಲ್ಲಿ(1970ರ ಡಿಸೆಂಬರ್-1971ರ ಫೆಬ್ರವರಿ) ರಾಜಕೀಯ ಸಂಧಾನ ಸಭೆನಡೆಯಿತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳಲ್ಲಿ, ಮುಖ್ಯವಾಗಿ ಷೇಖ್ ಮುಜೀಬರ್ ರಹಮಾನ್ ಮತ್ತು ಭುಟ್ಟೋ ಇವರ ನಡುವೆ, ಮಾತುಕತೆ ನಡೆದರೂ ಪೂರ್ಣ ಬಿಕ್ಕಟ್ಟಿನ ಸ್ಥಿತಿ ಉಂಟಾಯಿತು. ಆದ್ದರಿಂದ ರಾಜಕೀಯ ನಾಯಕರು ಒಂದು ಒಪ್ಪಂದಕ್ಕೆ ಬರುವುದಕ್ಕಾಗಿ ಹೆಚ್ಚಿನ ಕಾಲಾವಕಾಶ ಮಾಡಿಕೊಡಲು 1971ರ ಮಾರ್ಚ್ 3ರಂದು ಸಮಾವೇಶಗೊಳ್ಳಬೇಕಾಗಿದ್ದ ರಾಷ್ಟ್ರೀಯ ಸಭೆಯ ಆರಂಭದ ಅಧಿವೇಶನವನ್ನು ಅಧ್ಯಕ್ಷರು ಮಾರ್ಚ್ 25ರ ವರೆಗೆ ಮುಂದೂಡಿದರು. ಇದಕ್ಕೆ ಪೂರ್ವ ಪಾಕಿಸ್ತಾನದಲ್ಲಿ (ಬಾಂಗ್ಲಾದೇಶ) ಪ್ರಚಂಡ ಪ್ರತಿಭಟನೆ ವ್ಯಕ್ತವಾಯಿತು. ಆಗಿನ ಪೂರ್ವ ಪಾಕಿಸ್ತಾನದ ಸ್ವಾತಂತ್ರ್ಯಕ್ಕಾಗಿ ಚಳುವಳಿ ಬಿರುಸಾದಾಗ ಮಾರ್ಚ್25-26ರ ರಾತ್ರಿಯಲ್ಲಿ ಆ ಪ್ರದೇಶದ ಮೇಲೆ ಪಾಕಿಸ್ತಾನಿ ಸೇನೆ ಕ್ರಮ ತೆಗೆದುಕೊಂಡಿತು. ವಿಷಮ ಪರಿಸ್ಥಿತಿ ಉಂಟಾಗಬಹುದೆಂದು ಅಧ್ಯಕ್ಷ ಯಹ್ಯಾ ಖಾನರು ರಾಜಕೀಯವಾಗಿ ಅವಾಮಿ ಪಕ್ಷವನ್ನು ನಿಷೇಧಿಸಿದರಾದರೂ, ಮಹಾಚುನಾವಣೆಗಳನ್ನು ರದ್ದುಗೊಳಿಸಲಿಲ್ಲ. 1971ರ ಡಿಸೆಂಬರ್‍ನಲ್ಲಿ ಭಾರತ ಸೇನೆ ಪೂರ್ವಪಾಕಿಸ್ತಾನದಲ್ಲಿ ಬಾಂಗ್ಲಾ ವಿಮೋಚನಾ ಸೈನಿಕರ ನೆರವಿಗೆ ಹೋಯಿತು. 1971ರ ಡಿಸೆಂಬರ್ 17ರಂದು ಭಾರತ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿತು. ಪೂರ್ವಪಾಕಿಸ್ತಾನದ ಎಲ್ಲ ಪ್ರದೇಶವನ್ನೂ ಒಳಗೊಂಡಂತೆ ಸ್ವತಂತ್ರ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದಿತ್ತು. 1971ರ ಡಿಸೆಂಬರ್ 20ರಂದು ಅಧ್ಯಕ್ಷ ಎ.ಎಂ ಯಹ್ಯಾ ಖಾನ್ ರಾಜೀನಾಮೆ ನೀಡಿದರು. ಜುಲ್ಫಿಕರ್ ಅಲಿ ಭುಟ್ಟೋ ಅಧ್ಯಕ್ಷರಾದರು; ಹಾಗೂ ಅಂದಿನಿಂದಲೇ ಲಷ್ಕರಿ ಶಾಸನದ ಆಡಳಿತಗಾರರೂ ಆದರು. 1972ರ ಏಪ್ರಿಲ್ 21ರಂದು ಲಷ್ಕರಿ ಶಾಸನವನ್ನು ತೆಗೆದುಹಾಕಿ ಅಧ್ಯಕ್ಷ ಭುಟ್ಟೋ ತಾತ್ಕಾಲಿಕ ಸಂವಿಧಾನದಂತೆ, ಅಂದಿನಿಂದ ಪ್ರಥಮ ನಾಗರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದರು. ಅಧ್ಯಕ್ಷ ಭುಟ್ಟೋ ತತ್‍ಕ್ಷಣದಲ್ಲಿಯೇ ಕೇಂದ್ರ ಹಾಗೂ ಪ್ರಾಂತ್ಯಗಳ ಮಟ್ಟದಲ್ಲಿ ಕೆಲವು ಮುಖ್ಯ ನೇಮಕಗಳನ್ನು ಮಾಡಿ ಅನಂತರ ತಮ್ಮ ಸಚಿವ ಸಂಪುಟವನ್ನು ಹೆಸರಿಸಿದರು. ಅವರ ಸಚಿವ ಸಂಪುಟವನ್ನು ಕೆಲವು ಸಂದರ್ಭಗಳಲ್ಲಿ ವಿಸ್ತಾರಗೊಳಿಸಲು ಅವಕಾಶ ಮಾಡಲಾಯಿತು. ಭುಟ್ಟೋ ಅಧಿಕಾರ ವಹಿಸಿಕೊಂಡ ಅನಂತರ ರಾಷ್ಟ್ರೀಯ ನೀತಿ, ವಿದೇಶಾಂಗ ನೀತಿ ಮತ್ತು ಸಾಮಾಜಿಕ ಸುಧಾರಣೆಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. 1973ರ ಮಾರ್ಚ್ 23ರ ಒಳಗೆ ಖಾಯಂ ಸಂವಿಧಾನ ಸಿದ್ಧವಾಗುವುದೆಂದು ಅವರು ಸೂಚನೆ ನೀಡಿದರು. 1972ರ ಜನವರಿ 30ರಂದು ಪಾಕಿಸ್ತಾನ ಕಾಮನ್‍ವೆಲ್ತಿನಿಂದ ಹೊರಬಂತು. ಅಧ್ಯಕ್ಷ ಭುಟ್ಟೋ ಅರ್ಥವತ್ತಾಗಿ ಪೂರ್ವ ಪಾಕಿಸ್ತಾನದ ಉಪಚುನಾವಣೆಗಳ ಫಲಿತಾಂಶಗಳನ್ನು ರದ್ದುಗೊಳಿಸಿದರು. ರಾಷ್ಟ್ರೀಯ ಅವಾಮಿ ಪಕ್ಷದ ಮೇಲಿನ ನಿಷೇಧವನ್ನು ತೆಗೆದು ಹಾಕಿದರು ಮತ್ತು ಗೃಹ ಬಂಧನದಲ್ಲಿದ್ದ ಷೇಖ್ ಮುಜಿಬುರ್ ರಹಮಾನರನ್ನು ಬೇಷರತ್ತಾಗಿ ಬಿಡುಗಡೆ ಮಾಡಿದರು. 1973ರ ಏಪ್ರಿಲ್ 10ರಂದು ರಾಷ್ಟ್ರೀಯ ಸಭೆಯ ಅಂಗೀಕಾರ ಪಡೆದಿದ್ದ ಹೊಸ ಸಂವಿಧಾನವನ್ನು 1973ರ ಆಗಸ್ಟ್ 14ರಂದು ಜಾರಿಗೆ ತರಲಾಯಿತು. ಈ ಸಂವಿಧಾನದಂತೆ ಪ್ರಧಾನ ಮಂತ್ರಿಯಾಗುವ ಸಲುವಾಗಿ ಭುಟ್ಟೋ ಅಧ್ಯಕ್ಷತೆಯ ಅಧಿಕಾರ ತ್ಯಜಿಸಿದರು. ಫಜûಲ್ ಇಲಾಹಿ ಚೌಧರಿಯನ್ನು ಪಾಕಿಸ್ತಾನದ ಅಧ್ಯಕ್ಷರಾಗಿ ಚುನಾಯಿಸಲಾಯಿತು. 1977ರಲ್ಲಿ ಚುನಾವಣೇ ನಡೆದು ಭುಟ್ಟೋ ಅಧಿಕಾರದಲ್ಲಿ ಮುಂದುವರಿದರಾದರೂ ಚುನಾವಣೆಗಳನ್ನು ನ್ಯಾಯವಾಗಿ ನಡೆಸಲಿಲ್ಲವೆಂಬ ಕಾರಣದಿಂದ ಪಾಕಿಸ್ತಾನದಲ್ಲಿ ಪ್ರಚಂಡ ವಿರೋಧ ಉಂಟಾಯಿತು. ಕ್ಷಿಪ್ರಾಕ್ರಮಣ ಜಿûಯಾಉಲ್ ರಹಮಾನ್ ಅಧಿಕಾರ ವಹಿಸಿಕೊಂಡರು. ಭುಟ್ಟೋ ಪದಚ್ಯುತರಾದರು. ಕೊಲೆಯ ಸಂಚಿನ ಆಪಾದನೆಯ ವಿಚಾರಣೆಯಲ್ಲಿ ಭುಟ್ಟೋ ತಪ್ಪಿತಸ್ಥರೆಂದು ಅವರನ್ನು ಅನಂತರ ಮರಣದಂಡನೆಗೆ ಗುರಿಪಡಿಸಲಾಯಿತು. ಸಂವಿಧಾನ ಪಾಕಿಸ್ತಾನದ ಸಂಸತ್ತಿನಲ್ಲಿ ಸೆನೆಟ್ ಮತ್ತು ರಾಷ್ಟ್ರೀಯ ಸಭೆ ಎಂಬ ಎರಡು ಸದನಗಳಿವೆ. ಸೆನೆಟ್‍ನಲ್ಲಿ 63 ಸದಸ್ಯರಿರುತ್ತಾರೆ. ಪಾಕಿಸ್ತಾನದಲ್ಲಿ 4 ಪ್ರಾಂತ್ಯಗಳಿವೆ. ಪ್ರತಿಯೊಂದು ಪ್ರಾಂತೀಯ ಸಭೆಯೂ ಸೆನೆಟ್‍ಗೆ 14 ಸದಸ್ಯರನ್ನು ಚುನಾಯಿಸುತ್ತದೆ. ಕೇಂದ್ರಾಡಳಿತ ಬುಡಕಟ್ಟಿನ ಪ್ರದೇಶಗಳಿಂದ ಆಯ್ಕೆಯಾಗುವ ಸದಸ್ಯರು 5 ಮಂದಿ. ಕೇಂದ್ರ ರಾಜಧಾನಿ ಪ್ರದೇಶದಿಂದ 2 ಸದಸ್ಯರನ್ನು ಆರಿಸಲಾಗುತ್ತದೆ. ಈ ಸದನದ ಸದಸ್ಯರ ಅಧಿಕಾರಾವಧಿ 4 ವರ್ಷಗಳು. ಅವರಲ್ಲಿ ಅರ್ಧದಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ. ಆದರೆ ಕೇಂದ್ರಾಡಳಿತ ಬುಡಕಟ್ಟಿನ ಪ್ರದೇಶದಿಂದ ಸಭೆಗೆ ಚುನಾಯಿತರಾದ ಸದಸ್ಯರಲ್ಲಿ ಮೊದಲ 3 ಸದಸ್ಯರು 2 ವರ್ಷಗಳ ಅನಂತರ ನಿವೃತ್ತರಾಗುತ್ತಾರೆ. ರಾಷ್ಟ್ರೀಯ ಸಭೆಯಲ್ಲಿ ವಯಸ್ಕ ಮತದಾನ ಪದ್ಧತಿಯಿಂದ ಚುನಾಯಿಸಲಾದ 200 ಸದಸ್ಯರಿರುತ್ತಾರೆ. 10 ಅಧಿಕ ಸ್ಥಾನಗಳನ್ನು ಸ್ತ್ರೀಯರಿಗೆ ಕಾದಿರಿಸಲಾಗಿದೆ. 10 ವರ್ಷಗಳವರೆಗೆ ಇಲ್ಲವೇ ಮುಂದಿನ ಮಹಾಚುನಾವಣೆಯ ವರೆಗೆ(ಯಾವುದು ಅನಂತರವೋ ಅಲ್ಲಿಯವರೆಗೆ) ಈ ಸ್ಥಾನಗಳಲ್ಲಿ ಇರಲು ಅವಕಾಶವಿದೆ. ಕಾದಿರಿಸಲಿರುವ ಎಲ್ಲ ಸ್ಥಾನಗಳಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಸ್ತ್ರೀಯರೂ ಅರ್ಹರಾಗಿರುತ್ತಾರೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿನ ಸ್ಥಾನಗಳನ್ನು ಪ್ರಾಂತ್ಯಗಳು, ಕೇಂದ್ರಾಡಳಿತ ಬುಡಕಟ್ಟು ಪ್ರದೇಶಗಳು ಮತ್ತು ಕೇಂದ್ರರಾಜಧಾನಿ ಇವುಗಳ ನಡುವೆ ಜನಸಂಖ್ಯೆಯ ಆಧಾರದ ಮೇಲೆ ಹಂಚಲಾಗುತ್ತದೆ. ರಾಷ್ಟ್ರೀಯ ಅಸೆಂಬ್ಲಿಯ ಅವಧಿ 5 ವರ್ಷಗಳು. ನ್ಯಾಯಾಂಗ ಪಾಕಿಸ್ತಾನದ ನ್ಯಾಯಾಂತ ವ್ಯವಸ್ಥೆಗೆ ಬ್ರಿಟಿಷ್ ವ್ಯವಸ್ಥೆಯೇ ಮೂಲ. ಬ್ರಿಟಿಷ್ ಭಾರತದಲ್ಲಿ ಬಳಕೆಯಲ್ಲಿದ್ದ ವ್ಯವಸ್ಥೆಯಿಂದ ಅದು ನೇರವಾಗಿ ಆಚರಣೆಗೆ ಬಂದಿದೆ. ಸರ್ವೋಚ್ಛ ನ್ಯಾಯಾಲಯಕ್ಕೆ ಮೂಲ, ಮೇಲ್ಮನವಿ ಮತ್ತು ಸಲಹಾ ವ್ಯಾಪ್ತಿ ಇದೆ. ಈ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶನಲ್ಲದೆ 6 ಕಿರಿಯ ನ್ಯಾಯಾಧೀಶರಿರುತ್ತಾರೆ. ರಾಷ್ಟ್ರದ ಅಧ್ಯಕ್ಷರು ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ. ಪಾಕಿಸ್ತಾನದಲ್ಲಿ 3 ಉಚ್ಚ ನ್ಯಾಯಾಲಯಗಳಿವೆ. ಅಧ್ಯಕ್ಷರ ಒಪ್ಪಿಗೆಯಿಂದ 2 ಪ್ರಾಂತ್ಯಗಳಿಗೆ ಒಂದೇ ಶ್ರೇಷ್ಠ ನ್ಯಾಯಾಲಯ ಇರಲು ಕೂಡ ಅವಕಾಶವಿದೆ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು ಅಧ್ಯಕ್ಷರು ನೇಮಿಸುತ್ತಾರೆ. ಉಚ್ಚ ನ್ಯಾಯಾಲಯಗಳ ಅಧೀನದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳಿವೆ. ಇವುಗಳ ಅಧೀನದಲ್ಲಿ ಅಧೀನ ನ್ಯಾಯಾಲಯಗಳು, ನಾಗರಿಕ ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಮ ನ್ಯಾಯಾಲಯಗಳು ಮತ್ತು ಅಪರಾಧ ವಿಷಯಗಳಿಗೆ ಸಂಬಂಧಿಸಿದಂತೆ ದಂಡಾಧೀಶರು ಇರುತ್ತಾರೆ. ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತ ನ್ಯಾಯಾಂಗಕ್ಕೆ ಸಂವಿಧಾನ ಅವಕಾಶ ಮಾಡಿಕೊಟ್ಟಿರುವುದಲ್ಲದೆ, ಪ್ರಜೆಗಳಲ್ಲಿಯ ನಾಗರಿಕ ಮತ್ತು ಅಪರಾಧಕ್ಕೆ ಸಂಬಂಧಿಸಿದ ವಾದಗಳನ್ನು ಬಗೆಹರಿಸಲು ರಾಜಿನ್ಯಾಯ ಸ್ಥಾನಗಳನ್ನು ಸ್ಥಾಪಿಸಲು ಸರ್ಕಾರ 1961ರ ಫೆಬ್ರವರಿಯಲ್ಲಿ ನಿರ್ಧರಿಸಿತು. ನ್ಯಾಯಾಧೀಶರ ನಡತೆಯನ್ನು ಪ್ರಶ್ನಿಸಲು ಶ್ರೇಷ್ಠ ನ್ಯಾಯಿಕ ಸಮಿತಿಗೆ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಈ ಸಮಿತಿಯಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಅದೇ ನ್ಯಾಯಾಲಯದ ಜ್ಯೇಷ್ಠತಮರಾದ ಇಬ್ಬರು ನ್ಯಾಯಾಧೀಶರು ಮತ್ತು ಉಚ್ಚ ನ್ಯಾಯಾಲಯದ ಇಬ್ಬರು ಜ್ಯೇಷ್ಠತಮ ನ್ಯಾಯಾಧೀಶರು ಇರುತ್ತಾರೆ. ಅಧ್ಯಕ್ಷರಿಂದ ನೇಮಕಗೊಂಡ ಒಬ್ಬ ಅಟಾರ್ನಿ ಜನರಲ್ ಇರುತ್ತಾನೆ. ಅವನು ಪಾಕಿಸ್ತಾನದ ಎಲ್ಲ ನ್ಯಾಯಾಲಯಗಳಲ್ಲೂ ಹಾಜರಿರುವ ಹಕ್ಕನ್ನು ಪಡೆದಿರುತ್ತಾನೆ. ಆಡಳಿತ ಪಾಕಿಸ್ತಾನದಲ್ಲಿ ಪಂಜಾಬ್, ವಾಯವ್ಯ ಸರಹದ್ದು ಪ್ರಾಂತ್ಯ, ಸಿಂಧ್ ಮತ್ತು ಬಲೂಚಿಸ್ತಾನಗಳೆಂಬ ನಾಲ್ಕು ಪ್ರಾಂತ್ಯಗಳಿವೆ. ಇವು 1970ರ ಜುಲೈಗೆ ಮುಂಚಿತವಾಗಿ ಒಂದೇ ಆಡಳಿತ ಘಟಕದಲ್ಲಿ ಸೇರಿದ್ದುವು. ಬಹಾವಲ್ ಪುರ, ಡೇರಾ, ಇಸ್‍ಮೇಲ್ ಖಾನ್, ಹೈದರಾಬಾದ್, ಕರಾಚಿ, ಕಲಾಟ್, ಖೈರ್‍ಪುರ್, ಲಾಹೋರ್, ಮಲಕಂದ್, ಮುಲ್ತಾನ್, ಪೆಷಾವರ್, ರಾವಲ್ಪಿಂಡಿ, ಸರ್‍ಗೋಧ, ಕ್ವೆಟ್ಟ ಇವು ವಿಭಾಗಗಳು. ಒಟ್ಟು 51 ಜಿಲ್ಲೆಗಳಿವೆ. ನಾಲ್ಕು ಪ್ರಾಂತ್ಯಗಳಲ್ಲಿನ ಪ್ರತಿಯೊಂದು ಪ್ರಾಂತ್ಯದಲ್ಲಿ ಮುಖ್ಯಮಂತ್ರಿ ಆಡಳಿತ ನಡೆಸುತ್ತಾನೆ. ಆತನಿಗೆ ಸಚಿವ ಸಂಪುಟ ಮತ್ತು ಒಬ್ಬ ಕಾರ್ಯದರ್ಶಿಯ ನೇತೃತ್ವದಲ್ಲಿನ ಪ್ರಾಂತೀಯ ಸಚಿವಾಲಯ ಸಹಾಯ ನೀಡುತ್ತವೆ. ಪ್ರಾಂತೀಯ ರಾಜ್ಯಪಾಲರು ಅಧ್ಯಕ್ಷನಿಂದ ನೇಮಕಗೊಳ್ಳುತ್ತಾರೆ. ಆತನ ವಿಶ್ವಾಸ ಇರುವವರೆಗೆ ಅಧಿಕಾರದಲ್ಲಿ ಉಳಿಯುತ್ತಾರೆ. ಅಧ್ಯಕ್ಷನಿಂದ ನೇಮಕಗೊಂಡ ಕಮಿಷನರ್‍ಗಳು ಸಂಬಂಧಿಸಿದ ವಿಭಾಗಗಳಲ್ಲಿ ಆಡಳಿತ ನಡೆಸುತ್ತಾರೆ. ಪ್ರಾಂತೀಯ ಸರ್ಕಾರಗಳಿಗೆ ಜವಾಬ್ದಾರಿ ಹೊಂದಿರುವ ಜಿಲ್ಲಾಧಿಕಾರಿ ಅಥವಾ ಕಲೆಕ್ಟರ್‍ಗಳ ಆಡಳಿತ ನಿಯಂತ್ರಣಕ್ಕೆ ಜಿಲ್ಲೆಗಳು ಒಳಪಡುತ್ತವೆ. ಇತಿಹಾಸ ಪ್ರಾಗಿತಿಹಾಸ ಪಾಕಿಸ್ತಾನ ಒಂದು ಪ್ರತ್ಯೇಕ ರಾಷ್ಟ್ರವಾದ್ದು 1947ರಲ್ಲಾದರೂ ಈ ಪ್ರದೇಶದ ಇತಿಹಾಸ ಬಹಳ ಪ್ರಾಚೀನ ಕಾಲದಿಂದಲೂ ಗಮನಾರ್ಹವಾಗಿದೆ. ಆದರೂ ಇಲ್ಲಿ ವ್ಯವಸ್ಥಿತ ಪ್ರಾಕ್ತನ ಸಂಶೋಧನೆಗಳು ಹೆಚ್ಚಾಗಿ ನಡೆದಿಲ್ಲವಾದ್ದರಿಂದ ಇಲ್ಲಿ ಆದಿಮಾನವನ ಆಗಾಗಿನ ಚಟುವಟಿಕೆಗಳ ಸಮಗ್ರ ಚಿತ್ರ ದೊರೆಯದಾಗಿದೆ. ಭರತಖಂಡದ ಪ್ರಾಚೀನತಮ ಶಿಲಾಯುಗ ಸಂಸ್ಕøತಿಗಳ ಪಳೆಯುಳಿಕೆಗಳನ್ನು ಪಂಜಾಬಿನ ಸೋಹನ್ ನದಿ ಕಣಿವೆಯಲ್ಲಿ 1935ರ ವೇಳೆಗೆ ಡಾ.ಹೆಲ್ಮೆಟ್ ಡಿ ಟೆರ್ರಾ ನಾಯಕತ್ವದಲ್ಲಿ ಅಮೆರಿಕದಿಂದ ಬಂದ ಸಂಶೋಧನ ತಂಡ ಕಂಡುಹಿಡಿಯಿತು. ಅದರ ಪ್ರಕಾರ ಮಧ್ಯ ಹಿಮಯುಗದಲ್ಲಿ ಮಾನವ ಮೊದಲು ಇಲ್ಲಿ ನೆಲೆಸಿದ್ದ, ಅವನು ಬಹಳ ದೊಡ್ಡ ಒರಟಾದ ಚಕ್ಕೆಕಲ್ಲಿನ ಆಯುಧಗಳನ್ನು ಬಳಸುತ್ತಿದ್ದ. ಆದರೆ ಅವು ಮಾನವ ನಿರ್ಮಿತವಲ್ಲವೇನೋ ಎಂಬ ಸಂದೇಹವನ್ನು ವಿದ್ವಾಂಸರು ಈಚೆಗೆ ವ್ಯಕ್ತಪಡಿಸುತ್ತಾರೆ. ಅನಂತರಕಾಲದಲ್ಲಿ, ಸೋಹನ್ ಸಂಸ್ಕøತಿಯವೆಂದು ಹೇಳಲಾದ, ಉರಂಟು ಕಲ್ಲಿನಿಂದ ಏಕಮುಖವಾದ, ಚಕ್ಕೆಗಳನ್ನು ತೆಗೆದು ನಿರ್ಮಿಸಿದ. ಮಚ್ಚುಕತ್ತಿ ಮತ್ತು ತುಂಡುಕೊಡಲಿಗಳ ಬಗ್ಗೆ ಇಂಥ ಸಂದೇಹಕ್ಕೆ ಎಡೆಯಿಲ್ಲ. ವಿವಿಧ ಸಂಶೋಧಕ ಪಂಡಿತರ ಹೇಳಿಕೆಗಳಿಗೆ ಅನುಗುಣವಾಗಿ ಈ ಸಂಸ್ಕøತಿಗಳನ್ನು ಕ್ರಿ.ಪೂ1500000-200000 ಕಾಲಕ್ಕೆ ನಿರ್ದೇಶಿಸಬಹುದಾಗಿದೆ. ಈ ದೀರ್ಘಕಾಲದ ಉದ್ದಕ್ಕೂ ಆಯುಧ ತಯಾರಿಕೆಯಲ್ಲಿ ಸುಧಾರಣೆಗಳಾಗುತ್ತಿದ್ದುದರಿಂದ, ಈ ಸಂಸ್ಕøತಿಯ ಆಯುಧಗಳನ್ನು ಆದಿಕಾಲದ, ಅನಂತರ ಕಾಲದ ಮತ್ತು ಸುಧಾರಿತ ಸೋಹನ್ ಸಂಸ್ಕøತಿಗಳೆಂದು ಮೂರು ಗುಂಪುಗಳಾಗಿ ವಿಭಜಿಸಲಾಗಿದೆ. ಆದಿಕಾಲದಲ್ಲಿ ಉಂಡೆಕಲ್ಲುಗಳನ್ನು ಸೀಳಿ ಅವುಗಳ ಒಂದು ಪಾಶ್ರ್ವದಿಂದ ಚಕ್ಕೆಗಳನ್ನು ತೆಗೆದು ಆಯುಧಗಳನ್ನು ಮಾಡಲಾಗುತ್ತಿತ್ತು. ಅನಂತರದ ಕಾಲದಲ್ಲಿ ಸೀಳಿದ ಕಲ್ಲುಗಳ ಒಂದು ಅಥವಾ ಎರಡು ಮುಖಗಳಿಂದಲೂ ಚಕ್ಕೆಗಳನ್ನು ತೆಗೆದು ಉತ್ತಮ ಆಕೃತಿಯ ಮತ್ತು ಹೆಚ್ಚು ಉಪಯುಕ್ತವಾದ ಕೊಡಲಿಗಳನ್ನು ತಯಾರಿಸುತ್ತಿದ್ದುದಲ್ಲದೆ ಅವರು ಲೆವಾಲ್ವಾಷಿಯನ್ ವಿಧಾನದಲ್ಲಿ ಮಾಡಿದ ಚಕ್ಕೆಕಲ್ಲಿನ ಆಯುಧಗಳನ್ನೂ ಬಳಸುತ್ತಿದ್ದರು. ಅವರ ಆಯುಧಗಳಲ್ಲಿ ಅರ್ಧದಷ್ಟು ಇಂಥವು ಆಗಿದ್ದುವು. ಪಾಕಿಸ್ತಾನದ ಪಂಜಾಬ್ ಪ್ರದೇಶದಲ್ಲಿ ಜೌಂತ್ರ, ಅಡಿಯಾಲ್, ಬಲವಾಲ್ ಮತ್ತು ಘರಿಯಾಲ್ ಪ್ರದೇಶಗಳಲ್ಲಿ, ಆದಿ ಪೂರ್ವ ಶಿಲಾಯುಗಕ್ಕೆ ಸೇರಿದ, ಆದರೆ ಪರ್ಯಾಯ ದ್ವೀಪೀಯ ಭಾರತದಲ್ಲಿ ಪ್ರಬಲವಾಗಿರುವ, ಕೈಗೊಡಲಿ-ಕ್ಲೀವರ್ ಸಂಸ್ಕøತಿಯ ಕುರುಹುಗಳೂ ಕಂಡುಬಂದಿವೆ. ಸುಧಾರಿತ ಸೋಹನ್ ಸಂಸ್ಕøತಿಯಲ್ಲಿ ಉರುಟು ಕಲ್ಲಿನ ಆಯುಧಗಳು ಬಹಳ ಕಡಿಮೆಯಾದುವಲ್ಲದೆ ಸಣ್ಣವೂ ಉತ್ತಮವಾಗಿ ತಯಾರಿಸಿದವೂ ಆಗಿದ್ದುವು; ಆದರೆ ಚಕ್ಕೆ ಕಲ್ಲಿನ ಆಯುಧಗಳು ಅಧಿಕ ಸಂಖ್ಯೆಯಲ್ಲಿ ಕಂಡುಬಂದುವು. ಈ ಆಯುಧಗಳನ್ನು ಸಾಮಾನ್ಯವಾಗಿ ಮಧ್ಯ ಪೂರ್ವ ಶಿಲಾಯುಗ ಸಂಸ್ಕøತಿಗೆ (ಕ್ರಿ.ಪೂ 100000) ನಿರ್ದೇಶಿಸಲಾಗಿದೆ. ಈಚಿನ ವರ್ಷಗಳಲ್ಲಿ ಎ.ಎಚ್.ದಾನಿಯವರು ಪೆಷಾವರ್ ಬಳಿಯ ಸಂಘಾವೊಗುಹೆಗಳಲ್ಲಿ ಮಧ್ಯ ಪೂರ್ವ ಶಿಲಾಯುಗ ಸಂಸ್ಕøತಿಯ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ. ಗುಹೆಗಳಲ್ಲಿ ನಡೆದ ಉತ್ಖನನದಿಂದ ಶಿಲಾಯುಗಕ್ಕೆ ಸೇರುವ ಮೂರು ಹಂತಗಳ ಆಯುಧಗಳು ದೊರೆತಿವೆ. ಮೊದಲಿನ ಎರಡು ಮೇಲಿನ ಸಂಸ್ಕøತಿಗೂ ಮೂರನೆಯದು ಕ್ರಮೇಣ ಸೂಕ್ಷ್ಮಶಿಲಾಯುಗದತ್ತ ಹೊರಳುತ್ತಿದ್ದ ಸಂಸ್ಕøತಿಗೂ ಸೇರುತ್ತವೆ. ಇವು ಸುಧಾರಿತ ಸೋಹನ್ ಸಂಸ್ಕøತಿಯಿಂದ ಕೆಲವು ಅಂಶಗಳಲ್ಲಿ ಭಿನ್ನವಾಗಿವೆ. ಇವು ಆಫ್ಘಾನಿಸ್ತಾನ ಮತ್ತು ಇರಾನಿನ ಅದೇ ಸಂಸ್ಕøತಿಯ ಆಯುಧ ರೀತಿಗಳನ್ನು ಹೋಲುತ್ತವೆ. ಆಗಿನ ಜನ ಹೆಚ್ಚಾಗಿ ಗುಹೆಗಳಲ್ಲಿ ವಾಸಿಸುತ್ತ, ಆಹಾರ ಸಂಗ್ರಹಣೆಯಿಂದ ಜೀವನ ಸಾಗಿಸುತ್ತಿದ್ದರು. ಈ ಸಂಸ್ಕøತಿಗಳ ಕಾಲವನ್ನು ಕ್ರಿ,ಪೂ 50000-10000 ಎಂದು ಹೇಳಬಹುದಾಗಿದೆ. ಈವರೆಗೆ ಪರಿಶೀಲಿಸಿದ ಸಂಸ್ಕøತಿಗಳ ಆಯುಧೋಪಕರಣಗಳಿಂದ ಮಾತ್ರ ಆಗಿನ ಜನಜೀವನದ ರೀತಿ ಪದ್ಧತಿಗಳನ್ನು ಊಹಿಸಬೇಕಾಗಿದೆ. ಆ ಸಂಸ್ಕøತಿಗಳ ಕರ್ತೃಗಳಾದ ಮಾನವರ ದೇಹಾವಶೇಷಗಳು ಈವರೆಗೂ ದೊರೆತಿಲ್ಲವಾದ್ದರಿಂದ ಅವರ ಸಮಗ್ರ ಚಿತ್ರ ತಿಳಿದಿಲ್ಲ. ಚೀನ, ಇಂಡೊನೇಷ್ಯ ಮತ್ತು ಮಲೇಷಿಯಗಳಲ್ಲಿ ಇದನ್ನು ಹೋಲುವ ಸಂಸ್ಕøತಿಗಳಿದ್ದುದರಿಂದ ಇಲ್ಲಿಯ ಜನರು ಅವರಂತೆ ಇದ್ದಿರಬಹುದು. ಮಧ್ಯ ಪೂರ್ವ ಶಿಲಾಯುಗ ಕಾಲದಲ್ಲಿ ಬಹುಶಃ ಬೇರೆ ಗುಂಪಿನ ಜನರು ಪಶ್ಚಿಮ ಏಷ್ಯ ಪ್ರದೇಶಗಳಿಂದ ತಮ್ಮ ಸಂಸ್ಕøತಿಯ ಜೀವನಕ್ರಮವನ್ನು ಈ ಪ್ರದೇಶಕ್ಕೆ ಹರಡಲಾರಂಭಿಸಿದರು. ಮತ್ತು ಈ ಜನರು ಮುಂದಿನ ಐತಿಹಾಸಿಕ ಯುಗದ ಜನತೆಯ ಮೂಲಪುರುಷರೆಂದು ಹೇಳಬಹುದಾಗಿದೆ. ಕ್ರಿ.ಪೂ.5000 ದಿಂದ ಈಚೆಗೆ ಬಲೂಚಿಸ್ತಾನ ಮತ್ತು ಸಿಂಧ್ ಪ್ರದೇಶಗಳಲ್ಲಿ ಪ್ರಾಚೀನ ಅಸಂಸ್ಕøತ ಜನರು ನೆಲೆಸಿ ಆಹಾರೋತ್ಪಾದನೆಯತ್ತ ಮೊದಲ ಹೆಜ್ಜೆಯನ್ನಿಟ್ಟರು. ಕ್ವೆಟ್ಟ, ಝೂಬ್, ಅಮ-ನಾಲ್, ಎಡಿತ್‍ಷಾಹರ್ ಪ್ರದೇಶಗಳಲ್ಲಿ ಈ ಜನರು ನವಶಿಲಾಯುಗದ ಅನಂತರ ತಾಮ್ರಶಿಲಾಯುಗದ ಹಂತದ ಸಂಸ್ಕøತಿಗಳನ್ನು ರೂಢಿಸಿಕೊಂಡರು. ಪಶುಪಾಲನೆ, ವ್ಯವಸಾಯ, ಮಣ್ಣಿನ ಪಾತ್ರೆಗಳ ಉಪಯೋಗ, ಸಣ್ಣ ಗ್ರಾಮಗಳಲ್ಲಿ ಗುಡಿಸಲುಗಳಲ್ಲಿ, ಮಣ್ಣಿನ ಅಥವಾ ಹಸಿ ಇಟ್ಟಿಗೆಗಳಿಂದ ನಿರ್ಮಿಸಿದ ಮನೆಗಳಲ್ಲಿ ವಸತಿ-ಇವು ಮೊದಮೊದಲು ಇವರ ಜೀವನದ ಮುಖ್ಯ ಲಕ್ಷಣಗಳಾಗಿದ್ದುವು. ಕ್ರಮೇಣ ಅಕ್ಕಪಕ್ಕದ ದೇಶಗಳೊಂದಿಗೆ ತಾಮ್ರ, ತವರ, ಅಬ್ಸಿಡಿಯನ್ ಮುಂತಾದ ಕಚ್ಚಾ ಸಾಮಗ್ರಿಗಳಿಗಾಗಿ ವ್ಯಾಪಾರಸಂಪರ್ಕ ಬೆಳೆದಾಗ ಪರಸ್ಪರ ಸಾಂಸ್ಕøತಿಕ ಪ್ರಭಾವಗಳು ತಲೆದೋರಲಾರಂಭಿಸಿದುವು. ಜನಸಂಖ್ಯೆ ಹೆಚ್ಚಿದಂತೆ ಹೊಸ ಪ್ರದೇಶಗಳಿಗೆ ವಸತಿಯ ವಿಸ್ತರಣೆಯಾಯಿತು. ತಾಮ್ರದ ಮೊದಲ ಉಪಯೋಗ ಬಹುಶಃ ಇರಾನಿನ ಪ್ರಭಾವದಿಂದ ಪ್ರಾರಂಭವಾಯಿತು. ವ್ಯಾಪಾರ ಬೆಳೆದಂತೆ ಅದರ ಸೌಲಭ್ಯಕ್ಕಾಗಿ ಮುದ್ರೆಗಳು ಮತ್ತು ಅವುಗಳ ಮೇಲೆ ಕೊರೆದ ಸಂಕೇತ ಲಿಪಿ ಬಳಕೆಗೆ ಬಂದುವು. ಈ ಮಧ್ಯೆ ಗ್ರಾಮಜೀವನದಲ್ಲಿ ಸುಧಾರಣೆಯಾಗಿ ವೃತ್ತಿ ಕುಶಲತೆ ಮತ್ತು ವೈವಿಧ್ಯಗಳು ಹುಟ್ಟಿಕೊಂಡವು. ಕ್ರಮೇಣ ಗ್ರಾಮಗಳ ಗಾತ್ರ ಬೆಳೆದು ಸಣ್ಣ ನಗರಗಳು, ಅವುಗಳ ಸುತ್ತ ಕೋಟೆ ಕೊತ್ತಲಗಳು, ನಗರಗಳಲ್ಲಿ ಅರಮನೆ, ದೇವಾಲಯ ಮತ್ತಿತರ ಸಾಮೂಹಿಕ ಭವನಗಳು ಅಸ್ತಿತ್ವಕ್ಕೆ ಬಂದುವು. ಅದೇ ಸುಮಾರಿನಲ್ಲಿ ದಕ್ಷಿಣ ಬಲೂಚಿಸ್ತಾನದಲ್ಲಿ ಕೃತಕ ನೀರಾವರಿ ಕಾರ್ಯಗಳು ಕಾಣಬರುತ್ತವೆ. ಹೀಗೆ ಕ್ರಿ.ಪೂ 3ನೆಯ ಸಹಸ್ರಮಾನದ ಮಧ್ಯಭಾಗದಲ್ಲಿ ನಾಗರಿಕತೆಯ ಪ್ರಾರಂಭದ ಹಂತವನ್ನು ಕಾಣಬಹುದಾಗಿದೆ. ತರುವಾಯ ಭಾರತ ಉಪಖಂಡದಲ್ಲೇ ಅನ್ಯಾದೃಶವಾದ, ಅತ್ಯಂತ ಪ್ರಗತಿಯುತವಾದ ಹರಪ್ಪ ನಾಗರಿಕತೆ ಪಾಕಿಸ್ತಾನದಲ್ಲಿ ತಲೆದೋರಿತು. ಪಂಜಾಬಿನಲ್ಲಿ ರಾವಿ ನದಿಯ ದಂಡೆಯಲ್ಲಿರುವ ಹರಪ್ಪ, ಸಿಂಧ್‍ನಲ್ಲಿ ಸಿಂಧೂ ನದಿಯ ದಂಡೆಯಲ್ಲಿರುವ ಮೊಹೆಂಜೊದಾರೊ, ಚಾನ್ಹುದಾರೊ, ಮಕ್ರಾನ್, ಕಡಲುತೀರದಲ್ಲಿರುವ ಸೋಟ್ ಕೋಜಂಡಾರ್, ಸೋಟ್‍ಕೋಖೋ, ಬಾಲಕೋಟ, ಮತ್ತು ಒಳನಾಡಿನಲ್ಲಿರುವ ದಾಬರಕೋಟ್, ಕೋಟ್‍ದೀಜಿ ಮುಂತಾದ ಹತ್ತಾರು ನೆಲೆಗಳಲ್ಲಿ ಆ ನಾಗರಿಕತೆಯ ಅವಶೇಷಗಳನ್ನು ಶೋಧಿಸಲಾಗಿದೆ. ಇವುಗಳಲ್ಲಿ ಹರಪ್ಪಾ, ಮೊಹೆಂಜೊದಾರೊ ಇವು ಆ ಚಕ್ರಾಧಿಪತ್ಯದ ಅವಳಿ ರಾಜಧಾನಿಗಳೆಂದೂ ಚಾನ್ಹುದಾರೊ ಕೈಗಾರಿಕಾ ನಗರವೆಂದೂ ಸೋಟ್‍ಕೋಜಂಡಾರ, ಸೊಟ್ಕೋಖೋ ಮತ್ತು ಬಾಲಕ್ಕೋಟ್ ರೇವುಪಟ್ಟಣಗಳೆಂದೂ ಪರಿಗಣಿತವಾಗಿವೆ. ಮೊದಲ ಎರಡು ನಗರಗಳಲ್ಲಿ ನಡೆದ ಭೂಶೋಧನೆಗಳಿಂದ ಸುವ್ಯವಸ್ಥಿತ ನಗರಯೋಜನೆಯ ರೂಪುರೇಷೆಗಳು ತಿಳಿದುಬಂದಿವೆ. ನಗರವನ್ನು ರಾಜ, ಶ್ರೀಮಂತ ಮತ್ತು ಅಧಿಕಾರ ವರ್ಗವಾಸವಾಗಿದ್ದ ಉನ್ನತ ದುರ್ಗ ಪ್ರದೇಶ, ಜನಸಾಮಾನ್ಯರು ವಾಸಿಸುತ್ತಿದ್ದ ಪಟ್ಟಣ ಪ್ರದೇಶ ಎಂದು ವಿಭಾಗಿಸಲಾಗಿತ್ತು. ಆಡಳಿತ ವರ್ಗದ ಕಾರ್ಯಾಲಯಗಳು, ನಗರ ಜೀವನಕ್ಕೆ ಸಾಧಕವಾದ ಸಾಮೂಹಿಕ ನಿರ್ಮಾಣಗಳು, ರಾಜ್ಯದ ಸಂಪತ್ತನ್ನು ಸಂಗ್ರಹಿಸುತ್ತಿದ್ದ ಕಣಜಗಳು ಮುಂತಾದವು ದುರ್ಗದೊಳಗಿದ್ದುವು. ಜನಸಾಮಾನ್ಯರು ಕೆಳಗಣ ಪಟ್ಟಣ ಭಾಗದಲ್ಲಿ ವಾಸಿಸುತ್ತಿದ್ದರು. ಇಡೀ ನಗರಪ್ರದೇಶದಲ್ಲಿ ಅಗಲವೂ ನೇರವೂ ಆದ ರಸ್ತೆಗಳ ಇಕ್ಕೆಲಗಳಲ್ಲಿ ಸುಟ್ಟ ಇಟ್ಟಿಗೆಗಳಿಂದ ಕೆಲವು ವೇಳೆ ಎರಡಂತಸ್ತುಗಳ ವಾಸಗೃಹಗಳನ್ನು ಕಟ್ಟಲಾಗುತ್ತಿತ್ತು. ನೀರಿನ ಬಾವಿ, ಸ್ನಾನಗೃಹ, ಶೌಚಗೃಹ, ಪಾಕಶಾಲೆ, ಶಯ್ಯಾಗೃಹ ಮೊದಲಾದ ಕೋಣೆಗಳಿಂದ ಆವೃತವಾದ, ಮಧ್ಯದಲ್ಲಿ ಗಾಳಿ ಬೆಳಕುಗಳಿಗಾಗಿ ತೆರೆದ ಪ್ರಾಂಗಣವಿದ್ದ ಈ ಮನೆಗಳಿಗೆ ಸಾಮಾನ್ಯವಾಗಿ ಮುಖ್ಯ ರಸ್ತೆಗಳಿಂದ ಹೊರಟ ಅಡ್ಡರಸ್ತೆ ಅಥವಾ ಏಣಿಗಳಿಂದ ಪ್ರವೇಶವಿರುತ್ತಿತ್ತು. ಮಳೆಯ ಮತ್ತು ಮನೆಗಳಲ್ಲಿ ಬಳಸಿದ ನೀರನ್ನು ಹೊರಗೊಯ್ಯಲು ನೆಲದ ಅಡಿಯಲ್ಲಿ ಕೊಳವೆ ಮತ್ತು ಒಳಚರಂಡಿ ಮಾರ್ಗಗಳನ್ನು ನಿರ್ಮಿಸಲಾಗಿತ್ತು. ಸಾರ್ವಜನಿಕ ಸ್ನಾನಗೃಹ ಮತ್ತು ಈಜುಕೊಳಗಳನ್ನು ನಿರ್ಮಿಸಲಾಗಿತ್ತು. ವ್ಯಾಪಾರ ಸೌಲಭ್ಯಗಳಿಗೆ ಲಿಖಿತ-ಅಲಂಕೃತ ಮುದ್ರೆಗಳನ್ನು, ನಿರ್ದಿಷ್ಟ ತೂಕದ ಮತ್ತು ಅಳತೆಯ ಸಾಧನಗಳನ್ನು ಒದಗಿಸಲಾಗುತ್ತಿತ್ತು. ಜಲಮಾರ್ಗ ಮತ್ತು ರಸ್ತೆಸಾರಿಗೆ, ಭಾರ ಹೊರುವ ಪ್ರಾಣಿಗಳ ಸಂಪರ್ಕ ವ್ಯವಸ್ಥೆ ರೂಢಿಯಲ್ಲಿದ್ದುವು. ವಿವಿಧ ಬಗೆಯ ಚಿನ್ನ ತಾಮ್ರ, ಕಂಚು, ಶಂಕು, ಬೆಲೆಬಾಳುವ ಕಲ್ಲುಗಳು ಇವುಗಳ ಆಭರಣಗಳು ಬಳಕೆಯಲ್ಲಿದ್ದುವು. ದೂರ ಪ್ರದೇಶಗಳಿಗೆ ಸಮುದ್ರಸಂಚಾರ ನಡೆಯುತ್ತಿತ್ತು. ಅಲ್ಲಿ ವಸತಿಯಿತ್ತು. ಇವು ಸಂಪದಭಿವೃದ್ಧಿಗೆ ನೆರವಾಗಿದ್ದುವು. ಇನ್ನೂ ಹಲವು ಬಗೆಯ ಸೌಕರ್ಯ ಸಾಧನಗಳನ್ನು ಹೊಂದಿದ್ದ ಹರಪ್ಪ ನಾಗರಿಕತೆ ಇತರ ಸಮಕಾಲೀನ ನಾಗರಿಕತೆಗಳಿಗಿಂತ ಹೆಚ್ಚು ಪ್ರಗತಿಪರವಾದ್ದೆಂಬುದು ವಿದ್ವಾಂಸರ ಅಭಿಪ್ರಾಯ. ಈಚಿನ ಸಂಶೋಧನೆಗಳಿಂದ ಈ ನಾಗರಿಕತೆ ಇಡೀ ಉಪಖಂಡದ ಅರ್ಧದಷ್ಟು ಪ್ರದೇಶದಲ್ಲಿ ವಿಸ್ತರಿಸಿತ್ತೆಂದು ತಿಳಿದುಬಂದಿದೆ. ಅನಂತರಕಾಲದ ಭಾರತೀಯ (ಹಿಂದು) ಸಂಸ್ಕøತಿಗೆ ಇದು ಹಲವಾರು ಕೊಡುಗೆಗಳನ್ನು ನೀಡಿದೆ ಎಂಬುದು ಗಮನಾರ್ಹ. ಇದರ ಕಾಲ ಕ್ರಿ.ಪೂ 2500-1500. ಈ ಉನ್ನತ ಸಂಸ್ಕøತಿ ಕ್ರಮೇಣ ಆಂತರಿಕ ವಿರೋಧಾಭಾಸಗಳಿಂದ ಪ್ರವಾಹಗಳ ದಾಳಿಯಿಂದ, ಹವೆಯಿಂದ ಮತ್ತು ವರ್ಷಮಾರುತಗಳ ಪಥದ ಬದಲಾವಣೆಯಿಂದ ದುರ್ಬಲಗೊಳ್ಳುತ್ತಿತ್ತು. ಈ ದುರ್ದಶೆಯ ಕಾಲದಲ್ಲಿ ಹೊರಗಣ ಆಕ್ರಮಣ ಇದನ್ನು ಕೊನೆಗಾಣಿಸಿತೆಂದು ಕೆಲವು ವಿದ್ವಾಂಸರು ವಾದಿಸಿದ್ದಾರಾದರೂ ಈ ವಾದ ಚರ್ಚಾಸ್ಪದ. ಹರಪ್ಪ ನಾಗರಿಕತೆ ಆಳಿದ ಸ್ವಲ್ಪ ಕಾಲದ ಮೇಲೆ, ಕ್ರಿ.ಪೂ 2ನೆಯ ಸಹಸ್ರಮಾನದ ಉತ್ತರಾರ್ಧದಲ್ಲಿ, ಪ್ರಾಯಶಃ ಕ್ರಿಪೂ 1200ರ ವೇಳೆಗೆ, ಈ ಪ್ರದೇಶದಲ್ಲಿ ಗ್ರಾಮಜೀವನದ ಹಂತದಲ್ಲಿದ್ದ ಪಶುಪಾಲನ ಆರ್ಯರು ಬಂದು ನೆಲೆಸಿದರು. ಈಚಿನವರೆಗೆ ಅವರನ್ನು ಕುರಿತ ಪಳಿಯುಳಿಕೆಗಳು ಹೆಚ್ಚಾಗಿ ದೊರೆತಿರಲಿಲ್ಲ. ಆದರೆ ಈಚಿನ ಸಂಶೋಧನೆಗಳಿಂದ ಮತ್ತು ವೈದಿಕ ಸಾಹಿತ್ಯದ ಆಧಾರಗಳ ಮೇಲೆ ಆರ್ಯರ ಸಂಗತಿಗಳನ್ನು ಸ್ಥೂಲವಾಗಿ ತಿಳಿಯಬಹುದಾಗಿದೆ. ಆರಂಭಿಕ ವ್ಯವಸಾಯಪದ್ಧತಿ, ಪಶು ಮತ್ತು ಕುರಿ ಮೇಕೆಗಳ ಸಂಗೋಪನೆ, ಗ್ರಾಮಜೀವನ ಇವನ್ನು ಅವರಿಗೆ ಆರೋಪಿಸಲಾಗಿದೆ. ಕುದುರೆ, ಎರಡು ಗಾಲಿಗಳಿದ್ದ ರಥ ಇವು-ಅವರ ಸಂಚಾರಸಾಧನಗಳು. ಬಿಲ್ಲುಬಾಣ ಕತ್ತಿ ಈಟಿಗಳು ಅವರ ಆಯುಧಗಳು. ಕ್ರಮೇಣ ಅವರಲ್ಲಿ ಸಣ್ಣಪುಟ್ಟ ರಾಜ್ಯ ಘಟಕಗಳು, ಗಣರಾಜ್ಯಗಳು ಅಸ್ತಿತ್ವಕ್ಕೆ ಬಂದಂತೆ ಕಾಣುತ್ತದೆ. ಅದೇ ಸಮಯದಲ್ಲಿ, ಅಥವಾ ಸ್ವಲ್ಪ ಮೊದಲು, ಪಶ್ಚಿಮ ಭಾಗದಲ್ಲಿ ಬಲೂಚಿಸ್ತಾನ ಮತ್ತು ಸಿಂಧ್ ಪ್ರದೇಶಗಳಲ್ಲಿ ಬೇರೊಂದು ಪಂಗಡದವರು ನೆಲಸಿದಂತೆ ಕಾಣುತ್ತದೆ. ಸೊಹರ್‍ಡಾಂಬ್, ನಾಲ್, ರಾಣಾಗುಂಡೈ, ಷಾಹಿತುಂಪ್, ಚಾನ್ಹುದಾರೊ ಮೊದಲಾದ ನೆಲೆಗಳಲ್ಲಿ ಅವರ ಮಾಹಿತಿಗಳು ಕಾಣಸಿಗುತ್ತವೆ. ಆ ಸುಮಾರಿನಲ್ಲಿ ಉತ್ತರ ಇರಾನ್ ಭಾಗದಿಂದ ಪ್ರಸರಿಸಿದ ಬೃಹತ್ ಶಿಲಾಸಮಾಧಿ ಸಂಸ್ಕøತಿಯ ಕುರುಹುಗಳು ಬಲೂಚಿಸ್ತಾನ ಮತ್ತು ಸಿಂಧ್ ಪ್ರದೇಶಗಳಲ್ಲಿ ಕಾಣುತ್ತವೆ. ಈ ಸಮಾಧಿಗಳನ್ನು ಅಗೆದು ಸಂಶೋಧನೆ ಮಾಡಿಲ್ಲವಾದರೂ ಇವು ಮೇಲೆ ಹೇಳಿದ ಕಬ್ಬಿಣ ಯುಗದ ಸಂಸ್ಕøತಿಯ ಅವಶೇಷಗಳೆಂಬುದರಲ್ಲಿ ಸಂದೇಹವಿಲ್ಲ. ಕಬ್ಬಿಣ ಯುಗದ ಸಂಸ್ಕøತಿಯ ಕಾಲವನ್ನು ಕ್ರಿ.ಪೂ ಒಂದನೆಯ ಸಹಸ್ರಮಾನದ ನಡುಗಾಲದವರೆಗೆ ನಿರ್ದೇಶಿಸಬಹುದು. ಇತಿಹಾಸ ಪಾಕಿಸ್ತಾನ ಪ್ರದೇಶದ ಪ್ರಾಚೀನ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರಕದಿದ್ದರೂ ಆ ಪ್ರದೇಶ ಮಹಾಕಾವ್ಯಗಳ ಕಾಲದಿಂದಲೂ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಮಹಾಭಾರತದ ಕೌರವರ ತಾಯಿ ಅ ಪ್ರದೇಶದ ಗಾಂಧಾರ ರಾಜ್ಯದ ರಾಜಕುಮಾರಿ, ಜನಮೇಜಯನ ಸರ್ಪಯಜ್ಞದ ಸಂಬಂಧದಲ್ಲಿ ತಕ್ಷಶಿಲೆಯ ಉಲ್ಲೇಖವಿದೆ. ಕ್ರಿ.ಪೂ 7-6ನೆಯ ಶತಮಾನಗಳಿಂದಲೂ ಅದು ಪ್ರಖ್ಯಾತ ವಿದ್ಯಾ ಕೇಂದ್ರವಾಗಿತ್ತು. ಕ್ರಿ.ಪೂ 5ನೆಯ ಶತಮಾನದಲ್ಲಿದ್ದ ಪಾಣಿನಿ ಆ ಪ್ರದೇಶದ ಸಾಲಾತುರದವನಾಗಿದ್ದು ತಕ್ಷಶಿಲೆಯಲ್ಲಿ ವಿದ್ಯಾಭ್ಯಾಸಪಡೆದ. ಅವನಿಗೂ ಮೊದಲಿನ ಶಾಕಾಟಾಯನ ಮತ್ತು ಶೌನಕರು ಅದೇ ಪ್ರಾಂತ್ಯದವರಾಗಿದ್ದರು. ಆ ಸುಮಾರಿನಲ್ಲಿ ತಕ್ಷಶಿಲೆ ಅಶ್ವಕ (ಅಸ್ಮಕ), ಗಾಂಧಾರ (ರಾಜಧಾನಿ; ಪುರುಷಪುರ-ಪೆಷಾವರ್) ಕಾಂಭೋಜ (ಹಜಾರಾ ಜಿಲ್ಲೆ) ಮುಂತಾದ ರಾಜ್ಯಗಳು, ಮತ್ತೆ ಕೆಲವು ಗಣರಾಜ್ಯಗಳು ಈ ಪ್ರದೇಶದಲ್ಲಿದ್ದುವೆಂದು ತಿಳಿದುಬರುತ್ತದೆ. ಆಗ ಪರ್ಷಿಯದ ಸಾರ್ವ ಭೌಮನಾದ, ಅಕೆಮಿನಿಡ್ ವಂಶದ ದರ್ಯಾವುಷ್ ಭಾರತದತ್ತ ಲಕ್ಷ್ಯಹರಿಸಿ ಗಾಂಧಾರ, ಮಕ್ರಾನ್ ಮತ್ತು ಸಿಂಧ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡ ತರುವಾಯ ಕ್ರಿ.ಪೂ 330ರಲ್ಲಿ ಅಲೆಗ್ಸಾಂಡರನ ದಾಳಿಯವರೆಗೂ ಈ ಪ್ರದೇಶ ಪರ್ಷಿಯನರ ಅಧೀನವಾಗಿತ್ತೆಂದು ಕಾಣುತ್ತದೆ. ಅನಂತರ ಕ್ರಿ.ಪೂ 326ರಲ್ಲಿ ಅಲೆಗ್ಸಾಂಡರ್ ಆ ಪ್ರದೇಶದ ಮೇಲೆ ದಾಳಿ ಮಾಡಿದಾಗ ಅಂಭಿಯ ತಕ್ಷಶಿಲಾ ರಾಜ್ಯ, ಝೀಲಂ ಮತ್ತು ರಾವಿ ನದಿಗಳ ನಡುವೆ ಇದ್ದ ಪುರೂರವನ ರಾಜ್ಯ, ಹಿಂದೂಕುಷ್ ಪರ್ವತ ಭಾಗದಲ್ಲಿ ಶಶಿಗುಪ್ತನ ರಾಜ್ಯ, ಅಷ್ಟಕ ರಾಜನ ಪುಷ್ಕಲಾವತಿ ಇವುಗಳಲ್ಲದೆ ಅಶ್ವಕಾಯನ, ಮಸ್ಸಗ, ವಾರಣ, ಕಠ, ಮಲ್ಲ (ಮಾಳವ), ಕ್ಷುದ್ರಕ, ಸಿಬಿ, ಅರ್ಜುನಾಯು, ಅಂಬಷ್ಟ, ಕ್ಷತ್ರಿಯ, ಮೂಷಿಕ, ಮುಂತಾದ ಗಣರಾಜ್ಯಗಳಜನರು ಸ್ವತಂತ್ರವಾಗಿ ಆಳುತ್ತಿದ್ದು ಗ್ರೀಕರನ್ನು ಎದುರಿಸಿದುದಾಗಿ ತಿಳಿದುಬರುತ್ತದೆ. ಆದರೆ ಅಂಭಿ, ಶಶಿಗುಪ್ತ, ಮುಂತಾದವರ ವಿದ್ರೋಹದಿಂದ ಗ್ರೀಕ್ ಸೈನ್ಯ ವಾಯವ್ಯಭಾರತವನ್ನು ಆಕ್ರಮಿಸಿತು. ಆದರೆ ಅಲೆಗ್ಸಾಂಡರನ ಹಿಂದಿರುಗುವಿಕೆಯೊಂದಿಗೆ ಗ್ರೀಕರ ಅಧಿಕಾರ ಕುಸಿಯತೊಡಗಿತು. ಅಲೆಗ್ಸಾಂಡರನ ಪ್ರಾಂತ್ಯಾಧಿಕಾರಿಗಳಾದ ಫಿಲಿಪ್ಸ್ ಪಂಜಾಬ್ ಪ್ರಾಂತ್ಯದಲ್ಲೂ ಪಿಥೋನ್ ಸಿಂಧ್ ಪ್ರಾಂತ್ಯದಲ್ಲೂ ಹಿಂದೂ ರಾಜರಾದ ಅಂಭಿ ತಕ್ಷಶಿಲೆಯಲ್ಲೂ ಪುರೂರವ ಝೀಲಂ ಪ್ರದೇಶದಲ್ಲೂ ಆಳುತ್ತಿದ್ದರು. ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಗ್ರೀಕ್ ರಾಜ್ಯಾಧಿಕಾರಿ ಸೆಲ್ಯೂಕಸ್ ನಿಕೇಟರನನ್ನು ಕ್ರಿ.ಪೂ 305ರಲ್ಲಿ ಸೋಲಿಸಿದಾಗ ಪಾಕಿಸ್ತಾನದ ಬಹುಭಾಗ ಮೌರ್ಯಸಾಮ್ರಾಜ್ಯದಲ್ಲಿ ಸೇರಿಹೋಯಿತು. ತಕ್ಷಶಿಲೆಯನ್ನು ಮುಖ್ಯ ನಗರವನ್ನಾಗಿ ಹೊಂದಿದ್ದ ಗಾಂಧಾರ ಪ್ರತ್ಯೇಕ ಆಡಳಿತ ಘಟಕವಾಗಿತ್ತು. ಬಿಂದುಸಾರನ ಕಾಲದಲ್ಲಿ ಇಲ್ಲುಂಟಾದ ದಂಗೆಯನ್ನು ಯುವರಾಜ ಅಶೋಕ ಅಡಗಿಸಿ ಪ್ರಾಂತ್ಯಾಧಿಕಾರಿಯಾಗಿದ್ದ. ಅಶೋಕನ ಕಾಲದಲ್ಲಿ ಈ ಪ್ರದೇಶದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಆದರೆ ಅವನ ಅಧಕ್ಷ ಉತ್ತರಾಧಿಕಾರಿಗಳ ಆಳ್ವಿಕೆಯಲ್ಲಿ ವಾಯವ್ಯ ಭಾರತ ಸ್ವತಂತ್ರವಾಗಿ, ಹಲವಾರು ಸಣ್ಣ ಪುಟ್ಟ ರಾಜ್ಯಗಳು ಹುಟ್ಟಿಕೊಂಡುವು. ಪಾಟಲಿ ಪುತ್ರದಲ್ಲಿ ಪುಷ್ಯಮಿತ್ರ ಶುಂಗ ಆಳುತ್ತಿದ್ದಾಗ ಬ್ಯಾಕ್ಟ್ರಿಯದಲ್ಲಿ ಆಳುತ್ತಿದ್ದ ಗ್ರೀಕರು ವಾಯವ್ಯ ಭಾರತದ ಮೇಲೆ ದಾಳಿ ಮಾಡಿದರು. ಆಂಟಿಯೋಕಸನ ಅಳಿಯನಾದ ಡೆಮಿಟ್ರಿಯನ್ (ಕ್ರಿ.ಪೂ 190) ಪಂಜಾಬ್, ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯಗಳನ್ನು ಗೆದ್ದುಕೊಂಡಾಗ ಈ ಪ್ರದೇಶದಲ್ಲಿ ಬ್ಯಾಕ್ಟ್ರಿಯಾದ ಗ್ರೀಕರ ಆಡಳಿತ ಆರಂಭವಾಯಿತು. ಎರಡು ದಶಕಗಳ ಅನಂತರ ಮತ್ತೊಬ್ಬ ಗ್ರೀಕ್ ದಳಪತಿ ಯುಕ್ರಿಟೈಡಿಸ್ ಬ್ಯಾಕ್ಟ್ರಿಯ ಮತ್ತು ತಕ್ಷಶಿಲಾ ಪ್ರದೇಶಗಳನ್ನು ಆಕ್ರಮಿಸಿಕೊಂಡುದರಿಂದ ಪಾಕಿಸ್ತಾನ ಪ್ರದೇಶದಲ್ಲಿ ಎರಡು ಸ್ವತಂತ್ರ ಗ್ರೀಕ್ ಆಡಳಿತಗಳು ಅಸ್ತಿತ್ವಕ್ಕೆ ಬಂದುವು. ತಕ್ಷಶಿಲೆಯ ಅಪೋಲೊಡೋಟಸ್ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಆಂಟಿಯಾಲ್ಕಿಡಾಸ್ ಪ್ರಮುಖರು. ಕ್ರಿ.ಪೂ 80ರ ವೇಳೆಗೆ ಆರಕೋಸಿಯ ಪ್ರದೇಶದ ಶಕರು ತಕ್ಷಶಿಲೆಯನ್ನು ವಶಪಡಿಸಿಕೊಂಡರು. ಅವರಲ್ಲಿ ಪ್ರಮುಖರಾದ ಮಾವೆಸ್ ಮತ್ತು 1ನೆಯ ಅeóÉಸ್ ದೊರೆಗಳ ಅನಂತರ ಕ್ರಿ.ಶ.20-30ರಲ್ಲಿ ಪಾರ್ಥಿಯನರು ಗೊಂಡೋಫರೆಸ್‍ನ ನೇತೃತ್ವದಲ್ಲಿ ಶಕರನ್ನು ಸೋಲಿಸಿ ವಾಯವ್ಯ ಭಾರತವನ್ನು ವಶಪಡಿಸಿಕೊಂಡರು. ಪಾರ್ಥಿಯವರ ಆಳ್ವಿಕೆಯಲ್ಲಿ 44ರಲ್ಲಿ ತ್ಯಾನದ ಅಪೋಲಿನಿಯಸ್ ತಕ್ಷಶಿಲೆಗೆ ಭೇಟಿ ನೀಡಿದುದಾಗಿ ಹೇಳಲಾಗಿದೆ. ಪಾರ್ಥಿಯನರ ತರುವಾಯ 60ರ ಸುಮಾರಿನಲ್ಲಿ ಕುಷಾಣರು ಪಾಕಿಸ್ತಾನ ಪ್ರದೇಶವನ್ನು ವಶಪಡಿಸಿಕೊಂಡರು. ಮೊದಲು ಕುಜುಲ ಕಡ್‍ಫೀಸಿಸನೂ ತರುವಾಯ ವಿಮ ಕಡ್‍ಫೀಸಿಸನೂ ಕುಷಾಣರ ಆಡಳಿತವನ್ನು ಬಲಗೊಳಿಸಿದರು. ಅನಂತರ ಬಹುಶಃ 78ರಲ್ಲಿ ಕುಷಾಣ ವಂಶದಲ್ಲಿ ಹೆಚ್ಚು ಪ್ರಸಿದ್ಧನಾದ 1ನೆಯ ಕುನಿಷ್ಕ ಸಿಂಹಾಸನಕ್ಕೆ ಬಂದಾಗ ಕುಷಾಣರಾಜ್ಯ ಇಡೀ ಪಾಕಿಸ್ತಾನ ಪ್ರದೇಶವನ್ನೂ ಈಗಿನ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಾಸ್ಥಾನ ಮತ್ತು ಗುಜರಾತಿನ ಕೆಲವು ಪ್ರದೇಶಗಳನ್ನೂ ಒಳಗೊಂಡಿತು. ಈ ಪ್ರದೇಶದ ಇತಿಹಾಸದಲ್ಲಿ ಕುಷಾಣ ಯುಗವನ್ನು ಸುವರ್ಣ ಯುಗವೆಂದು ಹೇಳಬಹುದು. ಕುಷಾಣರು ಹಿಂದೂ ಮತದ ಶೈವ ಸಂಪ್ರದಾಯವನ್ನೂ ಕನಿಷ್ಕನ ಕಾಲದಿಂದ ಬೌದ್ಧ ಮತವನ್ನೂ ಅನುಸರಿಸಿದರು. ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಬಹಳ ಪ್ರಗತಿ ಸಾಧಿಸಿದರು. ವಸುಬಂಧು, ಅಶ್ವಘೋಷ ಇವರು ಈ ಕಾಲದ ಪ್ರಖ್ಯಾತ ಬೌದ್ಧ ಸಾಹಿತಿಗಳು. ಈ ಕಾಲದಲ್ಲಿ ಗಾಂಧಾರ ಪ್ರದೇಶದಲ್ಲಿ ಗ್ರೀಕ್ ಮತ್ತು ಹಿಂದೂ ಪರಂಪರೆಗಳಿಂದ ಹುಟ್ಟಿದ ಗಾಂಧಾರ ಶಿಲ್ಪ ಕಲೆ ಭಾರತೀಯ ಕಲಾ ಸಂಪ್ರದಾಯದಲ್ಲಿ ಉನ್ನತವಾದ ಹೊಸ ಶೈಲಿಯನ್ನು ಬೆಳೆಸಿತು. ಮಹಾಯಾನ ಬೌದ್ಧಪಂಥ ಹುಟ್ಟಿಕೊಂಡು ಅದರ ಪ್ರಭಾವದಿಂದ ಬುದ್ಧನ ಮಾನವರೂಪದ ಶಿಲ್ಪಗಳು ಅಸ್ತಿತ್ವಕ್ಕೆ ಬಂದುವು. ಪುರುಷಪುರ (ಪೆಷಾವರ್) ಇವರ ರಾಜಧಾನಿ. ಅದರ ಸುತ್ತಮುತ್ತ ಅನೇಕ ಬೌದ್ಧಸ್ತೂಪಗಳೂ ವಿಹಾರಗಳೂ ನಿರ್ಮಿತವಾದುವು. ತಕ್ಷಶಿಲೆ, ಮಥುರಾ ಇವು ಧಾರ್ಮಿಕ ಮತ್ತು ರಾಜಕೀಯ ಕೇಂದ್ರಗಳಾಗಿದ್ದುವು. ಕನಿಷ್ಕನ ಉತ್ತರಾಧಿಕಾರಿಗಳಾಗಿದ್ದ ಹುವಿಷ್ಕ ಮತ್ತು ವಾಸುದೇವರ ಆಳ್ವಿಕೆಯಲ್ಲಿ ಉನ್ನತ ಸ್ಥಿತಿಯಲ್ಲಿದ್ದ ಕುಷಾಣ ರಾಜ್ಯ ಕ್ರಮೇಣ ಕುಸಿಯಲಾರಂಭಿಸಿತ್ತು. ವಾಸುದೇವನ ಮರಣದ ಅನಂತರ (225) ಕ್ರಮೇಣ ಕ್ಷೀಣಿಸಲಾರಂಭಿಸಿದ ಕುಷಾಣ ರಾಜ್ಯ 5ನೆಯ ಶತಮಾನದವರೆಗೂ ಉಳಿದು ಬಂತು. ಆ ವೇಳೆಗೆ 226ರಲ್ಲಿ ಪರ್ಷಿಯದಲ್ಲಿ ಸ್ಥಾಪಿತವಾದ ಸಸ್ಸೇನಿಯನ್ ಚಕ್ರಾಧಿಪತ್ಯ ಮತ್ತು ಮಗಧದಲ್ಲಿ ಸ್ಥಾಪಿತವಾದ ಗುಪ್ತ ಸಾಮ್ರಾಜ್ಯ ಬಹಳ ಪ್ರಬಲವಾಗಿದ್ದುವು. 400ರಲ್ಲಿ ತಕ್ಷಶಿಲೆಗೆ ಭೇಟಿಕೊಟ್ಟ ಚೀನಿ ಬೌದ್ಧಯಾತ್ರಿಕ ಫಾಹಿಯಾನ್ ಅದರ ಬಗ್ಗೆ ಕೆಲವು ಮಾಹಿತಿಗಳನ್ನೊದಗಿಸಿದ್ದಾನೆ. ಚೀನದ ಗಡಿ ಪ್ರದೇಶದಿಂದ ಹೊರಟ ಹೂಣರು 450ರ ಸುಮಾರಿಗೆ ಪರ್ಷಿಯ ಮತ್ತು ಭಾರತದ ದಿಕ್ಕಿನಲ್ಲಿ ದಾಳಿಮಾಡಿದರು. ಪರ್ಷಿಯವನ್ನು ಗೆದ್ದು ಹಿಂದೂಕುಷ್ ಪರ್ವತಗಳನ್ನು ದಾಟಿ ಗಾಂಧಾರವನ್ನು ವಶಪಡಿಸಿಕೊಂಡರು. ಗುಪ್ತ ದೊರೆ ಸ್ಕಂದಗುಪ್ತ 460ರಲ್ಲಿ ಹೂಣರನ್ನು ಸೋಲಿಸಿ ಅವರು ಮುಂದುವರಿಯದಂತೆ ತಡೆದ. ಅವರ ನಾಯಕ ತೋರಮಾನ್ ಪಾಕಿಸ್ತಾನ ಪ್ರದೇಶವನ್ನೂ ಭಾರತದ ಹಲವು ಭಾಗಗಳನ್ನೂ ಆಕ್ರಮಿಸಿಕೊಂಡು ಪಂಜಾಬಿನಲ್ಲಿ ಚೀನಾಬ್ ದಂಡೆಯಲ್ಲಿದ್ದ ವೈಯಾದಿಂದ ಆಳುತ್ತಿದ್ದ. ಅವನ ಮಗ ಮಿಹಿರಕುಲ 515ರಲ್ಲಿ ಸಿಂಹಾಸನಕ್ಕೆ ಬಂದು ಸಿಯಾಲ್‍ಕೋಟ್‍ನಿಂದ ಆಳುತ್ತಿದ್ದ. ಅವನ ಪಂಗಡದ ಮತ್ತೊಂದು ಶಾಖೆ ಗಾಂಧಾರದಲ್ಲಿ ಆಳುತ್ತಿತ್ತು. ಈ ಮಧ್ಯೆ ತಕ್ಷಶಿಲೆಯ ಪ್ರಾಂತ್ಯದಿಂದ ಕಿದಾರ ಕುಷಾಣಶಾಹಿ ಮನೆತನದವರು ಆಳುತ್ತಿದ್ದರು. ಹೂಣ ರಾಜ್ಯ 563-67ರ ವೇಳೆಗೆ ಕಣ್ಮರೆಯಾಯಿತು. ಹರ್ಷನ ಕಾಲದಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಒಂದು ಸ್ವತಂತ್ರ ರಾಜ್ಯವಿತ್ತು. ಹರ್ಷ ಅದನ್ನು ಎದುರಿಸಿದನೆಂದು ಬಾಣ ಮತ್ತು ಹ್ಯೂಯೆನ್‍ತ್ಸಾಂಗ್ ತಿಳಿಸಿದ್ದಾರೆ. ಆ ಸಮಯದಲ್ಲಿ ಹಿಂದೂಕುಷ್ ಪರ್ವತಗಳ ದಕ್ಷಿಣದಲ್ಲಿ ಕ್ಷತ್ರಿಯ ರಾಜನ ವಶದಲ್ಲಿದ್ದ ಕಾಪಿಶ ಮತ್ತು ಸ್ವಾತ್ ಕಣಿವೆಯಲ್ಲಿ ಉದ್ಯಾನ ರಾಜ್ಯಗಳಿದ್ದುವು. ಪಂಜಾಬಿನಲ್ಲಿ ಹಲವಾರು ಸಣ್ಣ ರಾಜ್ಯಗಳಿದ್ದುವು. 7ನೆಯ ಶತಮಾನದ ಪೂರ್ವಾರ್ಧದಲ್ಲಿ ಅಸ್ತಿತ್ವಕ್ಕೆ ಬಂದ ಸಿಂಧೂ ರಾಜ್ಯ ಮುಲ್ತಾನದ ದಕ್ಷಿಣಕ್ಕೆ ಇಡೀ ಸಿಂಧ್ ಪ್ರದೇಶವನ್ನೊಳಗೊಂಡಿತ್ತು. ಬಹುಶಃ ಇಡೀ ಪಾಕಿಸ್ತಾನ ಪ್ರದೇಶ ಅದರ ವಶದಲ್ಲಿತ್ತು. ಆ ಪ್ರದೇಶದಲ್ಲಿ ರಚಿತವಾದ ಚಾಚ್‍ನಾಮಾ ಅದರ ಇತಿಹಾಸವನ್ನು ತಿಳಿಸುತ್ತದೆ. ಅಲ್ಲಿ ಮತ್ತೆ ಕೆಲವು ಸಣ್ಣ ರಾಜ್ಯಗಳಿದ್ದುವು. ಸಿಂಧೂ ರಾಜ್ಯದ ಪ್ರಬಲ ದೊರೆ ಚಾಚ್ ಸತ್ತ ಅನಂತರ ಅವನ ಮಗ ದಾಹರನ ಕಾಲದಲ್ಲಿ (700-708) ಅರಬರು ಸಿಂಧ್ ಪ್ರಾಂತ್ಯವನ್ನು ಎದುರಿಸಿದರು. ಅರಬರು ಪ್ರಪ್ರಥಮವಾಗಿ ಸಿಂಧ್ ವಿರುದ್ಧ 643ರಲ್ಲಿ ನೌಕಾದಾಳಿ ನಡೆಸಿ ವಿಫಲರಾದರು. ಮತ್ತೆ 663ರಲ್ಲಿ ಅವರ ಭೂ ಸೈನ್ಯ ಸೋತಿತು. ಮೂರನೆಯ ಸಲ ಅರಬರ ದಾಳಿ 708ರಲ್ಲಿ ಪ್ರಾರಂಭವಾಗಿ 712ರ ವೇಳೆಗೆ ಮಹಮ್ಮದ್-ಇಬ್ನ್-ಕಾಸಿಮನ ನೇತೃತ್ವದಲ್ಲಿ ಜಯ ಗಳಿಸಿತು. ಆದರೆ 750ರ ವೇಳೆಗೆ ಅವರು ಶಕ್ತಿಗುಂದಿದರು. ಸಿಂಧ್‍ನ ಕೆಲವು ಪ್ರದೇಶಗಳ ಮೇಲೆ ಮಾತ್ರ ಅವರು ಹತೋಟಿ ಉಳಿಸಿಕೊಂಡಿದ್ದರು. ಆದರೂ ಬಲಾತ್ಕಾರ ಮತಾಂತರಗಳಿಂದ ಕ್ರಮೇಣ ಇಸ್ಲಾಮ್ ಮತ ಇಲ್ಲಿ ಪ್ರಬಲಗೊಳ್ಳತೊಡಗಿತು. ಆಗ ಆಫ್ಘಾನಿಸ್ತಾನ ಮತ್ತು ಬಲೂಚಿಸ್ತಾನ ಪ್ರದೇಶದಲ್ಲಿ, ಕಾಬುಲ್, ಕಾಬುಲ್ ಮತ್ತು ಸಿಂಧ್ ರಾಜ್ಯಗಳಲ್ಲಿ ಅರಬರು ನೆಲೆಸಿದ್ದರು. ಬಾಗ್ದಾದ್‍ನಲ್ಲಿ ಅಬ್ಬಾಸಿದ್ ಕಲೀಫರು 749ರಿಂದ ಪ್ರಬಲರಾಗತೊಡಗಿದಾಗ ಮತ್ತೆ ಪಾಕಿಸ್ತಾನ ಪ್ರದೇಶದಲ್ಲಿ ಇವರು ಬಲಗೊಳ್ಳತೊಡಗಿದರು. ಕಾಬುಲ್ ಮತ್ತು ಕಾಬುಲ್ ಸ್ವತಂತ್ರವಾಗಿದ್ದರೂ ಆಗಾಗ್ಗೆ ಕಲೀಫರಿಗೆ ಕಪ್ಪ ನೀಡಬೇಕಾಗಿತ್ತು. 870ರಲ್ಲಿ eóÁಬುಲ್ ಆಕ್ರಮಣಕ್ಕೊಳಗಾಯಿತು. ಅಲ್ಲೂ ಮುಸ್ಲಿಂ ಮತ ನೆಲೆಗೊಂಡಿತು. ಕಾಬುಲ್ ರಾಜ್ಯ ಹಿಂದೂಶಾಹಿ ರಾಜ್ಯದಲ್ಲಿ ಸೇರಿತು. ಆದರೆ ಕ್ರಮೇಣ ಸಿಂಧ್‍ನಲ್ಲಿ ಅರಬರು ಪ್ರಾಬಲ್ಯ ಗಳಿಸಿದರು. ಅವರ ರಾಜಧಾನಿ ಮನ್ಸುರಾ (ಈಗಿನ ಪಾಕಿಸ್ತಾನಿ ಹೈದರಾಬಾದಿನಿಂದ ಆಗ್ನೇಯಕ್ಕೆ ಸುಮಾರು 69ಕಿಮೀ.ದೂರ) ಇವರು ಗುರ್ಜರ-ಪ್ರತೀಹಾರ ಮತ್ತು ಪಾಲ ವಂಶದವರೊಂದಿಗೆ ಆಗಾಗ್ಗೆ ಹೋರಾಡಬೇಕಾಗಿತ್ತು. ಅಬ್ಬಾಸಿದರ ಪತನದ ಅನಂತರ (ಸು.830) ಅಲ್ ಮಮೂನ್ ಕಲೀಫನಾದಾಗ ಸಿಂಧ್ ಅವನ ಅಧಿಕಾರಿಯಾದ ಮೂಸನ ವಶವಾಯಿತು. ಸಫರಿದ್ ಕಲೀಫರ ಕಾಲದಲ್ಲಿ (872-903) ಸಿಂಧ್ ಪ್ರಾಂತ್ಯವನ್ನು ಮನ್ಸುರಾ ಮತ್ತು ಮುಲ್ತಾನ್‍ಗಳಾಗಿ ಒಡೆಯಲಾಯಿತು. ಈ ಎರಡು ರಾಜ್ಯಗಳೂ ಹಿಂದೂ ರಾಜರ ಭಯದಲ್ಲಿ ಬಾಳುತ್ತಿದ್ದವು. ಆಕ್ಸಸ್ ನದಿಯ ದಕ್ಷಿಣ ಭಾಗದಲ್ಲಿ 999ರಲ್ಲಿ ಘಜಿû್ನ ಮನೆತನ ಅಧಿಕಾರಕ್ಕೆ ಬರುವ ವೇಳೆಗೆ ಈ ರಾಜ್ಯಗಳು ಬಲಗುಂದಿದ್ದುವು. ಆದರೆ ಭಾರತದ ಮೇಲೆ ಮಹಮ್ಮದನ ದಾಳಿಗಳಿಂದ ಪರಿಸ್ಥಿತಿ ಪೂರ್ಣವಾಗಿ ಬದಲಾಯಿತು. ಮಹಮ್ಮದನ ಮೊದಲನೆಯ ದಾಳಿ 1000 ರಲ್ಲಿ ನಡೆಯಿತು. ಅವನ ನಿರಂತರ ದಾಳಿಗಳ ಫಲವಾಗಿ ಪಾಕಿಸ್ತಾನ ಪ್ರದೇಶ ಅವನಿಗೆ ತಲೆಬಾಗಬೇಕಾಯಿತು. ಅದು 1200ರ ವರೆಗೂ ಮುಸ್ಲಿಮರ 1200ರ ವರೆಗೂ ಮುಸ್ಲಿಮರ ವಶದಲ್ಲಿ ಉಳಿಯಿತು. ಘೋರಿ ಮನೆತನ ಅಧಿಕಾರಕ್ಕೆ ಬಂದ ಮೇಲೆ 1178ರಲ್ಲಿ ಘೋರಿ ಮಹಮೂದ ವಾಯವ್ಯ ಭಾರತದ ಮೇಲೆ ಆಕ್ರಮಣ ನಡೆಸಿ ಚಾಳುಕ್ಯ ಇಮ್ಮಡಿ ಮೂಲರಾಜನಿಂದ ಸೋತು ಹಿಂದಿರುಗಿದರೂ 1192ರಲ್ಲಿ ಉತ್ತರಭಾರತ ಅವನ ವಶವಾಯಿತು. ಪಾಕಿಸ್ತಾನ ಪ್ರದೇಶ ಅವನ ರಾಜ್ಯದಲ್ಲಿ ಸೇರಿಹೋಯಿತು. ಮಂಗೋಲರು 1229ರಿಂದ ಸಿಂಧ್ ಪ್ರಾಂತ್ಯದ ಮೇಲೆ ಆಗಾಗ್ಗೆ ದಾಳಿ ಮಾಡುತ್ತಿದ್ದರು. 1247ರಿಂದ ಅದು ಅವರ ವಶವಾಯಿತು. ಅಲ್ಲಾವುದ್ದೀನ್ ಖಿಲ್ಜಿ ದೆಹಲಿಯ ಸುಲ್ತಾನನಾಗಿದ್ದಾಗ ಪಾಕಿಸ್ತಾನದ ಬಹುಭಾಗ ಖಿಲ್ಜಿ ರಾಜ್ಯದಲ್ಲಿ ಸೇರಿತ್ತು. 1303ರಲ್ಲಿ ಮಂಗೋಲರು ದೆಹಲಿಯ ಮೇಲೆ ದಾಳಿ ನಡೆಸಿದುದರ ಫಲವಾಗಿ ಜಾಗೃತನಾದ ಅಲ್ಲಾವುದ್ದೀನ್ ತನ್ನ ವಾಯವ್ಯಗಡಿ ಪ್ರದೇಶದತ್ತ ಗಮನಕೊಡಬೇಕಾಯಿತು. 1305ರಲ್ಲಿ ಮಂಗೋಲರು ಸಿಂಧ್ ಪ್ರಾಂತ್ಯದ ಮುಖಾಂತರ ಉತ್ತರ ಭಾರತದ ಕಡೆಗೆ ನುಗ್ಗಿದರು. ಆಗ ಪಂಜಾಬು ದೆಹಲಿ ಸುಲ್ತಾನರ ವಶದಲ್ಲಿತ್ತು. ಮಂಗೋಲರ ನಾಯಕರಾದ ಅಲಿ ಬೇಗ್ ಮತ್ತು ತರ್ತಾಖರನ್ನು ಸೆರೆಹಿಡಿದು ಕೊಲ್ಲಲಾಯಿತು. ಮರುವರ್ಷ ಮಂಗೋಲರ ಒಂದು ದಳ ಸಿಂಧ್ ಮುಲ್ತಾನ್ ಪ್ರದೇಶಗಳ ಮೂಲಕವೂ ಇನ್ನೊಂದು ದಳ ನಾಗೋರಿನ ಮೂಲಕವೂ ನುಗ್ಗಿದಾಗಲೂ ಅವರ ಪ್ರಯತ್ನ ವಿಫಲವಾಯಿತು. ಮತ್ತೆ 1327ರಲ್ಲಿ ತರ್ಮಾಷಿರೀನನ ನಾಯಕತ್ವದ ದಳ ಆ ಪ್ರದೇಶದ ಮೂಲಕ ದೆಹಲಿಯ ವರೆಗೂ ನುಗ್ಗಿ ತುಗಲಕ್ ಮಹಮ್ಮದನಿಂದ ವಿಪುಲೈಶ್ವರ್ಯವನ್ನು ಲೂಟಿ ಹೊಡೆದು ಹಿಂದಿರುಗಿತು. ಮಂಗೋಲರ ಉಪಟಳವನ್ನು ತಡೆಯುವ ಸಲುವಾಗಿ ತುಗಲಖ್ ಮುಹಮ್ಮದ್ ಅವರ ಪ್ರದೇಶದ ಮೇಲೆ 1337ರಲ್ಲಿ ದಾಳಿ ಮಾಡಿದರೂ ಪ್ರಯೋಜನವಾಗಲಿಲ್ಲ. ತರುವಾಯ ತೈಮೂರ 1398ರಲ್ಲಿ ಪಂಜಾಬ್, ಮುಲ್ತಾನ್ ಮುಖಾಂತರ ನುಗ್ಗಿ ದೆಹಲಿಯನ್ನು ಲೂಟಿ ಮಾಡಿದ. ಅನಂತರ ತುಗಲಕ್ ವಂಶ ಕೊನೆಗೊಂಡಿತು. ತೈಮೂರನ ಪ್ರತಿನಿಧಿ ಮಲ್ಲೂ ಸತ್ತ ಮೇಲೆ ಆಫ್ಘನ್ ಸರದಾರ ದೌಲತ್ ಖಾನ್ ಲೋದಿ ದೆಹಲಿಯಿಂದ ಆಳತೊಡಗಿದ. ಪಾಕಿಸ್ತಾನ ಪ್ರದೇಶ ಅವನ ವಶದಲ್ಲಿತ್ತು. ಖಜಿರ್‍ಖಾನ್ 1414ರಲ್ಲಿ ದೌಲತನನ್ನು ಸೆರೆಹಿಡಿದು ಸಯ್ಯಿದ್ ಮನೆತನದ ಆಳ್ವಿಕೆಯನ್ನು ಸ್ಥಾಪಿಸಿದ. ಪಾಕಿಸ್ತಾನ ಪ್ರದೇಶ ಅವನ ವಶವಾಯಿತು. ಆ ಮನೆತನದ ಕೊನೆಯ ಸುಲ್ತಾನನಾದ ಆಲಂ ಷಾನನ್ನು ಬಹಲೋಲ್ ಷಾ ಘಾಜಿ 1451ರಲ್ಲಿ ಸಿಂಹಾಸನದಿಂದ ತಳ್ಳಿದ. ಲೋದಿ ಮನೆತನ ಅಧಿಕಾರಕ್ಕೆ ಬಂತು. ಪಾಕಿಸ್ತಾನ ಪ್ರದೇಶ ಆ ಮನೆತನದ ವಶವಾಯಿತು. ಹೀಗೆ ಸಾಮಾನ್ಯವಾಗಿ ಈ ಪ್ರದೇಶ ದೆಹಲಿ ಸುಲ್ತಾನರ ವಶದಲ್ಲಿದ್ದರೂ ಘಜ್ನಿಮಹಮ್ಮದನ ದಾಳಿಗಳ ತರುವಾಯ 1010ರ ಸುಮಾರಿಗೆ ಸಿಂಧ್ ಪ್ರಾಂತ್ಯದಲ್ಲಿ, ಸ್ವತಂತ್ರವಾದ, ಹಿಂದೂ ಮೂಲದವರಾದರೂ ಇಸ್ಲಾಮಿಗೆ ಮತಾಂತರಗೊಂಡಿದ್ದ, ಎರಡು ಮನೆತನಗಳು ಆಳುತ್ತಿದ್ದವು. ಇವುಗಳ ಪೈಕಿ ಮನ್ಸುರಾದಿಂದ ಆಳುತ್ತಿದ್ದದ್ದು ಸೂಮ್ರ ಮನೆತನ. ಈ ಮನೆತನದವರು ಮೊದಲು ಪರಮಾರ ರಜಪುತ ವಂಶದವರೆಂದು ಹೇಳಲಾಗಿದೆ. ಇವರು ಪ್ರಾಯಶಃ ಏರುಪೇರುಗಳನ್ನುಭವಿಸುತ್ತ 1335ರ ವರೆಗೂ ಆಳುತ್ತಿದ್ದರೆಂದು ಹೇಳಲಾಗಿದೆ. ತರುವಾಯ ಸಮ್ಮಾ ವಂಶದವರು ಅಧಿಕಾರಕ್ಕೆ ಬಂದರು. ಅವರು 1527ರ ವರೆಗೆ ಆಳಿದರು ಎಂದು ಹೇಳಲಾಗಿದೆ. ದೆಹಲಿಯ ಸುಲ್ತಾನರು ಮತ್ತು ಗುಜರಾತಿನ ನವಾಬರು ಇವರ ಮೇಲೆ ಅಧಿಕಾರ ಚಲಾಯಿಸುತ್ತಿದ್ದರು. ಅದೇ ಸಮಯದಲ್ಲಿ ಮುಲ್ತಾನ್ ಪ್ರದೇಶದಲ್ಲಿ ಮತ್ತೊಂದು ಮುಸ್ಲಿಮ್ ರಾಜ್ಯ ಅಸ್ತಿತ್ವದಲ್ಲಿತ್ತು. ಘಜ್ನಿ ಮುಹಮ್ಮದ್ ಈ ಪ್ರದೇಶದ ಷೇಕ್ ಹಮೀದ್ ಲೋದಿಯ ಆಡಳಿತವನ್ನು ಒಪ್ಪಿಕೊಂಡಿದ್ದರೂ ಅವನ ತರುವಾಯ ಈ ಪ್ರದೇಶ ಸ್ವತಂತ್ರವಾಯಿತು. ಈ ಮೊದಲು ಹೇಳಿದಂತೆ ಮುಲ್ತಾನ್ ಅನೇಕ ಸಲ ಮಂಗೋಲರ ದಾಳಿಗಳನ್ನು ಎದುರಿಸಿತು. ಆ ಮನೆತನದವರ ಅದೃಷ್ಟ ಏರಿಳಿಯುತ್ತಿತ್ತು. ಅವರು 1525ರ ವರೆಗೆ ಆಳಿ ಮೊಗಲ್ ಸಾಮ್ರಾಜ್ಯ ಸ್ಥಾಪಕನಾದ ಬಾಬರನ ಆಕ್ರಮಣದ ಫಲವಾಗಿ ಕಣ್ಮರೆಯಾದರು. ಮೊಗಲ್ ಸಾಮ್ರಾಜ್ಯಕಾಲದ ಉದ್ದಕ್ಕೂ ಪಾಕಿಸ್ತಾನ ಪ್ರದೇಶ ಹೆಚ್ಚು ಕಡಿಮೆ ಅವರ ಆಳ್ವಿಕೆಗೊಳಪಟ್ಟಿತ್ತು. ಸಮರಕಂಡದಲ್ಲಿ ಮೊದಲು ಆಳುತ್ತಿದ್ದ ಬಾಬರ್ ಮುಲ್ತಾನ್ ಮೂಲಕ ಭಾರತವನ್ನು ಪ್ರವೇಶಿಸಿದಾಗ ಆ ಪ್ರದೇಶ ಅವನ ವಶವಾಯಿತು. ಆದರೂ ಬಾಬರ್ ಮತ್ತು ಹುಮಾಯೂನರ ಆಳ್ವಿಕೆ ಪ್ರಕ್ಷುಬ್ಧಮಯವಾಗಿತ್ತು. ಸಿಂಧ್ ಮತ್ತು ಮುಲ್ತಾನ್ ಪ್ರದೇಶಗಳು ಆಗಾಗ ಮೊಗಲರ ಅಧಿಕಾರವನ್ನು ಧಿಕ್ಕರಿಸುತ್ತಿದ್ದುವು. ಹುಮಾಯೂನ್ ಸಿಂಹಾಸನಚ್ಯುತನಾದಾಗ, ಸಿಂಧ್ ಪ್ರಾಂತ್ಯದಲ್ಲಿ ತಟ್ಟವನ್ನು ರಾಜಧಾನಿಯಾಗಿ ಹೊಂದಿದ್ದ ಮುಸ್ಲಿಮ್ ರಾಜ್ಯ ಹೆಚ್ಚು ಕಡಿಮೆ ಸ್ವತಂತ್ರವಾಗಿತ್ತು. ಅದು ಅವನಿಗೆ ಹೆಚ್ಚು ನೆರವು ನೀಡದಿದ್ದರೂ ಪೂರ್ಣವಾಗಿ ಅವನ ಕೈ ಬಿಡಲಿಲ್ಲ. ಅವನ ಅಧಿಕಾರದ ಪುನರ್ಗಳಿಕೆಯ ಪ್ರಯತ್ನದಲ್ಲೂ ಸಿಂಧ್ ಪ್ರಾಂತ್ಯ ಪ್ರಮುಖ ಪಾತ್ರವಹಿಸಿತ್ತು. ಅಕ್ಬರನ ಸಿಂಹಾಸನಾರೋಹಣ ಕಾಲದಿಂದ (1556) 1707ರ ವರೆಗೂ ಪಾಕಿಸ್ತಾನ ಪ್ರದೇಶ ಮೊಗಲರ ವಶದಲ್ಲಿತ್ತಾದರೂ ವಾಯವ್ಯ ಸರಹದ್ದಿನ ಬೆಟ್ಟ ಪ್ರದೇಶದಲ್ಲಿ ಕೆಲವು ಸ್ವತಂತ್ರ ಪಠಾಣ ಪಂಗಡಗಳು ನೆಲೆಸಿದ್ದು ಸಾಮ್ರಾಜ್ಯಕ್ಕೆ ತೊಂದರೆ ಕೊಡುತ್ತಿದ್ದುವು. ಅನಂತರ ಬಹವಾಲ್ ಪುರದಲ್ಲಿ ಒಂದು ಸ್ವತಂತ್ರ ಮುಸ್ಲಿಮ್ ರಾಜ್ಯವೂ ಪಂಜಾಬಿನಲ್ಲಿ ಸ್ವತಂತ್ರ ಸಿಖ್ ರಾಜ್ಯವೂ ಹುಟ್ಟಿಕೊಂಡುವು. ಉಳಿದ ಪ್ರದೇಶಗಳ ಬಗ್ಗೆ ಹೆಚ್ಚಿನ ಮಾಹಿತಿಗಳೇನೂ ಸಿಕ್ಕುವುದಿಲ್ಲ. ಪರಿಸ್ಥಿತಿ ಹೀಗೆ ಕ್ಲಿಷ್ಟವಾಗಿದ್ದಾಗ ವಾಯವ್ಯ ಭಾರತ ಮತ್ತೊಮ್ಮೆ ವಿದೇಶಿ ದಾಳಿಗೆ ತುತ್ತಾಯಿತು. ಪರ್ಷಿಯದಲ್ಲಿ ಆಳುತ್ತಿದ್ದ ನಾದಿರ್ ಷಾ ಪಂಜಾಬ್, ಮುಲ್ತಾನ್ ಪ್ರದೇಶಗಳನ್ನು ವಶಪಡಿಸಿಕೊಂಡು 1739ರ ಮಾರ್ಚ್‍ನಲ್ಲಿ ದೆಹಲಿಯವರೆಗೂ ನುಗ್ಗಿ ಬಂದ. ದೆಹಲಿ ಅವನ ವಶವಾಯಿತು. ಪಂಜಾಬ್ ಮತ್ತು ದೆಹಲಿ ಪ್ರದೇಶಗಳು ಕೊಳ್ಳೆಗೆ ಒಳಗಾದುವು. ನಾದಿರ್ ಷಾನ ಮರಣಾನಂತರ ಪರ್ಷಿಯಾದ ಅಧಿಕಾರವನ್ನು ಕಸಿದುಕೊಂಡ ಅಹ್ಮದ್ ಷಾ ಅಬ್ದಾಲಿ ಪೆಷಾವರ್ ಪ್ರದೇಶವನ್ನು ಆಕ್ರಮಿಸಿ ಲಾಹೋರ್‍ವರೆಗೂ ಮುನ್ನುಗ್ಗಿ 1747ರಿಂದ 1767ರ ವರೆಗೆ ಏಳು ಬಾರಿ ಲೂಟಿ ಮಾಡಿದ. ಅಬ್ದಾಲಿ 1752ರಲ್ಲಿ ಮೀರ್ ಮನ್ನು ಎಂಬವನನ್ನು ಪಂಜಾಬಿನ ಪ್ರಾಂತ್ಯಾಧಿಕಾರಿಯಾಗಿ ನೇಮಿಸಿದ. ಆ ದಾಳಿಗಳ ಫಲವಾಗಿ ವಾಯವ್ಯ ಭಾರತದಲ್ಲಿ ಮೊಗಲರ ಅಧಿಕಾರ ಬಲಗುಂದಿ ಸಿಖ್ ರಾಜ್ಯ ಬಲಗೊಳ್ಳಲು ಸಾಧ್ಯವಾಯಿತು. ಈ ಮಧ್ಯೆ 1785ರಲ್ಲಿ ವಾಯವ್ಯ ಭಾರತದಲ್ಲಿ ಪ್ರಬಲವಾಗುತ್ತಿದ್ದ ಸಿಕ್ಕರಿಗೂ ದೆಹಲಿಯ ವರೆಗೆ ಪ್ರಭಾವ ಬೀರಿದ್ದ ಮರಾಠರಿಗೂ ಒಂದು ಶಾಂತಿ ಒಪ್ಪಂದವಾಗಿತ್ತು. 1797ರೊಳಗೆ ಅವರು ಮತ್ತೆ ಕಚ್ಚಾಡತೊಡಗಿದ್ದರು. ಆದರೆ ಸಿಂಧ್ ಮತ್ತು ಬಲೂಚಿಸ್ತಾನ್ ಪ್ರದೇಶಗಳು ಅತಂತ್ರವಾಗಿ ಅಡಿಗಡಿಗೂ ಬೇರೆಯವರ ದಾಸ್ಯಕ್ಕೊಳಗಾಗುತ್ತಿದ್ದುವು. ಆಫ್ಘಾನಿಸ್ತಾನದಲ್ಲಿ ಕಾಬೂಲ್ ರಾಜ್ಯ ಬಲಗೊಂಡಿದ್ದು, ವಾಯವ್ಯ ಗಡಿ ಪ್ರದೇಶ ಮತ್ತು ಬಲೂಚಿಸ್ತಾನ ಅದರ ವಶದಲ್ಲಿತ್ತು. ಈ ವೇಳೆಗೆ ಸಿಂಧ್ ಪ್ರಾಂತ್ಯ ಹೆಸರಿಗೆ ಕಾಬೂಲಿನ ವಶದಲ್ಲಿದ್ದರೂ ಹೆಚ್ಚುಕಡಿಮೆ ಸ್ವತಂತ್ರವಾಗಿತ್ತು. ಆ ಪ್ರದೇಶದಲ್ಲಿ ಮೊದಲು ನಾಲ್ಕು, ಅನಂತರ ಮೂರು ರಾಜ್ಯಗಳು ಅಸ್ತಿತ್ವದಲ್ಲಿದ್ದುವು. ಖೈರ್‍ಪುರ (ಉತ್ತರಸಿಂಧ್), ಹೈದರಾಬಾದ್ (ದಕ್ಷಿಣ ಸಿಂಧ್) ಮತ್ತು ಮೀರ್‍ಪುರ ಇವು ಅನುಕ್ರಮವಾಗಿ ಆ ರಾಜ್ಯಗಳ ರಾಜಧಾನಿಗಳಾಗಿದ್ದುವು. ಅವುಗಳ ಅಮೀನರು ಪೂರ್ವದಲ್ಲಿ ಬ್ರಿಟಿಷರ, ವಾಯವ್ಯ ಭಾಗದಲ್ಲಿ ಪರ್ಷಿಯನರ, ಉತ್ತರದಲ್ಲಿ ಆಫ್ಘನ್ನರ ಮತ್ತು ರಷ್ಯನರ ಸಾಮ್ರಾಜ್ಯದಾಹದ ಫಲವಾಗಿ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದರು. ಪಂಜಾಬಿನಲ್ಲಿ ಸಿಕ್ಖರ ದೊರೆ ರಣಜಿತ್ ಸಿಂಗ್ ಪ್ರಬಲನಾಗಿ ಸಿಂಧ್‍ನ ಮೇಲೆ ಕಣ್ಣು ಹಾಕಿದ್ದ. ಇಂಥ ಪರಿಸ್ಥಿತಿಯಲ್ಲಿ 1843ರಲ್ಲಿ ಬ್ರಿಟಿಷ್ ಗವರ್ನರ್-ಜನರಲ್ ಆಗಿದ್ದ ಎಲ್‍ನ್‍ಬರೋ ಮತ್ತು ದಳಪತಿ ಚಾಲ್ರ್ಸ್ ನೇಪಿಯರ್ ಇವರು ಸಿಂಧನ್ನು ಆಕ್ರಮಿಸಿಕೊಂಡರು. 1839ರಲ್ಲಿ ರಣಜಿತ್‍ಸಿಂಗ್ ಸತ್ತಮೇಲೆ ಗೊಂದಲಮಯ ಸ್ಥಿತಿಯಲ್ಲಿದ್ದ ಪಂಜಾಬ್ 1841ರಲ್ಲಿ ಬ್ರಿಟಿಷರ ವಶವಾಯಿತು. ಇಷ್ಟಾದರೂ ಬ್ರಿಟಿಷರ ಆಳ್ವಿಕೆಗೆ ಈ ಪ್ರದೇಶದಲ್ಲಿ ವಿರೋಧ ಮುಂದುವರಿಯಿತು. ವಾಯವ್ಯ ಸರಹದ್ದಿನಲ್ಲಿದ್ದ ಪಠಾಣ ಬುಡಕಟ್ಟಿನ ಜನರು ಆಗಾಗ್ಗೆ ದಂಗೆಯೆದ್ದು ಲೂಟಿ ನಡೆಸುತ್ತಿದ್ದರು. ಆಫ್ಘನರೊಂದಿಗೆ ಎರಡು ಬಾರಿ ಯುದ್ಧ ನಡೆಸಿದ ಅನಂತರ ಬ್ರಿಟಿಷರು ಅವರೊಂದಿಗೆ ಒಪ್ಪಂದ ಮಾಡಿಕೊಂಡು ಡ್ಯೂರಾಂಡ್ ರೇಖೆಯನ್ನು ಗಡಿಯೆಂದು ನಿರ್ಧರಿಸಿದರು. ಆದರೂ ಆ ಪ್ರದೇಶ ಬ್ರಿಟಿಷರ ಆಳ್ವಿಕೆಗೆ ಸುಲಭವಾಗಿ ಒಳಪಡಲಿಲ್ಲ. ಅನಂತರ ಸ್ವಲ್ಪ ಕಾಲ ಶಾಂತಿ ಮುಂದುವರಿದರೂ 1919, 1925, 1930-31, 1933 ಮತ್ತು 1936-37ರಲ್ಲಿ ಮತ್ತೆ ಮತ್ತೆ ದಂಗೆಗಳಾದುವು. 1915ರಲ್ಲಿ ಅಮೀರ್ ಹಬೀಬುಲ್ಲ ಮತ್ತು ಬ್ರಿಟಿಷರ ನಡುವೆ ವೈಮನಸ್ಯವುಂಟಾಯಿತು. ಅವನ ಮಗ ಅಮಾನುಲ್ಲಾನ ಕಾಲದಲ್ಲಿ 1919ರಲ್ಲಿ ಮೂರನೆಯ ಆಫ್ಘನ್ ಯುದ್ಧ ನಡೆದು ಅಮಾನುಲ್ಲಾ ಸೋತ. ತರುವಾಯ ಈ ಪ್ರದೇಶದಲ್ಲಿ ಹೆಚ್ಚಿನ ತೊಂದರೆ ಉಂಟಾಗಲಿಲ್ಲ. ಈ ವೇಳೆಗೆ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಬಿರುಸಿನಿಂದ ನಡೆದಿತ್ತು. ಮೊದಲು ಹಿಂದೂ ಮುಸ್ಲಿಮರು ಒಟ್ಟಾಗಿ ಹೋರಾಡಿದರೂ 1930ರ ಸುಮಾರಿನಿಂದ ಮಹಮ್ಮದ್ ಆಲಿ ಜಿನ್ನಾರ ನೇತೃತ್ವದಲ್ಲಿ ಮುಸ್ಲಿಮರು ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನಿಟ್ಟರು. ಬ್ರಿಟಿಷರ ಮತಭೇದ ನೀತಿಯ ಫಲವಾಗಿ ಪ್ರತ್ಯೇಕತಾವಾದಿಗಳ ಕೈಬಲಗೊಂಡಿತು. ಮೊದಲು ಭಾರತೀಯ ನಾಯಕರು ದೇಶದ ವಿಭಜನೆಯನ್ನು ವಿರೋಧಿಸಿದರಾದರೂ ಅಂತಿಮವಾಗಿ ಅಖಂಡ ಭಾರತದ ವಿಭಜನೆಯಾಗಿ, 1947ರಲ್ಲಿ ಪ್ರತ್ಯೇಕ ಪಾಕಿಸ್ತಾನ ಅಸ್ತಿತ್ವಕ್ಕೆ ಬಂತು. ಅನಂತರದ ಸುಮಾರು ಮೂರು ದಶಕಗಳ ಕಾಲದಲ್ಲಿ ಪಾಕಿಸ್ತಾನ ಬಹುಮಟ್ಟಿಗೆ ಮಿಲಿಟರಿ ಆಡಳಿತಕ್ಕೇ ಒಳಪಟ್ಟಿದೆ. 1971ರಲ್ಲಿ ಪೂರ್ವ ಪಾಕಿಸ್ತಾನ ಪ್ರತ್ಯೇಕಗೊಂಡು ಸ್ವತಂತ್ರ ಬಾಂಗ್ಲಾ ದೇಶವಾಯಿತು. ವಾಸ್ತು ಮತ್ತು ಮೂರ್ತಿ ಶಿಲ್ಪ ಪಾಕಿಸ್ತಾನ ಪ್ರದೇಶದ ಕಲೆಯ ಇತಿಹಾಸ ಕ್ರಿ.ಪೂ 2500ರ ಸುಮಾರಿನಲ್ಲಿ ಇಲ್ಲಿ ನೆಲಸಿದ್ದ ಹರಪ್ಪ ನಾಗರಿಕತೆಯ ಕಾಲದಲ್ಲಿ ಆರಂಭವಾಯಿತು. ಪ್ರಮುಖ ನಗರಗಳಾದ ಹರಪ್ಪ ಮತ್ತು ಮೊಹೆಂಜೊದಾರೊ ನೆಲೆಗಳಲ್ಲಿ ನಡೆದ ಉತ್ಖನನಗಳು ಆಗಿನವರ ನಗರ ಯೋಜನೆಯ ಬಗ್ಗೆ ಸ್ಪಷ್ಟವಾದ ಮಾಹಿತಿಗಳನ್ನು ನೀಡಿವೆ. ಆಯಾಕಾರದ ನಗರದ ಸುತ್ತ ಸಂರಕ್ಷಕ ಕೋಟೆ ಗೋಡೆಗಳನ್ನೂ ಬತೇರಿಗಳನ್ನೂ ನಿರ್ಮಿಸಲಾಗಿತ್ತು. ನಗರದೊಳಗೆ ಅಗಲವಾದ ನೇರ ರಸ್ತೆಗಳು, ಅವನ್ನು ಸಂಧಿಸುವ ಅಡ್ಡರಸ್ತೆ. ಓಣಿಗಳು ಇವು ನಗರ ಪ್ರದೇಶವನ್ನು ಆಯಾಕಾರದ ವಠಾರಗಳಾಗಿ ವಿಭಜಿಸಿದ್ದುವು. ಸುಟ್ಟ ಇಟ್ಟಿಗೆಗಳಿಂದ ಕಟ್ಟಿದ ಒಂದೋ ಎರಡೋ ಅಂತಸ್ತುಗಳಿದ್ದ ಮನೆಗಳ ಮಧ್ಯ ಭಾಗದಲ್ಲಿದ್ದ ತೆರೆದ ವಿಶಾಲವಾದ ಅಂಗಣಗಳಿಂದ ನಿವಾಸಿಗಳಿಗೆ ಗಾಳಿ ಬೆಳಕುಗಳು ಒದಗುತ್ತಿದ್ದುವು. ಪ್ರತಿ ಮನೆಯಲ್ಲೂ ನೀರಿನ ಬಾವಿ, ಸ್ನಾನಗೃಹ, ಶೌಚಗೃಹ, ಅಡುಗೆಮನೆ, ಮೇಲಂತಸ್ತಿಗೆ ಹೋಗಲು ಸೋಪಾನ ಪಂಕ್ತಿಗಳು ಮನೆಯಲ್ಲಿ ಬಳಸಿದ ಮತ್ತು ಮಳೆಯ ನೀರನ್ನು ಹೊರಗೊಯ್ಯಲು ಕೊಳವೆ ಚರಂಡಿಗಳು, ರಸ್ತೆಗಳಲ್ಲಿ ಒಳ ಚರಂಡಿಗಳು ಇದ್ದುವು. ನಗರದ ರಸ್ತೆಗಳ ತಿರುವುಗಳಲ್ಲಿ ಕಾವಲುಗಾರರ ಕೊಠಡಿಗಳಿದ್ದುವು. ಚರಂಡಿಗಳನ್ನು ಆಗಾಗ ಸ್ವಚ್ಛಮಾಡಲು ಅಲ್ಲಲ್ಲಿ ದೊಡ್ಡ ಆಳುಗುಂಡಿಗಳನ್ನು ನಿರ್ಮಿಸಿದ್ದುದಲ್ಲದೆ ಅಲ್ಲಿ ಸಂಗ್ರಹವಾದ ಮತ್ತು ರಸ್ತೆಯ ಕಸವನ್ನು ಹೊರಸಾಗಿಸುವ ವ್ಯವಸ್ಥೆ ಇತ್ತು. ರಾಜವಂಶದವರ, ಅಧಿಕಾರಿಗಳ ಮತ್ತು ಶ್ರೀಮಂತರ ವಸತಿಗಳಿಗಾಗಿ ಮತ್ತು ಆಡಳಿತ ಕಚೇರಿಗಳಿಗಾಗಿ ಪ್ರತ್ಯೇಕವಾದ ಒಳಕೋಟೆ ಆವರಣವನ್ನು ಎತ್ತರವಾದ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಅಲ್ಲಿ ಉನ್ನತ ವರ್ಗದವರ ನಿವಾಸಗಳಲ್ಲದೆ ಹಲವು ರೀತಿಯ ಸಾರ್ವಜನಿಕ ಭವನಗಳನ್ನು ಕಟ್ಟಲಾಗಿತ್ತು. ಅವುಗಳ ಪೈಕಿ ಅರಮನೆ, ಧಾರ್ಮಿಕ ನಾಯಕರ ವಿಹಾರಗೃಹ, ಸ್ನಾನದ ಕೊಳ, ಧಾನ್ಯಗಳ ಕಣಜ ಮೊದಲಾದವು ಗಮನಾರ್ಹ. ಅವರು ಮೂರ್ತಿಶಿಲ್ಪಕಲೆಯಲ್ಲೂ ಪ್ರವೀಣರಾಗಿದ್ದರೂ ಹೆಚ್ಚು ಶಿಲ್ಪಗಳು ಉಳಿದು ಬಂದಿಲ್ಲದಿರುವುದು ದುರದೃಷ್ಟಕರ, ದೊರೆತಿರುವ ಕೆಲವು ಶಿಲಾಮೂರ್ತಿಗಳ ಪೈಕಿ ಗಡ್ಡಧಾರಿ ಪುರೋಹಿತ ಮೂರ್ತಿ, ಮತ್ತೊಬ್ಬ ಮಾನವನ ತಲೆ ಇವು ಉತ್ತಮ ಕೃತಿಗಳು, ಹರಪ್ಪದಲ್ಲಿ ಸಿಕ್ಕಿದ ರುಂಡವಿಲ್ಲದ ಶಿಲ್ಪಗಳು ಮಾನವದೇಹದ ನಿರೂಪಣೆಯಲ್ಲಿ ಅದ್ಭುತ ಕೃತಿಗಳು. ಕಂಚಿನ ನರ್ತಕಿಯ ಮೂರ್ತಿ ಅತ್ಯಂತ ಸಹಜ ನಿರೂಪಣೆ. ಜೇಡಿಮಣ್ಣಿನ ಮನುಷ್ಯ, ಪ್ರಾಣಿಗಳ ಮತ್ತು ಪಕ್ಷಿಗಳ ಗೊಂಬೆಗಳು ಉತ್ತಮ ಕಲಾವಂತಿಕೆಯನ್ನು ಬೀರುತ್ತವೆ. ಇವೆಲ್ಲಕ್ಕಿಂತಲೂ ಹೆಚ್ಚಿನ ಪ್ರತಿಭೆಯನ್ನು ಸೂಸುವ ಅವರ ಕಲಾ ನಿರ್ಮಾಣವನ್ನು ಅವರ ಮೇದಶ್ಶಿಲಾ ಮುದ್ರಿಕೆಗಳ ಮೇಲೆ ಕಾಣಬಹುದು. ಅವುಗಳ ಮೇಲಿನ ಪ್ರಾಣಿಗಳ ಚಿತ್ರಣ ಜೀವಂತ ಸತ್ವಪೂರ್ಣ ನಿರೂಪಣೆಯ ಉತ್ತಮ ನಿದರ್ಶನ. ಕ್ರಿಸ್ತಶಕದ ಮೊದಲ ಶತಮಾನಗಳಲ್ಲಿ ಕುಷಾಣರ ಆಶ್ರಯದಲ್ಲಿ ಬೆಳೆದು ಬಂದ ಗಾಂಧಾರ ಶಿಲ್ಪದ ವರೆಗೂ ನಮಗೆ ಹೆಚ್ಚಿನ ಮಾಹಿತಿಗಳು ದೊರಕಿಲ್ಲ. ಕ್ರಿ.ಪೂ 5ನೆಯ ಶತಮಾನದ ಹೊತ್ತಿಗೆ ತಕ್ಷಶಿಲೆ ಪ್ರಮುಖ ರಾಜಕೀಯ ಮತ್ತು ಸಾಂಸ್ಕøತಿಕ ಕೇಂದ್ರವಾಗಿತ್ತು. ಪರ್ಷಿಯ ಸಾಮ್ರಾಜ್ಯದಲ್ಲಿ ಗಾಂಧಾರ ಪ್ರಾಂತ್ಯದ ಮುಖ್ಯ ನಗರವಾದ ತಕ್ಷಶಿಲೆಯ ನಗರ ಭಾಗವನ್ನು ಸಂಶೋಧಿಸಿದಾಗ ಕೆಲವು ವಿಶಾಲವಾದ ಸಾರ್ವಜನಿಕ ಕಟ್ಟಡಗಳೂ ಅರಮನೆ, ದೇವಾಲಯ, ಒಳಚರಂಡಿ ವ್ಯವಸ್ಥೆಗಳನ್ನೊಳಗೊಂಡ ಮತ್ತು ಕೋಟೆ ಕೊತ್ತಲ ಕಂದಕಗಳನ್ನು ಹೊಂದಿದ ನಗರ ವ್ಯವಸ್ಥೆ ಇವೂ ಕಂಡುಬಂದವು. ಆದರೆ ಕ್ರಿ.ಪೂ 2ನೆಯ ಶತಮಾನಕ್ಕೆ ಸೇರಿದ ಗ್ರೀಕ್ ನಗರದಲ್ಲಿ ಹಲವು ಪ್ರಮುಖ ಸುಧಾರಣೆಗಳನ್ನು ಮಾಡಲಾಯಿತು. ಕೋಟೆಯ ಕಲ್ಲಿನ ಗೋಡೆ 6.4 ಮೀ ಅಗಲವಾಗಿದೆ. ಆದರೆ ಮಧ್ಯಂತರದಲ್ಲಿ ಅರ್ಧ ಆಯಾಕಾರದ ಕೊತ್ತಲಗಳನ್ನು ನಿರ್ಮಿಸಲಾಗಿತ್ತು. ಕೋಟೆಯ ಒಳಭಾಗವನ್ನು ಉದ್ದ ಅಡ್ಡದ ರಸ್ತೆಗಳಿಂದ ಆಯಾಕಾರದ ವಠಾರಗಳಾಗಿ ವಿಂಗಡಿಸಿ ಅವುಗಳಲ್ಲಿ ವಿಶಾಲಗೃಹಗಳನ್ನು ನಿರ್ಮಿಸಲಾಗಿತ್ತು. ಈ ನಗರ ಯೋಜನೆ ಹೆಚ್ಚು ಕಡಿಮೆ ಹರಪ್ಪ ನಾಗರಿಕತೆಯ ನಗರ ವ್ಯವಸ್ಥೆಯನ್ನು ಹೋಲುತ್ತಿತ್ತು. ತಕ್ಷಶಿಲೆಯ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ತಪ್ಪಲುಗಳಲ್ಲಿ, ಕಣಿವೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಬೌದ್ಧಸ್ತೂಪ, ಚೈತ್ಯ ಮತ್ತು ವಿಹಾರಗಳು ಕುಷಾಣರ ಆಳ್ವಿಕೆಯಲ್ಲಿ ನಿರ್ಮಾಣವಾದವು. ಈ ಶಾಂತ, ನಿಸರ್ಗ ಸುಂದರ ಪ್ರದೇಶ ಬೌದ್ಧ ಭಿಕ್ಷುಗಳನ್ನು ಅಧಿಕ ಸಂಖ್ಯೆಯಲ್ಲಿ ಆಕರ್ಷಿಸಿದುದರಲ್ಲಿ ಆಶ್ಚರ್ಯವಿಲ್ಲ. ಇಂಥ ಬೌದ್ಧ ನಿರ್ಮಾಣಗಳ ಪೈಕಿ ತಕ್ಷಶಿಲೆಯ ಬಳಿ ಇರುವ ಧರ್ಮರಾಜಿಕ ಸ್ತೂಪ ಮತ್ತು ವಿಹಾರಗಳು ಪ್ರಧಾನವಾದವು. ಅಶೋಕನಿಗಿಂತ ಮೊದಲು ನಿರ್ಮಿತವಾಯಿತೆಂದು ಹೇಳಲಾದ ಈ ಕಟ್ಟಡ ಸಮೂಹ ಕುಷಾಣರ ಕಾಲದಲ್ಲಿ ಬಹಳ ದೊಡ್ಡದಾಗಿ ಬೆಳೆಯಿತು. ಮಧ್ಯದ ಅಂಗಣದಲ್ಲಿ ಬೃಹತ್‍ಸ್ತೂಪ, ಸುತ್ತ ಸಣ್ಣ ಸ್ತೂಪಗಳ ಸಾಲುಗಳು ಚೈತ್ಯಗೃಹಗಳು ಮತ್ತು ಒಂದು ಭಾಗದಲ್ಲಿ ಬಹುಸಂಖ್ಯೆಯ ಕೋಣೆಗಳಿದ್ದ ವಿಹಾರ ಅಥವಾ ಭಿಕ್ಷು ವಸತಿಗಳು ಇದ್ದುವು. 5-6ನೆಯ ಶತಮಾನಗಳಲ್ಲಿ ಹೂಣರ ದಾಳಿಗೆ ಆಹುತಿಯಾಗುವವರೆಗೂ ಈ ಬೌದ್ಧ ಕಟ್ಟಡಗಳು ಧಾರ್ಮಿಕ ಮತ್ತು ವಿದ್ಯಾಕೇಂದ್ರಗಳಾಗಿ ಮುಂದುವರಿದುವು. ಈ ಬೌದ್ಧ ನಿರ್ಮಾಣಗಳು ಪಾಕಿಸ್ತಾನದ ಇತಿಹಾಸಕಾಲದ ಮೊದಲ ವಾಸ್ತು ನಿರ್ಮಾಣಗಳು. ಇವಕ್ಕಿಂತಲೂ ಗಮನಾರ್ಹ ಕೊಡುಗೆಯೆಂದರೆ ಮೂರ್ತಿಶಿಲ್ಪ ರಂಗದಲ್ಲಿ ಆ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಗಾಂಧಾರ ಶಿಲ್ಪಕಲೆ, ಕುಷಾಣ ದೊರೆಗಳ ಆಶ್ರಯದಲ್ಲಿ ಭಾರತೀಯ ವಸ್ತುಗಳಿಗೆ ಗ್ರೀಕ್ ಕಲಾ ನೈಪುಣ್ಯವನ್ನು ಅನ್ವಯಿಸಿ ಸೃಷ್ಟಿಸಿದ ನೂರಾರು ಬುದ್ಧ, ಬೋಧಿಸತ್ವ ಮತ್ತು ಇತರ ಬೌದ್ಧ ಶಿಲ್ಪಗಳು ಗಾಂಧಾರ ಶಿಲ್ಪ ಶೈಲಿಯವೆಂದು ಪರಿಗಣಿತವಾಗಿವೆ. ಇವುಗಳ ಪೈಕಿ ಚುನಾರಿನ, ಅಮೃತಶಿಲೆಯಲ್ಲಿ ಅಥವಾ ಮರಳುಗಲ್ಲಿನಲ್ಲಿ ಮಾಡಿದ ಮೂರ್ತಿಗಳು, ಗಚ್ಚಿನಲ್ಲಿ ನಿರ್ಮಿಸಿದ ವಿಗ್ರಹಗಳು ಮತ್ತು ಜೇಡಿಮಣ್ಣಿನ ಪ್ರತಿಮೆಗಳು ಅಧಿಕ ಸಂಖ್ಯೆಯಲ್ಲಿ ದೊರೆತಿವೆ. ಈ ಕಲೆ ಆಫ್ಘಾನಿಸ್ತಾನ ಪ್ರದೇಶದಲ್ಲಿ ಹರಡಿತ್ತು. ಪಾಕಿಸ್ತಾನದಲ್ಲಿ ತಕ್ಷಶಿಲೆಯ ಪ್ರದೇಶದಲ್ಲಿ ನಡೆಸಿದ ದೀರ್ಘಕಾಲದ ಉತ್ಖನನಗಳಲ್ಲಿ ಅಧಿಕಸಂಖ್ಯೆಯ ಶಿಲ್ಪಗಳು, ಮುಖ್ಯವಾಗಿ ಗಚ್ಚಿನಲ್ಲಿ ಮಾಡಿದ ಮೂರ್ತಿಗಳು, ದೊರೆತಿವೆ. ಕಲ್ಲಿನ ಮೂರ್ತಿಗಳಿಗಿಂತಲೂ ಗಚ್ಚಿನ ಮೂರ್ತಿಗಳು ಹೆಚ್ಚು ಅಂದವಾಗಿವೆ. ಗಚ್ಚಿನಲ್ಲಿ ಮತ್ತು ಜೇಡಿಮಣ್ಣಿನಲ್ಲಿ ಶಿಲ್ಪಗಳನ್ನು ಸುಲಭವಾಗಿ ರೂಪಿಸಬಹುದಾಗಿದ್ದುದರಿಂದ ಕ್ರಮೇಣ ಕಲ್ಲಿನ ಶಿಲ್ಪಗಳು ವಿರಳವಾದುವು. ಈ ಶಿಲ್ಪಕಲೆ ಮಹಾಯಾನ ಬೌದ್ಧಪಂಥದಿಂದ ಉತ್ತೇಜನ ಪಡೆದವಾದ್ದರಿಂದ ಇವನ್ನು 150-450ರ ಅವಧಿಗೆ ನಿರ್ದೇಶಿಸಬಹುದಾಗಿದೆ. ಇವುಗಳಲ್ಲಿ ಪೌರಸ್ತ್ಯ-ಪಾಶ್ಚಾತ್ಯ ಪರಂಪರೆಗಳ ಸಮ್ಮಿಲನವನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಆದರೆ ಸಿಂಧ್ ಪ್ರದೇಶದಲ್ಲಿ ಈ ಕಲೆ ಎಂಟನೆಯ ಶತಮಾನದವರೆಗೂ ಉಳಿದು ಬಂದ ವಿಷಯ ಮೀರಪುರ ಖಾಸ್ ಎಂಬಲ್ಲಿಯ ಇಟ್ಟಿಗೆ ಸ್ತೂಪದ ಮೂರ್ತಿಗಳಿಂದ ಖಚಿತವಾಗುತ್ತದೆ. ಅನಂತರ ಕಾಲದ ಅವಶೇಷಗಳೆಂದರೆ ಉತ್ತರ ಸಿಂಧ್‍ನಲ್ಲಿರುವ ಹಿಂದೂ ವಾಸ್ತು ಶಿಲ್ಪಗಳು, ಇವುಗಳ ಕಾಲ ನಿರ್ಣಯ ಕಠಿಣವಾದರೂ ಇವುಗಳ ಇಸ್ಲಾಮೀ ವಾಸ್ತು ಶೈಲಿಯ ಲಕ್ಷಣಗಳಿಂದ ಇವನ್ನು ಸ್ಥೂಲವಾಗಿ 8-10ನೆಯ ಶತಮಾನಗಳಿಗೆ ನಿರ್ದೇಶಿಸಲಾಗಿದೆ. ದಕ್ಷಿಣ ಸಿಂಧ್‍ನಲ್ಲಿರುವ ಹಿಂದು ಕಟ್ಟಡಗಳ ಮತ್ತೊಂದು ಗುಂಪು 12-14ನೆಯ ಶತಮಾನಗಳಿಗೆ ಸೇರುತ್ತದೆ. ಉತ್ತರದ ಕಟ್ಟಡಗಳನ್ನು ಕಾಶ್ಮೀರ ವಾಸ್ತುಶಿಲ್ಪದ ಸಂಬಂಧವನ್ನು ಸೂಚಿಸುವ ಝೀಲಂ ದಂಡೆಯ ಪೂರ್ವದ ಗುಂಪು ಮತ್ತು ಸಿಂಧೂ ನದಿದಡದ ಪಶ್ಚಿಮದ ಗುಂಪು ಎಂದು ಎರಡು ಗುಂಪುಗಳಾಗಿ ಮಾಡಲಾಗಿದೆ. ಪೂರ್ವದ ಗುಂಪಿನ ಪ್ರಮುಖ ಕಟ್ಟಡ ಹ್ಯೂಯೆನ್‍ತ್ಸಾಂಗನ ಸಿಂಘಪುರ ಅಥವಾ ಈಗಿನ ಮಲ್ಲೋಟ್ ನಲ್ಲಿರುವ ಪಾಳುದೇವಾಲಯ. ಇಬ್ಬದಿಗಳಲ್ಲೂ ಹಿಂದೆ ಸರಿದ ಚಾಚುಭಾಗಗಳು, ಗಾಡಿಗಳಿಂದ ಅಲಂಕೃತವಾದ ಕಂಬಗಳು ಮತ್ತು ತ್ರಿಪತ್ರಕ ಕಮಾನು ಇರುವ ಕಾಶ್ಮೀರಿ ಶೈಲಿಯ ನಾಲ್ಕು ಚದುರಗಳ ಕಟ್ಟಡ ಇದು. ಇದರ ಮೆಟ್ಟಿಲುಮೆಟ್ಟಿಲಾದ ಮತ್ತು ಪಿರಿಮಿಡಾಕೃತಿಯ ಶಿಖರ ಬಿದ್ದುಹೋಗಿದೆ. ಇದು ಪಾಶ್ಚಾತ್ಯ ಗ್ರೀಕ್-ರೋಮನ್, ಬೌದ್ಧ ಮತ್ತು ಹಿಮಾಲಯ ಪ್ರದೇಶದ ಮರದ ಕಟ್ಟಡಗಳ-ಹೀಗೆ ತ್ರಿವಿಧ ಪ್ರಭಾವಗಳ-ಸಂಗಮವಾಗಿದೆ. ಕಾಶ್ಮೀರದ ಲಲಿತಾದಿತ್ಯ ಸಿಂಧ್ ಪ್ರಾಂತವನ್ನು ಆಕ್ರಮಿಸಿಕೊಂಡಾಗ ಬಹುಶಃ ಇದನ್ನು ಕಟ್ಟಲಾಯಿತು. ಪಶ್ಚಿಮದ ಗುಂಪಿಗೆ ಅಟಕ್ ಜಿಲ್ಲೆಯ ಕಲ್ಲರ್ ದೇವಾಲಯ ಮತ್ತು ಡೇರಾ ಇಸ್ಮೈಲ್‍ಖಾನ್ ಜಿಲ್ಲೆಯ ಬಿಲಾಟ್‍ನಲ್ಲಿರುವ ದಕ್ಷಿಣ ಕಾಫಿರ ಕೋಟೆಯಲ್ಲಿರುವ ದೇವಾಲಯಗಳು ಸೇರುತ್ತವೆ. ಇವು ಮಧ್ಯ ಕಾಲೀನ ಉತ್ತರ ಭಾರತದ ನಾಗರ ಶೈಲಿಯ ದೇವಾಲಯಗಳನ್ನು ಹೋಲುತ್ತವೆ. ಇವುಗಳ ಜೇನುಗೂಡಿನಾಕಾರದ ಶಿಖರದ ಮೇಲೆ ಅನೇಕ ರೀತಿಯ ಸೂಕ್ಷ್ಮ ಅಲಂಕರಣಗಳನ್ನು ಮಾಡಲಾಗಿದೆ. ಪ್ರಾಚೀನ ಗುಪ್ತಶೈಲಿಯ ದೇವಾಲಯಗಳಲ್ಲಿರುವಂತೆ ಅರಗಂಬಗಳು, ಅವುಗಳ ಮೇಲೆ ಕುಂಭಕಾರ್ಯದ ಬೋದಿಗೆಗಳು, ಜೋತಾಡುವ ಲತಾಗುಲ್ಮಗಳು ಕಂಡುಬರುತ್ತವೆ ಸುತ್ತಲ ಪ್ರದೇಶದಲ್ಲಿ ಉತ್ತಮ ಮರಳ್ಗಲ್ಲು ಸಿಕ್ಕುತ್ತಿದ್ದರೂ ಸುಟ್ಟ ಇಟ್ಟಿಗೆ ಅಥವಾ ಮೃದುವಾದ ಕಂಜೂರ್ ಶಿಲೆಯಲ್ಲಿ ಆ ಕಟ್ಟಡಗಳನ್ನು ಕಟ್ಟಲಾಗಿದೆ. ಗಂಗಾ-ಯಮುನಾ ಬಯಲು ಪ್ರದೇಶದ ಕಟ್ಟಡ ಶೈಲಿ ಈ ವಾಯವ್ಯ ಪ್ರದೇಶಕ್ಕೆ ವಿಸ್ತರಿಸಿ ಸ್ವಲ್ಪ ಮಟ್ಟಿಗೆ ಈ ಪ್ರದೇಶದ ಬೌದ್ಧ ವಾಸ್ತುಶೈಲಿಯ ಪ್ರಭಾವಕ್ಕೊಳಗಾಗಿದೆಯೆಂದು ಹೇಳಲಡ್ಡಿಯಿಲ್ಲ. ದಕ್ಷಿಣ ಕಾಫಿರ ಕೋಟೆಯಲ್ಲಿ ಈ ಶೈಲಿಯ ಒಂಬತ್ತು, ಮತ್ತು 38 ಕಿಮೀ ದೂರದಲ್ಲಿ ಇರುವ ಉತ್ತರ ಕಾಫಿರ ಕೋಟೆಯಲ್ಲಿ ಐದು ದೇವಾಲಯಗಳಿವೆ. ಮೇಲಿನ ಶಿಖರದ ಭಾರವನ್ನು ಹೊರಲು ಚದರ ಗರ್ಭಗುಡಿಯ ಚಾವಣಿಯ ನಾಲ್ಕು ಮೂಲೆಗಳಲ್ಲಿ ಮರದ ದೊಡ್ಡ ದೊಡ್ಡ ಅಡ್ಡ ದಿಮ್ಮಿಗಳನ್ನು ಸೇರಿಸಿರುವುದರಿಂದ ಆ ಭಾಗಕ್ಕೆ ಅಷ್ಟ ಪಾಶ್ರ್ವಗಳಿರುವಂತೆ ಭಾಸವಾಗುತ್ತದೆ. ದಕ್ಷಿಣ ಸಿಂಧ್ ಪ್ರದೇಶದ ದೇವಾಲಯಗಳ ಉತ್ತಮ ಮಾದರಿಯನ್ನು ವಿರಾವಾದದಿಂದ ವಾಯವ್ಯಕ್ಕೆ ಸುಮಾರು 22 ಕಿಮೀ. ದೂರದಲ್ಲಿರುವ ಗೋರಿ ಎಂಬಲ್ಲಿಯ ಜೈನ ದೇವಾಲಯದಲ್ಲಿ ಕಾಣಬಹುದು. ಆ ಪ್ರದೇಶದಲ್ಲಿ ದೊರಕುವ ಶಿಲೆಯಲ್ಲಿ ಕಟ್ಟಲಾದ ಈ ದೇವಾಲಯದ ಕಂಬಗಳಿಗೆ ಮತ್ತು ಅಲಂಕರಣ ಕೆತ್ತನೆಗಳಿಗೆ ರಾಜಸ್ಥಾನದ ಸ್ಫಟಿಕ ಶಿಲೆಯನ್ನು ಬಳಸಲಾಗಿದೆ. ಮಂದಿರಗಳಲ್ಲಿ ಸ್ಫಟಿಕ ಶಿಲೆಯನ್ನು ಬಳಸಲಾಗಿದೆ. ಈ ಮಂದಿರಗಳಲ್ಲಿ ಸ್ಫಟಿಕ ಶಿಲೆಯ ಕಂಬಗಳು ಮತ್ತು ಹೊರಚಾಚಿದಂತಿರುವ ಗುಮ್ಮಟಗಳಿರುವ ಹೊರ ಮಂಟಪ, ಸಣ್ಣ ಶಿಖರಗಳಿಂದ ಕೂಡಿದ ಭೂಮಿಜ ಶೈಲಿಯ ಶಿಖರಗಳು ಇವೆ. ಹೊರ ಮಂಟಪದಲ್ಲಿ ಗೋಡೆಗಳ ಮೇಲೆ, ಅಲ್ಲಿರುವ ಶಾಸನ ತಿಳಿಸುವಂತೆ, 1715ರಲ್ಲಿ ಜೀರ್ಣೋದ್ಧಾರ ಮಾಡಿದಾಗ ರೂಪಿಸಲಾದ ವರ್ಣಚಿತ್ರಗಳಿವೆ. ಈ ದೇವಾಲಯಗಳಲ್ಲದೆ ಮೇಲೆ ಹೇಳಿದ ಎರಡು ಕಾಫಿರ ಕೋಟೆಗಳ ಸುತ್ತಲಿರುವ ರಕ್ಷಣಾ ಕೋಟೆಗಳು ಗಮನಾರ್ಹ. ಸುಭದ್ರವಾಗಿ ಕಟ್ಟಿರುವ ಈ ಕೋಟೆಗಳು ಬಹುಶಃ ಮುಸ್ಲಿಮ್ ಆಕ್ರಮಣ ಕಾಲಕ್ಕೂ ಹಿಂದಿನವೆಂದು ಹೇಳಬಹುದಾಗಿದೆ. ಇಸ್ಲಾಮಿ ವಾಸ್ತು ಕಟ್ಟಡಗಳನ್ನು ಪರದೆಯಂತಿರುವ ಗೋಡೆಯಲ್ಲಿರುವ ಮಿಹ್ರಾಬ್ ಪ್ರಾರ್ಥನ ಹಜಾರ ಮತ್ತು ವಿಶಾಲಪ್ರಾಂಗಣಗಳಿರುವ ಮಸೀದಿ, ಜನರ ವಿಹಾರಕ್ಕೆ ಬಳಸುವ ಆವರಣ ಅಥವಾ ಮೃತರ ಸಮಾಧಿ ಎಂದು ವರ್ಗೀಕರಿಸಬಹುದು. 8ನೆಯ ಶತಮಾನದಲ್ಲಿ ಅರಬರು ಸಿಂಧ್‍ನಲ್ಲಿ ಮೊದಲಿಗೆ ಇಸ್ಲಾಮೀ ವಾಸ್ತುಶಿಲ್ಪವನ್ನು ತಂದರೆಂಬುದು ಚರ್ಚಾಸ್ಪದವಾದ ವಿಷಯ. ಆದರೆ 1000ದಿಂದ ಕ್ರಮೇಣ ಪರ್ಷಿಯದ ಪ್ರಭಾವದಿಂದ ಪಾಕಿಸ್ತಾನ ಪ್ರದೇಶದಲ್ಲಿ ಆ ಶೈಲಿಯ ಕಟ್ಟಡಗಳು ತಲೆದೋರಿದುವೆಂದು ಹೇಳಬಹುದಾದರೂ ಆ ಕಾಲದವು ಹೆಚ್ಚಾಗಿ ಉಳಿದುಬಂದಿಲ್ಲ. ಒಂದು ಗಮನಾರ್ಹ ಸಂಗತಿ ಎಂದರೆ, ಅರಬ್ಬಿ ಮರಳ್ಗಾಡಿನಲ್ಲಿ ಆ ಪರಿಸರಕ್ಕೆ ಸೂಕ್ತವಾದ ರೀತಿಯಲ್ಲಿ ಹುಟ್ಟಿದ ವಾಸ್ತುಶೈಲಿ ಇಲ್ಲಿಯ ಬೆಟ್ಟಗಾಡು ಪ್ರದೇಶದಲ್ಲಿ ಸಮಂಜಸ ಮಾರ್ಪಾಡುಗಳೊಂದಿಗೆ ಬೆಳೆದು ಬಂದಿರುವುದು. ಭಾರತ ಉಪಖಂಡದಲ್ಲಿ ಇದರ ಬೆಳೆವಣಿಗೆಯ ಪರಾಕಾಷ್ಠೆಯನ್ನು ಅಕ್ಬರನ ರಾಜಧಾನಿ ಫತೇಪುರ ಸಿಕ್ರಿಯಲ್ಲಿ(1570) ಕಾಣಬಹುದು. ಮುಸ್ಲಿಂ ಪ್ರವೇಶಕಾಲದಿಂದ (1001) ಮೊಗಲರ ಪ್ರಾರಂಭಕಾಲದವರೆಗಿನ (1526) ಕಟ್ಟಡಗಳ ಅವಶೇಷಗಳು ಪಾಕಿಸ್ತಾನ ಪ್ರದೇಶದಲ್ಲಿ ಹೆಚ್ಚಾಗಿ ಉಳಿದು ಬಂದಿಲ್ಲ. ಆ ಕಾಲದವಾಗಿರಬಹುದಾದ ಕೆಲವು ಕಟ್ಟಡಗಳನ್ನು ಈಚಿನ ವರ್ಷಗಳಲ್ಲಿ ಜೀರ್ಣೋದ್ದಾರಗೊಳಿಸಿರುವುದರಿಂದ ಅವುಗಳ ಮೂಲರೂಪವನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟಸಾಧ್ಯ. ಆದಾಗ್ಯೂ ಮುಲ್ತಾನಿನಲ್ಲಿ ಆಗಿನ ಕೆಲವು ಕಟ್ಟಡಗಳನ್ನು ಗುರ್ತಿಸಲಾಗಿದೆ. ಅವುಗಳಲ್ಲಿ ಪ್ರಾಚೀನತಮವಾದ ಷಾ ಯೂಸುಫ್ ಗರ್ದಿಜಿಯ ಸಮಾಧಿ (1152) ಆಯಾಕಾರದ ಇಟ್ಟಿಗೆ ಕಟ್ಟಡ. ಅದರ ಹೊರಭಾಗವನ್ನು ಜ್ಯಾಮಿರೀಯ ಚಿತ್ರಗಳಿದ್ದ ಗಾಜಿನ ಹೆಂಚುಗಳಿಂದ ಅಲಂಕರಿಸಲಾಗಿತ್ತು. ಅದರ ಒಂದು ತುದಿಯಲ್ಲಿ ಮಿಹ್ರಾಬ್ ಇತ್ತು. ಸುಮಾರು 1320-24ರ ನಡುವೆ ನಿರ್ಮಿತವಾದ ರುಕ್ನಿ ಅಲಮ್‍ನ ಸಮಾಧಿ ಘಿಯಾಸುದ್ದೀನನ ಆದೇಶದ ಮೇರೆ ನಿರ್ಮಿತವಾದ ಕಟ್ಟಡ. ಆಗಿನ ಕಾಲಕ್ಕೆ ಆ ಪ್ರದೇಶದಲ್ಲಿ ಅದು ಬಹಳ ಅಂದವಾದ ವಾಸ್ತುನಿರ್ಮಾಣವೆನಿಸಿತ್ತು. ಕೋಟೆಯ ದಿಬ್ಬದ ವಾಯವ್ಯ ಮೂಲೆಯಲ್ಲಿ 35 ಕಿಮೀ. ಎತ್ತರದ ಆ ಕಟ್ಟಡಭವ್ಯವಾಗಿತ್ತು. ಎಂಟು ಪಾಶ್ರ್ವಗಳ ಕಟ್ಟಡದ ಪ್ರತಿ ಮೂಲೆಯಲ್ಲೂ ಮಿನಾರತುಗಳಿದ್ದುವು. ಗಾಜಿನ ಹೆಂಚುಗಳು ಮತ್ತು ಕೆತ್ತಿದ ಮರದ ಭಾಗಗಳು ಅದನ್ನು ಅಂದಗೊಳಿಸಿದ್ದುವು. ಅನಂತರದ ಕಾಲದ ದೆಹಲಿಯ ಸಮಾಧಿಗಳ ಮುನ್ನೋಟವನ್ನು ಒದಗಿಸುವ ಈ ಭಾರತೀಯ ಇಸ್ಲಾಮಿ ನಿರ್ಮಾಣ ನಿಲುನೋಟದಲ್ಲಿ ಮೂರು ಹಂತಗಳನ್ನು ಒಳಗೊಂಡ ಗಮನಾರ್ಹ ಕಟ್ಟಡವಾಗಿತ್ತು. ಈ ಮಧ್ಯ ಯುಗ ಮತ್ತು ಮೊಗಲರ ಕಾಲದಲ್ಲಿ ಸಿಂಧ್‍ನಲ್ಲಿ ಇಸ್ಲಾಮಿ ಕಟ್ಟಡ ಕಲೆ ಪ್ರತ್ಯೇಕ ದಾರಿಯಲ್ಲಿ ಬೆಳೆದುಬಂತು. ಅವುಗಳಲ್ಲಿ ಅತ್ಯಂತ ಪ್ರಾಚೀನವಾದ್ದು ತಟ್ಟದಲ್ಲಿರುವ ಮಸೀದಿ (1588). ಪ್ರಾರ್ಥನಮಂದಿರ, ಪ್ರಾಂಗಣ, ಮಂದಿರದ ಮೇಲೆ ಗುಮ್ಮಟಗಳು ಇವುಗಳಿಂದ ಕೂಡಿದ ಈ ಇಟ್ಟಿಗೆಯ ಕಟ್ಟಡಗಳಲ್ಲಿ ಗಾಜಿನ ಹೆಂಚುಗಳ ಅಲಂಕಾರ ಮನೋಹರವಾಗಿತ್ತು. ಷಹಜಹಾನನ ಆದೇಶದ ಮೇರೆಗೆ 1644ರಲ್ಲಿ ಕಟ್ಟಿಸಿದ ಜಾಮಿ ಮಸೀದಿಯನ್ನು ಕಲ್ಲಿನ ತಳಪಾಯದ ಮೇಲೆ ಇಟ್ಟಿಗೆಯಲ್ಲಿ ನಿರ್ಮಿಸಲಾಗಿದೆ. ಪ್ರಾರ್ಥನಮಂದಿರದ ಮೇಲಿನ ಗುಮ್ಮಟ ಬಹಳ ದೊಡ್ಡದಾಗಿದೆ. ಪ್ರವೇಶದ್ವಾರದ ಇಕ್ಕೆಲಗಳಲ್ಲಿರುವ ಗುಮ್ಮಟಗಳು ಸಣ್ಣವು. ಅದರ ಚಾವಣಿಯಲ್ಲಿ ಒಟ್ಟು 93 ಗುಮ್ಮಟಗಳಿವೆ. ಅದರ ಮುಂಭಾಗದಲ್ಲಿ ಗೋಡೆಗಳಿಗೆ ಹೆಂಚುಗಳನ್ನು ಹೊಂದಿಸಲಾಗಿದೆ. ಉಳಿದ ಗೋಡೆಗಳ ಹೊರ ಮತ್ತು ಒಳಭಾಗಗಳಲ್ಲಿ ಕೆಲವು ವರ್ಣಚಿತ್ರಗಳಿವೆ. ಇದು ಭಾರತ ಉಪಖಂಡದಲ್ಲಿ ಪರ್ಷಿಯನ್ ಕಲೆಯ ಅತ್ಯುತ್ತಮ ಪ್ರತೀಕವಾಗಿದೆ. ತಟ್ಟದ ವಾಯವ್ಯಕ್ಕೆ ಸುಮಾರು 5 ಕಿಮೀ. ದೂರದಲ್ಲಿರುವ ಸಮ್ಮಾ ನಗರದಲ್ಲಿ (ಸಾಮೂರ) 15ನೆಯ ಶತಮಾನದ ತಟ್ಟದ ರಜವಂಶೀಯರ ಮತ್ತು ಮುಸ್ಲಿಮ್ ಸಂತರ ಸಾವಿರಾರು ಸಮಾಧಿಗಳಿವೆ. ಕಲ್ಲಿನಲ್ಲಿ ಕಟ್ಟಿದ ಅಥವಾ ಇಟ್ಟಿಗೆ ಮತ್ತು ಗಾಜಿನ ಹೆಂಚುಗಳಿಂದ ನಿರ್ಮಿಸಿದ ಈ ಸಮಾಧಿಗಳನ್ನು 16-17ನೆಯ ಶತಮಾನಗಳ ಸುಮಾರಿಗೆ ನಿರ್ದೇಶಿಸಲಾಗಿದೆ. ಜಾಮ್ ನಿಜಾಮುದ್ದೀನನ ಸಮಾಧಿ(1508) ಇವುಗಳಲ್ಲೊಂದು. ಇದು ಚದರ ಕಟ್ಟಡ. ಇದನ್ನು ಮೊದಲಿನ ಹಿಂದೂ ದೇವಾಲಯಗಳ ಕಟ್ಟಡಗಳ ಕಲ್ಲುಗಳಿಂದ ನಿರ್ಮಿಸಲಾಗಿದೆ. ಇಲ್ಲಿಯ ಸಮಾಧಿಗಳ ಕಲ್ಲುಗೋಡೆಗಳ ಮೇಲೆ ಗಾಜಿನ ಹೆಂಚುಗಳ ಮೇಲಿನ ಅಲಂಕಾರದ ಅನುಕರಣೆಯಿದೆ. ಇಲ್ಲಿರುವ ಬಹಳ ದೊಡ್ಡ ಕಟ್ಟಡವೆಂದರೆ ಮಿರ್ಜಾ ಈಸಾ ಟರ್ಖಾನನ ಸಮಾಧಿ (1644). ಇದು ಅಷ್ಟು ಅಂದವಾದ ಕಟ್ಟಡವೇನಲ್ಲ. ಇಲ್ಲಿಯ ಸಮಾಧಿಗಳು ಪ್ರಾದೇಶಿಕ ವಾಸ್ತುಶೈಲಿಯ ಪ್ರತೀಕಗಳು. ಇರಾನಿನ ಪ್ರಭಾವಕ್ಕೊಳಗಾದ ಆ ಪ್ರದೇಶದ ಸಂಪ್ರದಾಯವನ್ನು ಇವು ಪ್ರತಿಬಿಂಬಿಸುತ್ತವೆ. ಮೊಗಲರ ಕಾಲದ ಕಟ್ಟಡಗಳ ಪೈಕಿ ಲಾಹೋರಿನಲ್ಲಿರುವವು ಪ್ರಧಾನವಾಗಿದೆ. ಅಲ್ಲಿರುವ ಹಲವಾರು ಕಟ್ಟಡಗಳು ಮೊಗಲ್ ವಾಸ್ತುಶೈಲಿಯ ಉತ್ತಮ ಪ್ರತೀಕಗಳು. ಆ ಶೈಲಿಯ ಲಕ್ಷಣಗಳೆಂದರೆ ದುಂಡಾದ ಜೋಡು ಗುಮ್ಮಟಗಳು, ಹಿಂದು ಸಂಪ್ರದಾಯಕ್ಕೆ ಅನುಗುಣವಾಗಿ ಅನೇಕ ಪ್ರಾಂಗಣಗಳ ಬಳಕೆ, ಹಿಂದು ಸಂಪ್ರದಾಯದ ಚಾಚು ಕಿಟಕಿಗಳ ಬಳಕೆ, ಮತ್ತು ಮಥುರಾ ಪ್ರದೇಶದ ಕೆಂಪು ಮರಳ್ಗಲ್ಲಿನ ಬಳಕೆ. ಅದರ ಗೋಡೆಗಳ ಮೇಲೆ ಬಿಳಿ ಮತ್ತು ಕಪ್ಪು ಸ್ಫಟಿಕ ಶಿಲೆಯ ಅಲಂಕರಣವಿದೆ. ಪರ್ಷಿಯದ ಹಲವು ಬಣ್ಣದ ಗಾಜಿನ ಹೆಂಚುಗಳಿಂದ ಮಾಡುತ್ತಿದ್ದ ಅಲಂಕರಣವನ್ನು ಈ ಮೂಲಕ ಭಾರತ ಉಪಖಂಡದಲ್ಲಿ ಸಾಧಿಸಲಾಯಿತು. ಷಹಜಹಾನನ ಕಾಲದಲ್ಲಿ ಹಿಂದೂ ಸಂಪ್ರದಾಯದ ಪ್ರಾಬಲ್ಯವನ್ನು ಸ್ವಲ್ಪ ಮಟ್ಟಿಗೆ ನಿರೋಧಿಸಿ ಅಮೃತಶಿಲೆಯ ಹಗುರವಾದ ಕಟ್ಟಡಗಳನ್ನು ನಿರ್ಮಿಸಲಾಯಿತು. ಅನೇಕ ಕೋಡುಗಳಿರುವ ಕಮಾನುಗಳು, ಚಿತ್ರ ಕೊರೆತ ಕಲೆಯಿಂದ ನಿರ್ಮಿಸಿದ ಹೂಬಳ್ಳಿಗಳ ಮಾದರಿಗಳು ಮತ್ತು ಪರ್ಷಿಯನ್ ಮೂಲದ ಬಣ್ಣದ ಹೆಂಚುಗಳ ಅಲಂಕರಣ ಇವು ಅಂಥ ಕಟ್ಟಡಗಳಲ್ಲಿ ಪ್ರಧಾನವಾಗಿದ್ದುವು. ಆಗ್ರದ ತಾಜ್‍ಮಹಲ್ ಈ ಶೈಲಿಯ ಉತ್ತಮ ನಿದರ್ಶನ. ಪಾಕಿಸ್ತಾನ ಪ್ರದೇಶದಲ್ಲಿ ಮೊಗಲರ ಪ್ರಾಚೀನತಮ ನಿರ್ಮಾಣ ರೋಹ್ತಾಸ್ ಕೋಟೆ(1539). ಅದರ ಸುತ್ತಳತೆ 3.2 ಕಿಮೀ ಗೋಡೆಗಳು ಬುಡದಲ್ಲಿ ಸುಮಾರು 3 ಮೀ ದಪ್ಪವಾಗಿವೆ. ಇವುಗಳಲ್ಲಿ ಬಂದೂಕು ಮತ್ತು ಫಿರಂಗಿಗಳಿಗಾಗಿ ಮತ್ತು ಕಾದ ಸೀಸವನ್ನು ಸುರಿಯಲು ರಂಧ್ರಗಳಿವೆ. ಕೋಟೆಯ ಉತ್ತರಭಾಗವನ್ನು ಗೋಡೆಯಿಂದ ವಿಭಾಗಿಸಿ ಪ್ರತ್ಯೇಕ ಒಳಕೋಟೆಯನ್ನು ನಿರ್ಮಿಸಲಾಗಿದೆ. ಅದರೊಳಗೆ ಒಂದು ದೊಡ್ಡ ಭವನ ಮತ್ತು ಸೋಪಾನಗಳಿಂದ ಕೂಡಿದ ಎರಡು ಬಾವಿಗಳಿವೆ. ಲಾಹೋರಿನ ಕೋಟೆ ಮತ್ತೊಂದು ಗಮನಾರ್ಹ ಕಟ್ಟಡ. ಅಕ್ಬರನ ಪೂರ್ವಕಾಲದ ನಿರ್ಮಾಣಗಳು ಇಲ್ಲಿದ್ದಿರಬಹುದಾದರೂ ಅವುಗಳ ಮೇಲೆ ಅವನು ಕಟ್ಟಿಸಿದ ಕೋಟೆ ಗೋಡೆಗಳು ಈಗ ಕಾಣುತ್ತವೆ. ರಣಜಿತ್ ಸಿಂಗ್ ಅವನ್ನು 1812ರಲ್ಲಿ ನವೀಕರಿಸಿದನೆಂದು ಹೇಳಲಾಗಿದೆ. ಅದರ ವಿಸ್ತೀರ್ಣ ಪೂರ್ವ-ಪಶ್ಚಿಮವಾಗಿ 2 ಕಿಮೀ. ಮತ್ತು ಉತ್ತರ ದಕ್ಷಿಣವಾಗಿ 1.2 ಕಿಮೀ ಅದರಲ್ಲಿ 13 ಹೆಬ್ಬಾಗಿಲುಗಳಿವೆ. ಕೋಟೆಯೊಳಗೆ ವಾಯವ್ಯ ಮೂಲೆಯಲ್ಲಿ ಬಾದಶಾಹಿ ಮಸೀದಿ ಮತ್ತು ಒಳಕೋಟೆ, ಮತ್ತು ಎರಡು ಮಸೀದಿಗಳು, ಒಬ್ಬ ಶ್ರೀಮಂತನ ನಿವಾಸ- ಇವು ಮುಖ್ಯ ನಿರ್ಮಾಣಗಳು. ಮೊಗಲರ ಕಟ್ಟಡಗಳಲ್ಲಿ ಬಹುಭಾಗ ಅಕ್ಬರ್-ಜಹಾಂಗೀರರ ಮತ್ತು ಷಹಜಹಾನ್-ಔರಂಗ್eóÉೀಬರ ಕಾಲಕ್ಕೆ ಸೇರುತ್ತವೆ. ಕೋಟೆಯ ಹೊರಭಾಗದಲ್ಲಿರುವ ಷೇಖ್ ಮುಸಾ ಅಹಂಗರನ ಸಮಾಧಿ(16ನೆಯ ಶತಮಾನ) 7.6 ಮೀ ಚದರದ ಇಟ್ಟಿಗೆ ಕಟ್ಟಡ. ಅದರ ಹೆಂಚಿನ ಅಲಂಕರಣ ಈ ಪ್ರದೇಶದಲ್ಲಿ ಬಹಳ ಹಳೆಯದು. ಒಳಕೋಟೆಯ ಪೂರ್ವಕ್ಕಿರುವ ಮರಿಯಂ ಜûಮಾನಿ ಮಸೀದಿ (1614) ಜಹಾಂಗೀರನ ಕಾಲದ ಸರಳ ಕಟ್ಟಡ. ಅದರ ನಾಲ್ಕು ಮೂಲೆಗಳಲ್ಲಿ ಅಷ್ಟಕೋನ ಗುಮ್ಮಟಗಳಿವೆ. ಅದರ ಒಳಗೋಡೆಗಳ ಮೇಲಿರುವ ವರ್ಣ ಚಿತ್ರಗಳು ಸೂಕ್ಷ್ಮ ಹಾಗೂ ನೈಜವಾಗಿ ಇವೆ. ಲಾಹೋರಿನ ಆಗ್ನೇಯದಲ್ಲಿ 5.6 ಕಿಮೀ. ದೂರದಲ್ಲಿರುವ ಶಾಲಿಮಾರ್ ಉದ್ಯಾನವನ್ನು 1637ರಲ್ಲಿ ಷಹಜಹಾನ್ ನಿರ್ಮಿಸಿದನೆಂದು ಊಹಿಸಲಾಗಿದೆ. ಇದೊಂದು ಸುಂದರವಾದ ವಿಹಾರ ಸ್ಥಳವಾಗಿತ್ತು. ಈಗ ಇದು ಭಗ್ನಾವಸ್ಥೆಯಲ್ಲಿದೆ. ಒಳಕೋಟೆಯ ಪಶ್ಚಿಮಕ್ಕಿರುವ ಬಾದ್‍ಶಾಹಿ ಮಸೀದಿ (1673-74) ಔರಂಗ್eóÉೀಬನ ಕಾಲದ ಪ್ರಧಾನ ಕಟ್ಟಡ. ಇದು ಅಂಥ ಗಮನಾರ್ಹ ಕಟ್ಟಡವಲ್ಲದಿದ್ದರೂ ಪ್ರಮಾಣಬದ್ಧವಾಗಿದೆ. ಇದು 161.5 ಮೀ ಚದರವಾಗಿದೆ. ಇದು ಎತ್ತರವಾದ ಜಗತಿಯ ಮೇಲೆ ನಿರ್ಮಿಸಲಾದ ಸುಂದರ ಅಲಂಕರಣಗಳಿಂದ ಕೂಡಿದ ಮಧ್ಯಮ ವರ್ಗದ ಪ್ರಾರ್ಥನ ಗೃಹವೆನಿಸಿಕೊಂಡಿದೆ. ಇನ್ನೂ ಹಲವು ಮಸೀದಿಗಳು, ಸಮಾದಿಗಳು, ಗೋಪುರ-ಮಿನಾರತುಗಳು ಲಾಹೋರಿನ ಸುತ್ತಮುತ್ತಲೂ ಮೊಗಲರ ವಾಸ್ತುಕಲೆಗೆ ಸಾಕ್ಷಿಗಳಾಗಿ ನಿಂತಿವೆ. ಶಿಕ್ಷಣ 1947 ವಿಭಜನೆಗೆ ಮುಂಚೆ ಅಸ್ತಿತ್ವದಲ್ಲಿದ್ದ ಇಂಗ್ಲಿಷ್ ಶಿಕ್ಷಣ ಪದ್ಧತಿಯೇ ಇಂದೂ ಪಾಕಿಸ್ತಾನದಲ್ಲಿ ಅಷ್ಟಾಗಿ ಬದಲಾವಣೆಯಾಗದೆ ನಡೆದುಬರುತ್ತಿದೆ. ಅಲ್ಲಿ ಅಂದಿಗಂದಿಗೆ ಸರ್ಕಾರಗಳು ಬದಲಾಗುತ್ತ ಲಷ್ಕರೀ ಆಡಳಿತ ಅನುಷ್ಠಾನಕ್ಕೆ ಬಂದು ದೀರ್ಘ ಕಾಲ ಉಳಿದುಕೊಂಡದ್ದರ ಫಲವಾಗಿ ಸಾಮಾಜಿಕ ಕಲ್ಯಾಣಕಾರ್ಯ ಪೋಷಕವಾಗಬಲ್ಲ ಶಿಕ್ಷಣ ಅಷ್ಟಾಗಿ ಪ್ರಗತಿ ಸಾಧಿಸಿಲ್ಲ. ವೈವಿಧ್ಯದಲ್ಲಾಗಲಿ ವಿಸ್ತರಣೆಯಲ್ಲಾಗಲಿ ಮೂವತ್ತು ವರ್ಷಗಳ ದೀರ್ಘಾವಧಿಯಲ್ಲಿ ಆಗಬೇಕಾದಷ್ಟು ಆಗಿಲ್ಲ. ಪೂರ್ವ ಪಾಕಿಸ್ತಾನ ಪ್ರತ್ಯೇಕವಾದ ಮೇಲಂತು ಆರ್ಥಿಕ ಅಡಚಣೆಗಳಿಂದ ಶಿಕ್ಷಣ ಪ್ರಗತಿ ಕುಂಠಿತವಾಯಿತೆಂದೇ ಹೇಳಬೇಕು. ಪಾಕಿಸ್ತಾನದಲ್ಲಿ ಶಿಕ್ಷಣ 4 ಅಂತಸ್ತುಗಳಲ್ಲಿ ವ್ಯವಸ್ಥೆಗೊಂಡಿದೆ. 5 ವರ್ಷದ ಪ್ರಾಥಮಿಕ ಶಿಕ್ಷಣ, 5 ವರ್ಷದ ಸೆಕೆಂಡರಿ ಶಿಕ್ಷಣ, 2 ವರ್ಷದ ಇಂಟರ್‍ಮೀಡಿಯೇಟ್ ಶಿಕ್ಷಣ ಮತ್ತು ವಿಶ್ವವಿದ್ಯಾಲಯದ ಶಿಕ್ಷಣ, ಸೆಕೆಂಡರಿ ಹಾಗೂ ಇಂಟರ್‍ಮೀಡಿಯೇಟ್ ಹಂತದ ತಾಂತ್ರಿಕ ಶಿಕ್ಷಣವೂ ಪದವೀ ಮಟ್ಟದ ವೃತ್ತಿಶಿಕ್ಷಣವೂ ಅಸ್ತಿತ್ವದಲ್ಲಿವೆ. ಸಾಮಾನ್ಯವಾಗಿ ಹತ್ತು ವರ್ಷದ ಶಾಲಾ ಶಿಕ್ಷಣದ ಅನಂತರ ಆರಂಭವಾಗುವ ತಾಂತ್ರಿಕ ಶಿಕ್ಷಣ ಕೈಗಾರಿಕಾ ಶಾಲೆ ಮತ್ತು ಪಾಲಿಟೆಕ್ನಿಕ್‍ಗಳಲ್ಲಿ ಉಂಟು. ಇವನ್ನು ಸರ್ಕಾರದ ತಾಂತ್ರಿಕ ಇಲಾಖೆ, ರೈಲ್ವೆ, ಕಾರ್ಮಿಕ ಸೈನಿಕ ಇಲಾಖೆಗಳೂ ಕೆಲವು ಖಾಸಗಿ ಸಂಸ್ಥೆಗಳೂ ನಡೆಸುತ್ತವೆ. ವಿಶ್ವವಿದ್ಯಾಲಯ ಅಂತಸ್ತಿನ ಎಂಜಿನಿಯರಿಂಗ್, ನ್ಯಾಯ, ವೈದ್ಯ, ವಾಣಿಜ್ಯ, ಕೃಷಿ- ಈ ವೃತ್ತಿ ಶಿಕ್ಷಣವನ್ನು ವಿಶಿಷ್ಟ ಸಂಸ್ಥೆಗಳಲ್ಲೂ ವಿಶ್ವ ವಿದ್ಯಾಲಯದ ಕಾಲೇಜುಗಳಲ್ಲೂ ಉಂಟು. ಪ್ರಾಥಮಿಕ ಶಿಕ್ಷಣದ ಆಡಳಿತವನ್ನು ನಾಲ್ಕು ಪ್ರಾಂತ್ಯಗಳೂ ಪ್ರತ್ಯೇಕವಾಗಿ ನಡೆಸುತ್ತವೆ. ಶಿಕ್ಷಣ ಶಾಖೆಯ ಅಧಿಕಾರಿಗಳೂ ತನಿಖಾಧಿಕಾರಿಗಳೂ ಪ್ರಾಥಮಿಕ ಶಿಕ್ಷಣದ ಆಡಳಿತವನ್ನು ನಡೆಸುತ್ತಾರೆ. ಸೆಕೆಂಡರಿ ಮತ್ತು ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಜಿಲ್ಲಾ ಬೋರ್ಡಿನವರು ಅದಕ್ಕಾಗಿ ರಚಿಸಿರುವ ಸಮಿತಿಗಳ ಮೂಲಕ ನಡೆಸುತ್ತಾರೆ. ನಿರ್ದೇಶಕರುಗಳು ಸಾರ್ವಜನಿಕ ಶಿಕ್ಷಣಶಾಖೆಯ ನಿರ್ದೇಶಕರಿಗೆ ಹೊಣೆಗಾರರಾಗಿರುತ್ತಾರೆ. ಸರ್ಕಾರದ ಹಾಗೂ ಸರ್ಕಾರದ ಧನ ಸಹಾಯ ಪಡೆಯುವ ಖಾಸಗಿ ಸೆಕೆಂಡರಿ ಶಾಲೆಗಳ ಆಡಳಿತಕ್ಕಾಗಿ ಸಲಹಾ ಸಮಿತಿಗಳನ್ನು ಏರ್ಪಡಿಸಿದೆ. ವಿಶ್ವವಿದ್ಯಾಲಯಗಳು ರಾಜ್ಯಶಾಸನಗಳಿಂದ ಸ್ಥಾಪನೆಯಾಗಿ ಅದಕ್ಕಾಗಿ ರೂಪಿಸಿರುವ ಕಾನೂನಿನಂತೆ ಕೆಲಸಮಾಡುತ್ತವೆ. ಅಯಾಪ್ರಾಂತ್ಯದ ಗವರ್ನರು ಕುಲಾಧಿಪತಿಯಾಗಿರುತ್ತಾನೆ. ಕುಲಪತಿಗಳನ್ನು ಆತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನಾಗಿ ನೇಮಿಸುತ್ತಾನೆ. ಅವರ ಸಹಾಯಕ್ಕಾಗಿ ಸಿಂಡಿಕೇಟ್ ಮತ್ತು ಅಕಾಡಮಿಕ್ ಕೌನ್ಸಿಲ್‍ಗಳು ಇವೆ. 1965ರಲ್ಲಿ ಸರ್ಕಾರ ವಿಶ್ವವಿದ್ಯಾಲಯದ ಕಾರ್ಯಕ್ರಮಗಳಲ್ಲಿ ಸಮನ್ವಯವನ್ನು ಸಾಧಿಸಲು ಮಂಡಲಿಯೊಂದನ್ನು ರಚಿಸಿತು. ಈಚೆಗೆ ಇಸ್ಲಾಮಾಬಾದ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಪ್ರಾಥಮಿಕ ಮತ್ತು ಸೆಕೆಂಡರಿ ಶಿಕ್ಷಣದ ವೆಚ್ಚವನ್ನು ಆಯಾ ಪ್ರಾಂತ್ಯವೇ ವಹಿಸುತ್ತಿದೆ. ಶಾಲೆಗಳು ಶುಲ್ಕವನ್ನು ವಿಧಿಸುತ್ತವೆ, ಖಾಸಗಿ ಶಾಲೆಗಳಲ್ಲಿ ಶುಲ್ಕ ಸರ್ಕಾರದ ಶಾಲೆಗಳಿಗಿಂತ ಹೆಚ್ಚಾಗಿರುತ್ತದೆ. ಸರ್ಕಾರದ ನಿಯಮಾವಳಿಯನ್ನು ಅವು ಅನುಸರಿಸಿದರೆ ಮಾತ್ರ ಸರ್ಕಾರದ ಅನುದಾನ ದೊರಕುತ್ತದೆ. ವಿಶ್ವವಿದ್ಯಾಲಯದ ಹಾಗೂ ಸರ್ಕಾರಿ ಕಾಲೇಜುಗಳ ವೆಚ್ಚವನ್ನು ಶುಲ್ಕದಿಂದಲೂ ಸರ್ಕಾರದ ಬೊಕ್ಕಸದಿಂದಲೂ ನಿರ್ವಹಿಸಲಾಗುತ್ತಿದೆ. ಇಡೀ ವೆಚ್ಚದಲ್ಲಿ ವಿದ್ಯಾರ್ಥಿಗಳು ಕೊಡುವ ಶುಲ್ಕ ಸುಮಾರು 7% ಆಗುತ್ತದೆ. ತಾಂತ್ರಿಕಶಾಲೆಗಳಲ್ಲೂ ಅಧ್ಯಾಪಕರ ಪ್ರಶಿಕ್ಷಣ ಸಂಸ್ಥೆಗಳಲ್ಲೂ ಶುಲ್ಕ ಕಡಿಮೆಯಿರುವುದಲ್ಲದೆ ವಿದ್ಯಾರ್ಥಿಗಳಿಗೆ ವೇತನವನ್ನೂ ನೀಡಲಾಗುತ್ತದೆ. ಪಾಕಿಸ್ತಾನದ ರಾಷ್ಟ್ರೀಯ ಶಿಕ್ಷಣ ಆಯೋಗ 1960ರಲಿ ವಿದ್ಯಾವಂತ ಜನ ಓದು ಬರಹ, ಲೆಕ್ಕಾಚಾರಗಳನ್ನು ಕಲಿತಿರಬೇಕು; ತನ್ನ ಹೊರಪ್ರಪಂಚದ ಪರಿಜ್ಞಾನ ಪಡೆದಿರಬೇಕು; ತನ್ನ ನಿತ್ಯವ್ಯವಹಾರಗಳನ್ನು ನಡೆಸುತ್ತ ನಿತ್ಯದ ಸಮಸ್ಯೆಗಳನ್ನು ಜಾಣತನದಿಂದ ವಿವೇಚಿಸುವ ಶಕ್ತಿ ಪಡೆದಿರಬೇಕು; ತಮ್ಮ ದೈಹಿಕ ಮಾನಸಿಕ ಹಾಗೂ ನೈತಿಕ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರಬೇಕು; ಆರ್ಥಿಕ ಜೀವನಕ್ಕೆ ಅಗತ್ಯವಾದ ವೃತ್ತಿ ಕೌಶಲವನ್ನೂ ಜ್ಞಾನಾರ್ಜನೆಗೆ ಅಗತ್ಯವಾದ ಆಸಕ್ತಿ ಕುತೂಹಲಗಳನ್ನೂ ಪಡೆದಿರಬೇಕು ಎಂದೂ ಈ ಗೊತ್ತು ಗುರಿಗಳನ್ನು ಸಾಧಿಸಲು ನೆರವಾಗುವಂತೆ ಶಿಕ್ಷಣ ಪದ್ಧತಿ ವ್ಯವಸ್ಥೆಗೊಳ್ಳಬೇಕೆಂದೂ ಸೂಚಿಸಿದೆ. ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ಉರ್ದು ಶಿಕ್ಷಣಮಾಧ್ಯಮವಾಗಿದೆ. ಪೂರ್ವ ಪಾಕಿಸ್ತಾನ ಪ್ರತ್ಯೇಕವಾಗುವಮುಂಚೆ ಕೆಲವು ಮುಖ್ಯ ನಗರಗಳಲ್ಲಿ ಬಂಗಾಳಿ ಭಾಷೆಯ ಮಾಧ್ಯಮವೂ ಅಸ್ತಿತ್ವದಲ್ಲಿತ್ತು. ಈಚೆಗೆ ಅದು ಬಹುಮಟ್ಟಿಗೆ ಕೊನೆಗೊಂಡಿದೆ. ವಿಶ್ವವಿದ್ಯಾಲಯದ ಅಂತಸ್ತಿನಲ್ಲಿ ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಗಿದೆ. ಆದರೆ ಉರ್ದುವನ್ನು ಶಿಕ್ಷಣಮಾಧ್ಯಮವನ್ನಾಗಿ ಮಾಡಬೇಕೆಂಬ ಬಯಕೆ ಎಲ್ಲೆಲ್ಲೂ ಇದ್ದರೂ ಅಗತ್ಯವೆನಿಸುವ ಪಠ್ಯಪುಸ್ತಕಾದಿ ಸಲಕರಣೆಗಳು ಇನ್ನೂ ಸಿದ್ಧವಾಗಿಲ್ಲ. ಕೆಲವು ಸೆಕೆಂಡರಿ ಶಾಲೆಗಳಲ್ಲೂ ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಗಿದೆ. ಪ್ರಾಥಮಿಕ ಶಾಲೆಯ ಶಿಕ್ಷಣದ ಅನಂತರ ನಡೆಯುವ ಸಾರ್ವತ್ರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸೆಕೆಂಡರಿ ಶಾಲೆಗೆ ಸೇರಿಸಿಕೊಳ್ಳುವರು. ಕೆಲವು ಶಾಲೆಗಳು ತಾವೇ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ರ್ತಿರ್ಣರಾದವರನ್ನು ಸೇರಿಸಿಕೊಳ್ಳುವುದುಂಟು. ಹತ್ತನೆಯ ತರಗತಿಯ ಅನಂತರ ನಡೆಯುವ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಸುಮಾರು 2/3ರಷ್ಟು ವಿದ್ಯಾರ್ಥಿಗಳು ಪ್ರಥಮ ಅಥವಾ ದ್ವಿತೀಯ ತರಗತಿಯಲ್ಲಿ ಉತ್ತೀರ್ಣರಾಗುವರು. ಅವರು ಮಾತ್ರ ಕಾಲೇಜಿಗೆ ಸೇರುವ ಅರ್ಹತೆ ಪಡೆಯುತ್ತಾರೆ. ಮಿಕ್ಕವರು ಉದ್ಯೋಗ ಅಥವಾ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಸೇರಿಕೊಂಡು ಶಿಕ್ಷಣ ಪಡೆದು ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಧ್ಯಾಪಕರ ಪ್ರಶಿಕ್ಷಣಕ್ಕೆ ಬರತಕ್ಕವರೂ ಈ ವರ್ಗಕ್ಕೆ ಸೇರಿರುತ್ತಾರೆ. ಪ್ರಾಥಮಿಕ ಶಾಲೆಯಲ್ಲಿ ಉರ್ದು, ಅಂಕಗಣಿತ, ಸಮಾಜಪಾಠ, ಸಾಮಾನ್ಯ ವಿಜ್ಞಾನ, ಇಂಗ್ಲಿಷ್ (4, 5 ನೆಯ ತರಗತಿಗಳಿಂದ), ಧಾರ್ಮಿಕ ಶಿಕ್ಷಣ, ಸಾಹಿತ್ಯ ಮತ್ತು ಕೈಕೆಲಸ ಮುಂತಾದವನ್ನು ಬೋಧಿಸುವರು. ಸೆಕೆಂಡರಿ ಶಾಲೆಯಲ್ಲಿ ಉರ್ದು, ಇಂಗ್ಲಿಷ್, ಗಣಿತ, ಚರಿತ್ರೆ, ಭೂಗೋಳ ಪೌರ ನೀತಿ, ವಿಜ್ಞಾನ, ದೈಹಿಕ ಶಿಕ್ಷಣ, ಧಾರ್ಮಿಕ ಶಿಕ್ಷಣ ಮುಂತಾದವುಗಳು ಜೊತೆಗೆ ಐಚ್ಛಿಕ ವಿಷಯಗಳನ್ನೂ ಬೋಧಿಸುವರು. 9,10ನೆಯ ತರಗತಿಗಳಲ್ಲಿ ಮಾನವಿಕಗಳು ವಿಜ್ಞಾನ, ವಾಣಿಜ್ಯ, ಗೃಹವಿಜ್ಞಾನ, ಔದ್ಯೋಗಿಕ ಕಲೆ, ಕೃಷಿ ಮುಂತಾದವನ್ನು ಐಚ್ಛಿಕವಿಷಯಗಳನ್ನಾಗಿ ಬೋಧಿಸಲಾಗುವುದು. ಈ ಕ್ಷೇತ್ರಗಳನ್ನು ಆಯ್ದುಕೊಂಡವರು ವ್ಯಾಸಂಗ ಮಾಡಬೇಕಾದ ವಿಷಯ ವಿಭಾಗಗಳನ್ನೂ ನಿಗದಿ ಮಾಡಿರುವರು. ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 10-12 ವಿಷಯಗಳಲ್ಲಿ ಉತ್ತರಿಸಬೇಕಾಗುತ್ತದೆ. ಕಾಲೇಜಿಗೆ ಸೇರಲು ಬಯಸುವವರು ವಿಜ್ಞಾನ, ಮಾನವಿಕ, ವಾಣಿಜ್ಯ ಮುಂತಾದ ಐಚ್ಛಿಕವನ್ನು ಆರಿಸಿಕೊಳ್ಳುವರು. ಈ ಹಂತದಲ್ಲಿ ಶಿಕ್ಷಣವನ್ನು ಉದ್ಯೋಗಮುಖವಾಗಿಸುವ ಯತ್ನ ನಡೆದಿದ್ದರೂ ಬಹುಮಟ್ಟಿಗೆ ಅದು ಗ್ರಾಂಥಿಕವಾಗಿಯೇ ಇದೆ. ಪರೀಕ್ಷೆಗೆ ಸಿದ್ಧವಾಗುವ ಹಿರಿಯ ಉದ್ದೇಶದಿಂದ ಇಲ್ಲಿನ ಶಿಕ್ಷಣ ಕೇವಲ ಉರುಹಚ್ಚುವ ಕಾರ್ಯವಾಗಿದೆಯೆಂದು ಟೀಕಿಸಲಾಗುತ್ತಿದೆ. 1960ರ ಪಾಕಿಸ್ತಾನದ ಶಿಕ್ಷಣ ಆಯೋಗ ಇಂಟರ್‍ಮೀಡಿಯೆಟ್ ತರಗತಿಗಳನ್ನು ಸೆಕೆಂಡರಿ ಶಾಲೆಗಳಿಗೆ ಸೇರಿಸಬೇಕೆಂದು ಸಲಹೆ ಮಾಡಿತು. ಆ ಹಂತದಲ್ಲಿ ವೈಯಕ್ತಿಕ ಅಭಿರುಚಿ ಆಸಕ್ತಿಗಳಿಗೆ ತಕ್ಕಂಥ ಶಿಕ್ಷಣ ದೊರಕಲೆಂದು ಆಶಿಸಲಾಗಿತ್ತು. ಉದ್ಯೋಗ, ಕಲೆ, ವಾಣಿಜ್ಯ, ಉಪಚಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯಲೆಂದು ಪ್ರತಿಪ್ರಾಂತ್ಯದಲ್ಲೂ ಸೆಕೆಂಡರಿ ಶಿಕ್ಷಣ ಮಟ್ಟದ ಔದ್ಯೋಗಿಕ ಮತ್ತು ತಾಂತ್ರಿಕ ಶಾಲೆಗಳನ್ನು ಆರಂಭಿಸಲಾಯಿತು. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕಾಲೇಜುಗಳೂ ವಿಶ್ವವಿದ್ಯಾಲಯಗಳೂ ವಿವಿಧ ವಿಷಯ ವಿಭಾಗಗಳನ್ನು ಆರಂಭಿಸಿ ಪದವಿ ಮಟ್ಟದ ಕಾರ್ಯಕ್ರಮವನ್ನು ಅಳವಡಿಸಿಕೊಂಡಿವೆ. ಪ್ರವೇಶದ ಬೇಡಿಕೆ ಹೆಚ್ಚಿದಂತೆ ಪ್ರತಿ ಪ್ರಾಂತ್ಯದಲ್ಲೂ ಹೊಸದಾಗಿ ಕೃಷಿ, ಎಂಜಿನಿಯರಿಂಗ್ ಕಲೆ ಮತ್ತು ವಿಜ್ಞಾನ-ಈ ಕ್ಷೇತ್ರಗಳ ಶಿಕ್ಷಣಕ್ಕಾಗಿ ಒಂದೊಂದು ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ. ವಿಜ್ಞಾನ, ಸಂಶೋಧನೆ, ಅರಣ್ಯ ವಿಜ್ಞಾನ, ಸಾರ್ವಜನಿಕ ಆಡಳಿತ, ವ್ಯವಹಾರೋದ್ಯಮ ಶಿಕ್ಷಣಶಾಸ್ತ್ರ ಈ ವಿಷಯಗಳ ಶಿಕ್ಷಣಕ್ಕೆ ನೂತನ ಕಾಲೇಜುಗಳನ್ನೂ ಅಧ್ಯಯನ ಸಂಸ್ಥೆಗಳನ್ನೂ ಆರಂಭಿಸಲಾಗಿದೆ. ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಪದವಿ ಶಿಕ್ಷಣಕ್ಕೆ 12 ನೆಯ ತರಗತಿಯ ಅನಂತರ ನಡೆಯುವ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ತರಗತಿಯಲ್ಲಿ ಉತ್ತೀರ್ಣರಾದವರು ಸೇರಲು ಅರ್ಹತೆ ಪಡೆಯುತ್ತಾರೆ. ಎರಡು ವರ್ಷದ ಬ್ಯಾಚುಲರ್ ಪದವಿ ಶಿಕ್ಷಣವೂ ಅನಂತರ ಎರಡು ವರ್ಷದ ಮಾಸ್ಟರ್ ಪದವಿ ಶಿಕ್ಷಣವೂ ಅಸ್ತಿತ್ವದಲ್ಲಿವೆ. ಬ್ಯಾಚಲರ್ ಆನರ್ಸ್ ಪದವಿ ಮೂರು ವರ್ಷದ್ದು, ಅದರಲ್ಲಿ ಉತ್ತೀರ್ಣರಾದವರು ಎರಡನೆಯ ವರ್ಷದ ಮಾಸ್ಟರ್ ಪದವಿಗೆ ಸೇರಬಹುದು. ಪ್ರತಿಭಾವಂತ ವಿದ್ಯಾರ್ಥಿಗಳು ಪಿ.ಎಚ್.ಡಿ ತರಗತಿಗೆ ವ್ಯಾಸಂಗ ಮಾಡಬಹುದು. ಉನ್ನತ ಶಿಕ್ಷಣ ಬಹುಮಟ್ಟಿಗೆ ಜ್ಞಾನ ಪ್ರಸರಣಕ್ಕೆ ಮಾತ್ರ ಮೀಸಲಾಗಿದೆ. ಸಂಶೋಧನೆಯ ಮೂಲಕ ಜ್ಞಾನದ ವಿಸ್ತರಣಕಾರ್ಯ ಅಷ್ಟಾಗಿ ನಡೆದಿಲ್ಲವೆಂದೇ ಹೇಳಬೇಕು. ಪರಮಾಣು ಶಕ್ತಿಯೇ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಪ್ರತ್ಯೇಕ ಸಂಸ್ಥೆಗಳೇನೋ ಅಸ್ತಿತ್ವದಲ್ಲಿವೆ. ಉನ್ನತ ಶಿಕ್ಷಣದಲ್ಲಿ ಮುಖ್ಯವಾಗಿ ಉರ್ದು, ಬಂಗಾಳಿ, ಇಂಗ್ಲಿಷ್, ಇತಿಹಾಸ, ಪರ್ಷಿಯನ್, ಅರ್ಯಾಬಿಕ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇಸ್ಲಾಂ ಧರ್ಮಶಾಸ್ತ್ರ, ಗಣಿತವಿಜ್ಞಾನ, ತತ್ವಶಾಸ್ತ್ರ, ಮನಶಾಸ್ತ್ರ, ವಾಣಿಜ್ಯಶಾಸ್ತ್ರ-ಇವು ಪ್ರಮುಖ ವ್ಯಾಸಂಗ ವಿಷಯಗಳು. ವೃತ್ತಿಶಿಕ್ಷಣ ಶಾಲೆಗಳಲ್ಲಿ ವೈದ್ಯಶಾಸ್ತ್ರ, ಔಷಧ ನಿರ್ಮಾಣಶಾಸ್ತ್ರ, ಉಪಚಾರಿಕೆ, ಎಂಜಿನಿಯರಿಂಗ್, ಕೃಷಿ, ವಾಸ್ತು, ಸಂಗೀತ ಮುಂತಾದವನ್ನು ಬೋಧಿಸಲಾಗುತ್ತಿದೆ. ಉದ್ಯೋಗ ಕಸಬು ಕಲೆಗಳಲ್ಲಿ ಶಿಕ್ಷಣ ಪಡೆದು ವಿವಿಧ ಉದ್ಯೋಗಗಳಲ್ಲಿ ಕೆಲಸಕ್ಕೆ ಸೇರಿ ರಾಷ್ಟ್ರದ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲೆಂಬ ಉದ್ದೇಶದಿಂದ ಈಚೆಗೆ ಪ್ರಾಥಮಿಕ ಹಾಗೂ ಸೆಕೆಂಡರಿ ಶಿಕ್ಷಣ ಪಡೆದವರಿಗಾಗಿ ತಾಂತ್ರಿಕ ಹಾಗೂ ಕೈಗಾರಿಕಾ ಶಾಲೆಗಳನ್ನು, ಪಾಲಿಟೆಕ್ನಿಕ್‍ಗಳನ್ನು ಅಧಿಕವಾಗಿ ಸ್ಥಾಪಿಸಲಾಗುತ್ತಿದೆ. ಅಲ್ಲಿ ವಿದ್ಯುದ್ವಾಹಕ ತಂತಿಗಳ ಅಳವಡಿಕೆಯ ಕೆಲಸ (ವೈರಿಂಗ್) ಮರಗೆಲಸ, ಕಬ್ಬಿಣದ ಕೆಲಸ, ಮೆಕ್ಯಾನಿಕ್ ಕೆಲಸ, ಬೆಸುಗೆಯ ಕೆಲಸ ಕಾರ್ಯಾಲಯದ ಕೆಲಸ ಮತ್ತು ಇತರ ಕೈಗಾರಿಕಾ ಕಸಬು ಕಲೆಗಳ ಶಿಕ್ಷಣಕ್ಕೆ ಏರ್ಪಾಟು ಮಾಡಲಾಗಿದೆ. ಅಧ್ಯಾಪಕರ ಶಿಕ್ಷಣ ಮೂರು ಅಂತಸ್ತುಗಳಲ್ಲಿ ಏರ್ಪಟ್ಟಿದೆ ಮೊದಲನೆಯ ಹಂತದ ಒಂದು ವರ್ಷದ ಪ್ರಶಿಕ್ಷಣ ಪ್ರಾಥಮಿಕ ಶಾಲೆಯ ಉಪಾಧ್ಯಾಯ ವೃತ್ತಿಗೆ ಮೀಸಲು. ಅಲ್ಲಿ ಬೋಧನ ಕ್ರಮ, ಶಿಕ್ಷಣ ತತ್ವ, ಮನಶ್ಯಾಸ್ತ್ರ ಮತ್ತು ಅಭ್ಯಾಸ ಪಾಠ ಮುಂತಾದವನ್ನು ಸೇರಿಸಿದೆ. ಎರಡನೆಯ ಹಂತದ ಶಿಕ್ಷಣ ಅಧ್ಯಾಪಕರ ಕಾಲೇಜಿನಲ್ಲಿ ಏರ್ಪಟ್ಟಿದೆ. ಅಲ್ಲಿ ಬೋಧನ ಕ್ರಮ. ಶಿಕ್ಷಣ, ತತ್ವಶಾಸ್ತ್ರ, ಮನಶ್ಯಾಸ್ತ್ರ, ಶಿಕ್ಷಣದ ಇತಿಹಾಸ, ಆರೋಗ್ಯಶಾಸ್ತ್ರ ಮತ್ತು ಅಭ್ಯಾಸ ಬೋಧನೆ ಇವನ್ನು ಅಳವಡಿಸಲಾಗಿದೆ. ಬಿ.ಎ, ಬಿ.ಎಸ್.ಸಿ., ಬಿ.ಕಾಮ್. ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಈ ಶಿಕ್ಷಣ ಪಡೆದು ಸೆಕೆಂಡರಿ ಶಾಲೆಗಳಲ್ಲಿ ಅಧ್ಯಾಪಕರಾಗಲು ಅರ್ಹತೆ ಪಡೆಯುವರು. ದೈಹಿಕ ಶಿಕ್ಷಣ, ಸಂಗೀತ ಶಿಕ್ಷಣ, ತಾಂತ್ರಿಕ ಶಿಕ್ಷಣ ಮುಂತಾದ ವಿಷಯಗಳನ್ನು ಬೋಧಿಸುವ ಅಧ್ಯಾಪಕರಿಗೆ ವಿಶೇಷ ರೀತಿಯ ತರಬೇತಿ ಸಂಸ್ಥೆಗಳು ಏರ್ಪಟ್ಟಿವೆ. ಮಾಸ್ಟರ್ಸ್ ಮತ್ತು ಡಾಕ್ಟರ್ಸ್ ಪದವಿ ಶಿಕ್ಷಣ ಈಚೆಗೆ ಆರಂಭವಾಗಿದೆ. ಅವು ಔದ್ಯೋಗಿಕ ಮಾರ್ಗದರ್ಶನ, ಪಠ್ಯವಸ್ತುವಿನ ನಿರ್ಮಾಣ, ವಿಜ್ಞಾನ ಶಿಕ್ಷಣ, ಸಂಶೋಧನೆ ಮುಂತಾದ ಕ್ಷೇತ್ರಗಳನ್ನೂ ತಜ್ಞರು ರೂಪಿಸುತ್ತಿದ್ದಾರೆ. ಸಾಮಾನ್ಯ ಪಾಠಶಾಲೆಗಳಂತೆ ದೇಶಾದ್ಯಂತ ಇಸ್ಲಾಂ ಪಾಠಶಾಲೆಗಳೂ ಅಸ್ತಿತ್ವದಲ್ಲಿವೆ. ಸರ್ಕಾರ ಅವಕ್ಕೆ ಮನ್ನಣೆ ನೀಡಿದ್ದರೂ ಅಷ್ಟಾಗಿ ಧನ ಸಹಾಯ ನೀಡುತ್ತಿಲ್ಲ. ಪ್ರಾಥಮಿಕ ಮಟ್ಟದ ಆ ಶಾಲೆಗಳಲ್ಲಿ ಕುರಾನು ಪಠನ ಮುಖ್ಯ ಬೋಧನ ವಿಷಯ. ಇಂಥ ಶಾಲೆಗಳು ಮಸೀದಿಗಳಲ್ಲಿ ನಡೆಯುತ್ತವೆ. ಪ್ರಾಥಮಿಕ ಮಟ್ಟಕ್ಕಿಂತ ಮೇಲಿನ ಶಿಕ್ಷಣಕ್ಕಾಗಿ ಮಕ್ತಾಬ್, ಮದ್ರಸಾ ಮತ್ತು ದವುಲ್‍ಉಲೂಮ್ ಎಂಬ ಸಂಸ್ಥೆಗಳೂ ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಕೊನೆಯ ಎರಡು ಸಂಸ್ಥೆಗಳು ವಿಶ್ವವಿದ್ಯಾಲಯದ ಮಟ್ಟದವು. ಇವು ಇಸ್ಲಾಮಿಕ್ ನ್ಯಾಯಶಾಸ್ತ್ರ, ಅರಬ್ಬೀ ಭಾಷೆಯ ಕುರಾನ್ ಮುಂತಾದವನ್ನು ಪಠ್ಯಕ್ರಮದಲ್ಲಿ ಸೇರಿಸಿವೆ. ಆಧುನಿಕ ವಿಷಯಗಳಾವುವನ್ನೂ ಅಲ್ಲಿ ಬೋಧಿಸದಿದ್ದರೂ ಗ್ರಾಮಾಂತರ ಜನತೆಗೆ ಈ ಸಂಸ್ಥೆಗಳು ತುಂಬ ಪ್ರಿಯವೆನಿಸಿವೆ. ಸಾರ್ವತ್ರಿಕ ಕಡ್ಡಾಯ ಶಿಕ್ಷಣ 1960ರಲ್ಲಿ ಸರ್ಕಾರ ಕಡ್ಡಾಯ ಸಾರ್ವತ್ರಿಕ ಶಿಕ್ಷಣದ ಯೋಜನೆಯನ್ನು ಆರಂಭಿಸಿ 1975ರ ವೇಳೆಗೆ ವರ್ಷದ ಕಡ್ಡಾಯ ಶಿಕ್ಷಣವನ್ನೂ 1980ರ ವೇಳೆಗೆ 8 ವರ್ಷದ ಕಡ್ಡಾಯ ಶಿಕ್ಷಣವನ್ನೂ ಆಚರಣೆಗೆ ತರಲು ನಿರ್ಧರಿಸಿತು. ಅದಕ್ಕಾಗಿ ಪ್ರಾಥಮಿಕ ಶಾಲೆಗಳನ್ನೂ ಸೆಕೆಂಡರಿ ಶಾಲೆಗಳ ಕಿರಿಯ ವಿಭಾಗಗಳನ್ನೂ ಹೊಸದಾಗಿ ಲಕ್ಷಗಟ್ಟಲೆ ಆರಂಭಿಸಬೇಕಾಯಿತು. ಹಣದ ಅಭಾವ, ಜನತೆಯ ಬಡತನ, ವಿದ್ಯಾರ್ಥಿಗಳ ನಿರಾಸಕ್ತಿ, ಅಧ್ಯಾಪಕರ ನಿರಾಕರ್ಷಕ ಬೋಧನ ವಿಧಾನ- ಇವೇ ಮುಂತಾದ ಕಾರಣಗಳಿಂದ ಈ ಯೋಜನೆ ಅಷ್ಟಾಗಿ ಯಶಸ್ಸು ಸಾಧಿಸಿಲ್ಲ. 8ನೆಯ ತರಗತಿ ಮುಗಿಸುವ ಮುನ್ನವೇ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಗಿಸುವುದರಿಂದ ಶಿಕ್ಷಣಕ್ಷೇತ್ರದಲ್ಲಿ ಅಗಾಧವಾದ ಶೈಕ್ಷಣಿಕ ಅಪಸರಣವೂ ವ್ಯರ್ಥವ್ಯಯವೂ ಸಂಭವಿಸುತ್ತಿವೆ. ಶಿಕ್ಷಣ ಉದ್ದೇಶಪೂರ್ವಕವೂ ಪರಿಣಾಮಕಾರಿಯೂ ಆಗುವಂತೆ ಮಾಡಲು ಅಂದಿಗಂದಿಗೆ ಶಿಕ್ಷಣದ ಗೊತ್ತುಗುರಿಗಳನ್ನು ನವೀಕರಿಸುವ ಯತ್ನವೂ ಶಿಕ್ಷಣಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸಲು ಹಣ ಒದಗಿಸುವುದೂ ಕಂಡುಬರುತ್ತಿದೆ. ಶಾಲಾಜೀವನ ಆಕರ್ಷಕವಾಗುವಂತೆ ಮಾಡಲು ನೂತನ ರೀತಿ ಪಠ್ಯಕ್ರಮ, ಪಠ್ಯ ಪುಸ್ತಕ ಮುಂತಾದವನ್ನು ಸಿದ್ಧಪಡಿಸಲಾಗುತ್ತಿದೆ. ಪರೀಕ್ಷಾವಿಧಾನದಲ್ಲೂ ಸುಧಾರಣೆಗಳು ಆರಂಭವಾಗಿವೆ. 1966-1970ರ 3ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಎಲ್ಲ ಮಟ್ಟಗಳಲ್ಲಿ ಶಿಕ್ಷಣ ಸೌಲಭ್ಯಗಳನ್ನು ಹೆಚ್ಚಿಸಲೂ ತಕ್ಕಷ್ಟು ಹಣವನ್ನು ಒದಗಿಸಲಾಗಿತ್ತು. 1971-75ರ ವರೆಗೆ ವಿಸ್ತರಿಸಲೆಳಸಿದ್ದ 4ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಕೊನೆಗಾಣಿಸಲು ಆಲೋಚಿಸಲಾಗಿತ್ತು. ಜೊತೆಗೆ ವಯಸ್ಕರ ಶಿಕ್ಷಣವನ್ನು ಅನುಷ್ಠಾನಕ್ಕೆ ತರಲು ಯುವಜನ ಸೇನೆಯೊಂದನ್ನು ನಿರ್ಮಿಸುವ ಸಲಹೆಯೂ ಸರ್ಕಾರದ ಮುಂದಿತ್ತು. ಕ್ರೈಸ್ತಪಾದ್ರಿಗಳು ನಡೆಸುತ್ತಿರುವ ಶಾಲೆಗಳ ರಾಷ್ಟ್ರೀಕರಣ ಮಾಡುವ ಯೋಜನೆಯೂ ಸರ್ಕಾರದ ಮುಂದಿತ್ತು. ರಾಷ್ಟ್ರದ ತಾಂತ್ರಿಕ ಸಿಬ್ಬಂದಿಯ ಸಂಖ್ಯಾಬಲವನ್ನು ಹೆಚ್ಚಿಸಲು ಮೂಲ ವಿಜ್ಞಾನಗಳ ಬೋಧನೆಗೆ ಇಸ್ಲಾಮಾಬಾದ್ ವಿಶ್ವವಿದ್ಯಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಸುತ್ತಿವೆ. ಇವೆಲ್ಲ ಕಾರ್ಯಕ್ರಮಗಳಿಗೂ ನೆರವಾಗಲೆಂಬ ಉದ್ದೇಶದಿಂದ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ವಿಜ್ಞಾನ ಬೋಧನೆಯ ಕಡೆ ವಿಶೇಷ ಗಮನ ಕೊಡಲಾಗುತ್ತಿದೆ. ಇಂದು ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಸೇ. 45.7 ಮಂದಿ ಓದುಬರಹ ಬಲ್ಲವರಾಗಿದ್ದಾರೆ. 2003ರ ಅಂಕಿ ಅಂಶಗಳ ಪ್ರಕಾರ ಸೇ. 59.8 ಮಂದಿ ಗಂಡಸರು, ಸೇ. 30.6 ರಷ್ಟು ಮಹಿಳೆಯರು ಶಿಕ್ಷಿತರಾಗಿದ್ದಾರೆ. ನೋಡಿ ಪಾಕಿಸ್ತಾನದ ರಾಜಕೀಯ ಇತಿಹಾಸ ಇಮ್ರಾನ್ ಖಾನ್ಇಂಗ್ಲಿಷ್-[] ಪಾಕಿಸ್ತಾನದ ಚಳುವಳಿ ಪಾಕಿಸ್ತಾನದಲ್ಲಿ ೨೦೧೮ ರ ಚುನಾವಣೆ:ಪಾಕ್‌ನಲ್ಲಿ ಇಮ್ರಾನ್‌ ಖಾನ್‌ ಖಾನ್‌ ದಾನ್‌;Udayavani,; Jul 27, 2018 ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ ಪಾಕಿಸ್ತಾನದ ಪ್ರಧಾನ ಮಂತ್ರಿಗಳು [ಪಾಕಿಸ್ತಾನ] ಉಲ್ಲೇಖಗಳು ಬಾಹ್ಯ ಸಂಪರ್ಕಗಳು Pakistan from UCB Libraries GovPubs Pakistan from the BBC News Pakistan at Encyclopædia Britannica Key Development Forecasts for Pakistan from International Futures Population Of Pakistan ಪಾಕಿಸ್ತಾನ ಏಷ್ಯಾ ಖಂಡದ ದೇಶಗಳು ಭಾರತೀಯ ಉಪಖಂಡ
2209
https://kn.wikipedia.org/wiki/%E0%B2%A8%E0%B3%87%E0%B2%AA%E0%B2%BE%E0%B2%B3
ನೇಪಾಳ
ನೇಪಾಳವು ದಕ್ಷಿಣ ಏಷ್ಯಾದ ಒಂದು ರಾಷ್ಟ್ರ. ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. ನೇಪಾಳದ ಉತ್ತರಕ್ಕೆ ಟಿಬೆಟ್ ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ ಭಾರತ ಇದೆ. ಎವರೆಸ್ಟ್‌ ಶಿಖರ ಸೇರಿದಂತೆ ವಿಶ್ವದ ಅತಿ ಉನ್ನತ ೧೦ ಪರ್ವತ ಶಿಖರಗಳ ಪೈಕಿ ೮ ನೇಪಾಳದಲ್ಲಿಯೇ ಇವೆ. ನೇಪಾಳದ ವಿಸ್ತೀರ್ಣ ೧೪೧,೭೦೦ ಚ.ಕಿ.ಮೀ. ಜನಸಂಖ್ಯೆ ಸುಮಾರು ೨.೭ ಕೋಟಿ. ರಾಷ್ಟ್ರದ ರಾಜಧಾನಿ ಕಠ್ಮಂಡು. ಇತಿಹಾಸ ಕ್ರಿ.ಪೂ.೬ ಮತ್ತು ೫ನಯೆ ಶತಮಾನದಲ್ಲಿ ಈ ಪ್ರದೇಶವು ಶಾಕ್ಯ ಅರಸುವಂಶದ ಆಡಳಿತಕ್ಕೊಳಪಟ್ಟಿತ್ತು. ಶಾಕ್ಯ ರಾಜಕುಮಾರರಲ್ಲೊಬ್ಬನಾದ ಸಿದ್ಧಾರ್ಥ ಐಹಿಕ ಪ್ರಾಪಂಚಿಕ ವ್ಯಾಮೋಹಗಳನ್ನು ತೊರೆದು ದಿವ್ಯ ಜ್ಞಾನವನ್ನು ಹೊಂದಿ ಮುಂದೆ ಗೌತಮ ಬುದ್ಧನೆನಿಸಿಕೊಂಡನು. ಸುಮಾರು ಕ್ರಿ.ಪೂ. ೨೫೦ರ ಸಮಯಕ್ಕೆ ಈ ಪ್ರದೇಶವು ಉತ್ತರಭಾರತದ ಮೌರ್ಯ ಸಾಮ್ರಾಜ್ಯದ ಅಂಗವಾಗಿತ್ತು. ತರುವಾಯ ಗುಪ್ತರು , ಲಿಚ್ಛವಿ ಸಾಮ್ರಾಟರು ಹಾಗೂ ಚಾಲುಕ್ಯರು ಈ ಪ್ರದೇಶದ ಮೇಲೆ ಹತೋಟಿ ಸಾಧಿಸಿದ್ದರು. ನಂತರ ಈ ಪ್ರದೇಶವು ಹಲವು ಸಣ್ಣ ಅರಸೊತ್ತಿಗೆಗಳಾಗಿ ಹಂಚಿಹೋಯಿತು. ೧೭೬೫ರಲ್ಲಿ ಪೃಥ್ವಿನಾರಾಯಣ ಶಹ ಎಂಬ ಗೂರ್ಖಾ ಅರಸನು ನೇಪಾಳವನ್ನು ಒಂದುಗೂಡಿಸಿದನು. ಭಾರತವು ಬ್ರಿಟಿಷ್ ಆಡಳಿತಕ್ಕೆ ಒಳಗಾದಾಗ ನೇಪಾಳವು ತನ್ನ ಸ್ವಾಯತ್ತತೆಯನ್ನು ಉಳಿಸಿಕೊಂಡಿತ್ತು. ಆಂಗ್ಲರೊಡನೆ ನಡೆದ ಒಂದು ಯುದ್ಧದಲ್ಲಿ ನೇಪಾಳವು ಸೋಲನುಭವಿಸಿತಾದರೂ, ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಸಂಧಿ ಮಾಡಿಕೊಂಡಿತು. ಇದರ ಪ್ರಕಾರ ನೇಪಾಳವು ಅಂದು ತನ್ನ ಪ್ರದೇಶಗಳಾಗಿದ್ದ ಉತ್ತರಾಖಂಡ , ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ಭಾಗಗಳನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿತು. ಅಲ್ಲಿಂದ ಮುಂದೆ ಇತ್ತೀಚಿನವರೆವಿಗೂ ನೇಪಾಳವು ಅರಸೊತ್ತಿಗೆಯಾಗಿಯೇ ಉಳಿದಿತ್ತು. ಈಚಿನ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಟವು ತೀವ್ರಗೊಂಡು ಬಹುಪಕ್ಷೀಯ ಸಾಂಸದೀಯ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಅರಸರ ಅಧಿಕಾರಗಳನ್ನು ಬಹುಮಟ್ಟಿಗೆ ಮೊಟಕುಗೊಳಿಸಲಾಯಿತು. ೧೯೯೧ರಲ್ಲಿ ಪ್ರಪ್ರಥಮ ಬಹುಪಕ್ಷೀಯ ಹಾಗೂ ಮುಕ್ತ ಚುನಾವಣೆ ನಡೆದವು. ಭೌಗೋಳಿಕ ಲಕ್ಷಣ ನೇಪಾಳವು ಸುಮಾರು ೮೦೦ ಕಿ.ಮೀ. ಉದ್ದ ಹಾಗೂ ೨೦೦ ಕಿ.ಮೀ. ಅಗಲದ ಪಟ್ಟಿಯಂತೆ ಕಾಣುವುದು. ಭೌಗೋಳಿಕವಾಗಿ ದೇಶವನ್ನು ಉನ್ನತ ಪರ್ವತ ಪ್ರದೇಶ, ಬೆಟ್ಟಗುಡ್ಡಗಳ ಪ್ರದೇಶ ಹಾಗೂ ತರಾಯ್ ಪ್ರದೇಶಗಳೆಂದು ವಿಂಗಡಿಸಬಹುದು. ಭಾರತದ ಗಡಿಗೆ ಹೊಂದಿಕೊಂಡಿರುವ ಪ್ರದೇಶವು ಗಂಗಾ ಬಯಲಿನ ಒಂದು ಭಾಗವಾಗಿದೆ. ಈ ಭಾಗಕ್ಕೆ ಕೋಸಿ, ನಾರಾಯಣಿ (ಗಂಡಕಿ) ಮತ್ತು ಕರ್ನಾಲಿ ನದಿಗಳು ನೀರುಣಿಸುತ್ತವೆ. ಬೆಟ್ಟಗುಡ್ಡಗಳ ಪ್ರದೇಶವು ಕಾಠ್ಮಂಡು ಕಣಿವೆಯನ್ನು ಒಳಗೊಂಡಿದೆ. ದೇಶದ ಹೆಚ್ಚಿನ ಜನವಸತಿ ಇಲ್ಲಿಯೇ ಕಂಡುಬರುವುದು. ಈ ಪ್ರದೇಶದಲ್ಲಿ ಮಹಾಭಾರತ ಲೇಖ್ ಮತ್ತು ಶಿವಾಲಿಕ ಪರ್ವತಶ್ರೇಣಿಗಳು ಇವೆ. ಈ ಶ್ರೇಣಿಗಳು ಮಧ್ಯಮ ಮಟ್ಟದವಾಗಿದ್ದು ಸರಾಸರಿ ೧೦೦೦ದಿಂದ ೪೦೦೦ ಮೀ. ವರೆಗೆ ಎತ್ತರವುಳ್ಳವಾಗಿವೆ. ಹಿಮಾಲಯದ ಉನ್ನತ ಪರ್ವತ ಪ್ರದೇಶವು ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಎತ್ತರದ ಪ್ರದೇಶವಾಗಿದೆ. ಎವರೆಸ್ಟ್ , ಕಾಂಚನ್ ಜುಂಗಾ, ಅನ್ನಪೂರ್ಣಾ , ಮಕಾಲು , ಧವಳಗಿರಿ ಸೇರಿದಂತೆ ವಿಶ್ವದ ಹಲವು ಅತ್ಯುನ್ನತ ಶಿಖರಗಳು ಈ ವಿಭಾಗದಲ್ಲಿ ಇವೆ. ಅರಣ್ಯನಾಶ ದೇಶದ ಎಲ್ಲಕಡೆ ಅವಿರತವಾಗಿ ಸಾಗಿದ್ದು ಇದು ಪ್ರಕೃತಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಅರ್ಥವ್ಯವಸ್ಥೆ ನೇಪಾಳವು ಕೃಷಿಪ್ರಧಾನ ದೇಶ. ದೇಶದ ೭೬% ಜನರು ಜೀವನಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಬತ್ತ, ಗೋಧಿ, ಕಬ್ಬು ಮತ್ತು ಸೆಣಬು ಮುಖ್ಯ ಬೆಳೆಗಳು. ಕೈಗಾರಿಕೆಗಳು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವುದಕ್ಕೇ ಸೀಮಿತ. ಪ್ರವಾಸೋದ್ಯಮವು ದೇಶದ ಪ್ರಮುಖ ಆರ್ಥಿಕ ಚಟುವಟಿಕೆ. ನೇಪಾಳದ ಹೆಚ್ಚಿನ ಭಾಗವು ಪರ್ವತಪ್ರಾಂತ್ಯವಾಗಿರುವುದರಿಂದ ರಸ್ತೆ ಹಾಗೂ ರೈಲುಮಾರ್ಗಗಳ ನಿರ್ಮಾಣ ಕಠಿಣ ಮತ್ತು ಅತಿ ವೆಚ್ಚವುಂಟುಮಾಡುವುದಾಗಿದೆ. ೨೦೦೩ರಂತೆ ದೇಶದಲ್ಲಿ ಒಟ್ಟು ೮೫೦೦ ಕಿ.ಮೀ. ಉತ್ತಮ ರಸ್ತೆಗಳು ಹಾಗೂ ಕೇವಲ ೫೯ ಕಿ.ಮೀ. ರೈಲುಮಾರ್ಗವಿದ್ದಿತು. ಇದರಿಂದಾಗಿ ರಾಷ್ಟ್ರದ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ದೂರಸಂಪರ್ಕ ವ್ಯವಸ್ಥೆಯು ಬಹಳ ಕೆಳಸ್ತರದ್ದಾಗಿದೆ. ಆಧುನಿಕ ತಂತ್ರಜ್ಞಾನವು ದೇಶದ ಜನತೆಯನ್ನು ತಲುಪಿಲ್ಲ. ನೇಪಾಳವು ಹೊರರಾಷ್ಟ್ರಗಳ ಸಹಾಯಧನವನ್ನು ಬಹುಮಟ್ಟಿಗೆ ಅವಲಂಬಿಸಿದೆ. ಭಾರತ, ಅಮೆರಿಕಾ, ಜಪಾನ್ , ಇಂಗ್ಲಂಡ್, ಯುರೋಪಿಯನ್ ಒಕ್ಕೂಟಗಳು ಪ್ರಮುಖ ದಾನಿಗಳು. ಇತರ ವಿಷಯಗಳು ನೇಪಾಳವು ವಿಶ್ವದ ಏಕೈಕ ಹಿಂದೂ ರಾಷ್ಟ್ರ. ದೇಶದ ಅಧಿಕೃತ ಭಾಷೆ ನೇಪಾಲಿ. ಉಳಿದಂತೆ ಮೈಥಿಲಿ, ಭೋಜಪುರಿ ಮತ್ತು ಅವಧಿ ಭಾಷೆಗಳು ನುಡಿಯಲ್ಪಡುತ್ತವೆ. ನೇಪಾಳದಲ್ಲಿ ಪುರುಷರ ಸರಾಸರಿ ಆಯುರ್ಮಾನ ಮಹಿಳೆಯರಿಗಿಂತ ಹೆಚ್ಚು. ಇಡೀ ಪ್ರಪಂಚದಲ್ಲಿ ನೇಪಾಳವೊಂದರಲ್ಲಿ ಮಾತ್ರ ಈ ವಿದ್ಯಮಾನ ಕಂಡುಬರುತ್ತದೆ. ಸಾಂಸ್ಕೃತಿಕ ವಿಷಯಗಳಲ್ಲಿ ನೇಪಾಳವು ಟಿಬೆಟ್ ಮತ್ತು ಭಾರತವನ್ನು ಹೋಲುತ್ತದೆ. ಉತ್ತರದ ಹಿಮಾಲಯ ಪ್ರದೇಶದಲ್ಲಿ ಟಿಬೆಟ್ ಸಂಸ್ಕೃತಿಯ ಛಾಪು ಕಂಡುಬರುವುದು. ಉಳಿದಂತೆ ಎಲ್ಲಾ ಕಡೆ ಹಿಂದೂ ಸಂಸ್ಕೃತಿಯ ಗಾಢ ಛಾಯೆ ಇದೆ. ನೇಪಾಳವು ಭಾರತವನ್ನು ಬಹಳವಾಗಿ ಅವಲಂಬಿಸಿದೆ. ಆರ್ಥಿಕ ಸಹಾಯ , ತಂತ್ರಜ್ಞಾನ, ರಕ್ಷಣೆ ಇವುಗಳೆಲ್ಲವೂ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದಲೇ ನೇಪಾಳಕ್ಕೆ ಒದಗಿದೆ. ಸರ್ಕಾರ ೪-೮-೨೦೧೬: 4th Aug, 2016 ಮಾವೋವಾದಿ ನಾಯಕ ಪ್ರಚಂಡ ಅವರು ಎರಡನೇ ಬಾರಿಗೆ ನೇಪಾಳದ ಪ್ರಧಾನಿಯಾಗಿ ಬುಧವಾರ ಆಯ್ಕೆಯಾದರು. 595 ಸದಸ್ಯ ಬಲದ ನೇಪಾಳ ಸಂಸತ್‌ನಲ್ಲಿ ಪ್ರಚಂಡ ಅವರ ಪರ 363 ಸದಸ್ಯರು ಮತ್ತು ವಿರುದ್ಧವಾಗಿ 210 ಸದಸ್ಯರು ಮತ ಚಲಾಯಿಸಿದ್ದಾರೆ. 22 ಸದಸ್ಯರು ಮತದಾನದಿಂದ ದೂರ ಉಳಿದಿದ್ದಾರೆ ನಾಲ್ಕನೆಯ ಬಾರಿ ಪ್ರಧಾನಿ 7 Jun, 2017; ನೇಪಾಳದ ಕಾಂಗ್ರೆಸ್‌ ಅಧ್ಯಕ್ಷ ಶೇರ್‌ ಬಹಾದ್ದೂರ್‌ ದೇವುಬಾ ಅವರು ನಾಲ್ಕನೆಯ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷ ಯುಎಂಎಲ್‌ ಸೇರಿದಂತೆ ಯಾವುದೇ ಪಕ್ಷ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ಕಾರಣ, 70 ವರ್ಷದ ಶೇರ್‌ ಬಹದ್ದೂರ್ ಅವರು ಏಕೈಕ ಅಭ್ಯರ್ಥಿಯಾಗಿದ್ದರು. 593 ಸಂಸತ್‌ ಸದಸ್ಯರ ಪೈಕಿ 558 ಮಂದಿ ಮತಚಲಾಯಿಸಿದರು.ಶೇರ್‌ ಬಹದ್ದೂರ್ ಅವರು ಜಯಗಳಿಸಲು 297 ಮತಗಳು ಸಾಕಿತ್ತು. ಆದರೆ ಅವರು 388 ಮತ ಪಡೆದಿದ್ದಾರೆ. 1995–1997, 2001–2002, 2004–2005ರವರೆಗೆ ಪ್ರಧಾನಿಯಾಗಿದ್ದ ಶೇರ್‌ ಬಹದ್ದೂರ್ ಇದೀಗ ನೇಪಾಳದ 40ನೇ ಪ್ರಧಾನಿಯಾಗಿದ್ದಾರೆ. ಮಾವೋವಾದಿ ನಾಯಕ ಪುಷ್ಪಾ ಕಮಲ್ ದಹಾಲ್ ಅವರು 15 ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು- ದೀರ್ಘಾವಧಿಯ ಸ್ಥಳೀಯ ಚುನಾವಣೆ ನೇಪಾಳದಲ್ಲಿ ನಡೆದಿದ್ದರಿಂದ ಬಹದ್ದೂರ್‌ ದೇವುಬಾಗಾಗಿ ಪಕ್ಕಕ್ಕೆ ನಿಲ್ಲಲು ಒಪ್ಪಿಕೊಂಡರು. ನೇಪಾಳದಲ್ಲಿ ರಾಜಕೀಯ ಅನಿಶ್ಚಿತತೆ ಭಾರತದ ಅತಿ ಆಯಕಟ್ಟಿನ ಭೂಪ್ರದೇಶ ನೇಪಾಳದ ರಾಜಕಾರಣ ಅನಿಶ್ಚಿತತೆಗೆ ಬಿದ್ದಿದೆ. ಆಳುವ ಪಕ್ಷದಲ್ಲಿನ ಒಳಜಗಳದಿಂದ ಸಂಸತ್ತಿನ ಕೆಳಮನೆಯನ್ನು ಪ್ರಧಾನಮಂತ್ರಿ ವಿಸರ್ಜಿಸಿದ್ದಾರೆ. ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಒಲಿ ತಮ್ಮದೇ ನೇಪಾಳ ಕಮ್ಯುನಿಸ್ಟ್ ಪಾರ್ಟಿ ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯನ್ನು ಲೆಕ್ಕಿಸದೆ ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ನೇಪಾಳ ಅವಧಿಗೆ ಮುನ್ನವೇ ಚುನಾವಣೆ ಎದುರಿಸಬೇಕಾಗಿ ಬಂದಿದೆ. ಹಾಲಿ ಅವಧಿಯು 2022ರ ನವೆಂಬರ್‌ಗೆ ಪೂರ್ಣಗೊಳ್ಳುತ್ತಿತ್ತು. ಹೊಸ ಸರ್ಕಾರದ ಆಯ್ಕೆಗೆ ಮುಂಬರುವ ಏಪ್ರಿಲ್–ಮೇ ಹೊತ್ತಿಗೆ ಮತದಾನ ನಡೆಯಬೇಕಿದೆ. ಚಿತ್ರಗಳು ಉಲ್ಲೇಖ ಭಾಷೆಗಳು ಭಾಷೆ ಭಾಷಾ ಕುಟುಂಬಗಳು ಭಾಷಾ ವಿಜ್ಞಾನ ಭಾರತ ಭಾರತದ ಸಂವಿಧಾನ ಭಾರತೀಯ ಭಾಷೆಗಳು ದ್ರಾವಿಡ ಭಾಷೆಗಳು ಏಷ್ಯಾ ಖಂಡದ ದೇಶಗಳು ದಕ್ಷಿಣ ಏಷ್ಯಾ
