id
stringlengths
3
6
url
stringlengths
33
779
title
stringlengths
1
95
text
stringlengths
3
190k
2388
https://kn.wikipedia.org/wiki/%E0%B2%B0%E0%B2%82%E0%B2%97%E0%B2%A8%E0%B2%BE%E0%B2%AF%E0%B2%95%E0%B2%BF
ರಂಗನಾಯಕಿ
ರಂಗನಾಯಕಿ (೧೯೮೧) ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಕನ್ನಡ ಚಿತ್ರ. ಅಂಬರೀಶ್ ಮತ್ತು ಆರತಿ ನಟಿಸಿದ ಈ ಚಿತ್ರ ರಂಗಭೂಮಿಯ ಕನಸು ಹೊತ್ತ ಕಲಾವಿದೆಯೊಬ್ಬಳ ಜೀವನವನ್ನು ಕುರಿತದ್ದು. ಪುಟ್ಟಣ್ಣ ಕಣಗಾಲ್ ರವರ ಕಲಾತ್ಮಕ ಶೈಲಿ ಚಿತ್ರದಲ್ಲಿ ಮೂಡಿಬಂದಿದೆ. ಆರತಿಯವರ ಮನೋಜ್ಞನ ಅಭಿನಯದಿಂದಾಗಿ, ಅವರು ಇಂದಿಗೂ ಕನ್ನಡ ಚಲನಚಿತ್ರರಂಗದಲ್ಲಿ ರಂಗನಾಯಕಿ ಎಂದೇ ಗುರುತಿಸಲ್ಪಡುತ್ತಾರೆ. ಅವರ ಚಿತ್ರರಂಗ ಜೀವನದಲ್ಲಿ ಇದೊಂದು ಮೈಲಿಗಲ್ಲು. ರಂಗನಾಯಕಿ, ೧೯೮೧ ರಲ್ಲಿ ಪುಟ್ಟಣ್ಣ ಕಣಗಾಲ್ ರವರ ಕನ್ನಡ ಚಿತ್ರದಲ್ಲಿ ಅಂಬರೀಶ್, ಆರತಿ, ರಾಮಕೃಷ್ಣ, ಅಶೋಕ್, ರಾಜಾನಂದ್, ಅಶ್ವತ್ಥ್ರ ರಂಗನಾಯಕಿ ಪುಸ್ತಕದ ಆಧಾರರದಮೇಲೆ ನಾಯಕಿ ಒಬ್ಬ ಥಿಯೇಟರ್ ನಟಿ, ಒಬ್ಬ ಶ್ರೀಮಂತ ತರುಣನಜೊತೆ ಪ್ರೇಮಿಸುತ್ತಾಳೆ, ಮದುವೆಯಾಗುತ್ತಾರೆ.ಮಗು ಪಡೆಯುತ್ತಾರೆ. ಆದರೆ ವಿವಾಹ ಜೀವನ ಬೇಸರವಾಗುತ್ತದೆ. ನಟನೆಯಲ್ಲೇ ಆಸಕ್ತಳಾಗುತ್ತಾಳೆ. ಪತಿ ಅವಳ ಜೊತೆ ಇರಲು ಇಚ್ಛಿಸದೆ ಮಗುವನ್ನು ಕರೆದುಕೊಂಡು ಊರುಬಿಟ್ಟುಹೋಗುತ್ತಾನೆ. ನಾಯಕಿ ಸಿನೆಮಾದಿಂದ ಪಡ್ದು ಜನಪ್ರಿಯಳಾಗುತ್ತಾಳೆ. ಒಬ್ಬ ಎಳೆಯ ಪ್ರಾಯದ ಹುಡುಗ ಅವಳಲ್ಲಿ ಅನುರಕ್ತನಾಗುತ್ತಾನೆ. ಒಬ್ಬ ತಾಯಿಯಾಗಿ ಅವಳೂ ಅವನನ್ನು ಇಷ್ಟಪಡುತ್ತಾಳೆ. ಆದರೆ ಅವಳು ಒಬ್ಬ ತಾಯಿಯ ತರಹ ಅವನ ಜೊತೆ ವರ್ತಿಸುತ್ತಾಳೆ. ಹಳೆಯ ಪತಿಯಜೊತೆ ಮಗನನ್ನು ತೋರಿಸಲು ಬೇಡುತ್ತಾಳೆ ಆದರೆ ಅದಕ್ಕೆ ಅವನು ಒಪ್ಪುವುದಿಲ್ಲ. ಈ ಮಾನಸಿಕ ಆಘಾತವನ್ನು ಸಹಿಸಲಾರದೆ ಅವಳು ಕೋಮಾಕ್ಕೆ ಹೋಗುತ್ತಾಳೆ. ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಾಳೆ. ಇಷ್ಟು ಹೊತ್ತಿಗೆ ಎಳೆಯ ಹುಡುಗನಿಗೆ ಹಿರಿಯನಾಯಕಿಯು ತನ್ನ ತಾಯಿಯೆಂದು ಗೊತ್ತಾಗುತ್ತದೆ. ಜನನ,ಬಾಲ್ಯ,ವಿದ್ಯಾಭ್ಯಾಸ ೧೯೭೪ ರ ಆಗಸ್ಟ್ ೧೪ ರಂದು ಗೋಪಾಲಕೃಷ್ಣ, ಮತ್ತು ನಾಗಲಕ್ಷ್ಮಿ ದಂಪತಿಗಳ ಮಗಳಾಗಿ ಜನಿಸಿದಳು. ತಾಯಿಯ ಆಶೆಯಂತೆ, ಪತ್ರಿಕಾ ಕ್ಷೇತ್ರದಲ್ಲಿ ಮಾಡೆಲ್ ಆಗಿ ೩ ವರ್ಷದವಳಾಗಿದ್ದಾಗಲೇ ಕೆಲಸಮಾಡಿದಳು. ೫ ನೆಯ ವರ್ಷಕ್ಕೆ ಅವಳಿಗೆ 'ಭರತನಾಟ್ಯಮ್' ಮತ್ತು 'ಕುಚಿಪುಡಿ ನೃತ್ಯಶಿಕ್ಷಣ'ಕೊಡಿಸಿದರು. ಮುಂದೆ ಕನ್ನಡ ಸಿನೆಮಾದಲ್ಲಿ ಹಲವಾರು ನಾಯಕ/ನಾಯಕಿಯರ ಜೊತೆ ಅಭಿನಯಿಸಿದ್ದಾರೆ. ಅಂಬರೀಶ್ ಆರತಿ ರಾಮಕೃಷ್ಣ ಅಶೋಕ್ ರಾಜಾನಂದ ವರ್ಷ-೧೯೮೧ ಕನ್ನಡಚಿತ್ರಗಳು ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು
2390
https://kn.wikipedia.org/wiki/%E0%B2%86%E0%B2%B0%E0%B2%A4%E0%B2%BF
ಆರತಿ
ಆರತಿ (ಜನನ:೧೯೫೪ ಅರಗಲ್ ಮೈಸೂರು) ಕನ್ನಡ ಚಿತ್ರರಂಗದ ಖ್ಯಾತ ನಟಿ, ನಿರ್ದೇಶಕಿ. "ಗೆಜ್ಜೆ ಪೂಜೆ" ಚಿತ್ರದಲ್ಲಿ ನಾಯಕನ ತಂಗಿ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮುಂದೆ ಕಾದಂಬರಿ ಆಧಾರಿತ ಚಿತ್ರಗಳಲ್ಲಿ, ಅದರಲ್ಲೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ೧೯೭೦ ಮತ್ತು ೧೯೮೦ರ ದಶಕಗಳ ಜನಪ್ರಿಯ ತಾರೆ ಎನಿಸಿದರು. ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ಆರತಿ, ವಿಧಾನ ಪರಿಷತ್ತಿಗೂ ನಾಮನಿರ್ದೇಶನಗೊಂಡಿದ್ದರು. ವೈಯುಕ್ತಿಕ ಜೀವನ ೧೯೮೭ರಲ್ಲಿ ಚಿತ್ರ ರಂಗವನ್ನು ತೊರೆದು ಮದುವೆಯಾಗಿ ಅಮೆರಿಕದಲ್ಲಿ ನೆಲಸಿದ ಇವರು ೨೦೦೫ರಲ್ಲಿ ಮತ್ತೆ ಚಿತ್ರರಂಗಕ್ಕೆ ಬಂದು ಮಿಠಾಯಿ ಮನೆ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ. ನಟಿಸಿರುವ ಚಿತ್ರಗಳು ರಂಗನಾಯಕಿ, (೧೯೮೧) ಹೊಂಬಿಸಿಲು, (೧೯೭೮) ಉಪಾಸನೆ, (೧೯೭೪) ರಾಜ ನನ್ನ ರಾಜ, (೧೯೭೬) ಸಿಪಾಯಿರಾಮು, (೧೯೭೧) ನಾಗರಹಾವು, (೧೯೭೨) ಬಂಗಾರದ ಪಂಜರ, (೧೯೭೩) ಪ್ರೇಮದ ಕಾಣಿಕೆ, (೧೯೭೬) ಎಡಕಲ್ಲು ಗುಡ್ಡದ ಮೇಲೆ, (೧೯೭೩) ಸತಿ ಸಕ್ಕೂಬಾಯಿ, (೧೯೮೫) ಮುಳ್ಳಿನ ಗುಲಾಬಿ, (೧೯೮೨) ಶುಭಮಂಗಳ (೧೯೭೫) ವಸಂತ ಲಕ್ಷ್ಮಿ (೧೯೭೮) ಬಿಳಿ ಹೆಂಡ್ತಿ (೧೯೭೫) ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧) ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ (೧೯೮೧) ಭಕ್ತ ಸಿರಿಯಾಳ (೧೯೮೦) ಹಾವು ಏಣಿಯಾಟ (೧೯೮೫) ತಿರುಗುಬಾಣ (೧೯೮೩) ಗಂಧರ್ವ ಗಿರಿ (೧೯೮೩) ಬಂಗಾರದ ಜಿಂಕೆ (೧೯೮೦) ಮುತ್ತೈದೆ ಭಾಗ್ಯ (೧೯೮೩) ಕಲಿಯುಗ (೧೯೮೪) ಜಿದ್ದು (೧೯೮೪) ಪೆದ್ದ ಗೆದ್ದ (೧೯೮೨) ಗಣೇಶ ಮಹಿಮೆ (೧೯೮೧) ಸುವರ್ಣ ಸೇತುವೆ (೧೯೮೨) ಲಕ್ಷ್ಮಿ ಕಟಾಕ್ಷ (೧೯೮೫) ಹಾಗೂ ಇನ್ನೂ ಅನೇಕ... ಇವುಗಳಲ್ಲಿ, ರಂಗನಾಯಕಿ, ಹೊಂಬಿಸಿಲು, ಉಪಾಸನೆ, ಶುಭಮಂಗಳ ಚಿತ್ರಗಳು ಆರತಿಯವರಿಗೆ ಭಾರೀ ಹೆಸರು ತಂದು ಕೊಟ್ಟವು. ೭೦/೮೦ ರ ದಶಕದಲ್ಲಿ, ಕನ್ನಡದ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೂ ಆರತಿಯವರು ಅಭಿನಯಿಸಿದ್ದಾರೆ. ಕಸ್ತೂರಿ ನಿವಾಸ, ರಾಜಾ ನನ್ನ ರಾಜಾ, ಸಿಪಾಯಿ ರಾಮು, ಬಂಗಾರದ ಪಂಜರ, ಪ್ರೇಮದ ಕಾಣಿಕೆ ಮುಂತಾದ ಚಿತ್ರಗಳಲ್ಲಿ ಡಾ.ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿದ ಆರತಿಯವರು ನಂತರ ಸುಮಾರು ೧೮ ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, ಅಮೇರಿಕಾದಲ್ಲಿ ನೆಲೆಸಿದ್ದರು. ೮೦ ರ ದಶಕದಲ್ಲಿ ದೂರದರ್ಶನಕ್ಕ್ಕಾಗಿ ಧಾರಾವಾಹಿಯನ್ನೂ ನಿರ್ಮಿಸಿದ್ದರು. ಈಗ "ಮಿಠಾಯಿಮನೆ" ಚಿತ್ರದ ಮೂಲಕ ಆರತಿಯವರು ಕನ್ನಡ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ. ಆರತಿಯವರ ಮಗಳು ಯಶಸ್ವಿನಿ ಅವರು ಬರೆದ ಕಥೆಯ ಆಧಾರದ ಮೇಲೆ ಈ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ದೇಶಿಸಿರುವ ಚಿತ್ರಗಳು ಮಿಠಾಯಿ ಮನೆ ಉಲ್ಲೇಖಗಳು ಬಾಹ್ಯ ಸಂಪರ್ಕಗಳು http://www.apgap.com/aarathi-biography-and-filmo-graphy/ Aarthi Kannada Actress Rare Photos and Videos ಕನ್ನಡ ಚಲನಚಿತ್ರ ನಟಿಯರು ಕನ್ನಡ ಸಿನೆಮಾ ಕಲಾವಿದರು ಚಲನಚಿತ್ರ ನಟಿಯರು
2401
https://kn.wikipedia.org/wiki/%E0%B2%95%E0%B2%B5%E0%B2%BF
ಕವಿ
ಸಾಹಿತಿ, ಕವನ ಬರೆಯುವವರು. ಸಾಹಿತಿ ಬರೆದದ್ದು ಸಾಹಿತ್ಯವಾದರೆ, ಕವಿ ಬರೆದದ್ದು ಕವಿತೆ, ಕವನ, ಕಾವ್ಯವಾಗುತ್ತದೆ.ಅಚ್ಚಕನ್ನಡದಲ್ಲಿ ಕಬ್ಬಿಗನೆಂಬ ಹೆಸರಿದೆ. ಕವಿಯ ಶಕ್ತಿ, ಸಾಮರ್ಥ್ಯದ ಬಗ್ಗೆ "ರವಿ ಕಾಣದ್ದನ್ನು ಕವಿ ಕಂಡ" ಎಂಬ ಮಾತಿದೆ. ಅಂದರೆ ಕವಿಯಾದವನು ಬರೀ ವಾಸ್ತವ ಮಾತ್ರವಲ್ಲದೆ, ಕಲ್ಪನೆ (Imagination)ಯ ನಮೂನೆಯಲ್ಲಿ ಮೂಡಿಬಂದದ್ದನ್ನು ಚಮತ್ಕಾರಿಕವಾಗಿ ಹಾಗೂ ರಮಣೀಯವಾಗಿ ರಚಿಸುತ್ತಾನೆ ಮತ್ತು ಕಣ್ಣಿಗೆ ಕಟ್ಟಿದಂತೆ ಚಿತ್ರಿಸುತ್ತಾನೆ ಎಂದರ್ಥವಾಗುತ್ತದೆ. ಸಾಹಿತಿಗಳು ಸಾಹಿತ್ಯ ಪ್ರಕಾರಗಳು
2403
https://kn.wikipedia.org/wiki/%E0%B2%AE%E0%B2%82%E0%B2%97%E0%B2%B3%E0%B3%82%E0%B2%B0%E0%B3%81
ಮಂಗಳೂರು
ಮಂಗಳೂರು((ಉಚ್ಚಾರಣೆː), ಕರ್ನಾಟಕದ ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ನೇತ್ರಾವತಿ ಮತ್ತು ಗುರುಪುರ ನದಿಗಳಿಂದುಂಟಾದ ಹಿನ್ನೀರಿನ ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು ತುಳು, ಕೊಂಕಣಿ, ಕನ್ನಡ ಮತ್ತು ಬ್ಯಾರಿ ಭಾಷೆ. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಲ್ಯಾಟರೈಟ್ ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು ಜೇಡಿಮಣ್ಣಿನಿಂದ ತಯಾರಿತ ಮಂಗಳೂರು ಹಂಚುಗಳ ಮನೆಗಳು ಇಲ್ಲಿ ಸಾಮಾನ್ಯ. ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ. ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ. ಹೆಸರಿನ ಮೂಲ ಸ್ಥಳೀಯ ಸ್ಥಳೀಯ ಹಿಂದೂ ದೇವತೆಯಾದ ಮಂಗಳಾದೇವಿಯಿಂದ ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ನಾಥ್ ಪಂಥದ ಮುಖ್ಯಪುರುಷ, ಪ್ರೇಮಲಾದೇವಿ ಎಂಬ ಕೇರಳದ ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ ಬೋಳಾರದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ ಅಲೂಪ ದೊರೆ ಕುಂದವರ್ಮನಿಂದ ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು ಪಾಂಡ್ಯ ರಾಜ ಚೆಟ್ಟಿಯನ್ ನೀಡಿದ್ದಾರೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ಮಂಗಲಾಪುರಂ ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ ಇಬ್ನ್ ಬತೂತ ಮಂಗಳೂರನ್ನು ಮಂಜರೂರ್ ಎಂದು ಉಲ್ಲೇಖಿಸಿದ್ದಾನೆ. ಕ್ರಿ.ಶ. ೧೫೨೬ರಲ್ಲಿ ಪೋರ್ಚುಗೀಸರು ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ಮ್ಯಾಂಗಲೋರ್ (ಇದು ಮಂಗಳೂರು ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು ಬ್ರಿಟಿಷರ ಕೈವಶವಾದಾಗ ಈ ಪೋರ್ಚುಗೀಸ್ ಹೆಸರು ಆಂಗ್ಲ ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ ತುಳುವರು ಮಾತನಾಡುವ ತುಳು ಭಾಷೆಯಲ್ಲಿ ಮಂಗಳೂರಿಗೆ ಕುಡ್ಲ ಎಂಬ ಹೆಸರಿದೆ. ಕುಡ್ಲ ಎಂದರೆ ಸಂಗಮ ಎಂದರ್ಥ. ನೇತ್ರಾವತಿ ಮತ್ತು ಫಾಲ್ಗುಣಿ ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ಕೊಡಿಯಾಲ್ ಎನ್ನುತ್ತಾರೆ. ಸ್ಥಳೀಯ ಬ್ಯಾರಿ ಸಮುದಾಯದವರು ಬ್ಯಾರಿ ಭಾಷೆಯಲ್ಲಿ ಮಂಗಳೂರನ್ನು ಮೈಕಾಲ ಎಂದು ಕರೆಯುತ್ತಾರೆ. ಮೈಕಾಲ ಎಂದರೆ ಇದ್ದಿಲು ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು ಮಂಗಲಾಪುರಂ ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು ಮ್ಯಾಂಗಲೋರ್ ಎಂದು ಉಚ್ಚರಿಸುತ್ತಾರೆ.ಕೊಂಕಣಿ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. ಇತಿಹಾಸ ಹಿಂದೂ ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು ಪರಶುರಾಮ ಸೃಷ್ಟಿಯ ಒಂದು ಭಾಗವಾಗಿತ್ತು. ಮಹರ್ಷಿ ಶ್ರೀ ಪರಶುರಾಮನು ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ ಪಯಸ್ವಿನಿ ನದಿ ಹಾಗೂ ಉತ್ತರದಲ್ಲಿ ಗೋಕರ್ಣಗಳ ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, ರಾಮಾಯಣದ ಸಮಯದಲ್ಲಿ ಶ್ರೀ ರಾಮನು ತುಳುನಾಡಿನ ರಾಜನಾಗಿದ್ದನು. ಮಹಾಭಾರತದ ಕಾಲದಲ್ಲಿ ಪಾಂಡವರಲ್ಲಿ ಕಿರಿಯವನಾದ ಸಹದೇವನು ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ ಬನವಾಸಿಯಲ್ಲಿ ವಾಸವಾಗಿದ್ದ ಪಾಂಡವರು, ಮಂಗಳೂರಿನ ಸಮೀಪದ ಸರಪಾಡಿಗೆ ಭೇಟಿಕೊಟ್ಟಿದ್ದರು. ಪಾರ್ಥಸಾರಥಿ ಅರ್ಜುನನು ಗೋಕರ್ಣದಿಂದ ಕಾಸರಗೋಡು ಸಮೀಪದ ಅಡೂರಿಗೆ ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ ಕಣ್ವ, ವ್ಯಾಸ, ವಶಿಷ್ಠ, ವಿಶ್ವಾಮಿತ್ರರು ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. ಗ್ರೀಕ್ ಸಂತ ಕೋಸ್ಮಸ್ ಇಂಡಿಕೊಪ್ಲೆಸ್ಟಸ್ ಮಂಗಳೂರು ಬಂದರನ್ನು ಮ್ಯಾಂಗರೌತ್ ಬಂದರು ಎಂದು ಉಲ್ಲೇಖಿಸಿದ್ದಾನೆ. ಪ್ಲೈನಿ ಎಂಬ ರೋಮನ್ ಇತಿಹಾಸಜ್ಞ ನಿತ್ರಿಯಾಸ್ ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದಾರೆ. ಗ್ರೀಕ್ ಇತಿಹಾಸಕಾರ ಟಾಲೆಮಿಯು ನಿತ್ರೆ ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ ನೇತ್ರಾವತಿ ನದಿಯ ಬಗ್ಗೆ ಆಗಿರಬಹುದು. ಟಾಲೆಮಿಯು ತನ್ನ ರಚನೆಗಳಲ್ಲಿ ಮಂಗಳೂರನ್ನು ಮಗನೂರ್ ಎಂದೂ ಉಲ್ಲೇಖಿಸಿದ್ದಾನೆ. ರೋಮನ್ ಲೇಖಕ ಏರಿಯನ್ ಮಂಗಳೂರನ್ನು ಮ್ಯಾಂಡಗೊರಾ ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ಮಂಗಳಾಪುರ ಎಂದು ಉಲ್ಲೇಖಿಸಿದೆ. ಕ್ರಿ. ಶ. ೨೦೦ರಿಂದ ೬೦೦ರವರೆಗೆ ಕದಂಬರು ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು ಅಲೂಪ ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ ಆಡೆನ್‌ನ ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು ಪರ್ಷಿಯಾ ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಮೊರಾಕ್ಕೊದ ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುವುದಾಗಿಯೂ, ಆ ನಗರದ ಹೆಸರು ಮಂಜುರನ್ ಅಥವಾ ಮಡ್ಜೌರ್ ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು ಪರ್ಷಿಯಾ ಹಾಗೂ ಯೆಮೆನ್‌ನ ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ ರಾಯಭಾರಿ ವಿಜಯನಗರಕ್ಕೆ ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. ಮೂಡುಬಿದಿರೆಯಲ್ಲಿರುವ ಶಾಸನಗಳು , ವಿಜಯನಗರ ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು ವಿಜಯನಗರದ ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೇವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. ಪೋರ್ಚುಗೀಸರ ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರು ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚುಗೀಸ್ ನಾವಿಕ ವಾಸ್ಕೋ ಡ ಗಾಮನು ಮಂಗಳೂರಿನ ಸಮೀಪದ ಸೈಂಟ್ ಮೇರಿಸ್ ದ್ವೀಪಗಳಲ್ಲಿ ಬಂದಿಳಿದ್ದಿದ್ದ. ೧೫೨೦ರಲ್ಲಿ ಪೋರ್ಚುಗೀಸರು ಇದನ್ನು ವಿಜಯನಗರದ ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ಲೋಪೊ ಡೆ ಸಾಂಪಯೋ ಬಂಗರ ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ ಅರಬ್ಬೀ ಸಮುದ್ರದ ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು ಗೋವಾದಿಂದ ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು. ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ ಇಕ್ಕೇರಿ ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು. ೧೭೬೩ರಲ್ಲಿ ಹೈದರಾಲಿಯು ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ ಬ್ರಿಟಿಷರು ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ ಹೈದರಾಲಿಯ ಮಗ ಟಿಪ್ಪು ಸುಲ್ತಾನನು ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಮಧ್ಯದ ಮಂಗಳೂರು ಒಪ್ಪಂದದೊಂದಿಗೆ ಕೊನೆಗೊಂಡಿತು. ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು ಶ್ರೀರಂಗಪಟ್ಟಣದ ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, ಆಮದು ಮತ್ತು ರಫ್ತಿನ ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು ಹತ್ತಿ ನೇಯ್ಗೆ ಮತ್ತು ಹಂಚು ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು. ೧೯೦೭ ರಲ್ಲಿ ಮಂಗಳೂರನ್ನು ದಕ್ಷಿಣ ರೈಲ್ವೆಯ ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು. ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ ಮೈಸೂರು ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. ಭೂಗೋಳ ಮತ್ತು ಹವಾಮಾನ ಮಂಗಳೂರು ಅಕ್ಷಾಂಶ, ರೇಖಾಂಶವನ್ನು ಹೊಂದಿದ್ದು, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, ಕರ್ನಾಟಕದ ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಭಾರತ ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ. ಮಂಗಳೂರು ನಗರವು ನೇತ್ರಾವತಿ ಮತ್ತು ಗುರುಪುರ ನದಿಗಳಿಂದುಂಟಾದ ಹಿನ್ನೀರಿನ ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ ಅಳಿವೆಯನ್ನು ಸೃಷ್ಟಿಸಿ ಅರಬ್ಬೀ ಸಮುದ್ರವನ್ನು ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. ಭಾರತದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು ಉಷ್ಣವಲಯದ ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. ತೇವಾಂಶವು ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು ಅರಬ್ಬೀ ಸಮುದ್ರ ಶಾಖೆಯ ನೈಋತ್ಯ ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ ಬೇಸಿಗೆಕಾಲ. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ ಮಳೆಗಾಲವು ಆರಂಭವಾಗುತ್ತದೆ. ಭಾರತದ ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ. ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. ಅರ್ಥ ವ್ಯವಸ್ಥೆ ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ. ನವ ಮಂಗಳೂರು ಬಂದರು ಭಾರತದ ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೊ, 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ. ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು ಮಂಗಳೂರು ವಿಶ್ವವಿದ್ಯಾನಿಲಯದ ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'. ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ. ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು ತುಂಬೆಯಲ್ಲಿ ನಿರ್ಮಾಣ ಹಂತದಲ್ಲಿದೆ. ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು ಪಶ್ಚಿಮ ಬಂಗಾಳದ ನಯಚಾರ್ ನಲ್ಲಿ, ಹರಿಯಾಣದ ಪಾಣಿಪತ್ ನಲ್ಲಿ ಹಾಗೂ ಆಂಧ್ರ ಪ್ರದೇಶದ ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ ಭಾರತದ ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ. ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ, ೧.೦ ಎಮ್.ಎಮ್.ಟಿ.ಪಿ.ಎ ವಿಶಾಖಪಟ್ಟಣದಲ್ಲಿಯೂ ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು (ಕೊಚ್ಚಿಯ ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. ಕಾರ್ಪೋರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್, ಮತ್ತು ವಿಜಯ ಬ್ಯಾಂಕ್, ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ ಕರ್ಣಾಟಕ ಬ್ಯಾಂಕ್ ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು. ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ ಉಳ್ಳಾಲದಲ್ಲಿ ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. ಜನಸಂಖ್ಯೆ ೨೦೧೧ರ ಭಾರತದ ಜನಗಣತಿಯ ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು. ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ. 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು ಭಾರತದ ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ. ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ. ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, ಕನ್ನಡ, ಹಿಂದಿ, ಆಂಗ್ಲ ಮತ್ತು ಉರ್ದು ಭಾಷೆಗಳೂ ಬಳಕೆಯಲ್ಲಿವೆ. ಕನ್ನಡ ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು ಹಿಂದೂ ಧರ್ಮೀಯರನ್ನು ಒಳಗೊಂಡಿದೆ. ಮೊಗವೀರರು, ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, ಸ್ಥಾನಿಕ ಬ್ರಾಹ್ಮಣರು, ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ ಕೊಂಕಣಿ ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ ಬ್ಯಾರಿ ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. ಸಂಸ್ಕೃತಿ ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು ತುಳುವಿನಲ್ಲಿ ಕುಡ್ಲದಾರ್ ಎಂದೂ, ಕನ್ನಡದಲ್ಲಿ ಮಂಗಳೂರಿನವರು ಎಂದೂ, ಕಾಥೋಲಿಕ್ ಕೊಂಕಣಿಯಲ್ಲಿ ಕೊಡಿಯಾಲ್ ಘರಾನೊ ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ಕೊಡಿಯಾಲ್ಚಿ ಅಥವಾ ಮಂಗ್ಳೂರ್ಚಿ ಎಂದೂ ಆಂಗ್ಲದಲ್ಲಿ ಮ್ಯಾಂಗಲೋರಿಯನ್ ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ಶ್ರೀಮಂತಿ ಬಾಯಿ ಮ್ಯೂಸಿಯಮ್ ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ. ಮಣ್ಣಗುಡ್ಡದ ಸಮೀಪವಿರುವ ಬಿಬ್ಲಿಯೋಫೈಲ್ಸ್ ಪಾರಡೈಸ್ ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. ಯಕ್ಷಗಾನವು ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ. ದಸರಾ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ನಡೆಯುವ ಹುಲಿವೇಶವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ. ಇದರಂತೆಯೇ ಕರಡಿವೇಶವೂ ದಸರಾ ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ. ಭೂತಕೋಲ ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ ಕಂಬಳವು ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ. ಕೋರಿಕಟ್ಟ (ಕೋಳಿ ಅಂಕ) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ ನಾಗಾರಾಧನೆಯೂ ಇಲ್ಲಿ ಪ್ರಚಲಿತದಲ್ಲಿದೆ. ಪಾಡ್ದನಗಳು ವೇಷಧಾರಿ ಸಮುದಾಯದವರಿಂದ ತುಳುವಿನಲ್ಲಿ ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ಕೋಲ್ಕೈ (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ಉಂಜಲ್ ಪಾಟ್ (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ಮೊಯ್ಲಾಂಜಿ ಪಾಟ್, ಒಪ್ಪುನೆ ಪಾಟ್ (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ ಬ್ಯಾರಿ ಹಾಡುಗಳು. ದಸರಾ, ದೀಪಾವಳಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಕ್ರಿಸ್ ಮಸ್, ಮಹಾ ಶಿವರಾತ್ರಿ, ಈಸ್ಟರ್, ನವರಾತ್ರಿ, ಗುಡ್ ಫ್ರೈಡೆ, ಈದ್ ರಂಜಾನ್ ಹಾಗೂ ಮಹಾವೀರ ಜಯಂತಿ ಇಲ್ಲಿನ ಜನಪ್ರಿಯ ಹಬ್ಬಗಳು. ಗಣೇಶ ಚತುರ್ಥಿ ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಗಣಪತಿ ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಕೊಡಿಯಾಲ್ ತೇರ್ ಅಥವಾ ಮಂಗಳೂರು ರಥೋತ್ಸವ ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ. ಮೋಂಟಿ ಫೆಸ್ಟ್ ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು. ಜೈನ್ ಮಿಲನ್ ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ. ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ನಡೆಯುವ ಮೊಸರು ಕುಡಿಕೆ ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ. ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ಆಟಿ ಪರ್ಬ(ಆಟಿ ಹಬ್ಬ)ವನ್ನು ಇಲ್ಲಿ ಕಳಂಜ ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ಕಳಂಜನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ಕರಾವಳಿ ಉತ್ಸವ ಹಾಗೂ ಕುಡ್ಲೋತ್ಸವಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ ತುಳು ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ದಕ್ಷಿಣ ಭಾರತದ ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. ಶುಂಠಿ, ಬೆಳ್ಳುಳ್ಳಿ ಹಾಗೂ ಮೆಣಸನ್ನೂ ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ಕೆನರಾದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ಕೋರಿ ರೊಟ್ಟಿ(ಅಕ್ಕಿ ರೊಟ್ಟಿ), ಬಂಗುಡೆ ಪುಳಿಮುಂಚಿ(ಬಾಂಗ್ಡ ಮೀನಿನ ಒಂದು ಖಾದ್ಯ), ಕಡ್ಲೆ ಮನೋಲಿ ಸುಕ್ಕ, ಬೀಜ-ಮನೋಲಿ ಉಪ್ಪುಕರಿ, ನೀರ್ ದೋಸೆ, ಬೂತಾಯಿ ಗಸಿ, ಪುಂಡಿ(ಕಡುಬು), ಪತ್ರೊಡೆ ತುಳು ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ದಾಲಿ ತೊಯ್(ದಾಳಿ ತೋವೆ), ಬೀಬೆ ಉಪ್ಕರಿ, ವಾಲ್ ವಾಲ್, ಅವ್ನಾಸ್ ಅಂಬೆ ಸಾಸಮ್, ಕಡ್ಗಿ ಚಕ್ಕೋ, ಪಾಗಿಲ ಪೋಡಿ ಹಾಗೂ ಚನ ಗಶಿ ಕೊಂಕಣಿ ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ಸನ್ನ ದುಕ್ರಾ ಮಾಸ್, ಪೋರ್ಕ್ ಬಫತ್ , ಸೊರ್ಪೊಟೆಲ್ ಹಾಗೂ ಮುಸ್ಲಿಮರ ಮಟನ್ ಬಿರಿಯಾನಿ ಇತರ ಜನಜನಿತ ಖಾದ್ಯಗಳು. ಹಪ್ಪಳ, ಸಂಡಿಗೆ ಹಾಗೂ ಪುಳಿ ಮುಂಚಿ ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ಶೇಂದಿ (ತುಳುವಿನಲ್ಲಿ ಕಲಿ) ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ ಮೀನು ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ. ನಗರಾಡಳಿತ 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ ಮುಕ್ಕಾದಿಂದ ಆರಂಭವಾಗಿ ದಕ್ಷಿಣದಲ್ಲಿ ನೇತ್ರಾವತಿ ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ ವಾಮಂಜೂರಿನ ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ಕಾರ್ಪೋರೇಟ್ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ಮೇಯರ್ ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಬಾಗ್ ನಲ್ಲಿದೆ. ಸುರತ್ಕಲ್ ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ . ಲೋಕ ಸಭೆ ಹಾಗೂ ವಿಧಾನ ಸಭೆ ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ಸೂಪರಿಂಟೆಂಡಂಟ್ ಆಫ್ ಪೋಲಿಸ್(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು ಕರ್ನಾಟಕದ ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. ಶಿಕ್ಷಣ ಹಾಗೂ ಕ್ರೀಡೆ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಕನ್ನಡವಾಗಿದ್ದು, ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು ಆಂಗ್ಲ ಅಥವಾ ಕನ್ನಡ ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಆಂಗ್ಲವು ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, ಕನ್ನಡವನ್ನು ಲಿಪಿಯಾಗಿ ಬಳಸುವ ತುಳು ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು. ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' ಭಾರತದ ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ,"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ,"ಕೆನರಾ ಕಾಲೇಜು, ಸಂತ ಅಲೋಶಿಯಸ್ ಕಾಲೇಜು ಹಾಗೂ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜುಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ ಮಂಗಳೂರು ವಿಶ್ವವಿದ್ಯಾನಿಲಯವು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ. ಕ್ರಿಕೆಟ್ ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ ದಕ್ಷಿಣ ಕನ್ನಡದ ಏಕಮಾತ್ರ ಕ್ರೀಡಾಂಗಣವಾಗಿದ್ದು, ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ. ಇತರ ಕ್ರೀಡೆಗಳಾದ ಟೆನ್ನಿಸ್, ಬಿಲ್ಲಿಯರ್ಡ್ಸ್,ಸ್ಕ್ವಾಷ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಹಾಗೂ ಗೋಲ್ಫ್ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. ಮಾಧ್ಯಮ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ ಆಂಗ್ಲ ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ಮಡಿಪು, ಮೊಗವೀರ, ಸಂಪರ್ಕ ಹಾಗೂ ಸಫಲಗಳು ಮಂಗಳೂರಿನ ಜನಪ್ರಿಯ ತುಳು ನಿಯತಕಾಲಿಕೆಗಳು. ರಾಕ್ಣೊ, ದಿರ್ವೆಂ,``ಸೆವಕ್, ``ನಮಾನ್ ಬಾಳೊಕ್ ಜೆಜುಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. ಬ್ಯಾರಿ ನಿಯತಕಾಲಿಕೆಗಳಾದ ಜ್ಯೋತಿ ಹಾಗೂ ಸ್ವತಂತ್ರ ಭಾರತಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. ಕನ್ನಡ ಪತ್ರಿಕೆಗಳಲ್ಲಿ ಉದಯವಾಣಿ, ವಿಜಯವಾಣಿ", ಹೊಸದಿಗಂತ",ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ ಹಾಗೂ ವಾರ್ತಾಭಾರತಿಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ಕರಾವಳಿ ಅಲೆ, ಮಂಗಳೂರು ಮಿತ್ರ, ಸಂಜೆವಾಣಿ ಹಾಗೂ ಜಯಕಿರಣಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. ಕನ್ನಡದ ಪ್ರಪ್ರಥಮ ಸಮಾಚಾರ ಪತ್ರಿಕೆಯಾದ ಮಂಗಳೂರು ಸಮಾಚಾರವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು. ರಾಜ್ಯ ಸರಕಾರದಿಂದ ಚಲಾಯಿತ ದೂರದರ್ಶನ ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ. ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ. 'ಆಲ್ ಇಂಡಿಯಾ ರೇಡಿಯೋ'ವು ಕದ್ರಿಯಲ್ಲಿ ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ರೇಡಿಯೋ ಮಿರ್ಚಿ ೯೮.೩ ಎಫ್.ಎಮ್, ಬಿಗ್ ೯೨.೭ ಎಫ್.ಎಮ್, ಸುಪರ್ ಹಿಟ್ಸ್ ೯೩.೫ ಎಫ್.ಎಮ್ ಹಾಗೂ ೯೪.೩ ಸೆಂಚುರಿ ಎಫ್. ಎಮ್ ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.ಕಡಲ ಮಗೆ , ಬಿರ್ಸೆ ಹಾಗೂ ಸುದ್ದರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ ತುಳು ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ ತುಳು ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು. ಮಂಗಳೂರಿನಲ್ಲಿ ಕೆಲವು ಕೊಂಕಣಿ ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. ಸಾರಿಗೆ ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ರಾಷ್ಟ್ರೀಯ ಹೆದ್ದಾರಿಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, ಮಹಾರಾಷ್ಟ್ರದ ಪಣ್ವೇಲ್ ನಿಂದ ಕೇರಳದ ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ ಬೆಂಗಳೂರಿನತ್ತ ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ. 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು ಸುರತ್ಕಲ್ಲಿಗೆ ಹಾಗೂ ಬಿ.ಸಿ ರೋಡ್ ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ಬಂದರು ಜೋಡಣೆ ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು. ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ. ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್ ಹಾಗೂ ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು. ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪ್ರಯಾಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು ಭಾರತದ ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ). ಪಶ್ಚಿಮ ಘಟ್ಟಗಳ ಮೂಲಕ ನಿರ್ಮಿಸಿರುವ ಮೀಟರ್ ಗೇಜ್ ರೈಲ್ವೆ ಹಳಿಯು ಮಂಗಳೂರನ್ನು ಹಾಸನದೊಂದಿಗೆ ಜೋಡಿಸುತ್ತದೆ. ಮಂಗಳೂರನ್ನು ಬೆಂಗಳೂರಿಗೆ ಜೋಡಿಸುವ ಬ್ರೋಡ್ ಗೇಜ್ ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು. ಮಂಗಳೂರು ದಕ್ಷಿಣ ರೈಲ್ವೆಯ ಮೂಲಕ ಚೆನ್ನೈಗೂ, ಕೊಂಕಣ್ ರೈಲ್ವೆಯ ಮೂಲಕ ಮುಂಬಯಿಗೂ ಸಂಪರ್ಕವನ್ನು ಹೊಂದಿದೆ. 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು ತಟ ರಕ್ಷಣಾ ಪಡೆಯ ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ ಭಾರತದ ೯ನೇ ಅತಿ ದೊಡ್ಡ ರೇವಾಗಿದ್ದು, ಕರ್ನಾಟಕದ ಏಕಮಾತ್ರ ಬೃಹತ್ ಬಂದರಾಗಿದೆ. ಬಜ್ಪೆ ಸಮೀಪದಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ ಕರ್ನಾಟಕದ ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ. ಸೇವಾ ಸೌಲಭ್ಯಗಳು ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿಯಂತ್ರಿಸುತ್ತಿದ್ದು, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ. ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ. ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ. ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ ತುಂಬೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ. ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್ ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ', ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್', ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. ನಗರದ ಸುತ್ತ ಮುತ್ತ ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. ಮಂಗಳಾದೇವಿ ದೇವಾಲಯ: ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. ಕದ್ರಿ ದೇವಸ್ಥಾನ: ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯು ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು: ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. ನವ ಮಂಗಳೂರು ಬಂದರು:ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್:ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. ಉಳ್ಳಾಲ ಸಮುದ್ರ ತೀರ:ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು ಉಲ್ಲಾಳ ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು.ಝೀನತ್ ಬಕ್ಷ್ ಜುಮಾ ಮಸ್ಜಿದ್:ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. ಗೋಕರ್ಣನಾಥೇಶ್ವರ ದೇವಾಲಯ: ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. ಸುರತ್ಕಲ್ ದೀಪಸ್ಥಂಭ''' ಸುಲ್ತಾನ್ ಬತ್ತೇರಿ ಸುಲ್ತಾನ್ ಬತ್ತೇರಿ ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. ಸೋಮೇಶ್ವರ ದೇವಾಲಯ { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] }ಸೋಮೇಶ್ವರ ದೇವಾಲಯವು ಅರಬೀ ಸಮುದ್ರ ತೀರದಲ್ಲಿ ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ರುದ್ರ ಕ್ಷೇತ್ರ ಎಂದು ಪ್ರಸಿದ್ದವಾಗಿದೆ. ಇದು ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. ಪಿಲಿಕುಳ ನಿಸರ್ಗದಾಮ ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ. ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ. ೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ. ಸೋದರಿ ನಗರ ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ ಸಂಬಂಧವನ್ನು ಹೊಂದಿದೆ. ಹಾಮಿಲ್ಟನ್, ಕೆನಡಾ ಚಿತ್ರಶಾಲೆ ನೋಡಿ ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬ ಉಲ್ಲೇಖಗಳು https://newsnext.live/ News Next English http://www.mangalorecity.com ಭಾರತದ ಪಟ್ಟಣಗಳು ಕರ್ನಾಟಕದ ಪ್ರಮುಖ ಸ್ಥಳಗಳು ದಕ್ಷಿಣ ಕನ್ನಡ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು ಭಾರತದ ಕರಾವಳಿ ಪ್ರದೇಶಗಳು
2404
https://kn.wikipedia.org/wiki/%E0%B2%86%E0%B2%82%E0%B2%97%E0%B3%8D%E0%B2%B2
ಆಂಗ್ಲ
ಇಂಗ್ಲಿಷ್ ಇಂಡೋ-ಯುರೋಪಿಯನ್ ಭಾಷಾ ಕುಟುಂಬದಲ್ಲಿ ಪಶ್ಚಿಮ ಜರ್ಮನಿಕ್ ಭಾಷೆಯಾಗಿದೆ, ಅದರ ಆರಂಭಿಕ ರೂಪಗಳನ್ನು ಆರಂಭಿಕ ಮಧ್ಯಕಾಲೀನ ಇಂಗ್ಲೆಂಡ್‌ನ ನಿವಾಸಿಗಳು ಮಾತನಾಡುತ್ತಾರೆ. ಗ್ರೇಟ್ ಬ್ರಿಟನ್ ದ್ವೀಪಕ್ಕೆ ವಲಸೆ ಬಂದ ಪ್ರಾಚೀನ ಜರ್ಮನಿಕ್ ಜನರಲ್ಲಿ ಒಬ್ಬರಾದ ದೇವತೆಗಳ ಹೆಸರನ್ನು ಇಡಲಾಗಿದೆ. ನಂತರ ಲೋ ಸ್ಯಾಕ್ಸನ್ ಮತ್ತು ಫ್ರಿಸಿಯನ್ ಭಾಷೆಗಳಿಗೆ ಹೆಚ್ಚು ನಿಕಟ ಸಂಬಂಧ ಹೊಂದಿದ್ದು, ಆಧುನಿಕ ಇಂಗ್ಲಿಷ್ ವಂಶಿಕವಾಗಿ ಜರ್ಮನಿಕ್ ಆಗಿದ್ದು, ನಿರಂತರತೆವಾಗಿ ಸ್ಕಾಟ್ಸ್‌ನೊಂದಿಗೆ ಉಪಭಾಷೆಯ ಅಸ್ತಿತ್ವದಲ್ಲಿದೆ. ವ್ಯಾಕರಣ ಮತ್ತು ಮೂಲ ಶಬ್ದಕೋಶವು ಹೆಚ್ಚಾಗಿ ಪಶ್ಚಿಮ ಜರ್ಮನಿಕ್ ಆಗಿದ್ದರೂ, ಇದು ಫ್ರೆಂಚ್,(ಸುಮಾರು 28% ಇಂಗ್ಲಿಷ್ ಪದಗಳು) ಲ್ಯಾಟಿನ್ (ಸುಮಾರು 28%) ಮತ್ತು ಹಳೆಯ ನಾರ್ಸ್‌ನಿಂದ ಕೆಲವು ವ್ಯಾಕರಣ ಮತ್ತು ಮೂಲ ಶಬ್ದಕೋಶವನ್ನು ಎರವಲು ಪಡೆದಿದೆ(ಉತ್ತರ ಜರ್ಮನಿಕ್ ಭಾಷೆ). ಇಂಗ್ಲಿಷ್ ಮಾತನಾಡುವವರನ್ನು ಆಂಗ್ಲೋಫೋನ್ಸ್ ಎಂದು ಕರೆಯಲಾಗುತ್ತದೆ. ಒಟ್ಟಾರೆಯಾಗಿ ಹಳೆಯ ಇಂಗ್ಲಿಷ್ ಅಥವಾ "ಆಂಗ್ಲೋ-ಸ್ಯಾಕ್ಸನ್" ಎಂದು ಕರೆಯಲ್ಪಡುವ ಇಂಗ್ಲಿಷ್‌ನ ಆರಂಭಿಕ ರೂಪಗಳು, 5 ನೇ ಶತಮಾನದಲ್ಲಿ ಆಂಗ್ಲೋ-ಸ್ಯಾಕ್ಸನ್ ವಸಾಹತುಗಾರರು ಗ್ರೇಟ್ ಬ್ರಿಟನ್‌ಗೆ ತಂದ ಉತ್ತರ ಸಮುದ್ರದ ಜರ್ಮನಿಕ್ ಉಪಭಾಷೆಗಳ ಗುಂಪಿನಿಂದ ವಿಕಸನಗೊಂಡಿವೆ; ಈ ಉಪಭಾಷೆಗಳು ಸಾಮಾನ್ಯವಾಗಿ ಆಗಿನ ಸ್ಥಳೀಯ ಸಾಮಾನ್ಯ ಬ್ರಿಟಾನಿಕ್ ಮತ್ತು ಬ್ರಿಟಿಷ್ ಲ್ಯಾಟಿನ್ ಭಾಷೆಗಳ ಪ್ರಭಾವವನ್ನು ವಿರೋಧಿಸಿದವು. ಆದರೂ ಹಳೆಯ ಇಂಗ್ಲಿಷ್ ಉಪಭಾಷೆಗಳು ನಂತರ ಹಳೆಯ ನಾರ್ಸ್ ಮಾತನಾಡುವ ವೈಕಿಂಗ್ ವಸಾಹತುಗಾರರು ಮತ್ತು 8 ನೇ ಮತ್ತು 9 ನೇ ಶತಮಾನಗಳಿಂದ ಪ್ರಾರಂಭವಾದ ಆಕ್ರಮಣಕಾರರಿಂದ ಪ್ರಭಾವಿತವಾದವು. ಆ ಸಮಯದಲ್ಲಿ, ಹಳೆಯ ನಾರ್ಸ್ ಹಳೆಯ ಇಂಗ್ಲಿಷ್‌ನ ಕೆಲವು ಉಪಭಾಷೆಗಳೊಂದಿಗೆ (ವಿಶೇಷವಾಗಿ ಹೆಚ್ಚು ಉತ್ತರದ ಉಪಭಾಷೆಗಳು) ಸಾಕಷ್ಟು ಪರಸ್ಪರ ಬುದ್ಧಿವಂತಿಕೆಯನ್ನು ಉಳಿಸಿಕೊಂಡಿದೆ. ಮಧ್ಯ ಇಂಗ್ಲಿಷ್ 11 ನೇ ಶತಮಾನದ ಕೊನೆಯಲ್ಲಿ ಇಂಗ್ಲೆಂಡ್‌ನ ನಾರ್ಮನ್ ವಿಜಯದ ನಂತರ ಪ್ರಾರಂಭವಾಯಿತು, ಹಳೆಯ ಫ್ರೆಂಚ್ (ವಿಶೇಷವಾಗಿ ಓಲ್ಡ್ ನಾರ್ಮನ್ ಫ್ರೆಂಚ್ ) ಮತ್ತು ಲ್ಯಾಟಿನ್ ಮೂಲದ ಶಬ್ದಕೋಶವನ್ನು ಸುಮಾರು ಮುನ್ನೂರು ವರ್ಷಗಳಲ್ಲಿ ಇಂಗ್ಲಿಷ್‌ಗೆ ಸಂಯೋಜಿಸಲಾಯಿತು. ಆರಂಭದಲ್ಲಿ ಆಧುನಿಕ ಇಂಗ್ಲಿಷ್ 15 ನೇ ಶತಮಾನದ ಅಂತ್ಯದಲ್ಲಿ ಗ್ರೇಟ್ ವೋವೆಲ್ ಶಿಫ್ಟ್ ಪ್ರಾರಂಭವಾಯಿತು ಮತ್ತು ಲಂಡನ್‌ಗೆ ಪ್ರಿಂಟಿಂಗ್ ಪ್ರೆಸ್‌ನ ಪರಿಚಯದೊಂದಿಗೆ ಏಕಕಾಲದಲ್ಲಿ ಲ್ಯಾಟಿನ್ ಮತ್ತು ಗ್ರೀಕ್ ಪದಗಳು ಮತ್ತು ಇಂಗ್ಲಿಷ್‌ಗೆ ಮೂಲಗಳನ್ನು ಎರವಲು ಪಡೆಯುವ ನವೋದಯ ಪ್ರವೃತ್ತಿಯು ಪ್ರಾರಂಭವಾಯಿತು. ಈ ಯುಗವು ಗಮನಾರ್ಹವಾಗಿ ಕಿಂಗ್ ಜೇಮ್ಸ್ ಬೈಬಲ್ ಮತ್ತು ವಿಲಿಯಂ ಷೇಕ್ಸ್‌ಪಿಯರನ ಕೃತಿಗಳಲ್ಲಿ ಉತ್ತುಂಗಕ್ಕೇರಿತು. ಪ್ರಿಂಟಿಂಗ್ ಪ್ರೆಸ್ ಇಂಗ್ಲಿಷ್ ಕಾಗುಣಿತವನ್ನು ಹೆಚ್ಚು ಪ್ರಮಾಣೀಕರಿಸಿತು. ಇದು ವಿಭಿನ್ನ ಇಂಗ್ಲಿಷ್ ಉಪಭಾಷೆಗಳಲ್ಲಿ ನಂತರದ ಹಲವಾರು ರೀತಿಯ ಧ್ವನಿ ಬದಲಾವಣೆಗಳ ಹೊರತಾಗಿಯೂ, ಅಂದಿನಿಂದ ಹೆಚ್ಚಾಗಿ ಬದಲಾಗದೆ ಉಳಿದಿದೆ. ಆಧುನಿಕ ಇಂಗ್ಲಿಷ್ ವ್ಯಾಕರಣವು ಒಂದು ವಿಶಿಷ್ಟವಾದ ಇಂಡೋ-ಯುರೋಪಿಯನ್ ಅವಲಂಬಿತ-ಗುರುತಿಸುವಿಕೆಯ ಮಾದರಿ. ಇದು ಸಾಕಷ್ಟು ಸ್ಥಿರವಾದ ವಿಷಯ-ಕ್ರಿಯಾಪದ-ವಸ್ತು ಪದ ಕ್ರಮದ ಕ್ರಮೇಣ ಬದಲಾವಣೆಯ ಪರಿಣಾಮದಿಂದ ಶ್ರೀಮಂತ ವಿಭಕ್ತಿ ರೂಪವಿಜ್ಞಾನ ಮತ್ತು ತುಲನಾತ್ಮಕವಾಗಿ ಮುಕ್ತ ಪದ ಕ್ರಮದಿಂದ ಸ್ವಲ್ಪ ವಿಶ್ಲೇಷಣಾತ್ಮಕ ಮಾದರಿಯಾಗಿದೆ. ಆಧುನಿಕ ಇಂಗ್ಲಿಷ್ ಸಹಾಯಕ ಕ್ರಿಯಾಪದಗಳು ಮತ್ತು ಪದಗಳ ಕ್ರಮವನ್ನು ಸಂಕೀರ್ಣವಾದ ಕಾಲಗಳಲ್ಲಿ ಅಭಿವ್ಯಕ್ತಿಸುತ್ತದೆ. ನಿಷ್ಕ್ರಿಯ ರಚನೆಗಳು, ಪ್ರಶ್ನಾರ್ಹತೆಗಳು ಮತ್ತು ಕೆಲವು ನಿರಾಕರಣೆಗಳ ಅಂಶಗಳು ಮತ್ತು ಮನಸ್ಥಿತಿಗಳನ್ನು ಹೆಚ್ಚು ಅವಲಂಬಿಸುತ್ತದೆ. ಬ್ರಿಟಿಷ್ ಸಾಮ್ರಾಜ್ಯ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ವಿಶ್ವವ್ಯಾಪಿ ಪ್ರಭಾವದ ಪರಿಣಾಮವಾಗಿ 17 ನೇ ಶತಮಾನದಿಂದ ಆಧುನಿಕ ಇಂಗ್ಲಿಷ್ ಪ್ರಪಂಚದಾದ್ಯಂತ ಹರಡಿತು. ಈ ದೇಶಗಳಲ್ಲಿ ಎಲ್ಲಾ ರೀತಿಯ ಮುದ್ರಿತ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ, ಇಂಗ್ಲಿಷ್ ಅಂತರರಾಷ್ಟ್ರೀಯ ಪ್ರವಚನದ ಪ್ರಮುಖ ಭಾಷೆಯಾಗಿದೆ ಮತ್ತು ಅನೇಕ ಪ್ರದೇಶಗಳಲ್ಲಿ ಮತ್ತು ವಿಜ್ಞಾನ, ಸಂಚರಣೆ ಮತ್ತು ಕಾನೂನಿನಂತಹ ವೃತ್ತಿಪರ ಸಂದರ್ಭಗಳಲ್ಲಿ ಸಂಪರ್ಕ ಭಾಷೆಯಾಯಿತು. ಇಂಗ್ಲಿಷ್ ಪ್ರಪಂಚದಲ್ಲೇ ಹೆಚ್ಚು ಮಾತನಾಡುವ ಭಾಷೆಯಾಗಿದೆ ಮತ್ತು ಸ್ಟ್ಯಾಂಡರ್ಡ್ ಚೈನೀಸ್ ಮತ್ತು ಸ್ಪ್ಯಾನಿಷ್ ನಂತರ ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಸ್ಥಳೀಯ ಭಾಷೆಯಾಗಿದೆ. ಇದು ಅತ್ಯಂತ ವ್ಯಾಪಕವಾಗಿ ಕಲಿತ ಎರಡನೇ ಭಾಷೆಯಾಗಿದೆ ಮತ್ತು 59 ಸಾರ್ವಭೌಮ ರಾಜ್ಯಗಳಲ್ಲಿ ಅಧಿಕೃತ ಭಾಷೆ ಅಥವಾ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಮಾತೃಭಾಷೆಯವರಿಗಿಂತ ಇಂಗ್ಲಿಷ್ ಅನ್ನು ಎರಡನೇ ಭಾಷೆಯಾಗಿ ಕಲಿತವರೇ ಹೆಚ್ಚು. 2005 ರಂತೆ, ಎರಡು ಶತಕೋಟಿಗೂ ಹೆಚ್ಚು ಇಂಗ್ಲಿಷ್ ಮಾತನಾಡುವವರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ರಿಪಬ್ಲಿಕ್ ಆಫ್ ಐರ್ಲೆಂಡ್‌ನಲ್ಲಿ ಇಂಗ್ಲಿಷ್ ಬಹುಪಾಲು ಸ್ಥಳೀಯ ಭಾಷೆಯಾಗಿದೆ (ಆಂಗ್ಲೋಸ್ಫಿಯರ್ ಅನ್ನು ನೋಡಿ) ಮತ್ತು ಕೆರಿಬಿಯನ್, ಆಫ್ರಿಕಾ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾದ ಕೆಲವು ಪ್ರದೇಶಗಳಲ್ಲಿ ಮತ್ತು ಓಷಿಯಾನಿಯಾ ವ್ಯಾಪಕವಾಗಿ ಮಾತನಾಡುತ್ತಾರೆ. ಇದು ಯುನೈಟೆಡ್ ನೇಷನ್ಸ್, ಯುರೋಪಿಯನ್ ಯೂನಿಯನ್, ಮತ್ತು ಅನೇಕ ಇತರ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳ ಸಹ-ಅಧಿಕೃತ ಭಾಷೆಯಾಗಿದೆ. ಇಂಡೋ-ಯುರೋಪಿಯನ್ ಕುಟುಂಬದ ಜರ್ಮನಿಕ್ ಭಾಷಾ ಶಾಖೆಯಲ್ಲಿ ಮಾತನಾಡುವವರಲ್ಲಿ ಕನಿಷ್ಠ 70% ಇಂಗ್ಲಿಷ್ ಖಾತೆಗಳನ್ನು ಹೊಂದಿದೆ. ವರ್ಗೀಕರಣ ಇಂಗ್ಲಿಷ್ ಇಂಡೋ-ಯುರೋಪಿಯನ್ ಭಾಷೆಯಾಗಿದೆ ಮತ್ತು ಜರ್ಮನಿಕ್ ಭಾಷೆಗಳ ಪಶ್ಚಿಮ ಜರ್ಮನಿಯ ಗುಂಪಿಗೆ ಸೇರಿದೆ. ಹಳೆಯ ಇಂಗ್ಲಿಷ್ ಫ್ರಿಸಿಯನ್ ಉತ್ತರ ಸಮುದ್ರದ ಕರಾವಳಿಯಲ್ಲಿ ಜರ್ಮನಿಕ್ ಬುಡಕಟ್ಟು ಮತ್ತು ಭಾಷಾ ನಿರಂತರತೆಯಿಂದ ಹುಟ್ಟಿಕೊಂಡಿತು, ಅವರ ಭಾಷೆಗಳು ಕ್ರಮೇಣ ಬ್ರಿಟಿಷ್ ದ್ವೀಪಗಳಲ್ಲಿ ಆಂಗ್ಲಿಕ್ ಭಾಷೆಗಳಾಗಿ ಮತ್ತು ಫ್ರಿಸಿಯನ್ ಭಾಷೆಗಳಾಗಿ ಮತ್ತು ಖಂಡದಲ್ಲಿ ಲೋ ಜರ್ಮನ್ / ಲೋ ಸ್ಯಾಕ್ಸನ್ ಆಗಿ ವಿಕಸನಗೊಂಡವು. ಆಂಗ್ಲಿಕ್ ಭಾಷೆಗಳ ಜೊತೆಗೆ ಆಂಗ್ಲೋ-ಫ್ರಿಷಿಯನ್ ಭಾಷೆಗಳನ್ನು ರೂಪಿಸುವ ಫ್ರಿಸಿಯನ್ ಭಾಷೆಗಳು ಇಂಗ್ಲಿಷ್‌ನ ಹತ್ತಿರದ ಜೀವಂತ ಸಂಬಂಧಿಗಳಾಗಿವೆ. ಲೋ ಜರ್ಮನ್/ಲೋ ಸ್ಯಾಕ್ಸನ್ ಕೂಡ ನಿಕಟ ಸಂಬಂಧವನ್ನು ಹೊಂದಿದೆ, ಮತ್ತು ಕೆಲವೊಮ್ಮೆ ಇಂಗ್ಲಿಷ್, ಫ್ರಿಸಿಯನ್ ಭಾಷೆಗಳು ಮತ್ತು ಲೋ ಜರ್ಮನ್ ಅನ್ನು ಇಂಗ್ವೆಯೊನಿಕ್ (ಉತ್ತರ ಸಮುದ್ರದ ಜರ್ಮನಿಕ್) ಭಾಷೆಗಳಾಗಿ ಒಟ್ಟುಗೂಡಿಸಲಾಗುತ್ತದೆ. ಆದರೂ ಈ ಗುಂಪು ಚರ್ಚೆಯಾಗಿ ಉಳಿದಿದೆ. ಹಳೆಯ ಇಂಗ್ಲಿಷ್ ಮಧ್ಯಮ ಇಂಗ್ಲಿಷ್ ಆಗಿ ವಿಕಸನಗೊಂಡಿತು, ಇದು ಆಧುನಿಕ ಇಂಗ್ಲಿಷ್ ಆಗಿ ವಿಕಸನಗೊಂಡಿತು. ಹಳೆಯ ಮತ್ತು ಮಧ್ಯ ಇಂಗ್ಲಿಷ್‌ನ ನಿರ್ದಿಷ್ಟ ಉಪಭಾಷೆಗಳು ಸ್ಕಾಟ್ಸ್‌ ಮತ್ತು ಐರ್ಲೆಂಡ್‌ನ ಅಳಿವಿನಂಚಿನಲ್ಲಿರುವ ಫಿಂಗಾಲಿಯನ್ ಮತ್ತು ಫೋರ್ತ್ ಮತ್ತು ಬಾರ್ಗಿ (ಯೋಲಾ) ಉಪಭಾಷೆಗಳನ್ನು ಒಳಗೊಂಡಂತೆ ಹಲವಾರು ಇತರ ಆಂಗ್ಲಿಕ್ ಭಾಷೆಗಳಾಗಿ ಅಭಿವೃದ್ಧಿಗೊಂಡವು. ಐಸ್ಲ್ಯಾಂಡಿಕ್ ಮತ್ತು ಫರೋಸಿಗಳಂತೆ, ಬ್ರಿಟಿಷ್ ದ್ವೀಪಗಳಲ್ಲಿ ಇಂಗ್ಲಿಷ್‌ನ ಬೆಳವಣಿಗೆಯು ಕಾಂಟಿನೆಂಟಲ್ ಜರ್ಮನಿಕ್ ಭಾಷೆಗಳು ಮತ್ತು ಪ್ರಭಾವಗಳಿಂದ ಅದನ್ನು ಪ್ರತ್ಯೇಕಿಸಿತು ಮತ್ತು ಅದು ಗಣನೀಯವಾಗಿ ಭಿನ್ನವಾಗಿದೆ. ಇಂಗ್ಲಿಷ್ ಯಾವುದೇ ಭೂಖಂಡದ ಜರ್ಮನಿಕ್ ಭಾಷೆಯೊಂದಿಗೆ ಪರಸ್ಪರ ಅರ್ಥವಾಗುವುದಿಲ್ಲ, ಶಬ್ದಕೋಶ, ವಾಕ್ಯರಚನೆ ಮತ್ತು ಧ್ವನಿಶಾಸ್ತ್ರದಲ್ಲಿ ಭಿನ್ನವಾಗಿದೆ, ಆದಾಗ್ಯೂ ಡಚ್ ಅಥವಾ ಫ್ರಿಸಿಯನ್ ನಂತಹ ಇವುಗಳಲ್ಲಿ ಕೆಲವು ಇಂಗ್ಲಿಷ್‌ನೊಂದಿಗೆ ವಿಶೇಷವಾಗಿ ಅದರ ಹಿಂದಿನ ಹಂತಗಳೊಂದಿಗೆಬಲವಾದ ಸಂಬಂಧವನ್ನು ತೋರಿಸುತ್ತವೆ. ಪ್ರತ್ಯೇಕವಾದ ಐಸ್ಲ್ಯಾಂಡಿಕ್ ಮತ್ತು ಫರೋಸ್‌ಗಿಂತ ಭಿನ್ನವಾಗಿ, ಇಂಗ್ಲಿಷ್‌ನ ಬೆಳವಣಿಗೆಯು ಬ್ರಿಟಿಷ್ ದ್ವೀಪಗಳ ಮೇಲೆ ಇತರ ಜನರು ಮತ್ತು ಭಾಷೆಗಳಿಂದ, ನಿರ್ದಿಷ್ಟವಾಗಿ ಹಳೆಯ ನಾರ್ಸ್ ಮತ್ತು ನಾರ್ಮನ್ ಫ್ರೆಂಚ್‌ನಿಂದ ಆಕ್ರಮಣಗಳ ದೀರ್ಘ ಸರಣಿಯಿಂದ ಪ್ರಭಾವಿತವಾಗಿದೆ. ಇವುಗಳು ಭಾಷೆಯ ಮೇಲೆ ತಮ್ಮದೇ ಆದ ಆಳವಾದ ಗುರುತನ್ನು ಬಿಟ್ಟಿವೆ, ಆದ್ದರಿಂದ ಇಂಗ್ಲಿಷ್ ತನ್ನ ಭಾಷಾಶಾಸ್ತ್ರದ ಕ್ಲಾಡ್‌ಗಳ ಹೊರಗಿನ ಅನೇಕ ಭಾಷೆಗಳೊಂದಿಗೆ ಶಬ್ದಕೋಶ ಮತ್ತು ವ್ಯಾಕರಣದಲ್ಲಿ ಕೆಲವು ಹೋಲಿಕೆಗಳನ್ನು ತೋರಿಸುತ್ತದೆ - ಆದರೆ ಅದು ಆ ಯಾವುದೇ ಭಾಷೆಗಳೊಂದಿಗೆ ಪರಸ್ಪರ ಅರ್ಥವಾಗುವುದಿಲ್ಲ. ಕೆಲವು ವಿದ್ವಾಂಸರು ಇಂಗ್ಲಿಷ್ ಅನ್ನು ಮಿಶ್ರ ಭಾಷೆ ಅಥವಾ ಕ್ರಿಯೋಲ್ ಎಂದು ಪರಿಗಣಿಸಬಹುದು ಎಂದು ವಾದಿಸಿದ್ದಾರೆ - ಇದು ಮಧ್ಯಮ ಇಂಗ್ಲಿಷ್ ಕ್ರಿಯೋಲ್ ಕಲ್ಪನೆ ಎಂದು ಕರೆಯಲ್ಪಡುತ್ತದೆ. ಆಧುನಿಕ ಇಂಗ್ಲಿಷ್‌ನ ಶಬ್ದಕೋಶ ಮತ್ತು ವ್ಯಾಕರಣದ ಮೇಲೆ ಈ ಭಾಷೆಗಳ ಮಹತ್ತರವಾದ ಪ್ರಭಾವವು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದೆಯಾದರೂ, ಭಾಷಾ ಸಂಪರ್ಕದಲ್ಲಿರುವ ಹೆಚ್ಚಿನ ತಜ್ಞರು ಇಂಗ್ಲಿಷ್ ಅನ್ನು ನಿಜವಾದ ಮಿಶ್ರ ಭಾಷೆ ಎಂದು ಪರಿಗಣಿಸುವುದಿಲ್ಲ. ಇಂಗ್ಲಿಷ್ ಅನ್ನು ಜರ್ಮನಿಕ್ ಭಾಷೆ ಎಂದು ವರ್ಗೀಕರಿಸಲಾಗಿದೆ ಏಕೆಂದರೆ ಇದು ಡಚ್, ಜರ್ಮನ್ ಮತ್ತು ಸ್ವೀಡಿಷ್ ನಂತಹ ಇತರ ಜರ್ಮನಿಕ್ ಭಾಷೆಗಳೊಂದಿಗೆ ನಾವೀನ್ಯತೆಗಳನ್ನು ಹಂಚಿಕೊಳ್ಳುತ್ತದೆ. ಈ ಹಂಚಿಕೆಯ ನಾವೀನ್ಯತೆಗಳು ಭಾಷೆಗಳು ಪ್ರೊಟೊ-ಜರ್ಮಾನಿಕ್ ಎಂಬ ಏಕೈಕ ಸಾಮಾನ್ಯ ಪೂರ್ವಜರಿಂದ ಬಂದಿವೆ ಎಂದು ತೋರಿಸುತ್ತವೆ. ಜರ್ಮನಿಕ್ ಭಾಷೆಗಳ ಕೆಲವು ಹಂಚಿಕೆಯ ವೈಶಿಷ್ಟ್ಯಗಳು ಕ್ರಿಯಾಪದಗಳನ್ನು ಬಲವಾದ ಮತ್ತು ದುರ್ಬಲ ವರ್ಗಗಳಾಗಿ ವಿಭಜಿಸುವುದು, ಮಾದರಿ ಕ್ರಿಯಾಪದಗಳ ಬಳಕೆ ಮತ್ತು ಗ್ರಿಮ್ಸ್ ಮತ್ತು ವರ್ನರ್ ಕಾನೂನುಗಳು ಎಂದು ಕರೆಯಲ್ಪಡುವ ಪ್ರೊಟೊ-ಇಂಡೋ-ಯುರೋಪಿಯನ್ ವ್ಯಂಜನಗಳ ಮೇಲೆ ಪರಿಣಾಮ ಬೀರುವ ಧ್ವನಿ ಬದಲಾವಣೆಗಳನ್ನು ಒಳಗೊಂಡಿರುತ್ತದೆ. ಇಂಗ್ಲಿಷ್ ಅನ್ನು ಆಂಗ್ಲೋ-ಫ್ರಿಷಿಯನ್ ಭಾಷೆ ಎಂದು ವರ್ಗೀಕರಿಸಲಾಗಿದೆ ಏಕೆಂದರೆ ಫ್ರಿಸಿಯನ್ ಮತ್ತು ಇಂಗ್ಲಿಷ್ ಇತರ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತದೆ, ಉದಾಹರಣೆಗೆ ಪ್ರೊಟೊ-ಜರ್ಮಾನಿಕ್‌ನಲ್ಲಿ ಕಂಠ್ಯ ವ್ಯಂಜನಗಳ ತಾಲವ್ಯೀಕರಣ (ಓಲ್ಡ್ ಇಂಗ್ಲೀಷ್ § ತಾಲವ್ಯೀಕರಣ ಧ್ವನಿಶಾಸ್ತ್ರದ ಇತಿಹಾಸವನ್ನು ನೋಡಿ). ಇತಿಹಾಸ ಪ್ರೊಟೊ-ಜರ್ಮಾನಿಕ್ ನಿಂದ ಹಳೆಯ ಇಂಗ್ಲಿಷ್ ಇಂಗ್ಲಿಷ್‌ನ ಆರಂಭಿಕ ರೂಪವನ್ನು ಹಳೆಯ ಇಂಗ್ಲಿಷ್ ಅಥವಾ ಆಂಗ್ಲೋ-ಸ್ಯಾಕ್ಸನ್ ಎಂದು ಕರೆಯಲಾಗುತ್ತದೆ ( –1066). ಪಶ್ಚಿಮ ಜರ್ಮನಿಕ್ ಉಪಭಾಷೆಗಳ ಗುಂಪಿನಿಂದ ಹಳೆಯ ಇಂಗ್ಲಿಷ್ ಅನ್ನು ಅಭಿವೃದ್ಧಿಪಡಿಸಲಾಗಿದೆ, ಇದನ್ನು ಸಾಮಾನ್ಯವಾಗಿ ಆಂಗ್ಲೋ-ಫ್ರಿಶಿಯನ್ ಅಥವಾ ನಾರ್ತ್ ಸೀ ಜರ್ಮನಿಕ್ ಎಂದು ವರ್ಗೀಕರಿಸಲಾಗಿದೆ ಮತ್ತು ಮೂಲತಃ ಫ್ರಿಸಿಯಾ, ಲೋವರ್ ಸ್ಯಾಕ್ಸೋನಿ ಮತ್ತು ದಕ್ಷಿಣ ಜುಟ್‌ಲ್ಯಾಂಡ್‌ನ ಕರಾವಳಿಯಲ್ಲಿ ಜರ್ಮನಿಕ್ ಜನರು ಆಂಗಲ್ಸ್, ಸ್ಯಾಕ್ಸನ್‌ಗಳು ಮತ್ತು ಜೂಟ್ಸ್ ಎಂದು ಚಾರಿತ್ರಿಕ ದಾಖಲೆಯಲ್ಲಿದೆ. 5 ನೇ ಶತಮಾನದಿಂದ, ಆಂಗ್ಲೋ-ಸ್ಯಾಕ್ಸನ್‌ಗಳು ಬ್ರಿಟನ್‌ನಲ್ಲಿ ನೆಲೆಸಿದರು, ರೋಮನ್ ಆರ್ಥಿಕತೆ ಮತ್ತು ಆಡಳಿತವು ಕುಸಿಯಿತು. 7 ನೇ ಶತಮಾನದ ವೇಳೆಗೆ, ಆಂಗ್ಲೋ-ಸ್ಯಾಕ್ಸನ್‌ಗಳ ಜರ್ಮನಿಕ್ ಭಾಷೆಯು ಬ್ರಿಟನ್‌ನಲ್ಲಿ ಪ್ರಬಲವಾಯಿತು, ರೋಮನ್ ಬ್ರಿಟನ್‌ನ (43-409) ಭಾಷೆಗಳನ್ನು ಬದಲಿಸಿತು: ಸಾಮಾನ್ಯ ಬ್ರಿಟಾನಿಕ್, ಸೆಲ್ಟಿಕ್ ಭಾಷೆ ಮತ್ತು ಲ್ಯಾಟಿನ್ನ್ನು ರೋಮನ್ ಆಕ್ರಮಣದಿಂದ ಬ್ರಿಟನ್‌ಗೆ ತರಲಾಯಿತು. ಇಂಗ್ಲೆಂಡ್ ಮತ್ತು ಇಂಗ್ಲಿಷ್ (ಮೂಲತಃ ಮತ್ತು ) ಪರವಾಗಿ ನಂತರ ಹೆಸರಿಸಲಾಗಿದೆ. ಹಳೆಯ ಇಂಗ್ಲಿಷ್ ಅನ್ನು ನಾಲ್ಕು ಉಪಭಾಷೆಗಳಾಗಿ ವಿಂಗಡಿಸಲಾಗಿದೆ: ಆಂಗ್ಲಿಯನ್ ಉಪಭಾಷೆಗಳು ( ಮರ್ಸಿಯನ್ ಮತ್ತು ನಾರ್ಥಂಬ್ರಿಯನ್ ) ಮತ್ತು ಸ್ಯಾಕ್ಸನ್ ಉಪಭಾಷೆಗಳು, ಕೆಂಟಿಶ್ ಮತ್ತು ವೆಸ್ಟ್ ಸ್ಯಾಕ್ಸನ್. 9 ನೇ ಶತಮಾನದಲ್ಲಿ ಕಿಂಗ್ ಆಲ್ಫ್ರೆಡ್‌ನ ಶೈಕ್ಷಣಿಕ ಸುಧಾರಣೆಗಳು ಮತ್ತು ವೆಸೆಕ್ಸ್ ಸಾಮ್ರಾಜ್ಯದ ಪ್ರಭಾವದ ಮೂಲಕ, ವೆಸ್ಟ್ ಸ್ಯಾಕ್ಸನ್ ಉಪಭಾಷೆಯು ಪ್ರಮಾಣಿತ ಲಿಖಿತ ವೈವಿಧ್ಯವಾಯಿತು. ಮಹಾಕಾವ್ಯವಾದ ಬೇವುಲ್ಫ್ ಅನ್ನು ವೆಸ್ಟ್ ಸ್ಯಾಕ್ಸನ್‌ನಲ್ಲಿ ಬರೆಯಲಾಗಿದೆ ಮತ್ತು ಮೊದಲಿನ ಇಂಗ್ಲಿಷ್ ಕವಿತೆ, ಕ್ಯಾಡ್ಮನ್ಸ್ ಹೈಮ್ ಅನ್ನು ನಾರ್ತಂಬ್ರಿಯನ್ ಭಾಷೆಯಲ್ಲಿ ಬರೆಯಲಾಗಿದೆ. ಆಧುನಿಕ ಇಂಗ್ಲಿಷ್ ಮುಖ್ಯವಾಗಿ ಮರ್ಸಿಯನ್‌ನಿಂದ ಅಭಿವೃದ್ಧಿಗೊಂಡಿತು, ಆದರೆ ಸ್ಕಾಟ್ಸ್ ಭಾಷೆ ನಾರ್ತಂಬ್ರಿಯನ್‌ನಿಂದ ಅಭಿವೃದ್ಧಿಗೊಂಡಿತು. ಹಳೆಯ ಇಂಗ್ಲಿಷ್‌ನ ಆರಂಭಿಕ ಅವಧಿಯ ಕೆಲವು ಸಣ್ಣ ಶಾಸನಗಳನ್ನು ರೂನಿಕ್ ಲಿಪಿಯನ್ನು ಬಳಸಿ ಬರೆಯಲಾಗಿದೆ. 6 ನೇ ಶತಮಾನದ ವೇಳೆಗೆ, ಲ್ಯಾಟಿನ್ ವರ್ಣಮಾಲೆಯನ್ನು ಅಳವಡಿಸಲಾಯಿತು, ಇದನ್ನು ಅರ್ಧ-ಅನ್ಸಿಯಲ್ ಅಕ್ಷರ ರೂಪಗಳೊಂದಿಗೆ ಬರೆಯಲಾಯಿತು. ಇದು ರೂನಿಕ್ ಅಕ್ಷರಗಳಾದ wynn ⟨ ⟩ ⟩ ಥಾರ್ನ್ ⟨ þ ⟩, ಮತ್ತು ಮಾರ್ಪಡಿಸಿದ ಲ್ಯಾಟಿನ್ ಅಕ್ಷರಗಳು eth ⟨ ð ⟩, ಮತ್ತು ash ⟨ æ ⟩ . ಹಳೆಯ ಇಂಗ್ಲಿಷ್ ಮೂಲಭೂತವಾಗಿ ಆಧುನಿಕ ಇಂಗ್ಲಿಷ್‌ನಿಂದ ವಿಭಿನ್ನ ಭಾಷೆಯಾಗಿದೆ ಮತ್ತು 21 ನೇ ಶತಮಾನದ ಅಧ್ಯಯನ ಮಾಡದ ಇಂಗ್ಲಿಷ್ ಮಾತನಾಡುವವರಿಗೆ ಅರ್ಥಮಾಡಿಕೊಳ್ಳಲು ವಾಸ್ತವಿಕವಾಗಿ ಅಸಾಧ್ಯವಾಗಿದೆ. ಇದರ ವ್ಯಾಕರಣವು ಆಧುನಿಕ ಜರ್ಮನ್‌ನಂತೆಯೇ ಇತ್ತು: ನಾಮಪದಗಳು, ಗುಣವಾಚಕಗಳು, ಸರ್ವನಾಮಗಳು ಮತ್ತು ಕ್ರಿಯಾಪದಗಳು ಹೆಚ್ಚಿನ ವಿಭಕ್ತಿ ಅಂತ್ಯಗಳು ಮತ್ತು ರೂಪಗಳನ್ನು ಹೊಂದಿದ್ದವು ಮತ್ತು ಪದ ಕ್ರಮವು ಆಧುನಿಕ ಇಂಗ್ಲಿಷ್‌ಗಿಂತ ಹೆಚ್ಚು ಮುಕ್ತವಾಗಿತ್ತು . ಆಧುನಿಕ ಇಂಗ್ಲಿಷ್ ಸರ್ವನಾಮಗಳಲ್ಲಿ ಕೇಸ್ ಫಾರ್ಮ್‌ಗಳನ್ನು ಹೊಂದಿದೆ ( he ಅವನು, him ಅವನ, his ಅವನ ) ಮತ್ತು ಕೆಲವು ಕ್ರಿಯಾಪದ ವಿಭಕ್ತಿಗಳನ್ನು ಹೊಂದಿದೆ ( speak ಮಾತನಾಡಿ, speaks ಮಾತನಾಡುತ್ತಾನೆ, speaking ಮಾತನಾಡುವ, spoke ಮಾತನಾಡಿದ, spoken ಮಾತನಾಡಿದ್ದಾನೆ), ಆದರೆ ಹಳೆಯ ಇಂಗ್ಲಿಷ್ ನಾಮಪದಗಳಲ್ಲಿ ಸಾಂದರ್ಭಿಕ ಕೊನೆಯನ್ನು ಹೊಂದಿತ್ತು ಮತ್ತು ಕ್ರಿಯಾಪದಗಳು ಹೆಚ್ಚು ವ್ಯಕ್ತಿ ಮತ್ತು ಸಂಖ್ಯೆಯನ್ನು ಹೊಂದಿದ್ದವು. ಇದರ ಹತ್ತಿರದ ಸಂಬಂಧಿ ಓಲ್ಡ್ ಫ್ರಿಸಿಯನ್, ಆದರೆ ಆಂಗ್ಲೋ-ಸ್ಯಾಕ್ಸನ್ ವಲಸೆಯ ಕೆಲವು ಶತಮಾನಗಳ ನಂತರವೂ, ಹಳೆಯ ಇಂಗ್ಲಿಷ್ ಇತರ ಜರ್ಮನಿಕ್ ಪ್ರಭೇದಗಳೊಂದಿಗೆ ಸಾಕಷ್ಟು ಪರಸ್ಪರ ಬುದ್ಧಿವಂತಿಕೆಯನ್ನು ಉಳಿಸಿಕೊಂಡಿದೆ. 9 ನೇ ಮತ್ತು 10 ನೇ ಶತಮಾನಗಳಲ್ಲಿ, ಡೇನ್ಲಾವ್ ಮತ್ತು ಇತರ ವೈಕಿಂಗ್ ಆಕ್ರಮಣಗಳ ನಡುವೆ, ಹಳೆಯ ನಾರ್ಸ್ ಮತ್ತು ಹಳೆಯ ಇಂಗ್ಲಿಷ್ ಗಣನೀಯವಾದ ಪರಸ್ಪರ ಬುದ್ಧಿವಂತಿಕೆಯನ್ನು ಉಳಿಸಿಕೊಂಡಿದೆ ಎಂಬುದಕ್ಕೆ ಐತಿಹಾಸಿಕ ಪುರಾವೆಗಳಿವೆ, ಆದರೂ ಬಹುಶಃ ಹಳೆಯ ಇಂಗ್ಲಿಷ್‌ನ ಉತ್ತರದ ಉಪಭಾಷೆಗಳು ಹಳೆಯ ನಾರ್ಸ್‌ಗೆ ಹೆಚ್ಚು ಹೋಲುತ್ತವೆ. ದಕ್ಷಿಣ ಉಪಭಾಷೆಗಳು. ಸೈದ್ಧಾಂತಿಕವಾಗಿ, ಕ್ರಿ.ಶ. 900 ರ ದಶಕದಲ್ಲಿ, ಇಂಗ್ಲೆಂಡ್‌ನ ಕೆಲವು (ಉತ್ತರ) ಭಾಗಗಳ ಸಾಮಾನ್ಯರು ಸ್ಕ್ಯಾಂಡಿನೇವಿಯಾದ ಕೆಲವು ಭಾಗಗಳ ಸಾಮಾನ್ಯರೊಂದಿಗೆ ಸಂಭಾಷಣೆ ನಡೆಸುತ್ತಿತ್ತು. ಇಂಗ್ಲೆಂಡ್ ಮತ್ತು ಸ್ಕ್ಯಾಂಡಿನೇವಿಯಾದಲ್ಲಿನ ಜನರಲ್ಲಿರುವ ಅಸಂಖ್ಯಾತ ಬುಡಕಟ್ಟುಗಳ ವಿವರಗಳು ಮತ್ತು ಅವರ ನಡುವಿನ ಪರಸ್ಪರ ಸಂಪರ್ಕಗಳ ಕುರಿತು ಸಂಶೋಧನೆ ಮುಂದುವರೆದಿದೆ. ಮ್ಯಾಥ್ಯೂ 8:20 ರ ಅನುವಾದವು 1000 ಪ್ರಕರಣದ ಅಂತ್ಯಗಳ ಉದಾಹರಣೆಗಳನ್ನು ತೋರಿಸುತ್ತದೆ ( ನಾಮಕರಣ ಬಹುವಚನ, ಆಪಾದಿತ ಬಹುವಚನ, ಜೆನಿಟಿವ್ ಏಕವಚನ) ಮತ್ತು ಕ್ರಿಯಾಪದ ಅಂತ್ಯ ( ಪ್ರಸ್ತುತ ಬಹುವಚನ): Fox-as habb-að hol-u and heofon-an fugl-as nest-∅ fox-NOM.PL have-PRS.PL hole-ACC.PL and heaven-GEN.SG bird-NOM.PL nest-ACC.PL "Foxes have holes and the birds of heaven nests" ಮಧ್ಯ ಇಂಗ್ಲೀಷ್ Englischmen þeyz hy hadde fram þe bygynnyng þre manner speche, Souþeron, Northeron, and Myddel speche in þe myddel of þe lond, ... Noþeles by comyxstion and mellyng, furst wiþ Danes, and afterward wiþ Normans, in menye þe contray longage ys asperyed, and som vseþ strange wlaffyng, chyteryng, harryng, and garryng grisbytting.ಆದರೂ ಮೊದಲಿನಿಂದಲೂ, ಆಂಗ್ಲರು ಮಾತನಾಡುವ ಮೂರು ವಿಧಾನಗಳನ್ನು ಹೊಂದಿದ್ದರು, ದೇಶದ ಮಧ್ಯದಲ್ಲಿ ದಕ್ಷಿಣ, ಉತ್ತರ ಮತ್ತು ಮಧ್ಯಭಾಗದ ಮಾತುಗಳು, . . . ಅದೇನೇ ಇದ್ದರೂ, ಮೊದಲು ಡೇನ್ಸ್ ಮತ್ತು ನಂತರ ನಾರ್ಮನ್ನರೊಂದಿಗೆ ಬೆರೆಯುವ ಮತ್ತು ಮಿಶ್ರಣ ಮಾಡುವ ಮೂಲಕ, ಅನೇಕ ದೇಶಗಳಲ್ಲಿ ಭಾಷೆ ಹುಟ್ಟಿಕೊಂಡಿದೆ, ಮತ್ತು ಕೆಲವರು ವಿಚಿತ್ರವಾದ ತೊದಲುವಿಕೆ, ವಟಗುಟ್ಟುವಿಕೆ, ಗೊಣಗುವುದು ಮತ್ತು ತುರಿಯುವ ನಗೆಯನ್ನು ಬಳಸುತ್ತಾರೆ.ಜಾನ್ ಟ್ರೆವಿಸಾ, ಸಿ. 1385 8 ರಿಂದ 12 ನೇ ಶತಮಾನದವರೆಗೆ, ಹಳೆಯ ಇಂಗ್ಲಿಷ್ ಕ್ರಮೇಣ ಭಾಷಾ ಸಂಪರ್ಕದ ಮೂಲಕ ಮಧ್ಯ ಇಂಗ್ಲಿಷ್ ಆಗಿ ರೂಪಾಂತರಗೊಂಡಿತು. 1066 ರಲ್ಲಿ ವಿಲಿಯಂ ದಿ ಕಾಂಕರರ್ ಇಂಗ್ಲೆಂಡನ್ನು ವಶಪಡಿಸಿಕೊಂಡ ನಂತರ ಮಧ್ಯ ಇಂಗ್ಲಿಷನ್ನು ನಿರಂಕುಶವಾಗಿ ವ್ಯಾಖ್ಯಾನಿಸಲಾಗಿದೆ, ಆದರೆ ಇದು 1200 ರಿಂದ 1450 ರ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿಗೊಂಡಿತು. ಮೊದಲನೆಯದಾಗಿ, 8 ನೇ ಮತ್ತು 9 ನೇ ಶತಮಾನಗಳಲ್ಲಿ ಬ್ರಿಟಿಷ್ ದ್ವೀಪಗಳ ಉತ್ತರ ಭಾಗಗಳ ನಾರ್ಸ್ ವಸಾಹತುಶಾಹಿ ಅಲೆಗಳು ಹಳೆಯ ಇಂಗ್ಲಿಷನ್ನು ಉತ್ತರ ಜರ್ಮನಿಕ್ ಭಾಷೆಯಾದ ಓಲ್ಡ್ ನಾರ್ಸ್‌ನೊಂದಿಗೆ ಹೆಚ್ಚು ಸಂಪರ್ಕಕ್ಕೆ ತಂದವು. ನಾರ್ಸ್ ವಸಾಹತುಶಾಹಿಯ ಕೇಂದ್ರವಾಗಿದ್ದ ಯಾರ್ಕ್ ಸುತ್ತಮುತ್ತಲಿನ ಡೇನ್ಲಾವ್ ಪ್ರದೇಶದಲ್ಲಿ ಮಾತನಾಡುವ ಹಳೆಯ ಇಂಗ್ಲಿಷ್‌ನ ಈಶಾನ್ಯ ಪ್ರಭೇದಗಳಲ್ಲಿ ನಾರ್ಸ್ ಪ್ರಭಾವವು ಪ್ರಬಲವಾಗಿತ್ತು; ಇಂದು ಈ ವೈಶಿಷ್ಟ್ಯಗಳು ಇನ್ನೂ ವಿಶೇಷವಾಗಿ ಸ್ಕಾಟ್ಸ್ ಮತ್ತು ಉತ್ತರ ಇಂಗ್ಲಿಷ್‌ನಲ್ಲಿವೆ. ಆದರೂ ನಾರ್ಸಿಫೈಡ್ ಇಂಗ್ಲಿಷ್‌ನ ಕೇಂದ್ರವು ಲಿಂಡ್ಸೆಯ ಸುತ್ತಮುತ್ತಲಿನ ಮಿಡ್‌ಲ್ಯಾಂಡ್ಸ್‌ನಲ್ಲಿದೆ ಎಂದು ತೋರುತ್ತದೆ, ಮತ್ತು 920 CE ನಂತರ ಲಿಂಡ್ಸೆಯನ್ನು ಆಂಗ್ಲೋ-ಸ್ಯಾಕ್ಸನ್ ಪಾಲಿಟಿಗೆ ಮರುಸಂಯೋಜಿಸಿದಾಗ, ನಾರ್ಸ್ ವೈಶಿಷ್ಟ್ಯಗಳು ಅಲ್ಲಿಂದ ನಾರ್ಸ್ ಭಾಷಿಕರೊಂದಿಗೆ ನೇರ ಸಂಪರ್ಕದಲ್ಲಿರದ ಇಂಗ್ಲಿಷ್ ಪ್ರಭೇದಗಳಿಗೆ ಹರಡಿತು. ಎಲ್ಲಾ ಇಂಗ್ಲಿಷ್ ಪ್ರಭೇದಗಳಲ್ಲಿ ಇಂದಿಗೂ ಉಳಿದುಕೊಂಡಿರುವ ನಾರ್ಸ್ ಪ್ರಭಾವದ ಅಂಶವೆಂದರೆ th- ( they ಅವರು, them ಅವರ, their ತಮ್ಮ) ನೊಂದಿಗೆ ಪ್ರಾರಂಭವಾಗುವ ಸರ್ವನಾಮಗಳ ಗುಂಪು, ಇದು ಆಂಗ್ಲೋ-ಸ್ಯಾಕ್ಸನ್ ಸರ್ವನಾಮಗಳನ್ನು ನೊಂದಿಗೆ ಬದಲಾಯಿಸಿತು.() ಇತರ ಕೋರ್ ನಾರ್ಸ್ ಎರವಲು ಪದಗಳು "ಕೊಡು", "ಗೆಟ್", "ಸ್ಕೈ", "ಸ್ಕರ್ಟ್", "ಎಗ್" ಮತ್ತು "ಕೇಕ್" ಅನ್ನು ಒಳಗೊಂಡಿವೆ, ಸಾಮಾನ್ಯವಾಗಿ ಸ್ಥಳೀಯ ಆಂಗ್ಲೋ-ಸ್ಯಾಕ್ಸನ್ ಸಮಾನತೆಯನ್ನು ಸ್ಥಳಾಂತರಿಸಲಾಗಿದೆ. 1066 ರಲ್ಲಿ ಇಂಗ್ಲೆಂಡಿನ ನಾರ್ಮನ್ ವಿಜಯದೊಂದಿಗೆ, ಈಗ-ನಾರ್ಸಿಫೈಡ್ ಹಳೆಯ ಇಂಗ್ಲಿಷ್ ಭಾಷೆಯು ಹಳೆಯ ಫ್ರೆಂಚ್ ಜೊತೆಗೆ ನಿರ್ದಿಷ್ಟವಾಗಿ ಹಳೆಯ ನಾರ್ಮನ್ ಉಪಭಾಷೆಯೊಂದಿಗೆ ಸಂಪರ್ಕಕ್ಕೆ ಒಳಪಟ್ಟಿತು. ಇಂಗ್ಲೆಂಡಿನಲ್ಲಿ ನಾರ್ಮನ್ ಭಾಷೆ ಅಂತಿಮವಾಗಿ ಆಂಗ್ಲೋ-ನಾರ್ಮನ್ ಆಗಿ ಅಭಿವೃದ್ಧಿ ಹೊಂದಿತು. ನಾರ್ಮನ್ ಅನ್ನು ಪ್ರಾಥಮಿಕವಾಗಿ ಗಣ್ಯರು ಮತ್ತು ಶ್ರೀಮಂತರು ಮಾತನಾಡುವ ಕಾರಣ, ಕೆಳವರ್ಗದವರು ಆಂಗ್ಲೋ-ಸ್ಯಾಕ್ಸನ್ (ಇಂಗ್ಲಿಷ್) ಮಾತನಾಡುವುದನ್ನು ಮುಂದುವರೆಸಿದರು, ನಾರ್ಮನ್‌ನ ಮುಖ್ಯ ಪ್ರಭಾವವೆಂದರೆ ರಾಜಕೀಯ, ಶಾಸನ ಮತ್ತು ಪ್ರತಿಷ್ಠಿತ ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದ ವ್ಯಾಪಕ ಶ್ರೇಣಿಯ ಎರವಲು ಪದಗಳ ಪರಿಚಯವಾಗಿದೆ. ಮಧ್ಯ ಇಂಗ್ಲೀಷ್ ಕೂಡ ವಿಭಕ್ತಿ ವ್ಯವಸ್ಥೆಯನ್ನು ಹೆಚ್ಚು ಸರಳಗೊಳಿಸಿತು, ಬಹುಶಃ ಹಳೆಯ ನಾರ್ಸ್ ಮತ್ತು ಹಳೆಯ ಇಂಗ್ಲಿಷ್ ಅನ್ನು ಸಮನ್ವಯಗೊಳಿಸಲು, ಅವು ವಿಭಕ್ತಿಯಿಂದ ವಿಭಿನ್ನವಾಗಿವೆ ಆದರೆ ರೂಪವಿಜ್ಞಾನದಲ್ಲಿ ಹೋಲುತ್ತವೆ. ವೈಯಕ್ತಿಕ ಸರ್ವನಾಮಗಳನ್ನು ಹೊರತುಪಡಿಸಿ ನಾಮಕರಣ ಮತ್ತು ಆಪಾದಿತ ಪ್ರಕರಣಗಳ ನಡುವಿನ ವ್ಯತ್ಯಾಸವು ಕಳೆದುಹೋಗಿದೆ, ಸಾಧನಭೂತ ಪ್ರಕರಣವನ್ನು ಕೈಬಿಡಲಾಯಿತು ಮತ್ತು ವಂಶವಾಹಿ ಪ್ರಕರಣದ ಬಳಕೆಯು ಸ್ವಾಧೀನವನ್ನು ಸೂಚಿಸಲು ಸೀಮಿತವಾಗಿದೆ. ವಿಭಕ್ತಿ ವ್ಯವಸ್ಥೆಯು ಅನೇಕ ಅನಿಯಮಿತ ವಿಭಕ್ತಿ ರೂಪಗಳನ್ನು ಕ್ರಮಬದ್ಧಗೊಳಿಸಿತು, ಮತ್ತು ಕ್ರಮೇಣ ಒಪ್ಪಂದದ ವ್ಯವಸ್ಥೆಯನ್ನು ಸರಳಗೊಳಿಸಿತು, ಪದ ಕ್ರಮವನ್ನು ಕಡಿಮೆ ಹೊಂದಿಕೊಳ್ಳುವಂತೆ ಮಾಡಿತು. 1380 ರ ವೈಕ್ಲಿಫ್ ಬೈಬಲ್‌ನಲ್ಲಿ ಮ್ಯಾಥ್ಯೂ 8:20 ಪದ್ಯವನ್ನು ಬರೆಯಲಾಗಿದೆ: . ಇಲ್ಲಿ ಬಹುವಚನ ಪ್ರತ್ಯಯ have ಕ್ರಿಯಾಪದವು ಇನ್ನೂ ಉಳಿಸಿಕೊಂಡಿದೆ, ಆದರೆ ನಾಮಪದಗಳ ಮೇಲೆ ಯಾವುದೇ ಪ್ರಕರಣದ ಅಂತ್ಯಗಳು ಇರುವುದಿಲ್ಲ. 12 ನೇ ಶತಮಾನದ ವೇಳೆಗೆ ಮಧ್ಯ ಇಂಗ್ಲೀಷ್ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿತು, ನಾರ್ಸ್ ಮತ್ತು ಫ್ರೆಂಚ್ ವೈಶಿಷ್ಟ್ಯಗಳನ್ನು ಸಂಯೋಜಿಸುತ್ತದೆ; 1500 ರ ಸುಮಾರಿಗೆ ಆರಂಭಿಕ ಆಧುನಿಕ ಇಂಗ್ಲಿಷ್‌ಗೆ ಪರಿವರ್ತನೆಯಾಗುವವರೆಗೂ ಇದು ಮಾತನಾಡುತ್ತಲೇ ಇತ್ತು. ಮಧ್ಯ ಇಂಗ್ಲೀಷ್ ಸಾಹಿತ್ಯವು ಜೆಫ್ರಿ ಚೌಸರ್ ಅವರ ದಿ ಕ್ಯಾಂಟರ್ಬರಿ ಟೇಲ್ಸ್ ಮತ್ತು ಥಾಮಸ್ ಮಾಲೋರಿಯ ಲೆ ಮೋರ್ಟೆ ಡಿ'ಆರ್ಥರ್ ಅನ್ನು ಒಳಗೊಂಡಿದೆ. ಮಧ್ಯ ಇಂಗ್ಲೀಷ್ ಅವಧಿಯಲ್ಲಿ, ಬರವಣಿಗೆಯಲ್ಲಿ ಪ್ರಾದೇಶಿಕ ಉಪಭಾಷೆಗಳ ಬಳಕೆಯು ಹೆಚ್ಚಾಯಿತು ಮತ್ತು ಚಾಸರ್‌ನಂತಹ ಲೇಖಕರಿಂದ ಪ್ರಭಾವಕ್ಕಾಗಿ ಉಪಭಾಷೆಯ ಲಕ್ಷಣಗಳನ್ನು ಸಹ ಬಳಸಲಾಯಿತು. ಆರಂಭಿಕ ಆಧುನಿಕ ಇಂಗ್ಲೀಷ್ ಇಂಗ್ಲಿಷ್ ಇತಿಹಾಸದಲ್ಲಿ ಮುಂದಿನ ಅವಧಿಯು ಅರ್ಲಿ ಮಾಡರ್ನ್ ಇಂಗ್ಲಿಷ್ (1500-1700). ಆರಂಭದಲ್ಲಿ ಆಧುನಿಕ ಇಂಗ್ಲಿಷ್‌ನ್ನು ಸ್ವರ ಬದಲಾವಣೆ (1350-1700), ವಿಭಕ್ತಿಯ ಸರಳೀಕರಣ ಮತ್ತು ಭಾಷಾ ಪ್ರಮಾಣೀಕರಣದಿಂದ ನಿರೂಪಿಸಲಾಗಿದೆ. ದೊಡ್ಡ ಸ್ವರ ಬದಲಾವಣೆಯು ಮಧ್ಯಮ ಇಂಗ್ಲಿಷ್‌ನ ಒತ್ತಡದ ದೀರ್ಘ ಸ್ವರಗಳ ಮೇಲೆ ಪರಿಣಾಮ ಬೀರಿತು. ಇದು ಸರಣಿ ಬದಲಾವಣೆ ಆಗಿತ್ತು, ಅಂದರೆ ಪ್ರತಿ ಬದಲಾವಣೆ ಸ್ವರ ವ್ಯವಸ್ಥೆಯಲ್ಲಿ ನಂತರದ ಬದಲಾವಣೆಯನ್ನು ಪ್ರಚೋದಿಸುತ್ತದೆ. ಮಧ್ಯ ಮತ್ತು ಮುಕ್ತ ಸ್ವರಗಳನ್ನು ಎತ್ತಲಾಯಿತು ಮತ್ತು ನಿಕಟ ಸ್ವರಗಳನ್ನು ಸಂಯುಕ್ತ ಸ್ವರಗಳಾಗಿ ವಿಭಜಿಸಲಾಗಿದೆ. ಉದಾಹರಣೆಗೆ, bite ಬೈಟ್ ಪದವನ್ನು ಮೂಲತಃ ಇಂದು beet ಬೀಟ್ ಎಂಬ ಪದವಾಗಿ ಉಚ್ಚರಿಸಲಾಗುತ್ತದೆ ಮತ್ತು ಎರಡನೇ ಸ್ವರವನ್ನು ಇಂದು ಬೂಟ್ ಎಂಬ ಪದವಾಗಿ ಉಚ್ಚರಿಸಲಾಗುತ್ತದೆ. ಮಧ್ಯ ಇಂಗ್ಲಿಷ್‌ನಿಂದ ಇಂಗ್ಲಿಷ್ ಅನೇಕ ಕಾಗುಣಿತಗಳನ್ನು ಉಳಿಸಿಕೊಂಡಿರುವುದರಿಂದ ದೊಡ್ಡ ಸ್ವರ ಬದಲಾವಣೆ ಕಾಗುಣಿತದಲ್ಲಿನ ಅನೇಕ ಅಕ್ರಮಗಳನ್ನು ವಿವರಿಸುತ್ತದೆ ಮತ್ತು ಇಂಗ್ಲಿಷ್ ಸ್ವರ ಅಕ್ಷರಗಳು ಇತರ ಭಾಷೆಗಳಲ್ಲಿನ ಒಂದೇ ಅಕ್ಷರಗಳಿಂದ ಏಕೆ ವಿಭಿನ್ನ ಉಚ್ಚಾರಣೆಗಳನ್ನು ಹೊಂದಿವೆ ಎಂಬುದನ್ನು ವಿವರಿಸುತ್ತದೆ. ಹೆನ್ರಿ ವಿ ಆಳ್ವಿಕೆಯಲ್ಲಿ ನಾರ್ಮನ್ ಫ್ರೆಂಚ್‌ಗೆ ಹೋಲಿಸಿದರೆ ಇಂಗ್ಲಿಷ್ ಪ್ರತಿಷ್ಠೆಗೆ ಏರಲು ಪ್ರಾರಂಭಿಸಿತು. 1430 ರ ಸುಮಾರಿಗೆ, ವೆಸ್ಟ್‌ಮಿನಿಸ್ಟರ್‌ನಲ್ಲಿರುವ ಕೋರ್ಟ್ ಆಫ್ ಚಾನ್ಸರಿ ತನ್ನ ಅಧಿಕೃತ ದಾಖಲೆಗಳಲ್ಲಿ ಇಂಗ್ಲಿಷ್ ಅನ್ನು ಬಳಸಲಾರಂಭಿಸಿತು ಮತ್ತು ಲಂಡನ್ ಮತ್ತು ಈಸ್ಟ್ ಮಿಡ್‌ಲ್ಯಾಂಡ್ಸ್‌ನ ಉಪಭಾಷೆಗಳಿಂದ ಅಭಿವೃದ್ಧಿಪಡಿಸಿದ ಚಾನ್ಸೆರಿ ಸ್ಟ್ಯಾಂಡರ್ಡ್ ಎಂದು ಕರೆಯಲ್ಪಡುವ ಮಧ್ಯ ಇಂಗ್ಲಿಷ್‌ನ ಹೊಸ ಪ್ರಮಾಣಿತ ರೂಪ ಆಗಿತ್ತು. 1476 ರಲ್ಲಿ, ವಿಲಿಯಂ ಕ್ಯಾಕ್ಸ್‌ಟನ್ ಇಂಗ್ಲೆಂಡ್‌ಗೆ ಮುದ್ರಣಾಲಯವನ್ನು ಪರಿಚಯಿಸಿದರು ಮತ್ತು ಲಂಡನ್‌ನಲ್ಲಿ ಮೊದಲ ಮುದ್ರಿತ ಪುಸ್ತಕಗಳನ್ನು ಪ್ರಕಟಿಸಲು ಪ್ರಾರಂಭಿಸಿದರು, ಹೀಗೆ ಇಂಗ್ಲಿಷ್‌ನ ಪ್ರಭಾವವನ್ನು ವಿಸ್ತರಿಸಿದರು. ಪ್ರಾರಂಭದ ಆಧುನಿಕ ಅವಧಿಯ ಸಾಹಿತ್ಯವು ವಿಲಿಯಂ ಷೇಕ್ಸ್‌ಪಿಯರ್‌ನ ಕೃತಿಗಳನ್ನು ಮತ್ತು ಕಿಂಗ್ ಜೇಮ್ಸ್ I ನಿಂದ ನಿಯೋಜಿಸಲ್ಪಟ್ಟ ಬೈಬಲ್‌ನ ಅನುವಾದವನ್ನು ಒಳಗೊಂಡಿದೆ. ಸ್ವರ ಬದಲಾವಣೆಯ ನಂತರವೂ ಭಾಷೆಯು ಆಧುನಿಕ ಇಂಗ್ಲಿಷ್‌ನಿಂದ ವಿಭಿನ್ನವಾಗಿ ಧ್ವನಿಸುತ್ತದೆ: ಉದಾಹರಣೆಗೆ, knight ನೈಟ್, gnat ಗ್ನಾಟ್ ಮತ್ತು sword ಸೋರ್ಡ್ ವ್ಯಂಜನ ಸಮೂಹಗಳು ಇನ್ನೂ ಉಚ್ಚರಿಸಲಾಗುತ್ತಿದೆ. ಆಧುನಿಕ ಓದುಗನು ಷೇಕ್ಸ್‌ಪಿಯರ್‌ನ ವಿಲಕ್ಷಣ ಅಥವಾ ಪುರಾತನವೆಂದು ಕಂಡುಕೊಳ್ಳುವ ಅನೇಕ ವ್ಯಾಕರಣದ ವೈಶಿಷ್ಟ್ಯಗಳು ಆರಂಭಿಕ ಆಧುನಿಕ ಇಂಗ್ಲಿಷ್‌ನ ವಿಶಿಷ್ಟ ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತವೆ. ಅರ್ಲಿ ಮಾಡರ್ನ್ ಇಂಗ್ಲಿಷ್‌ನಲ್ಲಿ ಬರೆಯಲಾದ 1611 ರ ಬೈಬಲ್‌ನ ಕಿಂಗ್ ಜೇಮ್ಸ್ ಆವೃತ್ತಿಯಲ್ಲಿ, ಮ್ಯಾಥ್ಯೂ 8:20 ಹೇಳುತ್ತದೆ, "ನರಿಗಳು ರಂಧ್ರಗಳನ್ನು ಮತ್ತು ಐರೆ ಹಾಯು ಪಕ್ಷಿಗಳು ಗೂಡುಗಳನ್ನು ಹೊಂದಿವೆ." ಇದು ಪ್ರಕರಣದ ನಷ್ಟ ಮತ್ತು ವಾಕ್ಯ ರಚನೆಯ ಮೇಲೆ ಅದರ ಪರಿಣಾಮಗಳನ್ನು (ವಿಷಯ-ಕ್ರಿಯಾಪದ-ವಸ್ತುವಿನ ಪದ ಕ್ರಮದೊಂದಿಗೆ ಬದಲಾಯಿಸುವುದು, ಮತ್ತು ಸ್ವಾಮ್ಯವಿಲ್ಲದ ಜೆನಿಟಿವ್ ಬದಲಿಗೆ ಬಳಕೆ ), ಮತ್ತು ಫ್ರೆಂಚ್ ( ಐರೆ ) ನಿಂದ ಮತ್ತು ಪದ ಬದಲಿಗಳು ಎರವಲು ಪದಗಳ ಪರಿಚಯವನ್ನು ಉದಾಹರಿಸುತ್ತದೆ.(ಪಕ್ಷಿ ಮೂಲತಃ "nestling ನೆಸ್ಲಿಂಗ್" ಎಂದರ್ಥ OE fugol ಫುಗೋಲ್ ಅನ್ನು ಬದಲಿಸಿದೆ). ಆಧುನಿಕ ಇಂಗ್ಲೀಷ್ ಹರಡುವಿಕೆ 18 ನೇ ಶತಮಾನದ ಅಂತ್ಯದ ವೇಳೆಗೆ, ಬ್ರಿಟಿಷ್ ಸಾಮ್ರಾಜ್ಯವು ತನ್ನ ವಸಾಹತುಗಳು ಮತ್ತು ಭೂರಾಜಕೀಯ ಪ್ರಾಬಲ್ಯದ ಮೂಲಕ ಇಂಗ್ಲಿಷ್ ಅನ್ನು ಹರಡಿತು. ವಾಣಿಜ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ರಾಜತಾಂತ್ರಿಕತೆ, ಕಲೆ ಮತ್ತು ಔಪಚಾರಿಕ ಶಿಕ್ಷಣವು ಇಂಗ್ಲಿಷ್ ಮೊದಲ ನಿಜವಾದ ಜಾಗತಿಕ ಭಾಷೆಯಾಗಲು ಕೊಡುಗೆ ನೀಡಿದೆ. ಇಂಗ್ಲಿಷ್ ವಿಶ್ವಾದ್ಯಂತ ಅಂತರರಾಷ್ಟ್ರೀಯ ಸಂವಹನವನ್ನು ಸಹ ಸುಗಮಗೊಳಿಸಿತು. ಇಂಗ್ಲೆಂಡ್ ಹೊಸ ವಸಾಹತುಗಳನ್ನು ರಚಿಸುವುದನ್ನು ಮುಂದುವರೆಸಿತು, ಮತ್ತು ಇವುಗಳು ನಂತರ ಭಾಷಣ ಮತ್ತು ಬರವಣಿಗೆಗೆ ತಮ್ಮದೇ ಆದ ರೂಢಿಗಳನ್ನು ಅಭಿವೃದ್ಧಿಪಡಿಸಿದವು. ಉತ್ತರ ಅಮೆರಿಕಾದ ಭಾಗಗಳು, ಆಫ್ರಿಕಾದ ಭಾಗಗಳು, ಓಷಿಯಾನಿಯಾ ಮತ್ತು ಇತರ ಹಲವು ಪ್ರದೇಶಗಳಲ್ಲಿ ಇಂಗ್ಲಿಷ್ ಅನ್ನು ಅಳವಡಿಸಿಕೊಳ್ಳಲಾಯಿತು. ಅವರು ರಾಜಕೀಯ ಸ್ವಾತಂತ್ರ್ಯವನ್ನು ಪಡೆದಾಗ, ಬಹು ಸ್ಥಳೀಯ ಭಾಷೆಗಳನ್ನು ಹೊಂದಿದ್ದ ಕೆಲವು ಹೊಸ ಸ್ವತಂತ್ರ ರಾಜ್ಯಗಳು ಯಾವುದೇ ಒಂದು ಸ್ಥಳೀಯ ಭಾಷೆಯನ್ನು ಇತರರಿಗಿಂತ ಹೆಚ್ಚು ಪ್ರಚಾರ ಮಾಡುವಲ್ಲಿ ಅಂತರ್ಗತವಾಗಿರುವ ರಾಜಕೀಯ ಮತ್ತು ಇತರ ತೊಂದರೆಗಳನ್ನು ತಪ್ಪಿಸಲು ಇಂಗ್ಲಿಷನ್ನು ಅಧಿಕೃತ ಭಾಷೆಯಾಗಿ ಬಳಸುವುದನ್ನು ಮುಂದುವರಿಸಲು ನಿರ್ಧರಿಸಿದವು. 20 ನೇ ಶತಮಾನದಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಬೆಳೆಯುತ್ತಿರುವ ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಭಾವ ಮತ್ತು ಎರಡನೆಯ ಮಹಾಯುದ್ಧದ ನಂತರ ಸೂಪರ್ ಪವರ್ ಆಗಿ ಅದರ ಸ್ಥಾನಮಾನವು BBC ಮತ್ತು ಇತರರಿಂದ ಇಂಗ್ಲಿಷ್‌ನಲ್ಲಿ ವಿಶ್ವಾದ್ಯಂತ ಪ್ರಸಾರವನ್ನು ಹೊಂದಿದೆ. ಪ್ರಸಾರಕರು, ಭಾಷೆಯು ಗ್ರಹದಾದ್ಯಂತ ಹೆಚ್ಚು ವೇಗವಾಗಿ ಹರಡಲು ಕಾರಣವಾಯಿತು. 