2210
https://kn.wikipedia.org/wiki/%E0%B2%85%E0%B2%B0%E0%B2%AC%E0%B3%8D%E0%B2%AC%E0%B3%80%20%E0%B2%B8%E0%B2%AE%E0%B3%81%E0%B2%A6%E0%B3%8D%E0%B2%B0
ಅರಬ್ಬೀ ಸಮುದ್ರ
ಆರಬ್ಬೀ ಸಮುದ್ರ ಭಾರತದ ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ, ಹಿಂದೂ ಮಹಾಸಾಗರದ ಒಂದು ಭಾಗ. ಅದರ ವಾಯವ್ಯ ಭಾಗದಲ್ಲಿದೆ ಇದರ ಹಳೆ ಹೆಸರು ಎರಿಥ್ರಿಯನ್ ಸಮುದ್ರ. ಅರಬ್ಬರ ವಾಣಿಜ್ಯ ಈ ಭಾಗದಲ್ಲಿ ಹೆಚ್ಚಾಗಿರುವುದರಿಂದ, ಇದನ್ನು ಅರಬ್ಬೀ ಸಮುದ್ರವೆಂದು ಕರೆಯಲಾಯಿತು. ಪೂರ್ವಕ್ಕೆ ಭಾರತವೂ ಉತ್ತರಕ್ಕೆ ಪಾಕಿಸ್ತಾನ ಮತ್ತು ಇರಾನ್ ದೇಶಗಳ ಪಶ್ಚಿಮ ಭಾಗಗಳೂ ಪಶ್ಚಿಮಕ್ಕೆ ಅರೇಬಿಯ, ಆಫ್ರಿಕಗಳ ಪೂರ್ವಭಾಗಗಳೂ ಇವೆ. ಕೆಂಪು ಸಮುದ್ರವೂ ಪರ್ಷಿಯ ಕೊಲ್ಲಿಯೂ ಅರಬ್ಬೀ ಸಮುದ್ರಕ್ಕೆ ಸೇರಿಕೊಂಡಿವೆ. ಸಿಂಧು, ನರ್ಮದಾ ಮತ್ತು ತಪತಿ ಇವು ಈ ಸಮುದ್ರವನ್ನು ಸೇರುವ ಮುಖ್ಯ ನದಿಗಳು. ಭಾರತದ ಜೊತೆ ಇರಾನ್,ಪಾಕಿಸ್ತಾನ, ಶ್ರೀಲಂಕಾ ಸುಡಾನ್ಮುಂತಾದ ದೇಶಗಳೂ ಕೂಡ 'ಅರಬ್ಬೀ ಸಮುದ್ರ ತೀರ'ಗಳನ್ನು ಹೊಂದಿವೆ. ಇದನ್ನು ಸಿಂಧು ಸಾಗರ ಎಂದೂ ಕರೆಯುತ್ತಿದ್ದರು. ಸಮುದ್ರತೀರ'ದುದ್ದಕ್ಕೂ ಹಲವಾರು ನಗರಗಳಿವೆ 'ಅರಬ್ಬೀ ಸಮುದ್ರ ತೀರ'ದಲ್ಲಿರುವ ಕೆಲವು ಪ್ರಮುಖ ನಗರಗಳೆಂದರೆ -ಕೊಚ್ಚಿ, ಮಂಗಳೂರು, ಮುಂಬಯಿ, ಸೂರತ್, ಕರಾಚಿ ಏಡೆನ್ ಒಂದಾನೊಂದು ಕಾಲದಲ್ಲಿ ಈ ಸಮುದ್ರ ತೀರ ಹಡಗಿನ ಸಂಚಾರಕ್ಕೆ ಪ್ರಖ್ಯಾತಿ ಹೊಂದಿತ್ತು. ಈಗ ಯುರೋಪ್ ಮತ್ತು ಭಾರತಗಳ ಮಧ್ಯೆ ಪ್ರಮುಖ ನೌಕಾಮಾರ್ಗವಾಗಿದೆ. ಅಕ್ಟೋಬರ್‍ನಿಂದ ಮೇ ವರೆಗೆ ಈಶಾನ್ಯ ವಾಣಿಜ್ಯ ಮಾರುತವೂ ಜೂನ್‍ನಿಂದ ಸೆಪ್ಟೆಂಬರ್‍ವರೇಗೆ ನೈರುತ್ಯ ವಾಣಿಜ್ಯ ಮಾರುತವೂ ಬೀಸುತ್ತವೆ. ಜೂನ್‍ನಿಂದ ಸೆಪ್ಟೆಂಬರ್‍ವರೇಗೆ ನೈರುತ್ಯ ವಾಣಿಜ್ಯ ಮಾರುತವೂ ಅರಬ್ಬೀ ಸಮುದ್ರದ ಪ್ರಾಮುಖ್ಯ ಸೂಯೆಜ್ ಕಾಲುವೆಯನ್ನು ತೆರೆದ ಅನಂತರ (1869) ಬಹಳ ಹೆಚ್ಚಿತು. ಇಲ್ಲಿನ ಕೆಲವು ದ್ವೀಪಗಳಲ್ಲಿ ಸೊಕೊಟ್ರಾ ಮತ್ತು ಲಕ್ಷದ್ವೀಪ ಎಂಬುವು ಮುಖ್ಯವಾದುವು. ಭೌಗೋಳಿಕ ಒಟ್ಟು ವಿಸ್ತೀರ್ಣ 3,863,000 ಚ.ಕಿಮೀ. ಸರಾಸರಿ ಆಳ 2,734 ಮೀ. ಸಮುದ್ರದ ಮಧ್ಯಭಾಗದ ಆಳ 2,900 ಮೀ ಮೀರುತ್ತದೆ. ಇಲ್ಲಿ ಯಾವುದೇ ದ್ವೀಪಗಳಿಲ್ಲ, ದಾಖಲಾಗಿರುವ ಸಮುದ್ರದ ಅತೀ ಆಳ 4,850 ಮೀ. ಬೇಸಗೆಯಲ್ಲಿ ಸಮುದ್ರದ ಮಧ್ಯ ಭಾಗದ ಮೇಲ್ಮೈ ನೀರಿನ ಉಷ್ಣಾಂಶ 240-250 ಸೆಂ. ಸಮುದ್ರ್ರ ಪಶ್ಚಿಮ ಭಾಗ ಸಮೃದ್ಧ ಮೀನು ಸಂಪತ್ತು ಹೊಂದಿದೆ. ಬಾಹ್ಯ ಸಂಪರ್ಕಗಳು Arabian Sea (World Wildlife Fund) Al-Hind: Early Medieval India and the Expansion of Islam 7Th-11th ಸಮುದ್ರಗಳು
2211
https://kn.wikipedia.org/wiki/%E0%B2%AC%E0%B2%82%E0%B2%97%E0%B2%BE%E0%B2%B3%20%E0%B2%95%E0%B3%8A%E0%B2%B2%E0%B3%8D%E0%B2%B2%E0%B2%BF
ಬಂಗಾಳ ಕೊಲ್ಲಿ
ಬಂಗಾಳ ಕೊಲ್ಲಿಯು ಹಿಂದೂ ಮಹಾಸಾಗರದ ಈಶಾನ್ಯ ಭಾಗದಲ್ಲಿರುವ ಕೊಲ್ಲಿ. ತ್ರಿಕೋನದ ಆಕಾರದಲ್ಲಿರುವ ಈ ಕೊಲ್ಲಿಯ ಉತ್ತರಕ್ಕೆ ಭಾರತ, ಬಾಂಗ್ಲದೇಶ , ಪೂರ್ವಕ್ಕೆ ಮಲಯಾ ದ್ವೀಪಕಲ್ಪ (ಪೆನಿನ್ಸುಲ) ಮತ್ತು ಪಶ್ಚಿಮಕ್ಕೆ ಭಾರತದ ಪೂರ್ವ ಕರಾವಳಿಯಿದೆ. ಸ್ಥೂಲವಾಗಿ ಉ.ಅ. 5°-22° ಮತ್ತು ಪೂ.ರೇ 80°-95° ನಡುವೆ ವ್ಯಾಪಿಸಿದೆ. ಶ್ರೀಲಂಕಾದ ದಕ್ಷಿಣ ತುದಿಯಿಂದ ಸುಮಾತ್ರ ದ್ವೀಪದ ಉತ್ತರ ತುದಿಯವರೆಗೆ ಇದರ ದಕ್ಷಿಣ ಮೇರೆ ಹಬ್ಬಿದೆ. ವಿಸ್ತೀರ್ಣ 21,72,000 ಚ.ಕಿಮೀ. ಅಗಲ ಸುಮಾರು 1600 ಕಿಮೀ ಸರಾಸರಿ ಆಳ 790 ಮೀ ಗಳಿಗಿಂತ ಹೆಚ್ಚು. ಗರಿಷ್ಠ ಆಳ 4,500 ಮೀ. ಕೊಲ್ಲಿಯಲ್ಲಿ ಇರುವ ದ್ವೀಪಸ್ತೋಮಗಳು ಅಂಡಮಾನ್ ಮತ್ತು ನಿಕೋಬಾರ್. ಭೌತ ಲಕ್ಷಣ ಉತ್ತರ ಭಾಗದಲ್ಲಿ ಸುಮಾರು 160 ಕಿಮೀ ಅಗಲದ ಖಂಡೀಯ ಮರಳು ದಿಬ್ಬವಿದೆ. ದಕ್ಷಿಣಕ್ಕೆ ಸಾಗಿದಂತೆ ಇದು ಕಿರಿದಾಗುತ್ತದೆ. ತಳ ಸಾಮಾನ್ಯವಾಗಿ ದಕ್ಷಿಣಕ್ಕೆ ಇಳಜಾರಾಗಿದ್ದು ಮಟ್ಟಸವಾಗಿದೆಯೆಂದು ಈಚಿನವರೆಗೂ ನಂಬಲಾಗಿತ್ತು. ಹಿಂದೂ ಸಾಗರದ ಅಂತರರಾಷ್ಟ್ರೀಯ ಅನ್ವೇಷಣೆಯಿಂದ ಹೆಚ್ಚಿನ ವಾಸ್ತವ ಸಂಗತಿಗಳು ಹೊರಬಿದ್ದಿವೆ. ನೀರಿನ ಅಡಿಯಲ್ಲಿ ಅನೇಕ ಪರ್ವತ ಶ್ರೇಣಿ, ಅಳ ಕಮರಿ ಮತ್ತು ನಾಲೆ ಇರುವುದು ಗೊತ್ತಾಗಿದೆ. ನಿಕೋಬಾರ್-ಸುಮಾತ್ರ ಭಾಗದಲ್ಲಿ ಗರಿಷ್ಠ 4500 ಮೀ ಆಳದ ಒಂದು ಕೊಳ್ಳವಿದೆ. ಕೊಲ್ಲಿಯ ತಲೆಯ ಬಳಿ ಆರಂಭವಾಗುವ ಕಮರಿ ಖಂಡೀಯ ಮರಳು ದಿಬ್ಬಕ್ಕೆ ಅಡ್ಡವಾಗಿ ಅದನ್ನು ಕತ್ತರಿಸಿದಂತೆ 160 ಕಿಮೀ ದೂರ ಸಾಗುತ್ತದೆ. ಇದರ ಅಗಲ ಸುಮಾರು 13 ಕಿಮೀ, ಭಾರತ ತೀರದಿಂದಾಚೆಗೆ ಕಂಡುಬಂದಿರುವ ಕಮರಿಗಳ ಪೈಕಿ ಮಹಾನದಿ, ಕೃಷ್ಣಾ, ಸ್ವರ್ಣಮುಖಿ, ಪೆನ್ನಾರ್ ಮದ್ರಾಸ್, ನಾಗಾರ್ಜುನ, ಗೋದಾವರಿ ಮತ್ತು ಗೌತಮಿ ಕಮರಿಗಳು ಮುಖ್ಯವಾದವು. ಇವುಗಳ ಪೈಕಿ ಕೆಲವು ಪ್ಲೀಸ್ಟೊಸಿನ್ ಯುಗದಲ್ಲಿ (ಸುಮಾರು 10,000-25,00,000 ವರ್ಷಗಳ ಹಿಂದೆ) ರೂಪುತಳೆದವು. ಈ ಕೊಲ್ಲಿಯ ಭೌತಗುಣಗಳು ವ್ಯತ್ಯಾಸಗೊಳ್ಳುತ್ತಿರುವುದು ಇದರ ಒಂದು ವೈಶಿಷ್ಟ್ಯ. ತೀರದಾಚೆಯ ಪ್ರದೇಶಗಳಲ್ಲಿ ಉಷ್ಣತೆ ಸಾಮಾನ್ಯವಾಗಿ ಎಲ್ಲ ಋತುಗಳಲ್ಲೂ ಏಕರೀತಿಯದಾಗಿರುತ್ತದೆ, ಉತ್ತರಕ್ಕೆ ಹೋದಂತೆ ಉಷ್ಣತೆ ಕಡಿಮೆಯಾಗುತ್ತದೆ. ಮೇಲ್ಭಾಗದ ಸಾಂದ್ರತೆ ವಸಂತ ಋತುವಿನಲ್ಲಿ ಅಧಿಕ, ಮೇಲಣ ನೀರಿನ ಚಲನೆಯ ದಿಕ್ಕು ಋತುವಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಈಶಾನ್ಯ ಮಾನ್ಸೂನ್ ಕಾಲದಲ್ಲಿ ಇದು ಪ್ರದಕ್ಷಿಣವಾಗಿಯೂ ನೈಋತ್ಯ ಮಾನ್ಸೂನ್ ಕಾಲದಲ್ಲಿ ಅಪ್ರದಕ್ಷಿಣವಾಗಿಯೂ ಚಲಿಸುತ್ತದೆ. ಮಾನ್ಸೂನಿನ ಬದಲಾವಣೆಯ ಕಾಲದಲ್ಲಿ, ಮುಖ್ಯವಾಗಿ ಅಕ್ಟೋಬರಿನ್ನಲ್ಲಿ ತೀವ್ರ ಚಂಡಮಾರುತಗಳು ಸಂಭವಿಸುತ್ತದೆ. ಅಲೆ ಹಾಗೂ ಭರತದ ಪರಿಣಾಮವಾಗಿ ನೀರಿನ ಮಟ್ಟದಲ್ಲಾಗುವ ಬದಲಾವಣೆಗಳ ಜೊತೆಗೆ ವರ್ಷ ಪೂರ ಸಮುದ್ರದ ಮಟ್ಟ ವ್ಯತ್ಯಾಸವಾಗುತ್ತಲೇ ಇರುತ್ತದೆ. ವಂಶಧಾರಾ, ನಾಗಾವಳಿ, ವಶಿಷ್ಠ, ಗೋದಾವರಿ ನದೀ ಮುಖಗಳ ಬಳಿಯಲ್ಲಿ ಮ್ಯಾಂಗನೀಸ್‍ಯುಕ್ತ ಖನಿಜಕಣಗಳು ವಿಶೇಷವಾಗಿ ನಿಕ್ಷೇಪಗೊಂಡಿವೆ, ಕಾವೇರಿ, ಗೋದಾವರಿ ಮುಖಜ ಭೂಮಿಗಳ ಪ್ರದೇಶದಲ್ಲಿ ತೈಲ ನಿಕ್ಷೇಪಗಳ ಅನ್ವೇಷಣೆಯಾಗುತ್ತಿದೆ. ಬಂಗಾಳಕೊಲ್ಲಿಯನ್ನು ಬಂದು ಸೇರುವ ಪ್ರಮುಖ ನದಿಗಳು ಗಂಗಾ ನದಿ ಬ್ರಹ್ಮಪುತ್ರ ನದಿ ಗೋದಾವರಿ ನದಿ ಕೃಷ್ಣಾ ನದಿ ಕಾವೇರಿ ನದಿ ಮಹಾನದಿ ಪ್ರಮುಖ ಬಂದರುಗಳು ವಿಶಾಖಪಟ್ಟಣ ಚೆನ್ನೈ ಢಾಕಾ ರಂಗೂನ್ ಕಲ್ಕತ್ತ ಕಾಕಿನಾಡ ಮಚಲಿಪಟ್ಟಣ ಕಡಲೂರು ಪಾರದೀಪ್. ಏಷ್ಯಾ ಖಂಡ ಕೊಲ್ಲಿಗಳು ಭೂಗೋಳ
2214
https://kn.wikipedia.org/wiki/%E0%B2%B8%E0%B2%BE%E0%B2%AE%E0%B3%8D%E0%B2%B0%E0%B2%BE%E0%B2%9F%E0%B3%8D%20%E0%B2%85%E0%B2%B6%E0%B3%8B%E0%B2%95
ಸಾಮ್ರಾಟ್ ಅಶೋಕ
{{Infobox royalty |title = Priyadarśin Devanapriya Chakravartin |succession = 3rd Mauryan Emperor |image = Ashoka's visit to the Ramagrama stupa Sanchi Stupa 1 Southern gateway.jpg |image_size = 285px |caption = A relief from Sanchi, showing Ashoka on his chariot, visiting the Nagas at Ramagrama. |reign = |coronation = 268 BCE |predecessor = ಬಿಂದುಸಾರ |successor = ದಶರಥ ಮೌರ್ಯ |spouses = |issue = |dynasty = ಮೌರ್ಯ ಸಾಮ್ರಾಜ್ಯ |father = Bindusara |mother = Subhadrangi or Dharma |religion = ಬೌದ್ಧ ಧರ್ಮ |birth_date = c. 304 BCE |birth_place = ಪಾಟಲೀಪುತ್ರ (ಈಗಿನ ಪಾಟ್ನಾ), ಭಾರತ |death_date = 232 BCE (aged c. 7172) |death_place = Pataliputra, modern-day Patna, Bihar, India }}ಅಶೋಕನು ಮೌರ್ಯ ಸಾಮ್ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಚಕ್ರವರ್ತಿ ಕ್ರಿ.ಪೂ 273 ರಿಂದ ಕ್ರಿ.ಪೂ 232 ರವರಿಗೆ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತದೆ. ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದುಗಳಿಂದ ಖ್ಯಾತನಾಗಿದ್ದಾನೆ. 1915 ರವರಿಗೆ ಪಿಯದಸಿ ರಾಜ ಯಾರೆಂದು ತಿಳಿಯದಾಗಿತ್ತು. ಆದರೆ 1915ರಲ್ಲಿ ದೊರೆತ ಮಾಸ್ಕಿ ಶಾಸನದಲ್ಲಿ ಅಶೋಕನನ್ನು ದೇವಾನಾಂಪ್ರಿಯ ಅಶೋಕ ಎಂದು ಕರೆದಿದ್ದು ಈ ಅಸ್ಪಷ್ಟತೆ ನಿವಾರಣೆ ಗೊಂಡಿತು. ಅಶೋಕ' ಶಬ್ಧಕ್ಕೆ - ಸಂಸ್ಕೃತದಲ್ಲಿ ಶೋಕವಿಲ್ಲದ ಎಂಬರ್ಥವಿದೆ. ಇತಿವೃತ್ತ ಅನೇಕ ದಂಡಯಾತ್ರೆಗಳ ನಂತರ, ಅಶೋಕನು ದಕ್ಷಿಣ ಏಷಿಯಾದ ಬಹುಭಾಗವಷ್ಟೇ ಅಲ್ಲ ಅದರಾಚೆಗೂ ಪಶ್ಚಿಮದಲ್ಲಿ ಇವತ್ತಿನ ಅಫ್ಘಾನಿಸ್ಥಾನ ಮತ್ತು ಪರ್ಶಿಯಾದಿಂದ ಪೂರ್ವದಲ್ಲಿ ಬಂಗಾಲ ಮತ್ತು ಆಸ್ಸಾಮ್ ವರೆಗೆ, ದಕ್ಷಿಣ ದಲ್ಲಿ ಮೈಸೂರಿನವರೆಗೆ ರಾಜ್ಯವಾಳಿದನು . ಬೌದ್ಧಧರ್ಮದ ಅನುಯಾಯಿಯಾದ ಆಶೋಕನು, ಶಾಕ್ಯಮುನಿ ಬುದ್ಧನ ಜೀವನದಲ್ಲಿನ ಮಹತ್ವದ ಸ್ಥಳಗಳಲ್ಲಿ ಅನೇಕ ಸ್ಮಾರಕಗಳ್ನ್ನು ನಿಲ್ಲಿಸಿದನು. ಬೌದ್ಧ ಸಂಪ್ರದಾಯದ ಪ್ರಕಾರ ಅವನು ಬೌದ್ಧ ಧರ್ಮದ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ತನ್ನನ್ನು ತೊದಗಿಸಿಕೊಂಡನು. ಅಶೋಕ ಎಂದರೆ ಸಂಸ್ಕೃತ ದಲ್ಲಿ ದುಃಖವಿಲ್ಲದವನು ಎಂದರ್ಥ. ಅವನ ಶಾಸನಗಳಲ್ಲಿ ಅವನನ್ನು "ದೇವನಾಂಪ್ರಿಯ" ಅಂದರೆ "ದೇವತೆಗಳಿಗೆ ಪ್ರಿಯನಾದವನು" ಎಂದು ಕರೆಯಲಾಗುತ್ತದೆ . ಹೆಚ್. ಜಿ. ವೆಲ್ಸ್ ನು ಅಶೋಕನ ಕುರಿತು ಹೀಗೆ ಬರೆದಿದ್ದಾನೆ : "ಜಗತ್ತಿನ ಇತಿಹಾಸದಲ್ಲಿ ಸಾವಿರಾರು ರಾಜ ಮಹಾರಾಜರು , ಸಾಮ್ರಾಟರು ತಮ್ಮನ್ನು ಬಗೆಬಗೆಯಿಂದ ಹೊಗಳಿಕೊಂಡಿದ್ದಾರೆ . ಅವರು ಸ್ವಲ್ಪವೇ ಕಾಲ ಶೋಭಾಯಮಾನರಾಗಿ ಹೊಳೆದರು . ಆದರೆ ಬಲು ಬೇಗ ಮರೆಯಾದರು . ಆದರೆ ಅಶೋಕನು ಇಂದಿಗೂ ಕೂಡ ಬಹಳ ಪ್ರಭೆಯುಳ್ಳ ನಕ್ಷತ್ರದ ಹಾಗೆ ಹೊಳೆಯುತ್ತಾನೆ. " ಆರಂಭಿಕ ಜೀವನ ಮೌರ್ಯ ರಾಜ ಬಿಂದುಸಾರನಿಗೆ ಅವನ ರಾಣಿಯರಲ್ಲೊಬ್ಬಳಾದ ಸುಭದ್ರಾಂಗಿ ಎಂಬಾಕೆಯಿಂದ ಹುಟ್ಟಿದವನೇ ಅಶೋಕ. ಈ ಸುಭದ್ರಾಂಗಿ ರಾಣಿಯು, ಬಡಬ್ರಾಹ್ಮಣನೊಬ್ಬನ ಮಗಳೆಂದೂ, ಅವಳಿಗೆ ಹುಟ್ಟುವ ಮಗ ಮಹಾರಾಜನಾಗುತ್ತಾನೆ ಎಂಬ ಭವಿಷ್ಯ ತಿಳಿದ ಅವಳ ತಂದೆ ,ಅವಳನ್ನು ಬಿಂದುಸಾರನ ಅಂತಃಪುರಕ್ಕೆ ಸೇರಿಸಿದ ಎಂದು ಕಥೆಯಿದೆ. ಧರ್ಮಾ ಬ್ರಾಹ್ಮಣಳಾದರೂ , ರಾಜವಂಶದವಳಲ್ಲ ಎಂಬ ಕಾರಣಕ್ಕೆ ಅಂತಃಪುರದಲ್ಲಿ ಅವಳಿಗೆ ನೀಚ ಸ್ಥಾನವಿತ್ತು. ಅನೇಕ ಮಲ-ಸಹೋದರರೊಂದಿಗೆ, ಹಾಗೂ ಧರ್ಮಾಳ ಇನ್ನೊಬ್ಬ ಮಗ, ವಿತ್ತಶೋಕ ಎಂಬ ತಮ್ಮನೊಂದಿಗೆ, ಅಶೋಕ ಬೆಳೆದ. ರಾಜಕುಮಾರರಲ್ಲಿ ತೀವ್ರ ಸ್ಪರ್ಧೆಯಿದ್ದರೂ ಅಶೋಕ, ಸೈನಿಕ ಹಾಗೂ ಇತರ ಶೈಕ್ಷಣಿಕ ವಿಷಯಗಳಲ್ಲಿ , ಸದಾ ಮುಂದಿದ್ದ. ಈ ಸಹೋದರರಲ್ಲಿ , ಅದರಲ್ಲಿಯೂ ಮುಖ್ಯವಾಗಿ , ಅಶೋಕ ಮತ್ತು ಅವನ ಸಹೋದರ ಸುಶೀಮನಲ್ಲಿ ತೀವ್ರ ಪೈಪೋಟಿ ಯುದ್ಧ ಪಟುಗಳಾಗಿಯೂ, ಆಡಳಿತಗಾರರಾಗಿಯೂ, ಇತ್ತು. . ಇತಿಹಾಸ ಅತ್ಯುತ್ತಮ ಯೋಧನಾಗಿಯೂ, ಚಾಣಾಕ್ಷ ರಾಜನೀತಿಜ್ಙನಾಗಿಯೂ ಬೆಳೆದ ಅಶೋಕನು ಮೌರ್ಯ ಸಾಮ್ರಾಜ್ಯದ ತಕ್ಷಶಿಲಾ ಮತ್ತು ಉಜ್ಜಯಿನಿ ರಾಜ್ಯಪಾಲನಾಗಿ ಆಡಳಿತ ಅನುಭವ ಗಳಿಸಿದ್ದನು. ರಾಜ್ಯಾದ್ಯಂತ ಬೆಳೆಯುತ್ತಿದ್ದ ಅಶೋಕನ ಜನಪ್ರಿಯತೆಯನ್ನು ಕಂಡು ಕರುಬಿದ ಅವನ ಅಣ್ಣಂದಿರು, ಬಿಂದುಸಾರನು ತನ್ನ ನಂತರದ ರಾಜನಾಗಿ ಅಶೋಕನನ್ನೇ ಚುನಾಯಿಸಬಹುದು ಎಂಬ ಆತಂಕಕ್ಕೊಳಗಾದರು. ಅವರೆಲ್ಲರಿಗೂ ಹಿರಿಯನಾಗಿ, ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿದ್ದ, ರಾಜಕುಮಾರ ಸುಶೀಮನು, ತನ್ನ ರಾಜ್ಯಪಾಲಿಕೆಯ ಅಧೀನದಲ್ಲಿದ್ದ ಸಿಂಧ್ ಪ್ರಾಂತದ ತಕ್ಷಶಿಲೆಯಲ್ಲಿ ತಲೆಯೆತ್ತಿದ್ದ ರಾಜವಿರೋಧೀ ಪ್ರತಿಭಟನೆಯನ್ನು ಹತ್ತಿಕ್ಕಲು ಅಶೋಕನನ್ನು ಕಳುಹಿಸುವಂತೆ ಬಿಂದುಸಾರನ ಮನವೊಲಿಸಿದನು. ಸುಶೀಮನ ದುರಾಡಳಿತದಿಂದಲೂ, ಅಲ್ಲಿಯ ಇಂಡೋ-ಗ್ರೀಕ್ ಬುಡಕಟ್ಟಿನ ಜನರ ಯುದ್ಧಪ್ರೇಮಿ ಪ್ರವೃತ್ತಿಯಿಂದಲೂ, ತಕ್ಷಶಿಲೆ ಪ್ರಕ್ಷುಬ್ದವಾಗಿತ್ತು. ಇದರಿಂದ ಅನೇಕ ಬಂಡುಕೋರ ಗುಂಪುಗಳ ಸೃಷ್ಟಿಯಾಗಿ, ಅರಾಜಕತೆ ಬೇರುಬಿಡುತ್ತಿತ್ತು. ತಂದೆಯ ಆಜ್ಙೆಯನ್ನು ಪಾಲಿಸಿ, ಅಶೋಕ ತಕ್ಷಶಿಲೆಗೆ ಪಯಣ ಬೆಳೆಸಿದ. ಅಶೋಕನ ಆಗಮನದ ಸುದ್ದಿ ಹರಡುತ್ತಿದ್ದಂತೆ, ಬಂಡುಕೋರರು ಅವನನ್ನು ಸ್ವಾಗತಮಾಡಿದ್ದರಿಂದ, ಪ್ರತಿಭಟನೆಯು ಶಾಂತಿಯುತವಾಗಿ ಅಂತ್ಯವಾಯಿತು. (ಇದೇ ಪ್ರಾಂತ ಮುಂದೆ , ಅಶೋಕನ ಆಳ್ವಿಕೆಯ ಕಾಲದಲ್ಲಿ, ಮತ್ತೆ ಬಂಡೆದ್ದಿತು. ಆದರೆ ಈ ಬಾರಿ ಅದನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು.) ಅಶೋಕನ ಯಶಸ್ಸಿನಲ್ಲಿ ಮುಂದೆ ಚಕ್ರವರ್ತಿಯಾಗುವ ಮಹತ್ವಾಕಾಂಕ್ಷೆಯನ್ನು ಕಂಡ ಅವನ ಮಲ-ಸೋದರರು ಮತ್ತಷ್ಟುಅಸ್ವಸ್ಥರಾದರು. ಸುಶೀಮನ ಇನ್ನಷ್ಟು ಚಿತಾವಣೆಯಿಂದ , ಬಿಂದುಸಾರ, ಅಶೋಕನನ್ನು ರಾಜ್ಯಬಿಟ್ಟು ತೊಲಗಲು ಆದೇಶಿಸಿದ. ಅದರಂತೆ, ಕಳಿಂಗಕ್ಕೆ ಹೋಗಿ ಅಜ್ಙಾತವಾಗಿ ನೆಲೆಸಿದ ಅಶೋಕ . ಅಲ್ಲಿ ಪರಿಚಯವಾದ ಬೆಸ್ತರ ಹೆಂಗಸು ಮಹಾದೇವಿ ಯೊಡನೆ ಪ್ರೇಮದಲ್ಲಿ ಸಿಲುಕಿ ಪ್ರೇಮ ವಿವಾಹವಾದನು ಆಕೆ ದ್ವಿತೀಯ ಅಥವಾ ತೃತೀಯ ರಾಣಿಯಾದಳು. ಇಷ್ಟರಲ್ಲಿ , ಉಜ್ಜಯಿನಿಯಲ್ಲಿ ಮತ್ತೊಂದು ಹಿಂಸಾತ್ಮಕ ಪ್ರತಿಭಟನೆ ಪ್ರಾರಂಭವಾಗಿತ್ತು. ಎರಡು ವರ್ಷಗಳ ಬಹಿಷ್ಕಾರದ ನಂತರ ಬಿಂದುಸಾರ ಅಶೋಕನ್ನು ಮರಳಿ ಕರೆಯಿಸಿದ. ಉಜ್ಜಯಿನಿಗೆ ಪ್ರತಿಭಟನೆಯನ್ನು ಎದುರಿಸಲು ಹೋದ ಅಶೋಕ ಅಲ್ಲಿ ಗಾಯಗೊಂಡರೂ, ಅವನ ಸೇನಾನಾಯಕರು ಪ್ರತಿಭಟನೆಯನ್ನು ಉಪಶಮನ ಮಾಡುವುದರಲ್ಲಿ ಯಶಸ್ವಿಯಾದರು. ಸುಶೀಮನ ನಂಬಿಕಸ್ತಬಂಟರಿಂದ ತೊಂದರೆಗೀಡಾಗಬಹದು ಎಂಬ ಶಂಕೆಯಿಂದ ಅಶೋಕನ್ನು ಬಚ್ಚಿಟ್ಟು ಶುಶ್ರೂಷೆ ಮಾಡಲಾಯಿತು. ಇಲ್ಲಿ ಅವನ ಸೇವೆ ಮಾಡಿದವರು ಬೌದ್ಧ ಸನ್ಯಾಸಿ ಸನ್ಯಾಸಿನಿಯರು. ಅಶೋಕನಿಗೆ ಬುದ್ಧನ ಬೋಧನೆಗಳ ಮೊದಲ ಪರಿಚಯವಾದದ್ದೂ ಮತ್ತು ಪಕ್ಕದ ವಿದಿಶಾ ನಗರದ ವ್ಯಾಪಾರಿ ಒಬ್ಬನ ಮಗಳಾದ ,ದೇವಿ ಎಂಬ ಸುಂದರ ತರುಣಿ ಅವನ ಪರಿಚಾರಿಕೆಯಾಗಿ ಪರಿಚಯವಾದದ್ದೂ ಇಲ್ಲಿಯೇ.ಗಾಯಗಳಿಂದ ಚೇತರಿಸಿಕೊಂಡ ಮೇಲೆ ಅಶೋಕ ಆಕೆಯನ್ನು ಮದುವೆಯಾದ. ಈಗಾಗಲೇ ಅಶೋಕನಿಗೆ ಅಸಾಂಧಿಮಿತ್ರ ಎಂಬ ತರುಣಿಯೊಂದಿಗೆ ಮದುವೆಯಾಗಿತ್ತು. ಆಕೆ ಸಾಯುವವರೆಗೂ ಅಶೋಕನ ಪ್ರೀತಿಪಾತ್ರ ಪಟ್ಟದರಾಣಿಯಾಗಿ ಬಾಳಿದಳು. ಅವಳು ತನ್ನ ಸಂಪೂರ್ಣ ಜೀವನವನ್ನು ಪಾಟಲೀಪುತ್ರದಲ್ಲಿ ಕಳೆದಂತೆ ಕಂಡುಬರುತ್ತದೆ. ಅದರ ನಂತರದ ವರ್ಷ ಶಾಂತಿಯುತವಾಗಿ ಸಾಗಿತು. ಅವನ ರಾಣಿ, ದೇವಿ ಚೊಚ್ಚಲ ಮಗುವಿನ ತಾಯಿಯಾಗುವುದರಲ್ಲಿದ್ದಳು. ಇದೇ ಸುಮಾರಿಗೆ , ಬಿಂದುಸಾರನು , ಕಾಯಿಲೆ ಬಿದ್ದು ಮರಣ ಶಯ್ಯೆಯಲ್ಲಿದ್ದನು. ಬಿಂದುಸಾರನು ಸುಶೀಮನ ಪರವಾಗಿದ್ದರೂ, ಸುಶೀಮನ ವೈರಿಯಾಗಿದ್ದ ರಾಧಾಗುಪ್ತನೆಂಬ ಮಂತ್ರಿಯ ನಾಯಕತ್ವದ ಮಂತ್ರಿಗಳ ಗುಂಪೊಂದು, ಅಶೋಕನಿಗೆ ಕರೆಕಳುಹಿಸಿ, ರಾಜನಾಗಲು ಆಹ್ವಾನಿಸಿತು. ಒಂದು ಬೌದ್ಧ ಕತೆಯ ಪ್ರಕಾರ, ಅಶೋಕನು ಕ್ರೋಧಾವೇಶದಲ್ಲಿ ಸುಶೀಮನ್ನೂ ಸೇರಿದಂತೆ ತನ್ನೆಲ್ಲಾ ಸೋದರರನ್ನು ಕೊಂದು, ಅವರ ಹೆಣಗಳನ್ನು ಪಾಟಲೀಪುತ್ರದ ಬಾವಿಯೊಂದರಲ್ಲಿ ಬಿಸುಟನು. ಈಗಾಗಲೇ ಬಿಂದುಸಾರನು ಸ್ವರ್ಗವಾಸಿಯಾಗಿದ್ದನೋ ಎಂಬುದು ಸ್ಪಷ್ಟವಾಗಿಲ್ಲ. ಅಶೋಕನ ಜೀವನದ ಈ ಘಟ್ಟದಲ್ಲಿ ಅನೇಕರು ಅವನನ್ನು “ಚಂಡ ಅಶೋಕ” ಅರ್ಥಾತ್ ಹೃದಯಹೀನ ಕೊಲೆಗಡುಕ ಎಂದು ಕರೆದರು. ಈ ಕಾಲದ ಅಶೋಕನ ಕ್ರೌರ್ಯವನ್ನು ಬೌದ್ಧ ಕೃತಿಗಳಾದ ದೀಪವಂಶ ಮತ್ತು ಮಹಾವಂಶ ವರ್ಣಿಸಿವೆ. ಇವುಗಳಲ್ಲಿ ಬಹುತೇಕ ಕತೆಗಳು ನಂಬಲನರ್ಹವಾಗಿದ್ದು, ಅಶೋಕ ಮುಂದೆ ಬೌದ್ಧಧರ್ಮವನ್ನು ಸ್ವೀಕಾರ ಮಾಡಿದ ಮೇಲೆ ಅವನಲ್ಲುಂಟಾದ ಪರಿವರ್ತನೆಯ ಮಹತ್ತನ್ನು ಹೆಚ್ಚುಮಾಡಲು ಹೇಳಿರುವಂತಿದೆ. ಪಟ್ಟಕ್ಕೇರಿದ ಅಶೋಕ ಮುಂದಿನ ಎಂಟುವರ್ಷ ತನ್ನ ರಾಜ್ಯವನ್ನು ವಿಸ್ತರಿಸಿದ; ಅದು ಪೂರ್ವದಲ್ಲಿ ಇಂದಿನ ಬಾಂಗ್ಲಾದೇಶ, ಅಸ್ಸಾಮ್ ವರೆಗೆ, ಪಶ್ಚಿಮದಲ್ಲಿ ಇಂದಿನ ಇರಾನ್ ಮತ್ತು ಅಫಘಾನಿಸ್ತಾನದವರೆಗೂ, ಉತ್ತರದಲ್ಲಿ ಪಾಮೀರ್ ಗ್ರಂಥಿಯವರೆಗೂ ಮತ್ತು ದಕ್ಷಿಣದಲ್ಲಿ ದಕ್ಷಿಣಭಾರತದ ಭೂಖಂಡದವರೆಗೂ ಹಬ್ಬಿತ್ತು. ಈಗ ಅಶೋಕನಿಗೆ ಚಕ್ರವರ್ತಿ ಎಂಬ ಬಿರುದು ಪ್ರಾಪ್ತವಾಗಿತ್ತು. ಇದೇ ಸುಮಾರಿಗೆ, ಅವನ ಬೌದ್ಧ ರಾಣಿ, ದೇವಿಗೆ ಎರಡು ಮಕ್ಕಳಾಗಿದ್ದರು. ಮಹೀಂದ್ರ ಎಂಬ ಮಗ ಮತ್ತು ಸಂಘಮಿತ್ರ ಎಂಬ ಮಗಳು. ಕಳಿಂಗ ಯುದ್ದ ಕ್ರಿ.ಪೂ.261 ಕಳಿಂಗ ಯುದ್ಧ ಕ್ರಿ.ಪೂ.261 ರಲ್ಲಿ ಕಳಿಂಗ ರಾಜ್ಯದ (ಈಗಿನ ಒರಿಸ್ಸಾ) ಧೌಲಿ ಪ್ರದೇಶದ ಬಳಿ ದಯಾ ನದಿಯ ತೀರದಲ್ಲಿ ನಡೆಯಿತು ಆರಂಭಕ್ಕೆ ಕಾರಣ ಏನೆಂದು ನಿಶ್ಚಿತವಾಗಿ ತಿಳಿದಿಲ್ಲ . ಅಶೋಕನ ಸೊದರರಲ್ಲೊಬ್ಬ - ಬಹುಶಃ ಸುಶೀಮನ ಬೆಂಬಲಿಗನೂ - ಕಳಿಂಗಕ್ಕೆ ಓಡಿ ಹೋಗಿ ಆಶ್ರಯ ಪಡೆದಿರಬಹುದು ಅಥವಾ ಅಶೋಕನ ಹಿರಿಯರ ಕಾಲದಿಂದಲೂ ಸ್ವತಂತ್ರವಾಗಿಯೇ ಉಳಿದಿತ್ತು ಅದರ ರಾಜ ಶುದ್ಧಧರ್ಮ. ಇದರಿಂದ ಕಳಿಂಗದ ಮೇಲೆ ಆಕ್ರಮಣ ಮಾಡಲು ಅವನ ಮಂತ್ರಿಗಳು ಸಲಹೆ ನೀಡಿದರು . ಅದರಂತೆ,ಅಶೋಕನು ಶರಣಾಗಲು ಕಳಿಂಗದ ರಾಜಮನೆತನಕ್ಕೆ ಆದೇಶ ನೀಡಿದನು. ಅವರು ಈ ಆದೇಶವನ್ನು ಉಲ್ಲಂಘಿಸಿದಾಗ , ಕಳಿಂಗವನ್ನು ಮಣಿಸಲು ಅಶೋಕನು ತನ್ನ ಒಬ್ಬ ಸೇನಾಪತಿಯನ್ನು ಕಳಿಂಗಕ್ಕೆ ಕಳಿಸಿದನು. ಆದರೆ, ಕಳಿಂಗದ ಚಾಣಾಕ್ಷ ದಂಡನಾಯಕನಿಂದ, ಅಶೋಕನ ಸೇನೆ, ಅದರ ನಾಯಕನೊಂದಿಗೆ, ಧೂಳೀಪಟವಾಯಿತು. ಈ ಸೋಲಿನಿಂದ ತಬ್ಬಿಬ್ಬಾದ ಅಶೋಕ, ಅಲ್ಲಿಯವರೆಗಿನ ಭಾರತದ ಇತಿಹಾಸದಲ್ಲೇ ಅತಿದೊಡ್ಡದಾಗಿದ್ದ ದಂಡಿನೊಡನೆ ಕಳಿಂಗದ ಮೇಲೆ ಏರಿ ಹೋದ. ಕಳಿಂಗವು ಭಾರೀ ಪ್ರತಿರೋಧವನ್ನೊಡ್ಡಿತು. ಆದರೆ ಅಶೋಕನ ಬಲಿಷ್ಠ ಸೈನ್ಯ, ಉತ್ತಮ ಆಯುಧಗಳು ಮತ್ತು ಸೈನಿಕರ ಮತ್ತು ಸೇನಾಪತಿಗಳ ಅನುಭವಗಳಿಗೆ ಅವರು ಸಾಟಿಯಾಗಲಿಲ್ಲ. ಇಡೀ ಕಳಿಂಗವನ್ನು ಲೂಟಿ ಮಾಡಿ ನಾಶ ಮಾಡಲಾಯಿತು ಅಶೋಕನ ನಂತರದ ಶಿಲಾಶಾಸನಗಳು ತಿಳಿಸುವಂತೆ ಕಳಿಂಗದ ಕಡೆ ಒಂದು ಲಕ್ಷ ಜನರು ಮತ್ತು ಅಶೋಕನ ಸೈನ್ಯದ ಹತ್ತು ಸಾವಿರ ಜನರು ಕೊಲ್ಲಲ್ಪಟ್ಟರು. ಸಾವಿರಾರು ಜನ ಸ್ತ್ರೀಪುರುಷರನ್ನು ಗಡಿಪಾರು ಮಾಡ ಲಾಯಿತು . ಬೌದ್ಧಧರ್ಮಕ್ಕೆ ಶರಣು ಮುಖ್ಯ ಲೇಖನ: ಭಾರತದಲ್ಲಿ ಬೌದ್ಧಧರ್ಮ ದಂತಕತೆಯ ಪ್ರಕಾರ, ಯುದ್ಧದ ನಂತರ ಒಂದುದಿನ ಅಶೋಕನು ನಗರಪ್ರದಕ್ಷಿಣೆಗೆಂದು ಹೊರಟು ಎಲ್ಲೆಲ್ಲೂ ಸುಟ್ಟುಹೋದ ಮನೆಗಳನ್ನು ಚಲ್ಲಾಪಿಲ್ಲಿಯಾಗಿ ಬಿದ್ದ ಹೆಣಗಳನ್ನು ನೋಡಿದನು. ಇದರಿಂದ ಅವನ ಮನಸ್ಸು ಅಸ್ವಸ್ಥವಾಯಿತು. "ನಾನೇನು ಮಾಡಿ ಬಿಟ್ಟೆ ?" ಎಂದು ಉದ್ಗಾರ ತೆಗೆದು ಕಣ್ಣೀರಿಟ್ಟನು. ಗೆಲುವಿನಲ್ಲಿನ ಈ ಕ್ರೌರ್ಯವು ಅವನ್ನನ್ನು ಬೌದ್ಧಧರ್ಮವನ್ನು ಸ್ವೀಕರಿಸುವಂತೆ ಮಾಡಿತು. ಅವನು ತನ್ನ ಅಧಿಕಾರವನ್ನೆಲ್ಲ ಈ ಹೊಸಧರ್ಮವನ್ನು ರೋಂ, ಇಜಿಪ್ಟ್ ಗಳಷ್ಟು ದೂರ ದೂರಕ್ಕೆ ಪ್ರಚಾರಮಾಡಲು ಬಳಸಿದನು. ದಂತಕಥೆಗಳ ಪ್ರಕಾರ ಅಶೋಕನು ಬೌದ್ಧಧರ್ಮಕ್ಕೆ ಒಲಿಯಲು ಇನ್ನೊಂದು ಕಾರಣವಿತ್ತು. ಅಶೋಕನು ಗಲ್ಲಿಗೇರಿಸಿದ ಸೋದರರಲ್ಲೊಬ್ಬನ್ನನ್ನು ಮದುವೆಯಾಗಿದ್ದ ಮೌರ್ಯ ರಾಜಕುಮಾರಿಯೊಬ್ಬಳು ತನ್ನ ಗರ್ಭಸ್ಥ ಶಿಶುವಿನ ಜೀವವನ್ನು ಉಳಿಸುವದಕ್ಕೋಸ್ಕರ ಒಬ್ಬ ದಾಸಿಯೊಂದಿಗೆ ತನ್ನ ಅರಮನೆಯನ್ನು ಬಿಟ್ಟು ಓಡಿ ಹೋದಳು. ಸಾಕಷ್ಟು ದೂರ ಪ್ರಯಾಣದ ನಂತರ ಗರ್ಭಿಣಿ ರಾಜಕುಮಾರಿಯು ಅರಣ್ಯದಲ್ಲಿ ಒಂದು ಮರದ ಕೆಳಗೆ ಕುಸಿದಳು. ದಾಸಿಯು ಸಹಾಯಕ್ಕೆ ವೈದ್ಯನನ್ನೋ ಪೂಜಾರಿಯನ್ನೋ ಕರೆತರಲು ಹತ್ತಿರದ ಒಂದು ಆಶ್ರಮಕ್ಕೆ ಹೋದಳು. ಅಷ್ಟರಲ್ಲಿ ಆ ಮರದ ಕೆಳಗೆ ರಾಜಕುಮಾರಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಆಶ್ರಮದ ಬ್ರಾಹ್ಮಣರು ರಾಜಕುಮಾರನನ್ನು ಬೆಳೆಸಿ ವಿದ್ಯೆಯನ್ನು ಕಲಿಸಿದರು. ನಂತರ ಅವನಿಗೆ ಹದಿಮೂರು ವರ್ಷಗಳಾದಾಗ ಅಶೋಕನ ಕಣ್ಣಿಗೆ ಬಿದ್ದನು. ಅಷ್ಟು ಎಳೆಯ ಬಾಲಕನು ಮುನಿಯ ವೇಷದಲ್ಲಿರುವದನ್ನು ನೋಡಿ ಅಶೋಕನಿಗೆ ಆಶ್ಚರ್ಯವಾಯಿತು. ತನ್ನ ಪರಿಚಯವನ್ನು ಆ ಬಾಲಕನು ತಿಳಿಸಿದಾಗ ಅಶೋಕನಿಗೆ ಅಪರಾಧಭಾವನೆ ಉಂಟಾಗಿ, ವಾತ್ಸಲ್ಲ್ಯವುಕ್ಕಿ ಆ ಬಾಲಕನನ್ನೂ ಅವನ ತಾಯಿಯನ್ನೂ ಅರಮನೆಗೆ ತೆಗೆದುಕೊಂಡು ಹೋದನು. ಬೌದ್ಧಳಾದ ರಾಣಿ ದೇವಿ, ಇದೇ ವೇಳೆಯಲ್ಲಿ, ತನ್ನ ಮಕ್ಕಳನ್ನು ಬೌದ್ಧಧರ್ಮದವರನ್ನಾಗಿ ಯೇ ಬೆಳೆಸುತ್ತಿದ್ದಳು. ಕಳಿಂಗದಲ್ಲಿ ಅಶೋಕನ ಕ್ರೌರ್ಯವನ್ನು ನೋಡಿ ಆಕೆ ಬಹುಶಃ ಅವನನ್ನು ತೊರೆದಳು. ಇದರಿಂದ ದುಃಖಗೊಂಡ ಅಶೋಕನನ್ನು ಅವನ ಸೋದರನ ಮಗ (ಆಶ್ರಮದಲ್ಲಿ ಬೆಳೆದು,ರಾಜಪುತ್ರ ಎನ್ನುವುದಕ್ಕಿಂತ ಸನ್ಯಾಸಿಯೋ ಎಂಬಂತಿದ್ದ )ಅವನನ್ನು ಸಮಾಧಾನಿಸಿ, ಬೌದ್ಧ ಧರ್ಮವನ್ನು ಸೇರುವಂತೆಯೂ, ಯುದ್ಧದಿಂದ ಹಿಂದೆ ಸರಿಯುವಂತೆಯೂ ಪ್ರೇರೇಪಿಸಿದ. ರಾಣಿ ದೇವಿಯ ಮಕ್ಕಳಾದ ರಾಜಕುಮಾರ ಮಹೀಂದ್ರ ಮತ್ತು ಕುಮಾರಿ ಸಂಘಮಿತ್ರರು, ರಕ್ತಪಾತ ಮತ್ತು ಹಿಂಸೆಯನ್ನು ದ್ವೇಷಿಸುತ್ತಿದ್ದರೂ,ರಾಜವಂಶೀಯರಾದ ಕಾರಣ ,ಅವು ತಮ್ಮ ಜೀವನದ ಅನಿವಾರ್ಯ ಅಂಗ ಎಂದು ಅರಿತಿದ್ದರು. ಹಾಗಾಗಿ ತಾವು ಬುದ್ಧ ಭಿಕ್ಷುಗಳಾಗುತ್ತೇವೆ ಎಂಬ ಅವರ ಕೋರಿಕೆಯನ್ನು ಅಶೋಕ ಇಷ್ಟವಿಲ್ಲದಿದ್ದರೂ ಒಪ್ಪಿದನು. ಈ ಅಣ್ಣ ತಂಗಿಯರು ಸಿಲೋನಿನಲ್ಲಿ (ಈಗಿನ ಶ್ರೀಲಂಕಾ)ದಲ್ಲಿ ಬೌದ್ಧಧರ್ಮವನ್ನು ಸ್ಥಾಪಿಸಿದರು. ಆಗಿನಿಂದ, 'ಮಹಾಕ್ರೂರಿ' (ಚಂಡಾಶೋಕ) ಎಂದು ಕುಖ್ಯಾತಿ ಗಳಿಸಿದ್ದ ಅಶೋಕ 'ಧರ್ಮಿಷ್ಠ' (ಧರ್ಮಾಶೋಕ) ಎಂಬ ಹೆಸರು ಗಳಿಸಲಾರಂಭಿಸಿದ. ಅವನು ಬೌದ್ಧಧರ್ಮದ ವಿಭಜ್ಜವಾದವನ್ನು ಪ್ರಚುರಪಡಿಸಿದನು. ಬೌದ್ಧಧರ್ಮ ಪ್ರಸಾರ ಅದನ್ನು ತನ್ನ ದೇಶದಲ್ಲೂ ವಿದೇಶಗಳಲ್ಲೂ ಕ್ರಿ.ಪೂ. ೨೫೦ರ ಸುಮಾರಿಗೆ ಪ್ರಚಾರ ಮಾಡಿದನು. ಬೌದ್ಧ ನೀತಿಯನ್ನು ಅಭಿವೃದ್ಧಿಪಡಿಸುವಲ್ಲಿ ಮೊದಲ ಗಂಭೀರ ಪ್ರಯತ್ನವನ್ನು ಮಾಡಿದ ಕೀರ್ತಿಯು ಚಕ್ರವರ್ತಿ ಅಶೋಕನಿಗೆ ನಿಸ್ಸಂಶಯವಾಗಿ ಸಲ್ಲಬೇಕು. ಅಶೋಕ ಚಕ್ರವರ್ತಿಯು ಬೌದ್ಧಧರ್ಮದ ಅನುಯಾಯಿಗಳಿಗಾಗಿ ಸಾವಿರಾರು ಸ್ತೂಪಗಳನ್ನೂ, ವಿಹಾರಗಳನ್ನೂ ಕಟ್ಟಿಸಿದನು. ಜಗತ್ಪ್ರಸಿದ್ಧ ಬಿಹಾರದ ಸಾಂಚಿಯ ಸ್ತೂಪದ ಮೊದಲನೆಯ ಸ್ತೂಪವನ್ನು ಕಟ್ಟಿಸಿದವನೂ ಅವನೇ. ತನ್ನ ರಾಜ್ಯಭಾರದ ಉಳಿದ ಅವಧಿಯಲ್ಲಿ ಅಹಿಂಸೆಯನ್ನು ಅಧಿಕೃತ ಧೋರಣೆಯನ್ನಾಗಿ ಮಾಡಿದನು. ಅನಾವಶ್ಯಕ ಪ್ರಾಣಿವಧೆ ಮತ್ತು ಹಿಂಸೆಯನ್ನು ತಕ್ಷಣದಿಂದಲೇ ರದ್ದು ಮಾಡಿದನು.. ಮೃಗಯಾ ವಿನೋದವನ್ನು ಮತ್ತು ಪ್ರಾಣಿಗಳಿಗೆ ಬರೆ ಹಾಕುವದನ್ನು ನಿಷೇಧಿಸಿ ವನ್ಯಜೀವಿಗಳನ್ನು ರಕ್ಷಿಸಿದನು. ಆಹಾರದ ಮಟ್ಟಿಗೆ ಸೀಮಿತವಾದ ಬೇಟೆಯಾಡುವುದನ್ನು ಅವನು ಒಪ್ಪಿದರೂ , ಶಾಖಾಹಾರದ ಪರಿಕಲ್ಪನೆಯನ್ನೂ ಪ್ರೋತ್ಸಾಹಿಸಿದನು. ಪ್ರಯಾಣಿಕರಿಗೆ, ತೀರ್ಥಯಾತ್ರಿಗಳಿಗೆಂದು, ರಾಜ್ಯಾದ್ಯಂತ ವಿಶಾಲವಾದ ಉಚಿತ ತಂಗುದಾಣಗಳನ್ನು ಕಟ್ಟಿಸಿದನು. ಸೆರೆಯಾಳುಗಳ ಮೇಲೂ ದಯೆ ತೋರಿ, ವರ್ಷದಲ್ಲಿ ಒಂದು ದಿನ ಅವರಿಗೆ ಹೊರಹೋಗುವ ಅವಕಾಶ ಕೊಟ್ಟನು. ಅವನು ಸಾಮಾನ್ಯ ಜನರ ಆಶೋತ್ತರಗಳನ್ನು ಹೆಚ್ಚಿಸಲು ಅಧ್ಯಯನಕ್ಕಾಗಿ ವಿಶ್ವವಿದ್ಯಾನಿಲಯಗಳನ್ನೂ ವ್ಯಾಪಾರ ಮತ್ತು ಕೃಷಿ ಉದ್ದೇಶಗಳಿಗಾಗಿ ಜಲಸಂಚಾರ ಮತ್ತು ನೀರಾವರಿ ವ್ಯವಸ್ಥೆಗಳನ್ನೂ ಏರ್ಪಡಿಸಿದನು. ಅವನು ತನ್ನ ಪ್ರಜೆಗಳನ್ನು ಅವರ ರಾಜಕೀಯ, ಧರ್ಮ ,ಜಾತಿಗಳೇನೇ ಇದ್ದರೂ ಸಮಾನವಾಗಿ ಪರಿಗಣಿಸಿದನು. ಸುಲಭವಾಗಿ ವಶಪಡಿಸಿಕೊಳ್ಳಬಹುದಾಗಿದ್ದ ತನ್ನ ಸುತ್ತಲಿನ ದುರ್ಬಲ ರಾಜ್ಯಗಳನ್ನು ಗೌರವಾನ್ವಿತ ಮಿತ್ರದೇಶಗಳನ್ನಾಗಿ ಮಾಡಿಕೊಂಡನು. ಈ ಎಲ್ಲದರಲ್ಲೂ ಅಶೋಕನು ಆಧುನಿಕ ಕಾಲದ ವಿಶ್ವನಾಯಕರನ್ನು ಮೀರಿಸಿದನು. ಬೌದ್ಧಧರ್ಮದ ಹೆಸರುನಲ್ಲಿ ಸಮಾಜಸೇವೆ ಮನುಷ್ಯರಿಗೂ ಪ್ರಾಣಿಗಳಿಗೂ ಆಸ್ಪತ್ರೆಗಳನ್ನು ಕಟ್ಟಿಸಿ, ಭಾರತದಾದ್ಯಂತ ಮುಖ್ಯರಸ್ತೆಗಳನ್ನು ದುರಸ್ತಿಮಾಡಿಸಿ, ಅಶೋಕ ಮನ್ನಣೆಯನ್ನು ಗಳಿಸಿದ್ದಾನೆ. ಧರ್ಮಾಶೋಕನು ಧರ್ಮ (ಪಾಲಿ ಭಾಷೆಯಲ್ಲಿ ಧಮ್ಮ) ವನ್ನು ಈ ಮುಖ್ಯ ಮೌಲ್ಯಗಳ ಮುಖಾಂತರ ವ್ಯಾಖ್ಯಾನಿಸಿದ : ಅಹಿಂಸೆ, ಪರಮತ ಸಹಿಷ್ಣುತೆ, ಮಾತಾಪಿತರಿಗೆ ವಿಧೇಯತೆ, ಬ್ರಾಹ್ಮಣರು ಮತ್ತಿತರ ಧಾರ್ಮಿಕ ಗುರುಗಳು; ಆಚಾರ್ಯರುಗಳಲ್ಲಿ ಗೌರವ, ಮಿತ್ರರಿಗೆ ಔದಾರ್ಯ, ಸೇವಕವರ್ಗದವರೊಂದಿಗೆ ಮಾನವೀಯ ನಡವಳಿಕೆ, ಮತ್ತು ಎಲ್ಲರೊಂದಿಗೂ ಉದಾರಪ್ರವೃತ್ತಿ. ಈ ಮೌಲ್ಯಗಳು ಯಾವುದೇ ಧಾರ್ಮಿಕ ಪಂಥಗಳಿಗೂ ಆಕ್ಷೇಪಾರ್ಹವಾಗಿರಲಿಲ್ಲ. ಕೆಲವು ಟೀಕಾಕಾರರು ಅಶೋಕನಿಗೆ ಇನ್ನೂ ಯುದ್ಧಗಳಾದೀತು ಎಂಬ ಹೆದರಿಕೆಯಿತ್ತು ಎಂದು ಆಭಿಪ್ರಾಯ ಪಟ್ಟರೂ, ಅವನ ಅಕ್ಕಪಕ್ಕದ ರಾಜ್ಯಗಳು ಯಾವುದೂ, ಸೆಲ್ಯೂಸಿಡ್ ಸಾಮ್ರಾಜ್ಯ ಮತ್ತು ಡಿಯೋಡೋಟಸ್ ಸ್ಥಾಪಿಸಿದ ಗ್ರೀಕೋ-ಬ್ಯಾಕ್ಟ್ರಿಡ್ಗಳನ್ನೂ ಹಿಡಿದು,ಅಶೋಕನ ಸಾಮರ್ಥ್ಯಕ್ಕೆ ಸರಿಸಾಟಿಯಾಗಿರಲಿಲ್ಲ. ಸೆಲ್ಯೂಸಿಡ್ ಸಾಮ್ರಾಜ್ಯದ ಮೊದಲನೆಯ ಆಂಟಿಯೋಕಸ್ ಸೋಟರ್, ಮತ್ತು ಅವನ ಉತ್ತರಾಧಿಕಾರಿ ಎರಡನೆಯ ಆಂಟಿಯೋಕಸ್ ಥಿಯೋಸ್ ,ಹಾಗೂ ಗ್ರೀಕೋ-ಬ್ಯಾಕ್ಟ್ರಿಡ್ ಸಾಮ್ರಾಜ್ಯದ ಒಂದನೆಯ ಡಿಯೋಡೋಟಸ್ ,ಮತ್ತು ಅವನ ಮಗ ಎರಡನೆಯ ಡಿಯೋಡೋಟಸ್, ಇವರೆಲ್ಲರಿಗೂ ಅಶೋಕ ಸಮಕಾಲೀನನಾಗಿದ್ದನು. ಅವನ ಶಾಸನಗಳನ್ನು, ಮತ್ತಿತರ ದಾಖಲೆಗಳನ್ನು ಆಳವಾಗಿ ಪರಿಶೀಲಿಸಿದರೆ, ಅವನಿಗೆ ಹೆಲೆನೀಯ ಜಗತ್ತು ತಿಳಿದಿತ್ತಷ್ಟೇ ಅಲ್ಲ, ಅವನಿಗೆ ಅದರ ಬಗ್ಯೆ ಯಾವುದೇ ಭಯಭೀತಿಯಿರಲಿಲ್ಲ ಎಂದೂ ತಿಳಿಯುತ್ತದೆ. *ಸೌಹಾರ್ದ ಸಂಬಂಧಗಳನ್ನು ಪ್ರಸ್ತಾಪಿಸುವ ಅವನ ಶಾಸನಗಳಲ್ಲಿ , ಸೆಲ್ಯೂಸಿಡ್ ಸಾಮ್ರಾಜ್ಯದ ಆಂಟಿಯೋಕಸ್ ಮತ್ತು ಈಜಿಪ್ಟಿನ ಮೂರನೆಯ ಟಾಲೆಮಿಯ ಉಲ್ಲೇಖವಿದೆ. ಆದರೆ ಅಶೋಕನ ಪಿತಾಮಹ, ಚಂದ್ರಗುಪ್ತ ಮೌರ್ಯನು ಸೆಲ್ಯೂಸಿಡ್ ಸಾಮ್ರಾಜ್ಯದ ಸ್ಥಾಪಕ ಸೆಲ್ಯೂಕಸ್ ನಿಕೇಟರನನ್ನು ಯುದ್ಧದಲ್ಲಿ ಸೋಲಿಸಿದಾಗಿನ ಕಾಲದಿಂದಲೇ , ಮೌರ್ಯ ಸಾಮ್ರಾಜ್ಯದ ಕೀರ್ತಿ ಎಲ್ಲೆಡೆ ಹಬ್ಬಿತ್ತು ಎಂಬುದನ್ನು ಗಮನದಲ್ಲಿಡಬೇಕು. ಅಶೋಕ ಸ್ಥಂಭ ಸಾರನಾಥದಲ್ಲಿರುವ ಅಶೋಕ ಸ್ಥಂಭ ಅವನ ಅವಶೇಷಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು. sandstoneನಲ್ಲಿ ಕೆತ್ತಲಾಗಿರುವ ಈ ಸ್ಥಂಭವು ಕ್ರಿ.ಪೂ.ಮೂರನೆಯ ಶತಮಾನದಲ್ಲಿ ಸಾಮ್ರಾಟನ ಸಾರನಾಥದ ಭೇಟಿಯನ್ನು ದಾಖಲಿಸುತ್ತದೆ. ಈ ಸ್ಥಂಭದ ಮೇಲಿರುವ ನಾಲ್ಕು ಸಿಂಹಗಳು ಪರಸ್ಪರ ಬೆನ್ನು ಹಾಕಿ ನಿಂತಿರುವ ಪ್ರತಿಮೆಯನ್ನು ಆಧುನಿಕ ಭಾರತದ ರಾಜ ಚಿಹ್ನೆಯಾಗಿ ಸ್ವೀಕರಿಸಲಾಗಿದೆ. ಸಿಂಹವು ಅಶೋಕನ ಚಕ್ರಾಧಿಪತ್ಯ ಹಾಗೂ ಬೌದ್ಧ ಧರ್ಮದೊಡನೆ ಅವನ ಸಂಬಂಧಗಳನ್ನು ಸಂಕೇತಿಸುತ್ತದೆ. ಇಲ್ಲಿಯವರೆಗೆ ಮೌರ್ಯ ಸಾಮ್ರಾಜ್ಯದ ಬಗ್ಗೆ ಇತಿಹಾಸಕಾರರಿಗೆ ತಿಳಿದಿರುವ ತಥ್ಯಗಳು , ಬಹುತೇಕ , ಈ ಹಳೆಯ ಅವಶೇಷಗಳ ಅಭ್ಯಾಸದಿಂದ ದೊರಕಿದೆ. ಅಶೋಕನ ಶಾಸನಗಳಲ್ಲಿ ಅವನವೇ ಮಾತುಗಳು ಹೀಗಿವೆ. "ಎಲ್ಲ ಜನರೂ ನನ್ನ ಮಕ್ಕಳು. ನಾನು ಅವರಿಗೆ ತಂದೆಯ ಹಾಗೆ. ಪ್ರತಿ ತಂದೆಯೂ ತನ್ನ ಮಕ್ಕಳ ಅಭಿವೃದ್ಧಿಯನ್ನೂ ಸಂತೋಷವನ್ನೂ ಬಯಸುವ ಹಾಗೆ ನಾನು ಎಲ್ಲ ಜನರೂ ಸದಾ ಸುಖಿಯಾಗಿರಬೇಕೆಂದು ಬಯಸುತ್ತೇನೆ. " ಎಡ್‍ವರ್ಡ್ ಡಿಕ್ರೂಜನು ಅಶೋಕನ ಧರ್ಮವನ್ನು " ಒಂದು ಹೊಸ ಸಾಮ್ರಾಜ್ಯದ ಏಕತೆಯ ಸಂಕೇತವಾಗಿಯೂ ಸಾಮ್ರಾಜ್ಯದ ವೈವಿಧ್ಯಮಯ ಬೇರೆ ಬೇರೆ ಘಟಕಗಳನ್ನು ಒಂದುಗೂಡಿಸುವ ಶಕ್ತಿಯಾಗಿಯೂ " ಅರ್ಥೈಸುತ್ತಾನೆ.ರಾಕೇಶ್ ವಿವಾದ ಅಶೋಕನ ನಡತೆಯಲ್ಲಿ ಉಂಟಾಯಿತೆಂದು ನಂಬಲಾದ "ಹಠಾತ್ ಬದಲಾವಣೆ" ವಿವಾದಾತ್ಮಕವಾಗಿದೆ. ಬೌದ್ಧ ಧರ್ಮಕ್ಕೆ ಮತಾಂತರದ ನಂತರ ಅಶೋಕನ ಚಾರಿತ್ರ್ಯ ಕೆಟ್ಟತನದಿಂದ ಒಳ್ಳೆಯತನಕ್ಕೆ ತಿರುಗಿತು ಎಂದು ಪ್ರತಿಪಾದಿಸಬೇಕೆಂದು ಆ ಕಾಲದ ಬೌದ್ಧರು ಬಯಸಿದ್ದರು ,ಆದ್ದರಿಂದಲೇ ಅವನ ಮನಃಪರಿವರ್ತನೆಯನ್ನು ಅವರು ಅತಿಶಯವಾಗಿ ಬಣ್ಣಿಸಿದ್ದಾರೆ ಎಂದೂ ಕೆಲವೇಳೆ ನಂಬಲಾಗಿದೆ. ಅಶೋಕನ ಈ ಬದಲಾವಣೆ ಬರಿಯ ತನ್ನ ಪಟ್ಟವನ್ನು ಭದ್ರಪಡಿಸಿಕೊಳ್ಳುವ ನೀತಿಯಷ್ಟೇ ಆಗಿತ್ತು. ರಕ್ತಪಾತದ ಯುದ್ಧಗಳಿಂದ , ವಶಮಾಡಿಕೊಂಡಿದ್ದ ಪ್ರದೇಶಗಳಿಗೆ ,ಸ್ವಾತಂತ್ರ್ಯ ಕೊಡುವ ನಿಟ್ಟಿನಲ್ಲಿ ಯಾವ ಹೆಜ್ಜೆಯನ್ನೂ ಇಡದ ಅವನು, ಈ ರೀತಿಯಿಂದ ಅವರನ್ನು ಸಂತುಷ್ಟವಾಗಿ ಇರಬಯಸಿದ್ದನು ಎಂಬ ವಾದವೂ ಇದೆ. ಐತಿಹಾಸಿಕ ಆಕರಗಳು ಮುಖ್ಯ ಲೇಖನ : ಅಶೋಕನ ಶಾಸನಗಳು ಅಶೋಕನ ಜೀವನ ಮತ್ತು ರಾಜ್ಯಭಾರದ ಬಗ್ಯೆ ಕೆಲವು ಬೌದ್ಧ ಆಕರಗಳು ಬೆಳಕು ಚೆಲ್ಲುತ್ತವೆ. ಮುಖ್ಯವಾಗಿ, ಅಶೋಕನ ಬಗ್ಯೆ ಸದ್ಯ ಗೊತ್ತಿರುವ ಬಹುತೇಕ ವಿಷಯಗಳು ಸಂಸ್ಕೃತದಲ್ಲಿಯ ಅಶೋಕ ಅವದಾನ (ಅಶೋಕನ ಕಥೆ) ಮತ್ತು ಶ್ರೀಲಂಕಾ ದಲ್ಲಿಯ ಪಾಳಿ ಭಾಷೆಯ ದೀಪವಂಶ ಮತ್ತು ಮಹಾವಂಶ ಎಂಬ ಗ್ರಂಥಗಳಲ್ಲಿ ದೊರಕಿವೆ. ಅಶೋಕನ ಶಾಸನಗಳು ಕೂಡಾ ಅವನ ವಿಷಯವಾಗಿ ಮಾಹಿತಿ ನೀಡುತ್ತವೆ. (ಬೌದ್ಧಗ್ರಂಥಗಳಲ್ಲಿ ಉಲ್ಲೇಖಿಸಿರುವ ಅಶೋಕ, ಮತ್ತು ಈ ಶಾಸನಗಳ ಕರ್ತೃ, ಒಬ್ಬನೇ ಎಂದು ಸಿದ್ಧವಾದದ್ದು, ಶಾಸನಗಳಲ್ಲಿ ಹೆಸರಿಸಿರುವ “ಪ್ರಿಯದರ್ಶಿ” ಎಂಬ ಹೆಸರು ಅಶೋಕನ ಬಿರುದುಗಳಲ್ಲೊಂದಾಗಿತ್ತು ಎಂಬ ವಿಚಾರ ಶೋಧನೆಯಲ್ಲಿ ದೊರಕಿದ ಮೌರ್ಯವಂಶಾವಳಿಗಳಿಂದ ತಿಳಿದುಬಂದಾಗ). ದೊರಕಿರುವ ಮಾಹಿತಿಗಳಿಂದ ಅಶೋಕನ ಜೀವನವನ್ನು ಮತ್ತು ಅವನ ಶಾಸನಗಳನ್ನು ಅರ್ಥೈಸುವುದರಲ್ಲಿ ಮಾಹಿತಿಗಳ ಬೌದ್ಧ ಮೂಲಗಳ ದಟ್ಟ ಪ್ರಭಾವ ಕಾಣಬರುತ್ತದೆ. ಮೊದಮೊದಲ ಇತಿಹಾಸಜ್ಞರು ,ಸಾಂಪ್ರದಾಯಿಕ ಮೂಲಗಳ ಆಧಾರದ ಮೇಲೆ, ಅಶೋಕನನ್ನು ಮೂಲತಃ ಮತಾಂತರಗೊಂಡ ಬೌದ್ಧ ರಾಜನೆಂದೂ, ನಂತರ ಬೌದ್ಧ ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದಕ್ಕೆ ಪ್ರೋತ್ಸಾಹ ಮತ್ತು ಬೆಂಬಲ ಕೊಟ್ಟವನೆಂದೂ ಪರಿಗಣಿಸುತ್ತಾರೆ. ಆದರೆ ನಂತರದ ತಜ್ಞರು ಈ ವಾದವನ್ನು ಪ್ರಶ್ಣಿಸುತ್ತಾರೆ. ಬೌದ್ಧ ಮೂಲಗಳಿಗೆ ನೇರವಾಗಿ ಸಂಬಂಧಿಸದ ಏಕಮೇವ ಮಾಕಿತಿ ಆಕರಗಳಾದ ಅಶೋಕನ ಶಾಸನಗಳು, ಧಮ್ಮದ (ಸಂಸ್ಕೃತ :ಧರ್ಮ) ಬಗ್ಯೆ ಅನೇಕ ಬಾರಿ ಉಲ್ಲೇಖಿಸಿದ್ದರೂ, ನೇರವಾಗಿ ಬೌದ್ಧ ಧರ್ಮವನ್ನು ಹೆಸರಿಸಿರುವುದು, ಕೆಲವೇ ಕೆಲವು ಕಡೆಗಳಲ್ಲಿ. ಇದರರ್ಥ, ಅಶೋಕನು, ಜೈನ,ಬ್ರಾಹ್ಮಣ, ಬೌದ್ಧ ಮತ್ತು ಅಜೀವಿಕ ಇತ್ಯಾದಿ ಆ ಕಾಲದ ಪ್ರಚಲಿತ ಧಾರ್ಮಿಕ ಪಂಥಗಳಿಗೆ ಅತೀತವಾಗಿ, ಈ ಎಲ್ಲವುಗಳ ಆಂಶಗಳು ಒಳಗೊಂಡಿದ್ದ, ಧನಾತ್ಮಕ ನೈತಿಕ ಶಕ್ತಿಯ ರೂಪದಲ್ಲಿ, ಹೊಸ ಧರ್ಮವೊಂದನ್ನು ಸ್ಥಾಪಿಸಬಯಸಿದ್ದ ಎಂದೂ ಕೆಲವರು ಅಭಿಪ್ರಾಯಪಡುತ್ತಾರೆ. ಅಂದಿನ ಸಂಕೀರ್ಣ ಧಾರ್ಮಿಕ ವಾತಾವರಣದಿಂದಾಗಿ, ಧಾರ್ಮಿಕ ಭಾವನೆಗಳನ್ನು ಕೆಣಕದಂತೆ, ಮುತ್ಸದ್ದಿತನದಿಂದ ರಾಜ್ಯಭಾರ ಮಾಡುವುದು, ಬಹುಶಃ, ಅಗತ್ಯವಾಗಿತ್ತು. ಆಧುನಿಕ ತಜ್ಞರೇ ಆಗಲೀ, ಅಥವಾ ಬೌದ್ಧ ಪರಿಕಲ್ಪನೆಯಲ್ಲಿ ಅಶೋಕನನ್ನು ಪರಿಗಣಿಸುವ ಸಾಂಪ್ರದಾಯಿಕ ತಜ್ಞರೇ ಆಗಲೀ, ಅಶೋಕನ ಆಳ್ವಿಕೆಯಲ್ಲಿ ಪರಮತ ಸಹಿಷ್ಣುತೆ ಎದ್ದು ಕಾಣುತ್ತಿತ್ತು ಎಂದು ಒಪ್ಪುತ್ತಾರೆ. ಅಶೋಕನ ಕೊನೆ ಮತ್ತು ಅವನ ಕೊಡುಗೆಗಳು ಅಶೋಕ ಸುಮಾರು ನಲವತ್ತು ವರ್ಷ ರಾಜ್ಯವಾಳಿದ. ಅವನ ನಂತರ ಮೌರ್ಯ ಸಾಮ್ರಾಜ್ಯ ಕೇವಲ ಐವತ್ತು ವರ್ಷದಲ್ಲಿ ಕೊನೆಗೊಂಡಿತು. ಅಶೋಕನಿಗೆ ಅನೇಕ ಹೆಂಡತಿಯರು, ಮಕ್ಕಳು ಇದ್ದರೂ, ಅವರ ಹೆಸರುಗಳು ಕಾಲಕ್ರಮೇಣ ಮರೆಯಾಗಿವೆ. ಮಹೇಂದ್ರ ಮತ್ತು ಸಂಘ ಮಿತ್ರ ಎಂಬ ಅವಳಿಗಳು ಅವನ ನಾಲ್ಕನೆಯ ರಾಣಿ ಉಜ್ಜಯಿನಿಯ ದೇವಿಯ ಮಕ್ಕಳು. ಬೌದ್ಧ ಧರ್ಮವನ್ನು ಆವರೆಗೆ ಗೊತ್ತಿದ್ದ , ಮತ್ತು ಗೊತ್ತಿರದಿದ್ದ, ನಾಡುಗಳಲ್ಲಿ ಪ್ರಚಾರ ಮಾಡುವ ಜವಾಬ್ದಾರಿಯನ್ನು ಅಶೋಕನು ಅವರ ಮೇಲೆ ಹೊರಿಸಿದ್ದನು. ಅವರಿಬ್ಬರೂ ಶ್ರೀಲಂಕಾಕ್ಕೆ ತೆರಳಿ, ಅಲ್ಲಿಯ ರಾಜ,ರಾಣಿ ಮತ್ತು ಪ್ರಜೆಗಳನ್ನು ಬೌದ್ಧರನ್ನಾಗಿ ಮಾಡುವುದರಲ್ಲಿ ಯಶಸ್ವಿಯಾದರು. ಅಶೋಕನ ನಂತರದ ರಾಜ್ಯಭಾರವನ್ನು ಅವರು ನೋಡಿಕೊಳ್ಳುವುದು ಅಸ್ವಾಭಾವಿಕವಾಗಿತ್ತು. ಅವನ ವೃದ್ದಾಪ್ಯದಲ್ಲಿ, ಕಿರಿಯ ಹೆಂಡತಿ ತಿಶ್ಯರಕ್ಷಾ ಎಂಬುವಳ , ಆಶ್ರಯಕ್ಕೆ ಬಂದ. ಆಕೆ ಯಾವುದೋ ಕೂಟನೀತಿಯಿಂದ ಕುರುಡಾಗಿ, ತಕ್ಷಶಿಲೆಯ ರಾಜ್ಯಪಾಲನಾಗಿದ್ದ ತನ್ನಮಗ ಕುಣಾಲನನ್ನು ಕೊಲ್ಲಲು ಸಂಚುಮಾಡಿದಳು. ಅವನನ್ನು ಮುಗಿಸಿಬಿಡಲು ನೇಮಕವಾಗಿದ್ದ ಭೃತ್ಯರು, ಅವನನ್ನು ಜೀವಸಹಿತ ಬಿಟ್ಟುಬಿಟ್ಟರು. ಪಾರಾದ ಕುಣಾಲನು, ತನ್ನ ಪ್ರಿಯ ಪತ್ನಿ ಕಾಂಚನಮಾಲಾಳೊಂದಿಗೆ, ಹಾಡುತ್ತಾ ಸಂಚರಿಸುತ್ತಿದ್ದನು. ಪಾಟಲೀಪುತ್ರದಲ್ಲಿ ಅವನ ಹಾಡನ್ನು ಕೇಳಿದ ಆಶೋಕ, ಕುಣಾಲನ ಈ ಅವಸ್ಥೆ ತನ್ನದೇ ಹಿಂದಿನ ಪಾಪಕರ್ಮಗಳ ಫಲ ಎಂದುಕೊಂಡು, ಅವನನ್ನು ತಿರುಗಿ ರಾಜಾಸ್ಥಾನದಲ್ಲಿ ಸ್ಥಾಪಿಸಿದ್ದಲ್ಲದೆ, ಅವನ ತಾಯಿ ತಿಶ್ಯರಕ್ಷಾಳಿಗೆ ಮರಣದಂಡನೆಯನ್ನು ವಿಧಿಸಿದನು. ಕುಣಾಲನ ನಂತರ , ಅವನ ಮಗ ಸಂಪ್ರತಿ ಪಟ್ಟಕ್ಕೆ ಬಂದರೂ, ಅಶೋಕನ ಮರಣದ ನಂತರ ಸಂಪ್ರತಿಯ ರಾಜ್ಯ ಹೆಚ್ಚು ಕಾಲ ಬಾಳಲಿಲ್ಲ. ಆಶೋಕನು ತನ್ನ ರಾಜ್ಯದ ದಾಖಲೆಗಳನ್ನು ಬಿಟ್ಟು ಹೋಗದೆಯೇ ಇದ್ದಿದ್ದರೆ, ಅವನ ರಾಜ್ಯವು ಕಾಲ ಕ್ರಮೇಣ ಇತಿಹಾಸದಲ್ಲಿ ಮರೆಯಾಗುತ್ತಿತ್ತೋ ಏನೋ. ಈ ಬುದ್ಧಿಶಾಲಿ ಮಹಾರಾಜ, ತನ್ನ ಬೋಧನೆಗಳನ್ನು ಮತ್ತು ಇತರ ಕಾರ್ಯಗಳ ದಾಖಲೆಗಳನ್ನು, ಅಧ್ಬುತವಾಗಿ ಕಡೆದ ಕಂಬಗಳ ಮೇಲೆ, ಬಂಡೆಗಳ ಮೇಲೆ ಕೊರೆಸಿದ್ದಾನೆ. ಪುರಾತನ ಹರಪ್ಪ ನಾಗರೀಕತೆಯ ನಂತರ, ಮೊಟ್ಟ ಮೊದಲ ಲಿಖಿತ ಭಾಷೆ ಅಶೋಕ ಬಿಟ್ಟುಹೋದ ದಾಖಲೆಗಳಲ್ಲಿ ಕಂಡುಬರುತ್ತದೆ. ಈ ಭಾಷೆ, ಸಂಸ್ಕೃತವಾಗಿರದೆ, ಪ್ರಾಕೃತವಾಗಿತ್ತು. ಅಶೋಕನ ಮರಣದ ಸುಮಾರು ಐವತ್ತು ವರ್ಷಗಳ ನಂತರ, ಕ್ರಿ.ಪೂ. 185ರಲ್ಲಿ, ಮೌರ್ಯವಂಶದ ಕೊನೆಯ ರಾಜ ಬೃಹದ್ರಥ, ತನ್ನದೇ ಸೇನೆಯಿಂದ ಗೌರವ ಸ್ವೀಕರಿಸುತ್ತಿರುವಾಗ, ಸೇನಾಪತಿ ಪುಷ್ಯಮಿತ್ರ ಶುಂಗನಿಂದ ಕಗ್ಗೊಲೆಗೀಡಾದ. ಈ ಪುಷ್ಯಮಿತ್ರನು ತನ್ನದೇ ಆದ ಶುಂಗ ಸಾಮ್ರಾಜ್ಯವನ್ನು (ಕ್ರಿ.ಪೂ 185 – 78) ಕಟ್ಟಿ , ಮೌರ್ಯ ಸಾಮ್ರಾಜ್ಯದ ಒಂದು ಸಣ್ಣ ಭಾಗವನ್ನು ಆಳಿದನು. ಅಶೋಕನ ಸಾಮ್ರಾಜ್ಯದಷ್ಟು ವಿಶಾಲವಾದ ಭೂಖಂಡವು , ಮತ್ತೆ ಒಂದೇ ರಾಜ್ಯದಡಿ ಬರಲು, ಸುಮಾರು ಎರಡು ಸಾವಿರ ವರ್ಷ, ಅಂದರೆ ಮೊಘಲರ ಅಕ್ಬರ್ ಮತ್ತು ಅವನ ಮರಿ ಮಗ ಔರಂಗಜೇಬರ ರಾಜ್ಯಭಾರದವರೆಗೆ, ಹಿಡಿಯಿತು. ಭಾರತ ಮುಂದೆ ಬ್ರಿಟಿಷರಿಂದ ಸ್ವತಂತ್ರವಾದಾಗ, ಅಶೋಕನ ಲಾಂಛನ , ಅವನ ಅನೇಕ ಕಂಭಗಳಲ್ಲಿ ಕಾಣ ಬರುವ, ಧರ್ಮಚಕ್ರವನ್ನು ಅಧಿಕೃತ ಚಿಹ್ನೆಯಾಗಿ ಆಯ್ಕೆಮಾಡಿತು. ಪ್ರಪಂಚದ ಇತಿಹಾಸದಲ್ಲಿ ನೂರು ಅತ್ಯಂತ ಪ್ರಭಾವೀ ವ್ಯಕ್ತಿತ್ವಗಳು' ಎಂಬ ಮೈಖೇಲ್ ಹಾರ್ಟ್ ತಯಾರು ಮಾಡಿದ ಪಟ್ಟಿಯಲ್ಲಿ ಅಶೋಕ ಐವತ್ತಮೂರನೆಯ ಸ್ಥಾನದಲ್ಲಿದ್ದಾನೆ. ಅಶೋಕನ ಜೀವನವನ್ನಾಧರಿಸಿದ “ಅಸೋಕ” ಹಿಂದಿ ಚಿತ್ರವು ಇಪ್ಪತ್ತೊಂದನೆಯ ಶತಮಾನದ ಮೊದಲ ವರ್ಷಗಳಲ್ಲಿ ಬಿಡುಗಡೆಯಾಯಿತು. ಅಶೋಕ ಮತ್ತು ಬೌದ್ಧ ಧರ್ಮದ ನಂಟು ಮುಖ್ಯ ಲೇಖನ : ಬೌದ್ಧ ಧರ್ಮದ ಇತಿಹಾಸ ಅಶೋಕ ರೂಪಿಸಿದ ಬೌದ್ಧಧರ್ಮ ಮತ್ತು ರಾಜ್ಯಾಂಗಗಳ ನಡುವಿನ ಸಂಬಂಧದ ಮಾದರಿ , ಬಹು ಕಾಲ ಉಳಿಯುವಂಥಾದ್ದು. ತೇರಾವಾದ ಪಂಥದ ಆಗ್ನೇಯ ಏಶಿಯಾದ ದೇಶಗಳಲ್ಲಿ ಪ್ರಚಲಿತವಿದ್ದ ( ಉದಾಹರಣೆಗೆ, ಕಾಂಬೋಡಿಯಾದ ಅಂಗಕೋರ ರಾಜ್ಯ) ರಾಜನೆಂದರೆ ದೈವಾಂಶ ಸಂಭೂತ ಎಂಬ ಬ್ರಾಹ್ಮಣಪಂಥ ಪ್ರೇರೇಪಿತ ಪರಿಕಲ್ಪನೆಗಳ ಜಾಗದಲ್ಲಿ ಅಶೋಕನ ಮಾದರಿಯ ರಾಜ್ಯವ್ಯವಸ್ಥೆ ನೆಲೆಯೂರಿತು. ಈ ವ್ಯವಸ್ಥೆಯಲ್ಲಿ ರಾಜನು ತನ್ನ ಅಧಿಕಾರದ ನೈತಿಕ ಬಲವನ್ನು , ತನ್ನ ದೈವೀ ಪರಂಪೆರಯ ಬದಲಾಗಿ, ಬೌದ್ಧ ಸಂಘಗಳ ಆಶೀರ್ವಾದಿಂದ , ಗಳಿಸಬೇಕಾಗಿತ್ತು. ಅಶೋಕನ ಮಾದರಿಯನ್ನು ಅನುಸರಿಸಿದ ಇತರ ರಾಜರುಗಳು, ಬೌದ್ಧ ವಿಹಾರಗಳನ್ನು ಕಟ್ಟಿದರು, ಸ್ತೂಪಗಳನ್ನು ಕಟ್ಟುವುದಕ್ಕೆ ಧನಸಹಾಯ ಮಾಡಿದರು, ಮತ್ತು ಬುದ್ಧ ಭಿಕ್ಷುಗಳನ್ನು ತಮ್ಮ ರಾಜ್ಯದಲ್ಲಿ ಪ್ರೋತ್ಸಾಹಿಸಿದರು. ಅಶೋಕನೇ, ಬುದ್ಧ ಭಿಕ್ಷುಗಳ ವಿವಾದಗಳನ್ನು ಬಗೆಹರಿಸಲು ಅವರೆಲ್ಲರನ್ನು ಒಟ್ಟುಗೂಡಿಸಿ, ಸಭೆ ನಡೆಸುತ್ತಿದ್ದ ಮಾದರಿಯನ್ನು ಅನುಸರಿಸಿದ ಅನೇಕ ರಾಜರುಗಳು, ಸಂಘದ ಅಂತಸ್ತು , ಕಾಯಿದೆ ಮೊದಲಾದ ವಿವಾದಗಳನ್ನು ಬಗೆಹರಿಸಲು ಸಕ್ರಿಯವಾಗಿ ತೊಡಗಿಕೊಂಡಿದ್ದರು. ಈ ಪದ್ಧತಿ ಕ್ರಮೇಣ ರಾಜಮನೆತನಕ್ಕೂ , ಧರ್ಮಗುರು ಪರಂಪರೆಗೂ ನಡುವಿನ ಘನಿಷ್ಠ ನಂಟಾಯಿತು. ರಾಜನನ್ನು ರಾಜ್ಯದ ಒಡೆಯನನ್ನಾಗಿ ಅಷ್ಟೇ ಅಲ್ಲ,ಧಾರ್ಮಿಕ ನಾಯಕನನ್ನಾಗಿಯೂ ಭಾವಿಸುವ ಪ್ರವೃತ್ತಿಯನ್ನು , ಬೌದ್ಧಧರ್ಮವನ್ನು ಅಧಿಕೃತವಾಗಿ ಬೆಂಬಲಿಸುವ, ಥೈಲ್ಯಾಂಡಿನಲ್ಲಿ ಇಂದಿಗೂ ನೋಡಬಹುದು. ಇವನ್ನೂ ನೋಡಿ ಮಗಧ ಸಾಮ್ರಾಜ್ಯ ಮೌರ್ಯ ಸಾಮ್ರಾಜ್ಯ ಚಂದ್ರಗುಪ್ತ ಮೌರ್ಯ ಬಿಂದುಸಾರ ಮೌರ್ಯ ದಶರಥ ಮೌರ್ಯ ಚಾಣಕ್ಯ ಅರ್ಥಶಾಸ್ತ್ರ ಬೌದ್ಧ ಧರ್ಮ ಕಳಿಂಗ ಯುದ್ಧ ಭಾರತದ ಇತಿಹಾಸ ಭಾರತದ ಮಹಾರಾಜರುಗಳು ಉಲ್ಲೇಖಗಳು Swearer, Donald. Buddhism and Society in Southeast Asia (Chambersburg, Pennsylvania : Anima Books, 1981) ISBN 0-89012-023-4 Thapar, Romila. Aśoka and the decline of the Mauryas (Delhi : Oxford : Oxford University Press, 1997, 1998 printing, c1961) ISBN 0-19-564445-X Nilakanta Sastri, K. A. Age of the Nandas and Mauryas (Delhi : Motilal Banarsidass, [1967] c1952) ISBN 0-89684-167-7 Bongard-Levin, G. M. Mauryan India (Stosius Inc/Advent Books Division May 1986) ISBN 0-86590-826-5 Govind Gokhale, Balkrishna. Asoka Maurya (Irvington Pub June 1966) ISBN 0-8290-1735-6 Chand Chauhan, Gian. Origin and Growth of Feudalism in Early India: From the Mauryas to AD 650 (Munshiram Manoharlal January 2004) ISBN 81-215-1028-7 Keay, John. India: A History'' (Grove Press; 1 Grove Pr edition May 10, 2001) ISBN 0-8021-3797-0 ಹೊರಗಿನ ಸಂಪರ್ಕಗಳು ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ ಅಶೋಕನ ಕುರಿತಾದ ಲೇಖನ ವಿಜಯದಿಂದ ವ್ಯೆರಾಗ್ಯಕ್ಕೆ. ಭೂ ಮಂಡಲದಲ್ಲಿ ಶಸ್ತ್ರ ತೊರೆದು...ಅಖಂಡ ಭಾರತ ಆಳಿದ ಏಕ್ಯೇಕ ವೀರ ಸಾಮ್ರಾಟ್ ಅಶೋಕ ಭಾಗ ಒಂದು ಸಾಮ್ರಾಟ್ ಅಶೋಕ ಭಾಗ - ಎರಡು ಅಶೋಕ ಸಾಮ್ರಾಟ್ ಭಾಗ - ಮೂರು ಸಾಮ್ರಾಟ್ ಅಶೋಕ ಭಾಗ - ನಾಲ್ಕು ಸಾಮ್ರಾಟ್ ಅಶೋಕ ಭಾಗ - ಐದು ಸಾಮ್ರಾಟ ಅಶೋಕ ಮತ್ತು ಬೌದ್ಧ ಧರ್ಮ. ಐತಿಹಾಸಿಕ ಸಂಶೋಧನೆ ಅಶೋಕನ ಸವಿವರವಾದ ಜೀವನಚರಿತ್ರೆ, ಪ್ರಮುಖ ದಿನಾಂಕಗಳೊಡನೆ ಅಶೋಕ ಮೌರ್ಯನ ಜೀವನ ಅಶೋಕ ಅಶೋಕ ಅಶೋಕ ಇತಿಹಾಸ ಭಾರತದ ಇತಿಹಾಸ
2215
https://kn.wikipedia.org/wiki/%E0%B2%A5%E0%B2%BE%E0%B2%B0%E0%B3%8D%20%E0%B2%AE%E0%B2%B0%E0%B3%81%E0%B2%AD%E0%B3%82%E0%B2%AE%E0%B2%BF
ಥಾರ್ ಮರುಭೂಮಿ
ಭಾರತದ ಮಹಾ ಮರುಭೂಮಿ ಎಂದು ಕರೆಯಲ್ಪಡುವ ಥಾರ್ ಮರುಭೂಮಿ, ಪಶ್ಚಿಮ ಭಾರತದ ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿದೆ. ಪಾಕಿಸ್ತಾನಕ್ಕೂ ಸ್ವಲ್ಪ ಚಾಚಿರುವ ಈ ಮರುಭೂಮಿಯನ್ನು ಅಲ್ಲಿ "ಚೋಲಿಸ್ತಾನ್ ಮರುಭೂಮಿ" ಎಂದು ಕರೆಯುತ್ತಾರೆ. ಈಶಾನ್ಯಕ್ಕೆ ಸಟ್ಲೆಜ್ ನದಿ, ಪೂರ್ವಕ್ಕೆ ಅರಾವಳಿ ಶ್ರೇಣಿ ದಕ್ಷಿಣಕ್ಕೆ ಗುಜರಾತಿನ ಕಚ್ ಜೌಗುಪ್ರದೇಶ ಹಾಗು ಪಶ್ಚಿಮಕ್ಕೆ ಸಿಂಧೂ ನದಿಗಳಿಂದ ಈ ಮರುಭೂಮಿಯ ಸುತ್ತುವರಿಯಲ್ಪಟ್ಟಿದೆ. ಮರುಭೂಮಿಯ ಒಟ್ಟು ವಿಸ್ತೀರ್ಣ ಸುಮಾರು ೪,೪೬,೦೦೦ ಚ. ಕಿಮೀ. ಸುಮಾರು ೮೦೫ ಕಿಮೀ ಉದ್ದ ಮತ್ತು ಸುಮಾರು ೪೮೫ ಕಿಮೀ ಅಗಲವಿದೆ. ೧೦% ಮರಳು ದಿಣ್ಣೆಗಳಿಂದ ಕೂಡಿದ ಇದರ ೯೦% ಭಾಗ ಕಲ್ಲು ಮಣ್ಣಿನ ಶಾಶ್ವತ ದಿಣ್ಣೆಗಳು, ಬಂಡೆಗಳು ಮತ್ತು ಉಪ್ಪಿನ ಬೈಲುಗಳಿಂದ ಕೂಡಿದೆ. ಅಲ್ಲಲ್ಲಿ ಮುಳ್ಳಿನ ಕುರುಚಲು ಗಿಡಗಳು ಮತ್ತು ಹುಲ್ಲುಗಾವಲುಗಳಿದ್ದರೂ ಇದು ಭಾಗಶಃ ಒಣ ಭೂಮಿಯಾಗಿದೆ. ಭೌಗೋಳಿಕ ಸ್ಥಾನ ಥಾರ್ ಮರುಭೂಮಿ - ಭಾರತದ ರಾಜಸ್ಥಾನ್ ರಾಜ್ಯದಲ್ಲಿ ಬಿಕಾನೇರ್, ಜೈಸಲ್ಮೇರ್, ಜೋಧ್‍ಪುರ, ಜಿಲ್ಲೆಗಳನ್ನೂ ಜಯಪುರ ಜಿಲ್ಲೆಯ ಕೆಲವು ಭಾಗಗಳನ್ನೂ ಪಾಕಿಸ್ತಾನದ ಬಹವಾಲ್‍ಪುರ ಮತ್ತು ಪೂರ್ವ ಸಿಂಧನ್ನೂ ಆವರಿಸಿರುವ ಮರುಭೂಮಿ. ಇದರ ಪಶ್ಚಿಮದಲ್ಲಿ ಸಿಂಧೂ ನದಿಯ ನೀರಾವರಿ ಬಯಲು, ದಕ್ಷಿಣದಲ್ಲಿ ಕಚ್ಛ್‍ನ ರಣ್, ಆಗ್ನೇಯದಲ್ಲಿ ಅರಾವಳಿ ಶ್ರೇಣಿ, ಉತ್ತರ ಮತ್ತು ಈಶಾನ್ಯದಲ್ಲಿ ಪಂಜಾಬಿನ ಬಯಲು ಇವೆ. 2,00,000 ಚಕಿಮೀ. (77,000 ಚಮೈ) ವಿಸ್ತಾರವಾಗಿರುವ ಈ ಮರುಭೂಮಿಗೆ ಭಾರತದ ಮಹಾ ಮರುಭೂಮಿ ಎಂದೂ ಹೆಸರಿದೆ. ಮರಳು ಗುಡ್ಡಗಳು ಎಂಬರ್ಥದ ಶಬ್ದದಿಂದ ಥಾರ್ ಎಂಬ ಹೆಸರು ಬಂದಿದೆ. ಇದರ ಮೇಲೆ ಬೀಸುವ ಮಾನ್ಸೂನ್ ಮಾರುತಗಳು ಸಾಕಷ್ಟು ಮಳೆ ತರುವುದಿಲ್ಲವಾದ್ದರಿಂದ ಮರುಭೂಮಿ ಸಂಭವಿಸಿದೆ. ಥಾರ್‍ನಲ್ಲಿ ಸು. 70,00,000 ವಾಸಿಸುತ್ತಾರೆ. ರಚನೆ 460 ಕೋಟಿ ವರ್ಷಗಳ ಹಿಂದೆ ಆರಂಭವಾದ ಅತ್ಯಂತ ಪ್ರಾಚೀನ ಭೂವೈಜ್ಞಾನಿಕ ಯುಗದಲ್ಲಿ ರೂಪುಗೊಂಡ ಪ್ರಿ - ಕೇಂಬ್ರಿಯನ್ ನೀಸ್ ಶಿಲೆಗಳು (ಗ್ರಾನೈಟ್‍ನಂಥ ರೂಪಾಂತರಿತ ಶಿಲೆಗಳು). 57 ಕೋಟಿ - 25 ಕೋಟಿ ವರ್ಷಗಳಷ್ಟು ಹಳೆಯದಾದ ಅವಸಾಧಿ ಶಿಲೆಗಳು ಮತ್ತು ಇತ್ತೀಚೆಗೆ ನದಿಗಳು ತಂದು ತುಂಬಿದ ಮೆಕ್ಕಲು ಮಣ್ಣು - ಇವುಗಳ ಮೇಲೆ ಮರಳಿನ ಹೊದಿಕೆಯಿದೆ. ಅತ್ಯಂತ ಇತ್ತೀಚಿನದಾದ- ಎಂದರೆ 70 ವರ್ಷಗಳ ಹಿಂದೆ ಆರಂಭವಾದ - ಚತುರ್ಥ ಕಲ್ಪದಲ್ಲಿ ಗಾಳಿಯಿಂದಾಗಿ ಈ ಪ್ರದೇಶದ ಮೇಲೆ ಮರಳು ತುಂಬಿಕೊಂಡಿತು. ಇಡೀ ಮರುಭೂಮಿ ಅಲೆಯಲೆಯಾಗಿದೆ. ಎತ್ತರದ ಮತ್ತು ತಗ್ಗಿನ ಮರಳು ದಿಬ್ಬಗಳ ನಡುವೆ ಮರಳು ಮೈದಾನಗಳಿವೆ. ಅಲ್ಲಿಲ್ಲ ತಗ್ಗಾದ ಬರಡು ಬೆಟ್ಟಗಳುಂಟು. ಮರಳು ದಿಬ್ಬಗಳು ಆಗಿಂದಾಗ್ಗೆ ಚಲಿಸುತ್ತ ವಿವಿಧ ಆಕಾರ ಹಾಗೂ ಗಾತ್ರ ತಳೆಯುತ್ತವೆ. ಹಳೆಯ ಗುಡ್ಡಗಳು ಹೆಚ್ಚು ಕಡಿಮೆ ಸ್ಥಿರವಾದಂಥವು. ಈ ಪ್ರದೇಶದಲ್ಲಿ ಅಲ್ಲಲ್ಲಿ ಉಪ್ಪುನೀರಿನ ಸರೋವರಗಳುಂಟು. ಪಶ್ಚಿಮದಲ್ಲಿರುವ ಸಿಂಧೂ ನದಿಯನ್ನೂ ಆಗ್ನೇಯದಲ್ಲಿರುವ ಲೂನಿ ನದಿಯನ್ನೂ ಬಿಟ್ಟರೆ ಮಿಕ್ಕಂತೆ ಇಲ್ಲಿಯ ಜಲೋತ್ಸಾರಣ ಒಳಮುಖವಾದ್ದು. ಮಳೆಗಾಲದಲ್ಲಿ ಇಲ್ಲಿಯ ಎತ್ತರದ ಸ್ಥಳಗಳಲ್ಲಿ ಶ್ರಾಯೀಣವಾಗಿ ಹೊಳೆಗಳು ಹುಟ್ಟಿ ಹರಿಯುತ್ತವೆ. ಆದರೆ ತುಸ ದೂರ ಸಾಗುವುದರಲ್ಲೇ ಮರಳಿನಲ್ಲಿ ಇಂಗಿ ಹೋಗುತ್ತದೆ. ಇಲ್ಲಿಯ ಮಣ್ಣುಗಳಲ್ಲಿ ಏಳು ಬಗೆ: ಮರುಭೂಮಿಯ ಮಣ್ಣು, ಮರಳು ಮಿಶ್ರಿತ ಮಣ್ಣು, ಕಪ್ಪುಕಂದು ಬೂದು ಮಣ್ಣು, ಅಡಿಬೆಟ್ಟಗಳ ಕೆಂಪು ಹಳದಿ ಮಣ್ಣು, ಅವನತ ಪ್ರದೇಶಗಳ ಉಪ್ಪು ಮಣ್ಣು, ಗಾಳಿಮಳೆಗಳಿಗೆ ಪಕ್ಕಾದ ತೆಳು ಮಣ್ಣು ಮತ್ತು ಬೆಟ್ಟಗಳ ಮೇಲಣ ಮೆದು ಮಣ್ಣು, ಇದೆಲ್ಲ ಸುಣ್ಣ ಮಿಶ್ರಿತ ನೆಲ; ಸಾಮಾನ್ಯವಾಗಿ ಫಲವತ್ತಾದ್ದಲ್ಲ. ಇದು ಗಾಳಿಯಿಂದ ಸವೆತಕ್ಕೆ ಒಳಗಾಗಿ ಮರಳಿನಿಂದ ಕೂಡಿದೆ. ಹವಾಮಾನ ಮರುಭೂಮಿ ಪ್ರದೇಶದಲ್ಲಿ ವಾರ್ಷಿಕ ಮಳೆ, ಸಾಮಾನ್ಯವಾಗಿ ಬಹು ಅಲ್ಪ. ಪಶ್ಚಿಮದಲ್ಲಿ 4" ಇಂದ ಪೂರ್ವದಲ್ಲಿ 20" ವರೆಗೆ ಸ್ಥಳಾನುಗುಣವಾಗಿ ವ್ಯತ್ಯಾಸವಾಗುತ್ತದೆ. ಮಳೆ ಬಹಳ ಮಟ್ಟಿಗೆ ಅನಿಶ್ಚಿತ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ-ಮುಂಗಾರಿನಲ್ಲಿ-ಸೇ. 90 ರಷ್ಟು ಮಳೆ. ಉಳಿದ ಕಾಲದಲ್ಲಿ ಈಶಾನ್ಯದ ಕಡೆಯಿಂದ ಗಾಳಿ ಬೀಸುತ್ತದೆ. ಮೇ, ಜೂನ್, ತಿಂಗಳುಗಳಲ್ಲಿ ಉಷ್ಣತೆ ಅತ್ಯಧಿಕ; 500 ಅ. (122 ಈ.). ಜನವರಿ ಅತ್ಯಂತ ತಣ್ಣನೆಯ ತಿಂಗಳು. ಆಗ ಮಾಧ್ಯ ಕನಿಷ್ಠ ಉಷ್ಣತೆ 50 - 100 ಅ. (410 - 500ಈ) ಮೇ - ಜೂನ್ ತಿಂಗಳುಗಳಲ್ಲಿ 140 - 150 ಕಿಮೀ (87 - 93 ಮೈ) ವೇಗದಲ್ಲಿ ದೂಳಿನಿಂದ ತುಂಬಿದ ಗಾಳಿ ಬೀಸುತ್ತದೆ.ವಾರ್ಷಿಕ ಮಳೆ ಪ್ರಮಾಣ 150 ಮಿಲಿ ಮಳೆ ಅಗುತ್ತದೆ.ಇಲ್ಲಿ ಮೊದಲಿಗೆ ಸರಸ್ವತಿ ನದಿ ಹರಿಯುತ್ತಿತ್ತು ಎಂದು ಅಂದಾಜಿಸಲಾಗಿದೆ. ಸಸ್ಯಗಳು ಮರಭೂಮಿಯಲ್ಲಿ ಬೆಳೆಯುವ ಸಸ್ಯ ಬಹುತೇಕ ಮೂಲಿಕೆ ಜಾತಿಯದು; ಅಥವಾ ಮೋಟು ಕಂಟಿ. ಅಲ್ಲಲ್ಲಿ ಮರಗಳಿವೆ. ಬೆಟ್ಟಗಳ ಮೇಲೆ ಗೊಬ್ಬಳಿ, ಕಳ್ಳಿ ಬೆಳೆಯುತ್ತವೆ. ಎಲ್ಲೆಲ್ಲೂ ವುನ್ನೆ ಮರಗಳಿವೆ. ಎಲಚಿ ಮುಂತಾದ ಇತರ ಮರಗಳೂ ಪೊದೆಗಳೂ ಉಂಟು. ಗಟ್ಟಿಯಾದ ಮರಳುದಿಣ್ಣೆಯಲ್ಲಿ ಹುಲ್ಲು, ಪೊದೆ, ಮರ ಬೆಳೆಯುತ್ತವೆ. ಕಾಡು ಸೋರೆ ತುಂಬ ವ್ಯಾಪಕವಾಗಿದೆ. ಹುಲ್ಲು ಬೆಳೆಯುವಲ್ಲಿ ಹುಲ್ಲೆಕರ ಮತ್ತು ಚಿಂಕಾರಗಳೂ ಫ್ರಾಂಕೊಲಿನ್, ಲಾವುಗೆ ಮುಂತಾದ ಪಕ್ಷಿಗಳೂ ಇವೆ. ವಲಸೆಗಾರ ಹಕ್ಕಿಗಳು ಮರಳುವಕ್ಕಿ, ಬಾತು ಕೋಳಿ ಮುಂತಾದವು. ನಷ್ಟಜೀವಿಯಾಗುತ್ತಿರುವ ಗುನಾ ಹದ್ದಿಗೂ ಇದು ವಾಸಸ್ಥಳ. ಇಲ್ಲಿ ಐದು ಬಗೆಯ ದನಗಳನ್ನೂ ಕುರಿ ಒಂಟೆಗಳನ್ನೂ ಸಾಕುತ್ತಾರೆ.ಇಲ್ಲಿ ವಾರ್ಷಿಕ ಮಳೆ ಪ್ರಮಾಣ 150ಮಿ ಲೀ ಗಿಂತ ಕಡಿಮೆ ಮಳೆ ಆಗುತ್ತದೆ.ಪ್ರತಿ ವರ್ಷ ಮರುಭೂಮಿ 1/2ಕಿಮೀ ಹೆಚ್ಚಿಗೆ ಆಗುತ್ತದೆ. ಜನಜೀವನ ಇಲ್ಲಿಯ ಜನ ಬಹುತೇಕ ಗ್ರಾಮಸ್ಥರು. ಜನಸಾಂದ್ರತೆ ಚ.ಮೈ.ಗೆ 4ರಿಂದ 104ರವರೆಗೆ ವ್ಯತ್ಯಾಸವಾಗುತ್ತದೆ. ಹಿಂದೂಗಳೂ ಮುಸ್ಲಿಮರೂ ಇದ್ದಾರೆ. ಅಲೆಮಾರಿಗಳು ಸಾಮಾನ್ಯವಾಗಿ ದನಗಾಹಿಗಳು. ಇಲ್ಲಿ ಬೆಳೆಯುವ ಹುಲ್ಲು ದನಗಳಿಗೆ ಮೇವು. ಇದನ್ನು ಔಷಧಿಗಳ ತಯಾರಿಕೆಗೂ ಉಪಯೋಗಿಸಲಾಗುತ್ತಿದೆ. ನೀರು ಬಲು ವಿರಳ. ಕೆರೆ ಕೊಳಗಳಲ್ಲಿ ನೀರನ್ನು ಸಂಗ್ರಹಿಸಿ ಕುಡಿಯಲು ಉಪಯೋಗಿಸುತ್ತಾರೆ. ನೆಲದಡಿಯ ನೀರು ಕ್ಷಾರಯುಕ್ತವಾದ್ದರಿಂದ ಅಷ್ಟು ಉಪಯುಕ್ತವಲ್ಲ. ಮರುಭೂಮಿಯ ಮಧ್ಯದಲ್ಲಿ ಬಂಡೆಗಳಲ್ಲಿ ಜಲಮೂಲಗಳು ಈಚೆಗೆ ಸಿಕ್ಕಿವೆ. ಖನಿಜಗಳು ಇಲ್ಲಿ ಹಲವು ಖನಿಜ ನಿಕ್ಷೇಪಗಳಿವೆ. ಬಿಕಾನೀರ್ ಬಳಿ ಪಲನಾದಲ್ಲಿ ಲಿಗ್ನೈಟ್ ತೆಗೆಯುತ್ತಾರೆ. ಜೈಸಲ್ಮೇರ್‍ಗೆ ವಾಯುವ್ಯದಲ್ಲಿ, ಕಮ್ಲಿ ತಾಲ್‍ನಲ್ಲಿ ನೈಸರ್ಗಿಕ ಅನಿಲವಿದೆ. ನಾಗೌರ್, ಜೈಸಲ್ಮೇರ್, ಬಿಕಾನೇರ್, ಬಾರ್ಮೇರ್ ಜಿಲ್ಲೆಗಳಲ್ಲಿ ಜಿಪ್ಸಮ್ ತೆಗೆಯಲಾಗುತ್ತದೆ. ಸುಣ್ಣಕಲ್ಲು, ಬೆಂಟೊನೈಟ್ (ಜ್ವಾಲಾಮುಖಿಯ ಬೂದಿಯ ವಿಘಟನೆಯಿಂದ ಪರಿಣಮಿಸಿದ ಒಂದು ಜೇಡುಮಣ್ಣು), ಗಾಜು ಮರಳು, ಸಿಂಗಾಣಿ ಮಣ್ಣು, ಉಪ್ಪು ನೀರಿನ ಸರೋವರಗಳಿಂದ ದೊರಕುವ ಉಪ್ಪು -ಇವು ಇತರ ಖನಿಜಗಳು. ಬೇಸಾಯ ನೀರು ದೊರಕುವೆಡೆಯಲ್ಲಿ ಗೋದಿ, ಹತ್ತಿ, ಕಬ್ಬು, ಎಳ್ಳು, ಹರಳು, ಮೆಣಸಿನಕಾಯಿ ಮುಂತಾದವನ್ನು ಬೆಳೆಯುತ್ತಾರೆ. ಬಾವಿ, ಕೆರೆ, ನಾಲೆ ನೀರಾವರಿ ಅಲ್ಲಲ್ಲಿ ಉಂಟು. ಸಿಂಧೂ ನದಿಗೆ ಅಡ್ಡಲಾಗಿ ನಿರ್ಮಿಸಿದ ಸುಕ್ಕೂರ್ ಜಲಾಶಯದಿಂದ ಪಾಕಿಸ್ತಾನದ ದಕ್ಷಿಣ ಪ್ರದೇಶದಲ್ಲಿ ನೀರಾವರಿ ಏರ್ಪಟ್ಟಿದೆ. ಸಟ್ಲೆಜ್ ನದಿಯಿಂದ ನಿರ್ಮಿಸಲಾಗಿರುವ ಗಂಗಾ ಕಾಲುವೆಯಿಂದ ದಕ್ಷಿಣ ಭಾಗಕ್ಕೆ ನೀರಾವರಿ ಸೌಲಭ್ಯ ಉಂಟಾಗಿದೆ. ರಾಜಸ್ಥಾನ ಕಾಲುವೆ ನಿರ್ಮಾಣ ಮುಗಿದಾದ ಮುಖ್ಯವಾಗಿ ಬಿಕಾನೇರ್ ಮತ್ತು ಜೈಸಲ್ಮೇರ್ ಜಿಲ್ಲೆಗಳಲ್ಲೂ ನೆರೆಯ ಪ್ರದೇಶದಲ್ಲೂ ಸು. 24,70,000 ಎಕರೆ ನೀರಾವರಿಗೆ ಒಳಪಡುತ್ತದೆ. ಈ ಯೋಜನೆ ಪೂರೈಸಿದಾಗ 22,000 ಕಿಲೋವಾಟ್ ಜಲವಿದ್ಯುತ್ತು ಒದಗುವ ನಿರೀಕ್ಷೆಯಿದೆ. ಇವೆಲ್ಲ ಪೂರೈಸಿದಾಗ ಮರುಭೂಮಿಯ ಬಹುಭಾಗ ಸಂಪದ್ಯುಕ್ತವಾಗಿ ಪರಿಣಮಿಸುತ್ತದೆ. ಸಾರಿಗೆ-ಸಂಪರ್ಕ ಈ ಪ್ರದೇಶದಲ್ಲಿ ರಸ್ತೆ ಹಾಗೂ ರೈಲ್ವೆ ವ್ಯವಸ್ಥೆ ಅಷ್ಟೇನೂ ಬೆಳೆದಿಲ್ಲ. ದಕ್ಷಿಣ ಭಾಗದಲ್ಲಿ ಭಾರತದ ಲೂನಿ ಜಂಕ್ಷನ್‍ನಿಂದ ಪಾಕ್ ಹೈದರಾಬಾದಿಗೂ ಮೆರ್ಟಾರೋಡ್‍ನಿಂದ ಸೂರತ್‍ಗಢಕ್ಕೂ ಜೋಧಪುರದಿಂದ ಜೈಸಲ್ಮೇರ್‍ಗೂ ಪಾಕಿಸ್ತಾನದ ಬಹುವಾಲ್‍ಪುರದಿಂದ ಹೈದರಾಬಾದಿಗೂ ರೈಲು ಮಾರ್ಗಗಳಿವೆ. ಕೆಲವು ರಸ್ತೆಗಳೂ ಉಂಟು. ಇದನ್ನೂ ನೋಡಿ ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ ಇದು ೯ ನೇ ಅತೀ ದೊಡ್ಡ ಮರುಭೂಮಿ . ಬಾಹ್ಯ ಸಂಪರ್ಕಗಳು ನಾಸಾ ಸಿದ್ಧಪಡಿಸಿದ ಥಾರ್ ಮರುಭೂಮಿಯ ನಕ್ಷೆ Dharssi.org.uk , Photos of the Thar desert Avgustin.net , Photos of the Thar desert in Pakistan side Travel-Culture.com, Information about Thar desert In Pakistan MIT.gov, आपणो राजस्थान ಮರುಭೂಮಿಗಳು ಭಾರತ ರಾಜಸ್ಥಾನ
2216
https://kn.wikipedia.org/wiki/%E0%B2%9A%E0%B2%BE%E0%B2%A3%E0%B2%95%E0%B3%8D%E0%B2%AF
ಚಾಣಕ್ಯ
ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ (ಸು. ಕ್ರಿ.ಪೂ. ೩೫೦ - ೨೮೩), ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು.."ವಿಷ್ಣುಗುಪ್ತ" ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ ಗಾಂಧಾರದಲ್ಲಿತ್ತು. ಗಾಂಧಾರದ ರಾಜ ಅಂಬಿ, ಯವನ ಚಕ್ರವರ್ತಿಯಾದ ಅಲೆಕ್ಸಾಂಡರನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೆ ಚಂದ್ರಗುಪ್ತ ಮೌರ್ಯ. ಅಸಾಧಾರಣ ಪ್ರತಿಭಾವಂತ. ಹಿಡಿದ ಕೆಲಸವನ್ನು ಪಟ್ಟು ಹಿಡಿದು, ಸಾಧಿಸುವ ಸ್ವಭಾವದವನು. ಸಕಲ ಶಾಸ್ತ್ರ ಪಾರಂಗತ, ಅರ್ಥಶಾಸ್ತ್ರ ಪ್ರವೀಣ. ರಾಜನೀತಿ ವಿಶಾರದ. ಸಾಮ, ದಾನ, ಭೇದ, ದಂಡ ಎಂಬ ಚತರೋಪಾಯ ಚತುರದ್ಯೆಯಲ್ಲಿ ತುಂಬಾ ಅನುಭವಿ, ಸೂಕ್ಷ್ಮಮತಿ. ಆತನ ಮನಸ್ಸಿನ ಅಭಿಪ್ರಾಯವನ್ನು ಹೀಗೆಂದು ತಿಳಿಯಲು ಯಾರಿಗೂ ಸಾಧ್ಯವಿಲ್ಲ. ಬಹಳ ರಹಸ್ಯವಾಗಿ ಕೆಲಸ ಮಾಡುವವನು. ಬಹುದೂರದ ಅಲೋಚನೆ, ಯಾವ ಕೆಲಸದಲ್ಲಿಯೇ ಆಗಲಿ ಆತ ಇಟ್ಟ ಗುರಿ, ಮಾಡಿದ ಅಂದಾಜು ಎಂದೂ ತಪ್ಪುತ್ತಿರಲಿಲ್ಲ. ಮಹಾತ್ಯಾಗಿ, ಮಹಾ ತಪಸ್ವಿ. ಹೊರನೋಟಕ್ಕೆ ತುಂಬ ಕಠಿಣ ಸ್ವಭಾವದವನು. ಅಪಾರ ಲೋಕಾನುಭವವಿದ್ದವನು. ಶತ್ರುಗಳನ್ನು ಸಂಹಾರ ಮಾಡುವುದರಲ್ಲಿ ಬಗೆಬಗೆಯ ತಂತ್ರಗಳನ್ನು ಸಮಯವರಿತು ಎಚ್ಚರಿಕೆಯಿಂದ ಮಾಡುವಾತ. ಆತನಿಗೆ ತಿಳಿಯದ ಶಾಸ್ತ್ರವಿಲ್ಲ. ಗೊತ್ತಿಲ್ಲದ ವಿಚಾರವಿಲ್ಲ. ಅದೊಂದು ಪ್ರತಿಭಾಪುಂಜ. “ಚಾಣಕ್ಯ ತಂತ್ರ” ಎಂಬ ಮಾತು ಈಗಲೂ ಗಾದೆಯಾಗಿದೆ. ನಂದವಂಶವನ್ನು ಸರ್ವನಾಶಮಾಡಿ, ಚಂದ್ರಗುಪ್ತನಿಗೆ ರಾಜ್ಯವನ್ನು ಕೊಡಿಸಿ, ಮೌರ್ಯ ಸಾಮ್ರಾಜ್ಯ ಸ್ಥಾಪಕನಾಗಿ ಮೆರೆದ ಪುಣ್ಯ ಪುರುಷ ಚಾಣಕ್ಯ. ಚಾಣಕ್ಯನಿಗೆ ಕೌಟಿಲ್ಯ ಎಂದು ಇನ್ನೊಂದು ಹೆಸರು. ಈತನ ಪ್ರತಿಭೆಯನ್ನು ತೋರಿಸುವ ಒಂದು ಪುಸ್ತಕ ಇಂದೂ ಉಳಿದಿದೆ. “ಅರ್ಥಶಾಸ್ತ್ರ” ಎಂದು ಅದರ ಹೆಸರು. ಅದು ಇಂಗ್ಲೀಷ್, ಫ್ರೆಂಚ್, ಜರ್ಮನ್- ಹೀಗೆ ಹಲವು ಭಾಷೆಗಳಿಗೆ ಅನುವಾದವಾಗಿದೆ. ದುರದೃಷ್ಟವೆಂದರೆ ಈತನ ವಿಷಯ ಖಚಿತವಾಗಿ ತಿಳಿದಿರುವುದು ಬಹು ಸ್ವಲ್ಪ. ಬೇರೆ ಬೇರೆ ಪುಸ್ತಕಗಳಲ್ಲಿ ದೊರೆಯುವ ಅಷ್ಟಿಷ್ಟು ಸಾಮಗ್ರಿಗಳನ್ನೆಲ್ಲ ಸೇರಿಸಿ ನಾವು, “ಪ್ರಾಯಶ: ಇದು ಇವನ ಜೀವನ ಚರಿತ್ರೆ” ಎಂದು ಹೇಳಬಹುದು. ಚಾಣಕ್ಯನ ವಿದ್ಯಾಭ್ಯಾಸ ತಕ್ಷಶಿಲೆ ಎಂಬ ಊರಿನ ಪ್ರಸಿದ್ಧ ಶಾಲೆಯಲ್ಲಿ ಆಯಿತು. ತಕ್ಷಶಿಲೆಯ ಅಧ್ಯಾಪಕರು ಜಗತ್ಪ್ರಸಿದ್ಧ ವಿದ್ವಾಂಸರು. ಭಾರತದ ಎಲ್ಲಾ ಭಾಗಗಳಿಂದ ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ವಿದ್ಯಾರ್ಥಿಗಳು ಬರುತ್ತಿದ್ದರು. ರಾಜರು ಸಹ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ಕಳುಹಿಸುತ್ತಿದ್ದರು. ಇಲ್ಲಿ ಒಬ್ಬ ಉಪಾಧ್ಯಾಯನ ಬಳಿ ಒಂದು ನೂರು ಒಂದು ಮಂದಿ ವಿದ್ಯಾರ್ಥಿಗಳು ಇದ್ದರಂತೆ. ಅಷ್ಟು ಮಂದಿಯೂ ರಾಜಕುಮಾರರಂತೆ! ಸಾಮಾನ್ಯವಾಗಿ ಹದಿನಾರನೆಯ ವರ್ಷಕ್ಕೆ ವಿದ್ಯಾರ್ಥಿ ಈ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಿದ್ದ. ವೇದಗಳನ್ನೂ ಧನುರ್ವಿದ್ಯೆ, ಬೇಟೆ, ಆನೆಗಳನ್ನು ನೋಡಿಕೊಳ್ಳುವುದು ಹೇಗೆ ಎಂಬುವುದನ್ನೂ ಹದಿನೆಂಟು ಕಲೆಗಳನ್ನೂ ಕಲಿಸುತ್ತಿದ್ದರು. ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ, ಸಮರಶಾಸ್ತ್ರ, ಇವುಗಳಿಗಾಗಿ ಇಲ್ಲಿದ್ದ ವಿದ್ಯಾ ಸಂಸ್ಥೆಗಳು ಭಾರತದಲ್ಲಿ ಮಾತ್ರವಲ್ಲ, ಆಚೆಯೂ ಸಹ ಪ್ರಖ್ಯಾತವಾಗಿದ್ದವು. ಇಂತಹ ಕೇಂದ್ರದಲ್ಲಿ ವಿದ್ಯಾಭ್ಯಾಸವಾಯಿತು. ಅರ್ಥಶಾಸ್ತ್ರ ಪುಸ್ತಕ ಇಂದು ಜಗತ್ಪ್ರಸಿದ್ಧ. ಯೂರೋಪಿನ ರಾಜ್ಯಶಾಸ್ತ್ರ ನಿಪುಣರು, ಸಮಾಜಶಾಸ್ತ್ರ ನಿಪುಣರು, ಅರ್ಥಶಾಸ್ತ್ರ ನಿಪುಣರು ಇದನ್ನು ಕುತೂಹಲದಿಂದ ಅಧ್ಯಯನ ಮಾಡುತ್ತಾರೆ.ರಾಜಕುಮಾರನನ್ನು ಹೇಗೆ ಬೆಳೆಸಬೇಕು, ಅವರ ವಿದ್ಯಾಭ್ಯಾಸ ಹೇಗಾಗಬೇಕು ಇವುಗಳ ವಿವರಣೆಯಿಂದ “ಅರ್ಥಶಾಸ್ತ್ರ” ಪ್ರಾರಂಭವಾಗುತ್ತದೆ. ಅನಂತರ ರಾಯಭಾರಿಗಳ ಆಯ್ಕೆ, ಗೂಢಚಾರರನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಇವುಗಳ ವಿವರಣೆ. ರಾಜನಿಗೆ ಅಪಾಯ ಒದಗದ ಹಾಗೆ ರಕ್ಷಣೆ ಕೊಡಬೇಕು ಎಂದು ಚಾಣಕ್ಯ ವಿವರಿಸುತ್ತಾನೆ. ಕಾನೂನು, ಪೋಲಿಸರ ಕೆಲಸ-ಕಾರ್ಯ, ಶ್ರೀಮಂತರನ್ನು ಹೇಗೆ ಅಧೀನದಲ್ಲಿ ಇಟ್ಟುಕೊಳ್ಳಬೇಕು, ಅವರು ದಾನ ಮಾಡುವಂತೆ ಹೇಗೆ ಪ್ರಚೋದಿಸಬೇಕು, ನೇರವಾಗಿ ಯುದ್ಧವನ್ನು ತಪ್ಪಿಸುವ ವಿಧಾನಗಳು, ಜ್ಯೋತಿಷ್ಯ, ಪುರೋಹಿತ ಮತ್ತಿತರರ ಕರ್ತವ್ಯವೇನು, ಶತ್ರುರಾಜರನ್ನು ಉಪಾಯದಿಂದ ಕೊಲ್ಲುವುದು ಹೇಗೆ, ಮನುಷ್ಯರು ಮತ್ತು ಪ್ರಾಣಿಗಳು ನಿದ್ರೆ ಮಾಡುವಂತೆ ಮಾಡುವ ಕ್ರಮ- ಹೀಗೆ “ಅರ್ಥಶಾಸ್ತ್ರ”ದಲ್ಲಿ ಚಾಣಕ್ಯ ಚರ್ಚೆ ಮಾಡುವ ವಿಷಯಗಳು ನೂರಾರು. ಎಷ್ಟು ವಿಷಯಗಳನ್ನು ಪರಿಶೀಲಿಸುತ್ತಾನೆ ಎನ್ನುವುದೇ ಬೆರಗನ್ನುಂಟು ಮಾಡುತ್ತದೆ. ಅವನ ಕುಶಾಗ್ರ ಬುದ್ಧಿ ವಿಸ್ಮಯಗೊಳಿಸುವಂತಹದು. ಚಾಣಕ್ಯನ ಪ್ರಕಾರ ರಾಜನ ಮುಖ್ಯ ಕರ್ತವ್ಯ ಧರ್ಮರಕ್ಷಣೆ. ಧರ್ಮವನ್ನು ಎತ್ತಿಹಿಡಿದ ರಾಜನಿಗೆ ಇಹದಲ್ಲೂ ಪರದಲ್ಲೂ ಸುಖ. ಮತ್ತೊಂದು ಮಾತನ್ನು ಚಾಣಕ್ಯ ಹೇಳುತ್ತಾನೆ- ಬಹುಸ್ವಾರಸ್ಯವಾದುದು, ಮುಖ್ಯವಾದುದು. ರಾಜ ತನ್ನ ಅಧಿಕಾರವನ್ನು ಅನ್ಯಾಯವಾಗಿ ಉಪಯೋಗಿಸಿದರೆ ಅವನಿಗೂ ಶಿಕ್ಷೆ ಆಗಬೇಕು.“ರಾಜನಿಗೆ ಸದಾ ಪ್ರಜೆಗಳ ಹಿತಕ್ಕಾಗಿ ದುಡಿಯುವುದೇ ವ್ರತ; ರಾಜ್ಯದ ಆಡಳಿತದ ಕೆಲಸವೇ ಶ್ರೇಷ್ಠ ಧರ್ಮಾಚರಣೆ: ಎಲ್ಲರನ್ನೂ ಸಮಾನರಾಗಿ ಕಾಣುವುದೇ ಬಹು ದೊಡ್ಡ ದಾನ.” “ಜನರ ಸುಖವೇ ರಾಜನ ಸುಖ, ಅವರ ಕಲ್ಯಾಣವೇ ಅವನ ಕಲ್ಯಾಣ, ಅವನು ತನ್ನ ಸುಖದ ಕಡೆಗೆ ಲಕ್ಷ್ಯ ಕೊಡಬಾರದು. ತನ್ನ ಪ್ರಜೆಗಳ ಸಂತೋಷದಲ್ಲಿ ಸಂತೋಷವನ್ನು ಕಂಡುಕೊಳ್ಳಬೇಕು”. ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ಈ ಮಾತುಗಳನ್ನು ಬರೆದ ಚಾಣಕ್ಯ ರಾಜ್ಯಶಾಸ್ತ್ರ ನಿಪುಣ, ವಿವೇಕಿ; ತಂತ್ರಗಾರಿಕೆ, ಬುದ್ಧಿವಂತಿಕೆ, ಛಲ ಸಾಹಸಗಳಿಗೆ ಮತ್ತೊಂದು ಹೆಸರು ಚಾಣಕ್ಯ. ಸಾಹಿತ್ಯ ಕೃತಿಗಳು ಅರ್ಥಶಾಸ್ತ್ರ ಮತ್ತು ಚಾಣಕ್ಯ ನೀತಿ ಸಾರ(ಚಾಣಕ್ಯ ನೀತಿ ಶಾಸ್ತ್ರ)ಚಾಣಕ್ಯನ ಎರಡು ಮುಖ್ಯ ಪುಸ್ತಕಗಳಾಗಿವೆ. ಉಲ್ಲೇಖಗಳು ೧) ಬೇರೆಯವರ ತಪ್ಪುಗಳಿಂದ ಕಲಿಯಿರಿ ಎಲ್ಲಾ ತಪ್ಪುಗಳನ್ನು ಮಾಡುವಷ್ಟು ಆಯಸ್ಸು ನಿಮಗಿಲ್ಲಾ ೨) ನೀವು ಹುಟ್ಟುವಾಗ ಏನು ಇರಲಿಲ್ಲ ಆದರೆ ಸಾಯುವಾಗ ನಿಮ್ಮ ಹೆಸರಿನೊಂದಿಗೆ ಸಾಯುತ್ತೀರಿ ನಿಮ್ಮ ಹೆಸರು ಬರಿ ಅಕ್ಷರಗಳಿಂದ ಕೂಡಿದ್ದರೆ ಸಾಲದು ಅದರಲ್ಲಿ ಒಂದು ಇತಿಹಾಸ ಇರಬೇಕು. ೩)ಸತ್ಯವಿದ್ದರು ನಂಬಲಾರದ್ದನ್ನು ಹೇಳಬಾರದು ೪) ಶತ್ರುವನ್ನು ಅವನ ಮರ್ಮದಲ್ಲಿ ಹೊಡೆಯಬೇಕು ೫) ಬುದ್ಧಿವಂತನಿಗೆ ಜೀವನದ ಭಯವಿಲ್ಲ ೬)ಅತಿ ಪ್ರಾಮಾಣಿಕರಾಗಬೇಡಿ ಏಕೆಂದರೆ ನೇರವಾಗಿರುವ ಮರಗಳು ಮೊದಲು ನೆಲಕ್ಕುರುಳುತ್ತವೆ ಆನಂತರ ಡೊಂಕು ಮರದ ಸರದಿ ೭) ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ ಅವೇ ನಿಮಗೆ ಮುಳುವಾಗುತ್ತವೆ. ೮) ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೆ ಇರುತ್ತದೆ ಸ್ವಾರ್ಥ ರಹಿತ ಸ್ನೇಹವೇ ಇಲ್ಲಾ ಇದೊಂದು ಕಹಿಸತ್ಯ ೯) ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡ ವ್ಯಕ್ತಿ ಆಗುತ್ತಾನೆಯೇ ವಿನಃ ಹುಟ್ಟಿನಿಂದಲ್ಲಾ ೧೦) ದೇವರು ವಿಗ್ರಹದೊಳಗಿಲ್ಲಾ ನಿಮ್ಮ ಭಾವನೆಗಳೇ ದೇವರು ನಿಮ್ಮ ಆತ್ಮವೇ ದೇವಸ್ಥಾನ ೧೧) ವಿಶ್ವದ ಅತ್ಯಂತ ದೊಡ್ಡ ಶಕ್ತಿ ಎಂದರೆ ಒಂದು ಯುವ ಶಕ್ತಿ ಮತ್ತೊಂದು ಯುವತಿಯ ಸೌಂದರ್ಯ. ಬಾಹ್ಯ ಕೊಂಡಿಗಳು Chanakya Nitishastra: English translation by Miles Davis. Chanakya Nitishastra: Sanskrit, Hindi and English versions. ಭಾರತದ ಅರ್ಥಶಾಸ್ತ್ರಜ್ಞರು ಮೌರ್ಯ ವಂಶವಿಷ್ಣುವರ್ಧನ್ ಚಲನಚಿತ್ರಗಳು
2221
https://kn.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%20%E0%B2%AA%E0%B2%B0%E0%B2%BF%E0%B2%B8%E0%B2%B0%20%E0%B2%A6%E0%B2%BF%E0%B2%A8
ವಿಶ್ವ ಪರಿಸರ ದಿನ
ವಿಶ್ವ ಪರಿಸರ ದಿನವನ್ನು ( ಡಬ್ಲ್ಯೂಇಡಿ ) ವಾರ್ಷಿಕವಾಗಿ ಜೂನ್ 5 ರಂದು ಆಚರಿಸಲಾಗುತ್ತದೆ ಮತ್ತು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮವನ್ನು ಉತ್ತೇಜಿಸುತ್ತದೆ. ಇದು ಅನೇಕ ಸರ್ಕಾರೇತರ ಸಂಸ್ಥೆಗಳು, ವ್ಯವಹಾರಗಳು, ಸರ್ಕಾರಿ ಘಟಕಗಳಿಂದ ಬೆಂಬಲಿತವಾಗಿದೆ ಮತ್ತು ಪರಿಸರವನ್ನು ಬೆಂಬಲಿಸುವ ಪ್ರಾಥಮಿಕ ವಿಶ್ವಸಂಸ್ಥೆಯ ಎಲ್ಲರಿಗೂ ತಲುಪುವ ಜಾಗೃತಿ ದಿನವನ್ನು ಪ್ರತಿನಿಧಿಸುತ್ತದೆ. ಮೊದಲ ಬಾರಿಗೆ 1973 ರಲ್ಲಿ ಆಯೋಜಿಸಲಾಯಿತು, ಇದು ಸಮುದ್ರ ಮಾಲಿನ್ಯ, ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ ಏರಿಕೆ, ಸುಸ್ಥಿರ ಅಭಿವೃದ್ಧಿ ಮತ್ತು ವನ್ಯಜೀವಿ ಅಪರಾಧಗಳಂತಹ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿದೆ. ವಿಶ್ವ ಪರಿಸರ ದಿನವು ಸಾರ್ವಜನಿಕ ಸಂಪರ್ಕಕ್ಕಾಗಿ ಜಾಗತಿಕ ವೇದಿಕೆಯಾಗಿದ್ದು, ವಾರ್ಷಿಕವಾಗಿ 143 ದೇಶಗಳು ಈ ದಿನಾಚರಣೆಯಲ್ಲಿ ಭಾಗವಹಿಸುತ್ತವೆ. ಪ್ರತಿ ವರ್ಷ, ಈ ಕಾರ್ಯಕ್ರಮವು ಸರ್ಕಾರೇತರ ಸಂಸ್ಥೆಗಳು, ಸಮುದಾಯಗಳು, ಸರ್ಕಾರಗಳು ಮತ್ತು ಸೆಲೆಬ್ರಿಟಿಗಳಿಗೆ ಪರಿಸರದ ಕಾರಣಗಳನ್ನು ಪ್ರತಿಪಾದಿಸಲು ವಿಷಯ ಮತ್ತು ವೇದಿಕೆಯನ್ನು ಒದಗಿಸಿದೆ. ಇತಿಹಾಸ ವಿಶ್ವ ಪರಿಸರ ದಿನವನ್ನು 1972 ರಲ್ಲಿ ವಿಶ್ವಸಂಸ್ಥೆಯು ಮಾನವ ಪರಿಸರದ ಸ್ಟಾಕ್‌ಹೋಮ್ ಸಮ್ಮೇಳನದಲ್ಲಿ (5-16 ಜೂನ್ 1972) ಸ್ಥಾಪಿಸಿತು, ಇದು ಮಾನವನ ಪರಸ್ಪರ ಕ್ರಿಯೆಗಳು ಮತ್ತು ಪರಿಸರದ ಏಕೀಕರಣದ ಚರ್ಚೆಗಳಿಂದ ಉಂಟಾಯಿತು. ಒಂದು ವರ್ಷದ ನಂತರ, 1973 ರಲ್ಲಿ ಮೊದಲ ಡಬ್ಲೂಇಡಿ ಅನ್ನು "ಒಂದೇ ಭೂಮಿ" ಎಂಬ ವಿಷಯದೊಂದಿಗೆ ನಡೆಸಲಾಯಿತು. ಅತಿಥೇಯ ನಗರಗಳು ವಿಶ್ವ ಪರಿಸರ ದಿನಾಚರಣೆಯನ್ನು ಈ ಕೆಳಗಿನ ನಗರಗಳಲ್ಲಿ ಆಯೋಜಿಸಲಾಗಿದೆ (ಮತ್ತು ನಡೆಯಲಿದೆ): ವಾರ್ಷಿಕ ಥೀಮ್‌ಗಳು, ಪ್ರಮುಖ ಉಪಕ್ರಮಗಳು ಮತ್ತು ಸಾಧನೆಗಳು ಸುಮಾರು ಐದು ದಶಕಗಳಿಂದ, ವಿಶ್ವ ಪರಿಸರ ದಿನವು ಜಾಗೃತಿ ಮೂಡಿಸುತ್ತಿದೆ, ಕ್ರಿಯೆಯನ್ನು ಬೆಂಬಲಿಸುತ್ತದೆ ಮತ್ತು ಪರಿಸರಕ್ಕೆ ಬದಲಾವಣೆಗಳನ್ನು ತರುತ್ತಿದೆ. ಡಬ್ಲೂಇಡಿಗಳ ಇತಿಹಾಸದಲ್ಲಿ ಪ್ರಮುಖ ಸಾಧನೆಗಳ ಟೈಮ್‌ಲೈನ್ ಇಲ್ಲಿದೆ: 2005 2005 ರ ವಿಶ್ವ ಪರಿಸರ ದಿನದ ಥೀಮ್ "Green Cities"ಮತ್ತು ಘೋಷಣೆ "Plant for the Planet!". 2006 ಡಬ್ಲೂಇಡಿ 2006 ರ ವಿಷಯವು ಮರುಭೂಮಿಗಳು ಮತ್ತು ಮರುಭೂಮಿೀಕರಣವಾಗಿತ್ತು ಮತ್ತು "Don't desert drylands" ಎಂಬ ಘೋಷಣೆಯಾಗಿತ್ತು. ಘೋಷಣೆಯು ಒಣಭೂಮಿಯನ್ನು ರಕ್ಷಿಸುವ ಮಹತ್ವವನ್ನು ಒತ್ತಿಹೇಳಿತು. 2006 ರ ವಿಶ್ವ ಪರಿಸರ ದಿನದಲ್ಲಿ ಪ್ರಮುಖವಾಗಿ ಅಂತರಾಷ್ಟ್ರೀಯ ಆಚರಣೆಗಳನ್ನು ಅಲ್ಜೀರಿಯಾದಲ್ಲಿ ನಡೆಸಲಾಯಿತು. 2007 2007 ರ ವಿಶ್ವ ಪರಿಸರ ದಿನದ ವಿಷಯವು "Melting Ice – a Hot Topic?" ಅಂತರಾಷ್ಟ್ರೀಯ ಧ್ರುವ ವರ್ಷದಲ್ಲಿ, ಡಬ್ಲೂಇಡಿ 2007 ಹವಾಮಾನ ಬದಲಾವಣೆಯು ಧ್ರುವೀಯ ಪರಿಸರ ವ್ಯವಸ್ಥೆಗಳು ಮತ್ತು ಸಮುದಾಯಗಳ ಮೇಲೆ, ಪ್ರಪಂಚದ ಇತರ ಮಂಜುಗಡ್ಡೆ ಮತ್ತು ಹಿಮದಿಂದ ಆವೃತವಾದ ಪ್ರದೇಶಗಳ ಮೇಲೆ ಮತ್ತು ಜಾಗತಿಕ ಪರಿಣಾಮಗಳ ಮೇಲೆ ಬೀರುವ ಪರಿಣಾಮಗಳ ಮೇಲೆ ಕೇಂದ್ರೀಕರಿಸಿದೆ. ಡಬ್ಲೂಇಡಿ 2007 ರ ಮುಖ್ಯ ಅಂತರಾಷ್ಟ್ರೀಯ ಆಚರಣೆಗಳು ಆರ್ಕ್ಟಿಕ್ ವೃತ್ತದ ಉತ್ತರದಲ್ಲಿರುವ ನಾರ್ವೆಯ ಟ್ರೋಮ್ಸೋ ನಗರದಲ್ಲಿ ನಡೆಯಿತು. ಈಜಿಪ್ಟ್ 2007 ರ ವಿಶ್ವ ಪರಿಸರ ದಿನಕ್ಕಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. 2008 2008 ರ ವಿಶ್ವ ಪರಿಸರ ದಿನದ ಆತಿಥೇಯರು ನ್ಯೂಜಿಲೆಂಡ್ ಆಗಿತ್ತು, ಮುಖ್ಯ ಅಂತರಾಷ್ಟ್ರೀಯ ಆಚರಣೆಗಳನ್ನು ವೆಲ್ಲಿಂಗ್ಟನ್‌ನಲ್ಲಿ ನಿಗದಿಪಡಿಸಲಾಗಿದೆ. 2008 ರ ಘೋಷಣೆಯು " CO 2, ಕಿಕ್ ದಿ ಹ್ಯಾಬಿಟ್! ಕಡಿಮೆ ಕಾರ್ಬನ್ ಆರ್ಥಿಕತೆಯ ಕಡೆಗೆ." ಕಾರ್ಬನ್ ತಟಸ್ಥತೆಯನ್ನು ಸಾಧಿಸಲು ಪ್ರತಿಜ್ಞೆ ಮಾಡಿದ ಮೊದಲ ದೇಶಗಳಲ್ಲಿ ನ್ಯೂಜಿಲೆಂಡ್ ಒಂದಾಗಿದೆ ಮತ್ತು ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡುವ ಸಾಧನವಾಗಿ ಅರಣ್ಯ ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ. ಚಿಕಾಗೋ ಬೊಟಾನಿಕಲ್ ಗಾರ್ಡನ್ 5 ಜೂನ್ 2008 ರಂದು ವಿಶ್ವ ಪರಿಸರ ದಿನದಂದು ಉತ್ತರ ಅಮೆರಿಕಾದ ಆತಿಥೇಯ ವಾಗಿ ಕಾರ್ಯನಿರ್ವಹಿಸಿತು. 2009 ಡಬ್ಲೂಇಡಿ 2009 ರ ವಿಷಯವೆಂದರೆ "ಯುವರ್ ಪ್ಲಾನೆಟ್ ನೀಡ್ಸ್ ಯು - ಯುನೈಟ್ ಟು ಕಾಂಬಾಟ್ ಕ್ಲೈಮೇಟ್ ಚೇಂಜ್", ಮತ್ತು ಮೈಕೆಲ್ ಜಾಕ್ಸನ್ ರ "ಅರ್ತ್ ಸಾಂಗ್" ಅನ್ನು "ವಿಶ್ವ ಪರಿಸರ ದಿನದ ಹಾಡು" ಎಂದು ಘೋಷಿಸಲಾಯಿತು. ಇದನ್ನು ಮೆಕ್ಸಿಕೋದಲ್ಲಿ ಆಯೋಜಿಸಲಾಗಿತ್ತು. 2010 "ಹಲವು ಜಾತಿಗಳು. ಒಂದು ಗ್ರಹ. ಒನ್ ಫ್ಯೂಚರ್", 2010 ರ ವಿಷಯವಾಗಿತ್ತು. ಇದು 2010 ರ ಅಂತಾರಾಷ್ಟ್ರೀಯ ಜೀವವೈವಿಧ್ಯ ವರ್ಷದ ಭಾಗವಾಗಿ ಭೂಮಿಯ ಮೇಲಿನ ಜೀವ ವೈವಿಧ್ಯತೆಯನ್ನು ಆಚರಿಸಿತು. ಇದನ್ನು ರುವಾಂಡಾದಲ್ಲಿ ಆಯೋಜಿಸಲಾಗಿತ್ತು. ಬೀಚ್ ಕ್ಲೀನ್-ಅಪ್‌ಗಳು, ಸಂಗೀತ ಕಚೇರಿಗಳು, ಪ್ರದರ್ಶನಗಳು, ಚಲನಚಿತ್ರೋತ್ಸವಗಳು, ಸಮುದಾಯ ಕಾರ್ಯಕ್ರಮಗಳು ಮತ್ತು ಹೆಚ್ಚಿನವುಗಳೊಂದಿಗೆ ವಿಶ್ವದಾದ್ಯಂತ ಸಾವಿರಾರು ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಪ್ರತಿ ಖಂಡವು ( ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ) "ಪ್ರಾದೇಶಿಕ ಅತಿಥೇಯ ನಗರ" ವನ್ನು ಹೊಂದಿತ್ತು, ಯುಎನ್ ಪಿಟ್ಸ್‌ಬರ್ಗ್, ಪೆನ್ಸಿಲ್ವೇನಿಯಾವನ್ನು ಎಲ್ಲಾ ಉತ್ತರದ ಆತಿಥೇಯರನ್ನಾಗಿ ಆಯ್ಕೆ ಮಾಡಿತು. 2011 2011ರ ವಿಶ್ವ ಪರಿಸರ ದಿನವನ್ನು ಭಾರತ ಆಯೋಜಿಸಿತ್ತು. ಭಾರತವು ಮೊದಲ ಬಾರಿಗೆ ಆತಿಥ್ಯ ವಹಿಸಿದೆ. 2011 ರ ಥೀಮ್ 'ಕಾಡುಗಳು – ನಿಮ್ಮ ಸೇವೆಯಲ್ಲಿ ಪ್ರಕೃತಿ'. ಬೀಚ್ ಕ್ಲೀನ್-ಆಪ್‌ಗಳು, ಸಂಗೀತ ಕಚೇರಿಗಳು, ಪ್ರದರ್ಶನಗಳು, ಚಲನಚಿತ್ರೋತ್ಸವಗಳು, ಸಮುದಾಯ ಕಾರ್ಯಕ್ರಮಗಳು, ಮರ ನೆಡುವಿಕೆ ಮತ್ತು ಹೆಚ್ಚಿನವುಗಳೊಂದಿಗೆ ವಿಶ್ವದಾದ್ಯಂತ ಸಾವಿರಾರು ಚಟುವಟಿಕೆಗಳನ್ನು ಆಯೋಜಿಸಲಾಗಿದೆ. 2012 2012 ರ ವಿಶ್ವ ಪರಿಸರ ದಿನದ ವಿಷಯವು ಹಸಿರು ಆರ್ಥಿಕತೆಯಾಗಿದೆ. ಜನರು ತಮ್ಮ ಚಟುವಟಿಕೆಗಳು ಮತ್ತು ಜೀವನಶೈಲಿಯನ್ನು ಪರೀಕ್ಷಿಸಲು ಮತ್ತು "ಹಸಿರು ಆರ್ಥಿಕತೆ" ಪರಿಕಲ್ಪನೆಯು ಹೇಗೆ ಹೊಂದುತ್ತದೆ ಎಂಬುದನ್ನು ನೋಡಲು ಜನರನ್ನು ಆಹ್ವಾನಿಸುವ ಗುರಿಯನ್ನು ವಿಷಯವನ್ನು ಹೊಂದಿತ್ತು. ವರ್ಷದ ಸಂಭ್ರಮಾಚರಣೆಯ ಅತಿಥೇಯ ರಾಷ್ಟ್ರ ಬ್ರೆಜಿಲ್ ಆಗಿತ್ತು. 2013 ವಿಶ್ವ ಪರಿಸರ ದಿನದ 2013 ರ ಥೀಮ್ "ಯೋಚಿಸಿ. ತಿನ್ನು. ಉಳಿಸು". ಅಭಿಯಾನವು ಆಹಾರದಲ್ಲಿನ ಬೃಹತ್ ವಾರ್ಷಿಕ ವ್ಯರ್ಥ ಮತ್ತು ನಷ್ಟವನ್ನು ತಿಳಿಸಿತು. ಆಹಾರವನ್ನು ಸಂರಕ್ಷಿಸಿದರೆ, ಹೆಚ್ಚಿನ ಪ್ರಮಾಣದ ಆಹಾರವನ್ನು ಬಿಡುಗಡೆ ಮಾಡುವುದರ ಜೊತೆಗೆ ಒಟ್ಟಾರೆ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುತ್ತದೆ. ಆಹಾರ ವ್ಯರ್ಥವಾಗುವ ಜೀವನಶೈಲಿಯನ್ನು ಹೊಂದಿರುವ ದೇಶಗಳಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಈ ಅಭಿಯಾನ ಹೊಂದಿತ್ತು. ಪ್ರಪಂಚದಾದ್ಯಂತದ ಆಹಾರದ ಉತ್ಪಾದನೆಯಿಂದಾಗಿ ಒಟ್ಟಾರೆ ಪರಿಸರ ಪ್ರಭಾವವನ್ನು ಕಡಿಮೆ ಮಾಡಲು ಅವರು ತಿನ್ನುವ ಆಹಾರದ ಬಗ್ಗೆ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಜನರಿಗೆ ಅಧಿಕಾರ ನೀಡುವ ಗುರಿಯನ್ನು ಇದು ಹೊಂದಿದೆ. ವರ್ಷದ ಆಚರಣೆಗಳಿಗೆ ಆತಿಥೇಯ ದೇಶ ಮಂಗೋಲಿಯಾ. 2014 2014 ರ ಡಬ್ಲೂಇಡಿ ಯ ವಿಷಯವು ಸಣ್ಣ ದ್ವೀಪಗಳ ಅಭಿವೃದ್ಧಿಶೀಲ ರಾಜ್ಯಗಳ ಅಂತರರಾಷ್ಟ್ರೀಯ ವರ್ಷ (SIDS) ಆಗಿತ್ತು. ಈ ವಿಷಯವನ್ನು ಆಯ್ಕೆ ಮಾಡುವ ಮೂಲಕ ಯುಎನ್ ಜನರಲ್ ಅಸೆಂಬ್ಲಿಯು SIDS ನ ಅಭಿವೃದ್ಧಿ ಸವಾಲುಗಳು ಮತ್ತು ಯಶಸ್ಸುಗಳನ್ನು ಹೈಲೈಟ್ ಮಾಡುವ ಗುರಿಯನ್ನು ಹೊಂದಿದೆ. 2014 ರಲ್ಲಿ, ವಿಶ್ವ ಪರಿಸರ ದಿನವು ಜಾಗತಿಕ ತಾಪಮಾನ ಏರಿಕೆ ಮತ್ತು ಸಾಗರ ಮಟ್ಟಗಳ ಮೇಲೆ ಅದರ ಪ್ರಭಾವದ ಮೇಲೆ ಕೇಂದ್ರೀಕರಿಸಿದೆ. ಡಬ್ಲೂಇಡಿ 2014 ರ ಸ್ಲೋಗನ್ "ನಿಮ್ಮ ಧ್ವನಿಯನ್ನು ಹೆಚ್ಚಿಸಿ, ಆದರೆ ಸಮುದ್ರ ಮಟ್ಟಕ್ಕಲ್ಲ"("Raise your voice not the sea level"), ಬಾರ್ಬಡೋಸ್ ವಿಶ್ವ ಪರಿಸರ ದಿನದ 42 ನೇ ಆವೃತ್ತಿಯ ಜಾಗತಿಕ ಆಚರಣೆಗಳನ್ನು ಆಯೋಜಿಸಿತು. ಯುಎನ್ ಪರಿಸರ ಕಾರ್ಯಕ್ರಮವು ನಟ ಇಯಾನ್ ಸೋಮರ್‌ಹಾಲ್ಡರ್ ಅವರನ್ನು ಡಬ್ಲೂಇಡಿ 2014 ರ ಅಧಿಕೃತ ಸದ್ಭಾವನಾ ರಾಯಭಾರಿ ಎಂದು ಹೆಸರಿಸಿದೆ. 2015 ವಿಶ್ವ ಪರಿಸರ ದಿನದ 2015 ರ ಆವೃತ್ತಿಯ ಸ್ಲೋಗನ್ "ಏಳು ಶತಕೋಟಿ ಕನಸುಗಳು. ಒಂದು ಗ್ರಹ. ಎಚ್ಚರಿಕೆಯಿಂದ ಅನುಭೋಗಿಸಿ"("Seven Billion Dreams. One Planet. Consume with Care"). ಸಾಮಾಜಿಕ ಮಾಧ್ಯಮದಲ್ಲಿ ಮತದಾನ ಪ್ರಕ್ರಿಯೆಯ ಮೂಲಕ ಈ ಘೋಷಣೆಯನ್ನು ಆರಿಸಲಾಯಿತು. ಸೌದಿ ಅರೇಬಿಯಾದಲ್ಲಿ, ಡಬ್ಲೂಇಡಿ 2015 ರ ಬೆಂಬಲವಾಗಿ 15 ಮಹಿಳೆಯರು ಭಿತ್ತಿಚಿತ್ರವನ್ನು ರೂಪಿಸಲು 2000 ಪ್ಲಾಸ್ಟಿಕ್ ಚೀಲಗಳನ್ನು ಮರುಬಳಕೆ ಮಾಡಿದರು. ಭಾರತದಲ್ಲಿ ನರೇಂದ್ರ ಮೋದಿಯವರು ವಿಶ್ವ ಪರಿಸರ ದಿನವನ್ನು ಆಚರಿಸಲು ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಕದಂಬ ಸಸಿಯನ್ನು ನೆಟ್ಟರು. ಡಬ್ಲೂಇಡಿಯ 43 ನೇ ಆವೃತ್ತಿಯ ಅತಿಥೇಯ ದೇಶ ಇಟಲಿ. ಮಿಲನ್ ಎಕ್ಸ್‌ಪೋದ ಭಾಗವಾಗಿ ಆಚರಣೆಗಳು ನಡೆದವು: ಫೀಡಿಂಗ್ ದಿ ಪ್ಲಾನೆಟ್ - ಎನರ್ಜಿ ಫಾರ್ ಲೈಫ್(ಗ್ರಹಕ್ಕೆ ಶಕ್ತಿ ನೀಡುವುದು - ಜೀವನಕ್ಕಾಗಿ ಶಕ್ತಿ). 2016 2016 ರ ಡಬ್ಲೂಇಡಿಯನ್ನು "ಗೋ ವೈಲ್ಡ್ ಫಾರ್ ಲೈಫ್" ಎಂಬ ವಿಷಯದ ಅಡಿಯಲ್ಲಿ ಆಯೋಜಿಸಲಾಗಿದೆ. ಡಬ್ಲೂಇಡಿಯ ಈ ಆವೃತ್ತಿಯು ವನ್ಯಜೀವಿಗಳಲ್ಲಿನ ಅಕ್ರಮ ವ್ಯಾಪಾರವನ್ನು ಕಡಿಮೆ ಮಾಡಲು ಮತ್ತು ತಡೆಗಟ್ಟುವ ಗುರಿಯನ್ನು ಹೊಂದಿತ್ತು. ಪ್ಯಾರಿಸ್‌ನಲ್ಲಿ ನಡೆದ COP21 ಸಮಯದಲ್ಲಿ ಅಂಗೋಲಾವನ್ನು 2016ರ ಡಬ್ಲೂಇಡಿಯ ಅತಿಥೇಯ ರಾಷ್ಟ್ರವಾಗಿ ಆಯ್ಕೆ ಮಾಡಲಾಯಿತು. 2017 2017 ರ ಥೀಮ್ 'ಜನರನ್ನು ಪ್ರಕೃತಿಗೆ ಸಂಪರ್ಕಿಸುವುದು - ನಗರದಲ್ಲಿ ಮತ್ತು ಭೂಮಿಯಲ್ಲಿ, ಧ್ರುವಗಳಿಂದ ಸಮಭಾಜಕದವರೆಗೆ'. ಆತಿಥೇಯ ರಾಷ್ಟ್ರ ಕೆನಡಾ. 2018 2018 ರ ಥೀಮ್ "ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ". ಆತಿಥೇಯ ರಾಷ್ಟ್ರ ಭಾರತವಾಗಿತ್ತು. ಈ ಥೀಮ್ ಅನ್ನು ಆಯ್ಕೆ ಮಾಡುವ ಮೂಲಕ, ಪ್ಲಾಸ್ಟಿಕ್ ಮಾಲಿನ್ಯದ ಭಾರವನ್ನು ಕಡಿಮೆ ಮಾಡಲು ಜನರು ತಮ್ಮ ದೈನಂದಿನ ಜೀವನವನ್ನು ಬದಲಾಯಿಸಲು ಪ್ರಯತ್ನಿಸಬಹುದು ಎಂದು ಭಾವಿಸಲಾಗಿದೆ. ಏಕ-ಬಳಕೆ ಅಥವಾ ಬಿಸಾಡಬಹುದಾದ ವಸ್ತುಗಳ ಮೇಲಿನ ಅತಿಯಾದ ಅವಲಂಬನೆಯಿಂದ ಜನರು ಮುಕ್ತರಾಗಿರಬೇಕು, ಏಕೆಂದರೆ ಅವುಗಳು ತೀವ್ರವಾದ ಪರಿಸರ ಪರಿಣಾಮಗಳನ್ನು ಹೊಂದಿವೆ. ನಾವು ನಮ್ಮ ನೈಸರ್ಗಿಕ ಸ್ಥಳಗಳು, ನಮ್ಮ ವನ್ಯಜೀವಿಗಳು ಮತ್ತು ನಮ್ಮ ಸ್ವಂತ ಆರೋಗ್ಯವನ್ನು ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸಬೇಕು. ಭಾರತ ಸರ್ಕಾರವು 2022 ರ ವೇಳೆಗೆ ಭಾರತದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಪ್ರತಿಜ್ಞೆ ಮಾಡಿದೆ. 2019 2019 ರ ಥೀಮ್ "ವಾಯು ಮಾಲಿನ್ಯ ಹೊಡೆದುಹಾಕಿ". ಆತಿಥೇಯ ರಾಷ್ಟ್ರ ಚೀನಾ ಆಗಿತ್ತು. ವಾಯು ಮಾಲಿನ್ಯವು ವಾರ್ಷಿಕವಾಗಿ ಸುಮಾರು 7 ಮಿಲಿಯನ್ ಜನರನ್ನು ಕೊಲ್ಲುತ್ತದೆ ಎಂದು ಈ ಥೀಮ್ ಅನ್ನು ಆಯ್ಕೆ ಮಾಡಲಾಗಿದೆ. ರಿಯೂನಿಯನ್ ದ್ವೀಪದಲ್ಲಿ, ವಿಯೆಟ್ನಾಂನ ಮಿಸ್ ಅರ್ಥ್ 2018 ನ್ಗುಯಾನ್ ಫೋಂಗ್ ಖಾನ್ ಅವರು ವಿಶ್ವ ಪರಿಸರ ದಿನದ ಸಂದರ್ಭದಲ್ಲಿ " ಗ್ಲೋಬಲ್ ವಾರ್ಮಿಂಗ್ ಅನ್ನು ಹೇಗೆ ಎದುರಿಸುವುದು" ಎಂಬ ವಿಷಯದೊಂದಿಗೆ ತಮ್ಮ ಭಾಷಣವನ್ನು ಮಾಡಿದರು. 2020 2020 ರ ಥೀಮ್ "ಟೈಮ್ ಫಾರ್ ನೇಚರ್"/ "ಪ್ರಕೃತಿಗಾಗಿ ಸಮಯ", ಮತ್ತು ಜರ್ಮನಿಯ ಸಹಭಾಗಿತ್ವದಲ್ಲಿ ಕೊಲಂಬಿಯಾದಲ್ಲಿ ಆಯೋಜಿಸಲಾಗಿತು. ವಿಶ್ವದ ಅತಿದೊಡ್ಡ ಮೆಗಾಡೈವರ್ಸ್ ದೇಶಗಳಲ್ಲಿ ಕೊಲಂಬಿಯಾ ಒಂದಾಗಿದೆ ಮತ್ತು ಗ್ರಹದ ಜೀವವೈವಿಧ್ಯದ 10% ರಷ್ಟು ಹತ್ತಿರದಲ್ಲಿದೆ. ಇದು ಅಮೆಜಾನ್ ಮಳೆಕಾಡಿನ ಭಾಗವಾಗಿರುವುದರಿಂದ, ಕೊಲಂಬಿಯಾ ಪಕ್ಷಿ ಮತ್ತು ಆರ್ಕಿಡ್ ಪ್ರಭೇದಗಳಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು ಸಸ್ಯಗಳು, ಚಿಟ್ಟೆಗಳು, ಸಿಹಿನೀರಿನ ಮೀನುಗಳು ಮತ್ತು ಉಭಯಚರಗಳಲ್ಲಿ ಎರಡನೇ ಸ್ಥಾನದಲ್ಲಿದೆ. 2021 ವಿಶ್ವ ಪರಿಸರ ದಿನವು ಜೂನ್ 5 ರಂದು ಬರುತ್ತದೆ. 2021 ರ ಥೀಮ್ " ಇಕೋಸಿಸ್ಟಮ್ ರಿಸ್ಟೋರೇಶನ್ " / "ಪರಿಸರ ವ್ಯವಸ್ಥೆ ಪುನಃಸ್ಥಾಪನೆ",, ಪಾಕಿಸ್ತಾನದಿಂದ ಆಯೋಜಿಸಲ್ಪಟ್ಟಿದೆ. ಈ ಸಂದರ್ಭದಲ್ಲಿ ಯುಎನ್ ದಶಕ ಪರಿಸರ ವ್ಯವಸ್ಥೆಯ ಮರುಸ್ಥಾಪನೆಯನ್ನು ಸಹ ಪ್ರಾರಂಭಿಸಲಾಯಿತು. 2022 2022 ರ ವಿಶ್ವ ಪರಿಸರ ದಿನದ ಥೀಮ್ "ಕೇವಲ ಒಂದು ಭೂಮಿ" ಮತ್ತು ಈವೆಂಟ್ ಅನ್ನು ಸ್ವೀಡನ್ ಆಯೋಜಿಸಿದೆ. 2023 2023 ರ ವಿಶ್ವ ಪರಿಸರ ದಿನದ ಥೀಮ್ "ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರ" ಮತ್ತು ಈವೆಂಟ್ ಅನ್ನು ಕೋಟ್ ಡಿ'ಐವೋರ್ ಆಯೋಜಿಸಿದೆ. ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜನರ ಕ್ರಮಗಳು ಮುಖ್ಯವೆಂದು ಇದು ನೆನಪಿಸುತ್ತದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ನಿಭಾಯಿಸಲು ಸರ್ಕಾರಗಳು ಮತ್ತು ಉದ್ಯಮಗಳು ತೆಗೆದುಕೊಳ್ಳುತ್ತಿರುವ ಕ್ರಮಗಳು ಈ ಕ್ರಮದ ಪರಿಣಾಮವಾಗಿದೆ. ಈ ಕ್ರಿಯೆಯನ್ನು ವೇಗಗೊಳಿಸಲು ಮತ್ತು ವೃತ್ತಾಕಾರದ ಆರ್ಥಿಕತೆಗೆ ಪರಿವರ್ತನೆ ಮಾಡುವ ಸಮಯ ಇದು. ಸಹ ನೋಡಿ   ಆರ್ಬರ್ ದಿನ ಭೂಮಿಯ ದಿನ ಪರಿಸರ ಲೇಖನಗಳ ಸೂಚ್ಯಂಕ ಪರಿಸರ ದಿನಾಂಕಗಳ ಪಟ್ಟಿ ಪರಿಸರ ಪ್ರತಿಭಟನೆಗಳ ಪಟ್ಟಿ ಮಾನವ ಪರಿಸರದ ಮೇಲಿನ ವಿಶ್ವಸಂಸ್ಥೆಯ ಸಮ್ಮೇಳನ ಉಲ್ಲೇಖಗಳು ಬಾಹ್ಯ ಕೊಂಡಿಗಳು World Environment Day 2019 2008, 2009 World Environment Day 2018 Theme ಅಂತರಾಷ್ಟ್ರೀಯ ದಿನಾಚರಣೆಗಳು
2223
https://kn.wikipedia.org/wiki/%E0%B2%9C%E0%B2%BF%E0%B2%A8%E0%B2%BF%E0%B2%B5%E0%B2%BE
ಜಿನಿವಾ
ಸ್ವಿಟ್ಜರ್ಲ್ಯಾನ್ಡ್ ದೇಶದ ಎರಡನೇಯ ಅತಿ ಜನಸಂಖೆಯುಳ್ಳ ನಗರ ಜಿನೀವನಗರ ರೋನ್ ನದೀಕಣಿವೆಯಲ್ಲಿ, ಜಿನೀವ ಸರೋವರದ ನೈಋತ್ಯ ತುದಿಯಲ್ಲಿದೆ. ಜನಸಂಖ್ಯೆ 1,73,618 (1970). ಜಿನೀವ ವಿಭಾಗದ ಪಶ್ಚಿಮದಲ್ಲಿ ಜುರ ಪರ್ವತಶ್ರೇಣಿಯೂ ದಕ್ಷಿಣ ಮತ್ತು ಪೂರ್ವದಲ್ಲಿ ಸಾಲಿವ್ ಶ್ರೇಣಿಯ ಕಡಿವಾದ ಸುಣ್ಣಕಲ್ಲು ಮೈಯೂ ಇವೆ. ಅಂತರರಾಷ್ಟ್ರೀಯ ಸಮ್ಮೇಳನಗಳ ಮತ್ತು ಸಂಧಾನಗಳ ಕ್ಷೇತ್ರವಾಗಿ, ಬೌದ್ಧಿಕ, ವೈಜ್ಞಾನಿಕ ಹಾಗೂ ಧಾರ್ಮಿಕ ಅಧ್ಯಯನದ ಕೇಂದ್ರವಾಗಿ ಪ್ರಸಿದ್ಧವಾಗಿದೆ. ರೋನ್ ನದಿಯ ಎರಡೂ ದಂಡೆಗಳ ಮೇಲೆ ಜಿನೀವ ನಗರ ಹಬ್ಬಿದೆ. ಜಿನೀವ ಸರೋವರದಿಂದ ದಕ್ಷಿಣಕ್ಕೆ ಹರಿಯುವ ಈ ನದಿಗೆ ಒಂಬತ್ತು ಸೇತುವೆಗಳಿವೆ. ನದಿಯ ಎಡದಂಡೆಯ ಮೇಲೆ ದಕ್ಷಿಣಕ್ಕೆ ಒಂದು ಬೆಟ್ಟವುಂಟು. ಜಿನೀವ ನಗರ ಮೊದಲು ಅದರ ಮೇಲೆ ಸ್ಥಾಪಿತವಾಗಿತ್ತು. ಅಲ್ಲಿ ಲೌಕಿಕ ಭವನಗಳೂ ಉನ್ನತವಾದ ಸ್ಥಳದ ಮೇಲೆ ಸೇಂಟ್ ಪ್ಯೇರ್ ಕತಿಡ್ರಲೂ (12ನೆಯ ಶತಮಾನ) ಇದ್ದುವು. ಈ ಪುರಾತನ ನಗರದ ಬೀದಿಗಳು ಸುಂದರವಾಗಿ ಅಂಕುಡೊಂಕಾಗಿ ಮೇಲೇರುತ್ತವೆ. ಅವುಗಳ ಹೆಸರುಗಳೂ ಸುಂದರವಾಗಿವೆ. ಬೀದಿಗಳ ಎರಡೂ ಬದಿಗಳಲ್ಲಿರುವ ಭವ್ಯ ಭವನಗಳು 17 ಮತ್ತು 18ನೆಯ ಶತಮಾನಗಳವು. ಸುಪ್ರಸಿದ್ಧ ಫ್ರೆಂಚ್ ತತ್ತ್ವಜ್ಞಾನಿ ಜೀನ್ ಷಾóಕ್ ರೂಸೋ ಹುಟ್ಟಿದ್ದು ಇಲ್ಲಿಯ ಮನೆಯೊಂದರಲ್ಲಿ. ನಗರಭವನ ಪುನರುಜ್ಜೀವನಕಾಲದ ಒಂದು ಕಟ್ಟಡ. ಇದರ ಒಳಕೋಣೆಗಳಲ್ಲಿ 15ನೆಯ ಶತಮಾನದ ವರ್ಣಚಿತ್ರಗಳಿವೆ. ಜಾನ್ ಕ್ಯಾಲ್ವಿನ್, ಜಾನ್‍ನಾಕ್ಸ್ ಮುಂತಾದವರು ಬದುಕಿ ಬೋಧಿಸಿದ ಭವನಗಳೂ ಇಲ್ಲುಂಟು. ಪ್ಲ್ಯಾಸ್ ಡ್ಯು ಬೂರ್-ಡ-ಫೊರ್ ಚೌಕ, ನ್ಯಾಯಾಲಯ, 1559ರಲ್ಲಿ ಕ್ಯಾಲ್ವಿನನಿಂದ ಸ್ಥಾಪಿತವಾದ ಕಾಲೇಜ್ ಡ ಜಿನೀವ-ಇವು ಇತರ ಕೆಲವು ಪ್ರಮುಖ ಕಟ್ಟಡಗಳು. ಇತಿಹಾಸ ಮತ್ತು ಕಲಾ ವಸ್ತುಸಂಗ್ರಹಾಲಯದಲ್ಲಿ ಜಿನೀವದ ಮತ್ತು ಸ್ವಿಟ್‍ಜûರ್ಲೆಂಡಿನ ಅನೇಕ ಅಮೂಲ್ಯ ಕಲಾವಸ್ತುಗಳು, ವರ್ಣಚಿತ್ರಗಳು, ಲೇಸುಗಳು, ಗಡಿಯಾರಗಳು, ಪ್ರಾಚೀನ ಹೂದಾನಿಗಳು, ಎನಾಮಲ್ ವಸ್ತುಗಳು, ಹಳೆಯ ನಗರದ ಕಲಾತ್ಮಕ ಹಳೆಯುಳಿಕೆಗಳು ಇವೆ. ಬೆಟ್ಟದ ತಪ್ಪಲಲ್ಲಿ ಉತ್ತರದ ಕಡೆ, ಸರೋವರಕ್ಕೆ ಹತ್ತಿರದಲ್ಲಿ, ಇರುವುದು ಪ್ಲೇಸ್ ಡ್ಯು ಮೊಲಾರ್. ಇದು ಹಿಂದೆ ರೇವಾಗಿತ್ತು. ಇದರ ಪ್ರವೇಶದ್ವಾರದಲ್ಲಿ ಮಧ್ಯಯುಗದಲ್ಲಿ ಕಟ್ಟಲಾಗಿದ್ದ ಗೋಪುರವನ್ನು ಈಗ ಜೀರ್ಣೋದ್ಧಾರ ಮಾಡಲಾಗಿದೆ. ನಗರದ ಆಗ್ನೇಯ ಭಾಗದಲ್ಲಿರುವ ವಿಹಾರಪಥದ (ಪ್ರಾಮೆನೇಡ್) 300' ಗೋಡೆ 16ನೆಯ ಶತಮಾನದ ಮಹಾ ಮತಸುಧಾರಣೆಯ (ದಿ ರೆಫರ್ಮೇಷನ್) ಸ್ಮಾರಕ (1909-17). ಇದಕ್ಕೆ ಎದುರಾಗಿ ನಾಡಿನ ಮಹಾಧೀಮಂತರ ಮತ ಸುಧಾರಕರ ಪ್ರತಿಮೆಗಳಿವೆ. ವಿಶ್ವವಿದ್ಯಾಲಯ ಕಟ್ಟಡಗಳು (1863-72) ಇರುವುದು ಇದರ ಬಳಿಯಲ್ಲೇ. 1559ರಲ್ಲಿ ಆಕಾಡೆಮಿಯಾಗಿ ಕ್ಯಾಲ್ವಿನನಿಂದ ಸ್ಥಾಪಿತವಾದ ಈ ಸಂಸ್ಥೆ 1872ರಲ್ಲಿ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯಿತು. ಪ್ರಕೃತಿ ವಿಜ್ಞಾನ ವಸ್ತುಸಂಗ್ರಹಾಲಯವೂ ಅಮೂಲ್ಯ ಗ್ರಂಥಾಲಯವೂ ಇಲ್ಲಿವೆ. ಜಿನೀವದ ಅತ್ಯಂತ ಸುಂದರವಾದ ಪ್ಲೇಸ್ ನೀಫ್ ಚೌಕ ಇರುವುದು ವಿಹಾರ ಪಥದ ಉತ್ತರದಲ್ಲಿ. ಅದರ ನಡುವೆ ಇರುವ ಕಂಚಿನ ಅಶ್ವಾರೂಢನ ಪ್ರತಿಮೆ ಜನರಲ್ ಡ್ಯುಫೂರನದು. ಆ ಚೌಕದಲ್ಲಿರುವ ಕಟ್ಟಡಗಳಲ್ಲಿ ಮುಖ್ಯವಾದವು ಸಂಗೀತ ಅಕಾಡೆಮಿ (ಕನ್ಸರ್ವಾಟ್ವಾರ್), ಗ್ರ್ಯಾಂಡ್ ಥಿಯೇಟರ್ ಮತ್ತು ರಾತ್ ಮ್ಯೂಸಿಯಂ. ಪ್ಲೇಸ್ ನೀಫ್‍ನಿಂದ ಕೆಳಕ್ಕೆ ನದಿಯ ಬಳಿಗೆ ಬಂದರೆ ಸಿಗುವುದು ಪಾಂಟ್ ಡೆ ಲಾ ಟೂರ್ ಲ್‍ಈಲ್ (ದ್ವೀಪ ಗೋಪುರ ಸೇತುವೆ). ಇಲ್ಲಿ 13ನೆಯ ಶತಮಾನದ ಬಿಷಪ್‍ನ ದುರ್ಗದ (ಟೂರ್ ಡೆ ಲ್‍ಈಲ್) ಅವಶೇಷಗಳನ್ನು ಕಾಣಬಹುದು. ನದಿಯಿಂದಾಚೆಗೆ ಇರುವ ಸೇಂಟ್ ಝೆóರ್ವೆ ಜಿಲ್ಲೆಯಲ್ಲಿ ಗಡಿಯಾರ ಎನಾಮೆಲ್ ಮತ್ತು ಒಡವೆ ತಯಾರಿಸುವ ಕುಶಲಕಲೋದ್ಯಮಿಗಳಿದ್ದಾರೆ. ಸೇಂಟ್‍ಝೆóರ್ವೆ ಚರ್ಚು 15ನೆಯ ಶತಮಾನದ್ದು. ನದಿಯ ದಂಡೆಯ ಮೇಲೆ ಸಾಗುವ ರಸ್ತೆಯಲ್ಲಿ ನಡೆದರೆ ಕಾಣಿಸಿಗುವುದು ರೂಸೋನ ಪ್ರತಿಮೆ (1835). ನದಿಯ ಉತ್ತರ ದಂಡೆಯ ಮೇಲಿರುವ ಒಹ್ಟೆಲ್ ನ್ಯಾಸ್ಯಾನ್ಯಾಲ್ ಕಟ್ಟಡದಲ್ಲೇ ರಾಷ್ಟ್ರಗಳ ಕೂಟ (ಲೀಗ್ ಆಫ್ ನೇಷನ್ಸ್) ಮೊದಲು ಇದ್ದದ್ದು. ಜಿನೀವ ಸರೋವರದ ಬಳಿಯಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಭವನವಿದೆ. ವಿಶ್ವಸಂಸ್ಥೆಯ ಯೂರೋಪಿಯನ್ ಕಚೇರಿಯಾದ ಪ್ಯಾಲ್ ಡೇ ನ್ಯಾಸ್ಯಾನ್ ಇರುವುದು ಇದರ ಬಳಿಯಲ್ಲೇ. ಕುಂಭಕಲಾ ವಸ್ತುಸಂಗ್ರಹಾಲಯವೂ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯೂ ಇಲ್ಲಿವೆ. ರೋನ್ ನದಿಯ ಬಲದಂಡೆಯಲ್ಲಿ ಇರುವ ಪ್ರದೇಶದಲ್ಲಿ ವಾಲ್ಟೇರ್ ಜೀವಿಸಿದ್ದ ಮನೆಯನ್ನು ನೋಡಬಹುದು. ಇದನ್ನು ಜೀರ್ಣೋದ್ಧಾರ ಮಾಡಲಾಗಿದೆ. ಇಲ್ಲಿ ವಾಲ್ಟೇರನ ಮೊದಲ ಪ್ರಕಾಶನಗಳನ್ನೂ ಅವನ ಕೃತಿಗಳ ಹಸ್ತಪ್ರತಿಗಳನ್ನೂ ಇಡಲಾಗಿದೆ. ಜಿನೀವದ ಸುತ್ತ ಹಸುರು ಪಟ್ಟಿಯಂತೆ ಉದ್ಯಾನಗಳು ಹಬ್ಬಿವೆ. ಸ್ವಿಸ್ ಸಾಂಸ್ಕøತಿಕ ಜೀವನದ, ಅಂತರರಾಷ್ಟ್ರೀಯ ಚಳವಳಿಗಳ ಕೇಂದ್ರವೆಂದು ಪ್ರಸಿದ್ಧವಾದ ಜಿನೀವ ಒಂದು ಕೈಗಾರಿಕಾನಗರ ಕೂಡ. ಗಡಿಯಾರಗಳು ಇಲ್ಲಿಯ ಮುಖ್ಯ ಉತ್ಪನ್ನ. ಒಡವೆ, ಎನಾಮೆಲ್ ಉಪಕರಣಗಳೂ ವಿಶೇಷವಾಗಿ ತಯಾರಾಗುತ್ತವೆ. ವಿದ್ಯುತ್‍ಯಂತ್ರ, ವೈದ್ಯ ಉಪಕರಣ, ಸೂಕ್ಷ್ಮ ಸಲಕರಣೆ, ಜವಳಿ, ಆಹಾರಪದಾರ್ಥ, ರಸಾಯನ ಮತ್ತು ಮುದ್ರಣ ಕೈಗಾರಿಕೆಗಳೂ ಬ್ಯಾಂಕಿಂಗ್ ಉದ್ಯಮವೂ ಬೆಳದಿವೆ. ಹೋಟೆಲ್ ಉದ್ಯಮ ಪ್ರವರ್ಧಮಾನವಾಗಿದೆ. ಜಿನೀವದಿಂದ ಸ್ವಿಟ್‍ಜರ್ಲೆಂಡಿನ ಇತರ ಮುಖ್ಯ ಸ್ಥಳಗಳಿಗೂ ಫ್ರಾನ್ಸಿಗೂ ರೈಲ್ವೆ ಸಂಪರ್ಕವುಂಟು. ರೈಲ್ವೆ ನಿಲ್ದಾಣ ಇರುವುದು ನದಿಯ ಬಲದಂಡೆಯ ಮೇಲೆ. ನಗರಕ್ಕೆ ವಾಯವ್ಯದಲ್ಲಿ 5 ಕಿ.ಮೀ. ದೂರದಲ್ಲಿ ವಿಮಾನ ನಿಲ್ದಾಣವುಂಟು. ಜಿನೀವ ಸರೋವರದ ಮೇಲೆ ಸ್ಟೀಮರುಗಳು ಸಂಚರಿಸುತ್ತವೆ. ಇತಿಹಾಸ ಜಿನೀವ ನಗರ ಇತಿಹಾಸಪೂರ್ವಕಾಲದಲ್ಲೇ (ಕ್ರಿ.ಪೂ. 5-4ನೆಯ ಸಹಸ್ರಮಾನ) ಸರೋವರ ತೀರದ ಒಂದು ಸಮುದಾಯ ಕೇಂದ್ರವಾಗಿತ್ತು. ಅದರ ಅವಶೇಷಗಳು ಇಂದಿಗೂ ಇವೆ. ಜಿನೀವ. ಕೋಟೆಯಿಂದ ರಕ್ಷಿಸಲ್ಪಟ್ಟ ಒಂದು ನಗರವೆಂದು ಸೀಜರ್ ಹೇಳಿದ್ದಾನೆ, ರೋಮನರ ಕಾಲದ ಅವಶೇಷಗಳು ಇಲ್ಲುಂಟು. ಮುಂದೆ ಜಿನೀವ ವಿಯೆನ್ನ ಪ್ರಾಂತ್ಯದ ಸಮುದಾಯಕ್ಕೆ ಸೇರಿದ್ದುದು ದಾಖಲೆಗಳಿಂದ ತಿಳಿದುಬರುತ್ತದೆ. 5ನೆಯ ಶತಮಾನದ ಮಧ್ಯಭಾಗದಲ್ಲಿ ಬರ್ಗಂಡಿಯನರ ಆಡಳಿತಕ್ಕೆ ಇದು ಒಳಪಟ್ಟಿತು; ರೋಮನ್ ಬಿಷಪ್ ಪ್ರಭಾವಕ್ಕೂ ಒಳಗಾಯಿತು. ಅನಂತರ ಅದು ಫ್ರಾಂಕ್ ವಂಶದ ರಾಜರ ಕೈಸೇರಿತು. 13ನೆಯ ಶತಮಾನದ ವೇಳೆಗೆ ಜಿನೀವ ಪ್ರಜೆಗಳು ಒಂದು ಪುರಸಭೆ ರಚಿಸಿಕೊಂಡರು. ಸವಾಯ್‍ನ ಡ್ಯೂಕ್ ಜಿನೀವವನ್ನು ಪಡೆದುಕೊಂಡ. ಅವನ ಮನೆತನದ ಆಡಳಿತಕ್ಕೆ ಜಿನೀವ ಸಂಪೂರ್ಣವಾಗಿ ಸೇರುವ ಮುನ್ನ ಸ್ವಿಸ್ ಸಂಸ್ಥಾನಗಳ ರಚನೆ ಅಸ್ತಿತ್ವಕ್ಕೆ ಬಂತು. ಜಿನೀವದ ಪ್ರಜೆಗಳು ಸ್ವಿಸ್‍ನ ಮೊರೆ ಹೋದರು. 1530ರಲ್ಲಿ ಸ್ವಿಸ್ಸರ ಪ್ರಾಬಲ್ಯದಿಂದಾಗಿ ಸವಾಯ್‍ನ ದೊರೆ ಮತ್ತು ಬಿಷಪರು ಜಿನೀವದ ತಂಟೆಗೆ ಬರುವುದಿಲ್ಲವೆಂದು ಸ್ವಿಸ್ ಆಡಳಿತದೊಡನೆ ಒಪ್ಪಂದ ಮಾಡಿಕೊಂಡರು. 1535ರಲ್ಲಿ ಜಿನೀವ ಪ್ರಾಟೆಸ್ಟಂಟ್ ಮತವನ್ನು ಸ್ವೀಕರಿಸಿತು. 16ನೆಯ ಶತಮಾನದ ಮಧ್ಯದಲ್ಲಿ ಫ್ರೆಂಚ್ ನಿರಾಶ್ರಿತ ಜಾನ್ ಕ್ಯಾಲ್ವಿನ್ ಜಿನೀವದಲ್ಲಿ ನೆಲೆಸಿ, ಸ್ವಾತಂತ್ರ್ಯ ಗಳಿಸಿದ್ದ ಅಲ್ಲಿಯ ಜನರಲ್ಲಿ ಧಾರ್ಮಿಕ ಶಿಸ್ತನ್ನು ರೂಢಿಸಿದ. ಪ್ರಾಟೆಸ್ಟಂಟ್ ಮತಬೋಧಕರಿಗೆ ತರಬೇತಿ ನೀಡುವ ಉದ್ದೇಶದಿಂದ ಅವನು ಇಲ್ಲಿ ಜಿನೀವ ಅಕಾಡೆಮಿಯನ್ನು ಸ್ಥಾಪಿಸಿದ. ನೆರೆಯ ಫ್ರಾನ್ಸಿನ ರಾಜಕೀಯ ತುಳಿತಕ್ಕೆ ಸಿಕ್ಕಿ ಜಿನೀವ ನೋವು ನಷ್ಟಗಳನ್ನು ಅನುಭವಿಸುತ್ತಲೇ ಇತ್ತು. 18ನೆಯ ಶತಮಾನದಲ್ಲಿ ನೆಪೋಲಿಯನನ ಆಡಳಿತಕ್ಕೆ ಸಿಕ್ಕಿ ನೊಂದ ಈ ನಗರದ ಜನರು ಮತ್ತೆ ಬೇಗ ಸ್ವತಂತ್ರರಾದರು. 1815ರಲ್ಲಿ ಇದು ಸ್ವಿಸ್ ಒಕ್ಕೂಟವನ್ನು ಸೇರಿತು. ಜಿನೀವ 1847ರಲ್ಲಿ ಉದಾರವಾದ ಸಂವಿಧಾನವೊಂದನ್ನು ಸ್ವೀಕರಿಸಿತು. ಮೊದಲು ಇದು ಹಳೆಯ ಕ್ಯಾತೊಲಿಕ್‍ಗಳ ಪರವಾಗಿದ್ದು ರೋಮನ್ ಕ್ಯಾತೊಲಿಕರಿಗೆ ವಿರೋಧವಾಗಿದ್ದರೂ ಅನಂತರ ಅವರ ಬಗ್ಗೆ ಮೆದು ನೀತಿ ತಳೆಯಿತು. 1907ರಲ್ಲಿ ಚರ್ಚ್ ಮತ್ತು ಸರ್ಕಾರಗಳು ಬೇರೆಬೇರೆಯಾಗಲು ಪ್ರಜೆಗಳು ಮತ ನೀಡಿದರು. ಜಿನೀವದ ಸ್ವಾತಂತ್ರ ಪರಂಪರೆ, ಸ್ವಿಸ್ ತಾಟಸ್ಥ್ಯ ನೀತಿ-ಇವುಗಳಿಂದಾಗಿ ಒಂದನೆಯ ಮಹಾಯುದ್ಧಾನಂತರ ಇಲ್ಲಿ ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಕೇಂದ್ರವನ್ನು ಸ್ಥಾಪಿಸಲಾಯಿತು. ಅಂತರರಾಷ್ಟ್ರಿಯ ಕಾರ್ಮಿಕ ಕಚೇರಿಯೂ ಇಲ್ಲಿದೆ. ಎರಡನೆಯ ಮಹಾಯುದ್ಧಾನಂತರ 1947ರಲ್ಲಿ ವಿಶ್ವ ಸಂಸ್ಥೆಯ ಯೂರೋಪಿಯನ್ ಕೇಂದ್ರವನ್ನು ಇಲ್ಲಿ ಸ್ಥಾಪಿಸಲಾಯಿತು. ಬಾಹ್ಯ ಸಂಪರ್ಕಗಳು Geneva – Welcome to Networld Official website of the Canton of Geneva Geneva public transport Geneva Tourist Information Office ಯುರೋಪ್ ಖಂಡದ ಪ್ರಮುಖ ನಗರಗಳು
2226
https://kn.wikipedia.org/wiki/%E0%B2%95%E0%B3%8A%E0%B2%B2%E0%B2%82%E0%B2%AC%E0%B3%8A
ಕೊಲಂಬೊ
ಕೊಲಂಬೊ (ಸಿಂಹಳಿ: , ತಮಿಳು:கொழும்பு) ಶ್ರೀಲಂಕ ದೇಶದ ಅತ್ಯಂತ ದೊಡ್ಡ ನಗರ ಮತ್ತು ಅದರ ಹಿಂದಿನ ಆಡಳಿತ ರಾಜಧಾನಿ. ಇದು ದೇಶದ ಪಶ್ಚಿಮ ಕರಾವಳಿಯಲ್ಲಿದ್ದು, ಪ್ರಸ್ತಕ ರಾಜಧಾನಿಯಾಗಿರುವ ಶ್ರೀ ಜಯವರ್ಧನೆಪುರ ಕೊಟ್ಟೆಯ ಸಮೀಪದಲ್ಲಿದೆ. ಏಷ್ಯಾ ಖಂಡದ ನಗರಗಳು ಶ್ರೀ ಲಂಕಾ
2227
https://kn.wikipedia.org/wiki/%E0%B2%87%E0%B2%B8%E0%B3%8D%E0%B2%B2%E0%B2%BE%E0%B2%AE%E0%B2%BE%E0%B2%AC%E0%B2%BE%E0%B2%A6%E0%B3%8D
ಇಸ್ಲಾಮಾಬಾದ್
ಇಸ್ಲಾಮಾಬಾದ್ ಪಾಕಿಸ್ತಾನ ದೇಶದ ರಾಜಧಾನಿಯಾಗಿದೆ . ಎರಡು ಮಿಲಿಯನ್ ಜನಸಂಖ್ಯೆಯೊಂದಿಗೆ, ಇದು ಪಾಕಿಸ್ತಾನದ 10 ನೆಯ ಅತಿ ದೊಡ್ಡ ನಗರವಾಗಿದ್ದು, ದೊಡ್ಡದಾದ ಇಸ್ಲಾಮಾಬಾದ್-ರಾವಲ್ಪಿಂಡಿ ಮೆಟ್ರೋಪಾಲಿಟನ್ ಪ್ರದೇಶವು ಪಾಕಿಸ್ತಾನದಲ್ಲಿ ಐದು ಮಿಲಿಯನ್ಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಮೂರನೇ ಅತಿದೊಡ್ಡ ನಗರವಾಗಿದೆ. ನಗರವು ಪಾಕಿಸ್ತಾನದ ರಾಜಕೀಯ ಸ್ಥಾನವಾಗಿದ್ದು, ಕ್ಯಾಪಿಟಲ್ ಡೆವಲಪ್ಮೆಂಟ್ ಅಥಾರಿಟಿ (ಸಿಡಿಎ) ಯಿಂದ ಬೆಂಬಲಿತವಾಗಿರುವ ಇಸ್ಲಾಮಾಬಾದ್ ಮೆಟ್ರೋಪಾಲಿಟನ್ ಕಾರ್ಪೊರೇಷನ್ ಆಡಳಿತದಲ್ಲಿದೆ. ಇಸ್ಲಾಮಾಬಾದ್ ದೇಶದ ಈಶಾನ್ಯ ಭಾಗದಲ್ಲಿರುವ ಪೊಥೋಹರ್ ಪ್ರಸ್ಥಭೂಮಿಯಲ್ಲಿ ರಾವಲ್ಪಿಂಡಿ ಜಿಲ್ಲೆ ಮತ್ತು ಉತ್ತರಕ್ಕೆ ಮಾರ್ಗಲ ಹಿಲ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಈ ಪ್ರದೇಶವು ಐತಿಹಾಸಿಕವಾಗಿ ಪಂಜಾಬ್ ಮತ್ತು ಖೈಬರ್ ಪಖ್ತುನ್ಖ್ವಾಗಳ ಕರಾವಳಿಯ ಭಾಗವಾಗಿದ್ದು, ಮಾರ್ಗಾಲಾ ಪಾಸ್ ಎರಡು ಪ್ರದೇಶಗಳ ನಡುವಿನ ದ್ವಾರವಾಗಿದೆ. ಪಾಕಿಸ್ತಾನದ ರಾಜಧಾನಿಯಾಗಿ ಕರಾಚಿಯನ್ನು ಬದಲಿಸಲು 1960 ರ ದಶಕದಲ್ಲಿ ಇಸ್ಲಾಮಾಬಾದ್ ನಿರ್ಮಿಸಲಾಯಿತು. ವಿಶ್ವದ ಎರಡನೇ ಅತ್ಯಂತ ಸುಂದರ ರಾಜಧಾನಿಯಾಗಿದೆ. ನಗರದ ಮಾಸ್ಟರ್-ಪ್ಲಾನ್ ನಗರವನ್ನು ಆಡಳಿತಾತ್ಮಕ, ರಾಯಭಾರಿ ಪರಾವೃತ ಪ್ರದೇಶ, ವಸತಿ ಪ್ರದೇಶಗಳು, ಶೈಕ್ಷಣಿಕ ವಲಯಗಳು, ಕೈಗಾರಿಕಾ ವಲಯಗಳು, ವಾಣಿಜ್ಯ ಪ್ರದೇಶಗಳು ಮತ್ತು ಗ್ರಾಮೀಣ ಮತ್ತು ಹಸಿರು ಪ್ರದೇಶಗಳನ್ನು ಒಳಗೊಂಡಂತೆ ಎಂಟು ವಲಯಗಳಾಗಿ ವಿಂಗಡಿಸುತ್ತದೆ. ನಗರವು ಅನೇಕ ಉದ್ಯಾನವನಗಳು ಮತ್ತು ಕಾಡುಗಳ ಉಪಸ್ಥಿತಿಗೆ ಹೆಸರುವಾಸಿಯಾಗಿದೆ, ಇದರಲ್ಲಿ ಮಾರ್ಗಲ್ಲಾ ಹಿಲ್ಸ್ ನ್ಯಾಶನಲ್ ಪಾರ್ಕ್ ಮತ್ತು ಶಕಾರ್ಪೇರಿಯನ್ ಪಾರ್ಕ್ ಸೇರಿವೆ. ಈ ನಗರವು ಹಲವಾರು ಹೆಗ್ಗುರುತುಗಳ ನೆಲೆಯಾಗಿದೆ, ಇದರಲ್ಲಿ ಫೈಸಲ್ ಮಸೀದಿ, ದಕ್ಷಿಣ ಏಷ್ಯಾದಲ್ಲಿನ ದೊಡ್ಡ ಮಸೀದಿ ಪ್ರಪಂಚದಲ್ಲಿ ನಾಲ್ಕನೇ ಅತಿ ದೊಡ್ಡದು. ಇತರ ಹೆಗ್ಗುರುತುಗಳು ಪಾಕಿಸ್ತಾನದ ರಾಷ್ಟ್ರೀಯ ಸ್ಮಾರಕ ಮತ್ತು ಪ್ರಜಾಪ್ರಭುತ್ವ ಚೌಕ. ಇಸ್ಲಾಮಾಬಾದ್ ಎಂಬುದು ಬೀಟಾ-ವಿಶ್ವ ನಗರ; ಇದು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅತಿ ಹೆಚ್ಚು ಎಂದು ವರ್ಗೀಕರಿಸಲಾಗಿದೆ, ಇದು ದೇಶದಲ್ಲಿ ಅತಿ ಹೆಚ್ಚು. ನಗರವು ಪಾಕಿಸ್ತಾನದಲ್ಲಿ ವಾಸಿಸುವ ಅತಿ ಹೆಚ್ಚು ವೆಚ್ಚವನ್ನು ಹೊಂದಿದೆ, ಮತ್ತು ಅದರ ಜನಸಂಖ್ಯೆಯು ಮಧ್ಯಮ ಮತ್ತು ಮಧ್ಯಮ ವರ್ಗದ ನಾಗರಿಕರಿಂದ ಪ್ರಬಲವಾಗಿದೆ. ನಗರವು ಹದಿನಾರು ವಿಶ್ವವಿದ್ಯಾನಿಲಯಗಳ ನೆಲೆಯಾಗಿದೆ, ಕ್ವಾಯ್ಡ್ -ಇ-ಅಝಮ್ ವಿಶ್ವವಿದ್ಯಾಲಯ, COMSATS ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಮತ್ತು ನಸ್ಟ್. [16] ಈ ನಗರವು ಪಾಕಿಸ್ತಾನದಲ್ಲಿ ಸುರಕ್ಷಿತವಾಗಿದೆ ಮತ್ತು 1,900 ಸಿ.ಸಿ.ಟಿ.ವಿ ಛಾಯಾಗ್ರಾಹಿಗಳೊಂದಿಗೆ ವಿಸ್ತಾರವಾದ ಕಣ್ಗಾವಲು ವ್ಯವಸ್ಥೆಯನ್ನು ಹೊಂದಿದೆ. . ಉಲ್ಲೇಖಗಳು ಏಷ್ಯಾ ಖಂಡದ ನಗರಗಳು ಪಾಕಿಸ್ತಾನ
2228
https://kn.wikipedia.org/wiki/%E0%B2%B5%E0%B2%BE%E0%B2%B7%E0%B2%BF%E0%B2%82%E0%B2%97%E0%B3%8D%E0%B2%9F%E0%B2%A8%E0%B3%8D%2C%20%E0%B2%A1%E0%B2%BF.%E0%B2%B8%E0%B2%BF.
ವಾಷಿಂಗ್ಟನ್, ಡಿ.ಸಿ.