21 ನೇ ಶತಮಾನದಲ್ಲಿ, ಇಂಗ್ಲಿಷನ್ನು ಯಾವುದೇ ಭಾಷೆಗಿಂತ ಹೆಚ್ಚು ವ್ಯಾಪಕವಾಗಿ ಮಾತನಾಡಲಾಗುತ್ತದೆ ಮತ್ತು ಬರೆಯಲಾಗುತ್ತದೆ. ಆಧುನಿಕ ಇಂಗ್ಲಿಷ್ ಅಭಿವೃದ್ಧಿಯಾದಂತೆ, ಪ್ರಮಾಣಿತ ಬಳಕೆಗೆ ಸ್ಪಷ್ಟವಾದ ರೂಢಿಗಳನ್ನು ಪ್ರಕಟಿಸಲಾಯಿತು ಮತ್ತು ಸಾರ್ವಜನಿಕ ಶಿಕ್ಷಣ ಮತ್ತು ರಾಜ್ಯ-ಪ್ರಾಯೋಜಿತ ಪ್ರಕಟಣೆಗಳಂತಹ ಅಧಿಕೃತ ಮಾಧ್ಯಮಗಳ ಮೂಲಕ ಹರಡಿತು. 1755 ರಲ್ಲಿ ಸ್ಯಾಮ್ಯುಯೆಲ್ ಜಾನ್ಸನ್ ಅವರ ಎ ಡಿಕ್ಷನರಿ ಆಫ್ ದಿ ಇಂಗ್ಲಿಷ್ ಲಾಂಗ್ವೇಜ್ ಅನ್ನು ಪ್ರಕಟಿಸಿದರು, ಇದು ಪದಗಳ ಪ್ರಮಾಣಿತ ಕಾಗುಣಿತಗಳು ಮತ್ತು ಬಳಕೆಯ ರೂಢಿಗಳನ್ನು ಪರಿಚಯಿಸಿತು. 1828 ರಲ್ಲಿ, ನೋಹ್ ವೆಬ್‌ಸ್ಟರ್ ಇಂಗ್ಲಿಷ್ ಭಾಷೆಯ ಅಮೇರಿಕನ್ ನಿಘಂಟನ್ನು ಪ್ರಕಟಿಸಿದರು, ಇದು ಬ್ರಿಟಿಷ್ ಮಾನದಂಡದಿಂದ ಸ್ವತಂತ್ರವಾದ ಅಮೇರಿಕನ್ ಇಂಗ್ಲಿಷ್ ಮಾತನಾಡಲು ಮತ್ತು ಬರೆಯಲು ರೂಢಿಯನ್ನು ಸ್ಥಾಪಿಸಲು ಪ್ರಯತ್ನಿಸಿತು. ಬ್ರಿಟನ್‌ನೊಳಗೆ, ಪ್ರಮಾಣಿತವಲ್ಲದ ಅಥವಾ ಕೆಳವರ್ಗದ ಉಪಭಾಷೆಯ ವೈಶಿಷ್ಟ್ಯಗಳು ಹೆಚ್ಚು ಕಳಂಕಿತವಾಗಿದ್ದು, ಮಧ್ಯಮ ವರ್ಗದವರಲ್ಲಿ ಪ್ರತಿಷ್ಠೆಯ ಪ್ರಭೇದಗಳ ತ್ವರಿತ ಹರಡುವಿಕೆಗೆ ಕಾರಣವಾಯಿತು. ಆಧುನಿಕ ಇಂಗ್ಲಿಷ್‌ನಲ್ಲಿ, ವ್ಯಾಕರಣ ಪ್ರಕರಣದ ಕೊರತೆಯು ಬಹುತೇಕ ಪೂರ್ಣಗೊಂಡಿದೆ (ಇದು ಈಗ ಸರ್ವನಾಮಗಳಲ್ಲಿ ಮಾತ್ರ ಕಂಡುಬರುತ್ತದೆ, ಉದಾಹರಣೆಗೆ he ಅವನು ಮತ್ತು him ಅವನನ್ನು, she ಅವಳು ಮತ್ತು her ಅವಳನ್ನು, who ಯಾರು ಮತ್ತು whom ಯಾರನ್ನು ), ಮತ್ತು SVO ಪದ ಕ್ರಮವನ್ನು ಹೆಚ್ಚಾಗಿ ನಿಗದಿಪಡಿಸಲಾಗಿದೆ. do-support ಮಾಡು-ಬೆಂಬಲದ ಬಳಕೆಯಂತಹ ಕೆಲವು ಬದಲಾವಣೆಗಳು ಸಾರ್ವತ್ರಿಕವಾಗಿವೆ. (ಹಿಂದಿನ ಇಂಗ್ಲಿಷ್ ಆಧುನಿಕ ಇಂಗ್ಲಿಷ್‌ನಂತೆ "ಮಾಡು" ಎಂಬ ಪದವನ್ನು ಸಾಮಾನ್ಯ ಸಹಾಯಕವಾಗಿ ಬಳಸಲಿಲ್ಲ; ಮೊದಲಿಗೆ ಇದನ್ನು ಪ್ರಶ್ನಾರ್ಥಕ ರಚನೆಗಳಲ್ಲಿ ಮಾತ್ರ ಬಳಸಲಾಗುತ್ತಿತ್ತು ಮತ್ತು ನಂತರವೂ ಸಹ ಕಡ್ಡಾಯವಾಗಿರಲಿಲ್ಲ. ಈಗ, ಕ್ರಿಯಾಪದದೊಂದಿಗೆ ಮಾಡು-ಬೆಂಬಲ ಹೆಚ್ಚು ಪ್ರಮಾಣಿತವಾಗುತ್ತಿದೆ.) -ing ನಲ್ಲಿ ಪ್ರಗತಿಶೀಲ ರೂಪಗಳ ಬಳಕೆಯು ಹೊಸ ನಿರ್ಮಾಣಗಳಿಗೆ ಹರಡುತ್ತಿರುವಂತೆ ತೋರುತ್ತಿದೆ ಮತ್ತು ನಿರ್ಮಿಸಲಾಗುತ್ತಿರುವಂತಹ ರೂಪಗಳು ಹೆಚ್ಚು ಸಾಮಾನ್ಯವಾಗುತ್ತಿವೆ. ಅನಿಯಮಿತ ರೂಪಗಳ ಕ್ರಮಬದ್ಧಗೊಳಿಸುವಿಕೆಯು ನಿಧಾನವಾಗಿ ಮುಂದುವರಿಯುತ್ತದೆ (ಉದಾಹರಣೆಗೆ ಕನಸು ಕಾಣುವ ಬದಲು ಕನಸು ಕಂಡಿತು ), ಮತ್ತು ವಿಭಕ್ತಿಯ ರೂಪಗಳಿಗೆ ವಿಶ್ಲೇಷಣಾತ್ಮಕ ಪರ್ಯಾಯಗಳು ಹೆಚ್ಚು ಸಾಮಾನ್ಯವಾಗುತ್ತಿವೆ. (ಉದಾಹರಣೆಗೆ politer ಶಿಷ್ಟಾಚಾರ ಬದಲಿಗೆ more polite ಹೆಚ್ಚುಶಿಷ್ಟ ). ಅಮೇರಿಕನ್ ಇಂಗ್ಲಿಷ್‌ನ ಪ್ರಭಾವದ ಅಡಿಯಲ್ಲಿ ಬ್ರಿಟಿಷ್ ಇಂಗ್ಲಿಷ್ ಕೂಡ ಬದಲಾವಣೆಗೆ ಒಳಗಾಗುತ್ತಿದೆ, ಮಾಧ್ಯಮದಲ್ಲಿ ಅಮೇರಿಕನ್ ಇಂಗ್ಲಿಷ್‌ನ ಪ್ರಬಲ ಉಪಸ್ಥಿತಿ ಮತ್ತು ವಿಶ್ವ ಶಕ್ತಿಯಾಗಿ US ಗೆ ಸಂಬಂಧಿಸಿದ ಪ್ರತಿಷ್ಠೆಯಿಂದ ಉತ್ತೇಜಿಸಲ್ಪಟ್ಟಿದೆ. ಭೌಗೋಳಿಕ ವಿತರಣೆ 2016 ರ ಹೊತ್ತಿಗೆ, 400 ಮಿಲಿಯನ್ ಜನರು ಇಂಗ್ಲಿಷನ್ನು ತಮ್ಮ ಮೊದಲ ಭಾಷೆಯಾಗಿ ಮಾತನಾಡುತ್ತಾರೆ ಮತ್ತು 1.1 ಬಿಲಿಯನ್ ಜನರು ಅದನ್ನು ದ್ವಿತೀಯ ಭಾಷೆಯಾಗಿ ಮಾತನಾಡುತ್ತಾರೆ. ಮಾತನಾಡುವವರ ಸಂಖ್ಯೆಯಿಂದ ಇಂಗ್ಲಿಷ್ ದೊಡ್ಡ ಭಾಷೆಯಾಗಿದೆ. ಪ್ರತಿಯೊಂದು ಖಂಡದ ಸಮುದಾಯಗಳು ಮತ್ತು ಎಲ್ಲಾ ಪ್ರಮುಖ ಸಾಗರಗಳಲ್ಲಿನ ದ್ವೀಪಗಳಲ್ಲಿ ಇಂಗ್ಲಿಷ್ ಮಾತನಾಡುತ್ತಾರೆ. ಇಂಗ್ಲಿಷ್ ಮಾತನಾಡುವ ದೇಶಗಳನ್ನು ಪ್ರತಿ ದೇಶದಲ್ಲಿ ಇಂಗ್ಲಿಷ್ ಹೇಗೆ ಬಳಸಲಾಗುತ್ತದೆ ಎಂಬುದರ ಪ್ರಕಾರ ವಿವಿಧ ವರ್ಗಗಳಾಗಿ ವರ್ಗೀಕರಿಸಬಹುದು. "ಆಂತರಿಕ ವಲಯ" ದೇಶಗಳು ಇಂಗ್ಲಿಷ್‌ನ ಅನೇಕ ಮಾತೃಭಾಷೆಯನ್ನು ಹೊಂದಿರುವ ದೇಶಗಳು ಲಿಖಿತ ಇಂಗ್ಲಿಷ್‌ನ ಅಂತರರಾಷ್ಟ್ರೀಯ ಗುಣಮಟ್ಟವನ್ನು ಹಂಚಿಕೊಳ್ಳುತ್ತವೆ ಮತ್ತು ಪ್ರಪಂಚದಾದ್ಯಂತ ಇಂಗ್ಲಿಷ್‌ಗಾಗಿ ಮಾತಿನ ರೂಢಿಗಳನ್ನು ಜಂಟಿಯಾಗಿ ಪ್ರಭಾವಿಸುತ್ತವೆ. ಇಂಗ್ಲಿಷ್ ಕೇವಲ ಒಂದು ದೇಶಕ್ಕೆ ಸೇರಿಲ್ಲ, ಮತ್ತು ಇದು ಇಂಗ್ಲಿಷ್ ವಸಾಹತುಗಾರರ ವಂಶಸ್ಥರಿಗೆ ಮಾತ್ರ ಸೇರಿಲ್ಲ. ಇಂಗ್ಲಿಷ್ ಸ್ಥಳೀಯ ಭಾಷಿಕರ ಕೆಲವು ವಂಶಸ್ಥರಿಂದ ಜನಸಂಖ್ಯೆ ಹೊಂದಿರುವ ದೇಶಗಳ ಅಧಿಕೃತ ಭಾಷೆಯಾಗಿದೆ. ಯಾವುದೇ ಸ್ಥಳೀಯ ಭಾಷೆಯನ್ನು ಹಂಚಿಕೊಳ್ಳದ ಜನರು ಜಗತ್ತಿನಲ್ಲಿ ಎಲ್ಲಿಯೂ ಭೇಟಿಯಾಗದಿದ್ದಾಗ ಇದು ಅಂತರರಾಷ್ಟ್ರೀಯ ಸಂವಹನದ ಪ್ರಮುಖ ಭಾಷೆಯಾಗಿದೆ. ಇಂಗ್ಲಿಷ್ ಮಾತನಾಡುವ ದೇಶಗಳ ಮೂರು ವಲಯಗಳು ಭಾರತೀಯ ಭಾಷಾಶಾಸ್ತ್ರಜ್ಞ ಬ್ರಜ್ ಕಚ್ರು ಮೂರು ವಲಯಗಳ ಮಾದರಿಯೊಂದಿಗೆ ಇಂಗ್ಲಿಷ್ ಮಾತನಾಡುವ ದೇಶಗಳನ್ನು ಗುರುತಿಸಿದ್ದಾರೆ. ಅವರ ಮಾದರಿಯಲ್ಲಿ, "ಆಂತರಿಕ ವಲಯ" - ದೇಶಗಳು ಇಂಗ್ಲಿಷ್ ಭಾಷೆಯನ್ನು ಮಾತನಾಡುವ ದೊಡ್ಡ ಸಮುದಾಯಗಳನ್ನು ಹೊಂದಿವೆ, "ಹೊರ ವಲಯ" - ದೇಶಗಳು ಇಂಗ್ಲಿಷ್ ಭಾಷೆಯನ್ನು ಮಾತನಾಡುವ ಸಣ್ಣ ಸಮುದಾಯಗಳನ್ನು ಹೊಂದಿವೆ ಆದರೆ ಶಿಕ್ಷಣ ಅಥವಾ ಪ್ರಸಾರದಲ್ಲಿ ಅಥವಾ ಸ್ಥಳೀಯ ಅಧಿಕೃತ ಉದ್ದೇಶಗಳಿಗಾಗಿ ಇಂಗ್ಲಿಷನ್ನು ಎರಡನೇ ಭಾಷೆಯಾಗಿ ವ್ಯಾಪಕವಾಗಿ ಬಳಸುತ್ತಾರೆ, ಮತ್ತು "ವಿಸ್ತರಿಸುವ ವಲಯ" - ದೇಶಗಳು ಅನೇಕ ಜನರು ಇಂಗ್ಲಿಷನ್ನು ವಿದೇಶಿ ಭಾಷೆಯಾಗಿ ಕಲಿಯುವ ದೇಶಗಳಾಗಿವೆ. ಕಚ್ರು ತಮ್ಮ ಮಾದರಿಯನ್ನು ವಿವಿಧ ದೇಶಗಳಲ್ಲಿ ಇಂಗ್ಲಿಷ್ ಹೇಗೆ ಹರಡಿತು, ಬಳಕೆದಾರರು ಇಂಗ್ಲಿಷನ್ನು ಹೇಗೆ ಪಡೆದುಕೊಳ್ಳುತ್ತಾರೆ ಮತ್ತು ಪ್ರತಿ ದೇಶದಲ್ಲಿ ಇಂಗ್ಲಿಷ್ ಬಳಸುವ ವ್ಯಾಪ್ತಿಯನ್ನು ಆಧರಿಸಿದ್ದಾರೆ. ಮೂರು ವಲಯಗಳು ಕಾಲಾನಂತರದಲ್ಲಿ ಸದಸ್ಯತ್ವವನ್ನು ಬದಲಾಯಿಸುತ್ತವೆ. ಇಂಗ್ಲಿಷ್ (ಆಂತರಿಕ ವಲಯ) ಮಾತೃಭಾಷೆಯ ದೊಡ್ಡ ಸಮುದಾಯಗಳನ್ನು ಹೊಂದಿರುವ ದೇಶಗಳಲ್ಲಿ ಬ್ರಿಟನ್, ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ಸೇರಿವೆ, ಅಲ್ಲಿ ಹೆಚ್ಚಿನವರು ಇಂಗ್ಲಿಷ್ ಮಾತನಾಡುತ್ತಾರೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಗಮನಾರ್ಹ ಅಲ್ಪಸಂಖ್ಯಾತರು ಇಂಗ್ಲಿಷ್ ಮಾತನಾಡುತ್ತಾರೆ. ಹೆಚ್ಚು ಸ್ಥಳೀಯ ಇಂಗ್ಲಿಷ್ ಮಾತನಾಡುವ ದೇಶಗಳೆಂದರೆ, ಅವರೋಹಣ ಕ್ರಮದಲ್ಲಿ, ಯುನೈಟೆಡ್ ಸ್ಟೇಟ್ಸ್ (ಕನಿಷ್ಠ 231 ಮಿಲಿಯನ್), ಯುನೈಟೆಡ್ ಕಿಂಗ್‌ಡಮ್ (60 ಮಿಲಿಯನ್), ಕೆನಡಾ (19 ಮಿಲಿಯನ್), ಆಸ್ಟ್ರೇಲಿಯಾ (ಕನಿಷ್ಠ 17 ಮಿಲಿಯನ್), ದಕ್ಷಿಣ ಆಫ್ರಿಕಾ (4.8 ಮಿಲಿಯನ್), ಐರ್ಲೆಂಡ್ (4.2 ಮಿಲಿಯನ್), ಮತ್ತು ನ್ಯೂಜಿಲೆಂಡ್ (3.7 ದಶಲಕ್ಷ). ಈ ದೇಶಗಳಲ್ಲಿ, ಸ್ಥಳೀಯ ಭಾಷಿಕರ ಮಕ್ಕಳು ತಮ್ಮ ಪೋಷಕರಿಂದ ಇಂಗ್ಲಿಷ್ ಕಲಿಯುತ್ತಾರೆ ಮತ್ತು ಇತರ ಭಾಷೆಗಳನ್ನು ಮಾತನಾಡುವ ಸ್ಥಳೀಯ ಜನರು ಮತ್ತು ಹೊಸ ವಲಸಿಗರು ತಮ್ಮ ನೆರೆಹೊರೆ ಮತ್ತು ಕೆಲಸದ ಸ್ಥಳಗಳಲ್ಲಿ ಸಂವಹನ ನಡೆಸಲು ಇಂಗ್ಲಿಷ್ ಕಲಿಯುತ್ತಾರೆ. ಪ್ರಪಂಚದ ಇತರ ದೇಶಗಳಿಗೆ ಇಂಗ್ಲಿಷ್ ಹರಡುವ ನೆಲೆಯನ್ನು ಒಳ-ವೃತ್ತದ ದೇಶಗಳು ಒದಗಿಸುತ್ತವೆ. ಎರಡನೇ ಭಾಷೆ ಮತ್ತು ವಿದೇಶಿ ಭಾಷೆಯ ಇಂಗ್ಲಿಷ್ ಮಾತನಾಡುವವರ ಸಂಖ್ಯೆಗಳ ಅಂದಾಜುಗಳು ಬದಲಾಗುತ್ತವೆ ಎಂಬುದರ ಆಧಾರದ ಮೇಲೆ 470  ಮಿಲಿಯನ್‌ನಿಂದ 1 ಕ್ಕಿಂತ ಹೆಚ್ಚು ಬಿಲಿಯನ್ ಹೇಗೆ ಹೆಚ್ಚು ಪ್ರಾವೀಣ್ಯತೆಯನ್ನು ವ್ಯಾಖ್ಯಾನಿಸಲಾಗಿದೆ. ಭಾಷಾಶಾಸ್ತ್ರಜ್ಞ ಡೇವಿಡ್ ಕ್ರಿಸ್ಟಲ್ ಅಂದಾಜಿಸುವಂತೆ ಸ್ಥಳೀಯರಲ್ಲದ ಭಾಷಿಕರು ಈಗ 3 ರಿಂದ 1 ರ ಅನುಪಾತದಲ್ಲಿ ಸ್ಥಳೀಯ ಭಾಷಿಕರನ್ನು ಮೀರಿಸಿದ್ದಾರೆ ಕಚ್ರು ಅವರ ಮೂರು-ವಲಯಗಳ ಮಾದರಿಯಲ್ಲಿ, "ಹೊರ ವೃತ್ತ" ದೇಶಗಳು ಫಿಲಿಪೈನ್ಸ್ ನಂತಹ ದೇಶಗಳಾಗಿವೆ, ಜಮೈಕಾ, ಭಾರತ, ಪಾಕಿಸ್ತಾನ, ಸಿಂಗಾಪುರ್, ಮಲೇಷ್ಯಾ ಮತ್ತು ನೈಜೀರಿಯಾ ಇಂಗ್ಲಿಷ್‌ನ ಸ್ಥಳೀಯ ಭಾಷಿಕರು ಹೆಚ್ಚು ಕಡಿಮೆ ಪ್ರಮಾಣದಲ್ಲಿರುತ್ತಾರೆ ಆದರೆ ಶಿಕ್ಷಣ, ಸರ್ಕಾರ ಅಥವಾ ದೇಶೀಯ ವ್ಯವಹಾರಕ್ಕಾಗಿ ಇಂಗ್ಲಿಷನ್ನು ಎರಡನೇ ಭಾಷೆಯಾಗಿ ಬಳಸುತ್ತಾರೆ, ಮತ್ತು ಶಾಲಾ ಸೂಚನೆ ಮತ್ತು ಸರ್ಕಾರದೊಂದಿಗಿನ ಅದರ ವಾಡಿಕೆಯ ಅಧಿಕೃತ ಸಂವಹನಕ್ಕಾಗಿ ಬಳಕೆಯಾಗಿದೆ. ಆ ದೇಶಗಳು ಇಂಗ್ಲಿಷ್‌ನ ಹೆಚ್ಚು ಪ್ರಮಾಣಿತ ಆವೃತ್ತಿಯಲ್ಲಿ ಆಂಗ್ಲ-ಆಧಾರಿತ ಕ್ರಿಯೋಲ್ ಉಪಭಾಷೆಯ ಮುಂದುವರಿಕೆಯಲ್ಲಿ ಲಕ್ಷಾಂತರ ಸ್ಥಳೀಯ ಭಾಷಿಕರನ್ನು ಹೊಂದಿವೆ. ಆಂಗ್ಲ-ಮಾತನಾಡುವ ಪೋಷಕರಿಗೆ ಜನಿಸಿದ ಸ್ಥಳೀಯರಲ್ಲದವರು ಕಲಿಯುವ ಇಂಗ್ಲಿಷ್‌ನ ವೈವಿಧ್ಯಗಳು, ವಿಶೇಷವಾಗಿ ಅವರ ವ್ಯಾಕರಣದಲ್ಲಿ, ಆ ಕಲಿಯುವವರು ಮಾತನಾಡುವ ಇತರ ಭಾಷೆಗಳಿಂದ ಪ್ರಭಾವಿತವಾಗಬಹುದು. ಇಂಗ್ಲಿಷ್‌ನ ಹೆಚ್ಚಿನ ಪ್ರಭೇದಗಳು ಒಳ-ವೃತ್ತದ ದೇಶಗಳಲ್ಲಿ ಇಂಗ್ಲಿಷ್‌ನ ಸ್ಥಳೀಯ ಭಾಷಿಕರು ಕಡಿಮೆ ಬಳಸುವ ಪದಗಳನ್ನು ಒಳಗೊಂಡಿವೆ, ಮತ್ತು ಅವು ಒಳ-ವೃತ್ತದ ಪ್ರಭೇದಗಳಿಂದ ವ್ಯಾಕರಣ ಮತ್ತು ಧ್ವನಿಶಾಸ್ತ್ರದ ವ್ಯತ್ಯಾಸಗಳನ್ನು ತೋರಿಸಬಹುದು. ಒಳ-ವೃತ್ತದ ದೇಶಗಳ ಪ್ರಮಾಣಿತ ಇಂಗ್ಲಿಷನ್ನು ಸಾಮಾನ್ಯವಾಗಿ ಹೊರಗಿನ-ವೃತ್ತದ ದೇಶಗಳಲ್ಲಿ ಇಂಗ್ಲಿಷ್ ಬಳಕೆಗೆ ರೂಢಿಯಾಗಿ ತೆಗೆದುಕೊಳ್ಳಲಾಗುತ್ತದೆ. ಮೊದಲ ಭಾಷೆಯಾಗಿ, ಮೂರು-ವೃತ್ತಗಳ ಮಾದರಿಯಲ್ಲಿ, ಪೋಲೆಂಡ್, ಚೀನಾ, ಬ್ರೆಜಿಲ್, ಜರ್ಮನಿ, ಜಪಾನ್, ಇಂಡೋನೇಷಿಯಾ, ಈಜಿಪ್ಟ್ ಮತ್ತು ಇತರ ದೇಶಗಳಲ್ಲಿ ಇಂಗ್ಲಿಷನ್ನು ವಿದೇಶಿ ಭಾಷೆಯಾಗಿ ಕಲಿಸುವ ದೇಶಗಳು "ವಿಸ್ತರಿಸುವ ವಲಯ" ವನ್ನು ರೂಪಿಸುತ್ತವೆ. ಎರಡನೆಯ ಭಾಷೆಯಾಗಿ ಮತ್ತು ವಿದೇಶಿ ಭಾಷೆಯಾಗಿ ಇಂಗ್ಲಿಷ್ ನಡುವಿನ ವ್ಯತ್ಯಾಸಗಳು ಸಾಮಾನ್ಯವಾಗಿ ಚರ್ಚಾಸ್ಪದವಾಗಿರುತ್ತವೆ ಮತ್ತು ಕಾಲಾನಂತರದಲ್ಲಿ ನಿರ್ದಿಷ್ಟ ದೇಶಗಳಲ್ಲಿ ಬದಲಾಗಬಹುದು. ಉದಾಹರಣೆಗೆ, ನೆದರ್‌ಲ್ಯಾಂಡ್ಸ್ ಮತ್ತು ಯುರೋಪ್‌ನ ಇತರ ಕೆಲವು ದೇಶಗಳಲ್ಲಿ, ಎರಡನೇ ಭಾಷೆಯಾಗಿ ಇಂಗ್ಲಿಷ್‌ನ ಜ್ಞಾನವು ಬಹುತೇಕ ಸಾರ್ವತ್ರಿಕವಾಗಿದೆ, ಜನಸಂಖ್ಯೆಯ 80 ಪ್ರತಿಶತದಷ್ಟು ಜನರು ಅದನ್ನು ಬಳಸಲು ಸಮರ್ಥರಾಗಿದ್ದಾರೆ, ಹೀಗಾಗಿ ಇಂಗ್ಲಿಷನ್ನು ಸಂವಹನ ಮಾಡಲು ವಾಡಿಕೆಯಂತೆ ವಿದೇಶಿಯರೊಂದಿಗೆ ಮತ್ತು ಹೆಚ್ಚಾಗಿ ಉನ್ನತ ಶಿಕ್ಷಣದಲ್ಲಿ ಬಳಸಲಾಗುತ್ತದೆ. ಈ ದೇಶಗಳಲ್ಲಿ, ಇಂಗ್ಲಿಷನ್ನು ಸರ್ಕಾರಿ ವ್ಯವಹಾರಕ್ಕೆ ಬಳಸದಿದ್ದರೂ, ಅದರ ವ್ಯಾಪಕ ಬಳಕೆಯು ಅವುಗಳನ್ನು "ಹೊರ ವೃತ್ತ" ಮತ್ತು "ವಿಸ್ತರಿಸುವ ವೃತ್ತ" ನಡುವಿನ ಗಡಿಯಲ್ಲಿ ಇರಿಸುತ್ತದೆ. ವಿಶ್ವ ಭಾಷೆಗಳಲ್ಲಿ ಇಂಗ್ಲಿಷ್ ಅಸಾಮಾನ್ಯವಾಗಿದೆ, ಅದರ ಬಳಕೆದಾರರು ಸ್ಥಳೀಯ ಭಾಷಿಕರು ಅಲ್ಲ ಆದರೆ ಇಂಗ್ಲಿಷನ್ನು ಎರಡನೇ ಅಥವಾ ವಿದೇಶಿ ಭಾಷೆಯಾಗಿ ಮಾತನಾಡುತ್ತಾರೆ. ವಿಸ್ತರಿಸುತ್ತಿರುವ ವಲಯದಲ್ಲಿ ಇಂಗ್ಲಿಷ್‌ನ ಅನೇಕ ಬಳಕೆದಾರರು ಇತರ ಜನರೊಂದಿಗೆ ಸಂವಹನ ನಡೆಸಲು ಇದನ್ನು ಬಳಸುತ್ತಾರೆ, ಆದ್ದರಿಂದ ಇಂಗ್ಲಿಷ್‌ನ ಸ್ಥಳೀಯ ಭಾಷಿಕರೊಂದಿಗಿನ ಸಂವಹನವು ಭಾಷೆಯನ್ನು ಬಳಸುವ ಅವರ ನಿರ್ಧಾರದಲ್ಲಿ ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಇಂಗ್ಲಿಷ್‌ನ ಸ್ಥಳೀಯವಲ್ಲದ ಪ್ರಭೇದಗಳನ್ನು ಅಂತರರಾಷ್ಟ್ರೀಯ ಸಂವಹನಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತದೆ, ಮತ್ತು ಅಂತಹ ಒಂದು ವಿಧದ ಭಾಷಿಕರು ಸಾಮಾನ್ಯವಾಗಿ ಇತರ ಪ್ರಭೇದಗಳ ವೈಶಿಷ್ಟ್ಯಗಳನ್ನು ಎದುರಿಸುತ್ತಾರೆ. ಇಂದು ಪ್ರಪಂಚದ ಎಲ್ಲೆಡೆ ಇಂಗ್ಲಿಷ್‌ನಲ್ಲಿ ನಡೆಯುವ ಸಂಭಾಷಣೆಯು ವಿವಿಧ ದೇಶಗಳ ಭಾಷಿಕರನ್ನು ಒಳಗೊಂಡಿದ್ದರೂ ಸಹ, ಇಂಗ್ಲಿಷ್‌ನ ಮಾತೃಭಾಷೆಯನ್ನು ಹೊಂದಿರುವುದಿಲ್ಲ. ಗಣಿತ ಮತ್ತು ವಿಜ್ಞಾನಗಳ ಹಂಚಿಕೆಯ ಶಬ್ದಕೋಶಕ್ಕೆ ಇದು ವಿಶೇಷವಾಗಿ ಸತ್ಯವಾಗಿದೆ. ಬಹುಕೇಂದ್ರಿತ ಇಂಗ್ಲಿಷ್ ಭಾಷೆ ಇಂಗ್ಲಿಷ್ ಬಹುಕೇಂದ್ರಿತ ಭಾಷೆಯಾಗಿದೆ, ಅಂದರೆ ಯಾವುದೇ ರಾಷ್ಟ್ರೀಯ ಪ್ರಾಧಿಕಾರವು ಭಾಷೆಯ ಬಳಕೆಗೆ ಮಾನದಂಡವನ್ನು ಹೊಂದಿಲ್ಲ. ಮಾತನಾಡುವ ಇಂಗ್ಲಿಷ್, ಉದಾಹರಣೆಗೆ ಇಂಗ್ಲಿಷನ್ನು ಪ್ರಸಾರದಲ್ಲಿ ಬಳಸಲಾಗುತ್ತದೆ, ಸಾಮಾನ್ಯವಾಗಿ ರಾಷ್ಟ್ರೀಯ ಉಚ್ಚಾರಣಾ ಮಾನದಂಡಗಳನ್ನು ಅನುಸರಿಸುತ್ತದೆ, ಅದು ನಿಯಂತ್ರಣಕ್ಕಿಂತ ಹೆಚ್ಚಾಗಿ ಕಸ್ಟಮ್ ಮೂಲಕ ಸ್ಥಾಪಿಸಲ್ಪಡುತ್ತದೆ. ಅಂತರಾಷ್ಟ್ರೀಯ ಪ್ರಸಾರಕರು ಸಾಮಾನ್ಯವಾಗಿ ತಮ್ಮ ಉಚ್ಚಾರಣೆಗಳ ಮೂಲಕ ಒಂದು ದೇಶದಿಂದ ಬರುವುದಕ್ಕಿಂತ ಹೆಚ್ಚಾಗಿ ಮತ್ತೊಂದು ದೇಶದಿಂದ ಬಂದವರು ಎಂದು ಗುರುತಿಸಬಹುದಾಗಿದೆ, ಆದರೆ ವಾರ್ತಾ ಓದುಗ ಸ್ಕ್ರಿಪ್ಟ್‌ಗಳನ್ನು ಹೆಚ್ಚಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಲಿಖಿತ ಇಂಗ್ಲಿಷ್‌ನಲ್ಲಿ ಸಂಯೋಜಿಸಲಾಗಿದೆ. ಯಾವುದೇ ಸರ್ಕಾರ ಅಥವಾ ಅಂತರಾಷ್ಟ್ರೀಯ ಸಂಸ್ಥೆಯ ಯಾವುದೇ ಮೇಲ್ವಿಚಾರಣೆಯಿಲ್ಲದೆ, ಪ್ರಪಂಚದಾದ್ಯಂತ ವಿದ್ಯಾವಂತ ಇಂಗ್ಲಿಷ್ ಮಾತನಾಡುವವರ ಒಮ್ಮತದಿಂದ ಗುಣಮಟ್ಟದ ಲಿಖಿತ ಇಂಗ್ಲಿಷ್‌ನ ರೂಢಿಗಳನ್ನು ಸಂಪೂರ್ಣವಾಗಿ ನಿರ್ವಹಿಸಲಾಗುತ್ತದೆ. ಅಮೇರಿಕನ್ ಕೇಳುಗರು ಸಾಮಾನ್ಯವಾಗಿ ಹೆಚ್ಚಿನ ಬ್ರಿಟಿಷ್ ಪ್ರಸಾರವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಬ್ರಿಟಿಷ್ ಕೇಳುಗರು ಹೆಚ್ಚಿನ ಅಮೇರಿಕನ್ ಪ್ರಸಾರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಪ್ರಪಂಚದಾದ್ಯಂತದ ಹೆಚ್ಚಿನ ಇಂಗ್ಲಿಷ್ ಮಾತನಾಡುವವರು ರೇಡಿಯೋ ಕಾರ್ಯಕ್ರಮಗಳು, ದೂರದರ್ಶನ ಕಾರ್ಯಕ್ರಮಗಳು ಮತ್ತು ಇಂಗ್ಲಿಷ್ ಮಾತನಾಡುವ ಪ್ರಪಂಚದ ಅನೇಕ ಭಾಗಗಳಿಂದ ಚಲನಚಿತ್ರಗಳನ್ನು ಅರ್ಥಮಾಡಿಕೊಳ್ಳಬಹುದು. ಇಂಗ್ಲಿಷ್‌ನ ಪ್ರಮಾಣಿತ ಮತ್ತು ಪ್ರಮಾಣಿತವಲ್ಲದ ಎರಡೂ ಪ್ರಭೇದಗಳು ಔಪಚಾರಿಕ ಅಥವಾ ಅನೌಪಚಾರಿಕ ಶೈಲಿಗಳನ್ನು ಒಳಗೊಂಡಿರುತ್ತದೆ, ಪದ ಆಯ್ಕೆ ಮತ್ತು ವಾಕ್ಯರಚನೆಯಿಂದ ಪ್ರತ್ಯೇಕಿಸಲ್ಪಟ್ಟಿದೆ ಮತ್ತು ತಾಂತ್ರಿಕ ಮತ್ತು ತಾಂತ್ರಿಕವಲ್ಲದ ದಾಕಲಾತಿಗಳನ್ನು ಬಳಸುತ್ತದೆ. ಬ್ರಿಟನ್‌ನ ಹೊರಗಿನ ಇಂಗ್ಲಿಷ್-ಮಾತನಾಡುವ ಆಂತರಿಕ ವಲಯದ ದೇಶಗಳ ವಸಾಹತು ಇತಿಹಾಸವು ಉಪಭಾಷೆಯ ವ್ಯತ್ಯಾಸಗಳನ್ನು ಮಟ್ಟಗೊಳಿಸಲು ಹಾಗೂ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಇಂಗ್ಲಿಷ್‌ನ ಕೊನೈಸ್ ರೂಪಗಳನ್ನು ಉತ್ಪಾದಿಸಲು ಸಹಾಯ ಮಾಡಿತು. ಬ್ರಿಟೀಷ್ ಪೂರ್ವಜರಲ್ಲದೆ ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದವರಲ್ಲಿ ಹೆಚ್ಚಿನವರು ಆಗಮನದ ನಂತರ ಶೀಘ್ರವಾಗಿ ಇಂಗ್ಲಿಷನ್ನು ಅಳವಡಿಸಿಕೊಂಡರು. ಈಗ ಯುನೈಟೆಡ್ ಸ್ಟೇಟ್ಸ್ ಜನಸಂಖ್ಯೆಯ ಬಹುಪಾಲು ಏಕಭಾಷಿಕ ಇಂಗ್ಲಿಷ್ ಮಾತನಾಡುವವರು, ಮತ್ತು 50 ರಾಜ್ಯಗಳಲ್ಲಿ 30 ಸರ್ಕಾರಗಳು ಮತ್ತು US ನ ಎಲ್ಲಾ ಐದು ಪ್ರಾದೇಶಿಕ ಸರ್ಕಾರಗಳು ಇಂಗ್ಲಿಷ್‌ಗೆ ಅಧಿಕೃತ ಅಥವಾ ಸಹ-ಅಧಿಕೃತ ಸ್ಥಾನಮಾನವನ್ನು ನೀಡಿವೆ. ಫೆಡರಲ್ ಮಟ್ಟದಲ್ಲಿ ಎಂದಿಗೂ ಅಧಿಕೃತ ಭಾಷೆ ಇರಲಿಲ್ಲ. ಜಾಗತಿಕ ಭಾಷೆಯಾಗಿ ಇಂಗ್ಲೀಷ್ ಜನಾಂಗೀಯವಾಗಿ ಇಂಗ್ಲಿಷ್ ಹೊಂದಿರುವ ಜನರಿಗೆ ಮಾತ್ರ ಸೇರಿದ ಅರ್ಥದಲ್ಲಿ ಇಂಗ್ಲಿಷ್ "ಇಂಗ್ಲಿಷ್ ಭಾಷೆ" ಆಗುವುದನ್ನು ನಿಲ್ಲಿಸಿದೆ. ಇಂಗ್ಲಿಷ್‌ನ ಬಳಕೆಯು ದೇಶದಿಂದ ದೇಶಕ್ಕೆ ಆಂತರಿಕವಾಗಿ ಮತ್ತು ಅಂತರರಾಷ್ಟ್ರೀಯ ಸಂವಹನಕ್ಕಾಗಿ ಬೆಳೆಯುತ್ತಿದೆ. ಹೆಚ್ಚಿನ ಜನರು ಸೈದ್ಧಾಂತಿಕ ಕಾರಣಗಳಿಗಿಂತ ಪ್ರಾಯೋಗಿಕವಾಗಿ ಇಂಗ್ಲಿಷ್ ಕಲಿಯುತ್ತಾರೆ. ಆಫ್ರಿಕಾದಲ್ಲಿ ಇಂಗ್ಲಿಷ್ ಮಾತನಾಡುವ ಅನೇಕರು ವಿವಿಧ ದೇಶಗಳ ಆಫ್ರಿಕನ್ನರನ್ನು ಒಂದುಗೂಡಿಸುವ "ಆಫ್ರೋ-ಸ್ಯಾಕ್ಸನ್" ಭಾಷಾ ಸಮುದಾಯದ ಭಾಗವಾಗಿದ್ದಾರೆ. 1950 ಮತ್ತು 1960 ರ ದಶಕದಲ್ಲಿ ಬ್ರಿಟಿಷ್ ಸಾಮ್ರಾಜ್ಯದಾದ್ಯಂತ ನಿರ್ವಸಾಹತೀಕರಣವು ಮುಂದುವರೆದಂತೆ, ಹಿಂದಿನ ವಸಾಹತುಗಳು ಆಗಾಗ್ಗೆ ಇಂಗ್ಲಿಷನ್ನು ತಿರಸ್ಕರಿಸಲಿಲ್ಲ, ಆದರೆ ಸ್ವತಂತ್ರ ರಾಷ್ಟ್ರಗಳು ತಮ್ಮದೇ ಆದ ಭಾಷಾ ನೀತಿಗಳನ್ನು ಹೊಂದಿಸುವುದನ್ನು ಮುಂದುವರೆಸಿದವು. ಉದಾಹರಣೆಗೆ, ಅನೇಕ ಭಾರತೀಯರಲ್ಲಿ ಇಂಗ್ಲಿಷ್ ಭಾಷೆಯ ದೃಷ್ಟಿಕೋನವು ಅದನ್ನು ವಸಾಹತುಶಾಹಿಯೊಂದಿಗೆ ಸಂಯೋಜಿಸುವುದರಿಂದ ಅದನ್ನು ಆರ್ಥಿಕ ಪ್ರಗತಿಯೊಂದಿಗೆ ಸಂಘಟಿಸುತ್ತದೆ ಮತ್ತು ಇಂಗ್ಲಿಷ್ ಭಾರತದ ಅಧಿಕೃತ ಭಾಷೆಯಾಗಿ ಮುಂದುವರಿದಿದೆ. ಇಂಗ್ಲಿಷನ್ನು ಮಾಧ್ಯಮ ಮತ್ತು ಸಾಹಿತ್ಯದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಮತ್ತು ಭಾರತದಲ್ಲಿ ವಾರ್ಷಿಕವಾಗಿ ಪ್ರಕಟವಾದ ಇಂಗ್ಲಿಷ್ ಭಾಷೆಯ ಪುಸ್ತಕಗಳ ಸಂಖ್ಯೆಯು US ಮತ್ತು UK ನಂತರ ವಿಶ್ವದ ಮೂರನೇ ಅತಿ ದೊಡ್ಡ ದೇಶವಾಗಿದೆ. ಆದರೂ ಇಂಗ್ಲಿಷನ್ನು ಮೊದಲ ಭಾಷೆಯಾಗಿ ವಿರಳವಾಗಿ ಮಾತನಾಡುತ್ತಾರೆ, ಕೇವಲ ಒಂದೆರಡು ನೂರು-ಸಾವಿರ ಜನರು ಮಾತ್ರ, ಮತ್ತು ಜನಸಂಖ್ಯೆಯ 5% ಕ್ಕಿಂತ ಕಡಿಮೆ ಜನರು ಭಾರತದಲ್ಲಿ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಡೇವಿಡ್ ಕ್ರಿಸ್ಟಲ್ 2004 ರಲ್ಲಿ ಹೇಳಿಕೊಂಡಂತೆ, ಸ್ಥಳೀಯ ಮತ್ತು ಸ್ಥಳೀಯರಲ್ಲದ ಭಾಷಿಕರನ್ನು ಒಟ್ಟುಗೂಡಿಸಿ, ಭಾರತವು ಪ್ರಪಂಚದ ಯಾವುದೇ ದೇಶಕ್ಕಿಂತ ಹೆಚ್ಚು ಇಂಗ್ಲಿಷ್ ಮಾತನಾಡುವ ಅಥವಾ ಅರ್ಥಮಾಡಿಕೊಳ್ಳುವ ಜನರನ್ನು ಹೊಂದಿದೆ. ಆದರೆ ಭಾರತದಲ್ಲಿ ಇಂಗ್ಲಿಷ್ ಮಾತನಾಡುವವರ ಸಂಖ್ಯೆಯು ಅನಿಶ್ಚಿತವಾಗಿದೆ, ಹೆಚ್ಚಿನ ವಿದ್ವಾಂಸರರ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಭಾರತಕ್ಕಿಂತ ಹೆಚ್ಚು ಇಂಗ್ಲಿಷ್ ಮಾತನಾಡುವವರನ್ನು ಹೊಂದಿದೆ ಎಂಬ ಅಭಿಪ್ರಾಯವಿದೆ. ಆಧುನಿಕ ಇಂಗ್ಲೀಷನ್ನು ಮೊದಲ ಜಾಗತಿಕ ಭಾಷಾ ಕೊಂಡಿಯೆಂದು ವಿವರಿಸಲಾಗಿದೆ, ಮೊದಲ ವಿಶ್ವ ಭಾಷೆ ಎಂದು ಪರಿಗಣಿಸಲಾಗಿದೆ. ವೃತ್ತಪತ್ರಿಕೆ ಪ್ರಕಟಣೆ, ಪುಸ್ತಕ ಪ್ರಕಟಣೆ, ಅಂತರರಾಷ್ಟ್ರೀಯ ದೂರಸಂಪರ್ಕ, ವೈಜ್ಞಾನಿಕ ಪ್ರಕಟಣೆ, ಅಂತರರಾಷ್ಟ್ರೀಯ ವ್ಯಾಪಾರ, ಸಾಮೂಹಿಕ ಮನರಂಜನೆ ಮತ್ತು ರಾಜತಾಂತ್ರಿಕತೆಯಲ್ಲಿ ಇಂಗ್ಲಿಷ್ ವಿಶ್ವದ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಭಾಷೆಯಾಗಿದೆ. ಇಂಗ್ಲಿಷ್ ಅಂತರರಾಷ್ಟ್ರೀಯ ಒಪ್ಪಂದದ ಮೂಲಕ, ಅಗತ್ಯವಿರುವ ನಿಯಂತ್ರಿತ ನೈಸರ್ಗಿಕ ಭಾಷೆಗಳಿಗೆ ಆಧಾರವಾಗಿದೆ ಸೀಸ್ಪೀಕ್ ಮತ್ತು ಏರ್ಸ್ಪೀಕ್ ಅನ್ನು ಸಮುದ್ರಯಾನ ಮತ್ತು ವಾಯುಯಾನದ ಅಂತರರಾಷ್ಟ್ರೀಯ ಭಾಷೆಗಳಾಗಿ ಬಳಸಲಾಗುತ್ತದೆ. ವೈಜ್ಞಾನಿಕ ಸಂಶೋಧನೆಯಲ್ಲಿ ಇಂಗ್ಲಿಷ್ ಫ್ರೆಂಚ್ ಮತ್ತು ಜರ್ಮನ್‌ಗಳೊಂದಿಗೆ ಸಮಾನತೆಯನ್ನು ಹೊಂದಿತ್ತು, ಆದರೆ ಈಗ ಅದು ಆ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದೆ. ಇದು 1919 ರಲ್ಲಿ ವರ್ಸೈಲ್ಸ್ ಒಪ್ಪಂದದಲ್ಲಿ ರಾಜತಾಂತ್ರಿಕತೆಯ ಭಾಷೆಯಾಗಿ ಫ್ರೆಂಚ್‌ನೊಂದಿಗೆ ಸಮಾನತೆಯನ್ನು ಸಾಧಿಸಿತು ವಿಶ್ವ ಸಮರ II ರ ಕೊನೆಯಲ್ಲಿ ಯುನೈಟೆಡ್ ನೇಷನ್ಸ್ ಸ್ಥಾಪನೆಯ ಹೊತ್ತಿಗೆ, ಇಂಗ್ಲಿಷ್ ಪೂರ್ವ-ಪ್ರಮುಖವಾಯಿತು ಮತ್ತು ಈಗ ರಾಜತಾಂತ್ರಿಕತೆ ಮತ್ತು ಅಂತರಾಷ್ಟ್ರೀಯ ಸಂಬಂಧಗಳ ವಿಶ್ವಾದ್ಯಂತ ಮುಖ್ಯ ಭಾಷೆಯಾಗಿದೆ. ಇದು ವಿಶ್ವಸಂಸ್ಥೆಯ ಆರು ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಇಂಗ್ಲಿಷನ್ನು ಕೆಲಸದ ಭಾಷೆ ಅಥವಾ ಸಂಸ್ಥೆಯ ಅಧಿಕೃತ ಭಾಷೆಯಾಗಿ ಬಳಸುತ್ತವೆ. ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್, ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ASEAN), ಮತ್ತು ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ದಂತತಹ ಅನೇಕ ಪ್ರಾದೇಶಿಕ ಅಂತರರಾಷ್ಟ್ರೀಯ ಸಂಸ್ಥೆಗಳು ಇಂಗ್ಲಿಷನ್ನು ತಮ್ಮ ಸಂಘಟನೆಯ ಏಕೈಕ ಕಾರ್ಯ ಭಾಷೆಯಾಗಿ ಹೊಂದಿಸಿವೆ, ಆದರೂ ಹೆಚ್ಚಿನ ಸದಸ್ಯ ದೇಶಗಳು ಬಹುಪಾಲು ಸ್ಥಳೀಯ ಇಂಗ್ಲಿಷ್ ಮಾತನಾಡುವವರು. ಯುರೋಪಿಯನ್ ಯೂನಿಯನ್ (ಯೂರೋಪಿನ ಒಕ್ಕೂಟ) ಸದಸ್ಯ ರಾಷ್ಟ್ರಗಳಿಗೆ ಯಾವುದೇ ರಾಷ್ಟ್ರೀಯ ಭಾಷೆಗಳನ್ನು ಒಕ್ಕೂಟದ ಅಧಿಕೃತ ಭಾಷೆಯಾಗಿ ಗೊತ್ತುಪಡಿಸಲು ಅವಕಾಶ ನೀಡುತ್ತದೆ, ಆಚರಣೆಯಲ್ಲಿ ಇಂಗ್ಲಿಷ್ ಯೂರೋಪಿನ ಒಕ್ಕೂಟ ಸಂಸ್ಥೆಗಳ ಮುಖ್ಯ ಕಾರ್ಯ ಭಾಷೆಯಾಗಿದೆ. ಹೆಚ್ಚಿನ ದೇಶಗಳಲ್ಲಿ ಇಂಗ್ಲಿಷ್ ಅಧಿಕೃತ ಭಾಷೆಯಾಗಿಲ್ಲದಿದ್ದರೂ, ಪ್ರಸ್ತುತ ಇದು ವಿದೇಶಿ ಭಾಷೆಯಾಗಿ ಕಲಿಸುವ ಭಾಷೆಯಾಗಿದೆ. ಯೂರೋಪಿನ ಒಕ್ಕೂಟದ ದೇಶಗಳಲ್ಲಿ, ಹತ್ತೊಂಬತ್ತು ಇಪ್ಪತ್ತೈದು ಸದಸ್ಯ ರಾಷ್ಟ್ರಗಳಲ್ಲಿ ಇಂಗ್ಲಿಷ್ ಹೆಚ್ಚು ವ್ಯಾಪಕವಾಗಿ ಮಾತನಾಡುವ ವಿದೇಶಿ ಭಾಷೆಯಾಗಿದೆ, ಅಲ್ಲಿ ಅದು ಅಧಿಕೃತ ಭಾಷೆಯಾಗಿಲ್ಲ (ಅಂದರೆ, ಐರ್ಲೆಂಡ್ ಮತ್ತು ಮಾಲ್ಟಾ ಹೊರತುಪಡಿಸಿ ಇತರ ದೇಶಗಳು). 2012 ರ ಅಧಿಕೃತ ಯೂರೋಬಾರೋಮೀಟರ್ ಸಮೀಕ್ಷೆಯಲ್ಲಿ (ಯುಕೆ ಇನ್ನೂ ಯೂರೋಪಿನ ಒಕ್ಕೂಟ ಸದಸ್ಯರಾಗಿದ್ದಾಗ ನಡೆಸಲಾಯಿತು), ಇಂಗ್ಲಿಷ್ ಅಧಿಕೃತ ಭಾಷೆಯಾಗಿರುವ ದೇಶಗಳ ಹೊರಗೆ ಯೂರೋಪಿನ ಒಕ್ಕೂಟ ಪ್ರತಿಕ್ರಿಯಿಸಿದವರಲ್ಲಿ 38 ಪ್ರತಿಶತದಷ್ಟು ಜನರು ಆ ಭಾಷೆಯಲ್ಲಿ ಸಂಭಾಷಣೆ ನಡೆಸಲು ಸಾಕಷ್ಟು ಇಂಗ್ಲಿಷ್ ಮಾತನಾಡುತ್ತಾರೆ ಎಂದು ಹೇಳಿದರು. ನಂತರ ಉಲ್ಲೇಖಿಸಲಾದ ವಿದೇಶಿ ಭಾಷೆ, ಫ್ರೆಂಚ್ ಸಂಭಾಷಣೆಯಲ್ಲಿ (ಇದು ಯುಕೆ ಮತ್ತು ಐರ್ಲೆಂಡ್‌ನಲ್ಲಿ ಸಾಮಾನ್ಯವಾಗಿ ಅತ್ಯಂತ ಹೆಚ್ಚು ವ್ಯಾಪಕವಾಗಿ ತಿಳಿದಿರುವ ವಿದೇಶಿ ಭಾಷೆಯಾಗಿದೆ) 12 ಪ್ರತಿಶತ ಪ್ರತಿಕ್ರಿಯಿಸಿದವರನ್ನು ಬಳಸಲಾಗಿದೆ. ವೈದ್ಯಕೀಯ ಮತ್ತು ಕಂಪ್ಯೂಟರ್‌ನಂತಹ ಹಲವಾರು ಉದ್ಯೋಗಗಳು ಮತ್ತು ವೃತ್ತಿಗಳಲ್ಲಿ ಇಂಗ್ಲಿಷ್‌ನ ಕೆಲಸದ ಜ್ಞಾನವು ಅಗತ್ಯವಾಗಿದೆ. ವೈಜ್ಞಾನಿಕ ಪ್ರಕಟಣೆಯಲ್ಲಿ ಇಂಗ್ಲಿಷ್ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂದರೆ 1998 ರಲ್ಲಿ ರಾಸಾಯನಿಕ ಅಮೂರ್ತಗಳಿಂದ ಸೂಚಿಸಲಾದ ಎಲ್ಲಾ ವೈಜ್ಞಾನಿಕ ಜರ್ನಲ್ ಲೇಖನಗಳಲ್ಲಿ 80 ಪ್ರತಿಶತಕ್ಕಿಂತ ಹೆಚ್ಚು ಇಂಗ್ಲಿಷ್‌ನಲ್ಲೂ 1996 ರ ಹೊತ್ತಿಗೆ ನೈಸರ್ಗಿಕ ವಿಜ್ಞಾನ ಪ್ರಕಟಣೆಗಳಲ್ಲಿನ ಎಲ್ಲಾ ಲೇಖನಗಳಲ್ಲಿ 90 ಪ್ರತಿಶತ ಮತ್ತು 995 ರ ಹೊತ್ತಿಗೆ ಮಾನವಿಕ ಪ್ರಕಟಣೆಗಳಲ್ಲಿನ 82 ಪ್ರತಿಶತ ಲೇಖನಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಅಂತರರಾಷ್ಟ್ರೀಯ ವ್ಯಾಪಾರಸ್ಥರು, ಅಂತರರಾಷ್ಟ್ರೀಯ ಸಮುದಾಯಗಳು ಇಂಗ್ಲಿಷನ್ನು ಸಹಾಯಕ ಭಾಷೆಯಾಗಿ ಬಳಸಿದ್ದಾರೆ, ಅವರ ಆಸಕ್ತಿಯ ಡೊಮೇನ್‌ಗೆ ಸೂಕ್ತವಾದ ಶಬ್ದಕೋಶಕ್ಕೆ ಒತ್ತು ನೀಡಿದ್ದಾರೆ. ಇದು ಕೆಲವು ವಿದ್ವಾಂಸರು ಇಂಗ್ಲಿಷ್ ಅಧ್ಯಯನವನ್ನು ಸಹಾಯಕ ಭಾಷೆಯಾಗಿ ಅಭಿವೃದ್ಧಿಪಡಿಸಲು ಕಾರಣವಾಯಿತು. ಟ್ರೇಡ್‌ಮಾರ್ಕ್ ಮಾಡಿದ ಗ್ಲೋಬಿಶ್ ಇಂಗ್ಲಿಷ್ ಶಬ್ದಕೋಶದ ಸಣ್ಣ ಉಪವಿಭಾಗವನ್ನು ತುಲನಾತ್ಮಕವಾಗಿ ಬಳಸುತ್ತದೆ. (ಸುಮಾರು 1500 ಪದಗಳು, ಅಂತರರಾಷ್ಟ್ರೀಯ ವ್ಯವಹಾರ ಇಂಗ್ಲಿಷ್‌ನಲ್ಲಿ ಹೆಚ್ಚಿನ ಬಳಕೆಯನ್ನು ಪ್ರತಿನಿಧಿಸಲು ವಿನ್ಯಾಸಗೊಳಿಸಲಾಗಿದೆ) ಇತರ ಉದಾಹರಣೆಗಳಲ್ಲಿ ಸರಳ ಇಂಗ್ಲಿಷ್ ಪ್ರಮಾಣಿತ ಇಂಗ್ಲಿಷ್ ವ್ಯಾಕರಣದ ಸಂಯೋಜನೆಯೊಂದಿಗೆ ಸೇರಿವೆ. ಜಾಗತಿಕವಾಗಿ ಇಂಗ್ಲಿಷ್ ಭಾಷೆಯ ಬಳಕೆಯು ಹೆಚ್ಚಾದ್ದರಿಂದ ಇತರ ಭಾಷೆಗಳ ಮೇಲೆ ಪರಿಣಾಮ ಬೀರಿದೆ, ಇದು ಕೆಲವು ಇಂಗ್ಲಿಷ್ ಪದಗಳನ್ನು ಇತರ ಭಾಷೆಗಳ ಶಬ್ದಕೋಶಗಳಲ್ಲಿ ಸಂಯೋಜಿಸಲು ಕಾರಣವಾಗುತ್ತದೆ. ಇಂಗ್ಲಿಷ್‌ನ ಈ ಪ್ರಭಾವವು ಬೇರೆ ಭಾಷೆಯ ಸಾವಿನ ಬಗ್ಗೆ ಕಳವಳಕ್ಕೆ ಕಾರಣವಾಯಿತು, ಮತ್ತು ಭಾಷಾ ಸಾಮ್ರಾಜ್ಯಶಾಹಿಯ ಹಕ್ಕುಗಳಿಗೆ, ಮತ್ತು ಇಂಗ್ಲಿಷ್ ಹರಡುವಿಕೆಗೆ ಪ್ರತಿರೋಧವನ್ನು ಕೆರಳಿಸಿದೆ; ಆದರೂ ಮಾತನಾಡುವವರ ಇಂಗ್ಲಷ್ ಸಂಖ್ಯೆಯು ಹೆಚ್ಚುತ್ತಲೇ ಇದೆ. ಏಕೆಂದರೆ ಪ್ರಪಂಚದಾದ್ಯಂತದ ಅನೇಕ ಜನರಿಗೆ ಇಂಗ್ಲಿಷ್ ಉತ್ತಮ ಉದ್ಯೋಗ ಮತ್ತು ಸುಧಾರಿತ ಜೀವನಕ್ಕೆ ಅವಕಾಶಗಳನ್ನು ಒದಗಿಸುತ್ತದೆ ಎಂದು ಭಾವಿಸುತ್ತಾರೆ. ಆದರೂ ಕೆಲವು ವಿದ್ವಾಂಸರು ಭವಿಷ್ಯದಲ್ಲಿ ಇಂಗ್ಲಿಷ್ ಉಪಭಾಷೆಗಳು ಪರಸ್ಪರ ಅರ್ಥವಾಗದ ಭಾಷೆಗಳಾಗಿ ಬದಲಾಗುವ ಸಾಧ್ಯತೆಯನ್ನು ಉಲ್ಲೇಖಿಸಿ, ಹೆಚ್ಚಿನವರು ಇಂಗ್ಲಿಷ್ ಒಂದು ಮಿಶ‍್ರ (ಕೊನೈಸ್) ಭಾಷೆಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದು ಭಾವಿಸುತ್ತಾರೆ, ಇದರಲ್ಲಿ ಪ್ರಮಾಣಿತ ರೂಪವು ಪ್ರಪಂಚದಾದ್ಯಂತದ ಮಾತನಾಡುವವರನ್ನು ಏಕೀಕರಿಸುತ್ತದೆ. ಪ್ರಪಂಚದಾದ್ಯಂತದ ದೇಶಗಳಲ್ಲಿ ಇಂಗ್ಲಿಷನ್ನು ವ್ಯಾಪಕ ಸಂವಹನಕ್ಕಾಗಿ ಭಾಷೆಯಾಗಿ ಬಳಸಲಾಗುತ್ತದೆ. ಹೀಗಾಗಿ ಇಂಗ್ಲಿಷ್ ವಿಶ್ವಾದ್ಯಂತ ಬಳಕೆಯಲ್ಲಿ ಎಸ್ಪೆರಾಂಟೊ ಸೇರಿದಂತೆ ಅಂತರರಾಷ್ಟ್ರೀಯ ಸಹಾಯಕ ಭಾಷೆಯಾಗಿ ಪ್ರಸ್ತಾಪಿಸಲಾದ ಯಾವುದೇ ನಿರ್ಮಿತ ಭಾಷೆಗಿಂತ ಹೆಚ್ಚು ಬೆಳೆದಿದೆ. ಧ್ವನಿಶಾಸ್ತ್ರ ಇಂಗ್ಲಿಷ್ ಭಾಷೆಯ ಧ್ವನಿಮಾವಿಜ್ಞಾನ ಮತ್ತು ಧ್ವನಿಶಾಸ್ತ್ರವು ಒಂದು ಉಪಭಾಷೆಯಿಂದ ಇನ್ನೊಂದಕ್ಕೆ ಭಿನ್ನವಾಗಿರುತ್ತದೆ, ಸಾಮಾನ್ಯವಾಗಿ ಪರಸ್ಪರ ಸಂವಹನದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಧ್ವನಿವಿಜ್ಞಾನದ ಬದಲಾವಣೆಯು ಧ್ವನಿಮಾಗಳ ಸಂಶೋಧನೆಗಳ ಮೇಲೆ ಪರಿಣಾಮ ಬೀರುತ್ತದೆ (ಅಂದರೆ ಅರ್ಥವನ್ನು ಪ್ರತ್ಯೇಕಿಸುವ ಮಾತಿನ ಶಬ್ದಗಳು), ಮತ್ತು ಧ್ವನಿಮಾವಿಜ್ಞಾನ ವ್ಯತ್ಯಾಸವು ಧ್ವನಿಮಾಗಳ ಉಚ್ಚಾರಣೆಯಲ್ಲಿನ ವ್ಯತ್ಯಾಸಗಳನ್ನು ಒಳಗೊಂಡಿರುತ್ತದೆ. ಈ ಅವಲೋಕನವು ಮುಖ್ಯವಾಗಿ ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಪ್ರಮಾಣಿತ ಉಚ್ಚಾರಣೆಗಳನ್ನು ವಿವರಿಸುತ್ತದೆ: ಸ್ವೀಕರಿಸಿದ ಉಚ್ಚಾರಣೆ (RP) ಮತ್ತು ಜನರಲ್ ಅಮೇರಿಕನ್ (GA). (ನೋಡಿ § ಉಪಭಾಷೆಗಳು, ಉಚ್ಚಾರಣೆಗಳು ಮತ್ತು ಪ್ರಭೇದಗಳು, ಕೆಳಗೆ. ) ಕೆಳಗೆ ಬಳಸಲಾದ ಧ್ವನಿಮಾವಿಜ್ಞಾನ ಚಿಹ್ನೆಗಳು ಇಂಟರ್ನ್ಯಾಷನಲ್ ಫೋನೆಟಿಕ್ ಆಲ್ಫಾಬೆಟ್ (IPA) ನಿಂದ ಬಂದವು. ವ್ಯಂಜನಗಳು ಹೆಚ್ಚಿನ ಇಂಗ್ಲಿಷ್ ಉಪಭಾಷೆಗಳು ಒಂದೇ 24 ವ್ಯಂಜನ ಧ್ವನಿಮಾಗಳನ್ನು ಹಂಚಿಕೊಳ್ಳುತ್ತವೆ.  ಕೆಳಗೆ ತೋರಿಸಿರುವ ವ್ಯಂಜನದ ಸಂಶೋಧನೆಯು ಕ್ಯಾಲಿಫೋರ್ನಿಯಾ ಇಂಗ್ಲೀಷ್, ಮತ್ತು RP ಗೆ ಮಾನ್ಯವಾಗಿದೆ. * ಸಾಂಪ್ರದಾಯಿಕವಾಗಿ ಲಿಪ್ಯಂತರ ಕೋಷ್ಟಕದಲ್ಲಿ, ಪ್ರತಿಬಂಧಕಗಳು (ನಿಲುಗಡೆಗಳು,ಘರ್ಷಧ‍್ವನಿಗಳು ಮತ್ತು ಊಷ್ಮಧ್ವನಿಗಳು) ಜೋಡಿಯಾಗಿ ಕಾಣಿಸಿಕೊಂಡಾಗ, ಉದಾಹರಣೆಗೆ , , ಮತ್ತು , ಮೊದಲನೆಯದು ಮಹಾಪ್ರಾಣ (ಬಲವಾದ) ಮತ್ತು ಎರಡನೆಯದು ಅಲ್ಪಪ್ರಾಣ (ದುರ್ಬಲ). ನಂತಹ ಮಹಾಪ್ರಾಣಪ್ರತಿರೋಧಕಗಳು ಅಲ್ಪಪ್ರಾಣ ವ್ಯಂಜನಗಳಿಗಿಂತ ಹೆಚ್ಚು ಸ್ನಾಯುವಿನ ಒತ್ತಡ ಮತ್ತು ಉಸಿರಾಟದ ಬಲದಿಂದ ಉಚ್ಚರಿಸಲಾಗುತ್ತದೆ, ಉದಾಹರಣೆಗೆ , ಮತ್ತು ಯಾವಾಗಲೂ ಧ್ವನಿರಹಿತವಾಗಿರುತ್ತದೆ . ಅಲ್ಪಪ್ರಾಣ ವ್ಯಂಜನಗಳು ಉಚ್ಚಾರಣೆಗಳ ಪ್ರಾರಂಭ ಮತ್ತು ಅಂತ್ಯದಲ್ಲಿ ಭಾಗಶಃ ಧ್ವನಿ ನೀಡುತ್ತವೆ ಮತ್ತು ಸ್ವರಗಳ ನಡುವೆ ಸಂಪೂರ್ಣವಾಗಿ ಧ್ವನಿ ನೀಡುತ್ತವೆ. ಹೆಚ್ಚಿನ ಉಪಭಾಷೆಗಳಲ್ಲಿ ನಂತಹ ಮಹಾಪ್ರಾಣ ತಡೆಗಳು ಹೆಚ್ಚುವರಿ ಉಚ್ಚಾರಣೆ ಅಥವಾ ಧ್ವನಿವರ್ಧಕ ಲಕ್ಷಣಗಳನ್ನು ಹೊಂದಿವೆ: ಒತ್ತುವ ಉಚ್ಚಾರಾಂಶದ ಆರಂಭದಲ್ಲಿ ಅವು ಏಕಾಂಗಿಯಾಗಿ ಸಂಭವಿಸಿದಾಗ ಅವು ಮಹತ್ವಾಕಾಂಕ್ಷೆಯಾಗಿರುತ್ತವೆ, ಇತರ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಅಪೇಕ್ಷಿಸುವುದಿಲ್ಲ, ಮತ್ತು ಸಾಮಾನ್ಯವಾಗಿ ಬಿಡುಗಡೆಯಾಗದ ಅಥವಾ ಪೂರ್ವ- ಒಂದು ಉಚ್ಚಾರಾಂಶದ ಕೊನೆಯಲ್ಲಿ ಕಂಠ್ಯೀಕರಣ . ಏಕ-ಉಚ್ಚಾರಾಂಶದ ಪದದಲ್ಲಿ, ಮಹಾಪ್ರಾಣ ತಡೆಯು ಮೊದಲು ಸ್ವರವನ್ನು ಸಂಕ್ಷಿಪ್ತಗೊಳಿಸುತ್ತದೆ: ಆದ್ದರಿಂದ ನಿಪ್ ನಿಬ್ ಗಿಂತ ಗಮನಾರ್ಹವಾಗಿ ಕಡಿಮೆ ಸ್ವರವನ್ನು ಹೊಂದಿದೆ (ಧ್ವನಿಮಾವಿಜ್ಞಾನ, ಆದರೆ ಧ್ವನಿಶಾಸ್ತ್ರ ಅಲ್ಲ) ( ಕೆಳಗೆ ನೋಡಿ ). ಅಲ್ಪಪ್ರಾಣ ನಿಲ್ದಾಣಗಳು: bin , about , nib ಮಹಾಪ್ರಾಣ ನಿಲ್ದಾಣಗಳು: pin ; spin ; happy ; nip ಅಥವಾ RP ಯಲ್ಲಿ, ಪಾರ್ಶ್ವದ ಅಂದಾಜು , ಎರಡು ಮುಖ್ಯ ಸ್ವರಧ್ವನಿಗಳನ್ನು ಹೊಂದಿದೆ (ಉಚ್ಚಾರಣೆ ರೂಪಾಂತರಗಳು): ಸ್ಪಷ್ಟ ಅಥವಾ ಸರಳ , ಬೆಳಕಿನಲ್ಲಿರುವಂತೆ ಮತ್ತು ಗಾಢ ಅಥವಾ ಒತ್ತಿ , ಪೂರ್ಣವಾಗಿ . GA ಹೆಚ್ಚಿನ ಸಂದರ್ಭಗಳಲ್ಲಿ ಡಾರ್ಕ್ ಎಲ್ ಅನ್ನು ಹೊಂದಿರುತ್ತದೆ. ಸ್ಪಷ್ಟ l : RP light ಬೆಳಕು ಗಾಢ l : RP ಮತ್ತು GA full ಪೂರ್ಣ , GA light ಬೆಳಕು ಎಲ್ಲಾ ಧ್ವನಿಸ್ತಾನಗಳು (ಹಗುರವಾಗಿ ಮತ್ತು ನಾಸಿಕಗಳು ) ಧ್ವನಿಯಿಲ್ಲದ ಅಡಚಣೆಯನ್ನು ಅನುಸರಿಸುವಾಗ ವಿಭಜಿಸುತ್ತವೆ ಮತ್ತು ಪದದ ಕೊನೆಯಲ್ಲಿ ವ್ಯಂಜನವನ್ನು ಅನುಸರಿಸುವಾಗ ಅವು ಉಚ್ಚಾರಾಂಶಗಳಾಗಿವೆ. ಧ್ವನಿಯಿಲ್ಲದ ಧ್ವನಿಸ್ತಾನಗಳು: clay ಕ್ಲೇ ; snow RP , GA ಪಠ್ಯಕ್ರಮದ ಧ್ವನಿಸ್ತಾನಗಳು: paddle , button ಸ್ವರಗಳು ಸ್ವರಗಳ ಉಚ್ಚಾರಣೆಯು ಉಪಭಾಷೆಗಳ ನಡುವೆ ಬಹಳ ವ್ಯತ್ಯಾಸಗೊಳ್ಳುತ್ತದೆ ಮತ್ತು ಸ್ಪೀಕರ್‌ನ ಉಚ್ಚಾರಣೆಯ ಅತ್ಯಂತ ಪತ್ತೆಹಚ್ಚಬಹುದಾದ ಅಂಶಗಳಲ್ಲಿ ಒಂದಾಗಿದೆ. ಕೆಳಗಿನ ಕೋಷ್ಟಕವು ಸ್ವೀಕರಿಸಿದ ಉಚ್ಚಾರಣೆ (RP) ಮತ್ತು ಜನರಲ್ ಅಮೇರಿಕನ್ (GA) ನಲ್ಲಿ ಸ್ವರ ಧ್ವನಿಮಾಗಳನ್ನು ಪಟ್ಟಿ ಮಾಡುತ್ತದೆ, ಉದಾಹರಣೆಗೆ; ಭಾಷಾಶಾಸ್ತ್ರಜ್ಞರು ಸಂಕಲಿಸಿದ ಶಬ್ದಗಳ ಹೊಂದಾಣಿಕೆಯಿಂದ ಅವು ಸಂಭವಿಸುವ ಪದಗಳು. ಸ್ವರಗಳನ್ನು ಅಂತರರಾಷ್ಟ್ರೀಯ ಫೋನೆಟಿಕ್ ಆಲ್ಫಾಬೆಟ್‌ನಿಂದ ಚಿಹ್ನೆಗಳೊಂದಿಗೆ ಪ್ರತಿನಿಧಿಸಲಾಗುತ್ತದೆ; RP ಗಾಗಿ ನೀಡಲಾದವುಗಳು ಬ್ರಿಟಿಷ್ ನಿಘಂಟುಗಳು ಮತ್ತು ಇತರ ಪ್ರಕಟಣೆಗಳಲ್ಲಿ ಪ್ರಮಾಣಿತವಾಗಿವೆ. ಸ್ವೀಕೃತ ಉಚ್ಛಾರಣೆಯಲ್ಲಿ, ದೀರ್ಘಸ್ವರ ಧ್ವನಿಮಾವಾಗಿದೆ; ದೀರ್ಘ ಸ್ವರಗಳನ್ನು ಮೇಲಿನ ಕೋಷ್ಟಕದಲ್ಲಿ ತ್ರಿಕೋನ ವಿವರಣ ವಿರಾಮ ⟨ ː ⟩ ದೊಂದಿಗೆ ಗುರುತಿಸಲಾಗಿದೆ, ಉದಾಹರಣೆಗೆ bidಬಿಡ್ ಗೆ ವಿರುದ್ಧವಾಗಿ ಅಗತ್ಯದ ಸ್ವರ need ] . ಜನರಲ್ ಅಮೇರಿಕನ್‌ನಲ್ಲಿ ದೀರ್ಘಸ್ವರ ವಿಶಿಷ್ಟವಲ್ಲ. ಸ್ವೀಕೃತ ಉಚ್ಛಾರಣೆ ಮತ್ತು ಜನರಲ್ ಅಮೇರಿಕನ್ ಎರಡರಲ್ಲೂ, ಸ್ವರಗಳನ್ನು ಒಂದೇ ಉಚ್ಚಾರಾಂಶದಲ್ಲಿ ವಿಶೇಷಣ ವ್ಯಂಜನಗಳ ಮೊದಲು ಧ್ವನಿಮಾವಾಗಿ ಸಂಕ್ಷಿಪ್ತಗೊಳಿಸಲಾಗುತ್ತದೆ. ಉದಾಹರಣೆಗೆ , ಆದರೆ ಪುಲ್ಲಿಂಗ ವ್ಯಂಜನಗಳ ಮೊದಲು ಅಥವಾ ತೆರೆದ ಉಚ್ಚಾರಾಂಶಗಳಲ್ಲಿ ಅಲ್ಲ: ಹೀಗಾಗಿ, rich , neat , ಮತ್ತು safe ridge ನ ಸ್ವರಗಳಿಗಿಂತ ಗಮನಾರ್ಹವಾಗಿ ಚಿಕ್ಕದಾಗಿದೆ, need , ಮತ್ತು save , ಮತ್ತು ಬೆlight ಸ್ವರವು lie ಗಿಂತ ಚಿಕ್ಕದಾಗಿದೆ. ಪುಲ್ಲಿಂಗ ವ್ಯಂಜನಗಳು ಉಚ್ಚಾರಾಂಶದ ಕೊನೆಯಲ್ಲಿ ಆಗಾಗ್ಗೆ ಧ್ವನಿರಹಿತವಾಗಿರುವುದರಿಂದ, ಕೆಳಗಿನ ವ್ಯಂಜನವು ಪುಲ್ಲಿಂಗ ಅಥವಾ ವಿಶೇಷಣ ಆಗಿದೆಯೇ ಎಂಬುದಕ್ಕೆ ದೀರ್ಘಸ್ವರವು ಪ್ರಮುಖ ಸೂಚನೆಯಾಗಿದೆ. ಧ್ವನಿಮಾಶಾಸ್ತ್ರ ಇಂಗ್ಲಿಷ್ ಉಚ್ಚಾರಾಂಶವು ಸ್ವರ ಧ್ವನಿಯನ್ನು ಒಳಗೊಂಡಿರುವ ಉಚ್ಚಾರಾಂಶದ ಸೂಕ್ಷ್ಮತೆಯನ್ನು ಒಳಗೊಂಡಿದೆ. ಉಚ್ಚಾರಾಂಶದ ಪ್ರಾರಂಭ ಮತ್ತು ಕೊನೆ (ಪ್ರಾರಂಭ ಮತ್ತು ಅಂತ್ಯ) ಐಚ್ಛಿಕವಾಗಿರುತ್ತದೆ. ಒಂದು ಉಚ್ಚಾರಾಂಶವು sprint ಸ್ಪ್ರಿಂಟ್ ನಲ್ಲಿರುವಂತೆ ಮೂರು ವ್ಯಂಜನ ಶಬ್ದಗಳೊಂದಿಗೆ ಪ್ರಾರಂಭವಾಗಬಹುದು ಮತ್ತು (ಕೆಲವು ಉಪಭಾಷೆಗಳಿಗೆ) angsts ನಂತೆ ಐದರವರೆಗೆ ಕೊನೆಗೊಳ್ಳಬಹುದು. ಇದು ಇಂಗ್ಲಿಷ್ ಉಚ್ಚಾರಾಂಶಕ್ಕೆ ಈ ಕೆಳಗಿನ ರಚನೆಯನ್ನು ನೀಡುತ್ತದೆ, (CCC)V(CCCCC), ಅಲ್ಲಿ C ವ್ಯಂಜನ ಮತ್ತು V ಸ್ವರವನ್ನು ಪ್ರತಿನಿಧಿಸುತ್ತದೆ; strengths ಎಂಬ ಪದವು ಇಂಗ್ಲಿಷ್‌ನಲ್ಲಿ ಸಾಧ್ಯವಿರುವ ಅತ್ಯಂತ ಸಂಕೀರ್ಣವಾದ ಉಚ್ಚಾರಾಂಶಕ್ಕೆ ಹತ್ತಿರದಲ್ಲಿದೆ. ಆರಂಭಗಳು ಅಥವಾ ಕೊನೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ವ್ಯಂಜನಗಳನ್ನು ನಿರ್ಬಂಧಿಸಲಾಗಿದೆ, ಅವು ಕಾಣಿಸಿಕೊಳ್ಳುವ ಕ್ರಮದಂತೆ. ಆರಂಭಗಳು ಕೇವಲ ನಾಲ್ಕು ವಿಧದ ವ್ಯಂಜನ ಸಮೂಹಗಳನ್ನು ಹೊಂದಿರಬಹುದು. ಒತ್ತಡ, ಲಯ ಮತ್ತು ಸ್ವರ ಇಂಗ್ಲಿಷ್‌ನಲ್ಲಿ ಒತ್ತಡವು ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಉಚ್ಚಾರಾಂಶಗಳು ಒತ್ತಿಹೇಳಿದರೆ, ಇತರವುಗಳು ಒತ್ತಡಕ್ಕೊಳಗಾಗುವುದಿಲ್ಲ. ಒತ್ತಡವು ಅವಧಿ, ತೀವ್ರತೆ, ಸ್ವರ ಗುಣಮಟ್ಟ ಮತ್ತು ಕೆಲವೊಮ್ಮೆ ಪಿಚ್‌ನಲ್ಲಿನ ಬದಲಾವಣೆಗಳ ಸಂಯೋಜನೆಯಾಗಿದೆ. ಒತ್ತಡದ ಉಚ್ಚಾರಾಂಶಗಳನ್ನು ಒತ್ತಡವಿಲ್ಲದ ಉಚ್ಚಾರಾಂಶಗಳಿಗಿಂತ ಉದ್ದವಾಗಿ ಮತ್ತು ಜೋರಾಗಿ ಉಚ್ಚರಿಸಲಾಗುತ್ತದೆ ಮತ್ತು ಒತ್ತಡವಿಲ್ಲದ ಉಚ್ಚಾರಾಂಶಗಳಲ್ಲಿನ ಸ್ವರಗಳು ಆಗಾಗ್ಗೆ ಕಡಿಮೆಯಾಗುತ್ತವೆ ಆದರೆ ಒತ್ತುವ ಉಚ್ಚಾರಾಂಶಗಳಲ್ಲಿನ ಸ್ವರಗಳು ಇರುವುದಿಲ್ಲ. ಕೆಲವು ಪದಗಳು, ಪ್ರಾಥಮಿಕವಾಗಿ ಸಣ್ಣ ಕಾರ್ಯದ ಪದಗಳು ಆದರೆ can, ಕ್ಯಾನ್ ನಂತಹ ಕೆಲವು ಮಾದರಿ ಕ್ರಿಯಾಪದಗಳು ದುರ್ಬಲ ಮತ್ತು ಬಲವಾದ ರೂಪಗಳನ್ನು ಹೊಂದಿವೆ, ಅವು ವಾಕ್ಯದೊಳಗೆ ಒತ್ತಡ ಅಥವಾ ಒತ್ತಡವಿಲ್ಲದ ಸ್ಥಿತಿಯಲ್ಲಿ ಸಂಭವಿಸುತ್ತವೆಯೇ ಎಂಬುದನ್ನು ಅವಲಂಬಿಸಿರುತ್ತದೆ. ಇಂಗ್ಲಿಷ್‌ನಲ್ಲಿ ಒತ್ತಡವು ಧ್ವನಿಮಾತ್ಮಕವಾಗಿದೆ ಮತ್ತು ಕೆಲವು ಜೋಡಿ ಪದಗಳನ್ನು ಒತ್ತಡದಿಂದ ಗುರುತಿಸಲಾಗುತ್ತದೆ. ಉದಾಹರಣೆಗೆ, contract ಒಪ್ಪಂದ ಎಂಬ ಪದವು ನಾಮಪದವಾಗಿ ಬಳಸಿದಾಗ ಮೊದಲ ಉಚ್ಛಾರಾಂಶವು ( / ˈkɒntrækt / KON - trakt KON ಎಂದು ಒತ್ತಿ ಹೇಳಲಾಗುತ್ತದೆ, / ಕೊನೆಯ ಉಚ್ಚಾರಾಂಶದ ಮೇಲೆ ( / kən ˈtrækt ) / kən-TRAKT ) ಹೆಚ್ಚಿನ ಅರ್ಥಗಳಿಗಾಗಿ (ಉದಾಹರಣೆಗೆ, "ಗಾತ್ರದಲ್ಲಿ ಕಡಿಮೆ ಮಾಡಿ") ಕ್ರಿಯಾಪದವಾಗಿ ಬಳಸಿದಾಗ,ಇಲ್ಲಿ ಒತ್ತಡವು ಸ್ವರ ಕಡಿತಕ್ಕೆ ಸಂಪರ್ಕ ಹೊಂದಿದೆ. "contract" ("ಒಪ್ಪಂದ") ಎಂಬ ನಾಮಪದದಲ್ಲಿ ಮೊದಲ ಉಚ್ಚಾರಾಂಶವು ಒತ್ತಿ ಹೇಳುತ್ತದೆ ಮತ್ತು ಕಡಿಮೆಯಾಗದ ಸ್ವರವನ್ನು ಹೊಂದಿರುತ್ತದೆ. ಆದರೆ "contract" ("ಒಪ್ಪಂದ") ಕ್ರಿಯಾಪದದಲ್ಲಿ ಮೊದಲ ಉಚ್ಚಾರಾಂಶವು ಒತ್ತಡರಹಿತವಾಗಿರುತ್ತದೆ ಮತ್ತು ಅದರ ಗೆ ಸ್ವರವನ್ನು ಕಡಿಮೆ ಮಾಡಲಾಗಿದೆ. ಪದಗಳು ಮತ್ತು ಪದಗುಚ್ಛಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಒತ್ತಡವನ್ನು ಬಳಸಲಾಗುತ್ತದೆ, ಆದ್ದರಿಂದ ಒಂದು ಸಂಯುಕ್ತ ಪದವು ಒಂದೇ ಒತ್ತಡದ ಘಟಕವನ್ನು ಪಡೆಯುತ್ತದೆ, ಆದರೆ ಅನುಗುಣವಾದ ಪದಗುಚ್ಛವು ಎರಡನ್ನು ಹೊಂದಿದೆ: ಉದಾ burnout(ಬರ್ನ್ಔಟ್) ( / ˈbɜːrn aʊt / ) ವಿರುದ್ಧ burn out(ಬರ್ನ್ ಔಟ್ )( / ˈb ɜːrnˈaʊt / ), ಮತ್ತು hotdog ( / ˈhɒtdɒɡ / ) ವಿರುದ್ಧ hot dog ಹಾಟ್‍ಡಾಗ್ / ( / ˈhɒt ˈdɒɡ / ). ಲಯದ ಪರಿಭಾಷೆಯಲ್ಲಿ, ಇಂಗ್ಲಿಷನ್ನು ಸಾಮಾನ್ಯವಾಗಿ ಸಮಾನ ಒತ್ತಡ ಭಾಷೆ ಎಂದು ವಿವರಿಸಲಾಗುತ್ತದೆ, ಅಂದರೆ ಒತ್ತಡದ ಉಚ್ಚಾರಾಂಶಗಳ ನಡುವಿನ ಸಮಯದ ಪ್ರಮಾಣವು ಸಮಾನವಾಗಿರುತ್ತದೆ. ಒತ್ತಡದ ಉಚ್ಚಾರಾಂಶಗಳನ್ನು ಮುಂದೆ ಉಚ್ಚರಿಸಲಾಗುತ್ತದೆ, ಆದರೆ ಒತ್ತಡವಿಲ್ಲದ ಉಚ್ಚಾರಾಂಶಗಳನ್ನು (ಒತ್ತಡಗಳ ನಡುವಿನ ಉಚ್ಚಾರಾಂಶಗಳು) ಸಂಕ್ಷಿಪ್ತಗೊಳಿಸಲಾಗುತ್ತದೆ. ಒತ್ತಡವಿಲ್ಲದ ಉಚ್ಚಾರಾಂಶಗಳಲ್ಲಿನ ಸ್ವರಗಳನ್ನು ಸಹ ಸಂಕ್ಷಿಪ್ತಗೊಳಿಸಲಾಗುತ್ತದೆ ಮತ್ತು ಸ್ವರ ಕಡಿಮೆಗೊಳಿಸುವಿಕೆಯು ಸ್ವರ ಕಡಿತ:ಸ್ವರ ಗುಣಮಟ್ಟದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. ಪ್ರಾದೇಶಿಕ ಬದಲಾವಣೆ ಸ್ವರಗಳ ಉಚ್ಚಾರಣೆಯಲ್ಲಿ ಇಂಗ್ಲಿಷ್‌ನ ವೈವಿಧ್ಯಗಳು ಹೆಚ್ಚು ಬದಲಾಗುತ್ತವೆ. ಇಂಗ್ಲಿಷ್ ಅಲ್ಲದ-ಮಾತನಾಡುವ ದೇಶಗಳಲ್ಲಿ ಶಿಕ್ಷಣದ ಮಾನದಂಡಗಳಾಗಿ ಬಳಸಲಾಗುವ ಅತ್ಯುತ್ತಮ ರಾಷ್ಟ್ರೀಯ ಪ್ರಭೇದಗಳೆಂದರೆ ಬ್ರಿಟಿಷ್ (BrE) ಮತ್ತು ಅಮೇರಿಕನ್ (AmE). ಕೆನಡಾ, ಆಸ್ಟ್ರೇಲಿಯಾ, ಐರ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ತಮ್ಮದೇ ಆದ ಗುಣಮಟ್ಟದ ಪ್ರಭೇದಗಳನ್ನು ಹೊಂದಿವೆ, ಇವುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣದ ಮಾನದಂಡಗಳಾಗಿ ಕಡಿಮೆ ಬಾರಿ ಬಳಸಲಾಗುತ್ತದೆ. ವಿವಿಧ ಉಪಭಾಷೆಗಳ ನಡುವಿನ ಕೆಲವು ವ್ಯತ್ಯಾಸಗಳನ್ನು "ಸ್ಟ್ಯಾಂಡರ್ಡ್ ಇಂಗ್ಲಿಷ್‌ನ ವೈವಿಧ್ಯಗಳು ಮತ್ತು ಅವುಗಳ ವೈಶಿಷ್ಟ್ಯಗಳು" ಕೋಷ್ಟಕದಲ್ಲಿ ತೋರಿಸಲಾಗಿದೆ. ವ್ಯಾಕರಣ ಇಂಡೋ-ಯುರೋಪಿಯನ್ ಭಾಷೆಯ ವೈಶಿಷ್ಯದಂತೆ, ಇಂಗ್ಲಿಷ್ ಆಪಾದಿತ ಆಕೃತಿಮಾ ಜೋಡಣೆಯನ್ನು ಅನುಸರಿಸುತ್ತದೆ. ಇತರ ಇಂಡೋ-ಯುರೋಪಿಯನ್ ಭಾಷೆಗಳಿಗಿಂತ ಭಿನ್ನವಾಗಿ, ಇಂಗ್ಲಿಷ್ ವಿಶ್ಲೇಷಣಾತ್ಮಕ ರಚನೆಗಳ ಪರವಾಗಿ ವಿಭಕ್ತಿ ಪ್ರಕರಣದ ವ್ಯವಸ್ಥೆಯನ್ನು ಹೆಚ್ಚಾಗಿ ಕೈಬಿಟ್ಟಿದೆ. ವೈಯಕ್ತಿಕ ಸರ್ವನಾಮಗಳು ಮಾತ್ರ ಬೇರೆ ಯಾವುದೇ ಪದ ವರ್ಗಕ್ಕಿಂತ ಹೆಚ್ಚು ಬಲವಾಗಿ ರೂಪವಿಜ್ಞಾನ ಪ್ರಕರಣವನ್ನು ಉಳಿಸಿಕೊಳ್ಳುತ್ತವೆ. ಇಂಗ್ಲಿಷ್ ಕನಿಷ್ಠ ಏಳು ಪ್ರಮುಖ ಪದ ವರ್ಗಗಳನ್ನು ಪ್ರತ್ಯೇಕಿಸುತ್ತದೆ: ಕ್ರಿಯಾಪದಗಳು, ನಾಮಪದಗಳು, ವಿಶೇಷಣಗಳು, ಕ್ರಿಯಾವಿಶೇಷಣಗಳು, ನಿರ್ಣಯಕಾರಕಗಳು (ಲೇಖನಗಳನ್ನು ಒಳಗೊಂಡಂತೆ), ಪೂರ್ವಭಾವಿಗಳು ಮತ್ತು ಸಂಯೋಗಗಳು. ಕೆಲವು ವಿಶ್ಲೇಷಣೆಗಳು ಸರ್ವನಾಮಗಳನ್ನು ನಾಮಪದಗಳಿಂದ ಪ್ರತ್ಯೇಕವಾದ ವರ್ಗವಾಗಿ ಸೇರಿಸುತ್ತವೆ, ಮತ್ತು ಸಂಯೋಗಗಳನ್ನು ಅಧೀನಕಾರರು ಮತ್ತು ಸಂಯೋಜಕಗಳಾಗಿ ಉಪವಿಭಾಗ ಮಾಡಿ ಮತ್ತು ಮಧ್ಯಸ್ಥಿಕೆಗಳ ವರ್ಗವನ್ನು ಸೇರಿಸುತ್ತವೆ. ಇಂಗ್ಲಿಷ್ ಕೂಡ ಉತ್ಕೃಷ್ಟವಾದ ಸಹಾಯಕ ಕ್ರಿಯಾಪದಗಳನ್ನು ಹೊಂದಿದೆ, ಉದಾಹರಣೆಗೆ ಹೊಂದಿವೆ ಮತ್ತು ಮಾಡು, ಮನಸ್ಥಿತಿ ಮತ್ತು ಅಂಶದ ವರ್ಗಗಳನ್ನು ವ್ಯಕ್ತಪಡಿಸುತ್ತದೆ. ಪ್ರಶ್ನೆಗಳನ್ನು do-ಬೆಂಬಲ, wh-ಚಲನೆ ( wh - ನಿಂದ ಪ್ರಾರಂಭವಾಗುವ ಪ್ರಶ್ನೆ ಪದಗಳ ಮುಂಭಾಗ) ಮತ್ತು ಕೆಲವು ಕ್ರಿಯಾಪದಗಳೊಂದಿಗೆ ಪದ ಕ್ರಮದ ವಿಲೋಮದಿಂದ ಗುರುತಿಸಲಾಗಿದೆ. ಜರ್ಮನಿಕ್ ಭಾಷೆಗಳ ವಿಶಿಷ್ಟವಾದ ಕೆಲವು ಲಕ್ಷಣಗಳು ಇಂಗ್ಲಿಷ್‌ನಲ್ಲೂ ಉಳಿದುಕೊಂಡಿವೆ. ನಾಮಪದಗಳು ಮತ್ತು ನಾಮಪದ ನುಡಿಗಟ್ಟುಗಳು ಇಂಗ್ಲಿಷ್ ನಾಮಪದಗಳನ್ನು ಸಂಖ್ಯೆ ಮತ್ತು ಸ್ವಾಧೀನಕ್ಕಾಗಿ ಮಾತ್ರ ವಿಭಜಿಸಲಾಗುತ್ತದೆ. ವ್ಯುತ್ಪತ್ತಿ ಅಥವಾ ಸಂಯೋಜನೆಯ ಮೂಲಕ ಹೊಸ ನಾಮಪದಗಳನ್ನು ರಚಿಸಬಹುದು. ಅವುಗಳನ್ನು ಶಬ್ದಾರ್ಥವಾಗಿ ಸರಿಯಾದ ನಾಮಪದಗಳು (ಹೆಸರುಗಳು) ಮತ್ತು ಸಾಮಾನ್ಯ ನಾಮಪದಗಳಾಗಿ ವಿಂಗಡಿಸಲಾಗಿದೆ. ಸಾಮಾನ್ಯ ನಾಮಪದಗಳನ್ನು ಪ್ರತಿಯಾಗಿ ಮೂರ್ತ ಮತ್ತು ಅಮೂರ್ತ ನಾಮಪದಗಳಾಗಿ ಮತ್ತು ವ್ಯಾಕರಣದ ಪ್ರಕಾರ ಎಣಿಕೆ ನಾಮಪದಗಳು ಮತ್ತು ಸಾಮೂಹಿಕ ನಾಮಪದಗಳೆಂಧು ವಿಂಗಡಿಸಲಾಗಿದೆ. ಬಹುವಚನ ಪ್ರತ್ಯಯ - s ಬಳಕೆಯ ಮೂಲಕ ಬಹುವಚನ ಸಂಖ್ಯೆಗೆ ಹೆಚ್ಚಿನ ಸಂಖ್ಯೆಯ ನಾಮಪದಗಳನ್ನು ವಿಭಜಿಸಲಾಗುತ್ತದೆ, ಆದರೆ ಕೆಲವು ನಾಮಪದಗಳು ಅನಿಯಮಿತ ಬಹುವಚನ ರೂಪಗಳನ್ನು ಹೊಂದಿವೆ. ಸಾಮೂಹಿಕ ನಾಮಪದಗಳನ್ನು ಎಣಿಕೆ ನಾಮಪದ ವರ್ಗೀಕರಣದ ಮೂಲಕ ಮಾತ್ರ ಬಹುವಚನಗೊಳಿಸಬಹುದು, ಉದಾಹರಣೆಗೆ ಒಂದು ತುಂಡು ಬ್ರೆಡ್, ಎರಡು ತುಂಡು ಬ್ರೆಡ್. ನಿಯಮಿತ ಬಹುವಚನ ರಚನೆ: ಏಕವಚನ: cat, dog ಬೆಕ್ಕು, ನಾಯಿ ಬಹುವಚನ: cats, dogs ಬೆಕ್ಕುಗಳು, ನಾಯಿಗಳು ಅನಿಯಮಿತ ಬಹುವಚನ ರಚನೆ: ಏಕವಚನ: man, woman, foot, fish, ox, knife, mouse ಪುರುಷ, ಮಹಿಳೆ, ಕಾಲು, ಮೀನು, ಎತ್ತು, ಚಾಕು, ಇಲಿ ಬಹುವಚನ: men, women, feet, fish, oxen, knives, mice ಪುರುಷರು, ಮಹಿಳೆಯರು, ಕಾಲುಗಳು, ಮೀನುಗಳು, ಎತ್ತುಗಳು, ಚಾಕುಗಳು, ಇಲಿಗಳು ಸ್ವಾಮ್ಯದ ನಿರ್ಮಾಣಗಳು: With -s: The woman's husband's child ಜೊತೆ -s: ಮಹಿಳೆಯ ಗಂಡನ ಮಗು With of: The child of the husband of the woman ಇದರೊಂದಿಗೆ: ಮಹಿಳೆಯ ಗಂಡನ ಮಗು ವಿಶೇಷಣಗಳು ಇಂಗ್ಲಿಷ್ ವಿಶೇಷಣಗಳು ಉತ್ತಮ, ದೊಡ್ಡದು, ಆಸಕ್ತಿದಾಯಕ ಮತ್ತು ಕೆನಡಿಯನ್ ನಂತಹ ಪದಗಳಾಗಿವೆ, ಅದು ಸಾಮಾನ್ಯವಾಗಿ ನಾಮಪದಗಳನ್ನು ಮಾರ್ಪಡಿಸುತ್ತದೆ, ಅವುಗಳ ಉಲ್ಲೇಖಗಳ ಗುಣಲಕ್ಷಣಗಳನ್ನು ಸೂಚಿಸುತ್ತದೆ (ಉದಾ, ಕೆಂಪು ಕಾರು ). ಮಾರ್ಪಾಡುಗಳಾಗಿ, ಅವರು ಮಾರ್ಪಡಿಸುವ ನಾಮಪದಗಳ ಮೊದಲು ಮತ್ತು ನಿರ್ಧರಿಸುವ ನಂತರ ಬರುತ್ತಾರೆ. ಇಂಗ್ಲಿಷ್ ವಿಶೇಷಣಗಳು ಪೂರ್ವಸೂಚಕ ಪೂರಕಗಳಾಗಿ ಕಾರ್ಯನಿರ್ವಹಿಸುತ್ತವೆ (ಉದಾಹರಣೆಗೆ, ಮಗು ಸಂತೋಷವಾಗಿದೆ). ಆಧುನಿಕ ಇಂಗ್ಲಿಷ್‌ನಲ್ಲಿ, ಇತರ ಇಂಡೋ-ಯುರೋಪಿಯನ್ ಭಾಷೆಗಳಲ್ಲಿ ಗುಣವಾಚಕಗಳು ಮಾಡುವಂತೆ, ಅವರು ಮಾರ್ಪಡಿಸುವ ನಾಮಪದದೊಂದಿಗೆ ರೂಪದಲ್ಲಿ ಒಪ್ಪಿಕೊಳ್ಳುವಂತೆ ಗುಣವಾಚಕಗಳನ್ನು ಒಳಗೊಳ್ಳುವುದಿಲ್ಲ. ಉದಾಹರಣೆಗೆ, ತೆಳ್ಳಗಿನ ಹುಡುಗ ಮತ್ತು ಅನೇಕ ತೆಳ್ಳಗಿನ ಹುಡುಗಿಯರು ಎಂಬ ಪದಗುಚ್ಛಗಳಲ್ಲಿ, ನಾಮಪದದ ಸಂಖ್ಯೆ ಅಥವಾ ಲಿಂಗವನ್ನು ಒಪ್ಪಿಕೊಳ್ಳಲು ತೆಳ್ಳಗಿನ ವಿಶೇಷಣವು ರೂಪವನ್ನು ಬದಲಾಯಿಸುವುದಿಲ್ಲ. ಕೆಲವು ಗುಣವಾಚಕಗಳನ್ನು ಹೋಲಿಕೆಯ ಮಟ್ಟಕ್ಕೆ ಸೇರಿಸಲಾಗುತ್ತದೆ, ಧನಾತ್ಮಕ ಪದವಿಯನ್ನು ಗುರುತಿಸಲಾಗಿಲ್ಲ, ಪ್ರತ್ಯಯ -er ತುಲನಾತ್ಮಕವಾಗಿ ಗುರುತಿಸುತ್ತದೆ ಮತ್ತು -est ಅತಿಶಯೋಕ್ತಿಯನ್ನು ಗುರುತಿಸುತ್ತದೆ: ಚಿಕ್ಕ ಹುಡುಗ, ಹುಡುಗ ಹುಡುಗಿಗಿಂತ ಚಿಕ್ಕವನು, ಆ ಹುಡುಗ ಚಿಕ್ಕವನು . ಕೆಲವು ವಿಶೇಷಣಗಳು ಅನಿಯಮಿತ ಪೂರಕ ತುಲನಾತ್ಮಕ ಮತ್ತು ಅತ್ಯುನ್ನತ ರೂಪಗಳನ್ನು ಹೊಂದಿವೆ, ಉದಾಹರಣೆಗೆ ಉತ್ತಮ, ಉತ್ತಮ ಮತ್ತು ಉತ್ತಮ ಅತ್ಯುತ್ತಮ . ಇತರ ವಿಶೇಷಣಗಳು ಬಾಹ್ಯ ರಚನೆಗಳಿಂದ ರೂಪುಗೊಂಡ ತುಲನಾತ್ಮಕತೆಯನ್ನು ಹೊಂದಿವೆ, ಕ್ರಿಯಾವಿಶೇಷಣವು ತುಲನಾತ್ಮಕತೆಯನ್ನು ಹೆಚ್ಚು ಗುರುತಿಸುತ್ತದೆ ಮತ್ತು ಹೆಚ್ಚಿನವು ಅತ್ಯುತ್ಕೃಷ್ಟತೆಯನ್ನು ಗುರುತಿಸುತ್ತದೆ: ಸಂತೋಷ ಅಥವಾ ಹೆಚ್ಚು ಸಂತೋಷ, ಸಂತೋಷದ ಅಥವಾ ಅತ್ಯಂತ ಸಂತೋಷ. ಪೂರ್ವಭಾವಿ ಸ್ಥಾನಗಳು / Prepositions ಪೂರ್ವಭಾವಿ ಪದಗುಚ್ಛಗಳು (PP) ಪೂರ್ವಭಾವಿ ಮತ್ತು ಒಂದು ಅಥವಾ ಹೆಚ್ಚಿನ ನಾಮಪದಗಳಿಂದ ಕೂಡಿದ ಪದಗುಚ್ಛಗಳಾಗಿವೆ, ಉದಾ ನಾಯಿಯೊಂದಿಗೆ, ನನ್ನ ಸ್ನೇಹಿತನಿಗೆ, ಶಾಲೆಗೆ, ಇಂಗ್ಲೆಂಡ್ನಲ್ಲಿ . ಪೂರ್ವಭಾವಿ ಸ್ಥಾನಗಳು ಇಂಗ್ಲಿಷ್‌ನಲ್ಲಿ ವ್ಯಾಪಕವಾದ ಬಳಕೆಗಳನ್ನು ಹೊಂದಿವೆ. ವಿಭಿನ್ನ ಘಟಕಗಳ ನಡುವಿನ ಚಲನೆ, ಸ್ಥಳ ಮತ್ತು ಇತರ ಸಂಬಂಧಗಳನ್ನು ವಿವರಿಸಲು ಅವುಗಳನ್ನು ಬಳಸಲಾಗುತ್ತದೆ, ಆದರೆ ಅವುಗಳು ಪೂರಕ ಷರತ್ತುಗಳು ಮತ್ತು ಕ್ರಿಯಾಪದಗಳ ಓರೆಯಾದ ವಾದಗಳನ್ನು ಪರಿಚಯಿಸುವಂತಹ ಅನೇಕ ವಾಕ್ಯರಚನೆಯ ಬಳಕೆಗಳನ್ನು ಹೊಂದಿವೆ. ಉದಾಹರಣೆಗೆ, ನಾನು ಅವನಿಗೆ ಕೊಟ್ಟೆ ಪದಗುಚ್ಛದಲ್ಲಿ, ಸ್ವೀಕರಿಸುವವರನ್ನು ಗುರುತಿಸುವ ಪೂರ್ವಭಾವಿ, ಅಥವಾ ಕೊಡಲು ಕ್ರಿಯಾಪದದ ಪರೋಕ್ಷ ವಸ್ತು. ಸಾಂಪ್ರದಾಯಿಕವಾಗಿ ಪದಗಳನ್ನು ಅವರು ಹಿಂದಿನ ನಾಮಪದದ ಪ್ರಕರಣವನ್ನು ನಿಯಂತ್ರಿಸಿದರೆ ಮಾತ್ರ ಅವುಗಳನ್ನು ಪೂರ್ವಭಾವಿಯಾಗಿ ಪರಿಗಣಿಸಲಾಗುತ್ತದೆ, ಉದಾಹರಣೆಗೆ ಸರ್ವನಾಮಗಳು "ಅವಳೊಂದಿಗೆ", "ನನಗೆ", "ನಮಗಾಗಿ" ಎಂಬ ವ್ಯಕ್ತಿನಿಷ್ಠ ರೂಪಕ್ಕಿಂತ ವಸ್ತುನಿಷ್ಠವಾಗಿ ಬಳಸಲು ಕಾರಣವಾಗುತ್ತದೆ. ಆದರೆ Huddleston & Pullum (2002 ನಂತಹ ಕೆಲವು ಸಮಕಾಲೀನ ವ್ಯಾಕರಣಗಳು ಇನ್ನು ಮುಂದೆ ಪ್ರಕರಣದ ಅಧಿಕಾರವನ್ನು ಪೂರ್ವಭಾವಿಗಳ ವರ್ಗದ ವ್ಯಾಖ್ಯಾನಿಸುವ ಲಕ್ಷಣವೆಂದು ಪರಿಗಣಿಸುವುದಿಲ್ಲ, ಬದಲಿಗೆ ಪೂರ್ವಭಾವಿ ಪದಗುಚ್ಛಗಳ ಶೀರ್ಷಿಕೆಗಳಾಗಿ ಕಾರ್ಯನಿರ್ವಹಿಸುವ ಪದಗಳಾಗಿ ಪೂರ್ವಭಾವಿಗಳನ್ನು ವ್ಯ[ ಉಲ್ಲೇಖದ ಅಗತ್ಯವಿದೆ ]ಾಖ್ಯಾನಿಸುತ್ತದೆ. ಬರವಣಿಗೆ ವ್ಯವಸ್ಥೆ ಒಂಬತ್ತನೇ ಶತಮಾನದಿಂದ, ಇಂಗ್ಲಿಷ್ ಅನ್ನು ಲ್ಯಾಟಿನ್ ವರ್ಣಮಾಲೆಯಲ್ಲಿ ಬರೆಯಲಾಗಿದೆ (ಇದನ್ನು ರೋಮನ್ ವರ್ಣಮಾಲೆ ಎಂದೂ ಕರೆಯಲಾಗುತ್ತದೆ). ಆಂಗ್ಲೋ-ಸ್ಯಾಕ್ಸನ್ ರೂನ್‌ಗಳಲ್ಲಿನ ಹಿಂದಿನ ಹಳೆಯ ಇಂಗ್ಲಿಷ್ ಪಠ್ಯಗಳು ಕೇವಲ ಚಿಕ್ಕ ಬರಹಗಳಾಗಿವೆ. ಇಂದಿಗೂ ಉಳಿದುಕೊಂಡಿರುವ ಹಳೆಯ ಇಂಗ್ಲಿಷ್‌ನಲ್ಲಿನ ಬಹುಪಾಲು ಸಾಹಿತ್ಯ ಕೃತಿಗಳನ್ನು ರೋಮನ್ ವರ್ಣಮಾಲೆಯಲ್ಲಿ ಬರೆಯಲಾಗಿದೆ. ಆಧುನಿಕ ಇಂಗ್ಲಿಷ್ ವರ್ಣಮಾಲೆಯು ಲ್ಯಾಟಿನ್ ಲಿಪಿಯ 26 ಅಕ್ಷರಗಳನ್ನು ಒಳಗೊಂಡಿದೆ: a, b, c, d, e, f, g, h, i, j, k, l, m, n, o, p, q, r, s, t, u, v, w, x, y, z (ಇದು ಬಂಡವಾಳದ ರೂಪಗಳನ್ನು ಸಹ ಹೊಂದಿದೆ: A, B, C, D, E, F, G, H, I, J, K, L, M, N, O, P, Q, R, S, T, U, V, W, X, Y, Z). ಇಂಗ್ಲಿಷ್‌ನ ಕಾಗುಣಿತ ವ್ಯವಸ್ಥೆ ಅಥವಾ ಅಕ್ಷರ ಸಂಯೋಜನೆ ಬಹು-ಪದರ ಮತ್ತು ಸಂಕೀರ್ಣವಾಗಿದೆ, ಸ್ಥಳೀಯ ಜರ್ಮನಿಕ್ ವ್ಯವಸ್ಥೆಯ ಮೇಲೆ ಫ್ರೆಂಚ್, ಲ್ಯಾಟಿನ್ ಮತ್ತು ಗ್ರೀಕ್ ಕಾಗುಣಿತದ ಅಂಶಗಳಿವೆ. ಅಕ್ಷರ ಸಂಯೋಜನೆಯು ವೇಗವನ್ನು ಇಟ್ಟುಕೊಳ್ಳದ ಧ್ವನಿ ಬದಲಾವಣೆಗಳ ಮೂಲಕ ಹೆಚ್ಚಿನ ತೊಡಕುಗಳು ಉಂಟಾಗಿವೆ. ಅಧಿಕೃತ ಸಂಸ್ಥೆಗಳು ಕಾಗುಣಿತ ಸುಧಾರಣೆಗಳನ್ನು ಉತ್ತೇಜಿಸಿದ ಯುರೋಪಿಯನ್ ಭಾಷೆಗಳಿಗೆ ಹೋಲಿಸಿದರೆ, ಇಂಗ್ಲಿಷ್ ಉಚ್ಚಾರಣೆಯ ಕಡಿಮೆ ಸ್ಥಿರವಾದ ಸೂಚಕವಾಗಿದೆ ಮತ್ತು ಪದಗಳ ಪ್ರಮಾಣಿತ ಕಾಗುಣಿತವನ್ನು ಹೊಂದಿದೆ, ಅದು ಪದವನ್ನು ಹೇಗೆ ಉಚ್ಚರಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದರಿಂದ ಊಹಿಸಲು ಹೆಚ್ಚು ಕಷ್ಟವಾಗುತ್ತದೆ. ಬ್ರಿಟಿಷ್ ಮತ್ತು ಅಮೇರಿಕನ್ ಇಂಗ್ಲಿಷ್ ನಡುವೆ ವ್ಯವಸ್ಥಿತ ಕಾಗುಣಿತ ವ್ಯತ್ಯಾಸಗಳಿವೆ . ಈ ಸನ್ನಿವೇಶಗಳು ಇಂಗ್ಲಿಷ್‌ನಲ್ಲಿ ಕಾಗುಣಿತ ಸುಧಾರಣೆಯ ಪ್ರಸ್ತಾಪಗಳನ್ನು ಪ್ರೇರೇಪಿಸಿವೆ. ವ್ಯಂಜನ ಶಬ್ದಗಳನ್ನು ಉಚ್ಚರಿಸಲು ಬಳಸುವ ಅಕ್ಷರಗಳು ಅಥವಾ ಡಿಗ್ರಾಫ್‌ಗಳಿಗೆ ಕಾಗುಣಿತ ಮತ್ತು ಉಚ್ಚಾರಣೆಯ ನಡುವಿನ ವ್ಯವಹಾರವನ್ನು ಸಾಮಾನ್ಯವಾಗಿ ಇಂಗ್ಲಿಷ್ ಓದುಗರು ಅವಲಂಬಿಸಬಹುದು. b, d, f, h, j, k, l, m, n, p, r, s, t, v, w, y, z ಅಕ್ಷರಗಳು ಕ್ರಮವಾಗಿ ಫೋನೆಮ್ಸ್ /b, d, f, h, dʒ, k, l, m, n, p, r, s, t, v, w, j, z/ ಪ್ರತಿನಿಧಿಸುತ್ತವೆ /b, d, f, h, dʒ, k, l, m, n, p, r, s, t, v, w, j, z/ . c ಮತ್ತು g ಅಕ್ಷರಗಳು ಸಾಮಾನ್ಯವಾಗಿ /k/ ಮತ್ತು /ɡ/ ಅನ್ನು c ಮತ್ತು g ಅಕ್ಷರಗಳ ಉಚ್ಚಾರಣೆಗಳಲ್ಲಿನ ವ್ಯತ್ಯಾಸಗಳು, ಮೃದುವಾದ c ಉಚ್ಚಾರಣೆ /s/ ಮತ್ತು ಮೃದುವಾದ g ಉಚ್ಚಾರಣೆ /dʒ/ಪ್ರತಿನಿಧಿಸುತ್ತವೆ. ಸಾಮಾನ್ಯವಾಗಿ ಪ್ರಮಾಣಿತ ಇಂಗ್ಲಿಷ್ ಕಾಗುಣಿತದಲ್ಲಿ ಕೆಳಗಿನ ಅಕ್ಷರಗಳಿಂದ ಸಂಕೇತಿಸಲ್ಪಡುತ್ತವೆ. ಧ್ವನಿಗಳು ಮತ್ತು ಧ್ವನಿಮಾಗಳು ಅನುಕ್ರಮಗಳನ್ನು ಪ್ರತಿನಿಧಿಸಲು ಬಳಸಲಾಗುವ ಡಿಗ್ರಾಫ್‌ಗಳು /tʃ/ ಗಾಗಿ ch, /ʃ/ ಗೆ sh, /θ/ ಅಥವಾ /ð/ ಗೆ th, /ŋ/ ಗೆ ng, /kw/ ಗೆ q ಮತ್ತು /f/ in ಗಾಗಿ ph ಗ್ರೀಕ್ ಮೂಲದ ಪದಗಳು. ಏಕ ಅಕ್ಷರ x ಅನ್ನು ಸಾಮಾನ್ಯವಾಗಿ /z/ ಎಂದು ಪದ-ಆರಂಭಿಕ ಸ್ಥಾನದಲ್ಲಿ ಮತ್ತು /ks/ ಎಂದು ಉಚ್ಚರಿಸಲಾಗುತ್ತದೆ. ಈ ಸಾಮಾನ್ಯೀಕರಣಗಳಿಗೆ ಅಪವಾದಗಳಿವೆ, ಸಾಮಾನ್ಯವಾಗಿ ಎರವಲು ಪದಗಳನ್ನು ಅವುಗಳ ಮೂಲದ ಭಾಷೆಗಳ ಕಾಗುಣಿತ ಮಾದರಿಗಳ ಪ್ರಕಾರ ಉಚ್ಚರಿಸಲಾಗುತ್ತದೆ ಅಥವಾ ಇಂಗ್ಲಿಷ್ ಪದಗಳಿಗೆ ಲ್ಯಾಟಿನ್ ಕಾಗುಣಿತ ಮಾದರಿಗಳನ್ನು ಅನುಸರಿಸಲು ಆಧುನಿಕ ಇಂಗ್ಲಿಷ್‌ನ ಆರಂಭಿಕ ಅವಧಿಯಲ್ಲಿ ವಿದ್ವಾಂಸರು ಪ್ರಸ್ತಾಪಿಸಿದ ಜರ್ಮನಿಕ್ ಮೂಲದಅವಶೇಷಗಳು. ಉಪಭಾಷೆಗಳು, ಉಚ್ಚಾರಣೆಗಳು ಮತ್ತು ಪ್ರಭೇದಗಳು ಉಪಭಾಷಾಶಾಸ್ತ್ರಜ್ಞರು ಅನೇಕ ಇಂಗ್ಲಿಷ್ ಉಪಭಾಷೆಗಳನ್ನು ಗುರುತಿಸುತ್ತಾರೆ, ಇದು ಸಾಮಾನ್ಯವಾಗಿ ವ್ಯಾಕರಣ, ಶಬ್ದಕೋಶ ಮತ್ತು ಉಚ್ಚಾರಣೆಯ ಮಾದರಿಗಳಲ್ಲಿ ಪರಸ್ಪರ ಭಿನ್ನವಾಗಿರುವ ಪ್ರಾದೇಶಿಕ ಪ್ರಭೇದಗಳನ್ನು ಉಲ್ಲೇಖಿಸುತ್ತದೆ. ನಿರ್ದಿಷ್ಟ ಪ್ರದೇಶಗಳ ಉಚ್ಚಾರಣೆಯು ಉಪಭಾಷೆಗಳನ್ನು ಪ್ರತ್ಯೇಕ ಪ್ರಾದೇಶಿಕ ಉಚ್ಚಾರಣೆಗಳಾಗಿ ಪ್ರತ್ಯೇಕಿಸುತ್ತದೆ. ಇಂಗ್ಲಿಷ್‌ನ ಪ್ರಮುಖ ಸ್ಥಳೀಯ ಉಪಭಾಷೆಗಳನ್ನು ಭಾಷಾಶಾಸ್ತ್ರಜ್ಞರು ಸಾಮಾನ್ಯವಾಗಿ ಬ್ರಿಟಿಷ್ ಇಂಗ್ಲಿಷ್ (BrE) ಮತ್ತು ಉತ್ತರ ಅಮೇರಿಕನ್ ಇಂಗ್ಲಿಷ್ (NAE) ಎಂಬ ಎರಡು ಸಾಮಾನ್ಯ ವರ್ಗಗಳಾಗಿ ವಿಂಗಡಿಸಿದ್ದಾರೆ. ಇಂಗ್ಲಿಷ್ ಪ್ರಭೇದಗಳ ಮೂರನೇ ಸಾಮಾನ್ಯ ಪ್ರಮುಖ ಗುಂಪು ಕೂಡ ಸದರ್ನ್ ಹೆಮಿಸ್ಫಿಯರ್ ಇಂಗ್ಲಿಷ್, ಪ್ರಮುಖವಾದವು ಆಸ್ಟ್ರೇಲಿಯನ್ ಮತ್ತು ನ್ಯೂಜಿಲೆಂಡ್ ಇಂಗ್ಲಿಷ್ ಅಸ್ತಿತ್ವದಲ್ಲಿದೆ. ಸರ್ವನಾಮಗಳು, ಪ್ರಕರಣ ಮತ್ತು ವ್ಯಕ್ತಿ ವೈಯಕ್ತಿಕ ಸರ್ವನಾಮಗಳು ಹೆಚ್ಚಿನ ವ್ಯಕ್ತಿಗಳಲ್ಲಿ ವ್ಯಕ್ತಿನಿಷ್ಠ ಮತ್ತು ವಸ್ತುನಿಷ್ಠ ಪ್ರಕರಣಗಳ ನಡುವಿನ ವ್ಯತ್ಯಾಸವನ್ನು ಉಳಿಸಿಕೊಳ್ಳುತ್ತವೆ (I/me, he/him, she/her, we/us, they/them) ( ನಾನು/ನಾನು, ಅವನು/ಅವನು, ಅವಳು/ಅವಳ, ನಾವು/ನಮಗೆ, ಅವರು/ಅವರು ) ಹಾಗೆಯೇ ಮೂರನೇ ವ್ಯಕ್ತಿಯ ಏಕವಚನದಲ್ಲಿ ವ್ಯತ್ಯಾಸವನ್ನು (ಇದರಿಂದ ಪ್ರತ್ಯೇಕಿಸುವುದು ) ಮೂರನೇ ವ್ಯಕ್ತಿಯ ಏಕವಚನ ಸರ್ವನಾಮಗಳ ಮೂರು ಸೆಟ್‌ಗಳು) ಮತ್ತು ಮೂರನೇ ವ್ಯಕ್ತಿ ಏಕವಚನದಲ್ಲಿ ಐಚ್ಛಿಕ ಲಿಂಗ ವ್ಯತ್ಯಾಸ she/her (ಅವಳು/ಅವಳ [ಸ್ತ್ರೀಲಿಂಗ], they/them ಅವರು/ಅವರು [ಎಪಿಸೆನ್ ], ಮತ್ತು he/him ಅವನು/ಅವನ [ಪುಲ್ಲಿಂಗ] ನಡುವಿನ ವ್ಯತ್ಯಾಸ. ವ್ಯಕ್ತಿನಿಷ್ಠ ಪ್ರಕರಣವು ಹಳೆಯ ಇಂಗ್ಲಿಷ್ ನಾಮಕರಣ ಪ್ರಕರಣಕ್ಕೆ ಅನುರೂಪವಾಗಿದೆ, ಮತ್ತು ವಸ್ತುನಿಷ್ಠ ಪ್ರಕರಣವನ್ನು ಹಿಂದಿನ ಆಪಾದಿತ ಪ್ರಕರಣ (ರೋಗಿಗೆ, ಅಥವಾ ಸಂಕ್ರಮಣ ಕ್ರಿಯಾಪದದ ನೇರ ವಸ್ತು) ಮತ್ತು ಹಳೆಯ ಇಂಗ್ಲಿಷ್ ವಿಶೇಷಣ ಪ್ರಕರಣದ (ಒಂದು) ಅರ್ಥದಲ್ಲಿ ಬಳಸಲಾಗುತ್ತದೆ. ಸರ್ವನಾಮವು ಸೀಮಿತ ಷರತ್ತಿನ ವಿಷಯವಾಗಿದ್ದಾಗ ವ್ಯಕ್ತಿನಿಷ್ಠವನ್ನು ಬಳಸಲಾಗುತ್ತದೆ, ಇಲ್ಲದಿದ್ದರೆ ವಸ್ತುನಿಷ್ಠವನ್ನು ಬಳಸಲಾಗುತ್ತದೆ. ಹೆನ್ರಿ ಸ್ವೀಟ್ ಮತ್ತು ಒಟ್ಟೊ ಜೆಸ್ಪರ್ಸೆನ್ ರಂತಹ ವ್ಯಾಕರಣಕಾರರು ಇಂಗ್ಲಿಷ್ ಪ್ರಕರಣಗಳು ಸಾಂಪ್ರದಾಯಿಕ ಲ್ಯಾಟಿನ್-ಆಧಾರಿತ ವ್ಯವಸ್ಥೆಗೆ ಹೊಂದಿಕೆಯಾಗುವುದಿಲ್ಲ. ಸ್ವಾಮ್ಯಸೂಚಕ ಸರ್ವನಾಮಗಳು ಅವಲಂಬಿತ ಮತ್ತು ಸ್ವತಂತ್ರ ರೂಪಗಳಲ್ಲಿ ಅಸ್ತಿತ್ವದಲ್ಲಿವೆ; ಅವಲಂಬಿತ ರೂಪವು ನಾಮಪದವನ್ನು (as in my chair ನನ್ನ ಕುರ್ಚಿಯಲ್ಲಿರುವಂತೆ ) ನಿರ್ದಿಷ್ಟಪಡಿಸುವ ನಿರ್ಣಾಯಕವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಸ್ವತಂತ್ರ ರೂಪವು ನಾಮಪದದಂತೆ ಏಕಾಂಗಿಯಾಗಿ ನಿಲ್ಲುತ್ತದೆ (ಉದಾ the chair is mine ಕುರ್ಚಿ ನನ್ನದು). ಎರಡನೆಯ ಮತ್ತು ಮೂರನೆಯ ವ್ಯಕ್ತಿಗಳು ಬಹುವಚನ ಮತ್ತು ಏಕವಚನದ ನಡುವೆ ಸರ್ವನಾಮಗಳನ್ನು ಹಂಚಿಕೊಳ್ಳುತ್ತಾರೆ: ಬಹುವಚನ ಮತ್ತು ಏಕವಚನಗಳು ಯಾವಾಗಲೂ ( you, your, yoursನೀವು, ನಿಮ್ಮ, ನಿಮ್ಮದು ) ಎರಡನೆಯ ವ್ಯಕ್ತಿಯಲ್ಲಿ (ಪ್ರತಿಫಲಿತ ರೂಪವನ್ನು ಹೊರತುಪಡಿಸಿ: yourself/yourselves ನೀವೇ/ನಿಮ್ಮನ್ನು ) ಹೆಚ್ಚಿನ ಉಪಭಾಷೆಗಳಲ್ಲಿ ಒಂದೇ ಆಗಿರುತ್ತವೆ. ಕೆಲವು ಉಪಭಾಷೆಗಳು ನವೀನವಾದ ಎರಡನೇ ವ್ಯಕ್ತಿ ಬಹುವಚನ ಸರ್ವನಾಮಗಳನ್ನು ಪರಿಚಯಿಸಿವೆ, ಉದಾಹರಣೆಗೆ y'all ( ದಕ್ಷಿಣ ಅಮೇರಿಕನ್ ಇಂಗ್ಲಿಷ್ ಮತ್ತು ಆಫ್ರಿಕನ್-ಅಮೇರಿಕನ್ (ವರ್ನಾಕ್ಯುಲರ್ ಇಂಗ್ಲಿಷ್‌ನಲ್ಲಿ ಕಂಡುಬರುತ್ತದೆ), youse ಯೂಸೆ ( ಆಸ್ಟ್ರೇಲಿಯನ್ ಇಂಗ್ಲಿಷ್‌ನಲ್ಲಿ ಕಂಡುಬರುತ್ತದೆ) ಅಥವಾ ye ಯೇ ( ಹಿಬರ್ನೋ-ಇಂಗ್ಲಿಷ್‌ನಲ್ಲಿ ). ಮೂರನೆಯ ವ್ಯಕ್ತಿಯಲ್ಲಿ, they/them ಅವರು/ಅವರು ಸರ್ವನಾಮಗಳ ಸರಣಿಯನ್ನು (they, them, their, theirs, themselves ಅವರು, ಅವರನ್ನು, ಅವರ, ಅವರದು, ಅವರೇ ) ಬಹುವಚನ ಮತ್ತು ಏಕವಚನದಲ್ಲಿ ಬಳಸಲಾಗುತ್ತದೆ ಮತ್ತು ಬಹುವಚನಕ್ಕೆ ಲಭ್ಯವಿರುವ ಏಕೈಕ ಸರ್ವನಾಮಗಳು. ಏಕವಚನದಲ್ಲ, they/them ಅವರು/ಅವರು ಸರಣಿಗಳು (ಕೆಲವೊಮ್ಮೆ ಏಕವಚನ-ನಿರ್ದಿಷ್ಟ ಪ್ರತಿಫಲಿತ ರೂಪವನ್ನು ಸೇರಿಸುವುದರೊಂದಿಗೆ ) ಲಿಂಗ-ತಟಸ್ಥ ಸರ್ವನಾಮಗಳ ಗುಂಪಾಗಿ ಕಾರ್ಯನಿರ್ವಹಿಸುತ್ತವೆ. ಈ ಸರ್ವನಾಮಗಳು LGBT ಸಂಸ್ಕೃತಿಯ ಭಾಗವಾಗಿ ಹೆಚ್ಚು ಅಂಗೀಕರಿಸಲ್ಪಟ್ಟಿವೆ. ಬ್ರಿಟನ್ ಮತ್ತು ಐರ್ಲೆಂಡ್ ಗ್ರಂಥಸೂಚಿ * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * The survey of the Germanic branch languages includes chapters by Winfred P. Lehmann, Ans van Kemenade, John Ole Askedal, Erik Andersson, Neil Jacobs, Silke Van Ness, and Suzanne Romaine. * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * ಉಲ್ಲೇಖಗಳು ಭಾಷೆಗಳು ಭಾಷೆ ಭಾಷಾ ಕುಟುಂಬಗಳು ಭಾಷಾ ವಿಜ್ಞಾನ ಭಾರತ ಭಾರತದ ಸಂವಿಧಾನ ಭಾರತೀಯ ಭಾಷೆಗಳು ದ್ರಾವಿಡ ಭಾಷೆಗಳು ಜರ್ಮನಿಕ್ ಭಾಷೆಗಳು Pages with unreviewed translations
2405
https://kn.wikipedia.org/wiki/%E0%B2%AD%E0%B3%8C%E0%B2%A4%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0
ಭೌತಶಾಸ್ತ್ರ
ಭೌತಶಾಸ್ತ್ರವು (ಪುರಾತನ ಗ್ರೀಕ್: φυσική (ἐπιστήμη), ಭಾಷಾಂತರ: physikḗ (epistḗmē), lit. 'ನೈಸರ್ಗಿಕ ಜ್ಞಾನ', φύσις phýsis "ಪ್ರಕೃತಿ") ಪ್ರಕೃತಿಯ ಚಲನೆ, ನಡವಳಿಕೆಗಳನ್ನು ಹಾಗೂ ಬಾಹ್ಯಾಕಾಶ ಮತ್ತು ಕಾಲದ - (ಸಮಯದ) ಮೂಲಕ ಮತ್ತು ಶಕ್ತಿ ಮತ್ತು ಬಲಗಳ ಸಂಬಂಧಿತ ಘಟಕಗಳನ್ನು ಅಧ್ಯಯನ ಮಾಡುತ್ತದೆ. ಭೌತಶಾಸ್ತ್ರವು ಅತ್ಯಂತ ಮೂಲಭೂತ ವೈಜ್ಞಾನಿಕ ವಿಭಾಗಗಳಲ್ಲಿ ಒಂದಾಗಿದೆ ಮತ್ತು ಬ್ರಹ್ಮಾಂಡವು ಹೇಗೆ ವರ್ತಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅದರ ಪ್ರಮುಖ ಗುರಿಯಾಗಿದೆ. ಭೌತಶಾಸ್ತ್ರವು ಶೈಕ್ಷಣಿಕ ವಿಭಾಗಗಳಲ್ಲಿ ಒಂದಾಗಿದೆ ಮತ್ತು ಖಗೋಳಶಾಸ್ತ್ರವನ್ನು ಸೇರ್ಪಡೆಗೊಳಿಸುವುದರ ಮೂಲಕ ಬಹುಶಃ ಮತ್ತಷ್ಟು ಹಳೆಯ ಶೈಕ್ಷಣಿಕ ವಿಭಾಗವಾಗಿ ಬಿಂಬಿತವಾಗುತ್ತದೆ. ಕಳೆದ ಎರಡು ಸಹಸ್ರಮಾನಗಳಲ್ಲಿ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತಶಾಸ್ತ್ರದ ಕೆಲವು ಶಾಖೆಗಳು ನೈಸರ್ಗಿಕ ತತ್ತ್ವಶಾಸ್ತ್ರದ ಒಂದು ಭಾಗವಾಗಿದ್ದವು, ಆದರೆ ೧೭ ನೆಯ ಶತಮಾನದ ವೈಜ್ಞಾನಿಕ ಕ್ರಾಂತಿಯ ಸಮಯದಲ್ಲಿ, ಈ ನೈಸರ್ಗಿಕ ವಿಜ್ಞಾನಗಳು ತಮ್ಮದೇ ಆದ ಸ್ವಂತ ಸಂಶೋಧನೆ ಪ್ರಯತ್ನಗಳಾಗಿ ಹೊರಹೊಮ್ಮಿದವು. ಭೌತಶಾಸ್ತ್ರವು ಸಂಶೋಧನೆಯ ಅನೇಕ ಅಂತರಶಾಸ್ತ್ರೀಯ ಕ್ಷೇತ್ರಗಳಾದ ಬಯೋಫಿಸಿಕ್ಸ್ ಮತ್ತು ಕ್ವಾಂಟಮ್ ಕೆಮಿಸ್ಟ್ರಿಗಳ ಜೊತೆ ಛೇದಿಸುತ್ತದೆ ಮತ್ತು ಭೌತಶಾಸ್ತ್ರದ ಗಡಿಗಳನ್ನು ಕಠಿಣವಾಗಿ ವ್ಯಾಖ್ಯಾನಿಸಲು ಸಾದ್ಯವಿಲ್ಲ. ಭೌತಶಾಸ್ತ್ರದಲ್ಲಿನ ಹೊಸ ಪರಿಕಲ್ಪನೆಗಳು ಇತರ ವಿಜ್ಞಾನಗಳು ಅಧ್ಯಯನ ಮಾಡುತ್ತಿರುವ ಮೂಲಭೂತ ಕಾರ್ಯವಿಧಾನಗಳನ್ನು ವಿವರಿಸುತ್ತದೆ.ಭೌತಶಾಸ್ತ್ರವು ಗಣಿತಶಾಸ್ತ್ರ ಮತ್ತು ತತ್ತ್ವಶಾಸ್ತ್ರದಂತಹ ಶೈಕ್ಷಣಿಕ ವಿಭಾಗಗಳಲ್ಲಿ ಹೊಸ ಸಂಶೋಧನಾ ವಿಧಾನಗಳನ್ನು ಸೂಚಿಸುತ್ತವೆ. ಭೌತಶಾಸ್ತ್ರದಲ್ಲಿನ ಬೆಳವಣಿಗೆಗಳು ಹೊಸ ತಂತ್ರಜ್ಞಾನಗಳಲ್ಲಿ ಪ್ರಗತಿ ಸಾಧಿಸುತ್ತವೆ. ಉದಾಹರಣೆಗೆ, ವಿದ್ಯುತ್ಕಾಂತೀಯತೆ ಮತ್ತು ಪರಮಾಣು ಭೌತಶಾಸ್ತ್ರದ ಗ್ರಹಿಕೆಯಲ್ಲಿನ ಬೆಳವಣಿಗೆಗಳು ನೇರವಾಗಿ ಆಧುನಿಕ-ದಿನ ಸಮಾಜವನ್ನು ರೂಪಾಂತರಗೊಳಿಸಿದ ಹೊಸ ಉತ್ಪನ್ನಗಳ ಅಭಿವೃದ್ಧಿಗೆ ಕಾರಣವಾಯಿತು, ಉದಾಹರಣೆಗೆ ದೂರದರ್ಶನ, ಕಂಪ್ಯೂಟರ್ಗಳು, ಗೃಹಬಳಕೆಯ ವಸ್ತುಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳು; ಥರ್ಮೋಡೈನಾಮಿಕ್ಸ್ ನಲ್ಲಿನ ಬೆಳವಣಿಗೆಗಳು ಕೈಗಾರೀಕರಣದ ಅಭಿವೃದ್ಧಿ; ಮತ್ತು ಯಂತ್ರಶಾಸ್ತ್ರದಲ್ಲಿನ ಬೆಳವಣಿಗೆಗಳು ಕಲನಶಾಸ್ತ್ರದ ಅಭಿವೃದ್ಧಿಯನ್ನು ಪ್ರೇರೇಪಿಸಿವೆ. ಭೌತಶಾಸ್ತ್ರದ ಉಗಮ ಪ್ರಾಚೀನ ಖಗೋಳ ಶಾಸ್ತ್ರ ಖಗೋಳಶಾಸ್ತ್ರವು ಅತ್ಯಂತ ಹಳೆಯ ನೈಸರ್ಗಿಕ ವಿಜ್ಞಾನಗಳಲ್ಲಿ ಒಂದಾಗಿದೆ. ಸುಮೇರಿಯರು, ಪ್ರಾಚೀನ ಈಜಿಪ್ಟಿನವರು ಮತ್ತು ಸಿಂಧೂ ಕಣಿವೆ ನಾಗರಿಕತೆಯಂತಹ ೩೦೦೦ಬಿ ಸಿ ಈ ಗಿಂತಲೂ ಮುಂಚಿನ ನಾಗರೀಕತೆಗಳು ಪೂರ್ವಭಾವಿ ಜ್ಞಾನವನ್ನು ಹೊಂದಿದ್ದವು ಮತ್ತು ಸೂರ್ಯ,ಚಂದ್ರ ಮತ್ತು ನಕ್ಷತ್ರಗಳ ಚಲನೆಗಳ ಮೂಲಭೂತ ತಿಳುವಳಿಕೆಯನ್ನು ಹೊಂದಿತ್ತು. ನಕ್ಷತ್ರಗಳು ಮತ್ತು ಗ್ರಹಗಳನ್ನು ಇಂದಿಗೂ ಪೂಜಿಸಲಾಗುತ್ತದೆ, ದೇವರುಗಳನ್ನು ಪ್ರತಿನಿಧಿಸುತ್ತವೆ ಎಂಬ ನಂಬಿಕೆ ಇದೆ. ನಕ್ಷತ್ರಗಳ ವೀಕ್ಷಣೆಗೆ ಸಂಬಂಧಿಸಿದ ಸ್ಥಾನಗಳಿಗೆ ವಿವರಣೆಗಳು ಹೆಚ್ಚಾಗಿ ಅವೈಜ್ಞಾನಿಕ ಮತ್ತು ಸಾಕ್ಷ್ಯಾಧಾರಗಳಿಲ್ಲವಾದರೂ, ಈ ಮುಂಚಿನ ಅವಲೋಕನಗಳು ನಂತರದ ಖಗೋಳವಿಜ್ಞಾನದ ಅಡಿಪಾಯವನ್ನು ಹಾಕಿದವು, ಏಕೆಂದರೆ ನಕ್ಷತ್ರಗಳು ಆಕಾಶದಲ್ಲಿ ದೊಡ್ಡ ವಲಯಗಳನ್ನು ಹಾದುಹೋಗುವಂತೆ ಕಂಡುಬಂದವು, ಆದರೆ ಗ್ರಹಗಳ ಸ್ಥಾನಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬರಲಿಲ್ಲ. ಆಸ್ಕರ್ ಅಬೊಯ್ ಪ್ರಕಾರ, ಪಾಶ್ಚಿಮಾತ್ಯ ಖಗೋಳಶಾಸ್ತ್ರದ ಮೂಲಗಳು ಮೆಸೊಪಟ್ಯಾಮಿಯಾದಲ್ಲಿ ಕಂಡುಬರುತ್ತವೆ, ಮತ್ತು ನಿಖರವಾದ ವಿಜ್ಞಾನಗಳಲ್ಲಿನ ಎಲ್ಲಾ ಪಾಶ್ಚಿಮಾತ್ಯ ಪ್ರಯತ್ನಗಳು ಕೊನೆಯಲ್ಲಿ ಬ್ಯಾಬಿಲೋನಿಯಾದ ಖಗೋಳಶಾಸ್ತ್ರದಿಂದ ಬಂದವು. ಈಜಿಪ್ಟ್ ಖಗೋಳಶಾಸ್ತ್ರಜ್ಞರು ನಕ್ಷತ್ರಪುಂಜಗಳ ಜ್ಞಾನ ಮತ್ತು ಆಕಾಶಕಾಯಗಳ ಚಲನೆಗಳನ್ನು ತೋರಿಸಿದ ಸ್ಮಾರಕಗಳನ್ನು ಬಿಟ್ಟು, ಗ್ರೀಕ್ ಕವಿ ಹೋಮರ್ ತನ್ನ ಇಲಿಯಡ್ ಮತ್ತು ಒಡಿಸ್ಸಿಗಳಲ್ಲಿ ಹಲವಾರು ಆಕಾಶ ವಸ್ತುಗಳ ಬಗ್ಗೆ ಬರೆದಿದ್ದಾರೆ; ನಂತರ ಗ್ರೀಕ್ ಖಗೋಳಶಾಸ್ತ್ರಜ್ಞರು ಇವುಗಳಿಗೆ ಹೆಸರುಗಳನ್ನು ಒದಗಿಸಿದರು,ಉತ್ತರ ಗೋಳಾರ್ಧದಿಂದ ಕಾಣುವ ಹೆಚ್ಚಿನ ನಕ್ಷತ್ರಪುಂಜಗಳಿಗೆ ಅವು ಈಗಲೂ ಬಳಸಲ್ಪಟ್ಟಿವೆ. ನೈಸರ್ಗಿಕ ತತ್ವಶಾಸ್ತ್ರ ನೈಸರ್ಗಿಕ ತತ್ತ್ವಶಾಸ್ತ್ರವು ಪುರಾತನ ಕಾಲದಲ್ಲಿ (೬೫೦ ಬಿ.ಸಿ-೪೮೦ ಬಿ.ಸಿ) ಗ್ರೀಸ್‌ನಲ್ಲಿ ತನ್ನ ಮೂಲವನ್ನು ಹೊಂದಿದೆ, ಥೇಲ್ಸ್‌ನಂತಹ ಪೂರ್ವ-ಸಾಕ್ರಟಿಕ್ ತತ್ವಜ್ಞಾನಿಗಳು ನೈಸರ್ಗಿಕ ವಿದ್ಯಮಾನಗಳಿಗೆ ನೈಸರ್ಗಿಕವಲ್ಲದ ವಿವರಣೆಗಳನ್ನು ತಿರಸ್ಕರಿಸಿದರು ಮತ್ತು ಪ್ರತಿ ಘಟನೆಯು ನೈಸರ್ಗಿಕ ಕಾರಣವನ್ನು ಹೊಂದಿದೆ ಎಂದು ಘೋಷಿಸಿದರು.ಅವರು ಕಾರಣ ಮತ್ತು ಅವಲೋಕನದಿಂದ ಪರಿಶೀಲಿಸಲ್ಪಟ್ಟ ವಿಚಾರಗಳನ್ನು ಪ್ರಸ್ತಾಪಿಸಿದರು, ಮತ್ತು ಅವರ ಅನೇಕ ಊಹೆಗಳು ಪ್ರಯೋಗದಲ್ಲಿ ಯಶಸ್ವಿಯಾಗಿ ಸಾಬೀತಾಯಿತು;ಉದಾಹರಣೆಗೆ, ಲ್ಯೂಸಿಪ್ಪಸ್ ಮತ್ತು ಅವನ ಶಿಷ್ಯ ಡೆಮೊಕ್ರಿಟಸ್ ಪ್ರಸ್ತಾಪಿಸಿದ ಸರಿಸುಮಾರು ೨೦೦೦ ವರ್ಷಗಳ ನಂತರ ಪರಮಾಣುವಾದವು ಸರಿಯಾಗಿದೆ ಎಂದು ಕಂಡುಬಂದಿದೆ. ಮಧ್ಯಕಾಲೀನ ಯುರೋಪಿಯನ್ ಮತ್ತು ಇಸ್ಲಾಮಿಕ್ ಪಾಶ್ಚಿಮಾತ್ಯ ರೋಮನ್ ಸಾಮ್ರಾಜ್ಯವು ಐದನೇ ಶತಮಾನದಲ್ಲಿ ಪತನಗೊಂಡಿತು ಮತ್ತು ಇದು ಯುರೋಪ್ನ ಪಶ್ಚಿಮ ಭಾಗದಲ್ಲಿ ಬೌದ್ಧಿಕ ಅನ್ವೇಷಣೆಗಳಲ್ಲಿ ಕುಸಿತಕ್ಕೆ ಕಾರಣವಾಯಿತು. ಇದಕ್ಕೆ ವ್ಯತಿರಿಕ್ತವಾಗಿ, ಪೂರ್ವ ರೋಮನ್ ಸಾಮ್ರಾಜ್ಯವು (ಬೈಜಾಂಟೈನ್ ಸಾಮ್ರಾಜ್ಯ ಎಂದೂ ಕರೆಯಲ್ಪಡುತ್ತದೆ) ಅನಾಗರಿಕರ ದಾಳಿಯನ್ನು ಪ್ರತಿರೋಧಿಸಿತು ಮತ್ತು ಭೌತಶಾಸ್ತ್ರ ಸೇರಿದಂತೆ ಕಲಿಕೆಯ ವಿವಿಧ ಕ್ಷೇತ್ರಗಳನ್ನು ಮುಂದುವರೆಸಿತು. ಆರನೇ ಶತಮಾನದಲ್ಲಿ, ಮಿಲೆಟಸ್‌ನ ಇಸಿಡೋರ್ ಆರ್ಕಿಮಿಡಿಸ್‌ನ ಕೃತಿಗಳ ಪ್ರಮುಖ ಸಂಕಲನವನ್ನು ರಚಿಸಿದನು, ಅದನ್ನು ಆರ್ಕಿಮಿಡಿಸ್ ಪಾಲಿಂಪ್ಸೆಸ್ಟ್‌ನಲ್ಲಿ ನಕಲಿಸಲಾಗಿದೆ. ಆರನೇ ಶತಮಾನದ ಯುರೋಪ್‌ನಲ್ಲಿ ಬೈಜಾಂಟೈನ್ ವಿದ್ವಾಂಸ ಜಾನ್ ಫಿಲೋಪೋನಸ್, ಅರಿಸ್ಟಾಟಲ್‌ನ ಭೌತಶಾಸ್ತ್ರದ ಬೋಧನೆಯನ್ನು ಪ್ರಶ್ನಿಸಿದನು ಮತ್ತು ಅದರ ನ್ಯೂನತೆಗಳನ್ನು ಗಮನಿಸಿದನು. ಅವರು ಪ್ರಚೋದನೆಯ ಸಿದ್ಧಾಂತವನ್ನು ಪರಿಚಯಿಸಿದರು. ಫಿಲೋಪೋನಸ್ ಕಾಣಿಸಿಕೊಳ್ಳುವವರೆಗೂ ಅರಿಸ್ಟಾಟಲ್‌ನ ಭೌತಶಾಸ್ತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಲಿಲ್ಲ; ಮೌಖಿಕ ವಾದದ ಮೇಲೆ ತನ್ನ ಭೌತಶಾಸ್ತ್ರವನ್ನು ಆಧರಿಸಿದ ಅರಿಸ್ಟಾಟಲ್‌ನಂತಲ್ಲದೆ, ಫಿಲೋಪೋನಸ್ ವೀಕ್ಷಣೆಯನ್ನು ಅವಲಂಬಿಸಿದ್ದನು. ಅರಿಸ್ಟಾಟಲ್‌ನ ಭೌತಶಾಸ್ತ್ರದ ಮೇಲೆ ಫಿಲೋಪೋನಸ್ ಬರೆದರು: ಆದರೆ ಇದು ಸಂಪೂರ್ಣವಾಗಿ ತಪ್ಪಾಗಿದೆ ಮತ್ತು ಯಾವುದೇ ರೀತಿಯ ಮೌಖಿಕ ವಾದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ನೈಜ ವೀಕ್ಷಣೆಯಿಂದ ನಮ್ಮ ದೃಷ್ಟಿಕೋನವನ್ನು ದೃಢೀಕರಿಸಬಹುದು. ನೀವು ಒಂದೇ ಎತ್ತರದಿಂದ ಎರಡು ತೂಕವನ್ನು ಬೀಳಲು ಬಿಟ್ಟರೆ, ಅವುಗಳಲ್ಲಿ ಒಂದು ಇನ್ನೊಂದಕ್ಕಿಂತ ಹಲವು ಪಟ್ಟು ಭಾರವಾಗಿರುತ್ತದೆ, ಚಲನೆಗೆ ಅಗತ್ಯವಿರುವ ಸಮಯದ ಅನುಪಾತವು ತೂಕದ ಅನುಪಾತವನ್ನು ಅವಲಂಬಿಸಿರುವುದಿಲ್ಲ, ಆದರೆ ವ್ಯತ್ಯಾಸವನ್ನು ನೀವು ನೋಡುತ್ತೀರಿ. ಸಮಯದಲ್ಲಿ ಬಹಳ ಚಿಕ್ಕದಾಗಿದೆ. ಆದ್ದರಿಂದ, ತೂಕದಲ್ಲಿನ ವ್ಯತ್ಯಾಸವು ಗಣನೀಯವಾಗಿಲ್ಲದಿದ್ದರೆ, ಅಂದರೆ, ಒಂದರಲ್ಲಿ, ಇನ್ನೊಂದನ್ನು ದ್ವಿಗುಣಗೊಳಿಸಿದರೆ, ಯಾವುದೇ ವ್ಯತ್ಯಾಸವಿರುವುದಿಲ್ಲ, ಇಲ್ಲದಿದ್ದರೆ ಅಗ್ರಾಹ್ಯ ವ್ಯತ್ಯಾಸವು ಸಮಯದಲ್ಲಾದರೂ, ತೂಕದಲ್ಲಿನ ವ್ಯತ್ಯಾಸವು ಇಲ್ಲ ಎಂದರೆ ನಗಣ್ಯ, ಒಂದು ದೇಹವು ಇನ್ನೊಂದಕ್ಕಿಂತ ಎರಡು ಪಟ್ಟು ಹೆಚ್ಚು ತೂಕವನ್ನು ಹೊಂದಿರುತ್ತದೆ ಭೌತಶಾಸ್ತ್ರದ ಅರಿಸ್ಟಾಟಲ್‌ನ ತತ್ವಗಳ ಫಿಲೋಪೋನಸ್‌ನ ಟೀಕೆಯು ಹತ್ತು ಶತಮಾನಗಳ ನಂತರ,[20] ವೈಜ್ಞಾನಿಕ ಕ್ರಾಂತಿಯ ಸಮಯದಲ್ಲಿ ಗೆಲಿಲಿಯೊ ಗೆಲಿಲಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸಿತು. ಅರಿಸ್ಟಾಟಲ್ ಭೌತಶಾಸ್ತ್ರವು ದೋಷಪೂರಿತವಾಗಿದೆ ಎಂದು ವಾದಿಸುವಾಗ ಗೆಲಿಲಿಯೋ ಫಿಲೋಪೋನಸ್‌ನನ್ನು ತನ್ನ ಕೃತಿಗಳಲ್ಲಿ ಗಣನೀಯವಾಗಿ ಉಲ್ಲೇಖಿಸಿದ್ದಾನೆ.[21][22] 1300 ರ ದಶಕದಲ್ಲಿ ಪ್ಯಾರಿಸ್ ವಿಶ್ವವಿದ್ಯಾಲಯದ ಕಲಾ ವಿಭಾಗದ ಶಿಕ್ಷಕ ಜೀನ್ ಬುರಿಡಾನ್ ಪ್ರಚೋದನೆಯ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದರು. ಇದು ಜಡತ್ವ ಮತ್ತು ಆವೇಗದ ಆಧುನಿಕ ಕಲ್ಪನೆಗಳ ಕಡೆಗೆ ಒಂದು ಹೆಜ್ಜೆಯಾಗಿದೆ.[23] ಇಸ್ಲಾಮಿಕ್ ಪಾಂಡಿತ್ಯವು ಗ್ರೀಕರಿಂದ ಅರಿಸ್ಟಾಟಲ್ ಭೌತಶಾಸ್ತ್ರವನ್ನು ಆನುವಂಶಿಕವಾಗಿ ಪಡೆದುಕೊಂಡಿತು ಮತ್ತು ಇಸ್ಲಾಮಿಕ್ ಸುವರ್ಣ ಯುಗದಲ್ಲಿ ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಿತು, ವಿಶೇಷವಾಗಿ ವೀಕ್ಷಣೆ ಮತ್ತು ಪೂರ್ವಭಾವಿ ತಾರ್ಕಿಕತೆಗೆ ಒತ್ತು ನೀಡಿ, ವೈಜ್ಞಾನಿಕ ವಿಧಾನದ ಆರಂಭಿಕ ರೂಪಗಳನ್ನು ಅಭಿವೃದ್ಧಿಪಡಿಸಿತು. ದೃಗ್ವಿಜ್ಞಾನ ಮತ್ತು ದೃಷ್ಟಿ ಕ್ಷೇತ್ರದಲ್ಲಿ ಅತ್ಯಂತ ಗಮನಾರ್ಹವಾದ ಆವಿಷ್ಕಾರಗಳು ಇಬ್ನ್ ಸಹಲ್, ಅಲ್-ಕಿಂಡಿ, ಇಬ್ನ್ ಅಲ್-ಹೈಥಮ್, ಅಲ್-ಫಾರಿಸಿ ಮತ್ತು ಅವಿಸೆನ್ನಾ ಅವರಂತಹ ಅನೇಕ ವಿಜ್ಞಾನಿಗಳ ಕೃತಿಗಳಿಂದ ಬಂದವು. ಇಬ್ನ್ ಅಲ್-ಹೈಥಮ್ ಬರೆದ ದಿ ಬುಕ್ ಆಫ್ ಆಪ್ಟಿಕ್ಸ್ (ಕಿತಾಬ್ ಅಲ್-ಮನಾಯಿರ್ ಎಂದೂ ಕರೆಯಲ್ಪಡುವ) ಅತ್ಯಂತ ಗಮನಾರ್ಹವಾದ ಕೃತಿಯಾಗಿದೆ, ಇದರಲ್ಲಿ ಅವರು ದೃಷ್ಟಿಯ ಬಗ್ಗೆ ಪ್ರಾಚೀನ ಗ್ರೀಕ್ ಕಲ್ಪನೆಯನ್ನು ನಿರ್ಣಾಯಕವಾಗಿ ನಿರಾಕರಿಸಿದರು, ಆದರೆ ಹೊಸ ಸಿದ್ಧಾಂತದೊಂದಿಗೆ ಬಂದರು. ಪುಸ್ತಕದಲ್ಲಿ, ಅವರು ಕ್ಯಾಮೆರಾ ಅಬ್ಸ್ಕ್ಯೂರಾ (ಪಿನ್‌ಹೋಲ್ ಕ್ಯಾಮೆರಾದ ಅವರ ಸಾವಿರ-ವರ್ಷ-ಹಳೆಯ ಆವೃತ್ತಿ) ವಿದ್ಯಮಾನದ ಅಧ್ಯಯನವನ್ನು ಪ್ರಸ್ತುತಪಡಿಸಿದರು ಮತ್ತು ಕಣ್ಣು ಸ್ವತಃ ಕಾರ್ಯನಿರ್ವಹಿಸುವ ರೀತಿಯಲ್ಲಿ ಮತ್ತಷ್ಟು ಅಧ್ಯಯನ ಮಾಡಿದರು. ಛೇದನ ಮತ್ತು ಹಿಂದಿನ ವಿದ್ವಾಂಸರ ಜ್ಞಾನವನ್ನು ಬಳಸಿಕೊಂಡು, ಬೆಳಕು ಕಣ್ಣಿಗೆ ಹೇಗೆ ಪ್ರವೇಶಿಸುತ್ತದೆ ಎಂಬುದನ್ನು ವಿವರಿಸಲು ಪ್ರಾರಂಭಿಸಿದರು. ಬೆಳಕಿನ ಕಿರಣವು ಕೇಂದ್ರೀಕೃತವಾಗಿದೆ ಎಂದು ಅವರು ಪ್ರತಿಪಾದಿಸಿದರು, ಆದರೆ ಕಣ್ಣಿನ ಹಿಂಭಾಗಕ್ಕೆ ಬೆಳಕು ಹೇಗೆ ಪ್ರಕ್ಷೇಪಿಸಲ್ಪಟ್ಟಿದೆ ಎಂಬುದರ ನಿಜವಾದ ವಿವರಣೆಯು 1604 ರವರೆಗೆ ಕಾಯಬೇಕಾಗಿತ್ತು. ಛಾಯಾಗ್ರಹಣದ ಆಧುನಿಕ ಬೆಳವಣಿಗೆಗೆ ನೂರಾರು ವರ್ಷಗಳ ಮೊದಲು, ಬೆಳಕಿನ ಮೇಲಿನ ಅವರ ಗ್ರಂಥವು ಕ್ಯಾಮೆರಾ ಅಬ್ಸ್ಕ್ಯೂರಾವನ್ನು ವಿವರಿಸಿತು.