ವಾಷಿಂಗ್ಟನ್, ಡಿ.ಸಿ. (ಅಧಿಕೃತವಾಗಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯ) ಜುಲೈ ೧೬, ೧೭೯೦ರಲ್ಲಿ ಸ್ಥಾಪನೆಗೊಂದ ಅಮೇರಿಕ ಸಂಯುಕ್ತ ಸಂಸ್ಥಾನದ ರಾಜಧಾನಿ. ಮೆರಿಕದ ಈಶಾನ್ಯ ಭಾಗದಲ್ಲಿ ಅಟ್ಲಾಂಟಿಕ್ ಸಾಗರದ ಸಮೀಪ ಪೊಟೊಮ್ಯಾಕ್ ನದಿಯ ಪೂರ್ವದಂಡೆಯಲ್ಲಿರುವ ಈ ಪಟ್ಟಣವನ್ನು ಮೇರಿಲ್ಯಾಂಡ್ ಮತ್ತು ವರ್ಜೀನಿಯ ರಾಜ್ಯಗಳು ಸುತ್ತುವರೆದಿವೆ. ಇದರ ವಿಸ್ತೀರ್ಣ 24,807 ಚ.ಕಿಮೀಗಳು. ಜನಸಂಖ್ಯೆ 67,27,050. ಈ ನಗರ ಸಮುದ್ರಮಟ್ಟದಿಂದ 7.6 ಮೀ ಎತ್ತರದಲ್ಲಿದೆ. ಬೇಸಗೆಯಲ್ಲಿ ಗರಿಷ್ಠ ಉಷ್ಣಾಂಶ 260 ಸೆ. ಇದ್ದರೆ ಚಳಿಗಾಲದಲ್ಲಿ 30 ಸೆ. ಗೆ ಇಳಿಯುತ್ತದೆ. ಇಲ್ಲಿಯ ಸರಾಸರಿ ವಾರ್ಷಿಕ ಮಳೆ 127 ಸೆಂಮೀ. ಈ ನಗರ ಕೇಂದ್ರ ಸರ್ಕಾರ ಅಂದರೆ ಫೆಡರಲ್ ಸರ್ಕಾರದ ಅಧೀನದಲ್ಲಿದ್ದು ಅದರ ನಿರ್ವಹಣೆಗೆ ಮಹಾನಗರ ಸಭೆ ಇದೆ. ಮೇಯರ್ ಇದರ ಅಧ್ಯಕ್ಷರು. ಈ ಶಹರದಲ್ಲಿ ವಾಸಿಸುವವರಲ್ಲಿ ಸೇ. 66 ರಷ್ಟು ಕರಿಯರಿದ್ದಾರೆ. ಇಲ್ಲಿ ಮಾನ್ಯತೆ ಪಡೆದ 16 ವಿಶ್ವವಿದ್ಯಾಲಯಗಳಿವೆ. ನದಿ ದಡದಲ್ಲಿರುವ ಈ ನಗರದ ಜನರಿಗೆ ದೋಣಿ ಸಂಚಾರ ಮುಖ್ಯ ಹವ್ಯಾಸಗಳಲ್ಲೊಂದಾ ಗಿದೆ. ಪ್ರಪಂಚದ ಅತ್ಯಂತ ಪ್ರಬಲ ರಾಷ್ಟ್ರದ ರಾಜಧಾನಿಯಾಗಿರುವ ಈ ನಗರ ಆಧುನಿಕ ಸೌಲಭ್ಯಗಳಿಂದ, ಉತ್ತಮ ಜೀವನಮಟ್ಟದಿಂದ, ಉನ್ನತ ಶಿಕ್ಷಣದಿಂದ ಕಂಗೊಳಿಸುತ್ತಿದೆ. ಇತಿಹಾಸ ರಾಜಧಾನಿಗಾಗಿಯೇ ಆಯ್ಕೆಯಾದ ಸ್ಥಳದಲ್ಲಿ ಹೊಸದಾಗಿ ಸ್ಥಾಪಿತವಾದ ಪ್ರಪಂಚದ ಕೆಲವೇ ರಾಜಧಾನಿಗಳಲ್ಲಿ ಇದೂ ಒಂದು. ಮೇರಿಲೆಂಡ್ ಮತ್ತು ವರ್ಜೀನಿಯ ರಾಜ್ಯಗಳ ಭಾಗಗಳಿಗೆ ಸೇರಿದ ಪ್ರದೇಶವನ್ನು ಈ ನಗರ ವ್ಯಾಪಿಸಿದೆ. ಈ ನಗರದ ರೂಪರೇಖೆಗಳು ಸಿದ್ಧವಾದ ಬಳಿಕ 1800 ರಲ್ಲಿ ಫಿಲಿಡೆಲ್ಫಿಯದಿಂದ ಇಲ್ಲಿಗೆ ರಾಜಧಾನಿಯನ್ನು ವರ್ಗಾಯಿಸಲಾಯಿತು. ಆಗ ಈ ರಾಜಧಾನಿಯ ಜನಸಂಖ್ಯೆ 8,000. ಅಂತರ್‍ಯುದ್ಧದ ಕಾಲದಲ್ಲಿ (1861-65) ಈ ನಗರ ತೀವ್ರ ಬೆಳೆವಣಿಗೆ ಕಂಡಿತು. ಆಗ 60,000ವಿದ್ದ ಜನಸಂಖ್ಯೆ 1,20,000 ಕ್ಕೆ ಏರಿತು. ವಿಮೋಚನೆ ಹೊಂದಿದ ಗುಲಾಮರು, ಭದ್ರತಾ ಕಾರ್ಯದಲ್ಲಿ ನಿರತರಾದ ಸೈನಿಕರು, ವರ್ತಕರು ಈ ನಗರದಲ್ಲಿ ನೆಲಸಿ ಅದಕ್ಕೆ ನಗರ ಸ್ವರೂಪ ತಂದುಕೊಟ್ಟರು. 1871ರಲ್ಲಿ ಈ ನಗರದ ಆಡಳಿತಕ್ಕೆ ಪ್ರತ್ಯೇಕ ಗವರ್ನರ್ ನೇಮಕವಾದುದಲ್ಲದೆ ಮೂವರು ಕಮಿಷನರುಗಳುಳ್ಳ ಸ್ಥಳೀಯ ಸರ್ಕಾರ ಸ್ಥಾಪಿತವಾಯಿತು. ಒಂದು ಚುನಾಯಿತ ನಗರಸಭೆಯೂ ಅಸ್ತಿತ್ವಕ್ಕೆ ಬಂದಿತು. 1930ರ ದಶಕದಲ್ಲಿ ನಗರದ ಜನಸಂಖ್ಯೆ ಏಳು ಲಕ್ಷಗಳಿಗೆ ಹೆಚ್ಚಿತು. ಕ್ರಮೇಣ ಈ ನಗರ ತೀವ್ರವಾಗಿ ಬೆಳೆವಣಿಗೆ ಕಂಡಿತು. ವಾಷಿಂಗ್‍ಟನ್ ಇಂದು ದೂರದ ಉಪನಗರಗಳಲ್ಲಿ ವಿಸ್ತರಿಸಿದೆ. ಪ್ರವಾಸಿಗರ ಆಕರ್ಷಣೆಗಳು ಸರ್ಕಾರಿ ಕಟ್ಟಡಗಳು, ಪ್ರಸಿದ್ಧ ಸ್ಮಾರಕಗಳು ಮತ್ತು ವಸ್ತುಸಂಗ್ರಹಾಲ ಯಗಳು, ಇತರ ಪ್ರವಾಸಿ ಆಕರ್ಷಣೀಯ ಕೇಂದ್ರಗಳು ನಗರದ ಪಶ್ಚಿಮ ಹಾಗೂ ಮಧ್ಯ ಭಾಗದಲ್ಲಿವೆ. ಈ ಪ್ರದೇಶ ಕ್ಯಾಪಿಟಾಲ್ ಹಿಲ್‍ನಿಂದ ಪೊತೊಮಿಕ್ ನದಿಯವರೆಗೂ ಇದೆ. ಈ ನಗರದ ವೈಟ್‍ಹೌಸ್ ಅಮೆರಿಕದ ಅಧ್ಯಕ್ಷರ ನಿವಾಸ ಮತ್ತು ಕಚೇರಿ. ಅಮೆರಿಕದ ಅಧ್ಯಕ್ಷರಿಗೆ ಇರುವ ಅಗಾಧ ಅಧಿಕಾರ ಮತ್ತು ಪ್ರಪಂಚದ ರಾಜಕೀಯದಲ್ಲಿ ಅಧ್ಯಕ್ಷರ ಪ್ರಭಾವಿ ಪಾತ್ರದಿಂದಾಗಿ ಇದು ಪ್ರಪಂಚದ ಮಹತ್ತ್ವದ ಅಧಿಕಾರ ಸ್ಥಾನಗಳಲ್ಲಿ ಮುಖ್ಯವಾದುದಾಗಿದೆ. ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಇಲ್ಲಿ ಕೈಗೊಳ್ಳಲಾಗಿದೆ. ಅಮೆರಿಕ ಕಾಂಗ್ರೆಸ್‍ನ ಸದಸ್ಯರು ಅಧಿವೇಶನ ನಡೆಸಿ ಉದ್ದೇಶಿತ ಶಾಸನಗಳಿಗೆ ಅನುಮೋದನೆ ನೀಡುವ ಭವನದ ಹೆಸರು ಯುನೈಟೆಡ್ ಸ್ಟೇಟ್ಸ್ ಕ್ಯಾಪಿಟಾಲ್. ಇದು ವಾಷಿಂಗ್‍ಟನ್‍ನ ಭವ್ಯ ಭವನಗಳಲ್ಲೊಂದೆನಿಸಿದೆ. ಕಾರ್ಯಾಂಗದ ಕಚೇರಿ ಕಟ್ಟಡ ವೈಟ್‍ಹೌಸ್‍ನ ಪೂರ್ವಕ್ಕಿದೆ. ಕಾಂಗ್ರೆಸ್ ಸದಸ್ಯರಿಗೆ ಕಚೇರಿಗಳನ್ನು ಒದಗಿಸಿರುವ ಕಟ್ಟಡ ಕಾಂಗ್ರೆಸ್‍ಹಾಲ್ ಆಫೀಸ್ ಬಿಲ್ಡಿಂಗ್ಸ್. ಸರ್ವೋಚ್ಚ ನ್ಯಾಯಾಲಯದ ಕಟ್ಟಡ ಇನ್ನೊಂದು ಗಮನಾರ್ಹ ಭವನ. ಇಲ್ಲಿನ ಪ್ರಪಂಚದ ಅತ್ಯಂತ ಬೃಹತ್ ಗ್ರಂಥಾಲಯವೆಂದು ಭಾವಿಸ ಲಾಗಿರುವ ಲೈಬ್ರರಿ ಆಫ್ ಕಾಂಗ್ರೆಸ್ ಕಟ್ಟಡಸಮುಚ್ಚಯ ಇನ್ನೊಂದು ಆಕರ್ಷಕ ನಿರ್ಮಾಣ. ಇದಕ್ಕೆ ಹೊಂದಿಕೊಂಡಂತೆ ಪ್ರಪಂಚದ ಮುಖ್ಯ ಕೃತಿಗಳ ಸಂಗ್ರಹವಿರುವ ಗ್ರಂಥಾಲಯ ವಿಲಿಯಮ್ ಷೇಕ್ಸ್‍ಪಿಯರನ ಹೆಸರಿನಲ್ಲಿದೆ. ವಾಷಿಂಗ್‍ಟನ್ ವಸ್ತುಸಂಗ್ರಹಾಲಯಗಳ ಕೇಂದ್ರವೆನಿಸಿದೆ. ಅಲ್ಲಿಯ ನ್ಯಾಷನಲ್ ಆರ್ಟ್ ಗ್ಯಾಲರಿ, ಸ್ಮಿತ್‍ಸೋನಿಯನ್ ಮ್ಯೂಸಿಯಮ್, ನ್ಯಾಷನಲ್ ಏರ್ ಅಂಡ್ ಸ್ಪೇಸ್ ಮ್ಯೂಸಿಯಮ್, ಅಮೆರಿಕ ಇತಿಹಾಸದ ರಾಷ್ಟ್ರೀಯ ವಸ್ತುಸಂಗ್ರಹಾಲಯ, ರಾಷ್ಟ್ರೀಯ ಪತ್ರಾಗಾರ, ಪ್ರಾಕೃತಿಕ ಇತಿಹಾಸದ ರಾಷ್ಟ್ರೀಯ ವಸ್ತುಸಂಗ್ರಹಾಲಯ, ಸ್ಮಿತ್‍ಸೋನಿಯನ್ ಆಟ್ರ್ಸ್ ಅಂಡ್ ಇಂಡಸ್ಟ್ರಿಯಲ್ ಬಿಲ್ಡಿಂಗ್, ಮಾಲ್‍ನಲ್ಲಿರುವ ಕಲಾ ಮ್ಯೂಸಿಯಮ್‍ಗಳು-ಇವೆಲ್ಲ ಈ ನಗರದ ಸಾಂಸ್ಕøತಿಕ ಮಹತ್ತವನ್ನು ಹೆಚ್ಚಿಸಿವೆ. ಅಮೆರಿಕದ ಅಧ್ಯಕ್ಷರುಗಳಾಗಿದ್ದ ಲಿಂಕನ್, ವಾಷಿಂಗ್‍ಟನ್, ಜಫರ್‍ಸನ್ ಮತ್ತು ರೂಸ್‍ವೆಲ್ಟರ ಸ್ಮಾರಕಗಳು ಪ್ರೇಕ್ಷಣೀಯವಾಗಿವೆ. ಲಿಂಕನ್ ಗುಂಡೇಟಿನಿಂದ ಸಾವಿಗೀಡಾದ ಫೋರ್ಡ್ ಥಿಯೇಟರ್‍ನಲ್ಲಿ ಆತನಿಗೆ ಸಂಬಂಧಿಸಿದ ವಸ್ತುಗಳನ್ನು ಇಡಲಾಗಿದೆ. ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದಂತೆ ಜಾನ್ ಎಫ್.ಕೆನಡಿ ಕೇಂದ್ರವಿದೆ. ವಾಷಿಂಗ್‍ಟನ್ ಇಂದು ಪ್ರಪಂಚಪ್ರಸಿದ್ಧ ನಗರ. ಇಲ್ಲಿ ಅಸಂಖ್ಯ ಪ್ರೇಕ್ಷಣೀಯ ಸ್ಥಳಗಳಿವೆ. ನ್ಯಾಷನಲ್ ಜû್ಯೂಆಲಾಜಿಕಲ್ ಪಾರ್ಕ್, ಪೆಂಟಗನ್ ಕಟ್ಟಡ, ಶರ್ಲಿಂಗ್‍ಟನ್ ನ್ಯಾಷನಲ್ ಸಿಮೆಟ್ರಿ, ಮೆರಿನ್ ಕಾಪ್ಸ್ ವಾರ್ ಮೆಮೊರಿಯಲ್, 200 ವರ್ಷಗಳ ಹಳೆಯ ಕಟ್ಟಡಗಳಿದ್ದು ಜಾರ್ಜ್ ಟೌನ್ ಮೊದಲಾದವು ಪ್ರವಾಸಿಗರನ್ನು ಸೆಳೆಯುತ್ತವೆ. ಉಲ್ಲೇಖಗಳು ಅಮೇರಿಕ ಸಂಯುಕ್ತ ಸಂಸ್ಥಾನದ ಪಟ್ಟಣಗಳು
2229
https://kn.wikipedia.org/wiki/%E0%B2%85%E0%B2%AE%E0%B3%87%E0%B2%B0%E0%B2%BF%E0%B2%95
ಅಮೇರಿಕ
ಸಾಮಾನ್ಯವಾಗಿ ಅಮೇರಿಕದ ಉಲ್ಲೇಖ: -ಅಮೇರಿಕ ಸಂಯುಕ್ತ ಸಂಸ್ಥಾನ ಅಥವಾ ಅಮೇರಿಕ ಸಂಯುಕ್ತ ಸಂಸ್ಥಾನ ಅಥವಾ ಅಮೇರಿಕ ಸಂಯುಕ್ತ ಸಂಸ್ಥಾನ -ಉತ್ತರ ಅಮೇರಿಕ ಹಾಗೂ ದಕ್ಷಿಣ ಅಮೇರಿಕ ಖಂಡಗಳು ಖಂಡಗಳು ದೇಶಗಳು
2233
https://kn.wikipedia.org/wiki/%E0%B2%B0%E0%B2%B7%E0%B3%8D%E0%B2%AF%E0%B2%BE
ರಷ್ಯಾ
ರಷ್ಯಾ (), ಅಧಿಕೃತವಾಗಿ ರಸಿಸ್‌ಕಾಯಾ ಫೇಡರಾಟ್ಸಿಯ ( - ರಷ್ಯಾದ ಒಕ್ಕೂಟ), ಉತ್ತರ ಯುರೇಷಿಯಾ (ಯುರೋಪ್‌ ಹಾಗೂ ಏಷ್ಯಾ ಒಟ್ಟಿಗೆ) ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್ಯಾ ತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್‌ಲ್ಯಾಂಡ್‌, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ (ಕಲಿನಿನ್‌ಗ್ರಾಡ್‌‌ ಓಬ್ಲಸ್ಟ್‌‌ ಮೂಲಕ), ಪೋಲೆಂಡ್‌ (ಕಲಿನಿನ್‌ಗ್ರಾಡ್‌‌ ಓಬ್ಲಸ್ಟ್‌‌ ಮೂಲಕ), ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್‌ಸ್ತಾನ್‌, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ. ಹಾಗೆಯೇ ಈ ದೇಶದ ಸಮುದ್ರ ತಡಿಯ ಗಡಿಗಳು ಜಪಾನ್‌ (ಓಖೋಟ್ಸ್ಕ್‌ ಸಮುದ್ರದಿಂದ ), ದಕ್ಷಿಣ ಕೊರಿಯಾ (ಜಪಾನ್‌ ಸಮುದ್ರದಿಂದ), ಸ್ವೀಡನ್‌ (ಬಾಲ್ಟಿಕ್ ಸಮುದ್ರದಿಂದ), ತುರ್ಕಿ (ಕಪ್ಪು ಸಮುದ್ರದಿಂದ), ಮತ್ತು ಯುನೈಟೆಡ್‌ ಸ್ಟೇಟ್ಸ್‌ (ಬೇರಿಂಗ್‌ ಜಲಸಂಧಿಯಿಂದ) ಗಳಿಂದ ಸುತ್ತುವರೆದಿದೆ. ೧೭ ಮಿಲಿಯನ್ ಚದರ ಕಿಮಿ ವಿಸ್ತೀರ್ಣದೊಂದಿಗೆ ರಷ್ಯಾ, ವಿಶ್ವದ ಅತಿ ದೊಡ್ಡ ದೇಶವಾಗಿದ್ದು, ೧೪೨ ಮಿಲಿಯನ್‌ ಜನರಿಂದ ಕೂಡಿ, ಜನಸಂಖ್ಯೆಯ ಪ್ರಮಾಣದಲ್ಲಿ ೯ನೆಯ ಅತಿ ದೊಡ್ಡ ದೇಶವಾಗಿದೆ. ಇದು ಯೂರೋಪ್‌ನ ೪೦% ಭಾಗವನ್ನು ಒಟ್ಟಾರೆಯಾಗಿ ವಿಸ್ತರಿಸಿದ್ದು, ೧೧ ಕಾಲಮಾನಗಳಲ್ಲಿ ವ್ಯಾಪಿಸಿ, ವಿವಿಧ ಮಾದರಿಯ ಪರಿಸರ ಹಾಗೂ ಭೂಲಕ್ಷಣಗಳನ್ನು ಹೊಂದಿದೆ. ರಷ್ಯಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ ನಿಕ್ಷೇಪಗಳಿವೆ, ಹಾಗಾಗಿ ಶಕ್ತಿ ಸಂಪನ್ಮೂಲದಲ್ಲಿ ಮಹಾ ಶಕ್ತಿ ಎಂದೂ ಹೆಸರಾಗಿದೆ.ಇದು ವಿಶ್ವದ ಅತಿ ದೊಡ್ಡ ಅರಣ್ಯ ನಿಕ್ಷೇಪವನ್ನು ಹೊಂದಿದ್ದು ಇಲ್ಲಿನ ಸರೋವರಗಳು ಸರಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ವಿಶ್ವದ ಘನೀಕೃತವಲ್ಲದ ಶುದ್ಧನೀರ ನ್ನು ಹೊಂದಿದೆ. ೩ನೇ ಮತ್ತು ೮ನೇ ಶತಮಾನ ಗಳಲ್ಲಿ ಯೂರೋಪ್‌ನ ಒಂದು ಗಮನಾರ್ಹ ಸಮೂಹವಾಗಿ ಹೊರ ಹೊಮ್ಮಿದ ಪೂರ್ವ ಸ್ಲಾವ್ ಜನರು‌‌ಗಳಿಂದ ಈ ದೇಶದ ಇತಿಹಾಸವು ಆರಂಭವಾಗಿತ್ತು. ಒಂದು ಉದಾತ್ತ ವೈಕಿಂಗ್ ಯೋಧ ವರ್ಗ ಹಾಗೂ ಅವರ ವಂಶಸ್ಥರಿಂದ ಸ್ಥಾಪಿತ ಕಿವಾನ್‌ ರುಸ್‌ ಎಂಬ ಪ್ರಥಮ ಸ್ಲಾವ್‌ ರಾಜ್ಯವಾಗಿ 9ನೇ ಶತಮಾನದಲ್ಲಿ ಹೊರಹೊಮ್ಮಿ, ಬೈಜಾಂಟೈನ್‌ ಸಾಮ್ರಾಜ್ಯವನ್ನು ಅನುಸರಿಸಿ ೯೮೮ ರಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿತು. ಇದರಿಂದಾಗಿ ಬೈಜಾಂಟೈನ್‌ ಮತ್ತು ಸ್ಲಾವ್‌ ಸಂಸ್ಕೃತಿಗಳ ಸಂಯೋಜನೆಯಾಗಿ ಮುಂದಿನ ಸಹಸ್ರಮಾನದ ರಷ್ಯಾದ ಸಂಸ್ಕೃತಿಯಾಗಿ ಹೊರಹೊಮ್ಮಿತು. ಅಂತಿಮವಾಗಿ ಕಿವಾನ್‌ ರುಸ್‌ ವಿಭಜನೆಯಾಗಿ ಬಹಳಷ್ಟು ಸಣ್ಣ ಬಿಡಿ ಸಂಸ್ಥಾನಗಳಾಗಿ ಒಡೆಯಿತು. ಕಿವಾನ್‌ ರುಸ್‌ನ ನಂತರ ಶಕ್ತಿಶಾಲಿ ರಾಜ್ಯ ಮಾಸ್ಕೋ ಆಗಿತ್ತು. ಇದು ರಷ್ಯಾದ ಒಗ್ಗೂಡುವಿಕೆ ಹಾಗೂ ಸುವರ್ಣ ತಂಡದ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಶಕ್ತಿಯಾಗಿತ್ತು. ಮಾಸ್ಕೋ ಹಂತಹಂತವಾಗಿ ಅಕ್ಕಪಕ್ಕದ ರಷ್ಯಾದ ಸಂಸ್ಥಾನಗಳನ್ನು ಒಗ್ಗೂಡಿಸುತ್ತಾ ಕಿವಾನ್‌ ರುಸ್‌ನ ಸಾಂಸ್ಕೃತಿಕ ಹಾಗೂ ರಾಜಕೀಯ ಸಂಪ್ರದಾಯಗಳಲ್ಲಿ ಮೇಲುಗೈ ಸಾಧಿಸಿತು. ೧೮ನೇ ಶತಮಾನದ ವೇಳೆಗೆ, ಆಕ್ರಮಣ, ವಿಸ್ತರಣೆ ಹಾಗೂ ಭೂಶೋಧನೆಗಳಿಂದಾಗಿ ರಾಷ್ಟ್ರವು ಬಹಳ ವಿಸ್ತಾರವಾಗಿ, ಪೋಲೆಂಡ್‌ನಿಂದ ಪೂರ್ವದಿಕ್ಕಿನಲ್ಲಿ ಪೆಸಿಫಿಕ್‌ ಮಹಾಸಾಗರ ಹಾಗೂ ಅಲಾಸ್ಕಾಗಳನ್ನೆಲ್ಲಾ ಒಳಗೊಂಡು ಇತಿಹಾಸದಲ್ಲಿನ ೩ನೇ ಅತಿ ದೊಡ್ಡ ಚಕ್ರಾಧಿಪತ್ಯ ಎನಿಸಿ ರಷ್ಯಾದ ಚಕ್ರಾಧಿಪತ್ಯ ಎನಿಸಿಕೊಳ್ಳುವ ಮಟ್ಟಿಗೆ ಬೆಳೆಯಿತು. ರಷ್ಯಾವು ವಿಶ್ವದಾದ್ಯಂತ ಅಧಿಕಾರ ಮತ್ತು ಪ್ರಭಾವವನ್ನು ರಷ್ಯಾದ ಚಕ್ರಾಧಿಪತ್ಯದ ಕಾಲದಿಂದ ಹಿಡಿದು, ಸೋವಿಯೆತ್‌ ಒಕ್ಕೂಟದ ಅಗ್ರ ಸದಸ್ಯವಾಗಿ, ವಿಶ್ವದ ಪ್ರಪ್ರಥಮ ಹಾಗೂ ಅತಿ ದೊಡ್ಡ ಸಂವಿಧಾನಾತ್ಮಕ ಸಮಾಜವಾದಿ ಆಡಳಿತ ಮತ್ತು ಮನ್ನಣೆ ಪಡೆದ ಉತ್ಕೃಷ್ಠ ಶಕ್ತಿ ಎನಿಸಿತು. ಕಲೆ ಹಾಗೂ ವಿಜ್ಞಾನದ ಪ್ರತಿ ಮಗ್ಗಲುಗಳಲ್ಲಿ ರಷ್ಯಾ ಉತ್ಕೃಷ್ಠತೆಯ ಬಗ್ಗೆ ದೀರ್ಘ ಪರಂಪರೆಯ ಹೆಗ್ಗಳಿಕೆ ಹೊಂದಿದೆ. ರಷ್ಯನ್‌ ಒಕ್ಕೂಟವನ್ನು ೧೯೯೧ರಲ್ಲಿ ಸೋವಿಯತ್‌ ಒಕ್ಕೂಟದ ವಿಭಜನೆಯ ನಂತರ ಸ್ಥಾಪಿಸಲಾಯಿತು. ಆದರೂ ಇದನ್ನು ಸೋವಿಯತ್‌ ಒಕ್ಕೂಟ ದ ಅಧಿಕೃತ ಪ್ರತಿನಿಧಿಯೆಂದೇ ಈಗಲೂ ಪರಿಗಣಿಸಲಾಗುತ್ತಿದೆ. ಇದು ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಪ್ರಪಂಚದಲ್ಲಿ ಎಂಟನೇ ಸ್ಥಾನ, ಖರೀದಿ ಸಾಮಾರ್ಥ್ಯ ಸಮತೆಯಲ್ಲಿ ಆರನೇ ಸ್ಥಾನ ಹಾಗು ಸೇನಾ ಆಯವ್ಯಯದಲ್ಲಿ ಎಂಟನೇ ಸ್ಥಾನ ಹೊಂದಿದೆ. ಈ ದೇಶವು ಐದು ಗಣ್ಯ ಅಣ್ವಸ್ತ್ರ ಸಮರ್ಥ ದೇಶಗಳಲ್ಲಿ ಒಂದಾಗಿದೆ. ಸಮೂಹ ವಿನಾಶಕ ಶಸ್ತ್ರಾಸ್ತ್ರಗಳ ಬೃಹತ್‌ ಸಂಗ್ರಹವನ್ನೇ ಹೊಂದಿದೆ. ರಷ್ಯಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಿದೆಯಲ್ಲದೇ, G8, APEC ಹಾಗೂ SCOಗಳ ಸದಸ್ಯತ್ವ ಹೊಂದಿದೆ. ಸ್ವತಂತ್ರ ರಾಷ್ಟ್ರಗಳ ಕಾಮನ್‌ವೆಲ್ತ್‌ನ ಅಗ್ರಗಣ್ಯ ಸದಸ್ಯನಾಗಿದೆ. ಭೂಗೋಳ ಭೂಲಕ್ಷಣ, ಹವಾಗುಣ, ಆಹಾರ ವ್ಯವಸ್ಥೆ ಮತ್ತು ಮಣ್ಣಿನ ಲಕ್ಷಣಗಳು ಬಹಳ ದೂರ ವ್ಯಾಪಿಸಿವೆ. ಉತ್ತರದಿಂದ ದಕ್ಷಿಣದವರೆಗೂ ಪೂರ್ವ ಯೂರೋಪಿನ ಬಯಲುಗಳು ಟುಂಡ್ರಾ, ಕೋನಿಫೆರಸ್‌ ಅರಣ್ಯ (ಟೈಗಾ), ಮಿಶ್ರ ಮತ್ತು ವಿಶಾಲಪರ್ಣಿ ಕಾಡುಗಳು, ಹುಲ್ಲುಗಾವಲು (ಚಪ್ಪಟೆ ಮೈದಾನ), ಮತ್ತು ಅರೆ-ಮರಳುಗಾಡು (ಕ್ಯಾಸ್ಪಿಯನ್‌ ಸಮುದ್ರದ ಅಂಚುಗಳು)ಗಳಲ್ಲಿ ಅನುಕ್ರಮವಾಗಿ ಆವೃತವಾಗಿವೆ. ಇದು ಆಹಾರ ವ್ಯವಸ್ಥೆಯ ಬದಲಾವಣೆಗಳಿಗನುಗುಣವಾಗಿ, ಹವಾಗುಣದಲ್ಲಿ ಆಗುವ ಬದಲಾವಣೆಯನ್ನು ಸೂಚಿಸುತ್ತದೆ. ಸೈಬೀರಿಯಾವು ಸಹಾ ಇದೇ ಮಾದರಿಯ, ಆದರೆ ಕೇವಲ ಟೈಗಾದ ಅನುಕ್ರಮವನ್ನು ಹೊಂದಿದೆ. ಈ ರಾಷ್ಟ್ರವು 23 ವಿಶ್ವ ಪರಂಪರೆಯ ಸ್ಮಾರಕ ಕ್ಷೇತ್ರಗಳನ್ನು ಹಾಗೂ 40 UNESCO ಜೀವಮಂಡಲ ನಿಕ್ಷೇಪ ಗಳನ್ನೂ ಹೊಂದಿದೆ. ಭೂಲಕ್ಷಣ ರಷ್ಯಾದ ಎರಡು ವಿಶಾಲವಾದ ಮಿತಿಗಳು ಸುಮಾರು ಭೂಮಿತಿಯ ರೇಖೆಯುದ್ದಕ್ಕೂ 8,000 km (5,000 mi)ಯಷ್ಟು ಅಗಲವಾಗಿವೆ. ಈ ಮಿತಿಗಳು ಹೀಗಿವೆ : ಪೋಲೆಂಡ್‌ ಗಡಿಯಲ್ಲಿ ಗ್ಟಾನ್ಸ್‌ಕ್‌ ಕೊಲ್ಲಿಯಿಂದ ವಿಸ್ತುಲಾ ಖಾರಿಯನ್ನು ಪ್ರತ್ಯೇಕಿಸುವ 60 km ಉದ್ದದ (40-mi ಉದ್ದ) ದ್ವೀಪಕಲ್ಪದ ಚಾಚು; ಮತ್ತು ಕುರಿಲ್‌ ದ್ವೀಪಗಳ ಆಗ್ನೇಯಕ್ಕೆ ಅತಿ ದೂರದಲ್ಲಿ, ಜಪಾನ್‌ನ ಹೊಕ್ಕೈಡೊ ದ್ವೀಪದಿಂದ ಕೆಲ ಮೈಲುಗಳಷ್ಟು ದೂರ. ರೇಖಾಂಶದಲ್ಲಿ ಅತ್ಯಂತ ದೂರದ ಮಿತಿಗಳು ಸುಮಾರು 6,600 km (4,100 mi) ಭೂಮಿತಿ ರೇಖೆಯುದ್ದಕ್ಕೂ ಇವೆ. ಈ ಮಿತಿಗಳೆಂದರೆ ಪಶ್ಚಿಮದಲ್ಲಿ ಅದೇ ಚಾಚು; ಪೂರ್ವದಲ್ಲಿ ದೊಡ್ಡ ಡಯೋಮೀಡ್‌ ದ್ವೀಪ (ಓಸ್ಟ್ರಾವ್‌ ರಟ್ಮನೊವಾ).ರಷ್ಯನ್‌ ಒಕ್ಕೂಟವು 11 ಕಾಲಮಾನಗಳಷ್ಟು ವ್ಯಾಪಿಸಿದೆ. ರಷ್ಯಾವು ವಿಶ್ವದ ಅತಿ ಹೆಚ್ಚಿನ ಅರಣ್ಯ ನಿಕ್ಷೇಪಗಳನ್ನು ಹೊಂದಿ "ಯೂರೋಪ್‌ನ ಶ್ವಾಸಕೋಶ" ಎಂಬ ಹೆಸರು ಪಡೆದಿದೆ. ಇಂಗಾಲದ ಡಯಾಕ್ಸೈಡ್‌ನ ಹೀರಿಕೆಯಲ್ಲಿ ಅಮೆಜಾನ್ ಮಳೆಕಾಡಿನ ನಂತರದ ಸ್ಥಾನ ಪಡೆದಿದೆ. ಇದು ಕೇವಲ ಯೂರೋಪ್‌ಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಅಗಾಧ ಪ್ರಮಾಣದ ಆಕ್ಸಿಜನ್‌ ಬಿಡುಗಡೆ ಮಾಡುತ್ತದೆ. ವಿಶ್ವದ 3 ಸಾಗರಗಳನ್ನು ಹೊಂದಿರುವ ಕಾರಣ — ಅಟ್ಲಾಂಟಿಕ್‌, ಆರ್ಕ್‌ಟಿಕ್‌ ಮತ್ತು ಪೆಸಿಫಿಕ್‌ — ರಷ್ಯಾದ ಮೀನುಗಾರರ ಪಡೆಯು ವಿಶ್ವದ ಮೀನು ಪೂರೈಕೆಗೆ ಪ್ರಧಾನ ಕೊಡುಗೆದಾರನಾಗಿದೆ. ವಿಶ್ವದಲ್ಲೇ ಉತ್ತಮವಾದ ಕ್ಯಾವಿಯರ್‌ಗಳಿಗೆ ಕ್ಯಾಸ್ಪಿಯನ್‌ ಮೂಲವಾಗಿದೆ. ರಷ್ಯಾವು ಅಧಿಕ ಪ್ರಮಾಣದ ಬಯಲನ್ನು ಹೊಂದಿದ್ದು, ಮುಖ್ಯವಾಗಿ ದಕ್ಷಿಣದಲ್ಲಿ ಚಪ್ಪಟೆ ಮೈದಾನ ಮತ್ತು ಉತ್ತರದಲ್ಲಿ ಅರಣ್ಯಗಳಿದ್ದು, ಉತ್ತರ ಕರಾವಳಿಯುದ್ದಕ್ಕೂ ಟುಂಡ್ರಾಗಳನ್ನು ಹೊಂದಿದೆ. ದಕ್ಷಿಣ ಅಂಚಿನ ಉದ್ದಕ್ಕೂ ಕಾಕಾಸಸ್‌ (ಎಲ್‌ಬ್ರಸ್‌ ಪರ್ವತ, ರಷ್ಯಾದ ಮತ್ತು ಯೂರೋಪ್‌ನ ಅತ್ಯುನ್ನತ ಬಿಂದುವಿರುವಗಳನ್ನೂ ಸೇರಿಸಿ) ಮತ್ತು ಅಲ್ಟೈ, ಮತ್ತು ಪೂರ್ವಭಾಗದಲ್ಲಿ, ವರ್ಕೋಯಾನ್ಸ್ಕ್‌ ಸಾಲು ಅಥವಾ ಕಂಚಟ್ಕಾದ ಅಗ್ನಿಪರ್ವತ ಪರ್ವತ ಶ್ರೇಣಿಗಳಿವೆ. ಉರಲ್‌ ಪರ್ವತಗಳು, ಖನಿಜ ನಿಕ್ಷೇಪಗಳಲ್ಲಿ ಶ್ರೀಮಂತವಾಗಿದ್ದು, ಯೂರೋಪ್‌ ಮತ್ತು ಏಷ್ಯಾಗಳನ್ನು ವಿಭಜಿಸುವ ಉತ್ತರ-ದಕ್ಷಿಣ ಪಟ್ಟಿಯಾಗಿದೆ. ರಷ್ಯಾವು ವಿಶ್ವದ 10% ಕೃಷಿಯೋಗ್ಯ ಭೂಮಿಯನ್ನು ಹೊಂದಿದೆ. ರಷ್ಯಾವು ಆರ್ಕ್‌ಟಿಕ್‌ ಮತ್ತು ಪೆಸಿಫಿಕ್‌ ಮಹಾಸಾಗರಗಳು, ಹಾಗೂ ಬಾಲ್ಟಿಕ್‌ ಸಮುದ್ರ, ಅಜೋವ್‌ ಸಮುದ್ರ, ಕಪ್ಪು ಮತ್ತು ಕ್ಯಾಸ್ಪಿಯನ್‌ ಸಮುದ್ರ ಗಳೂ ಸೇರಿದಂತೆ 37,000 ಕಿಲೋಮೀಟರು(23,000 mi)ಗಳಿಗೂ ಹೆಚ್ಚಿನ ವಿಸ್ತಾರವಾದ ಕರಾವಳಿಯನ್ನು ಹೊಂದಿದೆ. ಬೇರೆಂಟ್ಸ್‌ ಸಮುದ್ರ, ಶ್ವೇತ ಸಮುದ್ರ, ಕಾರಾ ಸಮುದ್ರ, ಲ್ಯಾಪ್‌ಟೆವ್‌ ಸಮುದ್ರ, ಪೂರ್ವ ಸೈಬೀರಿಯನ್‌ ಸಮುದ್ರ, ಚುಕ್ಚಿ ಸಮುದ್ರ, ಬೇರಿಂಗ್‌ ಸಮುದ್ರ, ಓಕೋಟ್ಸ್ಕ್‌‌ ಸಮುದ್ರ ಮತ್ತು ಜಪಾನ್‌ ಸಮುದ್ರಗಳು ರಷ್ಯಾದೊಂದಿಗೆ ಸಂಪರ್ಕ ಹೊಂದಿವೆ. ಇಲ್ಲಿರುವ ಪ್ರಮುಖ ದ್ವೀಪಗಳು ಮತ್ತು ದ್ವೀಪ ಸಮೂಹಗಳೆಂದರೆ ನೊವಾಯಾ ಜೆಮ್ಲ್ಯಾ, ಫ್ರಾನ್ಜ್‌ ಜೋಸೆಫ್‌ ಲ್ಯಾಂಡ್‌, ಸೆವೆರ್ನಾಯಾ ಜೆಮ್ಲ್ಯಾ, ನವ ಸೈಬೀರಿಯನ್‌ ದ್ವೀಪಗಳು, ರ್ಯಾಂಗೆಲ್‌ ದ್ವೀಪ, ಕುರಿಲ್‌ ದ್ವೀಪಗಳು ಮತ್ತು ಸಖಾಲಿನ್‌. ಡಯೋಮೀಡ್‌ ದ್ವೀಪಗಳು (ರಷ್ಯಾದ ನಿಯಂತ್ರಣದಲ್ಲಿ ಒಂದು, ಇನ್ನೊಂದು ಯುನೇಟೆಡ್‌ ಸ್ಟೇಟ್ಸ್‌‌ ನಿಯಂತ್ರಣದಲ್ಲಿದೆ) ಕೇವಲ ಮೂರು ಕಿಲೋಮೀಟರ್‌ಗಳ(1.9 mi) ಅಂತರದಲ್ಲಿವೆ, ಮತ್ತು ಹೊಕ್ಕಾಯ್ಡೋನಿಂದ ಕುನಶಿರ್‌ ದ್ವೀಪವು ಸುಮಾರು ಇಪ್ಪತ್ತು ಕಿಲೋಮೀಟರ್‌(12 mi)ಗಳಷ್ಟು ದೂರದಲ್ಲಿದೆ. ರಷ್ಯಾದಲ್ಲಿ ಸಾವಿರಾರು ನದಿಗಳು ಮತ್ತು ಒಳನಾಡಿನ ಕೆರೆಗಳಿರುವುದರಿಂದ, ವಿಶ್ವದ ಅತಿಹೆಚ್ಚಿನ ಪ್ರಮಾಣದ ಭೂಮಟ್ಟದ ಜಲಮೂಲಗಳನ್ನು ಹೊಂದಿರುವ ಹೆಗ್ಗಳಿಕೆ ಹೊಂದಿದೆ. ರಷ್ಯಾದ ಶುದ್ಧಜಲಮೂಲಗಳಲ್ಲಿ ಅತಿ ದೊಡ್ಡದು ಹಾಗೂ ಪ್ರಮುಖವಾದುದೆಂದರೆ ಬೈಕಲ್‌ ಸರೋವರ . ಇದು ವಿಶ್ವದ ಆಳದ, ನಿರ್ಮಲ, ಬಹಳಷ್ಟು ಪ್ರಾಚೀನ ಹಾಗೂ ಹೆಚ್ಚು ವಿಶಾಲವಾದ ಶುದ್ಧನೀರಿನ ಸರೋವರ. ಬೈಕಲ್‌ ಸರೋವರವೊಂದರ ಮೇಲ್ಮೈ ಶುದ್ಧನೀರಿನ ಪ್ರಮಾಣವೇ ಇಡೀ ವಿಶ್ವದ ಐದನೇ ಒಂದು ಭಾಗದಷ್ಟಿದೆ. ಉಳಿದ ಪ್ರಮುಖ ಸರೋವರಗಳೆಂದರೆ ಯೂರೋಪ್‌ನ ಅತಿ ದೊಡ್ಡ ಸರೋವರಗಳಾದ ಲಡೋಗಾ ಸರೋವರ ಮತ್ತು ಒನೇಗಾ ಸರೋವರ. ರಷ್ಯಾದ 100,000 ನದಿಗಳ ಪೈಕಿ, ವೋಲ್ಗಾ ಅತ್ಯಂತ ಪ್ರಸಿದ್ಧ.ವೋಲ್ಗಾ ಯುರೋಪ್‌ನ ಅತಿ ಉದ್ದನೆಯ ನದಿಯಾಗಿ ಹೆಸರುವಾಸಿಯಾಗಿರವುದಲ್ಲದೆ, ರಷ್ಯಾದ ಇತಿಹಾಸದಲ್ಲಿ ವಹಿಸಿದ ಪಾತ್ರವೂ ಇದಕ್ಕೆ ಪ್ರಮುಖ ಕಾರಣ.ರಷ್ಯಾವು ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಕಲ್ಲಿದ್ದಲು, ದೇವದಾರು ಮತ್ತು ಖನಿಜ ನಿಕ್ಷೇಪಗಳು ಸೇರಿದಂತೆ, ಇತರ ಯಾವುದೇ ರಾಷ್ಟ್ರವೂ ಹೊಂದಿರದಷ್ಟು ನೈಸರ್ಗಿಕ ಸಂಪನ್ಮೂಲಗಳ ವಿಶಾಲವಾದ ನೆಲೆಯನ್ನು ಹೊಂದಿದೆ. ಹವಾಗುಣ ರಷ್ಯನ್‌ ಒಕ್ಕೂಟದ ಹವಾಗುಣವು ಅನೇಕ ನಿರ್ಣಾಯಕ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ರಾಷ್ಟ್ರದ ಬೃಹತ್‌ ಗಾತ್ರದಿಂದಾಗಿ ಮತ್ತು ಸಮುದ್ರ ತೀರದಿಂದ ಬಹಳ ದೂರವಿರುವುದರಿಂದ ಪ್ರಧಾನವಾಗಿ ತೇವಾಂಶದಿಂದ ಕೂಡಿದ ಖಂಡಾಂತರ ಮತ್ತು ಶೀತವಲಯ‌ ಹವಾಗುಣಗಳನ್ನು ಹೊಂದಿದೆ. ಟುಂಡ್ರಾ ಮತ್ತು ಆಗ್ನೇಯ ದಿಕ್ಕಿನ ತುತ್ತ ತುದಿಯ ಭಾಗಗಳನ್ನು ಬಿಟ್ಟರೆ ಉಳಿದಂತೆ ಯೂರೋಪ್‌ಗೆ ಮತ್ತು ಏಷ್ಯಾಗೆ ಸೇರಿದ ರಷ್ಯಾದ ಎರಡೂ ವಿಭಾಗಗಳಲ್ಲಿ ಈ ಹವಾಗುಣ ಸಾಮಾನ್ಯವಾಗಿರುತ್ತದೆ. ಅತ್ತ ದಕ್ಷಿಣದಲ್ಲಿರುವ ಪರ್ವತಗಳು ಹಿಂದೂ ಮಹಾಸಾಗರದಿಂದ ಬರುವ ಬಿಸಿಗಾಳಿಯನ್ನು ತಡೆದರೆ, ಇತ್ತ ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿರುವ ಬಯಲು ಪ್ರದೇಶಗಳು ದೇಶದ ಮೇಲೆ ಆರ್ಕ್‌ಟಿಕ್‌ ಮತ್ತು ಅಟ್ಲಾಂಟಿಕ್‌ ಪ್ರಭಾವ ಬೀರುನಂತೆ ಮಾಡಿವೆ. ಇಡೀ ಭೂಪ್ರದೇಶದುದ್ದಕ್ಕೂ ಕೇವಲ ಎರಡು ಪ್ರತ್ಯೇಕ ಋತುಗಳಿವೆ - ಚಳಿಗಾಲ ಮತ್ತು ಬೇಸಿಗೆ; ವಸಂತ ಮತ್ತು ಶರತ್ಕಾಲಗಳು ಕೇವಲ ತೀವ್ರ ಚಳಿಗಾಲ ಮತ್ತು ತೀವ್ರ ಬೇಸಿಗೆ ಕಾಲ ದ ನಡುವಿನ ಬದಲಾವಣೆಯ ಅಲ್ಪಾವಧಿಯಲ್ಲಿ ತೋರುತ್ತವೆ. ತೀವ್ರ ಶೀತದ ತಿಂಗಳೆಂದರೆ ಜನವರಿ(ತೀರ ಪ್ರದೇಶಗಳಲ್ಲಿ - ಫೆಬ್ರವರಿ), ತೀವ್ರ ಬೇಸಿಗೆಯೆಂದರೆ ವಾಡಿಕೆಯಂತೆ ಜುಲೈನಲ್ಲಿರುತ್ತದೆ.ಉಷ್ಣತೆಯಲ್ಲಿನ ಬೃಹತ್‌ ಪ್ರಮಾಣದ ವ್ಯತ್ಯಾಸ ಸಹಜ. ಚಳಿಗಾಲದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹಾಗೂ ಪಶ್ಚಿಮದಿಂದ ಪೂರ್ವಕ್ಕೆ ಉಷ್ಣತೆ ಕಡಿಮೆಯಾಗುತ್ತಾ ಹೋಗುತ್ತದೆ. ಬೇಸಿಗೆ ಕಾಲವು ಸಾಕಷ್ಟು ಉಷ್ಣತೆ ಮತ್ತು ತೇವಾಂಶವನ್ನು ಹೊಂದಿರುತ್ತದೆ. ಸೈಬೀರಿಯಕ್ಕೂ ಇದು ಅನ್ವಯಿಸುತ್ತದೆ. ಸೋಚಿಯ ಸುತ್ತಮುತ್ತಲಿನ ಕಪ್ಪು ಸಮುದ್ರದ ಕರಾವಳಿಯ ಚಿಕ್ಕ ಭಾಗವು ಸಮಶೀತೋಷ್ಣ ಹವಾಗುಣವನ್ನು ಹೊಂದಿದೆ. ಖಂಡಾಂತರ ಒಳನಾಡು ತೀವ್ರ ಒಣಪ್ರದೇಶವಾಗಿದೆ. ಇತಿಹಾಸ ಪ್ರಾಚೀನ ಅವಧಿ ಪ್ರಾಗೈತಿಹಾಸಿಕ ಕಾಲದಲ್ಲಿ ದಕ್ಷಿಣ ರಷ್ಯಾದ ವಿಸ್ತಾರವಾದ ಚಪ್ಪಟೆ ಮೈದಾನಗಳು ಅಸಂಘಟಿತ ಅಲೆಮಾರಿ ಕುರುಬರ ಬುಡಕಟ್ಟುಗಳ ವಾಸಸ್ಥಾನವಾಗಿತ್ತು . ಸಾಂಪ್ರದಾಯಿಕ ಪ್ರಾಚೀನತೆಯಲ್ಲಿ ಪಾಂಟಿಕ್‌ ಚಪ್ಪಟೆ ಮೈದಾನ ಸಿಥಿಯಾ ಎಂದು ಕರೆಸಿಕೊಳ್ಳುತ್ತಿತ್ತು. ಚಪ್ಪಟೆ ಮೈದಾನ ನಾಗರೀಕತೆಗಳ ಅವಶೇಷಗಳು 20ನೇ ಶತಮಾನದ ಕಾಲದಲ್ಲಿ ಪತ್ತೆಯಾದವು ಐಪಾಟೊವೊ, ಸಿಂತಾಷ್ಟಾ, ಅರ್ಕಾಯಿಂ, ಮತ್ತು ಪೆಜಿರಿಕ್‌. 8ನೇ ಶತಮಾನದಿಂದೀಚೆಗೆ BC, ಗ್ರೀಕ್‌ ವ್ಯಾಪಾರಿಗಳು ಸಾಂಪ್ರದಾಯಿಕ ನಾಗರೀಕತೆಯನ್ನು ಟನಾಯ್ಸ್‌ ಮತ್ತು ಫನಾಗೊರಿಯಾದ ಮಾರುಕಟ್ಟೆಗಳಿಗೆ ತಂದರು. ಮೂರು ಮತ್ತು ಆರನೇ ಶತಮಾನBC ಗಳ ನಡುವೆ, ಬೋಸ್ಫೋರನ್‌ ಸಾಮ್ರಾಜ್ಯವು, ಗ್ರೀಕ್‌ ವಸಾಹತುಗಳ ಉತ್ತರಾಧಿಕಾರಿಯಾದ ಹೆಲೆನಿಸ್ಟಿಕ್‌ ರಾಜ್ಯ ವ್ಯವಸ್ಥೆ ವು ಹುನ್‌ಗಳು ಮತ್ತು ತುರ್ಕಿಯ ಆವರ್‌ಗಳು ಮುಂತಾದ ಸಮರೋತ್ಸಾಹಿ ಬುಡಕಟ್ಟುಗಳ ಅಲೆಮಾರಿ ಆಕ್ರಮಣ ಗಳಿಂದಾಗಿ ಕಂಗೆಟ್ಟಿತು. ಖಾಜರ್‌ಗಳು ಎಂದು ಹೆಸರಾದ ತುರ್ಕಿ ಜನರು, ಕ್ಯಾಸ್ಪಿಯನ್‌ ಮತ್ತು ಕಪ್ಪು ಸಮುದ್ರಗಳ ನಡುವಿರುವ ಕೆಳ ವೋಲ್ಗಾ ಜಲಾನಯನ ಪ್ರದೇಶದ ಚಪ್ಪಟೆ ಮೈದಾನ ಗಳನ್ನು 8ನೇ ಶತಮಾನ ದವರೆಗೆ ಆಳಿದರು. ಸ್ಲಾವಿಕ್‌ ಬುಡಕಟ್ಟಿನವರು ಆಧುನಿಕ ರಷ್ಯನ್ನರ ಪೂರ್ವಜರು, ಕೆಲ ತಜ್ಞರ ಪ್ರಕಾರ ಗಿಡಮರಗಳಿಂದ ತುಂಬಿದ್ದ ಪಿನ್ಸ್ಕ್‌ ಮಾರ್ಷಸ್‌ ಇವರ ಮೂಲ ವಾಸಸ್ಥಾನವಾಗಿತ್ತು . ಜರ್ಮೇನಿಕ್‌ ಬುಡಕಟ್ಟಿನ ಜನರ ವಲಸೆಯಿಂದ ಖಾಲಿಯಾದ ಸ್ಥಳಕ್ಕೆ ಚಲಿಸಿದ ಪ್ರಾಚೀನ ಪೂರ್ವ ಸ್ಲಾವ್‌ಗಳು ಎರಡು ಪ್ರತ್ಯೇಕ ದಿಕ್ಕಿನಲ್ಲಿ ಕ್ರಮೇಣವಾಗಿ ಪಶ್ಚಿಮ ರಷ್ಯಾದಲ್ಲಿ ನೆಲೆಗೊಂಡರು: ಒಂದು ಗುಂಪು ಕಿಯೆವ್‌ನಿಂದ ಈಗಿನ ಸುಜ್‌ಡಲ್‌ ಮತ್ತು ಮುರೊಮ್‌ ಕಡೆಗೆ ಮತ್ತು ಇನ್ನೊಂದು ಪೊಲೊಟ್‌ಸ್ಕ್‌ನಿಂದ ನೊವ್‌ಗೊರೊಡ್‌ ಮತ್ತು ರೊಸ್ಟೊವ್‌ ಕಡೆಗೆ ಹೋದರು. 7ನೇ ಶತಮಾನದ ನಂತರ, ಪೂರ್ವ ಸ್ಲಾವ್‌ಗಳು ಪಶ್ಚಿಮ ರಷ್ಯಾ ದಲ್ಲಿ ಬಹುಸಂಖ್ಯಾತರಾದರು ಮತ್ತು ನಿಧಾನವಾಗಿ ಅಲ್ಲದೇ ಶಾಂತಿಯುತವಾಗಿ ಮೆರ್ಯಾಗಳು, ಮುರೋಮಿಯನ್‌ಗಳು, ಹಾಗೂ ಮೆಷ್‌ಚೆರಾ ಗಳೂ ಸೇರಿದಂತೆ ಸ್ಥಳೀಯ ಫಿನ್ನೊ-ಉಗ್ರಿಕ್‌ ಬುಡಕಟ್ಟಿನವರೊಂದಿಗೆ ಮಿಳಿತಗೊಂಡರು. ಕಿವಾನ್‌ ರುಸ್‌' ರಷ್ಯಾ, ಉಕ್ರೇನ್‌ ಮತ್ತು ಬೆಲಾರಸ್‌ಗಳ ಹಿಂದಿನ ಸಾಮ್ರಾಜ್ಯವಾಗಿ ಕಿವಾನ್‌ ರುಸ್‌ 9ನೇ ಶತಮಾನದಲ್ಲಿ ಸ್ಥಾಪನೆಯಾಯಿತು. "ವೈಕಿಂಗ್‌ಗಳು" ಎಂದು ಪಶ್ಚಿಮ ಮತ್ತು "ವರಂಗಿಯೆನ್ಸ್‌" ಎಂದು ಪೂರ್ವ ಯೂರೋಪ್‌ ನಲ್ಲಿ ಕರೆಸಿಕೊಂಡ ಸ್ಕಾಂಡಿನೇವಿಯಾದ ನಾರ್ಸ್‌ಮನ್‌ಗಳು ಉತ್ತರ ಯೂರೋಪ್‌ನ ಪರ್ಯಟನ ಸಮಯದಲ್ಲಿ ಜೊತೆಗೂಡಿ ಕಡಲ್ಗಳ್ಳತನ ಮತ್ತು ವ್ಯಾಪಾರಗಳೆರಡನ್ನು ಮಾಡಿದರು. 9ನೇ ಶತಮಾನದ ಮಧ್ಯಭಾಗದಲ್ಲಿ ಬಾಲ್ಟಿಕ್‌ ಸಮುದ್ರ ಪೂರ್ವಭಾಗದಿಂದ ಕಪ್ಪು ಮತ್ತು ಕ್ಯಾಸ್ಪಿಯನ್‌ ಸಮುದ್ರಗಳ ಜಲಮಾರ್ಗದುದ್ದಕ್ಕೂ ಯಾನ ಕೈಗೊಂಡರು. ರಷ್ಯಾದ ಪ್ರಾಚೀನ ಚರಿತ್ರೆಯ ಪ್ರಕಾರ, ರುರಿಕ್‌ ಎಂಬ ಹೆಸರಿನ ಓರ್ವ ವರಂಗಿಯನ್‌ (ಕೊನುಂಗ್‌ ಅಥವಾ ಕ್ನ್ಯಾಜ್‌ ) ನವ್‌ಗೋರೊಡ್‌ನ ರಾಜನಾಗಿ ಸುಮಾರು 860 ನೇ ಇಸವಿಯಲ್ಲಿ ಆಯ್ಕೆಯಾದನು; ಆತನ ಉತ್ತರಾಧಿಕಾರಿಗಳು ದಕ್ಷಿಣಕ್ಕೆ ಸಂಚರಿಸಿ ಕಿಯೆವ್‌ ವರೆಗೆ ತಮ್ಮ ಆಡಳಿತವನ್ನು ವಿಸ್ತರಿಸಿದರು. ಇಲ್ಲಿ ಈ ಹಿಂದೆ ಖಾಜರ್‌ಗಳು ಆಡಳಿತ ನಡೆಸಿದ್ದರು. 10ರಿಂದ 11ನೇ ಶತಮಾನಗಳ ಅವಧಿಯಲ್ಲಿ ಕಿವಾನ್‌ ರುಸ್‌' ಯೂರೋಪ್‌ ನಲ್ಲೇ ಅತ್ಯಂತ ದೊಡ್ಡ ಹಾಗೂ ಸಮೃದ್ಧ ರಾಜ್ಯವಾಯಿತು. ವ್ಲಾಡಿಮಿರ್‌ ಮಹಾಶಯ (980-1015) ಮತ್ತು ಆತನ ಮಗ ಯರೊಸ್ಲಾವ್‌ I ಮಹಾ ಚತುರ (1019–1054) ರ ಆಳ್ವಿಕೆಗಳು ಕಿಯೆವ್‌ನ ಸುವರ್ಣ ಯುಗ ಎನಿಸಿಕೊಂಡವು. ಇದೇ ಸಮಯದಲ್ಲಿ ಸಾಂಪ್ರದಾಯಿಕ ಕ್ರೈಸ್ತ ಧರ್ಮವನ್ನು ಸ್ವೀಕರಿಸಲಾಯಿತು ಮತ್ತು ರುಸ್‌ಕಯಾ ಪ್ರವ್ಡಾ ಎಂಬ ಪ್ರಥಮ ಪೂರ್ವ ಸ್ಲಾವಿಕ್‌ ಲಿಖಿತ ನ್ಯಾಯ ನಿಯಮಾವಳಿಗಳನ್ನು ರಚಿಸಲಾಯಿತು. 11 ಮತ್ತು 12ನೇ ಶತಮಾನಗಳಲ್ಲಿ, ಕಿಪ್‌ಚಕ್‌ ಗಳಂತಹಾ ಹಾಗೂ ಪೆಛೆನೆಗ್‌ಗಳು ಅಲೆಮಾರಿ ತುರ್ಕಿಯ ಬುಡಕಟ್ಟಿನ ಜನರ ನಿರಂತರ ಹಠಾತ್‌ ದಾಳಿಗಳು, ಸ್ಲಾವಿಕ್‌ ಜನರನ್ನು ಸಾಮೂಹಿಕವಾಗಿ ಉತ್ತರದ, ಸುರಕ್ಷಿತ ದಟ್ಟಅರಣ್ಯ ಪ್ರದೇಶಗಳೆಡೆ ಅದರಲ್ಲೂ ವಿಶೇಷವಾಗಿ ಜೇಲ್‌ಸ್ಯೆ ಎಂಬ ಪ್ರದೇಶದ ಕಡೆಗೆ, ವಲಸೆ ಹೋಗುವ ಹಾಗೆ ಮಾಡಿತು. ಯುರೇಷ್ಯಾದ ಇನ್ನಿತರ ಭಾಗಗಳ ಹಾಗೆ, ಈ ಪ್ರದೇಶಗಳೂ ಸಹಾ ಮಂಗೋಲಿಯನ್ನರ ದಾಳಿಪೀಡಿತವಾದವು. ಈ ದಾಳಿ ಯಿಂದಾಗಿ ಜನಸಂಖ್ಯೆ ಅರ್ಧಕ್ಕಿಂತಲೂ ಹೆಚ್ಚಿಗೆ ಅಳಿಯಿತು. ಟಾಟರ್‌ಗಳು ಎಂದು ಹೆಸರಾದ ಈ ದಾಳಿಕೋರರು, ನಂತರ ಸುವರ್ಣ ತಂಡ ಎಂಬ ರಾಜ್ಯವನ್ನು ಕಟ್ಟಿದರು, ರಷ್ಯಾದ ವಿಶಾಲ ಪ್ರದೇಶವನ್ನು ಕೊಳ್ಳೆ ಹೊಡೆದುದಲ್ಲದೇ, ದಕ್ಷಿಣ ಮತ್ತು ಮಧ್ಯ ರಷ್ಯಾಗಳನ್ನು ಮೂರು ಶತಮಾನಗಳಿಗೂ ಹೆಚ್ಚಿನ ಕಾಲ ಆಳಿದರು. ಮಂಗೋಲರ ಆಡಳಿತ ರಾಜ್ಯದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆ ಯನ್ನು ಕುಂಠಿತಗೊಳಿಸಿತು. ಆದರೂ, ನವ್‌ಗೊರೊಡ್‌ ಗಣರಾಜ್ಯವು ಪೊಸ್ಕೊವ್‌ನೊಂದಿಗೆ ಸ್ವಲ್ಪ ಮಟ್ಟಿನ ಸ್ವಯಂ ಆಡಳಿತವನ್ನು ಮಂಗೋಲ್‌ ಯೋಕ್‌ನ ಕಾಲದಲ್ಲಿ ಪಡೆದುಕೊಂಡಿತು ಹಾಗೂ ದೇಶದ ಉಳಿದ ಭಾಗವನ್ನು ಆವರಿಸಿದ್ದ ಅಮಾನವೀಯ ಕೃತ್ಯಗಳಿಂದ ಪಾರಾಯಿತು. ಅಲೆಕ್ಸಾಂಡರ್‌ ನೆವ್‌ಸ್ಕಿ ನೇತೃತ್ವದಲ್ಲಿ, ನವ್‌ಗೊರೊಡಿಯನ್ನರು ಪ್ರದೇಶವನ್ನು ವಸಾಹತುವನ್ನಾಗಿ ಮಾಡಿಕೊಳ್ಳಬೇಕೆಂದಿದ್ದ ಜರ್ಮನಿಯ ಧಾರ್ಮಿಕ ಯೋಧರನ್ನು ಹಿಮ್ಮೆಟ್ಟಿಸಿದರು. ಅಂತಿಮವಾಗಿ, ದೇಶವನ್ನು ಸಮಷ್ಟಿಯಾಗಿ ಆಳುತ್ತಿದ್ದ ಅರಸು ಮನೆತನದ ಸದಸ್ಯರ ಆಂತರಿಕ ವೈಮನಸ್ಯದಿಂದಾಗಿ ಕಿವಾನ್‌ ರುಸ್‌ ಒಂದು ವಿಭಜಿತ ದೇಶವಾಯಿತು. ಈಶಾನ್ಯದಲ್ಲಿ ವ್ಲಾಡಿಮಿರ್‌ -ಸುಜ್‌ಡಲ್‌, ವಾಯುವ್ಯದಲ್ಲಿ ನವ್‌ಗೊರೊಡ್‌ ಮತ್ತು ನೈಋತ್ಯದಲ್ಲಿ ಗಲಿಷಿಯ-ವೊಲ್ಹಿನಿಯಾಗಳಿಗೆ ಅನುಕೂಲವಾಗಲೆಂಬಂತೆ ಕಿಯೆವ್‌ನ ಪ್ರಾಬಲ್ಯ ಕುಸಿತ ಕಂಡಿತು. 13ನೇ ಶತಮಾನದಲ್ಲಿನ ಸುವರ್ಣ ತಂಡದ ಆಕ್ರಮಣವೇ ಅಂತಿಮ ಹೊಡೆತವಾಗಿ 1240 ರಲ್ಲಿ ಕಿಯೆವ್‌ ನಾಶವಾಯಿತು. ಗಲಿಷಿಯ-ವೊಲ್ಹಿನಿಯಾವು ಪೋಲೆಂಡ್‌-ಲಿಥುವೇನಿಯಾದ ಕಾಮನ್‌ವೆಲ್ತ್‌ನಲ್ಲಿ ಲೀನವಾದರೆ, ಕಿಯೆವ್‌ನ ಪರಿಧಿಯಲ್ಲಿದ್ದ ಮಂಗೋಲ್‌ -ಪ್ರಾಬಲ್ಯದ ವ್ಲಾಡಿಮಿರ್‌ -ಸುಜ್‌ಡಲ್‌ ಮತ್ತು ಸ್ವತಂತ್ರ ನವೊಗೊರೊಡ್‌ ಗಣರಾಜ್ಯ, ಆಧುನಿಕ ರಷ್ಯಾ ದೇಶ ರೂಪುಗೊಳ್ಳಲು ತಳಹದಿಯಾದವು. ಮಾಸ್ಕೋದ ಗ್ರಾಂಡ್‌ ಡ್ಯೂಕಿ ಮತ್ತು ರಷ್ಯಾದ ತ್ಸಾರ್‌ ಪ್ರಭುತ್ವ ಕಿವಾನ್‌ ರುಸ್‌ನ ಉತ್ತಾರಾಧಿಯಾಗಿ ನಂತರ ಬಂದ ಶಕ್ತಿಶಾಲಿ ರಾಜ್ಯವೆಂದರೆ ಮಾಸ್ಕೋದ ಗ್ರಾಂಡ್‌ ಡ್ಯೂಕಿ. ತ್ವೆರ್‌ ಮತ್ತು ನವ್‌ಗೊರೊಡ್‌ಗಳಂತಹಾ ಎದುರಾಳಿಗಳನ್ನು ವಶಪಡಿಸಿಕೊಂಡು, ಅಂತಿಮವಾಗಿ ಆಧುನಿಕ ರಷ್ಯಾ ರಾಷ್ಟ್ರಕ್ಕೆ ತಳಹದಿಯಾಯಿತು. 1453ರಲ್ಲಿ ಕಾನ್‌ಸ್ಟಂಟಿನೋಪಲ್‌ ನ ಕುಸಿತದ ನಂತರ, ಮಾಸ್ಕೋ ತನ್ನನ್ನು ಪೂರ್ವ ರೋಮನ್‌ ಸಾಮ್ರಾಜ್ಯ ಪರಂಪರೆಯ ಉತ್ತರಾಧಿಕಾರಿಯೆಂದು ಘೋಷಿಸಿತು. 14ನೇ ಶತಮಾನದ ಆರಂಭದಲ್ಲಿ ಮಂಗೋಲರು-ಟಾಟರ್‌ಗಳುಗಳ ಆಳ್ವಿಕೆಯಲ್ಲಿಯೇ, ಅವರ ಮೌನ ಸಮ್ಮತಿಯೊಂದಿಗೆ, ಮಾಸ್ಕೋದ ಡ್ಯೂಕಿ(ಅಥವಾ "ಮಸ್ಕೋವೈ")ಯು ಪಶ್ಚಿಮ ರಷ್ಯಾದ ಮೇಲೆ ತನ್ನ ಪ್ರಭಾವವನ್ನು ಸಾಧಿಸಿತು. ರಷ್ಯಾದ ಸಂಪ್ರದಾಯವಾದಿ ಚರ್ಚ್‌ ಮತ್ತು ಸಂತ ರಡೊನೆಜ್ಹ್‌ನ ಸರ್ಜಿಯಸ್‌ರ ಧರ್ಮಜಾಗೃತಿ ಪ್ರಯತ್ನಗಳ ಬೆಂಬಲದೊಂದಿಗೆ, ಕುಲಿಕೊವೊ ಕಾಳಗದಲ್ಲಿ (1380) ರಷ್ಯಾ ಮಂಗೋಲರು-ಟಾಟರ್‌ಗಳನ್ನು ಸೋಲಿಸಿತು. ಐವಾನ್‌ III (ಐವಾನ್‌ ಮಹಾಶಯ )ನು ಅಂತಿಮವಾಗಿ ಟಾಟರ್‌ ಆಕ್ರಮಣಕೋರರ ನಿಯಂತ್ರಣವನ್ನು ಕಿತ್ತೊಗೆದು, ಸುತ್ತಮುತ್ತಲಿನ ಪ್ರದೇಶಗಳನ್ನು ಮಾಸ್ಕೋದ ಆಡಳಿತಕ್ಕೆ ಸೇರಿಸಿಕೊಂಡನು. "ರಷ್ಯಾಗಳ ಗ್ರಾಂಡ್‌ ಡ್ಯೂಕ್‌" ಎಂಬ ಬಿರುದು ಪಡೆದವರಲ್ಲಿ ಈತನೇ ಪ್ರಥಮ. ಐವಾನ್‌ IV (ಐವಾನ್‌ ರಣಭಯಂಕರ ) 1547ರಲ್ಲಿ ಅಧಿಕೃತವಾಗಿ ರಷ್ಯಾದ ಪ್ರಥಮ ತ್ಸಾರ್‌ ಆಗಿ ಪಟ್ಟಾಭಿಷಿಕ್ತನಾದ. ತನ್ನ ದೀರ್ಘ ಆಳ್ವಿಕೆಯಲ್ಲಿ, ಐವಾನ್‌ IV ವೋಲ್ಗಾ ನದಿಯ ಬಳಿ ಇದ್ದ (ಖಾಜನ್‌, ಅಸ್ತ್ರಖಾನ್‌) ಟಾಟರ್‌ ಖಾನೇಟ್‌ಗಳನ್ನು ಸ್ವಾಧೀನಪಡಿಸಿಕೊಂಡು ರಷ್ಯಾವನ್ನು ಬಹು ಜನಾಂಗೀಯ ಮತ್ತು ಬಹುಮತಪಂಥಿಯ ರಾಷ್ಟ್ರವನ್ನಾಗಿ ಪರಿವರ್ತಿಸಿದ. ಐವಾನ್‌ IV ಕಾನೂನು ನಿಯಮಾವಳಿ(1550ರ ಸುಡೆನ್‌ಬಿಕ್‌)ಗಳನ್ನು ಪ್ರಚುರಪಡಿಸಿದ, ರಷ್ಯಾದ ಪ್ರಥಮ ಊಳಿಗಮಾನ್ಯ ಪ್ರತಿನಿಧಿ ಸಂಸ್ಥೆ (ಜೆಮ್ಸ್ಕಿ ಸೋಬರ್‌) ಮತ್ತು ಗ್ರಾಮೀಣ ಪ್ರದೇಶ ಗಳಲ್ಲಿ ಸ್ಥಳೀಯ ಸ್ವಯಮಾಡಳಿತವನ್ನು ಪರಿಚಯಿಸಿದ. ಆದರೆ ಪೋಲೆಂಡ್‌, ಲಿಥುವೇನಿಯಾ, ಮತ್ತು ಸ್ವೀಡನ್‌ಗಳ ಒಕ್ಕೂಟದ ವಿರುದ್ಧ ಬಾಲ್ಟಿಕ್‌ ತೀರಪ್ರದೇಶ ಮತ್ತು ಸಮುದ್ರ ವ್ಯಾಪಾರ ಕ್ಕೆ ಸಂಬಂಧಿಸಿದಂತೆ ನಡೆಸಿದ ದೀರ್ಘಕಾಲೀನ ಹಾಗೂ ಲಿವೋನಿಯನ್‌ ಸಮರದ ಅಪಜಯದ ಕಪ್ಪುಚುಕ್ಕೆಯನ್ನು ಐವಾನ್‌ IVನ ಆಡಳಿತ ಹೊಂದಿದೆ. ಸೇನೆಯ ನಷ್ಟಗಳು, ಸಾಂಕ್ರಾಮಿಕ ರೋಗಗಳು ಮತ್ತು ಅಲ್ಪ ಫಸಲಿನಿಂದಾಗಿ ರಾಷ್ಟ್ರವು ದುರ್ಬಲಗೊಂಡಿತು, ಹಾಗೂ ಕ್ರಿಮೇನ್‌ ಟಾಟರ್‌ಗಳು ಮಾಸ್ಕೋವನ್ನು ಸುಟ್ಟು ಹಾಕುವಷ್ಟು ಶಕ್ತರಾದರು. ಅನೇಕ ಕ್ರಿಮೇನ್‌ ಸಮರಗಳು ಬಹುಪಾಲು ಗುಲಾಮರಿಂದಾದ ದಾಳಿಗಳಾಗಿದ್ದವು. ದಾಳಿಗಳ ಪಟ್ಟಿಯನ್ನು ರಷ್ಯಾ-ಕ್ರಿಮೇನ್‌ ಸಮರಗಳು ನಲ್ಲಿ ನೋಡಿ. 1600ರ ಆದಿಯಲ್ಲಿ ಬಂದ ಕಷ್ಟ ಕಾಲದಲ್ಲಿ ಐವಾನ್‌ನ ಮಕ್ಕಳ ಮರಣ, 1601–1603ರ ಕ್ಷಾಮಗಳು ಒಟ್ಟು ಸೇರಿ ಅಂತಃಕಲಹ ಹಾಗೂ ಪರಕೀಯರ ಹಸ್ತಕ್ಷೇಪಗಳಿಗೆ ಎಡೆಮಾಡಿಕೊಟ್ಟವು. 17ನೇ ಶತಮಾನದ ಮಧ್ಯಭಾಗದಲ್ಲಿ, ಚುಕ್‌ಚಿ ದ್ವೀಪಕಲ್ಪದಲ್ಲಿ ಪೆಸಿಫಿಕ್‌ ಕರಾವಳಿ ಮತ್ತು ಅಮುರ್‌ ನದೀತೀರದುದ್ದಕ್ಕೂ ಪೂರ್ವ ಸೈಬೀರಿಯಾದಲ್ಲಿ ರಷ್ಯಾದ ವಸಾಹತುಗಳಿದ್ದವು. 1648ರಲ್ಲಿ ಏಷ್ಯಾ ಮತ್ತು ಉತ್ತರ ಅಮೇರಿಕಾ ನಡುವಿನ ಬೇರಿಂಗ್‌ ಜಲಸಂಧಿ ರಷ್ಯಾದ ಪರಿಶೋಧಕರ ಕಣ್ಣಿಗೆ ಬಿದ್ದಿತು. ಸಾಮ್ರಾಜ್ಯಶಾಹಿ ರಷ್ಯಾ ರೊಮಾನೋವ್‌ ರಾಜವಂಶದ ಪೀಟರ್‌ I (ಮಹಾನ್‌ ಪೀಟರ್‌ )ನ ಆಳ್ವಿಕೆಯಲ್ಲಿ, ರಷ್ಯನ್‌ ಸಾಮ್ರಾಜ್ಯ ವಿಶ್ವಶಕ್ತಿಯಾಯಿತು. 1682ರಿಂದ 1725ವರೆಗೆ ಆಳ್ವಿಕೆ ನಡೆಸಿದ ಪೀಟರ್‌ ಮಹಾನ್‌ ಉತ್ತರ ಸಮರದಲ್ಲಿ ಸ್ವೀಡನ್‌ದೇಶವನ್ನು ಸೋಲಿಸಿ, ಪಶ್ಚಿಮ ಕರೇಲಿಯಾ ಮತ್ತು ಇಂಗ್ರಿಯಾ (ಕಷ್ಟ ಕಾಲ ದಲ್ಲಿ ರಷ್ಯಾ ಕಳೆದುಕೊಂಡ ಎರಡು ಪ್ರದೇಶಗಳು ),ಎಸ್ಟ್‌ಲ್ಯಾಂಡ್‌, ಮತ್ತು ಲಿವ್‌ಲ್ಯಾಂಡ್‌ಗಳನ್ನು ಬಲಪೂರ್ವಕ ವಶಪಡಿಸಿಕೊಂಡು ಸಮುದ್ರ ಮತ್ತು ಸಮುದ್ರ ವ್ಯಾಪಾರ ಕ್ಕೆ ಸುರಕ್ಷಿತ ಮಾರ್ಗ ಕಂಡುಕೊಂಡನು. ಇಂಗ್ರಿಯಾದಲ್ಲಿಯೇ ಪೀಟರ್‌ ಸೇಂಟ್‌ ಪೀಟರ್ಸ್‌ಬರ್ಗ್‌ ಎಂಬ ರಾಜಧಾನಿ ಸ್ಥಾಪಿಸಿದನು. ಪೀಟರ್‌ನ ಸುಧಾರಣೆಗಳು ಗಮನಾರ್ಹವಾಗಿ ಪಾಶ್ಚಿಮಾತ್ಯ ಯೂರೋಪಿಯನ್‌‌ ಸಾಂಸ್ಕೃತಿಕ ಪ್ರಭಾವಗಳಿಗೆ ರಷ್ಯಾವನ್ನು ಒಡ್ಡಿದವು. 1762ರಿಂದ 1796ರವರೆಗೆ ಆಳ್ವಿಕೆ ನಡೆಸಿದ ಕ್ಯಾಥರೀನ್‌ II (ಮಹಾನ್‌ ಕ್ಯಾಥರೀನ್‌ )ಳು, ರಷ್ಯಾವನ್ನು ಯುರೋಪ್‌ನ ಪ್ರಧಾನ ಶಕ್ತಿಗಳಲ್ಲಿ ಒಂದಾಗಿ ಮಾಡುವ ಪ್ರಯತ್ನವನ್ನು ಮುಂದುವರೆಸಿಪಡೆು . ಪ್ರಷ್ಯಾ ಮತ್ತು ಆಸ್ಟ್ರಿಯಾಗಳೊಂದಿಗೆ, ಫ್ರಾನ್ಸ್‌ನ ನೆಪೋಲಿಯನ್‌ ವಿರುದ್ಧ ನಿಂತು ಎದುರಾಳಿ ಪೋಲೆಂಡ್‌-ಲಿಥುವೇನಿಯಾಗಳನ್ನು ವಿಭಜನೆಗಳ ಸರಣಿಯಲ್ಲಿ ಮಣಿಸಿ, ಪಶ್ಚಿಮದಲ್ಲಿ ದೊಡ್ಡ ವಸಾಹತುಗಳ ಮೇಲಿನ ನಿಯಂತ್ರಣವನ್ನು ಹೊಂದಿತು. ರಷ್ಯಾ- ತುರ್ಕಿ ಸಮರದಲ್ಲಿನ ವಿಜಯದಿಂದಾಗಿ, 19ನೇ ಶತಮಾನದ ಆರಂಭದಲ್ಲಿ ರಷ್ಯಾ ಗಮನಾರ್ಹ ಪ್ರಮಾಣದಲ್ಲಿ ವಸಾಹತುಗಳನ್ನು ಟ್ರಾನ್ಸ್‌ಕಾಕೇಷ್ಯಾ ಪ್ರದೇಶದಲ್ಲಿ ಹೊಂದಿತು. ನೆಪೋಲಿಯನ್‌ 1812ರಲ್ಲಿ ತನ್ನ ವೈಭವದ ಪರಮಾವಧಿಯಲ್ಲಿ ನಡೆಸಿದ ರಷ್ಯಾ ಆಕ್ರಮಣವು ಹೀನಾಯ ಸೋಲು ಕಂಡಿತು. ಪಟ್ಟುಬಿಡದ ವಿರೋಧ ಹಾಗೂ ರಷ್ಯನ್‌ ಚಳಿಗಾಲದ ವಿಪರೀತ ಶೀತಹವೆಯಿಂದಾಗಿ ಆತ ದಾರುಣವಾದ ಸೋಲು ಕಾಣಬೇಕಾಯಿತು. ಈ ಹೋರಾಟದಲ್ಲಿ 95%ಗೂ ಅಧಿಕ ಪ್ರಮಾಣದಲ್ಲಿ ಆತನ ಸೇನೆ ನಾಶ ಹೊಂದಿತು. 1825ರ ಡಿಸೆಂಬರಿಸ್ಟ್‌ ದಂಗೆಯಲ್ಲಿ, ನೆಪೋಲಿಯನ್‌ ಸಮರಗಳ ಸೈನ್ಯಾಧಿಕಾರಿಗಳು ಉದಾರಸಿದ್ಧಾಂತಗಳನ್ನು ರಷ್ಯಾನಲ್ಲಿ ಪುನರುಜ್ಜೀವನಗೊಳಿಸಿ ತ್ಸಾರ್‌ನ ಅಧಿಕಾರವನ್ನು ಮೊಟಕುಗೊಳಿಸಲು ವ್ಯರ್ಥ ಪ್ರಯತ್ನ ನಡೆಸಿದರು. ಇದಾದ ನಂತರ ಅನೇಕ ದಶಕಗಳ ಮಟ್ಟಿಗೆ ರಾಜಕೀಯ ದಮನನೀತಿಗಳು ಚಾಲ್ತಿಯಲ್ಲಿದ್ದವು. ದಾಸ್ಯಪದ್ಧತಿಯ ಮುಂದುವರಿಕೆ ಮತ್ತು ಮೊದಲನೆಯ ನಿಕಾಲಸ್ ನ ಸಾಂಪ್ರದಾಯಿಕ ನೀತಿಗಳು ಹತ್ತೊಂಬತ್ತನೆಯ ಶತಮಾನದ ಮಧ್ಯದಲ್ಲಿ ರಷ್ಯಾದ ಅಭಿವೃದ್ದಿಗೆ ಅಡ್ಡಿಯೊಡ್ಡಿದವು. ನಿಕಾಲಸ್‌ನ ಉತ್ತರಾಧಿಕಾರಿಯಾದ ಎರಡನೆಯ ಅಲೆಕ್ಸಾಂಡರ್ (1855–1881) 1861ರಲ್ಲಿ ದಾಸ್ಯಪದ್ಧತಿಯ ರದ್ದತಿಯೂ ಸೇರಿದಂತೆ ಪ್ರಮುಖವಾದ ಸುಧಾರಣೆಗಳನ್ನು ಕೈಗೊಂಡನು; ಈ "ಮಹತ್ಬದ ಸುಧಾರಣೆಗಳು" ಔದ್ಯಮೀಕರಣಕ್ಕೆ ಪ್ರೇರಣೆ ನೀಡಿದವು. ಆದಾಗ್ಯೂ, ಮೂರನೆಯ ಅಲೆಕ್ಸಾಂಡರ್‌ ಹಾಗೂ ತನ್ನ ಪುತ್ರ ಎರಡನೆಯ ನಿಕಾಲಸ್‌ನ ರಾಜ್ಯಭಾರದ ಅವಧಿಯಲ್ಲಿ ಹಲವು ಸಾಮಾಜಿಕ-ಆರ್ಥಿಕ ಘರ್ಷಣೆಗಳು ಬಿಗಡಾಯಿಸಿದ್ದವು. ಕೈಗಾರಿಕಾ ಕಾರ್ಖಾನೆಗಳಲ್ಲಿನ ಕಠೋರ ವಾತಾವರಣವು ಕ್ರಾಂತಿಕಾರಿ ಸಮಾಜವಾದಿ ಚಳುವಳಿಗಾಗಿ ಜನಸ್ತೋಮದ ಬೆಂಬಲ ದೊರೆಯುವಂತೆ ಮಾಡಿತು. ಜನವರಿ 1905ರಲ್ಲಿ, ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮುಷ್ಕರ ಹೂಡುತ್ತಿದ್ದ ಕಾರ್ಮಿಕರು ಸುಧಾರಣೆಗಳಿಗಾಗಿ ಶಾಂತಿಯುತವಾಗಿ ಧರಣಿ ಹೂಡುತ್ತಿದ್ದರೂ ಸೇನಾಪಡೆಗಳಿಂದ ಗುಂಡು ಹಾರಿಸಲಾಗಿ ನೂರಾರು ಜನರು ಸತ್ತರು ಹಾಗೂ ಗಾಯಗೊಂಡಿದ್ದರು. ಶುರುವಿನಲ್ಲಿ ಜನರ ಬೆಂಬಲ ಹೊಂದಿದ್ದ ರಷ್ಯಾ-ಜಪಾನಿ ಸಮರದಲ್ಲಿನ ಸಿಜಾರನ ಸೇನೆಯ ಹೀನಾಯ ವೈಪಲ್ಯ ಮತ್ತು "ರಕ್ತ ಸಿಕ್ತ ರವಿವಾರ" ಎಂಬ ಘಟನೆಯು, 1905ರ ರಷ್ಯಾ ಚಳುವಳಿಯ ಕಿಡಿ ಹಚ್ಚಿತು. ಚಳುವಳಿಯನ್ನು ಸೇನೆಯು ಶೀಘ್ರದಲ್ಲಿ ಮೆಟ್ಟಿಹಾಕಿದಾಗ್ಯೂ ಮತ್ತು ಎರಡನೆಯ ನಿಕಾಲಸ್ ತನ್ನ ಹೆಚ್ಚಿನ ಅಧಿಕಾರವನ್ನು ಹಿಡಿದಿಟ್ಟುಕೊಂಡಿದ್ದರೂ ಕೂಡ, ಸಭೆಗಳಲ್ಲಿ ವಾಕ್ ಸ್ವಾತಂತ್ಯ, ರಾಜಕೀಯ ಪಕ್ಷಗಳ ಸಕ್ರಮ ಮತ್ತು ಚುನಾಯಿತ ಶಾಸಕರ ಸಭೆ ಡುಮಾ ಸೇರಿದಂತೆ ಪ್ರಮುಖ ಸುಧಾರಣೆಗಳಿಗೆ ತಾನು ಅನುಮತಿ ನೀಡಲೇಬೇಕಾಯಿತು; ಅದಾಗ್ಯೂ, ಕೈಗಾರಿಕಾ ಕಾರ್ಮಿಕರ ಜೀವನಗಳಲ್ಲಿ ಚೇತರಿಕೆ ಕಂಡುಕೊಳ್ಳುವ ಹಲವು ಆಸೆಗಳು ಈಡೇರದೆ ಉಳಿದವು. ರಷ್ಯಾದಲ್ಲಿ ಬರ-ಕ್ಷಾಮಗಳು ಆಗಾಗ್ಗೆ ಸಂಭವಿಸುತ್ತಿದ್ದವು; ಕ್ಷಾಮವು ಪ್ರತಿ 10-13 ವರ್ಷಗಳಲ್ಲಿ ಸಂಭವಿಸುತ್ತಿತ್ತು. 1891-92ರ ಕ್ಷಾಮವು ಸುಮಾರು ಅರ್ಧ ಮಿಲಿಯನ್‌ಗಳಷ್ಟು ಜನರನ್ನು ಬಲಿತೆಗೆದುಕೊಂಡಿತು. ಕಾಲರಾ ಸಾಂಕ್ರಾಮಿಕಗಳು ಎರಡು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಲಿತೆಗೆದುಕೊಂಡವು. ರಷ್ಯಾ ತನ್ನ ಮಿತ್ರ ಸರ್ಬಿಯಾದ ಬೆಂಬಲಕ್ಕೆ ನಿಂತುಮೊದಲನೆಯ ವಿಶ್ವ ಸಮರ ಪ್ರವೇಶಿಸಿ, ತನ್ನ ಮೈತ್ರಿಗಳಿಂದ ಪ್ರತ್ಯೇಕಿತವಾಗಿದ್ದಾಗಲೂ, ಮೂರು ಕಡೆಯಿಂದಲೂ ಸಮರ ಮಾಡಿತು. ರಷ್ಯಾಗೆ ಸಮರ ಬೇಕಾಗಿರಲಿಲ್ಲ, ಆದರೂ ಯುರೋಪಿನಾದ್ಯಂತ ಜರ್ಮನಿಯ ಸಾಮ್ರಾಜ್ಯಕ್ಕೆ ಪರ್ಯಾಯವೊಂದು ಬೇಕಿತ್ತು. 1916ರಲ್ಲಿ ಸೇನೆಯು ಸೋಲುಂಡಾಗ್ಯೂ, ಹೆಚ್ಚುತ್ತಿರುವ ಸಮರದ ಖರ್ಚುಗಳು, ಸಮರದಲ್ಲಿಯ ಸಾವು ನೋವುಗಳು (ಪರಸ್ಪರ ಸಖ್ಯ ಹೊಂದಿದ್ದ ಪ್ರಬಲ ದೇಶಗಳಲ್ಲಿ ರಷ್ಯಾ ಅತಿ ಹೆಚ್ಚು ನಾಗರಿಕ ಮತ್ತು ಸೇನಾ ಸಾವು ನೋವು ಕಂಡಿತು) ಮತ್ತು ಉನ್ನತ ಹುದ್ದೆಗಳಲ್ಲಿದ್ದವರ ಭ್ರಷ್ಟಾಚಾರ ಮತ್ತು ವಿದ್ರೋಹದ ಕಥೆಗಳ ಕಾರಣ, ಸಾಮ್ರಾಜ್ಯದ ಬಗ್ಗೆ ಜನರಿಗೆ ಮೊದಲೇ ಇದ್ದ ಅಪನಂಬಿಕೆಯು ಇನ್ನಷ್ಟು ಹೆಚ್ಚಾಗಿ, 1917ರ ರಷ್ಯಾ ಚಳುವಳಿಯ ಕಿಡಿಯನ್ನು ಹಚ್ಚಿತು. ಕಾರ್ಮಿಕರು, ರೈತರು ಹಾಗೂ ರೈತರಾಗಿದ್ದ ರಷ್ಯಾದ ಸೇನಾ ಸಿಬ್ಬಂದಿಯವರಿಂದ ದೇಶಾದ್ಯಂತ ಹಲವಾರು ದಂಗೆಗಳ ಸರಣಿಗಳು ಆಯೋಜಿತವಾಗಿದ್ದವು. ಹಲವಾರು ದಂಗೆಗಳನ್ನು ಸೋವಿಯತ್ ಎಂಬ ಪ್ರಜಾ-ಚುನಾಯಿತ ಪರಿಷತ್ತುಗಳು ಆಯೋಜಿಸಿ ನಡೆಸಿದವು.ಫೆಬ್ರುವರಿ ಕ್ರಾಂತಿಯು ರಷ್ಯಾದ ರಾಜ್ಯಭಾರವನ್ನು ಹೊರಗಟ್ಟಿ, ಇದರ ಜಾಗದಲ್ಲಿ ಸ್ವಯಂಘೋಷಿತ ಹಂಗಾಮಿ ಸರ್ಕಾರವೆಂಬ ಹಲವು ರಾಜಕೀಯ ಪಕ್ಷಗಳ ಸಮ್ಮಿಶ್ರ ಕೂಟವು ಬಂದಿತು. ಈ ಪರಿತ್ಯಾಗದೊಂದಿಗೆ ರಷ್ಯಾದಲ್ಲಿ ಸಾಮ್ರಾಜ್ಯಶಾಹಿಯ ಅಂತ್ಯವಾಗಿ, ನಿಕಾಲಸ್ ಮತ್ತು ಅವನ ಪರಿವಾರದವರನ್ನು ಕಾರಾವಾಸದಲ್ಲಿರಿಸಿ ನಂತರ ನಾಗರಿಕ ಸಮರದ ವೇಳೆ ಮರಣದಂಡನೆ ನಡೆಸಲಾಯಿತು. ಶುರುವಿನಲ್ಲಿ ಸೋವಿಯತ್‌ರ ಬೆಂಬಲವನ್ನು ಪಡೆದರೂ ಸಹ, ಹಂಗಾಮಿ ಸರ್ಕಾರವು ಫೆಬ್ರುವರಿ ಕ್ರಾಂತಿಗೆ ಕಾರಣವಾದಂತಹ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಯಿತು. ವ್ಲಾಡಿಮಿರ್ ಲೆನಿನ್ ನಾಯಕತ್ವದಲ್ಲಿ ನಡೆದ ಅಕ್ಟೋಬರ್ ಕ್ರಾಂತಿ ಎಂಬ ಎರಡನೆಯ ಕ್ರಾಂತಿಯು, ಹಂಗಾಮಿ ಸರ್ಕಾರವನ್ನು ಹೊರಗಟ್ಟಿ ವಿಶ್ವದಲ್ಲೇ ಮೊದಲ ಸಮಾಜವಾದಿ ದೇಶವನ್ನು ಸ್ಥಾಪಿಸಿತು. ಸೋವಿಯತ್ ರಷ್ಯಾ ಅಕ್ಟೋಬರ್ ಕ್ರಾಂತಿಯ ಬಳಿಕ, ಹೊಸ ಆಡಳಿತ ಹಾಗೂ ಸಮಾಜವಾದಿ ಕ್ರಾಂತಿಕಾರಿಗಳ, ಮೆನ್ಷೆವಿಕ್‌ಗಳ ಮತ್ತು ಶ್ವೇತ ಚಳುವಳಿಗಳ ನಡುವೆ ನಾಗರಿಕ ಸಮರ ನಡೆಯಿತು. ಬ್ರೆಸ್ಟ್-ಲಿಟೊವ್ಸ್ಕ್ ಒಡಂಬಡಿಕೆಯು ಮೊದಲನೆಯ ವಿಶ್ವ ಸಮರದಲ್ಲಿ ಕೇಂದ್ರೀಯ ಬಲಗಳೊಂದಿಗೆ ಕದನಗಳನ್ನು ಅಂತ್ಯಗೊಳಿಸಿತು. ಈ ಒಡಂಬಡಿಕೆಗೆ ಸಹಿ ಹಾಕಿದ ರಷ್ಯಾ ಉಕ್ರೇನ್, ಪೊಲಿಷ್, ಬಾಲ್ಟಿಕ್ ಪ್ರಾಂತ್ಯಗಳನ್ನು ಹಾಗೂ ಫಿನ್ಲೆಂಡ್‌ನ್ನು ಕಳೆದುಕೊಂಡಿತು. ಮಿತ್ರ ಪಡೆಯು ವಾಮಪಕ್ಷ ವಿರೋಧಿ ಶಕ್ತಿಗಳ ಬೆಂಬಲಕ್ಕಾಗಿ ಸೇನಾ ಹಸ್ತಾಕ್ಷೇಪವನ್ನು ನಡೆಸಿತು ಹಾಗೂ ಬಲ್ಷೆವಿಕ್ ಮತ್ತು ಶ್ವೇತ ಚಳುವಳಿಗಳೆರಡೂ ಪರಸ್ಪರ ದೇಶ ಬಹಿಷ್ಕಾರ ಹಾಗೂ ಮರಣದಂಡನಾ ಶಿಕ್ಷೆಗಳನ್ನು ನಡೆಸಿದವು; ಇದನ್ನು ಕ್ರಮವಾಗಿ ಕೆಂಪು ಆತಂಕವಾದ ಮತ್ತು ಶ್ವೇತ ಆತಂಕವಾದ ಎನ್ನಲಾಯಿತು.1921ರ ಕ್ಷಾಮವು ಸುಮಾರು ಐದು ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡಿತು. ರಷ್ಯಾ ನಾಗರಿಕ ಸಮರದ ಅಂತ್ಯದಲ್ಲಿ, ಸುಮಾರು 20 ಮಿಲಿಯನ್ ಜನರು ಸತ್ತು, ರಷ್ಯಾದ ಆರ್ಥಿಕತೆ ಮತ್ತು ಮೂಲಭೂತ ಸೌಕರ್ಯಗಳ ಸರ್ವನಾಶವಾಗಿತ್ತು. ನಾಗರಿಕ ಸಮರದಲ್ಲಿ ಗೆದ್ದ ನಂತರ, ರಷ್ಯಾದ SFSR ಮೂರು ಸೋವಿಯತ್ ದೇಶಗಳೊಂದಿಗೆ ಒಗ್ಗೂಡಿ ಡಿಸೆಂಬರ್ 1922, 30ರಂದು ಸೋವಿಯತ್‌ ಒಕ್ಕೂಟದ ರಚನೆ ಮಾಡಿಕೊಂಡಿತು. ಸೋವಿಯತ್‌ ಒಕ್ಕೂಟ ರಚಿಸಿದ 15 ದೇಶಗಳ ಪೈಕಿ, ಭೌಗೋಳಿಕವಾಗಿ ಮತ್ತು USSR ನ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನಂಶವನ್ನು ಹೊಂದಿರುವ ಅತಿದೊಡ್ಡ ಗಣರಾಜ್ಯ ರಷ್ಯಾದ ಸೋವಿಯತ್ ಸಂಯುಕ್ತ ಸಮಾಜವಾದಿ ಗಣರಾಜ್ಯ, ತನ್ನ 69-ವರ್ಷಗಳ ಇತಿಹಾಸದುದ್ದಕ್ಕೂ ಸೋವಿಯತ್‌ ಒಕ್ಕೂಟದ ಮೇಲೆ ತನ್ನ ಪ್ರಾಬಲ್ಯವನ್ನು ಮೆರೆಯಿತು; ಕೆಲವೊಮ್ಮೆ USSR ಅನ್ನು ತಪ್ಪಾಗಿ "ರಷ್ಯಾ" ಎನ್ನಲಾಗುತ್ತಿತ್ತು ಮತ್ತು ಅಲ್ಲಿನ ಜನತೆಯನ್ನು "ರಷ್ಯನ್ನರು" ಎನ್ನಲಾಗುತ್ತಿತ್ತು. 1924ರಲ್ಲಿ ಲೆನಿನ್ ಸಾವಿನ ನಂತರ, ಜೊಸೆಫ್‌ ಸ್ಟಾಲಿನ್ ತನ್ನ ಅಧಿಕಾರವನ್ನು ದೃಢಪಡಿಸಿಕೊಂಡು, ಸರ್ವಾಧಿಕಾರಿಯಾದನು. ಅವನು ಸಬಲ ಆರ್ಥಿಕತೆ, ಹೆಚ್ಚು-ಕಡಿಮೆ ಗ್ರಾಮೀಣ ಸ್ಥಿತಿಯಲ್ಲಿದ್ದ ದೇಶದಲ್ಲಿ ತ್ವರಿತ ಔದ್ಯಮೀಕರಣ ಮತ್ತು ಕೃಷಿಯ ಕ್ರೋಢೀಕರಣಕ್ಕೆ ಒತ್ತು ನೀಡಿದನು. ಈ ಕ್ರಮಗಳು ಸೋವಿಯತ್‌ ಒಕ್ಕೂಟವನ್ನು ಕೃಷಿ ಪ್ರಧಾನ ಆರ್ಥಿಕತೆಯಿಂದ ಒಂದು ಪ್ರಮುಖ ಕೈಗಾರಿಕಾ ಪ್ರಬಲ ರಾಷ್ಟ್ರವನ್ನಾಗಿ ಮಾರ್ಪಾಟು ಮಾಡಿದವು.ಆದರೂ, ಈ ಮಾರ್ಪಾಡಿಗಾಗಿ ಬಹಳ ಬೆಲೆ ತೆರಬೇಕಾಯಿತು. ಇವನ ಕಠಿಣ ನೀತಿಗಳಿಂದಾಗಿ ಮಿಲಿಯನ್‌ಗಳಷ್ಟು ಜನರು ಸತ್ತರು. (ನೋಡಿ: ಗುಲಾಗ್‌, ಡಿಕುಲಕೈಸೇಷನ್‌, ಸೋವಿಯತ್‌ ಒಕ್ಕೂಟದಲ್ಲಿ ಜನಸಂಖ್ಯೆಯ ಸ್ಥಳಾಂತರ, 1932–1933ರ ಸೋವಿಯತ್ ಕ್ಷಾಮ ಮತ್ತು ಮಹಾ ಆತಂಕವಾದ). ] 22 ಜೂನ್ 1941ರಂದು ನಾಜಿ ಜರ್ಮನಿಯು ಸೋವಿಯತ್‌ ಒಕ್ಕೂಟದ ಮೇಲೆ ಮಾನವ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪ್ರಮಾಣದ ಹಾಗೂ ಪ್ರಬಲವಾಗಿದ್ದಂತಹ ಆಕ್ರಮಣ ನಡೆಸಿತು, ಇದು ಎರಡನೆಯ ವಿಶ್ವಸಮರವೆಂಬ ಬೃಹತ್ ರಂಗಕ್ಕೆ ಎಡೆಮಾಡಿಕೊಟ್ಟಿತು. ಶುರುವಿನಲ್ಲಿ ಜರ್ಮನಿಯ ಸೇನೆಯು ಸಾಕಷ್ಟು ಯಶಸ್ಸು ಗಳಿಸಿತಾದರೂ, ಮಾಸ್ಕೋ ನಗರದ ಹೊರವಲಯವನ್ನು ತಲುಪಿದ ಬಳಿಕ ಸೋಲುಗಳಿಗೆ ಈಡಾಯಿತು ಮತ್ತು 1942-1943ರ ಚಳಿಗಾಲದಲ್ಲಿ ನಡೆದ ಸ್ಟಾಲಿನ್‌ಗ್ರಾಡ್ ಸಮರದಲ್ಲಿ ಮೊದಲ ಪ್ರಮುಖ ಸೋಲುಂಡಿತು. [147] 1944-45ರಲ್ಲಿ ಸೋವಿಯತ್ ಸೇನೆಯು ಪೂರ್ವ ಯೂರೋಪ್‌ ಮೂಲಕ ದಂಡಯಾತ್ರೆ ನಡೆಸಿ ಮೇ 1945ರಲ್ಲಿ ಬರ್ಲಿನ್‌ನನ್ನು ವಶಪಡಿಸಿಕೊಂಡಿತು.ಈ ಘರ್ಷಣೆಯಲ್ಲಿ, ಸೋವಿಯತ್ ಸೇನೆ ಹಾಗೂ ನಾಗರಿಕರ ಸಾವಿನ ಪ್ರಮಾಣವು ಕ್ರಮವಾಗಿ 10.6 ಮಿಲಿಯನ್ ಮತ್ತು 15.9 ಮಿಲಿಯನ್ ಆಗಿತ್ತು,[149] ಎರಡನೆಯ ವಿಶ್ವ ಸಮರದಲ್ಲಿನ ಸಾವುನೋವುಗಳಲ್ಲಿ ಅರ್ಧದಷ್ಟು ಲೆಕ್ಕವಾಗಿತ್ತು. ಸೊವಿಯತ್‌ನ ಆರ್ಥಿಕತೆ ಮತ್ತು ಮೂಲಭೂತ ಸೌಕರ್ಯಗಳು ಹೆಚ್ಚು ಪ್ರಮಾಣದಲ್ಲಿ ನಾಶಗೊಂಡಿದ್ದವು ಆದರೂ, ಸೋವಿಯತ್‌ ಒಕ್ಕೂಟವು ಪ್ರಬಲ ರಾಷ್ಟ್ರವೆಂದು ಒಪ್ಪಿಗೆಯಾಗಿ ಹೊರಹೊಮ್ಮಿತು. ಸಮರದ ನಂತರ ಕೆಂಪು ಸೇನೆಯು ಜರ್ಮನಿಯ ಪೂರ್ವಾರ್ಧವನ್ನೂ ಸೇರಿಸಿ ಪೂರ್ವ ಯೂರೋಪ್‌ ನ್ನು ಆಕ್ರಮಿಸಿಕೊಂಡಿತು; ಸ್ಟಾಲಿನ್ ಈ ಉಪರಾಜ್ಯಗಳಲ್ಲಿ ಸಮಾಜವಾದಿ ಸರ್ಕಾರಗಳನ್ನು ಸ್ಥಾಪಿಸಿದನು. ವಿಶ್ವದಲ್ಲಿ ಎರಡನೆಯ ಪರಮಾಣು ಶಸ್ತ್ರ ಹೊಂದಿದ ರಾಷ್ಟ್ರವಾಗಿ, USSR ವಾರ್ಸಾ ಒಡಂಬಡಿಕೆ ಮೈತ್ರಿಯನ್ನು ಸ್ಥಾಪಿಸಿ, ವಿಶ್ವದ ಮೇಲೆ ಪ್ರಾಬಲ್ಯ ಮೆರೆಯಲು ಅಮೆರಿಕಾದೊಂದಿಗೆ ಪೈಪೋಟಿಯನ್ನು ನಡೆಸಿತು; ಇದಕ್ಕೆ ಶೀತಲ ಸಮರವೆನ್ನಲಾಯಿತು. ಸ್ಟಾಲಿನ್ ಸಾವಿನ ನಂತರ, ಸ್ಟಾಲಿನ್‌ನನ್ನು ಟೀಕಿಸಿದ ರಷ್ಯಾದ ನಾಯಕ ನಿಕಿತಾ ಖ್ರುಷ್ಚೆವ್ ಸ್ಟಾಲಿನ್ ನ ಉಸಿರುಕಟ್ಟಿಸುವಂತಹ ನೀತಿಗಳನ್ನು ಸಡಿಲಗೊಳಿಸಿದನು. ಇವನು ಡಿ-ಸ್ಟಾಲಿನ್‌ವಾದವೆಂಬ ಸ್ಟಾಲಿನ್‌ವಾದಿ ರಾಜಕೀಯ ವ್ಯವಸ್ಥೆಯ ನಿರ್ಮೂಲನ ಪ್ರಕ್ರಿಯೆಯನ್ನು ಶುರುಗೊಳಿಸಿ ಗುಲಾಗ್ ಕಾರ್ಮಿಕ ಠಿಕಾಣಿಗಳನ್ನು ರದ್ದುಗೊಳಿಸಿ, ಮಿಲಿಯನ್‌ಗಟ್ಟಲೆ ಕೈದಿಗಳನ್ನು ಬಿಡುಗಡೆಗೊಳಿಸಿದನು.[153] ಸೋವಿಯತ್‌ ಒಕ್ಕೂಟ ಸ್ಪುಟ್ನಿಕ್ ಎಂಬ ವಿಶ್ವದಲ್ಲಿನ ಮೊದಲ ಕೃತಕ ಉಪಗ್ರಹವನ್ನು ಉಡ್ಡಯನಗೊಳಿಸಿತು ಹಾಗೂ ರಷ್ಯಾದ ಗಗನಯಾತ್ರಿ ಯುರಿ ಗಗರಿನ್ ವೊಸ್ಟಾಕ್ 1 ಎಂಬ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನದಲ್ಲಿ ಭೂಮಿಯ ಸುತ್ತ ಬಾಹ್ಯಾಕಾಶ ಪ್ರಯಾಣ ನಡೆಸಿದ ಮೊದಲ ಮಾನವನೆನೆಸಿಕೊಂಡನು.ತುರ್ಕಿಯಲ್ಲಿ ಅಮೆರಿಕಾದ ಜುಪಿಟರ್ ಕ್ಷಿಪಣಿಗಳು ಮತ್ತು ಕ್ಯೂಬಾದಲ್ಲಿ ಸೋವಿಯತ್ ಕ್ಷಿಪಣಿಗಳು ಸ್ಥಾಪಿಸಲಾದ ವಿಚಾರಕ್ಕೆ ಸಂಬಂಧಿಸಿ ಉಭಯ ರಾಷ್ಟ್ರಗಳ ನಡುವೆ ಜಗಳಗಳಾಗಿ, ಅಮೆರಿಕಾದೊಂದಿಗೆ ಉದ್ರಿಕ್ತತೆ ತೀವ್ರಗೊಂಡಿತು. ಖ್ರುಷ್ಚೆವ್ ವಜಾಗೊಂಡ ನಂತರ, ಸಾಮೂಹಿಕ ನಾಯಕತ್ವದ ಆಡಳಿತದ ಇನ್ನೊಂದು ಅವಧಿ ನಡೆಯಿತು, ನಂತರ 1970ರ ದಶಕದಲ್ಲಿ ಲಿಯೊನಿಡ್ ಬ್ರೆಜ್ನೆವ್ ಸೋವಿಯತ್ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನಮಾನಗಳನ್ನು ಕಲ್ಪಿಸಿಕೊಂಡನು. ಬ್ರೆಜ್ನೆವ್ ಆಡಳಿತದ ಅವಧಿಯಲ್ಲಿ ಆರ್ಥಿಕತೆಯ ಸ್ಥಗಿತ ಮತ್ತು ಅಫ್ಘಾನಿಸ್ತಾನದಲ್ಲಿ ಸೋವಿಯತ್ ಸಮರ, ಆರ್ಥಿಕ ಮೂಲಗಳನ್ನು ಖರ್ಚುಮಾಡಿ ಯಾವುದೇ ಆರ್ಥಪೂರ್ಣ ಸೇನಾ ಮತ್ತು ರಾಜಕೀಯ ಫಲಿತಾಂಶಗಳನ್ನೀಯದೆ ಸುಮ್ಮನೆ ಎಳೆಯುತ್ತಿತ್ತು. ಕಡೆಗೆ, ವಿಶ್ವಾದ್ಯಂತ ವಿರೋಧ ಮತ್ತು ಸೋವಿಯತ್ ಜನತೆಯ ರಾಜಕೀಯ ಬೆಂಬಲದ ಕೊರತೆಯಿಂದಾಗಿ, 1989ರಲ್ಲಿ ಅಫ್ಘಾನಿಸ್ತಾನದಿಂದ ಸೋವಿಯತ್ ಸೇನೆಯನ್ನು ಹಿಂಪಡೆಯಲಾಯಿತು.ಅಮೆರಿಕಾದಲ್ಲಿ ಸೋವಿಯತ್‌-ವಿರೋಧಿ ವಾಗ್ಸಮರ, SDI ಪ್ರಸ್ತಾಪ ಮತ್ತು ಸೆಪ್ಟೆಂಬರ್ 1983ರಲ್ಲಿ ಸೋವಿಯತ್‌ರಿಂದ ಸಿಡಿಸಲಾದ ಕೊರಿಯನ್ ಏರ್ಲೈನ್ಸ್ ೦೦೭ ವಿಮಾನ - ಈ ವಿಚಾರಗಳನ್ನು ಕುರಿತು 1980ರ ಶುರುವಿನಲ್ಲಿ ಸೋವಿಯತ್ ಒಕ್ಕೂಟ ಹಾಗೂ ಅಮೆರಿಕಾದ ನಡುವೆ ಉದ್ರಿಕ್ತತೆಯು ಹಚ್ಚಾಯಿತು. 1985ರಿಂದ ಮುಂದಕ್ಕೆ, ಮಿಖಾಯಿಲ್ ಗೊರ್ಬಚೆವ್ ದೇಶವನ್ನು ಆಧುನೀಕರಣಗೊಳಿಸಲು ಗ್ಲಾಸ್ನೊಸ್ಟ್ (ಮುಕ್ತತೆ) ಮತ್ತು ಪೆರೆಸ್ಟ್ರೊಯಿಕಾ (ಪುನರ್ನಿಮಾಣ) ಎಂಬ ಎರಡು ನೀತಿಗಳನ್ನು ಜಾರಿಗೊಳಿಸಿದರು. USSRನ ಆರ್ಥಿಕತೆ ವಿಭಜನೆಯ ಮುಂಚೆ ವಿಶ್ವದಲ್ಲಿಯೇ ಎರಡನೇ ದೊಡ್ಡ ಆರ್ಥಿಕತೆಯಾಗಿತ್ತು. [155]. ತನ್ನ ಕೊನೆಯ ವರ್ಷಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಕಿರಾಣಿಗಳ ಆಭಾವ, ಭಾರೀ ಪ್ರಮಾಣದ ಕೊರತೆಯ ಬಜೆಟ್ ಮತ್ತು ಹಣ ಪೂರೈಕೆ ಹೆಚ್ಚಾಗಿ ಹಣದುಬ್ಬರ - ಈ ಕಾರಣಗಳಿಂದಾಗಿ ಆರ್ಥಿಕತೆಗೆ ಬಹಳ ತೊಂದರೆಯಾಯಿತು.[157] ಆಗಸ್ಟ್ 1991ರಲ್ಲಿ, ಸೋವಿಯತ್ ಒಕ್ಕೂಟವನ್ನು ಉಳಿಸುವ ಉದ್ದೇಶ ಹೊತ್ತಿದ, ಗೊರ್ಬಚೆವ್ ವಿರುದ್ಧ ನಡೆಸಿ ವಿಫಲವಾದ ಸೇನಾ ದಂಗೆ ಸೋವಿಯತ್‌ ಒಕ್ಕೂಟದ ಕುಸಿತಕ್ಕೆ ನಾಂದಿಯಾಯಿತು.ರಷ್ಯಾದಲ್ಲಿ ಬೊರಿಸ್ ಯೆಲ್ಟ್ಸಿನ್ ಅಧಿಕಾರಕ್ಕೆ ಬಂದು ಸಮಾಜವಾದಿ ಆಡಳಿತಕ್ಕೆ ಅಂತ್ಯ ಸೂಚಿಸಿದರು. USSR ಡಿಸೆಂಬರ್ 1991ರಲ್ಲಿ ಹದಿನೈದು ಸ್ವತಂತ್ರ ಗಣರಾಜ್ಯಗಳಾಗಿ ಭಾಗಗೊಂಡು ಅಧಿಕೃತವಾಗಿ ವಿಭಜನೆಗೊಂಡಿತು. ಜೂನ್ 1991ರಲ್ಲಿ ನಡೆದ ರಷ್ಯಾದ ಇತಿಹಾಸದಲ್ಲೇ ಮೊದಲ ಬಾರಿಗೆ ನೇರವಾದ ರಾಷ್ಟ್ರಪತಿ ಚುನಾವಣೆಯಲ್ಲಿ, ಬೊರಿಸ್ ಯೆಲ್ಟ್ಸಿನ್ ರಷ್ಯಾದ ಅಧ್ಯಕ್ಷರಾಗಿ ಚುನಾಯಿತರಾದರು. ರಷ್ಯನ್‌ ಒಕ್ಕೂಟ USSRನ ವಿಭಜನೆಯ ವೇಳೆ ಹಾಗೂ ಆನಂತರದ ಕಾಲದಲ್ಲಿ ಖಾಸಗೀಕರಣ, ಮಾರುಕಟ್ಟೆ ಮತ್ತು ವಹಿವಾಟು ಸುಧಾರೀಕರಣ ಕ್ರಮಗಳೂ ಸೇರಿದಂತೆ ವ್ಯಾಪಕ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿರುವಾಗ ರಷ್ಯಾದ ಆರ್ಥಿಕತೆಯು ದೊಡ್ಡ ಬಿಕ್ಟಟ್ಟಿನ ಸ್ಥಿತಿಯಲ್ಲಿ ಸಾಗುತ್ತಿತ್ತು. ಈ ಅವಧಿಯಲ್ಲಿ ಉತ್ಪಾದನೆ ಸಂಕುಚಿತಗೊಂಡಿತ್ತು, 1990ರಿಂದ 1995ರ ಕೊನೆಯ ತನಕ GDP 50% ರಷ್ಟು ಇಳಿತ ಕಂಡಿದ್ದು ಕೈಗಾರಿಕಾ ಉತ್ಪಾದನೆಯ ಪ್ರಮಾಣವೂ ಸಹ 50% ರಷ್ಟು ಇಳಿತ ಕಂಡಿತ್ತು. [161][163] ರಷ್ಯಾ, ಅಮೆರಿಕಾ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಶಿಫಾರಸಿನ ಮೇಲೆ, "ಷಾಕ್ ತೆರಪಿ"ಯ ರೀತಿಯಲ್ಲಿ ಆಧಾರಭೂತವಾದ, ಮಾರುಕಟ್ಟೆ-ಆಧಾರಿತ ಸುಧಾರಣೆಯೊಂದಿಗೆ ಮುಂದುವರೆಯುವುದು ಎಂಬುದನ್ನು ಯೆಲ್ಟ್ಸಿನ್ ಅಕ್ಟೋಬರ್ 1991ರಲ್ಲಿ ಘೋಷಿಸಿದರು. [165][167] ಬೆಲೆ ನಿಯಂತ್ರಣಗಳನ್ನು ರದ್ದುಗೊಳಿಸಲಾಯಿತು ಮತ್ತು ಖಾಸಗೀಕರಣವನ್ನು ಶುರುಗೊಳಿಸಲಾಯಿತು. ಮಿಲಿಯನ್‌ನಷ್ಟು ಜನರು ಬಡತನಕ್ಕೊಳಗಾದರು. ವಿಶ್ವ ಬ್ಯಾಂಕಿನ ಪ್ರಕಾರ, ಕೊನೆಯ ಸೋವಿಯತ್ ಯುಗದಲ್ಲಿ 1.5% ರಷ್ಟು ಜನಸಂಖ್ಯೆಯು ಬಡತನದಲ್ಲಿ ಜೀವನ ನಡೆಸುತ್ತಿದ್ದರೆ, 1993ರ ಮಧ್ಯದಲ್ಲಿ 39% ರಿಂದ 49ರಷ್ಟು ಜನಸಂಖ್ಯೆಯು ಬಡತನದಲ್ಲಿ ಜೀವನ ನಡೆಸುತ್ತಿತ್ತು.[169] ವೇತನಗಳ ಪಾವತಿಯಲ್ಲಿ ವಿಳಂಬಗಳು ಒಂದು ಅಂತ್ಯ ಕಾಣದ ಸಮಸ್ಯೆಯಾಗಿ, ಮಿಲಿಯನ್‌ಗಳಷ್ಟು ಜನರು ತಿಂಗಳುಗಳ-ವರ್ಷಗಳ ನಂತರ ತಮ್ಮ ವೇತನಗಳನ್ನು ಪಡೆಯುವಷ್ಟು ವಿಳಂಬವಾಗುತ್ತಿತ್ತು.ವಿಭಜನಾ ಸಮಯದಲ್ಲಿ USSRನ ಜನಸಂಖ್ಯೆಯ ಅರ್ಧದಷ್ಟನ್ನು ಮಾತ್ರ ಹೊಂದಿದ್ದರೂ ಕೂಡ, ರಷ್ಯಾ USSRನ ಬಾಹ್ಯ ಋಣಗಳನ್ನು ತೀರಿಸುವ ಹೊಣೆಯನ್ನು ರಷ್ಯಾ ಕೈಗೆತ್ತಿಕೊಂಡಿತು. ಖಾಸಗೀಕರಣ ಪ್ರಕ್ರಿಯೆಯು ಹೆಚ್ಚಾಗಿ ಉದ್ದಿಮೆಗಳ ಸ್ವಾಮ್ಯತೆಯನ್ನು ರಾಜ್ಯದ ಅಂಗಗಳಿಂದ ಸರ್ಕಾರ ಮತ್ತು ಮಾಫಿಯಾದೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಗುಂಪಿಗೆ ಹಸ್ತಾಂತರಗೊಳಿಸಿತ್ತು. ಆಗಾಗ್ಗೆ, ಹಿಂಸಾತ್ಮಕ ಅಪರಾಧಿ ಗುಂಪುಗಳು ಹತ್ಯೆ-ಸುಲಿಗೆಗಳನ್ನು ಮಾಡಿ, ರಾಜ್ಯಸ್ವಾಮ್ಯದ ಉದ್ದಿಮೆಗಳನ್ನು ತಮ್ಮದಾಗಿಸಿಕೊಂಡವು. ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ದೈನಿಕ ಜೀವನ ನಿಯಮದಂತಾಯಿತು. ಬೃಹತ್ ಪ್ರಮಾಣದ ಬಂಡವಾಳ ಪಲಾಯನದಲ್ಲಿ ಹಲವಾರು ಹೊಸದಾಗಿ ಶ್ರೀಮಂತರಾದ ದೊಂಬಿಕೋರರು ಮತ್ತು ಉದ್ಯಮಿಗಳು ಬಿಲಿಯನ್‌ಗಟ್ಟಲೆ ನಗದು-ಆಸ್ತಿಪಾಸ್ತಿಯನ್ನು ದೇಶದ ಹೊರಗೆ ಒಯ್ದರು.[173] ದೀರ್ಘಕಾಲದ ವ್ಯಾಕುಲದೊಂದಿಗೆ ಸಾಮಾಜಿಕ ಅಧೋಗತಿಯೂ ಬೆರೆತುಕೊಂಡಿತ್ತು. ಸಾಮಾಜಿಕ ಸೇವಾ ವ್ಯವಸ್ಥೆಯು ಕುಸಿದು, ಜನ್ಮ ಪ್ರಮಾಣ ಕಡಿಮೆಯಾಗಿ ಮೃತ್ಯು ಪ್ರಮಾಣ ಹೆಚ್ಚಾಯಿತು. 1990ರ ದಶಕದ ಶುರುವಿನಲ್ಲಿ ಮತ್ತು ಮಧ್ಯದಲ್ಲಿ ತೀವ್ರ ಯದೃಚ್ಛೆ ತಾಂಡವ ನಾಟ್ಯವಾಡುತ್ತಿತ್ತು.ಅಪರಾಧಿ ಗುಂಪುಗಳು ಮತ್ತು ಸಂಘಟಿತ ಅಪರಾಧಗಳು ಎಲ್ಲೆಯಿಲ್ಲದೆ ನಡೆಯುತ್ತಿದ್ದು, ಕೊಲೆ ಮತ್ತು ಇತರೆ ಹಿಂಸಾಸ್ವರೂಪದ ಅಪರಾಧಗಳು ಕೈಮೀರಿ ಹೋಗುತ್ತಿದ್ದವು. ] 1993ರ ಸಾಂವಿಧಾನಿಕ ಬಿಕ್ಕಟ್ಟು ಅಕ್ಟೋಬರ್ ಕ್ರಾಂತಿಯ ನಂತರ ಮಾಸ್ಕೋದಲ್ಲಿ ನಡೆದ ಅತಿಹೀನ ನಾಗರಿಕ ಕಲಹಕ್ಕೆ ಕಾರಣವಾಯಿತು.[179] ತಮ್ಮ ಅಧಿಕಾರವನ್ನು ವೃದ್ಧಿಸಿ, ಜನಪ್ರಿಯವಲ್ಲದ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವ ಯತ್ನವನ್ನು ವಿರೋಧಿಸಿದ ದೇಶದ ಶಾಸಕರ ಸಭೆಯನ್ನು ಅಧ್ಯಕ್ಷ ಬೊರಿಸ್ ಯೆಲ್ಟ್ಸಿನ್ ಕಾನೂನುಬಾಹಿರವಾಗಿ[181] ವಿಸರ್ಜಿಸಿದರು; ಇದಕ್ಕೆ ಉತ್ತರವಾಗಿ ಶಾಸಕರು ಶ್ವೇತ ಭವನದೊಳಗೆ ಬೀಗ ಹಾಕಿದ್ದುಕೊಂಡು, ಯೆಲ್ಟ್ಸಿನ್‌ರನ್ನು ವಜಾಗೊಳಿಸಿ, ಹೊಸ ಅಧ್ಯಕ್ಷರನ್ನು ಚುನಾಯಿಸಿದರು.ಯೆಲ್ಟ್ಸಿನ್ ಸರ್ಕಾರದ ವಿರುದ್ಧದ ಪ್ರಮುಖ ಪ್ರತಿಭಟನೆಗಳು ನೂರಾರು ಸಾವುಗಳಲ್ಲಿ ಪರಿಣಮಿಸಿತು. ಸೇನಾ ಬೆಂಬಲದೊಂದಿಗೆ, ಯೆಲ್ಟ್ಸಿನ್ ಸೇನೆಯನ್ನು ಕಳುಹಿಸಿ ಸಂಸದ್ ಭವನಕ್ಕೆ ಮುತ್ತಿಗೆ ಹಾಕಿಸಿ, ಟ್ಯಾಂಕ್ ಹಾಗೂ ಫಿರಂಗಿಗಳನ್ನು ಬಳಸಿ ಅದರೊಳಗಿದ್ದವರನ್ನು ಹೊರಗಟ್ಟಿಸಿದರು. 1990ರ ದಶಕದಲ್ಲಿ ಉತ್ತರ ಕಾಕಸಸ್‌ನಲ್ಲಿ ಸಶಸ್ತ್ರ ಜನಾಂಗೀಯ ಘರ್ಷಣೆಗಳು ನಡೆಯುತ್ತಿದ್ದವು. ಇಂತಹ ಘರ್ಷಣೆಗಳು ಸಂಯುಕ್ತತೆಯ ವಿರುದ್ದ ತಲೆಯೆತ್ತಿದ ಇಸ್ಲಾಮಿ ಪ್ರತ್ಯೇಕತಾವಾದ ಅಥವಾ ಸ್ಥಳೀಯ ಗುಂಪುಗಳ ನಡುವೆ ಜನಾಂಗೀಯ ಘರ್ಷಣೆಗಳತ್ತ ತಿರುಗಿದವು.1990ರ ದಶಕದಲ್ಲಿ ಚೆಚೆನ್ ಪ್ರತ್ಯೇಕತಾವಾದಿಗಳು ಸ್ವಾತಂತ್ರ್ಯ ಘೋಷಿಸಿದಾಗಿಂದಲೂ, ಹಲವಾರು ವಿವಿಧ ಚೆಚೆನ್ ಬಂಡಾಯ ಗುಂಪುಗಳು ಮತ್ತು ರಷ್ಯಾದ ಸೇನೆಯ ನಡುವೆ ಸಣ್ಣ ಪ್ರಮಾಣದಲ್ಲಿ ಗೆರಿಲ್ಲಾ ಸಮರ (ಮೊದಲನೆಯ ಚೆಚೆನ್ ಸಮರ, ಎರಡನೆಯ ಚೆಚೆನ್ ಯುದ್ಧ) ನಡೆದಿದ್ದವು. ಚೆಚೆನ್ ಪ್ರತ್ಯೇಕತಾವಾದಿಗಳಿಂದ ನಾಗರೀಕರ ವಿರುದ್ಧದ ಆತಂಕವಾದೀ ಹಲ್ಲೆ, ಇದರಲ್ಲಿ ಪ್ರಮುಖವಾದದ್ದು ಮಾಸ್ಕೋ ರಂಗಮಂದಿರ ಒತ್ತೆಯಾಳು ಬಿಕ್ಕಟ್ಟು ಮತ್ತು ಬೆಸ್ಲಾನ್ ಶಾಲೆಯ ಮುತ್ತಿಗೆ, ನೂರಾರು ಸಾವುಗಳಿಗೆ ಕಾರಣವಾಗಿ ವಿಶ್ವದ ಗಮನವನ್ನು ತನ್ನತ್ತ ಸೆಳೆಯಿತು. ಹೆಚ್ಚು ಕೊರೆತೆಯ ಬಜೆಟ್ ಮತ್ತು 1997ರ ಏಷ್ಯಾದ ಹಣಕಾಸು ಬಿಕ್ಕಟ್ಟು 1998ರ ಹಣಕಾಸು ಬಿಕ್ಟಟ್ಟಿಗೆ ಕಾರಣವಾಗಿ[183] GDP ಇನ್ನಷ್ಟು ಕುಸಿಯಲು ಕಾರಣವಾಯಿತು.[185] 31 ಡಿಸೆಂಬರ್ 1999ರಂದು ಬೊರಿಸ್ ಯೆಲ್ಟ್ಸಿನ್ ಅಧ್ಯಕ್ಷ ಹುದ್ದಗೆ ರಾಜೀನಾಮೆ ನೀಡಿ, ಇತ್ತೀಚೆಗೆ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿರುವ ವ್ಲಾಡಿಮಿರ್ ಪುಟಿನ್‌ರಿಗೆ ಅಧಿಕಾರ ಹಸ್ತಾಂತರಗೊಳಿಸಿದರು; ಪುಟಿನ್ 2000ರ ಚುನಾವಣೆಯಲ್ಲಿ ಜಯಗಳಿಸಿದರು.ಚೆಚೆನ್ ಬಂಡುಕೋರರನ್ನು ಚೆಚ್ಚಿಹಾಕಿ ಪುಟಿನ ಅಪಾರ ಜನಪ್ರಿಯತೆ ಗಳಿಸಿದರು, ಆದಾಗ್ಯೂ ಈಗಲೂ ಸಹ ಅಗಾಗ್ಗೆ ಉತ್ತರ ಕಾಕಸಸ್‌ ಆದ್ಯಂತ ಹಿಂಸಾಚಾರ ಮರುಕಳಿಸುತ್ತಿರುತ್ತದೆ. ಹಚ್ಚಿದ ತೈಲ ಬೆಲೆ ಮತ್ತು ಶುರುವಿನಲ್ಲಿ ದುರ್ಬಲ ನಗನಾಣ್ಯ ಪದ್ಧತಿ, ಜೊತೆಗೆ ಏರುತ್ತಿರುವ ಸಾಂಸಾರಿಕ ಬೇಡಿಕೆ, ಬಳಕೆ ಮತ್ತು ಹೂಡಿಕೆಗಳು ಆರ್ಥಿಕತೆಯು ಸತತ ಒಂಬತ್ತು ವರ್ಷಗಳ ಕಾಲ ಬೆಳೆಯುವಂತೆ ಮಾಡಿವೆ, ಹಾಗಾಗಿ ಜೀವನದ ಗುಣಮಟ್ಟವನ್ನು ಸುಧಾರಿಸಿ ವಿಶ್ವರಂಗದಲ್ಲಿ ರಷ್ಯಾದ ಪ್ರಾಬಲ್ಯ ಹೆಚ್ಚಲು ನೆರವಾಯಿತು. ಪುಟಿನ್ ಸರ್ಕಾರವು ಕೈಗೊಂಡ ಸುಧಾರಣಾ ಕ್ರಮಗಳನ್ನು ಪಶ್ಚಿಮ ರಾಷ್ಟ್ಗಗಳು ಪ್ರಜಾಪರವಲ್ಲವೆಂದು ಟೀಕಿಸಿದರೂ, ಪುಟಿನ್‌ರ ನಾಯಕತ್ವದಡಿ ಸುವ್ಯವಸ್ಥೆ, ಸ್ಥಿರತೆ ಮತ್ತು ಪ್ರಗತಿಯು ರಷ್ಯಾದ್ಯಂತ ಜನಪ್ರಿಯತೆ ಗಳಿಸಿಕೊಟ್ಟಿದೆ. 7 ಮಾರ್ಚ್ 2008ರಂದು ಡ್ಮಿಟ್ರಿ ಮೆಡ್ವೆಡೆವ್ ರಷ್ಯಾದ ಅಧ್ಯಕ್ಷರಾಗಿ, ಪುಟಿನ್ ಪ್ರಧಾನ ಮಂತ್ರಿಯಾದರು. ಸರ್ಕಾರ ಮತ್ತು ರಾಜಕೀಯ 1993 ರಷ್ಯಾದ ಸಂವಿಧಾನದ ಬಿಕ್ಕಟ್ಟು ನಂತರ, 12 ಡಿಸೆಂಬರ್ 1993ರಂದು ಜನಮತ ಸಂಗ್ರಹದ ಮೂಲಕ ಅಂಗೀಕರಿಸಲಾದ ರಾಷ್ಟ್ರೀಯ ಸಂವಿಧಾನದ ಪ್ರಕಾರ, ರಷ್ಯಾ ಒಂದು ಸಂಯುಕ್ತಗೊಳಿಸಿಕೆ ಮತ್ತು ವಿಧ್ಯುಕ್ತವಾಗಿ ಅರೆ-ಅಧ್ಯಕ್ಷೀಯ ಗಣರಾಜ್ಯ, ಇದರಲ್ಲಿ ಅಧ್ಯಕ್ಷರು ರಾಷ್ಟ್ರದ ಮುಖ್ಯಸ್ಥರಾಗಿರುತ್ತಾರೆ ಮತ್ತು ಪ್ರಧಾನ ಮಂತ್ರಿಯು ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ. ರಷ್ಯನ್‌ ಒಕ್ಕೂಟವು ಮೂಲಭೂತವಾಗಿ ಪ್ರತಿನಿಧಿ ಪ್ರಜಾಪ್ರಭುತ್ವವಾಗಿ ನಿರ್ಮಾಣವಾಗಿದೆ. ಕಾರ್ಯಾಂಗ ಅಧಿಕಾರವು ಸರ್ಕಾರದಂದ ಚಲಾಯಿತವಾಗುತ್ತದೆ.[195] ಶಾಸನ ಅಧಿಕಾರವು ಸಂಯುಕ್ತ ಸಭೆಯ ಎರಡು ಕೊಠಡಿಗಳೊಂದಿಗಿರುತ್ತದೆ.[197] ರಷ್ಯನ್‌ ಒಕ್ಕೂಟದ ಸಂವಿಧಾನ ನಿರೂಪಿಸಿರುವ ಪರಿಶೀಲನೆಗಳು ಮತ್ತು ಸಮತೋಲನಗಳ ವ್ಯವಸ್ಥೆಯು ಸರ್ಕಾರವನ್ನು ನಿಯಂತ್ರಿಸುತ್ತದೆ, ಇದು ರಷ್ಯಾದ ಸರ್ವೋಚ್ಚ ಕಾನೂನು ಪತ್ರವಾಗಿ ಮತ್ತು ರಷ್ಯನ್ ಒಕ್ಕೂಟದ ಜನತೆಗಾಗಿ ಒಂದು ಸಾಮಾಜಿಕ ಗುತ್ತಿಗೆಯಾಗಿರುತ್ತದೆ. ಸಂಯುಕ್ತ ಸರ್ಕಾರವು ಮೂರು ಶಾಖೆಗಳನ್ನು ಹೊಂದಿದೆ: ಶಾಸಕಾಂಗ: ದ್ವಿಸಭೆಯ ಸಂಯುಕ್ತ ಶಾಸಕರ ಸಭೆ, ಇದರ ಅಂಗವಾಗಿರುವ ರಾಜ್ಯದ ಡುಮಾ ಮತ್ತು ಸಂಯುಕ್ತತೆಯ ಪರಿಷತ್ತು ಆರಿಸಿಕೊಂಡಿರುವ ಸಂಯುಕ್ತ ಕಾನೂನು, ಸಮರವನ್ನು ಸಾರುವ, ಒಡಂಬಡಿಕೆಯನ್ನು ಅಂಗೀಕರಿಸುವ, ಹಣಕಾಸು ಅಧಿಕಾರವನ್ನು ಹೊಂದಿರುವ ಮತ್ತು ಆಪಾದನೆಯನ್ನು ಹೊರಿಸುವ ಅಧಿಕಾರ, ಇದರ ಮೂಲಕ ಅಧ್ಯಕ್ಷರನ್ನು ವಜಾಗೊಳಿಸಬಹುದಾಗಿದೆ. ಕಾರ್ಯ ನಡೆಸುವ: ಅಧ್ಯಕ್ಷರು ಸೇನೆಯ ದಂಡನಾಯಕರಾಗಿರುತ್ತಾರೆ, ಶಾಸಕಾಂಗದ ಮಸೂದೆಗಳು ಕಾನೂನಾಗಿ ಮಾರ್ಪಾಡಾಗುವ ಮುಂಚೆಯೇ ಅದರ ಮೇಲೆ ನಿರಾಕರಣಾಧಿಕಾರವನ್ನು ಹೊಂದಿರುತ್ತಾರೆ, ಮತ್ತು ಸಂಪುಟ ಮತ್ತು ಇತರೆ ಅಧಿಕಾರಿಗಳನ್ನು ನೇಮಿಸುತ್ತಾರೆ, ಇವರು ಸಂಯುಕ್ತ ಕಾನೂನು-ನೀತಿ-ನಿಯಮಗಳನ್ನು ಅನುಷ್ಠಾನಕ್ಕೆ ತರುವುದು-ಜಾರಿಗೊಳಿಸುವುದನ್ನು ಮಾಡುತ್ತಾರೆ. ನ್ಯಾಯಾಂಗ: ಸಾಂವಿಧಾನಿಕ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯ, ಮಧ್ಯಸ್ಥಿಕೆಯ ಸರ್ವೋಚ್ಚ ನ್ಯಾಯಾಲಯ ಹಾಗೂ ನಿಮ್ನ ಸಂಯುಕ್ತ ನ್ಯಾಯಾಲಯಗಳು, ಇವುಗಳ ನ್ಯಾಯಾಧೀಶರನ್ನು ಅಧ್ಯಕ್ಷರ ಶಿಫಾರಸಿನ ಮೇಲೆ ಸಂಯುಕ್ತ ಪರಿಷತ್ತು ನೇಮಿಸುತ್ತದೆ, ಕಾನೂನುಗಳ ಅರ್ಥಗಳನ್ನು ಬಿಡಿಸಿ ಹೇಳುವುದು ಮತ್ತು ಅಸಾಂವಿಧಾನಿಕವಾಗಿ ಕಂಡುಬಂದ ಕಾನೂನುಗಳನ್ನು ತಿರಸ್ಕರಿಸಬಲ್ಲದು. ಸಂವಿಧಾನದ ಪ್ರಕಾರ, ನ್ಯಾಯಾಲಯದಲ್ಲಿ ಸಾಂವಿಧಾನಿಕ ನ್ಯಾಯವು ಎಲ್ಲಾ ಪ್ರಜೆಗಳ ಸಮಾನತೆಯನ್ನು ಅವಲಂಬಿಸಿದೆ,[199] ನ್ಯಾಯಾಧೀಶರು ಸ್ವತಂತ್ರವಾಗಿರುತ್ತಾರೆ ಮತ್ತು ಕೇವಲ ಕಾನೂನಿನಡಿ ಮಾತ್ರ ಆಧೀನರಾಗಿರುತ್ತಾರೆ,[201] ವಿಚಾರಣೆಗಳು ಮುಕ್ತವಾಗಿದ್ದು ಆರೋಪಿಗೆ ಒಬ್ಬ ವಕೀಲರನ್ನೂ ಒದಗಿಸಿಕೊಡಲಾಗುವುದು.[203] 1996ರಿಂದಲೂ, ರಷ್ಯಾ ರಷ್ಯಾದಲ್ಲಿ ಮರಣದಂಡನಾ ಶಿಕ್ಷೆಯ ಮೇಲೆ ತಾತ್ಕಾಲಿಕ ನಿಷೇಧವನ್ನು ಹೇರಿದೆ, ಆದಾಗ್ಯೂ ಈ ರೀತಿಯ ಶಿಕ್ಷೆಯನ್ನು ಕಾನೂನು ಬಹಿಷ್ಕರಿಸಿಲ್ಲ. ಅಧ್ಯಕ್ಷರು ಜನಮತದ ಮೂಲಕ ಆರು ವರ್ಷಗಳ ಅವಧಿಗೆ ಚುನಾಯಿತರಾಗಿರುತ್ತಾರೆ (ಎರಡನೆಯ ಅವಧಿಗೆ ಅರ್ಹರಾಗಿದ್ದರೂ ಸಾಂವಿಧಾನಿಕವಾಗಿ ಸತತ ಮೂರನೆಯ ಅವಧಿಗೆ ಬರಲು ಅನರ್ಹರಾಗಿರುತ್ತಾರೆ); ಕಳೆದ 2 ಮಾರ್ಚ್ 2008ರಂದು ಚುನಾವಣೆಯು ನಡೆದಿತ್ತು. ಸರ್ಕಾರದಲ್ಲಿರುವ ಮಂತ್ರಾಲಯಗಳು ಪ್ರಧಾನಿ ಹಾಗೂ ಅವರ ನಿಯೋಗಿಗಳನ್ನು, ಮಂತ್ರಿಗಳನ್ನು ಹಾಗೂ ಆಯ್ಕೆಯಾದ ಕೆಲವು ವ್ಯಕ್ತಿಗಳನ್ನು ಹೊಂದಿರುತ್ತವೆ; ಇವರೆಲ್ಲರನ್ನೂ ಪ್ರಧಾನಿಯ ಶಿಫಾರಸಿನ ಮೇಲೆ ಅಧ್ಯಕ್ಷರು ನೇಮಿಸುವರು (ಪ್ರಧಾನಿಯ ನೇಮಕಾತಿಗೆ ರಾಜ್ಯ ಡುಮಾದ ಅನುಮೋದನೆಯ ಅಗತ್ಯವಿದೆ). ಸಂಯುಕ್ತ ಸಭೆಯು ರಾಷ್ಟ್ರೀಯ ಶಾಸಕಾಂಗವಾಗಿರುತ್ತದೆ, ಇದರಲ್ಲಿ ಎರಡು ಕೊಠಡಿಗಳುಂಟು; 450-ಸದಸ್ಯರುಳ್ಳ ರಾಜ್ಯ ಡುಮಾ ಮತ್ತು 176-ಸದಸ್ಯರುಳ್ಳ ಸಂಯುಕ್ತ ಪರಿಷತ್ತು. ರಷ್ಯಾದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಯುನೈಟೆಡ್ ರಷ್ಯಾ, ಸಮುದಾಯ ಸ್ವಾಮ್ಯವಾದಿ (ಕಮ್ಯೂನಿಸ್ಟ್‌) ಪಕ್ಷ, ರಷ್ಯಾ ಉದಾರೀ ಗಣರಾಜ್ಯ (ಲಿಬೆರಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ರಷ್ಯಾ) ಮತ್ತು ಕಾನೂನು ರಷ್ಯಾ. ಉಪ ವಿಭಾಗಗಳು ಸಂಯುಕ್ತ ಪ್ರಾಂತ್ಯಗಳು ರಷ್ಯನ್‌ ಒಕ್ಕೂಟ 83 ಸಂಯುಕ್ತ ಪ್ರಾಂತ್ಯಗಳನ್ನು ಹೊಂದಿದೆ. ಸಂಯುಕ್ತ ಪರಿಷತ್ತು ಈ ಪ್ರಾಂತ್ಯಗಳಿಗೆ ಸಮಾನ ಪ್ರಾತಿನಿಧ್ಯವುಂಟು —ಪ್ರತಿ ಪ್ರಾಂತ್ಯಕ್ಕೆ ಇಬ್ಬರು ಪ್ರತಿನಿಧಿಗಳುಂಟು. ಆದಾಗ್ಯೂ, ಅವುಗಳಿಗೆ ಲಭಿಸಿರುವ ಸ್ವಾಯತ್ತತೆಯ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. 46 ಪ್ರಾಂತ್ಯಗಳು (ಪ್ರಾಂತ್ಯಗಳು): ಸಾಮಾನ್ಯ ತರಹದ ಸಂಯುಕ್ತ ಪ್ರಾಂತ್ಯಗಳು, ಕೇಂದ್ರ ಸರ್ಕಾರ-ನಿಯೋಜಿತ ರಾಜ್ಯಪಾಲ ಹಾಗೂ ಸ್ಥಳೀಯವಾಗಿ ಚುನಾಯಿತ ಶಾಸಕಾಂಗವನ್ನು ಹೊಂದಿರುತ್ತದೆ. 21 ಗಣರಾಜ್ಯಗಳು: ಅಲ್ಪಮಟ್ಟದ ಸ್ವಾಯತ್ತತೆ ಹೊಂದಿರುತ್ತವೆ; ಪ್ರತಿಯೊಂದಕ್ಕೂ ತನ್ನದೇ ಆದ ಸಂವಿಧಾನ, ಅಧ್ಯಕ್ಷ ಮತ್ತು ಸಂಸತ್ತನ್ನು ಹೊಂದಿರುತ್ತದೆ.ಗಣರಾಜ್ಯಗಳೂ ರಷ್ಯನ್ ಭಾಷೆಯ ಜೊತೆಗೆ ತಮ್ಮದೇ ಆದ ಅಧಿಕೃತ ಭಾಷೆಯನ್ನು ಸ್ಥಾಪಿಸಿಕೊಳ್ಳಬಹುದಾಗಿದೆ, ಆದರೆ ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಈ ಗಣರಾಜ್ಯಗಳನ್ನು ಸಂಯುಕ್ತ ಸರ್ಕಾರವು ಪ್ರತಿನಿಧಿಸುತ್ತದೆ. ಗಣರಾಜ್ಯಗಳು ಕೆಲವು ನಿರ್ದಿಷ್ಟ ಜನಾಂಗೀಯ ಅಲ್ಪಸಂಖ್ಯಾತರಿಗೆ ತಾಣವಾಗಿರುತ್ತದೆ. ನೈನ್ ಕ್ರಾಯಿ (ಸೀಮೆ): ಪ್ರಾಂತ್ಯಗಳಂತೆಯೇ ಇವೂ ಸಹ. "ಸೀಮೆ" ಬಿರುದು ಐತಿಹಾಸಿಕವಾಗಿದ್ದು, ಮೂಲತ: ಸೀಮಾಂತ್ಯ ವಲಯಗಳಿಗೆ ಹಾಗೂ ನಂತರ ಸ್ವಾಯತ್ತತೆ ಹೊಂದಿರುವ ಪ್ರಾಂತ್ಯ ಅಥವಾ ಸ್ವಾಯತ್ತತೆ ಹೊಂದಿರುವ ಒಬ್ಲಾಸ್ಟ್‌ಗಳನ್ನು ಹೊಂದಿರುವ ಆಡಳಿತ ವಿಭಾಗಗಳಿಗೂ ಅನ್ವಯಿಸಬಹುದು. ನಾಲ್ಕು ಸ್ವಾಯತ್ತತೆ ಹೊಂದಿರುವ ಪ್ರಾಂತ್ಯಗಳು (ಸ್ವಾಯತ್ತತೆ ಹೊಂದಿರುವ ಜಿಲ್ಲೆಗಳು): ಜನಾಂಗೀಯ ಅಲ್ಪಸಂಖ್ಯಾತರಿಗಾಗಿ ಸೃಷ್ಟಿಸಲಾದ ಪ್ರಾಂತ್ಯಗಳ ಹಾಗೂ ಕ್ರೈಸ್ ಗಳೊಳಗೇ ಮೂಲತ: ಸ್ವಾಯತ್ತತೆ ಹೊಂದಿರುವ ಇರುವಿಕೆಗಳು, 1990ರ ದಶಕದಲ್ಲಿ ಅವುಗಳ ಸ್ಥಿತಿಯನ್ನು ಸಂಯುಕ್ತ ಪ್ರಾಂತ್ಯಕ್ಕೆ ಏರಿಸಲಾಯಿತು. ಚುಕೊಟ್ಕಾ ಸ್ವಾಯತ್ತತೆಯುಳ್ಳ ಒಕ್ರುಗ್ ಹೊರತುಪಡಿಸಿ, ಉಳಿದ ಎಲ್ಲಾ ಸ್ವಾಯತ್ತತೆ ಹೊಂದಿದ ಒಕ್ರುಗ್‌ಗಳು ಆಡಳಿತದಲ್ಲಿ ಒಂದು ಕ್ರಾಯಿ ಅಥವಾ ಒಂದು ಅವು ಇರುವಂತಹ ಪ್ರಾಂತ್ಯನ ಅಧೀನವಾಗಿಯೇ ಇರುತ್ತವೆ. ಒಂದು ಸ್ವಾಯತ್ತತೆ ಹೊಂದಿರುವ ಪ್ರಾಂತ್ಯ (ಯಹೂದಿ ಸ್ವಾಯತ್ತತೆ ಹೊಂದಿರುವ ಒಬ್ಲಾಸ್ಟ್‌): ಮೂಲತ: ಸ್ವಾಯತ್ತತೆ ಹೊಂದಿರುವ ಪ್ರಾಂತ್ಯಗಳು ಕ್ರಾಯಿಗಳಿಗೆ ಆಧೀನವಾದ ಆಡಳಿತ ಘಟಕಗಳಾಗಿದ್ದವು. 1990ರಲ್ಲಿ, ಯಹೂದಿ ಸ್ವಾಯತ್ತತೆ ಹೊಂದಿದ ಒಬ್ಲಾಸ್ಟ್ ಹೊರತುಪಡಿಸಿ ಉಳಿದವೆಲ್ಲವೂ ಗಣರಾಜ್ಯ ಸ್ಥಿತಿಗೆ ಉನ್ನತೀಕರಿಸಲಾದವು. ಎರಡು ಸಂಯುಕ್ತ ನಗರಗಳು (ಮಾಸ್ಕೋ ಮತ್ತು ಸೇಂಟ್ ಪೀಟರ್ಸ್‌ಬರ್ಗ್): ಪ್ರತ್ಯೇಕ ವಲಯಗಳಂತೆ ನಡೆಯುವ ಪ್ರಮುಖ ನಗರಗಳಾಗಿವೆ. ಸಂಯುಕ್ತ ಜಿಲ್ಲೆಗಳು ಹಾಗೂ ಆರ್ಥಿಕ ವಲಯಗಳು ಸಂಯುಕ್ತ ಪ್ರಾಂತ್ಯಗಳನ್ನು ಏಳು ಸಂಯುಕ್ತ ಜಿಲ್ಲೆಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ಜಿಲ್ಲೆಗೂ ರಷ್ಯಾದ ಅಧ್ಯಕ್ಷರಿಂದ ನೇಮಕವಾಗಿರುವ ಒಬ್ಬ ದೂತನ ಆಡಳಿತದಲ್ಲಿರುತ್ದದೆ. ಸಂಯುಕ್ತ ಪ್ರಾಂತ್ಯಗಳಿಗಿಂತಲೂ ಭಿನ್ನವಾಗಿ, ಸಂಯುಕ್ತ ಜಿಲ್ಲೆಗಳು ಸರ್ಕಾರದ ಉಪರಾಷ್ಟ್ರೀಯ ಮಟ್ಟದ್ದಲ್ಲ, ಬದಲಿಗೆ ಸಂಯುಕ್ತ ಸರ್ಕಾರದ ಆಡಳಿತ ಮಟ್ಟದ್ದಾಗಿದೆ. ಸಂಯುಕ್ತ ಜಿಲ್ಲೆಗಳ ದೂತರು ಸಂಯುಕ್ತ ಪ್ರಾಂತ್ಯಗಳು ಮತ್ತು ಸಂಯುಕ್ತ ಸರ್ಕಾರಗಳ ನಡುವೆ ಸಂಪರ್ಕಾಧಿಕಾರಿಗಳಾಗಿರುತ್ತಾರೆ ಮತ್ತು ಸಂಯುಕ್ತ ಪ್ರಾಂತ್ಯಗಳು ಸಂಯುಕ್ತ ಕಾನೂನು-ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳುವುದು ಇವರ ಜವಾಬ್ದಾರಿಯಾಗಿರುತ್ತದೆ. ವಿದೇಶಿ ಸಂಬಂಧಗಳು ಮತ್ತು ಸೇನೆ ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ರಷ್ಯನ್ ಒಕ್ಕೂಟವು ಹಿಂದಿನ ಸೋವಿಯತ್ ಒಕ್ಕೂಟದ ಕಾನೂನುಬದ್ಧ ದಾಯಿತ್ವವನ್ನು ಹೊಂದಿರುವಂತೆ ಪರಿಗಣಿಸಲಾಗಿದೆ. ರಷ್ಯಾ USSRನ ಎಲ್ಲಾ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಮುಂದುವರೆಸುತ್ತಿದೆ ಹಾಗೂ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿರುವ USSRನ ಖಾಯಂ ಸದಸ್ಯತ್ವವನ್ನು ತನ್ನದಾಗಿಸಿಕೊಂಡು, ಅನ್ಯ ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ USSRನ ಸದಸ್ಯತ್ವವನ್ನು, ಅಂತಾರಾಷ್ಟ್ರೀಯ ಒಡಂಬಡಿಕೆಗಳಡಿಯಿರುವ ಹಕ್ಕು-ಕಟ್ಟುಪಾಡುಗಳನ್ನು, ಆಸ್ತಿ-ಋಣಗಳನ್ನು ತನ್ನದಾಗಿಸಿಕೊಂಡಿದೆ.ರಷ್ಯಾ ಬಹುಮುಖಿ ವಿದೇಶ ನೀತಿಯನ್ನು ಹೊಂದಿದೆ. ಅದು 178 ದೇಶಗಳೊಂದಿಗೆ ರಾಜತಾಂತ್ರಿಕೆ ಸಂಬಂಧಗಳನ್ನು ಇಟ್ಟುಕೊಂಡಿದೆ[220] ಮತ್ತು 140 ದೂತಾವಾಸಗಳಿವೆ. ರಷ್ಯಾದ ವಿದೇಶಾಂಗ ನೀತಿಯನ್ನು ಅಧ್ಯಕ್ಷರು ನಿರ್ಧರಿಸಿ ವಿದೇಶಾಂಗ ಸಚಿವಾಲಯವು ಜಾರಿಗೊಳಿಸುತ್ತದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯರಲ್ಲಿ ಒಂದಾಗಿರುವ ರಷ್ಯಾ, ಅಂತಾರಾಷ್ಟ್ರೀಯ ಶಾಂತಿ-ಭದ್ರತೆಗಳ ಪಾಲನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಅಂತಾರಾಷ್ಟ್ರೀಯ ಘರ್ಷಣೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಮಧ್ಯಪ್ರಾಚ್ಯದ ಚತುಷ್ಕ, ಉತ್ತರ ಕೊರಿಯಾದೊಂದಿಗೆ ಷಟ್ಪಕ್ಷೀಯ ಮಾತುಕತೆಗಳು ನಡೆಸಿ, ಕೊಸೊವೊ ಘರ್ಷಣೆಯ ಪರಿಹಾರವನ್ನು ಉತ್ತೇಜಿಸಿ ಮತ್ತು ಪರಮಾಣು ಶಸ್ತ್ರ ಪ್ರಸರಣ ಸಮಸ್ಯೆಯ ಬಗೆಹರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ. ಉದ್ಯಮಶೀಲ ರಾಷ್ಟ್ರಗಳ ಎಂಟರ ಗುಂಪು (G8) ರಷ್ಯಾ ಸಹ ಸದಸ್ಯವಾಗಿದೆ, ಜೊತೆಗೆ ಯೂರೋಪ್‌ ಪರಿಷತ್ತು, OSCE ಮತ್ತು APEC ಗುಂಪುಗಳ ಸದಸ್ಯವೂ ಆಗಿದೆ. CIS, EurAsEC, CSTO ಮತ್ತು SCO ಮುಂತಾದ ವಲಯವಾರು ಸಂಘಟನೆಗಳಲ್ಲಿ ರಷ್ಯಾ ಪ್ರಮುಖ ಪಾತ್ರ ವಹಿಸಿದೆ. ಮಾಜಿ ಅಧ್ಯಕ್ಷ (ಇಂದಿನ ಪ್ರಧಾನಿ) ವ್ಲಾಡಿಮಿರ್‌ ಪುಟಿನ್ ರಷ್ಯಾ ಮತ್ತು EU ನಡುವೆ ನಾಲ್ಕು ಸಾಮಾನ್ಯ ಅಂತರಗಳ ಸ್ಥಾಪನೆಯೂ ಸೇರಿದಂತೆ ರಾಜತಾಂತ್ರಿಕ ಸಹಯೋಗ, ಜೊತೆಗೆ ಹಲವಾರು ಪ್ರಮಾಣಗಳ ಏಕೀಕರಣದ ಪ್ರಸ್ತಾಪವನ್ನು ಸಮರ್ಥಿಸಿದ್ದರು. ಸೋವಿಯತ್‌ ಒಕ್ಕೂಟವು ಕುಸಿದಾಗಿನಿಂದಲೂ, ರಷ್ಯಾ NATOದೊಂದಿಗೆ ಸ್ನೇಹಮಯವಾದರೂ ಲವಲವಿಕೆಯ ಸಂಬಂಧಗಳು ಇಟ್ಟುಕೊಂಡು ಬಂದಿದೆ. 26 ಮಿತ್ರ ದೇಶಗಳೊಂದಿಗೆ ರಷ್ಯಾ ಒಗ್ಗೂಡಿ ಜಂಟಿ ಸಹಕಾರಕ್ಕಾಗಿ ಕಾರ್ಯ ನಿರ್ವಹಿಸಲು 2002ರಲ್ಲಿ NATO-ರಷ್ಯಾ ಪರಿಷತ್ತಿನ ರಚನೆಯಾಯಿತು. ರಷ್ಯಾ ವಿದೇಶಗಳಲ್ಲಿರುವ ಸೋವಿಯತ್ ಆಸ್ತಿಗಳನ್ನು ತನ್ನದಾಗಿಸಿಕೊಂಡಿತು ಹಾಗೂ ಸೋವಿಯತ್‌ ಒಕ್ಕೂಟದ ಉತ್ಪಾದನಾ ಘಟಕಗಳು ಮತ್ತು ರಕ್ಷಣಾ ಕೈಗಾರಿಕೆಗಳು ರಷ್ಯಾದಲ್ಲಿವೆ. ರಷ್ಯಾದ ಸೇನೆಯು ಭೂ ಸೇನೆ, ನೌಕಾ ಪಡೆ ಮತ್ತು ವಾಯು ಪಡೆಗಳಾಗಿ ವಿಂಗಡಿಸಲಾಗಿದೆ. ಜೊತೆಗೆ ಸೇವೆಯ ಮೂರು ಸ್ವತಂತ್ರ ಅಂಗಗಳೂ ಸಹ ಇವೆ: ರಣನೈತಿಕ ರಾಕೆಟ್ ಪಡೆ, ಸೇನಾ ಬಾಹ್ಯಾಕಾಶ ಪಡೆ ಮತ್ತುವಾಯುಗಾಮಿ ಪಡೆ 2006ರಲ್ಲಿ, ಸೇನೆಯಲ್ಲಿ ಸಕ್ರಿಯ ಸೇವೆಯಲ್ಲಿ 1.037 ಮಿಲಿಯನ್ ನೌಕರರಿದ್ದರು. ರಷ್ಯಾ ವಿಶ್ವದಲ್ಲೇ ಅತಿಹೆಚ್ಚು ಪರಮಾಣು ಶಸ್ತ್ರಗಳ ದಾಸ್ತಾನುಗಳನ್ನು ಇಟ್ಟುಕೊಂಡಿದೆ. ಇದು ಎರಡನೆಯ ಅತಿಹೆಚ್ಚು ಪ್ರಕ್ಷೇಪಕ ಕ್ಷಿಪಣಿ ಜಲಾಂತರಗಾಮಿಗಳ ದಾಸ್ತಾನು ಹೊಂದಿದೆ ಮತ್ತು ಅಮೆರಿಕಾ ಹೊರತುಪಡಿಸಿ, ಆಧುನಿಕ ರಣನೈತಿಕ ಬಾಂಬರ್ ಪಡೆಯನ್ನು ಹೊಂದಿರುವ ದೇಶವಾಗಿದೆ. ಈ ದೇಶವು ಹೆಚ್ಚಿನ ಪ್ರಮಾಣದಲ್ಲಿ ಸಂಪೂರ್ಣವಾಗಿ ಸ್ಥಳೀಯ ಶಸ್ತ್ರಗಳ ಉದ್ಯಮವನ್ನು ಹೊಂದಿದ್ದು, ಅದರ ಸೇನಾ ಉಪಕರಣಗಳನ್ನು ತಾನೇ ಉತ್ಪಾದಿಸುತ್ತದೆ. ರಷ್ಯಾ ವಿಶ್ವದಲ್ಲೇ ಅತಿಹೆಚ್ಚು ಪ್ರಮಾಣದ ಶಸ್ತ್ಗಗಳ ಪೂರೈಕದಾರನಾಗಿದೆ, 2001ರಿಂದಲೂ ಈ ಸ್ಥಾನವನ್ನು ಕಾಯ್ದಿರಿಸಿಕೊಂಡಿದ್ದು, ವಿಶ್ವಾದ್ಯಂತ ಶಸ್ತ್ರಗಳ ಮಾರಾಟದಲ್ಲಿ ಸುಮಾರು % 30ರಷ್ಟು ಪಾಲು ರಷ್ಯಾದ್ದು, ಸುಮಾರು 80 ದೇಶಗಳಿಗೆ ಶಸ್ತ್ರಗಳನ್ನು ರಫ್ತು ಮಾಡಿದೆ. ಸೋವಿಯತ್ ನೀತಿಯ ಅನುಸಾರ, 2007ರ ಮುಂಚೆ, 18-27 ವಯಸ್ಸಿನ ಎಲ್ಲಾ ಪುರುಷ ನಾಗರಿಕರಿಗೆ ಎರಡು ವರ್ಷಗಳ ಕಾಲ ಕಡ್ಡಾಯ ಸೇನೆ ಸೇವೆಗಾಗಿ ಸೇರ್ಪಡೆಯಾಗಬೇಕಿತ್ತು.ಇದರೊಂದಿಗೆ ಹಲವಾರು ಸಮಸ್ಯೆಗಳಿದ್ದವು, ಉದಾಹರಣೆಗೆ ಡೆಡೊವಿಸ್ ಚಿನಾ (ಸಾಂಸ್ಥಿಕ ಭೌತಿಕ ಮತ್ತು ಮಾನಸಿಕ ಹೀಯಾಳಿಕೆ), ಈ ಕಾರಣಕ್ಕಾಗಿ ಸಶಸ್ತ್ರ ಪಡೆಗಳು ಸೈನಿಕ ಸೇವಾ ಅವಧಿಯನ್ನು 2007ರಲ್ಲಿ 18 ತಿಂಗಳುಗಳಿಗೆ ಆನಂತರ 2008ರಲ್ಲಿ 12 ತಿಂಗಳುಗಳಿಗೆ ಕಡಿಮೆಗೊಳಿಸಿದವು, ಜೊತೆಗೆ 2010ರೊಳಗೆ ಗುತ್ತಿಗೆ ಸೇವಾ ಸೈನಿಕರ ಪ್ರಮಾಣವನ್ನು ಸಶಸ್ತ್ ಪಡೆಗಳ ಸಿಬ್ಬಂದಿಯ ೭೦% ಕ್ಕೆ ಹಚ್ಚಿಸುವ ಯೋಜನೆಯಿದೆ. ಕೊನೆಯ ಆರು ವರ್ಷಗಳಲ್ಲಿ ರಷ್ಯಾದ ರಕ್ಷಣಾ ವೆಚ್ಚವು ನಾಲ್ಕು ಪಟ್ಟು ಹೆಚ್ಚಾಗಿದೆ. 2008ರಲ್ಲಿ ಅಧಿಕೃತ ಸರ್ಕಾರಿ ಸೇನಾ ಖರ್ಚು $40 ಬಿಲಿಯನ್ ಆಗಿ, ವಿಶ್ವದಲ್ಲೇ ಎಂಟನೆಯ ಅತಿಹೆಚ್ಚು ಖರ್ಚಾಗಿದೆ, ಅಮೆರಿಕಾದ ಗುಪ್ತಪಡೆಯೂ ಸೇರಿದಂತೆ ವಿವಿಧ ಮೂಲಗಳು ಮತ್ತು ಅಂತಾರಾಷ್ಟ್ರೀಯ ರಣತಂತ್ರ ಅಧ್ಯಯನಾ ಸಂಸ್ಥೆಯ ಪ್ರಕಾರ, ರಷ್ಯಾದ ಸೇನಾ ಖರ್ಚು ಇನ್ನಷ್ಟೂ ಹೆಚ್ಚಾಗಿರುವಂತೆ ಅಂದಾಜು ಮಾಡಿದೆ. ಪ್ರಸ್ತುತ, ಸೇನೆಯು ಹಚ್ಚಿನ ಪ್ರಮಾಣದಲ್ಲಿ ಶಸ್ತ್ರಗಳ ಆಧುನೀಕರಣಕ್ಕೆ ಒಳಗಾಗುತ್ತಿದ್ದು, 2006ರಿಂದ 2015ರ ಅವಧಿಯಲ್ಲಿ ಸೇನಾ ಉಪಕರಣಗಳಿಗಾಗಿ ಸುಮಾರು $200 ಬಿಲಿಯನ್ ಖರ್ಚು ಮಾಡಲಿದೆ. ಹಾಲಿ ರಕ್ಷಣಾ ಮಂತ್ರಿ ಅನಾಟೊಲಿ ಸರ್ಡ್ಯುಕೊವ್ ನೇತೃತ್ವದಲ್ಲಿ ಸೇನೆಯ ಸಂಘಟನೆ ಮತ್ತು ದಕ್ಷತೆಯನ್ನು ಉನ್ನತೀಕರಿಸಲು ಹಚ್ಚು ಪ್ರಮಾಣದ ಸುಧಾರಣೆಗಳು ನಡೆಯುತ್ತಿವೆ. ಅವರ ಸುಧಾರಣಾ ಕಾರ್ಯಕ್ರಮದ ಹಿಂದಿನ ಉದ್ದೇಶ ಹೆಚ್ಚು ಪ್ರಮಾಣದಲ್ಲಿ ಜನತಾ ಸಂಘಟಿತ ಸೇನೆಯನ್ನು ಸಣ್ಣ ಪ್ರಮಾಣದ ಗುತ್ತಿಗೆ ಸೇನೆಯನ್ನಾಗಿ ಪರಿವರ್ತಿಸುವುದು. ಸರ್ಡ್ಯುಕೊವ್ ಕೇಂದ್ರೀಯ ಆಡಳಿತದಲ್ಲಿನ ಸಿಬ್ಬಂದಿಯ ಪ್ರಮಾಣವನ್ನು % 30ರಷ್ಟು ಕಡಿಮೆಗೊಳಿಸುವರು, ಇದರಿಂದ ಜನರಲ್‌ಗಳು ಮತ್ತು ಕರ್ನಲ್‌ಗಳು ಅಲಂಕರಿಸಿರುವ ಹೆಚ್ಚು ಹುದ್ದೆಗಳು ಮಾಯವಾಗುವ ಸಾಧ್ಯತೆಗಳಿವೆ. ರಷ್ಯಾದ ಅಧಿಕಾರಿ ಕಾರ್ಜ್‌ಗಳ ಸಂಖ್ಯೆಯಲ್ಲಿ ಕಡಿತ ಮಾಡಲು ಇಚ್ಛಿಸುತ್ತಾರೆ. ಪ್ರಸ್ತುತ ಪ್ರತಿ ಇಬ್ಬರು ಮನುಷ್ಯರಿಗೆ ಒಬ್ಬ ಅಧಿಕಾರಿಯಿದ್ದಾರೆ. ಸುಧಾರಣೆಯ ನಂತರ ಪ್ರತಿ 15 ಜನರಿಗೆ ಒಬ್ಬ ಅಧಿಕಾರಿಯಿರಬೇಕು, ಪಾಶ್ಚಿಮಾತ್ಯ ಸೇನೆಗಳಲ್ಲಿಯ ತರಹ. ಈ ಸುಧಾರಣೆಯ ಅರ್ಥ 200,000 ನೌಕರಿಗಳ ನಷ್ಟ ಮತ್ತು ಇದು "ಹಳೆಯ ಹುಲಿಗಳಿಂದ" ತೀವ್ರ ರಾಜಕೀಯ ವಿರೋಧವನ್ನು ಎದುರಿಸುತ್ತಿದೆ. ಈ ಒತ್ತಡದ ಕಾರಣ ಈ ಕಡಿತಗಳನ್ನು ಜಾರಿಗೊಳಿಸುವ ಇಸವಿಯನ್ನು 2012ರಿಂದ to 2016ಕ್ಕೆ ಮುಂದೂಡಲಾಗಿದೆ. ತೀವ್ರ ಹಾಗು ದೀರ್ಘಕಾಲದಿಂದ ಇರುವ ರಷ್ಯಾದ ಅಸಮರ್ಪಕ ರಕ್ಷಣಾ ಔದ್ಯಮಿಕ ಪ್ರಾಪ್ತಿ ನೀತಿ ಹಾಗೂ ಇತರೆ ಪ್ರಕರಣಗಳ ಬಗೆಹರಿಸುವಿಕೆಯು ಸರ್ಡ್ಯುಕೊವ್‌ರ ಪ್ರಮುಖ ಧ್ಯೇಯವಾಗಿದೆ. ಆರ್ಥಿಕತೆ 1990ರ ದಶಕದಲ್ಲಿ ಎಲ್ಲಾ ಹಿಂದಿನ ಸೋವಿಯತ್ ದೇಶಗಳನ್ನು ಆವರಿಸಿದ ಆರ್ಥಿಕ ಬಿಕ್ಕಟ್ಟು, 1930ರ ದಶಕದಲ್ಲಿ ಅಮೆರಿಕಾ ಮತ್ತು ಪಶ್ಚಿಮ ಯುರೋಪ್ ದೇಶಗಳಲ್ಲಿ ಸಂಭವಿಸಿದ ಮಹಾ ಕುಸಿತದ ಎರಡರಷ್ಟಿತ್ತು. 1998ರ ಆರ್ಥಿಕ ಬಿಕ್ಕಟ್ಟಿಗೂ ಮುಂಚೆ, ರಷ್ಯಾದ GDP 1990ರ ದಶಕದ ಶುರುವಿನಲ್ಲಿದ್ದರ ಅರ್ಧದಷ್ಟಿತ್ತು. ಶತಮಾನದ ತಿರುವಿನಿಂದಲೂ, ತೈಲ ಬೆಲೆ ಏರಿಕೆ, ಹೆಚ್ಚಾದ ವಿದೇಶಿ ಬಂಡವಾಳ, ಹೆಚ್ಚಾದ ಸಾಂಸಾರಿಕ ಬಳಕೆ ಮತ್ತು ಹೆಚ್ಚಿದ ರಾಜಕೀಯ ಸ್ಥಿರತೆಯು ರಷ್ಯಾದ ಆರ್ಥಿಕ ಬೆಳವಣಿಗೆಗೆ ಸಹಾಯವಾಗಿದೆ. ರಷ್ಯಾ 2007ರ ಅಂತ್ಯದಲ್ಲಿ ಸತತವಾಗಿ ಒಂಬತ್ತನೆಯ ವರ್ಷ ಬೆಳವಣಿಗೆಯನ್ನು ಕಂಡಿತು, 1998ರ ಹಣಕಾಸು ಬಿಕ್ಕಟ್ಟು ನಂತರ ಸರಾಸರಿ ವಾರ್ಷಿಕ ೭% ರಷ್ಟು ಬೆಳವಣಿಗೆಯನ್ನು ಕಂಡಿತು. 2007ರಲ್ಲಿ ರಷ್ಯಾದ GDP $2.076 ಟ್ರಿಲಿಯನ್ ಆಗಿತ್ತು (est. PPP), ವಿಶ್ವದಲ್ಲೇ ಆರನೆಯ ಅತಿ ಹೆಚ್ಚು ಪ್ರಮಾಣದ ಬೆಳವಣಿಗೆಯಾಗಿದ್ದು, GDP ಹಿಂದಿನ ವರ್ಷಕ್ಕಿಂತಲೂ 8.೧ %ರಷ್ಟು ವೃದ್ಧಿಸಿತ್ತು.ಬೆಳವಣಿಗೆಯ ಹಿಂದೆ, ತೈಲ ಮತ್ತು ಖನಿಜದ ತೆರವು ಮತ್ತು ರಫ್ತಿಗಿಂತಲೂ ಹೆಚ್ಚಾಗಿ, ವಹಿವಾಟೇತರ ಸೇವೆಗಳು ಮತ್ತು ಸ್ಥಳೀಯ ಮಾರುಕಟ್ಟೆಗಾಗಿ ಸರಕು-ಸಾಮಗ್ರಿಗಳ ಮಾರಾಟವಿತ್ತು. 2008ರ ಶುರುವಿನಲ್ಲಿ ರಷ್ಯಾದಲ್ಲಿ ಸರಾಸರಿ ವೇತನ ಪ್ರತಿ ತಿಂಗಳಿಗೆ $ 640 ಆಗಿತ್ತು, ಇದು 2000ರ ಇಸವಿಯಲ್ಲಿ $೮೦ರಿಂದ ಹೆಚ್ಚಾಗಿತ್ತು. 2007ರಲ್ಲಿ ಹೆಚ್ಚುಕಡಿಮೆ 14 %ರಷ್ಟು ರಷ್ಯನ್ನರು ಬಡತನ ರೇಖೆಯ ಕೆಳಗೆ ಇದ್ದರು, 1998ರ ಸೋವಿಯತೋತ್ತರದ ಆರ್ಥಿಕ ಕುಸಿತದ ಅವಧಿಯಲ್ಲಿ 40% ರಿಂದ ಕಡಿಮೆಯಾಗಿತ್ತು. 2007ರಲ್ಲಿ ರಷ್ಯಾದಲ್ಲಿನ ನಿರುದ್ಯೋಗದ ಪ್ರಮಾಣ % 6ರಷ್ಟಿತ್ತು, 1999ರಲ್ಲಿ 12.4 % ರಿಂದ ಇಳಿತವಾಗಿದೆ. ರಷ್ಯಾ ವಿಶ್ವದಲ್ಲೇ ಹೆಚ್ಚು ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪಗಳು, ಎರಡನೆಯ ಅತಿಹೆಚ್ಚು ಇದ್ದಿಲಿನ ನಿಕ್ಷೇಪಗಳು ಮತ್ತು ಎಂಟನೆಯ ಅತಿ ಹೆಚ್ಚು ತೈಲ ನಿಕ್ಷೇಪಗಳು ಹೊಂದಿದೆ. ಇದು ವಿಶ್ವದಲ್ಲಿ ಅತಿಹೆಚ್ಚು ನೈಸರ್ಗಿಕ ಅನಿಲದ ರಫ್ತುದಾರ ಹಾಗೂ ಎರಡನೆಯ ಅತಿಹೆಚ್ಚು ತೈಲ ರಫ್ತುದಾರನಾಗಿದೆ. ರಷ್ಯಾದ ರಫ್ತಿನ 80% ಕ್ಕೂ ಹೆಚ್ಚು ಅಂಶವು ತೈಲ, ನೈಸರ್ಗಿಕ ಅನಿಲ, ಲೋಹಗಳು ಮತ್ತು ಮರದ ಚೌಬೀನೆಗಳದ್ದಾಗಿದೆ. ಆದಾಗ್ಯೂ, 2003ರಿಂದ, ಆಂತರಿಕ ಮಾರುಕಟ್ಟೆಗಳು ಸದೃಢಗೊಳ್ಳುತ್ತಿದ್ದ ಕಾರಣ, ನೈಸರ್ಗಿಕ ಸಂಪನ್ಮೂಲಗಳ ರಫ್ತು ಇಳಿಮುಖ ಕಂಡಿತು. ಇಂಧನದ ಬೆಲೆಗಳು ಹೆಚ್ಚಾಗಿದ್ದಾಗ್ಯೂ, ತೈಲ ಮತ್ತು ಅನಿಲವು ರಷ್ಯಾದ GDPಯ ಕೇವಲ ಶೇಖಡಾ 5.7ರಷ್ಟು ಮಾತ್ರ ತುಂಬಿಸುತ್ತದೆ ಮತ್ತು 2011ರೊಳಗೆ ಇದು 3.7% ಕ್ಕೆ ಇಳಿಯಲಿದೆ ಎಂದು ಸರ್ಕಾರವು ಅಂದಾಜು ಮಾಡಿದೆ. ರಷ್ಯಾ ತನ್ನ ಆರ್ಥಿಕ ವೃದ್ಧಿಯಲ್ಲಿ ಇತರೆ ಹೆಚ್ಚು ಸಂಪನ್ಮೂಲಗಳುಳ್ಳ ದೇಶಗಳಿಗಿಂತಲೂ ಹೆಚ್ಚು ಮುನ್ನಡೆ ಸಾಧಿಸಿದೆ, ಇದರ ಕಾರಣ ದೀರ್ಘ ಸಂಪ್ರದಾಯದ ಶಿಕ್ಷಣ, ವಿಜ್ಞಾನ ಮತ್ತು ಉದ್ಯಮಗಳು. ದೇಶವು ಯೂರೋಪ್‌ನ ಇತರೆ ದೇಶಗಳಿಗಿಂತಲೂ ಹೆಚ್ಚು ಉನ್ನತ ಶಿಕ್ಷಣ ಪದವೀಧರರನ್ನು ಹೊಂದಿದೆ. 2001ರಲ್ಲಿ ಆಯ್ದುಕೊಳ್ಳಲಾದ ನೇರ ಮತ್ತು ಸರಳ ಕಂದಾಯ ನೀತಿಯು ಜನರ ಮೇಲಿನ ಕಂದಾಯದ ಹೊರೆಯನ್ನು ಕಡಿಮೆಗೊಳಿಸಿತು ಮತ್ತು ರಾಜಸ್ವವನ್ನು ಬಹುಪಟ್ಟು ಹೆಚ್ಚಿಸಿತು. ರಷ್ಯಾ ಸಮತಟ್ಟಾದ ವೈಯಕ್ತಿಕ ಕಂದಾಯ ದರವನ್ನು % 13ಕ್ಕೆ ನಿಗದಿಪಡಿಸಿದೆ. ಮರ್ಸರ್ ಮಾನವ ಸಂಪನ್ಮೂಲ ಸಲಹಾ ಸಂಸ್ಥೆ ಎಂಬ ಹೂಡಿಕೆ ಸೇವಾ ಸಂಸ್ಥೆಯ ಸಮೀಕ್ಷೆಯ ಪ್ರಕಾರ,ಸಂಯುಕ್ತ ಅರಬ್ ಒಕ್ಕೂಟ ವ್ಯವಸ್ಥೆಯ ನಂತರ, ವ್ಯವಸ್ಥಾಪಕರಿಗಾಗಿ ಎರಡನೆಯ ಅತ್ಯಂತ ಆಕರ್ಷಕ ವೈಯಕ್ತಿಕ ಕಂದಾಯ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದೆ. ಸಂಯುಕ್ತ ಬಜೆಟ್ 2001ನೆಯ ಇಸವಿಯಿಂದಲೂ ಹೆಚ್ಚುವರಿ ಸ್ಥಿತಿಯನ್ನೇ ಕಾಯ್ದುಕೊಂಡು 2007ರಲ್ಲಿ % 6ರಷ್ಟು GDPಯೊಂದಿಗೆ ಕೊನೆಗೊಂಡಿತು. ಕಳೆದ ಹಲವಾರು ವರ್ಷಗಳಿಂದಲೂ, ಸೋವಿಯತ್-ಯುಗದ ಸಾರ್ವಭೌಮತ್ವ ಋಣವನ್ನು ಪ್ಯಾರಿಸ್ ಕ್ಲಬ್ ಸಾಲದಾತರಿಗೆ ಮತ್ತು IMFಗೆ ನೀಡಲು, ರಷ್ಯಾ ತನ್ನ ತೈಲ ರಾಜಸ್ವವನ್ನು ರಷ್ಯಾ ಸಂಯುಕ್ತದ ಸ್ಥಿರತಾ ನಿಧಿಯಿಂದ ಬಳಸಿದೆ. ತೈಲ ರಫ್ತು ವ್ಯಾಪಾರವು ರಷ್ಯಾಗೆ ತನ್ನ ವಿದೇಶಿ ವಿನಿಮಯ ನಿಕ್ಷೇಪಗಳನ್ನು 1999ರಲ್ಲಿ $12 ಬಿಲಿಯನ್ ಇಂದ 1 ಆಗಸ್ಟ್ 2008ರಂದಿನ $597.3 ಶತಲಕ್ಷಕ್ಕೆ ವೃದ್ದಿಸುವಂತೆ ಮಾಡಿದೆ, ವಿಶ್ವದಲ್ಲಿಯೇ ಮೂರನೆಯ ಅತಿ ಹೆಚ್ಚು ನಿಕ್ಷೇಪವಾಗಿದೆ. ದೇಶವು ಹಿಂದೆ ಇದ್ದ ಭಾರೀ ವಿದೇಶೀ ಋಣವನ್ನು ಕಡಿಮೆಗೊಳಿಸಲು ಶಕ್ಯವಾಗಿದೆ. ] ದೇಶದ ಆರ್ಥಿಕ ಬೆಳವಣಿಗೆಯು ಭೌಗೋಳಿಕವಾಗಿ ಸಮಾನಾಗಿಲ್ಲ, ಮಾಸ್ಕೋ ಪ್ರಾಂತ್ಯ ದೇಶದ GDPಗೆ ಸೂಕ್ತವಲ್ಲದ, ಅತಿಹೆಚ್ಚು ಪ್ರಮಾಣದ ಕೊಡುಗೆಯನ್ನು ನೀಡುತ್ತಿದೆ. ರಷ್ಯಾದ ಹೆಚ್ಚುವರಿ ವಲಯಗಳು, ಅದೂ ಸೈಬೀರಿಯಾದಲ್ಲಿರುವಂತಹ ಗ್ರಾಮಾಂತರ ಮತ್ತು ದೇಶೀಯ ಸಮುದಾಯಗಳು, ಬಹಳ ಹಿಂದುಳಿದಿವೆ.ಆದಾಗ್ಯೂ, ಮಧ್ಯಮ ವರ್ಗದ ಜನಸಂಖ್ಯೆಯು 2000ರಲ್ಲಿ ಕೇವಲ ಎಂಟು ಮಿಲಿಯನ್ ಇದ್ದದ್ದು 2006ರಲ್ಲಿ 55 ಮಿಲಿಯನ್‌ಗೆ ಏರಿದೆ. ಅಮೆರಿಕಾದ ನಂತರ ರಷ್ಯಾ ಅತಿಹೆಚ್ಚು ಶತಕೋಟ್ಯಾಧೀಶರನ್ನು ಹೊಂದಿದೆ, 2007ರಲ್ಲಿ 50 ಶತಕೋಟ್ಯಾಧೀಶರು ಸೇರ್ಪಡೆಯಾಗಿ ಒಟ್ಟು 110 ಶತಕೋಟ್ಯಾಧೀಶರಾಗಿದ್ದರು. ಕಳೆದ ಐದು ವರ್ಷಗಳಿಂದ, ನಿಶ್ಚಿತ ಬಂಡವಾಳ ಹೂಡಿಕೆಯು ಪ್ರತಿ ವರ್ಷಕ್ಕೆ 10 % ರಷ್ಟು ವಾಸ್ತವಿಕ ಲಾಭವನ್ನು ಹಾಗೂ ವೈಯಕ್ತಿಕ ಆದಾಯಗಳು 12% ರಷ್ಟು ವಾಸ್ತವಿಕ ಲಾಭವನ್ನು ಗಳಿಸಿವೆ.ಈ ಅವಧಿಯಲ್ಲಿ, ಬಡತನವು ಕಡಿಮೆಯಾಗುತ್ತ, ಮಧ್ಯಮ ವರ್ಗವು ಹೆಚ್ಚಾಗುತ್ತಿದೆ. ರಷ್ಯಾ 1998ರ ಹಣಕಾಸು ಬಿಕ್ಕಟ್ಟಿನ ನಂತರ ತನ್ನ ಅಂತಾರಾಷ್ಟ್ರೀಯ ಹಣಕಾಸು ಸ್ಥಿತಿಯನ್ನು ಉತ್ತಮಗೊಳಿಸಿದೆ. ರಷ್ಯಾದ ಬೆಳವಣಿಗೆಯ ಪ್ರಮುಖ ಕಾರಣ ಉತ್ಪಾದಕತೆಯಲ್ಲಿ ಸದೃಢ ಬೆಳವಣಿಗೆ, ವಾಸ್ತವಿಕ ವೇತನಗಳು ಮತ್ತು ಬಳಕೆ. ರಷ್ಯಾ 1999ರಿಂದಲೂ ದೃಢ ಆರ್ಥಿಕತೆಯನ್ನು ಹೊಂದಿದ್ದಾಗ್ಯೂ, ವಿಶ್ವ ಬ್ಯಾಂಕ್ ರಷ್ಯಾದ ಆರ್ಥಿಕತೆಯ ಮುಂದಿರುವ ಹಲವಾರು ಸವಾಲುಗಳನ್ನು ಪಟ್ಟಿ ಮಾಡಿದೆ: ಆರ್ಥಿಕತೆಯ ವೈವಿಧ್ಯತೆ, ಸಣ್ಣ ಮತ್ತು ಮಧ್ಯಮ-ಪ್ರಮಾಣದ ಉದ್ದಿಮೆಗಳಿಗೆ ಪ್ರೋತ್ಸಾಹ, ಮಾನವ ಸಂಪನ್ಮೂಲಗಳ ಸಂಪಾದನೆ ಮತ್ತು ಸಾಂಸ್ಥಿಕ ಆಡಳಿತವನ್ನು ಉತ್ತಮಗೊಳಿಸುವುದು. ಹಣದುಬ್ಬರವು 2006ರಲ್ಲಿ 9% ರಷ್ಟಿದ್ದದ್ದು 2007ರ ಅಂತ್ಯದಲ್ಲಿ 12% ಕ್ಕೆ ಉಬ್ಬಿತು. ಏರುತ್ತಿರುವ ಆಹಾರದ ಬೆಲೆಗಳೆಂಬ ಪ್ರಮುಖ ಕಾರಣದಿಂದ ಹಣದುಬ್ಬರದ ಪ್ರವೃತ್ತಿಯು 2008ರ ಮೊದಲ ತ್ರೈಮಾಸಿಕದಲ್ಲಿಯೂ ಮುಂದುವರೆಯಿತು. ಆರ್ಥಿಕ ಬೆಳವಣಿಗೆಗೆ ಪ್ರಮುಖ ವಿಘ್ನವಾಗಿರುವುದು ಬಹಳ ವರ್ಷಗಳಿಂದಲೂ ಕಡೆಗಾಣಿಸಲಾದ ವಿಚಾರವಾಗಿರುವ ಮೂಲಭೂತ ಸೌಕರ್ಯಗಳ ಸಮಸ್ಯೆ. 2020ರೊಳಗೆ $1 ಟ್ರಿಲಿಯನ್ ಮೊತ್ತವನ್ನು ಮೂಲಭೂತ ಸೌಕರ್ಯಕ್ಕಾಗಿ ಹೂಡಲಿದೆ ಎಂದು ಸರ್ಕಾರ ತಿಳಿಸಿದೆ. ಜನಗಣತಿ ] ರಷ್ಯನ್‌ ಒಕ್ಕೂಟವು ವೈವಿಧ್ಯಮಯ, ಬಹು-ಜನಾಂಗೀಯ ಸಮಾಜವಾಗಿದ್ದು, ಸುಮಾರು 160 ವಿವಿಧ ಜನಾಂಗೀಯ ಗುಂಪುಗಳು ಮತ್ತು ದೇಶೀಯ ಗುಂಪುಗಳಿಗೆ ತಾಣವಾಗಿದೆ. ರಷ್ಯಾದ ಜನಸಂಖ್ಯೆಯು ಹೆಚ್ಚಾಗಿದ್ದರೂ ಸಹ, ದೇಶವು ಭಾರೀ ವಿಸ್ತೀರ್ಣವನ್ನು ಹೊಂದಿರುವ ಕಾರಣ ಅದರ ಸಾಂಧ್ರತೆ ಕಡಿಮೆ. ಯೂರೋಪೀಯ ರಷ್ಯಾದಲ್ಲಿ ಉರಾಳ್ ಪರ್ವತ ಶ್ರೇಣಿಯ ಬಳಿ ಹಾಗೂ ನೈಋತ್ಯ ಸೈಬೀರಿಯಾ ವಲಯಗಳಲ್ಲಿ ಜನಸಾಂದ್ರತೆಯು ಅತಿಹೆಚ್ಚಾಗಿರುತ್ತದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ರಷ್ಯನ್‌ ಒಕ್ಕೂಟ on 1 ಜನವರಿ 2009ರಂದು ರಷ್ಯಾ ಒಕ್ಕೂಟದ ನಿವಾಸಿಗಳ ಸಂಖ್ಯೆಯು 141,903,979ರಷ್ಟಿತ್ತು. 2008ರಲ್ಲಿ, ಜನಸಂಖ್ಯೆಯು 121,400 ಅಥವಾ 0.085% ರಷ್ಟು ಕಡಿಮೆಯಾಯಿತು.(2007ರಲ್ಲಿ - 212,000 ಅಥವಾ 0.15% ರಷ್ಟು ಮತ್ತು 2006ರಲ್ಲಿ - 532,600 ಅಥವಾ 0.37 %ರಷ್ಟು). 2008ರಲ್ಲಿ ವಲಸೆ ಪ್ರವೃತ್ತಿಯು 2.7% ರಷ್ಟು ಹೆಚ್ಚುತ್ತಲೇ ಇತ್ತು, 281,615 ವಲಸಿಗರು ರಷ್ಯನ್‌ ಒಕ್ಕೂಟಕ್ಕೆ ಆಗಮಿಸಿದರು, ಇದರಲ್ಲಿ % 95ರಷ್ಟು ಜನರು CIS ದೇಶಗಳಿಂದ ಬಂದರು, ಇವರಲ್ಲಿ ಬಹುಪಾಲು ರಷ್ಯನ್ನರು ಅಥವಾ ರಷ್ಯನ್ ಭಾಷಿಕರು. ರಷ್ಯನ್ ವಲಸಿಗರ ಸಂಖ್ಯೆಯು 16% ರಷ್ಟು ಕಡಿಮೆಯಾಗಿ, 39,508ಕ್ಕೆ ಇಳಿಯಿತು, ಇವುಗಳಲ್ಲಿ 66% ರಷ್ಟು ಜನರು ಅನ್ಯ CIS ದೇಶಗಳಿಗೆ ಹೋದರು. ರಷ್ಯಾದಲ್ಲಿನ ಹಿಂದಿನ ಸೋವಿಯತ್ ರಾಜ್ಯಗಳಿಂದ ಸುಮಾರು 10 ಮಿಲಿಯನ್ ಅಕ್ರಮ ವಲಸಿಗರು ಸಹ ಇದ್ದಾರೆ. ಸರಿಸುಮಾರು 116 ಮಿಲಿಯನ್ ಜನಾಂಗೀಯ ರಷ್ಯನ್ನರು ರಷ್ಯಾದಲ್ಲಿ ವಾಸಿಸುತ್ತಿದ್ದಾರೆ ಮತ್ತು ಸುಮಾರು 20 ಮಿಲಿಯನ್‌ಗೂ ಹೆಚ್ಚು ಜನರು ಅಂದಿನ ಸೋವಿಯತ್‌ ಒಕ್ಕೂಟದ ಭಾಗವಾಗಿದ್ದ ಗಣರಾಜ್ಯದಲ್ಲಿ, ಬಹುಮಟ್ಟಿಗೆ ಉಕ್ರೇನ್ ಮತ್ತು ಕಜಖ್‌ಸ್ತಾನ್‌ದಲ್ಲಿ ವಾಸಿಸುತ್ತಿದ್ದಾರೆ. ಜನಸಂಖ್ಯೆಯ 73% ರಷ್ಟು ನಗರ ವಲಯಗಳಲ್ಲಿ ವಾಸಿಸುತ್ತದೆ. 2002 ಜನಗಣತಿಯ ಪ್ರಕಾರ, ರಷ್ಯಾದ ಅತಿ ದೊಡ್ಡ ನಗರಗಳು ಮಾಸ್ಕೋ (10,126,424 ನಿವಾಸಿಗಳು) ಮತ್ತು ಸೇಂಟ್ ಪೀಟರ್ಸ್‌ಬರ್ಗ್‌ (4,661,219 ನಿವಾಸಿಗಳು). ಹನ್ನೊಂದು ಇತರೆ ನಗರಗಳು ಒಂದರಿಂದ ಎರಡು ಮಿಲಿಯನ್ ನಿವಾಸಿಗಳನ್ನು ಹೊಂದಿವೆ: ಚೆಲ್ಯಾಬಿನಸ್ಕ್, ಕಜಾನ್, ನೊವೊಸಿಬಿರ್ಸ್ಕ್‌, ನಿಜ್ನಿ ನವ್‌ಗೊರೊಡ್‌, ಒಮಸ್ಕ್, ಪೆರ್ಮ್, ರಾಸ್ಟೊವ್-ಆನ್-ಡಾನ್, ಸಾಮರಾ, ಊಫಾ, ವೊಲ್ಗೊಗ್ರಾಡ್ ಮತ್ತು ಎಕಟೆರಿನ್‌ಬರ್ಗ್. ರಷ್ಯಾದ ಜನಸಂಖ್ಯೆಯು ಅತಿ 1991ರಲ್ಲಿ ಅತಿ ಹೆಚ್ಚು ಅಂದರೆ 148,689,000ದಷ್ಟಿತ್ತು, ಆದರೆ 90ರ ದಶಕದ ಮಧ್ಯದಲ್ಲಿ ತೀವ್ರವಾಗಿ ಕಡಿಮೆಯಾಗುತ್ತಾ ಬಂದಿತು. ಈ ಇಳಿತವು ನಿಧಾನಿಸಿ ಕಳೆದ ಇತ್ತೀಚಿಗಿನ ವರ್ಷಗಳಲ್ಲಿ ಜಡವಾಗಿದೆ, ಕಾರಣ ಕಡಿಮೆಯಾದ ಮರಣ ಪ್ರಮಾಣ, ಹೆಚ್ಚಿದ ಜನನ ಪ್ರಮಾಣ ಮತ್ತು ಹೆಚ್ಚಿದ ವಲಸೆ. 2008ರಲ್ಲಿ ಮೃತ್ಯುಗಳ ಸಂಖ್ಯೆಯು ಜನನಗಳ ಸಂಖ್ಯೆಗಿಂತಲೂ 363,500ರಷ್ಟು ಹೆಚ್ಚಿತ್ತು.2007ರಲ್ಲಿ ಸಂಭವಿಸಿದ 477,700 ಮತ್ತು 2006ರಲ್ಲಿ 687,100 ಮೃತ್ಯುಗಳಿಗಿಂತಲೂ ಕಡಿಮೆಯಾಗಿದೆ. ರಷ್ಯಾದ ಸಂಯುಕ್ತ ರಾಜ್ಯ ಅಂಕಿ-ಅಂಶ ಸೇವಾ ಸಂಸ್ಥೆಯು ಪ್ರಕಟಿಸಿದ ಮಾಹಿತಿಯ ಪ್ರಕಾರ, 2007ರಲ್ಲಿ ಸಂಭವಿಸಿದ ಸಾವಿನ ಪ್ರಮಾಣವು 2006ಕ್ಕೆ ಹೋಲಿಸಿದಲ್ಲಿ 4% ರಷ್ಟು ಕಡಿಮೆಯಾಗಿತ್ತು, ಸುಮಾರು 2 ಮಿಲಿಯನ್ ಸಾವುಗಳು ಸಂಭವಿಸಿದ್ದು, ಜನ್ಮ ಪ್ರಮಾಣವು 8.3% ವರ್ಷ-ವರ್ಷಕ್ಕೆ ಹೆಚ್ಚಾಗಿ ಅಂದಾಜು 1.6 ಮಿಲಿಯನ್ ಜನನಗಳಾದವು. ಹೆಚ್ಚು ಮರಣ ಪ್ರಮಾಣ ಮತ್ತು ಕಡಿಮೆ ಜನನ ಪ್ರಮಾಣವೇ ರಷ್ಯಾದ ಜನಸಂಖ್ಯೆ ಇಳಿಕೆಗೆ ಪ್ರಮುಖ ಕಾರಣ.ರಷ್ಯಾದಲ್ಲಿಯ ಜನನ ಪ್ರಮಾಣವನ್ನು ಇತರೇ ಯುರೋಪಿನ ದೇಶಗಳಲ್ಲಿನ ಜನನ ಪ್ರಮಾಣಕ್ಕೆ ಹೋಲಿಸಬಹುದಾದರೂ (2008ರಲ್ಲಿ ಪ್ರತಿ 1000 ಜನರಿಗೆ 12.1) ಯುರೋಪ್ ಒಕ್ಕೂಟ ಸರಾಸರಿ ಪ್ರತಿ 1000ಕ್ಕೆ 9.90) ಇದರ ಜನಸಂಖ್ಯೆಯು ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ, ಕಾರಣ ಮರಣ ಪ್ರಮಾಣದ ಬಹಳ ಹೆಚ್ಚು ದರ. (2008ರಲ್ಲಿ, ) ಯೂರೋಪ್ ಒಕ್ಕೂಟದ ಸರಾಸರಿ ಪ್ರತಿ 1000ಕ್ಕೆ 10.28ಕ್ಕೆ ಹೋಲಿಸಿದರೆ ರಷ್ಯಾದದಲ್ಲಿ ಮೃತ್ಯು ದರವು ಪ್ರತಿ 1000 ಜನರಿಗೆ 14.7 % ರಷ್ಟಿತ್ತು). ಆದಾಗ್ಯೂ, ರಷ್ಯಾದ ಆರೋಗ್ಯ ಸಚಿವಾಲಯದ ಅಂದಾಜಿನ ಪ್ರಕಾರ 2011ರೊಳಗೆ ಮರಣ ಪ್ರಮಾಣ ಜನನ ಪ್ರಮಾಣವನ್ನು ಸಮತಟ್ಟುತ್ತದೆ, ಏಕೆಂದರೆ ಫಲವಂತಿಕೆಯ ಪ್ರಮಾಣದಲ್ಲಿ ಹೆಚ್ಚಳ ಮತ್ತು ಮರ್ತ್ಯತೆಯ ಇಳಿತ. ಶಿಕ್ಷಣ ರಷ್ಯಾದಲ್ಲಿ ಎಲ್ಲಾ ಸಂವಿಧಾನದತ್ತ ಪ್ರಜೆಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆಯಿದೆ, ಮತ್ತು ಸಾಕ್ಷರತೆ ಪ್ರಮಾಣ ೯೯.೪% ರಷ್ಟಿದೆ. ಉನ್ನತ ಶಿಕ್ಷಣದ ಪ್ರವೇಶ ಸ್ಪರ್ಧಾತ್ಮಕವಾಗಿದೆ. ಶಿಕ್ಷಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿರುವುದರಿಂದಾಗಿ; ವೈದ್ಯಕೀಯ, ಗಣಿತ, ವಿಜ್ಞಾನ ಮತ್ತು ಬಾಹ್ಯಾಕಾಶ ಮತ್ತು ವಾಯುಯಾನ ಸಂಶೋಧನೆಯಲ್ಲಿ ರಷ್ಯಾ ಇಂದು ಉನ್ನತ ಸ್ಥಾನದಲ್ಲಿದೆ. ಸ್ಪರ್ಧಾತ್ಮ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಉಚಿತವಾಗಿ ಉನ್ನತ ಶಿಕ್ಷಣ ಪಡೆಯುವ ಸಾರ್ವತ್ರಿಕ ಹಕ್ಕನ್ನು ರಷ್ಯಾ ಸಂವಿಧಾನ ನೀಡಿದೆ. ವಿದ್ಯಾರ್ಥಿಗಳ ಶಿಕ್ಷಣ ಶುಲ್ಕದಲ್ಲಿ ಒಂದು ನಿರ್ದಿಷ್ಟ ಭಾಗ ಅಥವಾ ಪ್ರತಿ ಸಂಸ್ಥೆಯ ಕೆಲವು ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿರುವುದರಿಂದ ಈ ನೀತಿಯನ್ನು ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಈ ಹಿಂದೆ, ಉಳ್ಳವರಿಗೆ ಮಾತ್ರ ಉನ್ನತ ಶಿಕ್ಷಣ ಎಂಬ ಆರೋಪವಿತ್ತು. ಇದಕ್ಕೆ ಪೂರಕವಾಗಿ, ವಿದ್ಯಾರ್ಥಿಗಳಿಗೆ ಸಣ್ಣ ಪ್ರಮಾಣದ ಪ್ರೋತ್ಸಾಹ ಧನ ಮತ್ತು ಉಚಿತ ವಾಸ್ತವ್ಯ ವ್ಯವಸ್ಥೆ ನೀಡಲಾಗುತ್ತಿದೆ. ಸಂಯುಕ್ತ ಸರ್ಕಾರದ ಮತ್ತು ಪ್ರಾಂತೀಯ ಸಂಸ್ಥೆಗಳ ಮುಂಗಡ ಪತ್ರಗಲ್ಲಿ ಈ ಎಲ್ಲಾ ಸಂಸ್ಥೆಗಳಿಗೆ ಹಣಕಾಸು ಒದಗಿಸಲಾಗುತ್ತದೆ; ಶಿಕ್ಷಕರಿಗೆ ಸಮರ್ಪಕ ವೇತನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಂಸ್ಥೆಗಳಿಗೆ ಸಾಧ್ಯವಾಗದೇ ಇರುವುದು ಕಂಡು ಬಂದಿದೆ. ರಾಷ್ಟ್ರೀಯ ಮಟ್ಟದ ಕೆಲವು ಶಿಕ್ಷಣ ಸಂಸ್ಥೆಗಳು ಈ ಸಮಸ್ಯೆಯನ್ನು ಬಗೆಹರಿಸಲೆಂದು ವಾಣಿಜ್ಯದ ಹಾದಿಯನ್ನು ಹಿಡಿದಿವೆ, ಅಲ್ಲದೆ ಈ ಚಾಳಿ ಕ್ರಮೇಣವಾಗಿ ಬೆಳೆಯುತ್ತಿದೆ. ಹೈ ಟೆಕ್ ಮತ್ತು ಬೆಳೆಯುತ್ತಿರುವ ಕೈಗಾರಿಕೆಗಳು ಮತ್ತು ಆರ್ಥಿಕ ಕ್ಷೇತ್ರಗಳ ಅಗತ್ಯಗಳಿಗೆ ಸ್ಪಂದನ ಮತ್ತು ಪ್ರತಿಭಾವಂತ ಕೆಲಸಗಾರರನ್ನು ಪೂರೈಸುವುದಕ್ಕಾಗಿ ಹಲವು ಖಾಸಗೀ ಉನ್ನತ ಶಿಕ್ಷಣ ಸಂಸ್ಥೆಗಳು ಮುಂದೆ ಬಂದಿವೆ. ಆರೋಗ್ಯ ರಷ್ಯಾದ ಸಂವಿಧಾನ ಎಲ್ಲಾ ಪ್ರಜೆಗಳಿಗೂ ಸಾರ್ವತ್ರಿಕ ಉಚಿತ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಿದೆ. ಆದರೆ ನೈಜ ಸಂಗತಿಯೆಂದರೆ, ಉಚಿತ ಆರೋಗ್ಯ ಸೌಲಭ್ಯಗಳನ್ನು ನಿರ್ಬಂಧಿಸಿದ ಸಂದರ್ಭಗಳೂ ಹಿಂದೆ ಇದ್ದವು, ಉದಾಹರಣೆಗೆ ಪ್ರೊಪಿಸ್ಕಾ ಆಳ್ವಿಕೆಯಲ್ಲಿ ಜಗತ್ತಿನ ಇತರಾವುದೇ ದೇಶಕ್ಕೆ ತಲಾ [368] ಹೋಲಿಸಿದರೆ ರಷ್ಯಾದಲ್ಲಿ ಹೆಚ್ಚು ವೈದ್ಯರಿದ್ದಾರೆ, ಆಸ್ಪತ್ರೆಗಳಿವೆ, ಅಂತೆಯೇ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಸಂಖ್ಯೆ ಕಡಿಮೆಯೇನಿಲ್ಲ. ಸೋವಿಯತ್ ಒಕ್ಕೂಟ ಪತನವಾದಾಗಿನಿಂದ ಸಾಮಾಜಿಕ, ಆರ್ಥಿಕ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳಾಗಿ ರಷ್ಯಾದ ಜನರ ಆರೋಗ್ಯ ಗಣನೀಯವಾಗಿ ಇಳಿದಿದೆ. 2007ರ ವೇಳೆಗೆ ರಷ್ಯಾದ ಪುರುಷರ ಮತ್ತು ಮಹಿಳೆಯರ ಸರಾಸರಿ ಆಯುರ್ನಿರೀಕ್ಷೆ 61.5 ಮತ್ತು 73.9 ವರ್ಷಗಳಿತ್ತು. ರಷ್ಯಾದಲ್ಲಿ ಜನನವಾದಾಗ ಸರಾಸರಿ ಆಯುರ್ ನಿರೀಕ್ಷೆ 67.7 ವರ್ಷ. ಇದು ಯುರೋಪ್ ಒಕ್ಕೂಟದ ಒಟ್ಟು ಆಯುರ್ನಿರೀಕ್ಷೆಗಿಂತ 10.8 ವರ್ಷ ಕಡಿಮೆ. ಕೆಲಸದಲ್ಲಿ ತೊಡಗಿರುವ ಪುರುಷರು ಸಾಕಷ್ಟು ಮುನ್ನಚ್ಚರಿಕೆ (ಉದಾಹರಣೆಗೆ, ಕುಡಿತ, ಒತ್ತಡ, ಧೂಮಪಾನ, ಅನೈತಿಕ ಚಟುವಟಿಕೆಗಳು, ಹಿಂಸಾತ್ಮಕ ಅಪರಾಧ)ವಹಿಸದೆ ಪ್ರಾಣ ಹಾನಿ ಮಾಡಿಕೊಳ್ಳುತ್ತಿರುವುದು ಪುರುಷರಲ್ಲಿನ ಆಯುರ್ನಿರೀಕ್ಷೆಯ ಪ್ರಮಾಣ ಇಳಿಯಲು ಪ್ರಮುಖ ಕಾರಣ. ರಷ್ಯಾದ ಪುರುಷರಲ್ಲಿ 1991ರಿಂದ ಪ್ರಾಣಹಾನಿ 60% ಹೆಚ್ಚಿದೆ, ಇದು ಯುರೋಪ್ ಗಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚು. ಪುರುಷರು ಮತ್ತು ಮಹಿಳೆಯರ ನಡುವಣ ಆಯುರ್ನಿರೀಕ್ಷೆಯಲ್ಲಿ ಬಹಳಷ್ಟು ವ್ಯತ್ಯಾಸವಿರುವುದು ಮತ್ತು ಎರಡನೇ ಮಹಾ ಸಮರದ ಶಾಶ್ವತ ಪರಿಣಾಮ ಇದಕ್ಕೆ ಪ್ರಮುಖ ಕಾರಣ. ಎರಡನೇ ಮಹಾ ಸಮರದಲ್ಲಿ ರಷ್ಯಾ ಬೇರಾವುದೇ ದೇಶಕ್ಕಿಂತಲೂ ಹೆಚ್ಚಿನ ಜನರನ್ನು ಕಳೆದುಕೊಂಡದ್ದರಿಂದಾಗಿ ಲಿಂಗ ಅಸಮತೋಲನ ಇಂದಿಗೂ ಹಾಗೆಯೇ ಉಳಿದಿದೆ ಮತ್ತು ಪ್ರತಿ ಮಹಿಳೆಗೆ 0.859ರಷ್ಟೇ ಪುರುಷರಿದ್ದಾರೆ. ಹೃದಯ ಸಂಬಂಧಿ ರೋಗಗಳಿಂದ ಒಟ್ಟು 56.7 % ಮಂದಿ ಮೃತಪಟ್ಟಿದ್ದರೆ, ಕೆಲಸ ಮಾಡುವ ವಯಸ್ಸಿರುವ 30% ರಷ್ಟು ಜನ ಇದೇ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸುಮಾರು 16 ದಶಲಕ್ಷ ಜನ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು, ರಷ್ಯಾ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವಿಷಯದಲ್ಲಿ, ಉಕ್ರೇನ್ ಮೊದಲ ಸ್ಥಾನದಲ್ಲಿದೆ. ನರಹತ್ಯೆ, ಆತ್ಮಹತ್ಯೆ ಮತ್ತು ಕ್ಯಾನ್ಸರ್ ನಿಂದ ಸಂಭವಿಸಿದ ಮರಣ ಪ್ರಮಾಣ ಕಡಿಮೆಯೇನಲ್ಲ. 2007ರಲ್ಲಿ ರೊಮಿರ್ ಮಾನಿಟರಿಂಗ್ ಅವರು ನಡೆಸಿದ ಸಮೀಕ್ಷೆ ಪ್ರಕಾರ, 52% ಪುರುಷರು ಮತ್ತು 15% ಮಹಿಳೆಯರು ಧೂಮಪಾನ ಮಾಡುತ್ತಾರೆ. ತಂಬಾಕು ಸೇವನೆಯ ಪರಿಣಾಮ ಪ್ರತಿ ವರ್ಷ 2,60,000 ಜನರು ಸಾವನ್ನಪ್ಪುತ್ತಿದ್ದಾರೆ. ಸೋವಿಯತ್ ಯುಗದಲ್ಲಿ HIV/AIDS ಇರಲೇ ಇಲ್ಲ, ಆದರೆ ಸೋವಿಯತ್ ಪತನದ ನಂತರ ಮಾದಕ ವಸ್ತುಗಳ ಸೇವನೆ ಸ್ಫೋಟಕ ಪ್ರಮಾಣದಲ್ಲಿ ಏರಿ, ಏಡ್ಸ್ ಬಹು ವೇಗವಾಗಿ ಹಬ್ಬಿತು. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಪ್ರಸ್ತುತ ರಷ್ಯಾದಲ್ಲಿ 3,64,000 HIV ಪೀಡಿತರಿದ್ದಾರೆ, ಆದರೆ ಸ್ವತಂತ್ರ ಸಮೀಕ್ಷೆಗಳ ಪ್ರಕಾರ ಈ ಸಂಖ್ಯೆ ಗಣನೀಯವಾಗಿ ಇನ್ನೂ ಹೆಚ್ಚಿದೆ. ಈ ರೋಗದೊಂದಿಗೆ ಹೋರಾಡುವುದಕ್ಕಾಗಿ ಸರ್ಕಾರ ವೆಚ್ಚವನ್ನು ಏರಿಸಿದ್ದು, 2006ರಲ್ಲಿ HIV ನಿಯಂತ್ರಣಕ್ಕೆಂದೇ 20 ಪಟ್ಟಿನಷ್ಟು ಅನುದಾನ ಹೆಚ್ಚಿಸಿದೆ. ಸೋವಿಯತ್ ಪತನದ ನಂತರ ಕ್ಷಯದಿಂದಾಗಿಯೂ ಕೆಲವರು ಸಾವನ್ನಪ್ಪಿದರು, ಇವೆರಡೂ ನಾಟಕೀಯವಾಗಿ ಏರಿತು, ಅಲ್ಲದೆ ಇದು ಪ್ರಮುಖವಾಗಿ ಕೈದಿಗಳಲ್ಲಿ ವ್ಯಾಪಕವಾಗಿ ಹಬ್ಬಿತು. 1990-2001ರ ಅವಧಿಯಲ್ಲಿ 15ರಿಂದ 54 ವರ್ಷ ವಯಸ್ಸಿನೊಳಗಿನವರಲ್ಲಿ ಅರ್ಧದಷ್ಟು (52%)ಜನ ಮರಣ ಹೊಂದಲು ಕುಡಿತವೇ ಕಾರಣ ಎಂದು ಅಧ್ಯಯನ ಹೇಳಿದೆ. ಇದೇ ಜನಸಂಖ್ಯೆಯನ್ನು ಹೋಲಿಸಿದರೆ, ಜಗತ್ತಿನ ಇತರ ಭಾಗಗಳಲ್ಲಿ 4% ಮರಣ ಸಂಭವಿಸಿದೆ. ರಷ್ಯಾದ ಜನಸಂಖ್ಯಾ ಬಿಕ್ಕಟ್ಟನ್ನು ನಿವಾರಿಸಿ, ಜನನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಷ್ಯಾ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ, ಮತ್ತು ಸಮಸ್ಯೆಗಳನ್ನು ಬಗೆಹರಿಸಿ ವಲಸಿಗರನ್ನು ಆಕರ್ಷಿಸುವುದೂ ಇದರ ಉದ್ದೇಶ. ಜನಿಸುವ ಪ್ರತಿ ಮಗುವಿಗೆ ಬೆಂಬಲವಾಗಿ ಪ್ರತಿ ತಿಂಗಳು ನೀಡುತ್ತಿದ್ದ ಸಂಭಾವನೆಯನ್ನು 2007ರಲ್ಲಿ ಸರ್ಕಾರ ದ್ವಿಗುಣಗೊಳಿಸಿದೆ, ಮತ್ತು ಎರಡನೇ ಮಗುವಿಗೆ ಜನನ ನೀಡುವ ಪ್ರತಿ ಮಹಿಳೆಗೆ ಪಾರಿತೋಷಕವಾಗಿ 250,000 ರೂಬಲ್ಸ್ (ಅಂದಾಜು 10,000 ಅಮೆರಿಕನ್ $)ನೀಡುತ್ತಿದೆ. USSR ಪತನದ ನಂತರ, 2007ರಲ್ಲಿ ರಷ್ಯಾದಲ್ಲಿ ಅತಿ ಹೆಚ್ಚು ಜನನ ಪ್ರಮಾಣ ದಾಖಲಾಗಿದೆ. 2008-2009ರಲ್ಲಿ ಪ್ರಸವ ಪೂರ್ವ ಕೇಂದ್ರಗಳಲ್ಲಿ ಸರ್ಕಾರ 20 ಶತಲಕ್ಷ ರೂಬಲ್ಸ್ ಬಂಡಾವಳ ಹೂಡಲಿದೆ ಎಂದು ರಷ್ಯಾದ ಮೊದಲ ಉಪ ಪ್ರಧಾನಿ ಘೋಷಿಸಿದ್ದಾರೆ. ದೇಶದ ಜನಸಂಖ್ಯೆಯನ್ನು ಬಲಪಡಿಸುವುದಕ್ಕಾಗಿ ವಲಸೆ ಬರುವುದು ಅಗತ್ಯ ಎಂಬ ಅನಿಸಿಕೆ ಜನರಲ್ಲಿ ಹೆಚ್ಚಾಗುತ್ತಿದೆ. ಭಾಷೆ ರಷ್ಯಾದಲ್ಲಿರುವ 160 ಜನಾಂಗೀಯ ಗುಂಪುಗಳು ಸುಮಾರು 100 ಭಾಷೆಗಳನ್ನು ಮಾತನಾಡುತ್ತವೆ. 2002ರ ಸಮೀಕ್ಷೆ ಪ್ರಕಾರ, 142.6 ದಶಲಕ್ಷ ಜನರು ರಷ್ಯನ್ ಭಾಷೆ, 5.3 ದಶಲಕ್ಷ ಮಂದಿ ಟಾಟರ್ ಮತ್ತು 2.9 ದಶಲಕ್ಷ ಮಂದಿ ಜರ್ಮನ್ ಭಾಷೆ ಮಾತನಾಡುತ್ತಾರೆ. ರಷ್ಯನ್ ದೇಶದ ಏಕಮಾತ್ರ ಅಧಿಕೃತ ಭಾಷೆ, ಆದರೂ ಎರಡನೇ ಭಾಷೆಯಾಗಿ ಮಾತೃಭಾಷೆಯನ್ನು ವೈಯಕ್ತಿಕವಾಗಿ ಬಳಸುವ ಹಕ್ಕನ್ನು ಪ್ರಜೆಗಳಿಗೆ ರಷ್ಯಾ ಸಂವಿಧಾನ ನೀಡಿದೆ.[405] ರಷ್ಯನ್ ಭಾಷೆ ವ್ಯಾಪಕವಾಗಿ ಚೆಲ್ಲಾಪಿಲ್ಲಿಯಾಗಿದ್ದರೂ, ರಷ್ಯಾದುದ್ದಕ್ಕೂ ಒಂದೇ ತೆರನಾಗಿದೆ. ರಷ್ಯಾದಲ್ಲಿ ಭೌಗೋಳಿಕವಾಗಿ ಯುರೇಷಿಯಾ ಭಾಷೆ ವ್ಯಾಪಕವಾಗಿ ಹಬ್ಬಿದೆ ಮತ್ತು ಆದರೆ ಜನರು ಹಳೇ ರಷ್ಯನ್ ಭಾಷೆ ಯಲ್ಲೇ ಹೆಚ್ಚಾಗಿ ಸಂಭಾಷಿಸುತ್ತಾರೆ. ರಷ್ಯನ್ ಭಾಷಿಕರು ಇಂಡೋ-ಯುರೋಪ್ ಭಾಷೆ ಕುಟುಂಬಕ್ಕೆ ಸೇರಿದವರಾಗಿದ್ದು, ಹಳೇ ರಷ್ಯಾ ಭಾಷೆಯ ಪ್ರತಿನಿಧಿಗಳೂ ಹೌದು; ಬೆಲಾರುಸಿಯನ್ ಮತ್ತು ಉಕ್ರೇನಿಯನ್ (ಮತ್ತು ರುಸಿನ್ ಕೂಡ ಇರಬಹುದು).10ನೇ ಶತಮಾನದ ನಂತರ ಹಳೇ ಪೂರ್ವ ರಷ್ಯಾದ ಹಳೇ ರಷ್ಯಾ ಲಿಖಿತ ಉದಾಹರಣೆಗಳನ್ನು ಸೇರಿಸಲಾಗಿದೆ. ಜಗತ್ತಿನ ವಿಜ್ಞಾನ ಸಾಹಿತ್ಯಗಳೂ ಕ್ರಮೇಣವಾಗಿ ರಷ್ಯನ್ ಭಾಷೆಯಲ್ಲೂ ಪ್ರಕಟಣೆ ಕಂಡಿವೆ. ಜಗತ್ತಿನ ಜ್ಢಾನ ಭಂಡಾರವನ್ನು ಸಂಕೇತಗಳ ಮೂಲಕ ಸಂಗ್ರಹಣೆ ಮಾಡುವುದರಲ್ಲಿ ರಷ್ಯಾ ಕೂಡ ತೊಡಗಿಸಿಕೊಂಡಿದೆ. ಜಗತ್ತಿನ 60% ರಿಂದ 70ರಷ್ಟು ಮಾಹಿತಿಗಳು ರಷ್ಯನ್ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಕಟವಾಗುತ್ತವೆ. ವಿಶ್ವ ಸಂಸ್ಥೆ ಅಂಗೀಕರಿಸಿದ ಆರು ಅಧಿಕೃತ ಭಾಷೆಗಳಲ್ಲಿ ರಷ್ಯನ್ ಭಾಷೆ ಕೂಡ ಒಂದು. ಧರ್ಮ ಕ್ರೈಸ್ತ ಮತ, ಇಸ್ಲಾಂ, ಬೌದ್ಧ ಧರ್ಮ ಮತ್ತು ಯಹೂದಿ ಆಚರಣೆಯಲ್ಲಿರುವ ಸಾಂಪ್ರದಾಯಿಕ ಪ್ರಮುಖ ಧರ್ಮಗಳೆಂದು ಎಂದು 1997ರಲ್ಲಿ ಜಾರಿಗೆ ತಂದ ರಷ್ಯಾ "ಐತಿಹಾಸಿಕ ಪರಂಪರೆ" ಕುರಿತ ಕಾನೂನಿನಲ್ಲಿ ಹೇಳಲಾಗಿದೆ. ನಂಬುವವರ ಅಂದಾಜು ಸಂಖ್ಯೆಗೂ ವಿವಿಧ ಮೂಲಗಳಿಗೂ ಸಾಮ್ಯತೆಯಿಲ್ಲ, ಮತ್ತು ರಷ್ಯಾ ಜನಸಂಖ್ಯೆಯಲ್ಲಿ ಅತಿ ಹೆಚ್ಚು 16-48% ರಷ್ಟು ಜನ ಯಾವುದೇ ಧರ್ಮವನ್ನು ನಂಬುವುದಿಲ್ಲ ಎಂದೂ ಕೆಲವು ವರದಿಗಳು ಹೇಳುತ್ತವೆ..ರಷ್ಯಾದ ಸಾಂಪ್ರದಾಯವೇ ರಷ್ಯಾದ ಪ್ರಮುಖ ಧರ್ಮ. ದಾಖಲಾಗಿರುವ 95% ಮಂದಿ ಸಾಂಪ್ರದಾಯಿಕ ಪಾದ್ರಿಗಳು ರಷ್ಯನ್ ಸಾಂಪ್ರದಾಯವಾದಿ ಚರ್ಚ್ ಗಳಿಗೆ ಸೇರಿದವರು. ಕೆಲವು ಸಣ್ಣ ಸಾಂಪ್ರದಾಯದ ಚರ್ಚ್ ಗಳೂ ಇವೆ. ಆದರೂ, ಸಾಂಪ್ರದಾಯಗಳನ್ನು ನಂಬುವ ಹೆಚ್ಚಿನ ಮಂದಿ ದಿನನಿತ್ಯ ಚರ್ಚ್ ಗಳಿಗೆ ಹೋಗುವುದಿಲ್ಲ. ಏನೇ ಇದ್ದರೂ, ನಂಬುವ ಮತ್ತು ನಂಬದೇ ಇರುವ ಎಲ್ಲಾ ಜನರು ಚರ್ಚ್ ಅನ್ನು ಗೌರವಿಸುತ್ತಾರೆ, ಅದು ರಷ್ಯಾದ ಸಂಸ್ಕೃತಿ ಮತ್ತು ಪರಂಪರೆಯ ದ್ಯೋತಕವೆಂದು ಅವರ ಅಂಬೋಣ. ರೋಮನ್ ಕ್ಯಾಥೊಲಿಕರು, ಅರ್ಮೇನಿಯಂ ಗ್ರೆಗೊರಿಯನ್ನರು ಮತ್ತು ಪ್ರೊಟೆಸ್ಟೆಂಟ್ ಅನುಸರಿಸುವ ಕ್ರೈಸ್ತರು ಸಣ್ಣ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ರಷ್ಯಾ ಪ್ರಜೆಗಳ ಪೂರ್ವಜರು 10ನೇ ಶತಮಾನದಲ್ಲಿ ಸಾಂಪ್ರದಾಯಿಕ ಕ್ರೈಸ್ತ ಧರ್ಮವನ್ನು ಆಚರಿಸುತ್ತಿದ್ದರು. ರಷ್ಯಾದಲ್ಲಿರುವ ಸುಮಾರು 100 ದಶಲಕ್ಷ ಜನರು ತಾವು ಸಾಂಪ್ರದಾಯಿಕ ಕ್ರೈಸ್ತರೆಂದು ಹೇಳಿಕೊಂಡಿದ್ದಾರೆಂದು, 2007ರಲ್ಲಿ ಅಮೆರಿಕದ ವಿದೇಶಾಂಗ ಸಚವಾಲಯ ಪ್ರಕಟಿಸಿದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ ಹೇಳಿದೆ. ರಷ್ಯಾದ ಸಾರ್ವಜನಿಕ ಅಭಿಪ್ರಾಯ ಸಂಶೋಧನಾ ಕೇಂದ್ರ ನಡೆಸಿದ ಮತಗಣನೆ ಪ್ರಕಾರ, ಮತ ಹಾಕಿದ 63% ಮಂದಿ ತಾವು ರಷ್ಯಾ ಸಂಪ್ರದಾಯವಾದಿಗಳೆಂದು ಹೇಳಿಕೊಂಡಿದ್ದರೆ, 6% ರಷ್ಟು ಜನ ತಾವು ಮುಸ್ಲಿಮರೆಂದು ಹೇಳಿದ್ದಾರೆ, ಮತ್ತು 1% ಕ್ಕಿಂತಲೂ ಕಡಿಮೆ ಜನ ತಾವು ಬೌದ್ಧರು, ಕ್ಯಾಥೊಲಿಕರು, ಪ್ರೊಟೆಸ್ಟೆಂಟ್ ಅಥವಾ ಯಹೂದಿಗೆಳೆಂದು ಹೇಳಿಕೊಂಡಿದ್ದಾರೆ. 12% ರಷ್ಟು ಮಂದಿ ದೇವರನ್ನು ನಂಬುತ್ತೇವೆ ಎಂದಿದ್ದಾರೆ, ಆದರೆ ಅವರು ಯಾವುದೇ ಧರ್ಮವನ್ನು ಆಚರಿಸುತ್ತಿಲ್ಲ, ಮತ್ತು 16% ರಷ್ಟು ಮಂದಿ ದೇವರನ್ನು ನಂಬುವುದಿಲ್ಲ ಎಂದಿದ್ದಾರೆ. ಸುಮಾರು 15ರಿಂದ 20 ದಶಲಕ್ಷ ಮುಸ್ಲಿಮರಿಗೆ ರಷ್ಯಾ ತವರು ಮನೆ. ಆದರೆ ಸಮೀಕ್ಷೆ ಪ್ರಕಾರ ರಷ್ಯಾದಲ್ಲಿರುವ 7ರಿಂದ 9 ದಶಲಕ್ಷ ಮಂದಿ ಮುಸ್ಲಿಮರು ಮಾತ್ರ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾರೆ. ರಷ್ಯಾದಲ್ಲಿ ಹಿಂದಿನ ಸೋವಿಯತ್ ರಾಜ್ಯಗಳಿಂದ ವಲಸೆ ಬಂದ ಸುಮಾರು 3ರಿಂದ 4 ದಶಲಕ್ಷ ಮುಸ್ಲಿಮರಿದ್ದಾರೆ. ಹೆಚ್ಚಿನ ಮುಸ್ಲಿಮರು ವೋಲ್ಗಾ-ಊರಲ್ ಪ್ರಾಂತ್ಯ, ಉತ್ತರ ಕಾಕಸಸ್, ಮಾಸ್ಕೋ, ಸೇಂಟ್ ಪೀಟರ್ಸ್‌ಬರ್ಗ್‌ ಮತ್ತು ಪಶ್ಚಿಮ ಸೈಬೀರಿಯಾದಲ್ಲಿ ನೆಲೆಸಿದ್ದಾರೆ. ರಷ್ಯಾ ಒಕ್ಕೂಟದ: ಬುರ್ಯಾತಿಯಾ, ತುವಾ ಮತ್ತು ಕಲ್ಮಿಕಿಯಾ10}. 3 ಪ್ರಾಂತ್ಯಗಳಲ್ಲಿ ಬೌದ್ಧರ ಸಾಂಪ್ರದಾಯಗಳಿವೆ. ಸೈಬೀರಿಯಾ ಮತ್ತು ಈಶಾನ್ಯ ತುದಿಯ ಪ್ರಾಂತ್ಯಗಳಲ್ಲಿ, ಯಕುತಿಯಾ, ಛುಕೊತ್ಕ ಇತ್ಯಾದಿ ಕೆಲವು ನಿವಾಸಿಗಳು ಪ್ರಮುಖ ಧರ್ಮಗಳ ಜೊತೆಗೆ ಶ್ಯಾಮನ್ ಪಂಥ, ಸರ್ವದೇವತಾರಾಧನೆ ಮತ್ತು ನಿಸರ್ಗಾರಾಧನೆ ಕೂಡ ಮಾಡುತ್ತಾರೆ. ಜನಾಂಗೀಯತೆ ಯಾವುದೇ ಧರ್ಮಕ್ಕೆ ಸೇರಲು ಮೊದಲ ಮಾನದಂಡ.ಅಗಾಧ ಪ್ರಮಾಣದಲ್ಲಿರುವ ಜೀತದಾಳುಗಳು ಸಾಂಪ್ರದಾಯಿಕ ಕ್ರೈಸ್ತರು.ರಷ್ಯಾದಲ್ಲಿರುವ ಹಲವು ತುರ್ಕಿ ಗುಂಪುಗಳು ಮುಸ್ಲಿಂ ಹಿಂಬಾಲಕರಲ್ಲದಿದ್ದರೂ,ಹೆಚ್ಚಿನ ತುರ್ಕಿ ಭಾಷಿಕರು ಮುಸ್ಲಿಮರು. ಸಂಸ್ಕೃತಿ ಶಾಸ್ತ್ರೀಯ ಸಂಗೀತ ಮತ್ತು ಬ್ಯಾಲೆ ರಷ್ಯಾದಲ್ಲಿನ ದೊಡ್ಡ ಸಂಖ್ಯೆಯ ಜನಾಂಗೀಯ ಗುಂಪುಗಳ ಜನಪದ ಸಂಗೀತದಲ್ಲಿ ವಿಶಿಷ್ಟ ಸಂಪ್ರದಾಯಗಳಿವೆ. 19ನೇ ಶತಮಾನದಲ್ಲಿ ಶಾಸ್ತ್ರೀಯ ಸಂಗೀತಗಾರ ಮಿಖಾಯಿಲ್ ಗ್ಲಿಂಕಾ ಮತ್ತು ಆತನ ಹಿಂಬಾಲಕರ ಮಧ್ಯೆ ಉದ್ಭವಿಸಿದ ಭಿನ್ನಾಭಿಪ್ರಾಯಗಳು ಹೊಸ ಸಂಗೀತ ಪ್ರಕಾರಕ್ಕೆ ನಾಂದಿ ಹಾಡಿದವು. ರಷ್ಯಾ ದೇಶದ ಸೊಗಡು, ಧಾರ್ಮಿಕತೆ ಮತ್ತು ಜನಪದ ಅಂಶಗಳನ್ನು ಗ್ಲಿಂಕಾನ ಹಿಂಬಾಲಕರು ತಮ್ಮ ಸಂಗೀತದಲ್ಲಿ ಅಳವಡಿಸಿಕೊಂಡರು. ಆಂಟನ್ ಮತ್ತು ನಿಕೊಲಾಯ್ ರುಬಿನ್ ಸ್ಟೈನ್ ನೇತೃತ್ವದ ರಷ್ಯನ್ ಮ್ಯೂಸಿಕಲ್ ಸೊಸೈಟಿಯ ಸಾಂಪ್ರದಾಯಿಕ ಸಂಗೀತವೂ ಇದಕ್ಕೆ ಪೂರಕವಾಯಿತು. ಯುರೋಪಿಯನ್ ಶಾಸ್ಟ್ರೀಯ ಸಂಗೀತದ ಪ್ರಣಯ ಶೈಲಿಯಲ್ಲಿ ಪ್ರಾವೀಣ್ಯತೆ ಸಾಧಿಸಿದ್ದ ಸೆರ್ಗೇಯ್ ರಾಚ್ನಿಯೋಫ್ ಅವರು ಪ್ರಣಯ ಲೋಕದ ಮಹಾನ್ ಸಂಗೀತಕಾರ ತ್ಚಾಯ್ ಕೋವಿಸ್ಕಿ ಅವರ ಸಂಗೀತವನ್ನು 20ನೇ ಶತಮಾನಕ್ಕೂ ಕರೆತಂದರು. ಅದಾಗಲೇ ಪ್ರಸಿದ್ಧಿಯಾಗಿದ್ದ ಕೋವಿಸ್ಕಿ ಸಂಗೀತದಲ್ಲಿ ರಷ್ಯಾದ ಸೊಗಡು, ಸಾಮರಸ್ಯತೆಯ ಶ್ರೀಮಂತಿಕೆ ಮತ್ತು ಕ್ರಿಯಾಶೀಲತೆಯಿಂದ ಕೂಡಿದ ಇಂಪಾದ ಗಾಯನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸ್ಕ್ರಿಯಾಬಿನ್, ಸ್ಟ್ರಾವಿನ್ ಸ್ಕಿ, ರಾಚ್ಮನಿನೋಫ್, ಪ್ರೊಕೊಫಿಯೇವ್ ಮತ್ತು ಶೋಸ್ತಕೋವಿಚ್ 20ನೇ ಶತಮಾನದ ಜಗತ್ಪ್ರಸಿದ್ಧ ಸಂಗೀತಕಾರರು. ಸೋವಿಯತ್ ಯುಗದ ಉದ್ದಕ್ಕೂ,ಸಂಗೀತವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿತ್ತು ಅಲ್ಲದೆ ಅದನ್ನು ಸಂಪ್ರದಾಯದ ಚೌಕಟ್ಟಿನೊಳಗೆ ಇಡಲಾಗಿತ್ತು, ಸ್ಟಾಲಿನ್ ನ ಸಮಾಜವಾದಿ ನಂಬಿಕೆಯ ನೆಲೆಗಟ್ಟಿನೊಂದಿಗೆ ಅವುಗಳನ್ನು ಹೋಲಿಸಿ ಸುಲಭವಾಗಿ ದೊರೆಯುವಂತೆಯೂ ಮಾಡಲಾಗಿತ್ತು.ಅಷ್ಟೊತ್ತಿಗೆ ಸೋವಿಯತ್ ಮತ್ತು ರಷ್ಯಾದ ಮನೆ ಆವರಣಗಳು ಜಗತ್ತಿನ ವಿಖ್ಯಾತ ಗಾಯಕರಿಗೆ ವೇದಿಕೆಯಾಗಿ ಪರಿವರ್ತನೆಯಾಗಿತ್ತು.ಪಿಟೀಲು ವಾದಕರಾದ ಡೇವಿಡ್ ಒಸ್ಟ್ರಾಕ್, ಗಿಡನ್ ಕ್ರೆಮೆರ್, ಚೆಲೋವಾದಕ ಮ್ಸ್ತಿಸ್ಲೇವ್ ರೊಶ್ಟ್ರೊವಿಚ್, ಪಿಯನ ವಾದಕರಾದ ವ್ಲಾಡಿಮಿರ್ ಹೊರೊವಿಟ್ಜ್, ಸ್ವೇಯಟೋಸ್ಲೇವ್ ರಿಕ್ಟರ್, ಮತ್ತು ಎಮಿಲ್ ಗಿಲೆಲ್ಸ್, ಹಾಗೂ ಹಾಡುಗಾರ ಗಲಿನಾ ವಿಷ್ಣೆವ್ ಸ್ಕಾಯ,ಇವರು ಈ ಪೈಕಿ ಪ್ರಸಿದ್ಧರು. ] ರಷ್ಯಾದ ಸಂಗೀತಕಾರ ಪ್ಯಾಟರ್ ಇಲಿಚ್ ತ್ಚಾಯ್ಕೊವಿಸ್ಕಿ ಅವರು ಜಗತ್ತಿನ ಪ್ರಸಿದ್ಧ ಬ್ಯಾಲೆಗಳಿಗೆ ಸಂಗೀತ ನೀಡಿದ್ದಾರೆ- ಸ್ವೇನ್ ಸರೋವರ, ದಿ ನಟ್ ಕ್ರೇಕರ್ ಮತ್ತು ಸ್ಲೀಪಿಂಗ್ ಬ್ಯೂಟಿ ಈ ಪೈಕಿ ಪ್ರಮುಖವಾದವುಗಳು. 20ನೇ ಶತಮಾನದ ಆದಿಯಲ್ಲಿ, ರಷ್ಯಾದ ನೃತ್ಯಗಾತಿಯರಾದ ಅನ್ನಾ ಪಾವ್ಲೋವಾ ಮತ್ತು ವಾಸ್ಲವ್ ನಿಜಿಂಸ್ಕಿ ಪ್ರಸಿದ್ಧಿಗೆ ಬಂದರು, ಮತ್ತು ಇಂಪ್ರೆಸಾರಿಯೊ ಸೆರ್ಗೆಯ್ ದಿಯಗಿಲೇವ್ ಮತ್ತು ಆತನ ಬ್ಯಾಲೆಟ್ಸ್ ರಸ್ಸೆಸ್ ನೃತ್ಯ ತಂಡ ವಿದೇಶದಲ್ಲೂ ಸಂಚರಿಸಿ ಜಗತ್ತಿನಾದ್ಯಂತ ನೃತ್ಯ ವಿಕಾಸನದ ಮೇಲೆ ಆಳವಾದ ಪ್ರಭಾವ ಬೀರಿತು. ಸೋವಿಯತ್ ಬ್ಯಾಲೆ 19ನೇ ಶತಮಾನದ ಸಂಪ್ರದಾಯಿಕ ನೃತ್ಯಗಳನ್ನು ಸಂರಕ್ಷಿಸಿತಲ್ಲದೆ, ಸೋವಿಯತ್ ಒಕ್ಕೂಟದ ನೃತ್ಯ ಶಾಲೆಗಳು ಒಬ್ಬರ ಹಿಂದೆ ಒಬ್ಬರಂತೆ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ನೀಡಿತು. ಮಯಾ ಪ್ಲಿಸೆಟ್ಸಕಾಯ, ರುಡಾಲ್ಪ್ ನುರೆಯೇವ್ ಮತ್ತು ಮಿಖಾಯಿಲ್ ಬಾರಿಶ್ನಿಕೋವ್ ಈ ಪೈಕಿ ಪ್ರಮುಖರು. ಮಾಸ್ಕೊದಲ್ಲಿರುವ ಬೊಲ್ಶೋಯಿ ಬ್ಯಾಲೆಟ್ ಮತ್ತು ಸೈಂಟ್ ಪೀಟರ್ಸ್ಬರ್ಗ್ ನಲ್ಲಿರುವ ಕಿರೋವ್ ಜಗತ್ತಿನಾದ್ಯಂತ ಪ್ರಖ್ಯಾತಿ ಪಡೆದಿದೆ. ಸಾಹಿತ್ಯ ಜಗತ್ತಿನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ರಷ್ಯನ್ ಸಾಹಿತ್ಯವನ್ನು ಜಗತ್ತಿನ ಅತ್ಯಂತ ಪ್ರಭಾವಿ ಮತ್ತು ಅಭಿವೃದ್ಧಿ ಹೊಂದಿದ ಸಾಹಿತ್ಯಗಳ ಪೈಕಿ ಒಂದೆಂದು ಪರಿಗಣಿಸಲಾಗಿದೆ. ರಷ್ಯಾದ ಸಾಹಿತ್ಯ ಇತಿಹಾಸ 10ನೇ ಶತಮಾನದಷ್ಟು ಹಿಂದಕ್ಕೆ ಸರಿಯುತ್ತದೆ. 19ನೇ ಶತಮಾನದಲ್ಲಿ ದೇಶೀಯ ಸಂಪ್ರದಾಯ ಬೆಳಕಿಗೆ ಬಂದಿತ್ತು. ಅಲ್ಲದೆ ಅದು ಸರ್ವಕಾಲೀಕ ಪ್ರಸಿದ್ಧ ಲೇಖಕರನ್ನೂ ಸೃಷ್ಟಿಸಿತು.ಆಧುನಿಕ ರಷ್ಯನ್ ಸಾಹಿತ್ಯದ ಜನಕ ಮತ್ತು ರಷ್ಯನ್ "ಶೇಕ್ಸ್ ಪೀಯರ್ " ಎಂದೇ ಖ್ಯಾತರಾದ ಅಲೆಕ್ಸಾಂಡರ್ ಪುಶ್ಕಿನ್ ಅವರೊಂದಿಗೆ ರಷ್ಯನ್ ಕಾವ್ಯದ ಸುವರ್ಣ ಯುಗ ಆರಂಭವಾಯಿತು. 19ನೇ ಶತಮಾನದ ಆಂಟನ್ ಚೆಕೋವ್, ಮಿಖಾಯಿಲ್ ಲೆರ್ಮೆಂಟೋವ್, ಲಿಯೋ ಟಾಲ್ ಸ್ಟಾಯ್, ನಿಕೊಲಯ್ ಗೊಗ್ಲ್/6}, ಇವಾನ್ ತುರ್ಗೆನೇವ್ ಮತ್ತು ಫ್ಯೋಡೊರ್ ದೊಸ್ತೊಯೋವ್ಸ್ಕಿಅವರ ಕಾಲದಲ್ಲೂ ಮುಂದುವರಿಯಿತು. ಇವಾನ್ ಗೊಂಚರೋವ್, ಮಿಖಾಯಿಲ್ ಸಾಲ್ಟಿಕೋವ್, ಅಲೆಕ್ಸೇ ಪಿಸೆಂಸ್ಕಿ, ನಿಕೊಲಾಯ್ ಲೆಸ್ಕೋವ್ ಅವರು ರಷ್ಯನ್ ಗದ್ಯ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ್ದಾರೆ. ಲೇಖಕರ ಪೈಕಿ ಟಾಲ್ ಸ್ಟಾಯ್ ಮತ್ತು ದೊಸ್ಟೊಯ್ ವಿಸ್ಕಿ ಶಿಖರಪ್ರಾಯರು. ಸಾಹಿತ್ಯ ಜಗತ್ತು ಕಂಡ ಸರ್ವಕಾಲೀಕ ಕಾದಂಬರಕಾರರು ಎಂದು ವಿಮರ್ಶಕರು ಇವರನ್ನು ಬಣ್ಣಿಸಿದ್ದಾರೆ. 1880ರ ವೇಳೆಗೆ ರಷ್ಯನ್ ಸಾಹಿತ್ಯ ಬದಲಾವಣೆಗಳನ್ನು ಕಾಣಲಾರಂಭಿಸಿತು. ಅದಾಗಲೇ ಪ್ರಸಿದ್ಧ ಕಾದಂಬರಿಕಾರರ ಕಾಲ ಮುಗಿದು ಹೋಗಿತ್ತು, ಮತ್ತು ಸಣ್ಣ ಕಥೆ ಮತ್ತು ಕವಿತೆಗಳೇ ರಷ್ಯನ್ ಸಾಹಿತ್ಯದ ಪ್ರಮುಖ ಪ್ರಕಾರವಾಗಿತ್ತು. ಅಲ್ಲದೆ ಅನೇಕ ದಶಕಗಳ ಕಾಲ ಈ ಪ್ರಕಾರ ರಷ್ಯನ್ ಸಾಹಿತ್ಯ ಜಗತ್ತನ್ನು ಆಳಿತು. ಈ ಕಾಲವನ್ನು ರಷ್ಯನ್ ಕಾವ್ಯದ ರಜತ ಪರ್ವ ಎಂದು ಕರೆಯಲಾಗಿದೆ. ರಷ್ಯನ್ ಸಾಹಿತ್ಯದ ಆರಂಭಿಕ ಹಂತದಲ್ಲಿ ವಾಸ್ತವವಾದವೇ ತುಂಬಿದ್ದರೆ, 1893 ಮತ್ತು 1914ರ ನಡುವೆ ಪ್ರತಿಮೆಗಳ ಮೂಲಕ ಭಾವನೆಗಳನ್ನು ಹೇಳುವ ಪ್ರತಿಮಾಪಂಥ ಆವರಿಸಿಕೊಂಡಿತು.ಆ ಕಾಲದ ಪ್ರಮುಖ ಲೇಖಕರೆಂದರೆ ವಾಲೆರಿ ಬ್ರ್ಯುಸೋವ್, ಆಂಡ್ರೇ ಬೆಲಿ, ವ್ಯಾಚೆಸ್ಲಾವ್ ಇವನೋವ್, ಅಲೆಕ್ಸಾಂಡರ್ ಬ್ಲಾಕ್, ನಿಕೊಲಾಯ್ ಗುಮಿಲೇವ್, ದಿತ್ರಿ ಮೆರೆಜ್ಕೋವಿಸ್ಕಿ, ಫ್ಯೋಡರ್ ಸೊಲೊಗುಬ್, ಅಣ್ಣಾ ಅಖ್ಮಾಟೋವಾ, ಒಸಿವ್ ಮಂಡೇಲ್ ಸ್ತಂ, ಮರಿನಾ ತ್ಸೆಟೆಯ್ವಾ, ಲಿಯೊನಿಡ್ ಆಂಡ್ರೆಯೆವ್, ಇವನ್ ಬುನಿನ್ ಮತ್ತು ಮಾಕ್ಸಿಂ ಗಾರ್ಕಿ. 1917ರ ರಷ್ಯಾ ಕ್ರಾಂತಿ ಮತ್ತು ಆ ನಂತರದ ಶೀತಲ ಸಮರದಿಂದಾಗಿ ರಷ್ಯಾದ ಸಾಂಸ್ಕೃತಿಕ ಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.ಈಗಾಗಲೇ ಪ್ರಸಿದ್ಧಿಗೆ ಬಂದಿರುವ ಲೇಖಕರು ಸೋವಿಯತ್ ಒಕ್ಕೂಟವನ್ನು ಬಿಟ್ಟು ಹೊರ ನಡೆದರೆ, ಕ್ರಾಂತಿಯ ಧೋರಣೆಗಳ ಬಗ್ಗೆ ಅನುಕಂಪವುಳ್ಳ ಹೊಸ ತಲೆಮಾರಿನ ಕೆಲವು ಪ್ರತಿಭಾವಂತ ಲೇಖಕರು ಉಳಿದುಕೊಂಡರು. ಈ ಪೈಕಿ ಕೆಲವು ಉತ್ಸಾಹಿಗಳು, ಹೊಸ ರಾಜ್ಯ ವ್ಯವಸ್ಥೆಗೆ ಅನುಕೂಲವಾಗುವಂತಹ ಹೊಸ ಮತ್ತು ಕಾರ್ಮಿಕ ವರ್ಗದ ಸಂಸ್ಕೃತಿ ಹುಟ್ಟು ಹಾಕುವ ಉದ್ದೇಶದಿಂದ ಲೇಖಕರ ಸಂಸ್ಥೆಗಳಿಗೆ ಸೇರಿಕೊಂಡರು. 1920ರ ಉದ್ದಕ್ಕೂ ಲೇಖಕರು ಸಹನೆಯಿಂದ ಸಾಹಿತ್ಯ ನಿರ್ಮಾಣದಲ್ಲಿ ತೊಡಗಿದ್ದರು.1930ರಲ್ಲಿ ಜೋಸೆಫ್ ಸ್ಟಾಲಿನ್ ನ ಸಮಾಜವಾದಿ ನಂಬಿಕೆಯ ತಳಹದಿಯಲ್ಲಿ ಸಾಹಿತ್ಯದ ಮೇಲಿದ್ದ ನಿರ್ಬಂಧಗಳು ಮತ್ತಷ್ಟು ಬಿಗಿಗೊಂಡವು.ಆತನ ಮರಣಾನಂತರ ಸೌಹಾರ್ದ ವಾತಾವರಣ ನಿರ್ಮಾಣವಾಯಿತು ಮತ್ತು ನಿಯಮಗಳೂ ಸಡಿಲವಾದವು.1970 ಮತ್ತು 1980ರ ವೇಳೆಗೆ ಸಮಾಜವಾದಿ ನಂಬಿಕೆಯ ನೀತಿ ನಿಯಮಗಳನ್ನು ನಿರ್ಲಕ್ಷಿಸುವ ಲೇಖಕರ ಸಂಖ್ಯೆ ಹೆಚ್ಚಿತು.ಸೋವಿಯತ್ ಯುಗದಲ್ಲಿದ್ದ ಪ್ರಮುಖ ಲೇಖಕರೆಂದರೆ ಯೆವ್ಗೆನಿ ಝಾಮ್ಯಂಟಿನ್, ಇಸಾಕ್ ಬಾಬೆಲ್ , ಇಲ್ಫ್ ಮತ್ತು ಪೆಟ್ರೋವ್, ಯುರಿ ಒಲೆಶಾ, ವ್ಸಾಡಿಮಿರ್ ನಬೊಕೋವ್, ಮಿಖಾಯಿಲ್ ಬುಲ್ಗಕೊವ್, ಬೋರಿಸ್ ಪಾಸ್ಟರ್ನಾಕ್, ಅಲೆಕ್ಸಾಂಡರ್ ಸೊಲ್ಜೆನಿಟ್ಸಿನ್, ವ್ಲಾಡಿಮಿರ್ ಮಾಯಕೊವಿಸ್ಕಿ, ಮಿಖಾಯಿಲ್ ಶೊಲೊಕೊವ್, ಯೆವ್ಗೆನಿ ಯೆವ್ತುಶೆಂಕೊ ಮತ್ತು ಆಂಡ್ರೇ ವೊಜ್ನೆಸೆಂಸ್ಕಿ. ಚಲನಚಿತ್ರ ಚಲನಚಿತ್ರಗಳು ಅಗ್ಗದ ಮನರಂಜನೆ ಮತ್ತು ಕಾರ್ಮಿಕರ ವಿರಾಮಕ್ಕೆಂದೇ ಇರುವುದೆಂದು ಪಶ್ಚಿಮದ ಕೈಗಾರಿಕೀಕರಣಗೊಂಡ ದೇಶಗಳು ಮೊದಲು ಒಪ್ಪಿಕೊಂಡಿದ್ದ ವೇಳೆ, ೧೯೧೭ರ ಕ್ರಾಂತಿಯ ಬೆನ್ನಿಗೇ ರಷ್ಯಾದ ಚಿತ್ರ ನಿರ್ಮಾಣ ಪ್ರಸಿದ್ಧಿಗೆ ಬಂತು. ಚಲನಚಿತ್ರಗಳಲ್ಲಿ ಅಭಿವ್ಯಕ್ತಿಯ ಪ್ರಕಟಣೆಗೆ ತಿದ್ದುವಿಕೆ ಪ್ರಕ್ರಿಯೆ ಮೊದಲ ಹೆಜ್ಜೆ ಎಂದು ರಷ್ಯಾ ತಿಳಿಸಿಕೊಟ್ಟಿದ್ದೂ ಇದಕ್ಕೆ ಪ್ರಮುಖ ಕಾರಣ. ೧೯೧೭ರ ಕ್ರಾಂತಿಯ ಬೆನ್ನಲ್ಲೇ ರಷ್ಯಾ ಮತ್ತು ಬಳಿಕ ಸೋವಿಯತ್ ಚಲನಚಿತ್ರಗಳು ಅವಿಷ್ಕಾರಗಳ ತವರು ಮನೆಯಾದವು. ಇದರಿಂದಾಗಿ ವಿಶ್ವ ವಿಖ್ಯಾತಿ ಪಡೆದ ಬ್ಯಾಟಲ್ ಶಿಪ್ ಪೋಟ್ ಮ್ಕಿನ್ ಚಲನಚಿತ್ರ ಹೊರಬಂತು. ಸೋವಿಯತ್-ಯುಗದ ಚಿತ್ರ ನಿರ್ಮಾಪಕರ ಪೈಕಿ ಪ್ರಮುಖವಾಗಿ ಸೆರ್ಗೆಯ್ ಐನ್ ಸ್ಟ್ಟೈನ್‌ಮತ್ತು ಆಂಡ್ರೇ ತಾರ್ಕೊವಿಸ್ಕಿ ಅವರು ಜಗತ್ತಿನ ಪ್ರಖ್ಯಾತ ಸೃಜನಶೀಲ ಮತ್ತು ಪ್ರಭಾವಿ ನಿರ್ದೇಶಕರಾಗಿ ಹೆಸರು ಪಡೆದರು. ಐನ್ ಸ್ಟೈನ್ ಕೂಡ ಚಿತ್ರ ನಿರ್ಮಾಪಕ ಹಾಗೂ ತಾತ್ವಿಕ ಸಿದ್ಧಾಂತಿ ಲೆವ್ ಕುಲೆಶೋವ್ ಅವರ ವಿದ್ಯಾರ್ಥಿ. ಮಾಸ್ಕೋದಲ್ಲಿರುವ ಜಗತ್ತಿನ ಮೊದಲ ಚಲನಚಿತ್ರ ಶಾಲೆ ರಷ್ಯಾ ಚಲನಚಿತ್ರ ಕಲೆ ಸಂಸ್ಥೆಯಲ್ಲಿ ತಿದ್ದುವಿಕೆ ಪ್ರಕ್ರಿಯೆಗೆ ಹೊಸ ಆಯಾಮವನ್ನೇ ನೀಡಿದ ಮಾಂಟೇಜ್ ಸೂತ್ರವನ್ನು ಪ್ರತಿಪಾದಿಸಿದ ಹೆಗ್ಗಳಿಕೆ ಕುಲೆಶೋವ್ ಅವರದ್ದು. ದ್ಜಿಗ ವೆರ್ಟೋವ್ ಅವರ ಕ್ಯಾಮೆರಾ ಕುರಿತ ಕಿನೊ-ಗ್ಲಾಸ್ ("ಚಲನಚಿತ್ರ-ಕಣ್ಣು")ಸಿದ್ದಾಂತ, ಚಲನಚಿತ್ರದ ದಿಕ್ಕನ್ನೇ ಬದಲಿಸಿತು. ಈ ಕ್ಯಾಮೆರಾ ಬಳಸಿ ನೈಜ ಜೀವನ ಕುರಿತ ನಡೆಸಿದ ಪರಿಶೋಧನಗಳು ಸಾಕ್ಷ್ಯಾಧಾರಿತ ಚಿತ್ರಗಳ ಅಭಿವೃದ್ಧಿ ಮತ್ತು ಚಲನಚಿತ್ರದ ವಾಸ್ತವತೆಯ ಮೇಲೆ ಭಾರಿ ಪರಿಣಾಮ ಬೀರಿದವು. ೧೯೩೨ರಲ್ಲಿ, ಸ್ಟಾಲಿನ್ ಸಮಾಜವಾದಿ ನಂಬಿಕೆಯನ್ನು ದೇಶದ ನೀತಿಯನ್ನಾಗಿ ಜಾರಿಗೆ ತಂದರು; ಇದು ಕ್ರಿಯಾಶೀಲತೆಗೆ ಕಡಿವಾಣ ಹಾಕಿದರೂ, ಈ ಅವಧಿಯಲ್ಲಿ ತೆರೆಕಂಡ ಚಪ್ಪೇವ್ , ದಿ ಕ್ರೇನ್ಸ್ ಆರ್ ಫ್ಲೈಯಿಂಗ್ ಮತ್ತು ಬಾಲ್ಲದ್ ಆಫ್ ಎ ಸೋಲ್ಜಿಯರ್ ಇತ್ಯಾದಿ ಅನೇಕ ಸೋವಿಯತ್ ಚಲನಚಿತ್ರಗಳು ಕಲಾತ್ಮಕವಾಗಿ ಯಶಸ್ಸು ಕಂಡಿವೆ. ಲಿಯೊನಿಡ್ ಗೈಡಾಯ್‌ಅವರ ಹಾಸ್ಯ ಚಿತ್ರಗಳು ೧೯೬೦ ಮತ್ತು ೧೯೭೦ರ ದಶಕದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದವು, ಅವುಗಳ ಕೆಲವು ಆಕರ್ಷಕ ಮಾತುಗಳನ್ನು ಇಂದೂ ಬಳಸಿಕೊಳ್ಳಲಾಗುತ್ತಿದೆ. ೧೯೬೯ರಲ್ಲಿ ವ್ಲಾಡಿಮಿರ್ ಮೊಟಿಲ್ ಅವರ ವೈಟ್ ಸನ್ ಆಫ್ ದಿ ಡೆಸರ್ಟ್ ಚಿತ್ರ ಬಿಡುಗಡೆಯಾಯಿತು, ಅಲ್ಲದೆ ಇದು ಒಸ್ಟರ್ನ್ ಎಂಬ ಹೊಸ ಪ್ರಕಾರಕ್ಕೆ ನಾಂದಿ ಹಾಡಿತು.ಗಗನಯಾತ್ರಿಗಳು ಕೂಡ ತಾವು ಬಾಹ್ಯಾಕಾಶಕ್ಕೆ ತೆರಳುವ ಮೊದಲು ಚಲನಚಿತ್ರ ವೀಕ್ಷಿಸುತ್ತಿದ್ದರು. ೧೯೮೦ರಿಂದ ೧೯೯೦ರವರೆಗಿನ ಅವಧಿಯನ್ನು ರಷ್ಯನ್ ಚಲನಚಿತ್ರದ ಬಿಕ್ಕಟ್ಟಿನ ಕಾಲವೆನ್ನಬಹುದು. ರಷ್ಯಾದ ಚಿತ್ರ ನಿರ್ಮಾಪಕರಿಗೆ ಮುಕ್ತವಾಗಿ ಹೇಳಿಕೊಳ್ಳುವ ಸ್ವಾತಂತ್ರ್ಯವಿದ್ದರೂ, ಸರ್ಕಾರದ ಅನುದಾನಗಳು ಗಣನೀಯವಾಗಿ ಇಳಿದ ಪರಿಣಾಮ, ಚಿತ್ರ ನಿರ್ಮಿಸುವವರ ಸಂಖ್ಯೆ ಕೂಡ ಇಳಿಮುಖಗೊಂಡಿತು. ೨೧ನೇ ಶತಮಾನದ ಆದಿಯಲ್ಲಿನ ಆರ್ಥಿಕ ಸುಧಾರಣೆಗಳಿಂದಾಗಿ ಚಲನಚಿತ್ರ ನೋಡುಗರ ಸಂಖ್ಯೆ ಹೆಚ್ಚಿದ್ದಲ್ಲದೆ, ಚಲನಚಿತ್ರ ಕ್ಷೇತ್ರವೂ ಅಭಿವೃದ್ಧಿ ಕಂಡಿತು, ಮತ್ತು ಚಿತ್ರ ನಿರ್ಮಾಣದಲ್ಲಿ ಅದಾಗಲೇ ಬ್ರಿಟನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿತ್ತು. ೨೦೦೭ರಲ್ಲಿ ರಷ್ಯಾಕ್ಕೆ ಚಲನಚಿತ್ರ ಕ್ಷೇತ್ರದಿಂದ ಬಂದ ಒಟ್ಟು ಆದಾಯ ೫೬೫ ದಶಲಕ್ಷ $. ಇದು ಹಿಂದಿನ ವರ್ಷಕ್ಕಿಂತ[ ೪೭% ರಷ್ಟು ಹೆಚ್ಚು.(ತುಲನೆ ಮಾಡಿ ನೋಡುವುದಿದ್ದಲ್ಲಿ ೧೯೯೬ರಲ್ಲಿ ಬಂದ ಆದಾಯ ೬ ದಶಲಕ್ಷ ಡಾಲರ್). ರಷ್ಯಾ ಚಲನಚಿತ್ರಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಸಿಗುವುದು ಮುಂದುವರಿದಿದೆ. ರಷ್ಯನ್ ಆರ್ಕ್ (೨೦೦೨) ಒಂದೇ ಟೇಕ್ ನಲ್ಲಿ ತೆಗೆದ ರಷ್ಯಾದ ಮೊದಲ ಚಲನಚಿತ್ರ. ಚಿತ್ರಕಲೆ ರಷ್ಯಾದ ಚಿತ್ರಕಲೆ ಆರಂಭಿಕ ಹಂತದಲ್ಲಿ ವಿಗ್ರಹ ಕಲೆ ಮತ್ತು ಬೈಝಾಂಟಿಯಂನಿಂದ ಪಾರಂಪರಿಕವಾಗಿ ಬಂದ ರೋಮಾಂಚಕ ಹಸಿಚಿತ್ರಗಳಲ್ಲಿ ಕೇಂದ್ರೀಕೃತವಾಗಿತ್ತು.ಮಾಸ್ಕೊ ಅಧಿಕಾರಕ್ಕೆ ಬರುತ್ತಿದ್ದಂತೆ, ಗ್ರೀಕಿನ ಥಿಯೋಪಾನ್ಸ್ ಮತ್ತು ಆಂಡ್ರೇ ರುಬ್ಲೇವ್ ಅವರ ಹೆಸರುಗಳು ಆರಂಭದಲ್ಲಿ ರಷ್ಯಾದ ಚಿತ್ರಕಲೆಯೊಂದಿಗೆ ಕೇಳಿ ಬಂದವು. ರಷ್ಯಾದ ಕಲಾವಿದರಿಗೆ ಅಂತರರಾಷ್ಟ್ರೀಯ ಪಾತ್ರ ಮತ್ತು ಸ್ಥಾನಮಾನ ಕೊಡುವ ನಿಟ್ಟಿನಲ್ಲಿ 1757ರಲ್ಲಿ ರಷ್ಯಾ ಕಲಾ ಅಕಾಡೆಮಿ ಸ್ಥಾಪನೆಯಾಯಿತು.ಇವಾನ್ ಅರ್ಗುನೋವ್, {{1}2}ಫ್ಯೋಡರ್ ರೊಕೊಟೊವ್, ದ್ಮಿಟ್ರಿ ಲೆವಿಜ್ಕಿ ಮತ್ತು ವ್ಲಾಡಿಮಿರ್ ಬೊರೊವಿಕೊವಿಸ್ಕಿ ಅಕಾಡೆಮಿಯ ಪ್ರಮುಖ ಭಾವಚಿತ್ರ ಕಲಾವಿದರಾಗಿದ್ದಾರೆ. 19ನೇ ಶತಮಾನದಲ್ಲಿ ವಾಸ್ತವವಾದ ಏಳಿಗೆ ಕಂಡಿತು ಮತ್ತು ರಷ್ಯಾದ ಅನನ್ಯತೆ ವಾಸ್ತವವಾದಿಗಳ ಪಾಲಾಯಿತು.ರಷ್ಯಾ ಭೂಪ್ರದೇಶದ ಅಗಲವಾದ ನದಿಗಳು, ಅರಣ್ಯ ಮತ್ತು ಬರ್ಚ್ ಮರಗಳು ಮಾಯವಾಗಿ ನಾಡಾದ ಕಾಡು, ಕ್ರಿಯಾಶೀಲ ಜನಜೀವನ, ಸಮಕಾಲೀನರ ಬೃಹತ್ ಭಾವ ಚಿತ್ರಗಳು ಆ ದೇಶದ ಗುರುತಿನ ಪ್ರತೀಕವಾಗಿವೆ.ಇತರ ಕಲಾವಿದರು ಸಾಮಾಜಿಕ ವಿಮರ್ಶೆ, ಬಡವರ ಸ್ಥಿತಿಗತಿಯ ಪ್ರತಿಪಾದನೆ ಮತ್ತು ಅಧಿಕಾರಶಾಹಿಗಳ ವಂಗ್ಯ ಚಿತ್ರ ಬಿಡಿಸುವುದಕ್ಕೆ ಗಮನ ಕೇಂದ್ರೀಕರಿಸಿದರು. ಆದರೆ 2ನೇ ಅಲೆಕ್ಸಾಂಡರ್ ನ ಆಳ್ವಿಕೆಯಲ್ಲಿ ವಿಮರ್ಶಾತ್ಮಕ ವಾಸ್ತವವಾದ ಏಳಿಗೆ ಕಂಡಿತು. 1861ರಲ್ಲಿ ಗುಲಾಮಗಿರಿಯನ್ನು ತೆಗೆದು ಹಾಕಿದ ಬಳಿಕ ಕೆಲವು ಕಲಾವಿದರು ಮಾನವನ ಸಂಕಷ್ಟಗಳ ಕುರಿತ ಚಿತ್ರಗಳನ್ನು ಬಿಡಿಸತೊಡಗಿದರು.ರಷ್ಯಾ ಇತಿಹಾಸದ ನಾಟಕೀಯ ಘಟನೆಗಳನ್ನು ಹೇಳುವ ಬೃಹತ್ ಕಲಾಕೃತಿಗಳನ್ನು ಕಲಾವಿದರು ರಚಿಸಿದ್ದೂ ಉಂಟು.ಪೆರಿದ್ವಿಜಿನಿಕಿ ನೇತೃತ್ವದ (ಅಲೆಮಾರಿಗಳು) ಕಲಾವಿದರ ಗುಂಪು ರಷ್ಯಾ ಅಕಾಡೆಮಿಯಿಂದ ಹೊರಬಂದು, ಅಕಾಡೆಮಿ ನಿಯಮಗಳಿಂದ ಮುಕ್ತವಾದ ಕಲಾ ಶಾಲೆಯನ್ನು ಸ್ಥಾಪಿಸಿತು. ಅವರ ಚಿತ್ರಗಳಲ್ಲಿ ಆಳವಾದ ಸಾಮಾಜಿಕ ಮತ್ತು ರಾಜಕೀಯ ತುಡಿತವಿತ್ತು.ಈ ಅವಧಿಯಲ್ಲಿ ಮುನ್ನಡೆಯಲ್ಲಿದ್ದ ವಾಸ್ತವವಾದಿಗಳೆಂದರೆ ಇವಾನ್ ಶಿಂಶ್ಕಿನ್, ಅರ್ಕಿಪ್ ಕ್ಯುಂದಿಜಿ, ಇವಾನ್ ಕ್ರಾಮೋಸ್ಕಿ, ವಾಸಿಲಿ ಪೊಲೆನೋವ್, ಇಸಾಕ್ ಲೆವಿಟಾನ್, ವಾಸಿಲಿ ಸುರಿಕೋವ್, ವಿಕ್ಟರ್ ವಾಸ್ನೆಟೋವ್, ಇಲ್ಯಾ ರೆಪಿನ್. 1830ರ ಹೊತ್ತಿಗೆ ಅಕಾಡೆಮಿಗಳು ಕಲಾಕಾರರನ್ನು ಅಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸಲು ಆರಂಭಿಸಿದ್ದವು. ಹುಟ್ಟು ಪ್ರತಿಭೆಗಳೆಂದರೆ ಅಲೆಕ್ಸಾಂಡರ್ ಇವನೋವ್ ಮತ್ತು ಕಾರ್ಲ್ ಬ್ರುಲೋವ್, ಇವರಿಬ್ಬರು ಚಾರಿತ್ರಿಕ ಪ್ರೇಮಕತೆಗಳನ್ನು ಬಿಡಿಸುವುದರಲ್ಲಿ ನಿಷ್ಣಾತರಾಗಿದ್ದರು. 19ನೇ ಶತಮಾನದ ಕೊನೆಯಾರ್ಧದಲ್ಲಿ ರಷ್ಯಾದ ಅಪೂರ್ವ ಕಲಾ ಪ್ರಕಾರಗಳು ಬೆಳಕಿಗೆ ಬಂದವು ಅಲ್ಲದೆ ಅವು ರಷ್ಯಾ ಸಮಾಜದ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾದವು. ರಷ್ಯಾದ ಅವಂತ್-ಗಾರ್ಡ್ ಕೊಡೆಗೆ ಸಂಬಂಧಿಸಿದ ಪದ, ಇದಕ್ಕೆ ಬೃಹತ್ ಅಥವಾ ದೊಡ್ಡದು ಎಂಬರ್ಥವಿದೆ. 1890 ರಿಂದ 1930ರ ಅಂದಾಜು ಆಧುನಿಕ ಕಲಾ ಪ್ರಕಾರದ ಪ್ರಭಾವಿ ಅಲೆ ರಷ್ಯಾದಲ್ಲಿ ಏಳಿಗೆ ಕಂಡಿತು. ಪ್ರತ್ಯೇಕ, ಆದರೆ ತಪ್ಪಿಸಿಕೊಳ್ಳಲಾಗದ, ಆ ಕಾಲದ ಕಲೆಯ ಪ್ರಗತಿ ಈ ಪದದ ಅರ್ಥ; ಹೆಸರಿಸುವುದಿದ್ದರೆ ಹೊಸ ಅನುಕರಣೆ, ಪರಮಾಧಿಕಾರ, ರಚನಾತ್ಮಕತೆ, ಚಿತ್ತಗ್ರಾಹ್ಯ ಕಲೆ, ಭವಿಷ್ಯದ್ವಾದ.ಸೋವಿಯತ್ ಯುಗದ ಪ್ರಮುಖ ಕಲಾವಿದರ ಪೈಕಿ ಕೇಳಿ ಬರುವ ಹೆಸರುಗಳು; ಎಲ್ ಲಿಸ್ಸಿಟ್ಜಸ್ಕಿ, ಕಾಜಿಮಿರ್ ಮಾಲೆವಿಚ್, ವೇಸ್ಸಿಲಿ ಕಂಡಿನ್ಸ್ಕಿ , ವ್ಲಾಡಿಮಿರ್ ಟಾಟ್ಲಿನ್ , ಅಲೆಕ್ಸಾಂಡರ್ ರೋಡ್ಚೆಂಕೊ ಮತ್ತು ಮಾರ್ಕ್ ಚಾಗಲ್ . 1932 ಮತ್ತು 1917ರ ರಷ್ಯಾ ಕ್ರಾಂತಿಯ ಅವಧಿಯಲ್ಲಿ ಹೊಸತನ ತಂದವರ ಗುಂಪು ಕ್ರೀಯಾಶೀಲವಾಗಿತ್ತು ಮತ್ತು ಅವು ಜನಪ್ರಿಯತೆಯ ಉತ್ತುಂಗ ತಲುಪಿದ್ದವು. ಈ ಸಂದರ್ಭದಲ್ಲಿ ಹೊಸತನ ತಂದವರ ಗುಂಪಿನ ಕಲ್ಪನೆಗಳ ಜೊತೆ, ಹೊಸದಾಗಿ ಅಸ್ತಿತ್ವ ಕಂಡುಕೊಂಡ ಸಾಂಪ್ರದಾಯಿಕ ಸ್ಟಾಲಿನ್ ಪ್ರತಿಪಾದಿಸಿದ ಸಾಮಾಜಿಕ ನಂಬಿಕೆ ಯ ನಿಲುವುಗಳ ನಡುವೆ ಘರ್ಷಣೆ ಸಂಭವಿಸಿತು. 1920ರ ದಶಕದಲ್ಲಿ ಸಾಹಿತ್ಯ ಮತ್ತು ಚಲನಚಿತ್ರಗಳ ಮೇಲೆ ಸಾಮಾಜಿಕ ನಂಬಿಕೆಯ ಕಠಿಣ ನೀತಿ ಪರಿಣಾಮ ಬೀರಿದಂತೆ ಚಿತ್ರಕಲೆಯ ಮೇಲೂ ತನ್ನ ಪ್ರಭಾವ ಬೀರಿತು. ಇದರಿಂದಾಗಿ ಹೊಸತನ ತಂದವರು ತೆರೆಮರೆಗೆ ಸರಿದರು.ಸಾಮಾಜಿಕ ನಂಬಿಕೆಯಲ್ಲೂ ಹೊಸತನ ತಂದವರಲ್ಲಿ ಎರ್ನೆಸ್ಟ್ ನೈಜ್ವೆಸ್ಟ್ನಿ, ಇಲ್ಯಾ ಕವಕೋವ್, ಮಿಖಾಯಿಲ್ ಶೆಮ್ಯಾಕಿನ್, ಎರಿಕ್ ಬುಲಟೋವ್‌ಮತ್ತು ವೆರಾ ಮುಖಿನಾಪ್ರಮುಖರು.ಅವರಲ್ಲಿ ಅನುಕರಣೆ, ಅತಿ ವ್ಯಾವಹಾರಿಕತೆ, ವಿಚಿತ್ರ ವರ್ತನೆ, ಪ್ರತ್ಯೇಕತೆ ಮನೋಭಾವನೆಗಳಿದ್ದರೂ ಸಾಮಾಜಿಕ ನಂಬಿಕೆಯಲ್ಲಿರುವ ಕಾನೂನು, ಕಟ್ಟಳೆಗಳು ಅವರಿಗೆ ಅಸಹ್ಯ ಹುಟ್ಟಿಸುತ್ತಿದ್ದವು. 1940ರಲ್ಲಿ ಸೋವಿಯತ್ ಕಲಾವಿದರು ಚಿತ್ರಿಸಿದ ಚಿತ್ರಗಳಲ್ಲಿ ದೇಶಪ್ರೇಮ ಹಾಸುಹೊಕ್ಕಾಗಿದ್ದು, ಬಲ ಪಂಥೀಯ ಉಗ್ರವಾದ ವಿರೋಧಿ ನಿಲುವೂ ಇದಲ್ಲಿ ಅಡಕವಾಗಿತ್ತು.ಪ್ರಸಿದ್ಧ ಮಹಾ ಸಮರದ ಘಟನೆಗಳು ಮತ್ತು ಕದನಗಳನ್ನು ದೇಶಪ್ರೇಮ ಉಕ್ಕಿಸುವ ರೀತಿಯಲ್ಲಿ ಚಿತ್ರಿಸಲಾಗಿದೆ ಮತ್ತು ಸಮರಾನಂತರ ಶಿಲ್ಪಿಗಳು ಹುತಾತ್ಮರ ನೆನಪಿನಲ್ಲಿ ಪ್ರತಿಮೆಗಳನ್ನು ಕೆತ್ತಿದ್ದಾರೆ. ಅವುಗಳ ಪೈಕಿ ಹುತಾತ್ಮರು ತೋರಿದ ಪ್ರತಿರೋಧ, ಶೌರ್ಯ ಸಾಹಸಗಳನ್ನು ಮನಮುಟ್ಟುವಂತೆ ಹೇಳುವ ಚಿತ್ರಗಳು ಪ್ರಸಿದ್ಧಿ ಪಡೆದಿವೆ. 20ನೇ ಶತಮಾನದಲ್ಲಿ ನಡೆದ ಕ್ರಾಂತಿಯ ಪರಿಣಾಮ ರಷ್ಯಾದ ಅನೇಕ ಕಲಾವಿದರು ಪಶ್ಚಿಮ ಯುರೋಪ್ ಗೆ ವಲಸೆ ಬಂದು ವೃತ್ತಿ ಜೀವನ ನಡೆಸಿದರು.ರಷ್ಯಾ ಕಲಾವಿದರಾದ ವಾಸ್ಸಿಲಿ ಕಾಂಡಿನ್ ಸ್ಕಿ, ಮಾರ್ಕ್ ಚಾಗಲ್, ಮತ್ತು ನೌಮ್ ಗಾಬೊ ತಮ್ಮ ಚಿತ್ರಕಲೆ ಮತ್ತು ಕಲ್ಪನೆಗಳನ್ನು ಜಗತ್ತಿನಾದ್ಯಂತ ಪಸರಿಸಿದ್ದಾರೆ. ಪ್ಯಾರಿಸ್ ಮತ್ತು ಮುನಿಚ್ ನಲ್ಲಿ ಅಭ್ಯಾಸ ಮಾಡಿದ್ದ ರಷ್ಯಾ ಕಲಾವಿದರು ತೆರೆಮರೆಯಲ್ಲೇ ಉಳಿದದ್ದು ರಷ್ಯಾ ಮತ್ತು ಜಾಗತಿಕ ಚಿತ್ರಕಲೆ ಮೇಲೆ ಪರಿಣಾಮ ಬೀರಿತ್ತು. ಕ್ರೀಡೆ ] ರಷ್ಯಾದ ಕ್ರೀಡಾಪಟುಗಳು ಹಲವು ಕ್ರೀಡೆಗಳಲ್ಲಿ ಯಶಸ್ಸು ಪಡೆಯುತ್ತಾ ಬಂದಿದ್ದು ಮತ್ತು ಒಲಿಂಪಿಕ್ ಮತ್ತು ಇತರೇ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅಗ್ರಸ್ಥಾನ ಪಡೆದು ಸ್ಥಿರತೆ ಕಾಯ್ದುಕೊಂಡಿದ್ದಾರೆ. ಸೋವಿಯತ್ ಯುಗದಲ್ಲಿ, ರಾಷ್ಟ್ರೀಯ ಒಲಿಂಪಿಕ್ ತಂಡ ತಾನು ಪಾಲ್ಗೊಂಡ 18 ಸ್ಪರ್ಧೆಗಳಲ್ಲಿ 14ರಲ್ಲಿ ಗೆದ್ದು ಪದಕ ಗೆದ್ದುಕೊಂಡಿತ್ತು; ಇದರಿಂದಾಗಿ USSR ಅಂದು ಒಲಿಂಪಿಕ್ ಕ್ರೀಡಾಕೂಟದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು.1952ರ ಒಲಿಂಪಿಕ್ ಪಂದ್ಯಾವಳಿಯಿಂದ ಆರಂಭವಾಗಿ, ಬೇಸಿಗೆ ಒಲಿಂಪಿಕ್ ಕ್ರೀಡಾಕೂಟಗಳಲ್ಲೂ ರಷ್ಯಾದ ಕ್ರೀಡಾಪಟುಗಳು ಸದಾ ಹೆಚ್ಚು ಚಿನ್ನದ ಪದಕ ಗೆದ್ದ ದೇಶಗಳ ಪೈಕಿ ಮೊದಲ 3 ಸ್ಥಾನದಲ್ಲಿದ್ದಾರೆ. ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಸೋವಿಯತ್ ನ ಜಿಮ್ನಾಸ್ಟ್ ಪಟುಗಳು, ಟ್ರಾಕ್ ಮತ್ತು ಫೀಲ್ಡ್ ಕ್ರೀಡಾಳುಗಳು, ವೈಟ್ ಲಿಫ್ಟರ್ ಗಳು, ಕುಸ್ತಿ ಪಟುಗಳು, ಕ್ರಾಸ್ ಕಂಟ್ರಿ ಸ್ಕೈಯರ್ಸ್ ಮತ್ತ ಬಾಕ್ಸರ್ ಗಳು ಜಗತ್ತಿನಲ್ಲೇ ಅತ್ಯತ್ತುಮ ಕ್ರೀಡಾಳುಗಳೆನಿಸಿಕೊಂಡಿದ್ದಾರೆ, ಅಲ್ಲದೆ ಸೋವಿಯತ್ ಒಕ್ಕೂಟದ ಪತನದ ನಂತರವೂ ರಷ್ಯಾದ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಮಾಸ್ಕೋದಲ್ಲಿ 1980 ಬೇಸಿಗೆ ಒಲಿಂಪಿಕ್ ನಡೆದಿದ್ದರೆ, 2014ರ ಚಳಿಗಾಲದ ಒಲಿಪಿಂಕ್ ನ ಆತಿಥ್ಯವನ್ನು ಸೋಚಿ ವಹಿಸಲಿದೆ. ಅನೇಕ ಒಲಿಪಿಂಕ್ ಕ್ರೀಡಾಕೂಟಗಳು, ವಿಶ್ವ ಚಾಂಪಿಯನ್ ಶಿಪ್ ಮತ್ತು ಯುರೋ ಬಾಸ್ಕೆಟ್ ಗೆದ್ದುಕೊಂಡಿರುವ ರಷ್ಯಾ ಮತ್ತು ಸೋವಿಯತ್ ಒಕ್ಕೂಟ ಬಾಸ್ಕೆಟ್ ಬಾಲ್ ತಂಡ ಸಾಂಪ್ರದಾಯಿಕವಾಗಿ ಅತ್ಯಂತ ಬಲಿಷ್ಠ ತಂಡ. 2009ರವರೆಗೆ ತಂಡದಲ್ಲಿ NBA ಅನೇಕ ಆಟಗಾರರಿದ್ದರು, ಪ್ರಮುಖವಾಗಿ ಉತಾಹ್ ಜಾಜ್ , ಮುನ್ನಡೆ ಆಟಗಾರ ಆಂಡ್ರಿ ಕಿರಿಲೆಂಕೊ. ಇವರು ಬಾಸ್ಕೆಟ್ ಬಾಲ್ ಆಟದಲ್ಲಿ ಇಡೀ ಜಗತ್ತಿಗೆ ಚಿರಪರಿಚಿತ. 2007ರಲ್ಲಿ, ರಷ್ಯಾ ತಂಡ ವಿಶ್ವ ಚಾಂಪಿಯನ್ ಸ್ಪೇನ್ ತಂಡವನ್ನು ಸೋಲಿಸಿ Eurobasket 2007 ಅನ್ನು ಗೆದ್ದುಕೊಂಡಿತು.ರಷ್ಯಾ ಬಾಸ್ಕೆಟ್ ಬಾಲ್ ಕ್ಲಬ್ ಗಳಾದ PBC CSKA ಮಾಸ್ಕೋ (2006 ಮತ್ತು 2008 ಯುರೋ ಲೀಗ್ ಚಾಂಪಿಯನ್) ಯುರೋಪ್ ಪಂದ್ಯಾವಳಿಗಳಾದ ಯುರೋ ಲೀಗ್ ಮತ್ತು ULEB CupULEB ಕಪ್ ನಲ್ಲಿ ಭಾರಿ ಯಶಸ್ಸು ಕಂಡಿವೆ. ಸೋವಿಯತ್ ಅವಧಿಯಲ್ಲಿ, ಸ್ಪರ್ಧಾತ್ಮಕ ಪುಟ್ಬಾಲ್ ಆಡುವ ದೇಶವಾಗಿದ್ದ ರಷ್ಯಾ, ಅನೇಕ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಫೈನಲ್ ತಲುಪಿತ್ತು.ಐಸ್ ಹಾಕಿ ಮತ್ತು ಬಾಸ್ಕೆಟ್ ಬಾಲ್ ಜೊತೆಗೆ, ಇಂದು ಫುಟ್ಬಾಲ್ ಕೂಡ ರಷ್ಯಾದಲ್ಲಿ ಜನಪ್ರಿಯ ಕ್ರೀಡೆ. USSR ಅತ್ಯುತ್ತಮ ಆಟಗಾರರನ್ನು ಹೊಂದಿದ್ದೂ, ಅನೇಕ ಚಾಂಪಿಯನ್ ಶಿಪ್ ಗಳನ್ನು ಗೆದ್ದುಕೊಂಡಿದ್ದರೂ(ಯುರೋ 1960)ಮತ್ತು ಹಲವು ಪಂದ್ಯಗಳಲ್ಲಿ ಫೈನಲ್ ತಲುಪಿಯೂ (ಯುರೋ 1988) ಅಂತರರಾಷ್ಟ್ರೀಯ ಪುಟ್ಬಾಲ್ ನಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಿರಲಿಲ್ಲ.1991ರ ವಿಭಜನೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದ ರಷ್ಯಾ ಫುಟ್ಬಾಲ್ ಇದೀಗ ನಿಧಾನವಾಗಿ ಪುನರುಜ್ಜೀವನ ಪಡೆಯುತ್ತಿದೆ.ರಷ್ಯಾ ಕ್ಲಬ್ ಗಳ ಪೈಕಿ(CSKA ಮಾಸ್ಕೊ,ಝೆನಿಟ್ ಸೈಂಟ್ ಪೀಟರ್ಸ್ಬರ್ಗ್, ಲೊಕೊಮೇಟಿವ್ ಮಾಸ್ಕೋ ಮತ್ತು ಸ್ಪಾರ್ಟಕ್ ಮಾಸ್ಕೊ- ಒಂಭತ್ತು ಬಾರಿಯ ಚಾಂಪಿಯನ್ ರಷ್ಯಾ) ಯುರೋಪ್ ಪಂದ್ಯಾವಳಿಗಳಲ್ಲಿ (CSKA ಮತ್ತು ಝೆನಿಟ್ UEFA 2005 ಮತ್ತು 2008) ಈಚೆಗೆ ಹೆಚ್ಚಾಗಿ ಯಶಸ್ಸು ಕಾಣುತ್ತಿವೆ. ರಷ್ಯಾದಲ್ಲಿ ಸಾಕಷ್ಟು ಫುಟ್ಬಾಲ್ ಪ್ರತಿಭೆಗಳಿರುವ ಹಿನ್ನೆಲೆಯಲ್ಲಿ (ಯುರೋ 2008 ಪಂದ್ಯಾವಳಿಯಲ್ಲಿ ಕಾಣಬಹುದು)ರಷ್ಯಾ ಲೀಗ್ ಯುರೋಪಿನಲ್ಲೇ ಬಲಿಷ್ಠವಾಗುವ ದಿನ ದೂರವಿಲ್ಲ ಎಂದು ಈಗಾಗಲೇ ಅನೇಕರು ಭವಿಷ್ಯ ನುಡಿದಿದ್ದಾರೆ, ಅಲ್ಲದೆ ಫುಟ್ಬಾಲ್ ಕ್ರೀಡೆಗೆ ರಷ್ಯಾ ಗಂಭೀರವಾಗಿ ಹಣ ತೊಡಗಿಸಿರುವುದೂ ಇದಕ್ಕೆ ಒಂದು ಕಾರಣ, ಇದರಿಂದಾಗಿ ಪ್ರಮುಖ ವಿದೇಶಿ ಆಟಗಾರರು ಆಕರ್ಷಿತರಾಗುತ್ತಿದ್ದಾರೆ. ಯುರೋ 2008ರ ಸೆಮಿಫೈನಲ್ಸ್ ಪಂದ್ಯದಲ್ಲಿ ಸ್ಪೇನ್ ಗೆ ಶರಣಾದ ರಷ್ಯಾ ರಾಷ್ಟ್ರೀಯ ಫುಟ್ಬಾಲ್ ತಂಡ, ಡಚ್ ವ್ಯವಸ್ಥಾಪಕ ಗುಸ್ ಹಿಡಿಂಕ್ ಮಾರ್ಗದರ್ಶನದಲ್ಲಿ ಅಂತರರಾಷ್ಟ್ರೀಯವಾಗಿ ಪ್ರಬಲ ಶಕ್ತಿಯಾಗಿ ಮತ್ತೆ ವೇಗದಿಂದ ಬೆಳೆಯುತ್ತಿದೆ. ಸೋವಿಯತ್ ಯುಗದಲ್ಲೇ ಐಸ್ ಹಾಕಿಯನ್ನು ಪರಿಚಯಿಸಲಾಗಿತ್ತಾದರೂ, ರಷ್ಯಾ ತಂಡ ಸ್ಪರ್ಧಿಸಿದ ಎಲ್ಲಾ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಶಿಪ್ ಗಳಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಅಂತರರಾಷ್ಟ್ರೀಯವಾಗಿ ಪಾರಮ್ಯ ಸಾಧಿಸಿತ್ತು.ಸೋವಿಯತ್ ಒಕ್ಕೂಟ ವಿಭಜನೆಯಾದ ನಂತರ ರಷ್ಯಾಕ್ಕೆ 15 ವರ್ಷಗಳ ಕಾಲ ಚಿನ್ನ ಗೆಲ್ಲಲಾಗಲಿಲ್ಲ. ಇದರಿಂದಾಗಿ ಇತರ ಕ್ರೀಡೆಗಳಂತೆ ರಷ್ಯಾದ ಐಸ್ ಹಾಕಿಗೂ ಹಿನ್ನಡೆಯಾಗಿತ್ತು.ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಮತ್ತೆ ಪ್ರಬಲ ಹಾಕಿ ಶಕ್ತಿಯಾಗಿ ಬೆಳೆಯುತ್ತಿದ್ದಾರೆ,2008 ಮತ್ತು 2009 ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಒಂದರ ಮೇಲೊಂದು ಚಿನ್ನದ ಪದಕ ಗೆದ್ದುಕೊಂಡು, ಐಸ್ ಹಾಕಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಕೆನಡಾವನ್ನು ಹಿಂದಿಕ್ಕಿದ್ದಾರೆ. ಫಿಗರ್ ಸ್ಕೇಟಿಂಗ್ ಇನ್ನೊಂದು ಜನಪ್ರಿಯ ಕ್ರೀಡೆ; 1960ರಲ್ಲಿ, ಸೋವಿಯತ್ ಒಕ್ಕೂಟ ಫಿಗರ್ ಸ್ಕೇಟಿಂಗ್ ನಲ್ಲಿ, ಅದರಲ್ಲೂ ಜೋಡಿ ಸ್ಕೇಟಿಂಗ್ ಮತ್ತು ಐಸ್ ನೃತ್ಯದಲ್ಲಿ ಪ್ರಬಲ ಶಕ್ತಿಯಾಗಿ ಬೆಳೆಯಿತು. 1964ರಿಂದ ಈವರೆಗೆ ಪ್ರತಿ ಚಳಿಗಾಲದ ಒಲಿಂಪಿಕ್ ನಲ್ಲೂ, ಸೋವಿಯತ್ ಅಥವಾ ರಷ್ಯಾದ ಜೋಡಿಗಳು ಆಗಾಗ್ಗೆ ಚಿನ್ನವನ್ನು ಗೆಲ್ಲುತ್ತಾ ಬಂದಿದ್ದಾರೆ, ಆಧುನಿಕ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಅಜೇಯವಾಗಿ ಉಳಿದ ಹೆಗ್ಗಳಿಕೆಯೂ ಅವರದ್ದು.ಸೋವಿಯತ್ ಯುಗದ ಅಂತ್ಯವಾಗುತ್ತಿದ್ದಂತೆಯೇ, ಟೆನಿಸ್ ಕೂಡ ಜನಪ್ರಿಯಗೊಳ್ಳುತ್ತಾ ಬಂತು ಮತ್ತು ರಷ್ಯಾ ಸಾಕಷ್ಟು ಖ್ಯಾತ ಟೆನಿಸ್ ಆಟಗಾರರನ್ನು ಸೃಷ್ಟಿಸಿದೆ.ಹಿಂದಿನಿಂದಲೂ ಚೆಸ್ ಕೂಡ ಸಾಕಷ್ಟು ಪ್ರಸಿದ್ಧಿಯಲ್ಲಿತ್ತು; 1927ರಿಂದ ಸೋವಿಯತ್ ಮತ್ತು ರಷ್ಯಾದ ಚೆಸ್ ಗ್ರಾಂಡ್ ಮಾಸ್ಟರ್ ಗಳು ಸತತವಾಗಿ ವಿಶ್ವ ಚಾಂಪಿಯನ್ ಶಿಪ್ ಗೆದ್ದುಕೊಂಡಿದ್ದಾರೆ. ರಷ್ಯಾ ವಿಶ್ವ ಹೆವಿವೈಟ್ ಚಾಂಪಿಯನ್ ಗಳ ಮನೆಯೂ ಹೌದು. ರಷ್ಯಾದ ಫೆಡರ್ ಎಮಿಲಿಯಾನೆಂಕೊ (Фёдор Владимирович Емельяненко)ಸುಮಾರು ದಶಕದ ಕಾಲ MMA(ಮಿಶ್ರ ಮಾರ್ಷಲ್ ಆರ್ಟ್ಸ್ )ಕಿರೀಟ ಧರಿಸಿದ್ದ ಮತ್ತು ಆತನಿಗೆ ಎಂಎಂಎ ಇತಿಹಾಸ ಕಂಡ ಅತ್ಯುತ್ತಮ ಹೋರಾಟಗಾರ ಎಂಬ ಖ್ಯಾತಿಯಿದೆ.ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಫೆಡರ್ ಪ್ರತಿಸ್ಪರ್ಧಿಗಳನ್ನು ಗೌರವಿಸುವುದಕ್ಕೂ ಹೆಸರುವಾಸಿ, 2008 ಬೀಜಿಂಗ್ ಬೇಸಿಗೆ ಒಲಂಪಿಕ್ಸ್ ನಲ್ಲಿ ದೇಶದ ಪರವಾಗಿ ಒಲಿಂಪಿಕ್ ಜ್ಯೋತಿಯನ್ನು ಕೊಂಡೊಯ್ಯಲು ಅವರನ್ನು ಕೇಳಿಕೊಳ್ಳಲಾಗಿತ್ತು. ಜಾಗತಿಕ ನಿರ್ವಹಣೆ ಸವಾಲು ಎಪ್ರಿಲ್ 2009 ರಂದು ಲಿಸ್ಬನ್ನಿನಲ್ಲಿ ನಡೆದ ಜಾಗತಿಕ ನಿರ್ವಹಣೆ ಸವಾಲು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಜಯಿಯಾಗಿರುವ ರಷ್ಯಾ, ಜಾಗತಿಕ ನಿರ್ವಹಣೆ ಸವಾಲಿನಲ್ಲಿ ಹಾಲಿ ವಿಶ್ವ ಚಾಂಪಿಯನ್. ಆಕರಗಳು ಹೊರಗಿನ ಕೊಂಡಿಗಳು Rsnet.ru —ಅಧಿಕೃತ ಸರ್ಕಾರಿ ಜಾಲತಾಣ ಡುಮಾ —ಸಾಂಸದಿಕ ಕೆಳಸದನದ ಅಧಿಕೃತ ಜಾಲತಾಣ ಸಂಯುಕ್ತ ಪರಿಷತ್ತು—ಸಾಂಸದಿಕ ಮೇಲ್ಸದನದ ಅಧಿಕೃತ ಜಾಲತಾಣ ಕ್ರೆಮ್ಲಿನ್—ಅಧ್ಯಕ್ಷರ ಅಧಿಕೃತ ಜಾಲತಾಣ ಅಧ್ಯಕ್ಷರು ಮತ್ತು ಸಂಪುಟ ಸದಸ್ಯರು ರಷ್ಯಾ ಕೇಂದ್ರೀಯ ಬ್ಯಾಂಕ್ ರಷ್ಯಾ ಸಂಯುಕ್ತ ಸುಂಕದ ಖಾತಾ ಸೇವಾ ಓಜಸ್ಸು ಮಾಹಿತಿ ಆಡಳಿತದಿಂದ ರಷ್ಯಾಗೆ ಓಜಸ್ಸಿನ ಅಂಕಿ-ಅಂಶಗಳು ರಷ್ಯಾದ ರಾಷ್ಟ್ರೀಯ ಸಮೂಹ—ರಷ್ಯಾದ ಅಧಿಕೃತ ಪರ್ಯಟನ ಮಾರ್ಗದರ್ಶಿ RussianEmpireCruises —ರಷ್ಯಾದ ಅಧಿಕೃತ ಕಡಲಯಾನ ಸೇವೆ Volga river cruises in Russia—ರಾಷ್ಟ್ರೀಯ ನದಿ ಕಡಲಯಾನ ಸೇವೆ ರಷ್ಯಾದ ವಾರ್ತಾ ನಿಯೋಗ ರಿಯಾ ನೊವೊಸ್ಟಿ ಇತರೆ Interfax.com—ಇಂಟರ್‌ಫ್ಯಾಕ್ಸ್‌ - ಮಾಸ್ಕೋದಲ್ಲಿರುವ ವಾರ್ತಾ ನಿಯೋಗ ರಷ್ಯಾ ಕಡೆಗೆ ಮಾರ್ಗ. ರಷ್ಯಾ ಮತ್ತು ರಷ್ಯಾದ ಜನತೆಯ ಪರಿಚಯ RussGUS —ರಷ್ಯಾ ಬಗೆಗಿನ ಜರ್ಮನ್ ಪ್ರಕಾಶನಗಳ ಗ್ರಂಥ ವೈಜ್ಞಾನಿಕ ದತ್ತ ಮಾಹಿತಿ (ಸುಮಾರು 175,000 ಸ್ಥಾನಗಳು) ಇಂಗ್ಲಿಷ್ ರಷ್ಯಾ – ಭೂಮಿಯ ಮೇಲ್ಮೈಯ 1/6ರಷ್ಟು ಭಾಗದಲ್ಲಿ ಪ್ರತಿದಿನ ಏನಾದರೊಂದು ತಂಪಾಗಿರುವುದು ಸಂಭವಿಸುತ್ತದಲ್ಲ, ಅದಕ್ಕೆ pnt:Ρουσία ಪೂರ್ವ ಯುರೋಪ್ ಸೋವಿಯಟ್ ಒಕ್ಕೂಟ
2239
https://kn.wikipedia.org/wiki/%E0%B2%AA%E0%B3%8B%E0%B2%B0%E0%B3%8D%E0%B2%9F%E0%B3%8D%20%E0%B2%AC%E0%B3%8D%E0%B2%B2%E0%B3%87%E0%B2%B0%E0%B3%8D
ಪೋರ್ಟ್ ಬ್ಲೇರ್
ಪೋರ್ಟ್ ಬ್ಲೇರ್ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ರಾಜಧಾನಿ. ಇದು ದಕ್ಷಿಣ ಅಂಡಮಾನ್ ದ್ವೀಪದಲ್ಲಿದೆ. ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಹೆಬ್ಬಾಗಿಲಿನಂತಿದೆ. ಇಲ್ಲಿ ಹಲವಾರು ವಸ್ತು ಸಂಗ್ರಹಾಲಗಳು, ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡುತ್ತಿದ್ದ ಬ್ರಿಟಿಷರ ಕಾಲದ ಸೆರೆಮನೆ ಇದೆ. ಇದು ಭಾರತೀಯ ನೌಕಾ ದಳದ ಪ್ರಮುಖ ನೆಲೆಯಾಗಿದ್ದು, ವಾಯುದಳದ ನೆಲೆ ಕೂಡಾ ಇದೆ. ಪೋರ್ಟ್ ಬ್ಲೇರ್ - ಭಾರತ ಗಣರಾಜ್ಯದ ಒಕ್ಕೂಟ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತ ಕೇಂದ್ರ ಮತ್ತು ರೇವು ಪಟ್ಟಣ. ದಕ್ಷಿಣ ಅಂಡಮಾನ್ ದ್ವೀಪದ ಆಗ್ನೇಯ ತೀರದಲ್ಲಿ ಉ.ಅ. 11039' ಮತ್ತು ಪೂ.ರೇ. 92045' ಮೇಲೆ ಇದೆ. ಪೋರ್ಟ್ ಬ್ಲೇರ್ ಏಷ್ಯದ ಅತ್ಯುತ್ತಮ ರೇವುಗಳಲ್ಲೊಂದು. ಇದು ಕೋಲ್ಕತ್ತಾದ ಆಗ್ನೇಯಕ್ಕೆ 1,296. ಕಿ.ಮೀ. ಮತ್ತು ಚೆನ್ನೈನ ನೈಋತ್ಯಕ್ಕೆ 1,344 ಕಿ.ಮೀ. ದೂರದಲ್ಲಿದೆ. 2004ರಲ್ಲಿ ಇದು ಸುನಾಮಿ ಸಮುದ್ರದಲೆಗಳ ಹೊಡೆತಕ್ಕೆ ಸಿಕ್ಕಿ ಅಪಾರ ನಷ್ಟಕ್ಕೆ ಗುರಿಯಾಗಿದ್ದು ಸರ್ಕಾರ ಇದನ್ನು ಮರುನಿರ್ಮಾಣ ಮಾಡಿದೆ. ಬ್ರಿಟಿಷ್ ಸೈನ್ಯದ ಅರ್ಚಿಬಾಲ್ಡ್ ಬ್ಲೇರ್ ಇದನ್ನು 1789 ರಲ್ಲಿ ವಶಪಡಿಸಿಕೊಂಡ. ಆಗ ಇದಕ್ಕೆ ಪೋರ್ಟ್ ಕಾರ್ನ್‍ವಾಲೀಸ್ ಎಂದು ಹೆಸರಿಡಲಾಗಿತ್ತು. 1796-1856 ರಲ್ಲಿ ಇದನ್ನು ತೊರೆಯಲಾಗಿತ್ತು. ಭಾರತದಲ್ಲಿ ಗಡಿಪಾರು ಶಿಕ್ಷೆಗೆ ಒಳಗಾದವರನ್ನು ಇಡಲು ಇದನ್ನು 1858 ರಲ್ಲಿ ಬ್ರಿಟಿಷ್ ಸರ್ಕಾರ ಬಳಸಿಕೊಳ್ಳತೊಡಗಿತು. ಆಗ ಇದಕ್ಕೆ ಪೋರ್ಟ್ ಬ್ಲೇರ್ ಎಂದು ನಾಮಕರಣ ಮಾಡಲಾಯಿತು. ಇದು ಕೈದಿಗಳ ನೆಲೆಯಾಗಿದ್ದುದನ್ನು 1940 ರಲ್ಲಿ ಕೊನೆಗೊಳಿಸಲಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಕೆಲವು ವರ್ಷಗಳ ಕಾಲ (1842-45) ಇದು ಜಪಾನೀಯರ ವಶದಲ್ಲಿತ್ತು. 1947 ರಲ್ಲಿ ಭಾರತ ಗಣರಾಜ್ಯಕ್ಕೆ ಸೇರಿದ ಮೇಲೆ ಇದು ಶೀಘ್ರವಾಗಿ ಬೆಳೆಯತೊಡಗಿತು. ಮೀನುಗಾರಿಕೆ, ಸಣ್ಣ ಉದ್ಯಮಗಳು, ವ್ಯಾಪಾರ ಇವು ಇಲ್ಲಿಯ ಮುಖ್ಯ ಆರ್ಥಿಕ ಚಟುವಟಿಕೆಗಳು. ಇಲ್ಲಿ ಪ್ರೌಢಶಾಲೆ, ಆಸ್ಪತ್ರೆ ಮುಂತಾದುವು ಇವೆ. ಸ್ಮಾರ್ಟ್ ಸಿಟಿ ಇದನ್ನು ಇತ್ತೀಚಿಗೆ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ದಿ ಪಡಿಸಲು ಯೋಜನೆ ರೂಪಿಸಲಾಗಿದೆ. ಛಾಯಾಂಕಣ ಉಲ್ಲೇಖಗಳು ಬಾಹ್ಯ ಸಂಪರ್ಕಗಳು Port Blair ಏಷ್ಯಾ ಖಂಡದ ನಗರಗಳು ಭಾರತದ ರಾಜಧಾನಿ ಪಟ್ಟಣಗಳು
2240
https://kn.wikipedia.org/wiki/%E0%B2%A6%E0%B2%BE%E0%B2%A6%E0%B3%8D%E0%B2%B0
ದಾದ್ರ
ದಾದ್ರ ಮತ್ತು ನಾಗರ್ ಹವೆಲಿ ಸಂಘ ರಾಜ್ಯ ಕ್ಷೇತ್ರದ ರಾಜಧಾನಿ.೨೦೧೧ ರ ಜನಗಣತಿಯಂತೆ ೮೧೯೩ ಗಂಡಸರು ಮತ್ತು ೪೮೪೬ ಹೆಂಗಸರು ಸೇರಿದಂತೆ ೧೩೦೩೯ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಭಾರತದ ಪಟ್ಟಣಗಳು
2241
https://kn.wikipedia.org/wiki/%E0%B2%95%E0%B2%B5%E0%B2%B0%E0%B2%9F%E0%B3%8D%E0%B2%9F%E0%B2%BF
ಕವರಟ್ಟಿ
ಲಕ್ಷದ್ವೀಪ ಸಂಘ ರಾಜ್ಯ ಕ್ಷೇತ್ರದ ರಾಜಧಾನಿ ತನ್ನ ಸುಂದರ ಸಮುದ್ರ ತೀರದಿಂದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ; ಭಾರತದ ಪಟ್ಟಣಗಳು
2242
https://kn.wikipedia.org/wiki/%E0%B2%AA%E0%B2%BE%E0%B2%82%E0%B2%A1%E0%B2%BF%E0%B2%9A%E0%B3%86%E0%B2%B0%E0%B2%BF%20%E0%B2%A8%E0%B2%97%E0%B2%B0
ಪಾಂಡಿಚೆರಿ ನಗರ
ಪುದುಚೆರಿ ನಗರ ಅಥವಾ ಪಾಂಡಿಚೆರಿ ನಗರ ಪುದುಚೆರಿ ಸಂಘ ರಾಜ್ಯ ಕ್ಷೇತ್ರದ ರಾಜಧಾನಿ ಮತ್ತು ಪುದಿಚೆರಿ ಜಿಲ್ಲೆಯ ಆಡಳಿತ ಕೇಂದ್ರ. ಸೆಪ್ಟೆಂಬರ್ ೨೦೦೬ರಲ್ಲಿ ನಗರದ ಹೆಸರನ್ನು ಅಧಿಕೃತವಾಗಿ ಪಾಂಡಿಚೆರಿ ಇಂದ ಪುದುಚೆರಿಗೆ ಬದಲಾಯಿಸಲಾಯಿತು. ಭಾರತದ ಪಟ್ಟಣಗಳು ಭಾರತದ ರಾಜಧಾನಿ ಪಟ್ಟಣಗಳು
2243
https://kn.wikipedia.org/wiki/%E0%B2%87%E0%B2%9F%E0%B2%BE%E0%B2%A8%E0%B2%97%E0%B2%B0
ಇಟಾನಗರ
ಇಟಾ ನಗರಅರುಣಾಚಲ ಪ್ರದೇಶ ರಾಜ್ಯದ ರಾಜಧಾನಿ.ಇದು ಹಿಮಾಲಯದ ತಪ್ಪಲಲ್ಲಿದೆ.ಆಡಳಿತಾತ್ಮಕವಾಗಿ ಇದು ಪಪಂ ಪಾರೆ ಜಿಲ್ಲೆಯಲ್ಲಿದೆ. ಭೌಗೋಳಿಕ ಇದು ಸಮುದ್ರ ಮಟ್ಟದಿಂದ ಸುಮಾರು ೭೫೦ ಮೀಟರ್ ಎತ್ತರ ಪ್ರದೇಶದಲ್ಲಿದೆ. ಇಲ್ಲಿಯ ಆಕ್ಷಾಂಶ ರೇಖಾಂಶವು . ಹವಾಮಾನ ಇಲ್ಲಿ ತೇವಭರಿತ ಸಮಶೀತೋಷ್ಣ ಹವಾಮಾನವಿದ್ದು,ಶುಷ್ಕ,ಸಾಧಾರಣ ಚಳಿಗಾಲ ಮತ್ತು ಬೆಚ್ಚನೆಯ ಬೇಸಗೆ ಇದೆ. ಜನ ಸಂಖ್ಯೆ ಇಟಾ ನಗರದ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೩೪,೯೭೦. ೫೩% ಪುರುಷರು,೪೭% ಮಹಿಳೆಯರು.ಸಾಕ್ಷರತೆ ೬೬.೯% ಜನ ಇಟಾ ನಗರದಲ್ಲಿ ಮುಖ್ಯವಾಗಿ ಹಲವಾರು ಬುಡಕಟ್ಟು ಜನರ ಮಿಶ್ರಣ ಜನಸಂಖ್ಯೆ ಇದೆ.ಬೌದ್ಧ ಧರ್ಮದ ಪ್ರಭಾವ ಸಾಕಷ್ಟಿದ್ದು ಸುಂದರವಾದ ಬೌದ್ಧ ಮಂದಿರವಿದೆ. ಸಂಪರ್ಕ ಇಟಾ ನಗರಕ್ಕೆ ಗುವಾಹಟಿಯಿಂದ ಹೆಲಿಕಾಪ್ಟರ್ ಸಂಪರ್ಕವಿದೆ.ಬಸ್ಸು ಮತ್ತು ರೈಲ್ವೇ ಸಂಪರ್ಕವೂ ಉತ್ತಮವಾಗಿದೆ. ಪ್ರವಾಸೋದ್ಯಮ ಇಟಾ ನಗರದಲ್ಲಿ ಒಂದು ಸುಂದರ ಕೋಟೆ ಇದೆ.ಇದಲ್ಲದೆ ಹೊಸತಾಗಿ ನಿರ್ಮಾಣವಾದ ಬೌದ್ಧ ಮಂದಿರ,ಜವಾಹರಲಾಲ್ ವಸ್ತು ಸಂಗ್ರಹಾಲಯ,ಗಂಗಾ ಸರೋವರ ಪ್ರೇಕ್ಷಣೀಯ ಸ್ಥಳಗಳಲ್ಲಿ ಸೇರಿದೆ. ವಾಣಿಜ್ಯ ಕೃಷಿ ಇಲ್ಲಿಯ ಪ್ರಧಾನ ಉದ್ಯೋಗ. ಭೌಗೋಳಿಕ ನಿವೇಶನ ಉಲ್ಲೇಖಗಳು ಭಾರತದ ಪಟ್ಟಣಗಳು ಭಾರತದ ರಾಜಧಾನಿ ಪಟ್ಟಣಗಳು
2244
https://kn.wikipedia.org/wiki/%E0%B2%B0%E0%B2%BE%E0%B2%9C%E0%B3%8D%E0%B2%AF
ರಾಜ್ಯ
ಒಂದು ನಿರ್ದಿಷ್ಟ ಪ್ರದೇಶದ ಮೇಲೆ ಸಾರ್ವಭೌಮತೆಯನ್ನು ಹೊಂದಿರುವ ಸರ್ಕಾರ ಮತ್ತು ಆ ಸರ್ಕಾರಕ್ಕೆ ವಿಧಾಯಕವಾಗಿರುವ ಪ್ರಜೆಗಳು ಒಟ್ಟಾಗಿ ಒಂದು ರಾಜ್ಯವೆಂದು ಪರಿಗಣಿತವಾಗುತ್ತದೆ. ಈ ಸಾರ್ವಭೌಮತೆ ಆಂತರಿಕವಾಗಿದ್ದರೆ (ಅಂದರೆ ಈ ಸರ್ಕಾರದ ಮೇಲೊಂದು ಸರ್ಕಾರವಿದ್ದರೆ) ಅಂತಃ ರಾಜ್ಯಗಳ ಒಕ್ಕೂಟವೊಂದಿರಬಹುದು (ಉದಾ. ಭಾರತ, ಅಮೇರಿಕ ಸಂಯುಕ್ತ ಸಂಸ್ಥಾನ). ಈ ಸಾರ್ವಭೌಮತೆ ಬಾಹ್ಯವಾಗಿದ್ದಲ್ಲಿ ಅಂತಹ ರಾಜ್ಯವನ್ನು ದೇಶ ಅಥವಾ ರಾಷ್ಟ್ರ ಎಂದೂ ಕರೆಯಬಹುದು. ದೇಶಗಳು ರಾಜ್ಯಗಳು
2246
https://kn.wikipedia.org/wiki/%E0%B2%97%E0%B3%81%E0%B2%B5%E0%B2%BE%E0%B2%B9%E0%B2%BE%E0%B2%9F%E0%B2%BF
ಗುವಾಹಾಟಿ
ಗುವಾಹಟಿ () ಪೂರ್ವ ಭಾರತದಲ್ಲಿರುವ ಒಂದು ಪ್ರಮುಖ ನಗರ ಹಾಗು ಈಶಾನ್ಯ ಪ್ರದೇಶದ ಹೆಬ್ಬಾಗಿಲು ಎಂದೇ ಪ್ರಸಿದ್ದಿ. ಇದು ಆ ಪ್ರದೇಶದ ಅತ್ಯಂತ ದೊಡ್ಡ ನಗರ ಕೂಡ ಆಗಿದೆ. ಅಸ್ಸಾಂ ರಾಜ್ಯದ ರಾಜಧಾನಿಯಾಗಿರುವ ದಿಸ್ಪುರ್ ಈ ನಗರದಲ್ಲಿ ಸ್ಥಿತವಾಗಿದೆ.. ಬ್ರಹಪುತ್ರ ನದಿಯು ಗುವಾಹಟಿಯನ್ನು ಎರಡು ಭಾಗಗಳಾಗಿ ವಿಂಗಡಿಸುತ್ತದೆ. ಅದೆಂದರೆ ಉತ್ತರ ಗುವಾಹಟಿ ಅಥವಾ ದುರ್ಜಯ ಮತ್ತು ದಕ್ಷಿಣ ಗುವಾಹಟಿ. ಉತ್ತರ ಗುವಾಹಟಿಯು ದೇಶದ ಪ್ರಮುಖ ಶಕ್ತಿಪೀಠವಾದ ಕಾಮಾಕ್ಯ ದೇವಾಲಯ, ಉಮಾಶಂಕರ ದೇವಾಲಯಗಳಿಂದ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡರೆ, ದಕ್ಷಿಣ ಗುವಾಹಟಿಯು ವಾಣಿಜ್ಯಿಕ ಕೇಂದ್ರವಾಗಿದೆ. ಶ್ರೀಮಂತ ಸರ್ಕಾರ ಕಲಾಕ್ಷೇತ್ರ, ಆಸ್ಸಾಂ ರಾಜ್ಯ ವಸ್ತು ಸಂಗ್ರಹಾಲಯ, ಅಸ್ಸಾಂ ತಾರಾಲಯ ಇವು ಗುವಾಹಟಿಯ ಪ್ರಮುಖ ಆಕರ್ಷಣೆಗಳು. ಬಾಹ್ಯ ಸಂಪರ್ಕಗಳು ಗುವಾಹಾಟಿ ನಗರಸಭೆ ಅಸ್ಸಾಂ ಸರ್ಕಾರ ಭಾರತದ ಪಟ್ಟಣಗಳು ಅಸ್ಸಾಂ
2247
https://kn.wikipedia.org/wiki/%E0%B2%AA%E0%B2%9F%E0%B3%8D%E0%B2%A8%E0%B2%BE
ಪಟ್ನಾ
ಪಟ್ನಾ ಬಿಹಾರ ರಾಜ್ಯದ ರಾಜಧಾನಿ. ಆಧುನಿಕ ಪಟ್ನಾ ನಗರವು ಗಂಗಾ ನದಿಯ ದಕ್ಷಿಣ ದಡದಲ್ಲಿ ಸ್ಥಿತವಾಗಿದೆ. ನಗರವು ಕೋಸಿ, ಸೋನ್ ಮತ್ತು ಗಂಡಕ್ ನದಿಗಳ ದಡದಲ್ಲೂ ಇದೆ. ಪಟ್ನಾ ವಿಭಾಗದ ಹಾಗೂ ಜಿಲ್ಲೆಯ ಆಡಳಿತ ಕೇಂದ್ರ. ಗಂಗಾ ನದಿಯ ಬಲದಂಡೆಯ ಮೇಲೆ ಕಲ್ಕತ್ತಕ್ಕೆ 464 ಕಿಮೀ. ದೂರದಲ್ಲಿದೆ. ಪ್ರಾಚೀನ ನಗರವಾದ ಪಾಟಲಿಪುತ್ರ ಹೆಚ್ಚು ಕಡಿಮೆ ಇದೇ ಸ್ಥಳದಲ್ಲಿತ್ತು. ಹಳೆಯ ನಗರ ಗಂಗಾ ನದಿಯ ದಂಡೆಯ ಮೇಲೆ ಸುಮಾರು 19 ಕಿ.ಮೀ. ಉದ್ದಕ್ಕೆ ಹಬ್ಬಿದೆ. ಇದರ ಪಶ್ಚಿಮಕ್ಕೆ ಹೊಸ ಬಂಕೀಪುರ ವಿಭಾಗವಿದೆ. ಇದರ ಪಶ್ಚಿಮಕ್ಕೂ ನೈಋತ್ಯಕ್ಕೂ ಆಧುನಿಕ ರಾಜಧಾನಿ ಬೆಳೆದಿದೆ. ಜನಸಂಖ್ಯೆ ೨೨,೩೧,೫೫೪(೨೦೧೧). ಬೆಳವಣಿಗೆ ಪಟ್ನಾ ಪ್ರಮುಖ ರೈಲ್ವೆ ಮತ್ತು ರಸ್ತೆ ಸಂಧಿಸ್ಥಳ. ಕಳೆದ ಐವತ್ತು ವರ್ಷಗಳಲ್ಲಿ ಪಟ್ನಾ ಬಹಳಮಟ್ಟಿಗೆ ಬೆಳೆದಿದೆ. 1916ರಲ್ಲಿ ಇಲ್ಲಿ ಉಚ್ಚ ನ್ಯಾಯಾಲಯ ಸ್ಥಾಪಿತವಾಯಿತು. ಪಟ್ನಾ ವಿಶ್ವವಿದ್ಯಾಲಯ 1917ರಷ್ಟು ಹಳೆಯದು. ಇಲ್ಲಿಯ ಆಧುನಿಕ ಕಟ್ಟಡಗಳಲ್ಲಿ ಮುಖ್ಯವಾದವರೆಂದರೆ ಸರ್ಕಾರಿ ಭವನ, ವಿಧಾನಸಭಾ ಭವನ, ಪ್ರಾಚ್ಯ ಗ್ರಂಥಾಲಯ, ವೈದ್ಯಕೀಯ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜು, ಇಲ್ಲಿ ಬಂಗಾಲದ ಹುಸೇನ್ ಶಹನ ಮಸೀದಿಯೂ (1490) ಸಿಕ್ಖರ ಹತ್ತನೆಯ ಗುರುವಾದ ಗೋವಿಂದ ಸಿಂಗನ ಕಾಲದ ಮಂದಿರವೂ ಗೋಲ್‍ಘರ್ ಎಂಬ ಬಂಕೀಪುರದ ಕಣಜವೂ ಇದೆ. ಇತಿಹಾಸ ಕ್ರಿ.ಪೂ. 5ನೆಯ ಶತಮಾನದಲ್ಲಿ ಇಲ್ಲಿ ಸ್ಥಾಪಿತವಾದ ಪಾಟಲಿಪುತ್ರ ನಗರ ಕ್ರಿ.ಶ. 7ನೆಯ ಶತಮಾನದವರೆಗೂ ಪ್ರವರ್ಧಮಾನಸ್ಥಿತಿಯಲ್ಲಿತ್ತು. ಅನಂತರ 16ನೆಯ ಶತಮಾನದ ವರೆಗಿನ ಇದರ ಇತಿಹಾಸ ನಮಗೆ ತಿಳಿದುಬಂದಿಲ್ಲ. ಆಫ್‍ಘನ್ ದೊರೆ ಷೇರ್‍ಶಹ 1541ರಲ್ಲಿ ಮತ್ತೆ ಸ್ಥಾಪಿಸಿದ ನಗರಕ್ಕೆ ಪಟ್ನಾ ಎಂದು ಹೆಸರು ಇಟ್ಟ. ಮೊಗಲರ ಆಧಿಪತ್ಯದಲ್ಲಿ ಇದು ಮತ್ತೆ ಹಳೆ ಸ್ಥಾನಮಾನ ಪಡೆದು ಬಿಹಾರದ ಪ್ರಮುಖ ನಗರವಾಯಿತು. 1586ರಲ್ಲಿ ಇಲ್ಲಿಗೆ ಭೇಟಿ ನೀಡಿದ ರಾಲ್ಫ್ ಫಿಚ್ ಎಂಬ ಇಂಗ್ಲಿಷ್ ಇದನ್ನು ಬಲು ಉದ್ದನೆಯ ಮಹಾನಗರವೆಂದು ಬಣ್ಣಿಸಿದ. ಮೊಗಲ್ ಚಕ್ರವರ್ತಿ ಔರಂಗ್‍ಜೇóಬ್ (1659-1707) ತನ್ನ ಮೊವ್ಮ್ಮಗನಾದ ಅಜೀóಮನ ಹೆಸರಿನಲ್ಲಿ ಇದಕ್ಕೆ ಅಜೀóಮಾಬಾದ್ ಎಂದು ನಾಮಕರಣ ಮಾಡಿದ. ಈ ನಗರ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ವಶವಾದ್ದು 1765ರಲ್ಲಿ. ಕಂಪನಿಯ ಕಂದಾಯ ವಸೂಲಿಗಾಗಿ ಸ್ಥಾಪಿತವಾಗಿದ್ದ ಪ್ರಾಂತೀಯ ಮಂಡಲಿಯ ಮುಖ್ಯ ಕಛೇರಿ ಇಲ್ಲಿ ಸ್ಥಾಪಿತವಾಯಿತು. 1865ರಲ್ಲಿ ಬಿಹಾರದಲ್ಲಿ ಪಟ್ನಾ ಮತ್ತು ಗಯಾ ಜಿಲ್ಲೆಗಳು ರೂಪಿತವಾದವು. 1912ರಲ್ಲಿ ಬಂಗಾಲ ಆಧಿಪತ್ಯದಿಂದ ಬಿಹಾರ ಮತ್ತು ಒರಿಸ್ಸ ಪ್ರಾಂತ್ಯದ ರಚನೆಯಾದಾಗ ಪಟ್ನಾ ಆ ಪ್ರಾಂತ್ಯದ ರಾಜಧಾನಿಯಾಯಿತು. 1936ರಲ್ಲಿ ಒರಿಸ್ಸ ಪ್ರತ್ಯೇಕ ಪ್ರಾಂತ್ಯವಾಯಿತು. ಬಿಹಾರದ ರಾಜಧಾನಿಯಾಗಿ ಪಟ್ನಾ ಮುಂದುವರೆಯಿತು. ಸ್ವತಂತ್ರ ಭಾರತದಲ್ಲೂ ಇದು ಬಿಹಾರದ ರಾಜಧಾನಿಯಾಗಿ ಮುಂದುವರಿಯಿತು. ಉಲ್ಲೇಖಗಳು ಬಾಹ್ಯಸಂಪರ್ಕಗಳು Official website of Patna district Official website of the Municipal Corporation of Patna ಭಾರತದ ಪಟ್ಟಣಗಳು ಬಿಹಾರ
2251
https://kn.wikipedia.org/wiki/%E0%B2%AA%E0%B2%A3%E0%B2%9C%E0%B2%BF
ಪಣಜಿ
ಪಣಜಿ ಗೋವ ರಾಜ್ಯದ ರಾಜಧಾನಿ. ಇದು ಉತ್ತರ ಗೋವಾ ಜಿಲ್ಲೆಯ, ಮಾಂಡವಿ ನದಿಯ ದಡದಲ್ಲಿದೆ. ೬೫,೦೦೦ ಜನಸಂಖ್ಯೆಯ ( ಉಪನಗರಗಳನ್ನೂ ಸೇರಿಸಿದರೆ ಇದು ೧೦೦,೦೦೦ ಆಗುತ್ತದೆ) ಪಣಜಿ, ವಾಸ್ಕೋ ಮತ್ತು ಮಡಗಾಂವ್ ನಂತರ ಗೋವಾದ ಮೂರನೆಯ ಅತಿದೊಡ್ಡ ನಗರ. ಇಂಗ್ಲೀಷಿನಲ್ಲಿ "ಪಂಜಿಮ್" ಎನ್ನುತ್ತಾರೆ. ೧೯೬೦ರಿಂದ ಈ ನಗರದ ಅಧಿಕೃತ ಹೆಸರು ಪಣಜಿ ಎಂದಾಗಿದೆ. ಇಲ್ಲಿ ಸಾಕಷ್ಟು ಜನ ಮಾತನಾಡುವ ಕೊಂಕಣಿ ಭಾಷೆಯಲ್ಲಿ "ಪೊನ್ಜೆ" ಎಂದು ಕರೆಯುತ್ತಾರೆ. ಸಣ್ಣ ಹಳ್ಳಿಯಾಗಿದ್ದ ಇದನ್ನು ೧೮೪೩ರಲ್ಲಿ, ಹಳೆಯ ಗೋವಾದ ಬದಲಾಗಿ, ಪೋರ್ಚುಗೀಸರ ಆಡಳಿತಾತ್ಮಕ ರಾಜಧಾನಿಯನ್ನಾಗಿ ಮಾಡಿ, ನವ ಗೋವಾ ಎಂದು ಹೆಸರಿಡಲಾಯಿತು. ಡಿಸೆಂಬರ್ ೧೯೬೧ರಲ್ಲಿ ಆಪರೇಷನ್ ವಿಜಯ್ ಎಂಬ ಹೆಸರಿನ ಮಿಲಿಟರಿ ಕಾರ್ಯಾಚರಣೆಯ ಮೂಲಕ ಗೋವಾ ಸ್ವತಂತ್ರವಾಯಿತು. ಅಂದಿನಿಂದ ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ ೧೯೮೭ರಲ್ಲಿ ಪೂರ್ಣ ಪ್ರಮಾಣದ ರಾಜ್ಯವಾದಾಗ ಪಣಜಿ ಅದರ ರಾಜಧಾನಿಯಾಗಿ ಮುಂದುವರೆಯಿತು. ಪಣಜಿ ಉತ್ತರ ಗೋವಾ ಜಿಲ್ಲೆಯ ಆಡಳಿತ ಕೇಂದ್ರವೂ ಹೌದು. ಉಲ್ಲೇಖಗಳು ಭಾರತದ ಪಟ್ಟಣಗಳು ಗೋವ
2254
https://kn.wikipedia.org/wiki/%E0%B2%B6%E0%B2%BF%E0%B2%AE%E0%B3%8D%E0%B2%B2%E0%B2%BE
ಶಿಮ್ಲಾ
ಹಿಮಾಚಲ ಪ್ರದೇಶ ರಾಜ್ಯದ ರಾಜಧಾನಿ, ಹಸಿರು ವನರಾಜಿ, ಬೆಟ್ಟಗಳ ಸಾಲು ಸಾಲು, ತಣ್ಣಗೆ ಮೈಕೊರೆವ ಚಳಿ, ಇಬ್ಬನಿಯ ಭಾರಕ್ಕೆ ಬಾಗಿದ ಹಸಿರೆಲೆಗಳು, ಬಣ್ಣಬಣ್ಣದ ಹೂಗಳು, ಶಾಂತವಾಗಿ ಇವನ್ನೆಲ್ಲ ವೀಕ್ಷಿಸುತ್ತಿರುವ ಹಕ್ಕಿಗಳು, ಬೆಟ್ಟಗಳ ಮೇಲಿನ ತಿರುವು ಹಾದಿಗಳು. ಇವಾವುದರ ಪರಿವೆ ಇಲ್ಲದೆ ಹಳಿಯ ಮೇಲೆ ತೆವಳುತ್ತಾ ಸುರಂಗಗಳಲ್ಲಿ ನುಸುಳುತ್ತಾ ಸಾಗುವ ಮಂದಗತಿಯ ರೈಲುಗಾಡಿ. ಆಜುಬಾಜಿನಲ್ಲೆಲ್ಲ ಹೆಸರಿಲ್ಲದ ವಾಸನೆಯಿಲ್ಲದ ಸುಂದರ ಆರ್ಕಿಡ್ ಪುಷ್ಪಗಳು, ಹಸಿರು ಮೈಯ ಬೆಟ್ಟಗಳ ಮೇಲೆಲ್ಲ ಮೇಘರಾಜನ ಆಳ್ವಿಕೆ, ಸೂಜಿಯೆಲೆಗಳಿಂದ ತೊಟ್ಟಿಕ್ಕುವ ಇಬ್ಬನಿ ಇವೆಲ್ಲ ಶಿಮ್ಲಾ ಎಂಬ ದೃಶ್ಯಕಾವ್ಯದ ಮೊದಲ ಪುಟಗಳು. ಎರಡೂವರೆ ಅಡಿ ಅಂತರದ ಹಳಿಗಳ ಮೇಲೆ ವಿರಾಜಮಾನವಾಗಿದ್ದ ಆರು ಬೋಗಿಗಳ ಪುಟಾಣಿ ನ್ಯಾರೋಗೇಜ್ ರೈಲು ಕಾಲ್ಕಾ ರೈಲುನಿಲ್ದಾಣದಿಂದ ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಟು ಬೆಳಕು ಹರಿಯುವ ಮುನ್ನ ಅದು ಹಲವಾರು ಸುರಂಗಗಳನ್ನು ಹಾದು ತಿರುವುಗಳನ್ನು ಬಳಸಿ ಆರು ಗಂಟೆ ವೇಳೆಗೆ ಒಂದು ಬಾರೋಗ್ ಎಂಬ ಆ ನಿಲ್ದಾಣದಲ್ಲಿ ಬಂದು ನಿಂತಾಗ ಅಲ್ಲಿನ ಒಂದು ಫಲಕವು ೩೭೫೭ ಅಡಿಗಳ ಅತಿ ಉದ್ದನೆಯ ಸುರಂಗವನ್ನು ಹಾದು ಬಂದಿರುವುದನ್ನು ಸಾರುತ್ತದೆ. ಅಡ್ಡಡ್ಡ ಮಲಗಿದರೆ ಕೈಕಾಲುಗಳಿಂದ ಎರಡೂ ಪಾರ್ಶ್ವಗಳನ್ನು ಸ್ಪರ್ಶಿಸಬಹುದಾದ ಕೇವಲ ಇಪ್ಪತ್ತು ಜನರಷ್ಟೇ ಕೂಡಬಹುದಾಗಿದ್ದ ಪುಟ್ಟ ಬೋಗಿಯೊಳಗೆ ಕುಳಿತು ೧೦೨ ಸುರಂಗಗಳು, ೮೪೫ ಸೇತುವೆಗಳು ಹಾಗೂ ೯೧೯ ತಿರುವುಗಳನ್ನು ಹಾದು ಬರುವ ಈ ರೈಲಿನಲ್ಲಿನ ಪ್ರಯಾಣ ಶಿಮ್ಲಾ ಪ್ರವಾಸದ ಅತಿ ಮುಖ್ಯಭಾಗ. ಇಂಗ್ಲಿಷರ ಕಾಲದ ಇಂಡಿಯಾದ ಬೇಸಿಗೆ ರಾಜಧಾನಿ ಶಿಮ್ಲಾ. ಹಿಮಾಲಯದ ಅಂಚಿನಲ್ಲಿರುವ ಆದರೆ ಹಿಮಾಲಯದ ಗುಣಗಳನ್ನೇ ಹೊಂದಿರುವ ಪ್ರಕೃತಿ ಸೌಂದರ್ಯದಿಂದ ಶ್ರೀಮಂತವಾಗಿರುವ ಶಿಮ್ಲಾ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ಸೂಜಿಗಲ್ಲು. ಶಿಮ್ಲಾದಲ್ಲಿ ಪ್ರವಾಸ ಎಂದರೆ ಬೆಟ್ಟವನ್ನು ಏರುತ್ತಾ ಏರುತ್ತಾ ಏರುತ್ತಾ ಹೋಗುವುದು. ಹೇಳಿಕೇಳಿ ಇದು ಬಯಲು ಪ್ರದೇಶ ಅಲ್ಲವಲ್ಲ! ಸಮುದ್ರ ಮಟ್ಟದಿಂದ ಸುಮಾರು ೭೫೦೦ ಅಡಿಗಳ ಮೇಲೆ ಇರುವ ಫಾಗು ಎಂಬ ಸ್ಥಳದಿಂದ ಹಿಮಾಲಯದ ಹಿಮಾಚ್ಛಾದಿತ ಶಿಖರಗಳನ್ನು ವೀಕ್ಷಿಸಬಹುದು. ಇನ್ನೂ ೫೦೦ ಅಡಿಗಳ ಮೇಲೆ ಹೋದಲ್ಲಿ ಕುಫ್ರಿ ಎಂಬ ಸ್ಥಳ ಸಿಗುತ್ತದೆ. ಇಲ್ಲಿ ಹಿಮಾಲಯದ ವನ್ಯಜೀವಿಗಳ ಅಭಯಧಾಮ, ಪ್ರವಾಸೋದ್ಯಮ ಇಲಾಖೆಯ ಉದ್ಯಾನವನ, ಚಾರಣಕ್ಕೆ ಹೇಳಿ ಮಾಡಿಸಿದ ಶಿಖರಗಳೂ ಕೊರಕಲುಗಳೂ ಇವೆ. ವಾಹನಗಳು ಚಲಿಸಲಾಗದ ಉರುಟು ಕಲ್ಲು ಕೊರಕಲುಗಳಿಂದ ಕೆಲವೊಮ್ಮೆ ಹಿಮದಿಂದ ತುಂಬಿದ ಹಾದಿಯಲ್ಲಿ ಕುದುರೆಯ ಮೇಲೆ ಕುಳಿತು ಏರುತ್ತಾ ಇಳಿಯುತ್ತಾ ಮುಗ್ಗರಿಸುತ್ತಾ ಅಳುಕಿನಿಂದ ಸಾಗುವುದೇ ಒಂದು ಸಾಹಸದ ಅನುಭವ. ಅದಕ್ಕೆಂದೇ ಅಲ್ಲಿ ಕುದುರೆಗಳು ಬಾಡಿಗೆಗೆ ಸಿಗುತ್ತವೆ. ಸುಂದರವಾದತುಪ್ಪಳವುಳ್ಳ ಯಾಕ್ (ಹಿಮಾಲಯದ ಎಮ್ಮೆ) ಪ್ರಾಣಿಗಳು, ಹಿಮಾಲಯನ್ ಲಂಗೂರ್‍ ಎಂಬ ಕಪ್ಪು ಮುಖದ ಕೋತಿಗಳು, ಹಿಮಾಚಲದ ಸಾಂಪ್ರದಾಯಿಕ ಉಡುಗೆ ತೊಟ್ಟ ಗುಡ್ಡಗಾಡು ಜನರ ವೇಷಭೂಷಣಗಳು, ಪರಿಕರಗಳು ಮತ್ತು ಆಹ್ಲಾದಕರ ಪ್ರಕೃತಿ ದರ್ಶನದ ಅನಂತರ ಶಿಮ್ಲಾ ಪಟ್ಟಣಕ್ಕೆ ಬಂದರೆ ಅಲ್ಲಿ ಮಾಲ್ ಎಂಬ ನೋಡಲೇಬೇಕಾದ ಸ್ಥಳವೊಂದಿದೆ. ಇಂಗ್ಲಿಷರು ಕಟ್ಟಿದ ಸುಂದರವಾದ ಚರ್ಚ್ ಇಲ್ಲಿದೆ. ಇದರ ಆಜುಬಾಜೂ ಇರುವ ಸಂತೆಯಲ್ಲಿ ಹಿಮಾಚಲಪ್ರದೇಶದ ಎಲ್ಲ ವಿಶಿಷ್ಟ ವಸ್ತುಗಳ ಬಿಕರಿಯಾಗುತ್ತದೆ. ಮುಖ್ಯವಾದ ಸ್ಥಳದಲ್ಲಿ ಲಾಲಾ ಲಜಪತರಾಯ್‌ರವರ ಪ್ರತಿಮೆಯಿದೆ. ರಾತ್ರಿ ಹೊತ್ತಿನಲ್ಲಿ ಶಿಮ್ಲಾ ನಗರವನ್ನು ನೋಡುವುದೇ ಒಂದು ಚೆಂದ. ಬೆಟ್ಟಗುಡ್ಡಗಳೆಲ್ಲ ಝಗಮಗಿಸುವ ವಿದ್ಯುದ್ದೀಪಗಳಿಂದ ಕಂಗೊಳಿಸುವಾಗ ನೋಡಲು ಎರಡು ಕಣ್ಣು ಸಾಲವು. ಬಾಹ್ಯ ಸಂಪರ್ಕಗಳು Official website of Shimla district Municipal Corporation Shimla Latest Weather in Shimla ಭಾರತದ ಪಟ್ಟಣಗಳು
2256
https://kn.wikipedia.org/wiki/%E0%B2%B6%E0%B3%8D%E0%B2%B0%E0%B3%80%E0%B2%A8%E0%B2%97%E0%B2%B0
ಶ್ರೀನಗರ
ಜಮ್ಮು ಮತ್ತು ಕಶ್ಮೀರ ರಾಜ್ಯದ ಚಳಿಗಾಲದ ರಾಜಧಾನಿ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು Srinagar district administration Official website of Jammu and Kashmir ಭಾರತದ ಪಟ್ಟಣಗಳು
2257
https://kn.wikipedia.org/wiki/%E0%B2%9C%E0%B2%AE%E0%B3%8D%E0%B2%AE%E0%B3%81
ಜಮ್ಮು
ಜಮ್ಮು ಮತ್ತು ಕಶ್ಮೀರ ರಾಜ್ಯದ ಬೇಸಿಗೆಕಾಲದ ರಾಜಧಾನಿ ಜಮ್ಮು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಚಳಿಗಾಲದ ರಾಜಧಾನಿ; ಜಮ್ಮು ಜಿಲ್ಲೆಯ, ಜಮ್ಮು ವಿಭಾಗದ ಮುಖ್ಯ ಪಟ್ಟಣ. ಚೀನಾಬ್ ನದಿಯ ಉಪನದಿಯಾದ ಟಾವಿಯ ದಡದ ಮೇಲೆ, ಶ್ರೀನಗರದಿಂದ 95ಮೈ. ದಕ್ಷಿಣಕ್ಕೆ, ಉ.ಅ.32ಔ 47' ಮತ್ತು ಪೂ.ರೇ. 74ಔ 50' ಮೇಲೆ ಇದೆ. ಜನಸಂಖ್ಯೆ 5,350,811 ಜಮ್ಮು ವಿಭಾಗದಲ್ಲಿ ಜಮ್ಮು, ಕಾಟುವಾ , ಉದಮ್‍ಪುರ , ದೋದಾ ಮತ್ತು ಪುಂಚ್ ಈ ಐದು ಜಿಲ್ಲೆಗಳಿವೆ. ಈ ವಿಭಾಗ ಹೆಚ್ಚಾಗಿ ಗುಡ್ಡಗಾಡು. ವಾರ್ಷಿಕ ಮಳೆ 41. ಕೆಲವೆಡೆ ಗೋದಿ ಮತ್ತು ಮೆಕ್ಕೆಜೋಳ ಬೆಳೆಯುತ್ತಾರೆ. ಪ್ರೇಕ್ಷಣೀಯ ಸ್ಥಳಗಳು ಜಮ್ಮು ನಗರದಲ್ಲಿ ಅನೇಕ ಪುರಾಣಪ್ರಸಿದ್ಧ ಅವಶೇಷಗಳನ್ನು ನೋಡಬಹುದು. ಇಲ್ಲಿಯ ರಘುನಾಥ ದೇವಾಲಯ ಪ್ರಸಿದ್ಧವಾದ್ದು. ಟಾವಿ ನದಿಯ ಎಡದಡದಲ್ಲಿ ರಾಜಮಹಲ್ ಇದೆ. ಭಾರತೀಯ ರೈಲ್ವೆ ಮಾರ್ಗದ ಅಂತಿಮ ನಿಲ್ದಾಣವಾದ ಪಠಾಣ್ ಕೋಟೆಯೊಡನೆ ಜಮ್ಮು ನಗರ ಸಂಪರ್ಕ ಹೊಂದಿದೆ. ಇಲ್ಲಿ ಅರಣ್ಯ ಇಲಾಖೆಯ ಕೇಂದ್ರವುಂಟು. ವಾಣಿಜ್ಯ ಜಮ್ಮು ನಗರದ ಹತ್ತಿರ ಇರುವ ಜಂಗಲಗಲಿ ಮತ್ತು ಕಾಲಕೋಟ್ ಪ್ರದೇಶಗಳಲ್ಲಿ ಕಲ್ಲಿದ್ದಲನ್ನು ತೆಗೆಯುತ್ತಾರೆ. ಜಿಪ್ಸಮ್ ಗಣಿಯೂ ಉಂಟು. ಜಮ್ಮು ನಗರದಲ್ಲಿ ಶಾಲಾಕಾಲೇಜುಗಳೂ ಔದ್ಯೋಗಿಕ ಶಿಕ್ಷಣ ಸಂಸ್ಥೆಯೂ ಇವೆ. ಜಮ್ಮು ನಗರದ ಬಹುಸಂಖ್ಯಾತರು ಡೋಗ್ರಾ ಮತ್ತು ಸಿಕ್ಖರು. ವ್ಯಾಪಾರ ಮತ್ತು ವ್ಯವಸಾಯ ಜನರ ಮುಖ್ಯ ಉದ್ಯೋಗ. ಇತಿಹಾಸ ಜಮ್ಮು ಪ್ರದೇಶ ಮೊದಲು ರಜಪೂತರ ಆಳ್ವಿಕೆಯಲ್ಲಿತ್ತು. ಅವರನ್ನು ಸಿಕ್ಖರು ಜಯಿಸಿದ ಅನಂತರ ಜಮ್ಮು ನಗರ ಸಿಖ್ ಸಾಮ್ರಾಜ್ಯದ ಒಂದು ಭಾಗವಾಯಿತು. ಜಮ್ಮು ನಗರವನ್ನು ಸ್ವಲ್ಪ ಸಮಯ ರಣಜಿತ್ ಸಿಂಗನೂ ಅವನ ಮರಣಾನಂತರ ಗುಲಾಬ್ ಸಿಂಗನೂ ಆಳಿದರು. 1846ರಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರಿ ಒಂದು ಸಂಸ್ಥಾನವಾಯಿತು. ಬಾಹ್ಯ ಸಂಪರ್ಕಗಳು The Official Website of Jammu and Kashmir Government, India Official Website of District Jammu, India Shri Mata Vaishno Devi Shrine Board – Shrines in Jammu Bhaderwah – Website about Bhaderwah Brief history of Jammu Rulers with their Coinage details Mata Pingla ಭಾರತದ ಪಟ್ಟಣಗಳು ಜಮ್ಮು ಮತ್ತು ಕಾಶ್ಮೀರ
2258
https://kn.wikipedia.org/wiki/%E0%B2%A6%E0%B2%AE%E0%B2%A8%E0%B3%8D
ದಮನ್
ದಮನ್ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯುನ ರಾಜಧಾನಿ ಪಟ್ಟಣವಾಗಿದೆ. ಭಾರತದ ಪಟ್ಟಣಗಳು
2261
https://kn.wikipedia.org/wiki/%E0%B2%A4%E0%B2%BF%E0%B2%B0%E0%B3%81%E0%B2%B5%E0%B2%A8%E0%B2%82%E0%B2%A4%E0%B2%AA%E0%B3%81%E0%B2%B0%E0%B2%AE%E0%B3%8D
ತಿರುವನಂತಪುರಮ್
ತಿರುವನಂತಪುರಂ (ಮಲಯಾಳಂ:തിരുവനന്തപുരം) ಭಾರತದ ದಕ್ಷಿಣದಲ್ಲಿರುವ ಕೇರಳ ರಾಜ್ಯದ ರಾಜಧಾನಿ. ಇದು ಕೇರಳದ ಅತ್ಯಂತ ದೊಡ್ಡ ಹಾಗು ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಮಹಾತ್ಮ ಗಾಂಧಿಯವರು ಈ ನಗರವನ್ನು ಭಾರತದ ನಿತ್ಯಹರಿದ್ವರ್ಣದ ನಗರ ಎಂದು ಕರೆದಿದ್ದರು. ಬಾಹ್ಯ ಸಂಪರ್ಕಗಳು Official District website Public Relations Department Page on Thiruvananthapuram Government of Kerala Website on Thiruvananthapuram District List of Educational Institutions under University of Kerala ಭಾರತದ ಪಟ್ಟಣಗಳು ಕೇರಳ ಭಾರತದ ಕರಾವಳಿ ಪ್ರದೇಶಗಳು ಭಾರತದ ರಾಜಧಾನಿ ಪಟ್ಟಣಗಳು
2262
https://kn.wikipedia.org/wiki/%E0%B2%AD%E0%B3%8A%E0%B2%AA%E0%B2%BE%E0%B2%B2%E0%B3%8D
ಭೊಪಾಲ್
ಭೋಪಾಲ್ (ಹಿಂದಿ: भोपाल) ಮಧ್ಯ ಪ್ರದೇಶ ರಾಜ್ಯದ ಒಂದು ಜಿಲ್ಲೆ, ಮತ್ತು ಕೈಗಾರಿಕಾ ನಗರ ಹಾಗೂ ರಾಜಧಾನಿ ಮತ್ತು ಭೋಪಾಲ್ ಜಿಲ್ಲೆಯ ಆಡಳಿತ ಕೇಂದ್ರ. ಭೋಪಾಲ್ ಮಧ್ಯ ಪ್ರದೇಶದ ಅತ್ಯಂತ ದೊಡ್ಡ ನಗರವಾಗಿದೆ. ಭೋಪಾಲ್ ನಗರವು ಅನೇಕ ಕೆರೆಗಳನ್ನು ಹೊಂದಿದ್ದು ಅದನ್ನು ಕೆರೆಗಳ ನಗರ ಎಂದು ಕರೆಯಲಾಗುತ್ತದೆ. ಈ ಜಿಲ್ಲೆಯನ್ನು ಪೂರ್ವದಲ್ಲಿ ವಿದಿಶಾ, ರಾಯ್‍ಸೆನ್ ಜಿಲ್ಲೆಗಳೂ ಪಶ್ಚಿಮದಲ್ಲಿ ರಾಜಘರ್ ಮತ್ತು ಸೆಹೊರೆ ಜಿಲ್ಲೆಗಳೂ ಉತ್ತರದಲ್ಲಿ ವಿದಿಶಾ, ಗುನ ಜಿಲ್ಲೆಗಳೂ ದಕ್ಷಿಣದಲ್ಲಿ ರಾಯ್‍ಸೆನ್ ಮತ್ತು ಸೆಹೊರೆ ಜಿಲ್ಲೆಗಳೂ ಸುತ್ತುವರಿದಿವೆ. ಜಿಲ್ಲಾ ವಿಸ್ತೀರ್ಣ 2763 ಚಕಿಮೀ, ಜನಸಂಖ್ಯೆ 8,94,739(1981). ಭೂಪಾಲ್ ನಗರ ಸಮುದ್ರ ಮಟ್ಟದಿಂದ ಸುಮಾರು 540 ಮೀಟರ್ ಎತ್ತರದಲ್ಲಿದೆ. ಉ.ಅ.23º 16' ಪೂ.ರೇ. 77º 36'ನಲ್ಲಿದೆ. ರಾಜ್ಯದ ಆಡಳಿತ ಕೇಂದ್ರ. ಜನಸಂಖ್ಯೆ 6,71,018 (1981). ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಮ್ ರಾಜ್ಯವೊಂದರ (ರಿಯಾಸತ್) ಕೇಂದ್ರವಾಗಿತ್ತು. ಧಾರಾನಗರದ ಪರಮಾರ ದೊರೆ ಭೋಜಪಾಲ (1010-53) ಈ ನಗರವನ್ನು ಕಟ್ಟಿದುದರಿಂದ ಇದಕ್ಕೆ ಭೂಪಾಲವೆಂದು ಹೆಸರು ಬಂದಿತೆಂದು ಪ್ರತೀತಿ. ಭೂಪಾಲ ಸರೋವರಗಳ ನಗರ. ಶ್ಯಾಮಲ ಮತ್ತು ಈದ್‍ಗಾ ಬೆಟ್ಟಗಳ ನಡುವೆ ಇರುವ ಇಲ್ಲಿಯ ಭೂಪಾಲ ಸರೋವರದ ಸುತ್ತಳತೆ 11 ಕಿಮೀಗೂ ಹೆಚ್ಚು. ನಗರಕ್ಕೆ ನೀರು ಸರಬರಾಜು ಆಗುವುದು ಈ ಸರೋವರದಿಂದಲೇ. ಇದಲ್ಲದೆ 1794ರಲ್ಲಿ ಛೋಟೆಖಾನ್ ಎಂಬ ಮಂತ್ರಿಯೊಬ್ಬ ಕಟ್ಟಿಸಿದ ಅಣೆಕಟ್ಟಿನಿಂದ ರೂಪುಗೊಂಡ ಎರಡು ಸರೋವರಗಳು ಪ್ರೇಕ್ಷಣೀಯವಾದವು. ಕುದ್‍ಸಿಯಾ ಬೇಗಮ್ ಎಂಬ ನವಾಬಳು ಕಟ್ಟಿಸಿದ ಜಾಮಾಮಸೀದಿ ವಿಶಾಲವಾದ, ಕೆಂಪು ಕಣಶಿಲೆಯ ಸೊಗಸಾದ ಕಟ್ಟಡ. ನಗರದ ಯಾವುದೇ ಮೂಲೆಯಿಂದ ನೋಡಿದರೂ ಈ ಮಸೀದಿ ಕಾಣುತ್ತದೆ. ಭೂಪಾಲದ ಅರಮನೆಗಳು ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ನವಾಬರಿಂದ ಸೇರ್ಪಡೆಯಾದ ಸಂಕೀರ್ಣ ಕಟ್ಟಡಗಳು. ಇವಕ್ಕೆ ನಿರ್ದಿಷ್ಟ ವಿನ್ಯಾಸವಿಲ್ಲ. ಬೇನಜೀರ್ ಅರಮನೆ, ತಾಜ್-ಉಲ್-ಮಸೀದಿ, ಮೋತಿ ಮಸೀದಿ ಹಾಗೂ ಸದರ್ ಮಂಜಿಲ್ ಇನ್ನಿತರ ಕೆಲವು ಪ್ರಮುಖ ಕಟ್ಟಡಗಳು. ಇಲ್ಲಿಯ ಫತೇಗಢ ಕೋಟೆಯನ್ನು 1728ರಲ್ಲಿ ದೋಸ್ತ್ ಮಹಮದ್ ಖಾನ್ ಕಟ್ಟಿಸಿದ. ಇಲ್ಲಿರುವ ಇತರ ಕಟ್ಟಡಗಳಲ್ಲಿ ಪರಮಾರ ಉದಯಾದಿತ್ಯನ (1059-80) ಪತ್ನಿ ಕಟ್ಟಿಸಿದೆನ್ನಲಾದ ಸಭಾಮಂಡಲ ಎನ್ನುವ ದೇಗುಲ ಬಹುಶಃ ಭೂಪಾಲದ ಪ್ರಾಚೀನತಮ ಕಟ್ಟಡ. ಈಚೆಗೆ ಬಿರ್ಲಾ ಕುಟುಂಬ ಕಟ್ಟಿಸಿದ ಲಕ್ಷ್ಮೀನಾರಾಯಣ ಮಂದಿರ ನೋಡುವಂಥದ್ದು. ಹತ್ತಿ, ಗೋಧಿ, ಬೇಳೆ ಕಾಳುಗಳು, ಜೋಳ, ಕಬ್ಬು, ಎಳ್ಳು ಮುಂತಾದವು ಇಲ್ಲಿಯ ಮುಖ್ಯ ವ್ಯಾಪಾರಿ ಬೆಳೆಗೆಳು. ಮಗ್ಗದ ಬಟ್ಟೆಗಳು, ಯಂತ್ರಸಾಮಗ್ರಿ, ಪಾತ್ರೆ, ಕೈಚೀಲಗಳು, ಅಲಂಕರಣ ವಸ್ತುಗಳು ಇಲ್ಲಿ ತಯಾರಾಗುತ್ತವೆ. ಭೂಪಾಲ ಕೈಗಾರಿಕಾರಂಗದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಇಲ್ಲಿಯ ಹೆವಿ ಎಲೆಕ್ಟ್ರಿಕಲ್ಸ್ (ಇಂಡಿಯಾ) ಲಿಮಿಟೆಡ್‍ನಲ್ಲಿ ಟರ್ಬೈನ್, ಸಿಚ್‍ಗಿಯರುಗಳನ್ನು ತಯಾರಿಸುತ್ತಾರೆ. ಈಚೆಗೆ (1984) ಇಲ್ಲಿಯ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಉಂಟಾದ ಅನಿಲ ಸೋರುವಿಕೆಯ ಪರಿಣಾಮವಾಗಿ ಸಾವಿರಾರು ಜನ ಮೃತರಾದರು ಮತ್ತು ಇತರ ಸಾವಿರಾರು ಜನ ರೋಗರುಜಿನಗಳಿಗೆ ತುತ್ತಾದರು. ಭೂಪಾಲ ನಗರ ರೈಲ್ವೆ ನಿಲ್ದಾಣ ಕೇಂದ್ರ. ವಿಮಾನ ನಿಲ್ದಾಣವೂ ಇದೆ. ರಾಷ್ಟ್ರೀಯ ಹೆದ್ದಾರಿ ಈ ನಗರದ ಮೂಲಕವೇ ಹಾಯ್ದು ಹೋಗಿದೆ. ಇಲ್ಲಿ ಭೂಪಾಲ ವಿಶ್ವವಿದ್ಯಾಲಯವಿದೆ. ಜೊತೆಗೆ ಆಧುನಿಕ ನಗರ ಸೌಕರ್ಯಗಳೆಲ್ಲ ಇವೆ. ಇದರ ಸುತ್ತಲ ಪ್ರೇಕ್ಷಣೀಯ ಸ್ಥಳಗಳಲ್ಲಿ ಸುಮಾರು 45 ಕಿಮೀ ದೂರದಲ್ಲಿ ಪ್ರಸಿದ್ಧ ಬೌದ್ಧ ಕೇಂದ್ರವಾಗಿದ್ದ ಸಾಂಚಿ ಇದೆ. ಶೈವಕ್ಷೇತ್ರ ಉಜ್ಜಯಿನಿಯೂ ಹತ್ತಿರದಲ್ಲಿದೆ. ಭೂಪಾಲದಿಂದ 6.4ಕಿಮೀ ದೂರದ ನಿಯೋರಿ ಎಂಬಲ್ಲಿ 11ನೆಯ ಶತಮಾನದ ಶಿವದೇವಾಲಯವಿದೆ. 11ಕಿಮೀ ದೂರದಲ್ಲಿರುವ ಇಸ್ಲಾಮ್‍ಪುರದಲ್ಲಿ ಹಳೆಯ ಅರಮನೆ, ತೋಟ ನೋಡಬಹುದಾದವು. ಸುಮಾರು 28ಕಿಮೀ ದೂರದಲ್ಲಿರುವ ಭೋಜಪುರ ಬೇತ್ವಾನದಿ ದಡದ ಮೇಲಿದೆ. ಇಲ್ಲಿಯ ಶಿಲ್ಪಗಳು ಹೆಸರಾದವು ಮತ್ತು ಇದನ್ನು ಉತ್ತರ ಭಾರತದ ಸೋಮನಾಥಪುರವೆಂದು ಕರೆಯುತ್ತಾರೆ. ಇತಿಹಾಸ ಇದನ್ನು ಭೋಜ ಮಹಾರಾಜ 11ನೆಯ ಶತಮಾನದಲ್ಲಿ ಕಟ್ಟಿದನೆಂದು ಹೇಳುವರು. ದೆಹಲಿಯಲ್ಲಿ ಬಹಾದ್ದುರ್ ಷಾ ಆಳುತ್ತಿದ್ದಾಗ ಉದ್ಯೋಗ ಅರಸಿ ಬಂದ ಪಠಾಣ ಯೋಧ ದೋಸ್ತ್ ಮಹಮದ್ ಖಾನ್ 1709ರಲ್ಲಿ ಬಿರ್ಸಿಯಾ ಪರಗಣದ ರಾಜ್ಯಪಾಲನಾಗಿ ನೇಮಿತನಾದ. ಕ್ರಮೇಣ ಸ್ವತಂತ್ರನಾದ ಈತ 1723ರಲ್ಲಿ ಭೂಪಾಲರಾಜ್ಯವನ್ನು ಸ್ಥಾಪಿಸಿದ. 1740ರಲ್ಲಿ ಈತನ ಮರಣಾನಂತರ ಅಧಿಕಾರಕ್ಕೆ ಬಂದ ಮಹಮ್ಮದ್‍ಖಾನ್ ಬಹುಕಾಲ ಬಾಳಲಿಲ್ಲ. ಹೀಗಾಗಿ ದೋಸ್ತ್ ಮಹಮದನ ಇನ್ನೊಬ್ಬ ಮಗ ಯಾರ್‍ಮಹಮದ್‍ಖಾನ್ ಆಡಳಿತ ಸೂತ್ರಗಳನ್ನು ವಹಿಸಿಕೊಂಡ. 1754ರಲ್ಲಿ ಯಾರ್‍ಮಹಮ್ಮದ್‍ಖಾನನ ಮರಣಾನಂತರ ಆತನ ಮಗ ಫೈಜ್ ಮಹಮದ್‍ಖಾನ್ ನವಾಬನಾದ. ಸುಮಾರು 210ಸೆಂಮೀ ಎತ್ತರದ, ದೃಢಕಾಯನಾದ ಈತ ಧರ್ಮ ಭೀರು, ಏಕಾಂತಪ್ರಿಯ, ರಾಜಪದವಿಗೆ ಅನರ್ಹನಾಗಿದ್ದ. ಈತನ ಕಾಲದಲ್ಲಿ, ರಾಜ್ಯದ ಅರ್ಧಭಾಗ ಪೇಷ್ವೆಗಳ ಅಧೀನವಾಯಿತು. 1777ರಲ್ಲಿ ಈತನ ಸೋದರ ಹಯಾತ್ ಮಹಮದಖಾನ್ ನವಾಬನಾದ. ಮೊದಲ ಮರಾಠ ಯುದ್ಧದಲ್ಲಿ ಈತ ಜನರಲ್ ಥಾಮಸ್ ಗೊಡಾರ್ಡ್‍ನಿಗೆ ಸಹಾಯ ನೀಡಿ ಬ್ರಿಟಿಷರ ಸ್ನೇಹ ವಿಶ್ವಾಸಗಳಿಗೆ ಪಾತ್ರನಾದ. 1798ರಿಂದ ಈತನ ರಾಜ್ಯ ಪಿಂಡಾರಿ ಹಾಗೂ ಮರಾಠರ ಸತತ ಧಾಳಿಗಳಿಗೆ ತುತ್ತಾಯಿತು. ಇಂಥ ಕ್ಲಿಷ್ಟ ಸನ್ನಿವೇಶದಲ್ಲಿ ಈತನ ಸೋದರ ವಜೀರ್ ಮಹಮದ್‍ಖಾನ್ ಆಡಳಿತ ಸೂತ್ರಗಳನ್ನು ವಹಿಸಿಕೊಂಡ. ಪಿಂಡಾರಿಗಳ ಸರದಾರ ಕರೀಮಖಾನನಿಗೆ ನೌಕರಿ ನೀಡಿ ತನ್ನ ರಾಜ್ಯದ ಸ್ಥಿತಿಯನ್ನು ಸುಧಾರಿಸಿದ. 1807ರಲ್ಲಿ ಹಯಾತ್‍ಮಹಮದ್‍ಖಾನ್ ಮೃತನಾದ. ಅನಂತರ ನವಬ ಪದವಿ ವಜೀರ್‍ಮಹಮದ್‍ಖಾನನಿಗೆ ವಿದ್ಯುಕ್ತವಾಗಿ ಬಂತು. 1816ರಲ್ಲಿ ಈತನ ಮಗ ನಜೀರ್ ಮಹಮದ್‍ಖಾನ್ ನವಾಬನಾದ. ಈತ ಹಯಾತ್ ಮಹಮದ್ ಖಾನನ ಮಗ ಗೌಸ್‍ಮಹಮದ್‍ಖಾನನಿಗೆ ತನ್ನ ಮಗಳು ಕುದ್‍ಸಿಯಾ ಬೇಗಮಳನ್ನಿತ್ತು ಮದುವೆ ಮಾಡಿದ. ಈತ ಪಿಂಡಾರಿಗಳ ವಿರುದ್ಧ ಬ್ರಿಟಿಷರು ನಡೆಸುತ್ತಿದ್ದ ಹೋರಾಟಗಳಲ್ಲಿ, ಬ್ರಿಟಿಷರಿಗೆ ನೆರವು ನೀಡಿ ತನ್ನ ನವಾಬ ಪದವಿಯನ್ನು ಬಲಪಡಿಸಿಕೊಂಡ. ಹೀಗಾಗಿ 1818ರಲ್ಲಿ ಬ್ರಿಟಿಷರೊಡನೆ ಒಪ್ಪಂದ ಏರ್ಪಟ್ಟು ಅವರಿಂದಲೇ ಈತ ನವಾಬನೆಂದು ಘೋಷಿತನಾದ. ಈತ ಇಸ್ಲಾಮ್ ನಗರದ ಜೀರ್ಣೋದ್ಧಾರ ಮಾಡಿದ. 1820ರಲ್ಲಿ ನಜಿóರ್ ಮಹಮ್ಮದ್ ಅನಿರೀಕ್ಷಿತವಾಗಿ ಮೃತನಾದ. ಮದ್ದುಗುಂಡು ತುಂಬಿದ್ದ ಪಿಸ್ತೂಲನ್ನು ಮಗು ಅಕಸ್ಮಾತ್ತಾಗಿ ಮುಟ್ಟಿದಾಗ ಸಿಡಿದ ಗುಂಡು ಈತನನ್ನು ಬಲಿ ತೆಗೆದುಕೊಂಡಿತು. ಈತನ ತರುವಾಯ ಕುದ್‍ಸಿಯ್ ಬೇಗಮ್ ತನ್ನ ಪುತ್ರಿ ಸಿಕಂದರ್ ಬೇಗಮಳ ಹೆಸರಿನಲ್ಲಿ ರಾಜ್ಯವಾಳಿದಳು. 1837ರಲ್ಲಿ ಸಿಕಂದರ್ ಬೇಗಮಳ ಪತಿ ಜಹಾಂಗಿರ್ ಮಹಮದ್ ಇಂಗ್ಲಿಷರ ನೆರವಿನಿಂದ ನವಾಬನಾದ. 1844ರಲ್ಲಿ ಈತ ಮೃತನಾದ ಅನಂತರ ಈತನ ಮಗ ಸುಲ್ತಾನ ಷಾಹಜಹಾನ್ ಉತ್ತರಾಧಿಕಾರಿಯಾದರು ವಾಸ್ತವವಾಗಿ ರಾಜ್ಯಾಡಳಿತವನ್ನು ನಡೆಸಿದ್ದು ಪತ್ನಿ ಸಿಕಂದರ್ ಬೇಗಮಳೇ. ಆಗಿನಿಂದ 1936ರ ತನಕ ಮಹಿಳೆಯೇ ನವಾಬಳಾಗಿ ರಾಜ್ಯಾಧಿಕಾರ ನಡೆಸಿದ್ದು ಈ ರಾಜ್ಯದ ಒಂದು ವಿಶೇಷ. ಸಿಕಂದರ್ ಬೇಗಮ್ ಪ್ರಭಾವಶಾಲಿ ಹಾಗೂ ಸಮರ್ಥ ಆಡಳಿತಗಾರಳು. 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಈಕೆ ಬ್ರಿಟಿಷರಿಗೆ ನೆರವು ನೀಡಿದುದರಿಂದ, ಈಕೆಯ ಆಡಳಿತಕ್ಕೆ ಇನ್ನಷ್ಟು ಪ್ರದೇಶ ಸೇರಿತು. 1868ರಲ್ಲಿ ಷಾಹಜಹಾನ್ ಬೇಗಮ್ ನವಾಬಳಾಗಿ ಸಮರ್ಥವಾಗಿ ಆಡಳಿತ ನಡೆಸಿದಳು. ಈ ಕಾಲದಲ್ಲಿ ಕಾನೂನುಗಳು ಕಾಲಕ್ಕೆ ತಕ್ಕಂತೆ ಪರಿಷ್ಕøತವಾದುವು. ಈಕೆ ಭೂಪಾಲದ ಇತಿಹಾಸವನ್ನು ಉರ್ದುವಿನಲ್ಲಿ ಬರೆಸಿದಳು. 1897ರ ದ್ವಿತೀಯ ಆಫ್‍ಘನ್ ಯುದ್ಧದಲ್ಲಿ ಈಕೆ ಬ್ರಿಟಿಷರಿಗೆ ನೆರವಿತ್ತಳು. ತಾಜ್-ಉಲ್-ಮಸೀದಿ, ಕೆಂಪುಕೋಟೆ, ಬಾರಾಮಹಲ್, ತಾಜ್‍ಮಹಲ್ ಈ ಕಾಲದಲ್ಲಿ ನಿರ್ಮಿತವಾದ ಕೆಲವು ಕಟ್ಟಡಗಳು. 1901ರಲ್ಲಿ ಷಾಹಜಹಾನ್ ಬೇಗಮಳ ಮಗಳು ಸುಲ್ತಾನ ಜಹಾಂಬೇಗಮ್ ಅಧಿಕಾರಕ್ಕೆ ಬಂದಳು. ಈಕೆಯೂ ಸಮರ್ಥಳಾಗಿದ್ದು ತಾಯಿ ಮಾಡಿದ ಸುಧಾರಣೆಗಳನ್ನು ಇನ್ನಷ್ಟು ವಿಸ್ತರಿಸಿದಳು. ಈಕೆಯ ಮೊದಲ ಮಹಾಯುದ್ಧಕಾಲದಲ್ಲಿ ಬ್ರಿಟಿಷರಿಗೆ ಸಹಾಯಮಾಡಿದಳು. 1936ರಲ್ಲಿ ಈಕೆಯ ಮಗ ಮಹಮದ್ ಹಮೀದುಲಾಖಾನ್ ನವಾಬನಾದ. ಈತನೂ ಸಮರ್ಥ ಆಡಳಿತಗಾರನಾಗಿದ್ದ. 1947ರಲ್ಲಿ ಭಾರತ ಸ್ವತಂತ್ರವಾದಾಗ ಭೂಪಾಲರಾಜ್ಯ ಭಾರತ ಗಣರಾಜ್ಯದಲ್ಲಿ ವಿಲೀನವಾಯಿತು. 1949ರಲ್ಲಿ ಈತ ಸರ್ಕಾರದ ರಾಜಧನವನ್ನು ಒಪ್ಪಿಕೊಂಡ. ಮುಂದೆ ರಾಜ್ಯ ಪುನರ್ವಿಂಗಡಣೆಯ ಕಾಲದಲ್ಲಿ (1956) ಭೂಪಾಲ ಮಧ್ಯಪ್ರದೇಶದಲ್ಲಿ ಸೇರಿಹೋಗಿ ಅದರ ರಾಜಧಾನಿಯಾಯಿತು. ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಭೋಪಾಲ್ ನಗರದ ಅಧಿಕೃತ ತಾಣ ಭೋಪಾಲ್ ಪುರಸಭೆಯ ತಾಣ ಭೋಪಾಲ್ ವಿಮಾನನಿಲ್ದಾಣ ಭೋಪಾಲ್ ಪ್ರವಾಸೋದ್ಯಮ ಭೋಪಾಲ್ ಹವಾಮಾನ ಭೋಪಾಲದ ಹಕ್ಕಿಗಳು ಭಾರತದ ಪಟ್ಟಣಗಳು ಭಾರತದ ರಾಜಧಾನಿ ಪಟ್ಟಣಗಳು ಮಧ್ಯ ಪ್ರದೇಶ
2263
https://kn.wikipedia.org/wiki/%E0%B2%AE%E0%B3%81%E0%B2%82%E0%B2%AC%E0%B2%AF%E0%B2%BF.
ಮುಂಬಯಿ.
ಮುಂಬಯಿನಗರ ಮಹಾರಾಷ್ಟ್ರದ ರಾಜಧಾನಿ. ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನ (೨೦೦೬ ರ ಅಂದಾಜು) ವಾಸಿಸುವರು. ಇದು ಭಾರತದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯಿರುವ ನಗರವಾಗಿದೆ. ಮುಂಬೈ ವಾಸ್ತವಿಕ ಹಣಕಾಸು ಕೇಂದ್ರವಾಗಿದೆ ಮತ್ತು ಅಂದಾಜು ೧೨.೫ ಮಿಲಿಯನ್ (೧.೨೫ ಕೋಟಿ) ನಗರ ಸರಿಯಾದ ಜನಸಂಖ್ಯೆಯನ್ನು ಹೊಂದಿರುವ ಭಾರತದ ಅತ್ಯಂತ ಜನನಿಬಿಡ ನಗರವಾಗಿದೆ . ಮುಂಬಯಿಯ ಉಪನಗರಗಳೂ ಸೇರಿದರೆ ಒಟ್ಟು ಜನಸಂಖ್ಯೆ ಎರಡು ಕೋಟಿ ಮೀರಿ ಪ್ರಪಂಚದಲ್ಲಿಯೇ ಐದನೆಯ ಅತಿ ದೊಡ್ಡ ನಗರವೆನಿಸುತ್ತದೆ. ಮುಂಬೈ ಮುಂಬೈ ಮಹಾನಗರ ಪ್ರದೇಶದ ಕೇಂದ್ರವಾಗಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಡಿಯಲ್ಲಿ ವಾಸಿಸುವ ೨೩ ಮಿಲಿಯನ್ (೨.೩ ಕೋಟಿ) ಜನಸಂಖ್ಯೆಯನ್ನು ಹೊಂದಿರುವ ವಿಶ್ವದ ಆರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಹಾನಗರ ಪ್ರದೇಶವಾಗಿದೆ . ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಮುಂಬಯಿ ಸ್ವಾಭಾವಿಕ ಬಂದರೂ ಆಗಿದ್ದು ಭಾರತದ ಸಮುದ್ರಮಾರ್ಗದ ಐವತ್ತು ಶೇಕಡಾ ಪ್ರವಾಸಿಗಳು ಹಾಗೂ ಸರಕು ಇಲ್ಲಿಂದಲೇ ಸಾಗಿಸಲ್ಪಡುತ್ತದೆ. ಮುಂಬಯಿಯನ್ನು ಭಾರತದ ಆರ್ಥಿಕ ಹಾಗೂ ಮನರಂಜನಾಲೋಕದ ರಾಜಧಾನಿ ಎಂದೂ ಪರಿಗಣಿಸಲಾಗಿದೆ. ಸಂಜಯಗಾಂಧಿ ರಾಷ್ಟ್ರೀಯ ಉದ್ಯಾನವನ ನಗರದ ಸರಹದ್ದಿನಲ್ಲಿಯೇ ಇರುವುದು ಬಹುತೇಕ ಮತ್ತಾವುದೇ ನಗರಗಳಲ್ಲಿ ಕಂಡುಬರದ ವೈಶಿಷ್ಟ್ಯ. ಮುಂಬೈಯನ್ನು ರೂಪಿಸುವ ಏಳು ದ್ವೀಪಗಳು ಮೊದಲು ಮರಾಠಿ ಭಾಷೆ ಮಾತನಾಡುವ ಕೋಲಿ ಜನರ ಸಮುದಾಯಗಳಿಗೆ ನೆಲೆಯಾಗಿತ್ತು . ಶತಮಾನಗಳವರೆಗೆ ಬಾಂಬೆಯ ಏಳು ದ್ವೀಪಗಳು ಪೋರ್ಚುಗೀಸ್ ಸಾಮ್ರಾಜ್ಯಕ್ಕೆ ಬಿಟ್ಟುಕೊಡುವ ಮೊದಲು ಸತತ ಸ್ಥಳೀಯ ಆಡಳಿತಗಾರರ ನಿಯಂತ್ರಣದಲ್ಲಿತ್ತು. ತರುವಾಯ ೧೬೬೧ ರಲ್ಲಿ ಕ್ಯಾಥರೀನ್ ಬ್ರಗಾಂಜಾಳ ವರದಕ್ಷಿಣೆಯ ಮೂಲಕ ಇಂಗ್ಲೆಂಡ್‌ನ ಎರಡನೇ ಚಾರ್ಲ್ಸ್‌ರನ್ನು ವಿವಾಹವಾದಾಗ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿತ್ತು . ೧೭೮೨ ರಲ್ಲಿ ಪ್ರಾರಂಭವಾಗಿ ಮುಂಬೈಯನ್ನು ಹಾರ್ನ್‌ಬಿ ವೆಲ್ಲಾರ್ಡ್ ಯೋಜನೆಯಿಂದ ಮರುರೂಪಿಸಲಾಯಿತು. ಇದು ಸಮುದ್ರದಿಂದ ಏಳು ದ್ವೀಪಗಳ ನಡುವಿನ ಪ್ರದೇಶವನ್ನು ಪುನಶ್ಚೇತನಗೊಳಿಸಿತು . ಪ್ರಮುಖ ರಸ್ತೆಗಳು ಮತ್ತು ರೈಲುಮಾರ್ಗಗಳ ನಿರ್ಮಾಣದ ಜೊತೆಗೆ ೧೮೪೫ ರಲ್ಲಿ ಪೂರ್ಣಗೊಂಡ ಪುನಶ್ಚೇತನ ಯೋಜನೆಯು ಮುಂಬೈಯನ್ನು ಅರೇಬಿಯನ್ ಸಮುದ್ರದ ಪ್ರಮುಖ ಬಂದರು ಆಗಿ ಪರಿವರ್ತಿಸಿತು. ೧೯ ನೇ ಶತಮಾನದಲ್ಲಿ ಮುಂಬೈ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯಿಂದ ನಿರೂಪಿಸಲ್ಪಟ್ಟಿದೆ. ೨೦ ನೇ ಶತಮಾನದ ಆರಂಭದಲ್ಲಿ ಇದು ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಬಲವಾದ ನೆಲೆಯಾಯಿತು. ೧೯೪೭ ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ ನಗರವನ್ನು ಬಾಂಬೆ ರಾಜ್ಯಕ್ಕೆ ಸೇರಿಸಲಾಯಿತು. ೧೯೬೦ ರಲ್ಲಿ ಸಂಯುಕ್ತ ಮಹಾರಾಷ್ಟ್ರ ಚಳವಳಿಯ ನಂತರ ಮುಂಬೈ ರಾಜಧಾನಿಯಾಗಿ ಮಹಾರಾಷ್ಟ್ರದ ಹೊಸ ರಾಜ್ಯವನ್ನು ರಚಿಸಲಾಯಿತು. ನಗರವು ಪ್ರಮುಖ ಹಣಕಾಸು ಸಂಸ್ಥೆಗಳನ್ನು ಹೊಂದಿದೆ ಮತ್ತು ಹಲವಾರು ಭಾರತೀಯ ಕಂಪನಿಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳ ಕಾರ್ಪೊರೇಟ್ ಪ್ರಧಾನ ಕಛೇರಿಗಳನ್ನು ಹೊಂದಿದೆ. ಇದು ಭಾರತದ ಕೆಲವು ಪ್ರಮುಖ ವೈಜ್ಞಾನಿಕ ಮತ್ತು ಪರಮಾಣು ಸಂಸ್ಥೆಗಳಿಗೆ ನೆಲೆಯಾಗಿದೆ. ಈ ನಗರವು ಬಾಲಿವುಡ್ ಮತ್ತು ಮರಾಠಿ ಸಿನಿಮಾ ಉದ್ಯಮಗಳಿಗೆ ನೆಲೆಯಾಗಿದೆ. ಮುಂಬೈನ ವ್ಯಾಪಾರ ಅವಕಾಶಗಳು ಭಾರತದಾದ್ಯಂತ ವಲಸಿಗರನ್ನು ಆಕರ್ಷಿಸುತ್ತವೆ. ಹೆಸರಿನ ಮೂಲ ಮುಂಬಯಿ ಹೆಸರಿನ ಮೂಲ ಮುಂಬಾದೇವಿ ಎಂಬ ದೇವಿಯ ಹೆಸರು. ಮುಂಬಾದೇವಿ ದೇವಾಲಯ ಇಂದಿಗೂ ಮುಂಬಯಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಕೆಲವು ದಾಖಲೆಗಳ ಪ್ರಕಾರ ಕಥಿಯಾವಾರ್ ಮತ್ತು ಮಧ್ಯ ಗುಜರಾತ್‌ನಿಂದ ಬಂದಿರುವ ಕೋಲಿ ಸಮುದಾಯವು ತಮ್ಮ ಆರಾಧ್ಯ ದೈವವಾದ ಮುಂಬಾವನ್ನು ಕಥಿಯಾವಾರ್‌ನಿಂದ (ಗುಜರಾತ್) ಪರಿಚಯಿಸಿದೆ ಎಂದು ನಂಬಲಾಗಿದೆ. ಅಲ್ಲಿ ಅವಳ ಆರಾಧನೆ ಇಂದಿಗೂ ಮುಂದುವರೆದಿದೆ . ಆದಾಗ್ಯೂ ಮುಂಬೈನ ಹೆಸರು ಮುಂಬಾ ದೇವತೆಯಿಂದ ಬಂದಿದೆ ಎಂದು ಇತರ ಮೂಲಗಳು ಒಪ್ಪುವುದಿಲ್ಲ. ಪೋರ್ಚುಗೀಸರು ಈ ಪ್ರದೇಶವನ್ನು ಬೋಮ್ ಬಹಿಯಾ ಎಂದೂ ಬ್ರಿಟಿಷರು ಮುಂಬಯಿ ಎಂದೂ ನಾಮಕರಣ ಮಾಡಿದ್ದರು. ಮುಂಬಯಿ ಎಂದೇ ಪ್ರತೀತಿಯಲ್ಲಿದ್ದ ಈ ನಗರವನ್ನು ವಿಧ್ಯುಕ್ತವಾಗಿ ಮುಂಬಯಿ ಎಂದು ೧೯೯೫ರಲ್ಲಿ ಪುನರ್ನಾಮಕರಣ ಮಾಡಲಾಯಿತು. ಕನ್ನಡದಲ್ಲಿ ಹಾಗೂ ಬಳಕೆಯಲ್ಲಿ ಮುಂಬೈ, ಮುಂಬಯಿ, ಬಾಂಬೆ ಬಂಬಯಿ, ಹಾಗೂ ಬೊಂಬಾಯಿ ಎಂದು ಕರೆಯುವುದು ರೂಢಿಯಲ್ಲಿದೆ. ನಗರಕ್ಕೆ ತಿಳಿದಿರುವ ಅತ್ಯಂತ ಹಳೆಯ ಹೆಸರುಗಳೆಂದರೆ ಕಾಕಮುಚೀ ಮತ್ತು ಗಲಾಜುಂಕ್ಜಾ. ಇವುಗಳನ್ನು ಕೆಲವೊಮ್ಮೆ ಇನ್ನೂ ಬಳಸಲಾಗುತ್ತದೆ. ಪೋರ್ಚುಗೀಸ್ ಬರಹಗಾರ ಗ್ಯಾಸ್ಪರ್ ಕೊರೆಯಾ ೧೫೧೨ ರ ನಂತರ ತನ್ನ ಲೆಂಡಾಸ್ ಡ ಆಂಡಿಯಾ (ಲೆಜೆಂಡ್ಸ್ ಆಫ್ ಇಂಡಿಯಾ) ನಲ್ಲಿ "ಬೊಂಬೈಮ್" ಎಂಬ ಹೆಸರನ್ನು ದಾಖಲಿಸಿದ್ದಾನೆ. ಕೆಲವು ಆಂಗ್ಲೋಫೋನ್ ಲೇಖಕರು ಈ ಹೆಸರು ಪ್ರಾಯಶಃ "ಒಳ್ಳೆಯ ಪುಟ್ಟ ಕೊಲ್ಲಿ" ಎಂಬ ಅರ್ಥವನ್ನು ಹೊಂದಿರುವ ಗ್ಯಾಲಿಷಿಯನ್-ಪೋರ್ಚುಗೀಸ್ ನುಡಿಗಟ್ಟು ಬೊಮ್ ಬೈಮ್ ಎಂದು ಹುಟ್ಟಿಕೊಂಡಿರಬಹುದು ಎಂದು ಸೂಚಿಸಿದ್ದಾರೆ. ಅಂತಹ ಸಲಹೆಗಳು ಯಾವುದೇ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ. ಪೋರ್ಚುಗೀಸ್ ಭಾಷಾಶಾಸ್ತ್ರಜ್ಞ ಜೋಸ್ ಪೆಡ್ರೊ ಮಚಾಡೊ ಈ ಲೇಖಕರ ಪೋರ್ಚುಗೀಸ್ ಭಾಷೆಯ ಕೊರತೆಯ ಜ್ಞಾನಕ್ಕೆ ಆ ವ್ಯಾಖ್ಯಾನವನ್ನು ಆರೋಪಿಸಿದ್ದಾರೆ. ಪೋರ್ಚುಗೀಸ್ ಪದ "ಬೊಮ್" ಅನ್ನು ಇಂಗ್ಲಿಷ್ "ಬೇ" ಹೆಸರಿನ ಇಂಗ್ಲಿಷ್ ಆವೃತ್ತಿಯಿಂದ ಬೆರೆಸಿದ್ದಾರೆ. ೧೫೧೬ ರಲ್ಲಿ ಪೋರ್ಚುಗೀಸ್ ಪರಿಶೋಧಕ ಡುವಾರ್ಟೆ ಬಾರ್ಬೋಸಾ ಅವರು ತಾನಾ-ಮೈಯಾಂಬು ಎಂಬ ಹೆಸರನ್ನು ಬಳಸಿದರು. ತಾನಾ ಪಕ್ಕದ ಪಟ್ಟಣವಾದ ಥಾಣೆ ಮತ್ತು ಮೈಯಾಂಬುವನ್ನು ಮುಂಬಾದೇವಿಗೆ ಉಲ್ಲೇಖಿಸುತ್ತದೆ. ಬೊಂಬೈಮ್ ಎಂಬ ರೂಪವನ್ನು ಪೋರ್ಚುಗೀಸ್ ಭಾಷೆಯಲ್ಲಿ ಈಗಲೂ ಬಳಸಲಾಗುತ್ತದೆ. ೧೬ ನೇ ಮತ್ತು ೧೭ ನೇ ಶತಮಾನಗಳಲ್ಲಿ ದಾಖಲಾದ ಇತರ ಮಾರ್ಪಾಡುಗಳೆಂದರೆ: ಮೊಂಬೆನ್ (೧೫೨೫), ಬಾಂಬೆ (೧೫೩೮), ಬಾಂಬೆನ್ (೧೫೫೨), ಬಾಂಬೆಮ್ (೧೫೫೨), ಮೊನ್‌ಬೇಮ್ (೧೫೫೪), ಮೊಂಬೈಮ್ (೧೫೬೩), ಮೊಂಬೆಮ್ (೧೬೪೪), ಬಾಂಬೆ (೧೬೪೬), ಬೊಂಬಾಯಿಮ್ (೧೬೬೬), ಬಾಂಬೆ (೧೬೭೬), ಬೂನ್ ಬೇ (೧೬೯೦), ಮತ್ತು ಬಾನ್ ಬಹಿಯಾ. ೧೭ ನೇ ಶತಮಾನದಲ್ಲಿ ಇಂಗ್ಲಿಷ್ ನಗರವನ್ನು ಸ್ವಾಧೀನಪಡಿಸಿಕೊಂಡ ನಂತರ ಪೋರ್ಚುಗೀಸ್ ಹೆಸರನ್ನು ಬಾಂಬೆ ಎಂದು ಆಂಗ್ಲೀಕರಿಸಲಾಯಿತು. ಅಲಿ ಮುಹಮ್ಮದ್ ಖಾನ್, ಸಾಮ್ರಾಜ್ಯಶಾಹಿ ದಿವಾನ್ ಅಥವಾ ಗುಜರಾತ್ ಪ್ರಾಂತ್ಯದ ಕಂದಾಯ ಮಂತ್ರಿ, ಮಿರಾತ್-ಐ ಅಹ್ಮೆದಿ (1762) ನಲ್ಲಿ ನಗರವನ್ನು ಮಾನ್ಬೈ ಎಂದು ಉಲ್ಲೇಖಿಸಿದ್ದಾರೆ. ೨೦ ನೇ ಶತಮಾನದ ಅಂತ್ಯದ ವೇಳೆಗೆ ನಗರವನ್ನು ಮರಾಠಿ, ಕೊಂಕಣಿ, ಗುಜರಾತಿ, ಕನ್ನಡ ಮತ್ತು ಸಿಂಧಿಯಲ್ಲಿ ಮುಂಬೈ ಅಥವಾ ಮಾಂಬೈ ಎಂದು ಮತ್ತು ಹಿಂದಿಯಲ್ಲಿ ಬಾಂಬೈ ಎಂದು ಉಲ್ಲೇಖಿಸಲಾಗಿದೆ. ನವೆಂಬರ್ ೧೯೯೫ ರಲ್ಲಿ ಭಾರತ ಸರ್ಕಾರವು ಅಧಿಕೃತವಾಗಿ ಇಂಗ್ಲಿಷ್ ಹೆಸರನ್ನು ಮುಂಬೈ ಎಂದು ಬದಲಾಯಿಸಿತು. ಇದು ಮಹಾರಾಷ್ಟ್ರ ರಾಜ್ಯ ಚುನಾವಣೆಯಲ್ಲಿ ಜಯಗಳಿಸಿದ ಮರಾಠಿ ರಾಷ್ಟ್ರೀಯವಾದಿ ಶಿವಸೇನೆ ಪಕ್ಷದ ಒತ್ತಾಯದ ಮೇರೆಗೆ ಬಂದಿತು. ದೇಶಾದ್ಯಂತ ಮತ್ತು ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಇದೇ ರೀತಿಯ ಹೆಸರು ಬದಲಾವಣೆಗಳನ್ನು ಪ್ರತಿಬಿಂಬಿಸಿತು. ಸ್ಲೇಟ್ ನಿಯತಕಾಲಿಕದ ಪ್ರಕಾರ, "ಅವರು 'ಬಾಂಬೆ' ಎಂಬುದು 'ಮುಂಬೈ' ನ ಭ್ರಷ್ಟ ಇಂಗ್ಲಿಷ್ ಆವೃತ್ತಿ ಮತ್ತು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಅನಗತ್ಯ ಪರಂಪರೆ ಎಂದು ವಾದಿಸಿದರು." "ಮಹಾರಾಷ್ಟ್ರ ಪ್ರದೇಶದಲ್ಲಿ ಮರಾಠಿ ಗುರುತನ್ನು ಬಲಪಡಿಸುವ ದೊಡ್ಡ ಆಂದೋಲನದ ಭಾಗವಾಗಿ ಬಾಂಬೆಯನ್ನು ಮರುನಾಮಕರಣ ಮಾಡುವ ಪ್ರಯತ್ನವು" ಎಂದು ಸ್ಲೇಟ್ ಹೇಳಿದರು. ಮುಂಬೈಯನ್ನು ಅದರ ಕೆಲವು ನಿವಾಸಿಗಳು ಮತ್ತು ಇತರ ಪ್ರದೇಶಗಳ ಕೆಲವು ಭಾರತೀಯರು ಇನ್ನೂ ಬಾಂಬೆ ಎಂದು ಕರೆಯುತ್ತಾರೆ. ಮುಂಬೈಯನ್ನು ಹೊರತುಪಡಿಸಿ ಬೇರೆ ಹೆಸರಿನಿಂದ ನಗರದ ಉಲ್ಲೇಖವು ವಿವಾದಾಸ್ಪದವಾಗಿದೆ. ಮುಂಬೈನ ಜನರು ಮುಂಬೈ ನಿವಾಸಿಯನ್ನು ಮರಾಠಿಯಲ್ಲಿ ಮುಂಬೈಕರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರತ್ಯಯ -ಕರ್ ಎಂದರೆ ನಿವಾಸಿ. ಈ ಪದವು ಸ್ವಲ್ಪ ಸಮಯದವರೆಗೆ ಬಳಕೆಯಲ್ಲಿತ್ತು. ಆದರೆ ಅಧಿಕೃತ ಹೆಸರನ್ನು ಮುಂಬೈ ಎಂದು ಬದಲಾಯಿಸಿದ ನಂತರ ಇದು ಜನಪ್ರಿಯತೆಯನ್ನು ಗಳಿಸಿತು. ಬೊಂಬಾಯಿಟ್ ಮುಂತಾದ ಹಳೆಯ ಪದಗಳೂ ಬಳಕೆಯಲ್ಲಿವೆ. ಇತಿಹಾಸ ಮುಂಬೈ ಅನ್ನು ಒಂದು ಕಾಲದಲ್ಲಿ ಏಳು ದ್ವೀಪಗಳ ದ್ವೀಪಸಮೂಹದಲ್ಲಿ ನಿರ್ಮಿಸಲಾಗಿದೆ. ಅವುಗಳೆಂದರೆ ಐಲ್ ಆಫ್ ಬಾಂಬೆ, ಪರೇಲ್, ಮಜಗಾಂವ್, ಮಾಹಿಮ್, ಕೊಲಾಬಾ, ವರ್ಲಿ ಮತ್ತು ಓಲ್ಡ್ ವುಮನ್ಸ್ ಐಲ್ಯಾಂಡ್ (ಇದನ್ನು ಲಿಟಲ್ ಕೊಲಾಬಾ ಎಂದೂ ಕರೆಯಲಾಗುತ್ತದೆ). ಶಿಲಾಯುಗದ ಕಾಲದಿಂದಲೂ ಈ ದ್ವೀಪಗಳಲ್ಲಿ ಜನವಸತಿಯಿದ್ದ ಪುರಾವೆಗಳಿವೆ. ಉತ್ತರ ಮುಂಬೈನ ಕಂಡಿವಲಿಯ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳಲ್ಲಿ ಕಂಡುಬರುವ ಪ್ಲೆಸ್ಟೊಸೀನ್ ಅವಕ್ಷೇಪಗಳು ದಕ್ಷಿಣ ಏಷ್ಯಾದ ಶಿಲಾಯುಗದಿಂದಲೂ ದ್ವೀಪಗಳು ವಾಸವಾಗಿದ್ದವು ಎಂದು ಸೂಚಿಸುತ್ತದೆ. ಬಹುಶಃ ಸಾಮಾನ್ಯ ಯುಗದ ಆರಂಭದಲ್ಲಿ ಅಥವಾ ಪ್ರಾಯಶಃ ಮುಂಚೆ ಅವರು ಕೋಲಿ ಮೀನುಗಾರ ಸಮುದಾಯದಿಂದ ಆಕ್ರಮಿಸಿಕೊಂಡರು. ದಕ್ಷಿಣದಲ್ಲಿ ಅದರ ವಿಸ್ತರಣೆಯ ಸಮಯದಲ್ಲಿ ಮಗಧದ ಬೌದ್ಧ ಚಕ್ರವರ್ತಿ ಅಶೋಕನು ಆಳಿದನು. ಬೊರಿವಲಿಯಲ್ಲಿರುವ ಕನ್ಹೇರಿ ಗುಹೆಗಳನ್ನು ಮೊದಲ ಶತಮಾನದ ಸಾಮಾನ್ಯ ಯುಗದಲ್ಲಿ ಬಸಾಲ್ಟ್ ಬಂಡೆಯಿಂದ ಉತ್ಖನನ ಮಾಡಲಾಯಿತು ಮತ್ತು ಪ್ರಾಚೀನ ಕಾಲದಲ್ಲಿ ಪಶ್ಚಿಮ ಭಾರತದಲ್ಲಿ ಬೌದ್ಧಧರ್ಮದ ಪ್ರಮುಖ ಕೇಂದ್ರವಾಗಿತ್ತು. ಇವುಗಳಲ್ಲಿ ಅತ್ಯಂತ ಪುರಾತನ ದಾಖಲೆ ಕ್ರಿ.ಪೂ. ೨೫೦ರಷ್ಟು ಹಿಂದಿನದಾಗಿದ್ದು ಗ್ರೀಕ್ ಮೂಲದ ಈ ದಾಖಲೆಯಲ್ಲಿ ಮುಂಬಯಿಯನ್ನು ಹೆಪ್ಟನೇಶಿಯಾ (ಅರ್ಥಾತ್ ಸಪ್ತದ್ವೀಪಸಮೂಹ)ಎಂಬ ಹೆಸರಿನಿಂದ ಉಲ್ಲೇಖಿಸಲಾಗಿದೆ. ಕ್ರಿ.ಪೂ ೩ ರಲ್ಲಿ ಈ ದ್ವೀಪಗಳು ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ಭಾಗವಾಗಿದ್ದವು. ಈ ಪ್ರದೇಶವು ಮುಂದೆ ಕ್ರಿ.ಶ. ೧೩೪೩ ರವರೆಗೂ ಶಿಲಾಹಾರರ ಸಾಮ್ರಾಜ್ಯದ ಅಂಗವಾಗಿ ತದನಂತರ ಗುಜರಾತ್ ಸಾಮ್ರಾಜ್ಯದ ಅಧೀನವಾಯಿತು. ಎಲಿಫೆಂಟಾ ಗುಹೆಗಳು ಹಾಗೂ ವಾಳಕೇಶ್ವರ ದೇವಾಲಯಗಳು ಇದೇ ಕಾಲದಲ್ಲಿ ನಿರ್ಮಿಸಲ್ಪಟ್ಟವು. ೧೫೩೪ರಲ್ಲಿ ಬಹಾದ್ದೂರ ಷಾನಿಂದ ಮುಂಬಯಿಯನ್ನು ಪೋರ್ಚುಗೀಸರು ವಶಪಡಿಸಿಕೊಂಡು. ಅದಕ್ಕೆ ಮಾಮ್ ಬಹಿಯಾ ಎಂದು ಹೆಸರಿಟ್ಟರು. ೧೬೬೧ರ ಇಂಗ್ಲೆಂಡಿನ ರಾಜ ಎರಡನೆಯ ಚಾರ್ಲ್ಸ್ ಹಾಗೂ ಪೋರ್ಚುಗೀಸ್ ರಾಜಕನ್ಯೆ ಕ್ಯಾಥರೀನ್ ದ ಬ್ರಗಾಂಝ ಇವರ ವಿವಾಹದ ಸಂದರ್ಭದಲ್ಲಿ ಮುಂಬಯಿ ಪ್ರದೇಶವನ್ನು ಪೋರ್ಚುಗೀಸರಿಂದ ಬಳುವಳಿಯಾಗಿ ಪಡೆದ ಬ್ರಿಟಿಷ್ ರಾಜಮನೆತನವು ಮುಂದೆ ಈಸ್ಟ್ ಇಂಡಿಯಾ ಕಂಪನಿಗೆ ಬಾಡಿಗೆಯ ಮೇಲೆ ಮುಂಬಯಿಯನ್ನು ನೀಡಿತು. ತಮ್ಮ ವ್ಯಾಪಾರಕ್ಕಾಗಿ ಬಂದರು ನಿರ್ಮಿಸಲು ಮುಂಬಯಿ ಭೂ ಖಂಡವು ಪ್ರಶಸ್ತವಾದದ್ದು ಎಂದು ಈಸ್ಟ್ ಇಂಡಿಯಾ ಕಂಪನಿ ಭಾವಿಸಿತು. ೧೬೬೧ರಲ್ಲಿ ೧೦,೦೦೦ ದಷ್ಟಿದ್ದ ಮುಂಬಯಿಯ ಜನಸಂಖ್ಯೆ ೧೬೮೭ರಲ್ಲಿ ೬೦,೦೦೦ ಕ್ಕೇರಿತ್ತು. ೧೬೮೭ರಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಕಾರ್ಯಾಲಯವನ್ನು ಸೂರತ್ತಿನಿಂದ ಮುಂಬಯಿಗೆ ಬದಲಾಯಿಸಿತು. ಕಾಲಾಂತರದಲ್ಲಿ ಇದು ಮುಂಬಯಿ ಪ್ರಾಂತದ ರಾಜಧಾನಿಯಾಯಿತು. ಹಾರ್ನ್^ಬೀ ವೆಲ್ಲಾರ್ಡ್ ಎಂಬ ಯೋಜನೆಯಲ್ಲಿ ೧೮೧೭ ರಿಂದ ೧೮೪೫ ರವರೆಗೂ ಮುಂಬಯಿಯ ಏಳು ದ್ವೀಪಗಳನ್ನು ಜೋಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಮುಂಬಯಿಯ ವಿಸ್ತೀರ್ಣ ೪೩೮ ಚದರ ಕಿ.ಮೀ ಗಳಿಗೇರಿತು. ಏಶಿಯಾದಲ್ಲಿಯೇ ಮೊಟ್ಟಮೊದಲ ರೈಲು ಮಾರ್ಗವನ್ನು ಮುಂಬಯಿಯಲ್ಲಿ ೧೮೫೩ರಲ್ಲಿ ನಿರ್ಮಿಸಲಾಯಿತು. ಅಮೆರಿಕಾದಲ್ಲಿ ಅಂತರ್ಯುದ್ಧದ ಕಾಲದಲ್ಲಿ ಜಗತ್ತಿನ ಪ್ರಮುಖ ಅರಳೆಪೇಟೆಗಳಲ್ಲಿ ಒಂದು ಎಂಬ ಹೆಸರು ಪಡೆದುಕೊಂಡ ಮುಂಬಯಿ ಭರದಿಂದ ಬೆಳೆಯತೊಡಗಿತು. ಸುಯೆಝ್ ಕಾಲುವೆಯ ನಿರ್ಮಾಣವಾದ ಮೇಲೆ ಮುಂಬಯಿ ಅರಬ್ಬೀ ಸಮುದ್ರದ ಪ್ರಮುಖ ಬಂದರಾಯಿತು. ಮುಂಬಯಿ ಮುಂದಿನ ೩೦ ವರ್ಷಗಳಲ್ಲಿ ದಾಪುಗಾಲಿನಿಂದ ಪ್ರಗತಿ ಹೊಂದಿತು. ೧೯೦೬ರ ಸುಮಾರಿಗೆ ಮುಂಬಯಿಯ ಜನಸಂಖ್ಯೆ ೧೦ ಲಕ್ಷ ದಾಟಿ ಕೋಲ್ಕತ್ತಾ ಬಿಟ್ಟರೆ ಭಾರತದ ಅತಿ ದೊಡ್ಡ ನಗರವಾಗಿ ಹೆಸರಾಯಿತು. ಮುಂಬಯಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಪ್ರಮುಖ ಸ್ಥಾನ ಹೊಂದಿತ್ತು. ೧೯೪೨ ರಲ್ಲಿ ಮಹಾತ್ಮ ಗಾಂಧಿ ಸುಪ್ರಸಿದ್ಧ 'ಭಾರತ ಬಿಟ್ಟು ತೊಲಗಿ' (ಚಲೇಜಾವ್) ಚಳುವಳಿಗೆ ನಾಂದಿ ಹಾಡಿದ್ದು ಮುಂಬಯಿಯಲ್ಲಿಯೇ. ಸ್ವಾತಂತ್ರ್ಯಾನಂತರ ಮುಂಬಯಿ ಪ್ರಾಂತೀಯ ರಾಜಧಾನಿಯಾಯಿತು. ೧೯೫೦ರಲ್ಲಿ ಮುಂಬಯಿ ಸಾಲ್ಸೆಟ್ ದ್ವೀಪದವರೆಗೂ ಹಬ್ಬಿತ್ತು. ೧೯೫೫ರ ಸುಮಾರಿಗೆ ಮುಂಬಯಿ ಪ್ರಾಂತವನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ಎಂದು ವಿಭಜಿಸಬೇಕು ಎಂಬ ಕೂಗು ಹೆಚ್ಚಾಗತೊಡಗಿತು. ಮುಂಬಯಿ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರೆಯಬೇಕು ಎಂದೂ ಕೆಲವರ ಅಭಿಮತವಾಗಿತ್ತು. ಸಂಯುಕ್ತ ಮಹಾರಾಷ್ಟ್ರ ಚಳುವಳಿ ಇದನ್ನು ವಿರೋಧಿಸಿ ಮುಂಬಯಿಯನ್ನು ಮಹಾರಾಷ್ಟ್ರದ ರಾಜಧಾನಿಯಾಗಿ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಯಿತು. ಎಪ್ಪತ್ತರ ದಶಕದಲ್ಲಿ ಮುಂಬಯಿಯಲ್ಲಿ ಕಟ್ಟಡ ನಿರ್ಮಾಣ ಉದ್ಯಮ ಭರದಿಂದ ಪ್ರಗತಿಯಾಗಿ ದೊಡ್ಡಪ್ರಮಾಣದಲ್ಲಿ ಪರಪ್ರಾಂತೀಯರ ವಲಸೆ ಮುಂಬಯಿಯತ್ತ ಹರಿದುಬಂದಿತು. ಇದೇ ಕಾಲದಲ್ಲಿ ಮುಂಬಯಿ ಕೋಲ್ಕತ್ತಾವನ್ನು ಹಿಂದೆ ಹಾಕಿ ಭಾರತದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹೆಚ್ಚುತ್ತಿದ್ದ ಪರಪ್ರಾಂತೀಯರ ಸಂಖ್ಯೆಯಿಂದ ಸ್ಥಳೀಯರಲ್ಲಿ ಅಸಮಾಧಾನ ಹೊಗೆಯಾಡತೊಡಗಿತು. ಇದರ ಪರಿಣಾಮವಾಗಿ ಸ್ಥಳೀಯ ನಾಗರೀಕರ ಹಿತರಕ್ಷಣೆಯ ಧ್ಯೇಯಹೊತ್ತ ಶಿವಸೇನಾ ಎಂಬ ರಾಜಕೀಯ ಸಂಘಟನೆಯ ಉದಯವಾಯಿತು. ಬಾಳಾಸಾಹೇಬ ಠಾಕರೆಯವರ ನೇತೃತ್ವದ ಈ ಸಂಘಟನೆಗೆ ಸ್ಥಳೀಯರ ಪ್ರಚಂಡ ಬೆಂಬಲ ದೊರಕಿ ಅದು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಸಹಾಯಕವಾಯಿತು. ಭೂಗೋಳ ಭಾರತದ ಪಶ್ಚಿಮ ತೀರದ ಕೊಂಕಣ ಪ್ರದೇಶದಲ್ಲಿರುವ ಉಲ್ಹಾಸ ನದಿಯ ಮುಖಜ ಪ್ರದೇಶವಾಗಿರುವ ಶಾಸ್ತಿ ದ್ವೀಪದ (ಸ್ಥಳೀಯ ಬಳಕೆಯಲ್ಲಿ ಸಾಲ್ಸೆಟ್) ಒಂದು ಭಾಗ ಮುಂಬಯಿ ನಗರ. ಇದು ಪಶ್ಚಿಮಕ್ಕೆ ಅರೇಬಿಯನ್ ಸಮುದ್ರ, ಪೂರ್ವಕ್ಕೆ ಥಾಣೆ ಕ್ರೀಕ್ ಮತ್ತು ಉತ್ತರಕ್ಕೆ ವಸೈ ಕ್ರೀಕ್ ನಡುವೆ ಇದೆ. ಇಲ್ಲಿಯ ಬಹುತೇಕ ಭಾಗ ಸಮುದ್ರ ಮಟ್ಟದಲ್ಲಿದ್ದು ಸರಾಸರಿ ಎತ್ತರ (ಸಮುದ್ರ ಮಟ್ಟದಿಂದ) ೧೦ ರಿಂದ ೧೫ ಮೀಟರಿನಷ್ಟಿದೆ. ಮುಂಬಯಿಯ ಉತ್ತರ ಭಾಗವು ಗುಡ್ಡಗಾಡಾಗಿದ್ದು ೪೫೦ ಮೀ. ಅತಿ ಎತ್ತರದ ಭಾಗವಾಗಿದೆ. ಮುಂಬಯಿಯ ವಿಸ್ತೀರ್ಣ ೪೬೮ ಚದರ ಕಿ.ಮೀ. ನಗರದ ಸರಹದ್ದಿನಲ್ಲಿಯೇ ತುಳಸಿ, ವಿಹಾರ ಮತ್ತು ಪೊವಾಯಿ ಎಂಬ ಮೂರು ಕೆರೆಗಳಿವೆ. ಇದರಲ್ಲಿ ಮೊದಲ ಎರಡು ಬೋರಿವಲಿ ರಾಷ್ಟ್ರೀಯ ಉದ್ಯಾನವನದ ಒಳಗಿದ್ದು ಮುಂಬಯಿಯ ಕುಡಿಯುವ ನೀರನ್ನು ಭಾಗಶಃ ಪೂರೈಸುತ್ತವೆ. ಇದೇ ಉದ್ಯಾನದಿಂದಲೇ ಉಗಮವಾಗುವ ಮೂರೂ ಸಣ್ಣ ನದಿಗಳೂ ಮುಂಬಯಿ ನಗರದಲ್ಲಿ ಹರಿಯುತ್ತವೆ. ನಗರದ ಕಿನಾರೆಯಲ್ಲಿ ಅನೇಕ ಕೊಲ್ಲಿಗಳು ಕಂಡುಬರುತ್ತವೆ. ಸಾಲ್ಸೆಟ್ ದ್ವೀಪದ ಪೂರ್ವಭಾಗದಲ್ಲಿ ವಿಪುಲವಾದ ಜೀವವೈವಿಧ್ಯವಿರುವ ಮ್ಯಾಂಗ್ರೋವ್ ಜೌಗು ಪ್ರದೇಶಗಳಿವೆ. ಪಶ್ಚಿಮಭಾಗದಲ್ಲಿ ಜುಹು ಮತ್ತು ಚೌಪಾಟಿ ಎಂಬ ಎರಡು ಬೀಚುಗಳಿವೆ. ಸಮುದ್ರ ಸಾಮೀಪ್ಯದ ಕಾರಣ ಇಲ್ಲಿ ಮಣ್ಣಿನ ಮೇಲ್ಪದರ ಮರಳು ಮಿಶ್ರಿತವಾಗಿದೆ. ಉಪನಗರಗಳಲ್ಲಿ ಮೆಕ್ಕಲು ಮತ್ತು ಲೋಮಿ ಮಣ್ಣಿನ ಪದರ ಬಹುತೇಕವಾಗಿ ಕಾಣಬರುತ್ತದೆ. ಸಮೀಪದಲ್ಲಿರುವ ಮೂರು ಭೂಬಿರುಕುಗಳ ಕಾರಣ ಮುಂಬಯಿ ನಗರ ಸಕ್ರಿಯ ಭೂಕಂಪ ವಲಯದಲ್ಲಿದೆ. ಭೂಕಂಪ ಸಾಧ್ಯತೆಯಲ್ಲಿ ಮುಂಬಯಿಯನ್ನು ಮೂರನೆಯ ವಲಯವೆಂದು ನಮೂದಿಸಲಾಗಿದೆ. ಅಂದರೆ ರಿಚ್ಟರ್ ಮಾಪಕದಲ್ಲಿ ೬.೫ ರ ಪರಿಮಾಣದ ಭೂಕಂಪವಾಗುವ ಸಾಧ್ಯತೆಗಳಿವೆ. ಮುಂಬಯಿ ಮಹಾನಗರವನ್ನು ನಗರ ಮತ್ತು ಉಪನಗರ ಎಂದು ಎರಡು ಪ್ರದೇಶಗಳಾಗಿ ವಿಂಗಡಿಸಲಾಗಿದ್ದು ಇವೆರಡೂ ಮಹಾರಾಷ್ಟ್ರದ ಪ್ರತ್ಯೇಕ ಜಿಲ್ಲೆಗಳೂ ಆಗಿವೆ. ಇದರಲ್ಲಿ ನಗರ ಪ್ರದೇಶವನ್ನು ದ್ವೀಪ ನಗರ ಅಥವಾ ದಕ್ಷಿಣ ಮುಂಬೈ ಎಂದೂ ಕರೆಯಲಾಗುತ್ತದೆ. ಮುಂಬೈನ ಉಪನಗರ ಜಿಲ್ಲೆ ದ್ವೀಪದ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡಿದೆ. ಮುಂಬೈನ ಒಟ್ಟು ವಿಸ್ತೀರ್ಣ ೨೩೩ ಚದರ ಮೈಲಿ. ಇದರಲ್ಲಿ ದ್ವೀಪ ನಗರವು ೬೭.೭೯ ಚದರ ಕಿ.ಮೀ. ಹಾಗೂ ಉಪನಗರ ಜಿಲ್ಲೆಯು ೩೭೦ ಚದರ ಕಿ.ಮೀ. ವ್ಯಾಪಿಸಿದೆ. ಉಳಿದ ಪ್ರದೇಶಗಳು ವಿವಿಧ ರಕ್ಷಣಾ ಸಂಸ್ಥೆಗಳಿಗೆ ಸೇರಿವೆ. ಮುಂಬೈ ಪೋರ್ಟ್ ಟ್ರಸ್ಟ್, ಪರಮಾಣು ಶಕ್ತಿ ಆಯೋಗ ಮತ್ತು ಬೊರಿವಲಿ ರಾಷ್ಟ್ರೀಯ ಉದ್ಯಾನವನ ಇದು ಗ್ರೇಟರ್ ಮುಂಬೈನ ಮುನ್ಸಿಪಲ್ ಕಾರ್ಪೊರೇಶನ್‌ನ ವ್ಯಾಪ್ತಿಯಿಂದ ಹೊರಗಿದೆ. ಮುಂಬೈ ಮಹಾನಗರ ಪ್ರದೇಶವು ಗ್ರೇಟರ್ ಮುಂಬೈ ಜೊತೆಗೆ ಥಾಣೆ, ಪಾಲ್ಘರ್ ಮತ್ತು ರಾಯಗಡ್ ಜಿಲ್ಲೆಗಳ ಭಾಗಗಳನ್ನು ಒಳಗೊಂಡಿದೆ. ಇದು ೧೬೮೧.೫ ಚದರ ಮೈಲಿ ವಿಸ್ತೀರ್ಣವನ್ನು ಹೊಂದಿದೆ. ಮುಂಬೈ ಭಾರತದ ಪಶ್ಚಿಮ ಕರಾವಳಿಯಲ್ಲಿ ಉಲ್ಲಾಸ್ ನದಿಯ ಮುಖಭಾಗದಲ್ಲಿ ಕೊಂಕಣ ಎಂದು ಕರೆಯಲ್ಪಡುವ ಕರಾವಳಿ ಪ್ರದೇಶದಲ್ಲಿದೆ. ಇದು ಸಾಲ್ಸೆಟ್ ದ್ವೀಪದಲ್ಲಿ (ಸಷ್ಟಿ ದ್ವೀಪ) ನೆಲೆಸಿದ್ದು ಇದು ಥಾಣೆ ಜಿಲ್ಲೆಯೊಂದಿಗೆ ಭಾಗಶಃ ಹಂಚಿಕೊಳ್ಳುತ್ತದೆ. ನಗರದ ಹಲವು ಭಾಗಗಳು ಸಮುದ್ರ ಮಟ್ಟಕ್ಕಿಂತ ಸ್ವಲ್ಪ ಮೇಲಿದ್ದು ೧೦ ಮೀ. (೩೩ ಅಡಿ) ನಿಂದ ೧೫ ಮೀ. (೪೯ ಅಡಿ) ವರೆಗೆ ಎತ್ತರದಲ್ಲಿದೆ. ನಗರವು ಸರಾಸರಿ ೧೪ ಮೀ (೪೬ ಅಡಿ) ಎತ್ತರವನ್ನು ಹೊಂದಿದೆ. ಉತ್ತರ ಮುಂಬೈ (ಸಾಲ್ಸೆಟ್) ಗುಡ್ಡಗಾಡು ಪ್ರದೇಶವಾಗಿದೆ. ನಗರದ ಅತ್ಯುನ್ನತ ಸ್ಥಳವೆಂದರೆ ಪೊವೈ-ಕನ್ಹೇರಿ ಶ್ರೇಣಿಗಳಲ್ಲಿನ ಸಾಲ್ಸೆಟ್ಟೆಯಲ್ಲಿದೆ. ಈ ಸ್ಥಳವು ೪೫೦ ಮೀ (೧೪೭೬ ಅಡಿ) ಎತ್ತರವಿದೆ. ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ (ಬೋರಿವಲಿ ರಾಷ್ಟ್ರೀಯ ಉದ್ಯಾನವನ) ಮುಂಬೈ ಉಪನಗರ ಜಿಲ್ಲೆಯಲ್ಲಿ ಮತ್ತು ಭಾಗಶಃ ಥಾಣೆ ಜಿಲ್ಲೆಯಲ್ಲಿದೆ ಮತ್ತು ಇದು ೩೯.೮೦ ಚದರ ಮೈಲಿ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ಭಟ್ಸಾ ಅಣೆಕಟ್ಟಿನ ಹೊರತಾಗಿ ನಗರಕ್ಕೆ ನೀರು ಸರಬರಾಜು ಮಾಡುವ ಆರು ಪ್ರಮುಖ ಸರೋವರಗಳಿವೆ. ಅವುಗಳೆಂದರೆ ವಿಹಾರ್, ಲೋವರ್ ವೈತರ್ಣ, ಮೇಲಿನ ವೈತರ್ಣ, ತುಳಸಿ, ತಾನ್ಸಾ ಮತ್ತು ಪೊವೈ. ತುಳಸಿ ಸರೋವರ ಮತ್ತು ವಿಹಾರ್ ಸರೋವರಗಳು ನಗರದ ಮಿತಿಯಲ್ಲಿ ಬೊರಿವಿಲಿ ರಾಷ್ಟ್ರೀಯ ಉದ್ಯಾನವನದಲ್ಲಿವೆ. ನಗರ ವ್ಯಾಪ್ತಿಯಲ್ಲಿರುವ ಪೊವಾಯಿ ಸರೋವರದಿಂದ ಸರಬರಾಜನ್ನು ಕೃಷಿ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ. ಮೂರು ಸಣ್ಣ ನದಿಗಳು ಅವುಗಳೆಂದರೆ ದಹಿಸರ್ ನದಿ, ಪೊಯಿನ್ಸರ್ (ಅಥವಾ ಪೊಯ್ಸರ್) ಮತ್ತು ಓಹಿವಾರಾ (ಅಥವಾ ಓಶಿವಾರಾ) ಉದ್ಯಾನವನದೊಳಗೆ ಹುಟ್ಟುತ್ತವೆ. ಆದರೆ ಕಲುಷಿತ ಮಿಥಿ ನದಿಯು ತುಳಸಿ ಸರೋವರದಿಂದ ಹುಟ್ಟುತ್ತದೆ ಹಾಗೂ ವಿಹಾರ್ ಮತ್ತು ಪೊವೈ ಸರೋವರಗಳಿಂದ ಉಕ್ಕಿ ಹರಿಯುವ ನೀರನ್ನು ಸಂಗ್ರಹಿಸುತ್ತದೆ. ಸಾಲ್ಸೆಟ್ ದ್ವೀಪದ ಪೂರ್ವ ಕರಾವಳಿಯು ದೊಡ್ಡ ಮ್ಯಾಂಗ್ರೋವ್ ಜೌಗು ಪ್ರದೇಶಗಳಿಂದ ಆವೃತವಾಗಿದೆ. ಇದು ಜೀವವೈವಿಧ್ಯದಿಂದ ಸಮೃದ್ಧವಾಗಿದೆ. ಆದರೆ ಪಶ್ಚಿಮ ಕರಾವಳಿಯು ಹೆಚ್ಚಾಗಿ ಮರಳು ಮತ್ತು ಕಲ್ಲಿನಿಂದ ಕೂಡಿದೆ. ನಗರ ಪ್ರದೇಶದಲ್ಲಿನ ಮಣ್ಣಿನ ಹೊದಿಕೆಯು ಸಮುದ್ರದ ಸಾಮೀಪ್ಯದಿಂದಾಗಿ ಪ್ರಧಾನವಾಗಿ ಮರಳಿನಿಂದ ಕೂಡಿದೆ. ಉಪನಗರಗಳಲ್ಲಿ ಮಣ್ಣಿನ ಹೊದಿಕೆಯು ಹೆಚ್ಚಾಗಿ ಮೆಕ್ಕಲು ಮತ್ತು ಲೋಮಮಿಯಾಗಿರುತ್ತದೆ. ಈ ಪ್ರದೇಶದ ಆಧಾರವಾಗಿರುವ ಬಂಡೆಯು ಕಪ್ಪು ಡೆಕ್ಕನ್ ಬಸಾಲ್ಟ್ ಹರಿವುಗಳಿಂದ ಕೂಡಿದೆ ಹಾಗೂ ಅವುಗಳ ಆಮ್ಲೀಯ ಮತ್ತು ಮೂಲ ರೂಪಾಂತರಗಳು ಕ್ರಿಟೇಶಿಯಸ್ ಮತ್ತು ಆರಂಭಿಕ ಇಯಸೀನ್ ಯುಗಗಳಿಗೆ ಹಿಂದಿನವು. ಸುತ್ತಮುತ್ತಲಿನ ೨೩ ದೋಷ ರೇಖೆಗಳ ಉಪಸ್ಥಿತಿಯಿಂದಾಗಿ ಮುಂಬೈ ಭೂಕಂಪನ ಸಕ್ರಿಯ ವಲಯದಲ್ಲಿದೆ. ಈ ಪ್ರದೇಶವನ್ನು ಮೂರನೇ ಭೂಕಂಪನ ವಲಯ ಪ್ರದೇಶವೆಂದು ವರ್ಗೀಕರಿಸಲಾಗಿದೆ. ಅಂದರೆ ರಿಕ್ಟರ್ ಮಾಪಕದಲ್ಲಿ ೬.೫ ತೀವ್ರತೆಯ ಭೂಕಂಪವನ್ನು ನಿರೀಕ್ಷಿಸಬಹುದು. ಹವಾಮಾನ ಉಷ್ಣವಲಯದಲ್ಲಿ ಹಾಗೂ ಸಮುದ್ರದದಂಡೆಯಲ್ಲಿರುವ ಮುಂಬಯಿಯಲ್ಲಿ ಎರಡು ಋತುಗಳು ಮುಖ್ಯವಾಗಿವೆ. ಮುಂಬೈಯು ಕೊಪ್ಪೆನ್ ಹವಾಮಾನ ವರ್ಗೀಕರಣದ ಅಡಿಯಲ್ಲಿ ತೀವ್ರವಾದ ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಹವಾಗುಣವನ್ನು ಹೊಂದಿದೆ. ಆದಾಗ್ಯೂ ಮಧ್ಯ ಮತ್ತು ದಕ್ಷಿಣದ ಉಪನಗರಗಳು ಉಷ್ಣವಲಯದ ಮಾನ್ಸೂನ್ ಹವಾಮಾನವನ್ನು ಹೊಂದಿದ್ದು ಹೆಚ್ಚಿನ ಆರ್ದ್ರ ಋತುವಿನ ಮಳೆಯನ್ನು ಹೊಂದಿದೆ. ಮುಂಬೈಯು ವಾಸ್ತವಿಕವಾಗಿ ಮಳೆಯಿಲ್ಲದ ಅವಧಿಯನ್ನು ಅಕ್ಟೋಬರ್‌ನಿಂದ ಮೇ ವರೆಗೆ ವಿಸ್ತರಿಸುತ್ತದೆ ಮತ್ತು ಜುಲೈನಲ್ಲಿ ಅತ್ಯಂತ ಆರ್ದ್ರ ಅವಧಿಯನ್ನು ತಲುಪುತ್ತದೆ. ಡಿಸೆಂಬರ್‌ನಿಂದ ಫೆಬ್ರುವರಿವರೆಗಿನ ತಂಪಾದ ಋತುವಿನ ನಂತರ ಮಾರ್ಚ್‌ನಿಂದ ಮೇ ವರೆಗೆ ಬಿಸಿ ಋತುವಿನಲ್ಲಿ ಇರುತ್ತದೆ. ಆರ್ದ್ರ ಹವಾಮಾನ ಮಾರ್ಚ್‌‍ನಿಂದ ಆಕ್ಟೋಬರ್‌‍ವರೆಗಿದ್ದು ಈ ಕಾಲದಲ್ಲಿ ವಾತಾವರಣದಲ್ಲಿ ನೀರಿನಂಶ ಹೆಚ್ಚಿರುತ್ತದೆ. ದಿನದ ತಾಪಮಾನ ೩೦ ಡಿಗ್ರಿ ಸೆಂಟಿಗ್ರೇಡ್‌‍ವರೆಗಿರುತ್ತದೆ. ಜೂನ್‌ನಿಂದ ಸೆಪ್ಟೆಂಬರಿನವರೆಗೂ ಅನುಭವಕ್ಕೆ ಬರುವ ಮಳೆಗಾಲದಲ್ಲಿ ಜಡಿಮಳೆ ಸಾಮಾನ್ಯ. ಸರಾಸರಿ ವಾರ್ಷಿಕ ಮಳೆ ೨೨೦೦ ಮಿ.ಮೀ. ೧೯೫೪ರಲ್ಲಿ ಬಿದ್ದ ೩೪೫೨ ಮಿ.ಮೀ ಮಳೆ ವಾರ್ಷಿಕ ದಾಖಲೆಯಾದರೆ ಜುಲೈ ೨೬, ೨೦೦೫ ರಂದು ಬಿದ್ದ ೯೪೪ ಮಿ.ಮೀ ಮಳೆ ಒಂದೇ ದಿನದಲ್ಲಿ ಬಿದ್ದ ಅತಿ ಹೆಚ್ಚು ಮಳೆ. ಸರಾಸರಿ ಒಟ್ಟು ವಾರ್ಷಿಕ ಮಳೆಯು ದ್ವೀಪ ನಗರಕ್ಕೆ ೨೨೧೩.೪ ಮಿ.ಮೀ. (೮೭ ಇಂಚು) ಮತ್ತು ಉಪನಗರಗಳಿಗೆ ೨೫೦೨.೩ ಮಿ.ಮೀ. (೯೯ ಇಂಚು) ಆಗಿದೆ. ನವೆಂಬರಿನಿಂದ ಫೆಬ್ರುವರಿಯವರೆಗೆ ಒಣ ಹವೆಯಿರುತ್ತದೆ. ವಾತಾವರಣವೂ ತಕ್ಕಮಟ್ಟಿಗೆ ತಂಪಾಗಿರುತ್ತದೆ. ಉತ್ತರದಿಂದ ಬೀಸುವ ತಂಗಾಳಿಯೇ ಈ ಬದಲಾವಣೆಗೆ ಕಾರಣ. ವಾರ್ಷಿಕ ತಾಪಮಾನ ಗರಿಷ್ಠ ೩೮ ಡಿಗ್ರಿ ಇದ್ದರೆ ಕನಿಷ್ಠ ೧೧ ಡಿಗ್ರಿಯವರೆಗಿರುತ್ತದೆ. ೪೩ ಡಿಗ್ರಿ ಮತ್ತು ೭.೪ ಡಿಗ್ರಿ ಕ್ರಮವಾಗಿ ಅತಿ ಹೆಚ್ಚು ಮತ್ತು ಅತಿ ಕಡಿಮೆ ತಾಪಮಾನದ ದಾಖಲೆಗಳು. ಜೂನ್ ಮತ್ತು ಸೆಪ್ಟೆಂಬರ್ ನಡುವೆ ಮುಂಬೈನಲ್ಲಿ ನೈಋತ್ಯ ಮಾನ್ಸೂನ್ ಮಳೆಯಾಗುತ್ತದೆ. ಮೇ ತಿಂಗಳಲ್ಲಿ ಪೂರ್ವ ಮುಂಗಾರು ಮಳೆಯು ಸಂಭವಿಸುತ್ತದೆ. ಸಾಂದರ್ಭಿಕವಾಗಿ ಈಶಾನ್ಯ ಮಾನ್ಸೂನ್ ಮಳೆಯು ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಸಂಭವಿಸುತ್ತದೆ. ಸರಾಸರಿ ವಾರ್ಷಿಕ ತಾಪಮಾನವು ೨೭ ಡಿಗ್ರಿ ಸೆಲ್ಸಿಯಸ್ ಮತ್ತು ಸರಾಸರಿ ವಾರ್ಷಿಕ ಮಳೆಯು ೨೨೧೩ ಮಿ.ಮೀ. (೮೭ ಇಂಚು) ಆಗಿದೆ. ದ್ವೀಪ ನಗರದಲ್ಲಿ ಸರಾಸರಿ ಗರಿಷ್ಠ ತಾಪಮಾನವು ೩೧ ಡಿಗ್ರಿ ಸೆಲ್ಸಿಯಸ್ ಹಾಗೂ ಸರಾಸರಿ ಕನಿಷ್ಠ ತಾಪಮಾನವು ೨೪ ಡಿಗ್ರಿ ಸೆಲ್ಸಿಯಸ್ ಆಗಿದೆ. ಉಪನಗರಗಳಲ್ಲಿ ದೈನಂದಿನ ಸರಾಸರಿ ಗರಿಷ್ಠ ತಾಪಮಾನವು ೨೯ ಡಿಗ್ರಿ ಸೆಲ್ಸಿಯಸ್ ನಿಂದ ೩೩ ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಆದರೆ ದೈನಂದಿನ ಸರಾಸರಿ ಕನಿಷ್ಠ ತಾಪಮಾನವು ೧೬ ಡಿಗ್ರಿ ಸೆಲ್ಸಿಯಸ್ ನಿಂದ ೨೬ ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ದಾಖಲೆಯ ಗರಿಷ್ಠ ೪೨.೨ ಡಿಗ್ರಿ ಸೆಲ್ಸಿಯಸ್‌ ೧೪ ಏಪ್ರಿಲ್ ೧೯೫೨ ರಂದು ಮತ್ತು ದಾಖಲೆಯ ಕನಿಷ್ಠ ೭.೪ ಡಿಗ್ರಿ ಸೆಲ್ಸಿಯಸ್‌ ೨೭ ಜನವರಿ ೧೯೬೨ ರಂದು ಹೊಂದಿಸಲಾಗಿದೆ. ನಗರದಲ್ಲಿ ಉಷ್ಣವಲಯದ ಚಂಡಮಾರುತಗಳು ಅಪರೂಪ. ೧೯೪೮ ರಲ್ಲಿ ಜುಹುದಲ್ಲಿ ಗಂಟಿಗೆ ೧೫೧ ಕಿ.ಮೀ. ವೇಗವನ್ನು ತಲುಪಿದ ಚಂಡಮಾರುತವು ಮುಂಬೈ ಮೇಲೆ ಪ್ರಭಾವ ಬೀರಿದ ಅತ್ಯಂತ ಕೆಟ್ಟ ಚಂಡಮಾರುತವಾಗಿದೆ. ಚಂಡಮಾರುತದಿಂದಾಗಿ ೩೮ ಮಂದಿ ಸಾವನ್ನಪ್ಪಿದ್ದು ೪೭ ಮಂದಿ ನಾಪತ್ತೆಯಾಗಿದ್ದಾರೆ. ಚಂಡಮಾರುತವು ಮುಂಬೈನಲ್ಲಿ ೨೦ ಗಂಟೆಗಳ ಕಾಲ ಪ್ರಭಾವ ಬೀರಿತು ಮತ್ತು ನಗರವನ್ನು ಧ್ವಂಸಗೊಳಿಸಿತು. ಮುಂಬೈಯು ಮಾನ್ಸೂನ್ ಪ್ರವಾಹಕ್ಕೆ ಗುರಿಯಾಗುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಭಾರೀ ಮಳೆ ಮತ್ತು ಸಮುದ್ರದಲ್ಲಿನ ಉಬ್ಬರವಿಳಿತದಿಂದ ಪ್ರಭಾವಿತವಾಗಿರುತ್ತದೆ. ವಿಶ್ವ ಬ್ಯಾಂಕ್ ಪ್ರಕಾರ ಯೋಜಿತವಲ್ಲದ ಒಳಚರಂಡಿ ವ್ಯವಸ್ಥೆ ಮತ್ತು ಅನೌಪಚಾರಿಕ ವಸಾಹತು ಮುಂಬೈನಲ್ಲಿ ಆಗಾಗ್ಗೆ ಪ್ರವಾಹಕ್ಕೆ ಪ್ರಮುಖ ಅಂಶವಾಗಿದೆ. ಮುಂಬೈನಲ್ಲಿ ಪ್ರವಾಹಕ್ಕೆ ಇತರ ಕಾರಣಗಳೆಂದರೆ ಅದರ ಭೌಗೋಳಿಕ ಸ್ಥಳವಾಗಿದೆ. ಮುಂಬೈ ನಗರವು ಪರ್ಯಾಯ ದ್ವೀಪವಾಗಿದೆ. (ಏಳು ದ್ವೀಪಗಳನ್ನು ಸಂಪರ್ಕಿಸುವ ಭೂ-ತುಂಬಿದ ಪ್ರದೇಶ) ಎತ್ತರದ ಸ್ಥಳದಲ್ಲಿ ಇರುವ ಅದರ ಉಪನಗರಗಳಿಗೆ ಹೋಲಿಸಿದರೆ ತಗ್ಗು ಪ್ರದೇಶವಾಗಿದೆ. ಕಳೆದ ಕೆಲವು ದಶಕಗಳಲ್ಲಿ ಉಪನಗರಗಳಲ್ಲಿ ಹೊಸ ಅನೌಪಚಾರಿಕ ವಸಾಹತುಗಳು ರೂಪುಗೊಂಡವು. ಇದರಿಂದ ಜನಸಂಖ್ಯೆಯಲ್ಲಿ ತ್ವರಿತ ಹೆಚ್ಚಳ, ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ದಟ್ಟಣೆಗೆ ಕಾರಣವಾಯಿತು. ಈ ಪ್ರದೇಶಗಳಿಂದ ಬರುವ ಮಳೆನೀರು ಕೆಲವು ಕೊಳೆಗೇರಿಗಳು ಮತ್ತು ಬಹುಮಹಡಿ ಕಟ್ಟಡಗಳನ್ನು ಒಳಗೊಂಡಿರುವ ತಗ್ಗು ಪ್ರದೇಶದ ನಗರ ಪ್ರದೇಶಗಳಿಗೆ ಹೆಚ್ಚು ಹರಿಯುತ್ತದೆ. ಮುಂಬೈನಲ್ಲಿ ಪ್ರವಾಹವನ್ನು ಕಡಿಮೆ ಮಾಡುವ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಪ್ರವಾಹ ತಗ್ಗಿಸುವ ಯೋಜನೆಯನ್ನು ಅಳವಡಿಸಿಕೊಂಡಿತು. ಅದರ ಪ್ರಕಾರ ಒಳಚರಂಡಿ ವ್ಯವಸ್ಥೆಯನ್ನು ಪುನರ್ರಚಿಸಲಾಯಿತು ಹಾಗೂ ಮಿಥಿ ನದಿಯ ಮರುಸ್ಥಾಪನೆ ಮತ್ತು ಅನೌಪಚಾರಿಕ ವಸಾಹತುಗಳ ಮರು-ಸ್ಥಾಪನೆ ಮಾಡಲಾಯಿತು. ವಾಯು ಮಾಲಿನ್ಯ ಮುಂಬೈನಲ್ಲಿ ವಾಯು ಮಾಲಿನ್ಯವು ಒಂದು ಪ್ರಮುಖ ಸಮಸ್ಯೆಯಾಗಿದೆ. ಡಿಸೆಂಬರ್ ೨೦೧೯ ರಲ್ಲಿ ಐಐಟಿ ಬಾಂಬೆ, ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಮೆಕ್‌ಕೆಲ್ವಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಸಹಭಾಗಿತ್ವದಲ್ಲಿ ಮುಂಬೈನಲ್ಲಿ ವಾಯು ಮಾಲಿನ್ಯವನ್ನು ಅಧ್ಯಯನ ಮಾಡಲು ಏರೋಸಾಲ್ ಮತ್ತು ವಾಯು ಗುಣಮಟ್ಟ ಸಂಶೋಧನಾ ಸೌಲಭ್ಯವನ್ನು ಇತರ ಭಾರತೀಯ ನಗರಗಳಲ್ಲಿ ಪ್ರಾರಂಭಿಸಿತು. ಅರ್ಥ ವ್ಯವಸ್ಥೆ ಮುಂಬಯಿಯನ್ನು ಭಾರತದ ಆರ್ಥಿಕ ರಾಜಧಾನಿ ಎನ್ನಲಾಗುತ್ತದೆ. ಭಾರತದ ಶೇಕಡಾ ೧೦ ರಷ್ಟು ಔದ್ಯೋಗಿಕ ಕಾರ್ಮಿಕರು ಮುಂಬಯಿಯಲ್ಲಿದ್ದಾರೆ. ಭಾರತದ ಆದಾಯ ತೆರಿಗೆಯ ಶೇಕಡಾ ೪೦ ರಷ್ಟು, ಕೇಂದ್ರ ಅಬಕಾರಿಯ ಶೇಕಡಾ ೨೦ ರಷ್ಟು, ಕಸ್ಟಮ್ಸ್ ಸುಂಕದ ಶೇಕಡಾ ೬೦ ರಷ್ಟು, ರಫ್ತು ವ್ಯಾಪಾರದ ಶೇಕಡಾ ೪೦ ರಷ್ಟು, ಅಷ್ಟೇ ಅಲ್ಲದೆ ೪೦ ಬಿಲಿಯನ್ ರೂಪಾಯಿಯ ವ್ಯಾವಸಾಯಿಕ ತೆರಿಗೆ ಮುಂಬಯಿಯಿಂದ ಬರುತ್ತದೆ. ಭಾರತದ ಪ್ರಮುಖ ಆರ್ಥಿಕ ಸಂಸ್ಥೆಗಳು ಮುಂಬಯಿಯಲ್ಲಿದ್ದು ಮುಂಬಯಿ ಶೇರು ಬಜಾರು, ಭಾರತೀಯ ರಿಸರ್ವ್ ಬ್ಯಾಂಕ್ , ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಇವೇ ಅಲ್ಲದೇ ಟಾಟಾ, ಗೋದ್ರೇಜ್ ಮತ್ತು ರಿಲಯನ್ಸ್ ನಂತಹ ಮಹಾ ಉದ್ಯೋಗಸಮೂಹಗಳ ಮುಖ್ಯ ಕಛೇರಿಗಳು ಮುಂಬಯಿಯಲ್ಲಿವೆ. ಅನೇಕ ವಿದೇಶೀ ಬ್ಯಾಂಕುಗಳೂ ತಮ್ಮ ಶಾಖೆಗಳನ್ನು ಮುಂಬಯಿಯಲ್ಲಿ ತೆರೆದಿವೆ. ಸುಮಾರು ೧೯೮೦ ರವರೆಗೂ ಮುಂಬಯಿಯ ಬಟ್ಟೆ ಗಿರಣಿಗಳು ಆರ್ಥಿಕ ವ್ಯವಸ್ಥೆಯ ಆಧಾರಸ್ಥಂಭಗಳಾಗಿದ್ದವು. ಆದರೆ ಈಗ ತಂತ್ರಜ್ಙಾನ, ಆಭರಣಗಳ ಪಾಲೀಶ್ ಮಾಡುವಿಕೆ, ಆರೋಗ್ಯ, ಮಾಹಿತಿ ತಂತ್ರಜ್ಙಾನ ಮೊದಲಾದ ಉದ್ಯಮಗಳು ಮಹತ್ವದ ಕೊಡುಗೆ ನೀಡುತ್ತಿವೆ. ಮುಂಬಯಿ ರಾಜಧಾನಿಯೂ ಆಗಿರುವ ಕಾರಣ ರಾಜ್ಯ ಹಾಗೂ ಕೇಂದ್ರ ಸರಕಾರೀ ನೌಕರರು ಸಹಾ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹಾಗೆಯೇ ಕೈಗಾಡಿಯ ಕಿರುವ್ಯಾಪಾರಿಗಳು, ಟ್ಯಾಕ್ಸಿ ಚಾಲಕರು, ಮೆಕ್ಯಾನಿಕ್ ಇತ್ಯಾದಿ ಉದ್ಯೋಗದಲ್ಲಿ ತೊಡಗಿಕೊಂಡಿರುವ ಕುಶಲ ಹಾಗೂ ಅ-ಕುಶಲ ಕಾರ್ಮಿಕರೂ ವಿಪುಲವಾಗಿದ್ದಾರೆ. ಮುಂಬಯಿ ಬಂದರೂ ಅನೇಕರಿಗೆ ಉದ್ಯೋಗಾವಕಾಶವನ್ನು ನೀಡಿದೆ. ಮುಂಬಯಿಯ ಮನರಂಜನಾ ಉದ್ಯಮವಂತೂ ಅನೇಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. ಭಾರತದ ಪ್ರಮುಖ ಕಿರುತೆರೆ, ಉಪಗ್ರಹ ವಾಹಿನಿಗಳು, ಪುಸ್ತಕ ಪ್ರಕಾಶನ ಸಂಸ್ಥೆಗಳ ಕೇಂದ್ರ ಮುಂಬಯಿ. 'ಬಾಲಿವುಡ್ ' ಎಂದೇ ಹೆಸರಾಗಿರುವ ಹಿಂದಿ ಚಲನಚಿತ್ರೋದ್ಯಮದ ಕೆಂದ್ರವೂ ಮುಂಬಯಿಯೇ. ಮುಂಬಯಿಯ ಆರ್ಥಿಕ ಪ್ರಗತಿಗೆ ಗುಜರಾತಿ, ಮಾರವಾಡಿ ಮತ್ತು ಪಾರಸೀ ಜನಾಂಗದ ಗಣನೀಯ ಕೊಡುಗೆಯಿದೆ. ರಾಜ್ಯ-ಸರಕಾರ ಹಾಗೂ ಮಹಾನಗರಪಾಲಿಕೆ ಬೃಹನ್ಮುಂಬಯಿ ಮಹಾನಗರಪಾಲಿಕೆ ಈ ನಗರದ ಮೂಲಭೂತ ಅವಶ್ಯಕತೆಗಳಾದ ನೀರು ಸರಬರಾಜು, ಸಂಚಾರ ವ್ಯವಸ್ಥೆ ಇತ್ಯಾದಿಗಳನ್ನು ನಿರ್ವಹಿಸುತ್ತದೆ. ಕಮೀಷನರ್ ಇದರ ಆಡಳಿತಾತ್ಮಕ ಮುಖ್ಯಾಧಿಕಾರಿಯಾಗಿದ್ದು ಐ.ಏ.ಎಸ್ ಹುದ್ದೆಯ ಈ ಅಧಿಕಾರಿಯನ್ನು ಮಹಾರಾಷ್ಟ್ರ ಸರಕಾರ ನೇಮಿಸುತ್ತದೆ. ಆಡಳಿತಾನುಕೂಲಕ್ಕಾಗಿ ನಗರವನ್ನು ೧೪ ಉಪವಿಭಾಗಗಳಾಗಿ ವಿಭಾಗಿಸಿದ್ದು ಪ್ರತಿಯೊಂದು ಉಪವಿಭಾಗವನ್ನೂ ಒಬ್ಬೊಬ್ಬ ಉಪ-ಕಮೀಷನರ್ ನೋಡಿಕೊಳ್ಳುತ್ತಾರೆ. ಮಹಾಪಾಲಿಕೆಯಲ್ಲಿ ಜನರಿಂದ ಚುನಾಯಿತರಾದ ೨೨೭ ನಗರಸೇವಕರು (ಕಾರ್ಪೋರೇಟರುಗಳು), ೫ ನಾಮಕರಣ ಮಾಡಲ್ಪಟ್ಟ ನಗರಸೇವಕರು ಹಾಗೂ ಒಬ್ಬ ಮಹಾಪೌರ (ಮೇಯರ್ ) ಇರುತ್ತಾರೆ. ರಾಜ್ಯದ ಸಾಧಾರಣ ಎಲ್ಲಾ ರಾಜಕೀಯ ಪಕ್ಷಗಳ ಉಮೇದುವಾರರನ್ನೂ ಈ ನಗರಪಾಲಿಕೆಯ ಚುನಾವಣೆಗಳಲ್ಲಿ ಕಾಣಬಹುದು. ಮುಂಬಯಿ ಪೋಲೀಸ್ ರಾಜ್ಯದ ಗೃಹ ಖಾತೆಯ ಅಧೀನದಲ್ಲಿ ಕೆಲಸಮಾಡುತ್ತದೆ. ಐ.ಪಿ.ಎಸ್ ದರ್ಜೆಯ ಕಮೀಷನರ್ ಮುಂಬಯಿ ಪೋಲೀಸ್ ಪಡೆಯ ಮುಖ್ಯಾಧಿಕಾರಿ. ಮುಂಬಯಿ ನಗರವನ್ನು ಏಳು ಪೋಲೀಸ್ ವಲಯಗಳಾಗಿಯೂ, ಹದಿನೇಳು ವಾಹನ ಸಾರಿಗೆ ಪೋಲೀಸ್ ವಲಯಗಳಾಗಿಯೂ ವಿಭಜಿಸಲಾಗಿದ್ದು ಪ್ರತಿಯೊಂದು ವಲಯಕ್ಕೂ ಒಬ್ಬ ಡೆಪ್ಯುಟಿ ಕಮೀಷನರ್ ನೇತೃತ್ವವಿದೆ. ವಾಹನ ಸಾರಿಗೆ ಪೋಲೀಸ್ ಮುಂಬಯಿ ಪೋಲಿಸಿಗೆ ಸೇರಿದೆ. ಮುಂಬಯಿಯಲ್ಲಿರುವ ಉಚ್ಚ ನ್ಯಾಯಾಲಯದ ವ್ಯಾಪ್ತಿ ಕೇವಲ ಮಹಾರಾಷ್ಟ್ರ ರಾಜ್ಯಕ್ಕಷ್ಟೇ ಅಲ್ಲದೇ ಗೋವಾ ರಾಜ್ಯ ಕೇಂದ್ರಾಡಳಿತ ಪ್ರದೇಶಗಳಾದ ದಮನ್, ದಿಯು, ದಾದ್ರ ಮತ್ತು ನಗರಹವೇಲಿಗಳಿಗೂ ಹಬ್ಬಿದೆ. ಇದಲ್ಲದೆ ಸಿವಿಲ್ ಪ್ರಕರಣಗಳಿಗಾಗಿ ಸಣ್ಣ ವ್ಯಾಜ್ಯಗಳ ನ್ಯಾಯಾಲಯ ಮತ್ತು ಕ್ರಿಮಿನಲ್ ಪ್ರಕರಣಗಳಿಗಾಗಿ ಸೆಷನ್ಸ್ ನ್ಯಾಯಾಲಯಗಳೂ ಇವೆ. ೬ ಜನ ಸಂಸತ್ತಿನಲ್ಲಿಯೂ, ೩೪ ಜನ ವಿಧಾನ ಮಂಡಲದಲ್ಲಿಯೂ ಮುಂಬಯಿಯನ್ನು ಪ್ರತಿನಿಧಿಸುತ್ತಾರೆ. ಈಗ ಶಿವಸೇನ ಪಕ್ಷ ಬಹುಮತದಿಂದ ಗೆದ್ದು ಆಯ್ಕೆಯಾಗಿದೆ. ಬೃಹನ್ ಮುಂಬಯಿ ನಗರಪಾಲಿಕೆಯ ಅಧಿಕಾರವಹಿಸಿಕೊಂಡಿದೆ. ಇನ್ನು ನಾಲ್ಕು ವರೆ ವರ್ಷದ ಪ್ರಗತಿಕಾರ್ಯಗಳನ್ನೆಲ್ಲಾ ಅದೇ ನಿರ್ವಹಿಸಬೇಕಾಗಿದೆ. ಸಂಚಾರ ವ್ಯವಸ್ಥೆ ಮುಂಬಯಿಯ ನಾಗರೀಕರು ದೈನಂದಿನ ಸಂಚಾರೀ ಅಗತ್ಯಗಳಿಗೆ ಸರಕಾರೀ ಸಾರಿಗೆಯ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ರಸ್ತೆಗಳ ದುಸ್ಥಿತಿಯಿಂದ ಮತ್ತು ಪಾರ್ಕಿಂಗ್ ಮಾಡಲು ಸ್ಥಳದ ಅಭಾವದಿಂದ ಖಾಸಗೀ ವಾಹನಗಳು ಅಷ್ಟಾಗಿ ಜನಪ್ರಿಯವಾಗಿಲ್ಲ. ಆದರೂ ಈತ್ತೀಚೆಗೆ ಲೋಕಲ್ ರೈಲಿನಲ್ಲಿಯ ಸಹಿಸಲಸಾಧ್ಯ ಜನದಟ್ಟಣೆಯಿಂದ ಬೇಸತ್ತ ಜನ ಸ್ವಂತ ವಾಹನದ ಮೊರೆ ಹೋಗುವ ಪ್ರವೃತ್ತಿಯೂ ಕಾಣಬರುತ್ತಿದೆ. ಸುಮಾರು ೩೫ ಲಕ್ಷ ಜನ ಲೋಕಲ್ ರೈಲಿನಲ್ಲಿ ಪ್ರತಿದಿನ ಪ್ರಯಾಣಮಾಡುತ್ತಾರೆಂಬ ದಾಖಲೆ ಇದೆ. ಲೋಕಲ್ ರೈಲುಗಳು ಮುಂಬಯಿ ಜನಜೀವನದ ಜೀವನಾಡಿ ಎಂದು ಹೇಳಲು ಅಡ್ಡಿಯಿಲ್ಲ. ಪಶ್ಚಿಮ ಮತ್ತು ಮಧ್ಯ ರೈಲ್ವೆಗಳ ಕೇಂದ್ರ ಕಛೇರಿಗಳು ಮುಂಬಯಿಯಲ್ಲವೆ. ಮುಂಬಯಿ ಲೋಕಲ್ ರೈಲು ಮೂರು ಮುಖ್ಯ ಮಾರ್ಗಗಳಲ್ಲಿ ಸಂಚರಿಸುತ್ತದೆ. ಮುಂಬಯಿಯ ಪಶ್ಚಿಮ ರೈಲ್ವೆಯ ಸಂಚಾರವಿದ್ದರೆ ಮುಂಬಯಿಯ ಮಧ್ಯಭಾಗ ಮತ್ತು ಈಶಾನ್ಯ ಭಾಗ ಮಧ್ಯ ರೈಲ್ವೆ ನಿಭಾಯಿಸುತ್ತದೆ. ಆಗ್ನೇಯ ಭಾಗದ ಪ್ರದೇಶಗಳಿಗೆ ಹಾರ್ಬರ್ ಲೈನ್ ಇದೆ. ಇದು ಮಧ್ಯರೈಲ್ವೆಯ ಒಂದು ಭಾಗ. ಇವೆರಡೂ ರೈಲುಗಳ ೧೨೪ ಕಿ. ಮೀ. ಉದ್ದದ ಹಾಗೂ ಹಾರ್ಬರ್ ಲೈನಿನ ಮತ್ತೊಂದು ೫೪ ಕಿ.