[24 ] ಏಳು-ಸಂಪುಟಗಳ ಬುಕ್ ಆಫ್ ಆಪ್ಟಿಕ್ಸ್ (ಕಿತಾಬ್ ಅಲ್-ಮನಥಿರ್) 600 ವರ್ಷಗಳಿಗೂ ಹೆಚ್ಚು ಕಾಲ ಪೂರ್ವ ಮತ್ತು ಪಶ್ಚಿಮ ಎರಡರಲ್ಲೂ, ದೃಶ್ಯ ಗ್ರಹಿಕೆಯ ಸಿದ್ಧಾಂತದಿಂದ ಮಧ್ಯಕಾಲೀನ ಕಲೆಯಲ್ಲಿ ದೃಷ್ಟಿಕೋನದ ಸ್ವರೂಪದವರೆಗೆ ಶಿಸ್ತುಗಳಾದ್ಯಂತ ಚಿಂತನೆಯ ಮೇಲೆ ಭಾರಿ ಪ್ರಭಾವ ಬೀರಿದೆ. ರಾಬರ್ಟ್ ಗ್ರೊಸೆಟೆಸ್ಟೆ ಮತ್ತು ಲಿಯೊನಾರ್ಡೊ ಡಾ ವಿನ್ಸಿಯಿಂದ ರೆನೆ ಡೆಸ್ಕಾರ್ಟೆಸ್, ಜೊಹಾನ್ಸ್ ಕೆಪ್ಲರ್ ಮತ್ತು ಐಸಾಕ್ ನ್ಯೂಟನ್ ಅವರ ನಂತರದ ಅನೇಕ ಯುರೋಪಿಯನ್ ವಿದ್ವಾಂಸರು ಮತ್ತು ಸಹ ಪಾಲಿಮಾಥ್‌ಗಳು ಅವರ ಸಾಲದಲ್ಲಿದ್ದರು. ವಾಸ್ತವವಾಗಿ, 700 ವರ್ಷಗಳ ನಂತರ ಪ್ರಕಟವಾದ ಅದೇ ಶೀರ್ಷಿಕೆಯ ನ್ಯೂಟನ್‌ನ ಕೆಲಸದ ಜೊತೆಗೆ ಇಬ್ನ್ ಅಲ್-ಹೈಥಮ್‌ನ ದೃಗ್ವಿಜ್ಞಾನದ ಪ್ರಭಾವವು ಸ್ಥಾನ ಪಡೆದಿದೆ. ದಿ ಬುಕ್ ಆಫ್ ಆಪ್ಟಿಕ್ಸ್ ಅನುವಾದವು ಯುರೋಪಿನ ಮೇಲೆ ಭಾರಿ ಪ್ರಭಾವ ಬೀರಿತು. ಅದರಿಂದ, ನಂತರದ ಯುರೋಪಿಯನ್ ವಿದ್ವಾಂಸರು ಇಬ್ನ್ ಅಲ್-ಹೈಥಮ್ ನಿರ್ಮಿಸಿದ ಸಾಧನಗಳನ್ನು ಪುನರಾವರ್ತಿಸಲು ಮತ್ತು ಬೆಳಕು ಕಾರ್ಯನಿರ್ವಹಿಸುವ ವಿಧಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಇದರಿಂದ, ಕನ್ನಡಕಗಳು, ಭೂತಗನ್ನಡಿಗಳು, ದೂರದರ್ಶಕಗಳು ಮತ್ತು ಕ್ಯಾಮೆರಾಗಳಂತಹ ಪ್ರಮುಖ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಲಾಯಿತು. ಅಭಿಜಾತ ಭೌತಶಾಸ್ತ್ರ​ ಆರಂಭಿಕ ಆಧುನಿಕ ಯುರೋಪಿಯನ್ನರು ಈಗ ಭೌತಶಾಸ್ತ್ರದ ನಿಯಮಗಳೆಂದು ಪರಿಗಣಿಸಲ್ಪಟ್ಟಿರುವುದನ್ನು ಕಂಡುಹಿಡಿಯಲು ಪ್ರಾಯೋಗಿಕ ಮತ್ತು ಪರಿಮಾಣಾತ್ಮಕ ವಿಧಾನಗಳನ್ನು ಬಳಸಿದಾಗ ಭೌತಶಾಸ್ತ್ರವು ಪ್ರತ್ಯೇಕ ವಿಜ್ಞಾನವಾಯಿತು. ಈ ಅವಧಿಯಲ್ಲಿನ ಪ್ರಮುಖ ಬೆಳವಣಿಗೆಗಳು ಸೌರವ್ಯೂಹದ ಭೂಕೇಂದ್ರಿತ ಮಾದರಿಯನ್ನು ಸೂರ್ಯಕೇಂದ್ರಿತ ಕೋಪರ್ನಿಕನ್ ಮಾದರಿಯೊಂದಿಗೆ ಬದಲಾಯಿಸುವುದು, ಗ್ರಹಗಳ ಚಲನೆಯನ್ನು ನಿಯಂತ್ರಿಸುವ ಕಾನೂನುಗಳು (೧೬೦೯ ಮತ್ತು ೧೬೨೯ ರ ನಡುವೆ ಕೆಪ್ಲರ್ ನಿರ್ಧರಿಸಿದ್ದಾರೆ), ದೂರದರ್ಶಕಗಳಲ್ಲಿ ಗೆಲಿಲಿಯೋ ಅವರ ಪ್ರವರ್ತಕ ಕೆಲಸ ಮತ್ತು ಖಗೋಳ ವೀಕ್ಷಣಾ ಕಾರ್ಯಗಳು ಸೇರಿವೆ. ೧೬ನೇ ಮತ್ತು ೧೭ನೇ ಶತಮಾನಗಳು, ಮತ್ತು ನ್ಯೂಟನ್‌ನ ಆವಿಷ್ಕಾರ ಮತ್ತು ಚಲನೆಯ ನಿಯಮಗಳ ಏಕೀಕರಣ ಮತ್ತು ಸಾರ್ವತ್ರಿಕ ಗುರುತ್ವಾಕರ್ಷಣೆ (ಅದು ಅವನ ಹೆಸರನ್ನು ಹೊಂದುತ್ತದೆ). ನ್ಯೂಟನ್ ಅವರು ಕಲನಶಾಸ್ತ್ರವನ್ನು ಅಭಿವೃದ್ಧಿಪಡಿಸಿದರು, ಬದಲಾವಣೆಯ ಗಣಿತದ ಅಧ್ಯಯನ, ಇದು ಭೌತಿಕ ಸಮಸ್ಯೆಗಳನ್ನು ಪರಿಹರಿಸಲು ಹೊಸ ಗಣಿತದ ವಿಧಾನಗಳನ್ನು ಒದಗಿಸಿತು. ಥರ್ಮೋಡೈನಾಮಿಕ್ಸ್, ಕೆಮಿಸ್ಟ್ರಿ ಮತ್ತು ಎಲೆಕ್ಟ್ರೋಮ್ಯಾಗ್ನೆಟಿಕ್ಸ್‌ನಲ್ಲಿ ಹೊಸ ಕಾನೂನುಗಳ ಆವಿಷ್ಕಾರವು ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಹೆಚ್ಚಿನ ಸಂಶೋಧನೆಯ ಪ್ರಯತ್ನಗಳಿಂದಾಗಿ ಶಕ್ತಿಯ ಅಗತ್ಯಗಳು ಹೆಚ್ಚಾದವು. ಶಾಸ್ತ್ರೀಯ ಭೌತಶಾಸ್ತ್ರವನ್ನು ಒಳಗೊಂಡಿರುವ ನಿಯಮಗಳು ಸಾಪೇಕ್ಷವಲ್ಲದ ವೇಗದಲ್ಲಿ ಚಲಿಸುವ ದೈನಂದಿನ ಮಾಪಕಗಳಲ್ಲಿನ ವಸ್ತುಗಳಿಗೆ ಬಹಳ ವ್ಯಾಪಕವಾಗಿ ಬಳಸಲ್ಪಡುತ್ತವೆ, ಏಕೆಂದರೆ ಅವುಗಳು ಅಂತಹ ಸಂದರ್ಭಗಳಲ್ಲಿ ಬಹಳ ಹತ್ತಿರದ ಅಂದಾಜನ್ನು ಒದಗಿಸುತ್ತವೆ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಸಾಪೇಕ್ಷತಾ ಸಿದ್ಧಾಂತದಂತಹ ಸಿದ್ಧಾಂತಗಳು ಅವುಗಳ ಶಾಸ್ತ್ರೀಯ ಸಮಾನತೆಯನ್ನು ಸರಳಗೊಳಿಸುತ್ತವೆ. ಮಾಪಕಗಳು. ಆದಾಗ್ಯೂ, ಅತ್ಯಂತ ಚಿಕ್ಕ ವಸ್ತುಗಳಿಗೆ ಶಾಸ್ತ್ರೀಯ ಯಂತ್ರಶಾಸ್ತ್ರದಲ್ಲಿನ ಅಸಮರ್ಪಕತೆಗಳು ಮತ್ತು ಅತಿ ಹೆಚ್ಚಿನ ವೇಗಗಳು ೨೦ನೇ ಶತಮಾನದಲ್ಲಿ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಗೆ ಕಾರಣವಾಯಿತು. ಪ್ರಸ್ತುತ ಭೌತಶಾಸ್ತ್ರ​ ಆಧುನಿಕ ಭೌತಶಾಸ್ತ್ರವು 20 ನೇ ಶತಮಾನದ ಆರಂಭದಲ್ಲಿ ಕ್ವಾಂಟಮ್ ಸಿದ್ಧಾಂತದಲ್ಲಿ ಮ್ಯಾಕ್ಸ್ ಪ್ಲಾಂಕ್ ಅವರ ಕೆಲಸ ಮತ್ತು ಆಲ್ಬರ್ಟ್ ಐನ್‌ಸ್ಟೈನ್ ಅವರ ಸಾಪೇಕ್ಷತಾ ಸಿದ್ಧಾಂತದೊಂದಿಗೆ ಪ್ರಾರಂಭವಾಯಿತು. ಈ ಎರಡೂ ಸಿದ್ಧಾಂತಗಳು ಕೆಲವು ಸಂದರ್ಭಗಳಲ್ಲಿ ಕ್ಲಾಸಿಕಲ್ ಮೆಕ್ಯಾನಿಕ್ಸ್‌ನಲ್ಲಿನ ಅಸಮರ್ಪಕತೆಯ ಕಾರಣದಿಂದ ಬಂದವು. ಕ್ಲಾಸಿಕಲ್ ಮೆಕ್ಯಾನಿಕ್ಸ್ ಬೆಳಕಿನ ವಿಭಿನ್ನ ವೇಗವನ್ನು ಊಹಿಸಿದೆ, ಇದು ಮ್ಯಾಕ್ಸ್ವೆಲ್ನ ವಿದ್ಯುತ್ಕಾಂತೀಯತೆಯ ಸಮೀಕರಣಗಳಿಂದ ಊಹಿಸಲಾದ ಸ್ಥಿರ ವೇಗದೊಂದಿಗೆ ಪರಿಹರಿಸಲಾಗುವುದಿಲ್ಲ; ಈ ವ್ಯತ್ಯಾಸವನ್ನು ಐನ್‌ಸ್ಟೈನ್‌ನ ವಿಶೇಷ ಸಾಪೇಕ್ಷತಾ ಸಿದ್ಧಾಂತದಿಂದ ಸರಿಪಡಿಸಲಾಯಿತು, ಇದು ವೇಗವಾಗಿ ಚಲಿಸುವ ದೇಹಗಳಿಗೆ ಶಾಸ್ತ್ರೀಯ ಯಂತ್ರಶಾಸ್ತ್ರವನ್ನು ಬದಲಿಸಿತು ಮತ್ತು ಬೆಳಕಿನ ನಿರಂತರ ವೇಗಕ್ಕೆ ಅವಕಾಶ ಮಾಡಿಕೊಟ್ಟಿತು. ಕಪ್ಪು-ದೇಹದ ವಿಕಿರಣವು ಶಾಸ್ತ್ರೀಯ ಭೌತಶಾಸ್ತ್ರಕ್ಕೆ ಮತ್ತೊಂದು ಸಮಸ್ಯೆಯನ್ನು ಒದಗಿಸಿತು, ವಸ್ತು ಆಂದೋಲಕಗಳ ಪ್ರಚೋದನೆಯು ಅವುಗಳ ಆವರ್ತನಕ್ಕೆ ಅನುಗುಣವಾಗಿ ಪ್ರತ್ಯೇಕ ಹಂತಗಳಲ್ಲಿ ಮಾತ್ರ ಸಾಧ್ಯ ಎಂದು ಪ್ಲ್ಯಾಂಕ್ ಪ್ರಸ್ತಾಪಿಸಿದಾಗ ಅದನ್ನು ಸರಿಪಡಿಸಲಾಯಿತು; ಇದು ದ್ಯುತಿವಿದ್ಯುತ್ ಪರಿಣಾಮ ಮತ್ತು ಎಲೆಕ್ಟ್ರಾನ್ ಆರ್ಬಿಟಲ್‌ಗಳ ಪ್ರತ್ಯೇಕ ಶಕ್ತಿಯ ಮಟ್ಟವನ್ನು ಊಹಿಸುವ ಸಂಪೂರ್ಣ ಸಿದ್ಧಾಂತದೊಂದಿಗೆ, ಕ್ವಾಂಟಮ್ ಮೆಕ್ಯಾನಿಕ್ಸ್‌ನ ಸಿದ್ಧಾಂತವು ಶಾಸ್ತ್ರೀಯ ಭೌತಶಾಸ್ತ್ರದಿಂದ ಬಹಳ ಸಣ್ಣ ಪ್ರಮಾಣದಲ್ಲಿ ತೆಗೆದುಕೊಳ್ಳುವುದಕ್ಕೆ ಕಾರಣವಾಯಿತು. ಕ್ವಾಂಟಮ್ ಮೆಕ್ಯಾನಿಕ್ಸ್ ಅನ್ನು ವರ್ನರ್ ಹೈಸೆನ್‌ಬರ್ಗ್, ಎರ್ವಿನ್ ಶ್ರೋಡಿಂಗರ್ ಮತ್ತು ಪಾಲ್ ಡಿರಾಕ್ ಅವರು ಪ್ರವರ್ತಕರಾಗುತ್ತಾರೆ. ಈ ಆರಂಭಿಕ ಕೆಲಸದಿಂದ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ಕೆಲಸದಿಂದ, ಕಣ ಭೌತಶಾಸ್ತ್ರದ ಪ್ರಮಾಣಿತ ಮಾದರಿಯನ್ನು ಪಡೆಯಲಾಗಿದೆ. 2012 ರಲ್ಲಿ CERN ನಲ್ಲಿ ಹಿಗ್ಸ್ ಬೋಸಾನ್‌ಗೆ ಹೊಂದಿಕೆಯಾಗುವ ಗುಣಲಕ್ಷಣಗಳನ್ನು ಹೊಂದಿರುವ ಕಣದ ಆವಿಷ್ಕಾರದ ನಂತರ, ಸ್ಟ್ಯಾಂಡರ್ಡ್ ಮಾದರಿಯಿಂದ ಊಹಿಸಲಾದ ಎಲ್ಲಾ ಮೂಲಭೂತ ಕಣಗಳು ಮತ್ತು ಇತರವುಗಳು ಅಸ್ತಿತ್ವದಲ್ಲಿಲ್ಲ; ಆದಾಗ್ಯೂ, ಸ್ಟ್ಯಾಂಡರ್ಡ್ ಮಾದರಿಯನ್ನು ಮೀರಿದ ಭೌತಶಾಸ್ತ್ರವು ಸೂಪರ್‌ಸಿಮ್ಮೆಟ್ರಿಯಂತಹ ಸಿದ್ಧಾಂತಗಳೊಂದಿಗೆ ಸಂಶೋಧನೆಯ ಸಕ್ರಿಯ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಸಾಮಾನ್ಯವಾಗಿ ಗಣಿತದ ಕ್ಷೇತ್ರಗಳು ಮುಖ್ಯವಾಗಿವೆ, ಉದಾಹರಣೆಗೆ ಸಂಭವನೀಯತೆಗಳು ಮತ್ತು ಗುಂಪುಗಳ ಅಧ್ಯಯನ. ತತ್ವಶಾಸ್ತ್ರ ಅನೇಕ ವಿಧಗಳಲ್ಲಿ, ಭೌತಶಾಸ್ತ್ರವು ಪ್ರಾಚೀನ ಗ್ರೀಕ್ ತತ್ವಶಾಸ್ತ್ರದಿಂದ ಬಂದಿದೆ. ವಸ್ತುವನ್ನು ನಿರೂಪಿಸುವ ಥೇಲ್ಸ್‌ನ ಮೊದಲ ಪ್ರಯತ್ನದಿಂದ, ಡೆಮಾಕ್ರಿಟಸ್‌ನ ನಿರ್ಣಯದವರೆಗೆ, ಮ್ಯಾಟರ್ ಅನ್ನು ಅಸ್ಥಿರ ಸ್ಥಿತಿಗೆ ಇಳಿಸಬೇಕು, ಸ್ಫಟಿಕದಂತಹ ಫರ್ಮಮೆಂಟ್‌ನ ಟಾಲೆಮಿಕ್ ಖಗೋಳಶಾಸ್ತ್ರ ಮತ್ತು ಅರಿಸ್ಟಾಟಲ್‌ನ ಪುಸ್ತಕ ಭೌತಶಾಸ್ತ್ರ (ಭೌತಶಾಸ್ತ್ರದ ಆರಂಭಿಕ ಪುಸ್ತಕ, ಇದು ಚಲನೆಯನ್ನು ವಿಶ್ಲೇಷಿಸಲು ಮತ್ತು ವ್ಯಾಖ್ಯಾನಿಸಲು ಪ್ರಯತ್ನಿಸಿತು. ಒಂದು ತಾತ್ವಿಕ ದೃಷ್ಟಿಕೋನ), ವಿವಿಧ ಗ್ರೀಕ್ ತತ್ವಜ್ಞಾನಿಗಳು ತಮ್ಮದೇ ಆದ ಪ್ರಕೃತಿಯ ಸಿದ್ಧಾಂತಗಳನ್ನು ಮುಂದಿಟ್ಟರು. 18ನೇ ಶತಮಾನದ ಕೊನೆಯವರೆಗೂ ಭೌತಶಾಸ್ತ್ರವನ್ನು ನೈಸರ್ಗಿಕ ತತ್ತ್ವಶಾಸ್ತ್ರ ಎಂದು ಕರೆಯಲಾಗುತ್ತಿತ್ತು. 19 ನೇ ಶತಮಾನದ ವೇಳೆಗೆ, ಭೌತಶಾಸ್ತ್ರವು ತತ್ವಶಾಸ್ತ್ರ ಮತ್ತು ಇತರ ವಿಜ್ಞಾನಗಳಿಂದ ಭಿನ್ನವಾದ ಶಿಸ್ತು ಎಂದು ಅರಿತುಕೊಂಡಿತು. ಭೌತಶಾಸ್ತ್ರವು ವಿಜ್ಞಾನದ ಉಳಿದಂತೆ, ಭೌತಿಕ ಪ್ರಪಂಚದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಲು ವಿಜ್ಞಾನದ ತತ್ವಶಾಸ್ತ್ರ ಮತ್ತು ಅದರ "ವೈಜ್ಞಾನಿಕ ವಿಧಾನ" ವನ್ನು ಅವಲಂಬಿಸಿದೆ. ವೈಜ್ಞಾನಿಕ ವಿಧಾನವು ಪೂರ್ವದ ತಾರ್ಕಿಕತೆ ಮತ್ತು ಹಿಂಭಾಗದ ತಾರ್ಕಿಕತೆಯನ್ನು ಬಳಸಿಕೊಳ್ಳುತ್ತದೆ ಮತ್ತು ನೀಡಲಾದ ಸಿದ್ಧಾಂತದ ಸಿಂಧುತ್ವವನ್ನು ಅಳೆಯಲು ಬೇಯೆಸಿಯನ್ ತೀರ್ಮಾನವನ್ನು ಬಳಸುತ್ತದೆ. ಭೌತಶಾಸ್ತ್ರದ ಬೆಳವಣಿಗೆಯು ಆರಂಭಿಕ ದಾರ್ಶನಿಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದೆ, ಆದರೆ ಹೊಸ ಪ್ರಶ್ನೆಗಳನ್ನು ಸಹ ಹುಟ್ಟುಹಾಕಿದೆ. ಭೌತಶಾಸ್ತ್ರದ ಸುತ್ತಲಿನ ತಾತ್ವಿಕ ಸಮಸ್ಯೆಗಳ ಅಧ್ಯಯನ, ಭೌತಶಾಸ್ತ್ರದ ತತ್ತ್ವಶಾಸ್ತ್ರ, ಸ್ಥಳ ಮತ್ತು ಸಮಯದ ಸ್ವರೂಪ, ನಿರ್ಣಾಯಕತೆ, ಮತ್ತು ಅನುಭವವಾದ, ನೈಸರ್ಗಿಕತೆ ಮತ್ತು ವಾಸ್ತವಿಕತೆಯಂತಹ ಆಧ್ಯಾತ್ಮಿಕ ದೃಷ್ಟಿಕೋನಗಳಂತಹ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಅನೇಕ ಭೌತವಿಜ್ಞಾನಿಗಳು ತಮ್ಮ ಕೆಲಸದ ತಾತ್ವಿಕ ಪರಿಣಾಮಗಳ ಬಗ್ಗೆ ಬರೆದಿದ್ದಾರೆ, ಉದಾಹರಣೆಗೆ ಲ್ಯಾಪ್ಲೇಸ್, ಕಾರಣವಾದ ನಿರ್ಣಯವಾದವನ್ನು ಪ್ರತಿಪಾದಿಸಿದರು, ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿ ಬರೆದ ಶ್ರೋಡಿಂಗರ್. ಗಣಿತಶಾಸ್ತ್ರದ ಭೌತಶಾಸ್ತ್ರಜ್ಞ ರೋಜರ್ ಪೆನ್ರೋಸ್ ಅವರನ್ನು ಪ್ಲಾಟೋನಿಸ್ಟ್ ಎಂದು ಸ್ಟೀಫನ್ ಹಾಕಿಂಗ್ ಕರೆದಿದ್ದಾರೆ, ಈ ದೃಷ್ಟಿಕೋನವನ್ನು ಪೆನ್ರೋಸ್ ತನ್ನ ಪುಸ್ತಕ ದಿ ರೋಡ್ ಟು ರಿಯಾಲಿಟಿಯಲ್ಲಿ ಚರ್ಚಿಸಿದ್ದಾರೆ. ಹಾಕಿಂಗ್ ತನ್ನನ್ನು "ನಾಚಿಕೆಯಿಲ್ಲದ ಕಡಿತವಾದಿ" ಎಂದು ಕರೆದುಕೊಂಡರು ಮತ್ತು ಪೆನ್ರೋಸ್ ಅವರ ಅಭಿಪ್ರಾಯಗಳೊಂದಿಗೆ ವಿವಾದವನ್ನು ತೆಗೆದುಕೊಂಡರು. ಮೂಲ ಸಿದ್ಧಾಂತಗಳು ಭೌತಶಾಸ್ತ್ರವು ವಿವಿಧ ರೀತಿಯ ವ್ಯವಸ್ಥೆಗಳೊಂದಿಗೆ ವ್ಯವಹರಿಸುತ್ತದೆಯಾದರೂ, ಕೆಲವು ಸಿದ್ಧಾಂತಗಳನ್ನು ಎಲ್ಲಾ ಭೌತಶಾಸ್ತ್ರಜ್ಞರು ಬಳಸುತ್ತಾರೆ. ಈ ಪ್ರತಿಯೊಂದು ಸಿದ್ಧಾಂತಗಳನ್ನು ಪ್ರಾಯೋಗಿಕವಾಗಿ ಹಲವಾರು ಬಾರಿ ಪರೀಕ್ಷಿಸಲಾಯಿತು ಮತ್ತು ಪ್ರಕೃತಿಯ ಸಮರ್ಪಕ ಅಂದಾಜು ಎಂದು ಕಂಡುಬಂದಿದೆ. ಉದಾಹರಣೆಗೆ, ಶಾಸ್ತ್ರೀಯ ಯಂತ್ರಶಾಸ್ತ್ರದ ಸಿದ್ಧಾಂತವು ವಸ್ತುಗಳ ಚಲನೆಯನ್ನು ನಿಖರವಾಗಿ ವಿವರಿಸುತ್ತದೆ, ಅವುಗಳು ಪರಮಾಣುಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತವೆ ಮತ್ತು ಬೆಳಕಿನ ವೇಗಕ್ಕಿಂತ ಕಡಿಮೆ ಚಲಿಸುತ್ತವೆ. ಈ ಸಿದ್ಧಾಂತಗಳು ಇಂದು ಸಕ್ರಿಯ ಸಂಶೋಧನೆಯ ಕ್ಷೇತ್ರಗಳಾಗಿ ಮುಂದುವರೆದಿದೆ. ಕ್ಲಾಸಿಕಲ್ ಮೆಕ್ಯಾನಿಕ್ಸ್‌ನ ಗಮನಾರ್ಹ ಅಂಶವಾದ ಚೋಸ್ ಸಿದ್ಧಾಂತವನ್ನು 20 ನೇ ಶತಮಾನದಲ್ಲಿ ಕಂಡುಹಿಡಿಯಲಾಯಿತು, ನ್ಯೂಟನ್ (1642-1727) ರಿಂದ ಶಾಸ್ತ್ರೀಯ ಯಂತ್ರಶಾಸ್ತ್ರದ ಮೂಲ ಸೂತ್ರೀಕರಣದ ಮೂರು ಶತಮಾನಗಳ ನಂತರ. ಈ ಕೇಂದ್ರ ಸಿದ್ಧಾಂತಗಳು ಹೆಚ್ಚು ವಿಶೇಷವಾದ ವಿಷಯಗಳ ಸಂಶೋಧನೆಗೆ ಪ್ರಮುಖ ಸಾಧನಗಳಾಗಿವೆ, ಮತ್ತು ಯಾವುದೇ ಭೌತಶಾಸ್ತ್ರಜ್ಞರು, ಅವರ ವಿಶೇಷತೆಯನ್ನು ಲೆಕ್ಕಿಸದೆ, ಅವುಗಳಲ್ಲಿ ಸಾಕ್ಷರತೆಯನ್ನು ನಿರೀಕ್ಷಿಸಲಾಗಿದೆ. ಇವುಗಳಲ್ಲಿ ಕ್ಲಾಸಿಕಲ್ ಮೆಕ್ಯಾನಿಕ್ಸ್, ಕ್ವಾಂಟಮ್ ಮೆಕ್ಯಾನಿಕ್ಸ್, ಥರ್ಮೋಡೈನಾಮಿಕ್ಸ್ ಮತ್ತು ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್, ವಿದ್ಯುತ್ಕಾಂತೀಯತೆ ಮತ್ತು ವಿಶೇಷ ಸಾಪೇಕ್ಷತೆ ಸೇರಿವೆ. ಅಭಿಜಾತ ಶಾಸ್ತ್ರೀಯ ಭೌತಶಾಸ್ತ್ರವು 20 ನೇ ಶತಮಾನದ ಆರಂಭದ ಮೊದಲು ಗುರುತಿಸಲ್ಪಟ್ಟ ಮತ್ತು ಉತ್ತಮವಾಗಿ ಅಭಿವೃದ್ಧಿ ಹೊಂದಿದ ಸಾಂಪ್ರದಾಯಿಕ ಶಾಖೆಗಳು ಮತ್ತು ವಿಷಯಗಳನ್ನು ಒಳಗೊಂಡಿದೆ - ಶಾಸ್ತ್ರೀಯ ಯಂತ್ರಶಾಸ್ತ್ರ, ಅಕೌಸ್ಟಿಕ್ಸ್, ದೃಗ್ವಿಜ್ಞಾನ, ಥರ್ಮೋಡೈನಾಮಿಕ್ಸ್ ಮತ್ತು ವಿದ್ಯುತ್ಕಾಂತೀಯತೆ. ಶಾಸ್ತ್ರೀಯ ಯಂತ್ರಶಾಸ್ತ್ರವು ಚಲನೆಯಲ್ಲಿರುವ ಶಕ್ತಿಗಳು ಮತ್ತು ದೇಹಗಳಿಂದ ಕಾರ್ಯನಿರ್ವಹಿಸುವ ಕಾಯಗಳಿಗೆ ಸಂಬಂಧಿಸಿದೆ ಮತ್ತು ಇದನ್ನು ಸ್ಥಿರತೆಗಳಾಗಿ ವಿಂಗಡಿಸಬಹುದು (ದೇಹದ ಮೇಲೆ ಅಥವಾ ವೇಗವರ್ಧನೆಗೆ ಒಳಪಡದ ದೇಹಗಳ ಅಧ್ಯಯನ), ಚಲನಶಾಸ್ತ್ರ (ಅದರ ಕಾರಣಗಳನ್ನು ಪರಿಗಣಿಸದೆ ಚಲನೆಯ ಅಧ್ಯಯನ) ಮತ್ತು ಡೈನಾಮಿಕ್ಸ್ (ಚಲನೆಯ ಅಧ್ಯಯನ ಮತ್ತು ಅದರ ಮೇಲೆ ಪರಿಣಾಮ ಬೀರುವ ಶಕ್ತಿಗಳು); ಮೆಕ್ಯಾನಿಕ್ಸ್ ಅನ್ನು ಘನ ಯಂತ್ರಶಾಸ್ತ್ರ ಮತ್ತು ದ್ರವ ಯಂತ್ರಶಾಸ್ತ್ರ ಎಂದು ವಿಂಗಡಿಸಬಹುದು (ಒಟ್ಟಿಗೆ ನಿರಂತರ ಯಂತ್ರಶಾಸ್ತ್ರ ಎಂದು ಕರೆಯಲಾಗುತ್ತದೆ), ಎರಡನೆಯದು ಹೈಡ್ರೋಸ್ಟಾಟಿಕ್ಸ್, ಹೈಡ್ರೊಡೈನಾಮಿಕ್ಸ್, ಏರೋಡೈನಾಮಿಕ್ಸ್ ಮತ್ತು ನ್ಯೂಮ್ಯಾಟಿಕ್ಸ್ನಂತಹ ಶಾಖೆಗಳನ್ನು ಒಳಗೊಂಡಿದೆ. ಅಕೌಸ್ಟಿಕ್ಸ್ ಎಂಬುದು ಧ್ವನಿಯನ್ನು ಹೇಗೆ ಉತ್ಪಾದಿಸಲಾಗುತ್ತದೆ, ನಿಯಂತ್ರಿಸಲಾಗುತ್ತದೆ, ರವಾನಿಸಲಾಗುತ್ತದೆ ಮತ್ತು ಸ್ವೀಕರಿಸುತ್ತದೆ ಎಂಬುದರ ಅಧ್ಯಯನವಾಗಿದೆ.[44] ಅಕೌಸ್ಟಿಕ್ಸ್‌ನ ಪ್ರಮುಖ ಆಧುನಿಕ ಶಾಖೆಗಳು ಅಲ್ಟ್ರಾಸಾನಿಕ್ಸ್ ಅನ್ನು ಒಳಗೊಂಡಿವೆ, ಮಾನವ ಶ್ರವಣದ ವ್ಯಾಪ್ತಿಯನ್ನು ಮೀರಿದ ಅತಿ ಹೆಚ್ಚಿನ ಆವರ್ತನದ ಧ್ವನಿ ತರಂಗಗಳ ಅಧ್ಯಯನ; ಬಯೋಅಕೌಸ್ಟಿಕ್ಸ್, ಪ್ರಾಣಿಗಳ ಕರೆಗಳು ಮತ್ತು ಶ್ರವಣದ ಭೌತಶಾಸ್ತ್ರ,[45] ಮತ್ತು ಎಲೆಕ್ಟ್ರೋಕೌಸ್ಟಿಕ್ಸ್, ಎಲೆಕ್ಟ್ರಾನಿಕ್ಸ್ ಬಳಸಿ ಶ್ರವ್ಯ ಧ್ವನಿ ತರಂಗಗಳ ಕುಶಲತೆ.[46] ಬೆಳಕಿನ ಅಧ್ಯಯನವಾದ ದೃಗ್ವಿಜ್ಞಾನವು ಗೋಚರ ಬೆಳಕಿನೊಂದಿಗೆ ಮಾತ್ರವಲ್ಲದೆ ಅತಿಗೆಂಪು ಮತ್ತು ನೇರಳಾತೀತ ವಿಕಿರಣದ ಬಗ್ಗೆಯೂ ಕಾಳಜಿ ವಹಿಸುತ್ತದೆ, ಇದು ಗೋಚರತೆಯನ್ನು ಹೊರತುಪಡಿಸಿ ಗೋಚರ ಬೆಳಕಿನ ಎಲ್ಲಾ ವಿದ್ಯಮಾನಗಳನ್ನು ಪ್ರದರ್ಶಿಸುತ್ತದೆ, ಉದಾ, ಪ್ರತಿಫಲನ, ವಕ್ರೀಭವನ, ಹಸ್ತಕ್ಷೇಪ, ವಿವರ್ತನೆ, ಪ್ರಸರಣ ಮತ್ತು ಬೆಳಕಿನ ಧ್ರುವೀಕರಣ . ಶಾಖವು ಶಕ್ತಿಯ ಒಂದು ರೂಪವಾಗಿದೆ, ಆಂತರಿಕ ಶಕ್ತಿಯು ಒಂದು ವಸ್ತುವನ್ನು ಸಂಯೋಜಿಸಿದ ಕಣಗಳಿಂದ ಹೊಂದಿರುತ್ತದೆ; ಥರ್ಮೋಡೈನಾಮಿಕ್ಸ್ ಶಾಖ ಮತ್ತು ಇತರ ರೀತಿಯ ಶಕ್ತಿಯ ನಡುವಿನ ಸಂಬಂಧಗಳೊಂದಿಗೆ ವ್ಯವಹರಿಸುತ್ತದೆ. ವಿದ್ಯುಚ್ಛಕ್ತಿ ಮತ್ತು ಕಾಂತೀಯತೆಯನ್ನು ಭೌತಶಾಸ್ತ್ರದ ಒಂದು ಶಾಖೆಯಾಗಿ ಅಧ್ಯಯನ ಮಾಡಲಾಗಿದೆ, ಏಕೆಂದರೆ ಅವುಗಳ ನಡುವಿನ ನಿಕಟ ಸಂಪರ್ಕವನ್ನು 19 ನೇ ಶತಮಾನದ ಆರಂಭದಲ್ಲಿ ಕಂಡುಹಿಡಿಯಲಾಯಿತು; ವಿದ್ಯುತ್ ಪ್ರವಾಹವು ಕಾಂತೀಯ ಕ್ಷೇತ್ರಕ್ಕೆ ಕಾರಣವಾಗುತ್ತದೆ ಮತ್ತು ಬದಲಾಗುತ್ತಿರುವ ಕಾಂತೀಯ ಕ್ಷೇತ್ರವು ವಿದ್ಯುತ್ ಪ್ರವಾಹವನ್ನು ಪ್ರೇರೇಪಿಸುತ್ತದೆ. ಸ್ಥಾಯೀವಿದ್ಯುತ್ತಿನ ವಿದ್ಯುದಾವೇಶಗಳು ನಿಶ್ಚಲವಾಗಿರುವಾಗ ವಿದ್ಯುದಾವೇಶಗಳು, ಚಲಿಸುವ ವಿದ್ಯುದಾವೇಶಗಳೊಂದಿಗೆ ಎಲೆಕ್ಟ್ರೋಡೈನಾಮಿಕ್ಸ್ ಮತ್ತು ಆಯಸ್ಕಾಂತೀಯ ಧ್ರುವಗಳೊಂದಿಗೆ ಮ್ಯಾಗ್ನೆಟೋಸ್ಟಾಟಿಕ್ಸ್ ವಿಶ್ರಾಂತಿಯಲ್ಲಿ ವ್ಯವಹರಿಸುತ್ತದೆ. ನೈಸರ್ಗಿಕ ವಿಜ್ಞಾನ
2407
https://kn.wikipedia.org/wiki/%E0%B2%B8%E0%B2%BE%E0%B2%B9%E0%B2%BF%E0%B2%A4%E0%B2%BF%E0%B2%97%E0%B2%B3%E0%B3%81
ಸಾಹಿತಿಗಳು
ಸಾಹಿತಿಗಳು ಕಥೆ,ಕವನ,ಪ್ರಬಂಧ,ಹಾಸ್ಯ ಸಾಹಿತ್ಯ,ಮಕ್ಕಳ ಕಥೆಗಳು ಮುಂತಾದ ಸಾಹಿತ್ಯವನ್ನು ರಚಿಸುವವರನ್ನು ಸಾಹಿತಿಗಳು ಎನ್ನುತ್ತಾರೆ. ಇವರನ್ನು ಗ್ರಂಥಕರ್ತರು, ಸಾಹಿತಿವರ್ಗ, ಸಾಹಿತಿಗಳು, ಬರಹಗಾರರು, ಲೇಖಕರು ಎಂದೂ ಕರೆಯಲ್ಡುತ್ತಾರೆ. ವಿಶೆಷವಾಗಿ "ಸಾಹಿತ್ಯ" ಎಂಬ ವಿಶಿಷ್ಟ ಕಲಾತ್ಮಕ ಬರಹಗಾರರನ್ನು ಮಾತ್ರಾ ಸಾಹಿತಿಗಳು ಎನ್ನಬಹುದು. ಉಳಿದವರನ್ನು ಲೇಖಕರು, ಬರಹಗಾರರು, ಗ್ರಂಥಕರ್ತರು ಎಂದು ವಿಂಗಡಿಸಬಹುದು. ಸಾಹಿತ್ಯವಲ್ಲದ ಬರಹಗಾರರನ್ನೂ ಸಾಹಿತಿಗಳನ್ನೂ ಒಳಗೊಂಡವರನ್ನು ಲೇಖಕರು ಎಂಬ ವರ್ಗಕ್ಕೆ ಸೇರಿಸಬಹುದು. ==ಸಾಹಿತ್ಯ ಮತ್ತು* ಶಂಕರ ಬೈಚಬಾಳ ಹಿರಿಯ ಪಶುವೈದ್ಯ ಪರೀಕ್ಷಕರು ಜನನ ೨೨-೭-೧೯೬೬, ಮಸಬಿನಾಳ, ವಿಜಯಪುರ ಜಿಲ್ಲೆ ಹವ್ಯಾಸ-ಬರವಣಿಗೆ,ನಟನೆ,ಜನಪದ ಹಾಡುವುದು, ಉಪನ್ಯಾಸ ಮುಂತಾದ. ಕೃತಿಗಳು- "ಶಿವಾನಂದ ಶಿವಯೋಗಿಗಳು" "ವಚನ ಮಾಂಲ್ಯ" ಅದೇನ ಕಾಗದಂತಲ್ಲಿ" "ರೂಪಿಲ್ಲದವರ ರೂಪಿಸಿ" "ಜಾನಪದ ಚಿಂತನ " "ಬುದ್ದ ಸಿಕ್ಕಿದ್ದ" "ಸಿಂಹಾಸನ ಮಾಮಲೇದಾರ" "ನಿರ್ನೆರ" "ತರ್ದವಾಡಿ ಜಾನಪದ" "ಪಡಗಾನೂರ ಶಂಕರಗೌಡ" "ಬಸರಿಗಿಡದ ವೀರಪ್ಪ " "ಮಸಬಿನಾಳದ ಪಶುವಾದಿಗಳು" "ಕೆಂಪು ಹುಡಗಿ ಕಪ್ಪು ಕಾಲ್ಮರಿ" "ಹಲಸಂಗಿ ಬಾಗದ ಲಾವಣಿಕಾರರು " "ಒಡ್ದ ಹೇಳು ಹೌದೌದಂತಿನಿ" "ಹೊನ್ನ ಉಟ್ಟಿಗೆ" "ರಾಜಗುರು" "ಸೈತಾನ" " ಮುಜಾಹಿದ್ದಿನ್" "ಹಂತಿ" " ಮಸಬಿನಾಳ ದ ಸಾಂಸ್ಕೃತಿಕ ಅಧ್ಯಯನ " "ನಿರ್ನೆರ" "ಆನು-ತಾನು" "ಬಿ.ಎಸ್. ಪಾಟೀಲ (ಸಾಸನೂರ) " "ತೋಂಟದ ಸಿದ್ಧಲಿಂಗ ಶ್ರೀಗಳು " "ಗುರುಸಿದ್ದಪ್ಪ ಶರಣರು" ಮು "ಮೌನ ಕ್ರಾಂತಿ" ದಾರಾವಾಯಿ ಸಹ ನಿದರ್ಶನ, ಸಾಕ್ಷಿಚಿತ್ರಗಳ ನಿರ್ಮಾಣದಲ್ಲಿ ಸಹಕಾರ ಮು ತಮಿಳುನಾಡಿನ ಭಾರತೀಯಾರ,ಆಂದ್ರಪ್ರದೇಶದ ಕುಂಪಂ,ಕರ್ನಾಟಕದ ಹಲವು ವಿ .ವಿ .ಗಳಲ್ಲಿ ಪುಸ್ತಕ ಪ್ರಕಾಶನ ಮತ್ತು ಉಪನ್ಯಾಸ, ಹೀಗೆ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ನೂರಾರು ಉಪನ್ಯಾಸ ನೀಡಿದ್ದಾಗಿದೆ. * ಪದಾಧಿಕಾರಿ- ಸಾಹಿತ್ಯ ಪರಿಷತ್ತು, ಲೇಖಕರ ವೇದಿಕೆ,ಪುಸ್ತಕ ಪರಿಷತ್ತು, ಪುಸ್ತಕ ಪ್ರಾಧಿಕಾರ, ಗಡಿನಾಡು ಅಭಿವೃದ್ಧಿ ಸಂಘ,ಹಲವು ಪ್ರತಿಷ್ಠಾನ, ಬಸವ ಸಮಿತಿ ಅಧ್ಯಕ್ಷ ,ಸದಸ್ಯರಾಗಿ ಸೇವೆ ನಿರಂತರ. ಪ್ರಶಸ್ತಿ- ಗೊರೂರು ರಾಮಸ್ವಾಮಿ ಅಯ್ಯಂಗಾರಕನ್ನಡ,ಕ್ರಮಣ ಕಥಾ ಸಾಹಿತ್ಯ,ಮುಂಬಯಿ ಕನ್ನಡ ಕಥಾ ಪ್ರಶಸ್ತಿ, ಕುವೆಂಪು ಶ್ರೀ,ರಾಜಗುರು ಪ್ರತಿಷ್ಠಾನ, ಯುವ ಲೇಖಕರು ಪ್ರಶಸ್ತಿ, ದೆಹಲಿ ಕನ್ನಡ ಸಂಘ,ರಾಮನೊಹರ ಲೋಹಿಯಾ,ವಿಜಯವಾಣಿ ಕಥಾ ಸ್ಪರ್ಧೆ,ಪುಣೆಯ ಅಮೂಲ್ಯ ಕಥಾ ಪ್ರಶಸ್ತಿ, ಮುಂತಾದವು. ವಿಳಾಸ-ಶಂಕರ ಬೈಚಬಾಳ "ವಚನ" ರಾಜಾಜಿ ನಗರ,ವಿಜಯಪುರ-೫೮೬೧೦೯ ಪೊ-೯೪೪೮೭೫೧೯೮೦ ಮಿಂಚಂಚೆ[email protected] ಸಾಹಿತಿಗಳು== ಲೇಖಕರು ಗ್ರಂಥಕರ್ತರು ವರದಿಗಾರರು ಇತಿಹಾಸಕಾರರು ಸಂಶೋದನಾ ಗ್ರಂಥಕರ್ತರು ಕವಿಗಳು ಸಾಹಿತಿಗಳು
2409
https://kn.wikipedia.org/wiki/%E0%B2%AC%E0%B2%BE%E0%B2%AC%E0%B2%B0%E0%B3%8D
ಬಾಬರ್
ಮಧ್ಯ ಏಷ್ಯಾದಿಂದ(ಮಂಗೋಲಿಯ ಸಾಮ್ರಾಜ್ಯದ ಉಜಬೇಕಿಸ್ತಾನದಿಂದ) ಬಂದ ಮುಸ್ಲಿಂಜಯಶಾಲಿ, ಜಹೀರ್ ಉದ್ -ದಿನ್ ಮಹಮ್ಮದ್ ಬಾಬರ್ ( — ) ಹಲವಾರು ಸತತ ಸೋಲಿನಿಂದ ,ಎದೆಗುಂದದೆ ಅಂತಿಮವಾಗಿ ಭಾರತದಲ್ಲಿ ಮುಘಲ್ ಸಾಮ್ರಾಜ್ಯ ಸ್ಥಾಪಿಸಿದನು .https://www.britannica.com/biography/Babur ತನ್ನ ತಂದೆಯ ಮೂಲಕ ತೈಮೂರುವಂಶದ ನೇರಸ್ಥಾನಾಗಿ , ಗೆನ್ಗೀಸ್ ಖಾನ್ ನ ವಂಶಸ್ಥನಾದದ್ದು , ತಾಯಿಯ ಮೂಲಕ . ಬಾಬರ್ ತನ್ನ ವಂಶ ಪರಂಪರೆಯನ್ನು ಟಿಮುರಿಡ್ ಮತ್ತು ಚಾಘತಯ್ -ಟರ್ಕಿಕ್ ಎಂದು ಗುರುತಿಸಿಕೊಂಡಿದ್ದು,ತನ್ನ ಹುಟ್ಟು ,ವಾತಾವರಣ, ತರಭೇತಿ ಮತ್ತು ಸಂಸ್ಕೃತಿಗಳು ಪೆರ್ಸಿಯನ್ ಸಂಸ್ಕೃತಿ ಯಿಂದ ಬಂದವುಗಳೆಂದು,ಆದುದರಿಂದ ತನ್ನ ವಂಶದವರಿಂದ ಬಂದ ಇವುಗಳನ್ನು ತನ್ನ ಜವಾಬ್ದಾರಿಯಿಂದ ಪೋಷಿಸಬೇಕೆಂದು, ಪೆರ್ಸಿಯನ್ ಸಂಸ್ಕೃತಿಯ ಪ್ರಭಾವ ವನ್ನು ಭಾರತದ ಉಪಖಂಡ ದಲ್ಲಿ ವಿಸ್ತರಿಸಿ , ಬುದ್ಧಿವಂತಿಕೆಯ ಸಾಹಿತ್ಯ , ಕಲೆ , ಮತ್ತು ಚಾರಿತ್ರಿಕ ಫಲಿತಾಂಶದ ಮೂಲಕ ಪರಿಚಯಿಸಲು ಉದ್ಯುಕ್ತನಾದನು. ಸ್ಥೂಲ ಅವಲೋಕನ ಬಾಬರನ ಹೆಸರು ಜಹೀರ್ ಉದ್ -ದಿನ ಮಹಮ್ಮದ್ ( ಬಿರುದಾಂಕಿತ ಅಲ್ -ಸುಲ್ತಾನು 'ಐ -ʿಅಜಮ್ ವ 'ಐ -ಹಕನ್ ಅಲ್ -ಮುಕ್ಕರ್ರಾಮ್ ಬಾದಶಃ -ಈ ಘಜಿ ),ಆದರೂ ಹೆಚ್ಚಾಗಿ ಬಾಬರ್ ಎಂಬ ಹೆಸರಿನಲ್ಲಿಯೇ ಕರೆಯಲ್ಪಡಲಾಯಿತು. ಸ್ಟೀಫನ್ ಫ್ರೆಡೆರಿಕ್ ಡೇಲ್ ಪ್ರಕಾರ , ಬಾಬರ್ ಎನ್ನುವ ಹೆಸರು ಪೆರ್ಸಿಯನ್ ಶಬ್ದ ಬಾಬ್ರ , ಅಂದರೆ "ಹುಲಿ " ಎಂಬುದಾಗಿದ್ದು,ಈ ಶಬ್ದ ಆಗಾಗ್ಗೆ ಫಿರ್ದವಸಿಸ್ ಶಹನಾಮ ದಲ್ಲಿ ಕಾಣಿಸಿಕೊಂಡಿದ್ದು, ಸೆಂಟ್ರಲ್ ಏಷಿಯಾದ ಟರ್ಕಿ ಭಾಷೆಯಿಂದ ಪಡೆಯಲಾಗಿದೆ . ಈ ವಾದವನ್ನು 'ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಗ್ರೇಟ್ ಬ್ರಿಟೈನ್ ಮತ್ತು ಐರ್ಲ್ಯಾಂಡ್' ಸಂಸ್ಥೆಯು ಬೆಂಬಲಿಸಿದ್ದು, ಟರ್ಕೋ -ಮೊಂಗೊಲ್ ನ ಹೆಸರು ತೈಮೂರ್ ಸಹ ಈ ರೀತಿಯ ಬದಲಾವಣೆಗೆ ಒಳಗೊಂಡು , ಸಂಸ್ಕೃತ ಶಬ್ದ ಸಿಮರ ("ಕಬ್ಬಿಣ ") ದ ಬದಲಾದ ರೀತಿ *ಸಿಮ್ರ್ ಅಂತಿಮವಾಗಿ ಟರ್ಕಿಯ ಭಾಷೆಯಲ್ಲಿ ತೈಮೂರ್ , -ಯು ಅರ್ ಬದಲಾಗಿ -ಅರ್ ಆಗಿದ್ದ್ದು, ಟರ್ಕಿಷ್ ಸ್ವರದ ಹೊಂದಿಕೆ ಕಾರಣವಾಗಿದೆ. (ಆದುದರಿಂದ ಬಾಬ್ರ → ಬಾಬರ್ ). ಸತ್ಯವಾದ ವಿಚಾರಗಳ ,ಈ ವಾದದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಡಬ್ಲ್ಯು .