ಮೀ. ಉದ್ದದ ರೈಲು ಹಳಿಗಳ ಜಾಲ ಮುಂಬಯಿಯಲ್ಲಿ ಹರಡಿಕೊಂಡಿವೆ. ಮುಂಬಯಿಯಿಂದ ಭಾರತದ ಎಲ್ಲಾ ದಿಕ್ಕುಗಳಿಗೂ ಚೆನ್ನಾಗಿ ರೈಲು ಸಂಪರ್ಕವಿದೆ. ಮುಂಬಯಿಯ ರಸ್ತೆ ಸಾರಿಗೆಯಲ್ಲಿ ಬೆಸ್ಟ್ (ಬಾಂಬೆ ವಿದ್ಯುತ್ ಸರಬರಾಜು ಮತ್ತು ಸಾರಿಗೆ) ಮಹತ್ವದ ಸ್ಥಾನದಲ್ಲಿದೆ. ಈ ಮುಂಬಯಿ ನಗರಪಾಲಿಕೆಯ ಅಧೀನದ ಸ್ವಾಯತ್ತ ಸಂಸ್ಥೆ ನೋಡಿಕೊಳ್ಳುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕೇವಲ ಮುಂಬಯಿ ನಗರವಷ್ಟೇ ಅಲ್ಲದೇ ಉಪನಗರಗಳು, ನವಿ ಮುಂಬಯಿ ಮತ್ತು ಠಾಣೆಯನ್ನೂ ಒಳಗೊಳ್ಳುತ್ತದೆ. ಬಸ್ಸುಗಳನ್ನು ಸಾಧಾರಣವಾಗಿ ಸಮೀಪದ ಅಥವಾ ಮಧ್ಯಮ ದೂರದ ಪ್ರಯಾಣಕ್ಕೆ ಉಪಯೋಗಿಸಿದರೆ ಹೆಚ್ಚು ದೂರದ ಓಡಾಟಕ್ಕೆ ಲೋಕಲ್ ರೈಲು ಬಸ್ಸಿಗಿಂತ ಅಗ್ಗವಾಗುತ್ತದೆ. ಆದರೂ ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ೩೨ ಲಕ್ಷಕ್ಕಿಂತ ಅಧಿಕವಾಗಿದೆ. ಸಾಧಾರಣ ಬಸ್ಸುಗಳೊಂದಿಗೆ ಮಹಡಿಬಸ್ ಹಾಗೂ ವಾತಾನುಕೂಲಿತ ಬಸ್ಸುಗಳನ್ನೂ ಬೆಸ್ಟ್ (ಬಾಂಬೆ ವಿದ್ಯುತ್ ಸರಬರಾಜು ಮತ್ತು ಸಾರಿಗೆ) ಓಡಿಸುತ್ತದೆ. ಖಾಸಗೀ ಸಂಚಾರಕ್ಕಾಗಿ ಹಳದಿ, ಕಪ್ಪು ಬಣ್ಣದ ಟ್ಯಾಕ್ಸಿಗಳು ನಗರಗಳಲ್ಲಿ ಲಭ್ಯವಿದೆ. ಆಟೋರಿಕ್ಷಾಗಳಿಗೆ ನಗರಪ್ರದೇಶದಲ್ಲಿ ಪ್ರವೇಶವಿಲ್ಲವಾದರೂ ಉಪನಗರಗಳಲ್ಲಿ ಇವು ಜನಸಾಮಾನ್ಯರ ಮುಖ್ಯ ಖಾಸಗೀ ಸಂಚಾರ ಮಾಧ್ಯಮಗಳಾಗಿವೆ. ಮುಂಬೈನಲ್ಲಿ ಟ್ಯಾಕ್ಸಿಗಳು ಮತ್ತು ಆಟೋ ರಿಕ್ಷಾಗಳು ಸಂಕುಚಿತ ನೈಸರ್ಗಿಕ ಅನಿಲದಿಂದ (ಸಿಎನ್‌ಜಿ) ಚಲಾಯಿಸಲು ಕಾನೂನಿನ ಅಗತ್ಯವಿದೆ ಹಾಗೂ ಅವು ಅನುಕೂಲಕರ, ಆರ್ಥಿಕ ಮತ್ತು ಸುಲಭವಾಗಿ ಲಭ್ಯವಿರುವ ಸಾರಿಗೆ ಸಾಧನಗಳಾಗಿವೆ. ಮುಂಬಯಿಯ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ( ಹಳೆಯ ಹೆಸರು ಸಹಾರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ) ಭಾರತದ ಅತ್ಯಂತ ಕಿಕ್ಕಿರಿದ ವಿಮಾನ ನಿಲ್ದಾಣವಾಗಿದೆ. ಸಾಂತಾಕ್ರೂಝ್‌‍ನಲ್ಲಿ ಭಾರತದೊಳಗಿನ ಸಂಚಾರಕ್ಕಾಗಿ ವಿಮಾಣ ನಿಲ್ದಾಣವಿದೆ. ಮುಂಬಯಿ ತನ್ನ ವೈಶಿಷ್ಟ್ಯಪೂರ್ಣ ಭೌಗೋಳಿಕ ಸ್ವರೂಪದಿಂದ ಜಗತ್ತಿನಲ್ಲಿಯೇ ಅತ್ಯುತ್ತಮ ಸ್ವಾಭಾವಿಕ ಬಂದರುಗಳಲ್ಲಿ ಒಂದಾಗಿದೆ. ಭಾರತದ ಸರಕು ಹಾಗೂ ಪ್ರಯಾಣಿಕರ ಸಾಗಣೆಯಲ್ಲಿ ಮುಂಬಯಿ ಬಂದರು ಶೇಕಡಾ ೫೦ ರಷ್ಟು ಪಾಲು ಪಡೆದಿದೆ. ಭಾರತೀಯ ನೌಕಾಪಡೆಯ ಮಹತ್ವದ ನೆಲೆಯೂ ಮುಂಬಯಿಯಲ್ಲಿದೆ. ನಾಗರೀಕ ಸೌಲಭ್ಯಗಳು ಮುಂಬಯಿ ನಗರದ ಕುಡಿಯುವ ನೀರಿನ ಸರಬರಾಜು ಮುಖ್ಯವಾಗಿ ತುಳಸಿ ಮತ್ತು ವಿಹಾರ್ ಕೆರೆಗಳಿಂದ ಹಾಗೂ ಇನ್ನೂ ಉತ್ತರದ ಕೆಲವು ಕೆರೆಗಳಿಂದ ಆಗುತ್ತದೆ. ಭಾಂಡುಪ್‌ನಲ್ಲಿರುವ ಏಶಿಯಾದಲ್ಲಿಯೇ ಅತಿ ದೊಡ್ಡದಾದ ಶುದ್ಧೀಕರಣ ಕೇಂದ್ರದಲ್ಲಿ ಈ ನೀರನ್ನು ಶುದ್ಧೀಕರಿಸಲಾಗುತ್ತದೆ. ರಸ್ತೆಗಳ ಮೇಲುಸ್ತುವಾರಿ ಮತ್ತು ನಗರದ ಕಸವನ್ನು ಸಾಗಿಸುವುದು ಕೂಡಾ ನಗರಪಾಲಿಕೆಯ ಜವಾಬ್ದಾರಿಗಳಲ್ಲಿ ಸೇರುತ್ತದೆ. ಮುಂಬಯಿಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ಸುಮಾರು ೭,೮೦೦ ಮೆಟ್ರಿಕ್ ಕಸವನ್ನು ನಗರದ ವಾಯವ್ಯ ಭಾಗದಲ್ಲಿರುವ ಗೋರೈ ಎಂಬಲ್ಲಿಗೆ ಸಾಗಿಸಿ ಅಲ್ಲಿ ಸುರಿಯಲಾಗುತ್ತದೆ. ಇದರಂತೆ ಈಶಾನ್ಯದಲ್ಲಿ ಮುಲುಂದ್, ಪೂರ್ವದಲ್ಲಿ ದೇವನಾರ್ ಎಂಬ ಪ್ರದೇಶಗಳಲ್ಲಿಯೂ ಕಸ ಸುರಿಯುವ ಪ್ರದೇಶಗಳಿವೆ. ವರಳಿ ಮತ್ತು ಬಾಂದ್ರಾಗಳಲ್ಲಿ ಕೊಳಚೆ ನೀರನ್ನು ಪರಿಷ್ಕರಿಸುವ ಕೇಂದ್ರಗಳಿವೆ. ಬೆಸ್ಟ್ ಸಂಸ್ಥೆಯು ನಗರದ ವಿದ್ಯುತ್ ಸರಬರಾಜನ್ನೂ ನೋಡಿಕೊಳ್ಳುತ್ತದೆ. ಉಪನಗರಗಳ ವಿದ್ಯುತ್ ವಿತರಣೆ ರಿಲಯನ್ಸ್ ಎನರ್ಜಿ ಮತ್ತು ಮಹಾವಿತರಣ (ಮಹಾರಾಷ್ಟ್ರ ವಿದ್ಯುತ್ ವಿತರಣಾ ಮಂಡಳಿ) ಗಳ ನಿಯಂತ್ರಣದಲ್ಲಿವೆ. ಮಹಾನಗರದ ವಿದ್ಯುತ್ ಬೇಡಿಕೆಯನ್ನು ಖಾಸಗೀ ಒಡೆತನದ ಟಾಟಾ ಸಮೂಹದ ಟಾಟಾ ಪವರ್ ಕಂಪನಿಯು ಪೂರೈಸುತ್ತದೆ. ಉಪನಗರಗಳಲ್ಲಿ ಆಗೊಮ್ಮೆ ಈಗೊಮ್ಮೆ ವಿದ್ಯುತ್ ಕಡಿತವಾದರೂ ನಗರ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಗೆ ಧಕ್ಕೆ ಉಂಟಾಗುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಜನಜೀವನ ಮುಂಬಯಿಯ ಜನಸಂಖ್ಯೆ ಒಂದು ಕೋಟಿ ಮೂವತ್ತು ಲಕ್ಷವಿದ್ದು ಪ್ರತಿ ಚದರ ಕಿ.ಮೀಗೆ ೨೯೦೦೦ ಜನರ ಸಾಂದ್ರತೆಯಿದೆ. ಪ್ರತಿ ಸಾವಿರ ಪುರುಷರಿಗೆ ೮೧೧ ಸ್ತ್ರೀ ಜನಸಂಖ್ಯೆಯಿದೆ. ಉದ್ಯೋಗವನ್ನರಸಿಕೊಂಡು ಪರಸ್ಥಳಗಳಿಂದ ಬರುವವರಲ್ಲಿ ಪುರುಷರೇ ಹೆಚ್ಚಿನ ಪ್ರಮಾಣದಲ್ಲಿರುವುದೇ ಇದಕ್ಕೆ ಕಾರಣ ಶೇಕಡಾ ೮೩ ರಷ್ಟು ಜನ ಸಾಕ್ಷರರಾಗಿದ್ದಾರೆ. ಇಲ್ಲಿಯ ಜನಸಂಖ್ಯೆಯಲ್ಲಿ ಶೇಕಡಾ ೬೮ ರಷ್ಟು ಹಿಂದೂಗಳೂ, ಶೇಕಡಾ ೧೭ ರಷ್ಟು ಮುಸಲ್ಮಾನರೂ, ತಲಾ ಶೇಕಡಾ ೪ ರಷ್ಟು ಕ್ರಿಶ್ಚಿಯನ್ನ್ ಹಾಗೂ ಬೌದ್ಧರೂ ಇದ್ದಾರೆ. ಇನ್ನಿತರ ಧಾರ್ಮಿಕರೆಂದರೆ ಪಾರ್ಸಿಗಳು, ಜೈನರು, ಯಹೂದ್ಯರು, ಮತ್ತು ಸೀಖರು. ಮಹಾರಾಷ್ಟ್ರದ ನಾಡಭಾಷೆ ಮರಾಠಿ ಮುಂಬಯಿಯ ಮುಖ್ಯಭಾಷೆಯಾಗಿದ್ದರೂ ಹಿಂದಿ, ಗುಜರಾತಿ, ಇಂಗ್ಲೀಷ್, ಕೊಂಕಣಿ ಈ ಭಾಷಿಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಭಾರತದ ಬಹುತೇಕ ಎಲ್ಲಾ ಭಾಷೆಗಳ ಜನರೂ ಮುಂಬಯಿಯಲ್ಲಿ ಕಾಣಸಿಗುತ್ತಾರೆ. ಮುಂಬಯಿಯ ಜನಸಂಖ್ಯೆಗೆ ಹೋಲಿಸಿದರೆ ಅಪರಾಧಗಳ ಸಂಖ್ಯೆ ತಕ್ಕಮಟ್ಟಿಗಿದೆ. ಇಲ್ಲಿಯ ಮುಖ್ಯ ಸೆರೆಮನೆ ಅರ್ಥರ್ ರೋಡ್ ಜೈಲು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಯ ನಗರಗಳಂತೆ ಮುಂಬಯಿಯಲ್ಲಿ ಕೂಡಾ ಅತಿನಗರೀಕರಣದ ಪರಿಣಾಮವಾದ ಎಲ್ಲೆಲ್ಲಿಯೂ ಕಂಡುಬರುವ ಬಡತನ, ನೈರ್ಮಲ್ಯದ ಕೊರತೆ, ನಿರುದ್ಯೋಗ, ಮೂಲಭೂತ ಸೌಲಭ್ಯಗಳ ಅಭಾವ, ಕೊಳೆಗೇರಿಗಳ ಅನಿರ್ಬಂಧಿತ ಹೆಚ್ಚಳ ಇತ್ಯಾದಿಗಳು ಕಂಡುಬರುತ್ತವೆ. ಮುಂಬಯಿಯ ಮೂರು ಕಡೆ ನೀರಿದ್ದು ನಗರದ ಬೆಳವಣಿಗೆಗೆ ಜಾಗ ಕೇವಲ ಒಂದೇ ದಿಕ್ಕಿನಲ್ಲಿ ಸಾಧ್ಯವಾದ ಕಾರಣ ನಿವೇಶನದ ಬೆಲೆ ಗಗನಕ್ಕೇರಿದ್ದು ಸಾಮಾನ್ಯ ನಾಗರೀಕರು ನಗರದ ಹೊರವಲಯದ ಉಪನಗರಗಳಲ್ಲಿ ನೆಲೆಸುತ್ತಿದ್ದಾರೆ. ಕೆಲಸದ ಜಾಗಕ್ಕೂ ಮನೆಗೂ ಇದರಿಂದ ಬಹಳಷ್ಟು ದೂರವಾಗುವುದರಿಂದ ದೈನಂದಿನ ಜೀವನದಲ್ಲಿ ಗಣನೀಯ ವೇಳೆಯನ್ನು ಸಂಚಾರದಲ್ಲಿಯೇ ಕಳೆಯುವುದು ಮುಂಬಯಿ ಜೀವನದಲ್ಲಿ ಅನೇಕರಿಗೆ ಅನಿವಾರ್ಯವಾಗಿದೆ. ಇದು ಸಂಚಾರ ವ್ಯವಸ್ಥೆಯ ಮೇಲೂ ಅಸಾಧ್ಯ ಒತ್ತಡವನ್ನು ತರುತ್ತಿದೆ. ಮುಂಬಯಿಯ ಜನಸಂಖ್ಯೆಯ ಸುಮಾರು ಶೇಕಡಾ ೪೬ - ೪೮ ರಷ್ಟು ಜನ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆಂದು ಒಂದು ಅಂದಾಜಿದೆ. ಮುಂಬಯಿಯಲ್ಲಿ ಕನ್ನಡಿಗರು ಮುಂಬಯಿಯಲ್ಲಿ ಇತರೆ ದಕ್ಷಿಣ ಭಾರತೀಯರಂತೆ ಸುಮಾರು ೨೫ ಲಕ್ಷ ಕನ್ನಡಿಗರು ವಾಸ್ತವ್ಯಹೂಡಿದ್ದಾರೆ. ಭಾಷಾವಾರು ಪ್ರಾಂತಗಳ ರಚನೆಗೆ ಮುನ್ನ ಕರ್ನಾಟಕದ ಉತ್ತರ ಭಾಗದ ಕೆಲ ಪ್ರದೇಶಗಳು ಅಂದಿನ ಮುಂಬಯಿ ಪ್ರಾಂತದ ಅಂಗವಾಗಿದ್ದರಿಂದ ಈ ಪ್ರದೇಶಗಳ ಕನ್ನಡಿಗರು ಉದ್ಯೋಗಾವಕಾಶಗಳಿಗಾಗಿ ಮುಂಬಯಿಗೆ ಸಾಕಷ್ಟು ಸಂಖ್ಯೆಯಲ್ಲಿ ವಲಸೆ ಹೋಗಿ ಕೆಲ ತಲೆಮಾರುಗಳಿಂದ ಮುಂಬಯಿಯ ನಾಗರೀಕರಾಗಿದ್ದಾರೆ. ಕ್ರಮೇಣ ಇತರ ಭಾಗಗಳ ಕನ್ನಡಿಗರೂ ಮುಂಬಯಿಯಲ್ಲಿ ನೆಲೆಯೂರಿದ್ದಾರೆ. "ಉಡುಪಿ ಹೋಟಲು" ಎಂದೇ ಪ್ರಖ್ಯಾತವಾಗಿರುವ ಮುಂಬಯಿಯ ಮಧ್ಯಮವರ್ಗೀಯ ಹೋಟೆಲು ಉದ್ಯಮದಲ್ಲಿ ಕರಾವಳಿ ಜಿಲ್ಲೆಗಳ ಕನ್ನಡಿಗರ ಪ್ರಾಬಲ್ಯವಿದೆ. ಉದ್ಯಮಿಗಳು, ಕಲಾವಿದರು, ಕವಿಗಳು, ಹಾಗೂ ಶ್ರೇಷ್ಠ ಪತ್ರಿಕಾಕರ್ತರುಗಳು ಅನೇಕ ಕನ್ನಡಿಗರು ಈ ನಗರದ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಸಿನಿಮಾ (ಖ್ಯಾತ ನಿರ್ದೇಶಕ ಗುರುದತ್, ನಟ ಅಥವಾ ನಟಿಯರಾದ ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ, ಐಶ್ವರ್ಯಾ ರೈ, 'ಬಾಬಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ', ಛಾಯಾಗ್ರಾಹಕ, ವಿ.ಕೆ.ಮೂರ್ತಿ ಇತ್ಯಾದಿ). ಸಾಹಿತ್ಯ ಅಮರ ಚಿತ್ರ ಕಥೆಯನ್ನು ಪ್ರಾರಂಭಿಸಿದ ಅನಂತ ಪೈ, ಕನ್ನಡ ಸಾಹಿತ್ಯದಲ್ಲಿ ಹೆಸರಾದ ವ್ಯಾಸರಾಯ ಬಲ್ಲಾಳ, ಶ್ರೀಪತಿ ಬಲ್ಲಾಳ, ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ, ಮಿತ್ರಾ ವೆಂಕಟ್ರಾಜ್ ಇತ್ಯಾದಿ). ನಾಟಕ ಗಿರೀಶ್ ಕಾರ್ನಾಡರು , ಅನಂತ ನಾಗ್, ಶಂಕರ ನಾಗ್ ಕೆಲಕಾಲ ಮುಂಬಯಿಯಲ್ಲಿದ್ದುದುಂಟು). ಇನ್ನು ಪತ್ರಿಕೋದ್ಯಮ ಎಮ್. ವಿ. ಕಾಮತ್, ಫ್ರೀ ಪ್ರೆಸ್ ಜರ್ನಲ್ ನ ಸದಾನಂದ್, ಕರ್ನಾಟಕ ಮಲ್ಲ ಪತ್ರಿಕೆಯ,ಚಂದ್ರಶೇಖರ ಪಾಲೆತ್ತಾಡಿ ಮುಂತಾದವರು ಮುಖ್ಯರು. ಮುಂಬಯಿ ನಗರದ ಕನ್ನಡ ರಂಗಭೂಮಿ ಕಲಾವಿದರು ಮುಂಬಯಿಯಲ್ಲಿ ಕನ್ನಡಿಗರ ಹಲವಾರು ಸಂಘ ಸಂಸ್ಥೆಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಮೈಸೂರ್ ಅಸೋಸಿಯೇಷನ್, ಮುಂಬಯಿ, ಕರ್ನಾಟಕ ಸಂಘ, ಮುಂಬಯಿಕನ್ನಡ ಸಂಘ, ಡೊಂಬಿವಲಿ ಕನ್ನಡಸಂಘ, ಗೋರೆಗಾಂ, ಮಲಾಡ್ ಹಾಗೂ ಕೋಟೆ ಕನ್ನಡ ಸಂಘಗಳು ಸೇರಿವೆ. ಇವೆಲ್ಲವೂ ತಮ್ಮದೇ ಆದ ದೊಡ್ಡ ಅಥವಾ ಸಣ್ಣ ಹರವಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಕನ್ನಡತನವನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿವೆ. ಕನ್ನಡ ರಂಗ ಭೂಮಿಯಲ್ಲಿ ಹಲವಾರು ಕಲಾವಿದರು ತಮ್ಮ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿರುತ್ತಾರೆ. ಅವರಲ್ಲಿ ಪ್ರಮುಖರು ದುಗ್ಗಪ್ಪಯ್ಯ, ಕುಂತಿ ದುಗ್ಗಪ್ಪಯ್ಯ, ಆರ್. ಡಿ. ಕಾಮತ್, ಶ್ರೀಪತಿ ಬಲ್ಲಾಳ, ಕಿಶೋರಿ ಬಲ್ಲಾಳ್, ಸದಾನಂದ ಸುವರ್ಣ, ಡಾ.ಬಿ.ಆರ್.ಮಂಜುನಾಥ್, ಕೆ.ಮಂಜುನಾಥಯ್ಯ, ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ ದಂಪತಿಗಳು, (ದಿವಂಗತ) ಎ. ಎಸ್. ಕೆ ರಾವ್, ಭರತ್ ಕುಮಾರ್ ಪೊಲಿಪು, ಅಹಲ್ಯ ಬಲ್ಲಾಳ್, ಸಾ.ದಯಾ, ಶ್ಯಾಲಿನಿ ರಾವ್, ಮೋಹನ್ ಮಾರ್ನಾಡ್, ಅವಿನಾಶ್ ಕಾಮತ್, ಕುಸುಮ್ ಬಲ್ಲಾಳ್ ಮುಂತಾದವರು. ಮುಂಬಯಿ ನಗರವಾಸಿ ಮತ್ತು ಸಂಸ್ಕೃತಿ ಮುಂಬಯಿ ನಗರವಾಸಿಗಳನ್ನು ಮುಂಬಯಿಕರ್ ಎಂದು ಸಂಬೋಧಿಸುವುದುಂಟು. ಮುಂಬಯಿಯ ನಾಗರೀಕರ ದೈನಂದಿನ ಜೀವನದಲ್ಲಿ ಲೋಕಲ್ ರೈಲಿನ ಪ್ರಯಾಣ ಅವಿಭಾಜ್ಯ ಅಂಗವಾಗಿರುವುದರಿಂದ ಸ್ವಂತ ಮನೆ ಕೊಳ್ಳುವಾಗ ಆದಷ್ಟೂ ಲೋಕಲ್ ಸ್ಟೇಷನ್ನುಗಳ ಹತ್ತಿರವೇ ಹುಡುಕುತ್ತಾರೆ. ದೈನಂದಿನ ಜೀವನದಲ್ಲಿ ಓಡಾಟದಲ್ಲಿ ಗಡಿಯಾರದ ಮುಳ್ಳಿನಂತೆ ಮಗ್ನರಾಗಿರುವ ಮುಂಬಯಿಕರರಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕಡಿಮೆ. ಆದರೂ ಧಾರ್ಮಿಕ ಅಥವಾ ಸಾಮಾಜಿಕ ಚಟುವಟಿಕೆಗಳಾದ ಗಣೇಶ ಚತುರ್ಥಿಯೇ ಮೊದಲಾದ ಹಬ್ಬ ಹರಿದಿನಗಳನ್ನು ವಿಜೃಂಭಣೆಯಿಂದ, ಸಡಗರದಿಂದ, ಸಾಮೂಹಿಕವಾಗಿ ಆಚರಿಸುತ್ತಾರೆ. ಮುಂಬಯಿಯ ಖಾದ್ಯಸಂಸ್ಕೃತಿಯ ಸಂಕೇತವೆಂದರೆ ವಡಾಪಾವ್ ಎನ್ನಬಹುದು. ಪಾನೀಪುರಿ, ಪಾವ್ ಭಾಜಿ, ಭೇಳ್ ಪುರಿ, ದಕ್ಣಿಣ ಭಾರತೀಯ, ಪಂಜಾಬೀ, ಚೈನೀಸ್ ತಿನಿಸುಗಳೂ ಮುಂಬಯಿಯಲ್ಲಿ ಬಹಳ ಜನಪ್ರಿಯವಾಗಿವೆ. ಶ್ರೀಕೃಷ್ಣ ಬಟಾಟವಡ ಅಂಗಡಿ, ದಾದರ್ (ಪ), ಮುಂಬಯಿ, ದಾದರ್ ಪಶ್ಚಿಮ ದಲ್ಲಿದೆ. ಇಲ್ಲಿ ಬಿಸಿ-ಬಿಸಿ ಬಟಾಟಾವಡ ತಿಂದು ಚಹ- ಸೇವನೆಮಾಡುವ ಮಜವನ್ನು ಅನುಭವಿಸಬೇಕು. ಭಾರತೀಯ ಚಿತ್ರರಂಗದ ಜನ್ಮಸ್ಥಾನವೇ ಮುಂಬಯಿ ಎನ್ನಬಹುದು. ದಾದಾಸಾಹೇಬ್ ಫಾಳಕೆ ಭಾರತದ ಮೊಟ್ಟಮೊದಲ ಚಲನಚಿತ್ರ ತಯಾರಿಸಿದ್ದು ಮುಂಬಯಿಯಲ್ಲಿ. ವಿಪುಲವಾಗಿದ್ದ ಚಿತ್ರಮಂದಿರಗಳು ಕಳೆದ ದಶಕಗಳಲ್ಲಿ ಕಿರುತೆರೆಯ ದಾಳಿಯಿಂದ ತಮ್ಮ ವರ್ಚಸ್ಸು ಕಳೆದುಕೊಂಡಿದ್ದರೂ ಮಲ್ಟಿಪ್ಲೆಕ್ಸ್‌‍ಗಳ ರೂಪದಲ್ಲಿ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿವೆ. ರಸಿಕರಿಗಾಗಿ ನಾಟ್ಯಮಂದಿರಗಳು, ಚಿತ್ರ-ಶಿಲ್ಪ-ಕರಕುಶಲ ವಸ್ತುಗಳ ಪ್ರದರ್ಶನಕ್ಕಾಗಿ ಸರಕಾರೀ ಹಾಗೂ ಖಾಸಗೀ ರಂಗದ ಆರ್ಟ್ ಗ್ಯಾಲರಿಗಳು ಇಲ್ಲಿವೆ. ಇವುಗಳಲ್ಲಿ ಕೆಲವು ಪ್ರಸಿದ್ಧ ತಾಣಗಳೆಂದರೆ ಜಹಾಂಗೀರ್ ಆರ್ಟ್ ಗ್ಯಾಲರಿ, ಏಶಿಯಾಟಿಕ್ ಸೊಸೈಟಿಯ ವಾಚನಾಲಯ ಮತ್ತು ಛತ್ರಪತಿ ಶಿವಾಜಿ ವಸ್ತು ಸಂಗ್ರಹಾಲಯ(ಹಳೆಯ ಹೆಸರು ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್). ಬರ್ಲಿನ್, ಲಂಡನ್ , ಲಾಸ್ ಏಂಜಲೀಸ್, ಸೆಯಿಂಟ್ ಪೀಟರ್ಸ್ ಬರ್ಗ್,ಸ್ಟುಟ್ ಗರ್ಟ್, ಯೋಕೋಹಾಮ ಈ ನಗರಗಳನ್ನು ಮುಂಬಯಿಯ ಭಗಿನಿ ನಗರಗಳೆಂದು ಪರಿಗಣಿಸಲಾಗಿದೆ. ಮುಂಬೈನ ಸಂಸ್ಕೃತಿಯು ಸಾಂಪ್ರದಾಯಿಕ ಮತ್ತು ಕಾಸ್ಮೋಪಾಲಿಟನ್ ಹಬ್ಬಗಳು, ಆಹಾರ, ಮನರಂಜನೆ ಮತ್ತು ರಾತ್ರಿ ಜೀವನದ ಮಿಶ್ರಣವನ್ನು ನೀಡುತ್ತದೆ. ಮುಂಬೈ ಭಾರತದ ಅತ್ಯಂತ ಕಾಸ್ಮೋಪಾಲಿಟನ್ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದು ಪ್ರಮುಖ ವ್ಯಾಪಾರ ಕೇಂದ್ರವಾಗಿ ಅದರ ಇತಿಹಾಸ ಮತ್ತು ಶಿಕ್ಷಣ ಮಧ್ಯಮ ವರ್ಗದ ವಿಸ್ತರಣೆಯು ನಗರದಲ್ಲಿ ವೈವಿಧ್ಯಮಯ ಸಂಸ್ಕೃತಿಗಳು, ಧರ್ಮಗಳು ಮತ್ತು ಪಾಕಪದ್ಧತಿಗಳು ಸಹಬಾಳ್ವೆಗೆ ಕಾರಣವಾಗಿದೆ. ರೆಸ್ಟೋರೆಂಟ್‌ಗಳು, ಚಿತ್ರಮಂದಿರಗಳು, ಕ್ರೀಡಾಕೂಟಗಳು ಮತ್ತು ವಸ್ತುಸಂಗ್ರಹಾಲಯಗಳ ವೈವಿಧ್ಯತೆ ಮತ್ತು ಸಮೃದ್ಧಿಯು ಮುಂಬೈನ ವಿಶಿಷ್ಟವಾದ ಕಾಸ್ಮೋಪಾಲಿಟನ್ ಸಂಸ್ಕೃತಿಯ ಉತ್ಪನ್ನವಾಗಿದೆ. ಮುಂಬೈ ಭಾರತೀಯ ಚಿತ್ರರಂಗದ ಜನ್ಮಸ್ಥಳವಾಗಿದೆ. ದಾದಾಸಾಹೇಬ್ ಫಾಲ್ಕೆ ಮರಾಠಿ ಟಾಕೀಸ್ ನಂತರ ಮೂಕ ಚಲನಚಿತ್ರಗಳೊಂದಿಗೆ ಅಡಿಪಾಯ ಹಾಕಿದರು ಮತ್ತು ೨೦ ನೇ ಶತಮಾನದ ಆರಂಭದಲ್ಲಿ ಅತ್ಯಂತ ಹಳೆಯ ಚಲನಚಿತ್ರ ಪ್ರಸಾರವು ನಡೆಯಿತು. ಮುಂಬೈ ಕೂಡ ಬಾಲಿವುಡ್, ಮರಾಠಿ ಮತ್ತು ಹಾಲಿವುಡ್ ಚಲನಚಿತ್ರಗಳನ್ನು ಒಳಗೊಂಡಿರುವ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳನ್ನು ಹೊಂದಿದೆ. ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಭಾರತದಲ್ಲಿ ಹಿಂದಿ ಚಲನಚಿತ್ರೋದ್ಯಮಕ್ಕೆ ನೀಡಲಾಗುವ ಅತ್ಯಂತ ಹಳೆಯ ಮತ್ತು ಪ್ರಮುಖ ಚಲನಚಿತ್ರ ಪ್ರಶಸ್ತಿಯಾದ ಫಿಲ್ಮ್‌ಫೇರ್ ಪ್ರಶಸ್ತಿಗಳ ಪ್ರಶಸ್ತಿ ಸಮಾರಂಭವು ಮುಂಬೈನಲ್ಲಿ ನಡೆಯುತ್ತದೆ. ೧೯೫೦ ರ ದಶಕದ ವೇಳೆಗೆ ಬ್ರಿಟೀಷ್ ರಾಜ್ ಅವಧಿಯಲ್ಲಿ ರೂಪುಗೊಂಡ ಹೆಚ್ಚಿನ ವೃತ್ತಿಪರ ನಾಟಕ ಗುಂಪುಗಳ ಹೊರತಾಗಿಯೂ ಮುಂಬೈ ಮರಾಠಿ, ಹಿಂದಿ, ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ "ರಂಗಭೂಮಿ ಚಳುವಳಿ" ಸಂಪ್ರದಾಯವನ್ನು ಅಭಿವೃದ್ಧಿಪಡಿಸಿದೆ. ಸಮಕಾಲೀನ ಕಲೆಯು ಸರ್ಕಾರಿ - ಅನುದಾನಿತ ಕಲಾ ಸ್ಥಳಗಳು ಮತ್ತು ಖಾಸಗಿ ವಾಣಿಜ್ಯ ಗ್ಯಾಲರಿಗಳಲ್ಲಿ ಕಾಣಿಸಿಕೊಂಡಿದೆ. ಸರ್ಕಾರದ ಅನುದಾನಿತ ಸಂಸ್ಥೆಗಳಲ್ಲಿ ಜಹಾಂಗೀರ್ ಆರ್ಟ್ ಗ್ಯಾಲರಿ ಮತ್ತು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸೇರಿವೆ. ೧೮೩೩ ರಲ್ಲಿ ನಿರ್ಮಿಸಲಾದ ಏಷ್ಯಾಟಿಕ್ ಸೊಸೈಟಿ ಆಫ್ ಮುಂಬೈ ನಗರದ ಅತ್ಯಂತ ಹಳೆಯ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಒಂದಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯ (ಹಿಂದೆ ದಿ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ) ದಕ್ಷಿಣ ಮುಂಬೈನಲ್ಲಿರುವ ಪ್ರಸಿದ್ಧ ವಸ್ತುಸಂಗ್ರಹಾಲಯವಾಗಿದ್ದು ಇದು ಭಾರತೀಯ ಇತಿಹಾಸದ ಅಪರೂಪದ ಪ್ರಾಚೀನ ಪ್ರದರ್ಶನಗಳನ್ನು ಹೊಂದಿದೆ. ಮುಂಬೈ ಜಿಜಾಮಾತಾ ಉದ್ಯಾನ್ (ಹಿಂದೆ ವಿಕ್ಟೋರಿಯಾ ಗಾರ್ಡನ್ಸ್) ಎಂಬ ಹೆಸರಿನ ಮೃಗಾಲಯವನ್ನು ಹೊಂದಿದೆ. ಇದು ಉದ್ಯಾನವನವಾಗಿದೆ. ನಗರದ ಶ್ರೀಮಂತ ಸಾಹಿತ್ಯ ಸಂಪ್ರದಾಯಗಳನ್ನು ಬುಕರ್ ಪ್ರಶಸ್ತಿ ವಿಜೇತರಾದ ಸಲ್ಮಾನ್ ರಶ್ದಿ, ಅರವಿಂದ್ ಅಡಿಗ ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ತೋರಿಸಿದ್ದಾರೆ. ಮುಂಬೈ ಮೂಲದ ಲೇಖಕರಾದ ಮೋಹನ್ ಆಪ್ಟೆ, ಅನಂತ್ ಕನೇಕರ್ ಮತ್ತು ಗಂಗಾಧರ ಗಾಡ್ಗೀಳ್ ಅವರ ಕೃತಿಗಳಲ್ಲಿ ಮರಾಠಿ ಸಾಹಿತ್ಯವನ್ನು ಆಧುನೀಕರಿಸಲಾಗಿದೆ ಮತ್ತು ವಾರ್ಷಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೂಲಕ ಉತ್ತೇಜಿಸಲ್ಪಟ್ಟಿದೆ. ಇದು ಭಾರತದ ರಾಷ್ಟ್ರೀಯ ಅಕ್ಷರಗಳ ಅಕಾಡೆಮಿಯಿಂದ ನೀಡಲಾಗುವ ಸಾಹಿತ್ಯ ಗೌರವವಾಗಿದೆ. ಮುಂಬೈ ನಿವಾಸಿಗಳು ಪಾಶ್ಚಿಮಾತ್ಯ ಮತ್ತು ಭಾರತೀಯ ಎರಡೂ ಹಬ್ಬಗಳನ್ನು ಆಚರಿಸುತ್ತಾರೆ. ಗಣೇಶ ಚತುರ್ಥಿ ಮುಂಬೈನ ಅತಿದೊಡ್ಡ ಮತ್ತು ಪ್ರಮುಖ ಹಬ್ಬವಾಗಿದೆ. ಆಚರಣೆಗಳಿಗಾಗಿ ಮುಂಬೈ ನಗರದಲ್ಲಿ ಸುಮಾರು ೫೦೦೦ ಗಣಪತಿ ಮಂಟಪಗಳನ್ನು ಸ್ಥಾಪಿಸಲಾಗಿದೆ. ದೀಪಾವಳಿ, ಹೋಳಿ, ನವರಾತ್ರಿ, ಕ್ರಿಸ್ಮಸ್, ರಕ್ಷಾಬಂಧನ, ಮಕರ ಸಂಕ್ರಾಂತಿ, ದಸರಾ, ಈದ್, ದುರ್ಗಾ ಪೂಜೆ, ರಾಮ ನವಮಿ, ಶಿವ ಜಯಂತಿ ಮತ್ತು ಮಹಾ ಶಿವರಾತ್ರಿ ಮುಂತಾದ ಇತರ ಹಬ್ಬಗಳು ನಗರದಲ್ಲಿ ಕೆಲವು ಜನಪ್ರಿಯ ಹಬ್ಬಗಳಾಗಿವೆ. ಕಲಾ ಘೋಡಾ ಉತ್ಸವವು ಸಂಗೀತ, ನೃತ್ಯ, ರಂಗಭೂಮಿ ಮತ್ತು ಚಲನಚಿತ್ರಗಳ ಕ್ಷೇತ್ರಗಳಲ್ಲಿನ ಕಲಾವಿದರ ಕೃತಿಗಳನ್ನು ಒಳಗೊಂಡಿರುವ ಕಲೆಗಳ ಪ್ರಪಂಚದ ಪ್ರದರ್ಶನವಾಗಿದೆ. ಬಂಗಾಂಗ ಉತ್ಸವವು ಎರಡು ದಿನಗಳ ಸಂಗೀತ ಉತ್ಸವವಾಗಿದ್ದು ವಾರ್ಷಿಕವಾಗಿ ಜನವರಿ ತಿಂಗಳಲ್ಲಿ ನಡೆಯುತ್ತದೆ. ಇದನ್ನು ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮುಂಬೈನ ಐತಿಹಾಸಿಕ ಬಂಗಾಂಗಾ ಟ್ಯಾಂಕ್‌ನಲ್ಲಿ ಆಯೋಜಿಸುತ್ತದೆ. ಎಲಿಫೆಂಟಾ ದ್ವೀಪಗಳಲ್ಲಿ ಪ್ರತಿ ಫೆಬ್ರವರಿಯಲ್ಲಿ ಆಚರಿಸಲಾಗುವ ಎಲಿಫೆಂಟಾ ಉತ್ಸವವು ಶಾಸ್ತ್ರೀಯ ಭಾರತೀಯ ನೃತ್ಯ ಮತ್ತು ಸಂಗೀತಕ್ಕೆ ಸಮರ್ಪಿತವಾಗಿದೆ ಮತ್ತು ಈ ಉತ್ಸವವು ದೇಶಾದ್ಯಂತದ ಪ್ರದರ್ಶಕರನ್ನು ಆಕರ್ಷಿಸುತ್ತದೆ. ನಗರ ಮತ್ತು ರಾಜ್ಯಕ್ಕೆ ನಿರ್ದಿಷ್ಟವಾದ ಸಾರ್ವಜನಿಕ ರಜಾದಿನಗಳಲ್ಲಿ ಮೇ ೧ ರಂದು ಮಹಾರಾಷ್ಟ್ರ ದಿನ , ೧ ಮೇ ೧೯೬೦ ರಂದು ಮಹಾರಾಷ್ಟ್ರ ರಾಜ್ಯ ರಚನೆಯನ್ನು ಆಚರಿಸಲು ಮತ್ತು ಗುಡಿ ಪಾಡ್ವಾ ಇದು ಮರಾಠಿ ಜನರಿಗೆ ಹೊಸ ವರ್ಷದ ದಿನವಾಗಿದೆ. ಕಡಲತೀರಗಳು ನಗರದಲ್ಲಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಮುಂಬೈನಲ್ಲಿರುವ ಪ್ರಮುಖ ಕಡಲತೀರಗಳೆಂದರೆ ಗಿರ್ಗಾಮ್ ಚೌಪಾಟಿ, ಜುಹು ಬೀಚ್, ದಾದರ್ ಚೌಪಾಟಿ, ಗೊರೈ ಬೀಚ್, ಮಾರ್ವ್ ಬೀಚ್, ವರ್ಸೋವಾ ಬೀಚ್, ಮಾಧ್ ಬೀಚ್, ಅಕ್ಸಾ ಬೀಚ್ ಮತ್ತು ಮನೋರಿ ಬೀಚ್. ಗಿರ್ಗಾಂವ್ ಚೌಪಾಟಿ ಮತ್ತು ಜುಹು ಬೀಚ್ ಹೊರತುಪಡಿಸಿ ಹೆಚ್ಚಿನ ಕಡಲತೀರಗಳು ಈಜಲು ಅನರ್ಹವಾಗಿವೆ. ಎಸ್ಸೆಲ್ ವರ್ಲ್ಡ್ ಒಂದು ಥೀಮ್ ಪಾರ್ಕ್ ಮತ್ತು ಮನರಂಜನಾ ಕೇಂದ್ರವಾಗಿದ್ದು ಗೊರೈ ಬೀಚ್‌ಗೆ ಸಮೀಪದಲ್ಲಿದೆ ಮತ್ತು ಏಷ್ಯಾದ ಅತಿದೊಡ್ಡ ಥೀಮ್ ವಾಟರ್ ಪಾರ್ಕ್, ವಾಟರ್ ಕಿಂಗ್‌ಡಮ್ ಅನ್ನು ಒಳಗೊಂಡಿದೆ. ಏಪ್ರಿಲ್ ೨೦೧೩ ರಲ್ಲಿ ಪ್ರಾರಂಭವಾದ ಅಡ್ಲ್ಯಾಬ್ಸ್ ಇಮ್ಯಾಜಿಕಾ ಮುಂಬೈ - ಪುಣೆ ಎಕ್ಸ್‌ಪ್ರೆಸ್‌ವೇಯಿಂದ ಖೋಪೋಲಿ ನಗರದ ಸಮೀಪದಲ್ಲಿದೆ. ಪ್ರಸಾರ ಮಾಧ್ಯಮಗಳು ಮುಂಬೈ ಹಲವಾರು ಪತ್ರಿಕೆ ಪ್ರಕಟಣೆಗಳು, ದೂರದರ್ಶನ ಮತ್ತು ರೇಡಿಯೋ ಕೇಂದ್ರಗಳನ್ನು ಹೊಂದಿದೆ. ಅನೇಕ ಪ್ರಕಾಶನ ಸಂಸ್ಥೆಗಳು, ವೃತ್ತ ಪತ್ರಿಕೆಗಳು, ಕಿರುತೆರೆ ವಾಹಿನಿಗಳು ಮುಂಬಯಿಯಿಂದ ಕಾರ್ಯನಿರ್ವಹಿಸುತ್ತಿವೆ. ಇಂಗ್ಲೀಷ್ ಪತ್ರಿಕೆಗಳಲ್ಲಿ ಮುಖ್ಯವಾದವುಗಳೆಂದರೆ ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್ ಪ್ರೆಸ್, ಡಿ.ಎನ್.ಏ, ಹಿಂದೂಸ್ತಾನ್ ಟೈಮ್ಸ್ , ಮಿಡ್ ಡೇ ಇತ್ಯಾದಿ. ಮಹಾರಾಷ್ಟ್ರ ಟೈಮ್ಸ್ , ಸಕಾಳ, ಲೋಕಸತ್ತಾ , ಸಾಮನಾ ಮತ್ತು ನವಾಕಾಳ ಮುಖ್ಯ ಮರಾಠಿ ಪತ್ರಿಕೆಗಳು. ಇವಲ್ಲದೆ ಗುಜರಾತಿ, ಕನ್ನಡ, ತಮಿಳು ಮುಂತಾದ ಇತರೇ ಭಾಷೆಗಳ ಪತ್ರಿಕೆಗಳೂ ಮುಂಬಯಿಯಿಂದ ಹೊರಡುತ್ತವೆ. ಕರ್ನಾಟಕ ಮಲ್ಲ, ಉದಯವಾಣಿ ಕನ್ನಡ ಪತ್ರಿಕೆ ಮುಂಬಯಿಂದ ಪ್ರಕಟವಾಗುತ್ತಿವೆ. ಭಾರತದ ಅತಿ ಹಳೆಯ ದಿನಪತ್ರಿಕೆ ಎಂದು ಹೆಸರಾಗಿರುವ ಬಾಂಬೇ ಸಮಾಚಾರ್ ಎಂಬ ಪತ್ರಿಕೆ ಗುಜರಾತಿ ಮತ್ತು ಇಂಗ್ಲೀಷಿನಲ್ಲಿ ಮುಂಬಯಿಯಿಂದ ೧೮೨೨ ರಿಂದಲೂ ಪ್ರಕಟವಾಗುತ್ತಿದೆ. ಜನಪ್ರಿಯ ಮರಾಠಿ ಭಾಷೆಯ ನಿಯತಕಾಲಿಕೆಗಳು ಸಪ್ತಾಹಿಕ್ ಸಕಾಲ್, ಗೃಹಶೋಭಿಕ, ಲೋಕರಾಜ್ಯ, ಲೋಕಪ್ರಭ ಮತ್ತು ಚಿತ್ರಲೇಖ. ಅನೇಕ ಕಿರುತೆರೆ ವಾಹಿನಿಗಳ ಕೇಂದ್ರ ಮತ್ತು ಪ್ರಾದೇಶಿಕ ಕಚೇರಿಗಳು ಮುಂಬಯಿಯಲ್ಲಿವೆ. ದೂರದರ್ಶನದ ಎರಡು ಕಿರುತೆರೆ ವಾಹಿನಿಗಳೊಂದಿಗೆ ಮೂರು ಮುಖ್ಯ ಕೇಬಲ್ ಟಿವಿ ಜಾಲಗಳು ಮುಂಬಯಿಯ ಬಹುತೇಕ ಮನೆಗಳನ್ನು ತಲುಪಿವೆ. ಉಪಗ್ರಹ ಟಿವಿ (ಡಿಟಿಹೆಚ್) ಈಗಿನ್ನೂ (೨೦೦೬ರಲ್ಲಿ) ಪ್ರವೇಶಮಾಡುತ್ತಿದ್ದು ಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯವಾಗುವ ಸಂಭವವಿದೆ. ೨೦೦೬ ರ ಕೊನೆಯಿಂದ ನಗರದ ಅನೇಕ ಕಡೆಗಳಲ್ಲಿ ಸಿಎಎಸ್ ಮೂಲಕವೇ ಟಿವಿ ವಾಹಿನಿಗಳ ಪ್ರಸಾರವನ್ನು ಕಡ್ಡಾಯ ಮಾಡಲಾಗಿದೆ. ಕೇಬಲ್ ಟಿವಿ ಜಾಲಗಳ ಮೇಲೆ ಡಿಟಿಹೆಚ್ ಮತ್ತು ಸಿಎಎಸ್ ಗಳ ಪರಿಣಾಮ ಏನೆಂದು ಈಗಲೇ ಊಹಿಸುವುದು ಅಸಾಧ್ಯವಾದರೂ ಈ ಉದ್ಯಮ ಇನ್ನು ಕೆಲವರ್ಷಗಳಲ್ಲಿ ಮಹತ್ತರ ಬದಲಾವಣೆಯನ್ನು ಹೊಂದುವುದರಲ್ಲಿ ಏನೂ ಸಂಶಯವಿಲ್ಲ. ಮುಂಬಯಿಯಲ್ಲಿ ಒಂಭತ್ತು ರೇಡಿಯೋ ಸ್ಟೇಷನುಗಳಿದ್ದು ಇದರಲ್ಲಿ ಆರು ಎಫ್‌ಎಮ್ ತರಂಗಗಳಲ್ಲಿ ಪ್ರಸಾರಮಾಡಿದರೆ ಬಾಕಿ ಮೂರು ಆಕಾಶವಾಣಿಯ ಎಎಮ್ ತರಂಗಗಳಲ್ಲಿ ಪ್ರಸಾರವಾಗುತ್ತಿದೆ. ಎಫ್‌ಎಮ್ ಕೇಂದ್ರಗಳು ಕಳೆದ ಕೆಲ ವರ್ಷಗಳಲ್ಲಿ ಪ್ರಾರಂಭವಾಗಿದ್ದು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿವೆ. ಮುಂಬೈ ಸಿರಿಯಸ್‌ನಂತಹ ವಾಣಿಜ್ಯ ರೇಡಿಯೊ ಪೂರೈಕೆದಾರರಿಗೆ ಪ್ರವೇಶವನ್ನು ಹೊಂದಿದೆ. ಮುಂಬೈ ಮೂಲದ ಹಿಂದಿ ಚಲನಚಿತ್ರೋದ್ಯಮವಾದ ಬಾಲಿವುಡ್, ಪ್ರತಿ ವರ್ಷ ಸುಮಾರು ೧೫೦ - ೨೦೦ ಚಲನಚಿತ್ರಗಳನ್ನು ನಿರ್ಮಿಸುತ್ತದೆ. ಬಾಲಿವುಡ್ ಎಂಬ ಹೆಸರು ಬಾಂಬೆ ಮತ್ತು ಹಾಲಿವುಡ್‌ನ ಮಿಶ್ರಣವಾಗಿದೆ. ೨೦೦೦ ರ ದಶಕವು ಸಾಗರೋತ್ತರದಲ್ಲಿ ಬಾಲಿವುಡ್ ಜನಪ್ರಿಯತೆಯ ಬೆಳವಣಿಗೆಯನ್ನು ಕಂಡಿತು. ಇದು ಗುಣಮಟ್ಟ, ಛಾಯಾಗ್ರಹಣ ಮತ್ತು ನವೀನ ಕಥೆಯ ಸಾಲುಗಳು ಮತ್ತು ವಿಶೇಷ ಪರಿಣಾಮಗಳು ಮತ್ತು ಅನಿಮೇಷನ್‌ನಂತಹ ತಾಂತ್ರಿಕ ಪ್ರಗತಿಗಳ ವಿಷಯದಲ್ಲಿ ಚಲನಚಿತ್ರ ನಿರ್ಮಾಣವನ್ನು ಹೊಸ ಎತ್ತರಕ್ಕೆ ಕರೆದೊಯ್ಯಿತು. ನಗರವು ಮರಾಠಿ ಚಲನಚಿತ್ರೋದ್ಯಮವನ್ನು ಸಹ ಆಯೋಜಿಸುತ್ತದೆ. ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಜನಪ್ರಿಯತೆಯನ್ನು ಕಂಡಿದೆ ಮತ್ತು ಟಿವಿ ನಿರ್ಮಾಣ ಕಂಪನಿಗಳನ್ನು ಹೊಂದಿದೆ. ಮುಂಬೈ ಭಾರತೀಯ ಚಲನಚಿತ್ರ ನಿರ್ಮಾಣದ ಕೇಂದ್ರವಾಗಿದೆ. ಬೆಂಗಾಲಿ, ಭೋಜ್‌ಪುರಿ, ಗುಜರಾತಿ, ಮಲಯಾಳಂ, ತಮಿಳು, ಕನ್ನಡ, ತೆಲುಗು ಮತ್ತು ಉರ್ದು ಮುಂತಾದ ಹಲವಾರು ಇತರ ಭಾರತೀಯ ಭಾಷೆಯ ಚಲನಚಿತ್ರಗಳೂ ಸಹ ಸಾಂದರ್ಭಿಕವಾಗಿ ಮುಂಬೈನಲ್ಲಿ ಚಿತ್ರೀಕರಣಗೊಳ್ಳುತ್ತವೆ. ಸ್ಲಮ್‌ಡಾಗ್ ಮಿಲಿಯನೇರ್ ಇಂಗ್ಲಿಷ್ ಭಾಷೆಯ ಬ್ರಿಟಿಷ್ ಚಲನಚಿತ್ರವನ್ನು ಸಂಪೂರ್ಣವಾಗಿ ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ ಮತ್ತು ೮ ಆಸ್ಕರ್ ಪ್ರಶಸ್ತಿಗಳನ್ನು ಗಳಿಸಿದೆ. ಪೇ ಟಿವಿ ಕಂಪನಿಗಳು ಅಥವಾ ಸ್ಥಳೀಯ ಕೇಬಲ್ ಟೆಲಿವಿಷನ್ ಪೂರೈಕೆದಾರರ ಮೂಲಕ ಮುಂಬೈನಲ್ಲಿ ಹಲವಾರು ಭಾರತೀಯ ಮತ್ತು ಅಂತರಾಷ್ಟ್ರೀಯ ದೂರದರ್ಶನ ಚಾನೆಲ್‌ಗಳನ್ನು ವೀಕ್ಷಿಸಬಹುದು. ಮಹಾನಗರವು ಅನೇಕ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಕೇಂದ್ರವಾಗಿದೆ. ಅನೇಕ ಸುದ್ದಿ ವಾಹಿನಿಗಳು ಮತ್ತು ಮುದ್ರಣ ಪ್ರಕಟಣೆಗಳು ಪ್ರಮುಖ ಉಪಸ್ಥಿತಿಯನ್ನು ಹೊಂದಿವೆ. ಲಭ್ಯವಿರುವ ವ್ಯಾಪಕ ಶ್ರೇಣಿಯ ಕೇಬಲ್ ಚಾನೆಲ್‌ಗಳಲ್ಲಿ ಝೀ ಮರಾಠಿ, ಜೀ ಟಾಕೀಸ್, ಇಟಿವಿ ಮರಾಠಿ, ಸ್ಟಾರ್ ಪ್ರವಾಹ, ಮಿ ಮರಾಠಿ, ಡಿಡಿ ಸಹ್ಯಾದ್ರಿ (ಎಲ್ಲಾ ಮರಾಠಿ ಚಾನೆಲ್‌ಗಳು), ಸುದ್ದಿ ವಾಹಿನಿಗಳಾದ ಎಬಿಪಿ ಮಜಾ, ಐಬಿಎನ್-ಲೋಕಮತ್, ಜೀ ೨೪ ತಾಸ್, ಇಎಸ್‌ಪಿಎನ್‌ನಂತಹ ಕ್ರೀಡಾ ಚಾನೆಲ್‌ಗಳು ಸೇರಿವೆ. ಅಂತೆಯೇ ಸ್ಟಾರ್ ಸ್ಪೋರ್ಟ್ಸ್, ಕಲರ್ಸ್ ಟಿವಿ, ಸೋನಿ, ಜೀ ಟಿವಿ ಮತ್ತು ಸ್ಟಾರ್ ಪ್ಲಸ್‌ನಂತಹ ರಾಷ್ಟ್ರೀಯ ಮನರಂಜನಾ ಚಾನೆಲ್‌ಗಳು, ಸಿಎನ್‌ಬಿಸಿ ಆವಾಜ್, ಝೀ ಬಿಸಿನೆಸ್, ಇಟಿ ನೌ ಮತ್ತು ಬ್ಲೂಮ್‌ಬರ್ಗ್ ಯುಟಿವಿಯಂತಹ ವ್ಯಾಪಾರ ಸುದ್ದಿ ವಾಹಿನಿಗಳು ಇವೆ. ಮುಂಬೈಗೆ ಸಂಪೂರ್ಣವಾಗಿ ಮೀಸಲಾದ ಸುದ್ದಿ ವಾಹಿನಿಗಳಲ್ಲಿ ಸಹಾರಾ ಸಮಯ ಮುಂಬೈ ಸೇರಿದೆ. ಹೆಚ್ಚಿನ ಅನುಸ್ಥಾಪನ ವೆಚ್ಚದ ಕಾರಣ, ಉಪಗ್ರಹ ದೂರದರ್ಶನ ಇನ್ನೂ ಸಾಮೂಹಿಕ ಸ್ವೀಕಾರವನ್ನು ಪಡೆಯಬೇಕಾಗಿದೆ. ಮುಂಬೈನಲ್ಲಿನ ಪ್ರಮುಖ ಡಿಟಿಹೆಚ್ ಮನರಂಜನಾ ಸೇವೆಗಳಲ್ಲಿ ಡಿಶ್ ಟಿವಿ ಮತ್ತು ಟಾಟಾ ಸ್ಕೈ ಸೇರಿವೆ. ಶಿಕ್ಷಣ ಮುಂಬಯಿ ಮಹಾನಗರಪಾಲಿಕೆ “ಮುನಿಸಿಪಲ್ ಶಾಲೆ”ಗಳನ್ನು ನಡೆಸುತ್ತದೆಯಾದರೂ ಉತ್ತಮ ಶೈಕ್ಷಣಿಕ ಮಟ್ಟ ಮತ್ತು ಇಂಗ್ಲೀಷ್ ಮಾಧ್ಯಮದ ಕಲಿಕೆಯಿಂದ ಜನಸಾಮಾನ್ಯರು ಅನೇಕ ಖಾಸಗೀ ಸಂಘ ಸಂಸ್ಥೆಗಳು ನಡೆಸುವ ಶಾಲಾಕಾಲೇಜುಗಳಿಗೆ ಪ್ರಾಧಾನ್ಯ ಕೊಡುತ್ತಾರೆ. ಇವುಗಳಲ್ಲಿ ಸರಕಾರೀ ಅನುದಾನ ಪಡೆಯುವ ಹಾಗೂ ಪಡೆಯದ ಶಾಲೆಗಳು ಸೇರಿವೆ. ಶಾಲೆಗಳು ಬಹುತೇಕ ರಾಜ್ಯ ಸರಕಾರದ ಎಸ್ ಎಸ್ ಸಿ ಬೋರ್ಡಿನ ಪಠ್ಯವನ್ನು ಅನುಸರಿಸುತ್ತವೆಯಾದರೂ ಅಖಿಲ ಭಾರತ ಪಠ್ಯಕ್ರಮಗಳಾದ ಸಿ ಬಿ ಎಸ್ ಇ ಮತ್ತು ಐ ಸಿ ಎಸ್ ಇ ಪದ್ಧತಿಯನ್ನು ಅನುಸರಿಸುವ ಶಾಲೆಗಳೂ ಸಾಕಷ್ಟಿವೆ. ಸಿ ಬಿ ಎಸ್ ಇ ಮತ್ತು ಐ ಸಿ ಎಸ್ ಇ ಶಾಲೆಗಳಲ್ಲಿ ನೋಂದಣಿಗೆ ಹೆಚ್ಚು ಬೇಡಿಕೆಯಿದೆ. ಸರಕಾರೀ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಾವವಿದ್ದರೂ ಖಾಸಗೀ ಶಾಲೆಗಳ ದುಬಾರಿ ಶುಲ್ಕದ ದೆಸೆಯಿಂದ ಬಡಜನತೆಗೆ ಸರಕಾರೀ ಶಾಲೆಗಳೇ ಅನಿವಾರ್ಯವಾಗಿವೆ. ಈಚೀಚೆಗೆ ಅಂತರರಾಷ್ಟ್ರೀಯ ಪಠ್ಯಕ್ರಮಗಳಾದ ಐ ಬಿ ಯನ್ನು ಅನುಸರಿಸುವ ಶಾಲೆಗಳೂ ಪ್ರಾರಂಭವಾಗಿದ್ದರೂ ಇವುಗಳ ಅತಿ ದುಬಾರೀ ಶುಲ್ಕ ಸಾಧಾರಣ ಮಧ್ಯಮವರ್ಗೀಯರಿಗೂ ಕೈಗೆಟುಕದಾಗಿದೆ. ಶಾಲೆಗಳು ಈ ಕೆಳಗಿನ ಯಾವುದಾದರೂ ಬೋರ್ಡ್‌ಗಳೊಂದಿಗೆ ಸಂಯೋಜಿತವಾಗಿವೆ: ಮಹಾರಾಷ್ಟ್ರ ರಾಜ್ಯ ಮಂಡಳಿ ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷೆಗಳಿಗಾಗಿ ಆಲ್-ಇಂಡಿಯಾ ಕೌನ್ಸಿಲ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಸೆಂಟ್ರಲ್ ಬೋರ್ಡ್ ಫಾರ್ ಸೆಕೆಂಡರಿ ಎಜುಕೇಶನ್ ಇಂಟರ್ನ್ಯಾಷನಲ್ ಬ್ಯಾಕಲೌರಿಯೇಟ್ ಮಾಧ್ಯಮಿಕ ಶಿಕ್ಷಣದ ಅಂತರರಾಷ್ಟ್ರೀಯ ಸಾಮಾನ್ಯ ಪ್ರಮಾಣಪತ್ರ. ಮರಾಠಿ ಅಥವಾ ಇಂಗ್ಲಿಷ್ ಸಾಮಾನ್ಯ ಬೋಧನಾ ಭಾಷೆಯಾಗಿದೆ. ಇಲ್ಲಿಯ ಶಿಕ್ಷಣ ಪದ್ಧತಿ ೧೦+೨+೩ ಯನ್ನು ಅನುಸರಿಸುತ್ತದೆ. ಅರ್ಥಾತ್ ಹತ್ತು ವರ್ಷದ ಶಾಲೆಯ ನಂತರ ಎರಡು ವರ್ಷದ ಪದವಿಪೂರ್ವ ಶಿಕ್ಷಣವಿದೆ. ಇದಾದಮೇಲೆ ಮೂರು ವರ್ಷದ ಕಲಾ, ವಿಜ್ಞಾನ ಅಥವಾ ವಾಣಿಜ್ಯ ಪದವಿ ಶಿಕ್ಷಣ. ಇಂಜಿನಿಯರಿಂಗ್ ಪದವಿ ನಾಲ್ಕು ವರ್ಷದ್ದಾದರೆ ವೈದ್ಯಕೀಯ ಶಿಕ್ಷಣ ಸುಮಾರು ಐದು-ಐದೂವರೆ ವರ್ಷ ಅವಧಿಯದ್ದಾಗಿದೆ. ಮುಂಬಯಿಯ ಬಹುತೇಕ ಕಾಲೇಜುಗಳ ಪಠ್ಯಕ್ರಮ, ಪರೀಕ್ಷೆ ಇತ್ಯಾದಿ ಮುಂಬಯಿ ವಿಶ್ವವಿದ್ಯಾನಿಲಯದ ಅಧೀನದಲ್ಲಿವೆ. ಪ್ರತಿವರ್ಷ ಹೊರಬರುವ ಪದವೀಧರ ಸಂಖ್ಯೆಯನ್ನು ಪರಿಗಣನೆಯಲ್ಲಿ ಮುಂಬಯಿ ವಿಶ್ವವಿದ್ಯಾಲಯ ಪ್ರಪಂಚದಲ್ಲಿಯೇ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದು. ಇದಲ್ಲದೇ ಪ್ರಖ್ಯಾತ ಐ ಐ ಟಿ ( ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸಹಾ ಇಲ್ಲಿದೆ. ಎಸ್ ಎನ್ ಡಿ ಟಿ ಮಹಿಳಾ ವಿಶ್ವವಿದ್ಯಾಲಯ ಮತ್ತು ನರ್ಸೀ ಮೋನ್ಜೀ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ ಮುಂಬಯಿಯ ಇತರ ವಿಶ್ವವಿದ್ಯಾಲಯಗಳು. ಎಮ್‌ಸಿಜಿಎಮ್ ನ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯು ಏಷ್ಯಾದ ಅತಿದೊಡ್ಡ ನಗರ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಾಗಿದೆ. ಎಮ್‌ಸಿಜಿಎಮ್ ಎಂಟು ಭಾಷೆಗಳಲ್ಲಿ (ಮರಾಠಿ, ಹಿಂದಿ, ಗುಜರಾತಿ, ಉರ್ದು, ಇಂಗ್ಲೀಷ್, ತಮಿಳು, ತೆಲುಗು ಮತ್ತು ಕನ್ನಡ) ೪೮೫,೫೩೧ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡುವ ೧,೧೮೮ ಪ್ರಾಥಮಿಕ ಶಾಲೆಗಳನ್ನು ನಿರ್ವಹಿಸುತ್ತದೆ. ಎಮ್‌ಸಿಜಿಎಮ್ ತನ್ನ ೪೯ ಮಾಧ್ಯಮಿಕ ಶಾಲೆಗಳ ಮೂಲಕ ೫೫,೫೭೬ ವಿದ್ಯಾರ್ಥಿಗಳಿಗೆ ಮಾಧ್ಯಮಿಕ ಶಿಕ್ಷಣವನ್ನು ನೀಡುತ್ತದೆ. ಉನ್ನತ ಶಿಕ್ಷಣ ನಗರದ ಹೆಚ್ಚಿನ ಕಾಲೇಜುಗಳು ಮುಂಬೈ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾಗಿವೆ. ಇದು ಪದವೀಧರರ ಸಂಖ್ಯೆಯ ದೃಷ್ಟಿಯಿಂದ ವಿಶ್ವದ ಅತಿದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಮುಂಬೈ ವಿಶ್ವವಿದ್ಯಾಲಯವು ಭಾರತದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಇದು ೨೦೧೨ ರಲ್ಲಿ ಅಮೆರಿಕದ ಸುದ್ದಿ ಪ್ರಸಾರ ಸಂಸ್ಥೆ ಬ್ಯುಸಿನೆಸ್ ಇನ್‌ಸೈಡರ್‌ನಿಂದ ವಿಶ್ವದ ಟಾಪ್ ೫೦ ಎಂಜಿನಿಯರಿಂಗ್ ಶಾಲೆಗಳಲ್ಲಿ ೪೧ ನೇ ಸ್ಥಾನದಲ್ಲಿದೆ ಮತ್ತು ಐದು ಉದಯೋನ್ಮುಖ ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದಿಂದ ಪಟ್ಟಿಯಲ್ಲಿರುವ ಏಕೈಕ ವಿಶ್ವವಿದ್ಯಾಲಯವಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (ಐಐಟಿ ಬಾಂಬೆ) , ಮುಂಬೈ, ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಹಿಂದೆ ಯುಡಿಸಿಟಿ / ಯುಐಸಿಟಿ) , ವೀರಮಾತಾ ಜಿಜಾಬಾಯಿ ಟೆಕ್ನಾಲಜಿಕಲ್ ಇನ್‌ಸ್ಟಿಟ್ಯೂಟ್ (ವಿಜೆಟಿಐ) , ಇವುಗಳು ಭಾರತದ ಪ್ರಮುಖ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಾಲೆಗಳಾಗಿವೆ, ಜೊತೆಗೆ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯವು ಸ್ವಾಯತ್ತ ವಿಶ್ವವಿದ್ಯಾಲಯಗಳು ಮುಂಬೈನಲ್ಲಿ ಇದೆ. ಏಪ್ರಿಲ್ ೨೦೧೫ ರಲ್ಲಿ ಐಐಟಿ ಬಾಂಬೆ ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಜೊತೆಗೆ ಮೊದಲ ಯುಎಸ್-ಭಾರತ ಜಂಟಿ ಇಎಮ್‌ಬಿಎ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಥಡೋಮಲ್ ಶಹಾನಿ ಇಂಜಿನಿಯರಿಂಗ್ ಕಾಲೇಜ್ ಮುಂಬೈನ ಫೆಡರಲ್ ಯೂನಿವರ್ಸಿಟಿಗೆ ಸಂಯೋಜಿತವಾಗಿರುವ ಮೊದಲ ಮತ್ತು ಅತ್ಯಂತ ಹಳೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜಾಗಿದೆ ಹಾಗೂ ಕಂಪ್ಯೂಟರ್ ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಬಯೋಮೆಡಿಕಲ್ ಇಂಜಿನಿಯರಿಂಗ್ ಮತ್ತು ಬಯೋಟೆಕ್ನಾಲಜಿಯಲ್ಲಿ ಪದವಿಪೂರ್ವ ಮಟ್ಟದ ಕೋರ್ಸ್‌ಗಳನ್ನು ನೀಡುವ ನಗರದ ವಿಶ್ವವಿದ್ಯಾನಿಲಯದಲ್ಲಿ ಮೊದಲ ಸಂಸ್ಥೆಯಾಗಿದೆ. ೧೮೪೫ ರಲ್ಲಿ ಸ್ಥಾಪಿಸಲಾದ ಗ್ರಾಂಟ್ ಮೆಡಿಕಲ್ ಕಾಲೇಜು ಮತ್ತು ಸೇಥ್ ಜಿ.ಎಸ್ ವೈದ್ಯಕೀಯ ಕಾಲೇಜುಗಳು ಕ್ರಮವಾಗಿ ಸರ್ ಜಮ್ಶೆಡ್ಜಿ ಜೀಜೀಭೋಯ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಮತ್ತು ಕೆಇಎಮ್ ಆಸ್ಪತ್ರೆಯೊಂದಿಗೆ ಸಂಯೋಜಿತವಾಗಿರುವ ಪ್ರಮುಖ ವೈದ್ಯಕೀಯ ಸಂಸ್ಥೆಗಳಾಗಿವೆ. ಮುಂಬೈಯು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಇಂಜಿನಿಯರಿಂಗ್, ಜಮ್ನಾಲಾಲ್ ಬಜಾಜ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ನರ್ಸೀ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಎಸ್‌ಪಿ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ರಿಸರ್ಚ್, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಮತ್ತು ಹಲವಾರು ಇತರ ನಿರ್ವಹಣಾ ಶಾಲೆಗಳಾಗಿವೆ. ಸರ್ಕಾರಿ ಕಾನೂನು ಕಾಲೇಜು ಮತ್ತು ಸಿಡೆನ್‌ಹ್ಯಾಮ್ ಕಾಲೇಜು , ಕ್ರಮವಾಗಿ ಭಾರತದ ಅತ್ಯಂತ ಹಳೆಯ ಕಾನೂನು ಮತ್ತು ವಾಣಿಜ್ಯ ಕಾಲೇಜುಗಳು ಮುಂಬೈನಲ್ಲಿ ನೆಲೆಗೊಂಡಿವೆ. ಸರ್ ಜೆ. ಜೆ. ಸ್ಕೂಲ್ ಆಫ್ ಆರ್ಟ್ ಮುಂಬೈನ ಅತ್ಯಂತ ಹಳೆಯ ಕಲಾ ಸಂಸ್ಥೆಯಾಗಿದೆ. ಇದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ದೇಶದ ಅತ್ಯುತ್ತಮ ಕಾನೂನು ಶಾಲೆಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಮುಂಬೈ ಎರಡು ಪ್ರಮುಖ ಸಂಶೋಧನಾ ಸಂಸ್ಥೆಗಳಿಗೆ ನೆಲೆಯಾಗಿದೆ. ಅವುಗಳೆಂದರೆ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮತ್ತು ಭಾಭಾ ಪರಮಾಣು ಸಂಶೋಧನಾ ಕೇಂದ್ರ . ಮುಂಬೈ ಪಶುವೈದ್ಯಕೀಯ ಕಾಲೇಜು ಭಾರತ ಮತ್ತು ಏಷ್ಯಾದ ಅತ್ಯಂತ ಹಳೆಯ ಮತ್ತು ಪ್ರಧಾನ ಪಶುವೈದ್ಯಕೀಯ ಕಾಲೇಜು. ಇದರ ಅಡಿಪಾಯವನ್ನು ೧೮೮೬ ರಲ್ಲಿ ಹಾಕಲಾಯಿತು. ಐಸಿಎಆರ್-ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫಿಶರೀಸ್ ಎಜುಕೇಶನ್ ಭಾರತದ ಮುಂಬೈನಲ್ಲಿರುವ ಮೀನುಗಾರಿಕೆ ವಿಜ್ಞಾನಕ್ಕಾಗಿ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣದ ಸಂಸ್ಥೆಯಾಗಿದೆ. ಸಿಐಎಫ್‌ಇ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನಾಲ್ಕು ದಶಕಗಳ ನಾಯಕತ್ವವನ್ನು ಹೊಂದಿದೆ. ಅದರ ಹಳೆಯ ವಿದ್ಯಾರ್ಥಿಗಳು ವಿಶ್ವಾದ್ಯಂತ ಮೀನುಗಾರಿಕೆ ಮತ್ತು ಜಲಚರಗಳ ಅಭಿವೃದ್ಧಿಯಲ್ಲಿ ಸಹಾಯ ಮಾಡುತ್ತಾರೆ. ಸಂಶೋಧನೆ ಮತ್ತು ತಾಂತ್ರಿಕ ಪ್ರಗತಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಈ ಸಂಸ್ಥೆಯು ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ (ಇತರ ಮೂರು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ). ಕ್ರೀಡೆ ಮುಂಬಯಿ ಅತಿ ಜನಪ್ರಿಯ ಆಟ ಎಂದರೆ ಕ್ರಿಕೆಟ್. ಮುಂಬೈನಲ್ಲಿ ಕ್ರಿಕೆಟ್ ಇತರ ಕ್ರೀಡೆಗಳಿಗಿಂತ ಹೆಚ್ಚು ಜನಪ್ರಿಯವಾಗಿದೆ. ಇದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ತವರಾಗಿದೆ. ಮುಂಬೈ ಎರಡು ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗಳನ್ನು ಹೊಂದಿದೆ. ಅವುಗಳೆಂದರೆ ವಾಂಖೆಡೆ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂ. ಭಾರತದಲ್ಲಿ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ಮುಂಬೈನಲ್ಲಿ ಬಾಂಬೆ ಜಿಮ್ಖಾನಾದಲ್ಲಿ ನಡೆಯಿತು. ನಗರದಲ್ಲಿ ಇಲ್ಲಿಯವರೆಗೆ ನಡೆದ ಅತಿದೊಡ್ಡ ಕ್ರಿಕೆಟ್ ಪಂದ್ಯವೆಂದರೆ ೨೦೧೧ ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಫೈನಲ್ ಪಂದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಿತು. ೨೦೦೬ ರಲ್ಲಿ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ವಿಶ್ವಕಪ್ ಫೈನಲ್ ಮತ್ತು ಫೈನಲ್ ಎರಡಕ್ಕೂ ಆತಿಥ್ಯ ವಹಿಸಿದ ಎರಡು ನಗರಗಳು ಮುಂಬೈ ಮತ್ತು ಲಂಡನ್ ಮಾತ್ರ. ಸಣ್ಣ ಪುಟ್ಟ ಓಣಿಗಳಲ್ಲಿಯೂ ಸಮಯ ಸಿಕ್ಕಾಗಲೆಲ್ಲ ಕ್ರಿಕೆಟ್ ಆಡುವುದನ್ನು ಕಾಣಬಹುದು. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ಕಚೇರಿ ಮುಂಬಯಿಯಲ್ಲಿದೆ. ಭಾರತದ ಕ್ರಿಕೆಟ್ಟಿನ ತವರು ಮನೆ ಎಂದೇ ಕರೆಯಬಹುದಾದ ಮುಂಬಯಿ, ಅನೇಕ ಪ್ರತಿಭಾವಂತ ಕ್ರಿಕೆಟರುಗಳನ್ನು ಭಾರತ ತಂಡಕ್ಕೆ ನೀಡಿದೆ. ಇಂದಿನ ಸಚಿನ್ ತೆಂಡೂಲ್ಕರ್, ಅಜಿತ್ ಅಗರಕರ್ ಹಿಂದಿನ ಅಜಿತ್ ವಾಡೇಕರ್ , ಸುನೀಲ್ ಗವಾಸ್ಕರ್, ಫಾರೂಖ್ ಇಂಜಿನಿಯರ್ , ವಿನೋದ್ ಕಾಂಬ್ಳಿ, ವಿಜಯ್ ಮಾಂಜ್ರೇಕರ್ ಇವರುಗಳು ಮುಂಬಯಿ ಖ್ಯಾತ ಕ್ರಿಕೆಟಿಗರಲ್ಲಿ ಕೆಲವೇ ಕೆಲವರು. ರಣಜೀ ಟ್ರೋಫಿಯನ್ನು ಕಳೆದ ಎಪ್ಪತ್ತೆರಡು ವರ್ಷಗಳಲ್ಲಿ ಮೂವತ್ತಾರು ಬಾರಿ (೨೦೦೫-೦೬ರವರೆಗೆ) ಗೆದ್ದಿರುವ ಮುಂಬಯಿಯ ದಾಖಲೆಯನ್ನು ಮುರಿಯುವುದು ಸುಲಭ ಸಾಧ್ಯವಲ್ಲ. ಎಪ್ಪತ್ತರ ದಶಕದಲ್ಲಿ ಭಾರತದ ಕ್ರಿಕೆಟ್ ತಂಡದಲ್ಲಿ ಏಳು-ಎಂಟು ಆಟಗಾರರು ಮುಂಬಯಿಯವರೇ ಆಗಿರುತ್ತಿದ್ದುದುಂಟು. ಆದರೆ ಈತ್ತೀಚೆಗೆ ಭಾರತದ ಇತರ ಪ್ರದೇಶಗಳು ಕರ್ನಾಟಕವೂ ಸೇರಿದಂತೆ ಕ್ರಿಕೆಟಿನಲ್ಲಿ ಮುಂಬಯಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದ್ದು ಮುಂಬಯಿ ತನ್ನ ಮೊದಲಿನ ಅತಿವಿಶಿಷ್ಟ ಸ್ಥಾನವನ್ನು ಕಳೆದುಕೊಂಡಿದೆ. ಫುಟ್ ಬಾಲ್ ಸಹಾ ಮುಂಬಯಿಯ ಅತಿ ಜನಪ್ರಿಯ ಕ್ರೀಡೆ. ಮುಖ್ಯವಾಗಿ ಮಳೆಗಾಲದಲ್ಲಿ ಕಾಣಬರುವ ಈ ಕ್ರೀಡೆ ಲೀಗ್ ಪಂದ್ಯಾವಳಿಗಳಿಂದ ಇನ್ನೂ ಜೀವಂತವಾಗಿದೆ. ಹಾಕಿ ಆಟವು ಮೊದಲಿನ ಘನತೆಯನ್ನು ಕಳೆದುಕೊಂಡಿದ್ದರೂ ಮುಂಬಯಿಯ ಅನೇಕ ಹಾಕೀ ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದಾರೆ. ಆಗಸ್ಟ್ ೨೦೧೧ ರಲ್ಲಿ ಎಲೈಟ್ ಫುಟ್‌ಬಾಲ್ ಲೀಗ್ ಆಫ್ ಇಂಡಿಯಾವನ್ನು ಪರಿಚಯಿಸಿದಾಗ ಉದ್ಘಾಟನಾ ಋತುವಿಗಾಗಿ ತಂಡವನ್ನು ನೀಡಲಾಗುವ ಎಂಟು ನಗರಗಳಲ್ಲಿ ಮುಂಬೈ ಒಂದಾಗಿದೆ. ಹಾಕಿಯಲ್ಲಿ ಮುಂಬೈ ವಿಶ್ವ ಸರಣಿ ಹಾಕಿ ಮತ್ತು ಹಾಕಿ ಇಂಡಿಯಾ ಲೀಗ್‌ನಲ್ಲಿ ಕ್ರಮವಾಗಿ ಮುಂಬೈ ಮೆರೀನ್‌ಗಳು ಮತ್ತು ಮುಂಬೈ ಮ್ಯಾಜಿಶಿಯನ್ಸ್‌ಗೆ ನೆಲೆಯಾಗಿದೆ. ನಗರದ ಪಂದ್ಯಗಳನ್ನು ಮಹೀಂದ್ರಾ ಹಾಕಿ ಸ್ಟೇಡಿಯಂನಲ್ಲಿ ಆಡಲಾಗುತ್ತದೆ. ಈಗ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಎಂದು ಕರೆಯಲ್ಪಡುವ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ೨೦೧೩ ರಲ್ಲಿ ಮುಂಬೈನ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಫೈನಲ್ ನಡೆದಾಗ ಅದರ ಉದ್ಘಾಟನಾ ಆವೃತ್ತಿಯಿಂದ ಮುಂಬೈಗೆ ಭೇಟಿ ನೀಡುತ್ತಿದೆ. ಎರಡನೇ ಋತುವಿನಲ್ಲಿ ೨೦೧೬ ರ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ ಫೈನಲ್ ಹೋಮ್-ಸ್ಕ್ವಾಡ್ ಮುಂಬೈ ರಾಕೆಟ್ಸ್ ಮತ್ತು ಡೆಲ್ಲಿ ಡ್ಯಾಶರ್ಸ್ (ಹಿಂದೆ ಡೆಲ್ಲಿ ಏಸರ್ಸ್) ನಡುವೆ ನಡೆಯಿತು. ಉದ್ಘಾಟನಾ ಸಮಾರಂಭ ಮುಂಬೈನಲ್ಲಿ ನಡೆದರೆ ಫೈನಲ್ ಪಂದ್ಯ ದೆಹಲಿಯಲ್ಲಿ ನಡೆಯಿತು. ೨೦೧೭ ರ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ (ಪ್ರಾಯೋಜಕತ್ವದ ಕಾರಣಗಳಿಗಾಗಿ ಇದನ್ನು ವೊಡಾಫೋನ್ ಪಿಬಿಎಲ್ ೨೦೧೭ ಎಂದೂ ಕರೆಯಲಾಗುತ್ತದೆ) ಮುಂಬೈ ರಾಕೆಟ್ಸ್ ಹೈದರಾಬಾದ್ ಹಂಟರ್ಸ್ ಅನ್ನು ೩ - ೧ ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಮುಂದುವರಿಯಿತು. ಫೈನಲ್‌ನಲ್ಲಿ ಅವರು ೩ - ೪ ರಲ್ಲಿ ಚೆನ್ನೈ ಸ್ಮ್ಯಾಷರ್ಸ್‌ ಎದುರು ಸೋತರು. ಯು ಮುಂಬಾ ದೇಶದ ವೃತ್ತಿಪರ ಕಬಡ್ಡಿ ಲೀಗ್ ಪ್ರೊ ಕಬಡ್ಡಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುವ ತಂಡವಾಗಿದೆ. ಜೂನ್‌ನಿಂದ ನವೆಂಬರ್‌ವರೆಗೆ ಬಾಂಬೆ ಜಿಮ್‌ಖಾನಾದಲ್ಲಿ ಲೀಗ್ ಪಂದ್ಯಗಳು ನಡೆಯುವುದರೊಂದಿಗೆ ಮುಂಬೈನಲ್ಲಿ ರಗ್ಬಿ ಮತ್ತೊಂದು ಬೆಳೆಯುತ್ತಿರುವ ಕ್ರೀಡೆಯಾಗಿದೆ. ಪ್ರತಿ ಫೆಬ್ರವರಿಯಲ್ಲಿ ಮುಂಬೈ ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ಡರ್ಬಿ ರೇಸ್ ಅನ್ನು ಆಯೋಜಿಸುತ್ತದೆ. ಮೆಕ್ಡೊವೆಲ್ಸ್ ಡರ್ಬಿ ಕೂಡ ಫೆಬ್ರವರಿಯಲ್ಲಿ ಮುಂಬೈನ ಟರ್ಫ್ ಕ್ಲಬ್‌ನಲ್ಲಿ ನಡೆಯುತ್ತದೆ. ಮಾರ್ಚ್ ೨೦೦೪ ರಲ್ಲಿ ಮುಂಬೈ ಗ್ರ್ಯಾಂಡ್ ಪ್ರಿಕ್ಸ್ ಎಫ್೧ ಪವರ್‌ಬೋಟ್ ವಿಶ್ವ ಚಾಂಪಿಯನ್‌ಶಿಪ್‌ನ ಭಾಗವಾಗಿತ್ತು ಮತ್ತು ಫೋರ್ಸ್ ಇಂಡಿಯಾ ಎಫ್೧ ಟೀಮ್ ಕಾರನ್ನು ೨೦೦೮ ರಲ್ಲಿ ನಗರದಲ್ಲಿ ಅನಾವರಣಗೊಳಿಸಲಾಯಿತು. ೨೦೦೪ ರಲ್ಲಿ ವಾರ್ಷಿಕ ಮುಂಬೈ ಮ್ಯಾರಥಾನ್ ಅನ್ನು "ದಿ ಗ್ರೇಟೆಸ್ಟ್ ರೇಸ್ ಆನ್ ಅರ್ಥ್" ನ ಭಾಗವಾಗಿ ಸ್ಥಾಪಿಸಲಾಯಿತು. ಮುಂಬೈ ೨೦೦೬ ಮತ್ತು ೨೦೦೭ ರಲ್ಲಿ ಎಟಿಪಿ ವರ್ಲ್ಡ್ ಟೂರ್‌ನ ಅಂತರರಾಷ್ಟ್ರೀಯ ಸರಣಿ ಪಂದ್ಯಾವಳಿಯಾದ ಕಿಂಗ್‌ಫಿಶರ್ ಏರ್‌ಲೈನ್ಸ್ ಟೆನಿಸ್ ಓಪನ್‌ಗೆ ಆತಿಥ್ಯ ವಹಿಸಿತ್ತು. ಮುಂಬಯಿಯ ಇತರ ಕ್ರೀಡೆಗಳೆಂದರೆ ಟೆನ್ನಿಸ್, ಸ್ಕ್ವಾಶ್, ಬಿಲಿಯರ್ಡ್ಸ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮತ್ತು ಗಾಲ್ಫ್. ರಗ್ಬೀ ಆಟ ಕಾಣಸಿಗುವ ಭಾರತದ ಕೆಲವೇ ಕೆಲವು ನಗರಗಳಲ್ಲಿ ಮುಂಬಯಿಯೂ ಒಂದು. ವಾಲಿಬಾಲ್ ಮತ್ತು ಬ್ಯಾಸ್ಕೆಟ್ ಬಾಲ್ ಕೂಡಾ ಶಾಲಾಕಾಲೇಜುಗಳಲ್ಲಿ ಜನಪ್ರಿಯವಾಗಿವೆ. ಕುದುರೆ ರೇಸಿನ ಪ್ರಿಯರಿಗಾಗಿ ಮಹಾಲಕ್ಷ್ಮಿ ರೇಸ್ ಕೋರ್ಸ್ ಇದೆ. ಪ್ರತಿ ಫೆಬ್ರುವರಿಯಲ್ಲಿ ನಡೆಯುವ ಡರ್ಬಿ ಭಾರತದ ಪ್ರತಿಷ್ಠಿತ ರೇಸುಗಳಲ್ಲಿ ಒಂದು. ಮುಂಬೈ ೨೦೨೩ ರಲ್ಲಿ ೧೪೦ ನೇ ಐಒಸಿ ಅಧಿವೇಶನವನ್ನು ಆಯೋಜಿಸುತ್ತದೆ. ಇದನ್ನೂ ನೋಡಿ ಪುರಾತನ ಮುಂಬಯಿ ನಗರದ ಏಳು ದ್ವೀಪಗಳ ಭೂಭಾಗಗಳು ಹೆಚ್ಚಿನ ಮಾಹಿತಿಗಾಗಿ ಹೊರನಾಡ ಕನ್ನಡ ಸಂಸ್ಥೆಗಳು ಬೃಹನ್ ಮುಂಬಯಿ ಮಹಾನಗರಪಾಲಿಕೆಯ ಅಧಿಕೃತ ತಾಣ ಮುಂಬಯಿ ಪುಟಗಳು: ಮುಂಬಯಿ ನಗರದ ಸಂಪೂರ್ಣ ಮಾರ್ಗದರ್ಶಿ - (ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಿಂದ) ಮುಂಬಯಿ ನಗರದ ಅಧಿಕೃತ ವರದಿ ಮುಂಬಯಿ ನಗರ ಮಾರ್ಗದರ್ಶಿ ಮುಂಬಯಿ ನಗರದ ಪಕ್ಷಿನೋಟ ( ಅಪರೂಪದ ಫೋಟೋ) ಉಲ್ಲೇಖಗಳು ಮಹಾರಾಷ್ಟ್ರದ ಪಟ್ಟಣಗಳು ಭಾರತದ ಪಟ್ಟಣಗಳು ಭೂಗೋಳ
2264
https://kn.wikipedia.org/wiki/%E0%B2%87%E0%B2%82%E0%B2%AB%E0%B2%BE%E0%B2%B2
ಇಂಫಾಲ
ಇಂಫಾಲ ಮಣಿಪುರ ರಾಜ್ಯದ ರಾಜಧಾನಿ. ಭಾರತ ಸರ್ಕಾರದ ನೇರ ಆಡಳಿತಕ್ಕೆ ಒಳಪಟ್ಟಿರುವ ಮಣಿಪುರ ರಾಜ್ಯದ ಆಡಳಿತ ಕೇಂದ್ರ. ಕಲ್ಕತ್ತದ ಈಶಾನ್ಯ ದಿಕ್ಕಿಗೆ 640 ಕಿ.ಮೀ. ದೂರದಲ್ಲಿ ಮಣಿಪುರ ನದಿಕಣಿವೆ ಭಾಗದಲ್ಲಿದೆ. ಸಮುದ್ರಮಟ್ಟಕ್ಕಿಂತ 2,500' ಎತ್ತರದಲ್ಲಿದೆ. ಜನಸಂಖ್ಯೆ 67,717 (1961). ಇಲ್ಲಿ ಟಿಬೆಟನ್ನರು ಮತ್ತು ಬರ್ಮೀಯರನ್ನೊಳಗೊಂಡ ಮಿಶ್ರ ಜನಾಂಗವಿದೆ. ಇವರೆಲ್ಲ ವೈಷ್ಣವ ಪಂಥಕ್ಕೆ ಸೇರಿದ ಹಿಂದೂಗಳು. ಇವರು ಪ್ರೌಢಪ್ರಾಚೀನ ಸಂಗೀತ ನೃತ್ಯಗಳಲ್ಲಿ ತಮ್ಮದೇ ಆದ ಸಂಸ್ಕೃತಿ ಹಾಗೂ ಶೈಲಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಇಂಫಾಲ್ ಕಾಲೇಜು, ಇಂಫಾಲ್ ಬೋಧಶಿಕ್ಷಣ ಪ್ರೌಢಶಾಲೆ, ಧನಮಂಜರಿ ಪ್ರೌಢಶಾಲೆ-ಇವೆಲ್ಲ ಅಸ್ಸಾಮಿನ ಗೌಹಾತಿ ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಸೇರಿವೆ. ನೇಯ್ಗೆ, ಹಿತ್ತಾಳೆ ಮತ್ತು ಕಂಚಿನ ಪದಾರ್ಥಗಳ ತಯಾರಿಕೆ ಮುಂತಾದ ಗ್ರಾಮೋದ್ಯೋಗಗಳಿಗೆ ಇಂಫಾಲ್ ಹೆಸರು ಪಡೆದಿದೆ. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಭಾರತದ ಪಟ್ಟಣಗಳು
2265
https://kn.wikipedia.org/wiki/%E0%B2%B6%E0%B2%BF%E0%B2%B2%E0%B3%8D%E0%B2%B2%E0%B2%BE%E0%B2%82%E0%B2%97%E0%B3%8D
ಶಿಲ್ಲಾಂಗ್
ಮೇಘಾಲಯ ರಾಜ್ಯದ ರಾಜಧಾನಿ ಉಲ್ಲೇಖಗಳು ಬಾಹ್ಯ ಸಂಪರ್ಕಗಳು Eastern Panorama – Oldest Magazine of North East India Meghalaya State Government Portal Shillong.com Shillong Online Resubelpara The Shillong Times – North East India Second Oldest English Daily Online news in Khasi ಭಾರತದ ಪಟ್ಟಣಗಳು
2267
https://kn.wikipedia.org/wiki/%E0%B2%90%E0%B2%9D%E0%B3%8D%E0%B2%B5%E0%B2%BE%E0%B2%B2%E0%B3%8D
ಐಝ್ವಾಲ್
ಐಝ್ವಾಲ್ ಮಿಝೋರಂ ರಾಜ್ಯದ ರಾಜಧಾನಿ ಹವಾಮಾನ ಭೂದೃಶ್ಯ ಭಾರತದ ಪಟ್ಟಣಗಳು ಭಾರತದ ರಾಜಧಾನಿ ಪಟ್ಟಣಗಳು
2271
https://kn.wikipedia.org/wiki/%E0%B2%AD%E0%B3%81%E0%B2%B5%E0%B2%A8%E0%B3%87%E0%B2%B6%E0%B3%8D%E0%B2%B5%E0%B2%B0
ಭುವನೇಶ್ವರ
ಒರಿಸ್ಸ ರಾಜ್ಯದ ರಾಜಧಾನಿ ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಭಾರತದ ಪಟ್ಟಣಗಳು ಒಡಿಶಾ
2273
https://kn.wikipedia.org/wiki/%E0%B2%9C%E0%B3%88%E0%B2%AA%E0%B3%81%E0%B2%B0
ಜೈಪುರ
ಜೈಪುರ ಅಥವಾ ಜಯಪುರ ರಾಜಸ್ಥಾನ ರಾಜ್ಯದ ರಾಜಧಾನಿ.ಜೈಪುರವು ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿದೆ. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ. ಈ ಸುಂದರವಾದ ನಗರವನ್ನು ಕಟ್ಟಿದ್ದು ಅಂಬಾರದ ಮಹಾರಾಜ ಎರಡನೇ ಸವಾಯಿ ಜೈ ಸಿಂಗ್‌. ಬಂಗಾಳದ ವಾಸ್ತುಶಿಲ್ಪ ತಜ್ಞ ವಿದ್ಯಾಧರ ಭಟ್ಟಾಚಾರ್ಯ ಎಂಬುವವರ ಸಹಾಯದಿಂದ ರಾಜ ಇದನ್ನು ನಿರ್ಮಿಸಿದನಂತೆ. ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಿದ ಭಾರತದ ಮೊದಲ ನಗರ ಇದು.ಈ ಪ್ರದೇಶವು ಹಿಂದೂ ವಾಸ್ತುಶಿಲ್ಪಕ್ಕೆ ಉತ್ತಮವಾದ ಉದಾಹರಣೆ. ಇದನ್ನು ಪೀಠಪಾದ ಅಥವಾ ಎಂಟು ಮಂಡಲದ ರೂಪದಲ್ಲಿ ನಿರ್ಮಿಸಲಾಗಿದೆ. ರಾಜ ಎರಡನೇ ಸವಾಯಿ ಜೈ ಸಿಂಗ್‌ಗೆ ಜ್ಯೋತಿಷ್ಯಶಾಸ್ತ್ರದ ಬಗ್ಗೆ ಉತ್ತಮ ತಿಳುವಳಿಕೆಯಿತ್ತು ಮತ್ತು ಈತ 9ನೇ ಸಂಖ್ಯೆ ಮತ್ತು ಅದರ ಗುಣಾಕಾರವನ್ನು ಹೆಚ್ಚು ಬಳಸಿದ್ದ. ಇದು ನಗರ ರಚನೆಯಲ್ಲೂ ಕಂಡುಬರುತ್ತದೆ. 9ನೇ ಸಂಖ್ಯೆಯು 9 ಗ್ರಹಗಳನ್ನು ಸೂಚಿಸುತ್ತದೆ.ಜೈಪುರವು ಕೋಟೆಗಳು, ಅರಮನೆಗಳು ಮತ್ತು ಹವೇಲಿಗಳಿಂದ ಆಕರ್ಷಣೆಯನ್ನು ಕಂಡುಕೊಂಡಿದೆ. ಜಗತ್ತಿನ ಎಲ್ಲಾ ಮೂಲೆಯಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೂರದ ಪ್ರದೇಶಗಳಿಂದ ಜನರು ಇಲ್ಲಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಅಂಬರ್ ಕೋಟೆ, ನಹಾರಗಢ ಕೋಟೆ ಹವಾ ಮಹಲ್‌, ಶೀಶ ಮಹಲ್‌, ಗಣೇಶ್ ಪೋಲ್‌ ಮತ್ತು ಜಲ ಮಹಲ್‌ ಇಲ್ಲಿನ ಕೆಲವು ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳು. ಭೌಗೋಳಿಕ ಸ್ಥಾನ ಸಮುದ್ರಮಟ್ಟದಿಂದ 1.414 ಎತ್ತರದಲ್ಲಿರುವ ಜಯಪುರ ಭಾರತದ ಸುಂದರ ನಗರಗಳಲ್ಲಿ ಒಂದು. ರೈಲುಮಾರ್ಗದಲ್ಲಿ ಮುಂಬಯಿಯಿಂದ 696 ಮೈ. ಈಶಾನ್ಯಕ್ಕೆ, ದೆಹಲಿಯಿಂದ 191 ಮೈ. ನೈಋತ್ಯಕ್ಕೆ, ಇದೆ. ಜನಸಂಖ್ಯೆ ೨೦೧೧ರ ಜನಗಣತಿಯಂತೆ ಜೈಪುರದ ಜನಸಂಖ್ಯೆ 3,073,350. ಸಾಕ್ಷರತೆ:೭೬.೪೪ ಲಿಂಗಾನುಪಾತ:೧೦೦೦ ಪುರುಷರಿಗೆ ೮೯೮ ಮಹಿಳೆಯರು. ವಾಸ್ತು ಶಿಲ್ಪ ಇಲ್ಲಿಯ ಹಲವು ಕಟ್ಟಡಗಳ ಬಣ್ಣ ಪಾಟಲ. ಆದ್ದರಿಂದ ಇದು ಪಾಟಲ ನಗರವೆಂದು ಪ್ರಸಿದ್ಧವಾಗಿದೆ. 1727ರಲ್ಲಿ ಮಹಾರಾಜ ಸವಾಯಿ ಜಯಸಿಂಹನಿಂದ ಸ್ಥಾಪಿತವಾದ ಈ ನಗರದ ರಚನಾಕೌಶಲ ವಿಶಿಷ್ಟವಾದ್ದು. ನಗರವನ್ನು ಚತುರಸ್ರಾಕಾರದ ಆರು ವಿಭಾಗಗಳಾಗಿ ರಚಿಸಲಾಗಿದೆ. ಈ ವಿಭಾಗಗಳ ನಡುವೆ 111 ಅಗಲದ ರಸ್ತೆಗಳುಂಟು. ನಗರದ ಸುತ್ತ ಎಂಟು ದ್ವಾರಗಳಿಂದ 20 x 9ಗಳ ಕೋಟೆ ಇದೆ. ಹಿಂದಿನ ಜಯಪುರ ಸಂಸ್ಥಾನದ ದೊರೆಗಳು ಕಟ್ಟಿಸಿದ ಹಲವಾರು ಕಟ್ಟಡಗಳು ಈ ನಗರದ ಸೌಂದರ್ಯದವನ್ನು ಹೆಚ್ಚಿಸಿವೆ. ಅವುಗಳಲ್ಲಿ ಜಯಪುರದ ಜಂತರ್ ಮಂತರ್ ಬಲು ಪ್ರಖ್ಯಾತವಾದ್ದು. ಇದು ಜಯಸಿಂಹ ಕಟ್ಟಿಸಿದ ಖಗೋಳ ವೀಕ್ಷಣಾಲಯಗಳಲ್ಲೊಂದು. 1718-1734ರಲ್ಲಿ ಇದನ್ನು ಕಟ್ಟಲಾಯಿತು. ಜಯಪುರದ ಅರಮನೆ ಏಳು ಮಹಡಿಗಳ ಮಹಾಸೌಧ. ಪ್ರಮಾಣಬದ್ಧವಾಗಿ ಕಟ್ಟಿರುವ ದಿವಾನ್-ಇ-ಖಾಸ್, ಪೀತಮ್ ನಿವಾಸ್, ರಂಗಮಂದಿರ, ಶೋಭಾನಿವಾಸ-ಇವು ಈ ಅರಮನೆಯ ಮುಖ್ಯ ವಿಭಾಗಗಳು. 1616ರಲ್ಲಿ ಮೊಗಲ್ ದೊರೆ ಜಹಾಂಗೀರನೊಡನೆ ಪ್ರತಿನಿಧಿ ಸರ್ ಥಾಮಸ್ ರೋ ನಡೆಸಿದ ಮಾತುಕತೆಯ ಚಿತ್ರವೂ ಅಬುಲ್ ಫಜûಲನಿಂದ ಅನುವಾದಗೊಂಡ ಮಹಾಭಾರತದ ನಾಲ್ಕು ಹಸ್ತಪ್ರತಿಗಳೂ ಉಳ್ಳ ಈ ಗ್ರಂಥಾಲಯ ಇಲ್ಲಿದೆ. ಇದು ಹಿಂದಿನ ರಜಪೂತ ದೊರೆಗಳ ಸಾಹಿತ್ಯ ಮತ್ತು ಕಲಾ ವಿಭಾಗದ ಪ್ರತೀಕ. ಹಸಿರುಹುಲ್ಲಿನ ಹಾಸಿಗೆಗಳು. ಅಲ್ಲಲ್ಲಿ ತಿಳಿಗೊಳಗಳು, ನೀರುಬೀಳುಗಳು ಇರುವಂಥ ಉದ್ಯಾನದಿಂದ ಅರಮನೆಯ ಸೌಂದರ್ಯ ವರ್ಧಿಸಿದೆ. 1803ರಲ್ಲಿ ಪಟ್ಟಕ್ಕೆ ಬಂದ ರಾಜಾ ಜುಗ್ಗಲ್‍ಸಿಂಗ ಅರಮನೆಯ ಕಿಲಕಿಲಾಟದಿಂದ ದೂರವಿರ ಬೇಕೆಂದು ಬಯಸಿ ಈ ಉದ್ಯಾನವನದ ಜಲಾಶಯಗಳ ಪ್ರಶಾಂತ ವಾತಾವರಣದಲ್ಲಿಯೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದನೆಂದೂ, ಅಲ್ಲಿಂದಲೇ ಅಂತಃಪುರದ ಏಕಾಂತದಲ್ಲಿದ್ದ ತನ್ನ ರಾಣಿಯರೊಡನೆ ತನ್ನ ನೆಚ್ಚಿನ ನಾಯಿಯೊಂದರ ಮುಖಾಂತರ ಪತ್ರ ವ್ಯವಹಾರ ಮಾಡುತ್ತಿದ್ದನೆಂದೂ ಪ್ರತೀತಿಯುಂಟು. ಅದರ ಪ್ರತೀಕವಾಗಿ ಉದ್ಯಾನವನದಲ್ಲಿ ಶಿಲಾಶ್ವಾನವೊಂದನ್ನು ನಿಲ್ಲಿಸಲಾಗಿದೆ. ಜಯಪುರದ ಅರಮನೆಯಲ್ಲಿ ಪಾರಿವಾಳಗಳ ಪಾಲನೆ-ಪೋಷಣೆಗಾಗಿ ಮಾಡಿದ್ದ ವ್ಯವಸ್ಥೆ ಪಾಶ್ಚಾತ್ಯ ಪ್ರವಾಸಿಗಳಿಗೆ ವೆನಿಸ್ ನಗರದ ಸೇಂಟ್ ಮಾಕ್ರ್ಸ್ ಚೌಕದ ನೆನಪು ಕೊಡುತ್ತದೆಂದು ಹೇಳಲಾಗಿದೆ. ಮೊಸಳೆಗಳನ್ನು ಸಾಕಲು ಕಟ್ಟಿಸಿದ ಮೊಸಳೆ ಕೊಳ ಇನ್ನೊಂದು ವೈಶಿಷ್ಟ್ಯ. 1876ರಲ್ಲಿ ಸ್ವಿಂಟನ್ ಜೇಕಬ್ ರಚಿಸಿದ ಆಲ್ಬರ್ಟ್ ಹಾಲ್ ವಸ್ತು ಸಂಗ್ರಹಾಲಯದ ಕಟ್ಟಡದಲ್ಲಿ ಹಿಂದೂ-ಮುಸ್ಲಿಂ ಶಿಲ್ಪಶೈಲಿಗಳು ಸಂಗಮಿಸಿವೆ. ರಜಪೂತ ದೊರೆಗಳು ಬಳಸುತ್ತಿದ್ದ ಆಯುಧಗಳು ಮತ್ತು ವೇಷಭೂಷಣಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ. ವೈರಿಗಳ ಆಗಮನವನ್ನು ದೂರದಿಂದಲೇ ಗೊತ್ತು ಮಾಡಿಕೊಳ್ಳುವ ಹಂಚಿಕೆಗಾಗಿ ಮಹಾರಾಜ ಇತಾರೀ ಸಿಂಗ್ ಕಟ್ಟಿಸಿದ ಸ್ವರ್ಗಶೂಲಿ ಜಯಪುರದ ಮತ್ತೊಂದು ಮುಖ್ಯ ಅಕರ್ಷಣೆ. ಅಮರ ಮಹಲ್, ನಹರ್‍ಗಡ್, ಸಂಗಾನೇರ ಜೈನಮಂದಿರ-ಇವು ಇತರ ಕೆಲವು ಕಟ್ಟಡಗಳು. ನಗರದೊಳಗಿನ ಪ್ರಮುಖ ಸ್ಥಳಗಳಲ್ಲಿ ರಜಪೂತ ದೊರೆಗಳ ಶಿಲಾಪ್ರತಿಮೆಗಳು ಎದ್ದು ಕಾಣುತ್ತವೆ. ಜಯಪುರದ ಹತ್ತಿರದಲ್ಲಿರುವ ಅಂಬರ್ ಬೆಟ್ಟದಲ್ಲಿ ಪ್ರಾಚೀನ ರಾಜಧಾನಿಯ ಅವಶೇಷಗಳಿವೆ. ಜಯಪುರದಿಂದ ಪಶ್ಚಿಮಕ್ಕೆ 65 ಕಿಮೀ. ದೂರದಲ್ಲಿರುವ ಸಾಂಭಾರ್ ಸರೋವರ ರಮ್ಯವಾದ್ದು. ಜಯಪುರದಲ್ಲಿ 1947ರಲ್ಲಿ ರಾಜಸ್ಥಾನ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಹಬ್ಬಗಳು ಮತ್ತು ಮೇಳಗಳು ಅರಮನೆಗಳು ಮತ್ತು ಕೋಟೆಗಳ ಹೊರತಾಗಿ ಜೈಪುರದಲ್ಲಿನ ಹಬ್ಬಗಳು ಮತ್ತು ಮೇಳಗಳೂ ತುಂಬಾ ಜನಪ್ರಿಯವಾಗಿದೆ. ಇಲ್ಲಿನ ಮೇಳಗಳಲ್ಲಿ ಒಂದೆಂದರೆ ಜೈಪುರ ವಿಂಟೇಜ್ ಕಾರ್ ರ್ಯಾಲಿ. ಇದನ್ನು ಜನವರಿಯಲ್ಲಿ ನಡೆಸಲಾಗುತ್ತದೆ. ಇತ್ತೀಚೆಗೆ ಈ ಮೇಳವು ತುಂಬಾ ಜನಪ್ರಿಯವಾಗುತ್ತಿದೆ. ಕಾರು ಪ್ರಿಯರು ಮರ್ಸಿಡಿಸ್‌, ಆಸ್ಟಿನ್‌ ಮತ್ತು ಫಿಯೆಟ್‌ನ ವಿವಿಧ ಮಾದರಿಯ ಕಾರುಗಳನ್ನು ನೋಡಬಹುದು. ಇಲ್ಲಿನ ಕೆಲವು ಕಾರುಗಳು 1900ರದ್ದಾಗಿರುವುದು ಗಮನಾರ್ಹ.ಇನ್ನೊಂದು ಜನಪ್ರಿಯ ಮೇಳವೆಂದರೆ ಆನೆ ಉತ್ಸವ. ಹೋಳಿ ಸಂದರ್ಭದಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತದೆ. ಈ ಉತ್ಸವದಲ್ಲಿ ರಂಗುರಂಗಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಆನೆಯ ವಿವಿಧ ಆಟಗಳನ್ನೂ ನೋಡಬಹುದು. ಇದರ ಜೊತೆಗೆ, ಗಂಗಾರ್ ಹಬ್ಬ ಕೂಡಾ ಸ್ವಲ್ಪ ಮಟ್ಟಿಗೆ ಜನಪ್ರಿಯವಾಗಿದೆ. ಗನ್‌ ಎಂದರೆ ಶೀವ, ಗೌರ್ ಎಂದರೆ ಶಿವನ ಪತ್ನಿ ಪಾರ್ವತಿ. ಈ ಹಬ್ಬವು ಮದುವೆಯ ಬಂಧದ ಬಗ್ಗೆ. ಇನ್ನೂ ಕೆಲವು ಜನಪ್ರಿಯ ಹಬ್ಬಗಳು ಮತ್ತು ಮೇಳಗಳೆಂದರೆ ಭಂಗಾಂಗ ಮೇಳ, ತೀಜ್‌, ಹೋಳಿ ಮತ್ತು ಚಕ್ಸು ಮೇಳ. ಅವಕಾಶಗಳುಸಾಹಸೀ ಪ್ರವೃತ್ತಿಯವರು ಒಂಟೆ ಸವಾರಿ, ಬಿಸಿ ಗಾಳಿ ಬಲೂನಿಂಗ್‌, ಪ್ಯಾರಾಗ್ಲೈಡಿಂಗ್‌ ಮತ್ತು ರಾಕ್‌ ಕ್ಲೈಂಬಿಂಗ್‌ನ್ನು ಮಾಡಬಹುದು. ಕರೌಲಿ ಮತ್ತು ರಣಥಂಬೋರ್ ನ್ಯಾಷನಲ್‌ ಪಾರ್ಕ್‌ಗೆ ಉತ್ಸಾಹಿಗಳು ಪ್ರವಾಸ ಕೈಗೊಳ್ಳಬಹುದು.ಪ್ರವಾಸಿಗರು ಜೈಪುರದಲ್ಲಿ ಶಾಪಿಂಗ್‌ ಮಾಡುವುದನ್ನು ಇಷ್ಟಪಡುತ್ತಾರೆ. ಇಲ್ಲಿ ಆಭರಣಗಳು, ಕಾರ್ಪೆಟ್‌ಗಳು, ಮಡಿಕೆಗಳು ಮತ್ತು ಹರಳುಗಳ ಮಾರುಕಟ್ಟೆ ಹೆಚ್ಚು ಪ್ರಚಲಿತವಾಗಿದೆ. ಪ್ರವಾಸಿಗರು ಕರಕುಶಲ ಸಾಮಗ್ರಿಗಳನ್ನು, ಕಲಾಕೃತಿಗಳನ್ನು, ಅಪ್ಯಾರೆಲ್‌ಗಳನ್ನು ಮತ್ತು ಬ್ರಾಂಡೆಡ್‌ ಬಟ್ಟೆಗಳನ್ನು ಎಮ್‌ಐ ರಸ್ತೆಯಲ್ಲಿ ಖರೀದಿಸಬಹುದು. ಜೈಪುರದ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಸಂದಭದಲ್ಲಿ ಬಾರ್ಗೇನ್‌ ಮಾಡುವುದು ಅತ್ಯಗತ್ಯ. ಆಹಾರಗಳು ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯಿಂದ ಮಾಡಿದ ರುಚಿರುಚಿಯಾದ, ಬಾಯಲ್ಲಿ ನೀರೂರಿಸುವ ತಿಂಡಿಗಳಿಗೆ ಈ ನಗರ ಜನಪ್ರಿಯವಾಗಿದೆ. ದಾಲ್‌ ಬಾತಿ-ಕೂರ್ಮಾ, ಪ್ಯಾಜ್‌ ಕಿ ಕಚೋರಿ, ಕಬಾಬ್‌, ಮುರ್ಗ್‌ ಕೋ ಖಾತೋ ಮತ್ತು ಅಚಾರಿ ಮುರ್ಗ್‌ ಮುಂತಾದವುಗಳು ಇಲ್ಲಿನ ಕೆಲವು ಪ್ರಸಿದ್ಧ ತಿನಿಸುಗಳು. ನೆಹ್ರು ಬಜಾರ್ ಮತ್ತು ಜೋಹಾರಿ ಬಜಾರಿನಲ್ಲಿ ಆಹಾರ ಪ್ರಿಯರು ಈ ತಿನಿಸಉಗಳನ್ನು ಸವಿಯಬಹುದು. ಇಲ್ಲಿನ ರಸ್ತೆಗಳು, ರಸ್ತೆಬದಿಯ ಆಹಾರಕ್ಕೆ ಹೆಚ್ಚು ಜನಪ್ರಿಯವಾಗಿದೆ. ಘೇವಾರ್, ಮಿಶ್ರಿ ಮಾವಾ ಮತ್ತು ಮವಾ ಕಚೋರಿಯಂತ ಸ್ಥಳೀಯ ಸಿಹಿ ತಿನಿಸುಗಳೂ ಕೂಡಾ ಭಾರತದಲ್ಲೇ ಪ್ರಸಿದ್ಧವಾದದ್ದು. ಜೈಪುರಕ್ಕೆ ಹೋಗುವುದು ಸಂಪರ್ಕ ರೈಲು, ವಿಮಾನ ಮತ್ತು ರಸ್ತೆಯ ಮೂಲಕ ಭಾರತದ ಬಹುತೇಕ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ನಗರದಿಂದ ಸುಮಾರು 13 ಕಿ.ಮೀ ದೂರದಲ್ಲಿ ಸಂಗಾನೇರ್ ವಿಮಾನ ನಿಲ್ದಾಣವಿದೆ. ಇದನ್ನು ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಈ ವಿಮಾನ ನಿಲ್ದಾಣವು ಮುಂಬಯಿ ಚಂಡೀಗಢ, ದೆಹಲಿ ಮತ್ತು ಹೈದರಾಬಾದ್‌ಗೆ ನಿರಂತರ ವಿಮಾನಗಳಿಂದ ಸಂಪರ್ಕವನ್ನು ಹೊಂದಿದೆ. ಜೈಪುರ ರೈಲ್ವೇ ನಿಲ್ದಾಣವು ಭಾರತದ ಬಹುತೇಕ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಭಾರತದ ಪ್ರಮುಖ ನಗರಗಳಿಗೆ ಪ್ರವಾಸಿಗರು ರಾಜಸ್ಥಾನ ಸ್ಟೇಟ್‌ ರೋಡ್‌ ಟ್ರಾನ್ಸ್‌ಪೋರ್ಟ್‌ ಕಾರ್ಪೊರೇಷನ್‌ನಿಂದ ಬಸ್‌ಗಳನ್ನು ಪಡೆಯಬಹುದು. ನವದೆಹಲಿಯಿಂದ ನೇರವಾಗಿ ಜೈಪುರಕ್ಕೆ ಆರ್‌ಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ. ನಗರದಲ್ಲಿ ಪ್ರವಾಸಿಗರು ಜೈಪುರ ಸಿಟಿ ಟ್ರಾನ್ಸ್‌ಪೋರ್ಟ್‌ ಸರ್ವೀಸಸ್‌ ಲಿಮಿಟೆಡ್‌ನ ಸಾರಿಗೆ ಬಸ್‌ಗಳನ್ನು ಪ್ರಯಾಣಕ್ಕೆ ಅವಲಂಬಿಸಬಹುದು. ಹವಾಮಾನ ವರ್ಷಂಪ್ರತಿ ಈ ಪ್ರದೇಶವು ಅತಿ ಉಷ್ಣ ವಾತಾವರಣವನ್ನು ಹೊಂದಿರುತ್ತದೆ. ಬೇಸಿಗೆಕಾಲದಲ್ಲಿ ಎಷ್ಟು ಉಷ್ಣತೆಯಿರುತ್ತದೆಯೋ ಅಷ್ಟೇ ತಂಪು ವಾತಾವರಣ ಚಳಿಗಾಲದಲ್ಲಿರುತ್ತದೆ. ಪ್ರವಾಸಿಗರು ಬೇಸಿಗೆಕಾಲದಲ್ಲಿ ಜೈಪುರಕ್ಕೆ ಭೇಟಿ ನೀಡುವುದಾದರೆ ಬಟ್ಟೆಗಳು, ಟೊಪ್ಪಿಗಳು ಮತ್ತು ಸನ್‌ಸ್ಕ್ರೀನ್‌ಗಳನ್ನು ತರಬೇಕಾಗಿರುವುದು ಅಗತ್ಯ. ಮಾರ್ಚ್‌ ನಿಂದ ಅಕ್ಟೋಬರಿನ ಅವಧಿಯು ಪಿಂಕ್‌ ಸಿಟಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ. ವಾಣಿಜ್ಯ ಜಯಪುರದ ಗುಡಿಗಾರಿಕೆ ಮತ್ತು ಇತರ ಕೈಕಸಬುಗಳು ಪ್ರಸಿದ್ಧವಾಗಿವೆ. ಬಾಂಧನೀ ಸೀರೆಗಳ ತಯಾರಿಕೆ, ಬಟ್ಟೆಗಳ ಮೇಲೆ ಚಿನ್ನದ ಅಚ್ಚು ಹಾಕುವುದು. ಎನಾಮೆಲ್ ಕೆಲಸ, ಕುಂದಣಗೆಲಸ, ಹರಳುಗಳ ತಯಾರಿಕೆ, ಕಬ್ಬಿಣ ಉಕ್ಕು ಹಿತ್ತಾಳೆ ಮತ್ತು ತಾಮ್ರ ವಸ್ತುಗಳ ಮೇಲೆ ಚಿಕನ್, ಮರೋರಿ ಮತ್ತು ಬೀಚಿ ಚಿತ್ರ ಕೊರೆತ, ಕತ್ತಿ-ಕಠಾರಿಗಳ ತಯಾರಿಕೆ-ಇವು ಮುಖ್ಯ ಕೈಕಸಬುಗಳು. ರಜಪೂತ ಶೈಲಿಯ ಬಳೆಗಳು, ಪಾದರಕ್ಷೆಗಳು, ಮಡಕೆಗಳು, ದಂತದ ಮತ್ತು ಶ್ವೇತ ಶಿಲೆಯ ಆಟಿಗೆ ಮತ್ತು ಮೂರ್ತಿಗಳು ಜಯಪುರದ ಮನೆಮನೆಯಲ್ಲೂ ಕಾಣಸಿಗುತ್ತಿವೆ. ಇವಕ್ಕೆ ದೇಶದ ವಿವಿಧ ಭಾಗಗಳಲ್ಲಿ ಬೇಡಿಕೆಯುಂಟು. ರಾಜಸ್ಥಾನದ ಇತರ ಭಾಗಗಳಿಂದಲೂ ದಿಲ್ಲಿ-ವಾರಾಣಸಿಗಳಿಂದಲೂ ಕಸುಬುದಾರರು ಬಂದು ಜಯಪುರದಲ್ಲಿ ನೆಲೆಸಿದ್ದಾರೆ. ಜಯಪುರ ಜಿಲ್ಲೆ ಜಯಪುರ ಜಿಲ್ಲೆ ಉ.ಆ. 26023-27051 ಮತ್ತು ಪೂ.ರೇ. 74055-76050 ನಡುವೆ ಇದೆ. ಈ ಜಿಲ್ಲೆಯ ಉತ್ತರಕ್ಕೆ ರಾಜಸ್ಥಾನದ ಶಿಕಾರ್ ಜಿಲ್ಲೆ ಮತ್ತು ಹರಿಯಾಣ, ದಕ್ಷಿಣಕ್ಕೆ ರಾಜಸ್ಥಾನದ ಟೋಂಕ್ ಜಿಲ್ಲೆ, ಪೂರ್ವಕ್ಕೆ ಆಳ್ವಾರ್ ಮತ್ತು ಸವಾಯಿ ಮಾಧೋಪುರ ಜಿಲ್ಲೆಗಳು, ಪಶ್ಚಿಮಕ್ಕೆ ನಾಗೌರ್ ಮತ್ತು ಅಜ್ಮೀರ್ ಜಿಲ್ಲೆಗಳು ಇದರ ಮೇರೆಗಳು. ಇಡೀ ರಾಜ್ಯದ 4.1% ರಷ್ಟು ಕ್ಷೇತ್ರ ಆವರಿಸಿರುವ ಈ ಜಿಲ್ಲೆಯ ವಿಸ್ತೀರ್ಣ 5,393 ಚ.ಮೈ.; ಜನಸಂಖ್ಯೆ 24,82,385 (1971). ಜಿಲ್ಲೆಯ ನೆಲ ಕಂದು ಮತ್ತು ಬೂದಿಬಣ್ಣದ ಉಸುಕು ಮಣ್ಣಿನಿಂದ ಕೂಡಿ ಫಲವತ್ತಾಗಿದೆ. ಬಂಗಾಂಗಾ, ಧೂಂಡ್, ಮೊರೆಲ್, ಮಾಸಿ ಮುಂತಾದ ನದಿಗಳ ನೀರಿನ ಆಸರೆ ಉಂಟು. ವರ್ಷಕ್ಕೆ ಸರಾಸರಿ 25-50 ಸೆಂಮೀ. ಮಳೆ ಆಗುತ್ತದೆ. ಇಲ್ಲಿಯ ಕನಿಷ್ಠ ಸರಾಸರಿ ಉಷ್ಣತೆ 15.00-17.50 ಸೆಂ., ಗರಿಷ್ಠ ಸರಾಸರಿ ಉಷ್ಣತೆ 30.00-32.50 ಸೆಂ. ಅರಾವಲೀ ಬೆಟ್ಟದ ಕೆಲವು ಭಾಗಗಳು ಈ ಜಿಲ್ಲೆಯಲ್ಲಿ ಜಾಚಿವೆ. ಬೆಲೆಬಾಳುವ ಹರಳುಗಳು, ಸುಣ್ಣಕಲ್ಲು, ಕಬ್ಬಿಣ ಅದುರು, ಗಾಜು ತಯಾರಿಕೆಗೆ ಉಪಯುಕ್ತವಾದ ಮರಳು ಈ ಜಿಲ್ಲೆಯಲ್ಲಿ ವಿಪುಲವಾಗಿ ದೊರೆಯುತ್ತವೆ; ಬೆಟ್ಟಗಳನ್ನು ಆವರಿಸಿರುವ ಕಾಡಿನ ಮರಗಳು ಸೌದೆಗೆ ಮಾತ್ರ ಉಪಯುಕ್ತ. ಸಾಂಭಾರ್ ಸರೋವರದಲ್ಲಿ ಉಪ್ಪು ತಯಾರಾಗುತ್ತದೆ. ನಕ್ಕಿ ಬಟ್ಟೆ, ಬಾಂಧನೀ ಸೀರೆಗಳು, ದಂತದ ಆಟಿಗೆಗಳು, ಶ್ವೇತ ಶಿಲಾಮೂರ್ತಿಗಳು ಹಿತ್ತಾಳೆಯ ಪಾತ್ರೆಗಳು ಈ ಜಿಲ್ಲೆಯಲ್ಲಿ ಉತ್ಪಾದನೆಯಾಗುವ, ಇಲ್ಲಿಂದ ರಫ್ತಾಗುವ ಸರಕುಗಳು. ಇತಿಹಾಸ ಜಯಪುರವನ್ನು ಮೊದಲು ಕಛವಾ ವಂಶದ ರಜಪೂತ ದೊರೆಗಳು ಆಳುತ್ತಿದ್ದರು. 1857ರ ಬಂಡಾಯದ ಸಮಯದಲ್ಲಿ ಜಯಪುರ ಸಂಸ್ಥಾನದ ದೊರೆ ಬ್ರಿಟಿಷರಿಗೆ ಬೆಂಬಲ ನೀಡಿದ್ದಕ್ಕೆ ಪ್ರತಿಯಾಗಿ ಅವನ ಸಂಸ್ಥಾನಕ್ಕೆ ಹೆಚ್ಚಿನ ಪ್ರದೇಶಗಳು ಸೇರಿದುವು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಜಯಪುರವನ್ನಾಳುತ್ತಿದ್ದವರು ಮಹಾರಾಜ ಸವಾಯ್ ಮಾನ್‍ಸಿಂಗ್. 1949ರ ಮಾರ್ಚ್ 30ರಂದು ಜಯಪುರ ಸಂಸ್ಥಾನ ರಾಜಸ್ಥಾನದಲ್ಲಿ ವಿಲೀನಗೊಂಡಿತು. ಛಾಯಾಂಕಣ ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಭಾರತದ ಪಟ್ಟಣಗಳು ರಾಜಸ್ಥಾನ ಭಾರತದ ರಾಜಧಾನಿ ಪಟ್ಟಣಗಳು
2274
https://kn.wikipedia.org/wiki/%E0%B2%97%E0%B3%8D%E0%B2%AF%E0%B2%BE%E0%B2%82%E0%B2%97%E0%B2%9F%E0%B2%95%E0%B3%8D
ಗ್ಯಾಂಗಟಕ್
ಸಿಕ್ಕಿಂ ರಾಜ್ಯದ ರಾಜಧಾನಿ ಗ್ಗ್ಯಾಂಗ್ಟಕ್, ಒಂದು ಪ್ರಮುಖ ವಾಣಿಜ್ಯ ನಗರಿ ಮತ್ತು ಸಿಕ್ಕಿಂನ ದೊಡ್ಡ ನಗರಿಯೂ ಹೌದು. ಕಾಂಚನಜುಂಗ ಪರ್ವತದ ತಪ್ಪಲಿನಲ್ಲಿ ಇರುವ ನಗರ. ಇದೊಂದು ಪ್ರವಾಸಿ ನಗರಿ. ಬಹಳಷ್ಟು ಪ್ರವಾಸಿ ಸ್ಥಳಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಸರಿಸುಮಾರು ೧ ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿಗೆ ಹತ್ತಿರವಿರುವ ರೈಲು ನಿಲ್ದಾಣ ಪಶ್ಚಿಮ ಬಂಗಾಳದ ಸಿಲಿಗುರಿ ನಿಲ್ದಾಣ. ಸಿಲಿಗುರಿಯಿಂದ ಬಸ್ಸುಗಳು ಮತ್ತು ಜೀಪುಗಳಲ್ಲಿ ಪ್ರಯಾಣಸಿ ಗ್ಗ್ಯಾಂಗ್ಟಕ್ ತಲುಪಬಹುದು. ಬಾಗ್ಡೋಗ್ರ, ಹತ್ತಿರವಿರುವ ವಿಮಾನ ನಿಲ್ದಾಣ. ಗಂಗ್‍ಟೋಕ್ ಡಾರ್ಜಿಲಿಂಗಿನ ಈಶಾನ್ಯಕ್ಕೆ 28 ಮೈ. ದೂರದಲ್ಲಿ ಭಾರತ-ಟಿಬೆಟ್ ನಡುವಣ ವ್ಯಾಪಾರ ಮಾರ್ಗದಲ್ಲಿ ಉ.ಅ. 27º 20' ಪೂ.ರೇ. 88º 38' ಮೇಲೆ ಇದೆ. ಸಿಕ್ಕಿಂ ರಾಜ್ಯ ಬೆಟ್ಟಗಳಿಂದ ಅವೃತವಾದ್ದು. ಪರ್ವತಪ್ರದೇಶವಾಗಿರುವುದರಿಂದ ಇಲ್ಲಿ ಹೆಚ್ಚಿನ ಆಧುನಿಕ ವಾಹನ ಸೌಕರ್ಯಗಳಿಲ್ಲ. 1954 ರಲ್ಲಿ ಸಿಕ್ಕಿಮ್‍ನಲ್ಲಿ ಸಪ್ತವಾರ್ಷಿಕ ಯೋಜನೆ ಜಾರಿಗೆ ಬರುವ ಮುನ್ನ ಗಂಗ್‍ಟೊಕ್‍ಗೂ ಬಂಗಾಳ-ಸಿಕ್ಕಿಂ ಗಡಿಯ ಬಳಿಯಲ್ಲಿರುವ ರಂಗ್‍ಪೊಗೂ ನಡುವೆ 48 ಕಿಮೀ.ಗಳಷ್ಟು ದೂರದ ಮೋಟಾರ್ ಹೆದ್ದಾರಿ ಮಾತ್ರ ಇತ್ತು 1954ರ ಅನಂತರ ಗಂಗ್‍ಟೊಕ್‍ನಿಂದ ದಕ್ಷಿಣಕ್ಕೂ ಉತ್ತರದಲ್ಲಿರವ ಲಾಚೆನ್‍ಗೂ ಜೀಪ್ ದಾರಿಗಳೂ ಮೋಟಾರು ಹೆದ್ದಾರಿಗಳೂ ನಿರ್ಮಣವಾದುವು. ಇದರಿಂದಾಗಿ ಉತ್ತರ ಸಿಕ್ಕಿಮ್‍ನಿಂದ ರಾಜ್ಯದ ದಕ್ಷಿಣ ಭಾಗಗಳಿಗೆ ಅರಣ್ಯೋತ್ಪನ್ನ, ಸೇಬು, ಆಲೂಗಡ್ಡೆ ಮುಂತಾದವನ್ನು ಸಾಗಿಸುವ ಸೌಲಭ್ಯ ಏರ್ಪಟ್ಟಿತು. ರಿಷಿ, ಜೆಲೆಪ್ಲಗಳಿಂದ ಗಂಗ್‍ಟೊಕ್‍ಗೆ ಇದ್ದ ಕುದುರೆಮಾರ್ಗ ಜೀಪ್ ದಾರಿಯಾಗಿ ಪರಿವರ್ತನೆಗೊಂಡಿದೆ. ಗಂಗ್‍ಟೊಕ್‍ಗೂ ಸಿಕ್ಕಿಮ್‍ನ ಇತರ ಸ್ಥಳಗಳಿಗೂ ಈಗ ತಕ್ಕಮಟ್ಟಿನ ರಸ್ತೆ ಸಂಪರ್ಕ ಏರ್ಪಟ್ಟಿದೆ. ಗಂಗ್‍ಟೊಕ್‍ನಲ್ಲಿ ಸಿಕ್ಕಿಂ ರಾಜನ ಅರಮನೆ, ಮಂತ್ರಿಮಂಡಲದ ಸದಸ್ಯರ ನಿವಾಸ ಸ್ಥಾನಗಳು ಮತ್ತು ಸರ್ಕಾರಿ ಸೌಧಗಳಲ್ಲದೆ ಶಾಲೆಕಾಲೇಜುಗಳು, ಜೈಲು, ಆಸ್ಪತ್ರೆಗಳು ಉಂಟು. ಇಲ್ಲಿಂದ ನೈಋತ್ಯಕ್ಕೆ ನಾಲ್ಕು ಮೈಲಿಗಳ ದೂರದಲ್ಲಿ ರೂಮ್‍ಟೆಮ್‍ನ ಬೌದ್ಧ ಮಠವಿದೆ. ಬೇಳೆ, ಮೆಕ್ಕೆಜೋಳ, ಅಕ್ಕಿ, ಕಿತ್ತಳೆಹಣ್ಣು-ಇವು ಇಲ್ಲಿ ವ್ಯಾಪಾರವಾಗುವ ಸರಕುಗಳು. ಇತಿಹಾಸ ಉಲ್ಲೇಖಗಳು ಭಾರತದ ರಾಜಧಾನಿ ಪಟ್ಟಣಗಳು ಸಿಕ್ಕಿಂ
2275
https://kn.wikipedia.org/wiki/%E0%B2%85%E0%B2%97%E0%B2%B0%E0%B3%8D%E0%B2%A4%E0%B2%B2
ಅಗರ್ತಲ
ಅಗರ್ತಲ ತ್ರಿಪುರ ರಾಜ್ಯದ ರಾಜಧಾನಿ ಮತ್ತು ಈಶಾನ್ಯ ಭಾರತದ ಎರಡನೆಯ ದೊಡ್ಡ ಪಟ್ಟಣ.ಈ ಪಟ್ಟಣವು ಹೊರಾ ನದಿಯ ದಡದಲ್ಲಿದೆ.ಈ ಪಟ್ಟಣದಲ್ಲಿ ಹಲವಾರು ದೇವಾಲಯಗಳೂ,ಅರಮನೆಗಳೂ ಇವೆ. ೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೩,೯೯,೬೮೮. ಶಿಕ್ಷಣ, ವ್ಯಾಪಾರ ವಾಣಿಜ್ಯ - ಮುಂತಾದುವುಗಳ ದೃಷ್ಟಿಯಿಂದ ಹಿಂದುಳಿದಿರುವ ಒಂದು ಚಿಕ್ಕ ಪಟ್ಟಣ. ಇಲ್ಲಿ ಹೋರಾ ನದಿ ಹರಿಯುತ್ತದೆ. ಇದು ಬಂಗ್ಲಾದೇಶ ಮತ್ತು ಭಾರತಗಳ ಗಡಿಯಾಗಿದೆ. ಕೃಷಿಗೆ ಫಲವತ್ತಾದ ಮೈದಾನ. ತ್ರಿಪುರ ಪ್ರಾಂತದಲ್ಲೇ ಪ್ರಮುಖ ರೈಲುನಿಲ್ದಾಣವುಳ್ಳ ಪಟ್ಟಣ. ಇಲ್ಲಿಂದ ಬ್ರಹ್ಮಪುತ್ರ ಪ್ರದೇಶದ ಕೆಲವು ಪಟ್ಟಣಗಳಿಗೆ ರೈಲು ಸಂಪರ್ಕವಿದೆ. ಭಾರತ ಮತ್ತು ಬಂಗ್ಲಾದೇಶ ಗಡಿಪ್ರದೇಶದಲ್ಲಿರುವ ಈ ಪಟ್ಟಣದಲ್ಲಿ ಸೇನಾಶಿಬಿರಗಳಿವೆ. ಈ ಪ್ರದೇಶದಲ್ಲಿ ಅಧಿಕವಾಗಿ ಮಳೆಯಾಗುವುದರಿಂದ ಹವಾಗುಣ ಅಷ್ಟು ಹಿತಕರವಾಗಿಲ್ಲ. ಪ್ರವಾಹಗಳಿಂದಾಗಿ ಜನ ಆಗಾಗ ತೊಂದರೆಗೊಳಗಾಗುತ್ತಾರೆ. ಇದೇ ಇಲ್ಲಿನ ಅಲ್ಪ ಜನಸಂಖ್ಯೆಗೆ ಕಾರಣ. ಗುಡ್ಡಗಾಡಿನ ಪ್ರದೇಶದಲ್ಲಿರುವ ಈ ಪಟ್ಟಣದ ನಿವಾಸಿಗಳಿಗೆ ಇತ್ತೀಚೆಗೆ ರಾಜ್ಯಸರ್ಕಾರ ಮತ್ತು ಕೇಂದ್ರಸರ್ಕಾರದ ನೆರವು ಹೆಚ್ಚಾಗಿ ದೊರೆತಿದೆ. ವಾಣಿಜ್ಯ ಕೇಂದ್ರ ಕೋಲ್ಕೊತ ವಿಶ್ವವಿದ್ಯಾಲಯಕ್ಕೆ ಸೇರಿದ 4 ಕಾಲೇಜುಗಳಿವೆ. ಮಹಾರಾಜರ ಅರಮನೆ ಹಾಗೂ ಒಂದು ದೇವಾಲಯವಿದೆ. ಚರಿತ್ರೆ ಅಗರ್ತಲ ಎಂಬ ಹೆಸರು ಅಗರ್ (ಎಂದರೆ ಒಂದು ಬಗೆಯ ಸುಗಂಧ ದ್ರವ್ಯ ) ಮತ್ತು ತಲ (ಎಂದರೆ ಸ್ಥಳ) ಎಂಬ ಎರಡು ಪದಗಳಿಂದ ಬಂದಿದ್ದು, ಸುಗಂಧದ್ರವ್ಯಗಳ ಸ್ಥಳ ಎಂದಾಗುತ್ತದೆ. ಈ ಸ್ಥಳದಲ್ಲಿ ಅಗರ್ ವೃಕ್ಷಗಳು ಹೇರಳವಾಗಿವೆ. ಈ ಪಟ್ಟಣವು ಮಾಣಿಕ್ಯ ವಂಶಜರಿಂದ ಆಳಲ್ಪಟ್ಟತ್ತು.ಬ್ರಿಟಿಷರ ಕಾಲದಲ್ಲಿ "ಹಿಲ್ ತಿಪ್ಪರ" (ಪರ್ವತ ತ್ರಿಪುರ) ದ ರಾಜಧಾನಿ ಎಂದು ಪರಿಗಣಿಸಲ್ಪಟ್ಟಿತ್ತು.ಇಲ್ಲಿಯ ಮಹಾರಾಜ ಬೀರ್ ಬಿಕ್ರಮ ಕಿಶೋರ್ ಮಾಣಿಕ್ಯ ಬಹಾದೂರ್ ರವರು ಆಧುನಿಕ ಅಗರ್ತಲದ ಸ್ಥಾಪಕರು ಎಂದು ಹೇಳಬಹುದು. ಹವಾಮಾನ ಅಗರ್ತಲವು ಹೋರಾ ನದಿಯ ಕಣಿವೆಯಲ್ಲಿದ್ದರೂ ಅದರ ಉತ್ತರದ ಭಾಗವು ಕಡಿಮೆ ಎತ್ತರದ ಬೆಟ್ಟಗಳಲ್ಲಿ ಹರಡಿಕೊಂಡಿದೆ. ಮಾನ್ಸೂನ್ ಹವಾಮಾನ ಇಲ್ಲಿಯದು.ಎಪ್ರಿಲ್ ನಿಂದ ಅಕ್ಟೋಬರ್ ತನಕ ವಿಸ್ತರಿಸಿದ ಮಳೆಗಾಲ, ಸರಾಸರಿ ೨೮ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ, ನವಂಬರ್ ನಿಂದ ಮಾರ್ಚಿವರೆಗೆ ಸಾಧಾರಣ ಚಳಿ ಇಲ್ಲಿಯ ಹವಾಮಾನ ವೈಶಿಷ್ಟ್ಯ. ಪ್ರವಾಸೋದ್ಯಮ ಆಸಕ್ತಿಯ ಸ್ಥಳಗಳು ಕಾಲೇಜ್ ಟಿಲ್ಲಾ ಮಹಾರಾಜ ಬೀರ್ ಬಿಕ್ರಮ್ ಕಾಲೇಜ್, ತ್ರಿಪುರ ವಿಶ್ವವಿದ್ಯಾಲಯದ ಕಟ್ಟಡಗಳು, ಕ್ರೀಡಾಂಗಣಗಳು, ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ ಇತ್ಯಾದಿ. ಇದು ರಾಷ್ಟ್ರೀಯ ಪಕ್ಷಿಧಾಮವೂ ಆಗಿದೆ. ಉಜ್ಜಯಂತ ಅರಮನೆ ತ್ರಿಪುರದ ರಾಜರ ಅರಮನೆಯಾಗಿತ್ತು. ಮೊದಲು ಇದನ್ನು ರಾಜ್ಯ ವಿಧಾನಸಭೆಯಾಗಿ ಪರಿವರ್ತಿಸಲಾಗಿತ್ತು. ಈಗ ವಸ್ತು ಸಂಗ್ರಹಾಲಯವಾಗಿದೆ. ಜಗನ್ನಾಥ ದೇವಾಲಯ — ವೈಷ್ಣವ ವಿಚಾರಧಾರೆಯ ಹಿಂದೂ ದೇವಾಲಯ ಉದ್ಯಾನಗಳು ಮತ್ತು ಆಟದ ಮೈದಾನಗಳು ಹೆರಿಟೇಜ್ ಪಾರ್ಕ್: ನಗರದ ಎಲ್ಲ ಉದ್ಯಾನಗಳಲ್ಲಿ ಅತಿ ಹೆಚ್ಚು ಭೇಟಿನೀಡಲ್ಪಡುವ ಉದ್ಯಾನ. ಇಲ್ಲಿ ರಾಜ್ಯದ ವಿವಿಧ ಸ್ಮಾರಕಗಳ ಕಿರುಮಾದರಿಗಳಿವೆ, ಆಯುರ್ವೇದಿಕ ಮೂಲಿಕೆ ಉದ್ಯಾನ ಮತ್ತು ಕಾರಂಜಿಯಿದೆ. ರಬೀಂದ್ರ ಕಾನನ್: ಹೆರಿಟೇಜ್ ಪಾರ್ಕ್ ಹತ್ತಿರವಿರುವ ಇದರಲ್ಲಿ ವಾರ್ಷಿಕವಾಗಿ ರವೀಂದ್ರನಾಥ ಠಾಗೋರ್‌ರ ಜನ್ಮ ವಾರ್ಷಿಕೋತ್ಸವವನ್ನು ಆಯೋಜಿಸಲಾಗುತ್ತದೆ. ಲೆಂಬುಚೆರಾ ಉದ್ಯಾನ ನೆಹರು ಉದ್ಯಾನ ಮಕ್ಕಳ ಉದ್ಯಾನ ವಸ್ತು ಸಂಗ್ರಹಾಲಯಗಳು ತ್ರಿಪುರಾ ರಾಜ್ಯ ಸಂಗ್ರಹಾಲಯ, ಉಜ್ಜಯಂತ ಅರಮನೆಯಲ್ಲಿದೆ ವಿಜ್ಞಾನ ಸಂಗ್ರಹಾಲಯ, ಸುಕಾಂತ ಅಕಾಡೆಮಿಯಲ್ಲಿ ಸ್ಥಿತವಾಗಿದೆ ಹವೇಲಿ ಸಂಗ್ರಹಾಲಯ, ಕಾಶೀಪುರ್‌ನಲ್ಲಿ ಸ್ಥಿತವಾಗಿದೆ ಮಲ್ಟಿಪ್ಲೆಕ್ಸ್‌ಗಳು ರೂಪಸಿ ಮಲ್ಟಿಪ್ಲೆಕ್ಸ್ ಬಾಲಕ ಸಿನೆಮಾ ಉಲ್ಲೇಖಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಭಾರತದ ಪಟ್ಟಣಗಳು ಭಾರತದ ರಾಜಧಾನಿ ಪಟ್ಟಣಗಳು
2281
https://kn.wikipedia.org/wiki/%E0%B2%A8%E0%B2%BF%E0%B2%B8%E0%B2%B0%E0%B3%8D%E0%B2%97
ನಿಸರ್ಗ
ಪ್ರಕೃತಿ ಇತರ ಬಳಕೆಗಳಿಗಾಗಿ, ನೇಚರ್ (ದ್ವಂದ್ವ ನಿವಾರಣೆ) ನೋಡಿ. "ನೈಸರ್ಗಿಕ" ಇಲ್ಲಿ ಮರುನಿರ್ದೇಶಿಸುತ್ತದೆ. ಇತರ ಬಳಕೆಗಳಿಗಾಗಿ, ನೈಸರ್ಗಿಕ (ದ್ವಂದ್ವ ನಿವಾರಣೆ) ನೋಡಿ. ಪ್ರಕೃತಿ, ವಿಶಾಲವಾದ ಅರ್ಥದಲ್ಲಿ, ನೈಸರ್ಗಿಕ, ಭೌತಿಕ ಅಥವಾ ವಸ್ತು ಪ್ರಪಂಚ ಅಥವಾ ವಿಶ್ವ. "ನೇಚರ್" ಭೌತಿಕ ಪ್ರಪಂಚದ ವಿದ್ಯಮಾನಗಳನ್ನು ಮತ್ತು ಸಾಮಾನ್ಯ ಜೀವನಕ್ಕೆ ಕೂಡಾ ಉಲ್ಲೇಖಿಸಲ್ಪಡುತ್ತದೆ. ವಿಜ್ಞಾನದ ಒಂದು ಭಾಗ ಮಾತ್ರವಲ್ಲದೆ, ಪ್ರಕೃತಿಯ ಅಧ್ಯಯನವು ದೊಡ್ಡದಾಗಿದೆ. ಮಾನವರು ಸ್ವಭಾವದ ಭಾಗವಾಗಿದ್ದರೂ ಸಹ, ಮಾನವ ಚಟುವಟಿಕೆಯನ್ನು ಇತರ ನೈಸರ್ಗಿಕ ವಿದ್ಯಮಾನಗಳಿಂದ ಪ್ರತ್ಯೇಕ ವರ್ಗವೆಂದು ಸಾಮಾನ್ಯವಾಗಿ ಅರ್ಥೈಸಲಾಗುತ್ತದೆ. ಪದದ ಸ್ವಭಾವವು ಲ್ಯಾಟಿನ್ ಪದ ನ್ಯಾಚುರಾ ಅಥವಾ "ಅಗತ್ಯ ಗುಣಗಳು, ಸ್ವಭಾವದ ಸ್ವಭಾವ" ದಿಂದ ಬಂದಿದೆ, ಮತ್ತು ಪ್ರಾಚೀನ ಕಾಲದಲ್ಲಿ ಅಕ್ಷರಶಃ "ಜನ್ಮ" ಎಂದರ್ಥ. [1] ನ್ಯಾಚುರಾ ಎಂಬುದು ಗ್ರೀಕ್ ಪದವಾದ ಫಿಸಿಸ್ (φύσις) ಎಂಬ ಲ್ಯಾಟಿನ್ ಪದವಾಗಿದೆ, ಇದು ಮೂಲತಃ ಸಸ್ಯಗಳು, ಪ್ರಾಣಿಗಳು, ಮತ್ತು ಪ್ರಪಂಚದ ಇತರ ಲಕ್ಷಣಗಳು ತಮ್ಮದೇ ಆದ ಒಡನಾಟವನ್ನು ಅಭಿವೃದ್ಧಿಪಡಿಸುವ ನೈಜ ಗುಣಲಕ್ಷಣಗಳಿಗೆ ಸಂಬಂಧಿಸಿದೆ. [2] [3] ಒಟ್ಟಾರೆಯಾಗಿ ಪ್ರಕೃತಿಯ ಪರಿಕಲ್ಪನೆ, ಭೌತಿಕ ವಿಶ್ವ, ಮೂಲ ಕಲ್ಪನೆಯ ಹಲವಾರು ವಿಸ್ತರಣೆಗಳಲ್ಲಿ ಒಂದಾಗಿದೆ; ಇದು ಪದದ ಕೆಲವು ಪ್ರಮುಖ ಅನ್ವಯಿಕೆಗಳೊಂದಿಗೆ φύσις ಆರಂಭವಾಯಿತು -ಸೋಕ್ರಟಿಕ್ ಪೂರ್ವದ ತತ್ವಜ್ಞಾನಿಗಳು, ಮತ್ತು ಇದುವರೆಗೂ ನಿರಂತರವಾಗಿ ಕರೆನ್ಸಿಯನ್ನು ಪಡೆಯಿತು. ಕಳೆದ ಹಲವಾರು ಶತಮಾನಗಳಲ್ಲಿ ಆಧುನಿಕ ವೈಜ್ಞಾನಿಕ ವಿಧಾನದ ಆಗಮನದ ಸಮಯದಲ್ಲಿ ಈ ಬಳಕೆಯು ಮುಂದುವರೆಯಿತು. [4] [5] ಇಂದು ಪದದ ವಿವಿಧ ಉಪಯೋಗಗಳಲ್ಲಿ, "ಪ್ರಕೃತಿ" ಸಾಮಾನ್ಯವಾಗಿ ಭೂವಿಜ್ಞಾನ ಮತ್ತು ವನ್ಯಜೀವಿಗಳನ್ನು ಉಲ್ಲೇಖಿಸುತ್ತದೆ. ಪ್ರಕೃತಿ ಜೀವಂತ ಸಸ್ಯಗಳು ಮತ್ತು ಪ್ರಾಣಿಗಳ ಸಾಮಾನ್ಯ ಕ್ಷೇತ್ರವನ್ನು ಉಲ್ಲೇಖಿಸಬಹುದು, ಮತ್ತು ಕೆಲವು ಸಂದರ್ಭಗಳಲ್ಲಿ ಜೀವಿಗಳು ಮತ್ತು ಜೀವಿಜ್ಞಾನದಂತಹ ತಮ್ಮದೇ ಆದ ಒಡಂಬಡಿಕೆಯನ್ನು ಬದಲಾಯಿಸುವಂತಹ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ನಿರ್ಜೀವ ವಸ್ತುಗಳೊಂದಿಗಿನ ಪ್ರಕ್ರಿಯೆಗಳಿಗೆ ಸಂಬಂಧಿಸಿರುತ್ತವೆ. "ನೈಸರ್ಗಿಕ ಪರಿಸರ" ಅಥವಾ ಅರಣ್ಯ-ಕಾಡು ಪ್ರಾಣಿಗಳು, ಕಲ್ಲುಗಳು, ಅರಣ್ಯ, ಮತ್ತು ಸಾಮಾನ್ಯವಾಗಿ ಮಾನವ ಹಸ್ತಕ್ಷೇಪದ ಮೂಲಕ ಗಣನೀಯವಾಗಿ ಬದಲಾಗದೆ ಇರುವಂತಹ ಅಥವಾ ಮಾನವನ ಹಸ್ತಕ್ಷೇಪದ ಹೊರತಾಗಿಯೂ ಇದು ಉಳಿದುಕೊಂಡಿರುವ ವಿಷಯಗಳನ್ನು ಅರ್ಥೈಸಲು ಇದನ್ನು ತೆಗೆದುಕೊಳ್ಳಲಾಗುತ್ತದೆ. ಉದಾಹರಣೆಗೆ, ತಯಾರಿಸಿದ ವಸ್ತುಗಳು ಮತ್ತು ಮಾನವ ಸಂವಹನವನ್ನು ಸಾಮಾನ್ಯವಾಗಿ ಸ್ವಭಾವದ ಭಾಗವೆಂದು ಪರಿಗಣಿಸಲಾಗುವುದಿಲ್ಲ, ಉದಾಹರಣೆಗೆ, "ಮಾನವ ಸ್ವಭಾವ" ಅಥವಾ "ಸಂಪೂರ್ಣ ಪ್ರಕೃತಿ" ಎಂದು ಅರ್ಹತೆ ನೀಡದಿದ್ದರೆ. ಇಂದು ಕಂಡುಬರುವ ನೈಸರ್ಗಿಕ ವಸ್ತುಗಳ ಬಗೆಗಿನ ಈ ಸಾಂಪ್ರದಾಯಿಕ ಪರಿಕಲ್ಪನೆಯು ನೈಸರ್ಗಿಕ ಮತ್ತು ಕೃತಕ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ, ಮಾನವ ಪ್ರಜ್ಞೆ ಅಥವಾ ಮಾನವ ಮನಸ್ಸಿನಿಂದ ಉಂಟಾಗುವ ಕೃತಕ ಪದವನ್ನು ಅರ್ಥೈಸಿಕೊಳ್ಳಲಾಗಿದೆ. ನಿರ್ದಿಷ್ಟ ಸಂದರ್ಭವನ್ನು ಆಧರಿಸಿ, "ನೈಸರ್ಗಿಕ" ಎಂಬ ಪದವನ್ನು ಸಹ ಅಸ್ವಾಭಾವಿಕ ಅಥವಾ ಅಲೌಕಿಕತೆಯಿಂದ ಪ್ರತ್ಯೇಕಿಸಬಹುದು. ಪರಿವಿಡಿ 1 ಭೂಮಿ 1.1 ಭೂವಿಜ್ಞಾನ 1.1.1 ಭೂವೈಜ್ಞಾನಿಕ ವಿಕಸನ 1.2 ಐತಿಹಾಸಿಕ ದೃಷ್ಟಿಕೋನ ವಾತಾವರಣ, ಹವಾಮಾನ ಮತ್ತು ಹವಾಮಾನ 3 ಭೂಮಿಯ ಮೇಲಿನ ನೀರು 3.1 ಸಮುದ್ರಗಳು 3.2 ಸರೋವರಗಳು 3.2.1 ಕೊಳಗಳು 3.3 ನದಿಗಳು 3.4 ಸ್ಟ್ರೀಮ್ಸ್ 4 ಪರಿಸರ ವ್ಯವಸ್ಥೆಗಳು 4.1 ವೈಲ್ಡರ್ನೆಸ್ 5 ಜೀವನ 5.1 ವಿಕಸನ 5.2 ಸೂಕ್ಷ್ಮಜೀವಿಗಳು 5.3 ಸಸ್ಯಗಳು ಮತ್ತು ಪ್ರಾಣಿಗಳು 6 ಮಾನವ ಸಂಬಂಧಗಳು 6.1 ಸೌಂದರ್ಯಶಾಸ್ತ್ರ ಮತ್ತು ಸೌಂದರ್ಯ 7 ಮ್ಯಾಟರ್ ಮತ್ತು ಶಕ್ತಿ 8 ಭೂಮಿಯ ಬಿಯಾಂಡ್ 9 ಇದನ್ನೂ ನೋಡಿ 10 ಟಿಪ್ಪಣಿಗಳು ಮತ್ತು ಉಲ್ಲೇಖಗಳು ಬಾಹ್ಯ ಕೊಂಡಿಗಳು ಭೂಮಿ ನೇಚರ್ ಟೈಮ್ಲೈನ್ ಪುನಸ್ಸಂಯೋಜನೆ ಮ್ಯಾಟರ್ ಪ್ರಾಬಲ್ಯ ಯುಗ ವೇಗವರ್ಧಿತ ವಿಸ್ತರಣೆ ನೀರು ಒಂದೇ ಜೀವಕೋಶದ ಜೀವನ ದ್ಯುತಿಸಂಶ್ಲೇಷಣೆ ಬಹುಕೋಶೀಯ ಜೀವನ ಬೆನ್ನುಮೂಳೆಗಳು ಡಾರ್ಕ್ ಯುಗಗಳು ← ಯುನಿವರ್ಸ್ (-13.80) ← ಆರಂಭಿಕ ನಕ್ಷತ್ರಗಳು ← ಆರಂಭಿಕ ನಕ್ಷತ್ರಗಳು ← ಆರಂಭಿಕ ಕ್ವಾಸರ್ / sbh ← ಒಮೆಗಾ ಸೆಂಟೌರಿ ← ಆಂಡ್ರೊಮಿಡಾ ಗ್ಯಾಲಕ್ಸಿ ← ಕ್ಷೀರ ಸುರುಳಿ ಸುರುಳಿಗಳು ← ಆಲ್ಫಾ ಸೆಂಟುರಿ ← ಸೌರವ್ಯೂಹದ ← ಹಿಂದಿನ ಜೀವನ ← ಆರಂಭಿಕ ಆಕ್ಸಿಜನ್ ← ವಾತಾವರಣದ ಆಮ್ಲಜನಕ ← ಲೈಂಗಿಕ ಸಂತಾನೋತ್ಪತ್ತಿ ← ಆರಂಭಿಕ ಸಸ್ಯಗಳು ← ಕ್ಯಾಂಬ್ರಿಯನ್ ಸ್ಫೋಟ ← ಆರಂಭಿಕ ಸಸ್ತನಿಗಳು ← ಅರ್ಲಿಯೆಸ್ಟ್ ಮಂಗಗಳು ಎಲ್ ನಾನು f ಇ (ವೀಕ್ಷಿಸಿ • ಚರ್ಚಿಸಿ) ಆಕ್ಸಿಸ್ ಸ್ಕೇಲ್: ಶತಕೋಟಿ ವರ್ಷಗಳು ಮೇಲಿನ ಚಿತ್ರ ಕ್ಲಿಕ್ ಮಾಡಬಹುದಾದ ಲಿಂಕ್ಗಳನ್ನು ಹೊಂದಿದೆಇನ್ನೂ ನೋಡಿ: ಹ್ಯೂಮನ್ ಟೈಮ್ಲೈನ್ ​​ಮತ್ತು ಲೈಫ್ ಟೈಮ್ಲೈನ್ ಮುಖ್ಯ ಲೇಖನಗಳು: ಭೂಮಿ ಮತ್ತು ಭೂ ವಿಜ್ಞಾನ 1972 ರಲ್ಲಿ ಅಪೊಲೊ 17 ರ ಸಿಬ್ಬಂದಿಯಿಂದ ತೆಗೆದ ಭೂಮಿಯ ನೋಟ. ಜೀವವನ್ನು ಬೆಂಬಲಿಸಲು ತಿಳಿದಿರುವ ಏಕೈಕ ಗ್ರಹವು ಭೂಮಿಯಷ್ಟೇ, ಮತ್ತು ಅದರ ನೈಸರ್ಗಿಕ ಲಕ್ಷಣಗಳು ಹಲವು ಕ್ಷೇತ್ರಗಳ ವೈಜ್ಞಾನಿಕ ಸಂಶೋಧನೆಯ ವಿಷಯವಾಗಿದೆ. ಸೌರವ್ಯೂಹದಲ್ಲಿ, ಇದು ಸೂರ್ಯನಿಗೆ ಸಮೀಪದಲ್ಲಿ ಮೂರನೆಯದು; ಇದು ಅತಿ ದೊಡ್ಡ ಭೂಮಿಯ ಗ್ರಹ ಮತ್ತು ಒಟ್ಟಾರೆಯಾಗಿ ಐದನೇ ದೊಡ್ಡದಾಗಿದೆ. ಇದರ ಪ್ರಮುಖ ಹವಾಮಾನ ಲಕ್ಷಣಗಳು ಅದರ ಎರಡು ದೊಡ್ಡ ಧ್ರುವ ಪ್ರದೇಶಗಳು, ಎರಡು ತುಲನಾತ್ಮಕವಾಗಿ ಕಿರಿದಾದ ಸಮಶೀತೋಷ್ಣ ವಲಯಗಳು ಮತ್ತು ವಿಶಾಲ ಸಮಭಾಜಕ ಉಷ್ಣವಲಯದ ಉಪೋಷ್ಣವಲಯದ ಪ್ರದೇಶಕ್ಕೆ ಸೇರಿವೆ. [6] ಮಳೆಯು ವರ್ಷಕ್ಕೆ ಹಲವಾರು ಮೀಟರ್ಗಳಿಂದ ಮಿಲಿಮೀಟರ್ ಗಿಂತ ಕಡಿಮೆ ಇರುವ ಸ್ಥಳದೊಂದಿಗೆ ವ್ಯಾಪಕವಾಗಿ ಬದಲಾಗುತ್ತದೆ. ಭೂಮಿಯ ಮೇಲ್ಮೈಯ 71 ಪ್ರತಿಶತದಷ್ಟು ಉಪ್ಪಿನ ನೀರಿನ ಸಾಗರಗಳಿಂದ ಆವೃತವಾಗಿದೆ. ಉಳಿದವು ಖಂಡಗಳು ಮತ್ತು ದ್ವೀಪಗಳನ್ನು ಒಳಗೊಂಡಿದೆ, ಉತ್ತರ ಗೋಳಾರ್ಧದಲ್ಲಿ ವಾಸಯೋಗ್ಯ ಭೂಮಿ ಹೆಚ್ಚಿನವು. ಭೂಮಿಯು ಭೌಗೋಳಿಕ ಮತ್ತು ಜೈವಿಕ ಪ್ರಕ್ರಿಯೆಗಳ ಮೂಲಕ ವಿಕಸನಗೊಂಡಿತು, ಅದು ಮೂಲ ಸ್ಥಿತಿಯ ಕುರುಹುಗಳನ್ನು ಬಿಟ್ಟುಬಿಟ್ಟಿದೆ. ಬಾಹ್ಯ ಮೇಲ್ಮೈ ಹಲವಾರು ಕ್ರಮೇಣ ಟೆಕ್ಟೋನಿಕ್ ಪ್ಲೇಟ್ಗಳನ್ನು ವಿಂಗಡಿಸುತ್ತದೆ. ಆಂತರಿಕವು ಪ್ಲಾಸ್ಟಿಕ್ ಮ್ಯಾಂಟಲ್ನ ದಪ್ಪ ಪದರ ಮತ್ತು ಒಂದು ಕಬ್ಬಿಣದ ತುಂಬಿದ ಕೋರ್ನೊಂದಿಗೆ ಆಯಸ್ಕಾಂತೀಯ ಕ್ಷೇತ್ರವನ್ನು ಉತ್ಪತ್ತಿ ಮಾಡುತ್ತದೆ. ಈ ಕಬ್ಬಿಣದ ಕೋರ್ ಒಂದು ಘನ ಆಂತರಿಕ ಹಂತ ಮತ್ತು ದ್ರವದ ಹೊರ ಹಂತದಿಂದ ಕೂಡಿದೆ. ಕೋರ್ನಲ್ಲಿ ಸಂವಹನ ಚಲನೆಯು ಡೈನಮೋ ಕ್ರಿಯೆಯ ಮೂಲಕ ವಿದ್ಯುತ್ ಪ್ರವಾಹವನ್ನು ಉತ್ಪತ್ತಿ ಮಾಡುತ್ತದೆ, ಮತ್ತು ಅವುಗಳು, ಭೂಕಾಂತೀಯ ಕ್ಷೇತ್ರವನ್ನು ಉತ್ಪತ್ತಿ ಮಾಡುತ್ತವೆ. ಭೂವಿಜ್ಞಾನ ಮುಖ್ಯ ಲೇಖನ: ಭೂವಿಜ್ಞಾನ ಭೂವಿಜ್ಞಾನವು ಭೂಮಿಯಾಗಿರುವ ಘನ ಮತ್ತು ದ್ರವ ಪದಾರ್ಥದ ವಿಜ್ಞಾನ ಮತ್ತು ಅಧ್ಯಯನವಾಗಿದೆ. ಭೂವಿಜ್ಞಾನದ ಕ್ಷೇತ್ರವು ಸಂಯೋಜನೆ, ರಚನೆ, ಭೌತಿಕ ಗುಣಲಕ್ಷಣಗಳು, ಚಲನಶಾಸ್ತ್ರ, ಮತ್ತು ಭೂಮಿಯ ವಸ್ತುಗಳ ಇತಿಹಾಸ, ಮತ್ತು ಅವರು ರೂಪುಗೊಳ್ಳುವ ಪ್ರಕ್ರಿಯೆಗಳು, ಸರಿಸುಮಾರು ಮತ್ತು ಬದಲಾದ ಅಧ್ಯಯನಗಳನ್ನು ಒಳಗೊಳ್ಳುತ್ತದೆ. ಕ್ಷೇತ್ರವು ಪ್ರಮುಖ ಶೈಕ್ಷಣಿಕ ಶಿಸ್ತುಯಾಗಿದೆ, ಮತ್ತು ಖನಿಜ ಮತ್ತು ಹೈಡ್ರೋಕಾರ್ಬನ್ ಹೊರತೆಗೆಯುವಿಕೆ, ನೈಸರ್ಗಿಕ ಅಪಾಯಗಳ ಬಗ್ಗೆ ಜ್ಞಾನ ಮತ್ತು ತಗ್ಗಿಸುವಿಕೆ, ಕೆಲವು ಜಿಯೋಟೆಕ್ನಿಕಲ್ ಇಂಜಿನಿಯರಿಂಗ್ ಕ್ಷೇತ್ರಗಳು, ಮತ್ತು ಹಿಂದಿನ ವಾತಾವರಣ ಮತ್ತು ಪರಿಸರಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಭೂವೈಜ್ಞಾನಿಕ ವಿಕಸನ ಮೂರು ವಿಧದ ಭೂವೈಜ್ಞಾನಿಕ ಪ್ಲೇಟ್ ಟೆಕ್ಟೋನಿಕ್ ಗಡಿಗಳು. ಪ್ರದೇಶದ ಭೂವಿಜ್ಞಾನವು ಸಮಯದ ಮೂಲಕ ವಿಕಸನಗೊಳ್ಳುತ್ತದೆ ಮತ್ತು ರಾಕ್ ಘಟಕಗಳು ಠೇವಣಿ ಮತ್ತು ಸೇರಿಸಲ್ಪಟ್ಟಾಗ ಮತ್ತು ವಿರೂಪಾತ್ಮಕ ಪ್ರಕ್ರಿಯೆಗಳು ತಮ್ಮ ಆಕಾರಗಳನ್ನು ಮತ್ತು ಸ್ಥಳಗಳನ್ನು ಬದಲಾಯಿಸುತ್ತವೆ. ರಾಕ್ ಘಟಕಗಳನ್ನು ಮೊದಲಿಗೆ ಮೇಲ್ಮೈಯಲ್ಲಿ ಸಂಗ್ರಹಣೆಯ ಮೂಲಕ ಅಥವಾ ಮೇಲ್ಛಾವಣಿ ರಾಕ್ನಲ್ಲಿ ಪ್ರವೇಶಿಸಬಹುದು. ಸಂಚಯಗಳು ಭೂಮಿಯ ಮೇಲ್ಮೈಗೆ ಇಳಿದಾಗ ಮತ್ತು ನಂತರ ಸಂಚಯದ ಬಂಡೆಗೆ ಎಳ್ಳುವಾಗ, ಅಥವಾ ಜ್ವಾಲಾಮುಖಿಯ ಬೂದಿ ಅಥವಾ ಲಾವಾ ಹರಿವುಗಳಂತಹ ಜ್ವಾಲಾಮುಖಿಯ ವಸ್ತುವಾಗಿ, ಮೇಲ್ಮೈಯನ್ನು ಹೊದಿಕೆ ಮಾಡುವಾಗ ಠೇವಣಿ ಸಂಭವಿಸಬಹುದು. ಬಾನೊಲಿತ್ಗಳು, ಲ್ಯಾಕ್ಕೊಲಿತ್ಗಳು, ಡೈಕ್ಗಳು ​​ಮತ್ತು ಸಿಲ್ಸ್ ಮುಂತಾದ ಅಡಚಣೆಗಳಿವೆ, ಮೇಲ್ಮುಖವಾದ ಬಂಡೆಗೆ ಮೇಲ್ಮುಖವಾಗಿ ತಳ್ಳುತ್ತವೆ ಮತ್ತು ಸ್ಫಟಿಕೀಕರಣಗೊಳ್ಳುತ್ತವೆ. ಬಂಡೆಗಳ ಆರಂಭಿಕ ಅನುಕ್ರಮವನ್ನು ಸಂಗ್ರಹಿಸಿದ ನಂತರ, ರಾಕ್ ಘಟಕಗಳನ್ನು ವಿರೂಪಗೊಳಿಸಬಹುದು ಮತ್ತು / ಅಥವಾ ರೂಪಾಂತರಗೊಳಿಸಬಹುದು. ವಿರೂಪಗೊಳಿಸುವಿಕೆಯು ಸಮತಲವಾದ ಸಂಕ್ಷಿಪ್ತ, ಸಮತಲ ವಿಸ್ತರಣೆ, ಅಥವಾ ಪಕ್ಕ-ಪಕ್ಕದ (ಸ್ಟ್ರೈಕ್-ಸ್ಲಿಪ್) ಚಲನೆಯ ಪರಿಣಾಮವಾಗಿ ಸಂಭವಿಸುತ್ತದೆ. ಈ ರಚನಾತ್ಮಕ ಪ್ರಭುತ್ವಗಳು ವ್ಯಾಪಕವಾಗಿ ಒಮ್ಮುಖದ ಗಡಿಗಳು, ವಿಭಿನ್ನ ಗಡಿಗಳು, ಮತ್ತು ಟೆಕ್ಟೋನಿಕ್ ಪ್ಲೇಟ್ಗಳ ನಡುವೆ ಅನುಕ್ರಮವಾಗಿ ಗಡಿಗಳನ್ನು ರೂಪಾಂತರಿಸುತ್ತವೆ. ನೈಸರ್ಗಿಕ ವಿಜ್ಞಾನ
2282
https://kn.wikipedia.org/wiki/%E0%B2%97%E0%B3%8D%E0%B2%B0%E0%B3%86%E0%B2%97%E0%B3%8B%E0%B2%B0%E0%B2%BF%E0%B2%AF%E0%B2%A8%E0%B3%8D%20%E0%B2%95%E0%B3%8D%E0%B2%AF%E0%B2%BE%E0%B2%B2%E0%B3%86%E0%B2%82%E0%B2%A1%E0%B2%B0%E0%B3%8D
ಗ್ರೆಗೋರಿಯನ್ ಕ್ಯಾಲೆಂಡರ್
ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲ್ಪಡುವ ಕ್ಯಾಲೆಂಡರ್ (ಪಂಚಾಂಗ). ಅಲೋಸಿಯಸ್ ಲಿಲಿಯಸ್ ಎಂಬ ವೈದ್ಯನಿಂದ ಪ್ರಸ್ತಾಪಿಸಲ್ಪಟ್ಟ ಈ ಕ್ಯಾಲೆಂಡರ್, ಫೆಬ್ರುವರಿ ೨೪, ೧೫೮೨ರಂದು ಪೋಪ್ ಹದಿಮೂರನೆ ಗ್ರೆಗೊರಿಯ ಆದೇಶದ ಮೇರೆಗೆ ಜಾರಿಗೆ ಬಂದಿತು. ಅಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ಜುಲಿಯನ್ ಕ್ಯಾಲೆಂಡರ್ನ ಲೆಕ್ಕದಲ್ಲಿ ವರ್ಷದ ಉದ್ದವು ಹೆಚ್ಚಾಗಿತ್ತು. ಜೂಲಿಯನ್ ಕ್ಯಾಲೆಂಡರ್ನಲ್ಲಿ ವರ್ಷ ತುಂಬಾ ಉದ್ದವಾಗಿತ್ತು. ಇದು ಪ್ರತಿ ವರ್ಷ ೩೬೫ ದಿನಗಳ ೬ ಗಂಟೆಗಳ ಉದ್ದ ಇತ್ತು. ಆದರೆ ಲೆಕ್ಕಾಚಾರಗಳು ಒಂದು ವರ್ಷದ ನಿಜವಾದ ಸರಾಸರಿ ಉದ್ದ ಸ್ವಲ್ಪ ಕಡಿಮೆ (೩೬೫ ದಿನಗಳ, ೫ ಗಂಟೆ ೪೯ ನಿಮಿಷ) ಎಂದು ತೋರಿಸಿದರು, ಪರಿಹಾರ ಪ್ರತಿ ನಾಲ್ಕು ವರ್ಷ ಕ್ಕೊಮ್ಮೆ ನಿಖರವಾಗಿ ಭಾಗಿಸಬಹುದಾದ ವರ್ಷ ಅಧಿಕ ವರ್ಷ. ಫೆಬ್ರವರಿಯಲ್ಲಿ ಒಂದು ದಿನ ಹೆಚ್ಚು, ೨೯ ದಿನ ತೋರಿಸಿದರು. ೧೦೦ ವರ್ಷಗಳನ್ನು ಹೊರತುಪಡಿಸಿ, ಆದರೆ ಶತಮಾನ ವರ್ಷ ಅಧಿಕ ವರ್ಷಗಳಲ್ಲ ೪೦೦ ರಿಂದ ನಿಖರವಾಗಿ ಭಾಗಿಸಬಹುದಾದರೆ ಅಧಿಕ ವರ್ಷ. ಉದಾಹರಣೆಗೆ ೧೭೦೦, ೧೮೦೦, ಮತ್ತು ೧೯೦೦ ಇವು ಅಧಿಕ ವರ್ಷ ಅಲ್ಲ, ಆದರೆ ೨೦೦೦ ಅಧಿಕ ವರ್ಷ. ಬಾಹ್ಯ ಸಂಪರ್ಕಗಳು Calendar Converter Inter Gravissimas (Latin and French plus English) History of Gregorian Calendar The Perpetual Calendar Gregorian Calendar adoption dates for many countries. World records for mentally calculating the day of the week in the Gregorian Calendar The Calendar FAQ – Frequently Asked Questions about Calendars Today's date (Gregorian) in over 400 more-or-less obscure foreign languages ಕಾಲ
2284
https://kn.wikipedia.org/wiki/%E0%B2%A1%E0%B2%BF%E0%B2%B8%E0%B3%86%E0%B2%82%E0%B2%AC%E0%B2%B0%E0%B3%8D
ಡಿಸೆಂಬರ್
ಡಿಸೆಂಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಕೊನೆಯ (ಹನ್ನೆರಡನೆಯ) ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಡಿಸೆಂಬರ್ ಕ್ರಿಸ್ತವರ್ಷದ ಹನ್ನೆರಡನೆಯ ತಿಂಗಳು. ಇದರಲ್ಲಿ 31 ದಿವಸಗಳಿವೆ. ಮಾರ್ಚ್ ತಿಂಗಳಿನಿಂದ ಪ್ರಾರಂಭವಾಗುವ ಪ್ರಾಚೀನ ರೋಮ್ ತಾರೀಕುಪಟ್ಟಿಯಲ್ಲಿ ಇದನ್ನು ಹತ್ತನೆಯ ತಿಂಗಳಾಗಿ ಕಾಣಿಸಲಾಗಿತ್ತು. ಪ್ರಾಚೀನ ರೋಮನರು ಶನಿಗ್ರಹ ಸಂಬಂಧವಾದ ಸ್ಯಾಟರ್‍ನೇಲೀಯ ಎಂಬ ಹಬ್ಬವನ್ನು ಈ ತಿಂಗಳಲ್ಲಿ ಆಚರಿಸುತ್ತಿದ್ದರು. ಈ ಹಂಗಾಮಿನಲ್ಲಿ ಯೂಲ್ ಎಂಬ ನಡುಚಳಿಗಾಲದ ಹಬ್ಬ ಪ್ರಾಚೀನ ಟ್ಯೂಟೋನಿಕರಿಂದ ಆಚರಿಸಲ್ಪಡುತ್ತಿತ್ತು. ಸಾಮಾನ್ಯವಾಗಿ ಟರ್‍ಕ್ವಾಯ್ಸ್ ಎಂಬ ಒಂದು ಬಗೆಯ ವೈಡೂರ್ಯವನ್ನು ಜಿರ್ಕಾನ್ ಎಂಬ ಖನಿಜವನ್ನೂ ಡಿಸೆಂಬರ್ ತಿಂಗಳಿಗೆ ಅನ್ವಯಿಸುವುದುಂಟು. ಏಸುಕ್ರಿಸ್ತನ ಜನನ ದಿನವನ್ನು ಕುರಿತು ಇರುವ ಸಾಂಪ್ರದಾಯಿಕ ನಂಬಿಕೆಯಂತೆ ಡಿಸೆಂಬರ್ 25ನೆಯ ದಿವಸವನ್ನು ಪ್ರಪಂಚದಾದ್ಯಂತ ಇರುವ ಕ್ರೈಸ್ತರು ಕ್ರಿಸ್ಮಸ್ ಎಂದು ಆಚರಿಸುತ್ತಾರೆ. ಸಾಮಾನ್ಯವಾಗಿ ಈ ಹಬ್ಬದ ಆಚರಣೆ ಮುಂದಿನ ಹೊಸ ವರ್ಷದ ಮೊದಲ ದಿನದ ವರೆಗೂ ನಡೆದಿರುತ್ತದೆ. ಮಕರ ಸಂಕ್ರಮಣ (ವಿಟರ್ ಸಾಲ್ಸ್‍ಟೀಸ್) ಸಂಭವಿಸುವುದು ಈ ತಿಂಗಳಲ್ಲೇ. ಭಾರತೀಯ ಪಂಚಾಂಗದ ರೀತ್ಯ ವೃಶ್ಚಿಕ ಮತ್ತು ಧನುರ್ಮಾಸಗಳು ಸಾಮಾನ್ಯವಾಗಿ ಈ ತಿಂಗಳಲ್ಲಿ ಸೇರಿಕೊಂಡಿರುತ್ತವೆ ತಿಂಗಳುಗಳು ಡಿಸೆಂಬರ್
2287
https://kn.wikipedia.org/wiki/%E0%B2%95%E0%B3%86%E0%B2%A8%E0%B2%A1%E0%B2%BE
ಕೆನಡಾ
ಕೆನಡಾ ಉತ್ತರ ಅಮೆರಿಕದಲ್ಲಿರುವ ಒಂದು ದೇಶ. ಇದರ ಹತ್ತು ಪ್ರಾಂತ್ಯಗಳು ಮತ್ತು ಮೂರು ಪ್ರಾಂತ್ಯಗಳು ಅಟ್ಲಾಂಟಿಕ್ ಸಾಗರದಿಂದ ಪೆಸಿಫಿಕ್ ಮಹಾಸಾಗರದವರೆಗೆ ಮತ್ತು ಉತ್ತರಕ್ಕೆ ಆರ್ಕ್ಟಿಕ್ ಮಹಾಸಾಗರದವರೆಗೆ ವಿಸ್ತರಿಸುತ್ತವೆ, ಇದು ವಿಶ್ವದ ಅತಿ ಉದ್ದದ ಕರಾವಳಿಯೊಂದಿಗೆ ಒಟ್ಟು ವಿಸ್ತೀರ್ಣದಲ್ಲಿ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ಅದರ ಗಡಿಯು ವಿಶ್ವದ ಅತಿ ಉದ್ದದ ಅಂತರರಾಷ್ಟ್ರೀಯ ಭೂ ಗಡಿಯಾಗಿದೆ. ದೇಶವು ಹವಾಮಾನ ಮತ್ತು ಭೂವೈಜ್ಞಾನಿಕ ಪ್ರದೇಶಗಳ ವ್ಯಾಪಕ ಶ್ರೇಣಿಯಿಂದ ನಿರೂಪಿಸಲ್ಪಟ್ಟಿದೆ. ಇದು ವಿರಳವಾಗಿ ಜನವಸತಿ ಹೊಂದಿದೆ, ಬಹುಪಾಲು ಜನರು ನಗರ ಪ್ರದೇಶಗಳಲ್ಲಿ ೫೫ನೇ ಸಮಾನಾಂತರದ ದಕ್ಷಿಣದಲ್ಲಿ ವಾಸಿಸುತ್ತಿದ್ದಾರೆ. ಕೆನಡಾದ ರಾಜಧಾನಿ ಒಟ್ಟಾವಾ ಮತ್ತು ಅದರ ಮೂರು ದೊಡ್ಡ ಮೆಟ್ರೋಪಾಲಿಟನ್ ಪ್ರದೇಶಗಳು ಟೊರೊಂಟೊ, ಮಾಂಟ್ರಿಯಲ್ ಮತ್ತು ವ್ಯಾಂಕೋವರ್. ಸ್ಥಳೀಯ ಜನರು ಸಾವಿರಾರು ವರ್ಷಗಳಿಂದ ಈಗಿನ ಕೆನಡಾದಲ್ಲಿ ನಿರಂತರವಾಗಿ ವಾಸಿಸುತ್ತಿದ್ದಾರೆ. ೧೬ನೇ ಶತಮಾನದಿಂದ ಆರಂಭಗೊಂಡು, ಬ್ರಿಟಿಷ್ ಮತ್ತು ಫ್ರೆಂಚ್ ದಂಡಯಾತ್ರೆಗಳು ಅನ್ವೇಷಿಸಿ ನಂತರ ಅಟ್ಲಾಂಟಿಕ್ ಕರಾವಳಿಯಲ್ಲಿ ನೆಲೆಸಿದವು. ವಿವಿಧ ಸಶಸ್ತ್ರ ಸಂಘರ್ಷಗಳ ಪರಿಣಾಮವಾಗಿ, ಫ್ರಾನ್ಸ್ ೧೭೬೩ರಲ್ಲಿ ಉತ್ತರ ಅಮೆರಿಕಾದಲ್ಲಿನ ತನ್ನ ಎಲ್ಲಾ ವಸಾಹತುಗಳನ್ನು ಬಿಟ್ಟುಕೊಟ್ಟಿತು. ೧೮೬೭ರಲ್ಲಿ, ಒಕ್ಕೂಟದ ಮೂಲಕ ಮೂರು ಬ್ರಿಟಿಷ್ ಉತ್ತರ ಅಮೆರಿಕಾದ ವಸಾಹತುಗಳ ಒಕ್ಕೂಟದೊಂದಿಗೆ, ಕೆನಡಾವು ನಾಲ್ಕು ಪ್ರಾಂತ್ಯಗಳ ಫೆಡರಲ್ ಡೊಮಿನಿಯನ್ ಆಗಿ ರೂಪುಗೊಂಡಿತು. ಇದು ಪ್ರಾಂತಗಳು ಮತ್ತು ಪ್ರಾಂತ್ಯಗಳ ಸಂಗ್ರಹವನ್ನು ಪ್ರಾರಂಭಿಸಿತು ಮತ್ತು ಯುನೈಟೆಡ್ ಕಿಂಗ್‌ಡಮ್‌ನಿಂದ ಸ್ವಾಯತ್ತತೆಯನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು, ೧೯೩೧ರ ವೆಸ್ಟ್‌ಮಿನಿಸ್ಟರ್ ಶಾಸನದಿಂದ ಎತ್ತಿ ತೋರಿಸಲಾಯಿತು ಮತ್ತು ಕೆನಡಾ ಕಾಯಿದೆ ೧೯೮೨ರಲ್ಲಿ ಮುಕ್ತಾಯವಾಯಿತು, ಇದು ಯುನೈಟೆಡ್ ಕಿಂಗ್‌ಡಮ್‌ನ ಸಂಸತ್ತಿನ ಮೇಲಿನ ಕಾನೂನು ಅವಲಂಬನೆಯ ಕುರುಹುಗಳನ್ನು ಕಡಿದುಹಾಕಿತು. ಕೆನಡಾ ವೆಸ್ಟ್‌ಮಿನಿಸ್ಟರ್ ಸಂಪ್ರದಾಯದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ರಾಜಪ್ರಭುತ್ವವಾಗಿದೆ. ದೇಶದ ಸರ್ಕಾರದ ಮುಖ್ಯಸ್ಥರು ಪ್ರಧಾನ ಮಂತ್ರಿಯಾಗಿದ್ದು, ಅವರು ಚುನಾಯಿತ ಹೌಸ್ ಆಫ್ ಕಾಮನ್ಸ್‌ನ ವಿಶ್ವಾಸವನ್ನು ವಹಿಸುವ ಸಾಮರ್ಥ್ಯದ ಮೂಲಕ ಅಧಿಕಾರವನ್ನು ಹೊಂದಿದ್ದಾರೆ ಮತ್ತು ಕೆನಡಾದ ರಾಜನನ್ನು ಪ್ರತಿನಿಧಿಸುವ ಗವರ್ನರ್ ಜನರಲ್‌ನಿಂದ "ಕರೆಯಲ್ಪಡುತ್ತಾರೆ". ದೇಶವು ಕಾಮನ್‌ವೆಲ್ತ್ ಕ್ಷೇತ್ರವಾಗಿದೆ ಮತ್ತು ಫೆಡರಲ್ ನ್ಯಾಯವ್ಯಾಪ್ತಿಯಲ್ಲಿ ಅಧಿಕೃತವಾಗಿ ದ್ವಿಭಾಷಾ (ಇಂಗ್ಲಿಷ್ ಮತ್ತು ಫ್ರೆಂಚ್) ಆಗಿದೆ. ಸರ್ಕಾರದ ಪಾರದರ್ಶಕತೆ, ಜೀವನದ ಗುಣಮಟ್ಟ, ಆರ್ಥಿಕ ಸ್ಪರ್ಧಾತ್ಮಕತೆ, ನಾವೀನ್ಯತೆ, ಶಿಕ್ಷಣ ಮತ್ತು ಲಿಂಗ ಸಮಾನತೆಯ ಅಂತರಾಷ್ಟ್ರೀಯ ಮಾಪನಗಳಲ್ಲಿ ಇದು ಅತ್ಯಂತ ಉನ್ನತ ಸ್ಥಾನವನ್ನು ಹೊಂದಿದೆ. ಇದು ಪ್ರಪಂಚದ ಅತ್ಯಂತ ಜನಾಂಗೀಯವಾಗಿ ವೈವಿಧ್ಯಮಯ ಮತ್ತು ಬಹುಸಂಸ್ಕೃತಿಯ ರಾಷ್ಟ್ರಗಳಲ್ಲಿ ಒಂದಾಗಿದೆ, ದೊಡ್ಡ ಪ್ರಮಾಣದ ವಲಸೆಯ ಉತ್ಪನ್ನವಾಗಿದೆ. ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ಕೆನಡಾದ ದೀರ್ಘ ಮತ್ತು ಸಂಕೀರ್ಣ ಸಂಬಂಧವು ಅದರ ಇತಿಹಾಸ, ಆರ್ಥಿಕತೆ ಮತ್ತು ಸಂಸ್ಕೃತಿಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಕೆನಡಾ ಜಾಗತಿಕವಾಗಿ ಅತ್ಯಧಿಕ ನಾಮಮಾತ್ರ ತಲಾ ಆದಾಯವನ್ನು ಹೊಂದಿದೆ ಮತ್ತು ಅದರ ಮುಂದುವರಿದ ಆರ್ಥಿಕತೆಯು ಪ್ರಪಂಚದಲ್ಲೇ ಅತಿ ದೊಡ್ಡದಾಗಿದೆ, ಮುಖ್ಯವಾಗಿ ಅದರ ಹೇರಳವಾದ ನೈಸರ್ಗಿಕ ಸಂಪನ್ಮೂಲಗಳು ಮತ್ತು ಉತ್ತಮವಾಗಿ ಅಭಿವೃದ್ಧಿ ಹೊಂದಿದ ಅಂತರರಾಷ್ಟ್ರೀಯ ವ್ಯಾಪಾರ ಜಾಲಗಳ ಮೇಲೆ ಅವಲಂಬಿತವಾಗಿದೆ. ಬಹುಪಕ್ಷೀಯ ಪರಿಹಾರಗಳನ್ನು ಅನುಸರಿಸುವ ಪ್ರವೃತ್ತಿಯೊಂದಿಗೆ ಕೆನಡಾವು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ತನ್ನ ಪಾತ್ರಕ್ಕಾಗಿ ಮಧ್ಯಮ ಶಕ್ತಿಯಾಗಿ ಗುರುತಿಸಲ್ಪಟ್ಟಿದೆ. ೨೦ನೇ ಶತಮಾನದಲ್ಲಿ ಕೆನಡಾದ ಶಾಂತಿಪಾಲನಾ ಪಾತ್ರವು ಅದರ ಜಾಗತಿಕ ಚಿತ್ರದ ಮೇಲೆ ಗಮನಾರ್ಹ ಪ್ರಭಾವ ಬೀರಿದೆ. ಕೆನಡಾವು ಬಹು ಪ್ರಮುಖ ಅಂತಾರಾಷ್ಟ್ರೀಯ ಮತ್ತು ಅಂತರ ಸರ್ಕಾರಿ ಸಂಸ್ಥೆಗಳ ಭಾಗವಾಗಿದೆ. ವ್ಯುತ್ಪತ್ತಿ ಕೆನಡಾದ ವ್ಯುತ್ಪತ್ತಿಯ ಮೂಲಕ್ಕೆ ವಿವಿಧ ಸಿದ್ಧಾಂತಗಳನ್ನು ಪ್ರತಿಪಾದಿಸಲಾಗಿದ್ದರೂ, ಈ ಹೆಸರನ್ನು ಈಗ ಸೇಂಟ್ ಲಾರೆನ್ಸ್ ಇರೊಕ್ವೊಯಿಯನ್ ಪದ ಕನಾಟಾದಿಂದ ಬಂದಿದೆ ಎಂದು ಒಪ್ಪಿಕೊಳ್ಳಲಾಗಿದೆ, ಇದರರ್ಥ "ಗ್ರಾಮ" ಅಥವಾ "ವಸತಿ". ೧೫೩೫ರಲ್ಲಿ, ಇಂದಿನ ಕ್ವಿಬೆಕ್ ನಗರ ಪ್ರದೇಶದ ಸ್ಥಳೀಯ ನಿವಾಸಿಗಳು ಫ್ರೆಂಚ್ ಪರಿಶೋಧಕ ಜಾಕ್ವೆಸ್ ಕಾರ್ಟಿಯರ್ ಅನ್ನು ಸ್ಟಾಡಕೋನಾ ಗ್ರಾಮಕ್ಕೆ ನಿರ್ದೇಶಿಸಲು ಈ ಪದವನ್ನು ಬಳಸಿದರು. ಕಾರ್ಟಿಯರ್ ನಂತರ ಕೆನಡಾ ಎಂಬ ಪದವನ್ನು ನಿರ್ದಿಷ್ಟ ಗ್ರಾಮಕ್ಕೆ ಮಾತ್ರವಲ್ಲದೆ ಡೊನ್ನಾಕೋನಾಗೆ ಒಳಪಟ್ಟಿರುವ ಸಂಪೂರ್ಣ ಪ್ರದೇಶವನ್ನು ಉಲ್ಲೇಖಿಸಲು ಬಳಸಿದರು (ಸ್ಟಾಡಕೋನಾದಲ್ಲಿ ಮುಖ್ಯಸ್ಥ); ೧೫೪೫ರ ಹೊತ್ತಿಗೆ, ಯುರೋಪಿಯನ್ ಪುಸ್ತಕಗಳು ಮತ್ತು ನಕ್ಷೆಗಳು ಸೇಂಟ್ ಲಾರೆನ್ಸ್ ಉದ್ದಕ್ಕೂ ಈ ಸಣ್ಣ ಪ್ರದೇಶವನ್ನು ಉಲ್ಲೇಖಿಸಲು ಪ್ರಾರಂಭಿಸಿದರು. ೧೬ ರಿಂದ ೧೮ನೇ ಶತಮಾನದ ಆರಂಭದವರೆಗೆ, "ಕೆನಡಾ" ಸೇಂಟ್ ಲಾರೆನ್ಸ್ ನದಿಯ ಉದ್ದಕ್ಕೂ ಇರುವ ನ್ಯೂ ಫ್ರಾನ್ಸ್‌ನ ಭಾಗವನ್ನು ಉಲ್ಲೇಖಿಸುತ್ತದೆ. ೧೭೯೧ ರಲ್ಲಿ, ಈ ಪ್ರದೇಶವು ಅಪ್ಪರ್ ಕೆನಡಾ ಮತ್ತು ಲೋವರ್ ಕೆನಡಾ ಎಂಬ ಎರಡು ಬ್ರಿಟಿಷ್ ವಸಾಹತುಗಳಾಗಿ ಮಾರ್ಪಟ್ಟಿತು. ಈ ಎರಡು ವಸಾಹತುಗಳನ್ನು ೧೮೪೧ ರಲ್ಲಿ ಕೆನಡಾದ ಬ್ರಿಟಿಷ್ ಪ್ರಾವಿನ್ಸ್ ಆಗಿ ಒಕ್ಕೂಟದವರೆಗೆ ಕೆನಡಾಸ್ ಎಂದು ಹೆಸರಿಸಲಾಯಿತು. ೧೮೬೭ರ ಒಕ್ಕೂಟದ ನಂತರ, ಲಂಡನ್ ಸಮ್ಮೇಳನದಲ್ಲಿ ಕೆನಡಾವನ್ನು ಹೊಸ ದೇಶಕ್ಕೆ ಕಾನೂನು ಹೆಸರಾಗಿ ಸ್ವೀಕರಿಸಲಾಯಿತು ಮತ್ತು ಡೊಮಿನಿಯನ್ ಪದವನ್ನು ದೇಶದ ಶೀರ್ಷಿಕೆಯಾಗಿ ನೀಡಲಾಯಿತು. ೧೯೫೦ರ ಹೊತ್ತಿಗೆ, ಕೆನಡಾದ ಡೊಮಿನಿಯನ್ ಪದವನ್ನು ಯುನೈಟೆಡ್ ಕಿಂಗ್‌ಡಮ್ ಬಳಸಲಿಲ್ಲ, ಇದು ಕೆನಡಾವನ್ನು "ಕಾಮನ್‌ವೆಲ್ತ್ ಸಾಮ್ರಾಜ್ಯ" ಎಂದು ಪರಿಗಣಿಸಿತು. ಕೆನಡಾ ಕಾಯಿದೆ ೧೯೮೨, ಕೆನಡಾದ ಸಂವಿಧಾನವನ್ನು ಸಂಪೂರ್ಣವಾಗಿ ಕೆನಡಾದ ನಿಯಂತ್ರಣಕ್ಕೆ ತಂದಿತು, ಕೆನಡಾವನ್ನು ಮಾತ್ರ ಉಲ್ಲೇಖಿಸಲಾಗಿದೆ. ಅದೇ ವರ್ಷದ ನಂತರ, ರಾಷ್ಟ್ರೀಯ ರಜಾದಿನದ ಹೆಸರನ್ನು ಡೊಮಿನಿಯನ್ ಡೇಯಿಂದ ಕೆನಡಾ ಡೇ ಎಂದು ಬದಲಾಯಿಸಲಾಯಿತು. ಫೆಡರಲ್ ಸರ್ಕಾರವನ್ನು ಪ್ರಾಂತ್ಯಗಳಿಂದ ಪ್ರತ್ಯೇಕಿಸಲು ಡೊಮಿನಿಯನ್ ಪದವನ್ನು ಬಳಸಲಾಯಿತು, ಆದರೂ ಎರಡನೆಯ ಮಹಾಯುದ್ಧದ ನಂತರ ಫೆಡರಲ್ ಪದವು ಡೊಮಿನಿಯನ್ ಅನ್ನು ಬದಲಿಸಿತು. ಕೆನಡದ ಇತಿಹಾಸ ಸ್ಥಳೀಯ ಜನರು ಇಂದಿನ ಕೆನಡಾದಲ್ಲಿರುವ ಸ್ಥಳೀಯ ಜನರು ಫಸ್ಟ್ ನೇಷನ್ಸ್, ಇನ್ಯೂಟ್ ಮತ್ತು ಮೆಟಿಸ್, ಮಿಶ್ರ ಸಂತತಿಯ ಕೊನೆಯ ಜೀವಿಯಾಗಿದ್ದು, ಅವರು ೧೭ ನೇ ಶತಮಾನದ ಮಧ್ಯದಲ್ಲಿ ಮೊದಲ ರಾಷ್ಟ್ರಗಳ ಜನರು ಯುರೋಪಿಯನ್ ವಸಾಹತುಗಾರರನ್ನು ವಿವಾಹವಾದಾಗ ಮತ್ತು ನಂತರ ತಮ್ಮದೇ ಆದ ಗುರುತನ್ನು ಅಭಿವೃದ್ಧಿಪಡಿಸಿದರು. ಉತ್ತರ ಅಮೆರಿಕಾದ ಮೊದಲ ನಿವಾಸಿಗಳು ಸಾಮಾನ್ಯವಾಗಿ ಸೈಬೀರಿಯಾದಿಂದ ಬೇರಿಂಗ್ ಲ್ಯಾಂಡ್ ಬ್ರಿಡ್ಜ್ ಮೂಲಕ ವಲಸೆ ಬಂದಿದ್ದಾರೆ ಮತ್ತು ಕನಿಷ್ಠ ೧೪೦೦೦ ವರ್ಷಗಳ ಹಿಂದೆ ಆಗಮಿಸಿದ್ದಾರೆ ಎಂದು ಊಹಿಸಲಾಗಿದೆ. ಓಲ್ಡ್ ಕ್ರೌ ಫ್ಲಾಟ್ಸ್ ಮತ್ತು ಬ್ಲೂಫಿಶ್ ಗುಹೆಗಳಲ್ಲಿರುವ ಪ್ಯಾಲಿಯೊ-ಇಂಡಿಯನ್ ಪುರಾತತ್ತ್ವ ಶಾಸ್ತ್ರದ ಸ್ಥಳಗಳು ಕೆನಡಾದಲ್ಲಿ ಮಾನವ ವಾಸಸ್ಥಾನದ ಎರಡು ಹಳೆಯ ತಾಣಗಳಾಗಿವೆ. ಸ್ಥಳೀಯ ಸಮಾಜಗಳ ಗುಣಲಕ್ಷಣಗಳಲ್ಲಿ ಶಾಶ್ವತ ವಸಾಹತುಗಳು, ಕೃಷಿ, ಸಂಕೀರ್ಣ ಸಾಮಾಜಿಕ ಶ್ರೇಣಿಗಳು ಮತ್ತು ವ್ಯಾಪಾರ ಜಾಲಗಳು ಸೇರಿವೆ. ಯುರೋಪಿಯನ್ ಪರಿಶೋಧಕರು ೧೫ನೇ ಶತಮಾನದ ಕೊನೆಯಲ್ಲಿ ಮತ್ತು ೧೬ನೇ ಶತಮಾನದ ಆರಂಭದಲ್ಲಿ ಆಗಮಿಸುವ ವೇಳೆಗೆ ಈ ಕೆಲವು ಸಂಸ್ಕೃತಿಗಳು ಕುಸಿದಿದ್ದವು ಮತ್ತು ಪುರಾತತ್ತ್ವ ಶಾಸ್ತ್ರದ ತನಿಖೆಗಳ ಮೂಲಕ ಮಾತ್ರ ಕಂಡುಹಿಡಿಯಲಾಯಿತು. ಮೊದಲ ಯುರೋಪಿಯನ್ ವಸಾಹತುಗಳ ಸಮಯದಲ್ಲಿ ಸ್ಥಳೀಯ ಜನಸಂಖ್ಯೆಯು ೨೦೦೦೦೦ ಮತ್ತು ಎರಡು ಮಿಲಿಯನ್ ಎಂದು ಅಂದಾಜಿಸಲಾಗಿದೆ, ಜೊತೆಗೆ ೫೦೦೦೦೦ ಅಂಕಿಅಂಶಗಳನ್ನು ಕೆನಡಾದ ರಾಯಲ್ ಕಮಿಷನ್ ಆನ್ ಅಬೊರಿಜಿನಲ್ ಪೀಪಲ್ಸ್ ಒಪ್ಪಿಕೊಂಡಿದೆ. ಯುರೋಪಿಯನ್ ವಸಾಹತುಶಾಹಿಯ ಪರಿಣಾಮವಾಗಿ, ಸ್ಥಳೀಯ ಜನಸಂಖ್ಯೆಯು ನಲವತ್ತರಿಂದ ಎಂಬತ್ತು ಪ್ರತಿಶತದಷ್ಟು ಕುಸಿಯಿತು ಮತ್ತು ಬೆಯೋತುಕ್‌ನಂತಹ ಹಲವಾರು ಮೊದಲ ರಾಷ್ಟ್ರಗಳು ಕಣ್ಮರೆಯಾದವು. ಯುರೋಪಿನ ಕಾಯಿಲೆಗಳಾದ ಇನ್ಫ್ಲುಯೆನ್ಸ, ದಡಾರ ಮತ್ತು ಸಿಡುಬುಗಳ ವರ್ಗಾವಣೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಅವನತಿಗೆ ಕಾರಣವಾಗಿದೆ, ಅವುಗಳಿಗೆ ನೈಸರ್ಗಿಕ ವಿನಾಯಿತಿ ಇರಲಿಲ್ಲ, ತುಪ್ಪಳ ವ್ಯಾಪಾರದ ಮೇಲಿನ ಘರ್ಷಣೆಗಳು, ವಸಾಹತುಶಾಹಿ ಅಧಿಕಾರಿಗಳೊಂದಿಗಿನ ಘರ್ಷಣೆಗಳು ಮತ್ತು ವಸಾಹತುಗಾರರು, ಮತ್ತು ವಸಾಹತುಗಾರರಿಗೆ ಸ್ಥಳೀಯ ಭೂಮಿಯನ್ನು ಕಳೆದುಕೊಳ್ಳುವುದು ಮತ್ತು ಹಲವಾರು ರಾಷ್ಟ್ರಗಳ ಸ್ವಾವಲಂಬನೆಯ ನಂತರದ ಕುಸಿತ. ಸಂಘರ್ಷವಿಲ್ಲದೆ ಇಲ್ಲದಿದ್ದರೂ, ಫಸ್ಟ್ ನೇಷನ್ಸ್ ಮತ್ತು ಇನ್ಯೂಟ್ ಜನಸಂಖ್ಯೆಯೊಂದಿಗೆ ಯುರೋಪಿಯನ್ ಕೆನಡಿಯನ್ನರ ಆರಂಭಿಕ ಸಂವಹನಗಳು ತುಲನಾತ್ಮಕವಾಗಿ ಶಾಂತಿಯುತವಾಗಿದ್ದವು. ಮೊದಲ ರಾಷ್ಟ್ರಗಳು ಮತ್ತು ಮೆಟಿಸ್ ಜನರು ಕೆನಡಾದಲ್ಲಿ ಯುರೋಪಿಯನ್ ವಸಾಹತುಗಳ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು, ವಿಶೇಷವಾಗಿ ಉತ್ತರ ಅಮೆರಿಕಾದ ತುಪ್ಪಳ ವ್ಯಾಪಾರದ ಸಮಯದಲ್ಲಿ ಖಂಡದ ಅನ್ವೇಷಣೆಯಲ್ಲಿ ಯುರೋಪಿಯನ್ ಕೋರೆರ್ಸ್ ಡೆಸ್ ಬೋಯಿಸ್ ಮತ್ತು ವಾಯೇಜರ್‌ಗಳಿಗೆ ಸಹಾಯ ಮಾಡುವಲ್ಲಿ ಅವರ ಪಾತ್ರಕ್ಕಾಗಿ. ಮೊದಲ ರಾಷ್ಟ್ರಗಳೊಂದಿಗಿನ ಈ ಆರಂಭಿಕ ಯುರೋಪಿಯನ್ ಸಂವಾದಗಳು ಸ್ನೇಹ ಮತ್ತು ಶಾಂತಿ ಒಪ್ಪಂದಗಳಿಂದ ಒಪ್ಪಂದಗಳ ಮೂಲಕ ಸ್ಥಳೀಯ ಭೂಮಿಯನ್ನು ವಿಲೇವಾರಿ ಮಾಡಲು ಬದಲಾಗುತ್ತವೆ. ೧೮ನೇ ಶತಮಾನದ ಉತ್ತರಾರ್ಧದಿಂದ ಯುರೋಪಿಯನ್ ಕೆನಡಿಯನ್ನರು ಸ್ಥಳೀಯ ಜನರನ್ನು ಪಾಶ್ಚಿಮಾತ್ಯ ಕೆನಡಿಯನ್ ಸಮಾಜದಲ್ಲಿ ಸೇರಿಕೊಳ್ಳುವಂತೆ ಒತ್ತಾಯಿಸಿದರು. ಈ ಪ್ರಯತ್ನಗಳು ೧೯ನೇ ಶತಮಾನದ ಕೊನೆಯಲ್ಲಿ ಮತ್ತು ೨೦ನೇ ಶತಮಾನದ ಆರಂಭದಲ್ಲಿ ಬಲವಂತದ ಏಕೀಕರಣ, ಆರೋಗ್ಯ ರಕ್ಷಣೆಯ ಪ್ರತ್ಯೇಕತೆ, ಮತ್ತು ಸ್ಥಳಾಂತರದೊಂದಿಗೆ ಪರಾಕಾಷ್ಠೆಯನ್ನು ತಲುಪಿದವು. ೨೦೦೮ ರಲ್ಲಿ ಕೆನಡಾ ಸರ್ಕಾರವು ಕೆನಡಾದ ಸತ್ಯ ಮತ್ತು ಸಮನ್ವಯ ಆಯೋಗದ ರಚನೆಯೊಂದಿಗೆ ಪ್ರಾರಂಭವಾದ ಪರಿಹಾರದ ಅವಧಿಯು ನಡೆಯುತ್ತಿದೆ. ಇದು ಹಿಂದಿನ ವಸಾಹತುಶಾಹಿ ಅನ್ಯಾಯಗಳನ್ನು ಗುರುತಿಸುವುದು ಮತ್ತು ವಸಾಹತು ಒಪ್ಪಂದಗಳು ಮತ್ತು ಕಾಣೆಯಾದ ಮತ್ತು ಕೊಲೆಯಾದ ಸ್ಥಳೀಯ ಮಹಿಳೆಯರ ದುರವಸ್ಥೆಯನ್ನು ಪರಿಹರಿಸುವಂತಹ ಜನಾಂಗೀಯ ತಾರತಮ್ಯದ ಸಮಸ್ಯೆಗಳ ಸುಧಾರಣೆಯನ್ನು ಒಳಗೊಂಡಿದೆ. ಯುರೋಪಿಯನ್ ವಸಾಹತುಶಾಹಿ ಕೆನಡಾದ ಪೂರ್ವ ಕರಾವಳಿಯನ್ನು ಅನ್ವೇಷಿಸಿದ ಮೊದಲ ಯುರೋಪಿಯನ್ ನಾರ್ಸ್ ಪರಿಶೋಧಕ ಲೀಫ್ ಎರಿಕ್ಸನ್ ಎಂದು ನಂಬಲಾಗಿದೆ. ೧೪೯೭ರಲ್ಲಿ ಇಟಾಲಿಯನ್ ಸಮುದ್ರಯಾನರಾದ ಜಾನ್ ಕ್ಯಾಬಟ್ ಕೆನಡಾದ ಅಟ್ಲಾಂಟಿಕ್ ಕರಾವಳಿಯನ್ನು ಇಂಗ್ಲೆಂಡ್‌ನ ಕಿಂಗ್ ಹೆನ್ರಿ VII ಹೆಸರಿನಲ್ಲಿ ಪರಿಶೋಧಿಸಿ ಹಕ್ಕು ಸಾಧಿಸುವವರೆಗೂ ಯಾವುದೇ ಯುರೋಪಿಯನ್ ಪರಿಶೋಧನೆ ಸಂಭವಿಸಲಿಲ್ಲ. ೧೫೩೪ರಲ್ಲಿ, ಫ್ರೆಂಚ್ ಪರಿಶೋಧಕ ಜಾಕ್ವೆಸ್ ಕಾರ್ಟಿಯರ್ ಸೇಂಟ್ ಲಾರೆನ್ಸ್ ಕೊಲ್ಲಿಯನ್ನು ಪರಿಶೋಧಿಸಿದರು, ಅಲ್ಲಿ ಅವರು ಜುಲೈ ೨೪ರಂದು "ಫ್ರಾನ್ಸ್ ರಾಜನಿಗೆ ದೀರ್ಘಾಯುಷ್ಯ" ಎಂಬ ಪದಗಳನ್ನು ಹೊಂದಿರುವ ೧೦ಮೀ (33 ft) ಶಿಲುಬೆಯನ್ನು ನೆಟ್ಟರು ಮತ್ತು ಹೊಸ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡರು. ಕಿಂಗ್ ಫ್ರಾನ್ಸಿಸ್ I ರ ಹೆಸರಿನಲ್ಲಿ ಫ್ರಾನ್ಸ್. ೧೬ ನೇ ಶತಮಾನದ ಆರಂಭದಲ್ಲಿ, ಬಾಸ್ಕ್ ಮತ್ತು ಪೋರ್ಚುಗೀಸ್ ಮೂಲಕ ಪ್ರವರ್ತಕ ನೌಕಾಯಾನ ತಂತ್ರಗಳೊಂದಿಗೆ ಯುರೋಪಿಯನ್ ನಾವಿಕರು ಅಟ್ಲಾಂಟಿಕ್ ಕರಾವಳಿಯುದ್ದಕ್ಕೂ ಕಾಲೋಚಿತ ತಿಮಿಂಗಿಲ ಮತ್ತು ಮೀನುಗಾರಿಕೆ ಹೊರಠಾಣೆಗಳನ್ನು ಸ್ಥಾಪಿಸಿದರು. ಸಾಮಾನ್ಯವಾಗಿ, ಡಿಸ್ಕವರಿ ಯುಗದಲ್ಲಿನ ಆರಂಭಿಕ ವಸಾಹತುಗಳು ಕಠಿಣ ಹವಾಮಾನದ ಸಂಯೋಜನೆಯಿಂದಾಗಿ ಅಲ್ಪಕಾಲಿಕವಾಗಿ ಕಂಡುಬರುತ್ತವೆ, ನ್ಯಾವಿಗೇಟ್ ವ್ಯಾಪಾರ ಮಾರ್ಗಗಳ ಸಮಸ್ಯೆಗಳು ಮತ್ತು ಸ್ಕ್ಯಾಂಡಿನೇವಿಯಾದಲ್ಲಿ ಸ್ಪರ್ಧಾತ್ಮಕ ಉತ್ಪನ್ನಗಳಾಗಿವೆ. ೧೫೮೩ರಲ್ಲಿ, ಸರ್ ಹಂಫ್ರೆ ಗಿಲ್ಬರ್ಟ್, ರಾಣಿ ಎಲಿಜಬೆತ್ I ರ ರಾಯಲ್ ವಿಶೇಷಾಧಿಕಾರದಿಂದ, ಸೇಂಟ್ ಜಾನ್ಸ್, ನ್ಯೂಫೌಂಡ್ಲ್ಯಾಂಡ್ ಅನ್ನು ಮೊದಲ ಉತ್ತರ ಅಮೆರಿಕಾದ ಇಂಗ್ಲಿಷ್ ಕಾಲೋಚಿತ ಶಿಬಿರವಾಗಿ ಸ್ಥಾಪಿಸಿದರು. ೧೬೦೦ರಲ್ಲಿ, ಫ್ರೆಂಚರು ತಮ್ಮ ಮೊದಲ ಕಾಲೋಚಿತ ವ್ಯಾಪಾರದ ಪೋಸ್ಟ್ ಅನ್ನು ಸೇಂಟ್ ಲಾರೆನ್ಸ್‌ನ ಉದ್ದಕ್ಕೂ ಟಾಡೋಸ್ಸಾಕ್‌ನಲ್ಲಿ ಸ್ಥಾಪಿಸಿದರು. ಫ್ರೆಂಚ್ ಪರಿಶೋಧಕ ಸ್ಯಾಮ್ಯುಯೆಲ್ ಡಿ ಚಾಂಪ್ಲೈನ್ ೧೬೦೩ ರಲ್ಲಿ ಆಗಮಿಸಿದರು ಮತ್ತು ಪೋರ್ಟ್ ರಾಯಲ್ (೧೬೦೫ ರಲ್ಲಿ) ಮತ್ತು ಕ್ವಿಬೆಕ್ ಸಿಟಿಯಲ್ಲಿ (೧೬೦೮ ರಲ್ಲಿ) ಮೊದಲ ಶಾಶ್ವತ ಯುರೋಪಿಯನ್ ವಸಾಹತುಗಳನ್ನು ಸ್ಥಾಪಿಸಿದರು. ನ್ಯೂ ಫ್ರಾನ್ಸ್‌ನ ವಸಾಹತುಗಾರರ ಪೈಕಿ, ಕೆನಡಿಯನ್ನರು ಸೇಂಟ್ ಲಾರೆನ್ಸ್ ನದಿಯ ಕಣಿವೆಯಲ್ಲಿ ವ್ಯಾಪಕವಾಗಿ ನೆಲೆಸಿದರು ಮತ್ತು ಅಕಾಡಿಯನ್ನರು ಇಂದಿನ ಕಡಲತೀರದಲ್ಲಿ ನೆಲೆಸಿದರು, ಆದರೆ ತುಪ್ಪಳ ವ್ಯಾಪಾರಿಗಳು ಮತ್ತು ಕ್ಯಾಥೊಲಿಕ್ ಮಿಷನರಿಗಳು ಗ್ರೇಟ್ ಲೇಕ್ಸ್, ಹಡ್ಸನ್ ಬೇ ಮತ್ತು ಮಿಸ್ಸಿಸ್ಸಿಪ್ಪಿ ಜಲಾನಯನ ಪ್ರದೇಶವನ್ನು ಲೂಯಿಸಿಯಾನಕ್ಕೆ ಪರಿಶೋಧಿಸಿದರು. ಉತ್ತರ ಅಮೆರಿಕಾದ ತುಪ್ಪಳ ವ್ಯಾಪಾರದ ನಿಯಂತ್ರಣದ ಮೇಲೆ ೧೭ ನೇ ಶತಮಾನದ ಮಧ್ಯಭಾಗದಲ್ಲಿ ಬೀವರ್ ವಾರ್ಸ್ ಪ್ರಾರಂಭವಾಯಿತು. ೧೬೧೦ರಲ್ಲಿ ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ಇಂಗ್ಲಿಷರು ದಕ್ಷಿಣಕ್ಕೆ ಹದಿಮೂರು ವಸಾಹತುಗಳ ವಸಾಹತುಗಳೊಂದಿಗೆ ಹೆಚ್ಚುವರಿ ನೆಲೆಗಳನ್ನು ಸ್ಥಾಪಿಸಿದರು. ೧೬೮೯ ಮತ್ತು ೧೭೬೩ ರ ನಡುವೆ ವಸಾಹತುಶಾಹಿ ಉತ್ತರ ಅಮೆರಿಕಾದಲ್ಲಿ ನಾಲ್ಕು ಯುದ್ಧಗಳ ಸರಣಿ ಸ್ಫೋಟಗೊಂಡಿತು; ಆ ಅವಧಿಯ ನಂತರದ ಯುದ್ಧಗಳು ಏಳು ವರ್ಷಗಳ ಯುದ್ಧದ ಉತ್ತರ ಅಮೆರಿಕಾದ ರಂಗಭೂಮಿಯನ್ನು ರೂಪಿಸಿದವು. ಮೇನ್‌ಲ್ಯಾಂಡ್ ನೋವಾ ಸ್ಕಾಟಿಯಾ ೧೭೧೩ ರ ಉಟ್ರೆಕ್ಟ್ ಮತ್ತು ಕೆನಡಾ ಒಪ್ಪಂದದೊಂದಿಗೆ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತು ಮತ್ತು ಏಳು ವರ್ಷಗಳ ಯುದ್ಧದ ನಂತರ ೧೭೬೩ ರಲ್ಲಿ ಹೆಚ್ಚಿನ ನ್ಯೂ ಫ್ರಾನ್ಸ್ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತು. ಬ್ರಿಟಿಷ್ ಉತ್ತರ ಅಮೇರಿಕಾ ೧೭೬೩ರ ರಾಯಲ್ ಘೋಷಣೆಯು ಮೊದಲ ರಾಷ್ಟ್ರದ ಒಪ್ಪಂದದ ಹಕ್ಕುಗಳನ್ನು ಸ್ಥಾಪಿಸಿತು, ನ್ಯೂ ಫ್ರಾನ್ಸ್‌ನಿಂದ ಕ್ವಿಬೆಕ್ ಪ್ರಾಂತ್ಯವನ್ನು ರಚಿಸಿತು ಮತ್ತು ಕೇಪ್ ಬ್ರೆಟನ್ ದ್ವೀಪವನ್ನು ನೋವಾ ಸ್ಕಾಟಿಯಾಕ್ಕೆ ಸೇರಿಸಿತು. ಸೇಂಟ್ ಜಾನ್ಸ್ ದ್ವೀಪ (ಈಗ ಪ್ರಿನ್ಸ್ ಎಡ್ವರ್ಡ್ ದ್ವೀಪ) ೧೭೬೯ರಲ್ಲಿ ಪ್ರತ್ಯೇಕ ವಸಾಹತುವಾಯಿತು. ಕ್ವಿಬೆಕ್‌ನಲ್ಲಿನ ಸಂಘರ್ಷವನ್ನು ತಪ್ಪಿಸಲು, ಬ್ರಿಟಿಷ್ ಸಂಸತ್ತು ಕ್ವಿಬೆಕ್ ಕಾಯಿದೆ ೧೭೭೪ ಅನ್ನು ಅಂಗೀಕರಿಸಿತು, ಕ್ವಿಬೆಕ್‌ನ ಪ್ರದೇಶವನ್ನು ಗ್ರೇಟ್ ಲೇಕ್ಸ್ ಮತ್ತು ಓಹಿಯೋ ಕಣಿವೆಗೆ ವಿಸ್ತರಿಸಿತು. ಹೆಚ್ಚು ಮುಖ್ಯವಾಗಿ, ಹದಿಮೂರು ವಸಾಹತುಗಳು ಬ್ರಿಟಿಷ್ ಆಡಳಿತದ ವಿರುದ್ಧ ಹೆಚ್ಚು ಆಂದೋಲನ ನಡೆಸುತ್ತಿದ್ದ ಸಮಯದಲ್ಲಿ ಕ್ವಿಬೆಕ್ ಕಾಯಿದೆಯು ಕ್ವಿಬೆಕ್‌ಗೆ ವಿಶೇಷ ಸ್ವಾಯತ್ತತೆ ಮತ್ತು ಸ್ವ-ಆಡಳಿತದ ಹಕ್ಕುಗಳನ್ನು ನೀಡಿತು. ಇದು ಹದಿಮೂರು ವಸಾಹತುಗಳಿಗೆ ವ್ಯತಿರಿಕ್ತವಾಗಿ ಸ್ವಾತಂತ್ರ್ಯ ಚಳುವಳಿಯ ಬೆಳವಣಿಗೆಯನ್ನು ತಡೆಯುವ ಮೂಲಕ ಫ್ರೆಂಚ್ ಭಾಷೆ, ಕ್ಯಾಥೋಲಿಕ್ ನಂಬಿಕೆ ಮತ್ತು ಫ್ರೆಂಚ್ ನಾಗರಿಕ ಕಾನೂನನ್ನು ಪುನಃ ಸ್ಥಾಪಿಸಿತು. ಘೋಷಣೆ ಮತ್ತು ಕ್ವಿಬೆಕ್ ಕಾಯಿದೆಯು ಹದಿಮೂರು ವಸಾಹತುಗಳ ಅನೇಕ ನಿವಾಸಿಗಳನ್ನು ಕೆರಳಿಸಿತು, ಅಮೆರಿಕನ್ ಕ್ರಾಂತಿಯ ಹಿಂದಿನ ವರ್ಷಗಳಲ್ಲಿ ಬ್ರಿಟಿಷ್ ವಿರೋಧಿ ಭಾವನೆಯನ್ನು ಮತ್ತಷ್ಟು ಹೆಚ್ಚಿಸಿತು. ಯಶಸ್ವಿ ಅಮೇರಿಕನ್ ವಾರ್ ಆಫ್ ಇಂಡಿಪೆಂಡೆನ್ಸ್ ನಂತರ, ೧೭೮೩ ರ ಪ್ಯಾರಿಸ್ ಒಪ್ಪಂದವು ಹೊಸದಾಗಿ ರೂಪುಗೊಂಡ ಯುನೈಟೆಡ್ ಸ್ಟೇಟ್ಸ್ನ ಸ್ವಾತಂತ್ರ್ಯವನ್ನು ಗುರುತಿಸಿತು ಮತ್ತು ಶಾಂತಿಯ ನಿಯಮಗಳನ್ನು ನಿಗದಿಪಡಿಸಿತು, ಗ್ರೇಟ್ ಲೇಕ್ಸ್ನ ದಕ್ಷಿಣಕ್ಕೆ ಮತ್ತು ಮಿಸ್ಸಿಸ್ಸಿಪ್ಪಿ ನದಿಯ ಪೂರ್ವಕ್ಕೆ ಬ್ರಿಟಿಷ್ ಉತ್ತರ ಅಮೆರಿಕಾದ ಪ್ರದೇಶಗಳನ್ನು ಹೊಸ ದೇಶಕ್ಕೆ ಬಿಟ್ಟುಕೊಟ್ಟಿತು. ಅಮೆರಿಕಾದ ಸ್ವಾತಂತ್ರ್ಯದ ಯುದ್ಧವು ಅಮೆರಿಕದ ಸ್ವಾತಂತ್ರ್ಯದ ವಿರುದ್ಧ ಹೋರಾಡಿದ ವಸಾಹತುಗಾರರ ದೊಡ್ಡ ವಲಸೆಗೆ ಕಾರಣವಾಯಿತು. ಅನೇಕರು ಕೆನಡಾಕ್ಕೆ, ವಿಶೇಷವಾಗಿ ಅಟ್ಲಾಂಟಿಕ್ ಕೆನಡಾಕ್ಕೆ ತೆರಳಿದರು, ಅಲ್ಲಿ ಅವರ ಆಗಮನವು ಅಸ್ತಿತ್ವದಲ್ಲಿರುವ ಪ್ರದೇಶಗಳ ಜನಸಂಖ್ಯಾ ವಿತರಣೆಯನ್ನು ಬದಲಾಯಿಸಿತು. ನ್ಯೂ ಬ್ರನ್ಸ್‌ವಿಕ್‌ ಅನ್ನು ಮೆರಿಟೈಮ್ಸ್‌ನಲ್ಲಿನ ನಿಷ್ಠಾವಂತ ವಸಾಹತುಗಳ ಮರುಸಂಘಟನೆಯ ಭಾಗವಾಗಿ ನೋವಾ ಸ್ಕಾಟಿಯಾದಿಂದ ವಿಭಜಿಸಲಾಯಿತು, ಇದು ಸೇಂಟ್ ಜಾನ್, ನ್ಯೂ ಬ್ರನ್ಸ್‌ವಿಕ್ ಅನ್ನು ಕೆನಡಾದ ಮೊದಲ ನಗರವಾಗಿ ಸಂಯೋಜಿಸಲು ಕಾರಣವಾಯಿತು. ಮಧ್ಯ ಕೆನಡಾದಲ್ಲಿ ಇಂಗ್ಲಿಷ್-ಮಾತನಾಡುವ ನಿಷ್ಠಾವಂತರ ಒಳಹರಿವನ್ನು ಸರಿಹೊಂದಿಸಲು, ೧೭೯೧ರ ಸಾಂವಿಧಾನಿಕ ಕಾಯಿದೆಯು ಕೆನಡಾ ಪ್ರಾಂತ್ಯವನ್ನು ಫ್ರೆಂಚ್-ಮಾತನಾಡುವ ಲೋವರ್ ಕೆನಡಾ (ನಂತರ ಕ್ವಿಬೆಕ್) ಮತ್ತು ಇಂಗ್ಲಿಷ್-ಮಾತನಾಡುವ ಅಪ್ಪರ್ ಕೆನಡಾ (ನಂತರ ಒಂಟಾರಿಯೊ) ಎಂದು ವಿಂಗಡಿಸಿತು, ಪ್ರತಿಯೊಂದಕ್ಕೂ ತನ್ನದೇ ಆದ ಚುನಾಯಿತ ಶಾಸಕಾಂಗವನ್ನು ನೀಡಿತು. ಕೆನಡದ ಚರಿತ್ರೆ ೧೫ ನೆಯ ಶತಮಾನದಿಂದ, ಅಂದರೆ ಐರೋಪ್ಯರ ನೌಕಾಯಾನ ಸಾಹಸದ ಸುವರ್ಣಯುಗದಿಂದ ಪ್ರಾರಂಭವಾಗುತ್ತದೆ. ಪೌರಸ್ತ್ಯ ದೇಶಗಳಿಗೆ ಸಮುದ್ರಮಾರ್ಗ ಕಂಡುಹಿಡಿಯಲು ಸ್ಪೇನ್, ಪೋರ್ಚುಗಲ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಪ್ರಯತ್ನಿಸಿದುವು. ಈ ಪ್ರಯತ್ನದ ಫಲವಾಗಿ ಸ್ಪೇನ್ ದೇಶ ಕ್ಯಾರಿಬೀಯನ್ ಮತ್ತು ಮಧ್ಯ ಅಮೆರಿಕ ಪ್ರದೇಶಗಳಲ್ಲಿ ತನ್ನ ವಸಾಹತುಗಳನ್ನು ಸ್ಥಾಪಿಸಿ, ಸೈನ್ಯಬಲದಿಂದ ವಿದೇಶೀಯರ ಪ್ರವೇಶವನ್ನು ತಡೆಗಟ್ಟಿತು. ಇಂಗ್ಲೆಂಡಿನ ದೊರೆ ೭ ನೆಯ ಹೆನ್ರಿಯ ಕಾಲದಲ್ಲಿ (೧೪೯೭) ಜಾನ್ ಕ್ಯಾಬಟ್ ಬ್ರಿಸ್ಟಲ್‍ನಿಂದ ಪ್ರಯಾಣ ಮಾಡಿ ಕೆನಡದ ತೀರವನ್ನು ತಲುಪಿ, ಅಲ್ಲಿಯ ನ್ಯೂ ಫೌಂಡ್‍ಲೆಂಡ್ ೭ ನೆಯ ಹೆನ್ರಿಗೆ ಸೇರಿದ್ದೆಂದು ಘೋಷಿಸಿದ. ೧೫೩೪ ರಲ್ಲಿ ಫ್ರಾನ್ಸಿನ ಅರಸ ಒಂದನೆಯ ಫ್ರಾನ್ಸಿಸ್ ಕಳುಹಿಸಿದ ನೌಕಾಯಾತ್ರೆ ಜಾಕ್ವಿಸ್ ಕಾಟ್ರ್ಯೇನ್ ನೇತೃತ್ವದಲ್ಲಿ ಸೇಂಟ್ ಲಾರೆನ್ಸ್ ಕೊಲ್ಲಿ ಪ್ರವೇಶಿಸಿತು. ಅನಂತರ ಗ್ಯಾಸ್ಟ್ ಪರ್ಯಾಯ ದ್ವೀಪ ೧ ನೆಯ ಫ್ರಾನ್ಸಿಸನಿಗೆ ಸೇರಿದ್ದೆಂದು ಘೋಷಿತವಾಯಿತು. ಮರುವರ್ಷ ಕಾಟ್ರ್ಯೆರ್ ಮಾಂಟ್ರಿಯಾಲ್ ವರೆಗೆ ನೌಕಾಯಾನ ಮಾಡಿದ. ೧೭ ನೆಯ ಶತಮಾನದ ಪ್ರಾರಂಭದಲ್ಲಿ ಫ್ರಾನ್ಸಿನ ದೊರೆ ೪ ನೆಯ ಹೆನ್ರಿ ಕೆನಡದ ಬಗ್ಗೆ ಆಸಕ್ತಿ ವಹಿಸಿದ. ಆದ್ದರಿಂದ ಅದರ ಇತಿಹಾಸದ ಹೊಸ ಅಧ್ಯಾಯವೊಂದು ಪ್ರಾರಂಭವಾಯಿತು. ೧೬೦೮ ರಲ್ಲಿ ಸ್ಯಾಮುಯಲ್ ಡಿ ಚಾಂಪ್ಲೆನ್ ಸೇಂಟ್ ಲಾರೆನ್ಸ್ ಕಣಿವೆಯಲ್ಲಿಯ ಕ್ವಿಬೆಕ್ ಪ್ರದೇಶವನ್ನು ಫ್ರಾನ್ಸಿನ ವಸಾಹತನ್ನಾಗಿಸಿ ಅದರ ರಕ್ಷಣೆಗಾಗಿ ಕೋಟೆಕೊತ್ತಳಗಳನ್ನು ನಿರ್ಮಿಸಿದ. ಅನಂತರ ವೆಸ್ಟ್ ಇಂಡೀಸ್‍ನೊಂದಿಗೆ ವ್ಯಾಪಾರ ವಿಸ್ತರಿಸಿದ. ಇದರೊಂದಿಗೆ ಕ್ಯಾಥೊಲಿಕ್ ಪಾದ್ರಿಗಳಿಂದ ಧರ್ಮ ಪ್ರಸಾರವೂ ಪ್ರಾರಂಭವಾಯಿತು. ೧೬೨೯ ರಲ್ಲಿ ಕ್ವಿಬೆಕ್‍ನಲ್ಲಿ ಇಂಗ್ಲಿಷರ ಸೈನ್ಯ ಆಗಮಿಸಿದಾಗ ಚಾಂಪ್ಲೆನ್ ಶರಣಾಗತನಾದ. ಆದರೆ ೧೬೩೨ ರಲ್ಲಾದ ಸೇಂಟ್ ಜರ್ಮೈನ್-ಎನ್-ಲಾಯ್ ಒಪ್ಪಂದದಂತೆ ಕೆನಡ ಮತ್ತೆ ಫ್ರೆಂಚರಿಗೆ ದೊರೆಯಿತು. ೧೬೪೨ ರಲ್ಲಿ ಮಾಂಟ್ರಿಯಾಲ್ ಫ್ರಾನ್ಸಿನ ವಸಾಹತಾಯಿತು. ೧೬೬೩ ರಲ್ಲಿ ಕೆನಡ (ಹೊಸ ಫ್ರಾನ್ಸ್) ಫ್ರಾನ್ಸಿನ ವಸಾಹತೆಂದು ಘೋಷಿಸಲಾಯಿತು. ಅಲ್ಲಿ ಫ್ರೆಂಚ್ ಮಾದರಿಯ ಆಡಳಿತ ಜಾರಿಗೆ ಬಂತು. ೧೪ ನೆಯ ಲೂಯಿಯ ಮಂತ್ರಿ ಕಾಲ್ಬರ್ ಕೆನಡಕ್ಕೆ ವಲಸೆ ಹೋಗಲು ಫ್ರೆಂಚರನ್ನು ಪ್ರೋತ್ಸಾಹಿಸಿದ್ದರ ಪರಿಣಾಮವಾಗಿ ೧೬೬೫ ರಲ್ಲಿ ಸುಮಾರು ಎರಡು ಸಾವಿರ ಫ್ರೆಂಚರು ಕೆನಡದಲ್ಲಿ ನೆಲೆಸಿದರು. ಅಮೆರಿಕ ಭೂಖಂಡದಲ್ಲಿ ಒಂದು ದೊಡ್ಡ ಸಾಮ್ರಾಜ್ಯವನ್ನು ಸ್ಥಾಪಿಸುವುದೇ ಫ್ರಾನ್ಸಿನ ಉದ್ದೇಶವಾಗಿತ್ತು. ಇದರಿಂದಾಗಿ ಇಂಗ್ಲೆಂಡಿನೊಡನೆ ಯುದ್ಧ ಅನಿವಾರ್ಯವಾಯಿತು. ಕೆನಡದ ರಾಜ್ಯಪಾಲ ಫ್ರಾಂಟ್ ನ್ಯಾಕ್ ನ್ಯೂ ಇಂಗ್ಲೆಡಿನ ಮೇಲೆ ಆಕ್ರಮಣ ನಡೆಸಲು ನಿರ್ಧರಿಸಿದ. ಆದರೆ ೧೬೯೦ ರಲ್ಲಿ ಸರ್ ವಿಲಿಯಂ ಫಿಫ್ಸ್ ಬಾಸ್ಟನ್‍ನಿಂದ ನೌಕಾಪಡೆಯನ್ನು ಕೊಂಡೊಯ್ದು ನೋವ ಸ್ಕೋಷವನ್ನು ಗೆದ್ದುಕೊಂಡ. ೧೬೯೭ ರಲ್ಲಿ ರೈಸ್‍ವಿಕ್ ಒಪ್ಪಂದವಾಗಿ ಫ್ರೆಂಚರು ಮತ್ತೆ ಆ ಪ್ರದೇಶವನ್ನು ಪಡೆದುಕೊಂಡರು. ಆದರೆ ಯುದ್ಧ ಮಾತ್ರ ನಿಲ್ಲಲಿಲ್ಲ. ಕೊನೆಯಲ್ಲಿ ಫ್ರಾನ್ಸ್ ಸೋತು ೧೭೧೩ ರಲ್ಲಿ ಒಡಂಬಡಿಕೆ ಮಾಡಿಕೊಳ್ಳಬೇಕಾಯಿತು. ಅದರ ಪ್ರಕಾರ ಹಡ್ಸನ್ ಕೊಲ್ಲಿ, ನ್ಯೂ ಫೌಂಡ್‍ಲೆಂಡ್ ಮತ್ತು ನೋವ ಸ್ಕೋಷಗಳನ್ನು ಫ್ರಾನ್ಸ್ ಇಂಗ್ಲೆಂಡಿಗೆ ಬಿಟ್ಟುಕೊಡಬೇಕಾಯಿತು. ಅಲ್ಲಿ ಸ್ವಲ್ಪ ಕಾಲ ಶಾಂತಿ ನೆಲಸಿದ್ದರೂ ೧೭೪೦ ರಲ್ಲಿ ಯೂರೋಪಿನಲ್ಲಿ ಆಸ್ಟ್ರಿಯದ ಸಿಂಹಾಸನಕ್ಕಾಗಿ ಯುದ್ಧ ಪ್ರಾರಂಭವಾಗಿ ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳು ವಿರುದ್ಧ ಬಣಗಳಲ್ಲಿದ್ದುದರ ಫಲವಾಗಿ ಅಮೆರಿಕದಲ್ಲೂ ಯುದ್ಧ ಪ್ರಾರಂಭವಾಯಿತು. ೧೭೪೮ ರಲ್ಲಿ ಎ-ಲಾ-ಚಾಪೆಲೇ ಒಪ್ಪಂದದಿಂದ ಯೂರೋಪಿನಲ್ಲಿ ಯುದ್ಧ ಕೊನೆಗೊಂಡಾಗ ಇಲ್ಲೂ ಶಾಂತಿ ಏರ್ಪಟ್ಟರೂ ಬ್ರಿಟನ್ ಭೂಶಿರದಲ್ಲಿರುವ ಲೂಯಿಬರ್ಗ್ ಫ್ರಾನ್ಸಿನ ಕೈಬಿಟ್ಟಿತು. ೧೭೫೬ ರಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್‍ಗಳ ಮಧ್ಯೆ ಏಳು ವರ್ಷಗಳ ಯುದ್ಧ ಪ್ರಾರಂಭವಾಯಿತು. ಅಮೆರಿಕದಲ್ಲಿ ಇಂಗ್ಲೆಂಡಿಗಿದ್ದಷ್ಟು ಅನುಕೂಲಗಳು ಫ್ರಾನ್ಸಿಗೆ ಇರಲಿಲ್ಲ. ಅಲ್ಲದೆ ಇಂಗ್ಲೆಂಡಿನ ನೌಕಾಪಡೆ ಬಲಶಾಲಿಯಾಗಿತ್ತು. ೧೭೫೯ ರ ಸೆಪ್ಟೆಂಬರಿನಲ್ಲಿ ಇಂಗ್ಲೆಂಡಿನ ಜೇಮ್ಸ್ ವುಲ್ಛ್ ಕ್ವಿಬೆಕ್‍ನಲ್ಲಿ, ಒಂದು ವರ್ಷದ ಅನಂತರ ಮಾಂಟ್ರಿಯಾಲ್‍ನಲ್ಲಿ ಅದ್ಭುತ ವಿಜಯ ಪಡೆದ. ಕೆನಡದಲ್ಲಿದ್ದ ಫ್ರೆಂಚ್ ಸೈನ್ಯ ಶರಣಾಗತವಾಯಿತು. ೧೭೬೩ ರಲ್ಲಿ ಪ್ಯಾರಿಸ್ ಒಪ್ಪಂದವಾಗಿ ೭ ವರ್ಷಗಳ ಯುದ್ಧ ಕೊನೆಗೊಂಡಿತು, ಕೆನಡ ಇಂಗ್ಲೆಂಡಿನ ವಶವಾಯಿತು. ಆಧುನಿಕ ಕೆನಡದ ಚರಿತ್ರೆ ಅಮೆರಿಕದ ಸ್ವಾತಂತ್ರ್ಯ ಯುದ್ಧದ ಅನಂತರ ನಿಖರವಾಗಿ ಪ್ರಾರಂಭವಾಯಿತು. ಅಮೆರಿಕನರ ಕ್ರಾಂತಿಯ ಪರಿಣಾಮವಾಗಿ ರಾಜಪ್ರಭುತ್ವವಾದಿ ಇಂಗ್ಲಿಷರು ಸಹಸ್ರಾರು ಸಂಖ್ಯೆಯಲ್ಲಿ ಕೆನಡದಲ್ಲಿ ಆಶ್ರಯ ಪಡೆದರು. ಇದರಿಂದಾಗಿ ಫ್ರೆಂಚರಂತೆ ಇಂಗ್ಲಿಷರೂ ಕೆನಡದ ನಿವಾಸಿಗಳಾದರು. ಪ್ಯಾರಿಸ್ ಒಪ್ಪಂದದ ಅನಂತರ ೧೭೭೪ ರಲ್ಲಿ ಕ್ವಿಬೆಕ್ ಮಸೂದೆ ಜಾರಿಗೆ ಬರುವವರೆಗೆ ಕೆನಡ ಇಂಗ್ಲೆಂಡಿನ ರಾಜಪ್ರಭುತ್ವಕ್ಕೆ ಒಳಪಟ್ಟಿತ್ತು. ೧೭೭೫ ರಲ್ಲಿ ಅಮೆರಿಕದ ಸ್ವಾತಂತ್ರ್ಯ ಯುದ್ಧ ಪ್ರಾರಂಭವಾಯಿತು. ಕೆನಡವನ್ನು ವಶಪಡಿಸಿಕೊಳ್ಳುವುದು ಅಮೆರಿಕನರ ಯೋಜನೆಗಳಲ್ಲಿ ಒಂದಾಗಿತ್ತು. ಆದರೆ ಅದು ವಿಫಲವಾಯಿತು. ಕೆನಡ ಇಂಗ್ಲಿಷರ ವಶವಾದಮೇಲೆ ಅಲ್ಲಿ ಫ್ರೆಂಚ್ ಮಾದರಿಯ ಆಡಳಿತ ಪದ್ಧತಿ ಕ್ರಮೇಣ ಮಾಯವಾಯಿತು. ೧೭೯೧ ರಲ್ಲಿ ಇಂಗ್ಲೆಂಡಿನ ಪಾರ್ಲಿಮೆಂಟು ಒಂದು ಸಂವಿಧಾನ ರಚಿಸಿ, ಆಟ್ಟವ ನದಿಯ ಆಧಾರದ ಮೇಲೆ ಕೆನಡವನ್ನು ಪ್ರತ್ಯೇಕ ಸರ್ಕಾರಗಳನ್ನು ಹೊಂದಿದ ಎರಡು ಭಾಗಗಳನ್ನಾಗಿ ವಿಭಾಗಿಸಿತು. ದಕ್ಷಿಣ ಕೆನಡದಲ್ಲಿ ಫ್ರೆಂಚ್ ಮಾದರಿಯ ಸರ್ಕಾರ ಉತ್ತರ ಕೆನಡದಲ್ಲಿ ಇಂಗ್ಲೆಂಡ್ ಮಾದರಿಯ ಸರ್ಕಾರ ಅಸ್ತಿತ್ವದಲ್ಲಿ ಬಂದುವು. ಕೆನಡದ ಎರಡು ಪ್ರದೇಶಗಳಿಗೂ ಸೇರಿದಂತೆ ಒಬ್ಬ ರಾಜ್ಯಪಾಲನನ್ನು ಮತ್ತು ಪ್ರತಿಯೊಂದಕ್ಕೂ ಒಬ್ಬ ಉಪರಾಜ್ಯಪಾಲರನ್ನು ನೇಮಕ ಮಾಡಲಾಯಿತು. ಕೆನಡದ ವಸಾಹತುಗಳು ಪರಿಪೂರ್ಣತೆ ಪಡೆದಂತೆ ಅಲ್ಲಿ ಸ್ವಯಮಾಡಳಿತ ಪಡೆಯಬೇಕೆಂಬ ಉತ್ಕಟ ಅಪೇಕ್ಷೆ ಉಂಟಾಯಿತು. ೧೯ ನೆಯ ಶತಮಾನದಲ್ಲಿ ಇಂಗ್ಲೆಂಡ್, ಅಮೆರಿಕ ಮೊದಲಾದ ದೇಶಗಳಲ್ಲಿದ್ದ ಪ್ರಜಾಪ್ರಭುತ್ವ ಭಾವನೆಗಳು ಕೆನಡದ ವಸಾಹತುಗಳಲ್ಲೂ ಪ್ರತಿಧ್ವನಿತವಾದವು. ಕೆನಡಿಯನರಲ್ಲಿ ಅತೃಪ್ತಿ ಕ್ರಮೇಣ ಬೆಳೆದು ೧೮೩೭ ರಲ್ಲಿ ಉಗ್ರಸ್ವರೂಪದ ಚಳವಳಿ ಪ್ರಾರಂಭವಾಯಿತು. ಉತ್ತರ ಕೆನಡದಲ್ಲಿ ಲಿಯಾನ್ ಮೆಕೆನ್‍ಜಿóಯ ನೇತೃತ್ವದಲ್ಲಿ ಕ್ರಾಂತಿ ಪ್ರಾರಂಭವಾಯಿತು. ಆದರೆ ಅದನ್ನು ಸುಲಭವಾಗಿ ಅಡಗಿಸಲಾಯಿತು, ಮತ್ತು ಮೆಕೆನ್‍ಜಿóಗೆ ಗಡಿಪಾರು ಶಿಕ್ಷೆ ವಿಧಿಸಲಾಯಿತು. ದಕ್ಷಿಣ ಕೆನಡದಲ್ಲಿ ಲೂಯಿ ಜೋಸೆಫನ ನೇತೃತ್ವದಲ್ಲಿ ಪ್ರಾರಂಭವಾದ ಕ್ರಾಂತಿ ಬೆಂಬಲ ಸಿಗದೆ ವಿಫಲವಾಯಿತು. ೧೮೩೮ ರಲ್ಲಿ ವಿಗ್ ಪಾರ್ಟಿಯ ಮುಖಂಡ ಲಾಡ ಡರ್ಹಾಮ್ ಕೆನಡದ ರಾಜ್ಯಪಾಲನಾಗಿ ನೇಮಕಗೊಂಡ. ಆಂತರಿಕ ವ್ಯವಹಾರಗಳಲ್ಲಿ ಕೆನಡದ ಪ್ರದೇಶಗಳಿಗೆ ಸ್ವಯಮಾಡಳಿತ ನೀಡಬೇಕು ಮತ್ತು ಎರಡು ಪ್ರದೇಶಗಳ ಏಕೀಕರಣವಾಗಬೇಕು ಎಂದು ಡರ್ಹಾಮ್ ಸಲಹೆ ನೀಡಿದ. ಅದರಂತೆ ೧೮೪೦-೪೧ ರಲ್ಲಿ ಏಕೀಕರಣದ ಮಸೂದೆಯೊಂದು ಜಾರಿಯಾಗಿ ಕೆನಡದ ಎರಡೂ ರಾಜ್ಯಗಳು ಒಂದಾದುವು. ಪಾರ್ಲಿಮೆಂಟಿಗೆ ಎರಡೂ ರಾಜ್ಯಗಳು ಸಮಸಂಖ್ಯೆಯಲ್ಲಿ ಸದಸ್ಯರನ್ನು ಕಳಿಸಿಕೊಡಬೇಕೆಂದು ತೀರ್ಮಾನಿಸಲಾಯಿತು. ೧೮೪೯ ರಲ್ಲಿ ಲಾರ್ಡ್ ಎಲ್ಗಿನ್ ಗವರ್ನರ್-ಜನರಲ್ ಆಗಿದ್ದಾಗ ಕೆನಡ ಸ್ವಲ್ಪಮಟ್ಟಿನ ಸ್ವಯಮಾಡಳಿತ ಪಡೆಯಿತು. ಕೆನಡದ ಎರಡೂ ಪ್ರಾಂತ್ಯಗಳ ಏಕೀಕರಣದಿಂದ ಅನುಕೂಲಕ್ಕಿಂತ ಹೆಚ್ಚಾಗಿ ಪ್ರತಿಕೂಲವುಂಟಾಯಿತು. ಪರಸ್ಪರ ವೈರಿಗಳಾದ ಇಂಗ್ಲಿಷರು ಮತ್ತು ಫ್ರೆಂಚರು ಅದಕ್ಕೆ ಕಾರಣರಾಗಿದ್ದರು. ಇದರಿಂದಾಗಿ ದೇಶದಲ್ಲಿ ಸುಭದ್ರ ಸಕಾರದ ರಚನೆಗೆ ತೊಡಕಾಯಿತು. ಕ್ಯಾಥೊಲಿಕರಾಗಿದ್ದ ಫ್ರೆಂಚರೂ ಪ್ರಾಟೆಸ್ಟಂಟರಾಗಿದ್ದ ಇಂಗ್ಲಿಷರೂ ಪಾರ್ಲಿಮೆಂಟಿನಲ್ಲಿ ಸಮಪ್ರಾತಿನಿಧ್ಯ ಹೊಂದಿದ್ದುದರಿಂದ ದೇಶದ ಯಾವ ಕೆಲಸವೂ ಸುಸೂತ್ರವಾಗಿ ನಡೆಯದೆ ರಾಜಕೀಯ ಬಿಕ್ಕಟ್ಟು ಅನಿವಾರ್ಯವಾಯಿತು. ೧೮೬೦ರಲ್ಲಿ ಹಲವಾರು ಸಚಿವ ಸಂಪುಟಗಳ ಬದಲಾವಣೆಯಾಗಿ ದೇಶದ ಪ್ರಗತಿ ಕುಂಠಿತವಾಯಿತು. ಯಾವುದಾದರೊಂದು ರಾಜಕೀಯ ಪರಿಹಾರದ ಅವಶ್ಯಕತೆ ಇತ್ತು. ಇದೇ ಸಮಯದಲ್ಲಿ ನೋವ ಸ್ಕೋಷ, ನ್ಯೂ ಬ್ರನ್‍ಸ್óವಿಕ್ ಮತ್ತು ಪ್ರಿನ್ಸ್ ಎಡ್ವರ್ಡ್ ವಸಾಹತುಗಳಲ್ಲಿ ಕ್ರಾಂತಿ ಪ್ರಾರಂಭವಾಗಿ ಅವು ತಮ್ಮದೇ ಆದ ಒಂದು ಸ್ಥಾನಿಕ ಏಕೀಕರಣ ಮಾಡಿಕೊಳ್ಳಲು ಯೋಚಿಸಿದುವು. ಕೆನಡದ ಮುತ್ಸದ್ದಿಗಳಾದ ಮ್ಯಾಕ್ಟೊನಾಲ್ಡ್, ಕಾರ್ಟಿಯರ್, ನೋವ ಸ್ಕೋಷದ ಟಪ್ಪರ್, ನ್ಯೂ ಬ್ರನ್‍ಸ್óವಿಕ್‍ನ ಟಿಲ್ಲಿ ಮೊದಲಾದವರು ಐಕ್ಯ ಕೆನಡ ಒಕ್ಕೂತ ನಿರ್ಮಾಣಮಾಡಲು ಸಿದ್ಧರಾದರು. ಷಾರ್ಲಟ್‍ಟೌನ್ ಮತ್ತು ಕ್ವಿಬೆಕ್ ನಗರಗಳಲ್ಲಿ ಅನೇಕ ಸಭೆಗಳನ್ನು ನಡೆಸಿ ಅಂತಿಮ ತೀರ್ಮಾನಕ್ಕಾಗಿ ಲಂಡನಿಗೆ ಹೋದರು. ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ೧೮೬೭ ರಲ್ಲಿ ಬ್ರಿಟಿಷ್ ಉತ್ತರ ಅಮೆರಿಕದ ಕಾಯಿದೆಗೆ ಒಪ್ಪಗೆ ದೊರಕಿತು. ನೋವ ಸ್ಕೋಷ ನ್ಯೂ ಬ್ರನ್‍ಸ್óವಿಕ್ ವಸಾಹತುಗಳು ಏಕೀಕರಣವನ್ನು ವಿರೋಧಿಸಿದರೂ ಆರ್ಥಿಕ ಸಹಾಯದ ಭರವಸೆಯ ಮೇಲೆ ಶಾಂತವಾದುವು. ೧೮೭೦ ರಲ್ಲಿ ಮ್ಯಾನಿಟೋಬ, ೧೮೭೧ ರಲ್ಲಿ ಬ್ರಿಟಿಷ್ ಕೊಲಂಬಿಯ, ೧೮೭೩ ರಲ್ಲಿ ಪ್ರಿನ್ಸ್ ಎಡ್ವರ್ಡ್ ವಸಾಹತುಗಳು ಒಕ್ಕೂಟವನ್ನು ಸೇರಿಕೊಂಡುವು. ಕೆನಡ ದೇಶ ಅಟ್ಲಾಂಟಿಕ್‍ನಿಂದ ಪೆಸಿಫಿಕ್‍ವರೆಗೆ ವಿಸ್ತರಿಸಿತು. ಹೀಗೆ ಕೆನಡ ರಾಜ್ಯಕ್ಕೆ ೧೮೬೭ ರ ಜುಲೈ ಒಂದರಿಂದ ಅಧಿರಾಜ್ಯದ ಸ್ಥಾನ ಲಭ್ಯವಾಯಿತು. (ನೋಡಿ-ಕೆನಡದ ಸಂವಿಧಾನ ಮತ್ತು ಆಡಳಿತ ವ್ಯವಸ್ಥೆ) ವಿದೇಶಾಂಗ ನೀತಿ: ಕೆನಡದ ವಿದೇಶಾಂಗ ನೀತಿಯ ವಿಕಾಸವನ್ನು ೧೮೬೭ ರಿಂದ ೧೯೧೮ ರ ವರೆಗೆ, ೧೯೧೯ ರಿಂದ ೧೯೩೯ ರ ವರೆಗೆ ಹಾಗೂ ೧೯೩೯ ರಿಂದ ಇಂದಿನ ವರೆಗೆ ಎಂದು ವಿಭಾಗಿಸಬಹುದು. ೧೮೬೭-೧೯೧೮: ಈ ಅವಧಿಯಲ್ಲಿ ಕೆನಡಕ್ಕೆ ತನ್ನದೇ ಆದ ಪರಿಣಾಮಕಾರಿ ವಿದೇಶಾಂಗ ನೀತಿ ಇರಲಿಲ್ಲ. ಕೆನಡದ ಕಾರ್ಯಾಂಗದ ಅಧಿಕಾರ ಇಂಗ್ಲೆಂಡಿನ ರಾಣಿಯನ್ನು ಪ್ರತಿನಿಧಿಸುತ್ತಿದ್ದ ಗವರ್ನರ್-ಜನರಲನ ಕೈಯಲ್ಲಿತ್ತು. ಅವನು ವಿದೇಶಾಂಗ ನೀತಿಯ ಬಗ್ಗೆ ಇಂಗ್ಲೆಂಡಿನ ಸರ್ಕಾರದಿಂದ ಸಲಹೆಗಳನ್ನು ಪಡೆಯುತ್ತಿದ್ದ. ಇಂಗ್ಲೆಂಡಿನೊಡನೆ ನಿರಂತರ ಸಂಪರ್ಕ ಹೊಂದಲು ಕೆನಡ ಸರ್ಕಾರ ಲಂಡನ್ ನಗರದಲ್ಲಿ ಒಬ್ಬ ಪ್ರತಿನಿಧಿಯನ್ನು ನೇಮಕ ಮಾಡಿತ್ತು. ಇತರ ದೇಶಗಳೊಂದಿಗೆ ಸಂಪರ್ಕ ಪಡೆಯಲು ಕೆನಡದಲ್ಲಿ ೧೯೦೯ ರಲ್ಲಿ ವಿದೇಶಾಂಗ ವ್ಯವಹಾರದ ವಿಭಾಗ ಸ್ಥಾಪಿತವಾಯಿತು. ರಾಜತಾಂತ್ರಿಕ ವಿಷಯದಲ್ಲಿ ಸ್ವಾವಲಂಬಿಯಾಗಲು ವಲಸೆಗಾರರ ಸಮಸ್ಯೆ ಕೆನಡಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿತ್ತು. ಬ್ರಿಟಿಷ್ ಕೊಲಂಬಿಯ ಪ್ರಾಂತ್ಯದಲ್ಲಿ ಚೀನಿಯರ ಮತ್ತು ಜಪಾನೀಯರ ವಲಸೆ ಹೆಚ್ಚಾಗಿ ಅನೇಕ ಕಡೆ ದೊಂಬಿಗೆ ಕಾರಣವಾಯಿತು. ಕೆನಡದ ಕಾರ್ಮಿಕ ಸಚಿವ ಟೋಕಿಯೋಗೆ ಹೋಗಿ ಅಲ್ಲಿದ್ದ ಇಂಗ್ಲೆಂಡಿನ ರಾಯಭಾರಿಯ ಸಹಾಯದಿಂದ ಜಪಾನಿನೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಜಪಾನಿನ ವಲಸೆ ನಿಂತಿತು. ಚೀನದ ಆಂತರಿಕ ಸಮಸ್ಯೆಗಳಿಂದಾಗಿ ಆ ದೇಶದೊಡನೆ ಒಡಂಬಡಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ೧೯೧೪ ರಲ್ಲಿ ಇಂಗ್ಲೆಂಡ್ ಜರ್ಮನಿಯ ಮೇಲೆ ಯುದ್ಧ ಘೋಷಿಸಿದಾಗ ಕೆನಡ ಇಂಗ್ಲೆಂಡ್ ದೇಶವನ್ನನುಸರಿಸಿ ದೊಡ್ಡ ಸೈನ್ಯವನ್ನು ಕಳಿಸಿತು. ೧೯೧೯-೧೯೩೯: ಪ್ಯಾರಿಸ್ ಶಾಂತಿಸಮ್ಮೇಳನದಲ್ಲಿ ಕೆನಡದ ಪ್ರಧಾನಿ ರಾಬರ್ಟ್ ಬೋರ್ಡನ್ ಇಂಗ್ಲೆಂಡಿನಿಂದ ಪ್ರತ್ಯೇಕವಾಗಿ ತಮ್ಮ ದೇಶವನ್ನು ಪ್ರತಿನಿಧಿಸುವ ಹಕ್ಕನ್ನು ಪಡೆದುಕೊಂಡರು. ಇದೇ ನೆಪದಿಂದ ಲೀಗ್ ಆಫ್ ನೇಷನ್ಸ್‍ನಲ್ಲೂ ಕೆನಡ ಪ್ರತ್ಯೇಕ ಸದಸ್ಯತ್ವ ಪಡೆಯಿತು. ಅನಂತರ ಅಂತರರಾಷ್ಟ್ರೀಯ ಕಾರ್ಮಿಕ ಹಿತರಕ್ಷಣ ಸಂಸ್ಥೆಯಲ್ಲಿ ಕೂಡ ಪ್ರತ್ಯೇಕ ಸ್ಥಾನ ಪಡೆಯಿತು. ಹೀಗೆ ಕೆನಡ ಅಂತರರಾಷ್ಟ್ರೀಯವಾಗಿ ತನ್ನ ಪ್ರತಿಮೆಯನ್ನು ಸ್ಥಾಪಿಸಿಕೊಂಡಿತು. ೧೯೨೩ ರಲ್ಲಿ ಕೆನಡ ಮೊದಲ ಬಾರಿಗೆ ಇಂಗ್ಲೆಂಡಿಗೆ ತಿಳಿಸದೆ ಅಮೆರಿಕದೊಡನೆ ಹ್ಯಾಲಿಬಟ್ ಕೌಲು ಮಾಡಿಕೊಂಡಿತು. ಅಲ್ಲಿಂದ ಕಾಮನ್‍ವೆಲ್ತ್ ಒಕ್ಕೂಟದ ಏಕಮುಖ ವಿದೇಶಾಂಗನೀತಿ ಪದ್ಧತಿ ಮುರಿದುಬೀಳಲಾರಂಭಿಸಿತು. ಬ್ರಿಟನಿನೊಂದಿಗೆ ಅಧಿರಾಜ್ಯಗಳು ಪಾಲುದಾರ ರಾಷ್ಟ್ರಗಳೆಂದೂ ಅವು ಎಲ್ಲ ರೀತಿಯಲ್ಲೂ ಪರಸ್ಪರ ಸಮಾನವೆಂದೂ ದೊರೆತನಕ್ಕೆ ಇವೆಲ್ಲ ವಿಧೇಯವೆಂದೂ ೧೯೨೬ ರಲ್ಲಿ ಸಮಾವೇಶಗೊಂಡಿದ್ದ ಸಾಮ್ರಾಜ್ಯ ಸಮ್ಮೇಳನದಲ್ಲಿ ಸಾರಲಾಯಿತು. ಈ ಘೋಷಣೆಯನ್ನು ೧೯೩೧ ರಲ್ಲಿ ವೆಸ್ಟ್‍ಮಿನ್‍ಸ್ಟರ್ ಸ್ಟಾಚ್ಯೂಟಿನ ಮೂಲಕ ಕಾನೂನುಬದ್ಧವಾಗಿ ಮಾಡಲಾಯಿತು. ೧೯೩೯ ರಿಂದ: ಎರಡನೆಯ ಮಹಾಯುದ್ಧದಿಂದ ಕೆನಡದಲ್ಲಿ ರಾಷ್ಟ್ರೀಯತೆ ಜಾಗೃತಗೊಂಡಿತು. ಆ ಯುದ್ಧದಿಂದಾಗಿ ಯೂರೋಪಿನ ಅನೇಕ ದೇಶಗಳು ದುರ್ಬಲಗೊಡಿದ್ದರಿಂದ ಮತ್ತು ಕೆನಡದ ಆರ್ಥಿಕಸ್ಥಿತಿ ಸುಧಾರಿಸಿದ್ದರಿಂದ ಕೆನಡ ವಿಶ್ವದ ವ್ಯವಹಾರಗಳಲ್ಲಿ ಹೆಚ್ಚಿನ ಜವಾಬ್ದಾರಿ ಹೊರುವುದು ಅನಿವಾರ್ಯವಾಯಿತು. ಎರಡನೆಯ ಮಹಾಯುದ್ಧ ಮುಕ್ತಾಯವಾಗುವುದರೊಳಗೆ ಕೆನಡ ಮಿತ್ರರಾಷ್ಟ್ರಗಳ ಪೈಕಿ ನೌಕಾಪಡೆಯಲ್ಲಿ ಮೂರನೆಯ ಹಾಗೂ ವೈಮಾನಿಕ ಪಡೆಯಲ್ಲಿ ನಾಲ್ಕನೆಯ ರಾಷ್ಟ್ರವಾಗಿ ಪರಿಣಮಿಸಿತು. ಈ ಯುದ್ಧದಲ್ಲಿ ಮಿತ್ರರಾಷ್ಟ್ರಗಳು ಕೆನಡದಿಂದ ಕೋಟ್ಯಂತರ ಡಾಲರುಗಳ ಸಹಾಯ ಪಡೆದುವು. ಇಂಗ್ಲೆಂಡಿಗೂ ಕೆನಡ ಸಾಲ ನೀಡಿತು. ಅಂತರರಾಷ್ಟ್ರೀಯ ಹಣಕಾಸಿನ ವ್ಯವಹಾರದಲ್ಲಿ, ಅಂತರ ರಾಷ್ಟ್ರೀಯ ಆಹಾರ ಮತ್ತು ವ್ಯವಸಾಯ ಸಂಸ್ಥೆಗೆ ಸಂಬಂಧಿಸಿದ ಅನೇಕ ಮಹತ್ತ್ವದ ಕಾರ್ಯಗಳಲ್ಲಿ ಕೆನಡದ ತಜ್ಞರು ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ. ಕಾಮನ್‍ವೆಲ್ತ್ ರಾಷ್ಟ್ರಸಮುದಾಯದಲ್ಲಿ ಕೆನಡದ ನೀತಿ ಎರಡನೆಯ ಮಹಾಯುದ್ಧದ ಕಾಲದಲ್ಲಾಗಲಿ ಅನಂತರವಾಗಲಿ ಯಾವ ಬದಲಾವಣೆಗೂ ಒಳಗಾಗಲಿಲ್ಲ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಘಾನ ಮತ್ತು ಮಲಯ ದೇಶಗಳು ಕಾಮನ್‍ವೆಲ್ತ್ ರಾಷ್ಟ್ರ ಸಮುದಾಯದಲ್ಲಿ ಪೂರ್ಣ ಸದಸ್ಯತ್ವ ಪಡೆದಾಗ ಕೆನಡ ಅದನ್ನು ಸ್ವಾಗತಿಸಿತು. ಭಾರತ ಗಣರಾಜ್ಯವಾದಾಗ ಅದು ಕಾಮನ್‍ವೆಲ್ತ್ ಸಮುದಾಯದಲ್ಲೇ ಉಳಿಯುವುದು ಸಾಧ್ಯವಾಗುವಂತೆ ಕಾಮನ್‍ವೆಲ್ತ್ ವ್ಯವಸ್ಥೆಯನ್ನು ಮಾರ್ಪಡಿಸಲು ಕೆನಡ ಸಹಾಯ ಮಾಡಿತು. ಭೂಗೋಳಶಾಸ್ತ್ರ ಒಟ್ಟು ವಿಸ್ತೀರ್ಣದಲ್ಲಿ (ಅದರ ನೀರನ್ನು ಒಳಗೊಂಡಂತೆ), ಕೆನಡಾವು ರಷ್ಯಾದ ನಂತರ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. ಕೇವಲ ಭೂಪ್ರದೇಶದಿಂದ, ಕೆನಡಾ ನಾಲ್ಕನೇ ಸ್ಥಾನದಲ್ಲಿದೆ, ಏಕೆಂದರೆ ವಿಶ್ವದ ಅತಿದೊಡ್ಡ ಶುದ್ಧ ನೀರಿನ ಸರೋವರಗಳನ್ನು ಹೊಂದಿದೆ. ಪೂರ್ವದಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ ಉತ್ತರಕ್ಕೆ ಆರ್ಕ್ಟಿಕ್ ಮಹಾಸಾಗರದ ಉದ್ದಕ್ಕೂ ಮತ್ತು ಪಶ್ಚಿಮದಲ್ಲಿ ಪೆಸಿಫಿಕ್ ಮಹಾಸಾಗರದವರೆಗೆ ವಿಸ್ತರಿಸಿರುವ ದೇಶವು ೯೯೮೪೬೭೦km2 (೩೮೫೫೧೦೦ ಚದರ ಮೈಲಿ) ಭೂಪ್ರದೇಶವನ್ನು ಒಳಗೊಂಡಿದೆ. ಕೆನಡಾವು ೨೪೩೦೪೨ ಕಿಲೋಮೀಟರ್‌ಗಳ (೧೫೧೦೧೯ ಮೈಲಿ) ಪ್ರಪಂಚದ ಅತಿ ಉದ್ದದ ಕರಾವಳಿಯನ್ನು ಹೊಂದಿರುವ ವಿಶಾಲವಾದ ಕಡಲ ಭೂಪ್ರದೇಶವನ್ನು ಹೊಂದಿದೆ. ಕೆನಡಾವನ್ನು ಏಳು ಭೌತಶಾಸ್ತ್ರದ ಪ್ರದೇಶಗಳಾಗಿ ವಿಂಗಡಿಸಬಹುದು: ಕೆನಡಿಯನ್ ಶೀಲ್ಡ್, ಆಂತರಿಕ ಬಯಲು ಪ್ರದೇಶ, ಗ್ರೇಟ್ ಲೇಕ್ಸ್-ಸೇಂಟ್. ಲಾರೆನ್ಸ್ ಲೋಲ್ಯಾಂಡ್ಸ್, ಅಪ್ಪಲಾಚಿಯನ್ ಪ್ರದೇಶ, ಪಶ್ಚಿಮ ಕಾರ್ಡಿಲ್ಲೆರಾ, ಹಡ್ಸನ್ ಬೇ ಲೋಲ್ಯಾಂಡ್ಸ್ ಮತ್ತು ಆರ್ಕ್ಟಿಕ್ ದ್ವೀಪಸಮೂಹ. ಬೋರಿಯಲ್ ಕಾಡುಗಳು ದೇಶದಾದ್ಯಂತ ಚಾಲ್ತಿಯಲ್ಲಿವೆ, ಉತ್ತರ ಆರ್ಕ್ಟಿಕ್ ಪ್ರದೇಶಗಳಲ್ಲಿ ಮತ್ತು ರಾಕಿ ಪರ್ವತಗಳ ಮೂಲಕ ಮಂಜುಗಡ್ಡೆಯು ಪ್ರಮುಖವಾಗಿದೆ ಮತ್ತು ನೈಋತ್ಯದಲ್ಲಿ ತುಲನಾತ್ಮಕವಾಗಿ ಸಮತಟ್ಟಾದ ಕೆನಡಿಯನ್ ಪ್ರೈರೀಸ್ ಉತ್ಪಾದಕ ಕೃಷಿಗೆ ಅನುಕೂಲವಾಗುತ್ತದೆ. ಗ್ರೇಟ್ ಲೇಕ್ಸ್ ಸೇಂಟ್ ಲಾರೆನ್ಸ್ ನದಿಯನ್ನು (ಆಗ್ನೇಯದಲ್ಲಿ) ಪೋಷಿಸುತ್ತದೆ, ಅಲ್ಲಿ ತಗ್ಗು ಪ್ರದೇಶಗಳು ಕೆನಡಾದ ಹೆಚ್ಚಿನ ಆರ್ಥಿಕ ಉತ್ಪಾದನೆಯನ್ನು ಆಯೋಜಿಸುತ್ತವೆ. ಕೆನಡಾವು ೨೦೦೦೦೦೦ಕ್ಕೂ ಹೆಚ್ಚು ಸರೋವರಗಳನ್ನು ಹೊಂದಿದೆ-ಅವುಗಳಲ್ಲಿ ೫೬೩೧೦೦km2 (39 ಚದರ ಮೈಲಿ) ಗಿಂತ ದೊಡ್ಡದಾಗಿದೆ-ಪ್ರಪಂಚದ ಹೆಚ್ಚಿನ ಶುದ್ಧ ನೀರನ್ನು ಹೊಂದಿದೆ. ಕೆನಡಿಯನ್ ರಾಕೀಸ್, ಕರಾವಳಿ ಪರ್ವತಗಳು ಮತ್ತು ಆರ್ಕ್ಟಿಕ್ ಕಾರ್ಡಿಲ್ಲೆರಾದಲ್ಲಿ ತಾಜಾ ನೀರಿನ ಹಿಮನದಿಗಳಿವೆ. ಕೆನಡಾವು ಭೌಗೋಳಿಕವಾಗಿ ಸಕ್ರಿಯವಾಗಿದೆ, ಅನೇಕ ಭೂಕಂಪಗಳು ಮತ್ತು ಸಂಭಾವ್ಯ ಸಕ್ರಿಯ ಜ್ವಾಲಾಮುಖಿಗಳನ್ನು ಹೊಂದಿದೆ, ಪ್ರಮುಖವಾಗಿ ಮೌಂಟ್ ಮೀಜರ್ ಮಾಸಿಫ್, ಮೌಂಟ್ ಗರಿಬಾಲ್ಡಿ, ಮೌಂಟ್ ಕೇಲಿ, ಮತ್ತು ಮೌಂಟ್ ಎಡ್ಜಿಜಾ ಜ್ವಾಲಾಮುಖಿ ಸಂಕೀರ್ಣವಾಗಿದೆ. ಜೀವವೈವಿಧ್ಯ ಕೆನಡಾದ ಭೂಮಿಯ ಪರಿಸರ ವಲಯಗಳು ಮತ್ತು ಪರಿಸರ ಪ್ರಾಂತ್ಯಗಳು. ಪರಿಸರ ವಲಯಗಳನ್ನು ವಿಶಿಷ್ಟ ಬಣ್ಣದಿಂದ ಗುರುತಿಸಲಾಗಿದೆ. ಪರಿಸರ ಪ್ರಾಂತ್ಯಗಳು ಪರಿಸರ ವಲಯಗಳ ಉಪವಿಭಾಗಗಳಾಗಿವೆ ಮತ್ತು ವಿಶಿಷ್ಟವಾದ ಸಂಖ್ಯಾ ಸಂಕೇತದೊಂದಿಗೆ ಗುರುತಿಸಲ್ಪಡುತ್ತವೆ. ಕೆನಡಾವನ್ನು ೧೫ ಭೂಮಂಡಲ ಮತ್ತು ಐದು ಸಮುದ್ರ ಪರಿಸರ ವಲಯಗಳಾಗಿ ವಿಂಗಡಿಸಲಾಗಿದೆ. ಈ ಪರಿಸರ ವಲಯಗಳು ಕೆನಡಿಯನ್ ವನ್ಯಜೀವಿಗಳ ೮೦೦೦೦ ವರ್ಗೀಕರಿಸಿದ ಜಾತಿಗಳನ್ನು ಒಳಗೊಳ್ಳುತ್ತವೆ, ಸಮಾನ ಸಂಖ್ಯೆಯು ಇನ್ನೂ ಔಪಚಾರಿಕವಾಗಿ ಗುರುತಿಸಲ್ಪಟ್ಟಿಲ್ಲ ಅಥವಾ ಕಂಡುಹಿಡಿಯಬೇಕಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಕೆನಡಾ ಕಡಿಮೆ ಶೇಕಡಾವಾರು ಸ್ಥಳೀಯ ಜಾತಿಗಳನ್ನು ಹೊಂದಿದ್ದರೂ, ಮಾನವ ಚಟುವಟಿಕೆಗಳು, ಆಕ್ರಮಣಕಾರಿ ಪ್ರಭೇದಗಳು ಮತ್ತು ದೇಶದಲ್ಲಿನ ಪರಿಸರ ಸಮಸ್ಯೆಗಳಿಂದಾಗಿ, ಪ್ರಸ್ತುತ ೮೦೦ ಕ್ಕೂ ಹೆಚ್ಚು ಜಾತಿಗಳು ನಾಶವಾಗುವ ಅಪಾಯದಲ್ಲಿದೆ.ಕೆನಡಾದ ನಿವಾಸಿ ಜಾತಿಗಳಲ್ಲಿ ಸುಮಾರು ೬೫ ಪ್ರತಿಶತವನ್ನು "ಸುರಕ್ಷಿತ" ಎಂದು ಪರಿಗಣಿಸಲಾಗುತ್ತದೆ.[150] ಕೆನಡಾದ ಅರ್ಧದಷ್ಟು ಭೂದೃಶ್ಯವು ಅಖಂಡವಾಗಿದೆ ಮತ್ತು ಮಾನವ ಅಭಿವೃದ್ಧಿಯಿಂದ ತುಲನಾತ್ಮಕವಾಗಿ ಮುಕ್ತವಾಗಿದೆ. ಸರ್ಕಾರ ಮತ್ತು ರಾಜಕೀಯ ಕೆನಡಾವನ್ನು "ಸಂಪೂರ್ಣ ಪ್ರಜಾಪ್ರಭುತ್ವ" ಎಂದು ವಿವರಿಸಲಾಗಿದೆ, ಉದಾರವಾದದ ಸಂಪ್ರದಾಯ, ಮತ್ತು ಸಮತಾವಾದ, ಮಧ್ಯಮ ರಾಜಕೀಯ ಸಿದ್ಧಾಂತ. ಸಾಮಾಜಿಕ ನ್ಯಾಯದ ಮೇಲೆ ಒತ್ತು ನೀಡುವುದು ಕೆನಡಾದ ರಾಜಕೀಯ ಸಂಸ್ಕೃತಿಯ ವಿಶಿಷ್ಟ ಅಂಶವಾಗಿದೆ. ಶಾಂತಿ, ಸುವ್ಯವಸ್ಥೆ, ಮತ್ತು ಉತ್ತಮ ಸರ್ಕಾರವು, ಒಂದು ಸೂಚಿತ ಹಕ್ಕುಗಳ ಜೊತೆಗೆ, ಕೆನಡಾದ ಸರ್ಕಾರದ ಮೂಲ ತತ್ವಗಳಾಗಿವೆ. ಕೆನಡಾವು ಸಾಂವಿಧಾನಿಕ ರಾಜಪ್ರಭುತ್ವದ ಸನ್ನಿವೇಶದಲ್ಲಿ ಸಂಸದೀಯ ವ್ಯವಸ್ಥೆಯನ್ನು ಹೊಂದಿದೆ-ಕೆನಡಾದ ರಾಜಪ್ರಭುತ್ವವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಶಾಖೆಗಳ ಅಡಿಪಾಯವಾಗಿದೆ. ಆಳುವ ರಾಜನು ೧೪ ಇತರ ಕಾಮನ್‌ವೆಲ್ತ್ ದೇಶಗಳ ರಾಜನಾಗಿದ್ದಾನೆ (ಆದಾಗ್ಯೂ, ಎಲ್ಲರೂ ಪರಸ್ಪರ ಸಾರ್ವಭೌಮರು) ಮತ್ತು ಕೆನಡಾದ ೧೦ ಪ್ರಾಂತ್ಯಗಳಲ್ಲಿ ಪ್ರತಿಯೊಂದೂ. ಕೆನಡಾದಲ್ಲಿ ತಮ್ಮ ಹೆಚ್ಚಿನ ಫೆಡರಲ್ ರಾಯಲ್ ಕರ್ತವ್ಯಗಳನ್ನು ನಿರ್ವಹಿಸಲು, ರಾಜನು ಪ್ರಧಾನ ಮಂತ್ರಿಯ ಸಲಹೆಯ ಮೇರೆಗೆ ಗವರ್ನರ್ ಜನರಲ್ ಎಂಬ ಪ್ರತಿನಿಧಿಯನ್ನು ನೇಮಿಸುತ್ತಾನೆ. ಕೆನಡಾದಲ್ಲಿ ರಾಜಪ್ರಭುತ್ವವು ಸಾರ್ವಭೌಮತ್ವ ಮತ್ತು ಅಧಿಕಾರದ ಮೂಲವಾಗಿದೆ. ಆದಾಗ್ಯೂ, ಗವರ್ನರ್ ಜನರಲ್ ಅಥವಾ ರಾಜನು ಕೆಲವು ಅಪರೂಪದ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಮಂತ್ರಿಯ ಸಲಹೆಯಿಲ್ಲದೆ ತಮ್ಮ ಅಧಿಕಾರವನ್ನು ಚಲಾಯಿಸಬಹುದು, ಕಾರ್ಯಕಾರಿ ಅಧಿಕಾರಗಳ ಬಳಕೆಯನ್ನು (ಅಥವಾ ರಾಜಮನೆತನದ ವಿಶೇಷತೆ) ಯಾವಾಗಲೂ ಕ್ರೌನ್ ಮಂತ್ರಿಗಳ ಸಮಿತಿಯಾದ ಕ್ಯಾಬಿನೆಟ್ ನಿರ್ದೇಶಿಸುತ್ತದೆ. ಚುನಾಯಿತ ಹೌಸ್ ಆಫ್ ಕಾಮನ್ಸ್‌ಗೆ ಜವಾಬ್ದಾರನಾಗಿರುತ್ತಾನೆ ಮತ್ತು ಪ್ರಧಾನ ಮಂತ್ರಿ, ಸರ್ಕಾರದ ಮುಖ್ಯಸ್ಥರಿಂದ ಆಯ್ಕೆ ಮತ್ತು ನೇತೃತ್ವ ವಹಿಸುತ್ತಾನೆ. ಸರ್ಕಾರದ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಗವರ್ನರ್ ಜನರಲ್ ಅವರು ಸಾಮಾನ್ಯವಾಗಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಪಾಲು ಸದಸ್ಯರ ವಿಶ್ವಾಸವನ್ನು ಪಡೆಯುವ ರಾಜಕೀಯ ಪಕ್ಷದ ಪ್ರಸ್ತುತ ನಾಯಕರಾಗಿರುವ ವ್ಯಕ್ತಿಯನ್ನು ಪ್ರಧಾನ ಮಂತ್ರಿಯಾಗಿ ನೇಮಿಸುತ್ತಾರೆ. ಪ್ರಧಾನ ಮಂತ್ರಿಗಳ ಕಾರ್ಯಾಲಯವು (PMO) ಸರ್ಕಾರದ ಅತ್ಯಂತ ಶಕ್ತಿಶಾಲಿ ಸಂಸ್ಥೆಗಳಲ್ಲಿ ಒಂದಾಗಿದೆ, ಸಂಸತ್ತಿನ ಅನುಮೋದನೆಗಾಗಿ ಹೆಚ್ಚಿನ ಶಾಸನಗಳನ್ನು ಪ್ರಾರಂಭಿಸುತ್ತದೆ ಮತ್ತು ಕ್ರೌನ್‌ನಿಂದ ನೇಮಕಾತಿಗಾಗಿ ಆಯ್ಕೆಮಾಡುತ್ತದೆ, ಮೇಲೆ ತಿಳಿಸಿದ, ಗವರ್ನರ್ ಜನರಲ್, ಲೆಫ್ಟಿನೆಂಟ್ ಗವರ್ನರ್‌ಗಳು, ಸೆನೆಟರ್‌ಗಳು, ಫೆಡರಲ್ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಕ್ರೌನ್ ನಿಗಮಗಳು ಮತ್ತು ಸರ್ಕಾರಿ ಏಜೆನ್ಸಿಗಳ ಮುಖ್ಯಸ್ಥರು. ಎರಡನೇ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪಕ್ಷದ ನಾಯಕ ಸಾಮಾನ್ಯವಾಗಿ ಅಧಿಕೃತ ವಿರೋಧ ಪಕ್ಷದ ನಾಯಕನಾಗುತ್ತಾನೆ ಮತ್ತು ಸರ್ಕಾರವನ್ನು ಹಿಡಿತದಲ್ಲಿಟ್ಟುಕೊಳ್ಳಲು ಉದ್ದೇಶಿಸಿರುವ ವಿರೋಧಿ ಸಂಸದೀಯ ವ್ಯವಸ್ಥೆಯ ಭಾಗವಾಗಿದೆ. ಕೆನಡಾದ ಸಂಸತ್ತು ಫೆಡರಲ್ ಗೋಳದೊಳಗೆ ಎಲ್ಲಾ ಕಾನೂನು ಕಾನೂನುಗಳನ್ನು ಅಂಗೀಕರಿಸುತ್ತದೆ. ಇದು ರಾಜ, ಹೌಸ್ ಆಫ್ ಕಾಮನ್ಸ್ ಮತ್ತು ಸೆನೆಟ್ ಅನ್ನು ಒಳಗೊಂಡಿದೆ. ಕೆನಡಾವು ಸಂಸದೀಯ ಪ್ರಾಬಲ್ಯದ ಬ್ರಿಟಿಷ್ ಪರಿಕಲ್ಪನೆಯನ್ನು ಆನುವಂಶಿಕವಾಗಿ ಪಡೆದಿದ್ದರೂ, ಇದು ನಂತರ, ಸಂವಿಧಾನದ ಕಾಯಿದೆ, ೧೯೮೨ರ ಜಾರಿಗೊಳಿಸುವಿಕೆಯೊಂದಿಗೆ, ಕಾನೂನಿನ ಶ್ರೇಷ್ಠತೆಯ ಅಮೇರಿಕನ್ ಕಲ್ಪನೆಯಿಂದ ಸಂಪೂರ್ಣವಾಗಿ ರದ್ದುಗೊಂಡಿತು. ಹೌಸ್ ಆಫ್ ಕಾಮನ್ಸ್‌ನಲ್ಲಿರುವ ಸಂಸತ್ತಿನ ೩೩೮ ಸದಸ್ಯರಲ್ಲಿ ಪ್ರತಿಯೊಬ್ಬರು ಚುನಾವಣಾ ಜಿಲ್ಲೆ ಅಥವಾ ಸವಾರಿಯಲ್ಲಿ ಸರಳ ಬಹುತ್ವದಿಂದ ಚುನಾಯಿತರಾಗುತ್ತಾರೆ. ಸಂವಿಧಾನದ ಕಾಯಿದೆ, ೧೯೮೨, ಚುನಾವಣೆಗಳ ನಡುವೆ ಐದು ವರ್ಷಗಳಿಗಿಂತ ಹೆಚ್ಚು ಕಾಲ ಹಾದುಹೋಗಬಾರದು, ಆದಾಗ್ಯೂ ಕೆನಡಾ ಚುನಾವಣಾ ಕಾಯಿದೆಯು ಅಕ್ಟೋಬರ್‌ನಲ್ಲಿ "ನಿಶ್ಚಿತ" ಚುನಾವಣಾ ದಿನಾಂಕದೊಂದಿಗೆ ಇದನ್ನು ನಾಲ್ಕು ವರ್ಷಗಳಿಗೆ ಸೀಮಿತಗೊಳಿಸುತ್ತದೆ; ಸಾರ್ವತ್ರಿಕ ಚುನಾವಣೆಗಳನ್ನು ಇನ್ನೂ ಗವರ್ನರ್ ಜನರಲ್ ಅವರು ಕರೆಯಬೇಕು ಮತ್ತು ಪ್ರಧಾನ ಮಂತ್ರಿಯ ಸಲಹೆ ಅಥವಾ ಸದನದಲ್ಲಿ ಕಳೆದುಹೋದ ವಿಶ್ವಾಸ ಮತದಿಂದ ಪ್ರಚೋದಿಸಬಹುದು. ಸೆನೆಟ್‌ನ ೧೦೫ ಸದಸ್ಯರು, ಅವರ ಸ್ಥಾನಗಳನ್ನು ಪ್ರಾದೇಶಿಕ ಆಧಾರದ ಮೇಲೆ ಹಂಚಲಾಗುತ್ತದೆ, ೭೫ ವರ್ಷ ವಯಸ್ಸಿನವರೆಗೆ ಸೇವೆ ಸಲ್ಲಿಸುತ್ತಾರೆ. ಕಾನೂನು ಕೆನಡಾದ ಸಂವಿಧಾನವು ದೇಶದ ಸರ್ವೋಚ್ಚ ಕಾನೂನು ಮತ್ತು ಲಿಖಿತ ಪಠ್ಯ ಮತ್ತು ಅಲಿಖಿತ ಸಂಪ್ರದಾಯಗಳನ್ನು ಒಳಗೊಂಡಿದೆ. ಸಂವಿಧಾನ ಕಾಯಿದೆ, ೧೮೭೪(ಬ್ರಿಟಿಷ್ ಉತ್ತರ ಅಮೇರಿಕಾ ಕಾಯಿದೆ, ೧೯೮೨ರ ಮೊದಲು ೧೯೬೭ ಎಂದು ಕರೆಯಲಾಗುತ್ತಿತ್ತು), ಸಂಸದೀಯ ಪೂರ್ವನಿದರ್ಶನದ ಆಧಾರದ ಮೇಲೆ ಆಡಳಿತವನ್ನು ದೃಢಪಡಿಸಿತು ಮತ್ತು ಫೆಡರಲ್ ಮತ್ತು ಪ್ರಾಂತೀಯ ಸರ್ಕಾರಗಳ ನಡುವೆ ಅಧಿಕಾರವನ್ನು ವಿಭಜಿಸಲಾಯಿತು. ೧೯೩೧ರ ವೆಸ್ಟ್‌ಮಿನಿಸ್ಟರ್ ಶಾಸನವು ಸಂಪೂರ್ಣ ಸ್ವಾಯತ್ತತೆಯನ್ನು ನೀಡಿತು, ಮತ್ತು ಸಂವಿಧಾನ ಕಾಯಿದೆ, ೧೯೮೨ಬ್ರಿಟನ್‌ಗೆ ಎಲ್ಲಾ ಶಾಸಕಾಂಗ ಸಂಬಂಧಗಳನ್ನು ಕೊನೆಗೊಳಿಸಿತು, ಜೊತೆಗೆ ಸಂವಿಧಾನಾತ್ಮಕ ತಿದ್ದುಪಡಿ ಸೂತ್ರ ಮತ್ತು ಕೆನಡಾದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಚಾರ್ಟರ್ ಅನ್ನು ಸೇರಿಸಿತು. ಚಾರ್ಟರ್ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಖಾತರಿಪಡಿಸುತ್ತದೆ, ಅದು ಸಾಮಾನ್ಯವಾಗಿ ಯಾವುದೇ ಸರ್ಕಾರದಿಂದ ಅತಿಯಾಗಿ ಸವಾರಿ ಮಾಡಲಾಗುವುದಿಲ್ಲ; ಆದಾಗ್ಯೂ, ಒಂದು ಷರತ್ತು ಸಂಸತ್ತು ಮತ್ತು ಪ್ರಾಂತೀಯ ಶಾಸಕಾಂಗಗಳು ಚಾರ್ಟರ್‌ನ ಕೆಲವು ವಿಭಾಗಗಳನ್ನು ಐದು ವರ್ಷಗಳ ಅವಧಿಗೆ ಅತಿಕ್ರಮಿಸಲು ಅನುಮತಿಸುತ್ತದೆ. ಕೆನಡಾದ ನ್ಯಾಯಾಂಗವು ಕಾನೂನುಗಳನ್ನು ಅರ್ಥೈಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಸಂವಿಧಾನವನ್ನು ಉಲ್ಲಂಘಿಸುವ ಸಂಸತ್ತಿನ ಕಾಯಿದೆಗಳನ್ನು ಹೊಡೆದು ಹಾಕುವ ಅಧಿಕಾರವನ್ನು ಹೊಂದಿದೆ. ಕೆನಡಾದ ಸರ್ವೋಚ್ಚ ನ್ಯಾಯಾಲಯವು ಅತ್ಯುನ್ನತ ನ್ಯಾಯಾಲಯವಾಗಿದೆ, ಅಂತಿಮ ತೀರ್ಪುಗಾರ, ಮತ್ತು ಡಿಸೆಂಬರ್ ೧೮, ೨೦೧೭ ರಿಂದ ಕೆನಡಾದ ಮುಖ್ಯ ನ್ಯಾಯಾಧೀಶರಾದ ರಿಚರ್ಡ್ ವ್ಯಾಗ್ನರ್ ಅವರು ನೇತೃತ್ವ ವಹಿಸಿದ್ದಾರೆ. ಪ್ರಧಾನ ಮಂತ್ರಿ ಮತ್ತು ನ್ಯಾಯ ಮಂತ್ರಿಯ ಸಲಹೆಯ ಮೇರೆಗೆ ಗವರ್ನರ್ ಜನರಲ್ ನ್ಯಾಯಾಲಯದ ಒಂಬತ್ತು ಸದಸ್ಯರನ್ನು ನೇಮಿಸುತ್ತಾರೆ. ಫೆಡರಲ್ ಕ್ಯಾಬಿನೆಟ್ ಪ್ರಾಂತೀಯ ಮತ್ತು ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಉನ್ನತ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುತ್ತದೆ. ನಾಗರಿಕ ಕಾನೂನು ಪ್ರಾಬಲ್ಯವಿರುವ ಕ್ವಿಬೆಕ್ ಹೊರತುಪಡಿಸಿ, ಎಲ್ಲೆಡೆ ಸಾಮಾನ್ಯ ಕಾನೂನು ಚಾಲ್ತಿಯಲ್ಲಿದೆ. ಕ್ರಿಮಿನಲ್ ಕಾನೂನು ಕೇವಲ ಫೆಡರಲ್ ಜವಾಬ್ದಾರಿಯಾಗಿದೆ ಮತ್ತು ಕೆನಡಾದಾದ್ಯಂತ ಏಕರೂಪವಾಗಿದೆ. ಕ್ರಿಮಿನಲ್ ನ್ಯಾಯಾಲಯಗಳನ್ನು ಒಳಗೊಂಡಂತೆ ಕಾನೂನು ಜಾರಿ ಅಧಿಕೃತವಾಗಿ ಪ್ರಾಂತೀಯ ಜವಾಬ್ದಾರಿಯಾಗಿದೆ, ಇದನ್ನು ಪ್ರಾಂತೀಯ ಮತ್ತು ಪುರಸಭೆಯ ಪೋಲೀಸ್ ಪಡೆಗಳು ನಿರ್ವಹಿಸುತ್ತವೆ. ಹೆಚ್ಚಿನ ಗ್ರಾಮೀಣ ಮತ್ತು ಕೆಲವು ನಗರ ಪ್ರದೇಶಗಳಲ್ಲಿ, ಪೋಲೀಸಿಂಗ್ ಜವಾಬ್ದಾರಿಗಳನ್ನು ಫೆಡರಲ್ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್‌ಗೆ ಗುತ್ತಿಗೆ ನೀಡಲಾಗುತ್ತದೆ. ಆರ್ಥಿಕತೆ ಕೆನಡಾವು ಹೆಚ್ಚು ಅಭಿವೃದ್ಧಿ ಹೊಂದಿದ ಮಿಶ್ರ-ಮಾರುಕಟ್ಟೆ ಆರ್ಥಿಕತೆಯನ್ನು ಹೊಂದಿದೆ, ೨೦೨೨ ರ ಹೊತ್ತಿಗೆ ವಿಶ್ವದ ಎಂಟನೇ-ಅತಿದೊಡ್ಡ ಆರ್ಥಿಕತೆಯೊಂದಿಗೆ, ಮತ್ತು ನಾಮಮಾತ್ರದ ಜಿಡಿಪಿ ಸುಮಾರು US$2.221 ಟ್ರಿಲಿಯನ್. ಇದು ಹೆಚ್ಚು ಜಾಗತೀಕರಣಗೊಂಡ ಆರ್ಥಿಕತೆಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ವ್ಯಾಪಾರ ರಾಷ್ಟ್ರಗಳಲ್ಲಿ ಒಂದಾಗಿದೆ. ೨೦೨೧ ರಲ್ಲಿ, ಕೆನಡಾದ ಸರಕು ಮತ್ತು ಸೇವೆಗಳ ವ್ಯಾಪಾರವು $೨.೦೧೬ ಟ್ರಿಲಿಯನ್‌ಗೆ ತಲುಪಿತು. ಕೆನಡಾದ ರಫ್ತುಗಳು ಒಟ್ಟು $೬೩೭ ಶತಕೋಟಿಗಿಂತ ಹೆಚ್ಚು, ಅದರ ಆಮದು ಮಾಡಿದ ಸರಕುಗಳು $೬೩೧ ಶತಕೋಟಿಗಿಂತ ಹೆಚ್ಚು ಮೌಲ್ಯದ್ದಾಗಿದೆ, ಅದರಲ್ಲಿ ಸುಮಾರು $೩೯೧ ಶತಕೋಟಿ ಯುನೈಟೆಡ್ ಸ್ಟೇಟ್ಸ್‌ನಿಂದ ಹುಟ್ಟಿಕೊಂಡಿತು. ೨೦೧೮ ರಲ್ಲಿ, ಕೆನಡಾವು $೨೨ ಬಿಲಿಯನ್ ಸರಕುಗಳಲ್ಲಿ ವ್ಯಾಪಾರ ಕೊರತೆಯನ್ನು ಹೊಂದಿತ್ತು ಮತ್ತು $೨೫ ಶತಕೋಟಿಯಷ್ಟು ಸೇವೆಗಳಲ್ಲಿ ವ್ಯಾಪಾರ ಕೊರತೆಯನ್ನು ಹೊಂದಿತ್ತು. ಕೆನಡಾವು ಬಲವಾದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರವನ್ನು ಹೊಂದಿದೆ, ಕ್ರೆಡಿಟ್ ಯೂನಿಯನ್‌ಗಳಲ್ಲಿ ವಿಶ್ವದ ಅತಿ ಹೆಚ್ಚು ತಲಾ ಸದಸ್ಯತ್ವವನ್ನು ಹೊಂದಿದೆ. ಇದು ಭ್ರಷ್ಟಾಚಾರ ಗ್ರಹಿಕೆಗಳ ಸೂಚ್ಯಂಕದಲ್ಲಿ (೨೦೨೩ ರಲ್ಲಿ ೧೪ನೇ ಸ್ಥಾನದಲ್ಲಿದೆ) ಮತ್ತು "ವಿಶ್ವದ ಅತ್ಯಂತ ಕಡಿಮೆ ಭ್ರಷ್ಟ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ". ಇದು ಜಾಗತಿಕ ಸ್ಪರ್ಧಾತ್ಮಕತೆಯ ವರದಿಯಲ್ಲಿ (೨೦೧೯ ರಲ್ಲಿ ೧೪ ನೇ ಸ್ಥಾನ) ಮತ್ತು ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌ಗಳಲ್ಲಿ (೨೦೨೨ ರಲ್ಲಿ ೧೫ ನೇ ಸ್ಥಾನದಲ್ಲಿದೆ). ವಸತಿ ಕೈಗೆಟುಕುವಿಕೆಮತ್ತು ವಿದೇಶಿ ನೇರ ಹೂಡಿಕೆಗಾಗಿ ಕೆನಡಾ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಸ್ಥಾನ ಪಡೆದಿದೆ. ೨೦ನೇ ಶತಮಾನದ ಆರಂಭದಿಂದಲೂ, ಕೆನಡಾದ ಉತ್ಪಾದನೆ, ಗಣಿಗಾರಿಕೆ ಮತ್ತು ಸೇವಾ ಕ್ಷೇತ್ರಗಳ ಬೆಳವಣಿಗೆಯು ರಾಷ್ಟ್ರವನ್ನು ಬಹುಮಟ್ಟಿಗೆ ಗ್ರಾಮೀಣ ಆರ್ಥಿಕತೆಯಿಂದ ನಗರೀಕರಣಗೊಂಡ, ಕೈಗಾರಿಕೆಯಾಗಿ ಪರಿವರ್ತಿಸಿದೆ. ಇತರ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಂತೆ, ಕೆನಡಾದ ಆರ್ಥಿಕತೆಯು ಸೇವಾ ಉದ್ಯಮದಿಂದ ಪ್ರಾಬಲ್ಯ ಹೊಂದಿದೆ, ಇದು ದೇಶದ ಮುಕ್ಕಾಲು ಭಾಗದಷ್ಟು ಉದ್ಯೋಗಿಗಳನ್ನು ಬಳಸಿಕೊಳ್ಳುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಕೆನಡಾವು ಅಸಾಧಾರಣವಾಗಿ ಪ್ರಮುಖವಾದ ಪ್ರಾಥಮಿಕ ವಲಯವನ್ನು ಹೊಂದಿದೆ, ಅದರಲ್ಲಿ ಅರಣ್ಯ ಮತ್ತು ಪೆಟ್ರೋಲಿಯಂ ಉದ್ಯಮಗಳು ಅತ್ಯಂತ ಪ್ರಮುಖವಾದ ಘಟಕಗಳಾಗಿವೆ.ಕೃಷಿ ಕಷ್ಟಕರವಾಗಿರುವ ಉತ್ತರ ಕೆನಡಾದ ಅನೇಕ ಪಟ್ಟಣಗಳು ಹತ್ತಿರದ ಗಣಿಗಳಿಂದ ಅಥವಾ ಮರದ ಮೂಲಗಳಿಂದ ಸಮರ್ಥವಾಗಿವೆ. ಸಂಸ್ಕೃತಿ ಕೆನಡಾದ ಸಂಸ್ಕೃತಿಯು ಅದರ ವಿಶಾಲ ವ್ಯಾಪ್ತಿಯ ರಾಷ್ಟ್ರೀಯತೆಗಳಿಂದ ಪ್ರಭಾವವನ್ನು ಪಡೆಯುತ್ತದೆ ಮತ್ತು "ನ್ಯಾಯ ಸಮಾಜ"ವನ್ನು ಉತ್ತೇಜಿಸುವ ನೀತಿಗಳು ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟಿವೆ. ೧೯೬೦ರ ದಶಕದಿಂದಲೂ, ಕೆನಡಾ ತನ್ನ ಎಲ್ಲಾ ಜನರಿಗೆ ಸಮಾನತೆ ಮತ್ತು ಒಳಗೊಳ್ಳುವಿಕೆಗೆ ಒತ್ತು ನೀಡಿದೆ. ಬಹುಸಾಂಸ್ಕೃತಿಕತೆಯ ಅಧಿಕೃತ ರಾಜ್ಯ ನೀತಿಯು ಕೆನಡಾದ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ ಮತ್ತು ಕೆನಡಾದ ಗುರುತಿನ ಪ್ರಮುಖ ವಿಶಿಷ್ಟ ಅಂಶವಾಗಿದೆ. ಕ್ವಿಬೆಕ್‌ನಲ್ಲಿ, ಸಾಂಸ್ಕೃತಿಕ ಗುರುತು ಪ್ರಬಲವಾಗಿದೆ ಮತ್ತು ಇಂಗ್ಲೀಷ್ ಕೆನಡಿಯನ್ ಸಂಸ್ಕೃತಿಯಿಂದ ಭಿನ್ನವಾಗಿರುವ ಫ್ರೆಂಚ್ ಕೆನಡಿಯನ್ ಸಂಸ್ಕೃತಿಯಿದೆ. ಆಯ್ದ ವಲಸೆ, ಸಾಮಾಜಿಕ ಏಕೀಕರಣ ಮತ್ತು ಬಲಪಂಥೀಯ ರಾಜಕೀಯದ ನಿಗ್ರಹವನ್ನು ಆಧರಿಸಿದ ಬಹುಸಾಂಸ್ಕೃತಿಕತೆಗೆ ಒತ್ತು ನೀಡುವ ಆಡಳಿತದ ಕೆನಡಾದ ವಿಧಾನವು ವ್ಯಾಪಕವಾದ ಸಾರ್ವಜನಿಕ ಬೆಂಬಲವನ್ನು ಹೊಂದಿದೆ. ಸಾರ್ವಜನಿಕವಾಗಿ ನಿಧಿಯ ಆರೋಗ್ಯ ರಕ್ಷಣೆ, ಸಂಪತ್ತಿನ ಮರುಹಂಚಿಕೆಗೆ ಹೆಚ್ಚಿನ ತೆರಿಗೆ, ಮರಣದಂಡನೆಯ ಕಾನೂನುಬಾಹಿರ, ಬಡತನವನ್ನು ತೊಡೆದುಹಾಕಲು ಬಲವಾದ ಪ್ರಯತ್ನಗಳು, ಕಟ್ಟುನಿಟ್ಟಾದ ಬಂದೂಕು ನಿಯಂತ್ರಣ, ಮಹಿಳೆಯರ ಹಕ್ಕುಗಳ ಕಡೆಗೆ ಸಾಮಾಜಿಕ ಉದಾರ ವರ್ತನೆ (ಗರ್ಭಧಾರಣೆಯ ಅಂತ್ಯದಂತಹ) ಮತ್ತು LGBTQ ಹಕ್ಕುಗಳು ಮತ್ತು ಕಾನೂನುಬದ್ಧ ದಯಾಮರಣ ಮತ್ತು ಗಾಂಜಾ ಬಳಕೆ ಕೆನಡಾದ ರಾಜಕೀಯ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸೂಚಕವಾಗಿದೆ. ಕೆನಡಿಯನ್ನರು ದೇಶದ ವಿದೇಶಿ ನೆರವು ನೀತಿಗಳು, ಶಾಂತಿಪಾಲನಾ ಪಾತ್ರಗಳು, ರಾಷ್ಟ್ರೀಯ ಉದ್ಯಾನ ವ್ಯವಸ್ಥೆ ಮತ್ತು ಕೆನಡಾದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಚಾರ್ಟರ್‌ನೊಂದಿಗೆ ಗುರುತಿಸಿಕೊಳ್ಳುತ್ತಾರೆ. ಐತಿಹಾಸಿಕವಾಗಿ, ಕೆನಡಾವು ಬ್ರಿಟಿಷ್, ಸ್ಥಳೀಯ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿಂದ ಪ್ರಭಾವಿತವಾಗಿದೆ. ತಮ್ಮ ಭಾಷೆ, ಕಲೆ ಮತ್ತು ಸಂಗೀತದ ಮೂಲಕ ಸ್ಥಳೀಯ ಜನರು ಕೆನಡಾದ ಗುರುತಿನ ಮೇಲೆ ಪ್ರಭಾವ ಬೀರುವುದನ್ನು ಮುಂದುವರೆಸಿದ್ದಾರೆ. ೨೦ ನೇ ಶತಮಾನದ ಅವಧಿಯಲ್ಲಿ, ಆಫ್ರಿಕನ್, ಕೆರಿಬಿಯನ್ ಮತ್ತು ಏಷ್ಯನ್ ರಾಷ್ಟ್ರೀಯತೆಗಳೊಂದಿಗೆ ಕೆನಡಿಯನ್ನರು ಕೆನಡಿಯನ್ ಗುರುತನ್ನು ಮತ್ತು ಅದರ ಸಂಸ್ಕೃತಿಯನ್ನು ಸೇರಿಸಿದ್ದಾರೆ ಉಲ್ಲೇಖಗಳು ಉತ್ತರ ಅಮೇರಿಕ ಖಂಡದ ದೇಶಗಳು ವಿಕಿ ಇ-ಲರ್ನಿಂಗ್‍ನಲ್ಲಿ ವಿಸ್ತರಿಸಿದ ಲೇಖನ
2288
https://kn.wikipedia.org/wiki/%E0%B2%9C%E0%B2%A8%E0%B2%B5%E0%B2%B0%E0%B2%BF
ಜನವರಿ
ಜನವರಿ ಆಧುನಿಕ ತಾರೀಖು ಪಟ್ಟಿಯ (ಕ್ರೈಸ್ತವರ್ಷದ) ಮೊದಲನೆಯ ತಿಂಗಳು. 31 ದಿವಸಗಳಿವೆ. ಜನವರಿಯ ಮೊದಲನೆಯ ದಿವಸ ನೂತನ ವರ್ಷಾರಂಭವಾಗುತ್ತದೆ. ಕ್ರಿ.ಪೂ. ಸು. 153ರ ಜನವರಿ ವರ್ಷದ ಹನ್ನೊಂದನೆಯ ತಿಂಗಳೆಂದು ಪರಿಗಣಿತವಾಗಿತ್ತು. ಗ್ರೆಗೋರಿಯನ್ ತಾರೀಖುಪಟ್ಟಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಾರ್ವತ್ರಿಕ ಮನ್ನಣೆ ದೊರೆತ ಬಳಿಕ (1752) ಜನವರಿಯೇ ವರ್ಷದ ಪ್ರಾರಂಭ ತಿಂಗಳು ಎಂಬುದು ರೂಢಿಗೆ ಬಂತು. ಭಾರತೀಯ ಪಂಚಾಂಗದ ರೀತ್ಯ ಮಾರ್ಗಶಿರ-ಪುಷ್ಯಮಾಸಗಳು ಜನವರಿಯಲ್ಲಿ ಕಾಣಬರುತ್ತವೆ. ಜನವರಿ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಮೊದಲನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ರೋಮ್‍ನ ಪುರಾಣದಲ್ಲಿ ದ್ವಾರಗಳ ದೇವತೆಯಾದ ಜಾನಸ್‌ನಿಂದ ಈ ತಿಂಗಳ ಹೆಸರನ್ನು ಪಡೆಯಲಾಗಿದೆ - ಜನವರಿ ತಿಂಗಳು ಹೊಸ ವರ್ಷಕ್ಕೆ ದ್ವಾರದಂತೆ ಎಂಬುದು ಈ ಹೆಸರಿಗೆ ಪ್ರೇರಣೆ. ಪ್ರಮುಖ ದಿನಗಳು ಪ್ರತಿ ವರ್ಷದ ಮೊದಲ ದಿನ ಅಂದರೆ, ೧ನೇ ತಾರೀಖು ವಿಶ್ವದಾದ್ಯಂತ 'ಹೊಸ ವರ್ಷದ ದಿನ'ವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಜನವರಿ ೧೧: ಭಾರತದ ಎರಡನೇಯ ಪ್ರಧಾನಮಂತ್ರಿ ಲಾಲ್ ಬಹಾದುರ್ ಶಾಸ್ತ್ರಿಯವರು ಮರಣ ಹೊಂದಿದ ದಿನ. ಜನವರಿ ೧೪ ಅಥವಾ ೧೫ ರಂದು ಮಕರ ಸಂಕ್ರಾಂತಿ ಹಬ್ಬವಾಗಿ ಆಚರಿಸಲಾಗುತ್ತದೆ. ಇದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನ. ಜನವರಿ ೨೬: ಭಾರತದ ಗಣರಾಜ್ಯೋತ್ಸವ ದಿನ.ಭಾರತವು ೧೯೫೦ನೇ ಇಸವಿಯಲ್ಲಿ ಈ ದಿನದಂದು ಗಣರಾಜ್ಯವಾಗಿ ಘೋಷಿಸಲ್ಪಟ್ಟಿತು. ಜನವರಿ ೩೦: ಭಾರತದ ರಾಷ್ತ್ರಪಿತ ಮಹಾತ್ಮ ಗಾಂಧೀಜಿಯವರು ಮರಣ ಹೊಂದಿದ ದಿನ. ಈ ದಿನವನ್ನು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. ಜನವರಿ ೨೩ : ಭಾರತದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನ. ಜನವರಿ ೨೪: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಜನವರಿ ೨೫: ರಾಷ್ಟ್ರೀಯ ಪ್ರವಾಸೋದ್ಯಮ ದಿನ ತಿಂಗಳುಗಳು ಜನವರಿ
2289
https://kn.wikipedia.org/wiki/%E0%B2%AE%E0%B2%BE%E0%B2%B0%E0%B3%8D%E0%B2%9A%E0%B3%8D
ಮಾರ್ಚ್
ಮಾರ್ಚ್ - ಗ್ರೆಗೋರಿಯನ್ ಕ್ಯಾಲೆಂಡರ್‌ನ ಮೂರನೆಯ ತಿಂಗಳು. ಇದರಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ತಿಂಗಳುಗಳು ಮಾರ್ಚ್
2290
https://kn.wikipedia.org/wiki/%E0%B2%8F%E0%B2%AA%E0%B3%8D%E0%B2%B0%E0%B2%BF%E0%B2%B2%E0%B3%8D
ಏಪ್ರಿಲ್
ಏಪ್ರಿಲ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ನಾಲ್ಕನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಈ ತಿಂಗಳ ಮೊದಲ ದಿನವನ್ನು ವಿಶ್ವದ ಬಹುತೇಕ ಕಡೆ ಮೂರ್ಖರ ದಿನ ಎಂದು ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ಬರುವ ಇತರ ಪ್ರಮುಖ ದಿನಗಳು ಹೀಗಿವೆ: ೮ ನೇ ತಾರೀಖು (೨೦೦೬)ಹಾಲಿವುಡ್ ಚಲನಚಿತ್ರ ಜಂಗಲ್ ಬುಕ್ (೨೦೧೬) ಚಲನಚಿತ್ರ. (೨೦೧೬) ಮುಂಬೈನಲ್ಲಿ ಪ್ರದರ್ಶನಗೊಂಡಿತು. ಏಪ್ರಿಲ್ ೨೬, ೧೯೭೭ರಂದು ಕನ್ನಡ ರಂಗಭೂಮಿ ಕಲಾವಿದ ಅವಿನಾಶ್ ಕಾಮತ್ ಜನನ. ೧೪ ನೇ ತಾರೀಖು ಸೌರಮಾನ ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿ. ೨೪ ನೇ ತಾರೀಖು ಕನ್ನಡದ ವರನಟ ಡಾ.ರಾಜ್‍ಕುಮಾರ್ ಜನ್ಮದಿನ. ೧೨ ನೇ ತಾರೀಖು (೨೦೦೬) ಕನ್ನಡದ ವರನಟ ಡಾ.ರಾಜಕುಮಾರ್ ನಿಧನ. ಏಪ್ರಿಲ್ ೨೪ ೧೯೭೩ ರಂದು ಸಚಿನ್ ರಮೇಶ್ ತೆಂಡೂಲ್ಕರ್ ಜನನ. ತಿಂಗಳುಗಳು ಏಪ್ರಿಲ್
2291
https://kn.wikipedia.org/wiki/%E0%B2%AE%E0%B3%87
ಮೇ
ಜೂಲಿಯನ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್‌ಗಳಲ್ಲಿ ಮೇ ವರ್ಷದ ಐದನೇ ತಿಂಗಳು ಮತ್ತು ೩೧ ದಿನಗಳ ಉದ್ದವನ್ನು ಹೊಂದಿರುವ ಏಳು ತಿಂಗಳುಗಳಲ್ಲಿ ಮೂರನೆಯದು. ಮೇ ಉತ್ತರ ಗೋಳಾರ್ಧದಲ್ಲಿ ವಸಂತ ತಿಂಗಳು ಮತ್ತು ದಕ್ಷಿಣ ಗೋಳಾರ್ಧದಲ್ಲಿ ಶರತ್ಕಾಲದ ತಿಂಗಳು. ಆದ್ದರಿಂದ, ದಕ್ಷಿಣ ಗೋಳಾರ್ಧದಲ್ಲಿ ಮೇ ಉತ್ತರ ಗೋಳಾರ್ಧದಲ್ಲಿ ನವೆಂಬರ್‌ಗೆ ಋತುಮಾನಕ್ಕೆ ಸಮಾನವಾಗಿರುತ್ತದೆ ಮತ್ತು ಪ್ರತಿಯಾಗಿ ಮೇ ಅಂತ್ಯವು ಸಾಮಾನ್ಯವಾಗಿ ಯುನೈಟೆಡ್ ಸ್ಟೇಟ್ಸ್ ( ಮೆಮೋರಿಯಲ್ ಡೇ ) ಮತ್ತು ಕೆನಡಾದಲ್ಲಿ ( ವಿಕ್ಟೋರಿಯಾ ಡೇ ) ಬೇಸಿಗೆ ರಜೆಯ ಋತುವಿನ ಆರಂಭವನ್ನು ಸೂಚಿಸುತ್ತದೆ. ಇದು ಸೆಪ್ಟೆಂಬರ್ ಮೊದಲ ಸೋಮವಾರದಂದು ಕಾರ್ಮಿಕರ ದಿನದಂದು ಕೊನೆಗೊಳ್ಳುತ್ತದೆ. ಮೇ ( ಲ್ಯಾಟಿನ್ ಭಾಷೆಯಲ್ಲಿ, ಮೈಯಸ್ ) ಗ್ರೀಕ್ ದೇವತೆ ಮೈಯಾಗೆ ಹೆಸರಿಸಲಾಯಿತು. ಅವರು ರೋಮನ್ ಯುಗದ ಫಲವತ್ತತೆಯ ದೇವತೆಯಾದ ಬೋನಾ ಡಿಯಾದೊಂದಿಗೆ ಗುರುತಿಸಲ್ಪಟ್ಟರು. ಅವರ ಹಬ್ಬವನ್ನು ಮೇ ತಿಂಗಳಲ್ಲಿ ನಡೆಸಲಾಯಿತು. ಇದಕ್ಕೆ ವ್ಯತಿರಿಕ್ತವಾಗಿ, ರೋಮನ್ ಕವಿ ಓವಿಡ್ ಎರಡನೇ ವ್ಯುತ್ಪತ್ತಿಯನ್ನು ಒದಗಿಸುತ್ತಾನೆ. ಅದರಲ್ಲಿ ಮೇ ತಿಂಗಳನ್ನು ಮೈಯೊರ್‌ಗಳಿಗೆ ಹೆಸರಿಸಲಾಗಿದೆ. ಲ್ಯಾಟಿನ್‌ನಲ್ಲಿ "ಹಿರಿಯರು" ಎಂದು ಹೆಸರಿಸಲಾಗಿದೆ ಮತ್ತು ಮುಂದಿನ ತಿಂಗಳು (ಜೂನ್) ಯುನಿಯೋರ್ಸ್ ಅಥವಾ "ಯುವಜನರಿಗೆ" ಹೆಸರಿಸಲಾಗಿದೆ ಎಂದು ಹೇಳುತ್ತಾರೆ. " ( ಫಾಸ್ಟಿ ೪.೮೮). ಎಟಾ ಅಕ್ವೇರಿಡ್ಸ್ ಉಲ್ಕಾಪಾತವು ಮೇ ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಸುಮಾರು ಏಪ್ರಿಲ್ ೨೧ ರಿಂದ ಮೇ ೨೦ ರವರೆಗೆ ಪ್ರತಿ ವರ್ಷ ಮೇ ೬ ರಂದು ಅಥವಾ ಅದರ ಆಸುಪಾಸಿನಲ್ಲಿ ಗರಿಷ್ಠ ಚಟುವಟಿಕೆಯೊಂದಿಗೆ ಗೋಚರಿಸುತ್ತದೆ. ಮೇ ೨೨ ರಿಂದ ಜುಲೈ ೨ ರವರೆಗೆ ಅರಿಯೆಟಿಡ್ಸ್ ಶವರ್ ಮತ್ತು ಜೂನ್ ೭ ರಂದು ಉತ್ತುಂಗಕ್ಕೇರುತ್ತದೆ. ವರ್ಜಿನಿಡ್ಸ್ ಮೇ ತಿಂಗಳಲ್ಲಿ ವಿವಿಧ ದಿನಾಂಕಗಳಲ್ಲಿ ಸ್ನಾನ ಮಾಡುತ್ತಾರೆ. ಪ್ರಾಚೀನ ರೋಮನ್ ಆಚರಣೆಗಳು ಪ್ರಾಚೀನ ರೋಮ್‌ನ ಕ್ಯಾಲೆಂಡರ್ನ ಅಡಿಯಲ್ಲಿ, ಬೋನಾ ಡಿಯಾ ಹಬ್ಬವು ಮೇ ೧ ರಂದು, ಅರ್ಗೆಯ್ ಮೇ ೧೪ ಅಥವಾ ಮೇ ೧೫ ರಂದು, ಅಗೋನಾಲಿಯಾ ಮೇ ೨೧ ರಂದು ಮತ್ತು ಅಂಬರ್ವಾಲಿಯಾ ಮೇ ೨೯ ರಂದು ಬಿದ್ದಿತು. ಫ್ಲೋರಾಲಿಯಾವನ್ನು ರಿಪಬ್ಲಿಕನ್ ಯುಗದಲ್ಲಿ ಏಪ್ರಿಲ್ ೨೭ ರಂದು ಅಥವಾ ಜೂಲಿಯನ್ ಕ್ಯಾಲೆಂಡರ್ನಲ್ಲಿ ಏಪ್ರಿಲ್ ೨೮ ರಂದು ನಡೆಸಲಾಯಿತು ಮತ್ತು ಮೇ ೩ ರವರೆಗೆ ನಡೆಯಿತು. ಲೆಮುರಿಯಾ (ಹಬ್ಬ) ಜೂಲಿಯನ್ ಕ್ಯಾಲೆಂಡರ್ ಅಡಿಯಲ್ಲಿ ೯,೧೧ ಮತ್ತು ೧೩ ಮೇ ರಂದು ಬಿದ್ದಿತು. ಎಸ್ಕುಲಾಪಿಯಸ್ ಮತ್ತು ಹೈಜಿಯಾ ಕಾಲೇಜ್ ರೊಸಾಲಿಯಾ (ಉತ್ಸವ) ದ ಎರಡು ಹಬ್ಬಗಳನ್ನು ಆಚರಿಸಿತು. ಒಂದು ಮೇ ೧೧ ರಂದು ಮತ್ತು ಒಂದು ಮೇ ೨೨ ರಂದು. ಮೇ ೨೪-೨೬ ರಂದು ರೊಸಾಲಿಯಾವನ್ನು ಪೆರ್ಗಾಮನ್‌ನಲ್ಲಿ ಆಚರಿಸಲಾಯಿತು. ರೊಸಾಲಿಯಾ ಸಿಗ್ನೊರಮ್ ಎಂಬ ಮಿಲಿಟರಿ ರೊಸಾಲಿಯಾ ಉತ್ಸವವು ಮೇ ೩೧ ರಂದು ಸಹ ನಡೆಯಿತು. ಲುಡಿ ಫ್ಯಾಬರಿಸಿಯನ್ನು ಮೇ ೨೯ - ಜೂನ್ ೧ ರಂದು ಆಚರಿಸಲಾಯಿತು. ಬುಧವು ಮೇ ತಿಂಗಳ ಐಡ್ಸ್ (ಮೇ ೧೫) ರಂದು ತ್ಯಾಗವನ್ನು ಸ್ವೀಕರಿಸುತ್ತದೆ. ಟ್ಯೂಬಿಲುಸ್ಟ್ರಿಯಮ್ ಮೇ ೨೩ ರಂದು ಮತ್ತು ಮಾರ್ಚ್‌ನಲ್ಲಿ ನಡೆಯಿತು. ಈ ದಿನಾಂಕಗಳು ಆಧುನಿಕ ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಹೊಂದಿಕೆಯಾಗುವುದಿಲ್ಲ. ಚಿಹ್ನೆಗಳು ಮೇ ಜನ್ಮಗಲ್ಲು ಪಚ್ಚೆಯಾಗಿದ್ದು, ಅದು ಪ್ರೀತಿ ಮತ್ತು ಯಶಸ್ಸಿನ ಸಂಕೇತವಾಗಿದೆ. ಜನ್ಮ ಹೂವುಗಳು ಕಣಿವೆಯ ಲಿಲಿ ಮತ್ತು ಕ್ರಾಟೇಗಸ್ ಮೊನೊಜಿನಾ . ಇವೆರಡೂ ಏಷ್ಯಾ, ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ದಕ್ಷಿಣದ ಅಪಲಾಚಿಯನ್ ಪರ್ವತಗಳಲ್ಲಿ ತಂಪಾದ ಸಮಶೀತೋಷ್ಣ ಉತ್ತರ ಗೋಳಾರ್ಧದಾದ್ಯಂತ ಸ್ಥಳೀಯವಾಗಿವೆ. ಆದರೆ ಸಮಶೀತೋಷ್ಣ ಹವಾಮಾನ ಪ್ರಪಂಚದಾದ್ಯಂತ ನೈಸರ್ಗಿಕವಾಗಿವೆ. "ಮೇಫ್ಲವರ್" ಎಪಿಗೇಯಾ ರಿಪೆನ್ಸ್ ಮೇ ತಿಂಗಳ ಉತ್ತರ ಅಮೆರಿಕಾದ ಮುಂಚೂಣಿಯಲ್ಲಿದೆ ಮತ್ತು ನೋವಾ ಸ್ಕಾಟಿಯಾ ಮತ್ತು ಮ್ಯಾಸಚೂಸೆಟ್ಸ್ ಎರಡರ ಹೂವಿನ ಲಾಂಛನವಾಗಿದೆ. ಇದರ ಸ್ಥಳೀಯ ಶ್ರೇಣಿಯು ನ್ಯೂಫೌಂಡ್‌ಲ್ಯಾಂಡ್‌ನಿಂದ ದಕ್ಷಿಣಕ್ಕೆ ಫ್ಲೋರಿಡಾದವರೆಗೆ, ಪಶ್ಚಿಮದಿಂದ ದಕ್ಷಿಣದ ಶ್ರೇಣಿಯಲ್ಲಿ ಕೆಂಟುಕಿಯವರೆಗೆ ಮತ್ತು ಉತ್ತರದಲ್ಲಿ ವಾಯುವ್ಯ ಪ್ರಾಂತ್ಯಗಳವರೆಗೆ ವ್ಯಾಪಿಸಿದೆ. ರಾಶಿಚಕ್ರ ಚಿಹ್ನೆಗಳು ವೃಷಭ (ಮೇ ೨೦ ರವರೆಗೆ) ಮತ್ತು ಜೆಮಿನಿ (ಮೇ ೨೧ ರಿಂದ). ಆಚರಣೆಗಳು ತಿಂಗಳ ಅವಧಿಯ ಕಾರ್ಮಿಕ ವರ್ಗದ ಇತಿಹಾಸದ ತಿಂಗಳು. ಉತ್ತಮ ಶ್ರವಣ ಮತ್ತು ಮಾತಿನ ತಿಂಗಳು. ಕ್ಯಾಥೋಲಿಕ್ ಸಂಪ್ರದಾಯದಲ್ಲಿ, ಮೇ ಪೂಜ್ಯ ವರ್ಜಿನ್ ಮೇರಿಯ ತಿಂಗಳು. ಪೂಜ್ಯ ವರ್ಜಿನ್ ಮೇರಿಗೆ ಮೇ ಭಕ್ತಿಗಳನ್ನು ನೋಡಿ ಸೆಲಿಯಾಕ್ ಜಾಗೃತಿ ತಿಂಗಳು. ಸಿಸ್ಟಿಕ್ ಫೈಬ್ರೋಸಿಸ್ ಜಾಗೃತಿ ತಿಂಗಳು. ಎಹ್ಲರ್ಸ್-ಡಾನ್ಲೋಸ್ ಸಿಂಡ್ರೋಮ್ ಜಾಗೃತಿ ತಿಂಗಳು. ಫ್ಲೋರೆಸ್ ಡಿ ಮೇಯೊ (ಫಿಲಿಪೈನ್ಸ್). ವನ್ಯಜೀವಿ ತಿಂಗಳಿಗಾಗಿ ಉದ್ಯಾನ. ಹಂಟಿಂಗ್ಟನ್ಸ್ ಡಿಸೀಸ್ ಅವೇರ್ನೆಸ್ ತಿಂಗಳು (ಅಂತರರಾಷ್ಟ್ರೀಯ) ಅಂತರಾಷ್ಟ್ರೀಯ ಮೆಡಿಟರೇನಿಯನ್ ಡಯಟ್ ತಿಂಗಳು. ಕಾಮತಾನ್ ಸುಗ್ಗಿಯ ಹಬ್ಬ ( ಲಬುವಾನ್, ಸಬಾ ) ನ್ಯೂಜಿಲೆಂಡ್ ಸಂಗೀತ ತಿಂಗಳು (ನ್ಯೂಜಿಲೆಂಡ್). ರಾಷ್ಟ್ರೀಯ ಸಾಕುಪ್ರಾಣಿ ತಿಂಗಳು (ಯುನೈಟೆಡ್ ಕಿಂಗ್‌ಡಮ್). ರಾಷ್ಟ್ರೀಯ ಸ್ಮೈಲ್ ತಿಂಗಳು (ಯುನೈಟೆಡ್ ಕಿಂಗ್‌ಡಮ್). ವಿಮೋಚನೆಯ ಋತು (ಏಪ್ರಿಲ್ ೧೪ ರಿಂದ ಆಗಸ್ಟ್ ೨೩) (ಬಾರ್ಬಡೋಸ್). ಚರ್ಮದ ಕ್ಯಾನ್ಸರ್ ಜಾಗೃತಿ ತಿಂಗಳು. ದಕ್ಷಿಣ ಏಷ್ಯಾದ ಪರಂಪರೆಯ ತಿಂಗಳು (ಅಂತರರಾಷ್ಟ್ರೀಯ). ವಿಶ್ವ ವ್ಯಾಪಾರ ತಿಂಗಳು. ಯುನೈಟೆಡ್ ಸ್ಟೇಟ್ಸ್ ಏಷ್ಯನ್ ಅಮೆರಿಕನ್ ಮತ್ತು ಪೆಸಿಫಿಕ್ ದ್ವೀಪವಾಸಿಗಳ ಪರಂಪರೆ ತಿಂಗಳು ರಾಷ್ಟ್ರೀಯ ಎಎಲ್ಎಸ್ ಜಾಗೃತಿ ತಿಂಗಳು ಬೈಸಿಕಲ್ ತಿಂಗಳು ರಾಷ್ಟ್ರೀಯ ಬ್ರೈನ್ ಟ್ಯೂಮರ್ ಜಾಗೃತಿ ತಿಂಗಳು ರಾಷ್ಟ್ರೀಯ ಬರ್ಗರ್ ತಿಂಗಳು ಸಮುದಾಯ ಕ್ರಿಯಾ ಜಾಗೃತಿ ತಿಂಗಳು (ಉತ್ತರ ಡಕೋಟಾ) ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ತಿಂಗಳು ರಾಷ್ಟ್ರೀಯ ಪೋಷಕ ಆರೈಕೆ ತಿಂಗಳು ರಾಷ್ಟ್ರೀಯ ಗಾಲ್ಫ್ ತಿಂಗಳು ಯಹೂದಿ ಅಮೆರಿಕನ್ ಹೆರಿಟೇಜ್ ತಿಂಗಳು ಹೈಟಿಯನ್ ಪರಂಪರೆ ತಿಂಗಳು ಹೆಪಟೈಟಿಸ್ ಜಾಗೃತಿ ತಿಂಗಳು ಮಾನಸಿಕ ಆರೋಗ್ಯ ಜಾಗೃತಿ ತಿಂಗಳು ಮಾನಸಿಕ ಆರೋಗ್ಯ ಜಾಗೃತಿ ತಿಂಗಳು ರಾಷ್ಟ್ರೀಯ ಮಿಲಿಟರಿ ಮೆಚ್ಚುಗೆ ತಿಂಗಳು ರಾಷ್ಟ್ರೀಯ ಚಲಿಸುವ ತಿಂಗಳು ರಾಷ್ಟ್ರೀಯ ಆಸ್ಟಿಯೊಪೊರೋಸಿಸ್ ತಿಂಗಳು ರಾಷ್ಟ್ರೀಯ ಪಾರ್ಶ್ವವಾಯು ಜಾಗೃತಿ ಮಾಸಾಚರಣೆ ರಾಷ್ಟ್ರೀಯ ಜಲ ಸುರಕ್ಷತಾ ಮಾಸಾಚರಣೆ ವಯಸ್ಸಾದ ಅಮೆರಿಕನ್ನರ ತಿಂಗಳು ಗ್ರೆಗೋರಿಯನ್ ಅಲ್ಲದ (ಎಲ್ಲಾ ಬಹಾಯಿ, ಇಸ್ಲಾಮಿಕ್ ಮತ್ತು ಯಹೂದಿ ಆಚರಣೆಗಳು ಪಟ್ಟಿ ಮಾಡಲಾದ ದಿನಾಂಕದ ಮೊದಲು ಸೂರ್ಯಾಸ್ತಮಾನದಲ್ಲಿ ಪ್ರಾರಂಭವಾಗುತ್ತವೆ ಮತ್ತು ಇಲ್ಲದಿದ್ದರೆ ಗಮನಿಸದ ಹೊರತು ಪ್ರಶ್ನಾರ್ಹ ದಿನಾಂಕದ ಸೂರ್ಯಾಸ್ತಮಾನದಲ್ಲಿ ಕೊನೆಗೊಳ್ಳುತ್ತವೆ. ) ಬಹಾಯಿ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ. ಚೀನೀ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ ಹೀಬ್ರೂ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ ಇಸ್ಲಾಮಿಕ್ ಕ್ಯಾಲೆಂಡರ್ ನಿಗದಿಪಡಿಸಿದ ಆಚರಣೆಗಳ ಪಟ್ಟಿ ಸೌರ ಹಿಜ್ರಿ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ ಚಲಿಸಬಲ್ಲ, ೨೦೨೦ ಫಿ ತಾ ಖೋನ್ (ಡಾನ್ ಸಾಯಿ, ಲೋಯಿ ಪ್ರಾಂತ್ಯ, ಇಸಾನ್, ಥೈಲ್ಯಾಂಡ್) ದಿನಾಂಕಗಳನ್ನು ಗ್ರಾಮ ಮಾಧ್ಯಮದಿಂದ ಆಯ್ಕೆಮಾಡಲಾಗುತ್ತದೆ ಮತ್ತು ಮಾರ್ಚ್ ಮತ್ತು ಜುಲೈ ನಡುವೆ ಎಲ್ಲಿ ಬೇಕಾದರೂ ನಡೆಯಬಹುದು. ರಾಷ್ಟ್ರೀಯ ಸಣ್ಣ ವ್ಯಾಪಾರ ವಾರ ( ಯುನೈಟೆಡ್ ಸ್ಟೇಟ್ಸ್ ): ಮೇ ೫ - ೧೧. ರಾಷ್ಟ್ರೀಯ ಚಂಡಮಾರುತದ ಸನ್ನದ್ಧತೆ ವಾರ ( ಯುನೈಟೆಡ್ ಸ್ಟೇಟ್ಸ್ ): ಮೇ ೫ - ೧೧. ನ್ಯೂಜಿಲೆಂಡ್ ಸಂಕೇತ ಭಾಷೆಯ ವಾರ : ಮೇ ೬ - ೧೨. ಗ್ರೀನ್ ಆಫೀಸ್ ವೀಕ್ ( ಬ್ರಿಟನ್, ಯುನೈಟೆಡ್ ಸ್ಟೇಟ್ಸ್ ): ಮೇ ೧೩ - ೧೭. ಶಾಲೆಗೆ ಸುರಕ್ಷಿತವಾಗಿ ನಡೆಯಿರಿ ( ಆಸ್ಟ್ರೇಲಿಯಾ ): ಮೇ ೧೭. ತುರ್ತು ವೈದ್ಯಕೀಯ ಸೇವೆಗಳ ವಾರ. ( ಯುನೈಟೆಡ್ ಸ್ಟೇಟ್ಸ್ ): ಮೇ ೧೯ - ೨೫ ಬೈಕ್ ಟು ವರ್ಕ್ ವೀಕ್ ವಿಕ್ಟೋರಿಯಾ (ಮೇ ೨೭ - ಜೂನ್ ೨). ಪಾಶ್ಚಾತ್ಯ ಕ್ರಿಶ್ಚಿಯನ್ ವರ್ಜಿನ್ ಮೇರಿಗೆ ವಿಶೇಷ ಪೂಜೆಗಳು ಮೇ ತಿಂಗಳಲ್ಲಿ ನಡೆಯುತ್ತವೆ. ಪೂಜ್ಯ ವರ್ಜಿನ್ ಮೇರಿಗೆ ಮೇ ಭಕ್ತಿಗಳನ್ನು ನೋಡಿ. ಕಾರ್ಮಿಕರ ದಿನ: ಮೇ ೧ ಅಂತರಾಷ್ಟ್ರೀಯ ಕಾರ್ಮಿಕರ ದಿನ ದೈವಿಕ ಕರುಣೆಯ ನಂತರ ಭಾನುವಾರ: ಮೇ ೫ ಜುಬಿಲೇಟ್ ಭಾನುವಾರ ಈಸ್ಟರ್‌ನ ಮೂರನೇ ಭಾನುವಾರದ ನಂತರದ ವಾರದಲ್ಲಿ ಸೋಮವಾರ ಮತ್ತು ಮಂಗಳವಾರ: ಮೇ ೬–೭ ಹಾಕ್ಟೈಡ್ ( ಇಂಗ್ಲೆಂಡ್ ) ಈಸ್ಟರ್ ನಂತರ ನಾಲ್ಕನೇ ಭಾನುವಾರ: ಮೇ ೧೨ ಕ್ಯಾಂಟೇಟ್ ಭಾನುವಾರ ಗುಡ್ ಶೆಫರ್ಡ್ ಭಾನುವಾರ ಈಸ್ಟರ್ ನಂತರ ನಾಲ್ಕನೇ ಶುಕ್ರವಾರ: ಮೇ ೧೭ ಅಂಗಡಿ ಬೆಡೆಡಾಗ್ ( ಡೆನ್ಮಾರ್ಕ್ ) ಮೇ ಮೂರನೇ ಭಾನುವಾರ: ಮೇ ೧೯ ಅವರ್ ಲೇಡಿ ಆಫ್ ದಿ ಪ್ರೇಕ್ಷಕರ ಹಬ್ಬ ರೋಗೇಷನ್ ದಿನಗಳ ಹಿಂದಿನ ಭಾನುವಾರ: ಮೇ ೨೬ ರೋಗೇಷನ್ ಭಾನುವಾರ ಸೋಮವಾರ, ಮಂಗಳವಾರ ಮತ್ತು ಬುಧವಾರ ಅಸೆನ್ಶನ್ ಹಬ್ಬದ ಹಿಂದಿನ: ಮೇ ೨೭-೨೯ ಮೈನರ್ ರೋಗೇಷನ್ ದಿನಗಳು ಈಸ್ಟರ್ ನಂತರ ೩೯ ದಿನಗಳು: ಮೇ ೩೦ ಅಸೆನ್ಶನ್ ಹಬ್ಬ ತಂದೆಯ ದಿನ (ಜರ್ಮನಿ) ಫೆಸ್ಟಾ ಡೆಲ್ಲಾ ಸೆನ್ಸಾ ( ವೆನಿಸ್ ) ಪ್ರಾರ್ಥನೆಯ ಜಾಗತಿಕ ದಿನ ಕುರಿ ಉತ್ಸವ ( ಕ್ಯಾಮರೂನ್ ) ಪೂರ್ವ ಕ್ರಿಶ್ಚಿಯನ್ ಪಾಶ್ಚಾ ನಂತರ ಬುಧವಾರ: ಮೇ ೧ ಪ್ರಕಾಶಮಾನವಾದ ಬುಧವಾರ ಪಾಶ್ಚಾ ನಂತರ ಗುರುವಾರ: ಮೇ ೨ ಪ್ರಕಾಶಮಾನವಾದ ಗುರುವಾರ ಪಾಶ್ಚಾ ನಂತರ ಶುಕ್ರವಾರ: ಮೇ ೩ ಪ್ರಕಾಶಮಾನವಾದ ಶುಕ್ರವಾರ ಪಾಶ್ಚಾ ನಂತರ ಶನಿವಾರ: ಮೇ ೪ ಪ್ರಕಾಶಮಾನವಾದ ಶನಿವಾರ ಪಾಶ್ಚಾ ನಂತರ ೮ ನೇ ದಿನ: ಮೇ ೫ ಥಾಮಸ್ ಭಾನುವಾರ ಪಾಶ್ಚಾದ ೨ ನೇ ಮಂಗಳವಾರ, ಅಥವಾ ಪಾಶ್ಚಾದ ೨ ನೇ ಸೋಮವಾರ, ಪ್ರದೇಶವನ್ನು ಅವಲಂಬಿಸಿ: ಮೇ ೬ ಅಥವಾ ಮೇ ೭ ರಾಡೋನಿಟ್ಸಾ ( ರಷ್ಯನ್ ಆರ್ಥೊಡಾಕ್ಸ್ ) ಪಾಶ್ಚಾ ನಂತರದ ೨ ನೇ ಭಾನುವಾರ: ಮೇ ೧೨ ಮೈರಾಬಿರರ್ಸ್ ಭಾನುವಾರ ಪಾಶ್ಚಾ ೪ ನೇ ಭಾನುವಾರ: ಮೇ ೨೬ ಪಾರ್ಶ್ವವಾಯುವಿನ ಭಾನುವಾರ ಪಾರ್ಶ್ವವಾಯುವಿನ ಭಾನುವಾರದ ನಂತರ ಬುಧವಾರ: ಮೇ ೨೯ ಮಧ್ಯ-ಪೆಂಟೆಕೋಸ್ಟ್ ಚಲಿಸಬಲ್ಲ ನಾಗರಿಕ ಏಪ್ರಿಲ್‌ನಲ್ಲಿ ಕೊನೆಯ ಶುಕ್ರವಾರದಿಂದ ಮೇ ಮೊದಲ ಭಾನುವಾರದವರೆಗೆ. ನ್ಯಾಷನಲ್ ಆರ್ಬರ್ ವೀಕ್ ( ಒಂಟಾರಿಯೊ, ಕೆನಡಾ ) ಮೊದಲ ಗುರುವಾರ ಆರ್ಬರ್ ಡೇ ( ನೋವಾ ಸ್ಕಾಟಿಯಾ, ಕೆನಡಾ ) ರಾಷ್ಟ್ರೀಯ ಪ್ರಾರ್ಥನಾ ದಿನ ( ಯುನೈಟೆಡ್ ಸ್ಟೇಟ್ಸ್ ) ರಾಷ್ಟ್ರೀಯ ಕಾರಣದ ದಿನ (ಯುನೈಟೆಡ್ ಸ್ಟೇಟ್ಸ್) ಮೊದಲ ಶನಿವಾರ ತಾಯಿಯ ದಿನ ( ಅಂಗೋಲಾ, ಕೇಪ್ ವರ್ಡೆ, ಹಂಗೇರಿ, ಲಿಥುವೇನಿಯಾ, ಮೊಜಾಂಬಿಕ್, ಪೋರ್ಚುಗಲ್, ಸ್ಪೇನ್ ) ವಿಶ್ವ ನಗು ದಿನ ಮಕ್ಕಳ ದಿನ (ದಕ್ಷಿಣ ಕೊರಿಯಾ) ಮೊದಲ ಪೂರ್ಣ ವಾರ ರಾಷ್ಟ್ರೀಯ ಶಿಕ್ಷಕರ ಮೆಚ್ಚುಗೆಯ ವಾರ ( ಯುನೈಟೆಡ್ ಸ್ಟೇಟ್ಸ್ ). ಉತ್ತರ ಅಮೆರಿಕಾದ ಆಕ್ಯುಪೇಷನಲ್ ಸೇಫ್ಟಿ ಮತ್ತು ಹೆಲ್ತ್ ವೀಕ್. ಮೊದಲ ಪೂರ್ಣ ವಾರದ ಮಂಗಳವಾರ ರಾಷ್ಟ್ರೀಯ ಶಿಕ್ಷಕರ ಮೆಚ್ಚುಗೆಯ ದಿನ ( ಯುನೈಟೆಡ್ ಸ್ಟೇಟ್ಸ್ ) ಮೊದಲ ಪೂರ್ಣ ವಾರದ ಬುಧವಾರ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ವೃತ್ತಿಪರ ದಿನ. ಮೇ ತಿಂಗಳ ಎರಡನೇ ವಾರ ರಾಷ್ಟ್ರೀಯ ತೊದಲುವಿಕೆ ಜಾಗೃತಿ ವಾರ ( ಯುನೈಟೆಡ್ ಸ್ಟೇಟ್ಸ್ ). ಮೊದಲ ಮಂಗಳವಾರ ವಿಶ್ವ ಅಸ್ತಮಾ ದಿನ. ಮೇ ಎರಡನೇ ಭಾನುವಾರದ ಹಿಂದಿನ ಶುಕ್ರವಾರ ಮಿಲಿಟರಿ ಸಂಗಾತಿಯ ದಿನ ( ಯುನೈಟೆಡ್ ಸ್ಟೇಟ್ಸ್ ) ರಾಷ್ಟ್ರೀಯ ಸಾರ್ವಜನಿಕ ಉದ್ಯಾನ ದಿನ (ಯುನೈಟೆಡ್ ಸ್ಟೇಟ್ಸ್) ಶನಿವಾರ ಮೇ ೧೦ ಕ್ಕೆ ಹತ್ತಿರದಲ್ಲಿದೆ ರಾಷ್ಟ್ರೀಯ ರೈಲು ದಿನ ( ಯುನೈಟೆಡ್ ಸ್ಟೇಟ್ಸ್ ) ಎರಡನೇ ಶನಿವಾರ ಅಂತರರಾಷ್ಟ್ರೀಯ ವಲಸೆ ಹಕ್ಕಿ ದಿನ (ಕೆನಡಾ, ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೇರಿಕಾ, ಮತ್ತು ಕೆರಿಬಿಯನ್). ರಾಷ್ಟ್ರೀಯ ಮರ ನೆಡುವ ದಿನ (ಮಂಗೋಲಿಯಾ). ಎರಡನೇ ವಾರಾಂತ್ಯ ನ್ಯಾಷನಲ್ ಮಿಲ್ಸ್ ವೀಕೆಂಡ್ ( ಯುನೈಟೆಡ್ ಕಿಂಗ್‌ಡಮ್ ). ವಿಶ್ವ ವಲಸೆ ಹಕ್ಕಿ ದಿನ. ಎರಡನೇ ಭಾನುವಾರ ರಾಷ್ಟ್ರೀಯ ನರ್ಸಿಂಗ್ ಹೋಮ್ ವೀಕ್ (ಯುನೈಟೆಡ್ ಸ್ಟೇಟ್ಸ್) ಮಕ್ಕಳ ದಿನ (ಸ್ಪೇನ್) ತಂದೆಯ ದಿನ (ರೊಮೇನಿಯಾ) ತಾಯಂದಿರ ದಿನ ( ಆಂಗ್ವಿಲಾ, ಅರುಬಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಹಾಮಾಸ್, ಬಾರ್ಬಡೋಸ್, ಬಾಂಗ್ಲಾದೇಶ, ಬೆಲ್ಜಿಯಂ, ಬೆಲೀಜ್, ಬರ್ಮುಡಾ, ಬೊನೈರ್, ಬ್ರೆಜಿಲ್, ಬ್ರೂನಿ, ಕೆನಡಾ, ಚಿಲಿ, ಕೊಲಂಬಿಯಾ, ಕ್ಯೂಬಾ, ಕ್ರೊಯೇಷಿಯಾ, ಕುರಾಕೊ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಇಕ್ವೆಡ್ ಫಿನ್ಲ್ಯಾಂಡ್, ಜರ್ಮನಿ, ಗ್ರೀಸ್, ಗ್ರೆನಡಾ, ಹೊಂಡುರಾಸ್, ಹಾಂಗ್ ಕಾಂಗ್, ಐಸ್ಲ್ಯಾಂಡ್, ಭಾರತ, ಇಟಲಿ, ಜಮೈಕಾ, ಜಪಾನ್, ಲಾಟ್ವಿಯಾ, ಮಾಲ್ಟಾ, ಮಲೇಷ್ಯಾ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ಪೆರು, ಫಿಲಿಪೈನ್ಸ್, ಪೋರ್ಟೊ ರಿಕೊ, ಸಿಂಗಾಪುರ್, ಸ್ಲೋವಾಕಿಯಾ, ದಕ್ಷಿಣ ಆಫ್ರಿಕಾ, ಸುರಿನಾಮ್, ಸ್ವಿಟ್ಜರ್ಲೆಂಡ್, ತೈವಾನ್, ಟ್ರಿನಿಡಾಡ್ ಮತ್ತು ಟೊಬಾಗೊ, ಟರ್ಕಿ, ಯುನೈಟೆಡ್ ಸ್ಟೇಟ್ಸ್, ಉರುಗ್ವೆ, ವೆನೆಜುವೆಲಾ, ಜಿಂಬಾಬ್ವೆ) ರಾಜ್ಯ ಧ್ವಜ ಮತ್ತು ರಾಜ್ಯ ಲಾಂಛನ ದಿನ (ಬೆಲಾರಸ್) ವಿಶ್ವ ನ್ಯಾಯೋಚಿತ ವ್ಯಾಪಾರ ದಿನ. ಮೇ ೧೨ ರ ವಾರ ರಾಷ್ಟ್ರೀಯ ನರ್ಸಿಂಗ್ ವೀಕ್ (ಯುನೈಟೆಡ್ ಸ್ಟೇಟ್ಸ್) ಶುಕ್ರವಾರ ಸೇರಿದಂತೆ ಮೂರನೇ ವಾರಾಂತ್ಯ ಸಂಜಾ ಮತ್ಸುರಿ ( ಟೋಕಿಯೋ, ಜಪಾನ್ ) ಮೂರನೇ ಶುಕ್ರವಾರ ಆರ್ಬರ್ ಡೇ ( ಪ್ರಿನ್ಸ್ ಎಡ್ವರ್ಡ್ ಐಲ್ಯಾಂಡ್, ಕೆನಡಾ) ರಾಷ್ಟ್ರೀಯ ರಕ್ಷಣಾ ಸಾರಿಗೆ ದಿನ ಅಳಿವಿನಂಚಿನಲ್ಲಿರುವ ಪ್ರಭೇದಗಳ ದಿನ (ಯುನೈಟೆಡ್ ಸ್ಟೇಟ್ಸ್) ರಾಷ್ಟ್ರೀಯ ಪಿಜ್ಜಾ ಪಾರ್ಟಿ ಡೇ (ಯುನೈಟೆಡ್ ಸ್ಟೇಟ್ಸ್) ಮೂರನೇ ಶನಿವಾರ ಪ್ರೀಕ್ನೆಸ್ ಸ್ಟೇಕ್ಸ್ ರನ್ ಆಗಿದೆ, ಕುದುರೆ ರೇಸಿಂಗ್ ಟ್ರಿಪಲ್ ಕಿರೀಟದಲ್ಲಿ ಎರಡನೇ ಆಭರಣ. ಸಶಸ್ತ್ರ ಪಡೆಗಳ ದಿನ (ಯುನೈಟೆಡ್ ಸ್ಟೇಟ್ಸ್) ಸಂಸ್ಕೃತಿ ಸ್ವಾತಂತ್ರ್ಯ ದಿನ ಸಂಜಾ ಮತ್ಸುರಿ ವಿಶ್ವ ವಿಸ್ಕಿ ದಿನ ಮೂರನೇ ಭಾನುವಾರ ಮಡಿದ ಸೈನಿಕರ ಸ್ಮರಣಾರ್ಥ ದಿನ ತಂದೆಯ ದಿನ ( ಟಾಂಗಾ ) ಅವರ್ ಲೇಡಿ ಆಫ್ ದಿ ಪ್ರೇಕ್ಷಕರ ಹಬ್ಬ ಸಂಜಾ ಮತ್ಸುರಿ ( ಟೋಕಿಯೋ, ಜಪಾನ್ ) ಮೇ ೨೪ ರಂದು ಅಥವಾ ಮೊದಲು ಸೋಮವಾರ ವಿಕ್ಟೋರಿಯಾ ಡೇ (ಸ್ಕಾಟ್ಲೆಂಡ್) ಮೂರನೇ ಸೋಮವಾರ ಡಿಸ್ಕವರಿ ಡೇ ( ಕೇಮನ್ ದ್ವೀಪಗಳು ) ಮೇ ೨೫ ರಂದು ಅಥವಾ ಮೊದಲು ಸೋಮವಾರ ರಾಷ್ಟ್ರೀಯ ದೇಶಪ್ರೇಮಿಗಳ ದಿನ ( ಕ್ವಿಬೆಕ್ ) ಮೇ ೨೫ ರ ಹಿಂದಿನ ಕೊನೆಯ ಸೋಮವಾರ ವಿಕ್ಟೋರಿಯಾ ಡೇ ( ಕೆನಡಾ ) ಮೇ ೨೪, ಅಥವಾ ವಾರಾಂತ್ಯದಲ್ಲಿ ಮೇ ೨೪ ಬಂದರೆ ಹತ್ತಿರದ ವಾರದ ದಿನ. ಬರ್ಮುಡಾ ದಿನ(ಬರ್ಮುಡಾ ) ಶನಿವಾರ ಮೇ ೩೦ ಕ್ಕೆ ಹತ್ತಿರದಲ್ಲಿದೆ. ಸಶಸ್ತ್ರ ಪಡೆಗಳ ದಿನ (ಸ್ಪೇನ್) ಕಳೆದ ವಾರಾಂತ್ಯ ಕೈವ್ ದಿನ ( ಕೈವ್ ) ಕಳೆದ ಭಾನುವಾರ ಆರ್ಬರ್ ಡೇ (ವೆನೆಜುವೆಲಾ) ಮಕ್ಕಳ ದಿನ (ಹಂಗೇರಿ) ತಾಯಿಯ ದಿನ (ಅಲ್ಜೀರಿಯಾ, ಡೊಮಿನಿಕನ್ ರಿಪಬ್ಲಿಕ್, ಹೈಟಿ, ಮಾರಿಷಸ್, ಮೊರಾಕೊ, ಸ್ವೀಡನ್, ಟುನೀಶಿಯಾ) ತುರ್ಕಮೆನ್ ಕಾರ್ಪೆಟ್ ಡೇ (ತುರ್ಕಮೆನಿಸ್ತಾನ್) ಕಳೆದ ಸೋಮವಾರ ವೀರರ ದಿನ (ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು) ಮೆಮೋರಿಯಲ್ ಡೇ (ಯುನೈಟೆಡ್ ಸ್ಟೇಟ್ಸ್), ಸಾರ್ವಜನಿಕ ರಜಾದಿನವನ್ನು ಮೇ ೩೦ ರಂದು ಆಚರಿಸಲಾಗುತ್ತದೆ ಆದರೆ ಮೇ ತಿಂಗಳ ಕೊನೆಯ ಸೋಮವಾರದಂದು ಆಚರಿಸಲಾಗುತ್ತದೆ. ರತು ಸರ್ ಲಾಲಾ ಸುಕುನಾ ದಿನ (ಫಿಜಿ), ೨೦೧೦ ರಲ್ಲಿ ರಾಷ್ಟ್ರೀಯ ರಜಾದಿನವಾಗಿ ತೆಗೆದುಹಾಕಲಾಗಿದೆ. ಕಳೆದ ಬುಧವಾರ ವಿಶ್ವ ಮಲ್ಟಿಪಲ್ ಸ್ಕ್ಲೆರೋಸಿಸ್ ದಿನ ಕಳೆದ ಗುರುವಾರ ಒಂದು ಹೆಣ್ಣು ಮಗುವನ್ನು ಕೆಲಸಕ್ಕೆ ಕರೆದೊಯ್ಯಿರಿ (ದಕ್ಷಿಣ ಆಫ್ರಿಕಾ) ನಿವಾರಿಸಲಾಗಿದೆ ಸಹ ನೋಡಿ ಐತಿಹಾಸಿಕ ವಾರ್ಷಿಕೋತ್ಸವಗಳ ಪಟ್ಟಿ. ಉಲ್ಲೇಖಗಳು
2293
https://kn.wikipedia.org/wiki/%E0%B2%86%E0%B2%97%E0%B2%B8%E0%B3%8D%E0%B2%9F%E0%B3%8D
ಆಗಸ್ಟ್
ಆಗಸ್ಟ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಎಂಟನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಆಗಸ್ಟ್ ವಿಶ್ವದ ಉತ್ತರಾರ್ಧದಲ್ಲಿ ಬೇಸಿಗೆಯ ಕೊನೆಯ ತಿಂಗಳು ಹಾಗೂ ದಕ್ಷಿಣಾರ್ಧದಲ್ಲಿ, ಇದು ಚಳಿಗಾಲದ ಕೊನೆಯ ತಿಂಗಳು. ಇದಕ್ಕೆ ಮೊದಲ ರೋಮನ್ ಚಕ್ರವರ್ತಿ ಅಗಸ್ಟಸ್ ಸೀಸರ್ ಅವರ ಹೆಸರನ್ನು ಇಡಲಾಗಿದೆ. ಆಗಸ್ಟ್ ತಿಂಗಳು ಆಗಸ್ಟ್ ನ ಅರ್ಥವು ಪ್ರಾಚೀನ ರೋಮ್ ನಿಂದ ಬಂದಿದೆ: ಅಗಸ್ಟಸ್ ಎಂಬುದು ಲ್ಯಾಟಿನ್ ಪದವಾಗಿದ್ದು, ಇದರ ಅರ್ಥ "ಪೂಜ್ಯ" ಅಥವಾ "ಮಹಾನ್" ಎಂದು. ಇದು ಮೊದಲ ರೋಮನ್ ಚಕ್ರವರ್ತಿ ಗೈಯಸ್ ಸೀಸರ್‌ಗೆ ನೀಡಲಾದ ಬಿರುದು. ರೋಮನ್ ಸೆನೆಟ್ ಕ್ರಿ.ಪೂ ೮ ರಲ್ಲಿ ಚಕ್ರವರ್ತಿಯ ಗೌರವಾರ್ಥವಾಗಿ ಒಂದು ತಿಂಗಳಿಗೆ ಹೆಸರಿಡಲು ನಿರ್ಧರಿಸಿತು. ಅವರು ಹಳೆಯ ರೋಮನ್ ತಿಂಗಳಾದ ಸೆಕ್ಸ್ಟಿಲಿಯಸ್ ಅನ್ನು ಆಯ್ಕೆ ಮಾಡಿದರು ಮತ್ತು ಅದಕ್ಕೆ ಅಗಸ್ಟಸ್ ಎಂದು ಮರುನಾಮಕರಣ ಮಾಡಿದರು. ಚಿಹ್ನೆಗಳು ಆಗಸ್ಟ್ ನ ಜನ್ಮಶಿಲೆಗಳೆಂದರೆ ಪೆರಿಡಾಟ್, ಸರ್ಡೋನಿಕ್ಸ್ ಮತ್ತು ಸ್ಪೈನೆಲ್. ಇದರ ಜನ್ಮ ಹೂವು ಗ್ಲಾಡಿಯೋಲಸ್ ಅಥವಾ ಗಸಗಸೆ ಹಾಗೂ ಇದರರ್ಥ ಸೌಂದರ್ಯ, ಪಾತ್ರದ ಶಕ್ತಿ, ಪ್ರೀತಿ, ಮದುವೆ ಮತ್ತು ಕುಟುಂಬ ಎಂಬುದಾಗಿದೆ. ಪಶ್ಚಿಮ ರಾಶಿಚಕ್ರ ಚಿಹ್ನೆಗಳೆಂದರೆ ಸಿಂಹ- ಆಗಸ್ಟ್ ೨೨ ರವರೆಗೆ ಮತ್ತು ಕನ್ಯಾ- ಆಗಸ್ಟ್ ೨೩ ರಿಂದ. ರಜೆಗಳು / ಆಚರಣೆಗಳು ಐರ್ಲ್ಯಾಂಡ್ ದೇಶದ ಹಲವು ಪ್ರಸಿದ್ಧ ಕದನಗಳು ಈ ತಿಂಗಳಿನಲ್ಲಿ ಸಂಭವಿಸಿವೆ. ಆಗಸ್ಟ್ ೧ - ಸ್ವಿಟ್ಜರ್ಲ್ಯಾಂಡ್ ದೇಶದ ರಾಷ್ಟ್ರೀಯ ದಿನ, ರಾಷ್ಟ್ರೀಯ ರಜೆ. ಆಗಸ್ಟ್ ೬ - ೧೮೦೬ರಲ್ಲಿ ರೋಮನ್ ಸಾಮ್ರಾಜ್ಯದ ದೊರೆಯಾಗಿದ್ದ ದೊರೆ ಫ್ರಾನ್ಸಿಸ್-೨ ನಿಂದ ರಾಜ ಪದವಿ ತ್ಯಾಗ. ಆಗಸ್ಟ್ ೬ - ೧೯೪೫ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ ಜಪಾನ್ ದೇಶದ ಹಿರೋಶಿಮಾ ನಗರದ ಮೇಲೆ ಅಣುಬಾಂಬ್ ದಾಳಿ. ಆಗಸ್ಟ್ ೯ - ೧೯೪೫ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ ಜಪಾನ್ ದೇಶದ ನಾಗಾಸಾಕಿ ನಗರದ ಮೇಲೆ ಆಣುಬಾಂಬ್ ದಾಳಿ. ಆಗಸ್ಟ್ ೯ - ೧೯೬೫ರಲ್ಲಿ ಮಲೇಷಿಯಾದಿಂದ ಬೇರ್ಪಡೆ ಹೊಂದಿ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ ಸಿಂಗಾಪುರ. ಆಗಸ್ಟ್ ೧೪ - ೧೯೪೭ರಲ್ಲಿ ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾದ ದಿನ. ಆಗಸ್ಟ್ ೧೫ - ೧೭೬೯ರಲ್ಲಿ ಕೊರ್ಸಿಕಾದಲ್ಲಿ ನೆಪೋಲಿಯನ್ ಬೋನಾಪಾರ್ಟೆಯ ಜನನ. ಆಗಸ್ಟ್ ೧೫ - ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ದಿನ. ಈ ದಿನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ ಹಾಗೂ ರಾಷ್ಟ್ರೀಯ ರಜೆಯ ದಿನವಾಗಿದೆ. ಆಗಸ್ಟ್ ೧೫ - ೧೯೪೫ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಅಣುಬಾಂಬ್ ದಾಳಿಯ ನಂತರ ಜಪಾನಿನ ದೊರೆ ಹಿರೋಹಿಟೊನಿಂದ ಜಪಾನಿನ ಶರಣಾಗತಿಯ ಘೋಷಣೆ. ಉಲ್ಲೇಖಗಳು ತಿಂಗಳುಗಳು ಆಗಸ್ಟ್
2294
https://kn.wikipedia.org/wiki/%E0%B2%9C%E0%B3%81%E0%B2%B2%E0%B3%88
ಜುಲೈ
ಜುಲೈ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಏಳನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಜುಲೈ ಕ್ರಿಸ್ತವರ್ಷದ ಏಳನೆಯ ತಿಂಗಳಾಗಿದೆ. ಜುಲೈ ತಿಂಗಳು ಜೂಲಿಯಸ್ ಸೀಜರ್‌ನ ಕಾಲಕ್ಕಿಂತ (ಕ್ರಿ.ಪೂ. ೧೦೦- ಕ್ರಿ.ಪೂ. ೪೪) ಮೊದಲು ಈ ತಿಂಗಳು ವರ್ಷದ ಐದನೆಯ ಮಾಸವಾಗಿ ಪರಿಗಣನೆ ಆಗುತ್ತಿತ್ತು; ಅಂತೆಯೇ ಅಂದಿನ ರೋಮನ್ನರು ಇದನ್ನು ಕ್ವಿಂಟೆಲಿಸ್ ಎಂದು ಕರೆಯುತ್ತಿದ್ದರು. ಜೂಲಿಯಸ್ ಸೀಜರ್ ಈ ತಿಂಗಳಿನಲ್ಲಿ ಹುಟ್ಟಿದುದರಿಂದ ಅವನ ಗೌರವಾರ್ಥ ಮುಂದೆ ಇದನ್ನು ಜುಲೈ ಎಂದು ನಾಮಕರಣ ಮಾಡಲಾಯಿತು. ಇದು ಬಳಕೆಗೆ ಬಂದದ್ದು ಸೀಸರನ ಮರಣದ ವರ್ಷದಲ್ಲಿ. ಆಂಗ್ಲೋ ಸ್ಯಾಕ್ಸನರು ಜುಲೈ ತಿಂಗಳನ್ನು ಹುಲ್ಲಿನ ತಿಂಗಳೆಂದೂ, ಹುಲ್ಲುಗಾವಲಿನ ತಿಂಗಳೆಂದೂ ಕರೆದಿದ್ದರು. ಭಾರತೀಯ ಪಂಚಾಂಗದ ಪ್ರಕಾರ ಜ್ಯೇಷ್ಠ- ಆಷಾಢ ಮಾಸಗಳು ಸಾಮಾನ್ಯವಾಗಿ ಈ ತಿಂಗಳಲ್ಲಿ ಬರುತ್ತವೆ. ನವರತ್ನಗಳಲ್ಲಿ ಒಂದಾದ ಕೆಂಪನ್ನು ಜುಲೈ ತಿಂಗಳಿಗೆ ಅನ್ವಯಿಸುವುದು ರೂಢಿ. ಇದು ಉತ್ತರ ಗೋಳಾರ್ಧದ ಹೆಚ್ಚಿನ ಭಾಗಗಳಲ್ಲಿ ಸರಾಸರಿ ಬೆಚ್ಚಗಿನ ತಿಂಗಳಾಗಿದೆ ಮತ್ತು ಅಲ್ಲಿ ಇದು ಬೇಸಿಗೆಯ ಎರಡನೇ ತಿಂಗಳು. ದಕ್ಷಿಣ ಗೋಳಾರ್ಧದ ಹೆಚ್ಚಿನ ಭಾಗಗಳಲ್ಲಿ ಅತ್ಯಂತ ಶೀತದ ತಿಂಗಳು ಮತ್ತು ಅಲ್ಲಿ ಇದು ಚಳಿಗಾಲದ ಎರಡನೇ ತಿಂಗಳಾಗಿದೆ. ವರ್ಷದ ದ್ವಿತೀಯಾರ್ಧವು ಜುಲೈನಲ್ಲಿ ಪ್ರಾರಂಭವಾಗುತ್ತದೆ. ಜುಲೈ ಆರಂಭದಲ್ಲಿ ಉತ್ತರ ಗೋಳಾರ್ಧದಲ್ಲಿ ಬಿಸಿ ವಾತಾವರಣವು ಪ್ರಾರಂಭವಾದಂತೆ "ನಾಯಿ ದಿನಗಳು" ಶುರುವಾಗುತ್ತದೆ ಎಂದು ಪರಿಗಣಿಸಲಾಗಿದೆ. ಅಲ್ಲಿ ಬೇಸಿಗೆಯ ಚಳಿಗಾಲದ ಕೊನೆಯಲ್ಲಿ ಅಥವಾ ವಸಂತಕಾಲದ ಆರಂಭದಲ್ಲಿ ಜನಿಸಿದ ವಸಂತಕಾಲದ ಕುರಿಮರಿಗಳನ್ನು ಸಾಮಾನ್ಯವಾಗಿ ಜುಲೈ ೧ ರ ಮೊದಲು ಮಾರಾಟ ಮಾಡಲಾಗುತ್ತದೆ. ಚಿಹ್ನೆಗಳು ಜುಲೈನ ಜನ್ಮಶಿಲೆಯು ಮಾಣಿಕ್ಯವಾಗಿದೆ. ಇದು ಸಂತೃಪ್ತಿಯನ್ನು ಸಂಕೇತಿಸುತ್ತದೆ. ಇದರ ಜನ್ಮ ಹೂವುಗಳೆಂದರೆ ಲಾರ್ಕ್ಸ್ಪುರ್ ಮತ್ತು ವಾಟರ್ ಲಿಲ್ಲಿ. ರಾಶಿಚಕ್ರ ಚಿಹ್ನೆಗಳು ಕರ್ಕ- ಜುಲೈ ೨೨ ರವರೆಗೆ ಮತ್ತು ಸಿಂಹ - ಜುಲೈ ೨೩ ರಿಂದ. ಸ್ಥಿರ ಗ್ರೆಗೋರಿಯನ್(ವಿಶೇಷ ದಿನಗಳು) ಜುಲೈ ೧ ಸಶಸ್ತ್ರ ಪಡೆಗಳ ದಿನ (ಸಿಂಗಾಪುರ್) ಕೆನಡಾ ದಿನ (ಕೆನಡಾ) ಮಕ್ಕಳ ದಿನ (ಪಾಕಿಸ್ತಾನ) ಚೀನೀ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪನಾ ದಿನ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ವೈದ್ಯರ ದಿನ (ಭಾರತ) ವನ ಮಹೋತ್ಸವ, ಜುಲೈ 7 ರವರೆಗೆ ಆಚರಿಸಲಾಗುತ್ತದೆ (ಭಾರತ) ಜುಲೈ ೨ ಧ್ವಜ ದಿನ (ಕುರಾಕೊ) (ನೆದರ್ಲ್ಯಾಂಡ್ಸ್ ಸಾಮ್ರಾಜ್ಯ) ಪಾಲಿಯೊ ಡಿ ಪ್ರೊವೆಂಜಾನೊ (ಸಿಯೆನಾ, ಇಟಲಿ) ಪೊಲೀಸ್ ದಿನ (ಅಜೆರ್ಬೈಜಾನ್) ವಿಶ್ವ ಯುಎಫ್ಒ ದಿನ ಜುಲೈ ೩ ವಿಮೋಚನಾ ದಿನ (ಯುನೈಟೆಡ್ ಸ್ಟೇಟ್ಸ್ ವರ್ಜಿನ್ ಐಲ್ಯಾಂಡ್ಸ್) ಸ್ವಾತಂತ್ರ್ಯ ದಿನ (ಬೆಲಾರಸ್) ಜುಲೈ ೪ ರಾಣಿ ಸೋಂಜಾ ಅವರ ಜನ್ಮದಿನ (ನಾರ್ವೆ) ಡ್ರೀ ಉತ್ಸವ, ಜುಲೈ 7 ರವರೆಗೆ ಆಚರಿಸಲಾಗುತ್ತದೆ (ಅಪಟಾನಿ ಜನರು, ಅರುಣಾಚಲ ಪ್ರದೇಶ, ಭಾರತ) ಸ್ವಾತಂತ್ರ್ಯ ದಿನ (ಅಬ್ಖಾಜಿಯಾ) ಸ್ವಾತಂತ್ರ್ಯ ದಿನ (ಯುನೈಟೆಡ್ ಸ್ಟೇಟ್ಸ್) ವಿಮೋಚನಾ ದಿನ (ಉತ್ತರ ಮರಿಯಾನಾ ದ್ವೀಪಗಳು) ವಿಮೋಚನಾ ದಿನ (ರುವಾಂಡಾ) ಗಣರಾಜ್ಯೋತ್ಸವ (ಫಿಲಿಪೈನ್ಸ್) ಜುಲೈ ೫ ಸಶಸ್ತ್ರ ಪಡೆಗಳ ದಿನ (ವೆನೆಜುವೆಲಾ) ಸ್ವಾತಂತ್ರ್ಯ ದಿನ (ಅಲ್ಜೀರಿಯಾ) ಸ್ವಾತಂತ್ರ್ಯ ದಿನ (ಕೇಪ್ ವರ್ಡೆ) ಸ್ವಾತಂತ್ರ್ಯ ದಿನ (ವೆನೆಜುವೆಲಾ) ಜುಲೈ ೬ ಸಂವಿಧಾನ ದಿನ (ಕೇಮನ್ ದ್ವೀಪಗಳು) ರಾಜಧಾನಿಯ ದಿನ (ಕಜಕಿಸ್ತಾನ್) ನ್ಯಾಷನಲ್ ಫ್ರೈಡ್ ಚಿಕನ್ ಡೇ (ಯುನೈಟೆಡ್ ಸ್ಟೇಟ್ಸ್) ಶಿಕ್ಷಕರ ದಿನ (ಪೆರು) ಜುಲೈ ೭ ವಿಶ್ವ ಚಾಕೊಲೇಟ್ ದಿನ ಜುಲೈ ೮ ವಾಯುಪಡೆ ಮತ್ತು ವಾಯು ರಕ್ಷಣಾ ಪಡೆಗಳ ದಿನ (ಉಕ್ರೇನ್) ಜುಲೈ ೯ ಆರ್ಬರ್ ಡೇ (ಕಾಂಬೋಡಿಯಾ) ಸಂವಿಧಾನ ದಿನ (ಆಸ್ಟ್ರೇಲಿಯಾ) ಸಂವಿಧಾನ ದಿನ (ಪಲಾವ್) ಜುಲೈ ೧೦ ನಿಕೋಲಾ ಟೆಸ್ಲಾ ದಿನ ರಾಜ್ಯತ್ವ ದಿನ (ವ್ಯೋಮಿಂಗ್) ಜುಲೈ ೧೧ ಚೀನಾ ರಾಷ್ಟ್ರೀಯ ಕಡಲ ದಿನ (ಚೀನಾ) ಫ್ಲೆಮಿಶ್ ಸಮುದಾಯದ ದಿನ (ಬೆಲ್ಜಿಯಂನ ಫ್ಲೆಮಿಶ್ ಸಮುದಾಯ) ವಿಶ್ವ ಜನಸಂಖ್ಯಾ ದಿನ (ಅಂತರರಾಷ್ಟ್ರೀಯ) ಜುಲೈ ೧೨ ಟೋಂಗಾ (ಟೋಂಗಾ) ಕಿರೀಟದ ಉತ್ತರಾಧಿಕಾರಿಯ ಜನ್ಮದಿನ ಸ್ವಾತಂತ್ರ್ಯ ದಿನ (ಕಿರಿಬಾಟಿ, ಸಾವೊ ಟೋಮೆ ಮತ್ತು ಪ್ರಿನ್ಸಿಪೆ) ಜುಲೈ ೧೩ ರಾಜ್ಯತ್ವ ದಿನ (ಮಾಂಟೆನೆಗ್ರೊ) ಜುಲೈ ೧೪ ಸ್ವೀಡನ್ ನ ರಾಜಕುಮಾರಿ ವಿಕ್ಟೋರಿಯಾ ಅವರ ಜನ್ಮದಿನ, ಅಧಿಕೃತ ಧ್ವಜ ಹಾರಾಟ ದಿನ (ಸ್ವೀಡನ್) ಹೊಂಡುರಾನ್ಸ್ ದಿನ (ಹೊಂಡುರಾಸ್) ಜುಲೈ ೧೫ ಬಾನ್ ಉತ್ಸವ (ಕಾಂಟೊ ಪ್ರದೇಶ, ಜಪಾನ್) ಹಿರಿಯ ಪುರುಷರ ದಿನ (ಕಿರಿಬಾಟಿ) ಸಾಂಟಾ ರೊಸಾಲಿಯಾ ಉತ್ಸವ (ಪಲೆರ್ಮೊ, ಸಿಸಿಲಿ) ಜುಲೈ ೧೬ ಇಂಜಿನಿಯರ್ಸ್ ಡೇ (ಹೊಂಡುರಾಸ್) ಹತ್ಯಾಕಾಂಡ ಸ್ಮಾರಕ ದಿನ (ಫ್ರಾನ್ಸ್) ಜುಲೈ ೧೭ ಅಂತರರಾಷ್ಟ್ರೀಯ ಫಿರ್ಗುನ್ ದಿನ ಸಂವಿಧಾನ ದಿನ (ಫಿನ್ಲ್ಯಾಂಡ್) ಜುಲೈ ೧೮ ಸಂವಿಧಾನ ದಿನ (ಉರುಗ್ವೆ) ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನ ಜುಲೈ ೧೯ ವಿಮೋಚನಾ ದಿನ (ನಿಕರಾಗುವಾ) ಹುತಾತ್ಮರ ದಿನ (ಬರ್ಮಾ) ಜುಲೈ ೨೦ ಡಯಾ ಡೆಲ್ ಅಮಿಗೊ (ಅರ್ಜೆಂಟೀನಾ) ಇಂಜಿನಿಯರ್ಸ್ ಡೇ (ಕೋಸ್ಟಾ ರಿಕಾ) ಸ್ವಾತಂತ್ರ್ಯ ದಿನ (ಕೊಲಂಬಿಯಾ) ಲೆಂಪಿರಾಸ್ ಡೇ (ಹೊಂಡುರಾಸ್) ಮರ ನೆಡುವ ದಿನ (ಮಧ್ಯ ಆಫ್ರಿಕನ್ ಗಣರಾಜ್ಯ) ಜುಲೈ ೨೧ ಬೆಲ್ಜಿಯಂ ರಾಷ್ಟ್ರೀಯ ದಿನ ಜನಾಂಗೀಯ ಸಾಮರಸ್ಯ ದಿನ (ಸಿಂಗಾಪುರ್) ಜುಲೈ ೨೨ ಕ್ಲೀವ್ ಲ್ಯಾಂಡ್ ನಲ್ಲಿ ಸಂಸ್ಥಾಪನಾ ದಿನ ಜುಲೈ ೨೩ ಹೈಲಿ ಸೆಲಾಸಿಯ ಜನ್ಮದಿನ (ರಾಸ್ತಾಫರಿ) ಮಕ್ಕಳ ದಿನ (ಇಂಡೋನೇಷ್ಯಾ) ರಾಷ್ಟ್ರೀಯ ಹಾಟ್ ಡಾಗ್ ದಿನ (ಯುನೈಟೆಡ್ ಸ್ಟೇಟ್ಸ್) ಕ್ರಾಂತಿ ದಿನ (ಈಜಿಪ್ಟ್) ಜುಲೈ ೨೪ ಮಕ್ಕಳ ದಿನ (ವನೌಟು) ನೌಕಾ ದಿನ (ವೆನೆಜುವೆಲಾ) ಜುಲೈ ೨೫ ಗ್ವಾನಾಕ್ಯಾಸ್ಟ್ ಡೇ (ಕೋಸ್ಟಾ ರಿಕಾ) ಗ್ಯಾಲಿಶಿಯಾ ರಾಷ್ಟ್ರೀಯ ದಿನ (ಗ್ಯಾಲಿಶಿಯಾ (ಸ್ಪೇನ್)) ರಾಷ್ಟ್ರೀಯ ಬಹಾಯಿ ದಿನ (ಜಮೈಕಾ) ಪೋರ್ಟೊ ರಿಕೊ ಸಂವಿಧಾನ ದಿನ (ಪೋರ್ಟೊ ರಿಕೊ) ಜುಲೈ ೨೬ ಕಾರ್ಗಿಲ್ ವಿಜಯ ದಿನ (ಭಾರತ) ಜುಲೈ ೨೭ ಮಹಾನ್ ಪಿತೃಭೂಮಿ ವಿಮೋಚನಾ ಯುದ್ಧದಲ್ಲಿ ವಿಜಯದ ದಿನ (ಉತ್ತರ ಕೊರಿಯಾ) ರಾಷ್ಟ್ರೀಯ ಸ್ಲೀಪಿ ಹೆಡ್ ಡೇ (ಫಿನ್ಲ್ಯಾಂಡ್) ಜುಲೈ ೨೮ ಮಹಾ ಕ್ರಾಂತಿಯ ಸ್ಮರಣೆಯ ದಿನ (ಕೆನಡಾ) ವಿಶ್ವ ಹೆಪಟೈಟಿಸ್ ದಿನ ಜುಲೈ ೨೯ ಅಂತಾರಾಷ್ಟ್ರೀಯ ಹುಲಿ ದಿನ ಜುಲೈ ೩೦ ಸಿಂಹಾಸನದ ಹಬ್ಬ (ಮೊರಾಕೊ) ಡೈಯಾ ಡೆಲ್ ಅಮಿಗೊ (ಪರಾಗ್ವೆ) ಸ್ವಾತಂತ್ರ್ಯ ದಿನ (ವನೌಟು) ಹುತಾತ್ಮರ ದಿನ (ದಕ್ಷಿಣ ಸುಡಾನ್) ಜುಲೈ ೩೧ ಕಾ ಹೇ ಹವಾಯಿ ದಿನ (ಹವಾಯಿ, ಯುನೈಟೆಡ್ ಸ್ಟೇಟ್ಸ್) ಶಾಹಿದ್ ಉಧಮ್ ಸಿಂಗ್ ಹುತಾತ್ಮ ದಿನ (ಹರಿಯಾಣ ಮತ್ತು ಪಂಜಾಬ್, ಭಾರತ) ಉಲ್ಲೇಖಗಳು ತಿಂಗಳುಗಳು ಜುಲೈ
2345
https://kn.wikipedia.org/wiki/%E0%B2%9C%E0%B2%AA%E0%B2%BE%E0%B2%A8%E0%B3%8D
ಜಪಾನ್
ಜಪಾನ್ ( ನಿಹೊನ್ ಅಥವಾ ನಿಪ್ಪೊನ್, ಅಧಿಕೃತವಾಗಿ ) ಏಶ್ಯಾ ಖಂಡದ ಒಂದು ದ್ವೀಪ ದೇಶ. ಇದು ಪೆಸಿಫಿಕ್ ಮಹಾಸಾಗರದ ಸುಮಾರು ೩೦೦೦ ನಡುಗಡ್ಡೆಗಳ ಸಮೂಹ. ೪ ಪ್ರಮುಖ ದ್ವೀಪಗಳೆಂದರೆ ಹೊಂಶು, ಹೊಕ್ಕಾಇದೊ, ಶಿಕೊಕು ಮತ್ತು ಕ್ಯೂಶು. ಜಪಾನ್ ಜಗತ್ತಿನ ೧೦ನೆಯ ಅತಿ ಹೆಚ್ಚು ಜನ ಸಂಖ್ಯೆಯುಳ್ಳ ದೇಶ. ಇದರ ರಾಜಧಾನಿ ತೋಕ್ಯೊ(ಟೋಕ್ಯೊ) ಮಹಾನಗರ, ಹಾಗೂ ಇದರ ಇತರ ಪ್ರಮುಖ ನಗರಗಳು ಯೊಕೊಹಾಮಾ, ಓಸಾಕಾ, ಕ್ಯೋತೊ ಮತ್ತು ನಾಗೋಯಾ ಆಗಿವೆ. ಇದು ವಿಶ್ವದ ೨ನೆಯ ಅತಿ ಹೆಚ್ಚು ಜಿ.ಡಿ.ಪಿ ಹೊಂದಿರುವ ದೇಶ. ತಂತ್ರಜ್ಞಾನಕ್ಕೆ ಪ್ರಸಿದ್ಧಿ ಪಡೆದ ಈ ದೇಶ ವಿಶ್ವದ ಪ್ರಮುಖ ದೇಶಗಳಲ್ಲೊಂದು. ಜಪಾನ್ ಏಷ್ಯ ಖಂಡದ ಪೂರ್ವದಲ್ಲಿ ಉತ್ತರ ಪೆಸಿಫಿಕ್ ಸಾಗರದಲ್ಲಿರುವ ಒಂದು ದ್ವೀಪಸಮುದಾಯ. ಖಂಡದ ಮುಖ್ಯ ಭೂಮಿಯಿಂದ ಸುಮಾರು 160 ಕಿ.ಮೀ. ದೂರದಲ್ಲಿ ಬಿಲ್ಲಿನಂತೆ ತೋರುವ ಈ ದ್ವೀಪಸಮುದಾಯದಲ್ಲಿ ಹಲವಾರು ಚಿಕ್ಕ ದೊಡ್ಡ ದ್ವೀಪಗಳಿವೆ. ಇವು ಸಮುದ್ರದ ನೀರಿನ ಮೇಲೆ ತಲೆಯೆತ್ತಿ ನಿಂತಿರುವ ಬಂಡೆಕಲ್ಲುಗಳಂತೆ ಕಾಣುತ್ತವೆ. ನಿಪ್ಪನ್ ಎಂಬುದು ಇದರ ಜಪಾನೀ ನಾಮ. ಜಪಾನನ್ನು ಏಷ್ಯದ ಗ್ರೇಟ್ ಬ್ರಿಟನ್ ಎಂದು ಕರೆಯುತ್ತಾರೆ. ಜಪಾನಿಗೂ ಬ್ರಿಟನ್ನಿಗೂ ಹಲವು ಸಾಮ್ಯಗಳಿರುವುದು ಇದಕ್ಕೆ ಕಾರಣ. ಎರಡೂ ದೇಶಗಳು ಮುಖ್ಯ ಭೂಖಂಡಗಳಿಂದ ಪ್ರತ್ಯೇಕಿಸಲ್ಪಟ್ಟ ದ್ವೀಪಗಳು. ಎರಡೂ ಸಮಶೀತೋಷ್ಣವಲಯದಲ್ಲಿವೆ. ಎರಡು ದೇಶಗಳಲ್ಲೂ ಸಂವಿಧಾನಬದ್ಧ ರಾಜತ್ವವಿದೆ. ಇವುಗಳ ತೀರಗಳು ಅಂಕುಡೊಂಕಾಗಿರುವುದರಿಂದ ಅನೇಕ ಸ್ವಾಭಾವಿಕ ಬಂದರುಗಳಿವೆ. ಎರಡು ದೇಶಗಳ ಜನರೂ ನಾವಿಕ ವೃತ್ತಿಯಲ್ಲಿ ನೈಪುಣ್ಯ ಪಡೆದಿದ್ದಾರೆ. ಈ ದೇಶಗಳ ಸುತ್ತ ಸಾಗರ ಪ್ರವಾಹಗಳು ಹರಿಯುವುದರಿಂದ ವಾಯುಗುಣ ಹಿತಕರ; ಜನರು ಚತುರರು, ಸಾಹಸಿಗಳು ಆಗಿದ್ದಾರೆ. ಜಪಾನಿನ ಸಮುದ್ರ ತೀರದಲ್ಲಿ 45 ದೊಡ್ಡ ಬಂದರುಗಳು ಹಡಗು ಸಂಚಾರಕ್ಕೆ ಅನುಕೂಲವಾಗಿವೆ. ಜಪಾನಿನಲ್ಲೂ ಬ್ರಿಟನ್ನಿನಲ್ಲಿರುವಂತೆಯೇ ನಾನಾ ಬಗೆಯ ಕೈಗಾರಿಕೆಗಳು ಬೆಳೆದಿವೆ. ಜಪಾನ್ ಸಮುದ್ರ ಮತ್ತು ಕೊರಿಯ ಜಲಸಂಧಿಯಿಂದಾಗಿ ಜಪಾನು ಏಷ್ಯ ಖಂಡದಿಂದ ಬೇರ್ಪಟ್ಟಿದೆ. ಹಾಗೆಯೇ ಉತ್ತರದಲ್ಲಿ ಸೋಯಾ ಜಲಸಂಧಿ ಸ್ಯಾಕಲೀನ್ ದ್ವೀಪವನ್ನು ಜಪಾನಿನಿಂದ ಬೇರ್ಪಡಿಸಿದೆ. ಜಪಾನ್ ದ್ವೀಪಸಮೂಹದಲ್ಲಿ ನಾಲ್ಕು ದ್ವೀಪಗಳಿವೆ. ಹಾನ್‍ಷ್ಯೂ ದ್ವೀಪದ ಉತ್ತರಕ್ಕೆ ಇರುವ ದ್ವೀಪ ಹಾಕೈಡೋ. ಹಾನ್‍ಷ್ಯೂ ದ್ವೀಪದ ವಿಸ್ತೀರ್ಣ 87,000 ಚ.ಮೈ. ಹಾಕೈಡೋ 36,000 ಚ.ಮೈ. ವಿಸ್ತಾರವಾಗಿವೆ. ಹಾಕೈಡೋ ಮತ್ತು ಹಾನ್‍ಷ್ಯೂ ದ್ವೀಪಗಳನ್ನು ತ್ಸುಗಾರೂ ಜಲಸಂಧಿ ಬೇರ್ಪಡಿಸುತ್ತದೆ. ಜಪಾನ್ ದ್ವೀಪಗಳು ಉ.ಅ. 30-46 ಮತ್ತು ಪೂ.ರೇ. 12-147 ನಡುವೆ ಇವೆ. ವಿಸ್ತೀರ್ಣ (ಜಪಾನಿಗೆ ಮರಳಿ ಬಂದ ರೀಯೂಕ್ಕ್ಯೂ ದ್ವೀಪಗಳೂ ಸೇರಿ) 3,77,829 ಚ.ಕಿಮೀ. ಉತ್ತರ ದಕ್ಷಿಣವಾಗಿ ಇರುವ ಸಮುದ್ರ ತೀರ 9426 ಕಿ.ಮೀ ಜನಸಂಖ್ಯೆ 126,472,000(2000) ಇದರಲ್ಲಿ ಸೇ. 78 ನಗರವಾಸಿಗಳು 22 ಗ್ರಾಮಸ್ಥರು ಟೋಕಿಯೋ ಜನಸಂಖ್ಯೆ 81,63,573(1990) ರಾಜಧಾನಿ ಟೋಕಿಯೋ. ಭೂವಿಜ್ಞಾನ ಫೆಸಿಫಿಕ್ ಸಾಗರದ ಪಶ್ಚಿಮಭಾಗದಲ್ಲಿ ದಕ್ಷಿಣೋತ್ತರವಾಗಿ ಸೈಬೀರಿಯದ ಕಮ್‍ಚಟಕಾ ಪರ್ಯಾಯದ್ವೀಪದ ದಕ್ಷಿಣ ತುದಿಯಿಂದ ಆಗ್ನೇಯ ಏಷ್ಯದವರೆಗೆ ಹರಡಿರುವ ಅನೇಕ ದ್ವೀಪವೃತ್ತಗಳಲ್ಲಿ ಜಪಾನ್ ದ್ವೀಪಸ್ತೋಮ ಬಹಳ ಮುಖ್ಯವಾದ್ದು. ಜಪಾನಿನ ಭೂನಕಾಶೆಯಲ್ಲಿ ವಿವಿಧ ಭೂಕಾಲಗಳಿಗೆ ಸೇರಿದ ಐದು ಪ್ರಮುಖ ಶಿಲಾಸಮುದಾಯಗಳನ್ನು ಗುರುತಿಸಬಹುದು: 5 ನವಜೀವಕಲ್ಪ (ಸೀನೋಜೋóಯಿಕ್) ಅಗ್ನಿಶಿಲೆಗಳು ಘನೀಕೃತ ಶಿಲಾರಸ-ಟುಫ್-ಬ್ರೆಕ್ಷಿಯಾ ಜಪಾನಿನ ನಾಲ್ಕನೆಯ ಒಂದು ಭಾಗವನ್ನು ಆಕ್ರಮಿಸಿದೆ. 4 ನವಜೀವಕಲ್ಪ (ಸೀನೋಜೋóಯಿಕ್) ಜಲಜಶಿಲೆಗಳು ಮರಳುಕಲ್ಲು-ಜೇಡುಶಿಲೆಗಳು-(ಸಾಗರ ಹಾಗೂ ಸರೋವರ ಗಳಲ್ಲಿ ಉಗಮವಾದವು. ಹಾನ್‍ಷ್ಯೂ ಹಾಗೂ ಹಾಕೈಡೋ ಸುತ್ತಮುತ್ತಲಿನ ಬೆಟ್ಟಗುಡ್ಡ ಪ್ರದೇಶಗಳಲ್ಲಿ. 3 ಅಂತ್ಯಕ್ರಿಟೇಷಸ್ ಯುಗ (ಗ್ರಾನೈಟ್ ಶಿಲೆಗಳು) ಗ್ರಾನೈಟ್ ಹಾಗೂ ಅದಕ್ಕೆ ಸಂಬಂಧಪಟ್ಟ ಶಿಲೆಗಳು, ಮಧ್ಯ ಹಾಗೂ ಪಶ್ಚಿಮ ಹಾನ್‍ಷ್ಯೂ ಮತ್ತು ಉತ್ತರ ಕೀಯೂಷೂ ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಹೊರಹೊಮ್ಮಿದೆ. 2 ಮಧ್ಯ ಜೀವಕಲ್ಪ (ಮೀಸೋಜೋóಯಿಕ್) ರೂಪಾಂತರ   ಸರೋವರ ಜನಿತ ಮರಳುಗಲ್ಲು, ಸ್ಲೇಟು, ಚರ್ಟ್ ಹೊಂದಿಲ್ಲದ ಬೆಣಚುಕಲ್ಲು ಶಿಲೆಗಳು 2ಎ ಪ್ರಾಚೀನ ರೂಪಾಂತರ ಸಾಗರ ಹಾಗೂ ಸರೋವರಜನಿತ ಮರಳುಕಲ್ಲು, ಸುಣ್ಣಕಲ್ಲು ಜೀವಕಲ್ಪ ಹೊಂದಿಲ್ಲದ ಹಾಗೂ ಸ್ಲೇಟು. ಈ ಶಿಲಾಸ್ತೋಮಗಳು ಜಪಾನಿನ ಬಹು (ಪೇಲಿಯೋಜೆóೂೀಯಿಕ್) ಶಿಲೆಗಳು ಭಾಗವನ್ನು ಆವರಿಸಿದ್ದು ಬೃಹತ್ ಮಡಿಕೆಗಳಾಗಿ ಹಲವಾರು ಸ್ತರಭಂಗಗಳಾಗಿವೆ. 1 ಅತಿ ಪ್ರಾಚೀನ ಯುಗ ರೂಪಾಂತರ ನೈಸ್ ಹಾಗೂ ಷಿಪ್ಟ್ ಶಿಲೆಗಳು. ಈ ಶಿಲೆಗಳು ಜಪಾನಿನ (ಪ್ರೀಕೇಂಬ್ರಿಯನ್) ಶಿಲೆಗಳು ಕೆಲವು ಭಾಗದಲ್ಲಿ ಮಾತ್ರ ಕಂಡುಬರುತ್ತವೆ. ಭೂ ಚರಿತ್ರೆಯ ಪ್ರಕಾರ ಜಪಾನ್ ದ್ವೀಪಗಳು ಸಮುದ್ರದ ಮೇಲೆ ಹೊರ ಹೊಮ್ಮಿದವು. ಪ್ರಾಚೀನ ಜೀವಕಲ್ಪಯುಗದಲ್ಲಿ ಭೂಭಾಗದಿಂದ ಸಾಗರವನ್ನು ಸೇರಿದ ಅಗಾಧ ಪ್ರಮಾಣದ ಮೆಕ್ಕಲು ನಿಕ್ಷೇಪ ಕಾಲಾನುಕ್ರಮದಲ್ಲಿ ಅನೇಕ ರೀತಿಯ ಭೂಕ್ರಿಯೆಗಳಿಗೆ ಒಳಗಾಗಿ ಮೇಲಕ್ಕೆತ್ತಲ್ಪಟ್ಟುವು. ಈ ದ್ವೀಪಗಳಾಗಿ ಮಾರ್ಪಟ್ಟವು. ಮೆಕ್ಕಲು ನಿಕ್ಷೇಪದಲ್ಲಿ ದೊರಕುವ ಫಾಸಿಲುಗಳ ಆಧಾರದ ಮೇಲೆ ಸೈಲೂರಿಯನ್‍ನಿಂದ ಪರ್ಮಿಯನ್ ಕಾಲದ ವರೆಗಿನ (ಸು.440 ದ.ಲ. ವರ್ಷ ಪ್ರಾಚೀನದಿಂದ 280 ದ.ಲ. ವರ್ಷ ಪ್ರಾಚೀನದ ವರೆಗೆ) ವಿವಿಧ ಸ್ತರಗಳನ್ನು ಗುರುತಿಸಬಹುದು. ಈ ಸ್ತರಗಳೊಡನೆ ದೊರಕುವ ಅಗ್ನಿಶಿಲೆಗಳು ಆ ಕಾಲದ ಅಗ್ನಿಪರ್ವತಗಳ ಚಟುವಟಿಕೆಗಳನ್ನು ವ್ಯಕ್ತಪಡಿಸುತ್ತವೆ. ಇಂದಿನ ಜಪಾನಿನ ಬಹುಭಾಗ ಮಧ್ಯಮ ಹಾಗೂ ಅಂತ್ಯ ಟ್ರಯಾಸಿಕ್ ಕಾಲದ (ಸು.200 ದ.ಲ. ವ. ಪ್ರಾಚೀನ) ಅಕಿಯೋಸ್ಟಿಕ್ ಪರ್ವತೋದ್ಭವ ಕ್ರಿಯೆಯಿಂದ ಮೇಲಕ್ಕೆತ್ತಲ್ಪಟ್ಟ ಆ ಕಾಲದ ಶಿಲೆಗಳಿಂದ ಅವೃತವಾಗಿವೆ. ಹಾಗೆಯೇ ಜೂರಾಸಿಕ್ (190 ದ.ಲ.ವ. ಪ್ರಾಚೀನ) ಮತ್ತು ಆದಿ ಕ್ರಿಟೇಷಸ್ (135 ದ.ಲ. ವ. ಪ್ರಾಚೀನ) ಕಾಲದಲ್ಲಿ ಜಪಾನಿನ ಕೆಲಭಾಗಗಳು ಅಸಾಧಾರಣವಾದ ಭೂಕ್ರಿಯೆಗಳಿಂದ ಭಾಗಶಃ ಮುಳುಗಿಯೂ ಇವೆ. ಕ್ರಿಟೇಷಸ್ ಯುಗದಲ್ಲಿ (135 ದ.ಲ.ವ. ಪ್ರಾಚೀನದಿಂದ 65 ದ.ಲ. ವ. ಪ್ರಾಚೀನದ ವರೆಗೆ) ಅಗಾಧ ಪ್ರಮಾಣದ ಅಂತಸ್ಸರಣಗಳಾಗಿ ಅಗ್ನಿಶಿಲೆಗಳಿಗೆ ಎಡೆಕೊಟ್ಟಿವೆ. ನವಜೀವಕಲ್ಪದಲ್ಲಿ (ಟರ್ಷಿಯರಿ) ಅಗಾಧವಾದ ಪರ್ವತೋದ್ಭವ ಕ್ರಿಯೆಗಳಿಂದ ಬೃಹತ್ ಮಡಿಕೆಗಳುಂಟಾಗಿ ಬಹು ವ್ಯಾಪಕವಾದ ಬರ್ಹಿಸರಣ ಅಗ್ನಿಶಿಲೆಗಳು ರೂಪುಗೊಂಡವು. ಪ್ಲೀಸ್ಟೊಸೀನ್ ಕಾಲದಲ್ಲಿ ನಡೆದ ಭೂಚಲನವಲನಗಳು ಸಮುದ್ರದಂಚಿನಲ್ಲಿ ಅನೇಕ ಮಾರ್ಪಾಡುಗಳಿಗೆ ಕಾರಣವಾಗಿವೆ. ಹಾಗೆಯೇ ಭೂಕಾಲದ ಇತ್ತೀಚಿನ ದಿವಸಗಳಲ್ಲಿಯೂ ಕೂಡ ಉಂಟಾಗುತ್ತಿರುವ ಭೂಕಂಪನಗಳು, ಅಗ್ನಿಪರ್ವತಗಳ ಚಟುವಟಿಕೆಗಳು, ಸಣ್ಣಪುಟ್ಟ ಭೂಚಲನೆಗಳು ನಿರಂತರವಾಗಿ ಜಪಾನಿನ ಭೂವಿನ್ಯಾಸದ ವ್ಯತ್ಯಾಸಗಳಿಗೆ ಪೂರಕವಾಗಿವೆ. ಖನಿಜ ಸಂಪತ್ತು ಕೈಗಾರಿಕೋದ್ಯಮದಲ್ಲಿ ಅಪಾರ ಪ್ರಗತಿಯನ್ನು ಜಪಾನ್ ಸಾಧಿಸಿದ್ದರೆ ಖನಿಜಕ್ಷೇತ್ರದಲ್ಲಿ, ಕೈಗಾರಿಕೆಗಳಿಗೆ ಬೇಕಾಗುವ ಎಲ್ಲ ಖನಿಜಗಳನ್ನು ಪಡೆದಿದೆ ಎಂದು ಹೇಳುವ ಹಾಗಿಲ್ಲ. ಅನೇಕ ಖನಿಜಗಳನ್ನು ಪರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಕಬ್ಬಿಣದ ನಿಕ್ಷೇಪಗಳು ಅಲ್ಪ ಪ್ರಮಾಣದಲ್ಲಿವೆ. ಇವು ಬಹುತೇಕ ಹಾಕೈಡೋ ಹಾಗೂ ಉತ್ತರ ಹಾನ್‍ಷ್ಯೂ ಪ್ರದೇಶಕ್ಕೆ ಸೀಮಿತವಾಗಿವೆ. ಈ ಪ್ರದೇಶದ ಅದುರಿನಲ್ಲಿ 35ರಷ್ಟು ಕಬ್ಬಿಣಾಂಶ ಉಂಟು. ಹಾಕೈಡೋ ಮತ್ತು ಹಾನ್‍ಷ್ಯೂವಿನ ಸುತ್ತಮುತ್ತ ಸುಮಾರು 50 ಗಣಿಗಳು ಕಾರ್ಯನಿರತವಾಗಿವೆ. ಪೆಟ್ರೋಲಿಯಮ್ ದೊರಕುವ ಪ್ರದೇಶ ಪಶ್ಚಿಮ ಹಾಕೈಡೋನಿಂದ ದಕ್ಷಿಣ ಹಾನ್‍ಷ್ಯೂವಿನ ವರೆಗೂ ಹಬ್ಬಿದೆ. ಆದರೆ ಪೆಟ್ರೋಲಿಯಮಿನ ಉತ್ಪಾದನೆ ಅತ್ಯಲ್ಪ. ಹೀಗಾಗಿ ಜಪಾನ್ ಅಧಿಕ ಪ್ರಮಾಣದಲ್ಲಿ ಪೆಟ್ರೋಲನ್ನು ಆಮದು ಮಾಡಿಕೊಳ್ಳುತ್ತದೆ. ನೈಸರ್ಗಿಕ ಅನಿಲವನ್ನು ಅಧಿಕ ಪ್ರಮಾಣದಲ್ಲಿ ನೀಗಾಟ ಹಾಗೂ ದಕ್ಷಿಣ ಕಾಂಟೋ ಪ್ರದೇಶಗಳಲ್ಲಿ ಹೊರತೆಗೆಯಲಾಗುತ್ತದೆ. ಜಪಾನಿನ ಖನಿಜ ಸಂಪತ್ತಿನಲ್ಲಿ ಕಲ್ಲಿದ್ದಲು ಅತಿಮುಖ್ಯವಾದದ್ದು. ಒಟ್ಟು ಖನಿಜೋತ್ಪಾದನೆಯಲ್ಲಿ ಇದು 47ರಷ್ಟಾಗುತ್ತದೆ. ಈ ನಿಕ್ಷೇಪ ಸುಮಾರು 20.79 ಬಿಲಿಯನ್ ಟನ್‍ಗಳಷ್ಟು ಇದೆಯೆಂದು ಅಂದಾಜು ಮಾಡಲಾಗಿದೆ. ಉತ್ತರ ಕೀಯೂಷೂ, ಹಾಕೈಡೋ, ಪೂರ್ವ ಹಾನ್‍ಷ್ಯೂ ಮತ್ತು ಪಶ್ಚಿಮ ಹಾನ್‍ಷ್ಯೂ ಕಲ್ಲಿದ್ದಲು ದೊರೆಯುವ ನಾಲ್ಕು ಪ್ರಮುಖ ಪ್ರದೇಶಗಳು. ಲೋಹ ಸಂಬಂಧ ಖನಿಜಗಳಲ್ಲಿ ಕಬ್ಬಿಣವನ್ನು ಬಿಟ್ಟರೆ ತಾಮ್ರ ಅತಿಮುಖ್ಯವಾದ್ದು. ಸುಮಾರು 200 ತಾಮ್ರ ಗಣಿಗಳಿವೆ. ಅವುಗಳ ಪೈಕಿ 6 ದೊಡ್ಡ ಪ್ರಮಾಣದವು. ಬಹುತೇಕ ಗಣಿಗಳು ಈಶಾನ್ಯ ಹಾನ್‍ಷ್ಯೂ ಹಾಗೂ ಷಿಕೋಕ್ಯೂ ಪ್ರದೇಶದ ಸುತ್ತ ಮುತ್ತ ಪ್ರಸರಿಸಿವೆ. ಸೀಸ ಹಾಗೂ ಸತು ಹೆಚ್ಚಾಗಿ ತಾಮ್ರದ ಅದುರಿನಲ್ಲಿ ದೊರೆಯುತ್ತವೆ. ಅಲೋಹ ಖನಿಜಸಂಪತ್ತಿನಲ್ಲಿ ಗಂಧಕ ಅತಿಮುಖ್ಯವಾದ್ದು. ಪೈರೈಟ್ ಇದರ ಅತಿಮುಖ್ಯ ಖನಿಜ. ಜಪಾನ್ ಪ್ರಪಂಚದಲ್ಲಿ ಅತಿ ಹೆಚ್ಚು ಪೈರೈಟ್ ಉತ್ಪಾದಿಸುವ ರಾಷ್ಟ್ರ. ಇತರ ಲೋಹ ಹಾಗೂ ಅಲೋಹಗಳಾದ ಚಿನ್ನ, ಬೆಳ್ಳಿ, ನೈಟ್ರೇಟ್ ಮುಂತಾದವು ಅತ್ಯಲ್ಪ ಪ್ರಮಾಣದಲ್ಲಿ ದೊರೆಯುತ್ತವೆ. ದೇಶೀಯ ಬಳಕೆಯನ್ನು ಆಧಾರವಾಗಿಟ್ಟುಕೊಂಡು, ಜಪಾನಿನ ಖನಿಜ ಸಂಪತ್ತನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು : 1 ದೇಶೀಯ ಬಳಕೆಗೆ ಸಾಕಾಗುವಷ್ಟು ಅಥವಾ ಹೆಚ್ಚು ಕಡಿಮೆ ಸಾಕಾಗುವಷ್ಟು ದೊರೆಯುತ್ತಿರುವ ಖನಿಜಗಳು-ಕ್ರೋಮೈಟ್, ಕಲ್ಲಿದ್ದಲು, ಜಿಪ್‍ಸಮ್, ಸುಣ್ಣಕಲ್ಲು, ಮೆಗ್ನೀಸಿಯಮ್, ಪೈರೈಟ್, ಗಂಧಕ, ಸೀಸ, ಸತ್ತು, ತಾಮ್ರ, ಚಿನ್ನ ಮತ್ತು ಬೆಳ್ಳಿ, 2 ದೇಶೀಯ ಬಳಕೆಗೆ ಸಾಲದಷ್ಟು ಪ್ರಮಾಣದಲ್ಲಿ ದೊರೆಯುವ, ಆದ್ದದರಿಂದ ಭಾಗಶಃ ಆಮದು ಮಾಡಿಕೊಳ್ಳಬೇಕಾದ ಖನಿಜಗಳು-ಕಬ್ಬಿಣದ ಅದುರು, ಆಂಟಿಮನಿ, ಪಾದರಸ, ಮ್ಯಾಂಗನೀಸ್, ತವರ, 'ಟೈಟೇನೀಯಮ್, ಟಂಗ್‍ಸ್ಟನ್, ಕ್ರೋಮಿಯಮ್ ಹಾಗೂ ವೆನೆಡಿಯಮ್. 3 ಸಂಪೂರ್ಣವಾಗಿ ಆಮದು ಮಾಡಿಕೊಳ್ಳಲೇಬೇಕಾದ ಖನಿಜಗಳು-ನಿಕ್ಕಲ್, ಕೋಬಾಲ್ಟ್, ಅಲ್ಯೂಮಿನಿಯಮ್, ನೈಟ್ರೇಟ್ ಹಾಗೂ ವಿರಳ ಖನಿಜಗಳು. ತೀರಪ್ರದೇಶ ಜಪಾನಿನ ತೀರ 16,470 ಮೈಲಿಗಳಷ್ಟು ಉದ್ದವಿದೆ. ಸರಾಸರಿಯಲ್ಲಿ ಪ್ರತಿ ಚದರ ಮೈಲಿ ಪ್ರದೇಶಕ್ಕೂ 7 ಮೈ. ತೀರವುಂಟು. ಜಪಾನಿನ ಉದ್ದನೆಯ ತೀರ ಅದರ ಜನಜೀವನ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ತುಂಬ ಪರಿಣಾಮ ಬೀರಿದೆ. ಜಪಾನಿನ ಯಾವ ಪ್ರದೇಶವೂ ಸಮುದ್ರಕ್ಕೆ 75 ಮೈಲಿಗಳಿಗಿಂತ ಹೆಚ್ಚು ದೂರದಲ್ಲಿಲ್ಲ. ತೀರಪ್ರದೇಶದಲ್ಲಿ ಮರಳು ದಂಡೆಗಳು ಹಾಗೂ ತಗ್ಗಾದ ದಂಡೆಗಳಿಂದ ಬೇರ್ಪಟ್ಟ ಉಪ್ಪುನೀರಿನ ಹರವುಗಳುಂಟು. ಇಲ್ಲಿಯ ತೀರಪ್ರದೆಶ ಚಳಿಗಾಲದ ಚಂಡಮಾರುತಗಳಿಗೆ ಮತ್ತು ಅಲೆಗಳ ಪರಿಣಾಮಕ್ಕೆ ಒಳಗಾಗುತ್ತದೆ. ಪೆಸಿಫಿಕ್ ತೀರ ಪ್ರದೇಶದಲ್ಲಿ ಅನೇಕ ಒಳಚಾಚುಗಳುಂಟು. ಟೋಕಿಯೋ ಕೊಲ್ಲಿಯ ಬಳಿಯ ಪ್ರದೇಶ ಸಮತಟ್ಟಾದ ಮಣ್ಣಿನಿಂದ ಕೂಡಿದ ಮುಖಜ ಭೂಮಿ, ಸಗಾಮೀ ಕೊಲ್ಲಿಯ ಪೂರ್ವಭಾಗದಲ್ಲಿರುವ ವಿಸ್ತಾರ ಪ್ರದೇಶಗಳಲ್ಲಿ ಮರಳು ದಂಡೆಗಳು ಹಬ್ಬಿವೆ. ಅದರ ಪಶ್ವಿಮ ಭಾಗ ಕಡಿದು, ಬಂಡೆಗಳಿಂದ ಕೂಡಿದ್ದು. ಈಜೂ ಪರ್ಯಾಯದ್ವೀಪದಲ್ಲಿ ಆಳವಾಗಿ ಸವೆದಿರುವ ಅಗ್ನಿಪರ್ವತಗಳು ಸಮುದ್ರದವರೆಗೂ ಹಬ್ಬಿವೆ. ಬಯಲುಗಳ ಕರಾವಳಿಗಳು ಮರಳಿನಿಂದ ಕೂಡಿದವು. ಬೆಟ್ಟಗಳ ಇಳಿಜಾರುಗಳು ನೇರವಾಗಿ ಸಮುದ್ರಕ್ಕೆ ಇಳಿದಿರುವ ಕಡೆಗಳಲ್ಲಿ ತೀರಗಳು ಶಿಲಾವೃತ. ಕುಮಾನೋ ಸಮುದ್ರಕ್ಕೆ ಎದುರಾಗಿರುವ ಕೀ ಪರ್ಯಾಯ ದ್ವೀಪದಲ್ಲಿ ಮತ್ತು ಕೀಟಾಕಾಮೀ ಪ್ರದೇಶದ ಈಶಾನ್ಯ ಭಾಗದುದ್ದಕ್ಕೂ ಅಧಿಕ ಒಳಚಾಚುಗಳನ್ನು ಕಾಣಬಹುದು. ಕೆಲವು ಕಡೆ ಸಮುದ್ರದಲ್ಲಿರುವ ಇತ್ತರವಾದ ಬಂಡೆಗಳನ್ನು ಆಧರಿಸಿ ನಿಂತಿರುವ ತೀರಸಮತಟ್ಟುಗಳುಂಟು. ಬೋಸೋ ಮತ್ತು ಕೀ ಪರ್ಯಾಯದ್ವೀಪಗಳಲ್ಲಿ ಈ ಲಕ್ಷಣಗಳನ್ನು ಕಾಣಬಹುದು. ಒಟ್ಟಿನಲ್ಲಿ ಜಪಾನಿನ ತೀರಪ್ರದೇಶ ಎರಡು ಬಗೆ. ಒಂದು ಮರಳಿನಿಂದ ಕೂಡಿದ್ದರೆ, ಇನ್ನೊಂದು ಶಿಲಾವೃತ. ಕರಾವಳಿ ಅಂಕುಡೊಂಕು. ಅದ್ದರಿಂದ ಇಲ್ಲಿ ಕೆಲವು ಸ್ವಾಭಾವಿಕ ಬಂದರುಗಳುಂಟು. ಇದರ ಉದ್ದನೆಯ ಕರಾವಳಿ ಸಮುದ್ರಯಾನಕ್ಕೆ ಅನುಕೂಲಕರ. ಆಂತರಿಕ ಸಾರಿಗೆ ಹಾಗೂ ಮೀನುಗಾರಿಕೆ ಉದ್ಯಮಕ್ಕೆ ಇದು ಸಹಾಯಕ. ಮೇಲ್ಮೈ ಲಕ್ಷಣ ಜಪಾನಿನ ದ್ವೀಪಗಳು ಪರ್ವತಗಳಿಂದಲೂ ಅನೇಕ ಜ್ವಾಲಾಮುಖಿಗಳಿಂದಲೂ ಕೂಡಿದವು. ಇಲ್ಲಿ ಪದೇಪದೇ ಸಂಭವಿಸುತ್ತಿರುವ ಭೂಕಂಪಗಳನ್ನೂ ಜೀವಂತವಾಗಿರುವ ಜ್ವಾಲಾಮುಖಿಗಳನ್ನೂ ಗಮನಿಸಿದರೆ ಇಲ್ಲಿಯ ಪರ್ವತರಚನಾಕ್ರಿಯೆ ಇನ್ನೂ ಮುಂದುವರಿದಿದೆಯೆಂಬುದು ಕಂಡುಬರುತ್ತದೆ. ಇಲ್ಲಿಯ ಪರ್ವತಸ್ತೋಮಗಳನ್ನು ಆರು ಪ್ರಕಾರಗಳಾಗಿ ವಿಂಗಡಿಸಬಹುದು: 1 ಕ್ಯುರೀಲ್ ಅಥವಾ ಚೀಷೀಮಾ ದ್ವೀಪಗಳಿಗೆ ಕಾರಣವಾದ, ಹಾಕೈಡೋ ದ್ವೀಪದಲ್ಲಿ ಈಶಾನ್ಯದ ಕಡೆಯಿಂದ ಮುಂದುವರಿದಿರುವ ಪರ್ವತಶ್ರೇಣಿ, 2 ಹಾಕೈಡೋವನ್ನು ವಾಯುವ್ಯ ಮೂಲೆಯಿಂದ ಪ್ರವೇಶಿಸುವ ಸ್ಯಾಕಲೀನ್ ಅಥವಾ ಕಾರಫ್ಯೂಟೋ ಪರ್ವತಗಳು, 3 ಹಾನ್‍ಷ್ಯೂವಿನ ಉತ್ತರಾರ್ಧ ಭಾಗವನ್ನೂ ಹಾಕೈಡೋವಿನ ದಕ್ಷಿಣದ ಪರ್ಯಾಯದ್ವೀಪವನ್ನೂ ಆವರಿಸಿರುವ ಟೋಹೋಕೂ ಅಥವಾ ಈಶಾನ್ಯ ಶ್ರೇಣಿ, 4 ಮಧ್ಯ ಹಾನ್‍ಷ್ಯೂವಿನಿಂದ ನೈಋತ್ಯದ ಕಡೆ ಹಬ್ಬಿ ಚೂಗೋಕೂ ಪರ್ಯಾಯದ್ವೀಪದ ಬೆನ್ನೆಲುಬಾಗಿರುವ ಮತ್ತು ಷಿಕೋಕ್ಯೂ ಪರ್ವತಗಳಾಗಿ ಬಹು ದೂರ ಹಬ್ಬಿರುವ ಸೇನಾನ್ ಅಥವಾ ನೈಋತ್ಯ ಭಾಗದ ಪರ್ವತಶ್ರೇಣಿ, 5 ಪೆಸಿಫಿಕ್ ದ್ವೀಪಸ್ತೋಮದ ಮೂಲಕ ಮಧ್ಯ ಹಾನ್‍ಷ್ಯೂವನ್ನು ದಾಟಿ ಉತ್ತರಕ್ಕೆ ಹಬ್ಬಿರುವ ಷಿಚಿಟೋ-ಮರಿಯಾನ ಶ್ರೇಣಿ, 6 ಫಾರ್ಮೋಸದಿಂದ ಉತ್ತರದ ಕಡೆಬಾಗಿ ಕೀಯೂಷೂವನ್ನು ಛೇದಿಸುವ ರೀಯೂಕ್ಯೂ ಶ್ರೇಣಿ. ಪರ್ವತ ಶ್ರೇಣಿಗಳು ಕೂಡುವ ಎಡೆಯಲ್ಲಿ ಉನ್ನತ ಪರ್ವತಗ್ರಂಥಿಗಳೂ ವಿಸ್ತಾರ ಬಯಲುಗಳೂ ಜ್ವಾಲಾಮುಖಿ ಸ್ತೋಮಗಳೂ ರೂಪುಗೊಂಡಿವೆ. ಹಾನ್‍ಷ್ಯೂವಿನ ಮಧ್ಯಭಾಗದಲ್ಲಿ ಸೇನಾನ್ ಮತ್ತು ಷಿಚಿಟೋ-ಮರಿಯಾನ ಪರ್ವತಶ್ರೇಣಿಗಳು ಸಂಧಿಸುತ್ತವೆ. ಜಪಾನಿನ ಜ್ವಾಲಾಮುಖೇತರ ಮೂಲದ ಅತ್ಯುನ್ನತ ಪರ್ವತಗಳು ಇರುವುದು ಅಲ್ಲೇ. ಫ್ಯೂಜೀ ಜ್ವಾಲಾಮುಖಿಸ್ತೋಮ ಇರುವುದೂ ಅಲ್ಲೇ. ಈ ಸ್ತೋಮದ ಫ್ಯೂಜೀ, ಆಕೈಷೀ, ಮತ್ತು ಹಿಡಾ ಶಿಖರಗಳ ಎತ್ತರ ಅನುಕ್ರಮವಾಗಿ 12,395', 10,456' ಮತ್ತು 10,444'. ಈ ಎರಡು ಮಹಾಶ್ರೇಣಿಗಳ ಸಂಧಿಸ್ಥಳದಲ್ಲೇ ಜಪಾನಿನ ಅತ್ಯಂತ ದೊಡ್ಡ ಮೈದಾನವಾದ ಕ್ಯಾಂಟೋ ಬಯಲು ಇದೆ. ಟೋಹೋಕೂ, ಕ್ಯೂರೀಲ್ ಮತ್ತು ಸ್ಯಾಕಲೀನ್ ಪರ್ವತಶ್ರೇಣಿಗಳು ಹಾಕೈಡೋನಲ್ಲಿ ಕೂಡುತ್ತವೆ. ಬೃಹತ್ ಜ್ವಾಲಾಮುಖಿಗಳು ಹೆಣೆದುಕೊಂಡಿರುವ ಆ ಪ್ರದೇಶ ಹಾಕೈಡೋನ ಜಾವಣಿ. ಜ್ವಾಲಾಮುಖಿಸ್ತೋಮದಿಂದ ಕೂಡಿದ ಇನ್ನೊಂದು ಪರ್ವತಗ್ರಂಥಿ ಇರುವುದು ಕೀಯೂಷೂನಲ್ಲೊ. ಇಲ್ಲಿ ಸೇನಾನ್ ಮತ್ತು ರೀಯೂಕ್ಯೂ ಶ್ರೇಣಿಗಳು ಸಂಧಿಸುತ್ತವೆ. ಇಲ್ಲೂ ಉನ್ನತ ಪರ್ವತ ಗ್ರಂಥಿಗಳೂ ನೆರೆಯಲ್ಲೇ ದೊಡ್ಡ ಪ್ರಸ್ಥಭೂಮಿಗಳೂ ವಿಶಾಲ ಮೈದಾನಗಳೂ ಇವೆ. ಸ್ಯಾಕಲೀನ್ ಪರ್ವತಶ್ರೇಣಿ ಎರಡು ಕವಲವಾಗಿ ಒಡೆದು ಹಾಕೈಡೋನಿಂದ ಮುಂದೆ ಸಾಗುವಾಗ, ದ್ವೀಪದ ಪೂರ್ವದಲ್ಲಿ ಕೀಟಾಮೀ ಮತ್ತು ಹಿಡಾಕ ಶ್ರೇಣಿಗಳಾಗಿಯೂ ಪಶ್ವಿಮದಲ್ಲಿ ಟೆಷೀಯೋ ಮತ್ತು ಯೂಬರೀ ಪರ್ವತಗಳಾಗಿಯೂ ಪರಿಣಮಿಸುತ್ತದೆ. ಇವುಗಳ ನಡುವೆ ವಿಶಾಲ ಮೈದಾನಗಳುಂಟು. ದಕ್ಷಿಣದಲ್ಲಿ ಹಾಕೈಡೋನಲ್ಲಿ ವಿಸ್ತರಿಸಿರುವ ಕ್ಯುರೀಲ್ ಶ್ರೇಣಿ ಹಲವು ಜ್ವಾಲಾ ಮುಖಿಗಳಾಗಿ ಪರಿಣಮಿಸಿದೆ. ಇವುಗಳಲ್ಲಿ ಅತ್ಯುನ್ನತವಾದ್ದು ಅಸಾಹೀ-ಡಾಕೇ (7,513'). ಇದು ಮಧ್ಯ ಹಾಕೈಡೋನಲ್ಲಿದೆ. ಜಪಾನಿನ ಎರಡನೆಯ ದೊಡ್ಡ ಮೈದಾನವಾದ ಟೋಕಾಚೀ ಇರುವುದು ಹಾಕೈಡೋನ ಪಶ್ವಿಮ ಭಾಗದಲ್ಲಿ-ಕ್ಯುರೀಲ್ ಮತ್ತು ಸಾಕಲೀನ್‍ಗಳು ಸಂಧಿಸುವೆಡೆಯಲ್ಲಿ. ಹಾಕೈಡೋನ ನೈಋತ್ಯ ಪರ್ಯಾಯದ್ವೀಪ ಭಾಗವನ್ನಾವರಿಸಿರುವ ಟೋಹೋಕೂ ಪರ್ವತ ವ್ಯವಸ್ಥೆ ಹಾನ್‍ಷ್ಯೂವಿನ ಮಧ್ಯದ ಪ್ರದೇಶಕ್ಕೆ ಮುಂದುವರಿಯುತ್ತದೆ. ಇಲ್ಲಿ ಮೂರು ಪರ್ವತಶ್ರೇಣಿಗಳೂ ಇವುಗಳ ಅಂಚುಗಳಲ್ಲಿ ಮತ್ತು ನಡುವೆ ಇರುವ ಮೈದಾನಗಳೂ ಟೋಹೋಕೂ ಶ್ರೇಣಿಗೆ ಸಮಾಂತರಗಳಲ್ಲಿವೆ. ಮಧ್ಯದ ಶ್ರೇಣಿ ಅತ್ಯುನ್ನತ. ಇದು ಈ ಪ್ರದೇಶದ ಬೆನ್ನೆಲುಬಿನಂತಿದೆ. ಇದರ ನೆತ್ತಿಯಲ್ಲಿ ಅನೇಕ ಉನ್ನತ ಜ್ವಾಲಾಮುಖಿಗಳುಂಟು. ಪಶ್ಚಿಮದಲ್ಲಿರುವ ದೇವಾ ಶ್ರೇಣಿ ಇದಕ್ಕಿಂತ ಬಲು ತಗ್ಗು. ಇವೆರಡರ ನಡುವೆ ಹರಡಿರುವ ಶ್ರೇಣಿಗಳು ತುಂಡುತುಂಡಾಗಿವೆ. ಅವುಗಳ ನಡುವಣ ನೆಲ ಫಲವತ್ತಾದ್ದು. ಜಪಾನಿನ ಮುಖ್ಯ ಶ್ರೇಣಿಗಳಲ್ಲಿ ಷಿಚಿಟೋ ಮರಿಯಾನ ಒಂದು. ಫೆಸಿಫಿಕಿನಿಂದ ಹರಿದುಬರುವ ಈ ಶ್ರೇಣಿ ಆರಂಭದಲ್ಲೇ ಏಳು ದ್ವೀಪಗಳನ್ನುಂಟು ಮಾಡಿದೆ. ಇವು ಜ್ವಾಲಾಮುಖಿ ದ್ವೀಪಗಳು. ಇವುಗಳ ಹೆಸರು ಈಜೂ ಷಿಚಿಟೊ. ಈ ಶ್ರೇಣಿಯ ಇಲ್ಲಿಂದ ಮುಂದಿನ ಭಾಗವೇ ಈಜೂ ಪರ್ಯಾಯದ್ವೀಪ. ಇದರ ಬಿಸಿನೀರ ಊಟೆಗಳೂ ಮರಳ ದಂಡೆಯೂ ಪ್ರಸಿದ್ಧವಾದವು. ಇಲ್ಲಿಂದ ಉತ್ತರಕ್ಕೆ ಇರುವ ಪ್ರದೇಶದಲ್ಲಿ ಹಾಕೋನೀ ಜ್ವಾಲಾಮುಖಿ ಇದೆ. ಆಷಿ ಸರೋವರ ಇರುವುದು ಇದರ ವಿಶಾಲ ಬೋಗುಣಿಯಲ್ಲೆ. ಜಪಾನಿನ ಅತ್ಯಂತ ಎತ್ತರವಾದ ಮತ್ತು ಅತ್ಯಂತ ಸುಂದರವಾದ ಫ್ಯೂಜೀಯಾಮ ಅಗ್ನಿಪರ್ವತ (12,395') ಇದರ ಬಳಿಯಲ್ಲಿದೆ. ಸೇನಾನ್ ಶ್ರೇಣಿ ಪೂರ್ವಪಶ್ಚಿಮವಾಗಿ ಹಬ್ಬಿದೆ. ಇದರ ಒಂದು ಭಾಗ ಚೂಗೋಕೂ ಪರ್ವತ. ಇದು ಚೂಗೋಕೂ ಪರ್ಯಾಯದ್ವೀಪದ ಬೆನ್ನೆಲುಬಿನಂತಿದೆ. ಬೀವಾ ಸರೋವರಕ್ಕೆ ಪಶ್ವಿಮದಲ್ಲಿ ಟಂಬ್ಲ ಪ್ರಸ್ಥಭೂಮಿ ಇದೆ. ಚೂಗೋಕೂ ಪರ್ವತದ ಮುಖ್ಯ ಶಿಖರ ಹೊಟಾಕಡಾಕೆ (10,138'). ಜಪಾನಿನ ಪರ್ವತರಚನೆಯಿಂದಾಗಿ ಜನವಸತಿಗೆ ಮತ್ತು ಸಂಪರ್ಕ ಸಾಧನಗಳ ವ್ಯವಸ್ಥೆಗೆ ಅಡಚಣೆಯಾಗಿದೆ. ಆದರೂ ಈ ಪರ್ವತಗಳಲ್ಲಿ ಅಪಾರ ಅರಣ್ಯ ಸಂಪತ್ತುಂಟು. ವಿಪುಲ ಜಲದ ನೆಲೆ ಈ ಪ್ರದೇಶಗಳಲ್ಲಿ ಇರುವುದರಿಂದ ಅನೇಕ ನದಿಗಳ ಉಗಮಕ್ಕೆ ಕಾರಣವಾಗಿದೆ. ಇವು ಸುಂದರ ದೃಶ್ಯಗಳ ಬೀಡುಗಳು. ಜಪಾನಿನಲ್ಲಿ ಮುಖ್ಯ ಬಯಲುಗಳೆಲ್ಲ ಇರುವುದು ತೀರಪ್ರದೇಶಗಳಲ್ಲಿ. ಬಹುತೇಕ ಅವು ಪರ್ವತಗಳಿಂದ ಹೊತ್ತು ತಂದ ಮೆಕ್ಕಲು ಮತ್ತಿತರ ಗೋಡು ಮಣ್ಣುಗಳಿಂದ ಆದಂಥವು. ಪೆಸಿಫಿಕ್ ತೀರದ ಮಧ್ಯ ಹಾನ್‍ಷ್ಯೂವಿನಲ್ಲಿರುವ ಕ್ವಾನ್‍ಟೋ ಬಯಲಿನ ವಿಸ್ತೀರ್ಣ ಸುಮಾರು 5,000 ಚ.ಮೈ. ಜಪಾನಿನಲ್ಲಿ 100ಕ್ಕೂ ಹೆಚ್ಚು ನದಿಗಳುಂಟು. ಅವುಗಳ ಪೈಕಿ ಮೂರು ಮಾತ್ರ 200 ಮೈ.ಗಿಂತ ಉದ್ದ. ಅವುಗಳ ಹೆಸರು ಷಿನಾನೋ (299 ಮೈ.), ಇಷಿಕಾರೀ (227 ಮೈ.) ಮತ್ತು ಟೋನೇ (200 ಮೈ.). ನದಿಗಳು ಬೆಟ್ಟದ ಇಳಿಜಾರಿನಲ್ಲಿ ರಭಸದಿಂದ ಹರಿಯುವಾಗ ಹೊತ್ತು ತಂದ ಮಣ್ಣಿನಿಂದ ಫಲವತ್ತಾದ ಮೈದಾನಗಳಾಗಿವೆ. ಪರ್ವತಪ್ರದೇಶದಿಂದ ಇಳಿದು ಮೈದಾನದಲ್ಲಿ ಹರಿಯುವಾಗ ಮೈದಾನಗಳಾಗಿವೆ. ಪರ್ವತಪ್ರದೇಶದಿಂದ ಇಳಿದು ಮೈದಾನದಲ್ಲಿ ಹರಿಯುವಾಗ ಈ ನದಿಗಳ ಮಣ್ಣು ತಳದಲ್ಲಿ ತಂಗಿ ಇವುಗಳ ಪಾತ್ರಗಳು ನೆರೆಯ ನಾಡಿಗಿಂತ ಸಾಮಾನ್ಯವಾಗಿ ಎತ್ತರವಾಗಿರುತ್ತವೆ. ಜಪಾನಿನ ವ್ಯವಸಾಯಕ್ಕೆ ಬೇಕಾದ ನೀರಿನಲ್ಲಿ ಮೂರನೆಯ ಎರಡು ಭಾಗ ಒದಗುವುದು ನದಿಗಳಿಂದ. ಇವುಗಳಿಂದ ವಿದ್ಯುತ್ತಿನ ಉತ್ಪಾದನೆಯೂ ಆಗುತ್ತಿದೆ. ವಾಯುಗುಣ ದಕ್ಷಿಣೋತ್ತರವಾಗಿ ಜಪಾನಿನ ಹರವು 15 ಅಕ್ಷಾಂಶೀಯ ಡಿಗ್ರಿಗಳಷ್ಟು ಇರುವುದರಿಂದ ಇದರ ಉಷ್ಣತೆ ಮತ್ತು ಅವಪಾತಗಳಲ್ಲಿ ಪ್ರಾದೇಶಿಕ ಭಿನ್ನತೆಗಳು ಅಧಿಕ. ದಕ್ಷಿಣದ ಕೀಯೂಷೂ ಉಪೋಷ್ಣವಲಯದಲ್ಲಿದೆ. ಅಲ್ಲಿ ಮಳೆ ಹೆಚ್ಚು. ಉತ್ತರದ ಹಾಕೈಡೋದು ಖಂಡಾಂತರ ವಾಯುಗುಣ. ಸುತ್ತಣ ಸಮುದ್ರ ವಿಶೇಷ ಪ್ರಭಾವ ಬೀರಿದೆ. ಚಳಿಗಾಲದಲ್ಲಿ ಏಷ್ಯದ ಒಳನಾಡಿನ ತೀವ್ರ ಚಳಿಯಿಂದಾಗಿ ಪೂರ್ವ ಸೈಬೀರಿಯದಲ್ಲಿ ಹೆಚ್ಚು ಒತ್ತಡ ಪ್ರದೇಶ ಏರ್ಪಟ್ಟು, ಅಲ್ಲಿಯ ಚಳಿಗಾಳಿ ಫೆಸಿಫಿಕಿನತ್ತ ಹರಿಯುತ್ತದೆ. ಈ ಗಾಳಿ ಜಪಾನ್ ಸಮುದ್ರವನ್ನು ದಾಟುವಾಗ ತೇವವನ್ನು ಸಂಗ್ರಹಿಸಿ, ಜಪಾನಿನ ಮೇಲೆ ಮಳೆ ಹಿಮ ಸುರಿಸುತ್ತದೆ. ಬೇಸಗೆಯಲ್ಲಿ ಒತ್ತಡದ ಏರುತಗ್ಗು ತೀರುವುಮುರುವಾಗಿ, ಪೆಸಿಫಿಕಿನಿಂದ ಸೈಬೀರಿಯದತ್ತ ಬೀಸುವ ಮಾರುತದಿಂದ ಜಪಾನಿನಲ್ಲಿ ಮಳೆಯಾಗುತ್ತದೆ. ಮಾನ್ಸೂನಿನ ಪರಿಣಾಮದಿಂದಾಗಿ ಜಪಾನಿನಲ್ಲಿ ಅದರ ಅಕ್ಷಾಂಶಗಳಲ್ಲಿ ಇರಬೇಕಾದ್ದಕ್ಕಿಂತ ಚಳಿ ತೀವ್ರತರ; ಬೇಸಗೆಯೂ ತೇವಕರ, ಬೇಸಗೆಯಲ್ಲೂ ಅನಂತರದ ಎರಡು ತಿಂಗಳುಗಳಲ್ಲೂ ಜಪಾನು ಪದೇಪದೇ ಚಂಡಮಾರುತಕ್ಕೆ ಒಳಗಾಗುತ್ತದೆ. ದಕ್ಷಿಣ ಜಪಾನಿಗೆ ಇದರ ಬಾಧೆ ವಿಪರೀತ. ಡಿಸೆಂಬರಿನಿಂದ ಫೆಬ್ರವರಿಯ ವರೆಗೆ ಜಪಾನಿನ ಹಲವು ಭಾಗಗಳಲ್ಲಿ ನೀರು ಗಡ್ಡೆ ಕಟ್ಟುವುದಕ್ಕಿಂತ ಕಡಿಮೆಯ ಉಷ್ಣತೆ ಇರುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಬಂಧಂತೆ ಉಷ್ಣತೆ ಅಧಿಕ. ಹಾಕೈಡೋನ ಪಶ್ಚಿಮ ಮಧ್ಯದಲ್ಲಿರುವ ಆಸಾಹೀಗಾವ ನಗರದಲ್ಲಿ ಜನವರಿಯ ಮಧ್ಯ (ಮೀನ್) ಉಷ್ಣತೆ 14ಲಿ ಫ್ಯಾ. ; ಟೋಕಿಯೋದಲ್ಲಿ 37ಲಿ ಫ್ಯಾ. ನೈಋತ್ಯದಲ್ಲಿರುವ ಓಸಾಕದಲ್ಲಿ 30ಲಿ ಫ್ಯಾ. ಚಳಿಗಾಲದಲ್ಲಿ ಜಪಾನಿನಲ್ಲಿ ಅತ್ಯಧಿಕ ಉಷ್ಣತೆ ಇರುವ ಪ್ರದೇಶ ಕೀಯೂಷೂ. ಅಲ್ಲಿ ಜನವರಿಯ ಮಾಧ್ಯ ಉಷ್ಣತೆ 45ಲಿ ಫ್ಯಾ. ಜಪಾನಿನ ಅಕ್ಷಾಂಶೀಯ ವ್ಯಾಪ್ತಿಯಿಂದ ಅದರ ಬೇಸಗೆ ಉಷ್ಣತೆಯ ಮೇಲೆ ಹೆಚ್ಚಿನ ಪರಿಣಾಮವಾಗಿಲ್ಲ. ಆದರೆ ಎತ್ತರಕ್ಕೆ ಅನುಗುಣವಾಗಿ ಅದು ವ್ಯತ್ಯಾಸವಾಗುತ್ತದೆ. ಹಾಕೈಡೋ ಹೆಚ್ಚು ತಂಪು. ಅತ್ಯುಷ್ಣ ತಿಂಗಳಾದ ಆಗಸ್ಟಿನಲ್ಲಿ ಮಾಧ್ಯ ಉಷ್ಣತೆ ಹೀಗಿರುತ್ತದೆ: ಕಾಗಷೀವ: 79ಲಿ ಫ್ಯಾ. ಓಸಾಕ 81ಲಿ ಫ್ಯಾ. ಟೋಕಿಯೋ 77ಲಿ ಫ್ಯಾ. ಸಪೋರೋ 69ಲಿ ಫ್ಯಾ. ಹಾಕೈಡೋದಲ್ಲಿ ವರ್ಷದಲ್ಲಿ 120 ದಿನಗಳು ಹಿಮಮುಕ್ತ. ಕೀಯೂಷೂವಿನಲ್ಲಿ ಇಂಥ ದಿನಗಳ ಸಂಖ್ಯೆ ಎರಡರಷ್ಟು. ಹೆಚ್ಚು ಮಳೆ ಅಥವಾ ಹಿಮ ಬೀಳದ ಪ್ರದೇಶ ಜಪಾನಿನಲ್ಲಿ ಇಲ್ಲ. ಬೇಸಗೆಯ ಆರಂಭಕಾಲದಲ್ಲಿ ಗರಿಷ್ಠ ಮಳೆ. ಇದಕ್ಕೆ ಅಪವಾದವೆಂದರೆ ಜಪಾನ್ ಸಮುದ್ರದ ನೆರೆಯ ಪ್ರದೇಶ. ಅಲ್ಲಿ ಚಳಿಗಾಲದ ಹಿಮಪಾತ ಹೆಚ್ಚು. ಜಪಾನಿನ ಬಹು ಭಾಗದಲ್ಲಿ 40 ಗಿಂತ ಹೆಚ್ಚು ಮಳೆ ಅಥವಾ ಹಿಮ ಬೀಳುತ್ತದೆ. ಪಶ್ಚಿಮ ಹಾಕೈಡೋ, ಪೂರ್ವ ಹಾನ್‍ಷ್ಯೂ, ಒಳ ಸಮುದ್ರಪ್ರದೇಶದಲ್ಲಿ ವರ್ಷಕ್ಕೆ 40"-60" ಅವಪಾತ. ಜಪಾನಿನಲ್ಲಿ ಅನೇಕ ಸರೋವರಗಳುಂಟು. ಬಹುತೇಕ ಅವು ಸಣ್ಣವು. ಮಧ್ಯ ಹಾನ್‍ಷ್ಯೂವಿನ ಪಶ್ಚಿಮದಲ್ಲಿರುವ ಬೀವಾ ಸರೋವರ (260 ಚ.ಮೈ.) ಅತ್ಯಂತ ದೊಡ್ಡದು. ವಿದ್ಯುತ್ತು ಜಪಾನು ಪರ್ವತಪ್ರದೇಶಗಳಿಂದ ಕೂಡಿರುವುದರಿಂದಲೂ ಅಲ್ಲಿಯ ನದಿಗಳು ವರ್ಷದ ಬಹು ಕಾಲ ತುಂಬಿ ಹರಿಯುವುದರಿಂದಲೂ ವಿದ್ಯುತ್ತಿನ ಉತ್ಪಾದನೆಗೆ ವಿಪುಲ ಅವಕಾಶವಿದೆ. ಜಪಾನಿನ ಜಲವಿದ್ಯುತ್ ಕಾರ್ಯಗಾರಗಳಲ್ಲಿ ಶೇಕಡ 88ರಷ್ಟು ಕಾರ್ಯಾಗಾರಗಳು 10,000 ಕಿವಾ. ವಿದ್ಯುತ್ ಉತ್ಪಾದನೆಗೂ ಕಡಿಮೆ ಸಾಮಥ್ರ್ಯ ಉಳ್ಳವು. ಉಷ್ಣ ವಿದ್ಯುತ್ತೂ ಗಣನೀಯವಾಗಿ ಉತ್ಪಾದಿತವಾಗುತ್ತಿದೆ. ಜಪಾನಿನ ಇಂಧನ ಸಾಮಥ್ರ್ಯದ ಶÉೀ. 56ರಷ್ಟು ಕಲ್ಲಿದ್ದಲು ಮತ್ತು ಲಿಗ್ನೈಟ್ ಮೂಲವುಳ್ಳದ್ದು; ಶೇ. 33 ಜಲವಿದ್ಯುತ್ತು. ಅರಣ್ಯ ಸಂಪತ್ತು ಜಪಾನಿನ ಅರ್ಧಕ್ಕಿಂತ ಹೆಚ್ಚು ಪ್ರದೇಶ ಅರಣ್ಯಾವೃತ. ಒಟ್ಟು ವಿಸ್ತೀರ್ಣವಾದ 9-14 ಕೋಟಿ ಎಕರೆಗಳಲ್ಲಿ 5.5 ಕೋಟಿ ಎಕರೆ ಅರಣ್ಯ ಪ್ರದೇಶ. ಇದರ ಅರ್ಧ ಭಾಗದಲ್ಲಿ ಅಗಲ ಎಲೆಗಳ ಕಾಡೂ ಶೇಕಡ 29ರಷ್ಟು ಪ್ರದೇಶದಲ್ಲಿ ಶಂಕುಧಾರಿ ಕಾಡೂ ಇವೆ. ಶೇ. 5ಕ್ಕಿಂತ ಕಡಿಮೆ ಪ್ರದೇಶ ಬಿದಿರು ಕಾಡು. ಇದರ ಜೊತೆಗೆ 60 ಲಕ್ಷ ಎಕರೆ ಪ್ರದೇಶಗಳಲ್ಲಿ ಕುರುಚಲು ಕಾಡಿದೆ. ಜಪಾನ್ ಸಸ್ಯಸಂಪತ್ತಿನಲ್ಲಿ ಸಮೃದ್ಧವಾಗಿರುವುದಕ್ಕೆ ಅಲ್ಲಿ ವರ್ಷದ ಬಹುಭಾಗ ಮಳೆ ಬೀಳುವುದು ಮತ್ತು ಗುಡ್ಡಬೆಟ್ಟಗಳಿಂದ ತುಂಬಿರುವುದೇ ಮುಖ್ಯ ಕಾರಣ. ಜಪಾನಿನ ಅರಣ್ಯ ಪ್ರದೇಶಗಳನ್ನು ಸ್ಥೂಲವಾಗಿ ಮೂರು ವಲಯಗಳಾಗಿ ವಿಂಗಡಿಸಬಹುದು: 1 ಉತ್ತರವಲಯ: ಹಾಕೈಡೋದ ಮಧ್ಯ ಮತ್ತು ಪೂರ್ವ ಭಾಗ, ಹಾನ್‍ಷ್ಯೂವಿನ ಎತ್ತರ ಪ್ರದೇಶ. ಇಲ್ಲಿ ಹೆಚ್ಚಾಗಿ ಭೂರ್ಜ, ಫರ್, ಲಾರ್ಜ್ ಮತ್ತು ಸ್ಪ್ರೂಸ್ ಮರಗಳಿವೆ. 2 ಸಮಶೀತೋಷ್ಣವಲಯ: ಮಧ್ಯ ಹಾನ್‍ಷ್ಯೂವಿನ 5,400'ಗಿಂತ ಕಡಿಮೆ ಎತ್ತರದ ಪ್ರದೇಶ. ಇಲ್ಲಿಯದು ಮಿಶ್ರ ಅರಣ್ಯ. ಈ ಪ್ರದೇಶದಲ್ಲಿ ಎಲೆ ಉದುರುವ, ಅಗಲ ಎಲೆಯ ವಂಶಕ್ಕೆ ಸೇರಿದ, ಬೀಚ್, ಆಷ್, ಚೆಸ್‍ನಟ್ ಮತ್ತು ಓಕ್ ಮರಗಳಿವೆ. ಶಂಕುಧಾರಿ ಜಾತಿಯ ಪೈನ್, ಫರ್ ಮತ್ತು ದೇವದಾರು ಮರಗಳೂ ಬೆಳೆಯುತ್ತವೆ. 3 ಉಪೋಷ್ಣವಲಯ: ಕೀಯೂಷೂ, ಷಿಕೋಕೂ, ಕ್ವಾಂಟೋ ಮೈದಾನದವರೆಗಿನ ಹಾನ್‍ಷ್ಯೂ ಪ್ರದೇಶ. ಅಗಲ ಎಲೆಗಳ ನಿತ್ಯಹಸುರಿನ ಮತ್ತು ಎಲೆ ಉದುರುವ ಮರಗಳಿವೆ. ಆಲ, ತಾಳೆ, ನೀಲಗಿರಿ ಮುಂತಾದ ವೃಕ್ಷಗಳು ದಕ್ಷಿಣ ಷಿಕೋಕೂ ಮತ್ತು ಕೀಯೂಷೂಗಳಲ್ಲಿವೆ. ಜಪಾನಿನ ಸರ್ಕಾರಿ ಮತ್ತು ಶ್ರೀಮಂತರ ಕೆಲವು ಕಟ್ಟಡಗಳನ್ನು ಬಿಟ್ಟರೆ ಉಳಿದೆಲ್ಲವನ್ನೂ ಬಹುತೇಕ ಮರದಿಂದಲೇ ಕಟ್ಟಲಾಗಿದೆ. ಮರಗಳು ಹೇರಳವಾಗಿರುವುದು ಒಂದು ಕಾರಣ. ಇಲ್ಲಿ ಆಗಾಗ ಸಂಭವಿಸುವ ಭೂಕಂಪಗಳ ಭಯ ಇನ್ನೊಂದು ಕಾರಣ. ಲೋಹದ ಉಪಕರಣಗಳ ಬದಲಿಗೆ ಸಾಧ್ಯವಾದಲ್ಲೆಲ್ಲ ಮರದ ಪಾತ್ರೆಗಳನ್ನೇ ಬಳಸಲಾಗುತ್ತದೆ. ಕಾಗದ, ಕೃತಕ ರೇಷ್ಮೆ ಇವು ಅರಣ್ಯವನ್ನವಲಂಬಿಸಿದ ಎರಡು ಮುಖ್ಯ ಕೈಗಾರಿಕೆಗಳು. ಮರದ ಇದ್ದಿಲನ್ನು ಅಡುಗೆಗೂ ಅನಿಲ ಉತ್ಪಾದನೆಗೂ ಬಳಸಲಾಗುತ್ತದೆ. ಜಪಾನ್ ಈಗ ಮರದ ನಾಟಾಗಳನ್ನು ವಿದೇಶಗಳಿಂದಲೂ ಆಮದು ಮಾಡಿಕೊಳ್ಳುತ್ತಿದೆ. ಆದರೆ ಇನ್ನೂ ದುರ್ಗಮವಾಗಿರುವ ಅದರ ಕಾಡುಗಳನ್ನು ಬಳಸಿಕೊಳ್ಳಬಹುದು ಮತ್ತು ಪುನರ್ನವೀಕರಣದಿಂದ ಅದರ ಬೇಡಿಕೆಯ ಗಣನೀಯ ಭಾಗವನ್ನು ತುಂಬಿಕೊಳ್ಳಬಹುದು. ಪ್ರಾಣಿ ಸಂಪತ್ತು ಜಪಾನ್ ಅಪಾರ ಪ್ರಾಣಿಸಂಪತ್ತಿರುವ ದೇಶ. ಅಲ್ಲಿಯ ವಾಯುಗುಣ ಮತ್ತು ಸಸ್ಯಸಂಪತ್ತಿನಂತೆ ಪ್ರಾಣಿಸಂಪತ್ತೂ ವೈವಿಧ್ಯ ಪೂರ್ಣ. ಅಕ್ಷಾಂಶ ಹಾಗೂ ನೆಲದ ಎತ್ತರಕ್ಕೆ ಅನುಗುಣವಾಗಿ ಇದು ವ್ಯತ್ಯಾಸವಾಗುತ್ತದೆ. ಜಪಾನಿನ ನೆಲ ಪ್ರಾಣಿಗಳು ಬಹುತೇಕ ಸಮಶೀತೋಷ್ಣವಲಯ ಜಾತಿಗಳವು. ಹಾಕೈಡೋದಲ್ಲಿ ಉಪಶೀತವಲಯ ಪ್ರರೂಪಗಳೊಂದಿಗೂ ಇವು ಬೆರೆತುಕೊಂಡಿವೆ. ಚೀನ, ಕೊರಿಯ, ಸೈಬೀರಿಯ ಮತ್ತು ಆಗ್ನೇಯ ಏಷ್ಯದ ಪ್ರಾಣಿ ಜಾತಿಗಳಿಗೂ ಇವಕ್ಕೂ ಸಾದೃಶ್ಯಗಳಿರುವುದರಿಂದ ಇವು ಮೂಲತಃ ಖಂಡಪ್ರದೇಶದಿಂದ ಇಲ್ಲಿಗೆ ಬಂದಿರಬಹುದೆಂದು ಊಹಿಸಬಹುದು. ಸಾಗರಿಕ ಪ್ರಾಣಿಗಳನ್ನೂ ಉತ್ತರ, ಮಧ್ಯ ಮತ್ತು ಉಷ್ಣವಲಯವೆಂದು ವಿಂಗಡಿಸಬಹುದು. ಆದರೆ ಒಂದು ವ್ಯತ್ಯಾಸ: ಉಷ್ಣವಲಯದ ಜಾತಿಗಳು ಇವೇ ಜಾತಿಗಳ ನೆಲ ಪ್ರಾಣಿಗಳಿರುವುದಕ್ಕಿಂತಲೂ ಉತ್ತರದಲ್ಲಿ ಸಾಗರದಲ್ಲಿವೆ. ಜಪಾನ್ ಉಷ್ಣೋದಕ ಪ್ರವಾಹದಲ್ಲಿ ಟೋಕಿಯೋ ಕೊಲ್ಲಿಯ ಹೊರಗಿರುವ ಬೋಸೋ ಪರ್ಯಾಯ ದ್ವೀಪದ ವರೆಗೂ ಉಷ್ಣನೀರಿನ ಪ್ರಾಣಿಜಾತಿಗಳು ಪ್ರಸರಿಸಿವೆ. ಜಪಾನ್ ಮತ್ತು ನೆರೆಯ ಕಡಲುಗಳಲ್ಲಿ ಸುಮಾರು 140 ಸಸ್ತನಿಗಳನ್ನು ಗುರುತಿಸಲಾಗಿದೆ. ದಂಶಕ, ತಿಮಿಂಗಿಲ, ಹಂದಿಮೀನು, ಕಡಲ ಹಂದಿ, ಸಣ್ಣಿಲಿ, ಮುಖಮಲ್ ಹೆಗ್ಗಣ, ಬಾವಲಿ, ಮಕಾತ್ ಎಂಬ ವಾನರ, ಕರಡಿ, ಬ್ಯಾಡ್ಜರ್, ನೀರುನಾಯಿ, ಅರ್ಮಿನ್, ಮಿಂಕ್, ಮಾರ್ಟೆನ್, ರಾಕೂನ್, ನರಿ, ತೋಳ, ಸೀಲ್, ವಾಲ್ರಸ್, ಕಾಡುಹಂದಿ, ಜಿಂಕೆ, ಸಾರಗ-ಇವು ಕೆಲವು ಪ್ರಾಣಿಗಳು. ಜಪಾನಿನ ಸುತ್ತಣ ಸಮುದ್ರಗಳಲ್ಲಿ ಮೂವತ್ತಕ್ಕೂ ಹೆಚ್ಚು ಬಗೆಯ ತಿಮಿವರ್ಗ ಪ್ರಾಣಿಗಳಿವೆ. ಜಪಾನಿನಲ್ಲಿ ಸುಮಾರು 450 ಜಾತಿಯ ಹಕ್ಕಿಗಳಿವೆ. ಇವುಗಳಲ್ಲಿ ಸುಮಾರು ನೂರೈವತ್ತು ನೀರುಹಕ್ಕಿಗಳ ಉರಗಗಳಲ್ಲಿ ಮೂವತ್ತು ಜಾತಿ. ಜಪಾನಿನ ಸಾಕು ಪ್ರಾಣಿಗಳಲ್ಲಿ ದನ, ಕುದುರೆ, ಕುರಿ, ಕೋಳಿ, ಹಂದಿ ಮುಖ್ಯ. 1971ರಲ್ಲಿ 36,15,000 ದನಗಳೂ ಇಲ್ಲಿ ಸ್ವಾಭಾವಿಕ ಹುಲ್ಲುಗಾವಲುಗಳ ಕೊರತೆ ಇರುವುದರಿಂದ ದನಗಳ ಸಾಕಣೆ ವೆಚ್ಚ ದುಬಾರಿ. ಇಲ್ಲಿಯ ಬೆಟ್ಟದ ಹುಲ್ಲು ಒರಟು, ನಿಸ್ಸಾರ. ಆದ್ದರಿಂದ ದನಗಳ ಮೇವಿನ ಸಮಸ್ಯೆ ತೀವ್ರವಾದ್ದು. ದನಗಳನ್ನೂ ಕುದುರೆಗಳನ್ನೂ ವ್ಯವಸಾಯಕ್ಕೆ. ನೆಲ ಮಟ್ಟಮಾಡಲು ಮತ್ತು ಗೊಬ್ಬರಕ್ಕಾಗಿ ಸಾಕುತ್ತಾರೆ. ಜನಜೀವನ ಇಲ್ಲಿಯ ಜನ ಏಷ್ಯದ ಮುಖ್ಯ ಭೂಭಾಗದಿಂದ ಬಂದು ನೆಲೆಸಿದವರು. ಬಹು ಸಂಖ್ಯಾತರು ಮಾಂಗೋಲಾಯಿಡ್ ಬುಡಕಟ್ಟಿಗೆ ಸೇರಿದವರು. ಇವರಲ್ಲಿ ಇತರ ಮಾಂಗೋಲಾಯಿಡ್ ಜನರಿಂದ ಭಿನ್ನವೆನಿಸುವ ಲಕ್ಷಣಗಳು ಹಲವಿಲ್ಲ. ಉತ್ತರ ಜಪಾನಿನ ಮೂಲವಾಸಿ ಐನುಗಳ ಮತ್ತು ಆಗ್ನೇಯ ಏಷ್ಯ, ಕೊರಿಯ, ಯೂರೋಪ್ ಮುಂತಾದವರ ಮಿಶ್ರಣದ ಜನರೂ ಅಲ್ಪಸಂಖ್ಯೆಯಲ್ಲುಂಟು. ಜಪಾನಿನ ಬಹು ಸಂಖ್ಯಾತರು ಆನುವಂಶಿಕವಾಗಿ ಕೊರಿಯನರಿಗೆ, ಟುಂಗುಸ್ ಪಂಗಡಗಳಿಗೆ ಮತ್ತು ಉತ್ತರ ಚೀನೀಗುಂಪುಗಳಿಗೆ ಅತ್ಯಂತ ಸಮೀಪವೆಂದು ಹೇಳಲಾಗಿದೆ. ಇತರ ಮಾಂಗೋಲಾಯಿಡ್ ಗುಂಪುಗಳಿಗಿಂತ ಜಪಾನೀಯರಿಗೆ ಮೈ ಮತ್ತು ಮುಖಗಳ ಮೇಲೆ ಕೂದಲು ಹೆಚ್ಚು; ಮೈಬಣ್ಣ ಹಳದಿಗಿಂತ ಹೆಚ್ಚು ಕಂದು. ಮೈಕಟ್ಟು ಹೆಚ್ಚು ಗಟ್ಟಿಮುಟ್ಟು. ಜಪಾನೀಯರು ಕುಳ್ಳ ಜನಾಂಗವೆನಿಸಿದ್ದರೂ 1900 ರಿಂದೀಚೆಗೆ ಅವರಲ್ಲಿ ಅಸಾಧಾರಣ ದೈಹಿಕ ಬದಲಾವಣೆಗಳಾಗಿವೆ. ಅವರ ಸರಾಸರಿ ಎತ್ತರ 50 ವರ್ಷಗಳಲ್ಲಿ ಸುಮಾರು 3"ಗಳಷ್ಟು ಅಧಿಕವಾಗಿದೆ (5' 4"). ಇದು ಸುಧಾರಿತ ಆಹಾರ ಮತ್ತು ವೈದ್ಯ ಸೌಲಭ್ಯಗಳ ಫಲ ಎಂದು ಹೇಳಲಾಗಿದೆ. ಪಟ್ಟಣದ ಜನ ಹಳ್ಳಿಗರಿಗಿಂತ ಹೆಚ್ಚು ಎತ್ತರ. ಜಪಾನೀ ಕುಸ್ತಿಪಟುಗಳ ಮೈಕಟ್ಟು ಅಸಾಧಾರಣ. ಅಲ್ಪಸಂಖ್ಯಾತ ಕುಲಗಳ ಪೈಕಿ ಐನುಗಳದು ಗಮನಾರ್ಹ, ದೈಹಿಕ ಲಕ್ಷಣ, ಸಂಸ್ಕøತಿ ಮತ್ತು ಭಾಷೆಯಲ್ಲಿ ಅವರು ವಿಶಿಷ್ಟರು. ಅವರ ಮೂಲ ಗೊತ್ತಿಲ್ಲ. ಅವರ ಲಕ್ಷಣಗಳಿಂದ ಅವರು ಕಾಕಸಾಯಿಡ್ ಸಂಬಂಧ ಇರಬಹುದೆಂದು ಊಹಿಸಬಹುದು. ಅವರ ಮೈಮೇಲೆ ಕೂದಲು ಅಧಿಕ. ಜಪಾನಿನಲ್ಲಿ ಒಂದು ಪ್ರಮುಖ ಮತಧರ್ಮವಿಲ್ಲ. ಅಲ್ಲಿ ಅನೇಕ ಮತಗಳೂ ಅರೆ ಮತಗಳೂ ಜೊತೆಜೊತೆಯಾಗಿವೆ. ರಾಷ್ಟ್ರೀಯ ಮತ್ತು ಸಾಮಾಜಿಕ ಪದ್ಧತಿಗಳು ಷಿಂಟೋ ಮತಕ್ಕೆ ಅನುಗುಣವಾಗಿವೆ. ಸಾರ್ವಜನಿಕ ಹಾಗೂ ಖಾಸಗಿ ನೀತಿನಡವಳಿಕೆಗಳಿಗೆ ಕಾನ್ಫ್ಯೂಷನಿಸಂ ಆಧಾರ. ತಾತ್ತ್ವಿಕ ವಿಚಾರಗಳಲ್ಲಿ ಬೌದ್ಧಮತ ಪ್ರಧಾನ. ಈ ಎಲ್ಲ ಮತಧರ್ಮಗಳೂ ಪರಸ್ಪರ ಪ್ರಭಾವ ಬೀರಿವೆ. ಕ್ರೈಸ್ತ ಮತವೂ ವ್ಯಾಪಕವಾಗಿದೆ. ಆರ್ಥಿಕತೆ ಕೃಷಿ ಜಪಾನಿನ ಒಟ್ಟು ಭೂಪ್ರದೇಶದಲ್ಲಿ ಶೆÉೀಕಡ 16ರಷ್ಟು ಮಾತ್ರ ಸಾಗುವಳಿಗೆ ಯೋಗ್ಯವಾದ್ದು. ಇರುವ ಜಮೀನಿನಲ್ಲೂ ಮಣ್ಣಿನಲ್ಲಿ ಆಮ್ಲದ ಲಾವ ಬೆರೆತಿರುವುದರಿಂದ ಅಷ್ಟು ಫಲವತ್ತಾಗಿಲ್ಲ. ಮಳೆಯ ಕಾರಣದಿಂದಾಗಿ ಆಗಾಗ ಮಣ್ಣು ತೊಳೆದುಹೋಗುವುದರಿಂದಲೂ ಅಧಿಕ ತೇವದಿಂದಾಗಿ ಮಣ್ಣಿನ ಸಾರ ಆಳಕ್ಕೆ ಇಳಿಯುವುದರಿಂದಲೂ ಜಮೀನಿನ ಫಲವಂತಿಕೆಯನ್ನು ಶ್ರಮ ಪೂರ್ವಕವಾಗಿ ಸಂರಕ್ಷಿಸಬೇಕು. ಜಪಾನಿನ ವಾಯುಗುಣ ಆಹಾರಬೆಳೆಗೆ ಅನುಕೂಲಕರವಾದ್ದು. ಜಪಾನಿನ ಎಲ್ಲ ಭಾಗಗಳಲ್ಲೂ ಸಾಕಷ್ಟು ಮಳೆಯಾಗುತ್ತದೆ. ಇಲ್ಲಿಯ ಸಾಗುವಳಿ ಭೂಮಿಯ ಶೇಕಡ 30ರಲ್ಲಿ ಎರಡು ಬೆಳೆ ಬೆಳೆಯುತ್ತಾರೆ. ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಚಳಿಗಾಲದಲ್ಲಿ ಬೀಳುವ ಮಂಜು ಮತ್ತು ಅಧಿಕ ಹಿಮದಿಂದಾಗಿ ಎರಡನೆಯ ಬೆಳೆ ಸಾಧ್ಯವಿಲ್ಲ. ಎರಡು ಬೆಳೆ ಬೆಳೆಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ಬತ್ತ ಬೆಳೆದರೆ ಚಳಿಗಾಲದಲ್ಲಿ ಗೋಧಿ ಮತ್ತು ಖುಷ್ಕಿ ಬೆಳೆಗಳನ್ನು ಬೆಳೆಯುತ್ತಾರೆ. ವ್ಯವಸಾಯಕ್ಕೆ ಕ್ಯಾಂಟೋ, ಇಷಿಕಾರೀ, ಈಚಿಗೋ, ನೋಬೀ ಮೊದಲಾದ ಬಯಲುಗಳು ಪ್ರಸಿದ್ಧವಾಗಿವೆ. ಇಲ್ಲಿಯ ನದಿಗಳು ಬೆಟ್ಟಗುಡ್ಡಗಳು ಮತ್ತು ಕಣಿವೆಗಳಲ್ಲಿ ಹರಿದು ಬಹು ಬೇಗ ಸಮುದ್ರವನ್ನು ಸೇರುವುದರಿಂದ ವಿಶಾಲ ಬಯಲುಗಳಲ್ಲಿ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಿ ನೀರಾವರಿಯನ್ನು ಹೆಚ್ಚಿಸಲು ಕಷ್ಟಕರವಾಗಿದೆ. ಸಾಮಾನ್ಯವಾಗಿ ಈಗಿರುವ ವ್ಯವಸಾಯ ಕ್ಷೇತ್ರದ ಬಹುಭಾಗಕ್ಕೆ ನೀರಾವರಿಯ ಕೊರತೆಯಿಲ್ಲ. ಮಹಾಯುದ್ಧದಲ್ಲಿ ಕೈಗಾರಿಕೆಗಳು ಮತ್ತು ಭಾರಿ ಉದ್ಯಮಗಳು ನಾಶಹೊಂದಿದಾಗ ಜಪಾನಿನ ಆರ್ಥಿಕ ಆಶ್ರಯವಾಗಿ ಉಳಿದುಕೊಂಡಿದ್ದು ವ್ಯವಸಾಯ ಒಂದೇ. 1860ರ ದಶಕದಲ್ಲಿ ಜಪಾನಿನ ಸುಮಾರು 80ರಷ್ಟು ಜನ ವ್ಯವಸಾಯವನ್ನು ಅವಲಂಬಿಸಿದರು. 1949ರ ಹೊತ್ತಿಗೆ ವ್ಯವಸಾಯವನ್ನು ಅವಲಂಬಿಸಿದ್ದವರ ಸಂಖ್ಯೆ ಒಟ್ಟು ಜನಸಂಖ್ಯೆಯ ಅರ್ಧಕ್ಕೆ ಇಳಿದಿತ್ತು. ಯುದ್ಧೋತ್ತರ ಆರ್ಥಿಕ ಪುನರ್‍ರಚನೆಯಲ್ಲಿ ಗಣನೀಯ ಪ್ರಗತಿ ಸಾಧಿಸಿದ ಜಪಾನ್‍ನಲ್ಲಿ 1970ರ ವೇಳೆಗೆ ವ್ಯವಸಾಯದಲ್ಲಿ ನಿರತರಾದವರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇಕಡ 15ಕ್ಕೂ ಕಡಿಮೆ. ವ್ಯವಸಾಯ ಪ್ರದೇಶದ ಕೊರತೆಯಿಂದಾಗಿ ಅಲ್ಲಿ ಸಾಂದ್ರ ಬೇಸಾಯಕ್ಕೆ ಹೆಚ್ಚು ಗಮನ ಸಂದಿದೆ. ಬತ್ತದ ಗದ್ದೆಗಳು ಮೆಟ್ಟಿಲುಮೆಟ್ಟಿಲಾಗಿವೆ. ಪ್ರತಿ ಮೆಟ್ಟಿಲಿಗೂ ಮಧ್ಯೆ ಬದು ಹಾಕಲಾಗಿದೆ. ಅನೇಕ ಎತ್ತರದ ಪ್ರದೇಶಗಳನ್ನು ಸಮತಟ್ಟು ಮಾಡಿ ಗಟ್ಟಿ ಮಾಡಲಾಗಿದೆ. ಹಳೆಯ ವ್ಯವಸಾಯ ಪದ್ಧತಿಯನ್ನು ಬಿಟ್ಟು ಭೂಮಿಯ ಸಾರವನ್ನು ಕಾಯ್ದಿರಿಸಲೂ ಬಹು ಬೆಳೆಗಳನ್ನು ಬೆಳೆಯಲೂ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಪಾನಿನಲ್ಲಿ ಸಣ್ಣ ಹಿಡುವಳಿಗಳೇ ಹೆಚ್ಚು. ಆದರೂ ಅತ್ಯಾಧುನಿಕ ವಿಧಾನವನ್ನು ಅನ್ವಯಿಸುವುದರಲ್ಲಿ ಹಿಂದುಳಿದಿಲ್ಲ. ಜಪಾನಿನಲ್ಲಿ ಯಾಂತ್ರೀಕರಣದ ಬೆಳೆವಣಿಗೆಯಾಗಿದ್ದರೂ ಪ್ರಾಣಿಗಳನ್ನು ಹೂಡಿ ಬೇಸಾಯ ಮಾಡುವುದು ಹೆಚ್ಚಾಗಿ ಬಳಕೆಯಲ್ಲಿತ್ತು. ಮಾನವಶಕ್ತಿ ಅಗಾಧವಾಗಿರುವುದರಿಂದ ಶ್ರಮ ಮಿಗಿಸುವ ಉಪಕರಣಗಳನ್ನು ಬಳಸುವಲ್ಲಿ ಜಪಾನೀಯರು ಅಷ್ಟು ಮುಂದಾಗಲಿಲ್ಲ. ಆದರೆ ಎರಡನೆಯ ಮಹಾಯುದ್ಧದ ಕಾಲದಿಂದ ವ್ಯವಸಾಯಕ್ಕೆ ವ್ಯಾಪಕವಾಗಿ ತಾಂತ್ರಿಕ ಕ್ರಮ ಅನ್ವಯಿಸಲಾಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಿದೆ. ಕ್ರಿಮಿನಾಶಕಗಳು ಮತ್ತು ಕಳೆನಾಶಕ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಫಲಸನ್ನು ಹದಮಾಡಲು ಮತ್ತು ಭೂಮಿಯನ್ನು ಉಳಲು ಸಣ್ಣ ಕೈಯಂತ್ರಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಹಣ್ಣುಗಳು ಮತ್ತು ತರಕಾರಿಗಳ ಬೆಳೆಯನ್ನು ವಿಸ್ತರಿಸಲಾಗಿದೆ. ಜಪಾನಿನ ವ್ಯವಸಾಯದಲ್ಲಿ ಆಹಾರಬೆಳೆಗಳಿಗೇ ಪ್ರಾಧಾನ್ಯ. ಕೃಷಿ ನೆಲದಲ್ಲಿ ಶೇ. 80ರಷ್ಟು ಇದಕ್ಕೆ ಮೀಸಲು. ಅದರಲ್ಲೂ ಬತ್ತಕ್ಕೆ ಅಗ್ರಸ್ಥಾನ. ಬತ್ತದ ಇಳುವರಿಯಲ್ಲಿ ಜಪಾನ್ ಏಷ್ಯದಲ್ಲೇ ಉನ್ನತ ಮಟ್ಟದಲ್ಲಿದೆ. ಶೇಕಡ 55 ನೆಲದಲ್ಲಿ ಬತ್ತವನ್ನೂ ಶೇಕಡ 40 ನೆಲದಲ್ಲಿ ಧಾನ್ಯಗಳನ್ನೂ ಬೆಳೆಯಲಾಗುತ್ತದೆ. ಗೋಧಿ, ಬಾರ್ಲಿ, ಗೆಣಸು, ಬಿಳಿ ಆಲೂಗೆಡ್ಡೆ, ಉಪ್ಪುನೇರಳೆ, ಚಹಾ, ಹೊಗೆಸೊಪ್ಪು ಮತ್ತು ಮಿಲೆಟ್ಸ್ ಇತರ ಮುಖ್ಯ ಬೆಳೆಗಳು. ದ್ವಿತೀಯ ಮಹಾಯುದ್ಧದ ಅನಂತರ ಚಹಾ ಮತ್ತು ಉಪ್ಪುನೇರಳೆ ಬೆಳೆಯುವ ಪ್ರದೇಶ ಇಳಿಮುಖವಾಗಿದೆ. ರೇಷ್ಮೆ ಉತ್ಪಾದನೆ 1930ರ ದಶಕದಲ್ಲಿ ಪ್ರಮುಖವಾಗಿತ್ತು. ಜಪಾನಿನಲ್ಲಿ ಸಣ್ಣ ಹಿಡುವಳಿಗಳೇ ಅಧಿಕ. ಹಿಡುವಳಿಗಳ ಸರಾಸರಿ 2.5 ಎಕರೆ. 1/3 ಭಾಗ ಒಕ್ಕಲುಗಳು 1.2 ಎಕರೆಗಳಿಗಿಂತಲೂ ಕಡಿಮೆ ಹಿಡುವಳಿ ಹೊಂದಿವೆ. 5 ಎಕರೆಗಳಿಗಿಂತ ಹೆಚ್ಚಿನ ವಿಸ್ತೀರ್ಣದ ಹಿಡುವಳಿಗಳು ಶೇ. 10 ಮಾತ್ರ. ಕೈಗಾರಿಕೆ ಜಪಾನ್ 19ನೆಯ ಶತಮಾನದ ಪೂರ್ವಾರ್ಧದ ವರೆಗೂ ವ್ಯವಸಾಯಪ್ರಧಾನ ರಾಷ್ಟ್ರವಾಗಿತ್ತು. ಅದು ಆ ಕಾಲದ ಏಷ್ಯದ ಇತರ ರಾಷ್ಟ್ರಗಳಂತೆ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರವಾಗಿತ್ತು. ಆದರೆ 1868ರಿಂದ ಅದು ಪಾಶ್ಚಾತ್ಯ ನಾಗರಿಕತೆಯ ವಿಧಾನಗಳನ್ನು ತ್ವರಿತವಾಗಿ ಅಳವಡಿಸಿಕೊಂಡಿದ್ದರಿಂದ ಅದರ ಆರ್ಥಿಕ ರಂಗ ಹೊಸ ಶಕೆಗೆ ಕಾಲಿಟ್ಟಿತು. ಜಪಾನ್ ತನ್ನ ಏಕಾಂತತೆಯಿಂದ ಹೊರಬಂದು ವೈಜ್ಞಾನಿಕ ಪ್ರಗತಿಯ ಮಹತ್ತ್ವವನ್ನು ಬಹುಬೇಗ ಗ್ರಹಿಸಿತು. ಇದರ ಪರಿಣಾಮವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು. ಇಡೀ ಏಷ್ಯದಲ್ಲೇ ಇದು ಪ್ರಥಮ ಆಧುನಿಕ ರಾಷ್ಟ್ರವೆನಿಸಿತು. 19ನೆಯ ಶತಮಾನದ ಉತ್ತರಾರ್ಧದಲ್ಲಿ ಗಣಿಗಾರಿಕೆ, ಸಂಚಾರ ಮಾರ್ಗಗಳ ನಿರ್ಮಾಣ, ನೌಕಾ ನಿರ್ಮಾಣ, ಶಸ್ತ್ರಾಸ್ತ್ರಗಳ ತಯಾರಿಕೆ, ಸಿಮೆಂಟು, ಗಾಜು, ಕಬ್ಬಿಣ, ಉಕ್ಕು ಮುಂತಾದ ಕಾರ್ಖಾನೆಗಳ ಬಟ್ಟೆಗಿರಣಿಗಳ ರೇಷ್ಮೆ ಉದ್ಯಮಗಳ ಸ್ಥಾಪನೆ ಆರಂಭವಾಯಿತು. ವ್ಯವಸಾಯ ಪ್ರಧಾನ ರಾಷ್ಟ್ರವಾಗಿದ್ದ ಜಪಾನ್ ತನ್ನ ಆರ್ಥಿಕ ವ್ಯವಸ್ಥೆಯನ್ನು ಬದಲಿಸಿ ಕೈಗಾರಿಕಾ ರಾಷ್ಟ್ರವಾಗಿ ರೂಪುಗೊಂಡಿತು. ಜಪಾನಿನ ಕಾರ್ಖಾನೆಗಳು ಕಚ್ಚಾ ಸಾಮಗ್ರಿಗಳನ್ನು ಪರದೇಶದಿಂದ ಸಾಮಾನ್ಯವಾಗಿ ಆಮದು ಮಾಡಿಕೊಳ್ಳುತ್ತವೆ. ಆದರೆ ಜನಶಕ್ತಿ ಮತ್ತು ಕಾರ್ಖಾನೆ ನಡೆಸಲು ಬೇಕಾಗುವ ವಿದ್ಯುಚ್ಛಕ್ತಿ ಜಪಾನಿನಲ್ಲೇ ದೊರೆಯುತ್ತದೆ. ಕಾರ್ಖಾನೆಗಳಿಗೆ ಬೇಕಾಗುವ ಕಲ್ಲಿದ್ದಲಿನ 9/10 ಭಾಗ ಜಪಾನಿನಲ್ಲಿಯೇ ದೊರೆಯುತ್ತದೆ ಉಳಿದ 1/10 ಭಾಗ ಕಲ್ಲಿದ್ದಲನ್ನು ಬೇರೆ ದೇಶಗಳಿಂದ ತರಿಸಿಕೊಳ್ಳುತ್ತಾರೆ. ಇಲ್ಲಿ ದೊರೆಯುವ ಪೆಟ್ರೋಲಿಯಂ ಅದರ ಅಗತ್ಯದ 1/10 ಭಾಗ ಮಾತ್ರ. ಉಳಿದದ್ದನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಜಪಾನಿನಲ್ಲಿ ವ್ಯವಸಾಯಯೋಗ್ಯ ಭೂಮಿ ಬಹಳ ಕಡಿಮೆ ಇರುವುದೂ ಅಲ್ಲಿ ಹಲವು ಒಳ್ಳೆಯ ಬಂದರುಗಳಿರುವುದೂ ಅದು ಕೈಗಾರಿಕೆಯಲ್ಲಿ ಮುಂದುವರಿಯಲು ಕಾರಣವಾದುವು. ಟೋಕಿಯೋದಿಂದ ನಾಗಸಾಕೀ ವರೆಗಿನ 600 ಮೈ. ಉದ್ದದ ಮಧ್ಯ ಪ್ರದೇಶದಲ್ಲಿ 100 ಕಾರ್ಖಾನೆಗಳಿವೆ. ಇವುಗಳ ಸ್ಥಾಪನೆಗೆ ಮುಖ್ಯವಾಗಿ ಅಲ್ಲಲ್ಲೇ ದೊರೆಯುವ ರೇಷ್ಮೆ ಮತ್ತು ಕಲ್ಲಿದ್ದಲೂ ಅಲ್ಲಿರುವ ಉತ್ತಮ ಬಂದರುಗಳೂ ಕಾರಣ. ಜಪಾನ್ ದೇಶದ ಕೈಗಾರಿಕಾ ಪ್ರದೇಶಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು: 1 ಓಸಾಕ, ಕೋಬೀ ಮತ್ತು ಕೀಯೋಟೋ ವಿಭಾಗ : ಇಲ್ಲಿ ಹತ್ತಿ ಗಿರಣಿಗಳು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು, ಹಡಗು ಕಟ್ಟುವ ಉದ್ಯಮ ರೇಷ್ಮೆ, ಮಣ್ಣಿನ ಪಾತ್ರೆಗಳ ಕಾರ್ಖಾನೆಗಳಿವೆ. ಕೋಬೀ ಈ ವಿಭಾಗದ ಮುಖ್ಯ ಬಂದರು. 2 ಟೋಕೀಯೋ, ಯೋಕಹಾಮ ವಿಭಾಗ: ಇಲ್ಲಿ ರೇಷ್ಮೆ, ಹತ್ತಿ ಜವಳಿ, ಸಣ್ಣ ಗಾತ್ರದ ಕೃಷಿ ಉಪಕರಣ, ವಿದ್ಯುದುಪಕರಣ ಮತ್ತು ಎಣ್ಣೆಶುದ್ಧೀಕರಣ ಕೈಗಾರಿಕೆಗಳಿವೆ. ಯೋಕಹಾಮ ಇಲ್ಲಿಯ ಮುಖ್ಯ ಬಂದರು. ಇಲ್ಲಿ ಹಡಗು ಕಟ್ಟುವ ಉದ್ಯಮವೂ ಇದೆ. 3 ನಾಗಾಯಿಯ ವಿಭಾಗ: ಇಲ್ಲಿ ರೇಷ್ಮೆ, ಹತ್ತಿ, ಉಣ್ಣೆ, ವಿಮಾನ ಮತ್ತು ಕಬ್ಬಿಣ-ಉಕ್ಕು ಕೈಗಾರಿಕೆಗಳಿವೆ. ಮುಖ್ಯ ಬಂದರು ನಗಾಯಿಯ. 4 ಉತ್ತರ ಕೀಯೂಷೂ ವಿಭಾಗ: ಮುಖ್ಯ ಕೈಗಾರಿಕೆ ಕಬ್ಬಿಣ ಮತ್ತು ಉಕ್ಕು. ಜಪಾನಿನ ಗೃಹಕೈಗಾರಿಕೆಗಳು ವೈಶಿಷ್ಟ್ಯಪೂರ್ಣವಾದವು. ಪ್ರತಿ ವಸತಿಯೂ ಯಾವುದಾದರೊಂದು ದೊಡ್ಡ ಕೈಗಾರಿಕೆಗೆ ಅವಶ್ಯವಾದ ಭಾಗಗಳನ್ನು ತಯಾರಿಸುತ್ತದೆ. ಇವನ್ನು ಸಹಕಾರ ಸಂಘಗಳು ಶೇಖರಿಸಿ ಕಾರ್ಖಾನೆಗಳಿಗೆ ಒದಗಿಸುತ್ತವೆ. ದಿನಬಳಕೆಯ ಹಲವು ಸರಕುಗಳೂ ಇಲ್ಲಿ ತಯಾರಾಗುತ್ತವೆ. ರೇಷ್ಮೆ ನೂಲು, ನೇಯ್ಗೆ, ಟೇಪ್, ರಿಬ್ಬನ್, ಬೆಂಕಿಕಡ್ಡಿ, ಬೊಂಬೆ, ಕಾಗದ, ರಟ್ಟು, ಪೆನ್ಸಿಲ್, ಚಾಪೆ, ಮರದ ಚಪ್ಪಲಿ, ಪಿಂಗಾಣಿ ವಸ್ತುಗಳು, ಛತ್ರಿ, ಫ್ಯಾನ್, ಬೈಸಿಕಲ್, ವಿದ್ಯುದುಪಕರಣ ಮುಂತಾದವು ಮುಖ್ಯವಾದವು. ಜಪಾನಿನಲ್ಲಿ ತಯಾರಾಗದ ಪದಾರ್ಥಗಳೇ ಇಲ್ಲವೆನ್ನಬಹುದು. ಅಂದವಾದ ಅಗ್ಗವಾದ ಹಲವು ಪದಾರ್ಥಗಳು ತಯಾರಾಗುತ್ತವೆ. ಮೀನುಗಾರಿಕೆ ಜಪಾನಿನಲ್ಲಿ ಮೀನು ಅನೇಕರ ಮುಖ್ಯ ಆಹಾರ. ಆಹಾರಕ್ಕೆ ಆಗಿ ಉಳಿದ ಮೀನನ್ನು ಬೇರೆ ದೇಶಗಳಿಗೆ ಕಳುಹಿಸುತ್ತಾರೆ. ಜಪಾನಿನ ಸಮುದ್ರ ತೀರ ಅಂಕುಡೊಂಕಾಗಿ ಹೆಚ್ಚು ಆಳವಿಲ್ಲದೆ ಇರುವುದರಿಂದ ಅಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮೀನುಗಳುಂಟು. ಅಲ್ಲಿ ಹರಿಯುವ ಉಷ್ಣೋದಕ ಮತ್ತು ಶೀತೋದಕ ಪ್ರವಾಹಗಳು ಮೀನುಗಳ ಬೆಳವಣಿಗೆಗೆ ಅನುಕೂಲಕರ. ಜಪಾನ್ ಸಮುದ್ರತೀರದಲ್ಲೆಲ್ಲ ಮೀನುಗಾರಿಕೆ ಒಂದು ಮುಖ್ಯ ಕಸಬು. ಜಪಾನ್ ಸರ್ಕಾರ ಮೀನುಗಾರರಿಗೆ ವಿಶೇಷ ಪ್ರೋತ್ಸಾಹ ನೀಡಿದೆ. ಸಾರಿಗೆ ಸಂಪರ್ಕ ಜಪಾನಿನ ಸಾರಿಗೆ ವ್ಯವಸ್ಥೆ ವಿಶಿಷ್ಟವಾದ್ದು. ಇದು ಪರ್ವತಮಯ ದೇಶವಾದ್ದರಿಂದ ರಸ್ತೆಗಳ ನಿರ್ಮಾಣದಲ್ಲಿ ಜಪಾನ್ ಮೊದಲಿನಿಂದಲೂ ಹೆಚ್ಚಿನ ಪ್ರಗತಿ ಸಾಧಿಸಲಾಗಲಿಲ್ಲ. ರೈಲುಮಾರ್ಗಗಳ ನಿರ್ಮಾಣವೂ ಈ ಸಮಸ್ಯೆಯನ್ನು ಎದುರಿಸುತ್ತದೆ. ಆದರೆ ಜಪಾನು ದ್ವೀಪಸಮೂಹಗಳ ದೇಶವಾಗಿರುವುದರಿಂದ ಅದರ ಅಂತರಿಕ ಸಾರಿಗೆಯ ಬಹುಭಾಗ ಸಮುದ್ರದ ಮೂಲಕವೇ ನಡೆಯುತ್ತದೆ. ಆದ್ದರಿಂದ ಅಲ್ಲಿ ನೌಕಾಸಂಚಾರ ತೀವ್ರ ಅಭಿವೃದ್ಧಿ ಸಾಧಿಸಿದೆ. ರಸ್ತೆಗಳು: ಜಪಾನಿನ ರಸ್ತೆ ಸಾರಿಗೆ ಪುರಾತನವಾದದ್ದು. ಟೊಂಕಗಾವ ಕಾಲದಲ್ಲಿ ಐದು ಮುಖ್ಯ ಹೆದ್ದಾರಿಗಳನ್ನು ನಿರ್ಮಿಸಲಾಯಿತು. ಇವುಗಳ ಒಟ್ಟು ಉದ್ದ ಸುಮಾರು 1,320 ಮೈ. ಈ ಮಾರ್ಗಗಳು ಮುಂದೆ ಮೇಜಿ ಪುನಃ ಸ್ಥಾಪನೆಯ ಕಾಲದಲ್ಲಿ ಜಪಾನಿನ ಆಧುನಿಕ ರಸ್ತೆಸಾರಿಗೆ ವ್ಯವಸ್ಥೆಗೆ ಅಡಿಗಲ್ಲಾದುವು. ನಗರಗಳೆಲ್ಲ ತೀರಪ್ರದೇಶದಲ್ಲಿದ್ದುದರಿಂದಲೂ ರಸ್ತೆ ನಿರ್ಮಾಣ ಕಾರ್ಯ ಕಷ್ಟವಾದ್ದರಿಂದಲೂ ರೈಲುಸಂಚಾರ ಹೆಚ್ಚಿದ್ದರಿಂದಲೂ ಹೆದ್ದಾರಿ ನಿರ್ಮಾಣ ಕಡೆಗಣಿಸಲ್ಪಟ್ಟಿತು. ಜಪಾನಿನ ರಸ್ತೆಗಳಲ್ಲಿ ನಾಲ್ಕು ವರ್ಗಗಳಿವೆ. ರಾಷ್ಟ್ರೀಯ ರಸ್ತೆಗಳು, ಪ್ರಿಫೆಕ್ಜರ್ (ಜಿಲ್ಲೆ) ರಸ್ತೆಗಳು, ಮುನಿಸಿಪಲ್ ರಸ್ತೆಗಳು ಮತ್ತು ಪಟ್ಟಣ ಹಾಗೂ ಹಳ್ಳಿ ರಸ್ತೆಗಳು. 1950ರಲ್ಲಿ ಒಟ್ಟು 5,15,000 ಮೈಲಿಗಳಷ್ಟು ಉದ್ದದ ರಸ್ತೆಗಳಿದ್ದುವು. ಜಪಾನ್ ಮೊಟ್ಟಮೊದಲಿಗೆ 1872ರ ಸೆಪ್ಟೆಂಬರ್‍ನಲ್ಲಿ ಟೋಕಿಯೋದಿಂದ ಯೋಕಹಾಮದ ವರೆಗಿನ ಇಲ್ಲಿಯ ರೈಲುಮಾರ್ಗ ರಚಿಸಿತು. ಈ ಮಾರ್ಗರಚನೆಗಾಗಿ ಬ್ರಿಟನ್ನಿನ ಖಾಸಗಿ ವ್ಯಕ್ತಿ ಇಲ್ಲಿಯಯೊಬ್ಬನಿಂದ ಸಾಲ ಪಡೆದುದಲ್ಲದೆ ಬ್ರಿಟಿಷ್ ಎಂಜಿನಿಯರ್‍ಗಳು ಮತ್ತು ಆ ದೇಶದ ಉಪಕರಣಗಳು ನೆರವನ್ನು ಪಡೆಯಬೇಕಾಯಿತು. 1871ರ ಹೊತ್ತಿಗೆ ಕೋಬೀಯಿಂದ ಕೀಯೋಟೋ ವರೆಗೂ ಟೋಕಿಯೋದಿಂದ ಕೋಬೀ ವರೆಗೂ ಸುಮಾರು 400 ಮೈ. ರೈಲುಮಾರ್ಗ ನಿರ್ಮಾಣವಾಯಿತು. ಜಪಾನಿನ ಬಹುತೇಕ ರೈಲುಮಾರ್ಗಗಳು ತೀರಪ್ರದೇಶಗಳಲ್ಲಿವೆ. ಅದಕ್ಕೆ ತೀರ ಪ್ರದೇಶಗಳಲ್ಲಿರುವ ಮುಖ್ಯ ನಗರಗಳು ಕಾರಣ. ಪ್ರಾರಂಭದಲ್ಲಿ ಸರ್ಕಾರಿ, ಖಾಸಗಿ ಈ ಎರಡೂ ಕ್ಷೇತ್ರಗಳಿಂದಲೂ ರೈಲುಮಾರ್ಗಗಳ ನಿರ್ಮಾಣಕಾರ್ಯ ನಡೆಯಿತು. 1892ರಲ್ಲಿ ಅಲ್ಲಿಯ ಸಂಸತ್ತು ಒಂದು ರೈಲುಮಾರ್ಗ ನಿರ್ಮಾಣ ವಿಧೇಯಕವನ್ನು ಅಂಗೀಕರಿಸಿ ಬೃಹತ್ ಯೋಜನೆಯೊಂದನ್ನು ಜಾರಿಗೆ ತಂದಿತು. 1906ರ ಮಾರ್ಚ್ 31ರಂದು ರೈಲುಮಾರ್ಗ ರಾಷ್ಟ್ರೀಕರಣ ಕಾನೂನನ್ನು ಜಾರಿಗೆ ತರಲಾಯಿತು. 1907ರಲ್ಲಿ 36 ಖಾಸಗಿ ಮಾರ್ಗಗಳ ಪೈಕಿ 2,823 ಮೈ. ಉದ್ದದ 17 ಮುಖ್ಯ ಮಾರ್ಗಗಳ ರಾಷ್ಟ್ರೀಕರಣವಾಯಿತು. ಜಪಾನಿನ ಬಹುತೇಕ ರೈಲುಮಾರ್ಗಗಳು ನ್ಯಾರೊಗೇಜಿನವು. ಅಲ್ಲಿಯ ಪ್ರದೇಶ ಪರ್ವತಮಯವಾಗಿರುವುದು ಇದಕ್ಕೆ ಕಾರಣ. 1953ರ ಹೊತ್ತಿಗೆ ಮುಖ್ಯ ರೈಲುಮಾರ್ಗಗಳ ಉದ್ದ 17,000 ಮೈ. ಗಳಿಗೂ ಮೀರಿತ್ತು. ಅದರಲ್ಲಿ 12,400 ಮೈ.ಗಳ ಉದ್ದದ ಮಾರ್ಗ ಸರ್ಕಾರಿ ಆಡಳಿತಕ್ಕೊಳಪಟ್ಟಿತ್ತು. ನೌಕಾಸಾರಿಗೆಯಲ್ಲಿ ಜಪಾನ್ ಬಹು ಮುಂದಿದೆ. ಇದಕ್ಕೆ ಕೆಲವಾರು ಕಾರಣಗಳಿವೆ. ಜಪಾನಿನಲ್ಲಿ ದೀರ್ಘ ತೀರ ಪ್ರದೇಶವುಂಟು. ದ್ವೀಪಗಳ ನಡುವಣ ಸಮುದ್ರಗಳು ನೌಕಾಸಂಚಾರಕ್ಕೆ ಅನುಕೂಲವಾಗಿವೆ. ಜಪಾನ್ ದ್ವೀಪಸಮೂಹವಾದ್ದರಿಂದ ಜಲ ಸಾರಿಗೆಯೇ ಆರ್ಥಿಕವಾಗಿ ಹೆಚ್ಚು ಅನುಕೂಲಕರ. ಅದರ ಕೈಗಾರಿಕಾ ನಗರಗಳು ತೀರ ಪ್ರದೇಶದಲ್ಲೇ ಹೆಚ್ಚಾಗಿವೆ. ಜಪಾನ್ ಪ್ರಪಂಚದ ಮುಖ್ಯ ನೌಕಾ ನಿರ್ಮಾಣ ರಾಷ್ಟ್ರಗಳಲ್ಲಿ ಒಂದು. ಇಂದು ನೌಕಾನಿರ್ಮಾಣದಲ್ಲಿ ಅದು ಪ್ರಪಂಚದಲ್ಲೇ ಅಗ್ರಸ್ಥಾನ ಪಡೆದಿದೆ. ಅದರ ನೌಕೆಗಳಿಗೆ ವಿದೇಶೀ ಬೇಡಿಕೆ ಗಮನಾರ್ಹ. 1971ರಲ್ಲಿ 8,851 ವ್ಯಾಪಾರಿ ಹಡಗುಗಳಿದ್ದುವು. ಜಪಾನಿನಲ್ಲಿ ಮೊಟ್ಟಮೊದಲ ವಿಮಾನ ಹಾರಾಟ 1910ರಲ್ಲಿ ಪ್ರಾರಂಭವಾಯಿತು. ಜಪಾನಿನ ಮಿಲಿಟರಿ ವಿಮಾನಗಳು ಪ್ರಥಮ ಬಾರಿಗೆ 1914ರಲ್ಲಿ ಜರ್ಮನ್ ಸೈನ್ಯದ ವಿರುದ್ಧ ಯುದ್ಧದಲ್ಲಿ ಭಾಗವಹಿಸಿದವು. ಕ್ರಮಬದ್ಧ ನಾಗರಿಕ ವಿಮಾನ ಸಾರಿಗೆ ವ್ಯವಸ್ಥೆ 1922ರಲ್ಲಿ ಪ್ರಾರಂಭವಾಯಿತು. ಪ್ರಪ್ರಥಮ ವಿಮಾನ ಅಂಚೆ ಸೇವೆ ಪ್ರಾರಂಭವಾದದ್ದು 1925ರಲ್ಲಿ. ಜಪಾನಿನ ಮುಖ್ಯ ನಗರಗಳನ್ನೂ ಅವುಗಳ ಜನಸಂಖ್ಯೆಗಳನ್ನೂ ಮುಂದೆಕೊಟ್ಟಿದೆ : ಟೋಕಿಯೋ (ರಾಜಧಾನಿ) … ಕೇಂದ್ರ ನಗರ 8163573. ಮಹಾನಗರ ಜನಸಂಖ್ಯೆ 28,447,000 ಓಸಾಕ … 2623801 ಮಹಾನಗರ ಜನಸಂಖ್ಯೆ 8,734,516 (2000) ಯೋಕಹಾಮ … 3220331 ನಗಾಯಿಯ … 21,54793 ಕೀಯೋಟೋ … 1461103 ಕೋಬೀ … 1,477,410 ಕೀಟಾ-ಕೀಯೂಷೂ … 1026455 ಸಪೋರೋ … 1671742 ಕಾವಸಾಕೀ …      1,173,603 ಸಾಕೈ … 807765 ಆಮಗಸಾಕೀ … 498,999 ಹಿರೋಷೀಮ … 1,085,705 ಚೀಬ … 829455 ಕೂಮಮೋಟೋ … 579106 ನಾಗಸಾಕೀ … 444591 ಷಿಜûವೋಕ … 472196 ಹಿಮೆಜೀ … 454,360 ಕಾಗಷೀಯ … 536,752 ಗೀಫೂ … 410,324 ನೀಗಾಟ … 486,097 ನಿಷಿನೋಮೀಯ … 426909 ಓಕಯಾಮ … 593730 ಟೋಯೋನಾಕ … 409832 ವಾಕಯಾಮ … 396553 ಕನಾಜûವ … 442,868 ಯೋಕಾಸಕ … 433358 ಮಾಟ್ಸಯಾಮ … 443,322 ಸಾಸಬೋ … 244,677 ಜಪಾನಿನ ನಾಣ್ಯ ಯೆನ್. ಒಂದು ಯೆನ್‍ಗೆ 100 ಸೆನ್, 1,000 ರಿನ್. ಮೆಟ್ರಿಕ್ ಅಳತೆ ತೂಕ ಪದ್ಧತಿ ಜಾರಿಯಲ್ಲಿದೆ. ಜೂಡೋ, ಸೂಮೋ (ಜಪಾನೀ ಕುಸ್ತಿ) ಮತ್ತು ಕೆಂಡೋ (ಕತ್ತಿವರಸೆ) ಪರಂಪರೆಯಿಂದ ಬಂದ ಕ್ರೀಡೆಗಳು. ಬೇಸ್ ಬಾಲ್, ಈಜು, ಸ್ಕೀಯಿಂಗ್, ಟೇಬಲ್-ಟೆನಿಸ್ ಇತರ ಪ್ರಮುಖ ಆಟಗಳು. ಗಾಲ್ಫ್ ಜನಪ್ರಿಯವಾಗುತ್ತಿದೆ. 1964ರಲ್ಲಿ ಟೋಕಿಯೋದಲ್ಲಿ ಒಲಿಂಪಿಕ್ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. 1972ರಲ್ಲಿ ಚಳಿಗಾಲದ ಒಲಿಂಪಿಕ್ ಕ್ರೀಡೆಗಳು ಸಪೋರೋದಲ್ಲಿ ನಡೆದುವು. ಜಪಾನು ಕಚ್ಚಾ ಹತ್ತಿ. ಕಬ್ಬಿಣದ ಅದಿರು, ಉಣ್ಣೆ, ಬೀಡು ಕಬ್ಬಿಣ, ಪೆಟ್ರೋಲ್ ಮತ್ತು ರಾಸಾಯನಿಕ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಬಟ್ಟೆ, ರೇಷ್ಮೆ, ರೇಯಾನ್, ಸಿದ್ಧವಸ್ತುಗಳು, ಯಂತ್ರೋಪಕರಣಗಳು ಮತ್ತು ಹದ ಮಾಡಿದ ಮೀನು ರಫ್ತಾಗುತ್ತವೆ. ಆಡಳಿತ ವ್ಯವಸ್ಥೆ ಜಪಾನ್ ಪ್ರಾಚೀನಕಾಲದಿಂದಲೂ ರಾಜತ್ವವನ್ನು ಮನ್ನಿಸಿದ ದೇಶ. ರಾಜ ದೇವರ ಸಾಕ್ಷಾತ್ ಪ್ರತಿನಿಧಿಯೆಂದೇ ಜಪಾನೀಯರು ನಂಬಿದ್ದರು. ಅಲ್ಲಿ ಚಕ್ರವರ್ತಿಯ ನಿರಂಕುಶಾಧಿಕಾರವಿತ್ತು. ದೇಶದ ಒಳಗೆಲ್ಲ ಊಳಿಗಮಾನ್ಯ ವ್ಯವಸ್ಥೆಯ ಆಡಳಿತ ಸಾಮಾನ್ಯ ಲಕ್ಷಣವಾಗಿತ್ತು. ದೊಡ್ಡದೊಡ್ಡ ಭೂಮಾಲೀಕರು ಮತ್ತು ರಾಜಕೀಯ ನಾಯಕರು ಸ್ವತಃ ಸಾಮಂತ ಪ್ರಭುಗಳಂತೆ ಸ್ಥಳೀಯ ಜನತೆಯ ಮೇಲೆ ಅಧಿಕಾರ ನಡೆಸುತ್ತಿದ್ದರು. ಆದರೆ 19ನೆಯ ಶತಮಾನದಲ್ಲಿ ಅಲ್ಲೊಂದು ಹೊಸ ರಾಷ್ಟ್ರೀಯ ಭಾವನೆ ಬೆಳೆಯಿತು. ಇದರಿಂದಾಗಿ ತಮ್ಮ ರಾಷ್ಟ್ರೀಯ ಏಕತೆಯ ಸಂಕೇತವಾಗಿ ಮೇಜಿ ಚಕ್ರವರ್ತಿ 1868ರಲ್ಲಿ ಪುನಃಸ್ಥಾಪಿತನಾದ. ತರುವಾಯ ಪಾಶ್ಚಾತ್ಯ ಮಾದರಿಯ ಸಂವಿಧಾನಬದ್ಧ ಆಡಳಿತವ್ಯವಸ್ಥೆಯನ್ನು ರಚಿಸಲು ಜಪಾನೀಯರು ಮುಂದಾದರು. ಇದರ ಫಲವಾಗಿ ಆಡಳಿತದಲ್ಲಿ ಮಹತ್ತರ ಬದಲಾವಣೆಗಳಾದುವು. ಸಂವಿಧಾನ ರಚನೆ 1880ರ ದಶಕದಲ್ಲಿ ಇಟೊ ಹಿರೋಬುಮಿಯ ನೇತೃತ್ವದಲ್ಲಿ ಸಂವಿಧಾನ ರಚನಾ ಆಯೋಗ ಸಂವಿಧಾನ ರಚಿಸುವ ಕಾರ್ಯ ಕೈಗೊಂಡಿತು. 1889ರ ಹೊತ್ತಿಗೆ ಈ ಕಾರ್ಯ ಮುಗಿಯಿತು. ಕೆಳಸದನಕ್ಕೆ ಚುನಾವಣೆಗಳು ನಡೆದು 1890ರಲ್ಲಿ ಸಂಸತ್ ಸಭೆ ಸೇರಿತು. ಸಂಸದೀಯ ವ್ಯವಸ್ಥೆಯಲ್ಲಿ ಚಕ್ರವರ್ತಿಯೇ ರಾಜ್ಯದ ಹಾಗೂ ಸಂವಿಧಾನಬದ್ಧ ಮುಖ್ಯನಾದ. ಇದರಿಂದಾಗಿ ಅವನಲ್ಲಿ ಕಾರ್ಯಾಂಗದ ಅಧಿಕಾರಗಳೂ ಸೇರಿಕೊಂಡುವು. ಎರಡು ಸದನಗಳ ಸಂಸತ್ತಿನಲ್ಲಿ ಮೇಲ್ಮನೆ ಪ್ರತಿಷ್ಠಿತರಿಂದ ಕೂಡಿದ್ದು ವಿಶೇಷ ಅಧಿಕಾರಗಳನ್ನು ಪಡೆಯಿತು. ಕೆಳಸದನಕ್ಕೆ ಕಾನೂನನ್ನು ಮಂಡಿಸುವ ಮತ್ತು ತೆರಿಗೆ ವಿಧಿಸುವ ವಿಧೇಯಕಗಳನ್ನು ಅಂಗೀಕರಿಸುವ ಅಧಿಕಾರವಿತ್ತು. ಚಕ್ರವರ್ತಿ ಸೈನ್ಯದ ಮೇಲೆ ಸಂಪೂರ್ಣ ಅಧಿಕಾರ ಪಡೆದಿದ್ದ. ಯುದ್ಧ ಘೋಷಿಸಲು ಮತ್ತು ಶಾಂತಿ ಮಾಡಿಕೊಳ್ಳಲು ಅವನು ವಿಧಿಬದ್ಧ ಅಧಿಕಾರ ಪಡೆದಿದ್ದ. ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾದರೆ ಅಥವಾ ಯಾವುದೇ ಕಾನೂನು ಜಾರಿಗೆ ಬರಬೇಕಾದರೆ ಅದಕ್ಕೆ ಚಕ್ರವರ್ತಿಯ ಒಪ್ಪಿಗೆ ಅಗತ್ಯವಾಗಿತ್ತು. ಚುನಾವಣೆಯಲ್ಲಿ ಮತ ನೀಡುವವರು 15 ಯೆನ್ ತೆರಿಗೆ ಕೊಡುವಂಥ ಕನಿಷ್ಠ ಅರ್ಹತೆ ಪಡೆದಿರಬೇಕಾಗಿತ್ತು. ಕೆಲವರು ಅಭಿಪ್ರಾಯಪಡುವಂತೆ ಈ ಸಂವಿಧಾನದ ಅಳವಡಿಕೆಯ ಉದ್ದೇಶ ರಾಷ್ಟ್ರೀಯ ಏಕತೆಯನ್ನು ಸಾಧಿಸುವುದು ಮತ್ತು ಆಧುನಿಕ ಪಾಶ್ಚಾತ್ಯ ಮಾದರಿಯ ವೇಷದಲ್ಲಿ ಅಂತರರಾಷ್ಟ್ರೀಯ ಮನ್ನಣೆ ಗಳಿಸುವುದಾಗಿತ್ತೇ ವಿನಾ ನಿಜವಾದ ಪ್ರಜಾಪ್ರಭುತ್ವದ ಹಕ್ಕುಗಳನ್ನು ಜನತೆಗೆ ನೀಡುವುದಾಗಿರಲಿಲ್ಲ. ಮೇಜಿ ಪುನಃಸ್ಥಾಪನೆಯ ಕಾಲದಲ್ಲಿ ರಾಷ್ಟ್ರದ ಹಿರಿಯ ನಾಯಕರಿಂದ ಕೂಡಿದ ಜೆóನ್ರೊ ಎಂಬ ಒಂದು ಮಂಡಲಿಯ ರಚನೆಯಾಯಿತು. ಅದು ಸರ್ಕಾರಕ್ಕೆ ರಾಜಕೀಯ ಸಲಹೆ ನೀಡುವುದಾಗಿತ್ತು. 1925ರಲ್ಲಿ ಸಾರ್ವತ್ರಿಕ ಮತದಾನ ಪದ್ಧತಿ ಜಾರಿಗೆ ಬಂತು. ಸರ್ಕಾರದ ರಚನೆಯಲ್ಲಿ ರಾಜಕೀಯ ಪಕ್ಷಗಳೂ ವಿಶೇಷ ಪಾತ್ರ ವಹಿಸುತ್ತಿದ್ದುವು. 1918ರಿಂದ 1931ರ ವರೆಗಿನ ಆಡಳಿತವನ್ನು ಜಪಾನಿನಲ್ಲಿ ಪಕ್ಷಗಳ ಸರ್ಕಾರದ ಕಾಲವೆಂದು ಕರೆಯಲಾಗಿದೆ. ಆದರೆ 1930ರ ದಶಕದಲ್ಲಿ ಯುದ್ಧಾಸಕ್ತ ವರ್ಗಗಳು ಪ್ರಬಲಿಸಿ ಸರ್ಕಾರದ ಮೇಲೆ ನಿಯಂತ್ರಣ ಪಡೆದುವು. ಇದರಿಂದ ಸಂವಿಧಾನಬದ್ಧ ಪ್ರಜಾಪ್ರಭುತ್ವ ನಶಿಸಿಹೋಯಿತು. 1947ರ ಸಂವಿಧಾನ ಎರಡನೆಯ ಮಹಾಯುದ್ಧದಲ್ಲಿ ಜಪಾನನ್ನು ವಶಪಡಿಸಿಕೊಂಡ ಮೇಲೆ (1945) ಅದರ ಆಡಳಿತ ವಿಧಾನದಲ್ಲಿ ಅಪೂರ್ವ ಬದಲಾವಣೆಗಳಾದುವು. ಆಮೆರಿಕ ಜಪಾನಿನಲ್ಲಿ ಪ್ರಜಾಪ್ರಭುತ್ವ ಶಕ್ತಿ ಬೆಳೆಸುವ ಉದ್ದೇಶ ಹೊಂದಿತ್ತು. ಅ ಅಮೆರಿಕನರು ಮತ್ತು ಜಪಾನೀಯರ ಸಂಯುಕ್ತ ಪ್ರಯತ್ನದಿಂದ 1947ರ ಮೇ 30ರಂದು ಒಂದು ಹೊಸ ಸಂವಿಧಾನ ಜಾರಿಗೆ ಬಂತು. ಇದನ್ನು 1889ರ ಸಂವಿಧಾನದ ಬದಲಿಗೆ ಅಳವಡಿಸಲಾಯಿತು. ಈ ಹೊಸ ಸಂವಿಧಾನದಿಂದ ಚಕ್ರವರ್ತಿಯ ನಿರಂಕುಶ ಅಧಿಕಾರಗಳು ರದ್ದಾದುವು. ಅವನು ಸಾಂಕೇತಿಕವಾಗಿ ಸಂವಿಧಾನ ಮುಖ್ಯ. ಅಲ್ಲಿಯ ರಾಜತ್ವ ಬಹುತೇಕ ಇಂಗ್ಲೆಂಡಿನ ರಾಜತ್ವದ ಸ್ವರೂಪ ಪಡೆದುಕೊಂಡಿತು. ಸರ್ವ ರಾಜಕೀಯ ಅಧಿಕಾರಗಳನ್ನೂ ಉಭಯ ಸದನಗಳುಳ್ಳ ಸಂಸತ್ತಿಗೆ ವಹಿಸಲಾಯಿತು. ಇದರ ಸದಸ್ಯರನ್ನು ಜನತೆ ಆರಿಸಬೇಕು. ಬಹುಮತ ಗಳಿಸಿದ ಪಕ್ಷ ಮಂತ್ರಿಮಂಡಲ ರಚಿಸಲು ಅವಕಾಶ ಕಲ್ಪಿಸಲಾಗಿದೆ. ಸಂಸತ್ತಿಗೆ ಸಂವಿಧಾನದ ತಿದ್ದುಪಡೆಯ ಅಧಿಕಾರ ಇದೆ. ಇದಕ್ಕೆ 2/3 ಭಾಗ ಸದಸ್ಯರ ಬೆಂಬಲ ಅಗತ್ಯ. ಪಾರ್ಲಿಮೆಂಟಿನ ಉಭಯ ಸದನಗಳಲ್ಲಿ ಒಂದನ್ನು ಪ್ರತಿನಿಧಿ ಸಭೆಯೆಂದೂ ಇನ್ನೊಂದನ್ನು ಪರಿಷದ ಸಭೆಯೆಂದೂ ಕರೆಯಲಾಗಿದೆ. ಪ್ರತಿನಿಧಿ ಸಭೆಯಲ್ಲಿ ಸದಸ್ಯ ಸಂಖ್ಯೆ 486 (1971). ಪರಿಷದಸಭೆಯದು 250, ಪ್ರತಿನಿಧಿ ಸಭೆಯ ಸದಸ್ಯರನ್ನು ದೇಶಾದ್ಯಂತ ಇರುವ 118 ಚುನಾವಣಾ ಜಿಲ್ಲೆಗಳಿಂದ ಆರಿಸಲಾಗುತ್ತದೆ. ಇವರ ಅಧಿಕಾರಾವಧಿ ನಾಲ್ಕು ವರ್ಷ. ಪರಿಷತ್ತಿನ ಸದಸ್ಯರಲ್ಲಿ 100 ಜನ ಒಟ್ಟು ರಾಷ್ಟ್ರದಿಂದ ಆರಿಸಲ್ಪಟ್ಟಿರೆ ಇನ್ನು 150 ಜನ ಸದಸ್ಯರು ಪ್ರಿಪೆಕ್ಜರ್‍ಗಳಿಂದ (ಜಿಲ್ಲೆ) ಆರಿಸಲ್ಪಡುತ್ತಾರೆ. ಇದರ ಸದಸ್ಯರ ಅಧಿಕಾರಾವಧಿ 6 ವರ್ಷಗಳು. ಪ್ರತಿ ಮೂರು ವರ್ಷಗಳಿಗೊಮ್ಮೆ 1/3 ಭಾಗ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುವುದು. ಪ್ರತಿಯೊಬ್ಬ ಮತದಾರನಿಗೂ ಒಂದು ವರ್ಗದ ಸದಸ್ಯರನ್ನು ಆರಿಸಲು ಒಂದು ಮತದ ಹಕ್ಕಿರುತ್ತದೆ. ಕೆಳಸದನವನ್ನು ಮಂತ್ರಿ ಸಂಪುಟ ವಿಸರ್ಜಿಸಬಹುದು. ಆದರೆ 40 ದಿವಸಗಳೊಳಗಾಗಿ ಮರುಚುನಾವಣೆ ನಡೆಯಬೇಕಾಗುತ್ತದೆ. ಚುನಾವಣೆ ಆದ 30 ದಿನಗಳೊಳಗೆ ಸಂಸತ್ ಸಭೆ ಸೇರಬೇಕು. ವ್ಯಕ್ತಿಗೌರವವನ್ನು ಹಕ್ಕುಗಳ ವಿಧೇಯಕದ ಮೂಲಕ ಎತ್ತಿ ಹಿಡಿಯಲಾಗಿದೆ. ಸಂವಿಧಾನದ ಯಾವುದೇ ತಿದ್ದುಪಡಿಯನ್ನು ಪರಿಶೀಲಿಸುವ ಅಧಿಕಾರ ಮತ್ತು ಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಅಧಿಕಾರವನ್ನು ಜನತೆಗೆ ನೀಡಲಾಗಿದೆ. ಇಲ್ಲಿಯ ಪರಮೋಚ್ಚ ನ್ಯಾಯಾಲಯಕ್ಕೆ ಯಾವುದೇ ಕಾನೂನು ಸಂವಿಧಾನಬದ್ಧವಾಗಿದೆಯೆ ಇಲ್ಲವೆ ಎಂದು ನಿರ್ಣಯಿಸುವ ಅಧಿಕಾರ ಇದೆ. ಸಂವಿಧಾನದಲ್ಲಿ ನಾಗರಿಕರಿಗೆ ಪ್ರಜಾಪ್ರಭುತ್ವದಲ್ಲಿರುವ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹಕ್ಕುಗಳನ್ನು ನೀಡಲಾಗಿದೆ. ನ್ಯಾಯಾಂಗ: 1947ಕ್ಕೆ ಹಿಂದೆ ನ್ಯಾಯಾಂಗ ಕಾರ್ಯಾಂಗಕ್ಕೆ ಅಧೀನವಾಗಿದ್ದಿತು. 1947ರ ಸಂವಿಧಾನದಲ್ಲಿ ನ್ಯಾಯಾಂಗವನ್ನು ಆಮೂಲಾಗ್ರವಾಗಿ ಬದಲಾಯಿಸಲಾಯಿತು. ಇದಕ್ಕನುಗುಣವಾಗಿ ನ್ಯಾಯಾಂಗ ಕಾರ್ಯಾಂಗದ ಹತೋಟಿಯಿಂದ ಮುಕ್ತಗೊಂಡಿತು. ಇದೊಂದು ಸ್ವತಂತ್ರ ಶಾಖೆಯಾಗಿ ರೂಪುಗೊಂಡಿತು. ಪರಮೋಚ್ಚ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲಾಯಿತು. ಯಾವುದೇ ಕಾನೂನು ಅಥವಾ ನಿಬಂಧನೆ ಸಂವಿಧಾನಬದ್ಧವಾಗಿ ಇದೆಯೇ ಇಲ್ಲವೇ ಎಂದು ಅಂತಿಮವಾಗಿ ನಿರ್ಣಯಿಸುವ ಅಧಿಕಾರ ಇದಕ್ಕೆ ಇದೆ. ಪರಮೋಚ್ಚ ನ್ಯಾಯಾಲಯದಲ್ಲಿ 15 ಜನ ನ್ಯಾಯಾಧೀಶರು ಇರುತ್ತಾರೆ. ಮುಖ್ಯ ನ್ಯಾಯಾಧೀಶನನ್ನು ಮಂತ್ರಿಮಂಡಲದ ಅನುಮೋದನೆಯ ಮೇರೆಗೆ ಚಕ್ರವರ್ತಿಯೇ ನೇಮಿಸಬೇಕು. ಉಳಿದ ನ್ಯಾಯಾಧೀಶರನ್ನು ಮಂತ್ರಿ ಮಂಡಲವೇ ನೇರವಾಗಿ ನೇಮಿಸುತ್ತದೆ. ಆದರೆ ಇಲ್ಲಿ ಅಳವಡಿಸಿದ ಹೊಸ ಸೂತ್ರವೆಂದರೆ, ಹೀಗೆ ನೇಮಿತರಾದ ನ್ಯಾಯಾಧೀಶರು ಮೊದಲ ಅವಧಿಗೆ ನೇಮಕವಾದ ಮೇಲೆ ಬರುವ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಅವರ ನೇಮಕವನ್ನು ಅನುಮೋದಿಸಬೇಕು. ತರುವಾಯ ಪ್ರತಿ ಹತ್ತು ವರ್ಷಗಳಿಗೊಮ್ಮೆ ಈ ಅನುಮೋದನೆ ನಡೆಯಬೇಕು. ಮತದಾರರು ಅವರ ನೇಮಕವನ್ನು ತಿರಸ್ಕರಿಸಿದರೆ ಅಂಥವರು ತಮ್ಮ ಸ್ಥಾನದಲ್ಲಿ ಮುಂದುವರಿಯುವಂತಿಲ್ಲ. ಇತರ ನ್ಯಾಯಾಲಯಗಳಿಗೆ ಹತ್ತು ವರ್ಷಗಳ ಅವಧಿಗೆ ನ್ಯಾಯಾಧೀಶರನ್ನು ನೇಮಿಸಲಾಗುವುದು. ಸಂಸತ್ತಿನಿಂದ ಚುನಾಯಿತರಾದ 14 ಜನರ ಮಂಡಲಿಯೊಂದು ನ್ಯಾಯಾಧೀಶರುಗಳಲ್ಲಿ ಯಾರನ್ನೇ ಆದರೂ ಮಹಾಭಿಯೋಗಮಾಡಿ (ಇಂಪೀಚ್‍ಮೆಂಟ್) ಪದಚ್ಯುತಗೊಳಿಸಬಹುದು. ಪರಮೊಚ್ಚ ನ್ಯಾಯಾಲಯದ ಕೆಳಗೆ 8 ಉನ್ನತ ನ್ಯಾಯಾಲಯಗಳೂ 49 ಜಿಲ್ಲಾ ನ್ಯಾಯಾಲಯಗಳೂ 570 ಸ್ಥಳೀಯ ನ್ಯಾಯಾಲಯಗಳೂ ಇವೆ. ಜಪಾನಿನಲ್ಲಿ ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡಲು ಪ್ರತ್ಯೇಕ ನ್ಯಾಯಾಂಗ ವ್ಯವಸ್ಥೆಯಿದೆ. ರಾಜಕೀಯ ಪಕ್ಷಗಳು ಜಪಾನಿನಲ್ಲಿ ಏಷ್ಯದ ಇತರ ರಾಷ್ಟ್ರಗಳಿಗಿಂತ ಬಹು ಬೇಗ, 19ನೆಯ ಶತಮಾನದ ಉತ್ತರಾರ್ಧದಲ್ಲೇ, ರಾಜಕೀಯ ಪಕ್ಷಗಳು ಹುಟ್ಟಿಕೊಂಡುವು. ಸರ್ಕಾರದ ರಚನೆಯಲ್ಲಿ ಅವುಗಳ ಪಾತ್ರ ವಿಶೇಷವಾಗಿತ್ತು. 1918ರಿಂದ 1931ರ ವರೆಗಿನ ಆಡಳಿತದಲ್ಲಿ ರಾಜಕೀಯ ಪಕ್ಷಗಳು ಪರಿಣಾಮಕಾರಿ ಪಾತ್ರ ವಹಿಸಿದುವು. ಆದರೆ 1889ರ ಸಂವಿಧಾನದಲ್ಲಿ ಚಕ್ರವರ್ತಿಗೆ ಮತ್ತು ಕಾರ್ಯಾಂಗಕ್ಕೆ ಹೆಚ್ಚಿನ ಅಧಿಕಾರಗಳು ದತ್ತವಾಗಿದ್ದುದರಿಂದ ರಾಜಕೀಯ ಪಕ್ಷಗಳ ಅಧಿಕಾರವ್ಯಾಪ್ತಿ ಸೀಮಿತವಾಗಿತ್ತು. 1930ರ ದಶಕದಲ್ಲಿ ರಾಜ್ಯದ ಆಡಳಿತದಲ್ಲಿ ಯುದ್ಧಾಸಕ್ತ ವರ್ಗದ ಪ್ರಾಬಲ್ಯ ಹೆಚ್ಚಿದ್ದರಿಂದ ರಾಜಕೀಯ ಪಕ್ಷಗಳು ಗೌಣವಾದುವು. 1940ರಲ್ಲಿ ಎಲ್ಲ ಪಕ್ಷಗಳು ಸ್ವಇಚ್ಛೆಯಿಂದ ಸಾಮ್ರಾಜ್ಯ ಆಡಳಿತ ಸಹಾಯಕ ಸಂಘವೆಂಬ ಏಕೈಕ ಪಕ್ಷ ಸ್ಥಾಪಿತವಾಯಿತು. 1945ರಲ್ಲಿ ಯುದ್ಧಾನಂತರ ಲಿಬರಲ್ ಮತ್ತು ಪ್ರಗತಿ ಪಕ್ಷಗಳು ಹುಟ್ಟಿಕೊಂಡುವು. ಸಮಾಜವಾದಿ ಪಕ್ಷವೂ ಸ್ಥಾಪನೆಗೊಂಡಿತು. 1945ರ ಆಕ್ಟೋಬರ್‍ನಲ್ಲಿ ಪ್ರಪ್ರಥಮವಾಗಿ ಕಾನೂನುಬದ್ಧ ಕಮ್ಯೂನಿಸ್ಟ್ ಪಕ್ಷದ ಸ್ಥಾಪನೆಯಾಯಿತು. ಜಪಾನಿನ ರಾಜಕೀಯ ಚಟುವಟಿಕೆಯಲ್ಲಿ ಸಂಪ್ರದಾಯವಾದಿಗಳ ಮತ್ತು ಸಮಾಜವಾದಿಗಳ ಪಕ್ಷಗಳ ಪ್ರಭಾವವನ್ನು ಕಾಣಬಹುದು. ಗ್ರಾಮಾಂತರ ಪ್ರದೇಶಗಳಲ್ಲಿ ಸಂಪ್ರದಾಯ ವಾದಿಗಳ ಪಕ್ಷಗಳ ಪ್ರಭಾವವಿದೆ. ಕೈಗಾರಿಕಾ ನಗರಗಳಲ್ಲಿ ಸಮಾಜವಾದಿಗಳ ಪ್ರಭಾವ ಹೆಚ್ಚು. ಲಿಬರಲ್ ಡೆಮೊಕ್ರಾಟಿಕ್ ಪಕ್ಷ ಈಗ ಆಡಳಿತ ನಡೆಸುತ್ತಿದೆ. ಸಮಾಜವಾದಿ ಮತ್ತು ಪ್ರಜಾಪ್ರಭುತ್ವ ಸಮಾಜವಾದಿ ಪಕ್ಷಗಳೂ ಜನಪ್ರಿಯವಾಗುತ್ತಿವೆ. ಶುದ್ಧ ಸರ್ಕಾರದ ಪಕ್ಷ 1964ರಲ್ಲಿ ಸ್ಥಾಪಿತವಾಯಿತು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಬಲವಾಗಿರುವ ವರ್ಗದ ಹಿಡಿತದಿಂದ ಇಲ್ಲಿಯ ರಾಜಕೀಯ ಇನ್ನೂ ಪಾರಾಗಿಲ್ಲ. ಸ್ಥಳೀಯ ಆಡಳಿತ 1947ರಲ್ಲಿ ಸಂಸತ್ತು ಅಂಗೀಕರಿಸಿದ ಸ್ಥಳೀಯ ಸ್ವಯಮಾಡಳಿತ ಕಾನೂನು ಸ್ಥಳೀಯ ಆಡಳಿತ ಅಂಗಗಳಿಗೆ ಹೆಚ್ಚಿನ ಒಳಾಡಳಿತ ಸ್ವಾತಂತ್ರ್ಯ ನೀಡಿದೆ. ಇಡೀ ರಾಷ್ಟ್ರವನ್ನು 46 ಪ್ರಿಫೆಕ್ಟ್‍ಗಳಾಗಿ (ಜಿಲ್ಲೆಗಳು) ವಿಂಗಡಿಸಲಾಗಿದೆ. ಇವನ್ನು ನಗರಗಳು, ಪಟ್ಟಣಗಳು, ಹಳ್ಳಿಗಳೆಂದು ಉಪವಿಭಾಗಗಳನ್ನಾಗಿ ಮಾಡಲಾಗಿದೆ. ಪ್ರಿಫೆಕ್ಟ್‍ಗಳ ಗವರ್ನರ್‍ಗಳು ಮತ್ತು ಇತರ ಸ್ಥಳೀಯ ಅಧಿಕಾರಿಗಳನ್ನು ಚುನಾಯಿಸಲಾಗುತ್ತವೆ. ವಾರ್ಡ್‍ಗಳು, ಮುನಿಸಿಪಾಲಿಟಿಗಳು ಮತ್ತು ಪಟ್ಟಣಗಳ ಆಡಳಿತ ಸಭೆಗೂ ನೇರ ಚುನಾವಣಾಪದ್ಧತಿ ಇದೆ. ಪ್ರಿಫೆಕ್ಟಿನ ಸಭೆಗೆ ನಾಲ್ಕು ವರ್ಷಗಳ ಅವಧಿಗೆ ಚುನಾವಣೆ ನಡೆಯುತ್ತದೆ. ಚುನಾಯಿತ ಸಮುದಾಯ ಇಚ್ಛೆಪಟ್ಟಾಗ ಸ್ಥಳೀಯ ಆಡಳಿತ ಸಭೆಗಳನ್ನು ವಿಸರ್ಜಿಸಲು ಒತ್ತಾಯ ಪಡಿಸಬಹುದು ಹಾಗೂ ಅವುಗಳ ಲೆಕ್ಕಪತ್ರಗಳನ್ನು ಪರಿಶೀಲಿಸಬಹುದು. ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳ ಮೇಲ್ವಿಚಾರಣೆ ಗೃಹಖಾತೆಗೆ ಸೇರಿದ್ದು. ಟೋಕಿಯೋನಿನಂಥ ದೊಡ್ಡ ನಗರಗಳಿಗೆ ವಿಶೇಷ ಆಡಳಿತ ವ್ಯವಸ್ಥೆ ಇದೆ. ರಾಷ್ಟ್ರರಕ್ಷಣೆ 1945ರಲ್ಲಿ ಮಿತ್ರರಾಷ್ಟ್ರಗಳು ಜಪಾನಿನ ಸಶಸ್ತ್ರ ಪಡೆಗಳನ್ನು ವಿಸರ್ಜಿಸಿದುವು. 1952ರಲ್ಲಿ ರಾಷ್ಟ್ರೀಯ ರಕ್ಷಣಾದಳ ಎಂಬ ಹೆಸರಿನಲ್ಲಿ ಪುನಃ ಸೈನ್ಯದ ಸಂಘಟನೆ ಪ್ರಾರಂಭವಾಯಿತು. 1945ರಲ್ಲಿ ಜಪಾನ್ ಮತ್ತು ಅಮೆರಿಕಗಳು ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿಮಾಡಿದುವು. ಅದೇ ವರ್ಷದ ಜೂನಿನಲ್ಲಿ ಜಪಾನಿನ ಸಂಸತ್ತು ಹೊಸ ಭೂಪಡೆ, ವಾಯುಪಡೆ ಮತ್ತು ನೌಕಾ ಪಡೆಯ ರಚನೆಗೆ ವಿಧೇಯಕ ಅಂಗೀಕರಿಸಿತು. ಇತಿಹಾಸ ಪ್ರಾಗಿತಿಹಾಸ ಪ್ಲೀಸ್ಟೊಸೀನ್ ಯುಗದ ಅಂತ್ಯ ಭಾಗದಲ್ಲಿ ಜಪಾನಿನಲ್ಲಿ ಜನವಸತಿ ಇದ್ದ ಬಗ್ಗೆ ಹಲವು ಕುರುಹುಗಳು ಇತ್ತೀಚೆಗೆ ದೊರಕಿವೆ. ಹಾಕೈಡೋ ವಿಭಾಗದ ತಾರುಕೀಷಿ ಮತ್ತು ಇತರ ಕೆಲವು ಸ್ಥಳಗಳಲ್ಲಿ ಪಟ್ಟೆಚಕ್ಕೆಯ ಶಿಲಾಯುಧ ಪ್ರಕಾರಗಳು ದೊರಕಿವೆ. ಅವು ಸುಮಾರು 13 ಅಥವಾ 12 ಸಾವಿರ ವರ್ಷಗಳಷ್ಟು ಹಳೆಯವೆಂದು ರೇಡಿಯೋ ಕಾರ್ಬನ್ ವಿಧಾನಗಳಿಂದ ತೀರ್ಮಾನಿಸಲಾಗಿದೆ. ಹಾಕೈಡೋ ವಿಭಾಗದ ಉತ್ತರದ ಪ್ರದೇಶಗಳಲ್ಲಿ, ಅದರಲ್ಲೂ ಯೂಬೆಟ್ಸು ನದೀ ಕಣಿವೆಯ ಷಿರತಾಕಿ ಮುಂತಾದ ನೆಲೆಗಳಲ್ಲಿ. ಈ ಶಿಲಾಯುಧ ಸಂಸ್ಕøತಿಯ ಸ್ತರಗಳು ಕಂಡುಬಂದಿವೆ. ಅವುಗಳ ಅತ್ಯಂತ ಪ್ರಾಚೀನ ಘಟ್ಟದಲ್ಲಿ ತುದಿಯಲ್ಲಿ ಸಣ್ಣ ಚಕ್ಕೆಗಳನ್ನು ಎತ್ತಿ ಪರಿಷ್ಕರಿಸಿದ ಉದ್ದನೆಯ ಹಾಗೂ ಚಿಕ್ಕ ಪಟ್ಟೆಚಕ್ಕೆ ಆಯುಧಗಳೂ ಉಪಯೋಗದಲ್ಲಿದ್ದುವೆಂದು ತಿಳಿಯುತ್ತದೆ. ಇನ್ನೂ ಮುಂದಿನ ಘಟ್ಟದಲ್ಲಿ ಕೊರೆಗ ಉಪಯೋಗದಲ್ಲಿದ್ದುವೆಂದು ತಿಳಿಯುತ್ತದೆ. ಇನ್ನೂ ಮುಂದಿನ ಘಟ್ಟದಲ್ಲಿ ಕೊರೆಗಗಳೂ. ಪಟ್ಟೆಚಕ್ಕೆಗಳನ್ನು ತೆಗೆಯಲು ಬಳಸಿದ ಮಾತೃಶಿಲೆಗಳೂ ಸಿಗುತ್ತವೆ. ಹಾಕೈಡೋದ ಕರಾವಳಿಯಲ್ಲಿ ಇದೇ ಸಂಸ್ಕøತಿ ಇನ್ನೊಂದು ರೂಪದಲ್ಲಿ ಕಾಣಸಿಗುತ್ತದೆ. ಇದರಲ್ಲಿ ಕೊರೆಗಗಳು, ಪಟ್ಟೆಚಕ್ಕೆಗಳು, ಉಜ್ಜಿ ನಯಗೊಳಿಸಿದ ಶಿಲಾಯುಧಗಳು, ಹಿಂದುಮುಂದಾಗಿ ಚಕ್ಕೆ ಎಬ್ಬಿಸಿ ಪರಿಷ್ಕರಿಸಿದ ಕಲ್ಲಿನ ಮೊನೆಗಳು ದೊರಕಿವೆ. ಇಲ್ಲಿಯ ಆಯುಧಗಳೆಲ್ಲ ಆಬ್ಸಿಡಿಯನ್ ಎಂಬ ನಯವಾದ ಗಾಜಿನಂಥ ಕಲ್ಲಿನಲ್ಲಿ ಮಾಡಿದವುಗಳು. ಹಾನ್ಷ್ಯೂ ವಿಭಾಗದಲ್ಲಿ ಎರೆಕಲ್ಲು ಬಳಕೆಯಲ್ಲಿತ್ತು. ಅಲ್ಲಿಯ ಸಂಸ್ಕøತಿಯಲ್ಲಿ ಕೊರೆಗಗಳೂ ಬರೆಯುವ ಸಾಧನಗಳೂ ಉಂಡೆಕಲ್ಲಿನಿಂದ ಮಾಡಿದ ಕೆಲವು ಆಯುಧಗಳೂ ಬೆಳಕಿಗೆ ಬಂದಿವೆ. ಕಾಂಟೋ ಬಯಲಿನ ಗೊಂಬೆನ್ಯಾಮದಲ್ಲಿ ಕೈಕೊಡಲಿಗಳು ಮತ್ತು ದೊಡ್ಡ ಚಕ್ಕೆಗಳು ಸಿಕ್ಕಿವೆ. ಇವು ಪ್ರಾಯಶಃ ಮೇಲಿನ ಸಂಸ್ಕøತಿಗಳಿಗಿಂತ ಹಿಂದಿನ ಕಾಲದವಿರಬಹುದೆಂದು ಊಹಿಸಲಾಗಿದೆ. ಇವೆಲ್ಲ ಬೇಟೆಗಾರ ಜನಾಂಗಗಳು ಉಪಯೋಗಿಸುತ್ತಿದ್ದ ಆಯುಧಗಳು. ಹೆಚ್ಚಿನ ನೆಲೆಗಳು ನದಿ ಅಥವಾ ಸರೋವರಗಳ ಪಕ್ಕಗಳಲ್ಲಿ, ಇಳಿಜಾರು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಈ ಶಿಲಾಯುಧ ಸಂಸ್ಕøತಿಗಳು ಚೀನ ಭೂಭಾಗದಿಂದ ಜಪಾನ್ ಪ್ರದೇಶಕ್ಕೆ ಬಂದಿರಬೇಕೆಂದು ಊಹೆ. ಪ್ಲೀಸ್ಟೊಸೀನ್ ಅಂತ್ಯದಲ್ಲಿ ಹಿಮಗಾಲದಲ್ಲಿ ಸಮುದ್ರಮಟ್ಟ ಕೆಳಕ್ಕೆ ಇಳಿದಿದ್ದುದರಿಂದ, ಅಂದು ಚೀನ ಮತ್ತು ಜಪಾನ್ ದ್ವೀಪಗಳು ಭೂಸೇತುವೆಗಳಿಂದ ಒಂದುಗೂಡಿದ್ದುದರಿಂದ, ಆ ಕಾಲದಲ್ಲೇ ಚೀನೀ ಭೂಭಾಗದಿಂದ ಜಪಾನಿಗೆ ಜನ ವಲಸೆ ಬಂದಿರಬೇಕೆಂದು ಅನೇಕ ವಿದ್ವಾಂಸರು ತರ್ಕಿಸಿದ್ದಾರೆ. ಜಪಾನಿನಲ್ಲಿ ನೆಲೆ ಹೂಡಿದ್ದ ನವಶಿಲಾಯುಗ ಸಂಸ್ಕøತಿ ಕ್ರಿ.ಪೂ. 3-2ನೆಯ ಸಹಸ್ರಮಾನಗಳಲ್ಲಿ ಯಾವಾಗಲೋ ಪ್ರಾರಂಭವಾಯಿತು. ಈ ಸಂಸ್ಕøತಿಯ ಆದಿಘಟ್ಟವನ್ನು ಜೋಮೋನ್ ಎಂದು ಹೆಸರಿಸಲಾಗಿದೆ. ಈ ಘಟ್ಟದ ಕಾಲದ ವ್ಯಾಪ್ತಿ ಕ್ರಿ.ಪೂ. ಸು. 2500-250 ಇರಬಹುದು. ಈ ಘಟ್ಟದಲ್ಲಿ ವ್ಯವಸಾಯವಾಗಲಿ, ನಾಯಿಯ ವಿನಾ ಬೇರೆ ಪ್ರಾಣಿಗಳ ಸಾಕಣೆಯಾಗಲಿ ಇರಲಿಲ್ಲ. ಜನರು ಬೇಟೆಯಿಂದಲೂ ಮೀನು ಹಿಡಿದೂ ಜೀವನ ಸಾಗಿಸುತ್ತಿದ್ದರು. ನುಣುಪುಗೊಳಿಸಿದ ಆಯುಧಗಳು ಮತ್ತು ಮಡಕೆಗಳ ಉಪಯೋಗ ಪ್ರಾರಂಭವಾಗಿತ್ತು. ಮಡಕೆಗಳನ್ನು ಚಕ್ರದ ಉಪಯೋಗವಿಲ್ಲದೆ ಕೈಯಿಂದ ಮಾಡಿದ್ದರೂ ಹಗ್ಗದ ವಿನ್ಯಾಸದ ಉತ್ತಮ ಅಲಂಕರಣವನ್ನು ಅವುಗಳ ಮೇಲೆ ಮೂಡಿಸುವುದು ರೂಢಿಯಾಗಿತ್ತು. ಜನರು ಒಂದೇ ಕೋಣೆಯ ಮನೆಗಳಲ್ಲಿ ವಾಸಿಸುತ್ತಿದ್ದರು. ಇವು ನೆಲದಲ್ಲಿ ಅಗೆದು ಮಾಡಿದ ಗುಣಿಗಳು. ಗುಣಿಗಳ ಮಧ್ಯದಲ್ಲಿ ಒಂದು ಕಂಬ ನೆಟ್ಟು ಮೇಲೆ ಚಾವಣಿ ಹೊದಿಸುವ ಪದ್ಧತಿ ಇತ್ತು. ಈ ಸಂಸ್ಕøತಿಗೂ ಸಾಮ್ಯ ಇರುವುದರಿಂದ ಜಪಾನಿನ ಜೋಮೋನ್ ಸಂಸ್ಕøತಿ ಅತ್ತಣಿಂದ ಬಂದಿರಬಹುದೆಂದು ಊಹಿಸಲಾಗಿದೆ. ಯಯೋಇ ಎಂಬುದು ಇಲ್ಲಿಯ ನವಶಿಲಾಯುಗ ಸಂಸ್ಕøತಿಯ ಮುಂದಿನ ಘಟ್ಟ. ಈ ಸಂಸ್ಕøತಿಗೂ ಏಷ್ಯದ ಮುಖ್ಯ ಭೂಭಾಗದ ಬತ್ತ ಬೆಳೆಯುವ ಪ್ರದೇಶಗಳಲ್ಲಿದ್ದ ಸಂಸ್ಕøತಿಗಳಿಗೂ ಬಹಳ ಸಂಬಂಧ ಇರುವುದರಿಂದ ಮೊದಲಾಗಿ ಈ ಸಂಸ್ಕøತಿಯನ್ನು ತಂದ ಜನ ರೀಯೂಕ್ಯೂ ದ್ವೀಪಗಳು ಮತ್ತು ಕೊರಿಯದ ಕಡೆಯಿಂದ ಜಪಾನಿನ ಕೀಯೂಷೂ ಪ್ರದೇಶದಲ್ಲಿ ಬಂದು ನೆಲಸಿ ಅಲ್ಲಿಂದ ಬೇರೆಡೆಗೆ ಪಸರಿಸಿರಬೇಕೆಂದು ತಿಳಿಯಲಾಗಿದೆ. ಯಯೋಇ ಸಂಸ್ಕøತಿಯ ಕಾಲದಲ್ಲಿ ಜನರು ಚಕ್ರದ ಮೇಲೆ ಮಾಡಿದ ಮಡಕೆಗಳನ್ನು ಉಪಯೋಗಿಸುತ್ತಿದ್ದರು. ಬತ್ತದ ವ್ಯವಸಾಯದಿಂದ ಜನರ ಆರ್ಥಿಕ ಸ್ಥಿತಿ ಹಿಂದಿನ ಘಟ್ಟದ್ದಕ್ಕಿಂತ ಉತ್ತಮವಾಯಿತು. ಈ ಘಟ್ಟದ ಕೊನೆಯ ಭಾಗದಲ್ಲಿ ಏಷ್ಯದ ಉತ್ತರದ ನಾಡುಗಳಿಂದ ಕೊರಿಯದ ಮೂಲಕ ಹೊಸ ಜನರು ವಲಸೆ ಬಂದು ಈ ಸಂಸ್ಕøತಿಯಲ್ಲಿ ಹಲವು ಮಾರ್ಪಾಡುಗಳನ್ನು ಉಂಟು ಮಾಡಿದರು. ಅವರು ತಂದ ಹೊಸ ಅಂಶಗಳಲ್ಲಿ ಕಂಚಿನ ಉಪಯೋಗ ಮುಖ್ಯವಾದ್ದು. ಇದರ ಉಪಯೋಗ ಮೊದಲು ದಕ್ಷಿಣ ಜಪಾನಿನಲ್ಲಿ, ಅದರಲ್ಲೂ ಕೀಯೂಷೂ ಪ್ರದೇಶದಲ್ಲಿ ರೂಢಿಗೆ ಬಂದದ್ದರಿಂದ, ಅಲ್ಲಿಯವರು ಜಪಾನಿನ ಇತರೆಡೆಗಳಲ್ಲಿದ್ದ ಜನರಿಗಿಂತ ಹೆಚ್ಚು ಆರ್ಥಿಕ ಹಾಗೂ ಕ್ಷಾತ್ರಬಲ ಸಾಧಿಸಿಕೊಳ್ಳುವುದಕ್ಕೆ ಅವಕಾಶವಾಗಿ ಅಲ್ಲಿಯ ಸಂಸ್ಕøತಿ ಇತರ ಎಡೆಗಳಿಗೆ ಬೇಗ ಹರಡಲು ಕಾರಣವಾಯಿತು. ಜಪಾನಿನಲ್ಲಿ ಕಂಚಿನ ಯುಗ ಕ್ರಿ.ಪೂ. 2-3ನೆಯ ಶತಮಾನಗಳಲ್ಲಿ ಪ್ರಾರಂಭವಾಗಿ ಕ್ರಿ.ಶ. 2-3ನೆಯ ಶತಮಾನಗಳ ವರೆಗೂ ಮುಂದುವರಿಯಿತು. ಕ್ರಿ.ಶ. 2ನೆಯ ಶತಮಾನದ ಹೊತ್ತಿಗೆ ಕಬ್ಬಿಣದ ಆಯುಧಗಳನ್ನು ಉಪಯೋಗಿಸುತ್ತಿದ್ದ ಚೀನೀ ಸಂಸ್ಕøತಿ ಕೊರಿಯದಲ್ಲಿ ಪ್ರಚಲಿತವಾಗಿತ್ತು. 3ನೆಯ ಶತಮಾನದ ಹೊತ್ತಿಗೆ ಅದು ಜಪಾನಿಗೂ ಹರಿಯಿತು. ಜಪಾನಿನಲ್ಲಿ ಕಬ್ಬಿಣದ ಯುಗ ಆರಂಭವಾದ ಮೇಲೆ ಲಭ್ಯವಾದ ಹೊಸ ತಂತ್ರಜ್ಞಾನದಿಂದ ಸಾಮಾಜಿಕ ವ್ಯವಸ್ಥೆಯಲ್ಲೂ ಹಲವು ಬದಲಾವಣೆಗಳು ಆದುವು. 3ರಿಂದ 8ನೆಯ ಶತಮಾನದ ಅವಧಿಗೆ ಸೇರುವ ಹಲವಾರು ಬೃಹತ್ ಸಮಾಧಿಗಳು ಜಪಾನಿನ ಕರಾವಳಿ ಪ್ರದೇಶಗಳಲ್ಲಿ ಕಂಡುಬಂದಿವೆ. ಇವು ಆ ಕಾಲದ ಯೋಧಗಣಗಳ ಮುಖ್ಯರ ಸಮಾಧಿಗಳಿರಬೇಕೆಂದು ಊಹಿಸಲು ಆಧಾರಗಳಿವೆ. ಅಲ್ಲದೆ ಆ ಕಾಲದಲ್ಲಿ ಸಮಾಜ ಹಲವು ಅಂತಸ್ತುಗಳಾಗಿ ವಿಭಜಿತವಾಗಿತ್ತೆಂದೂ ತರ್ಕಿಸಬಹುದಾಗಿದೆ. ಆ ಕಾಲದ ಸಮಾಧಿಗಳು ಮಣ್ಣುಕಲ್ಲುಗಳಿಂದ ಮಾಡಿದವಾದರೂ ಕೆಲವು ಬಹು ದೊಡ್ಡವು. ನಿಂತೋಕು ರಾಜನದೆಂದು ಊಹಿಸಲಾಗಿರುವ ಒಂದು ಸಮಾಧಿ ಪ್ರಪಂಚದಲ್ಲೇ ಅತಿ ದೊಡ್ಡದು. ಇದನ್ನು ಕಟ್ಟಲು ಸುಮಾರು 5,000 ಜನ ಒಂದು ವರ್ಷ ಶ್ರಮಿಸಿರಬೇಕು. ಈ ಬೃಹತ್ ಸಮಾಧಿಗಳಲ್ಲಿ ಅನೇಕ ರೀತಿಯ ಆಯುಧಗಳು ಮತ್ತು ಆಭರಣಗಳನ್ನು ಮೃತನ ಜೊತೆಗೆ ಹೂಳಲಾಗುತ್ತಿತ್ತು. ಇಂಥ ವಸ್ತುಗಳ ಉಪಯೋಗ ಆ ಜನರ ಅನುಕೂಲ ಸ್ಥಿತಿಯನ್ನು ಸೂಚಿಸುತ್ತದೆ. ದುಡಿಮೆಯ ಬದಲು ಸುಲಭ ಆಕ್ರಮಣಗಳಿಂದ ಸಂಪತ್ತನ್ನು ಸಂಗ್ರಹಿಸುವವರು ಮಾತ್ರವೇ ಅದನ್ನು ಆ ರೀತಿ ವಿನಿಯೋಗ ಮಾಡಬಹುದು. ಈ ಕಾಲದ ಮಡಕೆಗಳು ಮತ್ತು ಆಯುಧಗಳು ಕೂಡ ಬಹಳ ಉತ್ತಮ ತಂತ್ರಗಳನ್ನು ಉಪಯೋಗಿಸಿ ತಯಾರಿಸಿದವು. ಮುಂದೆ ರಾಜಚಿಹ್ನೆಗಳಾಗಿ ಉಪಯೋಗಕ್ಕೆ ಬಂದ ಮಗತಮ ಎಂಬ ಬಾಗಿದ ಆಭರಣ, ಕತ್ತಿ ಹಾಗೂ ಕನ್ನಡಿಗಳು ಈ ಸಮಾಧಿಗಳಲ್ಲಿ ದೊರಕಿವೆ. ಅಲ್ಲದೆ ಒಳಭಾಗ ಟೊಳ್ಳಾಗಿರುವ ಹನೀವ ಎಂಬ ಮಣ್ಣಿನ ಬೊಂಬೆಗಳು ಈ ಸಮಾಧಿಗಳ ಜೊತೆಗೆ ಅಸಂಖ್ಯಾತವಾಗಿ ಸಿಗುತ್ತವೆ. ಈ ಹನೀವಗಳು ಯೋಧ, ಸ್ತ್ರೀ ಮತ್ತು ಕುದುರೆಗಳ, ಹಲವು ಬಾರಿ ಮನೆಗಳ, ಪ್ರತಿಕೃತಿಗಳು. 6ನೆಯ ಶತಮಾನದಲ್ಲಿ ಬೌದ್ಧ ಧರ್ಮ ಜಪಾನಿಗೆ ಬಂದ ಮೇಲೆ ಇಂಥ ಬೃಹತ್ ಸಮಾಧಿಗಳ ರಚನೆಯ ಪದ್ಧತಿ ನಿಂತುಹೋಯಿತು. ಅಲ್ಲದೆ ಅನತಿಕಾಲದಲ್ಲಿ ಬರವಣಿಗೆಯ ಕಲೆಯೂ ಚೀನದಿಂದ ಜಪಾನಿಗೆ ಹರಡಿದ್ದರಿಂದಲೂ ಅದರ ಜೊತೆಗೇ ಇತರ ಸಾಂಸ್ಕøತಿಕ ಪ್ರಭಾವಗಳೂ ತ್ವರಿತವಾಗಿ ಪಸರಿಸಿದ್ದರಿಂದಲೂ ಜಪಾನಿನಲ್ಲಿ ಹೊಸ ಸಾಂಸ್ಕøತಿಕ ಸಾಮಾಜಿಕ ವ್ಯವಸ್ಥೆ ರೂಪುಗೊಂಡು ಇತಿಹಾಸ ಕಾಲ ಪ್ರಾರಂಭವಾಯಿತು. ಇತಿಹಾಸ ಜಪಾನಿನ ಇತಿಹಾಸಕಾಲ ಯಾವಾಗ ಆರಂಭವಾಯಿತು ಎಂಬ ಬಗ್ಗೆ ನಿಖರವಾಗಿ ಹೇಳುವುದು ಕಷ್ಟ. ಕ್ರಿ.ಶ. 8ನೆಯ ಶತಮಾನದಿಂದೀಚಿನ ದೇಶೀಯ ಬರೆವಣಿಗೆಗಳ ಆಧಾರದ ಮೇಲೆ ಕೆಲವು ವಿಷಯಗಳು ತಿಳಿದುಬರುತ್ತವೆ. ಇಂಥ ಪ್ರಾಚೀನ ಗ್ರಂಥಗಳಲ್ಲಿ ಎರಡು ಬಹು ಮುಖ್ಯವಾದವು. ಒಂದು ಕ್ರಿ.ಶ. 712ರಲ್ಲಿ ರಚಿತವಾದ ಕೋಜಿಕಿ ಅಥವಾ ಪ್ರಾಚೀನ ವಿಚಾರಗಳ ದಫ್ತರ. 720ರಲ್ಲಿ ಬರೆಯಲಾದ ನಿಹೋನ್‍ಗಿ ಎಂಬುದು ಇನ್ನೊಂದು. ಈ ಗ್ರಂಥಗಳಲ್ಲಿ ಜಪಾನಿನಲ್ಲಿ ರಾಜಕೀಯ ಯುಗ ಹೇಗೆ ಪ್ರಾರಂಭವಾಯಿತೆಂಬುದನ್ನು ಕುರಿತ ಐತಿಹ್ಯಗಳು ಇವೆ. ಈ ಗ್ರಂಥಗಳ ಪ್ರಕಾರ ಕ್ರಿ.ಪೂ. 6ನೆಯ ಶತಮಾನಕ್ಕಿಂತ ಮೊದಲು ಅಮತ್ಯುರತೇರ ಕಾಮಿ ಎಂಬ ಸೂರ್ಯದೇವತೆ ಸ್ವರ್ಗಲೋಕದಿಂದ ಬಂದು ಜಪಾನ್ ದೇಶದಲ್ಲಿ ಮೊಟ್ಟಮೊದಲು ರಾಜ್ಯವೊಂದನ್ನು ಸ್ಥಾಪಿಸಿದಳೆಂದು ಗೊತ್ತಾಗುತ್ತದೆ. ಆಕೆಯ ಮೊಮ್ಮಗನಾದ ಜಿಮ್ಮು ಕ್ರಿ.ಪೂ. 660ರಲ್ಲಿ ರಾಜ್ಯ ಸೂತ್ರಗಳನ್ನು ಕೈಗೊಂಡು ಜಪಾನ್ ದೇಶದ ಮೊದಲನೆಯ ಚಕ್ರವರ್ತಿಯಾಗಿ ರಾಜ್ಯವಾಳಿದನೆಂದು ಈ ಗ್ರಂಥಗಳು ತಿಳಿಸುತ್ತವೆ. ಜಿಮ್ಮು ತನ್ನ ಅಜ್ಜಿಯಿಂದ ಒಂದು ಆಭರಣ, ಕತ್ತಿ ಮತ್ತು ಕನ್ನಡಿಯನ್ನು ತಂದ. ಈ ವಂಶಕ್ಕೆ ಸೇರಿದ ಚಕ್ರವರ್ತಿಗಳೇ ಅವ್ಯಾಹತವಾಗಿ ಜಪಾನನ್ನು ಆಳಿದರು. ಈ ಕಥೆಯ ಹಿಂದೆ ಐತಿಹಾಸಿಕ ಸತ್ಯವಿರಬಹುದೆಂದು ಊಹಿಸಿ ಆಧುನಿಕ ವಿದ್ವಾಂಸರು ಅದರ ಸಂಶೋಧನೆಗೆ ಶ್ರಮಿಸುತ್ತಿದ್ದಾರೆ. ಕ್ರಿ.ಶ. 8ನೆಯ ಶತಮಾನಕ್ಕೆ ಮುಂಚೆ ಈ ಐತಿಹ್ಯ ಈಗಿನ ರೂಪದಲ್ಲಿ ಬರೆಯಲ್ಪಟ್ಟಿರಲಿಲ್ಲ. ಚೀನೀಯರ ಸಂಪರ್ಕ ಪಡೆದ ಜಪಾನೀಯರು ತಮ್ಮ ರಾಜವಂಶವೂ ಚೀನದ ರಾಜವಂಶಕ್ಕೆ ಸಮಾನವಾದ್ದೆಂದು ಹೇಳಿಕೊಳ್ಳಲು ಈ ಮಾರ್ಗ ಹಿಡಿದಂತೆ ತೋರುತ್ತದೆ. ಈ ಐತಿಹ್ಯ ಈ ಶತಮಾನದ ಜಪಾನೀಯರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಅವರು ತಮ್ಮ ದೇಶದ ರಚನೆಯಲ್ಲಿ ದೈವಾಂಶದ ಪ್ರಭಾವವನ್ನು ದೃಢವಾಗಿ ನಂಬಿದ್ದಾರೆ. ಚಕ್ರವರ್ತಿ ಸೂರ್ಯದೇವತೆಯಿಂದ ನೇಮಕನಾದವನೂ ಆಕೆಯ ವಂಶಸ್ಥನೂ ಆದ್ದರಿಂದ ಆತ ದೈವಾಂಶ ಸಂಭೂತನೆಂದು ಸಮರ್ಥಿಸುತ್ತಾರೆ. ಮೊದಲನೆಯ ಚಕ್ರವರ್ತಿ ಜಿಮ್ಮುವಿಗೆ ತನ್ನ ಅಜ್ಜಿಯಿಂದ ದೊರಕಿತೆನ್ನಲಾದ ಆಭರಣವೂ ಖಡ್ಗವೂ ಕನ್ನಡಿಯೂ ಜಪಾನೀಯರ ರಾಜಚಿಹ್ನೆಗಳು. ಕ್ರಿ.ಪೂ. 660ರಿಂದ ಕ್ರಿ.ಶ. 531ರ ವರೆಗಿನ ಕಾಲವನ್ನು ಸಾಂಪ್ರದಾಯಿಕ ಕಾಲವೆಂದು ಕರೆಯಬಹುದು. ಈ ಕಾಲದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಜಪಾನೀಯರ ಪ್ರಾಚೀನ ಗ್ರಂಥಗಳಾದ ಕೋಜಿಕಿ ಮತ್ತು ನಿಹೋನ್‍ಗಿ ಸಹಾಯಮಾಡುತ್ತವೆ. ತಾವು ಯಮಟೋ ಕುಲದವರೆಂದು ಜಪಾನೀಯರ ಹೆಮ್ಮೆ. ಯಮಟೋ ಜನಾಂಗ ದೇಶದಲ್ಲಿ ಶಾಂತವಾಗಿ ನೆಲಸಿದ ಮೇಲೆ ರಾಜಕೀಯ ವ್ಯವಸ್ಥೆ ಪ್ರಾರಂಭವಾಯಿತು. ಅರಸು ಮನೆತನಗಳು ಆದಿವಾಸಿ ಮನೆತನಗಳೆಂದೂ ಮಿಕ್ಕೆಲ್ಲ ಜನರ ಮನೆತನಗಳು ಅವುಗಳ ಕವಲುಗಳೆಂದೂ ಆಗಿನ ಜನರ ನಂಬಿಕೆಯಾಗಿತ್ತು. ಅದರಂತೆ ರಾಜನೇ ಸರ್ವಕ್ಕೂ ಒಡೆಯನೆಂದು ತಿಳಿದು, ಜನ ಅವನ ವಶಕ್ಕೆ ರಾಜ್ಯವನ್ನು ಒಪ್ಪಿಸಿ ತಾವು ಆತನ ಅಪ್ಪಣೆಯಂತೆ ನಡೆದುಕೊಳ್ಳುತ್ತಿದ್ದರು. ಇಚುಮೋ ಮತ್ತು ಯಮಟೋಗಳು ಜಪಾನೀಯರ ಸಾಂಸ್ಕøತಿಕ ಕೇಂದ್ರಗಳಾಗಿದ್ದುವು. ಭೌದ್ಧ ಧರ್ಮ ಜಪಾನಿನ ರಾಷ್ಟ್ರಧರ್ಮವೆಂದು ಅಧಿಕೃತವಾಗಿ ಘೋಷಿತವಾಯಿತು. 604ರಲ್ಲಿ ಜಪಾನಿನ ಇತಿಹಾಸದಲ್ಲೆ ಮೊದಲ ಬಾರಿಗೆ ಸಂವಿಧಾನದ ರಚನೆಯಾಯಿತು. 646ರಲ್ಲಿ ಚಕ್ರವರ್ತಿ ಕೊತುಕು ಚೀನದ ಟ್ಯಾಂಗ್ ಆಡಳಿತದಂತೆ ಹೊಸರೀತಿಯ ಆಡಳಿತವನ್ನು ವ್ಯವಸ್ಥೆಗೊಳಿಸಿದ. ಎಂಟನೆಯ ಶತಮಾದಿಂದೀಚಿನ ಜಪಾನೀಯರ ಇತಿಹಾಸವನ್ನು ಈ ರೀತಿ ಸ್ಥೂಲವಾಗಿ ವಿಭಾಗಿಸಬಹುದು ; 1 ನಾರಾ ಕಾಲ (710-784), 2 ಹೀಯಾನ್ ಕಾಲ (484-1185), 3 ಕಾಮಾಕುರಾ ಕಾಲ (1185-1336), 4 ಆಷಿಕಾಗ ಕಾಲ (1336-1603), 5 ಟೋಕುಗಾವಾ ಕಾಲ (1603-1868), 6 ಆಧುನಿಕ ಕಾಲ (1868ರಿಂದ ಈಚೆಗೆ). ನಾರಾ ಕಾಲ (710-784) ನಾರಾ ಎಂಬುದನ್ನು ಖಾಯಂ ರಾಜಧಾನಿಯಾಗಿ ಮಾಡಿಕೊಂಡು ಆಳಿದ ಜಪಾನೀ ಚಕ್ರವರ್ತಿಗಳ ಕಾಲ ಇದು. ಎಂಟನೆಯ ಶತಮಾನಕ್ಕೆ ಹಿಂದೆ ಜಪಾನಿನಲ್ಲಿ ಒಂದು ಖಾಯಂ ರಾಜಧಾನಿ ಇರಲಿಲ್ಲ. ರಾಜನ ಆಸ್ಥಾನ ಊರಿಂದೂರಿಗೆ ಚಲಿಸುತ್ತಿತ್ತು. ಸರ್ಕಾರ ಸಂಕೀರ್ಣವಾದಾಗ ಒಂದುs ಸ್ಥಿರ ರಾಜಧಾನಿಯ ಅಗತ್ಯವಾಯಿತು. ಅದಕ್ಕಾಗಿ ಆಯ್ಕೆಯಾದ್ದು ನಾರಾ. ಆದ್ದರಿಂದ ಆಗಿನ ಕಾಲಕ್ಕೆ ನಾರಾ ಕಾಲವೆಂದೇ ಹೆಸರಾಗಿದೆ. ಜಪಾನಿನ ಇತಿಹಾಸದಲ್ಲಿ ಈ ಕಾಲ ಮಹತ್ತ್ವಪೂರ್ಣವಾದ್ದು. ಜಪಾನೀಯರ ಧರ್ಮ, ಕಲೆ, ಸಾಹಿತ್ಯ. ಜನಜೀವನಗಳು ಚೀನದ ಸಂಸ್ಕøತಿಯಿಂದ ಪ್ರಭಾವಗೊಂಡು ಬೆಳೆದುವು. ಈ ಕಾಲದಲ್ಲಿದ್ದ ಸೋಕೋಕು ಎಂಬ ಚಕ್ರವರ್ತಿ ಬೌದ್ಧಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ, ಅದು ದೇಶದಲ್ಲೆಲ್ಲ ಹರಡಲು ಕಾರಣವಾಗಿ, ಜಪಾನಿನ ಅಶೋಕ ಚಕ್ರವರ್ತಿ ಎಂಬ ಕೀರ್ತಿ ಪಡೆದ. ಅಶೋಕನಂತೆ ಇವನೂ ಬೌದ್ಧಧರ್ಮದ ಪ್ರಚಾರದ ಜೊತೆಗೆ ದೇಶದಲ್ಲೆಲ್ಲ ಪ್ರಜೆಗಳ ಸೌಕರ್ಯಕ್ಕಾಗಿ ಛತ್ರಗಳನ್ನೂ ಔಷಧಾಲಯಗಳನ್ನೂ ಕಟ್ಟಿಸಿದ. ಚೀನದಿಂದ ಶಿಲ್ಪಿಗಳನ್ನು ಕರೆಸಿಕೊಂಡು ಅನೇಕ ಬೌದ್ಧ ದೇವಾಲಯಗಳನ್ನು ನಿರ್ಮಿಸಿದ. ರಾಜಧಾನಿ ನಾರಾದಲ್ಲಿ ಇಂದಿಗೂ ಆ ಭವ್ಯ ವೈಭವವನ್ನು ಪ್ರತಿನಿಧಿಸುವ ಐತಿಹಾಸಿಕ ಸ್ಮಾರಕಗಳಿವೆ. ಜಪಾನಿನಲ್ಲಿ ಇಂದಿಗೂ ಪ್ರಸಿದ್ಧವಾಗಿರುವ ತೋದೈಜಿ, ಯಾಕುಕ್ಷೀಜೀ, ಹೊರ್ಯೂಜಿ ಮೊದಲಾದ ಬೌದ್ಧ ದೇವಾಲಯಗಳು ಆ ಕಾಲದಲ್ಲಿ ನಿರ್ಮಿತವಾದುವು. ಬೌದ್ಧಧರ್ಮ ರಾಷ್ಟ್ರದ ಸೊತ್ತೆಂದು ಘೋಷಿಸಲಾಯಿತು. ಆ ಧರ್ಮ ರಾಷ್ಟ್ರದ ಕಾನೂನಿನ ರಚನೆಯ ಮೇಲೆ ಪ್ರಭಾವ ಬೀರಿತು. ಪ್ರಖ್ಯಾತ ವ್ಯಕ್ತಿ ಸತ್ತಾಗ ಅವನ ಅನುಯಾಯಿಗಳು ಆತ್ಮಾರ್ಪಣೆ ಮಾಡಿಕೊಳ್ಳುವ ಪ್ರಾಚೀನ ಸಂಪ್ರದಾಯವನ್ನು ನಿಷೇಧಿಸಲಾಯಿತು. ಅಂತೆಯೇ ಅಪರಾಧಿಗಳಿಗೆ ಕೆಲವೊಂದು ಸಂದರ್ಭಗಳಲ್ಲಿ ವಿಶೇಷ ಕ್ಷಮೆ ನೀಡುವುದನ್ನು ಜಾರಿಗೆ ತರಲಾಯಿತು. ಇದಲ್ಲದೆ ವಿಶೇಷ ದಿವಸಗಳಲ್ಲಿ ಬೌದ್ಧಧರ್ಮದ ಮಠಾಧಿಪತಿಗಳು ರಾಜಕೀಯದಲ್ಲೂ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದರು. ಆ ಕಾಲದಲ್ಲಿ ಸಾಹಿತ್ಯದ ನಿರ್ಮಾಣ ಆಯಿತು. ಪ್ರಾಚೀನ ಗ್ರಂಥಗಳೆಂದು ಪರಿಗಣಿಸಲ್ಪಟ್ಟಿರುವ ಹಾಗೂ ಐತಿಹಾಸಿಕ ಸಂಗತಿಗಳನ್ನು ಒಳಗೊಂಡಿರುವ ಕೋಜಿಕಿ ಮತ್ತು ನಿಹೋನ್‍ಗಿಗಳು ರಚಿಸಲ್ಪಟ್ಟುವು. ಮಾನ್ಯೋಷೂ ಎಂಬುದು ಈ ಕಾಲದ ಪ್ರಮುಖ ಸಾಹಿತ್ಯ ಗ್ರಂಥ. ಜಪಾನೀಯರು ಕಾವ್ಯದಲ್ಲಿ ಪ್ರಣಯ ಮತ್ತು ಪ್ರಕೃತಿವರ್ಣನೆಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಿದಂತೆ ಕಾಣುತ್ತದೆ. ಈ ಕಾಲದ ರಾಜಕೀಯ ಜೀವನದಲ್ಲಿ ಚಕ್ರವರ್ತಿಗಳಿಗಿಂತ ಪಾಳೆಯಗಾರರ ಪ್ರಭಾವವೇ ಹೆಚ್ಚಾಗಿತ್ತು. ನಾಲ್ಕು ಜನ ಚಕ್ರವರ್ತಿನಿಯರು ಆಳ್ವಿಕೆ ನಡೆಸಿದ್ದು ಈ ಕಾಲದ ಮತ್ತೊಂದು ವಿಶೇಷ. ಸೋಕೋಕು ವಂಶೀಯರ ಆಳ್ವಿಕೆಯ ಅನಂತರ ಕಮ್ಮು ಎಂಬವನು ಪಟ್ಟಕ್ಕೆ ಬಂದು 784ರಲ್ಲಿ ಹೊಸ ಯುಗವೊಂದನ್ನು ಪ್ರಾರಂಭಿಸಿದ. ಹೀಯಾನ್ ಕಾಲ (784-1185) ಈ ಅವಧಿಯಲ್ಲಿ ಜಪಾನಿನ ರಾಜಧಾನಿಯನ್ನು ನಾರಾ ಪಟ್ಟಣದಿಂದ ಹೊಸದಾಗಿ ನಿರ್ಮಿತವಾದ ಕೀಯೋಟೋಗೆ ವರ್ಗಾಯಿಸಲಾಯಿತು. ನಾರಾ ಪಟ್ಟಣದ ಬೌದ್ಧಧರ್ಮೀಯ ಮುಖಂಡರ ವಿಶೇಷ ರಾಜಕೀಯ ಪ್ರಭಾವಗಳಿಂದ ಬಿಡುಗಡೆ ಪಡೆಯುವುದೂ ಸಂಪರ್ಕದ ದೃಷ್ಟಿಯಿಂದ ಕೀಯೋಟೋ ಉತ್ತಮವಾಗಿದ್ದುದೂ ಈ ಬದಲಾವಣೆಗೆ ಕಾರಣಗಳು. ಚಕ್ರವರ್ತಿ ಕಮ್ಮು (781-806) ಈ ಪಟ್ಟಣದ ನಿರ್ಮಾಪಕ. ಚೀನೀಯರ ಪ್ರಭಾವ ಇಲ್ಲೂ ಎದ್ದುಕಾಣುತ್ತಿತ್ತು. 1867ರ ವರೆಗೆ ಈ ಪಟ್ಟಣ ಜಪಾನೀ ಚಕ್ರವರ್ತಿಗಳ ಕೇಂದ್ರವಾಗಿ ಮುಂದುವರಿಯಿತು. ಜಪಾನ್ ದೇಶದ ಪ್ರಾಚೀನ ಕಲಾಕೌಶಲಗಳಿಗೆ ತವರುಮನೆಯಾಗಿ ಕೀಯೋಟೋ ನಗರ ಇಂದಿಗೂ ಮೆರೆಯುತ್ತಿದೆ. ಹೀಯಾನ್ ಕಾಲದಲ್ಲಿ ಕಾನಾ ವರ್ಣಮಾಲೆ ಪ್ರಚಾರಕ್ಕೆ ಬಂತು. ಇದರಿಂದ ಸಾಹಿತ್ಯದ ಬೆಳವಣಿಗೆಯಾಯಿತು. ಪುರುಷರು ಹೆಚ್ಚಾಗಿ ಯುದ್ಧಕಾರ್ಯಗಳಲ್ಲಿ ನಿರತರಾದ್ದರಿಂದಲೋ ಏನೋ, ಆ ಕಾಲದ ಸಾಹಿತ್ಯ ನಿರ್ಮಾಣ ಆಸ್ಥಾನದ ಪ್ರತಿಭಾವಂತ ಸ್ತ್ರೀಯರಿಗೆ ಸೀಮಿತವಾಯಿತು. ಆಗಿನ ಜಪಾನೀ ಸ್ತ್ರೀಯರು ರಚಿಸಿದ ಗದ್ಯಗ್ರಂಥಗಳು ಜಪಾನೀ ಭಾಷೆಯ ಪ್ರಾಚೀನ ಗದ್ಯಶೈಲಿಯ ಮಾದರಿಗಳಾಗಿವೆ. ಮುರಾಸಾಕಿ ಷಿಕಿಬು ಎಂಬವನು ರಚಿಸಿದ ಗೆಂಜಿ ಮನೊಗತಾರಿ ಅಥವಾ ಗೆಂಜಿಯ ಕತೆಗಳು ಎಂಬ ಗ್ರಂಥ ವಿಶ್ವಸಾಹಿತ್ಯದ ಅಗ್ರಕೃತಿಗಳ ಪಂಕ್ತಿಗೆ ಸೇರುತ್ತದೆ. ಮುರಾಸಾಕಿ ದಿನಚರಿಯೊಂದನ್ನೂ ಬರೆದ. ಸೆಯಿ ಷೊನಗನ್ ಎಂಬವಳು ಮಕೂರ-ನೋ-ಸೋಷಿ ಎಂಬ ದಿನಚರಿ ಬರೆದಿದ್ದಾಳೆ. ಕೊಂಕಿನ್‍ಷೂ ಎಂಬ ಪದ್ಯಸಂಕಲನವೂ ಈ ಕಾಲಕ್ಕೆ ಸೇರಿದ್ದು. ಈ ಗ್ರಂಥದಲ್ಲಿ ಪ್ರಣಯ ಮತ್ತು ಪ್ರಕೃತಿ ವರ್ಣನೆಗಳು ಹೆಚ್ಚಾಗಿ ಬಂದಿವೆ. ರಾಷ್ಟ್ರದ ಆಡಳಿತದಲ್ಲಿ ಚಕ್ರವರ್ತಿಗಿಂತ ಪಾಳೆಯಗಾರರ ಮನೆತನಗಳು ಹೆಚ್ಚು ಪ್ರಭಾವಶಾಲಿಗಳಾಗಿದ್ದುವು. ಪ್ರಾಚೀನ ಕಾಲದಲ್ಲಿ ಸಾಮೂಹಿಕ ಅನುಭವದಲ್ಲಿದ್ದ ಜಮೀನುಗಳು ಈ ಕಾಲದಲ್ಲಿ ಖಾಸಗಿ ಜಮೀನುಗಳಾಗಿ ಪರಿವರ್ತನೆಗೊಂಡುವು. ಈ ಬದಲಾವಣೆಯನ್ನು ಚಕ್ರವರ್ತಿಗಳು ವಿರೋಧಿಸಿದರೂ ಪ್ರಯೋಜನವಾಗಲಿಲ್ಲ. ಕೆಲವು ವರ್ಷಗಳೊಳಗಾಗಿ ಹಲವು ಪ್ರಬಲ ಪಾಳೆಯಗಾರ ಮನೆತನಗಳು ತಲೆಯೆತ್ತಿದವು. ಹೆಚ್ಚು ಬಲಿಷ್ಠವಾದ ಫುಜಿವಾರ ಮನೆತನ ರಾಜ್ಯಸೂತ್ರಗಳನ್ನು ವಹಿಸಿಕೊಂಡು ಚಕ್ರವರ್ತಿಯನ್ನು ಉತ್ಸವಮೂರ್ತಿಯನ್ನಾಗಿ ಮಾಡಿತು. ಫುಜಿವಾರ ಮನೆತನ ಜಪಾನಿಗೆ ಶ್ರೇಷ್ಠ ಆಡಳಿತಗಾರರನ್ನೂ ಪಂಡಿತರನ್ನೂ ಕೊಟ್ಟಿತು. ಈ ಮನೆತನದವರು ಅಶಕ್ತರಾದ ತರುವಾಯ ಟಾಯಿರಾ (1160-85) ಮತ್ತು ಮಿನಾಮೊಮೊ (1185-1219) ಮನೆತನಗಳು ಅಧಿಕಾರಕ್ಕಾಗಿ ಹೋರಾಟ ನಡೆಸಿದ್ದವು. 1185ರಲ್ಲಿ ಮಿನಾಮೊಟೊ ಮನೆತನದವರು ಟಾಯಿರಾ ಮನೆತನದವರನ್ನು ಹತ್ತಿಕ್ಕಿ ಪ್ರಾಬಲ್ಯಕ್ಕೆ ಬಂದು, ಕಾಮಾಕುರಾ ಪಟ್ಟಣದಲ್ಲಿ ಆಳ್ವಿಕೆ ಪ್ರಾರಂಭಿಸಿದರು. ಕಾಮಾಕುರಾ ಕಾಲ (1185-1336) ಇದನ್ನು ಸಾಮುರೈ ಕಾಲವೆಂದು ಕರೆಯುವುದುಂಟು. ಸಾಮುರೈ ಎಂದರೆ ಕ್ಷತ್ರಿಯರು, ಯುದ್ಧ ಶೌರ್ಯ ಸಾಹಸ ಪ್ರದರ್ಶನಗಳಲ್ಲೇ ನಿರತರಾದ-ಅದಕ್ಕಾಗಿ ಶಿಕ್ಷಣ ಪಡೆದ-ಪ್ರಾಣವನ್ನು ಮೀಸಲಾಗಿಟ್ಟ-ಜನರು. ಮಿನಾಮೊಟೊ ಮನೆತನದ ಯೊರಿಟೊಮೊ ಎಂಬ ಪಾಳೆಯಗಾರ ಇತರ ಸಣ್ಣಪುಟ್ಟ ಪಾಳೆಯಗಾರರನ್ನು ಜಯಿಸಿ, ಚಕ್ರವರ್ತಿಗಳ ರಾಜಧಾನಿಯಾದ ಕೀಯೋಟೋ ಪಟ್ಟಣಕ್ಕೆ 300 ಮೈ. ದೂರದಲ್ಲಿ ಕಾಮಾಕುರಾ ಪಟ್ಟಣವನ್ನು ಕಟ್ಟಿಕೊಂಡು ರಾಜ್ಯವಾಳತೊಡಗಿದ (1192-98). 1192ರಲ್ಲಿ ಜಪಾನಿನ ಚಕ್ರವರ್ತಿ ಈತನಿಗೆ ಸೆಯಿ ತೈಷೋಗುನ್ ಅಥವಾ ಮುಖ್ಯ ಸೇನಾಪತಿ ಎಂಬ ಬಿರುದನ್ನಿತ್ತ. ಈತನ ಕೈಯಲ್ಲೇ ರಾಜ್ಯದ ಆಡಳಿತ ಸೂತ್ರಗಳೆಲ್ಲ ಇದ್ದುವು. ಚಕ್ರವರ್ತಿ ಹೆಸರಿಗೆ ಮಾತ್ರ ಆಡಳಿತದ ಮುಖ್ಯಸ್ಥ. ಅವವನ್ನು ದೇವಾಂಶ ಸಂಭೂತನೆಂದು ಪೂಜಿಸುತ್ತಿದ್ದದ್ದುಂಟು. ಮಿನಾಮೊಟೊ ಮನೆತನದ ಈ ಪಾಳೆಯಗಾರ ಹೆಚ್ಚಿನಮಟ್ಟಿಗೆ ಸರಳ ಜೀವನ ನಡೆಸುತ್ತ ರಾಜ್ಯಕ್ಕೆ ಹೆಚ್ಚು ಸಹಾಯ ಮಾಡುತ್ತಿದ್ದ. ಇವನ ವಂಶೀಯರಿಗೂ ಇವನ ಗುಣಗಳೇ ಇದ್ದುವು. ರಾಜ್ಯದ ಭದ್ರತೆಗಾಗಿ ಯೊರಿಟೊಮೊ ಸೈನಿಕರನ್ನೆಲ್ಲ ಒಟ್ಟುಗೂಡಿಸಿ, ಅವರಿಗೆ ಕ್ಷಾತ್ರಧರ್ಮವನ್ನು ಬೋಧಿಸಿದ. ಪ್ರತಿಯೊಬ್ಬ ಯೋಧನೂ ಪ್ರಮಾಣಿಕನಾಗಿರಬೇಕು; ಸರಳ ಜೀವನ ನಡೆಸಬೇಕು; ಅಬಲರಿಗೆ, ಅಶಕ್ತರಿಗೆ ನೆರವಾಗಬೇಕು. ಸಮಯ ಬಂದಾಗ ದೇಶಕ್ಕಾಗಿಯೂ, ಚಕ್ರವರ್ತಿಗಳಿಗಾಗಿಯೂ ಪ್ರಾಣವನ್ನು ಧಾರೆಯೆರೆಯಲು ಸಿದ್ಧನಿರಬೇಕು ಎಂದು ಉಪದೇಶಿಸಿದ. ಮೇಲ್ಕಂಡ ಸೂತ್ರಗಳನ್ನೊಳಗೊಂಡ ಬೂಷೀಡೋ ಸಂಪ್ರದಾಯ ಇತ್ತೀಚಿನವರೆಗೂ ಪ್ರಖ್ಯಾತವಾಗಿತ್ತು. ಯೊರಿಟೊಮೊ ಮರಣಹೊಂದಿದ ಮೇಲೆ, ಷೋಗುನ್‍ಗೆ (ಸೇನಾಪತಿ, ಸರ್ವಾಧಿಕಾರಿ) ಅಧೀನರಾಗಿದ್ದ, ಸೇವಕರಾಗಿದ್ದ ಹೋಜೋಗಳ ಮನೆತನ ಪ್ರಾಬಲ್ಯಕ್ಕೆ ಬಂತು. ಚೀನೀ ಚಕ್ರವರ್ತಿಯಾಗಿದ್ದ ಕೂಬ್ಲೈಖಾನ್ ಜಪಾನು ತನಗೆ ಕಪ್ಪಕಾಣಿಕೆ ಕೊಟ್ಟು ಆಶ್ರಿತ ಸಂಸ್ಥಾನವಾಗಿರಬೇಕೆಂದೂ ಇಲ್ಲದಿದ್ದರೆ ಅದರ ಮೇಲೆ ದಂಡೆತ್ತಿ ಬರುವುದಾಗಿಯೂ ಜಪಾನಿನ ಪಾಳೆಯಗಾರನಿಗೆ ಪತ್ರ ಬರೆದ. ಜಪಾನೀಯರು ಇದಕ್ಕೆ ಒಪ್ಪಲಿಲ್ಲ. 1280-81ರಲ್ಲಿ ಅವನು ಜಪಾನಿನ ಮೇಲೆ ದಾಳಿಮಾಡಲು ನೌಕಾಪಡೆಯೊಂದನ್ನು ಕಳುಹಿಸಿಕೊಟ್ಟ. ಹೋಜೋಗಳು ವೀರಾವೇಶದಿಂದ ಹೋರಾಡಿ, ನೌಕಾಪಡೆಯನ್ನು ನಾಶಮಾಡಿ, ದೇಶವನ್ನು ದಾಳಿಯಿಂದ ರಕ್ಷಿಸಿದರು. ಈ ಘಟನೆ ನಡೆದ ಸ್ವಲ್ಪ ಕಾಲದಲ್ಲೇ ಹೋಜೋ ಮನೆತನ ಅವನತಿ ಹೊಂದಿತು. ಚಕ್ರವರ್ತಿ ಗೊ-ದೈಗೊ (ಇಮ್ಮಡಿ ದೈಗೊ) ಹೋಜೋಗಳ ವಿರುದ್ಧ ಸಂಚು ನಡೆಸಿ ವಿಫಲನಾಗಿ ಸಿಂಹಾಸನ ಕಳೆದುಕೊಂಡು ಸೆರೆ ಸಿಕ್ಕಿ ದೇಶಭ್ರಷ್ಟನಾದ (1333); ಮತ್ತೆ ಬಂದು ಆಡಳಿತ ನಡಸಿದ; ಮತ್ತೆ ಓಡಿಸಲ್ಪಟ್ಟ. ಆಷಿಕಾಗ ಸರ್ವಾಧಿಕಾರಿ ಮನೆತನ ಪ್ರಬಲವಾಯಿತು. ರಾಜಮನೆತನದ ಮತ್ತೊಂದು ಕುಡಿಯ ವ್ಯಕ್ತಿಯೊಬ್ಬನನ್ನು ಸಿಂಹಾಸನಕ್ಕೆ ತರಲಾಯಿತು. ಕಾಮಾಕುರಾ ಕಾಲದಲ್ಲಿ ಬೌದ್ಧ ಭಿಕ್ಷುಗಳು ಹಳ್ಳಿಹಳ್ಳಿಗೂ ಹೋಗಿ ಧರ್ಮಪ್ರಸಾರ ಮಾಡಿದರು. ಜೆóನ್ ಬೌದ್ಧಪಂಥವೇ ಮೊದಲಾದವು ಈ ಕಾಲದಲ್ಲಿ ಉಗಮವಾದುವು. ಸ್ತ್ರೀಯರ ಶಿಕ್ಷಣದಲ್ಲಿ ಬಟ್ಟೆ ಹೊಲಿಯುವ, ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವ ವಿಷಯಗಳು ಸೇರಿದ್ದುವು. ಚೀನದ ಸೂಂಗ್ ಮತ್ತು ಟಾಂಗ್ ಅರಸರ ಕಾಲದ ಕಲೆ ಕಾಮಾಕುರಾ ಕಾಲದ ಕಲೆಯ ಮೇಲೆ ವಿಶಿಷ್ಟ ಪ್ರಭಾವ ಉಂಟುಮಾಡಿತು. ಸು. 1252ರಲ್ಲಿ ಕಾಮಾಕುರಾ ಪಟ್ಟಣದಲ್ಲಿ 35 ಎತ್ತರದ ಹಿತ್ತಾಳೆಯ ಬುದ್ಧವಿಗ್ರಹವನ್ನು ಎರಕ ಹೊಯ್ಯಲಾಯಿತು. ಈ ಮೂರ್ತಿ ಬಹು ಸುಂದರವಾಗಿದ್ದು, ಜಪಾನೀಯರ ಕಲೆಗೆ ಒಂದು ಉತ್ತಮ ಸಾಕ್ಷಿಯಾಗಿ ಇಂದಿಗೂ ಕಾಮಾಕುರಾದಲ್ಲಿ ನಿಂತಿದೆ. ಕಾಮಾಕುರಾ ಕಾಲದಲ್ಲಿ ಚಿಕ್ಕಪುಟ್ಟ ಕೈಗಾರಿಕೆಗಳಲ್ಲಿ ದೇಶ ಪ್ರಸಿದ್ಧಿ ಪಡೆಯಿತು. ಬಟ್ಟೆ ನೇಯುವುದು, ಕುಂಭ ಕಲೆ, ಮರದ ಮತ್ತು ಕಾಗದ ತಯಾರಿಕೆ ಸುಧಾರಿಸಲ್ಪಟ್ಟುವು. ದೇಶದಲ್ಲಿ ರಸ್ತೆಗಳು ನಿರ್ಮಾಣವಾದುವು. ವ್ಯಾಪಾರ ವೃದ್ಧಿಯಾಯಿತು. ಕಾಮಾಕುರಾ ಕಾಲ ಪ್ರಧಾನವಾಗಿ ವೀರಯುಗ. ಇದನ್ನೇ ಈ ಕಾಲದ ಸಾಹಿತ್ಯದಲ್ಲೂ ಹೆಚ್ಚಾಗಿ ನೋಡಬಹುದು. ಹೀಯಾನ್ ಕಾಲದ ಸಾಹಿತ್ಯದಲ್ಲಿ ಶೃಂಗಾರ, ಪ್ರಕೃತಿ ವರ್ಣನೆಗಳಿಗೆ ಪ್ರಾಧಾನ್ಯವಿದ್ದರೆ, ಈ ಕಾಲದ ಸಾಹಿತ್ಯದಲ್ಲಿ ರಣಕಾಳಗಗಳ ವರ್ಣನೆಗೆ ಹೆಚ್ಚಿನ ಸ್ಥಾನ ಕೊಟ್ಟಂತೆ ಕಾಣುತ್ತದೆ. ಹೀಗೆ ಮನೋಗತಾರಿ (ಟಾಯಿರಾ ವಂಶದ ಕಥೆ) ಎಂಬುದು ಈ ಕಾಲದ ಪ್ರಖ್ಯಾತ ಗ್ರಂಥ. ಆಷಿಕಾಗ ಕಾಲ (1336-1603) ಹದಿನಾಲ್ಕನೆಯ ಶತಮಾನದ ಮೊದಲ ಭಾಗದಲ್ಲಿ ಟಾಕಾವುಜಿ ಆಷಿಕಾಗನೆಂಬ ಪಾಳೆಯಗಾರ ಕಾಮಾಕುರಾದ ಪಾಳೆಯಗಾರನನ್ನು ಸೋಲಿಸಿ, ತನ್ನ ಆಡಳಿತವನ್ನು ಹಳೆಯ ರಾಜಧಾನಿಯಾದ ಕೀಯೋಟೋದಲ್ಲಿ ಸ್ಥಾಪಿಸಿದ. ಇವನ ಮನೆತನದ ಆಡಳಿತ ಆ ನಗರದ ಮುರೊಮಾಚಿ ಎಂಬ ಬೀದಿಯಲ್ಲಿದ್ದ ಕಚೇರಿಯಲ್ಲಿ ನಡೆಯುತ್ತಿದ್ದುದರಿಂದ, ಈ ಮನೆತನದ ಆಳ್ವಿಕೆಯ ಕಾಲವನ್ನು ಮುರೊಮಾಚಿ ಕಾಲವೆಂದೂ ಕರೆಯುವುದುಂಟು. ಟಾಕಾವುಜಿ ಆಷಿಕಾಗನ ಕಾಲದಲ್ಲಿ ಚೀನ ಮತ್ತು ಕೊರಿಯಗಳಿಗೆ ಜಪಾನಿನಿಂದ ರಾಯಭಾರಿಗಳನ್ನು ಕಳುಹಿಸಲಾಗಿತ್ತು. ಇದರಿಂದ ಆ ದೇಶಗಳೊಡನೆ ಜಪಾನಿನ ವ್ಯಾಪಾರ ಸಂಬಂಧ ಉತ್ತಮಗೊಂಡಿತು. ಇದರಿಂದ ಆ ದೇಶಗಳೊಡನೆ ಜಪಾನಿನ ವ್ಯಾಪಾರ ಸಂಬಂಧ ಉತ್ತಮಗೊಂಡಿತು. ಈ ಕಾಲದಲ್ಲಿ ಸಾಮುರೈ ವ್ಯವಸ್ಥೆ ವೃದ್ಧಿಗೊಂಡಿತು. ಆಷಿಕಾಗನ ಉತ್ತರಾಧಿಕಾರಿಗಳು ಕಲೆಗಳ ಬೆಳವಣಿಗೆಯಲ್ಲಿ ಆಸಕ್ತರಾಗಿದ್ದಾಗ ಅಧಿಕಾರಕ್ಕಾಗಿ ಜಪಾನಿನ ಪ್ರಬಲ ಪಾಳೆಯಗಾರ ಮನೆತನಗಳಲ್ಲಿ ಕಲಹಗಳು ಜರುಗುತ್ತಿದ್ದವು. ಒಂದು ಶತಮಾನದಷ್ಟು ಕಾಲ ದೇಶದಲ್ಲಿ ಅನಾಯಕತ್ವ ಉಂಟಾಯಿತು. ದೇಶದ ಏಕತೆಯನ್ನು ಸಾಧಿಸಲು ಟಾಯಿರಾ ಮನೆತನದ ಒಡಾ ನೊಬುನಾಗಾ ಎಂಬವನು ಪ್ರಯತ್ನಿಸಿದ. ಇತರ ಪಾಳೆಯಗಾರರನ್ನು ಅಡಗಿಸಿ, ಬೌದ್ಧರ ಪ್ರಭಾವವನ್ನು ತಗ್ಗಿಸಿದ. ಆದರೆ ಅತೃಪ್ತ ಸೇನಾಧಿಕಾರಿಯೊಬ್ಬನಿಂದ ಕೊಲೆಮಾಡಲ್ಪಟ್ಟ. ಅವನ ಸೇನಾನಿಯಾಗಿದ್ದ ಹಿದಯೋಷಿ ಎಂಬವನು ಟೋಕುಗಾವಾ ಆಯಯಾಸು ಎಂಬ ಮತ್ತೊಬ್ಬ ಸಾಮುರೈ ಸಹಾಯದಿಂದ 1590ರಲ್ಲಿ ದೇಶವನ್ನೆಲ್ಲ ಗೆದ್ದು ತನ್ನ ಹತೋಟಿಗೆ ತಂದುಕೊಂಡ. ಹಿದಯೋಷಿಯ ಮರಣಾನಂತರ ಟೋಕುಗಾವಾ ಆಯಯಾಸು ಅನೇಕ ಪಾಳೆಯಗಾರರನ್ನು ಸೋಲಿಸಿ ಇಡೀ ದೇಶದ ಸರ್ವಾಧಿಕಾರಿ (ಷೋಗುನ್) ಆದ. ಹಳೆಯ ರಾಜಧಾನಿಯಾದ ಕೀಯೋಟೋಗೆ 350 ಮೈ.ಗಳ ದೂರದಲ್ಲಿ ಯೇದೋ ಎಂಬ ಹೊಸ ಪಟ್ಟಣ ಕಟ್ಟಿ, 1603ರಿಂದ ಅಲ್ಲಿ ರಾಜ್ಯ ಆಳಲಾರಂಭಿಸಿದ. ಅವನ ಆಳ್ವಿಕೆಯಿಂದ ಟೋಕುಗಾವಾ ಕಾಲ ಪ್ರಾರಂಭವಾಯಿತು. ಆಷಿಕಾಗ ಕಾಲದಲ್ಲಿ ಜಪಾನು ಪಾಶ್ಚಾತ್ಯ ದೇಶಗಳೊಡನೆ ಸಂಪರ್ಕ ಪಡೆಯಿತು. ಪೋರ್ಚುಗೀಸರು 1542ರಲ್ಲಿ ವ್ಯಾಪಾರದ ಸಲುವಾಗಿ ಜಪಾನಿಗೆ ಬಂದರು. ಅವರ ಅನಂತರ ಸ್ಪ್ಯಾನಿಷರು ಮತ್ತು ಡಚ್ಚರು ಬಂದರು. ಐರೋಪ್ಯರೊಡನೆ ಕ್ರೈಸ್ತ ಮತ ಜಪಾನಿನೊಳಗೆ ಕಾಲಿಟ್ಟಿತು. 1549ರಲ್ಲಿ ಕ್ರೈಸ್ತ ಪಾದ್ರಿ ಫ್ರಾನ್ಸಿಸ್ ಜೇóವಿಯರ್ ಜಪಾನಿಗೆ ಬಂದು ಆ ಧರ್ಮದ ಪ್ರಚಾರಕಾರ್ಯದಲ್ಲಿ ಉದ್ಯುಕ್ತನಾದ. ಈತ ಜಪಾನಿಗೆ ಬರುವ ಮುನ್ನ ಗೋವದಲ್ಲಿ ಭಾರತೀಯರನ್ನು ಕ್ರೈಸ್ತಧರ್ಮಕ್ಕೆ ಪರಿವರ್ತಿಸಿದ್ದ. ಕೇವಲ ಮೂವತ್ತು ವರ್ಷಗಳ ಪ್ರಚಾರದಿಂದ ದಕ್ಷಿಣ ಜಪಾನಿನಲ್ಲಿ 15 ಲಕ್ಷ ಜನ ಕ್ರೈಸ್ತಧರ್ಮಾವಲಂಬಿಗಳಾದರು. ನೂರಾರು ಚರ್ಚುಗಳು ನಿರ್ಮಾಣವಾದುವು. ಟೋಕುಗಾವಾ ಕಾಲ (1603-1868) ಟೋಕುಗಾವಾ ಆಡಳಿತ ಮನೆತನಕ್ಕೆ ಆಯಯಾಸು ಆದಿಪುರಷ. ಈತನ ರಾಜಧಾನಿ ಯೇದೋ. ಜಪಾನಿನಲ್ಲಿ ಸುಭದ್ರವಾದ ಆಡಳಿತಕ್ಕೆ ತಕ್ಕ ಬುನಾದಿಯನ್ನು ಹಾಕಿದ ಕೀರ್ತಿ ಇವನದು. ದೇಶದ ಸಾಗುವಳಿ ಭೂಮಿ ಇವನ ನಲವತ್ತು ಸ್ನೇಹಿತರ ಕೈಯಲ್ಲಿತ್ತು. ಆಯಯಾಸುವಿನ ಸರ್ವಾಧಿಕಾರದಲ್ಲಿ ವಿಶಿಷ್ಟ ಊಳಿಗಮಾನ್ಯ ಪಾಳೆಯಗಾರ ಆಡಳಿತ ಸ್ಥಾಪಿತವಾಯಿತು. ಇವನ ವಂಶದವರು ಸುಮಾರು 250 ವರ್ಷಗಳ ಕಾಲ ಆಡಳಿತ ನಡೆಸಿದರು. ಟೋಕುಗಾವಾ ವಂಶದವರು ಜಪಾನಿನ ಚಕ್ರವರ್ತಿಗಳನ್ನು ಗಣನೆಗೆ ತಾರದೆ, ತಮ್ಮಲ್ಲೆ ಅಧಿಕಾರವನ್ನೆಲ್ಲ ಕೇಂದ್ರೀಕರಿಸಿಕೊಂಡಿದ್ದರು. ಈ ಕಾಲದಲ್ಲಿ ಚಕ್ರವರ್ತಿಗಳು ಹಳೆಯ ರಾಜಧಾನಿ ಕೀಯೋಟೋದಲ್ಲಿ ನಿರ್ಬಂಧದ ಜೀವನ ನಡೆಸುತ್ತಿದ್ದರು. ಚಕ್ರವರ್ತಿಗಳು ದೇವಾಂಶಸಂಭೂತರೆಂದು ಪರಿಗಣಿಸಲ್ಪಟ್ಟಿದ್ದರೂ ಅವರಿಗೆ ಯಾವ ವಿಧವಾದ ಅಧಿಕಾರವೂ ಇರಲಿಲ್ಲ. ಟೋಕುಗಾವಾ ಸರ್ವಾಧಿಕಾರಿಗಳ ಆದಾಯ ಚಕ್ರವರ್ತಿಗಳ ಆದಾಯಕ್ಕಿಂತ 80ರಷ್ಟು ಹೆಚ್ಚಾಗಿತ್ತು. ಆಯಯಾಸು ತನ್ನ ವಂಶದವರ ಪ್ರಭುತ್ವದ ಭದ್ರತೆಗಾಗಿ ಹದಿಮೂರು ಸೂತ್ರಗಳನ್ನು ರಚಿಸಿದ. ಅವು ಕ್ಷತ್ರಿಯ ಶಾಸನ ಎಂಬುದಾಗಿ ಪ್ರಸಿದ್ಧವಾದುವು. ಜನರನ್ನು ವ್ಯವಸ್ಥೆಯಲ್ಲಿಡುವುದಕ್ಕಾಗಿ ಸರ್ವಾಧಿಕಾರಿ ಆಯಯಾಸು ಅವರನ್ನು ಷಿ, ನೋ, ಕೊ, ಷೋ ಎಂಬ ನಾಲ್ಕು ಪಂಗಡಗಳಾಗಿ ವರ್ಗೀಕರಿಸಿದ. ಕ್ಷತ್ರಿಯ, ವ್ಯವಸಾಯಗಾರ, ಕೈಗಾರಿಕೋದ್ಯಮಿ ಮತ್ತು ವ್ಯಾಪಾರಿ ಎಂಬವೇ ಅವು. ರಾಜ್ಯವನ್ನು ರಕ್ಷಿಸುವ ಜನರಿಗೆ ಅವನ ದೃಷ್ಟಿಯಲ್ಲಿ ಪ್ರಥಮಸ್ಥಾನ. ವ್ಯವಸಾಯದ ಮೂಲಕ ದೇಶಕ್ಕೆ ಸಹಾಯಮಾಡುವ ರೈತರಿಗೆ ಎರಡನೆಯ ಸ್ಥಾನ. ಆಯುಧ ಮುಂತಾದ ಯುದ್ಧಸಲಕರಣೆಗಳನ್ನು ಒದಗಿಸಿ ಕೊಡುವ ಕೈಗಾರಿಕಾ ಕುಶಲಕರ್ಮಿಗಳಿಗೆ ಮೂರನೆಯ ಸ್ಥಾನ. ದೇಶಕ್ಕೆ ಈ ಬಗೆಯ ಯಾವ ಪ್ರಯೋಜನವೂ ಇಲ್ಲದೇ, ಕೇವಲ ತಮ್ಮ ವ್ಯಾಪಾರದಲ್ಲಿ ನಿರತರಾಗಿರುವ ವ್ಯಾಪಾರಸ್ಥರದು ಸಮಾಜದಲ್ಲಿ ಕಡೆಯ ಸ್ಥಾನ. ಟೋಕುಗಾವಾ ಸರ್ವಾಧಿಕಾರಿಗಳು ಐರೋಪ್ಯರ ವಿರುದ್ಧ ಕಠಿಣತರ ಕ್ರಮ ಕೈಗೊಂಡರು. ವ್ಯಾಪಾರಮಾಡಲು ಬಂದ ಪಾಶ್ಚಾತ್ಯರು ತಮ್ಮ ದೇಶವನ್ನೇ ವಶಮಾಡಿಕೊಳ್ಳುವರೆಂಬ ಭಯದಿಂದ ಸರ್ವಾಧಿಕಾರಿಗಳು 1624ರಲ್ಲಿ ಸ್ಪ್ಯಾನಿಷರನ್ನು ಮತ್ತು 1638ರಲ್ಲಿ ಪೋರ್ಚುಗೀಸರನ್ನು ಜಪಾನಿನಿಂದ ಓಡಿಸಿದರು. ಕ್ರೈಸ್ತ. ಧರ್ಮಾವಲಂಬಿಗಳನ್ನು ಸಾಮೂಹಿಕವಾಗಿ ಕೊಲ್ಲಲಾಯಿತು. ಡಚ್ಚರು ಮಾತ್ರ ಈ ಕಠಿಣತರವಾದ ನಿಷೇಧಾಜ್ಞೆಗಳ ನಡುವೆಯೂ ಸ್ವಲ್ಪ ವ್ಯಾಪಾರ ನಡೆಸುತ್ತಿದ್ದರು. ಜಪಾನೀಯರು ದೇಶ ಬಿಟ್ಟು ಹೋಗದಂತೆ ಆಜ್ಞೆ ಹೊರಡಿಸಲಾಯಿತು. ಒಟ್ಟಿನಲ್ಲಿ 1954ರ ವರೆಗೆ ಜಪಾನ್ ಪರದೇಶಗಳ ಸಂಪರ್ಕದಿಂದ ಹೊರಗಿದ್ದು ತನ್ನದೇ ಆದ ರೀತಿಯಲ್ಲಿ ಮುಂದುವರಿಯುತ್ತಿತ್ತು. ಟೋಕುಗಾವಾ ಮನೆತನದ ಆಡಳಿತದ ಕಾಲದ ಕೊನೆಯಲ್ಲಿ ರಾಜ್ಯದ ಬಿಗಿ ತಪ್ಪಿತು. ಎಷ್ಟೋ ಪಾಳೆಯಗಾರರು ಹೆಚ್ಚುಹೆಚ್ಚಿನ ಅಧಿಕಾರ ಪಡೆಯಲು ಹವಣಿಸತೊಡಗಿದರು. ಆರ್ಥಿಕ ದುಃಸ್ಥಿತಿಯಿಂದಾಗಿ ಕ್ಷತ್ರಿಯರು ಹಣದಾಸೆಗಾಗಿ ತಮ್ಮ ಮಾನವನ್ನು ಮಾರಿಕೊಳ್ಳಲು ಸಿದ್ಧರಾದರು. ಎರಡು ಕತ್ತಿಗಳನ್ನು ಸೊಂಟದಲ್ಲಿ ಧರಿಸುವುದು ಮೇಲಾದ ಮಾನವೆಂದೆನಿಸುತ್ತಿದ್ದುದರಿಂದ ರೈತರೂ ವ್ಯಾಪಾರಸ್ಥರೂ ಕ್ಷತ್ರಿಯರಿಗೆ ಬೇಕಾದಷ್ಟು ಹಣ ಕೊಟ್ಟು ಅವನ್ನು ಕೊಂಡು ಧರಿಸತೊಡಗಿದರು. ಕೆಲವು ಕ್ಷತ್ರಿಯರು ಧನದ ದಾಹದಿಂದ ವ್ಯಾಪಾರಸ್ಥರ ಕನ್ಯೆಯರನ್ನು ಮದುವೆಯಾಗತೊಡಗಿದರು. ಕ್ಷತ್ರಿಯರನ್ನು ಅಳಿಯಂದಿರನ್ನಾಗಿ ಮಾಡಿಕೊಳ್ಳುವುದರಿಂದ ಸಮಾಜದಲ್ಲಿ ತಾವು ಮೇಲಿನ ಮೆಟ್ಟಿಲನ್ನೇರುವೆವೆಂಬ ಭಾವನೆ ವ್ಯಾಪಾರಸ್ಥರಲ್ಲಿ ಬೆಳೆಯಲಾರಂಭಿಸಿತು. ಆದ್ದರಿಂದಲೇ ಬೇಡಿದಷ್ಟು ವರದಕ್ಷಿಣೆ ಕೊಡಲು ಅವರು ಸಿದ್ಧರಾದರು. ಪಾಳೆಯಗಾರರು ಕೂಡ ಸರ್ವಾಧಿಕಾರಿಯ ಕಿರುಕುಳಕ್ಕೆ ಸಿಕ್ಕಿಬಿದ್ದು, ತಕ್ಕಷ್ಟು ಹಣವನ್ನು ಗಳಿಸಿಕೊಳ್ಳದೆ ತಮ್ಮ ದರ್ಪವನ್ನುಳಿಸಿಕೊಳ್ಳುವುದು ಅಸಾಧ್ಯವೆಂದು ವ್ಯಾಪಾರಸ್ಥರಿಂದ ಸಾಲ ಪಡೆಯತೊಡಗಿದರು. ಸಾಲದ ಹಂಗಿನಿಂದಾಗಿ ಅವರು ವ್ಯಾಪಾರಸ್ಥರಿಗೆ ಹೆಚ್ಚಿನ ಮಾನ ಕೊಡಬೇಕಾಯಿತು. ಹೀಗಾಗಿ 1940ರ ವೇಳೆಗೆ ಕೆಲವು ವ್ಯಾಪಾರಸ್ಥರು ಹಣದ ಬಲದಿಂದ ಪಾಳೆಯಗಾರರ ದರ್ಪಕ್ಕೆ ಕುಂದು ತಂದರು ಮತ್ತು ಹಣದ ಆಸೆಗಾಗಿ ಎಷ್ಟೋ ಕ್ಷತ್ರಿಯರು ಸಾಹುಕಾರರ ಊಳಿಗದಲ್ಲಿ ಸೇರಿಕೊಂಡು ಅವರ ರಾಜಕೀಯ ಪ್ರಭಾವ ಹೆಚ್ಚಿಸಿದರು. ಈ ಬಗೆಯ ಬದಲಾವಣೆಗಳು ಸಮಾಜದಲ್ಲಿ ಭರದಿಂದ ಸಾಗಿಬರುತ್ತಿದ್ದರೂ ಅವನ್ನು ತಡೆಯದಷ್ಟು ಮಟ್ಟಿಗೆ ಸರ್ವಾಧಿಕಾರಿ ಬಲಹೀನನಾಗಿದ್ದ. ಈ ರೀತಿ ಸರ್ವಾಧಿಕಾರಿಯ ಹಿರಿಯರು ವಿರಚಿಸಿದ ಸಮಾಜದ ಕಟ್ಟು ಆರ್ಥಿಕ ದುಃಸ್ಥಿತಿಯಿಂದ ಕಳಚಿ ಸಡಿಲವಾಯಿತು. ವ್ಯವಸಾಯಗಾರರು ಶಕ್ತಿಮೀರಿ ಕಂದಾಯ ಸಲ್ಲಿಸುತ್ತಿದ್ದರು. ಆದರೆ ಸರ್ವಾಧಿಕಾರಿಯ ದುಂದುಗಾರಿಕೆಯ ವೆಚ್ಚವನ್ನು ಇದೂ ಪೂರೈಸದಾಯಿತು. ಮಿತಿಮೀರಿದ ಕಂದಾಯ ತೆರಲಾರದೆ ಎಷ್ಟೋ ರೈತರು ಸರ್ಕಾರದ ವಿರುದ್ಧ ಬಂಡು ಹೂಡಿದರು. ಇಂಥ ಅಶಾಂತ ವಾತಾವರಣದಲ್ಲಿ ಜಪಾನ್ ಮುಳುಗಿದ್ದಾಗ, ಪಾಶ್ಚಾತ್ಯರು ಜಪಾನಿನೊಡನೆ ಸಂಪರ್ಕ ಬೆಳೆಸಲು ಬಂದರು. ಇವರ ಆಗಮನದಿಂದ ದೇಶದಲ್ಲಿ ಒಂದು ರಾಜಕೀಯ ಆಂದೋಳನ ಸಂಭವಿಸಿತು. ಜಪಾನನ್ನು ಮೊದಲು ಪ್ರವೇಶಿಸಿದ ದೇಶ ಅಮೆರಿಕ. ಚೀನದೊಡನೆ ವ್ಯಾಪಾರ ಮಾಡುತ್ತಿದ್ದ ಅಮೆರಿಕಕ್ಕೆ ಜಪಾನಿನಲ್ಲಿ ತಂಗಲು ಹಾಗೂ ವ್ಯಾಪಾರ ಮಾಡಲು ಯೋಗ್ಯ ಬಂದರಿನ ಆವಶ್ಯಕತೆಯಿತ್ತು. 1853ರಲ್ಲಿ ಅಮೆರಿಕದ ನೌಕಾಧಿಕಾರಿ ಕಮೋಡೋ ಪೆರಿ ಎಂಬಾತ ಅಧ್ಯಕ್ಷ ಫಿಲ್ಮೋರನಿಂದ ಪತ್ರವೊಂದನ್ನು ತಂದು, ಟೋಕಿಯೋ ಬಳಿ ತನ್ನ ಬಲಪ್ರದರ್ಶನ ನಡೆಸಿ, ವ್ಯಾಪಾರಕ್ಕೆಂದು ದೇಶದ ಬಾಗಿಲುಗಳನ್ನು ತÉಗೆಯಬೇಕೆಂದು ಟೋಕುಗಾವಾ ಸರ್ವಾಧಿಕಾರಿಗೆ ಬೆದರಿಕೆ ಹಾಕಿದ. ಈ ಬಗ್ಗೆ ಯೋಚನೆ ಮಾಡಲು ಜಪಾನ್ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ಕೊಟ್ಟು, ಮರುವರ್ಷ (1954) ಪೆರಿ ಹೆಚ್ಚಿನ ಬಲದೊಡನೆ ಜಪಾನಿಗೆ ಬಂದ. ಸರ್ವಾಧಿಕಾರಿ ಅವನೊಡನೆ ಒಪ್ಪಂದ ಮಾಡಿಕೊಂಡು, ಎರಡು ಬಂದರುಗಳನ್ನು ವ್ಯಾಪಾರಕ್ಕಾಗಿ ತೆರೆದಿಟ್ಟ. ಆ ದೇಶದ ಪ್ರತಿನಿಧಿ ಜಪಾನಿನಲ್ಲಿರಲು ಅನುಮತಿ ಕೊಟ್ಟ. ಅಮೆರಿಕದಂತೆ ಇಂಗ್ಲೆಂಡ್, ಫ್ರಾನ್ಸ್, ರಷ್ಯ ಮತ್ತು ಹಾಲೆಂಡ್ ದೇಶಗಳೂ ವ್ಯಾಪಾರ ಸೌಲಭ್ಯಗಳನ್ನು ಪಡೆದುಕೊಂಡುವು. ಪರಕೀಯರೊಡನೆ ಮಾಡಿಕೊಂಡ ಈ ಒಪ್ಪಂದಿಂದ ಸರ್ವಾಧಿಕಾರಿ ತನ್ನ ಸ್ಥಾನಕ್ಕೆ ತಾನೇ ಚ್ಯುತಿ ತಂದುಕೊಂಡಂತಾಯಿತು. ಹೆಚ್ಚಿನ ಪಾಳೆಯಗಾರರು ಮತ್ತು ಅವರ ಅನುಯಾಯಿಗಳಾದ ಸಾಮುರೈಗಳು ವಿದೇಶೀಯರಿಗೆ ಜಪಾನಿನಲ್ಲಿ ಸೌಲಭ್ಯಗಳನ್ನು ಕೊಟ್ಟ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಇದರ ಜೊತೆಗೆ ಚಕ್ರವರ್ತಿ ತನ್ನ ಅಸಮಾಧಾನ ತೋರಿಸಿದ. ಹೀಗಾಗಿ, ಸರ್ವಾಧಿಕಾರಿ ಉಭಯ ಸಂಕಟಕ್ಕೆ ಸಿಕ್ಕಿಬಿದ್ದ. ತಮ್ಮ ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆತರುವ ಸರ್ವಾಧಿಕಾರಿಯ ಈ ಕ್ರಮದಿಂದ ಅಸಮಾಧಾನಗೊಂಡ ಕೆಲವು ಪಾಳೆಯಗಾರರು ಚಕ್ರವರ್ತಿಯತ್ತ ತಿರುಗಿ, ಅವನು ಸರ್ವಾಧಿಕಾರಿಯನ್ನು ವಿರೋಧಿಸುವಂತೆ ಮಾಡಿದರು. 1957-1863ರಲ್ಲಿ ಪರಕೀಯರ ಬಗ್ಗೆ ಸಾರ್ವಜನಿಕರ ದ್ವೇಷ ಹೆಚ್ಚಿತು. ಅನೇಕ ಕಡೆ ಪರಕೀಯರ ಮೇಲೆ ಹಲ್ಲೆಗಳು ನಡೆದುವು. ಮತ್ತೆ ಕೆಲವರು ಇಂಥ ಕೃತ್ಯಗಳು ಉಪಯೋಗವಿಲ್ಲವೆಂದೂ ವಿದೇಶೀಯರು ಪ್ರಬಲರಾಗಿರುವುದರಿಂದ ಅವರನ್ನು ಜಪಾನಿನಿಂದ ಓಡಿಸುವ ಬದಲು ಬೇರೆ ರೀತಿಯ ನೀತಿ ಅನುಸರಿಸುವುದು ಉತ್ತಮವೆಂದೂ ಚಕ್ರವರ್ತಿಗೆ ಸಲಹೆ ಮಾಡಿದರು. ಒಟ್ಟಿನಲ್ಲಿ ಈ ವಿಷಯದ ಬಗ್ಗೆ ದೇಶದಲ್ಲಿ ಎರಡು ಪಕ್ಷಗಳು ಏರ್ಪಟ್ಟುವು. ಅಶಕ್ತನಾದ ಷೋಗುನ್ ತನ್ನ ಅಧಿಕಾರವನ್ನೆಲ್ಲ ಚಕ್ರವರ್ತಿಗೇ ಬಿಟ್ಟುಕೊಟ್ಟ. 1868ರಲ್ಲಿ ಚಕ್ರವರ್ತಿಯ ಪುನರಾಗಮನವಾಯಿತು. ಅವನನ್ನು ಕೀಯೋಟೋ ನಗರದಿಂದ ಟೋಕಿಯೋಗೆ ಬರಮಾಡಿಕೊಂಡು ಅಧಿಕಾರದಲ್ಲಿ ಕುಳ್ಳಿರಿಸಲಾಯಿತು. ಹೀಗೆ 250 ವರ್ಷಗಳ ಕಾಲ ಆಡಳಿತ ನಡೆಸಿದ ಟೋಕುಗಾವಾ ಮನೆತನದ ಕಾಲ ಕೊನೆಗೊಂಡಿತು. ಆಧುನಿಕ ಕಾಲ (1868 ರಿಂದ ಈಚೆಗೆ) ಜಪಾನಿನ ಆಧುನಿಕ ಇತಿಹಾಸ ಮೇಜಿ ಕಾಲದಿಂದ ಪ್ರಾರಂಭವಾಗುತ್ತದೆ. ಮೇಜಿ ಎಂದರೆ ಪ್ರಗತಿಶೀಲ ಪ್ರಭುತ್ವ. 1868ರಲ್ಲಿ ಮುಟ್ಸುಹಿಟೊ ಎಂಬ ಹೆಸರಿನ 15 ವರ್ಷದ ಬಾಲಕ ಚಕ್ರವರ್ತಿಯಾಗಿ ಸಿಂಹಾಸನವನ್ನೇರಿದ. ಇವನ ರಾಜ್ಯಭಾರದ ಕಾಲವನ್ನು (1868-1912) ಮೇಜಿ ಆಳ್ವಿಕೆಯ ಕಾಲವೆಂದು ಕರೆಯಲಾಗಿದೆ. ಇದು ಬಹಳ ಮಹತ್ತ್ವಪೂರ್ಣವಾದ್ದು. ಈ ಕಾಲದಲ್ಲಿ ಅನೇಕ ಮೂಲಭೂತ ಬದಲಾವಣೆಗಳು ಸಂಭವಿಸಿದವು. ಪಾಶ್ಚಾತ್ಯ ಸಂಸ್ಕøತಿ ತನ್ನ ಪ್ರಭಾವವನ್ನು ಎಲ್ಲ ಕ್ಷೇತ್ರಗಳ ಮೇಲೂ ಬೀರಿತು. ಪ್ರಗತಿಪರ ಮಾರ್ಗದಲ್ಲಿ ಜಪಾನು ಸಾಗಿದ ಕಾಲವಿದು. ಮೇಜಿ ಸುಧಾರಣೆಗಳು ಊಳಿಗಮಾನ್ಯ ಪದ್ಧತಿಯನ್ನು ಕೊನೆಗೊಳಿಸಿ, ಹೊಸ ರೀತಿಯಲ್ಲಿ ಕೇಂದ್ರಸರ್ಕಾರವನ್ನು ರಚಿಸಲಾಯಿತು. ಪಾಳೆಯಗಾರರು ತಮ್ಮ ತಮ್ಮ ಹಕ್ಕುಬಾಧ್ಯತೆಗಳು, ಅಂತಸ್ತು, ಐಶ್ಚರ್ಯಗಳನ್ನು ಚಕ್ರವರ್ತಿಗೆ ಒಪ್ಪಿಸಿದರು. ದೇಶದ ಎಲ್ಲ ಭೂಮಿ ಮತ್ತು ಜನಗಳಿಗೆ ಚಕ್ರವರ್ತಿಯೆ ಒಡೆಯನೆಂದು ಘೋಷಿಸಲಾಯಿತು. 1871ರಲ್ಲಿ ಅಧಿಕೃತವಾಗಿ ಊಳಿಗಮಾನ್ಯ ಪದ್ಧತಿ ಕೊನೆಗೊಂಡಿತು. ಪಾಳೆಯಗಾರರಿಗೂ ಅವರ ಅನುಯಾಯಿಗಳಾದ ಸಾಮುರೈಗಳಿಗೂ, ಭೂಮಿಯಿಂದ ಬರುವ ಬತ್ತವೇ ಮುಖ್ಯವಾದ ಆದಾಯವಾಗಿತ್ತು. ಆ ಆದಾಯವನ್ನು ಈಗ ಸರ್ಕಾರ ತನ್ನ ವಶಮಾಡಿಕೊಂಡು, ಅವರು ಗಳಿಸುತ್ತಿದ್ದ ಉತ್ಪತ್ತಿಗೆ ಅನುಗುಣವಾಗಿ ಅವರಿಗೆ ಸಾಲಪತ್ರಗಳನ್ನು ಪರಿಹಾರವಾಗಿ ಕೊಟ್ಟಿತು. ಯೂರೋಪಿನ ವಿಜ್ಞಾನ, ತಂತ್ರಜ್ಞಾನ ಮತ್ತು ಕೈಗಾರಿಕಾ ಪದ್ಧತಿಯನ್ನು ಅಭ್ಯಾಸಮಾಡಲು ಸರ್ಕಾರ ಅನೇಕ ನಿಯೋಗಗಳನ್ನು ಕಳುಹಿಸಿಕೊಟ್ಟಿತು. ಸೇನೆಯಲ್ಲೂ ನೌಕಾಬಲದಲ್ಲೂ ಸೇವೆ ಕಡ್ಡಾಯವೆಂದು ಘೋಷಿಸಲಾಯಿತು. ಭೂಮಿಯ ಬೆಲೆಗೆ ಅನುಗುಣವಾಗಿ ಕಂದಾಯ ನಿಷ್ಕರ್ಷೆ, ರಾಷ್ಟ್ರಕ್ಕೆ ಒಂದೇ ನಾಣ್ಯಪದ್ಧತಿ, ರಸ್ತೆ, ರೈಲು, ಅಂಚೆ, ತಂತಿ, ಸಾರ್ವಜನಿಕ ಸೌಕರ್ಯಗಳ ಏರ್ಪಾಟು, ಎಲ್ಲರಿಗೂ ಕಡ್ಡಾಯ ಶಿಕ್ಷಣ ಮೊದಲಾದವು ಜಾರಿಗೆ ಬಂದುವು. ದೇಶದ ಸೈನ್ಯಬಲ ಹಾಗೂ ನೌಕಾಬಲಗಳನ್ನು ಹೆಚ್ಚಿಸಲು ಅನುಕೂಲವಾಗುವ ಭಾರಿ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಇಂಥ ಕೈಗಾರಿಕೆಗಳಲ್ಲಿ ಕೆಲವನ್ನು ಸರ್ಕಾರವೂ ಸಹಾಯದ ಮೇಲೆ ಖಾಸಗಿ ಸಂಸ್ಥೆಗಳೂ ಸ್ಥಾಪಿಸಿದವು. ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳು ಕೆಲವರ ಕೈಯಲ್ಲಿದ್ದುವು. ಉದಾಹರಣೆಗೆ ದಂಡನಾಯಕ ರಾಜಕುಮಾರ ಆರಿತೊಮೊ ಯಾಮಾಗಾಟಾ ಮೊದಲು ಯುದ್ಧಮಂತ್ರಿಯಾಗಿದ್ದು ಸೇನೆಯನ್ನು ವ್ಯವಸ್ಥೆಗೊಳಿಸಿ, ಅನಂತರ ಆಂತರಿಕ ವ್ಯವಹಾರ ಸಚಿವ ಹಾಗೂ ಪ್ರಧಾನ ಮಂತ್ರಿ (1889-1891; 1898) ಆದ. ಹಾಗೆಯೇ ರಾಜಕುಮಾರ ಹಿರೊಬುಮಿ ಇಟೊ ಮೊದಲು ಹಣಕಾಸು ಮತ್ತು ಮರಾಮತ್ ಶಾಖೆಗಳಲ್ಲಿದ್ದು, ಅನಂತರ ಸಂವಿಧಾನದ ರಚನೆಯಲ್ಲಿ ಭಾಗವಹಿಸಿ, 1886-1901ರ ಅವಧಿಯಲ್ಲಿ ನಾಲ್ಕು ಬಾರಿ ಪ್ರಧಾನಮಂತ್ರಿಯಾಗಿದ್ದ. ಮೇಜಿ ಕಾಲದಲ್ಲಿ ಹೊಸ ಸಂವಿಧಾನವನ್ನು ಸಿದ್ಧಪಡಿಸಲಾಯಿತು. ಜರ್ಮನಿಯಲ್ಲಿ ಅಸ್ತಿತ್ವದಲ್ಲಿದ್ದ ಸಂವಿಧಾನ ಜಪಾನಿಗೆ ಮಾದರಿಯಾಗಿತ್ತು. 1889ರ ಫೆಬ್ರುವರಿ 11ರಂದು ಈ ಸಂವಿಧಾನವನ್ನು ಜಾರಿಗೆ ತರಲಾಯಿತು. ಈ ಸಂವಿಧಾನ 1947ರ ವರೆಗೂ ಅಸ್ತಿತ್ವದಲ್ಲಿತ್ತು. ಇದರ ಪ್ರಕಾರ, ಚಕ್ರವರ್ತಿಯೇ ನಿಜವಾದ ಸರ್ಕಾರ. ಸೇನಾ ಮುಖಂಡರ ನೀತಿಗೆ ಮಂತ್ರಿಮಂಡಲದಿಂದ ವಿರೋಧ ಬಂದಾಗ ಅವರು ನೇರವಾಗಿ ಚಕ್ರವರ್ತಿಯ ಬಳಿ ಹೋಗಲು ಅವಕಾಶವಿತ್ತು. ಸಂಸತ್ತಿನ ಕೆಳಮನೆಯಲ್ಲಿ ಹೆಚ್ಚಿನ ಜನಬೆಂಬಲ ಪಡೆದ ಪಕ್ಷದಿಂದಲೇ ಪ್ರಧಾನಿಯನ್ನು ಆರಿಸಬೇಕೆಂದು ಕೇಳುವ ಹಕ್ಕು ರಾಜಕೀಯ ಪಕ್ಷಗಳಿಗೆ ಇರಲಿಲ್ಲ. ಏಕೆಂದರೆ ಸಂಸತ್ತಿಗೆ ಈ ಸಂವಿಧಾನದ ಪ್ರಕಾರ ಬಜೆಟ್ಟಿಗೆ ಸಂಬಂಧಿಸಿದ ವಿಷಯಗಳಲ್ಲಿ ಅಧಿಕಾರವಿರಲಿಲ್ಲ. ವ್ಯಕ್ತಿಸ್ವಾತಂತ್ರ್ಯಕ್ಕೆ ಅನೇಕ ಪ್ರತಿಬಂಧಕಗಳಿದ್ದವು. ಹೀಗೆ ಮೇಲುನೋಟಕ್ಕೆ ಸಂಸದೀಯ ಸರ್ಕಾರ ರಚಿತವಾಗಿದ್ದರೂ, ಜಿನಾದ ಅಧಿಕಾರ ಕೆಲವೇ ಮಂದಿ ಪ್ರತಿಷ್ಠಿತರ ಹಾಗೂ ಸೇನಾಮುಖಂಡರ ಕೈಯಲ್ಲಿತ್ತು. ಆರ್ಥಿಕ ಕ್ಷೇತ್ರದಲ್ಲೂ ಕೆಲವೇ ಮಂದಿ ಪ್ರತಿಷ್ಠಿತರು ಪ್ರಭಾವಶಾಲಿಗಳಾಗಿದ್ದರು. ಜಪಾನಿನ ಹೆಚ್ಚು ಕಡಿಮೆ ಎಲ್ಲ ಕೈಗಾರಿಕೆಗಳೂ ಜೈಬಟ್ಸುಗಳೆಂಬ ಶ್ರೀಮಂತ ಕುಟುಂಬಗಳ ಸೊತ್ತುಗಳಾಗಿದ್ದವು. ವಿಶ್ವದ ಪ್ರಬಲರಾಷ್ಟ್ರವಾಗಿ ಪ್ರಾಬಲ್ಯ : 1890-1900ರ ಅವಧಿಯಲ್ಲಿ ಜಪಾನ್ ಉಗ್ರರೀತಿಯ ಆಕ್ರಮಣಕಾರಿ ವಿದೇಶಾಂಗ ನೀತಿ ಅನುಸರಿಸಿತು. ಅಮೆರಿಕ, ಬ್ರಿಟನ್ ಮೊದಲಾದ ದೇಶಗಳು ಹೇರಿದ್ದ, ಜಪಾನಿನ ಹಿತಾಸಕ್ತಿಗೆ ಧಕ್ಕೆ ತರುವ ಕೌಲುಗಳನ್ನು ಅದು ಕೊನೆಗೊಳಿಸಿ, ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಪಾಶ್ಚಾತ್ಯ ರಾಷ್ಟ್ರಗಳೊಡನೆ ಸಮಸಮವಾಗಿ ನಿಲ್ಲುವ ಆಸೆ ಜಪಾನಿಗೆ ಉಂಟಾಯಿತು. ಈ ಕೌಲುಗಳ ಪ್ರಕಾರ ಪಾಶ್ಚಾತ್ಯರಿಗೆ ಜಪಾನಿನಲ್ಲಿರುವ ಹಕ್ಕು ದೊರೆತಿದ್ದರೂ ಅವರು ಜಪಾನಿನ ಕಾನೂನುಗಳ ನಿಯಂತ್ರಣಕ್ಕೆ ಒಳಗಾಗಿರಲಿಲ್ಲ. ಜಪಾನ್ ಸರ್ಕಾರ 1880ರಲ್ಲಿ ದಂಡ ಸಂಹಿತೆಯನ್ನೂ (ಕ್ರಿಮಿನಲ್ ಕೋಡ್) 1890ರಲ್ಲಿ ದೀವಾನಿ ಸಂಹಿತೆಯನ್ನೂ (ಸಿವಿಲ್ ಕೋಡ್) ಜಾರಿಗೆ ತಂದಿತು. ವಿದೇಶೀಯರನ್ನು ಜಪಾನಿನ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಡಿಸುವ ವ್ಯವಸ್ಥೆ ಏರ್ಪಟ್ಟಿತು. ಚೀನ ಮತ್ತು ರಷ್ಯಗಳೊಡನೆ ಯುದ್ಧ ನಡೆಸಿ ಗೆದ್ದು ಜಪಾನ್ ಪ್ರಬಲ ರಾಷ್ಟ್ರಗಳ ಪಂಕ್ತಿಗೆ ಸೇರಿಕೊಂಡಿತು. ಜಪಾನ್ ಮತ್ತು ಚೀನಗಳು ಕೊರಿಯ ದೇಶದಲ್ಲಿ ಪ್ರತಿಸ್ಪರ್ಧಿಗಳಾಗಿದ್ದು ಆ ದೇಶದ ಮೇಲೆ ತಂತಮ್ಮ ಹತೋಟಿ ಸ್ಥಾಪಿಸಲು ಯತ್ನಿಸಿದುವು. 1894-1895ರಲ್ಲಿ ನಡೆದ ಚೀನ-ಜಪಾನ್ ಯುದ್ಧಕ್ಕೆ ಕಾರಣವಾದ್ದು ಈ ಸ್ಪರ್ಧೆಯೇ. ಜಪಾನೀಯರು ಈ ಯುದ್ಧದಲ್ಲಿ ಜಯಶೀಲರಾದರು. ಕೊರಿಯದ ಮೇಲಿನ ಹತೋಟಿಯನ್ನು ಜಪಾನಿಗೆ ಚೀನ ಬಿಟ್ಟುಕೊಟ್ಟಿತಲ್ಲದೆ, ಫಾರ್ಮೊಸ ದ್ವೀಪವನ್ನೂ ಜಪಾನಿಗೆ ಒಪ್ಪಿಸಿತು. ದಕ್ಷಿಣ ಮಂಚೂರಿಯದಲ್ಲಿ ಜಪಾನಿಗೆ ಅನೇಕ ಸೌಲಭ್ಯಗಳು ದೊರೆತುವು. ಆದರೆ ಜಪಾನ್ ಈ ಹಕ್ಕುಗಳನ್ನೂ ಸೌಲಭ್ಯಗಳನ್ನೂ ಚೀನಕ್ಕೆ ಮರಳಿ ಒಪ್ಪಿಸುವಂತೆ ಪಾಶ್ಚಾತ್ಯ ರಾಷ್ಟ್ರಗಳು ಒತ್ತಾಯ ತಂದುವು. 1902ರಲ್ಲಿ ಜಪಾನ್ ಇಂಗ್ಲೆಂಡಿನೊಡನೆ ಮೈತ್ರಿಯ ಕೌಲು ಮಾಡಿಕೊಂಡಿತು. ಮಂಚೂರಿಯ ಮತ್ತು ಕೊರಿಯಗಳಲ್ಲಿ ತನ್ನ ಪ್ರಭಾವ ಮತ್ತು ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳಲು ಹವಣಿಸುತ್ತಿದ್ದ ರಷ್ಯವನ್ನು 1904ರಲ್ಲಿ ಕೆಣಕುವ ಮಟ್ಟಿಗೆ ಜಪಾನಿನ ಶಕ್ತಿ ಬೆಳೆದಿತ್ತು. 1904-1905ರಲ್ಲಿ ರಷ್ಯದೊಡನೆ ಯುದ್ಧಮಾಡಿ, ಆ ರಾಷ್ಟ್ರವನ್ನು ಜಪಾನ್ ಸೋಲಿಸಿತು. ಅಮೆರಿಕದ ಅಧ್ಯಕ್ಷ ತೀಯೊಡೋರ್ ರೂಸ್‍ವೆಲ್ಪನ ಮಧ್ಯಸ್ಥಿಕೆಯಿಂದ ಯುದ್ಧ ಕೊನೆಗೊಂಡಿತು. ರಷ್ಯದ ಮೇಲೆ ಗಳಿಸಿದ ಜಯದಿಂದ ಜಪಾನಿನ ಕೀರ್ತಿ ಹೆಚ್ಚಿತು. ಪೋರ್ಟ್‍ಸ್ಮತ್ ಕೌಲಿನ (1905) ಪ್ರಕಾರ ಕೊರಿಯದ ಮೇಲಿನ ತನ್ನ ಹಕ್ಕುಗಳನ್ನೆಲ್ಲ ರಷ್ಯ ಸಂಪೂರ್ಣವಾಗಿ ತ್ಯಜಿಸಿತು. ಅಲ್ಲದೆ ತನ್ನ ವಶದಲ್ಲಿದ್ದ ದಕ್ಷಿಣ ಮಂಚೂರಿಯ ರೈಲ್ವೆ ಹೆದ್ದಾರಿಯನ್ನು ಜಪಾನಿಗೆ ಕೊಟ್ಟಿತು. ಮಂಚೂರಿಯದ ಲೀಯಾವುಡಂಗ್ ಪರ್ಯಾಯದ್ವೀಪದ ಮೇಲಣ ಗುತ್ತಿಗೆ ಹಕ್ಕು ಮತ್ತು ಸಾಕಲೀನ್ ದ್ವೀಪದ ಭಾಗಗಳು ಜಪಾನಿನ ವಶವಾದುವು. ಒಂದನೆಯ ಮಹಾಯುದ್ಧ ಮತ್ತು ಆನಂತರ ಒಂದನೆಯ ಮಹಾಯುದ್ಧದ ಆರಂಭದಲ್ಲೇ ಜಪಾನ್ ಜರ್ಮನಿಯ ವಿರುದ್ಧ ಘೋಷಿಸಿತು. ಜಪಾನೀಯರು ಯೂರೋಪಿನಲ್ಲಿ ಯುದ್ಧ ಮಾಡಲಿಲ್ಲ. ಆದರೆ ಚೀನದಲ್ಲಿ ಜರ್ಮನಿಗೆ ಸೇರಿದ್ದ ಚಿಂಗ್-ಡಾವ್ ಪಟ್ಟಣವನ್ನೂ ಷಾಂಟಂಗ್ ಪ್ರಾಂತ್ಯದಲ್ಲಿದ್ದ ಆಸ್ತಿಪಾಸ್ತಿಗಳನ್ನೂ ಪೆಸಿಫಿಕ್ ಸಾಗರದ ಕೆಲವು ಜರ್ಮನ್ ದ್ವೀಪಗಳನ್ನೂ ಜಪಾನ್ ವಶಕೊಂಡಿತು. 1915ರಲ್ಲಿ ಯೂರೋಪಿನಲ್ಲಿ ನಡೆಯುತ್ತಿದ್ದ ಹೋರಾಟವನ್ನೇ ಒಂದು ಅವಕಾಶವೆಂದು ಎಣಿಸಿ ಜಪಾನ್ ಚೀನದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಹವಣಿಸಿ ಚೀನ ಸರ್ಕಾರಕ್ಕೆ ತನ್ನ 21 ಬೇಡಿಕೆಗಳನ್ನು ಸಲ್ಲಿಸಿತು. ಜಪಾನಿಗೆ ಚೀನದಲ್ಲಿ ಅನೇಕ ಆರ್ಥಿಕ ಸವಲತ್ತುಗಳು ದೊರೆತುವು. ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಪರವಾಗಿ ಮಾರ್ಷಲ್, ಕಾರೊಲೈನ್ ಮತ್ತು ಮ್ಯಾರೀಯಾನ ದ್ವೀಪಗಳಲ್ಲಿ ನಿಯೋಗಿಯಾಗಿ ಆಡಳಿತ ನಡೆಸುವ ಅಧಿಕಾರವನ್ನು ಜಪಾನಿಗೆ ನೀಡಲಾಯಿತು. ಯುದ್ಧ ಮುಗಿದ ಮೇಲೆ ರಾಷ್ಟ್ರಗಳ ಕೂಟದ ಸದಸ್ಯರಾಷ್ಟ್ರವಾಗಿ ಜಪಾನ್ ಅನೇಕ ಶಾಂತಿಸಂಧಾನಗಳಿಗೆ ಬೆಂಬಲ ನೀಡಿತು. 1921-22ರಲ್ಲಿ ನಡೆದ ವಾಷಿಂಗ್‍ಟನ್ ಸಮ್ಮೇಳನದಲ್ಲಿ, ಅಮೆರಿಕ ಮತ್ತು ಬ್ರಿಟನ್‍ಗಳಿಗಿಂತ ಚಿಕ್ಕದಾದ ನೌಕಾಪಡೆ ಇಟ್ಟುಕೊಳ್ಳುವುದಾಗಿ ಒಪ್ಪಿಕೊಂಡಿತು. ಚೀನದ ಷಾಂಟಂಗ್ ಪ್ರಾಂತ್ಯದಿಂದ ನಿರ್ಗಮಿಸುವುದಾಗಿಯೂ ವಾಷಿಂಗ್‍ಟನ್ ಸಮ್ಮೇಳನದಲ್ಲಿ ಒಪ್ಪಿಕೊಂಡಿತು. ಒಂಬತ್ತು ರಾಷ್ಟ್ರಗಳ ಕೌಲಿಗೆ ಸಹಿ ಹಾಕಿತು. ಚೀನದ ಸ್ವಾತಂತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ತಾನು ನಡೆದುಕೊಳ್ಳುವುದಾಗಿ ಭರವಸೆಕೊಟ್ಟಿತು. ಇದರ ಜೊತೆಗೆ 1928ರಲ್ಲಿ ಕೆಲ್ಲಾಗ್-ಬ್ರಿಯಾಂಡ್ ಒಪ್ಪಂದಕ್ಕೂ 1930ರಲ್ಲಿ ಲಂಡನ್ ನೌಕಾ ಒಪ್ಪಂದಕ್ಕೂ ಸಹಿ ಹಾಕಿತು. ಸೈನಿಕವಾದದ ಪ್ರಾಬಲ್ಯ 1930ರ ವರೆಗೆ ಜಪಾನಿನ ಆಡಳಿತ ಉದಾರತತ್ತ್ವಗಳಲ್ಲಿ ನಂಬಿಕೆಯಿದ್ದ ಪ್ರಜಾಪ್ರಭುತ್ವವಾದಿ ನಾಯಕರ ಕೈಯಲ್ಲಿ ಇತ್ತು. 1930ರಲ್ಲಿ ಜಪಾನು ಲಂಡನ್ ನೌಕಾ ಒಪ್ಪಂದಕ್ಕೆ ಸಹಿ ಹಾಕಿದ್ದೇ ಈ ಉದಾರವಾದಿ ರಾಜಕೀಯ ಮುಖಂಡರ ಕಡೆಯ ವಿಜಯವಾಯಿತು. ಜಪಾನು ಈ ಒಪ್ಪಂದಕ್ಕೆ ಸಹಿ ಹಾಕಲೇಬೇಕೆಂದು ಪ್ರಧಾನಮಂತ್ರಿ ಹಾಮಾಗೂಚಿ (1870-1931) ಒತ್ತಾಯ ಮಾಡಿದಾಗ ಅವನು ಕೊಲೆಗೆ ಈಡಾದ. 1930ರಲ್ಲಿ ತಲೆದೋರಿದ ವಿಶ್ವ ಆರ್ಥಿಕ ಮುಗ್ಗಟ್ಟು ಜಪಾನಿನ ಆರ್ಥಿಕ ಕ್ಷೇತ್ರವನ್ನು ಅಲ್ಲೋಲಕಲ್ಲೋಲ ಮಾಡಿತು. ನಿರುದ್ಯೋಗ, ಬಡತನ, ಆಹಾರದ ಕೊರತೆ ತಲೆದೋರಿದುವು. ಚೀನದೊಡನೆ ಸ್ನೇಹದಿಂದ ಇರಬೇಕೆಂಬ ಸರ್ಕಾರದ ನೀತಿಯನ್ನು ಜಪಾನೀಯರು ವಿರೋಧಿಸತೊಡಗಿದರು. ಜಪಾನೀ ಸರಕುಗಳಿಗೆ ಮಾರುಕಟ್ಟೆಗಳನ್ನು ಪಡೆಯುವ ಸಲುವಾಗಿ ಜಪಾನ್ ತನ್ನ ಪ್ರಭಾವ ವಲಯವನ್ನು ವಿಸ್ತರಿಸಬೇಕೆಂಬುದು ಜೈಬಟ್ಸುಗಳ ಅಭಿಪ್ರಾಯವಾಗಿತ್ತು. ಜಪಾನಿನ ಸೇನಾ ಮುಖಂಡರು ಯಾವಾಗಲೂ ಚೀನದ ವಿರುದ್ಧ ಕಠಿಣ ನೀತಿಯನ್ನೇ ಪ್ರತಿಪಾದಿಸುತ್ತಿದ್ದರು. ಜಪಾನು ಏಷ್ಯದಲ್ಲಿ ವಿಶೇಷ ಆರ್ಥಿಕ ಸೌಲಭ್ಯಗಳನ್ನು ಹೊಂದಿರಬೇಕೆಂಬುದು ಅವರ ವಾದವಾಗಿತ್ತು. ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸೇನಾಮುಖಂಡರಿಗೆ ಅಪ್ಪಣೆಯೇನೂ ಬೇಕಿರಲಿಲ್ಲ. ಸಂಸತ್ತನ್ನಾಗಲಿ ಮಂತ್ರಿಮಂಡಲವನ್ನಾಗಲಿ ಕೇಳದೆ ಚಕ್ರವರ್ತಿಯ ಹೆಸರಿನಲ್ಲಿ ಅವರು ತಮ್ಮ ನೀತಿ ಅನುಸರಿಸಲು ಅವಕಾಶವಿತ್ತು. ಉಗ್ರರಾಷ್ಟ್ರಾಭಿಮಾನಿಗಳು ಒಂದಾಗಿ ರಹಸ್ಯ ಹಾಗೂ ವಿಶೇಷರೀತಿಯ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಂಡರು. ಜಪಾನೀಯರು ದೇವಾಂಶಸಂಭೂತರೆಂದೂ ಅವರು ವಿಶ್ವವನ್ನು ಅಳಬೇಕೆಂಬುದು ದೇವರ ಇಚ್ಛೆಯೆಂದೂ ಈ ಸಂಘಸಂಸ್ಥೆಗಳ ಸದಸ್ಯರು ನಂಬಿದ್ದರು. ಚೀನದೊಡನೆ ಯುದ್ಧ 1931ರಲ್ಲಿ ಚೀನೀಯರು ಮಂಚೂರಿಯದಲ್ಲಿ ತಮ್ಮ ಸರ್ಕಾರದ ಬಲವನ್ನು ಹೆಚ್ಚಿಸಿಕೊಂಡಾಗ ಜಪಾನಿನ ಸೇನಾಮುಖಂಡರಿಗೆ ದಿಗ್ರ್ಭಮೆಯಾಯಿತು. ತನ್ನ ರೈಲುಮಾರ್ಗಗಳನ್ನು ರಕ್ಷಿಸಲು ಅನುಕೂಲವಾಗುವಂತೆ ಮಂಚೂರಿಯದಲ್ಲಿ ಜಪಾನು ಸೈನ್ಯ ಇಟ್ಟುಕೊಳ್ಳಲು ಚೀನ ಸರ್ಕಾರ ಅನುಮತಿ ನೀಡಿತ್ತು. 1931ರ ಸೆಪ್ಟೆಂಬರ್ 18ರಂದು ಮುಕ್‍ಡೆನ್ ನಗರದ ಬಳಿ ನಡೆದ ಸಣ್ಣ ಘಟನೆಯನ್ನೇ ನೆವಮಾಡಿಕೊಂಡು ಜಪಾನಿನ ಸೇನೆ ಮಂಚೂರಿಯವನ್ನು ಆಕ್ರಮಿಸಿಕೊಂಡಿತು. ಸೇನೆ ಈ ಉಗ್ರಕ್ರಮವನ್ನು ಕೈಗೊಂಡ ಮೇಲೆ ಜಪಾನ್ ಸರ್ಕಾರಕ್ಕೆ ಈ ವಿಷಯ ತಿಳಿಯಿತು ಎನ್ನುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ರಾಷ್ಟ್ರಗಳ ಕೂಟ ಈ ಘಟನೆಯ ಬಗ್ಗೆ ವಿಚಾರಿಸಿ, ಜಪಾನಿನ ನೀತಿ ತಪ್ಪೆಂದು ಖಂಡಿಸಿತಾದರೂ ಯಾವ ಕ್ರಮವನ್ನು ತೆಗೆದುಕೊಳ್ಳಲೂ ಅದು ಅಶಕ್ತವಾಗಿತ್ತು. ಜಪಾನ್ 1933ರಲ್ಲಿ ರಾಷ್ಟ್ರಗಳ ಕೂಟದಿಂದ ಹೊರಬಂತು. ಮಂಚೂ ಮನೆತನದ ಕೊನೆಯ ಚಕ್ರವರ್ತಿ ಪೂ-ಯೀಯ ಕೈಗೊಂಬೆ ಸರ್ಕಾರವೊಂದನ್ನು ಮಂಚೂರಿಯದಲ್ಲಿ ಸ್ಥಾಪಿಸಿ ಅದನ್ನು ಮಾಂಚೂಕ್ವೋ ಎಂದು ಕರೆಯಿತು. ಜಪಾನಿನಿಂದ ಮಂಚೂರಿಯದಲ್ಲಿ ಗಣಿಗಳೂ ಕೈಗಾರಿಕೆಗಳೂ ಸ್ಥಾಪಿತವಾದುವು. ಮಂಚೂರಿಯದಲ್ಲಿ ಸುಲಭವಾಗಿ ಗಳಿಸಿದ ವಿಜಯದಿಂದ ಸೇನಾಮುಖಂಡರು ಉತ್ತೇಜನಗೊಂಡರು. ಸೇನೆಯ ಉಗ್ರಪಂಥಿಯರು ಪ್ರಧಾನಮಂತ್ರಿ ಕಿಇನುಕೈಯನ್ನು (1855-1932) 1932ರಲ್ಲಿ ಕೊಲೆಮಾಡಿದರು. 1936ರಲ್ಲಿ ನಡೆದ ದಂಗೆಯಲ್ಲಿ ಅನೇಕ ಉದಾರವಾದಿ ರಾಜಕೀಯ ಮುಖಂಡರುಗಳ ಕೊಲೆ ಆಯಿತು. ಅಲ್ಲಿಂದಾಚೆಗೆ ಜಪಾನಿನ ವಿದೇಶಾಂಗ ನೀತಿಯ ಮೇಲೆ ಉಗ್ರವಾದಿಗಳ ಹಿಡಿತ ಭದ್ರವಾಯಿತು. ಮಂಚೂರಿಯದ ಆಕ್ರಮಣದ ಅನಂತರ ಜಪಾನ್ ಉತ್ತರ ಚೀನದ ಭಾಗಗಳಿಗೆ ತನ್ನ ಪ್ರಭಾವವನ್ನು ವಿಸ್ತರಿಸಿತು. 1937ರ ಜುಲೈ 7ರಂದು ಪೀಕಿಂಗ್ ನಗರದ ಬಳಿ ಮಾರ್ಕೊ ಪೋಲೊ ಸೇತುವೆಯ ಬಳಿ ನಡೆದ ಸಣ್ಣ ಘಟನೆಯನ್ನೇ ನೆವಮಾಡಿಕೊಂಡು ಜಪಾನ್ ಉತ್ತರ ಚೀನದ ಮೇಲೆ ಹತೋಟಿ ಸ್ಥಾಪಿಸಿತು. 1938ರ ವೇಳೆಗೆ ದಕ್ಷಿಣ ಚೀನದ ಮುಖ್ಯ ನಗರವಾದ ಕ್ಯಾಂಟನ್ ಜಪಾನಿನ ವಶವಾಯಿತು. ಎರಡನೆಯ ಮಹಾಯುದ್ಧದ ಕಡೆಗೆ ನಾಟ್ಸಿ ಜರ್ಮನಿ ಮತ್ತು ಫ್ಯಾಸಿಸ್ಟ್ ಇಟಲಿಗಳೊಡನೆ ಜಪಾನ್ ಸ್ನೇಹ ಬೆಳೆಸಿತು. 1936ರಲ್ಲಿ ಜರ್ಮನಿ ಮತ್ತು ಇಟಲಿ ದೇಶಗಳೊಡನೆ ಜಪಾನು ಕಮ್ಯುನಿಸ್ಟ್-ವಿರೋಧಿ ಒಪ್ಪಂದವನ್ನು ಮಾಡಿಕೊಂಡಿತು. 1939ರ ಆಗಸ್ಟ್‍ನಲ್ಲಿ ಜರ್ಮನಿ-ರಷ್ಯಗಳು ಒಪ್ಪಂದ ಮಾಡಿಕೊಂಡಾಗ ಜಪಾನಿಗೆ ಆಶ್ಚರ್ಯವಾಯಿತು. 1940ರಲ್ಲಿ ಜಪಾನೂ ರಷ್ಯದೊಡನೆ ಒಂದು ಒಪ್ಪಂದ ಮಾಡಿಕೊಂಡಿತು. 1939ರ ಸೆಪ್ಟಂಬರಿನಲ್ಲಿ ಎರಡನೆಯ ಮಹಾಯುದ್ಧ ಯೂರೋಪಿನಲ್ಲಿ ಪ್ರಾರಂಭವಾದಾಗ, ಉತ್ತರ ಚೀನದಲ್ಲಿ ಬ್ರಿಟನ್ ಹೊಂದಿದ್ದ ಎಲ್ಲ ಹಕ್ಕುಬಾಧ್ಯತೆಗಳನ್ನೂ ಬಿಟ್ಟುಕೊಡಬೇಕೆಂಬುದು ಜಪಾನಿನ ಒತ್ತಾಯ. 1940ರಲ್ಲಿ ಫ್ರಾನ್ಸ್ ಜರ್ಮನಿಯ ವಶವಾಯಿತು. ಫ್ರೆಂಚರ ವಸಾಹತಾಗಿದ್ದ ಇಂಡೋಚೀನ ಪರ್ಯಾಯದ್ವೀಪವನ್ನು ಜಪಾನ್ ಆಕ್ರಮಿಸಿಕೊಂಡಿತು. ಜಪಾನಿನ ಆಕ್ರಮಣ ಹೆಚ್ಚಿದಂತೆಲ್ಲ ಅಮೆರಿಕ-ಜಪಾನ್ ವಿರಸ ಬೆಳೆಯಲಾರಂಭಿಸಿತು. 1940ರಲ್ಲಿ ಅಮೆರಿಕ ಜಪಾನಿಗೆ ಸಾಗುತ್ತಿದ್ದ ಪೆಟ್ರೋಲ್ ಮತ್ತು ಕಬ್ಬಿಣದ ರಫ್ತಿನಲ್ಲಿ ಖೋತ ಮಾಡಿತು. 1941ರ ವೇಳೆಗೆ ಜಪಾನಿನಲ್ಲಿ ಯುದ್ಧಸಿದ್ಧತೆಗಳೆಲ್ಲ ಮುಗಿದಿದ್ದುವು. 1941ರ ಅಕ್ಟೋಬರ್ 17ರಂದು ಜಪಾನಿನಲ್ಲಿ ಕೊನೆಯ ಮಂತ್ರಿಮಂಡಲ ಅಧಿಕಾರ ಕಳೆದುಕೊಂಡಿತು. ದಂಡನಾಯಕ ಡಿಡೆಕಿ ಟೋಜೋ ಪ್ರಧಾನ ಮಂತ್ರಿಯಾದ. ಸೇನಾಮುಖಂಡರು ಜಪಾನ್ ಸರ್ಕಾರದ ಮೇಲೆ ತಮ್ಮ ಸಂಪೂರ್ಣ ಹತೋಟಿ ಸಾಧಿಸಿ, ಯುದ್ಧಕ್ಕೆ ಸಿದ್ಧರಾದರು. ಎರಡನೆಯ ಮಹಾಯುದ್ಧ 1941ರಲ್ಲಿ ಹವೈಯಿ ದ್ವೀಪದ ಪರ್ಲ್ ಹಾರ್ಬರಿನಲ್ಲಿ ತಂಗಿದ್ದ ಅಮೆರಿಕದ ಪೆಸಿಫಿಕ್ ನೌಕಾಪಡೆ ಜಪಾನಿನ ವಿಮಾನ ದಾಳಿಗೆ ಗುರಿಯಾಗಿ ಧ್ವಂಸವಾಯಿತು. ಬಿರುಗಾಳಿಯಂತೆ ಮುಂದುವರಿದು ಪೆಸಿಫಿಕ್ ಸಾಗರ ಮತ್ತು ಹಿಂದೂ ಸಾಗರ ದ್ವೀಪಗಳನ್ನೆಲ್ಲ ಜಪಾನ್ ವಶಪಡಿಸಿಕೊಂಡಿತು. ಮಲಯವನ್ನೂ ಬರ್ಮವನ್ನೂ ಆಕ್ರಮಿಸಿ ಭಾರತಕ್ಕೂ ಬೆದರಿಕೆ ಹಾಕಿತು. ಪಾಶ್ಚಾತ್ಯ ದೇಶಗಳಿಂದ ಚೀನಕ್ಕೆ ಸಾಗುತ್ತಿದ್ದ ಸರಬರಾಜನ್ನು ನಿಲ್ಲಿಸುವ ಉದ್ದೇಶದಿಂದ ಪ್ರಸಿದ್ಧ ಚೀನ ಮಾರ್ಗವನ್ನು ಜಪಾನ್ ಕಡಿದು ಹಾಕಿತು. ಇದರಿಂದ ಜಪಾನಿನ ಕೈಗಾರಿಕೆಗಳಿಗೆ ಸಾಕಷ್ಟು ಕಚ್ಚಾವಸ್ತುಗಳು ಒದಗಿಬಂದವು. ಆದರೆ 1944ರಲ್ಲಿ ಜಪಾನಿನ ಭಾಗ್ಯ ಬದಲಾಯಿತು. ಜಪಾನಿನ ದೌರ್ಬಲ್ಯ ಪ್ರಕಟವಾಗತೊಡಗಿತು. 1944ರ ಜುಲೈ 18ರಂದು ಟೋಜೋನ ಮಂತ್ರಿಮಂಡಲ ಉರುಳಿತು. ಅಮೆರಿಕ ಪೆಸಿಫಿಕಿನ ಎಲ್ಲ ದ್ವೀಪಗಳನ್ನೂ ವಶಪಡಿಸಿಕೊಂಡಿತು. ಯುದ್ಧ ಜಪಾನಿನ ಬಾಗಿಲಿಗೇ ಬಂತು. ಅಮೆರಿಕನರು ಜಪಾನಿನ ಕೈಗಾರಿಕಾ ಕೇಂದ್ರಗಳ ಮೇಲೆಲ್ಲ ಕ್ರಮವಾಗಿ ಬಾಂಬು ದಾಳಿ ಮಾಡತೊಡಗಿದರು. 1945ರಲ್ಲಿ ಅಮೆರಿಕನ್ ಸೈನಿಕರು ಜಪಾನಿನಲ್ಲಿ ಬಂದಿಳಿದರು. ಹಿರೋಷೀಮ ಮತ್ತು ನಾಗಸಾಕೀ ನಗರಗಳ ಮೇಲೆ ಅಮೆರಿಕ ಎರಡು ಪರಮಾಣು ಬಾಂಬುಗಳನ್ನು ಹಾಕಿದಾಗ ಸುಮಾರು ಎರಡು ಲಕ್ಷ ಜಪಾನೀಯರು ಪ್ರಾಣಬಿಟ್ಟರು. ಆ ನಗರಗಳು ನೆಲಸಮವಾದುವು. ಯುದ್ಧದಲ್ಲಿ ಸೋಲುಂಟಾಗಿದೆಯೆಂಬ ಅಂಶ ಈ ವೇಳೆಗೆ ಜಪಾನೀ ನಾಯಕರಿಗೆ ಮನವರಿಕೆಯಾಗಿತ್ತು. ಚೀನ ಮತ್ತು ಪೆಸಿಫಿಕ್ ಸಾಗರ ದ್ವೀಪಗಳಲ್ಲಿ ಜಪಾನೀಯರ ದೊಡ್ಡ ಸೇನೆಯಿತ್ತು. ಆದರೆ ಅವುಗಳೊಂದಿಗೆ ಸಂಪರ್ಕ ತಪ್ಪಿಹೋಯಿತು. ಜಪಾನಿನ ಬಳಿ ಯುದ್ಧನೌಕೆಗಳಾಗಲಿ, ಸಾಮಗ್ರಿಗಳಾಗಲಿ ಇರಲಿಲ್ಲ. 1945ರ ಆಗಸ್ಟ್ 14ರಂದು ಜಪಾನ್ ಸಂಪೂರ್ಣವಾಗಿ ಶರಣಾಗತವಾಗಲು ಒಪ್ಪಿತು. ಮರುದಿನ ಮಧ್ಯಾಹ್ನ ಚಕ್ರವರ್ತಿ ಹಿರೊಹಿಟೋ ಜಪಾನಿನ ಜನತೆಯನ್ನು ಉದ್ದೇಶಿಸಿ ರೇಡಿಯೋ ಭಾಷಣ ಮಾಡಿದರು. ಜಪಾನ್ ಯುದ್ಧ ಕೊನೆಗೊಳಿಸಲು ಒಪ್ಪಿರುವ ವಿಷಯವನ್ನು ತಿಳಿಸಿದರು. ಸೆಪ್ಟಂಬರ್ 2ರಂದು, ಯುದ್ಧನೌಕೆ ಮಿಸ್ಸೋರಿಯ ಮೇಲೆ, 1853ರಲ್ಲಿ ಪೆರಿ ಬೀಡುಬಿಟ್ಟಿದ್ದ ಟೋಕಿಯೋ ಕೊಲ್ಲಿಯ ಬಳಿಯಲ್ಲೇ, ಜಪಾನ್ ಶರಣಾಗತಿ ಪತ್ರಕ್ಕೆ ಸಹಿ ಹಾಕಿತು. ಏಷ್ಯದಲ್ಲಿ ಗೆದ್ದಿದ್ದ ಪ್ರದೇಶಗಳನ್ನೂ ಪೆಸಿಫಿಕ್ ಸಾಗರದಲ್ಲಿ ಆಕ್ರಮಿಸಿಕೊಂಡಿದ್ದ ದ್ವೀಪಗಳನ್ನೂ ಜಪಾನ್ ಬಿಟ್ಟುಕೊಟ್ಟಿತು. ಫಾರ್ಮೋಸ, ಕ್ಯುರೈಲ್ಸ್ ಮತ್ತು ದಕ್ಷಿಣ ಸಾಖಲಿನ್ ದ್ವೀಪಗಳನ್ನು ಜಪಾನ್ ಕಳೆದುಕೊಂಡಿತು. ಮಿತ್ರರಾಷ್ಟ್ರಗಳ ಆಳ್ವಿಕೆ (1945-1952) ಅಮೆರಿಕದ ನೇತೃತ್ವದಲ್ಲಿ ಮಿತ್ರ ರಾಷ್ಟ್ರಗಳು 1945ರಿಂದ 1952ರ ವರೆಗೆ ಅಲ್ಲಿ ಆಳ್ವಿಕೆ ನಡೆಸಿದುವು. ದಂಡನಾಯಕ ಮೆಕಾರ್ಥರ್ ಈ ಆಡಳಿತದ ಮುಖ್ಯಾಧಿಕಾರಿಯಾಗಿದ್ದ. ಯುದ್ಧಾಪರಾಧಗಳ ವಿಚಾರಣೆ ನಡೆದು 28 ಪ್ರಧಾನ ಯುದ್ಧಕೈದಿಗಳಿಗೆ ಗಲ್ಲಿನ ಶಿಕ್ಷೆಯಾಯಿತು. 1946ರಲ್ಲಿ ಜಪಾನಿನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದುವು. ಆ ವರ್ಷವೇ ಜಪಾನಿನ ಹೊಸ ಸಂವಿಧಾನದ ರಚನೆಯಾಗಿ 1947ರ ಮೇ 3ರಂದು ಅದು ಅಧಿಕೃತವಾಗಿ ಜಾರಿಗೆ ಬಂತು. ಚಕ್ರವರ್ತಿಯಲ್ಲಿ ಕೇಂದ್ರೀಕೃತವಾಗಿದ್ದ ಕಾರ್ಯಾಂಗದ ಅಧಿಕಾರಗಳನ್ನು ತೆಗೆದುಹಾಕಲಾಯಿತು. ಸ್ತ್ರೀಯರಿಗೂ ಮತದಾನದ ಹಕ್ಕು ಲಭ್ಯವಾಯಿತು. ಸೇನೆ ಮತ್ತು ನೌಕೆಯನ್ನು ರದ್ದು ಮಾಡಿದ ಸಂವಿಧಾನದಲ್ಲಿ, ಯುದ್ಧವನ್ನು ರಾಜಕೀಯ ಅಸ್ತ್ರದಂತೆ ಜಪಾನ್ ಎಂದೆಂದಿಗೂ ಬಳಸುವುದಿಲ್ಲವೆಂದು ಘೋಷಿಸಲಾಯಿತು. ಅಮೆರಿಕದ ನೆರವಿನಿಂದ ಜಪಾನಿನ ಆರ್ಥಿಕ ಸ್ಥಿತಿ ಸುಧಾರಿಸುತ್ತ ನಡೆಯಿತು. ಭೂ ಸುಧಾರಣೆಗಳಾದುವು. ಉಳುವವರು ಭೂಮಿಯ ಒಡೆಯರಾದರು. ಕೈಗಾರಿಕಾ ಕ್ಷೇತ್ರದಲ್ಲಿ ಜೈಬಟ್ಸುವಿನ ಪ್ರಭಾವ ತಗ್ಗಿಸುವ ಏರ್ಪಾಡುಗಳಾದುವು. 1950ರ ಕೊರಿಯ ಯುದ್ಧ ಮತ್ತು ಅನಂತರ ಜಪಾನಿನ ಕೈಗಾರಿಕೆ ಬಹು ಬೇಗ ಹಿಂದಿನ ಸ್ಥಿತಿಗೆ ಬಂತು. ಆ ಕಾಲದಲ್ಲಿ ಜಪಾನಿನ ಪ್ರಧಾನಿಯಾಗಿದ್ದ ಷಿಗೆಯ ಯೋಷಿದಾ ಅಮೆರಿಕದೊಡನೆ ಹೊಂದಾಣಿಕೆಯ ನೀತಿ ಅನುಸರಿಸಿದರು. ಜಪಾನ್ ಪ್ರಜಾಪ್ರಭುತ್ವದ ಹಾದಿ ಹಿಡಿಯಿತು. ಯುದ್ಧೋತ್ತರ ಪ್ರಗತಿ 1951ರ ಸೆಪ್ಟೆಂಬರ್ 8ರಂದು ಅಮೆರಿಕದ ಸ್ಯಾನ್ ಫ್ರಾನ್ಸಿಸ್‍ಕೋ ನಗರದಲ್ಲಿ 48 ಮಿತ್ರರಾಷ್ಟ್ರಗಳ ಸಮ್ಮೇಳನ ನಡೆದು, ಜಪಾನ್ ಶಾಂತಿ ಕೌಲಿಗೆ ಸಹಿ ಹಾಕಿತು. ಇದು ಅಧಿಕೃತವಾಗಿ ಜಾರಿಗೆ ಬಂದದ್ದು 1952ರ ಏಪ್ರಿಲ್ 28ರಂದು. ಮಿತ್ರರಾಷ್ಟ್ರಗಳ ಆಡಳಿತ ಕೊನೆಗೊಂಡಿತು. ಜಪಾನ್ ಸಂಪೂರ್ಣವಾಗಿ ಸ್ವತಂತ್ರವಾಯಿತು. ಜಪಾನ್ ಅಮೆರಿಕದೊಡನೆ ಭದ್ರತಾ ಒಪ್ಪಂದವೊಂದನ್ನು ಮಾಡಿಕೊಂಡಿತು. 1952ರಲ್ಲಿ ಜಪಾನ್ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರವಾಗಲು ಬಯಸಿ ವಿಫಲವಾಯಿತು. ಇದಕ್ಕೆ ಕಾರಣ ಸೋವಿಯೆತ್ ದೇಶದ ವಿರೋಧ. 1956ರಲ್ಲಿ ಸೋವಿಯೆತ್ ದೇಶ ಮತ್ತು ಜಪಾನ್‍ಗಳ ನಡುವೆ ಶಾಂತಿ ಒಪ್ಪಂದ ಆದ ಮೇಲೆ ಆ ವರ್ಷದ ಡಿಸೆಂಬರ್ ತಿಂಗಳಲ್ಲಿ ಜಪಾನ್ ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು. 1955ರಲ್ಲಿ ಇಂಡೊನೇಷ್ಯದ ಬಾಂಡುಂಗ್‍ನಲ್ಲಿ ನಡೆದ ಆಫ್ರೊ-ಏಷ್ಯನ್ ಆಗ್ರ ಸಮ್ಮೇಳನದಲ್ಲಿ ಜಪಾನೂ ಭಾಗವಹಿಸಿತು. ಅಲ್ಲಿಂದೀಚೆಗೆ ಜಪಾನ್ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದು ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿದೆ. ಆರ್ಥಿಕ ಅಭಿವೃದ್ಧಿ ಆಧುನಿಕ ಕೈಗಾರಿಕಾ ಪದ್ಧತಿಯನ್ನು ಯಶಸ್ವಿಯಾಗಿ ಆಚರಣೆಗೆ ತಂದ ಪ್ರಥಮ ಏಷ್ಯನ್ ರಾಷ್ಟ್ರವಿದು. ಸುಮಾರು ಒಂದು ಶತಮಾನದ ಹಿಂದೆ ಹೊರ ಜಗತ್ತಿನ ಸಂಪರ್ಕ ಸಹ ಇಲ್ಲದೆ ಪ್ರತ್ಯೇಕ ರಾಷ್ಟ್ರವೆನಿಸಿಕೊಂಡಿದ್ದ ಈ ದೇಶ ಇಂದು ಪ್ರಪಂಚದ ಅತ್ಯಂತ ಅಭ್ಯುದಯ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಿದೆ. ಮಿತ ಭೂಪ್ರದೇಶ, ವಿರಳ ಪ್ರಕೃತಿಸಂಪತ್ತು, ಅಗಾಧ ಜನಸಂಖ್ಯೆ, ದ್ವಿತೀಯ ಮಹಾಯುದ್ಧದ ಆಘಾತ-ಇಷ್ಟೆಲ್ಲ ಪ್ರತಿಕೂಲಗಳನ್ನೆದುರಿಸಿಯೂ ಈ ಸಣ್ಣ ದೇಶ ಅಗಾಧ ಪ್ರಗತಿ ಸಾಧಿಸಿದೆ. ಆಧುನಿಕ ಜಪಾನಿನ ಅಭಿವೃದ್ಧಿ 1868ರಲ್ಲಿ ಮೇಜಿ ಚಕ್ರವರ್ತಿ ಅಧಿಕಾರಕ್ಕೆ ಬಂದಂದಿನಿಂದ ಪ್ರಾರಂಭವಾಯಿತು. ಇದಕ್ಕೆ ಮುಂಚೆ 265 ವರ್ಷ ಟೋಕುಗಾವಾ ವಂಶದ ಷೋಗುನ್‍ಗಳು ಚಕ್ರವರ್ತಿಯನ್ನು ಬದಿಗೊತ್ತಿ ತಾವೇ ಆತನ ಹೆಸರಿನಲ್ಲಿ ರಾಜ್ಯಾಡಳಿತ ನಡೆಸುತ್ತಿದ್ದರು. ಷೋಗುನ್ನರ ಆಳ್ವಿಕೆಯಲ್ಲಿ ಊಳಿಗಮಾನ್ಯ ಪದ್ಧತಿ ಇತ್ತು. ದೇಶದ ಮುಕ್ಕಾಲು ಪಾಲು ಜಮೀನು ಷೋಗುನ್ನರ ಸ್ವಂತ ಉಪಯೋಗಕ್ಕೆ ಮೀಸಲಾಗಿತ್ತು. ಉಳಿದುದನ್ನು ಅವರು ತಮ್ಮ ಅಧೀನರಾದ ಜಮೀನ್ದಾರರಲ್ಲಿ ಹಂಚಿದ್ದರು. ಇವರಲ್ಲದೆ ಯೋಧವರ್ಗ, ರೈತವರ್ಗ, ಬಹಿಷ್ಕøತರಂತೆ ಜೀವಿಸುತ್ತಿದ್ದವರ ದಲಿತವರ್ಗ ಇವೂ ಇದ್ದುವು. ಪಟ್ಟಣಗಳಲ್ಲಿ ಸಣ್ಣ ಕೈಗಾರಿಕೆಗಳು ವೃತ್ತಿ ಸಂಘಗಳ ಹತೋಟಿಯಲ್ಲಿ ಅಭಿವೃದ್ಧಿ ಹೊಂದಿದ್ದುವು. ವೃತ್ತಿಸಂಘಗಳು ಸರ್ಕಾರದ ಮಾನ್ಯತೆ ಪಡೆದು, ಅದಕ್ಕೆ ತೆರಿಗೆ ಕೊಡುತ್ತಿದ್ದುವು. 19ನೆಯ ಶತಮಾನದ ವೇಳೆಗೆ ಗೃಹಕೈಗಾರಿಕಾ ಪದ್ಧತಿ ಬೆಳೆಯಲಾರಂಭಿಸಿತ್ತು. ಸಣ್ಣ ಕಾರ್ಖಾನೆಗಳು ಅಗಲೇ ತಲೆಯೆತ್ತುತ್ತಿದ್ದುವು. ಷೋಗುನ್ನರ ಕಾಲದಲ್ಲಿ ವಿದೇಶೀ ಸಂಪರ್ಕ ನಿಷೇಧಿಸಲ್ಪಟ್ಟಿತ್ತು. ಇದರಿಂದ ಜಪಾನು ಪಾಶ್ಚಾತ್ಯ ರಾಷ್ಟ್ರಗಳಲ್ಲಾಗುತ್ತಿದ್ದ ತಾಂತ್ರಿಕ ಮತ್ತು ವೈಜ್ಞಾನಿಕ ಪ್ರಗತಿಯ ಪ್ರಯೋಜನ ಕಳೆದುಕೊಂಡಿತು. ವಿದೇಶೀ ವ್ಯಾಪಾರಕ್ಕೂ ಅವಕಾಶವಿರಲಿಲ್ಲ. 19ನೆಯ ಶತಮಾನದ ದ್ವಿತೀಯಾರ್ಧದ ವೇಳೆಗೆ ಈ ಆರ್ಥಿಕ ವ್ಯವಸ್ಥೆ ಅಂತರಿಕ ಒತ್ತಡಗಳಿಂದ ಕುಸಿಯತೊಡಗಿತು. ಜನರು ಊಳಿಗಮಾನ್ಯ ವ್ಯವಸ್ಥೆಯ ಹಾಗೂ ವೃತ್ತಿಸಂಘಗಳ ನಿರ್ಬಂಧಗಳನ್ನು ಕಡೆಗಣಿಸಿ, ಪಟ್ಟಣಗಳಿಗೆ ಇತರ ಉದ್ಯೋಗಗಳನ್ನರಸಿ ಹೋಗತೊಡಗಿದರು. ಆ ವೇಳೆಗೆ ಪಾಶ್ಚಾತ್ಯರ ಒತ್ತಡಕ್ಕೆ ಮಣಿದು ಷೋಗುನ್ನರು ಅವರಿಗೆ ಕೆಲವು ವ್ಯಾಪಾರಿ ರಿಯಾಯಿತಿಗಳನ್ನು ಕೊಟ್ಟರು. ಇದರಿಂದ ಜನ ಕುಪಿತರಾದರು. ವಿರೋಧ ಪ್ರಬಲವಾಗುತ್ತಿದ್ದುದನ್ನು ಕಂಡ ಕೊನೆಯ ಷೋಗುನ್ ತಾನಾಗಿಯೇ ಅಧಿಕಾರ ತ್ಯಜಿಸಿದ. 1868ರಲ್ಲಿ ಮೇಜಿ ಚಕ್ರವರ್ತಿ ಅಧಿಕಾರಕ್ಕೆ ಬಂದ. ಇವನು ಆಧುನಿಕ ಜಪಾನಿನ ನಿರ್ಮಾಪಕ. ದಕ್ಷನೂ ಪ್ರಗತಿಪರನೂ ದೂರದೃಷ್ಟಿಯುಳ್ಳವನೂ ಆದ ಈತ ಜಪಾನಿನ ಪ್ರತ್ಯೇಕತಾ ನೀತಿಯನ್ನು ತೊರೆದು ಪಾಶ್ಚಾತ್ಯ ಸಂಪರ್ಕವನ್ನು ಪ್ರೋತ್ಸಾಹಿಸಿದ. ಊಳಿಗಮಾನ್ಯ ಪದ್ಧತಿಯನ್ನು ರದ್ದುಗೊಳಿಸಿದ. ನಿರಕ್ಷರತೆಯನ್ನು ನಿರ್ಮೂಲ ಮಾಡುವುದು ಮಾತ್ರವಲ್ಲದೆ ವೈಜ್ಞಾನಿಕ ಬೆಳವಣಿಗೆಗೆ ಸಹಾಯ ಮಾಡುವ ನೂತನ ವಿದ್ಯಾಭ್ಯಾಸ ಕ್ರಮವನ್ನು ಜಾರಿಗೆ ತಂದ. ಕೃಷಿ, ಕೈಗಾರಿಕೆ ಮತ್ತು ವ್ಯಾಪಾರಾಭಿವೃದ್ಧಿಗೆ ವಿಶೇಷ ಪ್ರೋತ್ಸಾಹ ಮತ್ತು ಸಹಾಯ ನೀಡಿದ. ಕೆಲವು ಹಣಕಾಸಿನ ಸುಧಾರಣೆಗಳನ್ನು ಆಚರಣೆಗೆ ತಂದು, ಸರ್ಕಾರದ ವರಮಾನ ಹೆಚ್ಚಿಸಿದ. ಈ ಸುಧಾರಣೆಗಳಿಂದ ಆಧುನಿಕ ಜಪಾನಿನ ಅಭಿವೃದ್ಧಿಗೆ ಭದ್ರತಳಹದಿ ಹಾಕಿದಂತಾಯಿತು. ಇವುಗಳ ಯಶಸ್ಸಿಗೆ ಚಕ್ರವರ್ತಿಯ ಪ್ರಗತಿಪರನೀತಿ ಮಾತ್ರವಲ್ಲದೆ ಜಪಾನಿನ ಭೌಗೋಳಿಕ ಸನ್ನಿವೇಶ, ರಾಷ್ಟ್ರೀಯ ಏಕತೆ, ಭಾಷಾ ಏಕರೂಪತೆ, ಜಪಾನೀಯರ ಶಿಸ್ತು ಸಂಘಟನೆ, ಕರ್ತವ್ಯಪರತೆ, ರಾಷ್ಟ್ರಪೇಮ, ಚಕ್ರವರ್ತಿಯಲ್ಲಿ ಅವರಿಗಿದ್ದ ಅಪಾರಗೌರವ ಮುಂತಾದವೂ ಕಾರಣವಾದುವು. ಮೇಜಿ ಆಳ್ವಿಕೆಯಿಂದೀಚೆಗೆ ಜಪಾನು ಆರ್ಥಿಕವಾಗಿ ವಿಶೇಷ ಪ್ರಗತಿ ಸಾಧಿಸಿದೆ. ಕೃಷಿ ಮೇಜಿ ಸರ್ಕಾರ ಕೃಷಿ ಅಭಿವೃದ್ಧಿಗೆ ಅನೇಕ ಕ್ರಮಗಳನ್ನು ಕೈಗೊಂಡಿತು. ಜಮೀನ್ದಾರರಿಂದ ಪಡೆದ ಜಮೀನುಗಳನ್ನು ಸಣ್ಣ ಹಿಡುವಳಿಗಳಾಗಿ ಮಾಡಿ, ಸಾಮಾನ್ಯ ರೈತರಿಗೆ ಹಂಚಿತು. ಋಣಪರಿಹಾರ ಮತ್ತು ಕೃಷಿಕಾರ್ಯಗಳಿಗೆ ಹಣ ಒದಗಿಸಲು ಸಹಕಾರ ಸಂಘಗಳ ಸ್ಥಾಪನೆಯನ್ನು ಪ್ರೋತ್ಸಾಹಿಸಿತು. ಗೇಣಿ ಶಾಸನಗಳ ಮೂಲಕ ಗೇಣಿದಾರರ ಹಿತರಕ್ಷಣೆ ಮಾಡಲು ಪ್ರಯತ್ನಿಸಿತು. ಜಮೀನು ಕೊಳ್ಳುವುದಕ್ಕೂ ಕೃಷಿ ಅಭಿವೃದ್ಧಿಪಡಿಸುವುದಕ್ಕೂ ಕೃಷಿ ಅಭಿವೃದ್ಧಿ ಬ್ಯಾಂಕುಗಳಿಂದಲೂ ನೇರವಾಗಿ ಸರ್ಕಾರದಿಂದಲೂ ದೀರ್ಘಾವಧಿ ಸಾಲಗಳು ದೊರಕುವಂತೆ ಮಾಡಿತು. ಮೇಜಿ ಸರ್ಕಾರದ ಈ ಕ್ರಮಗಳಿಂದ ರೈತರ ಸ್ಥಿತಿ ಉತ್ತಮಗೊಂಡಿತು. ಆದರೆ ವಿಶ್ವ ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ರೈತರು ಮತ್ತೆ ಕಷ್ಟಕ್ಕೊಳಗಾದರು. ಆಗ ಸರ್ಕಾರ ತೆರಿಗೆಗಳನ್ನಿಳಿಸಿ, ಪರಿಹಾರ ಕಾಮಗಾರಿಗಳನ್ನು ಕೈಗೊಂಡಿತು. ಸಹಕಾರ ಸಂಘಗಳಿಗೆ ರೈತರಿಂದ ಬಾಕಿ ಇದ್ದ ಸಾಲಗಳಿಗೆ ಸರ್ಕಾರ ಹೊಣೆಯಾಯಿತು. ಕೃತಕಗೊಬ್ಬರದ ಕಾರ್ಖಾನೆಗಳ ಸ್ಥಾಪನೆ ಆಯಿತು. ಕೃಷಿ ವಿಶ್ವವಿದ್ಯಾಲಯಗಳು ಮತ್ತು ಪ್ರಾಯೋಗಿಕ ಕೃಷಿ ಕೇಂದ್ರಗಳು ಪ್ರಾರಂಭವಾದುವು. ದೇಶಾದ್ಯಂತ ಉಗ್ರಾಣಗಳನ್ನೂ ಮಳಿಗೆಗಳನ್ನೂ ಸ್ಥಾಪಿಸಿ ಬತ್ತದ ಬೆಲೆ ಸ್ಥಿರೀಕರಣ ನೀತಿಯನ್ನು ಆಚರಣೆಗೆ ತರಲಾಯಿತು. ಈ ಕಾರ್ಯಕ್ರಮಗಳಿಂದಲೂ ಯುದ್ಧಕಾಲದ ಬೆಲೆ ಏರಿಕೆಯಿಂದಲೂ ರೈತರ ಸ್ಥಿತಿ ಉತ್ತಮಗೊಂಡಿತು. ಆದರೂ ಗೇಣಿದಾರನ ಸ್ಥಿತಿ ಉತ್ತಮವಾಗಲಿಲ್ಲ. ಎರಡನೆಯ ಮಹಾಯುದ್ಧದ ಅನಂತರ ಜಪಾನಿನಲ್ಲಿ ಏರ್ಪಟ್ಟ ಮಿತ್ರರಾಷ್ಟ್ರಗಳ ಆಡಳಿತ ಭೂಸುಧಾರಣಾ ಶಾಸನವನ್ನು ಜಾರಿಗೆ ತಂದು ಗೇಣಿಯ ಪ್ರಮಾಣವನ್ನು ನಿಗದಿಗೊಳಿಸಿತು. ಗೈರುಹಾಜರಿ ಜಮೀನ್ದಾರಿಯನ್ನು ರದ್ದುಗೊಳಿಸಿತು. ಸ್ಥಳೀಯ ಜಮೀನ್ದಾರರು 2.5 ಎಕರೆಗಳ ವರೆಗೆ ಗೇಣಿಗೆ ಕೊಟ್ಟು, ಮಿಕ್ಕ ಜಮೀನನ್ನು ಸರ್ಕಾರಕ್ಕೆ ಮಾರುವಂತೆ ಅಧಿನಿಯಮ ಜಾರಿಗೆ ಬಂತು. ಸ್ವಂತ ಬೇಸಾಯಗಾರರು ತಲಾ 7.5 ಎಕರೆಗಳಿಗೆ ಮೀರದಷ್ಟು ಜಮೀನನ್ನು ಇಟ್ಟುಕೊಳ್ಳಲು ಅನುಮತಿಯಿತ್ತು. ನೆಲವಿಲ್ಲದ ರೈತರು ಸರ್ಕಾರದಿಂದ ಜಮೀನನ್ನು ಕೊಂಡು 30 ವಾರ್ಷಿಕ ಕಂತುಗಳಲ್ಲಿ ತೀರಿಸುವ ಅವಕಾಶ ಪಡೆದರು. ಈ ಸುಧಾರಣೆಗಳ ಫಲವಾಗಿ ಕೃಷಿ ಉತ್ಪಾದನೆ ಹೆಚ್ಚಿ, ಅದು ರಾಷ್ಟ್ರಾದಾಯದ ಶೇ. 16ರ ಮಟ್ಟಕ್ಕೆ ಬಂತು. ಅಲ್ಲಿಂದೀಚೆಗೆ ಜಪಾನಿನ ಬೇಸಾಯ ಮತ್ತಷ್ಟು ಪ್ರಗತಿ ಹೊಂದಿದ್ದರೂ ಆಹಾರ ಪದಾರ್ಥಗಳ ಆಮದು ನಿಂತಿಲ್ಲ. ಆದರೆ ಇದಕ್ಕೆ ಪ್ರತಿಯಾಗಿ ಕೈಗಾರಿಕಾ ವಸ್ತುಗಳನ್ನು ರಫ್ತು ಮಾಡುವ ಸಾಮಥ್ರ್ಯವಿರುವುದರಿಂದ ಆಹಾರ ಪದಾರ್ಥಗಳ ಆಮದು ಅಷ್ಟಾಗಿ ಹೊರೆಯೆನಿಸಿಲ್ಲ. ಮುಂದಿನ ದಶಕಗಳಲ್ಲಿ ಆಹಾರ ಧಾನ್ಯಗಳನ್ನು ತನಗೆ ಅನುಕೂಲವಾದ ದರದಲ್ಲಿ ಆಮದು ಮಾಡಿಕೊಳ್ಳಲು ಇರುವ ಸಾಧ್ಯತೆಗಳನ್ನು ಜಪಾನು ಈಗ ಪರಿಶೀಲಿಸುತ್ತಿದೆ. ಈ ಪರಿಶೀಲನೆಯ ಆಧಾರದ ಮೇಲೆ ತನ್ನ ಭವಿಷ್ಯ ಕೃಷಿ ನೀತಿಯನ್ನು ನಿರ್ಧರಿಸಲಿದೆ. ಕೈಗಾರಿಕೆ ಪಾಶ್ಚಾತ್ಯ ಸಂಪರ್ಕ ಬೆಳೆದ ಅನಂತರ ಆಮದಾದ ಕೈಗಾರಿಕೆ ವಸ್ತುಗಳಿಂದ ಜಪಾನೀಯರು ಆಕರ್ಷಿತರಾದರು. ತಮ್ಮ ದೇಶವೂ ಆರ್ಥಿಕ ಮತ್ತು ರಕ್ಷಣಾದೃಷ್ಟಿಯಿಂದ ಬಲವಾಗಲು ಆಧುನಿಕ ಕೈಗಾರಿಕೆಗಳ ಸ್ಥಾಪನೆ ತಮ್ಮ ದೇಶದಲ್ಲೇ ಆಗಬೇಕೆಂದು ಅವರು ತೀರ್ಮಾನಿಸಿದರು. ಆದರೆ ದೇಶದಲ್ಲಿ ಆಗ ಖಾಸಗಿ ಬಂಡವಾಳ ಮತ್ತು ಉದ್ಯಮ ಸಾಹಸದ ಕೊರತೆಯಿತ್ತು ಆದ್ದರಿಂದ ಸರ್ಕಾರವೇ ಕೈಗಾರಿಕೆಗಳನ್ನು ಸ್ಥಾಪಿಸಿ, ಕ್ರಮೇಣ ಖಾಸಗಿಯವರು ಮುಂದೆ ಬಂದಾಗ ಅವರಿಗೆ ವರ್ಗಾವಣೆ ಮಾಡಲಾರಂಭಿಸಿತು. ವರ್ಗಾವಣೆಯ ಅನಂತರ ಆ ಕೈಗಾರಿಕೆಗಳಿಗೆ ಸರ್ಕಾರ ತನ್ನ ನೆರವನ್ನು ಮುಂದುವರಿಸಿತು. ರಾಷ್ಟ್ರಾಭಿವೃದ್ಧಿಗೆ ಅಗತ್ಯವೆನಿಸಿದ ಕೈಗಾರಿಕೆಗಳಿಗೆ ಸಹಾಯ ಮತ್ತು ಪ್ರೋತ್ಸಾಹ ಧನವೂ ಸಂರಕ್ಷಣೆಯೂ ಒದಗಿವೆ. ಕೈಗಾರಿಕೆಗಳಿಗೆ ಬಂಡವಾಳ ಒದಗಿಸಲು ಕೈಗಾರಿಕಾ ಬ್ಯಾಂಕುಗಳನ್ನು ಸ್ಥಾಪಿಸಿ, ಅವಶ್ಯವೆನಿಸಿದ ವಿದೇಶಿ ಬಂಡವಾಳ ಮತ್ತು ತಾಂತ್ರಿಕ ಸೌಲಭ್ಯವನ್ನು ದೊರಕಿಸಲು ಸರ್ಕಾರ ನೆರವಾಗಿದೆ. ಕೈಗಾರಿಕಾ ಸಂಶೋಧನೆಗೆ ವಿಶೇಷ ಹಣ ವೆಚ್ಚ ಮಾಡಿದೆ. ಚೀನ, ರಷ್ಯಗಳೊಡನೆ ನಡೆದ ಯುದ್ಧಗಳೂ ಒಂದನೆಯ ಮಹಾಯುದ್ಧವೂ ಜಪಾನಿನ ಕೈಗಾರಿಕಾಭಿವೃದ್ಧಿಗೆ ವಿಶೇಷ ಅವಕಾಶ ನೀಡಿದವು. ಆದರೆ ಯುದ್ಧಾನಂತರ ಪಾಶ್ಚಾತ್ಯ ರಾಷ್ಟ್ರಗಳ ಪೈಪೋಟಿಯಿಂದ ಜಪಾನಿನ ಕೈಗಾರಿಕಾ ವಸ್ತುಗಳಿಗೆ ಬೇಡಿಕೆ ಇಳಿಯಿತು. 1923ರ ಭೂಕಂಪದಿಂದ ಕೈಗಾರಿಕಾಗಳಿಗೆ ಅಪಾರ ನಷ್ಟವುಂಟಾಯಿತು. 1929ರ ಆರ್ಥಿಕ ಮುಗ್ಗಟ್ಟಿನಿಂದ ಕೈಗಾರಿಕೆಗಳು ಕಷ್ಟಕ್ಕೀಡಾದುವು. ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿತು. ಆಗ ಸರ್ಕಾರ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಲು ಕೈಗೊಂಡ ಕ್ರಮಗಳೆಂದರೆ ಬೃಹತ್ ಕೈಗಾರಿಕೆಗಳ ಉತ್ಪನ್ನದ ನಿಯಂತ್ರಣ ಮತ್ತು ಬೆಲೆಗಳ ನಿಗದಿ. ಕೈಗಾರಿಕೆಗಳ ಆಧುನೀಕರಣವನ್ನು ಪ್ರೋತ್ಸಾಹಿಸಿ, ರಫ್ತು ಕೈಗಾರಿಕೆಗಳನ್ನು ಕೇಂದ್ರೀಯ ಹತೋಟಿಗೆ ಒಳಪಡಿಸಲಾಯಿತು. ರೇಷ್ಮೆ ಕೈಗಾರಿಕೆಗೆ ಸಹಾಯಧನ ನೀಡಿತು. ಅಗ್ಗದ ನೀತಿಗೆ ಅನುಗುಣವಾಗಿ ಯೆನ್‍ನ ಮೌಲ್ಯಛೇದನ ಮಾಡಿತು. ಈ ಕಾರ್ಯಕ್ರಮಗಳಿಂದ ಜಪಾನಿನಲ್ಲಿ ಇತರ ದೇಶಗಳಿಗಿಂತಲೂ ಮುಂಚೆಯೇ ಕೈಗಾರಿಕೆಗಳು ಚೇತರಿಸಿಕೊಂಡುವು. ವಿಶ್ವಮಾರುಕಟ್ಟೆಯಲ್ಲಿ ಜಪಾನಿನ ಪೈಪೋಟಿ ತೀವ್ರಗೊಂಡಿತು. ಇದರಿಂದ ತೊಂದರೆಗೊಳಗಾದ ಬ್ರಿಟನ್ ಮುಂತಾದ ದೇಶಗಳು ಜಪಾನನ್ನು ಕಾರ್ಮಿಕ ಶೋಷಣೆ ಮತ್ತು ಆಯುಕ್ತ ವ್ಯಾಪಾರ ನಡವಳಿಕೆಯ ದೇಶವೆಂದು ದೂಷಿಸಿದುವು. ಜಪಾನಿನ ಕೈಗಾರಿಕೆಗಳ ಉತ್ತಮ ವ್ಯವಸ್ಥೆ, ಕಾರ್ಮಿಕರ ನಿಷ್ಠಾವಂತ ಸೇವೆ ಮತ್ತು ದೇಶಪ್ರೇಮ, ಸರ್ಕಾರದ ಸತತ ಸಹಾಯ ಮತ್ತು ಪ್ರೋತ್ಸಾಹ ಹಾಗೂ ಕೆಲವು ಸ್ಥಳೀಯ ಸೌಲಭ್ಯಗಳು-ಇವೂ ಜಪಾನಿನ ಕೈಗಾರಿಕೆಗಳ ಚೇತರಿಕೆಗೆ ಕಾರಣ. ಜಪಾನಿನ ಉದ್ಯಮಗಳು ಜೈಬಟ್ಸು ಎಂಬ ಉದ್ಯಮಿ ಕುಟುಂಬಗಳ ಒಡೆತನಕ್ಕೆ ಒಳಪಟ್ಟಿದ್ದುವು. ಮಿತ್ಸುಯಿ, ಮಿತ್ಸುಬಿಷಿ, ಸುಮಿಟೋಮೊ, ಯಾಸುಡೊ ಎಂಬವು ಇವುಗಳಲ್ಲಿ ಮುಖ್ಯವಾದವು. ಇವು ಕೈಗಾರಿಕೆ ಮಾತ್ರವಲ್ಲದೆ ವಾಣಿಜ್ಯ, ಬ್ಯಾಂಕಿಂಗ್, ನೌಕೋದ್ಯಮ ಮುಂತಾದ ಇತರೆ ಕ್ಷೇತ್ರಗಳನ್ನೂ ಕೇಂದ್ರೀಕರಿಸಿ, ಅವುಗಳ ಏಕಸ್ವಾಮ್ಯ ಪಡೆದಿದ್ದುವು. ಇವುಗಳ ಪೈಪೋಟಿಯನ್ನೆದುರಿಸುವುದು ಇತರ ಸಂಸ್ಥೆಗಳಿಗೆ ಬಹಳ ಕಷ್ಟವಾಗಿತ್ತು. ಜಪಾನನ್ನು ಎರಡನೆಯ ಮಹಾಯುದ್ಧಕ್ಕೆ ಎಳೆಯಲು ಇವು ಮುಖ್ಯ ಕಾರಣ. ಜಪಾನಿನ ಕೈಗಾರಿಕಾ ಕ್ಷೇತ್ರದಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಪ್ರಶಂಸನೀಯವಾದ್ದು. ಇವು ವಿದ್ಯುಚ್ಛಕ್ತಿ ಮತ್ತು ಸಣ್ಣ ಯಂತ್ರಗಳನ್ನು ಉಪಯೋಗಿಸಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿವೆ. ಸಣ್ಣ ಕೈಗಾರಿಕೆಗಳೂ ಬೃಹತ್ ಕೈಗಾರಿಕೆಗಳೂ ಪರಸ್ಪರ ಪೂರಕವಾಗಿ ಬೆಳೆಯಲು ಬೃಹತ್ ಕೈಗಾರಿಕೆಗಳಂತೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೂ ಸರ್ಕಾರ ಎಲ್ಲ ಬಗೆಯ ಸಹಾಯ ನೀಡಿದೆ. ಹೀಗೆ ಹೆಮ್ಮೆ ಪಡಬಹುದಾದ ಜಪಾನಿನ ಕೈಗಾರಿಕಾ ಪ್ರಗತಿ ದುರಭಿಮಾನಕ್ಕೆ ಎಡೆ ಕೊಟ್ಟಿತು. ಬೆಳೆಯುತ್ತಿದ್ದ ಆರ್ಥಿಕ ವ್ಯವಸ್ಥೆ ರಾಜ್ಯವಿಸ್ತರಣಾಕಾಂಕ್ಷೆಗೆ ಎಡೆಕೊಟ್ಟಿತು. ಅದು ಆಕ್ರಮಣಶೀಲವಾಯಿತು. ಹಗುರವಾದ ಮತ್ತು ಗ್ರಾಹಕ ವಸ್ತುಗಳಿಗೆ ಪ್ರತಿಯಾಗಿ ಭಾರವಾದ ಉತ್ಪಾದಕ ವಸ್ತುಗಳ ಮತ್ತು ಯುದ್ಧ ಸಲಕರಣೆಗಳ ತಯಾರಿಕೆಗೆ ಪ್ರಾಮುಖ್ಯ ಏರ್ಪಟ್ಟಿತು. ಉಕ್ಕು, ವಿಮಾನಗಳು, ಟ್ರಕ್ಕುಗಳು, ಯುದ್ಧನೌಕೆಗಳು ಮುಂತಾದವುಗಳ ಉತ್ಪಾದನೆ ಅತ್ಯುನ್ನತ ಮಟ್ಟಕ್ಕೇರಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನಿನ ಕೈಗಾರಿಕೆಗಳು ಸರ್ಕಾರದ ಭದ್ರ ಹತೋಟಿಗೆ ಒಳಗಾದುವು. ಕಾರ್ಮಿಕರು ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುವಂತೆ ಒತ್ತಾಯ ಮಾಡಲಾಯಿತು. ಯುದ್ಧ ಮುಂದುವರಿದಂತೆ ಆರ್ಥಿಕ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಿತು. ಕೈಗಾರಿಕೆಗಳು ಬಾಂಬು ದಾಳಿಯಿಂದ ಬಹುಮಟ್ಟಿಗೆ ನಾಶವಾದುವು. ಯುದ್ಧಾನಂತರ ಮಿತ್ರರಾಷ್ಟ್ರಗಳ ಆಡಳಿತ ಜೈಬಟ್ಸುಗಳನ್ನು ಒಡೆಯಲೇರ್ಪಡಿಸಿ, ಅವುಗಳ ಸಂಸ್ಥೆಗಳ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿಸಿತು. 10 ಭಾರಿ ಉದ್ಯಮಿ ಕುಟುಂಬಗಳು ಇನ್ನು 10 ವರ್ಷಗಳ ಕಾಲ ಕೈಗಾರಿಕಾ ಕ್ಷೇತ್ರಕ್ಕೆ ಪ್ರವೇಶಿಸಕೂಡದೆಂದು ನಿರ್ಬಂಧ ಹಾಕಿತು. ಅವುಗಳ ಮೇಲೆ ಅತ್ಯಧಿಕ ಮಟ್ಟದ ತೆರಿಗೆಗಳನ್ನು ಹಾಕಿತು. ಆರ್ಥಿಕ ವಿಕೇಂದ್ರೀಕರಣವೇ ಈ ನಿರ್ಬಂಧಗಳ ಉದ್ದೇಶವೆಂದು ಜನರಲ್ ಮೆಕಾರ್ಥರನ ಸರ್ಕಾರ ಹೇಳಿದರೂ, ಜಪಾನಿನ ಕೈಗಾರಿಕಾ ಪ್ರಾಬಲ್ಯವನ್ನಡಗಿಸಬೇಕೆಂಬುದೇ ಇದರ ಉದ್ದೇಶವೆಂದು ಜಪಾನೀಯರು ಭಾವಿಸಿದರು. ಈ ನಿರ್ಬಂಧಗಳಿಂದ ಉತ್ಪಾದನೆ ಇಳಿಯಿತು. ಇದರಿಂದ ಎಚ್ಚರಗೊಂಡ ಸರ್ಕಾರ, ಆಗ್ನೇಯ ಏಷ್ಯದಲ್ಲಿ ಕಮ್ಯೂನಿಸ್ಟ್ ಪ್ರಾಬಲ್ಯವನ್ನು ತಡೆಯಲು ಜಪಾನು ಬಲವಾದ ಕೈಗಾರಿಕಾ ರಾಷ್ಟ್ರವಾಗಿದ್ದರೆ ಒಳ್ಳೆಯದೆಂದು ಭಾವಿಸಿ, ಕೇವಲ 2 ವರ್ಷಗಳಲ್ಲೇ ತನ್ನ ಜೈಬಟ್ಸು ವಿರೋಧಿ ನೀತಿಯನ್ನು ಕೈಬಿಟ್ಟಿತು. ಅವುಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿತು. ಜೈಬಟ್ಸು ಕಂಪೆನಿಗಳು ಶೀಘ್ರವೇ ಒಟ್ಟುಗೂಡಿ, ಮತ್ತೆ ತಮ್ಮ ಪ್ರಾಧಾನ್ಯವನ್ನು ಸ್ಥಾಪಿಸಿಕೊಂಡುವು. ಕೊರಿಯ ಯುದ್ಧ ಜಪಾನಿನ ಕೈಗಾರಿಕಾ ವಿಸ್ತರಣೆಗೆ ಮತ್ತಷ್ಟು ಅವಕಾಶ ನೀಡಿತು. 1960ರ ವೇಳೆಗೆ ಪಶ್ಚಿಮ ಜರ್ಮನಿಯಂತೆ ಜಪಾನು ಕೂಡ ಮಹಾ ಕೈಗಾರಿಕಾ ರಾಷ್ಟ್ರವಾಗಿ ಪುನಃ ತಲೆಯೆತ್ತಿತು. ಜವಳಿ, ಕಾಗದ, ಉಕ್ಕು, ನೌಕೋದ್ಯಮ, ಮೋಟಾರು ತಯಾರಿಕೆ, ರೇಡಿಯೋ, ಟೆಲಿವಿಷನ್, ಪ್ಲಾಸ್ಟಿಕ್ಸ್, ಭಾರವಾದ ವಿದ್ಯುದ್ಯಂತ್ರಗಳು, ರಾಸಾಯನಿಕ ವಸ್ತುಗಳು, ಕೃತಕ ಗೊಬ್ಬರ ಮುಂತಾದ ಅನೇಕ ಕೈಗಾರಿಕೆಗಳು ಅದ್ಭುತ ಪ್ರಗತಿ ಸಾಧಿಸಿವೆ. ಮುಂದಿನ ಕಾಲು ಶತಮಾನದ ಕೈಗಾರಿಕಾಭಿವೃದ್ಧಿಗೆ ಜಪಾನು ಈಗಾಗಲೇ ಸಜ್ಜಾಗುತ್ತಿದೆ. ವಿಶ್ವಾದ್ಯಂತ ಇಂಧನ ಮತ್ತು ಕಚ್ಚಾ ಪದಾರ್ಥಗಳ ಕೊರತೆ ಇರುವುದರಿಂದ, ಕಬ್ಬಿಣದ ಅದುರು ಮತ್ತು ಕಲ್ಲಿದ್ದಲಿನ ಆಮದಿಗಾಗಿ ಅನೇಕ ದೇಶಗಳೊಡನೆ ಅದು ದೀರ್ಘಾವಧಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಕೆಲವು ಲೋಹಗಳು ಮತ್ತು ಖನಿಜಗಳನ್ನು ಪಡೆಯಲು ಕೆಲವು ವಿದೇಶೀ ಗಣಿ ಕಂಪನಿಗಳಲ್ಲಿ ಬಂಡವಾಳ ಹೂಡಿದೆ. ಇದೇ ಉದ್ದೇಶಕ್ಕಾಗಿಯೇ ಕೆಲವು ದೇಶಗಳಿಗೆ ಆರ್ಥಿಕ ನೆರವು ನೀಡಿದೆ. ಉತ್ಪಾದನ ಕ್ರಮಗಳನ್ನು ಉತ್ತಮಪಡಿಸಲು ಕೆಲವು ಐರೋಪ್ಯ ರಾಷ್ಟ್ರಗಳೊಡನೆ ತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡಿದೆ. ಜಪಾನ್ ಈಗಾಗಲೆ ಪೂರ್ಣೋದ್ಯೋಗ ಮಟ್ಟವನ್ನು ಮೀರಿದೆ. ಕಾರ್ಮಿಕರ ಅಭಾವ ಮತ್ತು ಅಧಿಕ ವೇತನ ಮಟ್ಟ ಅಲ್ಲಿಯ ಕೈಗಾರಿಕೆಗಳಿಗೆ ದೊಡ್ಡ ಸಮಸ್ಯೆ. ಇದನ್ನು ಪರಿಹರಿಸಲು ದಕ್ಷ ಹಾಗೂ ಅಗ್ಗದ ಕಾರ್ಮಿಕ ಬಲ ಅಧಿಕ ಪ್ರಮಾಣದಲ್ಲಿರುವ ಭಾರತದಂಥ ದೇಶಗಳ ಸಹವರ್ತಿಯಾಗಿ, ತನ್ನ ಕೆಲವು ಕೈಗಾರಿಕೆಗಳನ್ನು ಅಲ್ಲಿಗೆ ಸ್ಥಳಾಂತರಿಸಲೂ ಹೊಸ ಉದ್ಯಮಗಳನ್ನು ಸಂಯುಕ್ತ ಉದ್ಯಮಗಳಾಗಿ ಅಲ್ಲಿ ಸ್ಥಾಪಿಸಲೂ ಪ್ರಯತ್ನಿಸುತ್ತಿದೆ. ಇನ್ನು ಮುಂದೆ ಈವರೆಗಿನ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಪ್ರತಿಯಾಗಿ ಕಂಪ್ಯೂಟರುಗಳು, ಸಂಪರ್ಕ ಸಾಧನಗಳು, ಪೆಟ್ರೊ ರಾಸಾಯನಿಕ ಕೈಗಾರಿಕೆಗಳು ಮುಂತಾದ ಬಂಡವಾಳ ಪ್ರಧಾನವಾದ ಅತ್ಯಾಧುನಿಕ ಕೈಗಾರಿಕೆಗಳಿಗೆ ಜಪಾನು ಹೆಚ್ಚು ಗಮನ ಕೊಡುವ ನಿರೀಕ್ಷೆಯುಂಟು. ಕೈಗಾರಿಕೆಗಳು ದಕ್ಷಿಣದ ಕೆಲವೇ ಪಟ್ಟಣಗಳಲ್ಲಿ ಕೇಂದ್ರೀಕರಿಸುವುದನ್ನು ತಪ್ಪಿಸಲು, 1973-78ರ ಅವಧಿಯಲ್ಲಿ ಇನ್ನು ಕೆಲವು ಪ್ರದೇಶಗಳನ್ನು ಅಭಿವೃದ್ಧಿಪಡಿಸಿ, ಅಲ್ಲಿಗೆ ಹೋಗುವ ಕೈಗಾರಿಕೆಗಳಿಗೆ ಹಣಕಾಸಿನ ಪ್ರೋತ್ಸಾಹ ನೀಡುವುದಲ್ಲದೆ, ಹಾಗೆ ಹೋಗಲು ಹಿಂದೆಗೆಯುವ ಕೈಗಾರಿಕೆಗಳ ಮೇಲೆ ತೆರಿಗೆ ವಿಧಿಸಲು ಉದ್ದೇಶಿಸಿದೆ. ಇದರಿಂದ ಕೈಗಾರಿಕಾ ವಿಕೇಂದ್ರೀಕರಣವಾಗುವುದೆಂದು ನಿರೀಕ್ಷೆ. ಜಪಾನಿನಲ್ಲಿ ಕಾರ್ಮಿಕ ಸಂಘಟನೆ ಇತರ ಕೈಗಾರಿಕಾ ರಾಷ್ಟ್ರಗಳಷ್ಟು ಬಲಗೊಂಡಿಲ್ಲ. 1972ರಲ್ಲಿ ಜಪಾನಿನಲ್ಲಿ ಶÉೀ. 34ರಷ್ಟು ಕಾರ್ಮಿಕರು ಮಾತ್ರ ಸಂಘಟಿತರಾಗಿದ್ದರು. ಶೇ. 60ರಷ್ಟು ಕಾರ್ಮಿಕರು ಖಾಸಗಿ ಉದ್ಯಮಗಳಲ್ಲಿದ್ದರು. ಜಪಾನಿನಲ್ಲಿ ವೃತ್ತಿಗೊಂದು ಸಂಘ ಎಂಬ ನಿಯಮಕ್ಕೆ ಪ್ರತಿಯಾಗಿ ಸಂಸ್ಥೆಗೊಂದು ಸಂಘ ಎಂಬ ಪದ್ಧತಿ ಇದೆ. ನಾಲ್ಕು ರಾಷ್ಟ್ರೀಯ ಕಾರ್ಮಿಕ ಸಂಸ್ಥೆಗಳುಂಟು. ಸರ್ಕಾರಿ ಉದ್ಯಮಗಳಲ್ಲಿ ಮುಷ್ಕರಗಳು ಕಾನೂನುಬಾಹಿರ. ಜಪಾನೀ ಉದ್ಯಮಗಳಲ್ಲಿ ಈಗ ಇರುವ 42.3 ಗಂಟೆಯ ದುಡಿಮೆ ಅವಧಿಯನ್ನು ಮತ್ತಷ್ಟು ಇಳಿಸಿ, ವಾರಕ್ಕೆ 5 ದುಡಿಮೆಯ ದಿನಗಳು ಮಾತ್ರ ಇರುವಂತೆ ಮಾಡಲು ಒತ್ತಾಯ ಮಾಡಲಾಗುತ್ತಿದೆ. ವೇತನ ಮಟ್ಟ ಕಳೆದ 10 ವರ್ಷಗಳಲ್ಲಿ ಶೇ. 240ರಷ್ಟು ಹೆಚ್ಚಿದೆ. ಜೊತೆಗೆ ಉತ್ಪಾದನೆಯ ಮಟ್ಟವೂ ಹೆಚ್ಚಿರುವುದು ಗಮನಾರ್ಹ. ನಿರುದ್ಯೋಗ ಶೇ. 1.4ರಷ್ಟು ಮಾತ್ರ. ಕಾರ್ಮಿಕರ ನಿವೃತ್ತಿ ವಯೋಮಿತಿ 55 ವರ್ಷ. ಕಾರ್ಮಿಕರ ತೀವ್ರ ಅಭಾವವಿರುವುದರಿಂದ ಇದನ್ನು ಕ್ರಮಕ್ರಮವಾಗಿ 60 ವರ್ಷಗಳಿಗೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಜಪಾನೀ ಕಾರ್ಮಿಕನ ಸರಾಸರಿ ತಿಂಗಳ ವೇತನ (ಬೋನಸ್ಸೂ ಸೇರಿ) 99,000 ಯೆನ್ ಅಥವಾ ರೂ. 2,828. ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಿಗೆ ಈಗ ರಾಷ್ಟ್ರಾದಾಯದ ಶೇ. 5ರಷ್ಟನ್ನು ಉಪಯೋಗಿಸಲಾಗುತ್ತಿದೆ. 1978ರ ವೇಳೆಗೆ ಇದು ರಾಷ್ಟ್ರಾದಾಯದ ಶೇ. 7.3ರಷ್ಟಕ್ಕೆ ಹೆಚ್ಚುವ ನಿರೀಕ್ಷೆಯಿದೆ. ವಿದೇಶೀ ವ್ಯಾಪಾರ ವಿದೇಶೀ ಸಂಪರ್ಕ ಪ್ರಾರಂಭವಾದ ತರುಣದಲ್ಲಿ ಜಪಾನು ಕೃಷಿವಸ್ತುಗಳನ್ನು ರಫ್ತು ಮಾಡಿ, ಕೈಗಾರಿಕಾ ಸಿದ್ಧವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಕಾಲಕ್ರಮದಲ್ಲಿ ಜಪಾನಿನಲ್ಲೇ ಕೈಗಾರಿಕೆಗಳು ಪ್ರಾರಂಭವಾದಾಗ ಅದು ಕಚ್ಚಾಸಾಮಗ್ರಿಯನ್ನೂ ಬಂಡವಾಳ ವಸ್ತುಗಳನ್ನೂ ಆಮದು ಮಾಡಿಕೊಳ್ಳಬೇಕಾಯಿತು. ಜನಸಂಖ್ಯೆ ಹೆಚ್ಚಿದಂತೆ, ಆಹಾರ ಪದಾರ್ಥಗಳ ಆಮದೂ ಅಗತ್ಯವಾಯಿತು. ಇದಕ್ಕೆ ಪ್ರತಿಯಾಗಿ ಅನುಭೋಗ ವಸ್ತುಗಳು, ಕರಕುಶಲ ವಸುಗಳು, ರೇಷ್ಮೆ, ಪಿಂಗಾಣಿ ಸಾಮಾನುಗಳು ಮುಂತಾದವನ್ನು ರಫ್ತುಮಾಡತೊಡಗಿತು. ವ್ಯಾಪಾರ ನಡೆಯುತ್ತಿದ್ದದ್ದು ಬಹಳಮಟ್ಟಿಗೆ ಏಷ್ಯ ಮತ್ತು ಅಮೆರಿಕಗಳೊಡನೆ. ಒಂದನೆಯ ಮಹಾಯುದ್ಧದ ಸಮಯದಲ್ಲಿ ಪಾಶ್ಚಾತ್ಯ ಪೈಪೋಟಿ ಇಲ್ಲದಿದ್ದುದರಿಂದ ಜಪಾನಿನ ವ್ಯಾಪಾರ ವಿಸ್ತರಿಸಿತು. ಆದರೆ ಯುದ್ಧಾನಂತರ ಪೈಪೋಟಿ ಪ್ರಾರಂಭವಾಯಿತು. 1923ರ ಭೂಕಂಪ ಮತ್ತು 1929ರ ಆರ್ಥಿಕ ಮುಗ್ಗಟ್ಟು ಜಪಾನಿನ ವ್ಯಾಪಾರಕ್ಕೆ ಧಕ್ಕೆಯುಂಟುಮಾಡಿದುವು. ಆದರೆ ಸರ್ಕಾರ ಕೈಗಾರಿಕೆಗಳ ಆಧುನೀಕರಣ ಮತ್ತು ಸರಕುಗಳ ರಫ್ತಿಗೆ ಪ್ರೋತ್ಸಾಹ ನೀಡಿದ್ದರಿಂದ, ಇತರ ರಾಷ್ಟ್ರಗಳಿಗಿಂತ ಮುಂಚೆಯೇ ಜಪಾನಿನ ವಿದೇಶೀ ವ್ಯಾಪಾರ ಚೇತರಿಸಿಕೊಂಡಿತು. ಹತ್ತಿ ಜವಳಿ ವ್ಯಾಪಾರದಲ್ಲಿ ಜಪಾನು ಬ್ರಿಟನ್ನಿಗೆ ಪ್ರಬಲ ಪ್ರತಿಸ್ಪರ್ಧಿಯಾಯಿತು. ಯುದ್ಧಕಾಲದಲ್ಲಿ ವಿದೇಶೀ ವ್ಯಾಪಾರ ಸಂಪೂರ್ಣವಾಗಿ ಸರ್ಕಾರದ ಹತೋಟಿಗೆ ಒಳಗಾಯಿತು. ಯುದ್ಧಾನಂತರ 2 ವರ್ಷ ವಿದೇಶೀ ವ್ಯಾಪಾರದ ಮೇಲೆ ಸರ್ಕಾರದ ನಿರ್ಬಂಧವಿತ್ತು. ಆ ಬಳಿಕ ನಿರ್ಬಂಧಗಳನ್ನು ತೆಗೆದು ಮೊದಲಿನಂತೆ ಖಾಸಗಿಯವರಿಗೇ ಬಿಡಲಾಯಿತು. ಅಮೆರಿಕ ಯುದ್ಧ ಪರಿಹಾರವನ್ನು ಕೇಳುವುದಕ್ಕೆ ಪ್ರತಿಯಾಗಿ ತಾನೇ 200 ಕೋಟಿ ಡಾಲರ್ ನೆರವನ್ನು ಬಹುಮಟ್ಟಿಗೆ ಧಾನ್ಯರೂಪದಲ್ಲಿ ನೀಡಿತು. ಕಚ್ಚಾಸಾಮಗ್ರಿಯ ಆಮದಿಗೂ ಅಧಿಕ ಪ್ರಮಾಣದಲ್ಲಿ ಧನಸಹಾಯ ಮಾಡಿತು. ಜಪಾನಿನಲ್ಲಿದ್ದ ಅಮೆರಿಕದ ಪಡೆಗಳಿಗೆ ಬೇಕಿದ್ದ ಸಾಮಗ್ರಿಗಳನ್ನು ಜಪಾನಿನಲ್ಲೇ ಕೊಳ್ಳಲಾಯಿತು. ಇದಕ್ಕಾಗಿ 1952ರಿಂದ 1956ರ ವರೆಗೆ ಜಪಾನಿಗೆ 340 ಕೋಟಿ ಡಾಲರ್ ಕೊಡಲಾಯಿತು. ಈ ಸಹಾಯಕ ಕ್ರಮಗಳಿಂದ ಜಪಾನು ವಿದೇಶಿ ವ್ಯಾಪಾರದಲ್ಲಿ ತನ್ನ ಯುದ್ಧಪೂರ್ವದ ಸ್ಥಾನ ಗಳಿಸಿತು. ಯುದ್ಧಕಾಲದಲ್ಲಿ ತೆರವು ಮಾಡಿದ್ದ ಏಷ್ಯನ್ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ಪುನಃ ಯಶಸ್ವಿಯಾಗಿ ಪ್ರವೇಶಿಸಿತು. ಅಮೆರಿಕವನ್ನು ಅತಿಯಾಗಿ ಅವಲಂಬಿಸದೆ ಇತರ ದೇಶಗಳೊಡನೆಯೂ ವ್ಯಾಪಾರಸಂಬಂಧವನ್ನು ಕುದುರಿಸಿಕೊಳ್ಳಲು ಉಪಕ್ರಮಿಸಿತು. ಈ ಪ್ರಯತ್ನದ ಫಲವಾಗಿ ಜಪಾನಿನ ವಿದೇಶೀ ವ್ಯಾಪಾರ ಅಭಿವೃದ್ಧಿ ಹೊಂದಿತು. 1972ರಲ್ಲಿ ಅದರ ರಫ್ತು 2,475.8 ಕೋಟಿ ಡಾಲರ್, ಆಮದು 1,620.6 ಕೋಟಿ ಡಾಲರ್; ವ್ಯಾಪಾರ ಹೆಚ್ಚಳ 855,2 ಕೋಟಿ ಡಾಲರ್. ಈ ಹೆಚ್ಚಳದ ಪ್ರವೃತ್ತಿ ಹಲವು ವರ್ಷಗಳಿಂದಲೂ ಮುಂದುವರಿಯುತ್ತಿದ್ದುದರಿಂದ ಜಪಾನಿನೊಡನೆ ವಿಶೇಷ ವ್ಯಾಪಾರಸಂಬಂಧ ಹೊಂದಿದ್ದ ಅಮೆರಿಕ ಬಿಕ್ಕಟ್ಟನ್ನೆದುರಿಸಬೇಕಾಯಿತು. ಈ ಬಿಕ್ಕಟ್ಟಿನ ಪರಿಹಾರಕ್ಕಾಗಿ ಜಪಾನು ಯೆನ್ ಮೌಲ್ಯವನ್ನು ಅಧಿಕಗೊಳಿಸಿ, ಆ ಮೂಲಕ ಆಮದನ್ನು ಹೆಚ್ಚಿಸಿ, ರಫ್ತನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ. ಇಷ್ಟರಿಂದಲೇ ವ್ಯಾಪಾರ ಸಮಸ್ಯೆ ಬಗೆಹರಿಯದೆಂದರಿತು ಮುಂದಿನ 5 ವರ್ಷಗಳಲ್ಲಿ ರಫ್ತು ಪ್ರಚೋದನೆಗೆ ಬದಲು ಜಪಾನಿನ ಜನಜೀವನವನ್ನು ಉತ್ತಮಪಡಿಸುವ ಕಾರ್ಯಕ್ರಮಕ್ಕೆ ಹೆಚ್ಚು ಗಮನ ಕೊಡಲು ನಿರ್ಧರಿಸಿದೆ. ಈ ಅಭಿವೃದ್ಧಿ ಯೋಜನೆಗೆ ತನ್ನ ರಾಷ್ಟ್ರದಾಯದ ಶೇ. 12.6ರಷ್ಟನ್ನು ಉಪಯೋಗಿಸಲು ಉದ್ದೇಶಿಸಿದೆ. ವಿಶ್ವಬ್ಯಾಂಕು, ಅಂತರರಾಷ್ಟ್ರೀಯ ಹಣ ನಿಧಿ ಮತ್ತು ಏಷ್ಯದ ಅಭಿವೃದ್ಧಿ ಬ್ಯಾಂಕಿನ ಮೂಲಕ ಹಿಂದುಳಿದ ರಾಷ್ಟ್ರಗಳ ಅಭಿವೃದ್ಧಿಗೂ ನೆರವಾಗುತ್ತಿದೆ. ಆದರೆ 1973ರಲ್ಲಿ ಸಂಭವಿಸಿದ ತೈಲ ಬಿಕ್ಕಟ್ಟಿನಿಂದಾಗಿ ಮತ್ತು ಅಂತರರಾಷ್ಟ್ರೀಯ ಹಣವ್ಯವಸ್ಥೆಯ ಅಸ್ಥಿರತೆಯಿಂದಾಗಿ ಜಪಾನಿನ ಆರ್ಥಿಕತೆಯ ಮೇಲೂ ತೀವ್ರ ಪರಿಣಾಮಗಳುಂಟಾಗಿವೆ. ಸಾರಿಗೆ ರಸ್ತೆಸಾರಿಗೆ ಮೇಜಿ ಅಧಿಕಾರ ಬರುವ ವೇಳೆಗೆ ರಕ್ಷಣೆಗೆ ಅಗತ್ಯವಾದ ಕೆಲವು ಹೆದ್ದಾರಿಗಳು ಮಾತ್ರ ಇದ್ದುವು. ಆದ್ದರಿಂದ ಮೇಜಿ ಆಳ್ವಿಕೆಯಲ್ಲಿ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳು, ಜಿಲ್ಲಾ ಹಾಗೂ ಸ್ಥಳೀಯ ರಸ್ತೆಗಳು ಎಂದು ವಿಂಗಡಿಸಿ, ಹೆದ್ದಾರಿಗಳ ನಿರ್ಮಾಣಕ್ಕಾಗಿ ಸಾರ್ವಜನಿಕ ಸಾಲ ಎತ್ತಲಾಯಿತು. 1950ರ ವೇಳೆಗೆ 6 ಲಕ್ಷ ಮೈ. ರಸ್ತೆಗಳಿದ್ದರೂ ಅವುಗಳಲ್ಲಿ 15,000 ಮೈ. ಮಾತ್ರ ಹೆದ್ದಾರಿಗಳಾಗಿದ್ದುವು. ಸಮುದ್ರಸಾಮೀಪ್ಯವಿರುವುದರಿಂದ ಜಪಾನಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ಸಾರ್ವಜನಿಕ ಒತ್ತಾಯ ಅಷ್ಟಾಗಿ ಇಲ್ಲ. ಆದರೂ ಮೋಟಾರು ಕೈಗಾರಿಕೆ ಅದ್ಭುತ ಪ್ರಗತಿ ಸಾಧಿಸಿದೆ. ವಾಣಿಜ್ಯ ವಾಹನಗಳನ್ನು ತಯಾರಿಸುವ ದೇಶಗಳಲ್ಲಿ ಜಪಾನಿನದು ಪ್ರಥಮ ಸ್ಥಾನ. ಅವು ಬಹು ಮಟ್ಟಿಗೆ ರಫ್ತಾಗುತ್ತವೆ. ರೈಲು ಸಾರಿಗೆ 1869ರಲ್ಲಿ ಜಪಾನ್ ಸರ್ಕಾರ ಕ್ಷಾಮ ನಿವಾರಣೆಗೆಂದು ರೈಲು ನಿರ್ಮಾಣ ಕಾರ್ಯ ಪ್ರಾರಂಭಿಸಿತು. ಇದಕ್ಕಾಗಿ ಇಂಗ್ಲೆಂಡಿನಲ್ಲಿ ಹತ್ತು ಲಕ್ಷ ಪೌಂಡ್ ಸಾಲವೆತ್ತಿ, ಅಲ್ಲಿಂದಲೇ ರೈಲ್ವೆ ಸಲಕರಣೆಗಳು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಪಡೆಯಲಾಯಿತು. 1872ರಲ್ಲಿ ಟೋಕಿಯೋ ವiತ್ತು ಯೋಕಹಾಮಾ ನಡುವೆ ಪ್ರಥಮ ರೈಲುಮಾರ್ಗ ನಿರ್ಮಿಸಲಾಯಿತು. 1880ರ ವೇಳೆಗೆ ಖಾಸಗಿ ಕಂಪೆನಿಗಳೂ ರೈಲುಮಾರ್ಗ ನಿರ್ಮಾಣ ಕಾರ್ಯದಲ್ಲಿ ಆಸಕ್ತಿ ವಹಿಸಿದುವು. ಕಂಪೆನಿಗಳು ಹೆಚ್ಚಿದಂತೆ ಅವುಗಳಲ್ಲಿ ಪರಸ್ಪರ ಹೊಂದಾವಣೆ ಕಷ್ಟವಾಯಿತು. ಅನೇಕ ಅನಗತ್ಯ ರೈಲುಮಾರ್ಗಗಳು ನಿರ್ಮಾಣವಾದುವು. ನಷ್ಟ ಉಂಟಾಯಿತು. ಆದ್ದರಿಂದ 1906ರಲ್ಲಿ ಪ್ರಮುಖ ರೈಲುಮಾರ್ಗಗಳನ್ನು ಸರ್ಕಾರವೇ ವಹಿಸಿಕೊಂಡು, ಉಪಮಾರ್ಗಗಳನ್ನು ಮಾತ್ರ ಖಾಸಗಿಯವರಿಗೆ ಬಿಟ್ಟಿತು. ಎರಡನೆಯ ಮಹಾಯುದ್ಧಕ್ಕೆ ಮುಂಚೆ ಜಪಾನಿನಲ್ಲಿ 17,000 ಮೈ. ರೈಲುಮಾರ್ಗಗಳು ಸರ್ಕಾರಕ್ಕೂ 7,000 ಮೈ. ಖಾಸಗಿ ಒಡೆತನಗಳಿಗೂ ಸೇರಿದ್ದುವು. ರೈಲುಗಳ ವಿದ್ಯುದೀಕರಣ ಪ್ರಾರಂಭವಾಗಿತ್ತು. ರೈಲ್ವೆಗಳ ಪುನವ್ರ್ಯವಸ್ಥೆ ಮತ್ತು ಆಧುನೀಕರಣಕ್ಕೆ ಗಮನ ಕೊಡಲಾದ್ದು ಯುದ್ಧದ ಅನಂತರ. ಕೈಗಾರಿಕಾ ವಿಕೇಂದ್ರೀಕರಣಕ್ಕೆ ಸಹಾಯವಾಗುವಂತೆ 1973-78ರ ಅವಧಿಯಲ್ಲಿ ತೀವ್ರ ವೇಗದ ರೈಲುಗಳ ಸಂಚಾರವನ್ನು ಈಗಿರುವ 440 ಮೈ. ಗಳಿಂದ 5,600 ಮೈ.ಗಳಿಗೆ ವಿಸ್ತರಿಸಲಾಗುವುದು. ಜಪಾನಿನಲ್ಲಿ ಸರಕಿಗಿಂತಲೂ ಪ್ರಯಾಣಿಕರಿಂದಲೇ ರೈಲುಗಳಿಗೆ ಹೆಚ್ಚು ವರಮಾನ ಬರುತ್ತದೆ. ಸರಕು ವಿಶೇಷವಾಗಿ ಕರಾವಳಿ ನೌಕಾಸಾರಿಗೆಯ ಮೂಲಕ ಸಾಗುತ್ತದೆ. ಹಡಗು ಸಾರಿಗೆ ಷೋಗನ್ನರ ಆಳ್ವಿಕೆಯ ಕೊನೆಯ ವೇಳೆಗೇ ದೊಡ್ಡ ಹಡಗುಗಳ ನಿರ್ಮಾಣ ಜಪಾನಿನಲ್ಲಿ ಪ್ರಾರಂಭವಾಗಿತ್ತು. ಆದರೆ ಅವು ಸಾಕಷ್ಟು ಸಂಖ್ಯೆಯಲ್ಲಿರಲಿಲ್ಲ. ಆದ್ದರಿಂದ ಮೇಜಿ ಸರ್ಕಾರ ಮೊದಲು ಹೊರ ದೇಶಗಳಿಂದ ಆಧುನಿಕ ಹಡಗುಗಳನ್ನು ಕೊಂಡು, ಬಳಿಕ ಅವುಗಳ ನಿರ್ಮಾಣಕ್ಕೆ ಗಮನ ಕೊಟ್ಟಿತು. ಕೊಂಡ ಹಡಗುಗಳನ್ನು ಕ್ರಮೇಣ ಖಾಸಗಿಯವರಿಗೆ ಮಾರಿತು. ಹಡಗು ಕಟ್ಟುವ ಕಂಪನಿಗಳಿಗೆ ಸರ್ಕಾರ ಧಾರಾಳವಾಗಿ ಧನಸಹಾಯ ಮಾಡಿತು. 1914ರ ವೇಳೆಗೆ ಜಪಾನಿನಲ್ಲಿ 300 ನೌಕಾನಿರ್ಮಾಣ ಕೇಂದ್ರಗಳಿದ್ದುವು. ನೌಕಾ ಕ್ಷೇತ್ರದಲ್ಲಿ ಜಪಾನು ಪ್ರಪಂಚದಲ್ಲಿ 3ನೆಯ ಸ್ಥಾನ ಪಡೆದಿತ್ತು. ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಜಪಾನು ತನ್ನ ಹಳೆಯ ಹಡಗುಗಳನ್ನು ಒಡೆದು ಹೊಸವನ್ನು ನಿರ್ಮಿಸುವ ಬೃಹತ್ ಕಾರ್ಯಕ್ರಮ ಕೈಗೊಂಡಿತು. ಇದಕ್ಕಾಗಿ ಖಾಸಗಿ ಕಂಪನಿಗಳಿಗೆ ಸರ್ಕಾರ ಧನಸಹಾಯ ನೀಡಿತು. 1939ರ ವೇಳೆಗೆ ಜಪಾನಿನ ಹಡಗು ಬಲ 56 ಲಕ್ಷ ಟನ್. ಆದರೆ ಯುದ್ಧದಲ್ಲಿ ಜಪಾನಿನ ಬಹುಪಾಲು ಹಡಗುಗಳೂ ಅನೇಕ ನೌಕಾ ನಿರ್ಮಾಣ ಕೇಂದ್ರಗಳೂ ನಾಶವಾದುವು. ಯುದ್ಧ ಮುಗಿದಾಗ ಜಪಾನಿನ ಹಡಗು ಬಲ 14 ಲಕ್ಷ ಟನ್. ಅವುಗಳಲ್ಲಿ ಹಲವು ಸಮುದ್ರಯಾನಕ್ಕೆ ಯೋಗ್ಯವಾಗಿರಲಿಲ್ಲ. ಆದರೆ ಯುದ್ಧಾನಂತರ ಹಡಗುಗಳ ದುರಸ್ತಿ ಮತ್ತು ನಿರ್ಮಾಣಕ್ಕೆ ಗಮನ ಕೊಟ್ಟದ್ದರಿಂದ 1969ರ ವೇಳೆಗೆ 86 ಲಕ್ಷ ಟನ್ ಹಡಗುಬಲವಿತ್ತು. ಪ್ರಪಂಚದ ಹೊಸ ಹಡಗು ನಿರ್ಮಾಣ ಕಾರ್ಯದ ಶೇ. 48ರಷ್ಟು ಜಪಾನಿನಲ್ಲಿ ನಡೆಯುತ್ತಿತ್ತು. ವಾಯು ಸಾರಿಗೆ ಜಪಾನಿನಲ್ಲಿ ನಾಗರಿಕ ವಾಯುಯಾನಕ್ಕಾಗಿ 1929ರ ಅನಂತರ ಕೆಲವು ಖಾಸಗಿ ಕಂಪನಿಗಳು ತಲೆಯೆತ್ತಿದುವು. ಬಳಿಕ ಅವು ಒಟ್ಟುಗೂಡಿದುವು. ಜಪಾನ್ ಏರ್‍ವೇಸ್ ಕಂಪನಿ ಸ್ಥಾಪಿತವಾಯಿತು. ಯುದ್ಧಕಾಲದಲ್ಲಿ ನಾಗರಿಕ ವಾಯುಪಡೆಯೂ ಸೇನೆಯ ವಶದಲ್ಲಿತ್ತು. ಯುದ್ಧಾನಂತರವೂ 1951ರ ವರೆಗೆ ನಾಗರಿಕ ವಾಯುಯಾನವನ್ನು ನಿಲ್ಲಿಸಲಾಗಿತ್ತು. 1951ರಿಂದ ಅಂತರ್ದೇಶೀಯ ಮತ್ತು 1954ರಿಂದ ಅಂತರರಾಷ್ಟ್ರೀಯ ವಾಯುಯಾನ ಇದೆ. ಬ್ಯಾಂಕು ವ್ಯವಸ್ಥೆ ಮತ್ತು ಹಣಕಾಸು ಜಪಾನಿನಲ್ಲಿ ಬ್ಯಾಂಕುಗಳನ್ನು ಅಮೆರಿಕ ಮತ್ತು ಐರೋಪ್ಯ ಮಾದರಿಯಲ್ಲಿ ಸ್ಥಾಪಿಸಿದ್ದರೂ ಅವನ್ನು ಸ್ಥಳೀಯ ಪರಿಸ್ಥಿತಿಗೆ ಹೊಂದಿಸಿಕೊಂಡಿದೆ. 1882ರಲ್ಲಿ ಬೆಲ್ಜಿಯಮ್‍ನ ಕೇಂದ್ರ ಬ್ಯಾಂಕಿನ ಮಾದರಿಯಲ್ಲಿ ಬ್ಯಾಂಕ್ ಆಫ್ ಜಪಾನ್ ಎಂಬ ಕೇಂದ್ರ ಬ್ಯಾಂಕನ್ನು ಸ್ಥಾಪಿಸಲಾಯಿತು. ಇದು ಸರ್ಕಾರ ಮತ್ತು ಖಾಸಗಿ ಬಂಡವಾಳ ಪಡೆದಿದ್ದ ಕೂಡು ಬಂಡವಾಳ ಸಂಸ್ಥೆಯಾಗಿತ್ತು. ಇದಕ್ಕೆ ಮುಂಚೆ ವಾಣಿಜ್ಯ ಬ್ಯಾಂಕುಗಳೇ ನೋಟು ಚಲಾವಣೆಯನ್ನೂ ಮಾಡುತ್ತಿದ್ದುವು. ಆದರೆ ಬ್ಯಾಂಕ್ ಆಫ್ ಜಪಾನ್ ಸ್ಥಾಪನೆಯಾದ ಅನಂತರ ಅದಕ್ಕೆ ನೋಟು ಚಲಾವಣೆಯ ಏಕಸ್ವಾಮ್ಯ ಮತ್ತು ಇತರ ಕೇಂದ್ರ ಬ್ಯಾಂಕಿಂಗ್ ಕಾರ್ಯಭಾರಗಳನ್ನು ವಹಿಸಲಾಯಿತು. 1885ರಲ್ಲಿ ಚಿನ್ನ ಮತ್ತು ನಿರ್ದಿಷ್ಟ ಪ್ರತಿಭೂತಿಗಳ ಆಧಾರವುಳ್ಳ ಪರಿವರ್ತನೀಯ ನೋಟು ಪದ್ಧತಿಯನ್ನು ಜಾರಿಗೆ ತರಲಾಯಿತು. ಕೆಲವು ಮಾರ್ಪಾಟುಗಳ ಅನಂತರ 1950ರಲ್ಲಿ ಒಟ್ಟು ನೋಟುಗಳ ಪರಿಮಾಣವನ್ನು ಸರ್ಕಾರ ಗೊತ್ತುಪಡಿಸಿತು. ಅದನ್ನು ಮೀರಿದಾಗ ಹೆಚ್ಚಿನ ನೋಟುಗಳ ಮೇಲೆ ತೆರಿಗೆ ವಿಧಿಸುವ ಪದ್ಧತಿಯನ್ನು ಆಚರಣೆಗೆ ತರಲಾಯಿತು. ಹಣದ ಉಬ್ಬರವನ್ನು ತಡೆಯುವುದು ಇದರ ಉದ್ದೇಶ. ಜಪಾನಿನ ವಾಣಿಜ್ಯ ಬ್ಯಾಂಕುಗಳು ಐರೋಪ್ಯ ಬ್ಯಾಂಕುಗಳಂತೆ ಮಿಶ್ರ ಬ್ಯಾಂಕಿಂಗ್ ಪದ್ಧತಿಯನ್ನನುಸರಿಸಿವೆ. ಇದರಿಂದ ನಾನಾ ಕ್ಷೇತ್ರಗಳ ಅಭಿವೃದ್ಧಿಗೆ ಬ್ಯಾಂಕುಗಳು ವಿಶೇಷ ಸಹಾಯಕವಾಗಿವೆ. (ಕೆ.ಎನ್.ಎಂ.) ಮೂಲಗಳು [[ವರ್ಗ:ಜಪಾನ್|*] ಪೂರ್ವ ಏಷ್ಯಾ ಏಷ್ಯಾ ಖಂಡದ ದೇಶಗಳು ದೇಶಗಳು
2347
https://kn.wikipedia.org/wiki/%E0%B2%B8%E0%B3%8D%E0%B2%9F%E0%B3%80%E0%B2%B5%E0%B2%A8%E0%B3%8D%20%E0%B2%B8%E0%B3%8D%E0%B2%AA%E0%B3%80%E0%B2%B2%E0%B3%8D%E0%B2%AC%E0%B2%B0%E0%B3%8D%E0%B2%97%E0%B3%8D
ಸ್ಟೀವನ್ ಸ್ಪೀಲ್ಬರ್ಗ್
ಸ್ಟೀವನ್ ಸ್ಪೀಲ್ಬರ್ಗ್ ಅಮೇರಿಕ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಜುರಾಸಿಕ್ ಪಾರ್ಕ್ (೧೯೯೩) ಇವರ ಅದ್ಭುತ ಚಿತ್ರ. ಇವರ ಪೂರ್ಣ ಹೆಸರು ಸ್ಟೀವನ್ ಆಲಾನ್ ಸ್ಪೀಲ್ಬರ್ಗ್. ಸ್ಪೀಲ್ಬರ್ಗ್ ಹುಟ್ಟಿದ್ದು ಅಮೇರಿಕದ ಒಹಾಯೋ ರಾಜ್ಯದಲ್ಲಿನ ಸಿನ್ಸಿನ್ನಾಟಿ ನಗರದಲ್ಲಿ. ಜನ್ಮ ದಿನಾಂಕ ೧೮ ಡಿಸೆಂಬರ್ ೧೯೪೬. ಉಲ್ಲೇಖಗಳು ಬಾಹ್ಯ ಸಂಪರ್ಕಗಳು Survivors of the Shoah Visual History Foundation (founded by Spielberg) Time 100: Steven Spielberg Spielberg at 60  – Empire ಚಿತ್ರರಂಗ ನಿರ್ದೇಶಕರು ನಿರ್ಮಾಪಕರು ಲೇಖಕರು
2355
https://kn.wikipedia.org/wiki/%E0%B2%9C%E0%B2%BE%E0%B2%B0%E0%B3%8D%E0%B2%9C%E0%B3%8D%20%E0%B2%B2%E0%B3%8D%E0%B2%AF%E0%B3%82%E0%B2%95%E0%B2%BE%E0%B2%B8%E0%B3%8D
ಜಾರ್ಜ್ ಲ್ಯೂಕಾಸ್
ಜಾರ್ಜ್ ಲ್ಯೂಕಾಸ್ ಅಮೇರಿಕಾ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಸುಪ್ರಸಿದ್ಧ ಸ್ಟಾರ್ ವಾರ್ಸ್ ಚಿತ್ರಗಳ ನಿರ್ಮಾಪಕ ನಿರ್ದೇಶಕರಾದ ಇವರು ಅಮೇರಿಕಾದ ಹಲವು ಗಣ್ಯರಲ್ಲೊಬ್ಬರು. ಲ್ಯೂಕಾಸ್ ಫಿಲ್ಮ್ಸ್ ಲಿಮಿಟೆಡ್ ಸಂಸ್ಥಾಪಕರೂ ಹೌದು. ಉಲ್ಲೇಖಗಳು ಬಾಹ್ಯ ಸಂಪರ್ಕಗಳು George Lucas biography at Lucasfilm.com George Lucas at World of Business Ideas ಚಿತ್ರರಂಗ ನಿರ್ದೇಶಕರು ನಿರ್ಮಾಪಕರು ಲೇಖಕರು ಸ್ಟಾರ್ ವಾರ್ಸ್‌
2358
https://kn.wikipedia.org/wiki/%E0%B2%AB%E0%B3%8D%E0%B2%B0%E0%B2%BE%E0%B2%82%E0%B2%B8%E0%B2%BF%E0%B2%B8%E0%B3%8D%20%E0%B2%AB%E0%B3%8B%E0%B2%B0%E0%B3%8D%E0%B2%A1%E0%B3%8D%20%E0%B2%95%E0%B3%8A%E0%B2%AA%E0%B3%8D%E0%B2%AA%E0%B2%B2%E0%B2%BE
ಫ್ರಾಂಸಿಸ್ ಫೋರ್ಡ್ ಕೊಪ್ಪಲಾ
ಫ್ರಾಂಸಿಸ್ ಫೋರ್ಡ್ ಕೊಪ್ಪಲಾ ಅಮೇರಿಕಾ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು. ಇವರ ಗಾಡ್ ಫಾದರ್ : ಟ್ರೈಲಾಜಿ ವಿಶ್ವವಿಖ್ಯಾವಾಗಿದೆ, ಬಾಹ್ಯ ಸಂಪರ್ಕಗಳು Francis Ford Coppola: Texas Monthly Talks, YouTube video posted on November 24, 2008 2007 Francis Ford Coppola Video Interview with InterviewingHollywood.com Bibliography at the University of California Berkeley Library Francis Ford Coppola Presents "Perfecting the Rubicon: An interview with Francis Ford Coppola" "Back to Bernalda" by Coppola, T (International Herald Tribune Style Magazine), December 8, 2012 ಚಿತ್ರರಂಗ ನಿರ್ದೇಶಕರು ನಿರ್ಮಾಪಕರು ಲೇಖಕರು
2370
https://kn.wikipedia.org/wiki/%E0%B2%AB%E0%B3%86%E0%B2%AC%E0%B3%8D%E0%B2%B0%E0%B2%B5%E0%B2%B0%E0%B2%BF
ಫೆಬ್ರವರಿ
ಜೂಲಿಯನ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್‌ಗಳಲ್ಲಿ ಫೆಬ್ರವರಿ ವರ್ಷದ ಎರಡನೇ ತಿಂಗಳು. ತಿಂಗಳು ಸಾಮಾನ್ಯ ವರ್ಷಗಳಲ್ಲಿ ೨೮ ದಿನಗಳು ಮತ್ತು ಅಧಿಕ ವರ್ಷದಲ್ಲಿ ೨೯ ದಿನಗಳನ್ನು ಹೊಂದಿರುತ್ತದೆ. ೨೯ ನೇ ದಿನವನ್ನು ಅಧಿಕ ದಿನ ಎಂದು ಕರೆಯಲಾಗುತ್ತದೆ. ಇದು ೩೧ ದಿನಗಳನ್ನು ಹೊಂದಿರದ ಐದು ತಿಂಗಳುಗಳಲ್ಲಿ ಮೊದಲನೆಯದು (ಇತರ ನಾಲ್ಕು ತಿಂಗಳು ಏಪ್ರಿಲ್, ಜೂನ್, ಸೆಪ್ಟೆಂಬರ್ ಮತ್ತು ನವೆಂಬರ್) ಮತ್ತು ೩೦ ದಿನಗಳಿಗಿಂತ ಕಡಿಮೆ ಇರುವ ಏಕೈಕ ತಿಂಗಳು. ಫೆಬ್ರವರಿ ಉತ್ತರ ಗೋಳಾರ್ಧದಲ್ಲಿ ಹವಾಮಾನ ಚಳಿಗಾಲದ ಮೂರನೇ ಮತ್ತು ಕೊನೆಯ ತಿಂಗಳು. ದಕ್ಷಿಣ ಗೋಳಾರ್ಧದಲ್ಲಿ, ಫೆಬ್ರವರಿಯು ಹವಾಮಾನದ ಬೇಸಿಗೆಯ ಮೂರನೇ ಮತ್ತು ಕೊನೆಯ ತಿಂಗಳು (ಉತ್ತರ ಗೋಳಾರ್ಧದಲ್ಲಿ ಆಗಸ್ಟ್‌ನ ಕಾಲೋಚಿತ ಸಮಾನವಾಗಿರುತ್ತದೆ). ಉಚ್ಚಾರಣೆ "ಫೆಬ್ರವರಿ" ಅನ್ನು ವಿವಿಧ ರೀತಿಯಲ್ಲಿ ಉಚ್ಚರಿಸಲಾಗುತ್ತದೆ. ಪದದ ಆರಂಭವನ್ನು / / ˈfɛbju - / ಎಂದು ಉಚ್ಚರಿಸಲಾಗುತ್ತದೆ. ( ಎಫ್‌ಇಬಿ -ಯೂ- ಅಥವಾ / ˈ fɛb ru - / ಎಫ್‌ಇಬಿ -ರೂ- ) ಅನೇಕ ಜನರು ಮೊದಲ "ಆರ್" ಅನ್ನು ಬಿಡುತ್ತಾರೆ. ಅದನ್ನು "ಫೆಬ್ರವರಿ" ಎಂದು ಬರೆಯುವಂತೆ /j / ನೊಂದಿಗೆ ಬದಲಾಯಿಸುತ್ತಾರೆ. ಇದು "ಜನವರಿ" ( / ˈdʒ æn . ju - / ನೊಂದಿಗೆ ಸಾದೃಶ್ಯದ ಮೂಲಕ ಬರುತ್ತದೆ. ಹಾಗೆಯೇ ಎರಡು "ಆರ್" ಗಳು ಪರಸ್ಪರ ಹತ್ತಿರವಿರುವ ಒಂದು ಅಸ್ಪಷ್ಟತೆಯ ಪರಿಣಾಮವು ಒಂದು ಬದಲಾವಣೆಗೆ ಕಾರಣವಾಗುತ್ತದೆ. ಪದದ ಅಂತ್ಯವನ್ನು ಯುಎಸ್ ನಲ್ಲಿ /-ɛr i / -⁠ ಇಆರ್‌ಆರ್-ಇ‌ಇ ಮತ್ತು ಯುಕೆ ನಲ್ಲಿ /-ər i / -⁠ ər-ee ಎಂದು ಉಚ್ಚರಿಸಲಾಗುತ್ತದೆ. ಇತಿಹಾಸ ರೋಮನ್ ತಿಂಗಳು ಫೆಬ್ರವರಿಯಸ್ ಲ್ಯಾಟಿನ್ ಪದದ ಫೆಬ್ರುಮ್ ನಂತರ ಹೆಸರಿಸಲಾಯಿತು. ಅಂದರೆ "ಶುದ್ಧೀಕರಣ", ಶುದ್ಧೀಕರಣ ಆಚರಣೆ ಫೆಬ್ರುವಾ ಮೂಲಕ ಫೆಬ್ರವರಿ ೧೫ ರಂದು (ಹುಣ್ಣಿಮೆ) ಹಳೆಯ ಚಂದ್ರನ ರೋಮನ್ ಕ್ಯಾಲೆಂಡರ್ನಲ್ಲಿ ನಡೆಯಿತು. ರೋಮನ್ ಕ್ಯಾಲೆಂಡರ್‌ಗೆ ಜನವರಿ ಮತ್ತು ಫೆಬ್ರವರಿ ಕೊನೆಯ ಎರಡು ತಿಂಗಳುಗಳನ್ನು ಸೇರಿಸಲಾಯಿತು. ಏಕೆಂದರೆ ರೋಮನ್ನರು ಮೂಲತಃ ಚಳಿಗಾಲವನ್ನು ತಿಂಗಳಿಲ್ಲದ ಅವಧಿ ಎಂದು ಪರಿಗಣಿಸಿದ್ದಾರೆ. ಅವುಗಳನ್ನು ನುಮಾ ಪೊಂಪಿಲಿಯಸ್ ೭೧೩ ರಲ್ಲಿ ಸೇರಿಸಿದರು. ಕ್ರಿ.ಪೂ. ಫೆಬ್ರುವರಿಯು ಕ್ಯಾಲೆಂಡರ್ ವರ್ಷದ ಕೊನೆಯ ತಿಂಗಳಾಗಿದ್ದು, ಡಿಸೆಮ್ವಿರ್‌ಗಳ ಕಾಲದವರೆಗೆ (ಸಿ. ೪೫೦ ಕ್ರಿ.ಪೂ.), ಅದು ಎರಡನೇ ತಿಂಗಳಾದಾಗ. ಕೆಲವು ಸಮಯಗಳಲ್ಲಿ ಫೆಬ್ರವರಿಯನ್ನು ೨೩ ಅಥವಾ ೨೪ ದಿನಗಳವರೆಗೆ ಮೊಟಕುಗೊಳಿಸಲಾಯಿತು ಮತ್ತು ೨೭-ದಿನಗಳ ಇಂಟರ್‌ಕಾಲರಿ ತಿಂಗಳು. ಇಂಟರ್‌ಕಲಾರಿಸ್ ಅನ್ನು ಸಾಂದರ್ಭಿಕವಾಗಿ ಫೆಬ್ರವರಿ ನಂತರ ತಕ್ಷಣವೇ ಋತುಗಳೊಂದಿಗೆ ವರ್ಷವನ್ನು ಮರುಹೊಂದಿಸಲು ಸೇರಿಸಲಾಗುತ್ತದೆ. ಪ್ರಾಚೀನ ರೋಮ್‌ನಲ್ಲಿ ಫೆಬ್ರವರಿ ಆಚರಣೆಗಳಲ್ಲಿ ಅಂಬರ್ಬಿಯಂ (ನಿಖರವಾದ ದಿನಾಂಕ ತಿಳಿದಿಲ್ಲ), ಸೆಮೆಂಟಿವೇ (ಫೆಬ್ರವರಿ ೨), ಫೆಬ್ರುವಾ (ಫೆಬ್ರವರಿ ೧೩-೧೫), ಲುಪರ್ಕಾಲಿಯಾ (ಫೆಬ್ರವರಿ ೧೩-೧೫), ಪೇರೆಂಟಾಲಿಯಾ (ಫೆಬ್ರವರಿ ೧೩-೨೨), ಕ್ವಿರಿನಾಲಿಯಾ ( ಫೆಬ್ರವರಿ ೧೭, (ಫೆಬ್ರವರಿ ೨೧), ಕ್ಯಾರಿಸ್ಟಿಯಾ (ಫೆಬ್ರವರಿ ೨೨), ಟರ್ಮಿನಾಲಿಯಾ (ಫೆಬ್ರವರಿ ೨೩), ರೆಜಿಫುಜಿಯಂ (ಫೆಬ್ರವರಿ ೨೪), ಮತ್ತು ಅಗೋನಿಯಮ್ ಮಾರ್ಟಿಯಾಲ್ (ಫೆಬ್ರವರಿ ೨೭). ಈ ದಿನಗಳು ಆಧುನಿಕ ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಹೊಂದಿಕೆಯಾಗುವುದಿಲ್ಲ. ಜೂಲಿಯನ್ ಕ್ಯಾಲೆಂಡರ್ ಅನ್ನು ಸ್ಥಾಪಿಸಿದ ಸುಧಾರಣೆಗಳ ಅಡಿಯಲ್ಲಿ, ಇಂಟರ್ಕಲಾರಿಸ್ ಅನ್ನು ರದ್ದುಗೊಳಿಸಲಾಯಿತು. ಅಧಿಕ ವರ್ಷಗಳು ಪ್ರತಿ ನಾಲ್ಕನೇ ವರ್ಷಕ್ಕೆ ನಿಯಮಿತವಾಗಿ ಸಂಭವಿಸುತ್ತವೆ ಮತ್ತು ಅಧಿಕ ವರ್ಷಗಳಲ್ಲಿ ಫೆಬ್ರವರಿ ೨೯ ನೇ ದಿನವನ್ನು ಪಡೆಯಿತು. ಅದರ ನಂತರ, ಇದು ಕ್ಯಾಲೆಂಡರ್ ವರ್ಷದ ಎರಡನೇ ತಿಂಗಳಾಗಿ ಉಳಿಯಿತು. ಅಂದರೆ ತಿಂಗಳುಗಳನ್ನು ಪ್ರದರ್ಶಿಸುವ ಕ್ರಮ (ಜನವರಿ, ಫೆಬ್ರವರಿ, ಮಾರ್ಚ್,. . ., ಡಿಸೆಂಬರ್) ಒಂದು ವರ್ಷದ ಒಂದು ನೋಟದ ಕ್ಯಾಲೆಂಡರ್ ಒಳಗೆ. ಮಧ್ಯ ಯುಗದಲ್ಲೂ, ಮಾರ್ಚ್ ೨೫ ಅಥವಾ ಡಿಸೆಂಬರ್ ೨೫ ರಂದು ಸಂಖ್ಯೆ ಅನ್ನೋ ಡೊಮಿನಿ ವರ್ಷ ಪ್ರಾರಂಭವಾದಾಗ, ಎಲ್ಲಾ ಹನ್ನೆರಡು ತಿಂಗಳುಗಳನ್ನು ಕ್ರಮವಾಗಿ ಪ್ರದರ್ಶಿಸಿದಾಗ ಎರಡನೇ ತಿಂಗಳು ಫೆಬ್ರವರಿ. ಗ್ರೆಗೋರಿಯನ್ ಕ್ಯಾಲೆಂಡರ್ ಸುಧಾರಣೆಗಳು ಯಾವ ವರ್ಷಗಳು ಅಧಿಕ ವರ್ಷಗಳು ಎಂದು ನಿರ್ಧರಿಸಲು ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿತು. ಆದರೆ ೨೯-ದಿನಗಳ ಫೆಬ್ರವರಿಯನ್ನು ಒಳಗೊಂಡಿತ್ತು. ಫೆಬ್ರವರಿಯ ಐತಿಹಾಸಿಕ ಹೆಸರುಗಳು ಹಳೆಯ ಇಂಗ್ಲಿಷ್ ಪದಗಳಾದ ಸೊಲ್ಮೊನಾಥ್ (ಮಣ್ಣಿನ ತಿಂಗಳು) ಮತ್ತು ಕೇಲ್-ಮೊನಾಥ್ ( ಎಲೆಕೋಸಿಗೆ ಹೆಸರಿಸಲಾಗಿದೆ) ಮತ್ತು ಚಾರ್ಲೆಮ್ಯಾಗ್ನೆ ಪದನಾಮವನ್ನು ಹೋರ್ನುಂಗ್ ಅನ್ನು ಒಳಗೊಂಡಿವೆ. ಫಿನ್ನಿಷ್ ಭಾಷೆಯಲ್ಲಿ, ತಿಂಗಳನ್ನು ಹೆಲ್ಮಿಕು ಎಂದು ಕರೆಯಲಾಗುತ್ತದೆ. ಅಂದರೆ "ಮುತ್ತಿನ ತಿಂಗಳು". ಮರದ ಕೊಂಬೆಗಳ ಮೇಲೆ ಹಿಮ ಕರಗಿದಾಗ, ಅದು ಹನಿಗಳನ್ನು ರೂಪಿಸುತ್ತದೆ ಮತ್ತು ಅವು ಮತ್ತೆ ಹೆಪ್ಪುಗಟ್ಟುವಂತೆ ಮಾಡುತ್ತದೆ,. ಅವು ಮಂಜುಗಡ್ಡೆಯ ಮುತ್ತುಗಳಂತೆ. ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳಲ್ಲಿ ಕ್ರಮವಾಗಿ, ತಿಂಗಳನ್ನು ಲೂಟಿ ಎಂದು ಕರೆಯಲಾಗುತ್ತದೆ ಅಥವಾ ( ಲ್ಯೂಟಿ ), ಅಂದರೆ ಮಂಜುಗಡ್ಡೆಯ ತಿಂಗಳು ಅಥವಾ ಕಠಿಣ ಹಿಮ. ಮೆಸಿಡೋನಿಯನ್ ಭಾಷೆಯಲ್ಲಿ ತಿಂಗಳು ಸೆಚ್ಕೊ ( ), ಅಂದರೆ ಮರ ಕತ್ತರಿಸುವ ತಿಂಗಳು. ಜೆಕ್ ಭಾಷೆಯಲ್ಲಿ ಇದನ್ನು ಎಂದು ಕರೆಯಲಾಗುತ್ತದೆ,. ಅಂದರೆ ಮುಳುಗುವ ತಿಂಗಳು (ನದಿಯ ಮಂಜುಗಡ್ಡೆ). ಸ್ಲೋವೆನ್‌ನಲ್ಲಿ, ಫೆಬ್ರವರಿಯನ್ನು ಸಾಂಪ್ರದಾಯಿಕವಾಗಿ ಎಂದು ಕರೆಯಲಾಗುತ್ತದೆ. ಹಿಮಬಿಳಲುಗಳು ಅಥವಾ ಕ್ಯಾಂಡಲ್ಮಾಸ್‌ಗೆ ಸಂಬಂಧಿಸಿದೆ. ಈ ಹೆಸರು ಬಂದಿದ. ಎಂದು ಬರೆಯಲಾಗಿದೆ. ೧೭೭೫ ರಿಂದ ನ್ಯೂ ಕಾರ್ನಿಯೋಲನ್ ಅಲ್ಮಾನಾಕ್‌ನಲ್ಲಿ ಮತ್ತು ೧೮೨೪ ರಿಂದ ಫ್ರಾಂಕ್ ಮೆಟೆಲ್ಕೊ ತನ್ನ ನ್ಯೂ ಅಲ್ಮಾನಾಕ್‌ನಲ್ಲಿ ಅದರ ಅಂತಿಮ ರೂಪಕ್ಕೆ ಬದಲಾಯಿಸಿದರು. ಈ ಹೆಸರನ್ನು ಎಂದು ಸಹ ಉಚ್ಚರಿಸಲಾಗುತ್ತದೆ. ಅಂದರೆ "ಮರಗಳನ್ನು ಕಡಿಯುವ ತಿಂಗಳು". ೧೮೪೮ ರಲ್ಲಿ, ಸ್ಲೋವೆನ್ ಸೊಸೈಟಿ ಆಫ್ ಲುಬ್ಲಿಯಾನಾದಿಂದ ಈ ತಿಂಗಳನ್ನು ಟಾಲ್ನಿಕ್ ಕರೆಯಲು ರೋಕೋಡೆಲ್ಸ್ಕೆ ಅನನುಭವಿ ಕ್ಮೆಟಿಜ್ಸ್ಕೆಯಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಯಿತು. (ಐಸ್ ಕರಗುವಿಕೆಗೆ ಸಂಬಂಧಿಸಿದೆ), ಆದರೆ ಅದು ಅಂಟಿಕೊಳ್ಳಲಿಲ್ಲ. ಈ ಕಲ್ಪನೆಯನ್ನು ಪಾದ್ರಿ ಬ್ಲಾಜ್ ಪೊಟೊಕ್ನಿಕ್ ಪ್ರಸ್ತಾಪಿಸಿದರು. ಸ್ಲೊವೇನಿಯಲ್ಲಿ ಫೆಬ್ರವರಿಯ ಇನ್ನೊಂದು ಹೆಸರು ವೆಸ್ನರ್. ಪೌರಾಣಿಕ ಪಾತ್ರ ವೆಸ್ನಾ ನಂತರದಲ್ಲಿ. ಪ್ಯಾಟರ್ನ್ಸ್ ಸಾಮಾನ್ಯ ವರ್ಷಗಳಲ್ಲಿ ಕೇವಲ ೨೮ ದಿನಗಳನ್ನು ಹೊಂದಿರುವ ಫೆಬ್ರುವರಿಯು ಒಂದೇ ಒಂದು ಹುಣ್ಣಿಮೆಯಿಲ್ಲದೆ ಹಾದುಹೋಗುವ ಏಕೈಕ ತಿಂಗಳು. ಹುಣ್ಣಿಮೆಯ ದಿನಾಂಕ ಮತ್ತು ಸಮಯವನ್ನು ನಿರ್ಧರಿಸುವ ಆಧಾರವಾಗಿ ಸಂಘಟಿತ ಸಾರ್ವತ್ರಿಕ ಸಮಯವನ್ನು ಬಳಸಿಕೊಂಡು ಇದು ಕೊನೆಯದಾಗಿ ೨೦೧೮ ರಲ್ಲಿ ಸಂಭವಿಸಿತು ಮತ್ತು ಮುಂದಿನದು ೨೦೩೭ ರಲ್ಲಿ ಸಂಭವಿಸುತ್ತದೆ. ಅಮಾವಾಸ್ಯೆಗೆ ಸಂಬಂಧಿಸಿದಂತೆ ಇದೇ ಸತ್ಯ: ಮತ್ತೊಮ್ಮೆ ಸಮನ್ವಯ ಸಾರ್ವತ್ರಿಕ ಸಮಯವನ್ನು ಆಧಾರವಾಗಿ ಬಳಸಿ, ಇದು ಕೊನೆಯದಾಗಿ ೨೦೧೪ ರಲ್ಲಿ ಸಂಭವಿಸಿತು ಮತ್ತು ಮುಂದಿನದು ೨೦೩೩ ರಲ್ಲಿ ಸಂಭವಿಸುತ್ತದೆ. ಫೆಬ್ರವರಿಯು ಕ್ಯಾಲೆಂಡರ್‌ನ ಏಕೈಕ ತಿಂಗಳು. ಇದು ಆರು ವರ್ಷಗಳಲ್ಲಿ ಒಂದು ಮತ್ತು ಹನ್ನೊಂದು ವರ್ಷಗಳ ಎರಡು ನಡುವೆ ಪರ್ಯಾಯವಾಗಿ, ನಿಖರವಾಗಿ ನಾಲ್ಕು ಪೂರ್ಣ ೭-ದಿನದ ವಾರಗಳನ್ನು ಹೊಂದಿರುತ್ತದೆ. ಸೋಮವಾರದಂದು ತಮ್ಮ ವಾರವನ್ನು ಪ್ರಾರಂಭಿಸುವ ದೇಶಗಳಲ್ಲಿ, ಇದು ಶುಕ್ರವಾರದಿಂದ ಪ್ರಾರಂಭವಾಗುವ ಸಾಮಾನ್ಯ ವರ್ಷದ ಭಾಗವಾಗಿ ಸಂಭವಿಸುತ್ತದೆ. ಇದರಲ್ಲಿ ಫೆಬ್ರವರಿ ೧ ಸೋಮವಾರ ಮತ್ತು ೨೮ ನೇ ಭಾನುವಾರ. ತೀರಾ ಇತ್ತೀಚಿನ ಘಟನೆ ೨೦೨೧ ಆಗಿತ್ತು ಮತ್ತು ಮುಂದಿನದು ೨೦೧೭ ಆಗಿರುತ್ತದೆ. ಭಾನುವಾರದಂದು ತಮ್ಮ ವಾರವನ್ನು ಪ್ರಾರಂಭಿಸುವ ದೇಶಗಳಲ್ಲಿ, ಇದು ಗುರುವಾರದಿಂದ ಪ್ರಾರಂಭವಾಗುವ ಸಾಮಾನ್ಯ ವರ್ಷದಲ್ಲಿ ಸಂಭವಿಸುತ್ತದೆ. ತೀರಾ ಇತ್ತೀಚಿನ ಘಟನೆ ೨೦೧೫ ಮತ್ತು ಮುಂದಿನ ಘಟನೆ ೨೦೨೬ ಆಗಿರುತ್ತದೆ. ಸ್ಕಿಪ್ಡ್ ಲೀಪ್ ಇಯರ್‌ನಿಂದ ಪ್ಯಾಟರ್ನ್ ಅನ್ನು ಮುರಿಯಲಾಗಿದೆ. ಆದರೆ ೧೯೦೦ ರಿಂದ ಯಾವುದೇ ಅಧಿಕ ವರ್ಷವನ್ನು ಬಿಟ್ಟುಬಿಡಲಾಗಿಲ್ಲ ಮತ್ತು ೨೧೦೦ ರವರೆಗೆ ಯಾವುದೇ ಅಧಿಕ ವರ್ಷವನ್ನು ಬಿಟ್ಟುಬಿಡಲಾಗುವುದಿಲ್ಲ. ಖಗೋಳಶಾಸ್ತ್ರ ಫೆಬ್ರುವರಿ ಉಲ್ಕಾಪಾತಗಳಲ್ಲಿ ಆಲ್ಫಾ ಸೆಂಟೌರಿಡ್ಸ್ (ಫೆಬ್ರವರಿ ಆರಂಭದಲ್ಲಿ ಕಾಣಿಸಿಕೊಳ್ಳುತ್ತದೆ), ಮಾರ್ಚ್ ವರ್ಜಿನಿಡ್ಸ್ (ಫೆಬ್ರವರಿ ೧೪ ರಿಂದ ಏಪ್ರಿಲ್ ೨೫ ರವರೆಗೆ ಇರುತ್ತದೆ. ಮಾರ್ಚ್ ೨೦ ರ ಸುಮಾರಿಗೆ ಗರಿಷ್ಠವಾಗಿರುತ್ತದೆ). ಡೆಲ್ಟಾ ಕ್ಯಾನ್‌ಕ್ರಿಡ್ಸ್ (ಡಿಸೆಂಬರ್ ೧೪ ರಿಂದ ಫೆಬ್ರವರಿ ೧೪ ರವರೆಗೆ ಕಾಣಿಸಿಕೊಳ್ಳುತ್ತದೆ. ಜನವರಿ ೧೭ ರಂದು ಗರಿಷ್ಠ ಮಟ್ಟ). ಓಮಿಕ್ರಾನ್ ಸೆಂಟೌರಿಡ್ಸ್ (ಜನವರಿ ಅಂತ್ಯದಿಂದ ಫೆಬ್ರುವರಿ ಮಧ್ಯದಲ್ಲಿ, ಥೀಟಾ ಸೆಂಟೌರಿಡ್ಸ್ (ಜನವರಿ ೨೩ - ಮಾರ್ಚ್ ೧೨, ದಕ್ಷಿಣ ಗೋಳಾರ್ಧದಲ್ಲಿ ಮಾತ್ರ ಗೋಚರಿಸುತ್ತದೆ), ಎಟಾ ವರ್ಜಿನಿಡ್ಸ್ (ಫೆಬ್ರವರಿ ೨೪ ಮತ್ತು ಮಾರ್ಚ್ ೨೭, ಮಾರ್ಚ್ ೧೮ ರ ಸುಮಾರಿಗೆ ಗರಿಷ್ಠ), ಮತ್ತು ಪೈ ವರ್ಜಿನಿಡ್ಸ್ (ಫೆಬ್ರವರಿ ೧೩ ಮತ್ತು ಏಪ್ರಿಲ್ ೮, ಮಾರ್ಚ್ ೩ ಮತ್ತು ಮಾರ್ಚ್ ೯ ರ ನಡುವೆ ಗರಿಷ್ಠ ಮಟ್ಟವನ್ನು ತಲುಪುತ್ತದೆ). ಚಿಹ್ನೆಗಳು ಫೆಬ್ರವರಿ ಹುಣ್ಣಿಮೆಯನ್ನು ಸ್ನೋ ಮೂನ್ ಎಂದು ಕರೆಯಲಾಗುತ್ತದೆ. ಇದರ ಜನ್ಮ ಹೂವುಗಳು ನೇರಳೆ ( ವಿಯೋಲಾ ) ಮತ್ತು ಸಾಮಾನ್ಯ ಪ್ರೈಮ್ರೋಸ್ ( ಪ್ರಿಮುಲಾ ವಲ್ಗ್ಯಾರಿಸ್ ), ಮತ್ತು ಐರಿಸ್. ಇದರ ಜನ್ಮಗಲ್ಲು ಅಮೆಥಿಸ್ಟ್ ಆಗಿದೆ. ಇದು ಧರ್ಮನಿಷ್ಠೆ, ನಮ್ರತೆ, ಆಧ್ಯಾತ್ಮಿಕ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಯನ್ನು ಸಂಕೇತಿಸುತ್ತದೆ. ರಾಶಿಚಕ್ರ ಚಿಹ್ನೆಗಳು ಅಕ್ವೇರಿಯಸ್ (ಫೆಬ್ರವರಿ ೧೮ ರವರೆಗೆ) ಮತ್ತು ಮೀನ (ಫೆಬ್ರವರಿ ೧೯ ರಿಂದ). ಆಚರಣೆಗಳು ಈ ಪಟ್ಟಿಯು ಅಧಿಕೃತ ಸ್ಥಿತಿ ಅಥವಾ ಸಾಮಾನ್ಯ ಆಚರಣೆಯನ್ನು ಸೂಚಿಸುವುದಿಲ್ಲ. ತಿಂಗಳ ಅವಧಿಯ ಕ್ಯಾಥೋಲಿಕ್ ಸಂಪ್ರದಾಯದಲ್ಲಿ, ಫೆಬ್ರವರಿ ಪೂಜ್ಯ ವರ್ಜಿನ್ ಮೇರಿಯ ಶುದ್ಧೀಕರಣದ ತಿಂಗಳು. ಅಮೇರಿಕನ್ ಹಾರ್ಟ್ ತಿಂಗಳು (ಯುನೈಟೆಡ್ ಸ್ಟೇಟ್ಸ್ ). ಕಪ್ಪು ಇತಿಹಾಸ ತಿಂಗಳು (ಯುನೈಟೆಡ್ ಸ್ಟೇಟ್ಸ್, ಕೆನಡಾ). ರಾಷ್ಟ್ರೀಯ ಪಕ್ಷಿ-ಆಹಾರ ತಿಂಗಳು (ಯುನೈಟೆಡ್ ಸ್ಟೇಟ್ಸ್). ರಾಷ್ಟ್ರೀಯ ಮಕ್ಕಳ ದಂತ ಆರೋಗ್ಯ ತಿಂಗಳು (ಯುನೈಟೆಡ್ ಸ್ಟೇಟ್ಸ್). ಅಹಿಂಸೆಯ ಸೀಸನ್ : ಜನವರಿ ೩೦ - ಏಪ್ರಿಲ್ ೪ (ಅಂತರರಾಷ್ಟ್ರೀಯ ಆಚರಣೆ). ಟರ್ನರ್ ಸಿಂಡ್ರೋಮ್ ಜಾಗೃತಿ ತಿಂಗಳು (ಯುನೈಟೆಡ್ ಸ್ಟೇಟ್ಸ್). ಗ್ರೆಗೋರಿಯನ್ ಅಲ್ಲದ (ಎಲ್ಲಾ ಬಹಾಯಿ, ಇಸ್ಲಾಮಿಕ್ ಮತ್ತು ಯಹೂದಿ ಆಚರಣೆಗಳು ಪಟ್ಟಿ ಮಾಡಲಾದ ದಿನಾಂಕದ ಮೊದಲು ಸೂರ್ಯಾಸ್ತಮಾನದಲ್ಲಿ ಪ್ರಾರಂಭವಾಗುತ್ತವೆ ಮತ್ತು ಇಲ್ಲದಿದ್ದರೆ ಗಮನಿಸದ ಹೊರತು ಪ್ರಶ್ನಾರ್ಹ ದಿನಾಂಕದ ಸೂರ್ಯಾಸ್ತಮಾನದಲ್ಲಿ ಕೊನೆಗೊಳ್ಳುತ್ತವೆ.) ಬಹಾಯಿ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ. ಚೀನೀ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ. ಹೀಬ್ರೂ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ. ಇಸ್ಲಾಮಿಕ್ ಕ್ಯಾಲೆಂಡರ್ ನಿಗದಿಪಡಿಸಿದ ಆಚರಣೆಗಳ ಪಟ್ಟಿ. ಸೌರ ಹಿಜ್ರಿ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ. ಚಲಿಸಬಲ್ಲ ಆಹಾರ ಸ್ವಾತಂತ್ರ್ಯ ದಿನ ( ಕೆನಡಾ ): ಪ್ರತಿ ವರ್ಷ ದಿನಾಂಕ ಬದಲಾಗುತ್ತದೆ. ಸುರಕ್ಷಿತ ಇಂಟರ್ನೆಟ್ ದಿನ : ಎರಡನೇ ವಾರದ ಮೊದಲ ದಿನ. ಸೂರ್ಯನ ರಾಷ್ಟ್ರೀಯ ದಿನ : ( ಅರ್ಜೆಂಟೀನಾ ) ದಿನಾಂಕವು ಪ್ರಾಂತ್ಯದ ಆಧಾರದ ಮೇಲೆ ಬದಲಾಗುತ್ತದೆ. ಮೊದಲ ಶನಿವಾರ ಬೆಳಗಿನ ಉಪಾಹಾರ ದಿನಕ್ಕೆ ಐಸ್ ಕ್ರೀಮ್. ಮೊದಲ ಭಾನುವಾರ ತಾಯಿಯ ದಿನ ( ಕೊಸೊವೊ ). ಫೆಬ್ರವರಿ ಮೊದಲ ವಾರ (ಮೊದಲ ಸೋಮವಾರ, ಭಾನುವಾರದಂದು ಕೊನೆಗೊಳ್ಳುತ್ತದೆ). ಡೊಪ್ಪೆಲ್‌ಗ್ಯಾಂಗರ್ ವಾರ. ವಿಶ್ವ ಸರ್ವಧರ್ಮ ಸಮನ್ವಯ ವಾರ. ಮೊದಲ ಸೋಮವಾರ ಸಂವಿಧಾನ ದಿನ (ಮೆಕ್ಸಿಕೊ). ರಾಷ್ಟ್ರೀಯ ಘನೀಕೃತ ಮೊಸರು ದಿನ (ಯುನೈಟೆಡ್ ಸ್ಟೇಟ್ಸ್). ಮೊದಲ ಶುಕ್ರವಾರ ರಾಷ್ಟ್ರೀಯ ಉಡುಗೆ ಕೆಂಪು ದಿನ (ಯುನೈಟೆಡ್ ಸ್ಟೇಟ್ಸ್). ಎರಡನೇ ಶನಿವಾರ ಅಂತರಾಷ್ಟ್ರೀಯ ನೇರಳೆ ಹಿಜಾಬ್ ದಿನ. ಎರಡನೇ ಭಾನುವಾರ ಆಟಿಸಂ ಭಾನುವಾರ (ಯುನೈಟೆಡ್ ಕಿಂಗ್‌ಡಮ್) ಮಕ್ಕಳ ದಿನ (ಕುಕ್ ದ್ವೀಪಗಳು, ನೌರು, ನಿಯು, ಟೊಕೆಲೌ, ಕೇಮನ್ ದ್ವೀಪಗಳು). ತಾಯಂದಿರ ದಿನ ( ನಾರ್ವೆ ). ಸೂಪರ್ ಬೌಲ್ ಭಾನುವಾರ ( ಯುನೈಟೆಡ್ ಸ್ಟೇಟ್ಸ್ ). ವಿಶ್ವ ವಿವಾಹ ದಿನ. ಎರಡನೇ ಸೋಮವಾರ ಸೋಮವಾರ ಊಟ ( ಸ್ಕಾಟ್ಲೆಂಡ್ ). ಎರಡನೇ ಮಂಗಳವಾರ ರಾಷ್ಟ್ರೀಯ ಕ್ರೀಡಾ ದಿನ ( ಕತಾರ್ ). ಫೆಬ್ರವರಿ ೨೨ ರ ವಾರ ರಾಷ್ಟ್ರೀಯ ಇಂಜಿನಿಯರ್ಸ್ ವೀಕ್ (ಯುಎಸ್). ಮೂರನೇ ಸೋಮವಾರ ಕುಟುಂಬ ದಿನ (ಕೆನಡಾ) (ಬ್ರಿಟಿಷ್ ಕೊಲಂಬಿಯಾ, ಆಲ್ಬರ್ಟಾ, ಸಾಸ್ಕಾಚೆವಾನ್, ಮ್ಯಾನಿಟೋಬಾ, ಒಂಟಾರಿಯೊ, ನ್ಯೂ ಬ್ರನ್ಸ್‌ವಿಕ್ ಮತ್ತು ಪ್ರಿನ್ಸ್ ಎಡ್ವರ್ಡ್ ಐಲೆಂಡ್ ಪ್ರಾಂತ್ಯಗಳು.) ಅಧ್ಯಕ್ಷರ ದಿನ/ವಾಷಿಂಗ್ಟನ್ ಅವರ ಜನ್ಮದಿನ (ಯುನೈಟೆಡ್ ಸ್ಟೇಟ್ಸ್). ಮೂರನೇ ಗುರುವಾರ ಜಾಗತಿಕ ಮಾಹಿತಿ ಆಡಳಿತ ದಿನ. ಮೂರನೇ ಶುಕ್ರವಾರ ಯುಕಾನ್ ಹೆರಿಟೇಜ್ ಡೇ (ಕೆನಡಾ). ಹಿಂದಿನ ಶುಕ್ರವಾರ ಬೆದರಿಸುವ ದಿನಕ್ಕೆ ಅಂತರಾಷ್ಟ್ರೀಯ ನಿಲುವು. ಕಳೆದ ಶನಿವಾರ ಆ ಬಾಟಲ್ ನೈಟ್ ತೆರೆಯಿರಿ. ಫೆಬ್ರವರಿ ಕೊನೆಯ ದಿನ ಅಪರೂಪದ ರೋಗ ದಿನ. ಸ್ಥಿರವಾಗಿದೆ. ಫೆಬ್ರುವರಿ ೧ ಗುಲಾಮಗಿರಿಯ ನಿರ್ಮೂಲನೆ ದಿನ (ಮಾರಿಷಸ್) ವಾಯುಪಡೆ ದಿನ (ನಿಕರಾಗುವಾ) ಫೆಡರಲ್ ಟೆರಿಟರಿ ಡೇ (ಕೌಲಾಲಂಪುರ್, ಲಬುವಾನ್ ಮತ್ತು ಪುತ್ರಜಯ, ಮಲೇಷ್ಯಾ) ಹೀರೋಸ್ ಡೇ (ರುವಾಂಡಾ) ಇಂಬೋಲ್ಕ್ (ಐರ್ಲೆಂಡ್, ಸ್ಕಾಟ್ಲೆಂಡ್, ಐಲ್ ಆಫ್ ಮ್ಯಾನ್, ಮತ್ತು ಉತ್ತರ ಗೋಳಾರ್ಧದಲ್ಲಿನ ಕೆಲವು ನಿಯೋಪಾಗನ್ ಗುಂಪುಗಳು). ಲಾಮಾಸ್ (ದಕ್ಷಿಣ ಗೋಳಾರ್ಧದಲ್ಲಿ ಕೆಲವು ನಿಯೋಪಾಗನ್ ಗುಂಪುಗಳು) ಗಣರಾಜ್ಯದ ಸ್ಮಾರಕ ದಿನ (ಹಂಗೇರಿ) ರಾಷ್ಟ್ರೀಯ ಸ್ವಾತಂತ್ರ್ಯ ದಿನ (ಯುನೈಟೆಡ್ ಸ್ಟೇಟ್ಸ್) ಫೆಬ್ರುವರಿ ೨ ಟಾರ್ಟು ಒಪ್ಪಂದದ ವಾರ್ಷಿಕೋತ್ಸವ (ಎಸ್ಟೋನಿಯಾ) ಸಂವಿಧಾನ ದಿನ (ಫಿಲಿಪೈನ್ಸ್) ಯುವ ದಿನ (ಅಜೆರ್ಬೈಜಾನ್) ದೇವಾಲಯದಲ್ಲಿ ಯೇಸುವಿನ ಪ್ರಸ್ತುತಿಯ ಹಬ್ಬ (ಅಥವಾ ಮೇಣದಬತ್ತಿಗಳು) (ಪಾಶ್ಚಿಮಾತ್ಯ ಕ್ರಿಶ್ಚಿಯನ್ ಧರ್ಮ), ಮತ್ತು ಅದರ ಸಂಬಂಧಿತ ಆಚರಣೆಗಳು: ಕ್ರಿಶ್ಚಿಯನ್ ಪ್ರಾರ್ಥನಾ ಕ್ಯಾಲೆಂಡರ್ ನಲ್ಲಿ ಕಾಲು ದಿನ (ಮೇಣದ ಬತ್ತಿಗಳ ಕಾರಣ) (ಸ್ಕಾಟ್ಲೆಂಡ್) ಯೆಮಾಂಜಾ ಆಚರಣೆ (ಕ್ಯಾಂಡೊಂಬ್ಲೆ) ಗ್ರೌಂಡ್ಹಾಗ್ ಡೇ (ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ) ಮರ್ಮೋಟ್ ದಿನ (ಅಲಾಸ್ಕಾ, ಯುನೈಟೆಡ್ ಸ್ಟೇಟ್ಸ್) ಆವಿಷ್ಕಾರಕರ ದಿನ (ಥೈಲ್ಯಾಂಡ್) ರಾಷ್ಟ್ರೀಯ ಟಾಟರ್ ಟಾಟ್ ದಿನ (ಯುನೈಟೆಡ್ ಸ್ಟೇಟ್ಸ್) ವಿಶ್ವ ಗದ್ದೆಗಳ ದಿನ ಫೆಬ್ರುವರಿ ೩ ಸಂಗೀತ ಸತ್ತ ದಿನದ ವಾರ್ಷಿಕೋತ್ಸವ (ಯುನೈಟೆಡ್ ಸ್ಟೇಟ್ಸ್) ಕಮ್ಯುನಿಸ್ಟ್ ಪಾರ್ಟಿ ಆಫ್ ವಿಯೆಟ್ನಾಂ ಫೌಂಡೇಶನ್ ವಾರ್ಷಿಕೋತ್ಸವ (ವಿಯೆಟ್ನಾಂ) ಸುಯಾಪಾ ವರ್ಜಿನ್ ದಿನ (ಹೊಂಡುರಾಸ್) ಹೀರೋಸ್ ಡೇ (ಮೊಜಾಂಬಿಕ್) ಹುತಾತ್ಮರ ದಿನ (ಸಾವೊ ಟೋಮೆ ಮತ್ತು ಪ್ರಿನ್ಸಿಪೆ) ಸೆಟ್ಸುಬುನ್ (ಜಪಾನ್) ವೆಟರನ್ಸ್ ಡೇ (ಥೈಲ್ಯಾಂಡ್) ಫೆಬ್ರುವರಿ ೪ ಸಶಸ್ತ್ರ ಹೋರಾಟದ ದಿನ (ಅಂಗೋಲಾ) ಸ್ವಾತಂತ್ರ್ಯ ದಿನ (ಶ್ರೀಲಂಕಾ) ರೋಸಾ ಪಾರ್ಕ್ಸ್ ಡೇ (ಕ್ಯಾಲಿಫೋರ್ನಿಯಾ ಮತ್ತು ಮಿಸ್ಸೌರಿ, ಯುನೈಟೆಡ್ ಸ್ಟೇಟ್ಸ್) ವಿಶ್ವ ಕ್ಯಾನ್ಸರ್ ದಿನ ಫೆಬ್ರುವರಿ ೫ ರಾಜಕುಮಾರಿ ಮೇರಿಯ ಜನ್ಮದಿನ (ಡೆನ್ಮಾರ್ಕ್) ಕಾಶ್ಮೀರ ಐಕ್ಯತಾ ದಿನ (ಪಾಕಿಸ್ತಾನ) ವಿಮೋಚನಾ ದಿನ (ಸ್ಯಾನ್ ಮಾರಿನೊ) ರಾಷ್ಟ್ರೀಯ ಹವಾಮಾನ ತಜ್ಞರ ದಿನ (ಯುನೈಟೆಡ್ ಸ್ಟೇಟ್ಸ್) ರೂನೆಬರ್ಗ್ ಜನ್ಮದಿನ (ಫಿನ್ಲ್ಯಾಂಡ್) ಏಕತಾ ದಿನ (ಬುರುಂಡಿ) ಫೆಬ್ರುವರಿ ೬ ಸ್ತ್ರೀ ಜನನಾಂಗದ ಊನಗೊಳಿಸುವಿಕೆಗೆ ಶೂನ್ಯ ಸಹಿಷ್ಣುತೆಯ ಅಂತರರಾಷ್ಟ್ರೀಯ ದಿನ ರೊನಾಲ್ಡ್ ರೇಗನ್ ಡೇ (ಕ್ಯಾಲಿಫೋರ್ನಿಯಾ, ಯುನೈಟೆಡ್ ಸ್ಟೇಟ್ಸ್) ಸಾಮಿ ರಾಷ್ಟ್ರೀಯ ದಿನ (ರಷ್ಯಾ, ಫಿನ್ಲ್ಯಾಂಡ್, ನಾರ್ವೆ ಮತ್ತು ಸ್ವೀಡನ್) ವೈಟಾಂಗಿ ಡೇ (ನ್ಯೂಜಿಲೆಂಡ್) ಫೆಬ್ರುವರಿ ೭ ಸ್ವಾತಂತ್ರ್ಯ ದಿನ (ಗ್ರೆನಡಾ) ಫೆಬ್ರುವರಿ ೮ ಪರಿನಿರ್ವಾಣ ದಿನ (ಕೆಲವು ಮಹಾಯಾನ ಬೌದ್ಧ ಸಂಪ್ರದಾಯಗಳು, ಹೆಚ್ಚಿನವು ಫೆಬ್ರವರಿ 15 ರಂದು ಆಚರಿಸುತ್ತವೆ) ಪ್ರೆಸೆರೆನ್ ಡೇ (ಸ್ಲೊವೇನಿಯಾ) ಪ್ರಪೋಸ್ ಡೇ ಫೆಬ್ರುವರಿ ೯ ರಾಷ್ಟ್ರೀಯ ಪಿಜ್ಜಾ ದಿನ (ಯುನೈಟೆಡ್ ಸ್ಟೇಟ್ಸ್) ಸೇಂಟ್ ಮರೂನ್ಸ್ ಡೇ (ಮರೋನೈಟ್ ಚರ್ಚ್, ಈಸ್ಟರ್ನ್ ಆರ್ಥೊಡಾಕ್ಸ್ ಚರ್ಚ್, ಲೆಬನಾನ್ ನಲ್ಲಿ ಸಾರ್ವಜನಿಕ ರಜಾದಿನ) ಫೆಬ್ರುವರಿ ೧೦ ಸೇಂಟ್ ಪಾಲ್ಸ್ ಹಡಗು ದುರಂತದ ಹಬ್ಬ (ಮಾಲ್ಟಾದಲ್ಲಿ ಸಾರ್ವಜನಿಕ ರಜಾದಿನ) ಫೆಂಕಿಲ್ ಡೇ (ಎರಿಟ್ರಿಯಾ) ದೇಶಭ್ರಷ್ಟರು ಮತ್ತು ಫೋಬೆಯ ರಾಷ್ಟ್ರೀಯ ಸ್ಮಾರಕ ದಿನ (ಇಟಲಿ) ಫೆಬ್ರುವರಿ ೧೧ ೧೧೨ ದಿನ (ಯುರೋಪಿಯನ್ ಯೂನಿಯನ್) ಸಶಸ್ತ್ರ ಪಡೆಗಳ ದಿನ (ಲೈಬೀರಿಯಾ) ಕಂದಾಯ ಸೇವೆಯ ದಿನ (ಅಜೆರ್ಬೈಜಾನ್) ಎವೆಲಿಯೊ ಜೇವಿಯರ್ ಡೇ (ಪನೇ ದ್ವೀಪ, ಫಿಲಿಪೈನ್ಸ್) ಅವರ್ ಲೇಡಿ ಆಫ್ ಲೌರ್ಡೆಸ್ ಹಬ್ಬದ ದಿನ (ಕ್ಯಾಥೊಲಿಕ್ ಚರ್ಚ್), ಮತ್ತು ಅದರ ಸಂಬಂಧಿತ ಆಚರಣೆ: ವಿಶ್ವ ರೋಗಿಗಳ ದಿನ (ರೋಮನ್ ಕ್ಯಾಥೊಲಿಕ್ ಚರ್ಚ್) ಆವಿಷ್ಕಾರಕರ ದಿನ (ಯುನೈಟೆಡ್ ಸ್ಟೇಟ್ಸ್) ರಾಷ್ಟ್ರೀಯ ಸಂಸ್ಥಾಪನಾ ದಿನ (ಜಪಾನ್) ಯುವ ದಿನ (ಕ್ಯಾಮರೂನ್) ಫೆಬ್ರುವರಿ ೧೨ ಡಾರ್ವಿನ್ ಡೇ (ಅಂತರರಾಷ್ಟ್ರೀಯ) ಜಾರ್ಜಿಯಾ ದಿನ (ಜಾರ್ಜಿಯಾ (ಯು.ಎಸ್. ರಾಜ್ಯ)) ಅಂತಾರಾಷ್ಟ್ರೀಯ ಮಹಿಳಾ ಆರೋಗ್ಯ ದಿನ ಲಿಂಕನ್ ಜನ್ಮದಿನ (ಯುನೈಟೆಡ್ ಸ್ಟೇಟ್ಸ್) ನ್ಯಾಷನಲ್ ಫ್ರೀಡಂ ಟು ಮ್ಯಾರಿ ಡೇ (ಯುನೈಟೆಡ್ ಸ್ಟೇಟ್ಸ್) ರೆಡ್ ಹ್ಯಾಂಡ್ ಡೇ (ವಿಶ್ವಸಂಸ್ಥೆ) ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಜಾಗೃತಿ ದಿನ (ಕೆನಡಾ) ಯೂನಿಯನ್ ಡೇ (ಮ್ಯಾನ್ಮಾರ್) ಯುವ ದಿನ (ವೆನೆಜುವೆಲಾ) ಫೆಬ್ರುವರಿ ೧೩ ಮಕ್ಕಳ ದಿನ (ಮ್ಯಾನ್ಮಾರ್) ವಿಶ್ವ ರೇಡಿಯೋ ದಿನ ಫೆಬ್ರುವರಿ ೧೪ ರಾಜ್ಯೋತ್ಸವ ದಿನ (ಅರಿಜೋನಾ, ಯುನೈಟೆಡ್ ಸ್ಟೇಟ್ಸ್) ರಾಜ್ಯೋತ್ಸವ ದಿನ (ಒರೆಗಾನ್, ಯುನೈಟೆಡ್ ಸ್ಟೇಟ್ಸ್) ದೇವಾಲಯದಲ್ಲಿ ಯೇಸುವಿನ ಪ್ರಸ್ತುತಿ (ಅರ್ಮೇನಿಯನ್ ಅಪೊಸ್ಟೋಲಿಕ್ ಚರ್ಚ್) ವಿ-ಡೇ (ಚಲನೆ) (ಅಂತರರಾಷ್ಟ್ರೀಯ) ವ್ಯಾಲೆಂಟೈನ್ಸ್ ಡೇ (ಅಂತರರಾಷ್ಟ್ರೀಯ) ಅವಿವಾಹಿತರ ಜಾಗೃತಿ ದಿನ ಫೆಬ್ರುವರಿ ೧೫ ಕ್ಯಾಂಡಲ್ ಮಾಸ್ (ಈಸ್ಟರ್ನ್ ಆರ್ಥೊಡಾಕ್ಸ್ ಚರ್ಚ್) ಅಂತರರಾಷ್ಟ್ರೀಯ ಕರ್ತವ್ಯಗಳ ಸ್ಮಾರಕ ದಿನ (ರಷ್ಯಾ, ಪ್ರಾದೇಶಿಕ) ಜಾನ್ ಫ್ರಮ್ ಡೇ (ವನೌಟು) ವಿಮೋಚನಾ ದಿನ (ಅಫ್ಘಾನಿಸ್ತಾನ) ಕೆನಡಾ ದಿನದ ರಾಷ್ಟ್ರೀಯ ಧ್ವಜ (ಕೆನಡಾ) ನ್ಯಾಷನಲ್ ಐ ವಾಂಟ್ ಬಟರ್ಸ್ಕಾಚ್ ಡೇ (ಯುನೈಟೆಡ್ ಸ್ಟೇಟ್ಸ್) ಪರಿನಿರ್ವಾಣ ದಿನ (ಹೆಚ್ಚಿನ ಮಹಾಯಾನ ಬೌದ್ಧ ಸಂಪ್ರದಾಯಗಳು, ಕೆಲವರು ಫೆಬ್ರವರಿ 8 ರಂದು ಆಚರಿಸುತ್ತಾರೆ) ಸರ್ಬಿಯಾದ ರಾಷ್ಟ್ರೀಯ ದಿನ ರಾಜ್ಯೋತ್ಸವ ದಿನ (ಸೆರ್ಬಿಯಾ) ಸುಸಾನ್ ಬಿ. ಆಂಥೋನಿ ಡೇ (ಯುನೈಟೆಡ್ ಸ್ಟೇಟ್ಸ್) ಇಎನ್‌ಐ‌ಎಸಿ ದಿನ (ಫಿಲಡೆಲ್ಫಿಯಾ, ಯುನೈಟೆಡ್ ಸ್ಟೇಟ್ಸ್) ಸಂಪೂರ್ಣ ರಕ್ಷಣಾ ದಿನ (ಸಿಂಗಾಪುರ್) ಫೆಬ್ರುವರಿ ೧೬ ಡೇ ಆಫ್ ದಿ ಶೈನಿಂಗ್ ಸ್ಟಾರ್ (ಉತ್ತರ ಕೊರಿಯಾ) ಲಿಥುವೇನಿಯಾದ ರಾಜ್ಯತ್ವ ದಿನದ ಪುನಃಸ್ಥಾಪನೆ (ಲಿಥುವೇನಿಯಾ) ಫೆಬ್ರುವರಿ ೧೭ ಸ್ವಾತಂತ್ರ್ಯ ದಿನ (ಕೊಸೊವೊ) ಯಾದೃಚ್ಛಿಕ ದಯೆ ದಿನ (ಯುನೈಟೆಡ್ ಸ್ಟೇಟ್ಸ್) ಕ್ರಾಂತಿ ದಿನ (ಲಿಬಿಯಾ) ಫೆಬ್ರುವರಿ ೧೮ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ (ನೇಪಾಳ) ಉಪಭಾಷೆ ದಿನ (ಅಮಾಮಿ ದ್ವೀಪಗಳು, ಜಪಾನ್) ಸ್ವಾತಂತ್ರ್ಯ ದಿನ (ಗಾಂಬಿಯಾ) ಕುರ್ದಿಶ್ ಸ್ಟೂಡೆಂಟ್ಸ್ ಯೂನಿಯನ್ ಡೇ (ಇರಾಕಿ ಕುರ್ದಿಸ್ತಾನ್) ಹೆಂಡತಿಯ ದಿನ (ಐಸ್ಲ್ಯಾಂಡ್) ಫೆಬ್ರುವರಿ ೧೯ ಸಶಸ್ತ್ರ ಪಡೆಗಳ ದಿನ (ಮೆಕ್ಸಿಕೊ) ಬ್ರಾಂಕುಸಿ ಡೇ (ರೊಮೇನಿಯಾ) ವಾಸಿಲ್ ಲೆವ್ಸ್ಕಿ (ಬಲ್ಗೇರಿಯಾ) ಸ್ಮರಣೆ ಧ್ವಜ ದಿನ (ತುರ್ಕಮೆನಿಸ್ತಾನ್) ಶಿವಾಜಿ ಜಯಂತಿ (ಮಹಾರಾಷ್ಟ್ರ, ಭಾರತ) ಫೆಬ್ರುವರಿ ೨೦ ಸ್ವರ್ಗೀಯ ನೂರು ವೀರರ ದಿನ (ಉಕ್ರೇನ್) ಉತ್ತರ ಗೋಳಾರ್ಧದ ಹುಡಿ-ಹೂ ದಿನ ವಿಶ್ವ ಸಾಮಾಜಿಕ ನ್ಯಾಯ ದಿನ ಫೆಬ್ರುವರಿ ೨೧ ಅಂತರರಾಷ್ಟ್ರೀಯ ಮಾತೃಭಾಷಾ ದಿನ ಭಾಷಾ ಚಳವಳಿ ದಿನ (ಬಾಂಗ್ಲಾದೇಶ) ಫೆಬ್ರುವರಿ ೨೨ ಸೇಂಟ್ ಪೀಟರ್ ಕುರ್ಚಿಯ ಹಬ್ಬ (ರೋಮನ್ ಕ್ಯಾಥೊಲಿಕ್ ಚರ್ಚ್) ಸ್ವಾತಂತ್ರ್ಯ ದಿನ (ಸೇಂಟ್ ಲೂಸಿಯಾ) ಸಂಸ್ಥಾಪಕರ ದಿನ (ಸೌದಿ ಅರೇಬಿಯಾ) ಸಂಸ್ಥಾಪಕರ ದಿನ ಅಥವಾ "ಬಿ.ಪಿ. ದಿನ" (ಸ್ಕೌಟ್ ಚಳುವಳಿಯ ವಿಶ್ವ ಸಂಸ್ಥೆ) ರಾಷ್ಟ್ರೀಯ ಮಾರ್ಗರಿಟಾ ದಿನ (ಯುನೈಟೆಡ್ ಸ್ಟೇಟ್ಸ್) ವಿಶ್ವ ಚಿಂತನಾ ದಿನ (ವರ್ಲ್ಡ್ ಅಸೋಸಿಯೇಷನ್ ಆಫ್ ಗರ್ಲ್ ಗೈಡ್ಸ್ ಅಂಡ್ ಗರ್ಲ್ ಸ್ಕೌಟ್ಸ್) ಫೆಬ್ರುವರಿ ೨೩ ಮಶ್ರಮನಿ-ಗಣರಾಜ್ಯೋತ್ಸವ (ಗಯಾನಾ) ಮೆಟೆನಿ (ಲಾಟ್ವಿಯಾ) ನ್ಯಾಷನಲ್ ಬನಾನಾ ಬ್ರೆಡ್ ಡೇ (ಯುನೈಟೆಡ್ ಸ್ಟೇಟ್ಸ್) ರಾಷ್ಟ್ರೀಯ ದಿನ (ಬ್ರೂನಿ) ಹಿಂದಿನ ಸೋವಿಯತ್ ಸೈನ್ಯ ಮತ್ತು ನೌಕಾಪಡೆಯ ಕೆಂಪು ಸೇನಾ ದಿನ ಅಥವಾ ದಿನ ಸೋವಿಯತ್ ಒಕ್ಕೂಟ, ವಿವಿಧ ಮಾಜಿ ಸೋವಿಯತ್ ಗಣರಾಜ್ಯಗಳಲ್ಲಿಯೂ ನಡೆಸಲಾಯಿತು: ಪಿತೃಭೂಮಿ ದಿನದ ರಕ್ಷಕ (ರಷ್ಯಾ) ಪಿತೃಭೂಮಿ ಮತ್ತು ಸಶಸ್ತ್ರ ಪಡೆಗಳ ದಿನದ ರಕ್ಷಕ (ಬೆಲಾರಸ್) ಚಕ್ರವರ್ತಿಯ ಜನ್ಮದಿನ (ಜಪಾನ್) ಫೆಬ್ರುವರಿ ೨೪ ಡ್ರಾಗೊಬೆಟ್ (ರೊಮೇನಿಯಾ) ಎಂಜಿನಿಯರ್ಸ್ ಡೇ (ಇರಾನ್) ಮೆಕ್ಸಿಕೊದಲ್ಲಿ ಧ್ವಜ ದಿನ ಸ್ವಾತಂತ್ರ್ಯ ದಿನ (ಎಸ್ಟೋನಿಯಾ) ರಾಷ್ಟ್ರೀಯ ಕಲಾವಿದರ ದಿನ (ಥೈಲ್ಯಾಂಡ್) ಸೆಪಂದರಮಾಜ್ಗಾನ್ ಅಥವಾ "ಮಹಿಳಾ ದಿನ" (ಜೊರಾಸ್ಟ್ರಿಯನ್, ಇರಾನ್) ಫೆಬ್ರುವರಿ ೨೫ ಸಶಸ್ತ್ರ ಪಡೆಗಳ ದಿನ (ಡೊಮಿನಿಕನ್ ರಿಪಬ್ಲಿಕ್) "ಕಿಟಾನೊ ಬೈಕಾ-ಸಾಯಿ" ಅಥವಾ "ಪ್ಲಮ್ ಬ್ಲಾಸಮ್ ಫೆಸ್ಟಿವಲ್" (ಕಿಟಾನೊ ಟೆನ್ಮನ್-ಗು ದೇವಾಲಯ, ಕ್ಯೋಟೋ, ಜಪಾನ್) ಮೆಹರ್ ಬಾಬಾ ಅವರ ಜನ್ಮದಿನ (ಮೆಹರ್ ಬಾಬಾ ಅವರ ಅನುಯಾಯಿಗಳು) ಕಮ್ಯುನಿಸ್ಟ್ ಸರ್ವಾಧಿಕಾರದ ಬಲಿಪಶುಗಳ ಸ್ಮರಣಾರ್ಥ ದಿನ (ಹಂಗೇರಿ) ರಾಷ್ಟ್ರೀಯ ದಿನ (ಕುವೈತ್) ಪೀಪಲ್ ಪವರ್ ಡೇ (ಫಿಲಿಪೈನ್ಸ್) ಕ್ರಾಂತಿ ದಿನ (ಸುರಿನಾಮ್) ಸೋವಿಯತ್ ಆಕ್ರಮಿತ ದಿನ (ಜಾರ್ಜಿಯಾ) ಫೆಬ್ರುವರಿ ೨೬ ವಿಮೋಚನಾ ದಿನ (ಕುವೈತ್) ಖೋಜಾಲಿ ಹತ್ಯಾಕಾಂಡದ ಬಲಿಪಶುಗಳ ಸ್ಮರಣೆ ದಿನ (ಅಜೆರ್ಬೈಜಾನ್) ನ್ಯಾಷನಲ್ ವೇರ್ ರೆಡ್ ಡೇ (ಯುನೈಟೆಡ್ ಕಿಂಗ್ಡಮ್) ರಕ್ಷಕರ ದಿನ (ಇಸ್ಲಾಂ ರಾಷ್ಟ್ರ) ಫೆಬ್ರುವರಿ ೨೭ ಅನೋಸ್ಮಿಯಾ ಜಾಗೃತಿ ದಿನ (ಅಂತರರಾಷ್ಟ್ರೀಯ ಆಚರಣೆ) ವೈದ್ಯರ ದಿನ (ವಿಯೆಟ್ನಾಂ) ಅಂತರರಾಷ್ಟ್ರೀಯ ಹಿಮಕರಡಿ ದಿನ ಮಜುಬಾ ದಿನ (ದಕ್ಷಿಣ ಆಫ್ರಿಕಾ) ಮರಾಠಿ ಭಾಷಾ ದಿನ (ಮಹಾರಾಷ್ಟ್ರ, ಭಾರತ) ಸ್ವಾತಂತ್ರ್ಯ ದಿನ (ಡೊಮಿನಿಕನ್ ರಿಪಬ್ಲಿಕ್) ಬೆದರಿಸುವಿಕೆ ವಿರೋಧಿ ದಿನ (ಕೆನಡಾ) ಫೆಬ್ರುವರಿ ೨೮ ಅರ್ಮೇನಿಯಾದಲ್ಲಿ ಹತ್ಯಾಕಾಂಡದ ಬಲಿಪಶುಗಳ ಸ್ಮರಣೆ ದಿನ (ಅರ್ಮೇನಿಯಾ) ಅಂಡಲೂಸಿಯಾ ದಿನ (ಅಂಡಲೂಸಿಯಾ, ಸ್ಪೇನ್) ಕಾಲೇವಾಲ ದಿನ (ಫಿನ್ ಲ್ಯಾಂಡ್) ರಾಷ್ಟ್ರೀಯ ವಿಜ್ಞಾನ ದಿನ (ಭಾರತ) ಶಾಂತಿ ಸ್ಮಾರಕ ದಿನ (ತೈವಾನ್) ಶಿಕ್ಷಕರ ದಿನ (ಅರಬ್ ರಾಷ್ಟ್ರಗಳು) ಫೆಬ್ರವರಿ ೨೯ ಬ್ಯಾಚುಲರ್ಸ್ ಡೇ (ಐರ್ಲೆಂಡ್, ಯುನೈಟೆಡ್ ಕಿಂಗ್ಡಮ್) ರಾಷ್ಟ್ರೀಯ ಕಪ್ಪೆ ಕಾಲುಗಳ ದಿನ (ಯುನೈಟೆಡ್ ಸ್ಟೇಟ್ಸ್) ಹೆಚ್ಚಿನ ಓದುವಿಕೆ ಆಂಥೋನಿ ಅವೆನಿ, "ಫೆಬ್ರವರಿ ರಜಾದಿನಗಳು: ಭವಿಷ್ಯ, ಶುದ್ಧೀಕರಣ ಮತ್ತು ಭಾವೋದ್ರಿಕ್ತ ಪರ್ಸ್ಯೂಟ್," ದಿ ಬುಕ್ ಆಫ್ ದಿ ಇಯರ್: ಎ ಬ್ರೀಫ್ ಹಿಸ್ಟರಿ ಆಫ್ ಅವರ್ ಸೀಸನಲ್ ಹಾಲಿಡೇಸ್ (ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೨೦೦೩), ೨೯-೪೬. ಬಾಹ್ಯ ಕೊಂಡಿ ದಿ ಸ್ಟ್ರೈಟ್ ಡೋಪ್: ಫೆಬ್ರವರಿ ಕೇವಲ ೨೮ ದಿನಗಳನ್ನು ಹೇಗೆ ಹೊಂದಿದೆ? ಉಲ್ಲೇಖಗಳು
2374
https://kn.wikipedia.org/wiki/%E0%B2%B5%E0%B2%BE%E0%B2%B0%E0%B2%A6%20%E0%B2%A6%E0%B2%BF%E0%B2%A8%E0%B2%97%E0%B2%B3%E0%B3%81
ವಾರದ ದಿನಗಳು
ವಾರದಲ್ಲಿ ೭ ದಿನಗಳಿವೆ ಸೋಮವಾರ ಮಂಗಳವಾರ ಬುಧವಾರ ಗುರುವಾರ ಶುಕ್ರವಾರ ಶನಿವಾರ ರವಿವಾರ ವಾರದ ದಿನಗಳು cu:Сєдми́ца
2376
https://kn.wikipedia.org/wiki/%E0%B2%B8%E0%B3%8B%E0%B2%AE%E0%B2%B5%E0%B2%BE%E0%B2%B0
ಸೋಮವಾರ
ಸೋಮವಾರ - ವಾರದ ದಿನಗಳಲ್ಲೊಂದು. ಇದು ಭಾನುವಾರ ಮತ್ತು ಮಂಗಳವಾರದ ಮಧ್ಯದ ದಿನ. ಸಂಪ್ರದಾಯದಂತೆ ಕ್ರೈಸ್ತ,ಮುಸ್ಲಿಂ ಹಾಗೂ ಹೀಬ್ರೂ ಪಂಚಾಂಗದಂತೆ ಇದು ವಾರದ ಎರಡನೇ ದಿನ.ಅಂತರರಾಷ್ಟ್ರೀಯ ಪಂಚಾಂಗದಂತೆ ಇದು ವಾರದ ಮೊದಲ ದಿನ.ಪಾಶ್ಚಾತ್ಯ ದೇಶಗಳಲ್ಲಿ ಇದು ವಾರದ ಮೊದಲ ಕೆಲಸದ ದಿನವಾದರೆ ಮುಸ್ಲಿಂ ಹಾಗೂ ಇಸ್ರೇಲ್ ದೇಶದಲ್ಲಿ ಇದು ವಾರದ ಎರಡನೆಯ ಕೆಲಸದ ದಿನ. ಆಂಗ್ಲ ಭಾಷೆಯ ಮಂಡೇ ಎಂಬ ಪದವು ಹಳೆಯ ಹಾಗೂ ಮಧ್ಯಮ ಇಂಗ್ಲೀಷ್ ಭಾಷೆಯ ಮೊನೆನ್‍ಡೇಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ವಾರದ ದಿನಗಳು
2377
https://kn.wikipedia.org/wiki/%E0%B2%AE%E0%B2%82%E0%B2%97%E0%B2%B3%E0%B2%B5%E0%B2%BE%E0%B2%B0
ಮಂಗಳವಾರ
ಮಂಗಳವಾರ - ವಾರದ ದಿನಗಳಲ್ಲೊಂದು. ಇದು ಸೋಮವಾರ ಮತ್ತು ಬುಧವಾರದ ಮಧ್ಯದ ದಿನ. ಜ್ಯೋತಿಷ್ಯ ಜೋತಿಷ್ಯದ ಪ್ರಕಾರ ಮಂಗಳವಾರವು ಮಂಗಳ ಗ್ರಹದೊಂದಿಗೆ ಸಂಬಂಧ ಹೊಂದಿದೆ. ನಂಬಿಕೆಗಳು ಸಾಧಾರಣವಾಗಿ ಮಂಗಳವಾರ ಶುಭ ಕಾರ್ಯಗಳನ್ನು ಮಾಡುವುದಿಲ್ಲ.ಈ ದಿನ ಸಂಪತ್ತು,ಸಮೃದ್ಧಿಗೆ ಒಡತಿಯಾದ ಲಕ್ಷ್ಮಿಗೆ ಮೀಸಲಾದ ದಿನ ಎಂಬ ನಂಬಿಕೆಯಿದೆ.ಹೀಗಾಗಿ ಲಕ್ಷ್ಮಿ ಮನೆಯಿಂದ ಹೊರಟು ಹೋಗುವಳೆಂಬ ಭಯದಿಂದ ಮಂಗಳವಾರ ಹೆಣ್ಣು ಮಕ್ಕಳ ಮದುವೆ ಮಾಡುವುದಿಲ್ಲ. ವಾರದ ದಿನಗಳು
2378
https://kn.wikipedia.org/wiki/%E0%B2%AC%E0%B3%81%E0%B2%A7%E0%B2%B5%E0%B2%BE%E0%B2%B0
ಬುಧವಾರ
ಬುಧವಾರ - ವಾರದ ದಿನಗಳಲ್ಲೊಂದು. ಮಂಗಳವಾರ ಮತ್ತು ಗುರುವಾರದ ಮಧ್ಯದ ದಿನ. ವಾರದ ದಿನಗಳು
2379
https://kn.wikipedia.org/wiki/%E0%B2%B6%E0%B3%81%E0%B2%95%E0%B3%8D%E0%B2%B0%E0%B2%B5%E0%B2%BE%E0%B2%B0
ಶುಕ್ರವಾರ
ಶುಕ್ರವಾರ - ವಾರದ ದಿನಗಳಲ್ಲೊಂದು. ಇದು ಗುರುವಾರ ಮತ್ತು ಶನಿವಾರದ ಮಧ್ಯದ ದಿನ. ವಾರದ ದಿನಗಳು
2380
https://kn.wikipedia.org/wiki/%E0%B2%B6%E0%B2%A8%E0%B2%BF%E0%B2%B5%E0%B2%BE%E0%B2%B0
ಶನಿವಾರ
ಶನಿವಾರ - ವಾರದ ದಿನಗಳಲ್ಲೊಂದು. ಇದು ಶುಕ್ರವಾರ ಮತ್ತು ಭಾನುವಾರದ ಮಧ್ಯದ ದಿನ. ವಾರದ ದಿನಗಳು
2381
https://kn.wikipedia.org/wiki/%E0%B2%AD%E0%B2%BE%E0%B2%A8%E0%B3%81%E0%B2%B5%E0%B2%BE%E0%B2%B0
ಭಾನುವಾರ
ಭಾನುವಾರ - ವಾರದ ಏಳು ದಿನಗಳಲ್ಲಿ ಒಂದು. ಈ ದಿನವು ಶನಿವಾರ ಮತ್ತು ಸೋಮವಾರ ದಿನಗಳ ನಡುವೆ ಬರುತ್ತದೆ. ಕೆಲವೆಡೆ ಇದನ್ನು ವಾರದ ಮೊದಲ ದಿನವಾಗಿ ಪರಿಗಣಿಸಿದರೆ, ಇನ್ನು ಕೆಲವೆಡೆ ವಾರದ ಕೊನೆಯ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಬಹುತೇಕ ದೇಶಗಳಲ್ಲಿ ಹಾಗು ಸಂಘ ಸಂಸ್ಥೆಗಳಲ್ಲಿ, ಈ ದಿನವು ಅಧಿಕೃತ ರಜಾ ದಿನವಾಗಿರುತ್ತದೆ. ಭಾನುವಾರದ ಇನ್ನಿತರ ಹೆಸರುಗಳು ರವಿವಾರ ಆದಿತ್ಯವಾರ ವಾರದ ದಿನಗಳು
2382
https://kn.wikipedia.org/wiki/%E0%B2%97%E0%B3%81%E0%B2%B0%E0%B3%81%E0%B2%B5%E0%B2%BE%E0%B2%B0
ಗುರುವಾರ
ಗುರುವಾರ - ವಾರದ ದಿನಗಳಲ್ಲೊಂದು. ಇದು ಬುಧವಾರ ಮತ್ತು ಶುಕ್ರವಾರದ ಮಧ್ಯದ ದಿನ.ಇದಕ್ಕೆ ಬೃಹಸ್ಪತಿವಾರವೆಂದೂ ಕರೆಯುತ್ತಾರೆ. ದೇವತೆಗಳ ಗುರು ಬೃಹಸ್ಪತ್ಯಾಚಾರ್ಯ.ಗುರುವಾರದ ಹೆಸರು ಗುರು ಗ್ರಹದಿಂದ ಬಂದಿದೆ. 'ಗುರು' ಅಂದರೆ ಭಾರ,ಮಹತ್ವಪೂರ್ಣ ಎಂಬರ್ಥ ಇದೆ.ಹೀಗಾಗಿ ಗುರುವಾರ ಗುರು ಅಂದರೆ ಆಚಾರ್ಯರಿಗೆ ಮೀಸಲಾದ ದಿನ ಕೂಡ ಹೌದು.ಈ ದಿನ ಗುರು ಸ್ಥಾನದಲ್ಲಿರುವ 'ದತ್ತಾತ್ರೇಯ','ರಾಘವೇಂದ್ರ ಸ್ವಾಮಿಗಳು','ಸಾಯಿಬಾಬಾ'ಮೊದಲಾದವರ ದರ್ಶನಕ್ಕೆ(ಮಂದಿರಗಳಲ್ಲಿ) ವಿಶೇಷ ಮಹತ್ವ ಇದೆ.ಈ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಹಾಡಿರುವ 'ಗುರುವಾರ ಬಂತಮ್ಮಾ,ಗುರುರಾಯರ ನೆನೆಯಮ್ಮಾ' ಹಾಡನ್ನು ನೆನಪಿಸಿಕೊಳ್ಳಬಹುದು. ವಾರದ ದಿನಗಳು
2384
https://kn.wikipedia.org/wiki/%E0%B2%A7%E0%B2%B0%E0%B3%8D%E0%B2%AE%E0%B2%B8%E0%B3%8D%E0%B2%A5%E0%B2%B3
ಧರ್ಮಸ್ಥಳ
ಧರ್ಮಸ್ಥಳ( ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇರುವುದು. ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ. ಇಲ್ಲಿಯ ಆರಾಧ್ಯ ದೈವ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತ್ರಿಗಳಾದ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಮತ್ತು ಭಕ್ತರಿಗೆ ನೈತಿಕ, ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾಗಿ ಯಕ್ಷಗಾನದ ನಾಡಿನ ಚರಿತ್ರೆಯನ್ನೂ ಅಲಂಕರಿಸುತ್ತಿದೆ. ಇತಿಹಾಸ ಈ ಕ್ಷೇತ್ರಕ್ಕೆ ಸುಮಾರು ಏಳರಿಂದ ಎಂಟುನೂರು ವರುಷಗಳ ಇತಿಹಾಸವಿದೆ.</span> ಧರ್ಮಸ್ಥಳದ ಹಿಂದಿನ ಹೆಸರು "ಕುಡುಮ" ಎಂಬುದಾಗಿತ್ತು. ಈ ಪ್ರಾಂತ್ಯದ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧರ್ಮಿಷ್ಠರಾದ ಸತಿ - ಪತಿ ವಾಸವಾಗಿದ್ದರು. <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left"> ಒಮ್ಮೆ ಇವರ ಮನೆಗೆ ನಾಲ್ಕು ಮಂದಿ ಅತಿಥಿಗಳು ಬಂದರು. ಇವರನ್ನು ನೇಮ ನಿಷ್ಠೆಯಿಂದ ಈ ದಂಪತಿಗಳು ಅತಿಥಿ ಸತ್ಕಾರ ಮಾಡಿದರು. ಅದೇ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು, ತಾವೆಲ್ಲರೂ ಆ ಮನೆಯಲ್ಲಿ ನೆಲೆಸಲು ಇಚ್ಚಿಸಿರುವುದಾಗಿ ಹೇಳಿದರು. ಧರ್ಮದೇವತೆಗಳ ಅಣತಿಯಂತೆ ಪೆರ್ಗಡೆಯವರು ತಮ್ಮ ಮನೆ ತೆರವು ಮಾಡಿ ದೇವರುಗಳಿಗೆ ಬಿಟ್ಟು ಕೊಟ್ಟರು.. <span class="notranslate" onmouseover="_tipon(this)" onmouseout="_tipoff()">ಕಾಳರಾಹು-ಪುರುಷ ದೈವ, ಕಳರ್ಕಾಯಿ-ಸ್ತ್ರೀ ದೈವ, ಕುಮಾರಸ್ವಾಮಿ-ಪುರುಷ ದೈವ, ಹಾಗೂ ಕನ್ಯಾಕುಮಾರಿ-ಸ್ತ್ರೀ ದೈವ ಆ ಮನೆಯಲ್ಲಿ ನೆಲೆನಿಂತರು. ಕಾಳರಾಹು - ಪುರುಷ ದೈವ, ಕಾಳರ್ಕಾಯಿ - ಸ್ತ್ರೀ ದೈವ, ಕುಮಾರಸ್ವಾಮಿ - ಪುರುಷ ದೈವ, ಹಾಗೂ ಕನ್ಯಾಕುಮಾರಿ - ಸ್ತ್ರೀ ದೈವ ಆ ಮನೆಯಲ್ಲಿ ನೆಲೆನಿಂತರು. ಆ ದೈವಗಳ ಆಜ್ಞೆಯಂತೆ ಪರ್ಗಡೆಯವರು ಗುಡಿ ಕಟ್ಟಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು. ಶಿವಯೋಗಿಗಳು ಇಲ್ಲಿ ಈಶ್ವರಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. ಧರ್ಮದೇವತೆಗಳು ಕೂಡ ಇದನ್ನೇ ಹೇಳಿ ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು.ಕುಡುಮಕ್ಕೆ (ಧರ್ಮಸ್ಥಳ)ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತವಾಗಿದೆ. ಕುಡುಮಕ್ಕೆ (ಧರ್ಮಸ್ಥಳ) ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತವಾಗಿದೆ. <span class="notranslate" onmouseover="_tipon(this)" onmouseout="_tipoff()"> ವೀರೇಂದ್ರ ಹೆಗ್ಗಡೆ ಅವರು ನಿಜವಾದ ನಮ್ಮ ದಕ್ಷಿಣ ಕನ್ನಡದ ದೇವರು, ಇವರ ಮಟ್ಟಿಗೆ ನಾವು ಮತ್ತೆ ನಮ್ಮ ದಕ್ಷಿಣ ಕನ್ನಡದ ಜನರು ಯಾವತ್ತಿಗೂ ಮಾತು ತಪ್ಪೊಲ್ಲ, ಇವರೇ ನಮ್ಮ ಒಡೆಯರು. " <span class="notranslate" onmouseover="_tipon(this)" onmouseout="_tipoff()">-ಹೀಗೆಂದು ದಕ್ಷಿಣ ಕನ್ನಡದ ಹಲವು ಮಂದಿ ಹೇಳುತ್ತಿರುತ್ತಾರೆ. - ಗೊಮ್ಮಟೇಶ್ವರ ವಿಗ್ರಹ ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ಬೃಹದಾಕಾರದ ಏಕಶಿಲಾ ಗೊಮ್ಮಟೇಶ್ವರ ವಿಗ್ರಹ. ಇದರ ನಿರ್ಮಾಣ ಕಾರ್ಯ ರಂಜಾಳ ಗೋಪಾಲಕೃಷ್ಣ ಶೆಣೈರವರ ನೇತೃತ್ವದಲ್ಲಿ 1968ರಲ್ಲಿ ಪ್ರಾರಂಭವಾಗಿ 1973ರಲ್ಲಿ ಮುಗಿಯಿತು. ಕಾರ್ಕಳದಿಂದ 75 ಕಿಮೀ ದೂರದ ಇಲ್ಲಿಗೆ ವಿಶೇಷ ವಾಹನ ವ್ಯವಸ್ಥೆಯಲ್ಲಿ ಈ ವಿಗ್ರಹವನ್ನು ತರಿಸಲಾಗಿದೆ. 39' ಎತ್ತರ 14' ದಪ್ಪನಾದ ಈ ವಿಗ್ರಹ ಗ್ರ್ಯಾನೈಟ್ ಶಿಲೆಯಿಂದ ನಿರ್ಮಾಣವಾದುದು. ಇದರ ತೂಕ 175 ಟನ್ನುಗಳು. ಇದು ಭಾರತದ ಮೂರನೆಯ ಅತ್ಯಂತ ದೊಡ್ಡ ವಿಗ್ರಹ. ಧರ್ಮಸ್ಥಳದ ಪ್ರವೇಶದ್ವಾರದ ಬಳಿಯ ಗುಡ್ಡದ ಮೇಲೆ ಇದನ್ನು ನಿಲ್ಲಿಸಲಾಗಿದೆ. ಸಮಾಜ ಸೇವೆ ಧರ್ಮಸ್ಥಳದ ಆಡಳಿತವು ಹಲವಾರು ಸಮಾಜ ಸೇವೆಗಳನ್ನು ನಡೆಸುತ್ತಿದೆ. ಸಾಮೂಹಿಕ ವಿವಾಹ ೧೯೭೨ ರಿಂದ ಇಂದಿನವರೆಗೆ ಸತತವಾಗಿ ಸಮಾಜದಲ್ಲಿ ವರದಕ್ಷಿಣೆ ಪಿಡುಗು ಮತ್ತು ಆಡಂಬರದ ಮದುವೆಯ ಸುಧಾರಣೆಗೋಸ್ಕರ ಸಾಮೂಹಿಕ ವಿವಾಹಗಳನ್ನು ನಡೆಸಲಾಗುತ್ತಿದೆ. ಅನ್ನದಾನ ಧರ್ಮಸ್ಥಳಕ್ಕೆ ಆಗಮಿಸುವ ಸರಾಸರಿ ೧೦,೦೦೦ ಭಕ್ತಾದಿಗಳಿಗೆ ಉಚಿತ ಭೋಜನದ ವ್ಯವಸ್ಥ ಮಾಡಲಾಗಿದೆ.ಇದಕ್ಕಾಗಿ ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡ ಅನ್ನಪೂರ್ಣ ಎಂಬ ಹೆಸರಿನ ಅನ್ನದಾನ ಛತ್ರವಿದೆ. ವಿದ್ಯಾದಾನ ಧರ್ಮಸ್ಥಳ ದೇವಳದ ವತಿಯಿಂದ ಶ್ರೀ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರಾರಂಬಿಸಿ ಉನ್ನತ ಶಿಕ್ಷಣವನ್ನು ನೀಡುವ ಸುಮಾರು ೫೦ಕ್ಕಿಂತಲೂ ಹೆಚ್ಚು ಸಂಸ್ಥೆಗಳನ್ನು ನಡೆಸಲಾಗುತ್ತಿದೆ.ಈ ಸಂಸ್ಥೆಗಳು ಸಮೀಪದ ಉಜಿರೆಯಲ್ಲಿ ಅಲ್ಲದೆ ಧಾರವಾಡ, ಮೈಸೂರು, ಮಂಗಳೂರು, ಹಾಸನ, ಉಡುಪಿ ಮುಂತಾದೆಡೆ ಹರಡಿಕೊಂಡಿವೆ. ಔಷಧದಾನ ಬಡ ಹಳ್ಳಿಯ ಜನರ ಅನುಕೂಲಕ್ಕೆ ಸಂಚಾರಿ ಆಸ್ಪತ್ರೆ,ಪ್ರಕೃತಿ ಚಿಕಿತ್ಸೆಯನ್ನು ನೀಡುವ ಶಾಂತಿವನ ನ್ಯಾಚುರೋಪತಿ ಆಸ್ಪತ್ರೆ, ಆಯುರ್ವೇದ ಚಿಕಿತ್ಸೆಗಾಗಿ ಉಡುಪಿ ಮತ್ತು ಹಾಸನದಲ್ಲಿ ಸುಸಜ್ಜಿತ ಆಸ್ಪತ್ರೆಗಳು ಮತ್ತು ಅಲೋಪತಿ ಔಷಧ ಪದ್ಧತಿಯಲ್ಲಿ ಚಿಕಿತ್ಸೆಗಾಗಿ ಧಾರವಾಡ ಮತ್ತು ಉಜಿರೆಗಳಲ್ಲಿ ಆಸ್ಪತ್ರೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ವಸ್ತು ಸಂಗ್ರಹಾಲಯಗಳು ಧರ್ಮಸ್ಥಳಕ್ಕೆ ದೇವಸ್ಥಾನ ವತಿಯಿಂದ ಹಳೆ ಕಾರುಗಳ ಸಂಗ್ರಹಾಲಯ ಮತ್ತು ಮಂಜೂಷಾ ವಸ್ತು ಸಂಗ್ರಹಾಲಯವಿದೆ. ಹಳೆಯ ಹಸ್ತ ಪ್ರತಿಗಳು, ಗ್ರಂಥಗಳ ರಕ್ಷಣೆಯನ್ನು ಮಾಡುವ ಗ್ರಂಥಾಲಯವೂ ಇಲ್ಲಿದೆ. ಸಾರಿಗೆ ವ್ಯವಸ್ಥೆ ಧರ್ಮಸ್ಥಳವು ದಕ್ಷಿಣ ಕನ್ನಡದ ಮಲೆನಾಡು ಪ್ರದೇಶದಲ್ಲಿದೆ.ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ ೭೫ ಕಿ.ಮೀ.ದೂರದಲ್ಲಿದೆ.ಮಂಗಳೂರಿಗೆ ದೇಶದ ಎಲ್ಲಾ ಭಾಗಗಳಿಂದ ರಸ್ತೆ,ರೈಲು ಮತ್ತು ವಿಮಾನ ಯಾನ ಸೌಕರ್ಯಗಳಿದ್ದು ಧರ್ಮಸ್ಥಳಕ್ಕೆ ಕೂಡಾ ಉತ್ತಮ ಸಾರಿಗೆ ಸೌಕರ್ಯಗಳಿವೆ. ಧರ್ಮಸ್ಥಳವು ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಉಜಿರೆಯಿಂದ ಕೇವಲ ೯ ಕಿ.ಮೀ ದೂರದಲ್ಲಿದೆ.ಬೆಂಗಳೂರಿನಿಂದ ಶಿರಾಡಿ ಘಾಟಿಯಾಗಿ ರಸ್ತೆಯಲ್ಲಿ ಹಾಗೂ ರೈಲಿನಲ್ಲಿ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಇಲ್ಲಿಗೆ ಆಗಮಿಸಬಹುದಾಗಿದೆ. ಇಲ್ಲಿಂದ ಸಮೀಪದ ಇತರ ಯಾತ್ರಾಕ್ಷೇತ್ರಗಳಾದ ಸುಬ್ರಹ್ಮಣ್ಯ,ಉಡುಪಿ,ಕೊಲ್ಲೂರು,ಕಟೀಲು ಮುಂತಾದೆಡೆಗೆ ಹೇರಳ ಸಾರಿಗೆ ಸೌಕರ್ಯವಿದೆ. ಚಿತ್ರಗಳು ಉಲ್ಲೇಖಗಳು ಬಾಹ್ಯ ಸಂಪರ್ಕಗಳು Official website Shri Kshethra Dharmasthala Rural Development Project ದೇವಾಲಯಗಳು ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು ಕರ್ನಾಟಕದ ಪ್ರವಾಸಿ ತಾಣಗಳು ದಕ್ಷಿಣ ಕನ್ನಡ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು
2385
https://kn.wikipedia.org/wiki/%E0%B2%B6%E0%B3%8D%E0%B2%B0%E0%B2%B5%E0%B2%A3%E0%B2%AC%E0%B3%86%E0%B2%B3%E0%B2%97%E0%B3%8A%E0%B2%B3
ಶ್ರವಣಬೆಳಗೊಳ
ಶ್ರವಣಬೆಳಗೊಳ (Shravanabelagola) ಹಾಸನ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ, ಪ್ರವಾಸಿ ತಾಣವಾಗಿದೆ. ಶ್ರವಣ ಬೆಳಗೊಳದಲ್ಲಿ ವಿಶ್ವವಿಖ್ಯಾತ ೫೮'೮"(೧೭.೮೮ ಮೀಟರ್ ) ಅಡಿ ಎತ್ತರದ ಬಾಹುಬಲಿಯ ಮೂರ್ತಿಯಿದೆ. ಜೈನ ಧಾರ್ಮಿಕ ಕೇಂದ್ರವಾಗಿದೆ. ನಾಲ್ಕನೇ ರಾಚಮಲ್ಲನ ಮಂತ್ರಿಯಾಗಿದ್ದ "ಚಾವುಂಡರಯ"ಇದನ್ನು ನಿರ್ಮಿಸಿದನು,ಮತ್ತು "ಚಾವುಂಡರಾಯ ಪುರಾಣ" ರಚಿಸಿದನು. ಗೊಮ್ಮಟೇಶ್ವರ ಜೈನಧರ್ಮದಲ್ಲಿ ಕೇಳಿ ಬರುವ ಪ್ರಸಿದ್ಧವಾದ ಹೆಸರು ಗೊಮ್ಮಟೇಶ್ವರ. ಚಾವುoಡರಾಯನು ಶ್ರವಣ ಬೆಳಗೊಳದಲ್ಲಿ ಕೆತ್ತಿಸಿದ 58 ಅಡಿ ಎತ್ತರದ ಏಕಶಿಲ ಬಾಹುಬಲಿಯ ಪ್ರತಿಮೆ ಇದೆ. ಇಲ್ಲಿ 12 ವರ್ಷಗಳಿಗೊಮ್ಮೆ ಮಹಮಸ್ತಾಭಿಶೇಕವನ್ನು ನೆರವೆರಿಸಲಾಗುತ್ತದೆ.ಕೊನೆಯಬಾರಿ 2018 ಫೆಬ್ರುವರಿ 8 ರಂದು ನಡೆದಿತ್ತು,ಮುಂದೆ 2030 ರಲ್ಲಿ ನಡೆಯಲಿದೆ. ಗೊಮ್ಮಟೇಶ್ವರ ಆದಿತೀರ್ಥಾಂಕನಾದ ವೃಷಭನಾಥನ ಕಿರಿಯ ಪುತ್ರ.ವೃಷಭನಾಥನಿಗೆ ಸುನಂದಾ ಮತ್ತು ನಂದಾ ಎಂಬ ಇಬ್ಬರು ಪತ್ನಿಯರು.ವೃಷಭನಾಥನಿಗೆ 101 ಮಕ್ಕಳು ಅದರಲ್ಲಿ ಸುನಂದೇಯ ಮಗನೆ ಗೊಮ್ಮಟೇಶ್ವರ. ಪೀಠಿಕೆ ಮತ್ತು ಇತಿಹಾಸ ಏಷ್ಯ ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ ಶ್ರವಣಬೆಳಗೊಳ ಪ್ರಸಿದ್ಧ ಜೈನ ಪುಣ್ಯಕ್ಷೇತ್ರ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹೋಬಳಿ ಕೇಂದ್ರವು ಬೆಂಗಳೂರಿನಿಂದ 148 ಕಿ.ಮೀಗಳ ದೂರದಲ್ಲಿದೆ. ಶ್ರವಣ ಬೆಳಗೊಳದ ವಿಂಧ್ಯಗಿರಿಯ ಮೇಲೆ ಕಡೆಯಲಾಗಿರುವ ಈ ಮೂರ್ತಿಯನ್ನು ಚಾವುಂಡರಾಯನು ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿದನು.ಅರಿಷ್ಟನೇಮಿ ಎಂಬುವ ಶಿಲ್ಪಿ ಕೆತ್ತಿದನೆಂದು ಹೇಳಲಾಗುತ್ತದೆ. ಈ ಶಿಲ್ಪಿಯು ವಿಶ್ವಕರ್ಮ ವರ್ಗಕ್ಕೆ ಸೆರಿದವನಾಗಿದ್ದು, ಪ್ರಸಿದ್ಧ ಶಿಲ್ಪಿ ಜಕಣಚಾರಿಯ ಶಿಷ್ಯನೆ೦ದು ಹೇಳುತ್ತಾರೇ'. ಮತ್ತೊಂದೆಡೆ ತುಳುನಾಡಿನ ಪ್ರಸಿದ್ದ ಶಿಲ್ಪಿ "ವೀರ ಶಂಭು ಕಲ್ಕುಡ "ಕೆತ್ತಿದನೆಂದು ಹೇಳಲ್ಪಡುತ್ತದೆ.(ಕೋಟಿ ಚೆನ್ನಯ:-ಡಾ| ವಾಮನ ನಂದಾವರ ಪುಟ219) ವಿಂಧ್ಯಗಿರಿಯ ಬೆಟ್ಟದ ಮೇಲಕ್ಕೆ ಹೋಗಲು ಸುಮಾರು ೭೦೦ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಹತ್ತಲಾಗದವರಿಗೆ ಡೋಲಿ ವ್ಯವಸ್ಥೆಯೂ ಲಭ್ಯವಿದೆ. ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿವೆ. ಕ್ಷೇತ್ರದಲ್ಲಿ ಜೈನ ಮಠವಿದ್ದು, ಮಠದ ಪಕ್ಕದಲ್ಲಿಯೇ ಪ್ರಾಚೀನವಾದ ಭಂಡಾರಿ ಹುಳ್ಳ ಬಸದಿ ಹಾಗೂ ಚಂದ್ರನಾಥ ಸ್ವಾಮಿಯ ಬಸದಿಯಿದೆ. ಜೈನ ಮಠದ ಈಗಿನ ಭಟ್ಟಾರಕರಾದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರು (Charukeerthi swamiji, Shravanabelagola) ವಿದ್ವತ್‌ಪೂರ್ಣರು ಹಾಗೂ ಸಾಕಷ್ಟು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಹನ್ನೆರಡು ವರ್ಷಗಳಿಂದ ಕಠಿಣ ವ್ರತದ ಕಾರಣ ಸಂಚಾರಕ್ಕೆ ವಾಹನವನ್ನೂ ಸಹ ಬಳಸದ ಸ್ವಾಮೀಜಿಯವರು ಇತ್ತೀಚೆಗೆ ತಾನೆ ಧರ್ಮಪ್ರಚಾರಕ್ಕೋಸ್ಕರ ಮತ್ತೆ ವಾಹನವನ್ನು ಬಳಸಿ ಧರ್ಮಪ್ರಚಾರ ಕೈಗೊಳ್ಳುತ್ತಿದ್ದಾರೆ. ಶ್ರೀ ಕ್ಷೇತ್ರದ ವತಿಯಿಂದ ನಡೆಸುತ್ತಿರುವ ಶ್ರೀ ಬಾಹುಬಲಿ ಇಂಜಿನಿಯರಿಂಗ್ ಕಾಲೇಜ್ ಸಹ ಇಲ್ಲಿದ್ದು, ಸಾಕಷ್ಟು ಹೊರ ರಾಜ್ಯದ ವಿದ್ಯಾರ್ಥಿಗಳು ಈ ಗ್ರಾಮೀಣ ಪ್ರದೇಶದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಪಾಲಿಟೆಕ್ನಿಕ್, ವಿಜ್ಞಾನ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ಶಾಲೆಯನ್ನೂ ಶ್ರೀಕ್ಷೇತ್ರದ ವತಿಯಿಂದ ನಡೆಸಲಾಗುತ್ತಿದೆ.ಶ್ರವಣಬೆಳಗೊಳ ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ. ಸೌಲಭ್ಯ: ಪರಿಚಯ ಮಹಾಮಸ್ತಕಾಭಿಷೇಕ: ಪ್ರತಿ ೧೨ ವರ್ಷಕ್ಕೊಮ್ಮೆ ನಡೆಯುತ್ತದೆ. ಇತ್ತೀಚೆಗೆ 2018 ರಲ್ಲಿ ನಡೆಯಿತು. ಪ್ರವಾಸಿಗಳಿಗೆ ಸಲಕರಣೆಗಳು: ವಿಶೇಷ ಸಲಕರಣೆಗಳು ಏನೂ ಬೇಡ. ವಸತಿ ವ್ಯವಸ್ಥೆ : ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಸಾಕಷ್ಟು ಧರ್ಮಶಾಲೆಗಳ ವ್ಯವಸ್ಥೆಯಿದ್ದು, ವಸತಿ ಗೃಹಗಳ ಮುಖ್ಯ ಕಛೇರಿ ಬಸ್ ನಿಲ್ಧಾಣದ ಪಕ್ಕದಲ್ಲಿರುವ ವಿದ್ಯಾನಂದ ನಿಲಯದ ಹಿಂಬದಿಯಲ್ಲಿದೆ. ಹತ್ತಿರದಲ್ಲಿರುವ ಇತರೆ ಪ್ರವಾಸ ಸ್ಥಳಗಳು: ಬೇಲೂರು (ಸುಮಾರು ೮೦ ಕಿಮೀ), ಹಳೇಬೀಡು(ಸುಮಾರು ೬೦ ಕಿಮೀ), ಯಡಿಯೂರು(ಸುಮಾರು ೪೦ ಕಿಮೀ), ಆದಿ ಚುಂಚನಗಿರಿ(ಸುಮಾರು ೨೫ ಕಿಮೀ), ಶೃಂಗೇರಿ (ಸುಮಾರು ೨೦೦ ಕಿಮೀ), ಮೈಸೂರು (ಸುಮಾರು ೮೦ ಕಿಮೀ), ಶ್ರೀರಂಗಪಟ್ಟಣ (ಸುಮಾರು ೬೫ ಕಿಮೀ), ಮೇಲುಕೋಟೆ(ಸುಮಾರು ೫೦ ಕಿಮೀ) ಇತ್ಯಾದಿ. ತಲುಪುವ ದಾರಿ ಬೆಂಗಳೂರಿನಿಂದ ಬರುವವರಿಗೆ:ಬೆಂಗಳೂರಿನಿಂದ ಸದ್ಯಕ್ಕಿರುವುದು ರಸ್ತೆ ಮಾರ್ಗ ಮಾತ್ರ. (ಈಗ ರೈಲ್ವೆ ವ್ಯವಸ್ಥೆಯು ಇದೆ) ರಾ. ಹೆ. ೪೮ (N H 48)ಯಲ್ಲಿ ಸಾಗಬೇಕು. ದಾರಿಯಲ್ಲಿ ಸಿಗುವ ಪ್ರಮುಖ ಪಟ್ಟಣಗಳೆಂದರೆ..ನೆಲಮಂಗಲ,ಕುಣಿಗಲ್,ಯಡಿಯೂರು,ಬೆಳ್ಳೂರ್ ಕ್ರಾಸ್,ಕದಬಹಳ್ಳಿ ನಂತರ ಹಿರೀಸಾವೆ. ಹಿರೀಸಾವೆಯಲ್ಲಿ ಎಡಕ್ಕೆ ತಿರುವಿದರೆ ೧೮ ಕಿ ಮೀ ನಂತರ ನೀವು ಶ್ರವಣಬೆಳಗೊಳದಲ್ಲಿ ಇರುತ್ತೀರಿ. ರಾಜ್ಯ ಸಾರಿಗೆ ಮೂಲಕ ಬರುವಂತವರು ಬೆಂಗಳೂರಿನಿಂದ ಶ್ರವಣಬೆಳಗೊಳಕ್ಕೆ ನೇರ ಬಸ್ ಸಂಪರ್ಕ ತೀರಾ ಕಡಿಮೆ ಇರುವುದರಿಂದ ಹಾಸನ, ಮಂಗಳೂರು ಅಥವಾ ಧರ್ಮಸ್ಥಳಕ್ಕೆ ತೆರಳುವ ಯಾವುದೇ ರಾಜ್ಸ ರಸ್ತೆ ಸಾರಿಗೆ ಬಸ್ಸನ್ನು ಹಿಡಿದು ಚನ್ನರಾಯಪಟ್ಟಣದಲ್ಲಿ ಇಳಿದು, ಅಲ್ಲಿಂದ ೧೨ ಕಿಮೀ ದೂರವಿರುವ ಶ್ರವಣಬೆಳಗೊಳವನ್ನು ತಲುಪಬಹುದು.(ಬೆಂಗಳೂರಿನಿಂದ ಸುಮಾರು ೧೫೦ ಕಿ ಮೀ) ಮೈಸೂರಿನಿಂದ ಬರುವವರು ಶಿವಮೊಗ್ಗ, ದಾವಣಗೆರೆ ಅಥವಾ ಅರಸೀಕೆರೆ ಕಡೆಗೆ ತೆರಳುವ ಯಾವುದೇ ರಸ್ತೆ ಸಾರಿಗೆ ಬಸ್ಸಿನಲ್ಲಿ ಚನ್ನರಾಯಪಟ್ಟಣಕ್ಕೆ ಬಂದು ಅಲ್ಲಿಂದ ಶ್ರವಣಬೆಳಗೊಳ ತಲುಪಬಹುದು. ಸ್ವಂತ ವಾಹನದಲ್ಲಿ ಬರುವವರು ಮೈಸೂರು- ಚನ್ನರಾಯಪಟ್ಟಣ ಮಾರ್ಗದಲ್ಲಿ ಬರುವ ಕಿಕ್ಕೇರಿಯಲ್ಲಿ ಎಡಕ್ಕೆ ತಿರುಗಿ ನೇರವಾಗಿ ಶ್ರವಣಬೆಳಗೊಳ ತಲುಪಬಹುದು(ಮೈಸೂರಿನಿಂದ ದೂರ ಸುಮಾರು ೧೦೦ ಕಿ ಮೀ.) ಇದೀಗ ಮಂಗಳೂರಿನಿಂದ ಶ್ರವಣಬೆಳಗೊಳದ ಮುಖಾಂತರ ಬೆಂಗಳೂರನ್ನು ಸಂಪರ್ಕಿಸುವ ರೈಲು ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಮುಕ್ತಾಯಗೊಳ್ಳುವ ವಿಶ್ವಾಸವಿದೆ. ಈಗಾಗಲೇ ಹಾಸನದಿಂದ ಶ್ರವಣಬೆಳಗೊಳವನ್ನು ಸಂಪರ್ಕಿಸುವ ರೈಲು ಮಾರ್ಗ ಮುಕ್ತಾಯಗೊಂಡಿದೆ. ಈ ಕಾಮಗಾರಿಯು ಪೂರ್ಣಗೊಂಡರೆ ಯಾತ್ರಾರ್ಥಿಗಳು ಹೆಚ್ಚು ಸುಲಭವಾಗಿ ಕ್ಷೇತ್ರವನ್ನು ಸಂಪರ್ಕಿಸಬಹುದು. ನೋಡಿ ಕಾರ್ಕಳ ಹೊಂಬುಚ>>ಹುಂಚ ಉಲ್ಲೇಖ ಕರ್ನಾಟಕದ ಪ್ರಮುಖ ಸ್ಥಳಗಳು ಭಾರತದ ಪವಿತ್ರ ಕ್ಷೇತ್ರಗಳು ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು ಐತಿಹಾಸಿಕ ಸ್ಥಳಗಳು ಕರ್ನಾಟಕ ಹಾಸನ ಜಿಲ್ಲೆ ಪ್ರವಾಸಿ ತಾಣಗಳು ಕರ್ನಾಟಕದ ಏಳು ಅದ್ಭುತಗಳು
2386
https://kn.wikipedia.org/wiki/%E0%B2%AC%E0%B2%BE%E0%B2%B9%E0%B3%81%E0%B2%AC%E0%B2%B2%E0%B2%BF
ಬಾಹುಬಲಿ
ಬಾಹುಬಲಿ ಅಥವಾ ಗೊಮ್ಮಟೇಶ್ವರ, ಜೈನ ಧರ್ಮದಲ್ಲಿ ಮೂಡಿ ಬರುವ ಪ್ರಸಿದ್ಧ ಹೆಸರು. ಶ್ರವಣಬೆಳಗೊಳದಲ್ಲಿ ಚಾಮುಂಡರಾಯ ಕೆತ್ತಿಸಿದ ೫೮ ಅಡಿ ಎತ್ತರದ ಏಕಶಿಲಾ ಬಾಹುಬಲಿ ಪ್ರತಿಮೆ ಇರುವುದು. ಸುಮಾರು ೧೨ ವರ್ಷಗಳಿಗೊಮ್ಮೆ ಈ ಪ್ರತಿಮೆಗೆ ಮಹಾ ಮಸ್ತಕಾಭಿಷೇಕವನ್ನು ನೆರವೇರಿಸಲಾಗುತ್ತದೆ. ಗೊಮ್ಮಟೇಶ್ವರ- ಆದಿ ತೀರ್ಥಂಕರನಾದ ವೃಷಭನಾಥನ (ಪುರುದೇವ) ಕಿರಿಯ ಮಗ. ದೋರ್ಬಲಿ, ಬಾಹುಬಲಿ, ಕುಕ್ಕಟೇಶ್ವರ-ಇವು ಬಾಹುಬಲಿಗೆ ಇರುವ ಪರ್ಯಾಯನಾಮಗಳು. ಹಿನ್ನೆಲೆ ಜೈನ ಧರ್ಮವನ್ನು ಉಪದೇಶಿಸಿದ ಮೊದಲನೆಯ ತೀರ್ಥಂಕರರು ವೃಷಭನಾಥರು. ಇವರಿಗೆ ಸುನಂದ ಮತ್ತು ನಂದಾ ಹೆಸರಿನ ಇಬ್ಬರು ಪತ್ನಿಯರು. ನಂದಾ ನೂರು ಜನ ಗಂಡು ಮಕ್ಕಳೂ ಮತ್ತು ಇಬ್ಬರು ಹೆಣ್ಣು ಹೆಣ್ಣು ಮಕ್ಕಳಿಗೆ ಜನ್ಮವೀಯುತ್ತಾಳೆ. ಬಾಹುಬಲಿಯು ಸುನಂದೆಯ ಮಗ. ವೃಷಭನಾಥರಿಗೆ ವೈರಾಗ್ಯ ಉಂಟಾದಾಗ ಮಕ್ಕಳಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳಿದರು. ಸಕಲ ಕರ್ಮಗಳನ್ನು ಜಯಿಸಿ ಕೇವಲಜ್ಞಾನವನ್ನು ಪಡೆದು ಜನರಿಗೆ ಮುಕ್ತಿ ಮಾರ್ಗವನ್ನು ಉಪದೇಶಿಸುತ್ತಿದ್ದರು. ಪ್ರಥಮ ಪುತ್ರನಾದ ಭರತನು ದಿಗ್ವಿಜಯವನ್ನು ಮುಗಿಸಿಬರುವಾಗ ಆತನ ಚಕ್ರರತ್ನವು ಪುರ ಪ್ರವೇಶ ಮಾಡಲಿಲ್ಲ. ಭರತನು ತನ್ನ ತಮ್ಮ೦ದಿರನ್ನು ಜಯಿಸಿಲ್ಲವೆ೦ದು ಪುರೊಹಿತರು ಹೇಳಿದರು. ಕಾಣಿಕೆಗಳೊಡನೆ ಬರುವ೦ತೆ ತಮ್ಮ೦ದಿರಿಗೆ ಹೇಳಿಕಳಿಸಿದಾಗ ಬಾಹುಬಲಿಯನ್ನುಳಿದು ಇತರರು ವೃಷಭನಾಥರ ಬಳಿ ಹೋಗಿ ದೀಕ್ಷೆ ಪಡೆದರು. ಬಾಹುಬಲಿಯು ತ೦ದೆಯ ಹೊರತು ಇನ್ನಾರಿಗೂ ತಲೆ ಬಾಗುವುದಿಲ್ಲವೆ೦ದು, ತ೦ದೆಯಿ೦ದ ತನಗೆ ದೊರೆತ ರಾಜ್ಯವನ್ನು ಕೊಡುವುದಿಲ್ಲವೆ೦ದೂ, ಇದಕ್ಕಾಗಿ ಯುದ್ಧಕ್ಕೆ ಸಹ ಸಿದ್ಧನೆ೦ದು ಭರತನ ದೂತರಿಗೆ ಹೇಳಿಕಳಿಸಿದನು. ಭರತನು ಈ ಸುದ್ದಿಯನ್ನು ಕೇಳಿ ಯುದ್ಧಕ್ಕೆ ಸಿದ್ಧನಾದನು. ಎರಡೂ ಸ್ಯೆನ್ಯಗಳು ಯುದ್ಧ ಪ್ರಾರ೦ಭಿಸುವ ಮು೦ಚೆ ಮ೦ತ್ರಿಗಳು ಯೋಚಿಸಿ ಭರತ, ಬಾಹುಬಲಿ ಇಬ್ಬರೂ ವಜ್ರದೇಹಿಗಳಾಗಿರುವುದರಿ೦ದ ವೃಥಾ ಸ್ಯೆನ್ಯ ನಾಶವಾಗುವುದಲ್ಲದೆ ಈ ಇಬ್ಬರಿಗೂ ಏನೂ ಆಗುವುದಿಲ್ಲ. ಆದ್ದರಿ೦ದ ಈ ಇಬ್ಬರ ಮಧ್ಯೆಯೆ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯಲಿ ಎಂದು ತೀರ್ಮಾನಿಸಿದರು. ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವ೦ತೆ ನೀರೆರೆಚುವುದು ಜಲಯುದ್ಧ. ಪರಸ್ಪರ ಬಾಹು ಯುದ್ಧ ಜಟ್ಟಿಕಾಳಗ ಮಾಡುವುದು ಮಲ್ಲಯುದ್ಧ. ಈ ಮೂರೂ ಯುದ್ಧಗಳಲ್ಲಿ ಅಪ್ರತಿಮ ವೀರನಾದ ಬಾಹುಬಲಿಯೇ ಗೆದ್ದನು. ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಮೇಲೆತ್ತಿದ ಬಾಹುಬಲಿಗೆ ತಾನು ಹೀಗೆ ಮಾಡಬಾರದೆಂದೆನಿಸಿ ನಿಧಾನವಾಗಿ ಕೆಳಗಿಳಿಸಿದನು. ಅವಮಾನ ಹೊ೦ದಿದ ಭರತನು ತನ್ನ ಚಕ್ರವನ್ನು ಪ್ರಯೋಗಿಸಿದರೂ ಸಹ ಅದು ಬಾಹುಬಲಿಯ ಪ್ರದಕ್ಷಿಣೆ ಮಾಡಿ ಅವನ ಬಲಗಡೆ ಬಂದು ನಿಂತಿತು. ಬಾಹುಬಲಿ ವಿಜಯಿಯಾದನು. ಎಲ್ಲರೂ ಜಯಕಾರ ಮಾಡಿದರು. ಆದರೆ ಬಾಹುಬಲಿಗೆ ವೈರಾಗ್ಯ ಉಂಟಾಗಿ ರಾಜ್ಯವನ್ನು ತೊರೆದು ತಂದೆ ವೃಷಭನಾಥರ ಬಳಿ ದೀಕ್ಷೆಯನ್ನು ಪಡೆದು ತಪಸ್ಸಿಗೆ ತೊಡಗಿದನು. ಬಹುಕಾಲ ತಪಸ್ಸು ಆಚರಿಸಿದರೂ ಕೇವಲಜ್ಞಾನವನ್ನು ಪಡೆಯಲಿಲ್ಲ. ಇದಕ್ಕೆ ತಾನು ಅಣ್ಣನ ಭೂಮಿಯಲ್ಲಿ ನಿ೦ತಿರುವೆನೆ೦ಬ ಚಿ೦ತೆಯೇ ಕಾರಣವಾಗಿತ್ತು. ಇದನ್ನು ತಿಳಿದ ನಂತರ ಭರತನು ಬ೦ದು ಈ ಭೂಮಿಯನ್ನು ನೀನು ಗೆದ್ದು ನನಗೆ ಕೊಟ್ಟಿರುವೆ ಆದ್ದರಿ೦ದ ಮನದಲ್ಲಿ ಈ ಭಾವನೆ ತೊರೆದು ಬಿಡು ಎಂದು ಬೇಡಿದನು. ನಂತರ ಬಾಹುಬಲಿಯು ನಿರ್ಮಲವಾದ ಮನದಿ೦ದ ತಪಸ್ಸನ್ನು ಮಾಡಿ ಕೇವಲಜ್ಞಾನ ಪಡೆದನು. ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಬಾಹುಬಲಿಯ ಬೃಹತ್ ವಿಗ್ರಹಗಳು ಕಾಣಲುಸಿಗುತ್ತದೆ. ಶ್ರವಣಬೆಳಗೊಳ, ಧರ್ಮಸ್ಥಳ, ವೇಣೂರು, ಕಾರ್ಕಳ, ಮೈಸೂರು ಬಳಿಯ ಗೋಮಟಗಿರಿಯಲ್ಲಿ ಬಾಹುಬಲಿಯ ಬೃಹತ್ ವಿಗ್ರಹಗಳಿವೆ. ಪ್ರತಿಯೊಂದಕ್ಕೂ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರುತ್ತದೆ. ಆದರೆ ಉಳಿದೆಲ್ಲ ವಿಗ್ರಹಗಳಿಗೆ ಹೋಲಿಸಿದರೆ ಚಿಕ್ಕದಾಗಿರುವ, ಮೈಸೂರಿನ ಗೋಮಟಗಿರಿಯ ಬಾಹುಬಲಿ ಸ್ವಾಮಿಗೆ ಪ್ರತಿ ವರ್ಷವೂ ಮಸ್ತಕಾಭಿಷೇಕ ನಡೆಯುತ್ತದೆ. ಸಾಹಿತ್ಯದಲ್ಲಿ ಬಾಹುಬಲಿ ಬೊಪ್ಪಣ ಕವಿ ಬಾಹುಬಲಿಯ ಗುಣಾತಿಶಯಗಳನ್ನು ಹೀಗೆ ಹೊಗಳಿದ್ದಾನೆ: ಅನುಪಮ ರೂಪನೇ ಸ್ಮರನುದಗ್ರನೇ ನಿರ್ಜಿತಚಕ್ರಿ ಮತ್ತುದಾ ರನೆ ನೆರೆಗೆಲ್ದು ಮಿತ್ತ ನಖಿಲೋರ್ವಿಯ ನತ್ಯಭಿಮಾನಿಯೇ ತಪಃ ಸ್ಥನುಮೆರಡಂಘ್ರಿಯಿತ್ತೆಳೆಯೊಳಿರ್ದ ಪುದೆಂಬನನೂನಬೋಧನೇ ವಿನಿಹತಕರ್ಮಬಂಧನೆನೆ ಬಾಹುಬಲೀಶ ನಿದೇನುದಾತ್ತನೋ ವೈರಾಗ್ಯನಿಧಿಯಾಗಿ ಪ್ರತಿಮಾಯೋಗದಲ್ಲಿ ತಪಸ್ಸಿಗೆ ನಿಂತು ಮುಕ್ತಿಯನ್ನು ಸಾಧಿಸಿದ ಬಾಹುಬಲಿಯ ಪ್ರತಿಮೆ ಪಂಚಪರ ಮೇಷ್ಠಿಗಳ ಪ್ರತಿಮೆಯಂತೆ ಪೂಜನೀಯವಾಗಿದೆ. ಬಾಹುಬಲಿಯ ಪೂಜೆ ದಕ್ಷಿಣ ದೇಶದಲ್ಲಿ ಬಹುಕಾಲದಿಂದ ನಡೆಯುತ್ತ ಬಂದಿದೆ. ಸ್ವಯಂ ಭರತನೇ ಬಾಹುಬಲಿಯ 525 ಧನುಷ್ಯ ಎತ್ತದ ಮೂರ್ತಿಯನ್ನು ಸ್ಥಾಪಿಸಿದನೆಂಬ ಆಖ್ಯಾನಕವಿದೆ. ಬಾಹುಬಲಿಯ ಪ್ರತಿಮೆಗಳು ಬಾದಾಮಿ ಮೊದಲಾದ ಸ್ಥಳಗಳಲ್ಲಿ ದೊರೆಯುತ್ತದೆ. ಶ್ರವಣಬೆಳಗೊಳ ಬೆಂಗಳೂರಿನಿಂದ ಸುಮಾರು 160 ಕಿ.ಮೀ. ಮತ್ತು ಮೈಸೂರಿನಿಂದ ಸುಮಾರು 80 ಕಿ.ಮೀ. ಅಂತರದಲ್ಲಿ [ಹಾಸನ] ಜಿಲ್ಲೆಯ [ಚೆನ್ನರಾಯಪಟ್ಟಣ] ತಾಲ್ಲೂಕಿನಲ್ಲಿ ಶ್ರವಣಬೆಳ್ಗೊಳವೆಂಬ ಪ್ರಸಿದ್ಧ ಜೈನ ತೀರ್ಥಕ್ಷೇತ್ರವಿದೆ. ಅಲ್ಲಿಯ ಶಿಲಾಲೇಖಗಳ ಮೇಲಿಂದ ಚಂದ್ರಗುಪ್ತ ಮೌರ್ಯ ತನ್ನ ಗುರುವಾದ ಭದ್ರಬಾಹುವಿನ ಸಂಗಡ ಅಲ್ಲಿಗೆ ಬಂದು ಸಲ್ಲೇಖನ ವ್ರತವನ್ನು ಹಿಡಿದು ಮರಣವನ್ನು ಅಪ್ಪಿದನೆಂದು ತಿಳಿದುಬರುತ್ತದೆ. ಊರು ಚಿಕ್ಕದು. ಒಂದು ಪ್ರಶಾಂತವಾದ ಸರೋವರ ಸಮೀಪದಲ್ಲಿದೆ. ಎರಡೂ ಕಡೆ ವಿಂಧ್ಯಗಿರಿ (ದೊಡ್ಡ ಬೆಟ್ಟ) ಮತ್ತು ಚಂದ್ರಗಿರಿ (ಚಿಕ್ಕಬೆಟ್ಟ) ಎಂಬ ಎರಡು ಕಲ್ಲಿನ ದಿಬ್ಬಗಳಿವೆ. ದೊಡ್ಡ ಬೆಟ್ಟದ ತುದಿಯಲ್ಲಿ ಕಲ್ಲಿನ ಸುತ್ತಾಲಯದ ನಡುವೆ ಅಖಂಡ ಶಿಲೆಯಲ್ಲಿ ಕೆತ್ತಿದ ಬಾಹುಬಲಿಯ 58' ಎತ್ತರದ ಭವ್ಯಮೂರ್ತಿ ಉತ್ತರಾಭಿಮುಖವಾಗಿ ನಿಂತಿದೆ. ಈ ಮೂರ್ತಿ ಗೊಮ್ಮಟೇಶ್ವರ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಬಾಹುಬಲಿ ಪ್ರತಿಮಾಯೋಗವನ್ನು ಧಾರಣಮಾಡಿ, ಧ್ಯಾನ ಮಾಡುತ್ತಿರುವ ಸನ್ನಿವೇಶವನ್ನಿದು ತೋರಿಸುತ್ತದೆ. ಮುಖಮುದ್ರೆ ಪ್ರಶಾಂತವೀರಾಗಭಾವವನ್ನು ಸೂಸುತ್ತದೆ. ಕಾಲುಗಳ ಕೆಳಗೆ ಕಮಲವಿದೆ. ಎರಡೂ ಬದಿಗೆ ಹಾವಿನ ಹುತ್ತಗಳಿವೆ. ಮಾಧವೀಲತೆ ಕೈಕಾಲುಗಳ ಮೇಲೆ ಹಬ್ಬಿದೆ. ಗೊಮ್ಮಟೇಶ್ವರ ವಿಗ್ರಹ ವಿಷಯವಾಗಿ ಹಲವು ಕಥೆಗಳು ಪ್ರಚಲಿತವಿವೆ. ಪ್ರತಿಮೆಯ ಮೇಲೆ ದೊರೆಯುವ ಶಿಲಾಲೇಖನದಿಂದ ಚಾವುಂಡರಾಯ ಇದನ್ನು ಮಾಡಿಸಿದನೆಂದು ತಿಳಿದುಬರುತ್ತದೆ. ಈತ ಗಂಗವಂಶದ ರಾಚಮಲ್ಲನ (924-984) ದಂಡಾಧಿಪತಿಯೂ ಮಂತ್ರಿಯೂ ಆಗಿದ್ದ. ಸುಮಾರು 982ರಲ್ಲಿ ಈ ವಿಗ್ರಹವನ್ನು ಕೆತ್ತಿಸಿ ಮುಗಿಸಿರಬೇಕೆಂದು ತೋರುತ್ತದೆ. ವಿಗ್ರಹದ ಸುರಕ್ಷಣೆಗಾಗಿ ಹೊಯ್ಸಳ ವಿಷ್ಣುವರ್ಧನನ ದಂಡಾಧಿಪತಿಯಾದ ಗಂಗರಾಜ ಸುತ್ತಲಯವನ್ನು ಕಟ್ಟಿಸಿದ (ಸುಮಾರು 1117). ಇದರ ಮಾಹಿತಿ ವಿಗ್ರಹದ ಮೇಲೆನ ಶಿಲಾಲೇಖನಗಳಿಂದ ಗೊತ್ತಾಗುತ್ತದೆ. ಪೌದನಪುರದಲ್ಲಿಯ ಪ್ರತಿಮೆ ಆಗಮ್ಯವೆನಿಸಿದ್ದರಿಂದ ತನ್ನ ತಾಯಿ ದರ್ಶಿಸಲೆಂದು ಚಾವುಂಡರಾಯ ಈ ಮೂರ್ತಿಯನ್ನು ಕೆತ್ತಿಸಿದಂತೆ ಆಖ್ಯಾನಕವಿದೆ. ಈ ವಿಗ್ರಹಕ್ಕೆ ಗೊಮ್ಮಟೇಶ್ವರ ಎಂಬ ಹೆಸರು ಬಂದದ್ದು ಚಾವುಂಡರಾಯನಿಂದಲೇ. ನೇಮಿಚಂದ್ರಸಿದ್ಧಾಂತ ಚಕ್ರವರ್ತಿಯಿಂದ ರಚಿತವಾದ ಗೊಮ್ಮಟಸಾರವೆಂಬ ಗ್ರಂಥದಿಂದ ಚಾವುಂಡರಾಯನಿಗೆ ಗೊಮ್ಮಟರಾಯನೆಂಬ ಹೆಸರಿದ್ದುದೂ ಆತ ಬೆಳ್ಗೊಳದಲ್ಲಿ ಕಟ್ಟಿಸಿದ ಬಸದಿಯ ಮತ್ತು ಕೆತ್ತಿಸಿದ ಈ ವಿಗ್ರಹ ವಿಷಯವೂ ತಿಳಿಯುತ್ತದೆ. ಗೊಮ್ಮಟ ಅಂದರೆ ಸುಂದರ, ಚೆಲುವ ಮನ್ಮಥ ಎಂದರ್ಥ. ಇದು ಅವನ ಮನೆಯ ಹೆಸರಾಗಿರಬೇಕು. ಆತ ಕೆತ್ತಿಸಿದ ಈಶ್ವರ ಅಂದರೆ ಆರಾಧ್ಯ ದೇವತೆಯ ಹೆಸರು ಗೊಮ್ಮಟೇಶ್ವರ. ಇದರಿಂದ ಮುಂದಿನ ಕಾಲದಲ್ಲಿ ಬಾಹುಬಲಿಯ ಮೂರ್ತಿಗಳು, ಕಾರ್ಕಳ, ವೇಣೂರು ಮೊದಲಾದ ಸ್ಥಳಗಳಲ್ಲಿ ಗೊಮ್ಮಟೇಶ್ವರ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಧವಲಾದಿಸಿದ್ಧಾಂತ ಗ್ರಂಥಗಳ ಸಾರವಾಗಿ ನೇಮಿಚಂದ್ರ ಚಾವುಂಡರಾಯ ಅಥವಾ ಗೊಮ್ಮಟರಾಯನ್ನು ಕುರಿತು ಬರೆದ ಗ್ರಂಥದ ಹೆಸರು ಗೊಮ್ಮಟಸಾರ. ಗೊಮ್ಮಟೇಶ್ವರನ ಈ ವಿಶಾಲಕಾರ ಮತ್ತು ಅದ್ವಿತೀಯ ಪ್ರತಿಮೆಯಿಂದ ಶ್ರವಣಬೆಳ್ಗೊಳ ತೀರ್ಥಕ್ಷೇತ್ರ ಮತ್ತು ಯಾತ್ರಾಸ್ಥಳವಾಗಿದೆ. ವಿಂಧ್ಯಗಿರಿಯ ಮೇಲಿನ ಬೃಹತ್ಕಾಯದ ಬಾಹುಬಲಿಯ ಪೂಜೆಯೆಂದರೆ ಒಂದು ಮಹೋತ್ಸವವೇ ಅಲ್ಲದೆ ಧಾರ್ಮಿಕ ಜನರಿಗೆ ಪುಣ್ಯಕಾರಿ ಪ್ರಯೋಜನವೂ ಹೌದು. ಈ ರೀತಿಯ ಮಹಾಮಸ್ತಕಾಭಿಷೇಕ ಪೂಜೆಯನ್ನು ಪ್ರತಿ ಹನ್ನೆರಡು ವರ್ಷಕ್ಕೆ ಒಮ್ಮೆ ಒಂದು ವಿಶೇಷ ಮುಹೂರ್ತವನ್ನು ನೋಡಿ, ನಡೆಸುವ ಪರಂಪರೆಯುಂಟು. ಶ್ರವಣಬೆಳಗೋಳ 1398ರ ಶಿಲಾಲೇಖನದಿಂದ ಪಂಡಿತಾರ್ಯ ಏಳುಸಾರಿ ಮಸ್ತಕಾಭಿಷೇಕ ಮಾಡಿಸಿದ ಸಂಗತಿಗೊತ್ತಾಗುತ್ತದೆ. ಅದರಂತೆ 1500ರಲ್ಲಿ 1612ರಲ್ಲಿಯೂ ಮಸ್ತಕಾಭಿಷೇಕವಾಗಿರಬೇಕು. 1612ರಲ್ಲಿ ಶಾಂತವರ್ಣೀ, 1677ರಲ್ಲಿ ಚಿಕ್ಕದೇವರಾಜ ಒಡೆಯರ ಮಂತ್ರಿಯಾದ ವಿಶಾಲಾಕ್ಷ ಪಂಡಿತ 1825ರಲ್ಲಿ ಮೈಸೂರು ಮಹಾರಾಜರಾದ ಮುಮ್ಮುಡಿ ಕೃಷ್ಣರಾಜ ಒಡೆಯರು ಮಾಡಿಸಿದ ಮಸ್ತಕಾಭಿಷೇಕಗಳ ಉಲ್ಲೇಖ ಉಂಟು. ಇತ್ತೀಚಿಗೆ 1827,1871, 1887, 1909 ಮತ್ತು 1925-(ಅನಂತರ ಸಾಧಾರಣ ಹನ್ನೆರಡು ವರ್ಷಕ್ಕೊಮ್ಮೆ) ಮಸ್ತಕಾಭಿಷೇಕಗಳು ನಡೆಯುತ್ತ ಬಂದಿದೆ. ಈ ಸಮಯದಲ್ಲಿ ಭಾರತದ ಎಲ್ಲ ಭಾಗಗಳಿಂದ ವಿಶೇಷವಾಗಿ ಜೈನ ಯಾಂತ್ರಿಕರು ಶ್ರವಣಬೆಳಗೊಳಕ್ಕೆ ಬರುತ್ತಾರೆ. ಮಸ್ತಕಾಭಿಷೇಕದಿಂದಾಗಿ ಶ್ರವಣಬೆಳಗೊಳ ಜೈನರಿಗೆ ದಕ್ಷಿಣಕಾಶಿಯಾಗಿದೆ. ಶ್ರವಣಬೆಳಗೊಳ ವಿಗ್ರಹದ ಅದ್ವಿತೀಯತೆ, ಸೌಂದರ್ಯ, ಶಿಲ್ಪಸಾಹಸ, ಭವ್ಯತೆ, ಪಾವಿತ್ರ್ಯ ಮತ್ತು ವೀತರಾಗತೆಯನ್ನು ಪಾಶ್ಚಾತ್ಯ ಮತ್ತು ಪೌರಸ್ತ್ಯ ಪ್ರವಾಸಿಗಳು, ವಿದ್ವಾಂಸರು, ಲೇಖಕರು ಮತ್ತು ಕವಿಗಳು ಮುಕ್ತಕಂಠದಿಂದ ಬಣ್ಣಿಸಿದ್ದಾರೆ. 58` ಎತ್ತರವುಳ್ಳ ಈ ಬೃಹನ್ಮೂರ್ತಿಯಲ್ಲಿ ಶಿಲ್ಪಿ ಬಾಹುಬಲಿಯ ರೂಪ ಗುಣ ಸ್ವಭಾವಗಳನ್ನು ಸಹಜವೆಂಬಂತೆ ಹೊಮ್ಮಿಸಿದ್ದಾನೆ. ಆ ಮುಖದಲ್ಲಿ ತೋರುವ ಉದಾತ್ತವಾದ ಮನೋಭಾವ, ಸಂಪೂರ್ಣವಾದ ತ್ಯಾಗ, ಅತೀವ ವೈರಾಗ್ಯ, ಆತ್ಮ ಸಂಯಮಗಳೂ ಕಷ್ಟಕಾರ್ಪಣ್ಯಗಳಲ್ಲಿ ತೊಳಲುತ್ತಿರುವ ಪ್ರಪಂಚದ ಮೇಲಿನ ಮರುಕವನ್ನು ವ್ಯಕ್ತಪಡಿಸುವ ಆ ಕಿರುನಗೆಯೂ ವರ್ಣನಾತೀತವಾಗವೆ. ವಿಸ್ತಾರವಾದ ಆ ಎದೆ, ನೇರವಾದ ಆ ನಿಲುವು, ಯಾವುದಕ್ಕೂ ಹೆದರದ, ಚಕ್ರವರ್ತಿಯನ್ನು ಸೋಲಿಸಿದ ಒಂದು ಕೆಚ್ಚು-ಇವು ಆತ್ಮಾಭಿಮಾನವನ್ನು ಸೂಚಿಸುತ್ತವೆ. ಇಷ್ಟು ಉನ್ನತವಾದ ಮೂರ್ತಿಯಲ್ಲಿ ಇಂಥ ಸೌಂದರ್ಯವೂ ಇಂಥ ಅತಿಶಯವೂ ಮೇಳೈಸಿರುವುದನ್ನು ಬೇರೆಡೆ ಕಾಣುವುದು ಅಸಾಧ್ಯವೆಂದು ಬೊಪ್ಪಣಕವಿ ಹಾಡಿ ಹೊಗಳಿದ್ದಾನೆ. ಇತರೆಡೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೆರಡು ಗೊಮ್ಮಟೇಶ್ವರ ಮೂರ್ತಿಗಳಿವೆ. ಕ್ರಿ.ಶ. 1432ರಲ್ಲಿ ವೀರಪಾಂಡ್ಯ ಕಾರ್ಕಳದಲ್ಲಿ ಪ್ರತಿಷ್ಠಿಸಿದ ಮೂರ್ತಿ 42' ಎತ್ತರವಿದೆ.ವೇಣೂರಿನಲ್ಲಿ ಚಾವುಂಡರಾಯನ ವಂಶಸ್ಥನಾದ ತಿಮ್ಮರಾಜ ಕ್ರಿ.ಶ. 1604ರಲ್ಲಿ 35`ಎತ್ತರವಿರುವ ಇನ್ನೊಂದು ಮೂರ್ತಿಯನ್ನು ನಿಲ್ಲಿಸಿದ. ಎತ್ತರದಲ್ಲಿ ಚಿಕ್ಕದಾದರೂ ಭವ್ಯವಾಗಿರುವ ಮತ್ತೆರಡು ಮೂರ್ತಿಗಳು ಮೈಸೂರು ಜಿಲ್ಲೆಯಲ್ಲಿವೆ. ಕೃಷ್ಣರಾಜನಗರ ತಾಲ್ಲೂಕಿನ ಬಸ್ತಿ ಹಳ್ಳಿ ಎಂಬಲ್ಲಿರುವ ಸುಮಾರು 20` ಎತ್ತರವಿರುವ ಬಳಪದ ಕಲ್ಲಿನ ಒಂದು ಮೂರ್ತಿಯನ್ನು ವಿಷ್ಣುವರ್ಧನನ ಕಾಲದಲ್ಲಿ ಆತನ ದಂಡನಾಯಕ ಪುಣಿಸಮಯ್ಯ ಪ್ರತಿಷ್ಠಿಸಿದುದಾಗಿ ತೋರುತ್ತದೆ. ಮೈಸೂರು ತಾಲ್ಲೂಕಿನ ಗೊಮ್ಮಟಗಿರಿಯ ಮೇಲೆ ನಿಂತಿರುವ ಇನ್ನೊಂದು ಮೂರ್ತಿಯನ್ನು ಯಾರು ಯಾವಾಗ ಸ್ಥಾಪಿಸಿದರು ಎಂಬುದು ತಿಳಿಯದು. ಮದ್ದೂರು ತಾಲ್ಲೂಕಿನಲ್ಲಿ ಬಸ್ತಿತಿಪ್ಟೂರಿನ ಬಳಿ ಗುಡ್ಡ ಒಂದರ ಮೇಲೆ ನಿಂತಿರುವ ಮತ್ತೊಂದು ಗೊಮ್ಮಟೇಶ್ವರನ ಮೂರ್ತಿ ಈಚೆಗೆ ಪತ್ತೆಯಾಗಿದೆ. ಇತ್ತೀಚೆಗೆ ಗೊಮ್ಮಟೇಶ್ವರನ ಮತ್ತೊಂದು ಬೃಹನ್ ಮೂರ್ತಿಯನ್ನು ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿಸಲಾಗಿದೆ.. ಈ ಮೂರ್ತಿ ಸುಮಾರು 48'ಗಳಷ್ಟು ಎತ್ತರವಿದ್ದು ಅದನ್ನು ಪೀಠದ ಮೇಲೆ ನಿಲ್ಲಿಸಿದಾಗ 60`ಗಳಷ್ಟು ಎತ್ತರದ ಅದ್ಭುತ ಶಿಲಾಪ್ರತಿಮೆಯಾಗಿದ್ದು ಕಂಗೊಳಿಸುತ್ತಿದೆ. ಈ ವಿಗ್ರಹವನ್ನು ರೂಪಿಸಿದ ಶಿಲ್ಪಿ ರಂಜಾಳ ಗೋಪಾಲ ಶೆಣೈ. ಕಾರ್ಕಳದಲ್ಲಿ ಸಿದ್ಧವಾದ ಈ ಮೂರ್ತಿಯನ್ನು ಧರ್ಮಸ್ಥಳಕ್ಕೆ ಸಕಲ ವೈಭವದೊಡನೆ ತಂದು ನಿಲ್ಲಿಸಲಾಗಿದೆ. ಜೈನ ಧರ್ಮ
2387
https://kn.wikipedia.org/wiki/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%20%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF%20%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF%20%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕನ್ನಡದ ಸಾಹಿತ್ಯ ಕೃತಿಗಳಿಗೆ ನೀಡಲಾಗುವ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಆಗಿದೆ. ಕನ್ನಡ ಸಾಹಿತ್ಯದ ಕವನ, ಕಾದಂಬರಿ, ಸಣ್ಣ ಕಥೆ, ವಿಮರ್ಶೆ, ಪ್ರವಾಸ ಬರವಣಿಗೆ, ಅನುವಾದ, ಮಕ್ಕಳ ಬರವಣಿಗೆ ಮುಂತಾದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಪುಸ್ತಕಗಳಿಗೆ 1965ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯ ವಿವರ 1965ನೇ ಸಾಲಿನಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಗಳನ್ನು ನೀಡಲಾಯಿತು. ಈ ಪ್ರಶಸ್ತಿಯನ್ನು ಮೂರು ಪ್ರಕಾರಗಳಲ್ಲಿ ನೀಡಲಾಗುತ್ತದೆ. ಪ್ರಶಸ್ತಿಗಳ ಪ್ರಕಾರಗಳ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಪುಸ್ತಕ ಬಹುಮಾನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಎಂದು ಸಾಮಾನ್ಯವಾಗಿ ಕರೆಯಲಾಗುವ ಈ ಪ್ರಶಸ್ತಿಯನ್ನು ಪ್ರತಿ ವರ್ಷವೂ ಸಾಹಿತ್ಯ ಕ್ಷೇತ್ರದ 21 ವಿಭಿನ್ನ ವಿಭಾಗಗಳಿಂದ ಆಯ್ಕೆ ಮಾಡಿದ ಒಂದು ಅಥವಾ ಎರಡು ಪುಸ್ತಕಗಳಿಗೆ ಕೊಡಲಾಗುತ್ತದೆ. ಪ್ರಶಸ್ತಿ ನೀಡಲಾಗುವ 21 ವಿಭಾಗಗಳು ಈ ಕೆಳಗಿನಂತಿವೆ: ದತ್ತಿನಿಧಿ ಬಹುಮಾನ ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಇರುವ ಪ್ರಮುಖ ದತ್ತಿನಿಧಿ ಬಹುಮಾನಗಳು ಈ ಕೆಳಗಿನಂತಿವೆ. ಚದುರಂಗ ದತ್ತಿನಿಧಿ ಚಿ. ಶ್ರೀನಿವಾಸರಾಜು ದತ್ತಿನಿಧಿ ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ 1. ಸಿಂಪಿ ಲಿಂಗಣ್ಣ ಅವರ ಜನ್ಮಶತಮಾನೋತ್ಸವದ ನಿಮಿತ್ತ ಅವರ ಮಕ್ಕಳಾದ ಪ್ರೊ. ವೀರೇಂದ್ರ ಸಿಂಪಿ ಮತ್ತು ಸಹೋದರರು ಸಿಂಪಿ ಲಿಂಗಣ್ಣ ಅವರ ಹೆಸರಿನಲ್ಲಿ ಅಕಾಡೆಮಿಯಲ್ಲಿ ಒಂದು ದತ್ತಿನಿಧಿಯನ್ನು ಸ್ಥಾಪಿಸಲು ಒಟ್ಟು ₹60,000 (ಅರವತ್ತು ಸಾವಿರ ಮಾತ್ರ) ಮೊಬಲಗನ್ನು ನೀಡಿರುತ್ತಾರೆ. ಇದರಲ್ಲಿ ₹5,000ದಷ್ಟನ್ನು ಬಹುಮಾನಕ್ಕೆ ಬಳಸಿಕೊಂಡು ಉಳಿದ ₹55,000ದಷ್ಟನ್ನು ಬ್ಯಾಂಕಿನಲ್ಲಿ ನಿಗದಿತ ಠೇವಣಿಯಾಗಿ ಇಡಲಾಗಿದೆ. 2. ಇದರಿಂದ ಬರುವ ಬಡ್ಡಿಯಲ್ಲಿ ₹5,000ದಷ್ಟು ಮೊಬಲಗನ್ನು ಪುಸ್ತಕ ಬಹುಮಾನ ಯೋಜನೆಯ ನಿಯಮಗಳ ಅನುಸಾರ ಪ್ರತಿವರ್ಷ ಜೀವನ ಚರಿತ್ರೆ/ಅತ್ಮಕಥನ ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು. ಇದು ಪ್ರತ್ಯೇಕ ಬಹುಮಾನವಾಗಿರದೆ, ಪುಸ್ತಕ ಬಹುಮಾನ ಯೋಜನೆಯಲ್ಲಿನ 7ನೇ ಸಾಹಿತ್ಯ ಪ್ರಕಾರವಾದ ಜೀವನ ಚರಿತ್ರೆ/ಆತ್ಮಕಥನವೇ ಆಗಿರುತ್ತದೆ. 3. ಈ ಬಹುಮಾನವನ್ನು ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ ಎಂದು ಕರೆಯಲಾಗುವುದು. ಪಿ. ಶ್ರೀನಿವಾಸರಾವ್ ಸ್ಮಾರಕ ಬಹುಮಾನ 1. ಡಾ. ಸುಮತೀಂದ್ರ ನಾಡಿಗ ಮತ್ತು ಶ್ರೀಮತಿ ಮಾಲತಿ ನಾಡಿಗ ಅವರು ದಿ. ಪಿ. ಶ್ರೀನಿವಾಸರಾವ್ ಅವರ ಹೆಸರಿನಲ್ಲಿ ಅಕಾಡೆಮಿಗೆ ₹50,000 (ಐವತ್ತು ಸಾವಿರಗಳು ಮಾತ್ರ) ಮೊಬಲಗನ್ನು ದತ್ತಿನಿಧಿಯಾಗಿ ನೀಡಿದ್ದಾರೆ. 2. ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಾಗಿ ಇಟ್ಟು, ಅದರಿಂದ ಬರುವ ಬಡ್ಡಿಯಲ್ಲಿ ₹5,000 ಮೊಬಲಗನ್ನು ಪುಸ್ತಕ ಬಹುಮಾನ ಯೋಜನೆಯ ನಿಯಮಗಳ ಅನುಸಾರ ಪ್ರತಿವರ್ಷ ಸಾಹಿತ್ಯ ವಿಮರ್ಶೆ ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು. ಇದು ಪ್ರತ್ಯೇಕ ಬಹುಮಾನವಾಗಿರದೆ ಪುಸ್ತಕ ಬಹುಮಾನ ಯೋಜನೆಯಲ್ಲಿಯ 8ನೇ ಸಾಹಿತ್ಯ ಪ್ರಕಾರವಾದ ಸಾಹಿತ್ಯ ವಿಮರ್ಶೆಯೇ ಆಗಿರುತ್ತದೆ. 3. ಈ ಬಹುಮಾನವನ್ನು ಪಿ. ಶ್ರೀನಿವಾಸರಾವ್ ಸ್ಮಾರಕ ಬಹುಮಾನ ಎಂದು ಕರೆಯಲಾಗುವುದು. ಮಧುರಚೆನ್ನ ದತ್ತಿನಿಧಿ ಬಹುಮಾನ 1. ಡಾ. ಉಮಾ ಬಿದರಿ ಹಾಗೂ ಮಧುರಚೆನ್ನರ ಶಿಷ್ಯರು ಒಟ್ಟಾಗಿ ಮಧುರಚೆನ್ನರ ಜನ್ಮಶತಮಾನೋತ್ಸವದ ಸಂದರ್ಭದ ನೆನಪಿಗಾಗಿ ಅವರ ಹೆಸರಿನಲ್ಲಿ ಅಕಾಡೆಮಿಗೆ ₹50,000 (ಐವತ್ತು ಸಾವಿರಗಳು) ಮೌಲ್ಯದ ದತ್ತಿನಿಧಿಯನ್ನು ನೀಡಿದ್ದಾರೆ. 2. ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಾಗಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ₹5,000ದಷ್ಟು ಮೊಬಲಗನ್ನು ಪುಸ್ತಕ ಬಹುಮಾನ ಯೋಜನೆಯ ನಿಯಮಗಳ ಅನುಸಾರ ಪ್ರತಿವರ್ಷ ಲೇಖಕರ ಮೊದಲ ಕೃತಿ ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು. ಇದು ಪ್ರತ್ಯೇಕ ಬಹುಮಾನವಾಗಿರದೆ, ಪುಸ್ತಕ ಬಹುಮಾನ ಯೋಜನೆಯಲ್ಲಿನ 17ನೇ ಸಾಹಿತ್ಯ ಪ್ರಕಾರವಾದ ಲೇಖಕರ ಮೊದಲನೆ ಕೃತಿಯೇ ಆಗಿರುತ್ತದೆ. 3. ಈ ಬಹುಮಾನವನ್ನು ಮಧುರಚೆನ್ನ ದತ್ತಿನಿಧಿ ಬಹುಮಾನ ಎಂದು ಕರೆಯಲಾಗುವುದು. ಅಮೆರಿಕಾ ಕನ್ನಡಿಗರ ದತ್ತಿನಿಧಿ 1. ಅಮೆರಿಕಾ ಕನ್ನಡಿಗರ ಹಾಗೂ ಕನ್ನಡ ಸಂಘಗಳ ವಿಶೇಷ ಬಹುಮಾನ ಯೋಜನೆ: ಅ) ಈ ಬಹುಮಾನದ ಹೆಸರು ಅಮೆರಿಕಾ ಕನ್ನಡಿಗರ ಮತ್ತು ಕನ್ನಡ ಸಂಘಗಳ ವಿಶೇಷ ಬಹುಮಾನ ಎಂದು ಇರತಕ್ಕದ್ದು. ಆ) ಆ ವಿಶೇಷ ಬಹುಮಾನದ ಮೊತ್ತ ₹5,000. ಇ) ಈ ಬಹುಮಾನವನ್ನು ಪ್ರತಿ ವರ್ಷವೂ ಕನ್ನಡದಿಂದ ಇಂಗ್ಲಿಷ್‍ಗೆ ಅನುವಾದಿತವಾದ ವರ್ಷದ ಶ್ರೇಷ್ಠ ಸೃಜನಾತ್ಮಕ ಕೃತಿಯೊಂದಕ್ಕೆ ನೀಡಲಾಗುತ್ತದೆ. ಈ) ಈ ವಿಶೇಷ ಬಹುಮಾನಕ್ಕೆ ಪರಿಗಣಿತವಾಗುವ ಕೃತಿ ಒಂದು ನೂರು ಪುಟಗಳಿಗಿಂತ ಕಡಿಮೆಯ ಗಾತ್ರದ್ದಾಗಿರಬಾರದು. ಆದರೆ ಈ ನಿಯಮ ಕಾವ್ಯ, ನಾಟಕಗಳಿಗೆ ಅನ್ವಯಿಸುವುದಿಲ್ಲ. ಉ) ಈಗಾಗಲೇ ಪುಸ್ತಕ ಬಹುಮಾನಗಳಿಗೆ ಸಂಬಂಧಿಸಿದಂತೆ ಅಕಾಡೆಮಿ ರೂಪಿಸಿರುವ ನಿಯಮಾವಳಿಗಳೇ ಇದರ ಪರಿಶೀಲನೆ ಹಾಗೂ ತೀರ್ಮಾನದ ವಿಧಾನಕ್ಕೆ ಅನ್ವಯಿಸುತ್ತವೆ. ಸೂಚನೆ: ಈ ಸಂಬಂಧವಾಗಿ ಅಮೆರಿಕಾ ಕನ್ನಡಿಗರ ಹಾಗೂ ಕನ್ನಡ ಸಂಘಗಳ ಕೊಡುಗೆಯಾಗಿ ಬಂದ ಅರವತ್ತು ಸಾವಿರ ರೂಪಾಯಿಗಳ ಮೊತ್ತದ ನಿಶ್ಚಿತ ನಿಧಿಯಿಂದ ಬರುವ ಬಡ್ಡಿಯಿಂದ ಈ ಬಹುಮಾನದ ಯೋಜನೆ ಪ್ರಾರಂಭವಾಗಿದೆ. ಗೌರವ ಪ್ರಶಸ್ತಿಗಳು ಸಾಹಿತ್ಯಶ್ರೀ ಪ್ರಶಸ್ತಿ ಕನ್ನಡ ಸಾಹಿತ್ಯಕ್ಕೆ ನೀಡಿರುವ ಈವರೆಗಿನ ಗಮನಾರ್ಹವಾದ ಸೇವೆಯನ್ನು ಪರಿಗಣಿಸಿ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2017ನೇ ವರ್ಷದಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಹೊಸದಾಗಿ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ₹25,000 ನಗದು ಹಾಗೂ ಪ್ರಮಾಣಪತ್ರದೊಂದಿಗೆ ಶಿಲಾಶಾಸನ ಬರೆಯುವ ಮಹಿಳೆಯ ಪುತ್ತಿಗೆಯನ್ನು ನೀಡುವುದಲ್ಲದೆ ಶಾಲು, ಹಾರಗಳೊಂದಿಗೆ ಸನ್ಮಾನಿಸಲಾಗುತ್ತದೆ. ಗೌರವ ಪ್ರಶಸ್ತಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಐವರು ಹಿರಿಯ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷವೂ ಗೌರವ ಪ್ರಶಸ್ತಿಯನ್ನು ₹50,0000 ನಗದು, ಫಲಕ, ಶಾಲು ಹಾರ ಹಾಗೂ ಪ್ರಮಾಣ ಪತ್ರದೊಂದಿಗೆ ನೀಡುತ್ತದೆ. ಕೆಲವೊಮ್ಮೆ ಗಮಕ ಕಲೆಯ ಬೆಳವಣಿಗೆಗೆ ಕೊಡುಗೆ ನೀಡಿದ ಗಮಕಿಗಳಿಗೂ ಈ ಗೌರವ ನೀಡಲಾಗಿದೆ. ಪ್ರಶಸ್ತಿಗಳು ಸಾಹಿತ್ಯ ಪುರಸ್ಕಾರಗಳು