ಎಂ . ಥ್ಯಾಕ್ ಸ್ಟನ್ ವಾದದಲ್ಲಿ ಬಾಬ್ರ ಎಂಬ ಹೆಸರಿನಿಂದ ಬಂದುದಲ್ಲವೆಂದು ,ಬದಲಾಗಿ ಇಂಡೋ -ಯುರೋಪಿಯನ್ ಶಬ್ದ ಬೀವರ್ ಎಂಬುದರಿಂದ ಬಂದಿರಬಹುದೆಂದು, ಬಾಹ್ -ಬೋರ್ ಶಬ್ದ ರಚನೆ ಪೆರ್ಸಿಯನ್ ಮತ್ತು ಟರ್ಕಿಗಳೆರಡರಲ್ಲೂ ಇದ್ದು , ರಷ್ಯನ್ ಭಾಷೆಯ ಬೀವರ್ ನಲ್ಲಿಯೂ ಪದಪ್ರಯೋಗವಾಗಿದೆ. (бобр - ಬಾಬ್ರ ). ಜೀವನ ಚರಿತ್ರೆಯ ಆಧಾರಗಳು/ಮೂಲಗಳು ಬಾಬರ್ ನ ಜೀವನ ಚರಿತ್ರೆಯ ಮೂಲ ಅವನ ಜೀವನಾಧಾರಿತವಾಗಿದ್ದು, ಬಾಬರ್ ನಿಂದಲೇ ರಚಿಸಲ್ಪಟ್ಟಿದೆ . ಅವನ ನೆನೆಪುಗಳು ಬಾಬರ್ ನಾಮ ಎಂದು ಕರೆಯಲ್ಪಟ್ಟಿದೆ. ಮತ್ತು ಇದು ಇಸ್ಲಾಮಿಕ್ ಸಾಹಿತ್ಯದಲ್ಲಿ ಮೊದಲನೇ ಸತ್ಯವಾದ ಆತ್ಮ ಚರಿತ್ರೆ ಎಂದು ಗುರುತಿಸಲ್ಪಟ್ಟಿದೆ. ತನ್ನ ಮಾತೃ ಭಾಷೆ ಚಘತಾಯ್ ಟರ್ಕಿಭಾಷೆಯಲ್ಲಿ ಬಾಬರ್ ನಾಮ ಬರೆಯಲ್ಪಟ್ಟಿದೆ. ಪಟ್ಯವು ಪೂರ್ಣ ಪರ್ಷಿಯನ್ ಮಯವಾಗಿದ್ದು, ಅದರ ರಚನೆ, ವ್ಯಾಕರಣ,ಸಾಹಿತ್ಯ ಪರ್ಷಿಯನ್ ಶೈಲಿಯಲ್ಲಿದೆ. ಬಾಬರ್ ನ ಸುತ್ತಮುತ್ತಲ ವಾತಾವರಣದ ಅತ್ಯಮೂಲ್ಯ ನಿದರ್ಶನ ಇದಾಗಿದೆ. ಮೂಲಗ್ರಂಥದ ಚರಿತ್ರೆ ಮತ್ತು ಭಾಷಾಂತರಗಳು ಈ ವೃತ್ತಾಂತವು ಮೂಲಕ್ಕಿಂತಲೂ, ಈಗಿನದಕ್ಕಿಂತಲೂ ಹೆಚ್ಚು ವ್ಯಾಪಕವಾಗಿತ್ತು. ವೃತ್ತಾಂತದಲ್ಲಿನ ಬಿಡುವು, ಅದರಲ್ಲಿಯೂ ೧೫೦೮ ರಿಂದ ೧೫೧೯ ರ ನಡುವೆ ಮತ್ತು ೧೫೨೦ ರಿಂದ ೧೫೨೫ ರ ನಡುವೆ, ಬಿರುಗಾಳಿ /ಪ್ರವಾಹದಲ್ಲಿನ ಮಧ್ಯದ ಫಲಿತಾಂಶದಂತೆ ಇತ್ತು. ಬಾಬರನು ತಾನು ಸಾಯುವ ಒಂದು ವರ್ಷದ ಮುಂಚೆ ತನ್ನ ಆತ್ಮ ಚರಿತ್ರೆಯ ಕೆಲಸವನ್ನು ಮತ್ತೊಮ್ಮೆ ತಿದ್ದಲು ೧೫೨೮-೨೯ ರಲ್ಲಿ ಪ್ರಯತ್ನಿಸಿದನು. ಬಾಬರನ ಮಗ ಮತ್ತು ಅವನ ನಂತರದ ರಾಜ ಹುಮಾಯೂನ್ ನಿಗೆ , ಚಘತಯ್ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಹಾಗೂ ತಂದೆಯ ಆತ್ಮ ಚರಿತ್ರೆಯನ್ನು ಓದಿ ತಿಳಿದಿದ್ದನು. ಬಾಬರನು ತಾಳೆ ಹಾಕಿ ನೋಡಿ ,ಭಾಷೆ,ಹಾಗು ಜೀವನಶೈಲಿಯಲ್ಲಿ ತಿದ್ದುಪಡಿ ಹಾಗು ಬದಲಾವಣೆಗಳನ್ನು ಮಾಡಿದನು. ಹಾಗು ಹುಮಾಯೂನನು ೧೫೫೬ ರಲ್ಲಿ ನಿಧನ ಹೊಂದಿದಾಗ, ಬಾಬರನ ಮೊಮ್ಮಗ ಅಕ್ಬರ್‌ತನ್ನ ೧೪ ನೇ ವಯಸ್ಸಿನಲ್ಲಿ ರಾಜಾಧಿಕಾರಕ್ಕೆ(ಸಿಂಹಾಸನವೇರಿದನು) ಬಂದನು. ,ಈ ಯುವ ರಾಜನನ್ನು,ರಾಜ ಪ್ರತಿನಿಧಿ ; ಬೈರಾಮ್ ಖಾನ ನು ಜಾಗೃತಿ ಗೊಳಿಸಿದನು. ಬೈರಾಮ್ ಖಾನನು ಇರಾನ್‌ದೇಶದ ರಾಜನೀತಿ ನಿಪುಣ,ಅವರ ತಂದೆ ಹಾಗೂ ತಾತ ಬಾಬರ್ ನ ಜೊತೆಗೆ ಸೇವೆಯಲ್ಲಿದ್ದರು. ಬೈರಾಮ್ ಖಾನ್ ,ತಾನೇ ಪರ್ಷಿಯನ್ ಭಾಷೆಯಲ್ಲಿ ಹಾಗು ಚಘತಯ್ ಅಲ್ಲಿ ಕವನಗಳನ್ನು ಬರೆದನು. ಅವನ ಮಗ , ಅಬ್ದುಲ್ -ರಹೀಂ ನು , ಚಘತಯ್ , ಉರ್ದು , ಮತ್ತು ಪರ್ಷಿಯನ್ ಭಾಷೆಗಳಲ್ಲಿ ನಿರರ್ಗಳವಾಗಿ ರಚಿಸುವವನಾಗಿದ್ದನು. ಬಾಬರ್ ನ ಆತ್ಮ ಕಥೆಯನ್ನು , ಪರ್ಷಿಯನ್ ಭಾಷೆಗೆ ಬಾಬರ್ ನಾಮ ಎಂದು ತರ್ಜುಮೆ ಮಾಡಿದನು. ೧೬೨೮ ಮತ್ತು ೧೬೩೮ ರ ಕಾಲದಲ್ಲಿ ಶಾ ಜಹಂಗೀರ್ ನ ಅವಧಿಯಲ್ಲಿ,ಚಘತಯ್ ಮೂಲವನ್ನು ,ಕಡೇಯದಾಗಿ ಇಂಪೀರಿಯಲ್ ಗ್ರಂಥಾಲಯದಲ್ಲಿ ನೋಡಲಾಯಿತು. ಜೀವನ ಚರಿತ್ರೆ ಹಿನ್ನೆಲೆ ಇಂದಿನ ಉಜ್ಬೇಕಿಸ್ತಾನದ ಫೆರ್ಗನ ಕಣಿವೆಯ ,ಅಂದಿಜಾನ್‌ನಗರದಲ್ಲಿ ಬಾಬರನು ಜನಿಸಿದನು. ಫೆರ್ಗನ ಕಣಿವೆಯ ರಾಜ ʿಓಮರ್ ಶೇಖ್ ಮಿರ್ಜಾ , ನ ಹಿರಿಯ ಮಗ ಬಾಬರನಾಗಿದ್ದು, ಹೆಂಡತಿ ,ಕುತ್ಲುಕ್ ನೇಗರ್ ಖಾನುಂ , ಮೊಘುಲಿಸ್ಥಾನದ ರಾಜ, ಯೋನುಸ್ ಖಾನ್‌ನ ಮಗಳಾಗಿದ್ದಾಳೆ. ಬಾಬರ್ ನು ಬರ್ಲಾಸ್‌ಬುಡಕಟ್ಟು ಜನಾಂಗದ ಮೊಂಗೊಲ್ ನವನಾದರೂ,ಇವನ ಬುಡಕಟ್ಟು ಟರ್ಕಿಕ್ ಮತ್ತು ಪರ್ಷಿಯನ್ ಸಂಸ್ಕೃತಿ ಅಪ್ಪಿಕೊಂಡಿದ್ದು, , ಇಸ್ಲಾಂಗೆ ಮತಾಂತರಗೊಂಡು, ತುರ್ಕಿಸ್ತಾನ್ ಮತ್ತು ಕ್ಹೋರಸನ್‌ನಲ್ಲಿ ನೆಲೆಸಿದನು. ಚಘತೈ ಭಾಷೆಯು ಇವನ ಮಾತೃ ಭಾಷೆಯಾಗಿತ್ತು. ( ಬಾಬರ್ ಗೆ ತುರ್ಕಿ , "ತುರ್ಕಿಕ್ " ಎಂದು ಗೊತ್ತಿತ್ತು.) ಜೊತೆಗೆ ಪರ್ಷಿಯನ್ ಮನೆಯಲ್ಲಿಯೂ ಇದ್ದನು. ತೈಮುರಿದ್ ಎಲೈಟ್ ಭಾಷಾ ನೀತಿಯಂತೆ . ಆದುದರಿಂದ ಬಾಬರನು , ಮೊಂಗೊಲ್ ನವನಾದರೂ, (ಅಥವಾ ಮೊಘಲ್ ಪರ್ಷಿಯನ್ ದಲ್ಲಿ ),ಹೆಚ್ಚಿನ ಬೆಂಬಲವನ್ನು ತುರ್ಕಿಕ್ ಮತ್ತು ಇರಾನಿಯನ್ , ಸೆಂಟ್ರಲ್ ಏಷಿಯಾದಿಂದ ಪಡೆದಿದ್ದು,ಅವನ ಸೇನೆಯು ವಿವಿಧ ಬಗೆಯ ಸಾಂಪ್ರದಾಯಿಕ ಶ್ರೇಷ್ಟತೆಯನ್ನು ಹೊಂದಿದ್ದು,ಅವರಲ್ಲಿ ಪರ್ಷಿಯನ್ನರು (ತಜಿಕ್ ಗಳು ಅಥವಾ ಸರ್ಟ್ಸ್ ಗಳು , ಬಾಬರ್ ನಿಂದ ಕರೆಯಲ್ಪಟ್ಟ ಹಾಗೆ ), ಪಷ್ಟುನ್ಸ್ ,ಮತ್ತು ಅರಬ್ಬರು ಜೊತೆಗೆ ಬರ್ಲಾಸ್ ಮತ್ತು ಸೆಂಟ್ರಲ್ ಏಷಿಯಾ ದಿಂದ ಚಘತಾಯಿಡ್ ತುರ್ಕೋ -ಮೊಂಗೋಲರು ಇದ್ದರು. ಬಾಬರ್ ನ ಸೇನೆಯಲ್ಲಿ ಕಿಜಿಲಬಾಶ್ ಹೋರಾಟಗಾರರು ಸೇರಿದ್ದು,ಧಾರ್ಮಿಕ ಸೇನಾನಿ ಶಿಯಾಸ್ ಸುಫಿಸ್ ,ಸಫಾವಿದ್ ಪರ್ಶಿಯದಿಂದ ಬಂದವನಾಗಿದ್ದು,ತದನಂತರದ ದಿನಗಳಲ್ಲಿ, ಮುಘಲ್ ಆಸ್ಥಾನದಲ್ಲಿ ಹೆಚ್ಚು ಹೆಸರುವಾಸಿಯಾದನು. ಬಾಬರ್ ಹೆಚ್ಚು ಬಲಶಾಲಿಯಾಗಿದ್ದು,ಭೌತಿಕವಾಗಿ ಧೃಡವಾಗಿದ್ದನು. ತನ್ನ ದೈಹಿಕ ಅಭ್ಯಾಸದ ಸಮಯದಲ್ಲಿ, ವ್ಯಾಯಾಮಕ್ಕಾಗಿ ಎರಡೂ ತೋಳುಗಳ ಮೇಲೆ ಇಬ್ಬರನ್ನು ಕೂರಿಸಿಕೊಂಡು ಓಡುತ್ತಾ ಬೆಟ್ಟವನ್ನು ಹತ್ತುವವನಾಗಿದ್ದನು. ಕಥೆಗಳು ಹೇಳುವ ಹಾಗೆ , ಬಾಬರ್ ಮುಖ್ಯನದಿ ಗಳನ್ನು ಈಜಬಲ್ಲವನಾಗಿದ್ದು, ಉತ್ತರ ಭಾರತದ ಗಂಗಾನದಿಯನ್ನು ಎರಡು ಬಾರಿ ಈಜಿದ್ದನು. ಅವನ ಭಾವ ತೀವ್ರತೆಯೂ ತೀಕ್ಷ್ಣವಾಗಿತ್ತು. ತನ್ನ ಮೊದಲನೇ ಮದುವೆಯಾಗಿದ್ದ ಆಯಿಶ -ಸುಲ್ತಾನ್ - ಬೇಗಂ ಜೊತೆ ,"ತುಂಬಾ ನಾಚಿಕೆ" ಸ್ವಭಾವದವನಾಗಿದ್ದ.ನಂತರದ ದಿನಗಳಲ್ಲಿ ,ಅವಳ ಮೇಲಿನ ತನ್ನ ಪ್ರೀತಿಯನ್ನು ಕಳೆದುಕೊಂಡ. ಬಾಬರ್ ಕಟ್ಟಾ ಸುನ್ನಿಸಂಪ್ರದಾಯದ ಮುಸ್ಲಿಂ ಆಗಿದ್ದು,ನೈಮಿತ್ತಿಕವಾಗಿ ಶಿಯಾ ಮುಸ್ಲಿಮರ ವಿಷಯಾಂತರ ಹೇಸಿಗೆಯಿಂದಾಗಿ ಧ್ವನಿಯೆತ್ತುತ್ತಿದ್ದ . ಅವನ ಜೀವನದಲ್ಲಿ ಧರ್ಮವು ಕೇಂದ್ರ ಬಿಂದುವಾಗಿದ್ದು,ಬಾಬರ್ ಮತ್ತು ಅವನ ನಂತರದ ರಾಜರು ಇಸ್ಲಾಂ ಅನ್ನು ಗಂಭೀರವಾಗಿ ಪರಿಗಣಿಸಿರಲ್ಲಿಲ್ಲ. ಅವನ ಸಮಕಾಲೀನರ ಒಂದು ಕವನದ ಬಗ್ಗೆ ಒಂದು ಸಾಲನ್ನು ತೆಗೆದುಕೊಂಡು, " "ನಾನು ಕುಡುಕ ಅಧಿಕಾರಿ, ನಾನು ಶಾಂತಚಿತ್ತನಾಗಿದ್ದಾಗ ನನ್ನನ್ನು ಶಿಕ್ಷಿಸಿ." ಎಂದು ಹೇಳುತ್ತಾನೆ. ಬಾಬರ್ ನ ಸಂಬಂಧಿ ,ಅವನ ಚಿಕ್ಕಪ್ಪರಲ್ಲೊಬ್ಬ "ದುರ್ಗುಣ ಮತ್ತು ವ್ಯಭಿಚಾರಿ ಗುಣಗಳಿಗೆ , ಬಹಳವಾಗಿ ದಾಸನಾಗಿದ್ದ. ಅವನ ಸಾಮ್ರಾಜ್ಯದಲ್ಲಿ , ಎಲ್ಲೆಲ್ಲಿ ಗಡ್ದವಿಲ್ಲದವರು, ಶಾಂತ ಯುವಕರನ್ನು ,ತನ್ನ ಕಡೆಗೆ ಸೆಳೆಯಲು ಏನು ಬೇಕಾದರೂ ಮಾಡಬಲ್ಲವನಾಗಿದ್ದನು. ಇವನ ಕಾಲಾವಧಿಯಲ್ಲಿನ ಈ ಮಾರ್ಗ /ನೀತಿ ಎಲ್ಲಾ ಕಡೆಗೆ ಹರಡಿತು.ಇದನ್ನು ಒಂದು ಪವಿತ್ರ ಕೆಲಸ ಎಂಬಂತೆ ಮಾಡಿದನು." ತಾನು ಸಾಯುವ ಎರಡು ವರ್ಷ ಮುಂಚೆ ಕುಡಿಯುವುದನ್ನು ಬಿಟ್ಟನು.ಹಾಗೆಯೇ ಅದನ್ನು ತನ್ನ ಆಸ್ಥಾನದಲ್ಲಿನ ಎಲ್ಲರೂ ಪಾಲಿಸುವಂತೆ ಆದೇಶಿಸಿದನು. .ಆದರೆ ಮಾದಕ ದ್ರವ್ಯಗಳ ಸೇವನೆಯನ್ನು ಮಾತ್ರ ಬಿಟ್ಟಿರಲ್ಲಿಲ್ಲ, ಮತ್ತು ತನ್ನ ಹಾಸ್ಯದ ಪ್ರವೃತ್ತಿಯನ್ನೂ ಬಿಡಲ್ಲಿಲ್ಲ. ಎಂದು ಅವನು ಬರೆದ : ಸೈನಿಕ ಜೀವನ /ಸೈನಿಕ ಆಡಳಿತ ೧೪೯೫ ರಲ್ಲಿ ,೧೨ ವರ್ಷದವನಾಗಿದ್ದಾಗ, ಬಾಬರ್ ತನ್ನ ಮೊದಲ ಅಧಿಕಾರವನ್ನು ಹೊಂದಿದನು.ತನ್ನ ತಂದೆಯ ನಂತರ ಫಾರ್ಘನ ದೇಶದ ರಾಜನಾದನು.ಅದು ಈಗಿನ ಉಜ್ಬೇಕಿಸ್ತಾನ್ . ಬಾಬರನ ಚಿಕ್ಕಪ್ಪಂದಿರು ಯಾವುದೇ ಮುಲಾಜಿಲ್ಲದೆ,ಬಾಬರನ ಅಧಿಕಾರವನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಲೇ ಇದ್ದರು.ಹಾಗೂ ಹಲವಾರು ಪ್ರಾಂತ್ಯಗಳನ್ನು ಕಸಿದುಕೊಳ್ಳಲು ಪ್ರಯತ್ನ ನಡದೇ ಇತ್ತು. ಈ ಕಾರಣದಿಂದ , ಬಾಬರ್ ತನ್ನ ಜೀವನದ ಬಹುಕಾಲವನ್ನು ,ಆಶ್ರಯವಿಲ್ಲದೆ ದೇಶಭ್ರಷ್ಟ ನಾಗಿ, ಕಾಲ ಕಳೆಯಬೇಕಾಯಿತು.ಆ ಸಮಯದಲ್ಲಿ ಅವನ ಸ್ನೇಹಿತರು ಮತ್ತು ರೈತರುಆಶ್ರಯದಾತರಾದರು. ೧೪೯೭ ರಲ್ಲಿ , ಬಾಬರ್ ಸಮರ್ಕಂಡ್ ನ ಉಜ್ಬೆಕ್ ನಗರವನ್ನು ಆಕ್ರಮಿಸಿದನು.೭ ತಿಂಗಳ ಹೋರಾಟದ ನಂತರ ನಗರವನ್ನು ಆಕ್ರಮಿಸಿ ಗೆದ್ದನು. ಆ ಸಮಯದಲ್ಲಿ ,ಕೆಲವು ಶ್ರೀಮಂತ ಬಂಡಾಯಗಾರರು,ವಾಪಸ್ಸು ಬರುವ ಸಂದರ್ಭದಲ್ಲಿ ಸುಮಾರು ೩೫೦ ಕಿಲೋಮೀಟರುಗಳ (೨೦೦ ಮೈಲಿಗಳು )ದೂರದಲ್ಲಿ ಫಾರ್ಘನ ದಲ್ಲಿ ದರೋಡೆಯಾಗಿ, ಅದನ್ನು ಪುನರ್ಪಡೆಯುವ ನಿಟ್ಟಿನಲ್ಲಿ ಹೋಗುತ್ತಿದ್ದಾಗ , ಬಾಬರ್ ನ ಸೇನೆ ಸಮರ್ಕಂಡ್ ನಲ್ಲಿ ಅನಾಥವಾಗಿ, ಸಮರ್ಕಂಡ್ ನಲ್ಲಿಯೂ ಇಲ್ಲದೆ, ಫೆರ್ಗನದಲ್ಲಿಯೂ ಇರದಂತೆ ಆಯಿತು. ೧೫೦೧ ರ ಹೊತ್ತಿಗೆ,ಮತ್ತೊಮ್ಮೆ ಸಮರ್ಕಂಡ್ ಮೇಲೆ ಹಿಡಿತ ಸಾಧಿಸಲು ಯತ್ನಿಸಿ,ತದನಂತರದಲ್ಲೇ ತನ್ನ ಶತ್ರು,ಮಹಮ್ಮದ್ ಶಯಬಾನಿ ಉಜ್ಬೇಕ್ಸ್‌ನ ,ಖಾನ್ ನ ಕೈಯಲ್ಲಿ ಪರಾಜಿತಗೊಂಡನು. ಅವನ ಜೀವನದಲ್ಲಿ ಮನಸ್ಸಿಗೆ ಇಷ್ಟವಿಲ್ಲದೆ, ಸಮರ್ಕಂಡ್ ಅನ್ನು ಮತ್ತೆ ಕಳೆದುಕೊಂಡನು. ಫೆರ್ಗನದಿಂದ ತನ್ನ ಕೆಲವೇ ಕೆಲವು ಹಿಂಬಾಲಕರೊಡನೆ ತಪ್ಪಿಸಿಕೊಂಡು ,೩ ವರ್ಷಗಳ ಕಾಲ ಬಾಬರನು ತನ್ನ ಬಲಿಷ್ಠ ಸೈನ್ಯವನ್ನು ಕಟ್ಟಲು ನಿರತನಾದನು.ಸೈನ್ಯದಲ್ಲಿ ಬದಕ್ಷಾನ್ ನ ಟಜಿಕ್ಸ್ ಗೆ ಹೆಚ್ಚು ಆದ್ಯತೆ ನೀಡಿ ಸೇರಿಸಿಕೊಂಡನು. ೧೫೦೪ ರಲ್ಲಿ , ಹಿಂದೂ ಕುಶ್‌ಹಿಮದ ಬೆಟ್ಟವನ್ನು ದಾಟಿ ಆರ್ ಗುಂಡೀಸ್‌ನ ಕಾಬುಲ್ ಅನ್ನು ಆಕ್ರಮಿಸಿಕೊಂಡನು. ಕಂದಹಾರ್‌ಗೆ ಹಿಮ್ಮೆಟ್ಟುವಂತೆ ಮಾಡಿದನು. ಈ ಒಂದು ನಡೆಯಿಂದ ,ಸಂಪದ್ಭರಿತ ರಾಜ್ಯವನ್ನು ಪಡೆದಂತಾಗಿ,ತನ್ನ ಅದೃಷ್ಟವನ್ನು ಮತ್ತೆ ಕಟ್ಟಿಕೊಂಡು,ಬಾದ್ ಶಾ ಎನ್ನುವ ಬಿರುದನ್ನೂ ಪಡೆದನು. ಮುಂದಿನ ದಿನಗಳಲ್ಲಿ , ಬಾಬರ್ ದೂರದ ಸಂಬಂಧಿ ಟೈಮುರಿಡ್ ನ ಪ್ರಾಚೀನ ನಗರಗಳ ಹುಸೇನ್ ಬೈಖಾರ ಜೊತೆ, ಹೊಂದಾಣಿಕೆ ಮಾಡಿಕೊಂಡು , ಉಸುರ್ಪೆರ್ ಮಹಮ್ಮದ್ ಶಾಯ್ಬಾನಿಯ ವಿರುದ್ಧ ನಿಂತನು. ಆದರೆ, ಹುಸೇನ್ ಬೈಖಾರನ ಸಾವಿನಿಂದಾಗಿ ೧೫೦೬ ರಲ್ಲಿ ಈ ಪ್ರಯತ್ನ ತಡವಾಯಿತು.. ಬದಲಾಗಿ ಬಾಬರನು ಹೆರಾತ್ ನಗರವನ್ನು ಆಕ್ರಮಿಸಿ,ಎರಡು ತಿಂಗಳು ಅಲ್ಲಿ ಕಾಲ ಕಳೆದು ,ಮೂಲಭೂತ ಅವಶ್ಯಕತೆಗಳ ಕುಂದುಕೊರತೆಗಳನ್ನು ಎದುರಿಸಲಾರದೆ ಬಲವಂತವಾಗಿ ಸ್ಥಳ ಬಿಡಬೇಕಾಯಿತು. ಆದಾಗ್ಯೂ ,ಹೆರಾತ್ ನ ಬುದ್ಧಿವಂತರ ಸಮೃದ್ಧಿ ,ಈ ಬಗ್ಗೆ ಹೇಳುತ್ತಾ, "ಕಲಿತವರು ಮತ್ತು ಅರಿತ ಮಂದಿ/ಜನಗಳಿಂದ ತುಂಬಿದೆ." ಎಂದು ಆಶ್ಚರ್ಯಭರಿತನಾಗುತ್ತಾನೆ.ಉಜ್ಬೆಕ್ ಕವಿ ಮೀರ್ ಅಲಿ ಶಿರ್ ನವಾಯಿ ಜೊತೆಗೆ ಸೇರಿ, ಚಗತೈ ಭಾಷೆಯನ್ನು ಸಾಹಿತ್ಯ ಭಾಷೆಯನ್ನಾಗಿ ಅಭಿವೃದ್ಧಿ ಪಡಿಸುವ ಅವನ ಕೆಲಸಗಳನ್ನು ಪ್ರೋತ್ಸಾಹಿಸುವುದರಲ್ಲಿ ನಿರತನಾಗುತ್ತಾನೆ. ನವಾಯಿಸ್ ನ ಭಾಷಾ ಪ್ರೌಢಿಮೆಯಿಂದಾಗಿ,ಅದರ ಉಪಯೋಗವನ್ನು ಕೊಂಡುಕೊಳ್ಳಲು , ಬಾಬರ್, ಬಾಬರ್ ನಾಮ ದ ತನ್ನ ಜೀವನ ಚರಿತ್ರೆಯಲ್ಲಿ ಬಳಸಿಕೊಳ್ಳಲು ಇಚ್ಚಿಸಿರಬಹುದು. ಅವನ ಮನದಲ್ಲಿದ್ದ ಕ್ರಾಂತಿಕಾರಿ ಗುಣಗಳ ಪ್ರೇರೇಪಣೆಯಿಂದಾಗಿ, ಹೆರಾತ್‌ನಿಂದ ಕಾಬುಲ್ ಗೆ ಹಿಂತಿರುಗುವಂತೆ ಮಾಡಿತು. ಆ ಸಂದರ್ಭವನ್ನು ಬಿಟ್ಟು ಇನ್ನುಳಿದಂತೆ,ಎರಡು ವರ್ಷಗಳ ನಂತರ ,ಅವನ ಸೈನ್ಯದ ಕೆಲವು ಮುಖ್ಯಸ್ಥರ ಕ್ರಾಂತಿಯಿಂದ, ಕಾಬುಲಿನಿಂದ ಹೊರಗೆ ದಬ್ಬಲಾಯಿತು. ಕೇವಲ ಕೆಲವರಿಂದ ಮತ್ತೆ ತಪ್ಪಿಸಿಕೊಂಡು , ಬಾಬರ್ ಮತ್ತೊಮ್ಮೆ ನಗರಕ್ಕೆ ವಾಪಸ್ಸಾಗಿ , ಕಾಬುಲನ್ನು ಮತ್ತೆ ಆಕ್ರಮಿಸಿಕೊಂಡು ,ಮತ್ತೊಮ್ಮೆ ತನ್ನ ಶತ್ರುಗಳ ಸ್ವಾಮಿಭಕ್ತಿಯನ್ನು ಪಡೆದನು. ಮಹಮ್ಮದ್ ಶಾಯ್ಬನಿಯನ್ನು ಇಸ್ಮಾಯಿಲ್ - Iಸೋಲಿಸಿ ಸಾಯಿಸಿದನು. ಸಫಾವಿದ್ ಪರ್ಷಿಯಾದರಾಜ ೧೫೧೦, ರಲ್ಲಿ ಬಾಬರ್ ನೊಂದಿಗೆ ಸೇರಿ, ಅವಕಾಶವನ್ನು ಉಪಯೋಗಿಸಿಕೊಂಡು ತನ್ನ ವಂಶಜರ ಟೈಮುರಿಡ್ ಪ್ರಾಂತ್ಯಗಳನ್ನು ಪುನರ್ವಶಪಡಿಸಿಕೊಳ್ಳಲು ಪ್ರಯತ್ನಿಸಿದನು. ಮುಂದಿನ ಕೆಲವು ವರ್ಷಗಳಲ್ಲಿ , ಬಾಬರ್ ಮತ್ತು ಶಾ -ಇಸ್ಮಾಯಿಲ್ - I ಜೊತೆಗೂಡಿ ಕೇಂದ್ರ ಏಷಿಯಾದ ಕೆಲವು ಭಾಗಗಳನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದರು. ಇಸ್ಮಾಯಿಲ್ ನ ಸಹಾಯಕ್ಕೆ ಪ್ರತಿಯಾಗಿ , ಬಾಬರ್ ಸಫಾವಿದ್ಸ್ ಗೆ ತನ್ನ ಮತ್ತು ತನ್ನ (ಅನುಯಾಯಿಗಳ) ತನ್ನವರ /ಸುಜೆರೈನ್ ರಾಜನಾಗಿ ಅಧಿಕಾರ ಮಾಡಲು ಬಿಟ್ಟುಕೊಟ್ಟನು. ಇದಕ್ಕೆ ಪ್ರತಿಯಾಗಿ ,' ಶಾ - ಇಸ್ಮಾಯಿಲ್ ' ಬಾಬರ್ ಜೊತೆ ಮತ್ತೆ ಒಂದಾಗಿ ,ಇತ್ತೀಚೆಗೆ ನಿಧನರಾದ ಶಾಯ್ಬನಿಯ ಬಲವಂತದ ಮದುವೆಗೆ ಪ್ರಯತ್ನಿಸಿದ್ದವರನ್ನು ತಪ್ಪಿಸಿ, ಬಾಬರನಿಗೆ ತನ್ನ ತಂಗಿ 'ಖಾನ್ ಜಡಾ'ಳನ್ನು ಕೊಟ್ಟು ಮದುವೆ ಮಾಡಿದ. ಇಸ್ಮಾಯಿಲ್ ನು , ಬಾಬರ್ ನಿಗೆ ಹೆಚ್ಚಿನ ಆಸ್ತಿಯನ್ನು ,ಅದ್ದೂರಿ ವಸ್ತುಗಳನ್ನು ,ಮತ್ತು ಸೈನಿಕರನ್ನು ನೀಡಿದನು. ಇದಕ್ಕೆ ಬಾಬರ್ ಪ್ರತಿಕ್ರಿಯಿಸಿ, ಶಿಯಾ ಮುಸ್ಲಿಂಮರ ದಿರಿಸು ಮತ್ತು ಸಂಪ್ರದಾಯಗಳನ್ನು ಅನುಸರಿಸಿದನು. ಶಿಯಾ ಇಸ್ಲಾಂ ನ ಪಾಲಕನಾಗಿ ಪರ್ಷಿಯಾದ ಶಾ , ಇಮಾಂ ಮುಸ ಅಲ್ -ಕಜಿಂ ನ ವಂಶದವನಾದನು. ಇವನು ಏಳನೆಯ ಶಿಯಾ ಇಮಾಂ . ನಾಣ್ಯಗಳನ್ನು ಇಸ್ಮಾಯಿಲ್ ಹೆಸರಿನಲ್ಲಿ ಮುದ್ರಿಸಬೇಕಾಗಿತ್ತು.ಮಸೀದಿಯ ಖುತ್ಬವನ್ನು ಸಹ ಅವನ ಹೆಸರಿನಲ್ಲಿ ಓದಬೇಕಾಗಿತ್ತು. ಇದರ ಪರಿಣಾಮವಾಗಿ , ಬಾಬರ್ ಸಮರ್ಕಂಡ್ ಅನ್ನು ತನ್ನ ಸಾಮಂತ ಪ್ರಾಂತ್ಯವನ್ನಾಗಿ 'ಪರ್ಷಿಯನ್ ಶಾ' ಗೆ , ಕಾಬುಲ್ ನಲ್ಲಿದ್ದರೂ,ನಾಣ್ಯಗಳು ಮತ್ತು ಖುತ್ಬ ಬಾಬರ್ ನ ಹೆಸರಿನಲ್ಲೇ ಉಳಿಯಿತು. ಉಜ್ಬೇಗ್ಸ್ಗಿಂತ ವಿಭಿನ್ನವಾಗಿ, ಬಾಬರ್ ಟೈಮುರಿಡ್ನಾಗಿ ಹೆಚ್ಚು ನ್ಯಾಯತೆ ಹೊಂದಿದ್ದರಿಂದ ಮತ್ತು ಇದರ ಸಹಾಯದಿಂದ ,ಬಾಬರನು ಬುಖರದತ್ತ ಪ್ರಯಾಣಿಸಿದ್ದು,ಆತನ ಸೈನ್ಯವನ್ನು ವಿಮೋಚಕರಾಗಿ ಸಹಜವಾಗಿ ಕಂಡರು. ನಗರ ಮತ್ತು ಹಳ್ಳಿಗಳು ಖಾಲಿಯಾಗಿ ಅವನಿಗೆ ಅಭಿನಂದನೆಯನ್ನು ಸಲ್ಲಿಸಲು ಹಾಗು ಸೈನಿಕರಿಗೆ ಆಹಾರವನ್ನು ಒದಗಿಸಲು ನೇರವಾಗಿ ನಿಂತರು. ಇನ್ನು ಮುಂದೆ ಅಗತ್ಯವಿಲ್ಲವೆಂದು ಪರಿಗಣಿಸಿ , ಬಾಬರ್ ಪರ್ಷಿಯನ್ ಸಹಾಯವನ್ನು ನಿರಾಕರಿಸಿದನು. ೧೦ ವರ್ಷಗಳ ಗೈರು ಹಾಜರಿಯ ನಂತರ, ಅಕ್ಟೋಬರ್ ೧೫೧೧ ರಲ್ಲಿ ಬಾಬರ್ ಸಮರ್ಕಂಡ್ ಗೆ ಗೆಲುವಿನ ಪುನರ್ಪ್ರವೇಶವನ್ನು ಮಾಡಿದನು. ಬಜಾರುಗಳಲ್ಲಿ ಚಿನ್ನದ ನಾಣ್ಯ ತುಂಬಿ ತುಳುಕಾಡುತ್ತಿತ್ತು, ವಿಮೋಚಕನನ್ನು ಸ್ವಾಗತಿಸಲು ಮತ್ತೆ ಹಳ್ಳಿ ಮತ್ತು ನಗರಗಳು ಖಾಲಿಯಾದವು. ಶಿಯಾದಂತೆ ಬಟ್ಟೆ ತೊಟ್ಟ ಬಾಬರ್,ಸುನ್ನಿಸ್ ಗಳ ಸಮೂಹದಲ್ಲಿ ಧೃಡವಾಗಿ ನಿಂತಿದ್ದು, ಅವನ ಗೆಲುವನ್ನು ಅಭಿನಂಧಿಸಲು ಸೇರಿದ್ದರು. ಮೂಲ ನಂಬಿಕೆಯೆಂದರೆ , ಪರ್ಷಿಯನ್ ಉಗ್ರಾಣದಿಂದ ಬರುತ್ತಿದ್ದ ಕೆಲಸವನ್ನು ತಡೆದು,'ಶಿ' ಇಸಂ ಆನ್ನು ಪ್ರದರ್ಶಿಸುವುದೇ ಆಗಿತ್ತು. ನಿಜವಾಗಿಯೂ ಇದು ಒಂದು ಆಟವೇ ಆಗಿತ್ತು, ಈ ಸಮಸ್ಯೆಯನ್ನು ಬಿಡಿಸುವುದು ಬುದ್ಧಿವಂತಿಕೆಯೆಂದು ಬಾಬರ್ ತಿಳಿದಿರಲ್ಲಿಲ್ಲ. ಅವನ ಚಿಕ್ಕಪ್ಪ ಹೈದರ್ ಬರೆದ ಹಾಗೆ , ಉಜ್ಬೇಕ್ಕ್ರಿಗೆ ಬಾಬರ್ ಇನ್ನೂ ಹೆದರಿಕೊಂಡಿದ್ದು, ಪರ್ಷಿಯನ್ ಸಹಾಯವನ್ನು ನಿರಾಕರಿಸಿದನು. ಶಿಯಾದ ಪರ್ಷಿಯನ್ ಶಾ ಜೊತೆಗೆ ,ಬಾಬರ್ ಸಹಕಾರವನ್ನು ನೀಡುವುದನ್ನು ಬಿಡಲ್ಲಿಲ್ಲ. ಇದಕ್ಕೆ ಫಲವಾಗಿ ಜನಪ್ರಿಯತೆಯ ಒಪ್ಪಿಗೆಯಿಲ್ಲದೆ, ನಗರವನ್ನು ೮ ತಿಂಗಳ ನಂತರ ಉಜ್ಬೇಗ್ಸ್ ರು ಪುನರಾಕ್ರಮಿಸಿದರು. ಉತ್ತರ ಭಾರತದ ಆಕ್ರಮಣ ಸಿಂಹಾವಲೋಕನ ಮಾಡಿ ಬರೆದಾಗ , ಬಾಬರ್ ಪ್ರಸ್ತಾಪಿಸಿದಂತೆ ಸಮರ್ಕಂಡ್ ಅನ್ನು ಪಡೆಯುವಲ್ಲಿ ಆದ ಸೋಲು,'ಅಲ್ಲಾ'ನು ಅವನ ಮೇಲೆ ತೋರಿದ ಮಹಾನ್ ಕಾಣಿಕೆಯಂತೆ. ಫೆರ್ಗನವನ್ನು ಮತ್ತೆ ಪಡೆಯುವ ತನ್ನ ಎಲ್ಲಾ ಆಶಯಗಳನ್ನು ಬಾಬರ್ ಬಿಟ್ಟುಕೊಟ್ಟನು , ಆದಾಗ್ಯೂ ಬಾಬರನಿಗೆ ಪಶ್ಚಿಮದಿಂದ ಉಜ್ಬೇಕ್ಸ್ ಧಾಳಿ ನಡೆಸಬಹುದೆಂಬ ಭೀತಿ ಇತ್ತು.ಬಾಬರನ ಗಮನ ಹೆಚ್ಚಾಗಿ ಭಾರತ ಮತ್ತು ಇತರೆ ಪೂರ್ವ ರಾಜ್ಯಗಳತ್ತ ಹರಿಯಿತು , ಅದರಲ್ಲಿಯೂ ದೆಹಲಿ ಸುಲ್ತಾನರಶ್ರೀಮಂತ ರಾಷ್ಟ್ರಗಳ ಮೇಲೆ ಅವನ ಗಮನ ಹೋಯಿತು. ಲೋದಿ ಸಾಮ್ರಾಜ್ಯದ ನಿಜವಾದ ರಾಜ ಮತ್ತು ಯುಕ್ತವಾದ ರಾಜ ಬಾಬರನೇ ಎಂದು ಸಾಧಿಸುವಂತಾಯಿತು. ತೈಮೂರ್ ಸಾಮ್ರಾಜ್ಯದ ನಿಜವಾದ ,ಯುಕ್ತವಾದ 'ಉತ್ತರಾಧಿಕಾರಿ' ತಾನೇ ಎಂದು ಬಾಬರನು ತಿಳಿದಿದ್ದನು. ಪಂಜಾಬಿನ ಸಾಮಂತರ ಪ್ರಚಾರದಲ್ಲಿ ಖಿಜ್ರ್ ಖಾನ್ ನನ್ನು, ತೈಮೂರ್ ಕುಳ್ಳಿರಿಸಿದ್ದು, ನಂತರ ಅವನು ನಾಯಕನಾಗಿ ಅಥವಾ ಸುಲ್ತಾನನಾಗಿ, ದೆಹಲಿ ಸುಲ್ತಾನ ನಾಗಿ, ಲೋದಿ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಆದರೂ ಲೋದಿ ಸಾಮ್ರಾಜ್ಯವನ್ನು , ಇಬ್ರಾಹಿಂ ಲೋದಿ , ಉಚ್ಚಾಟಿಸಿದ್ದು, ಘಿಲ್ ಜೈ ಆಫ್ಘನ್ ಆಗಿದ್ದು, ಬಾಬರ್ ಅದನ್ನು ಟೈಮುರಿದ್ಸ್ ಗೆ ವಾಪಸ್ಸು ಮಾಡುವುದೇ ಆಗಿತ್ತು. ನಿಶ್ಚಯವಾಗಿಯೂ , ತನ್ನ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿ , ಬಲಗೊಳಿಸಿ, ಪಂಜಾಬ್ ನ ಮೇಲೆ ಧಾಳಿ ಮಾಡಲು ಒಂದು ಬೇಡಿಕೆಯನ್ನು ಇಬ್ರಾಹಿಂ ಗೆ ಕಳುಹಿಸಿದನು ; "ನಾನು ಅವನಿಗೆ ಒಂದು ಗೊಶವ್ಕ್ ಅನ್ನು ಕಳುಹಿಸಿದ್ದೇನೆ. ಮತ್ತು ಮೊದಲಿನಿಂದಲೂ ಯಾವ ದೇಶಗಳು ಟರ್ಕಿಯ ಮೇಲೆ ಅವಲಂಬಿತವಾಗಿವೆ ಎಂದು ಕೇಳಿದನು." ಇಲ್ಲಿ 'ದೇಶಗಳು' ಎಂದರೆ 'ದೆಹಲಿ ಸುಲ್ತಾನರ' 'ಭೂಮಿ'ಯಾಗಿದೆ. ಬಾಬರನ ಈ ಅಪೇಕ್ಷೆಯನ್ನು ಇಬ್ರಾಹಿಂ ಆಶ್ಚರ್ಯಕರವಾಗಿ ಉಪೇಕ್ಷಿಸಿದ್ದನ್ನು ನಿರೀಕ್ಷಿಸಿ , ಇನ್ನೊಂದು ಆಕ್ರಮಣಕ್ಕೆ ಯಾವುದೇ ಆತುರ ತೋರದೆ ,ಬಾಬರನು ಹಲವಾರು ಪ್ರಾಥಮಿಕ ಬದಲಾವಣೆಗಳನ್ನು ಮಾಡಿ ಕಂದಾಹಾರನ್ನು ಸ್ವಾಧೀನ ಪಡಿಸಿ - ವ್ಯೂಹ ರಚನೆಯನ್ನು ಮಾಡಿ ಕಾಬುಲ್ ಮೇಲೆ ಪಶ್ಚಿಮದಿಂದ ಧಾಳಿಯನ್ನು ಮಾಡಿ ,ಆ ಸಮಯದಲ್ಲಿ ಆರ್ ಗುಂಡೀಸರಿಂದ ಭಾರತವನ್ನು ಆಕ್ರಮಿಸಿದರು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಕಾಲ ಕಂದಾಹಾರದ ಸ್ವಾಧೀನವಾಗಿ ,೩ ವರ್ಷಗಳ ನಂತರ ಕಂದಾಹಾರ ಮತ್ತು ಅದರ ಕೋಟೆಗಳನ್ನು ( ಬಹಳ ಪ್ರಾಕೃತಿಕ ಗುಣಗಳ ಬೆಂಬಲದ ನೆರವಿನಿಂದ )ವಶಪಡಿಸಿಕೊಂಡು,ಹಾಗು ಸಣ್ಣಪುಟ್ಟ ಹಲ್ಲೆಗಳು ಭಾರತದಲ್ಲಿ ಪ್ರಾರಂಭವಾಗಿದ್ದು, ಈ ರೀತಿಯ ಸರಣಿ ಅನಿಯಮಿತ ಕದನ ಮತ್ತು ಯುದ್ಧಗಳು ಒಂದು ಅವಕಾಶವಾಗಿ ,ದಂಡಯಾತ್ರೆಯು ವಿಸ್ತರಿಸಲ್ಪಟ್ಟಂತೆ ಆಯಿತು. ಪಂಜಾಬ್ ನ ಪ್ರಾಂತ್ಯವನ್ನು ಪ್ರವೇಶಿಸಿದಮೇಲೆ , ಬಾಬರ್ ನ ಪ್ರಧಾನ ಮುಖ್ಯಸ್ಥ , ಲಂಗರ್ ಖಾನ್ ನಯಾಜಿ ನೀಡಿದ ಸಲಹೆಯ ಮೇರೆಗೆ ,ತನ್ನ ಯುಧ್ಧದಲ್ಲಿ ಬಲಶಾಲಿಗಳಾಗಿದ್ದ ಜನ್ಜುಅ ರಜಪೂತರಸಹಾಯ ಪಡೆದುಕೊಳ್ಳಲು ತಿಳಿಸಿದ.ಈ ಬುಡಕಟ್ಟು ಜನಾಂಗದ ವಿರೋಧಿ ನಿಲುವು ದೆಹಲಿಯ ಸಾಮ್ರಾಜ್ಯದ ವಿರುದ್ಧ ಎಂಬುದು ತಿಳಿದ ವಿಷಯವೇ ಆಗಿದೆ. ಅದರ ಮುಖ್ಯಸ್ಥರಾದ , ಮಲಿಕ್ ಹಸತ್ (ಅಸದ್ ) ಮತ್ತು ರಾಜ ಸಂಘರ್ ಖಾನ್ ರನ್ನು ಭೇಟಿ ಮಾಡಿ 'ಜನ್ಜುಅ' ದ ಜನಪ್ರಿಯತೆಯನ್ನು, ಆ ರಾಜ್ಯದ ಸಾಂಪ್ರದಾಯಿಕ ಆಡಳಿತಗಾರರೆಂದು ತಿಳಿಸಿ , ಅವರ ಹಿಂದಿನ ತಲೆಮಾರಿನ ಸಹಾಯವೂ ದೇಶಭಕ್ತ ಅಮೀರ್ ತೈಮೂರ್ ಕಡೆಗೆ 'ಹಿಂದ್' ವಶಪಡಿಸುವಿಕೆಯ ಕಾಲದಲ್ಲಿ ಇತ್ತೆಂದು ಬಾಬರ್ ತಿಳಿಸಿದನು. ಬಾಬರ್ ಅವರ ಶತ್ರುಗಳನ್ನು ಸೋಲಿಸಿ ,ಅವರಿಗೆ ಸಹಾಯ ಮಾಡಿ ೧೫೨೧ ರಲ್ಲಿ ಗಖರ್ಸ್ ಸೋಲಿಸಿದನು ,ಇದರಿಂದಾಗಿ ಇವರ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. ಬಾಬರ್ ದೆಹಲಿ ಯ ಆಕ್ರಮಣದ ಸಂದರ್ಭದಲ್ಲಿ ಅವರನ್ನು' ಜನರಲ್ಸ್ 'ಆಗಿ ನೇಮಿಸಿದನು. ರಾಣ ಸಂಗ ನ ಮತ್ತು ಭಾರತದ ಆಕ್ರಮಣಕ್ಕೆ ಇದರಿಂದ ನೆರವಾಯಿತು. ಬಾಬರ್ ನ ಆತ್ಮ ಕಥೆಯಲ್ಲಿ ಕೆಲವು ಭಾಗದ ,ಅಂದರೆ ೧೫೦೮ ಮತ್ತು ೧೫೧೯ ರ ನಡುವಿನ ಅವಧಿಯ ಭಾಗಗಳು ಕಳೆದುಹೋಗಿವೆ. ಈ ಅವಧಿಯಲ್ಲಿ ಶಾ ಇಸ್ಮಾಯಿಲ್ - Iನ ಅಶ್ವ ಪದಾತಿ ದಳವು ಚಲ್ಡಿರನ್ ಹೋರಾಟ /ರಣರಂಗದಲ್ಲಿ , ಒಟ್ಟೋಮನ್ ಸಾಮ್ರಾಜ್ಯ ಹೊಸ ಯುದ್ಧಾಸ್ತ್ರ ಮದ್ದುಗುಂಡಿನಕೋವಿ ಪಡೆಯ ಮುಂದೆ ಭಾರಿ ಸೋಲನ್ನೊಪ್ಪಿತು. ಶಾ ಇಸ್ಮಾಯಿಲ್ ಮತ್ತು ಬಾಬರ್ ಇಬ್ಬರೂ ಸಹ ಈ ಹೊಸ ಯುದ್ಧ ತಂತ್ರಜ್ಞಾನವನ್ನು ತಮಗೇ ಪಡೆಯುವಲ್ಲಿ, ಬೇಗನೆ ಕಾರ್ಯ ಪ್ರವೃತ್ತರಾದರು. ಈ ಕಾಲಪಟ್ಟಿಯ ಯಾವುದೋ ಒಂದು ಅವಧಿಯಲ್ಲಿ ಬಾಬರ್ ಮದ್ದುಗುಂಡು ತುಂಬಿದ ಕೋವಿಯಯ ಪಡೆಯನ್ನು ತನ್ನ ಸೈನ್ಯದಲ್ಲಿ ಸೇರಿಸಿದ್ದಿರಬಹುದು , ಮತ್ತು ಒಟ್ಟೋಮನ್ , ಉಸ್ತಾದ್ ಅಲಿಯವರನ್ನು, ಅವನ ಪಡೆಯ ತರಭೇತಿಗಾಗಿ ನೇಮಿಸಿರಬಹುದು ,ನಂತರ ಅವರನ್ನು ಅವರ ಉಪಯೋಗಕ್ಕಾಗಿ ಮ್ಯಾಚ್ ಲಾಕ್ ಮೆನ್ , ಎಂದು ಕರೆಯಲಾಗಿದೆ.. ಬಾಬರ್ ನ ಆತ್ಮ ಕಥೆಯಲ್ಲಿ ,ಅವನ ವಿರುದ್ಧದ ಪಡೆಯಿಂದ ಆದ ಸೋಲಿನ ಗೇಲಿಯ ಅನಾಹುತದಿಂದ ಆದ ಲ್ಕಾಚಾರವನ್ನು ಸಹ ದಾಖಲಿಸಿದ್ದು ,ಈವರೆವಿಗೂ ಕೋವಿಯನ್ನು ನೋಡದೆ ಇದ್ದದ್ದು , ಕೋವಿಯಿಂದ ಹೊರಬರುವ ಶಬ್ದ, ಬಾಣಗಳ ಆರ್ಭಟ ಮುಂತಾದವು ಬೆಂಕಿ ಉಗುಳಿದಾಗ ಬರುವ ಶಬ್ದ ಇವೆಲ್ಲವೂ ದಾಖಲಾದವು. ಸಣ್ಣ ಸೇನಾಪಡೆ ಇದ್ದರೂ,ಕೋವಿಯ ಪ್ರವೇಶದಿಂದ ಶತ್ರುಗಳ ಪ್ರಾಂತ್ಯದಲ್ಲಿ ಹೆಚ್ಚಿನ ಲಾಭವೇ ಆಯಿತು. ಸಣ್ಣ ಗುಂಪಿನ ಅನಿಯಮಿತ ಕದನ ಪಡೆಯನ್ನು ಕೇವಲ ಪರೀಕ್ಷೆಗೆಂದು ಶತ್ರುಗಳ ಪಾಳೆಯಕ್ಕೆ ಉಪಾಯವಾಗಿ ಕಳುಹಿಸಲಾಗಿ ,ಅದು ಭಾರತದೊಳಕ್ಕೆ ನುಸುಳಲು ದಾರಿಯಾಯಿತು. ಆದರೂ,ಬಾಬರನು ಎರಡು ವಿರೋಧಗಳನ್ನು ಹತ್ತಿಕ್ಕಬೇಕಾಯಿತು;ಒಂದು ಕಂದಾಹಾರ ಮತ್ತೊಂದು ಕಾಬುಲ್. ಗೆಲುವಿನ ನಂತರ ,ಸ್ಥಳೀಯ ಜನರನ್ನು ಗಣನೆಗೆ ತೆಗೆದುಕೊಂಡು, ಸ್ಥಳೀಯ ಸಂಪ್ರದಾಯಗಳಿಗೆ ಬೆಂಬಲ ನೀಡಿ, ವಿಧವೆಯರಿಗೆ,ಅನಾಥರಿಗೆ ನೆರಾವಾಗಿ ನಿಂತು ಸಮಾಧಾನಗೊಳಿಸುವಲ್ಲಿ ಯಶಸ್ವಿಯಾಗಿದ್ದನು. ಇಬ್ರಾಹಿಂ ಲೋದಿಯೊಂದಿಗೆ ಸಮರ ಆದರೂ , ಟೈಮುರಿದ್ಸ್ ಒಂದಾದರೂ,ಲೋದಿಯ ಸೈನ್ಯ ಒಂದಾಗಲೇ ಇಲ್ಲ. ಇಬ್ರಾಹಿಂಬಳಿ ಇದ್ದ ಕುಲೀನರು ,ಅದರಲ್ಲಿಯೂ ಅವನ ಆಫ್ಘನ್ ಕುಲೀನರು ಬಾಬರ್ ನ ಆಗಮನವನ್ನು ಸ್ವಾಗತಿಸಲು ಇಷ್ಟಪಟ್ಟಿದ್ದು ಇಬ್ರಾಹಿಂಗೆ ಬಹಳ ಜಿಗುಪ್ಸೆಯ ವಿಷಯವಾಯಿತು.. ಬಾಬರನು ೧೨,೦೦೦-ಸೈನ್ಯ ಪದಾತಿ ದಳದೊಂದಿಗೆ , ಭಾರತದೊಳಗೆ ಕಾಲಿಟ್ಟನು. ಮುಂದೆ ಮುಂದೆ ಹೋದಂತೆ ಈ ಸೈನ್ಯ ಪಡೆ ಜಾಸ್ತಿಯಾಗುತ್ತಾ ಹೋಗಿ ,ಸ್ಥಳೀಯ ಜನಸಂಖ್ಯೆಯ ಜನರನ್ನು ಬಾಬರ್ ಸೈನ್ಯಕ್ಕೆ ಸೇರಿಸಲಾರಂಭಿಸಿದನು. ಇಬ್ಬರ ನಡುವಿನ ಮೊದಲ ಮಹಾ ಕದನ ನಡೆದಿದ್ದು ಫೆಬ್ರವರಿ ೧೫೨೬ ರಲ್ಲಿ. ಬಾಬರ್ ನ ಮಗ , ಹುಮಾಯುನ್ (ಆಗ ೧೭ ವರ್ಷ ), ಟೈಮುರಿಡ್ ನ ಸೇನಾ ಪಡೆಯನ್ನು ಮೊದಲನೇ ಇಬ್ರಾಹಿಂ ನ ಸೈನ್ಯದ ಮುಂದೆ ತಂದನು. ಹುಮಾಯುನ್ ನ ಗೆಲುವು ಕಷ್ಟದಾಯಕವಾಗಿದ್ದು ,ಹಿಂದಿನ ಸಣ್ಣ ಪುಟ್ಟ ಕದನಕ್ಕಿಂತ ಕಷ್ಟದಾಯಕವಾದುದಾಗಿತ್ತು.ಆದರೂ ಗೆಲುವು ನಿಶ್ಚಿತವಾಗಿತ್ತು. ಒಂದು ನೂರು ಯುದ್ಧ ಖೈದಿಗಳನ್ನು /ಸೈನಿಕರನ್ನು ಎಂಟು ಯುದ್ಧದ ಆನೆಗಳೊಂದಿಗೆ ಸೆರೆಹಿಡಿಯಲಾಯಿತು. ಆದರೂ ಈ ಹಿಂದೆ ನಡೆದ ಯುದ್ಧದಂತೆ ಈ ಬಂಧಿತರನ್ನು ಬಿಡುಗಡೆ ಮಾಡದೆ; ಹುಮಾಯುನ್ ನ ಆದೇಶದಂತೆ ಅವರನ್ನು ಗುಂಡಿಟ್ಟು ಕೊಲ್ಲಲಾಯಿತು. ಬಾಬರ್ ತನ್ನ ಆತ್ಮ ಕಥೆಯಲ್ಲಿ ಹೇಳಿಕೊಂಡಂತೆ, "ಉಸ್ತಾದ್ ಅಲಿ -ಕ್ಯುಲಿ ಮತ್ತು ಕೋವಿ ಹಿಡಿದ ಮಂದಿಗೆ ,ಎಲ್ಲಾ ಬಂಧಿಗಳನ್ನು ಕೊಲ್ಲಲ್ಲು ಆದೇಶಿಸಲಾಯಿತು.ಇದು ಹುಮಾಯುನ್ ನ ಮೊದಲ ನಡೆ ; ಯುದ್ಧದಲ್ಲಿ ಮೊದಲ ಅನುಭವ ,ಇದೊಂದು "ಅದ್ಭುತ ಅಪಶಕುನ"! ಗುಂಡಿಟ್ಟು ಕೊಲ್ಲುವ ನಿಟ್ಟಿನಲ್ಲಿಬಹುಶಃ ಇದು ಮೊದಲನೇ ಉದಾಹರಣೆ .https://www.quora.com/How-did-Babur-defeat-Sultan-Ibrahim-Lodhi ೧೦೦,೦೦೦ ಸೈನಿಕರು ಮತ್ತು ೧೦೦ ಆನೆ ಪಡೆಗಳೊಡನೆ;ಇಬ್ರಾಹಿಂ ಲೋದಿ ಸೈನ್ಯ ಪಡೆ ಮುಂದುವರಿಯಿತು. ಬಾಬರ್ ನ ಸೈನ್ಯ ಬೆಳೆದಿದ್ದರೂ ,ಅವನ ವಿರೋಧಿಯ ಸೈನ್ಯ ಪಡೆಯ ಅರ್ಧಕ್ಕಿಂತ ಕಡಿಮೆ ೨೫,೦೦೦ ಸೈನ್ಯ ಪಡೆ ಮಾತ್ರ ಇತ್ತು. ಇದುವೇ ಮೊದಲನೇ ಸಂಘರ್ಷವಾಗಿತ್ತು , ಮೊದಲನೇ ಪಾಣಿಪಟ್ ಕದನ ನಡೆದಿದ್ದು ೨೧ ಏಪ್ರಿಲ್ ೧೫೨೬. ಇಬ್ರಾಹಿಂ ಲೋದಿಯನ್ನು ಕೊಲ್ಲಲಾಯಿತು;ಅವನ ಸೈನ್ಯವನ್ನು ಬುಡಮೇಲು ಮಾಡಲಾಯಿತು;ಬಾಬರನು ಕೂಡಲೇ ದೆಹಲಿ ಮತ್ತು ಆಗ್ರಾಗಳನ್ನೂ ತನ್ನ ವಶಕ್ಕೆ ತೆಗೆದುಕೊಂಡನು. ಅದೇ ದಿನ ಬಾಬರ್ ಹುಮಾಯುನ್ ಗೆ ಆದೇಶ ನೀಡಿ , ಆಗ್ರಾವನ್ನು ವಶ ಪಡಿಸಿಕೊಂಡು , (ಇಬ್ರಾಹಿಂ ನ ಹಿಂದಿನ ರಾಜಧಾನಿ )ಅಲ್ಲಿಯ ರಾಷ್ಟ್ರೀಯ ಆಸ್ತಿ ಮತ್ತು ಸಂಪತ್ತನ್ನು ಲೂಟಿಯಾಗುವುದನ್ನು ತಡೆಯಲು ಹೇಳಿದನು. ಅಲ್ಲಿ ಗ್ವಾಲಿಯರ್ ರಾಜನ ಕುಟುಂಬವನ್ನು ಹುಮಾಯುನ್ ಕಂಡನು. — ಗ್ವಾಲಿಯರ್ ರಾಜನು ಪಾಣಿಪಟ್ ಯುದ್ಧದಲ್ಲಿ ಈಗಾಗಲೇ ಮಡಿದಿದ್ದನು. — ಧಾಳಿಕಾರರಿಂದ ರಕ್ಷಣೆಯನ್ನು ಪಡೆಯಲು ,ಧಾಳಿಕಾರರು ಬರುವ ಮುಂಚೆಯೇ 'ಮೊಂಗೊಲರ' ಭಯಂಕರ ಹಾಗು ಹೆದರಿಕೆಯನ್ನು ಹುಟ್ಟಿಸುವ ಪ್ರವೃತ್ತಿಯನ್ನು ಅರಿತು ಆಶ್ರಯ ಪಡೆದಿದ್ದರು. ಅವರಿಗೆ ರಕ್ಷಣೆ ದೊರೆಯುವ ಆಶ್ವಾಸನೆಯ ಮೇಲೆ , ಹುಮಾಯುನ್ ನಿಗೆ ,ತನ್ನ ಕುಟುಂಬದ ಅತ್ಯಮೂಲ್ಯ ಒಡವೆ , ಬಹಳ ದೊಡ್ಡ ವಜ್ರ,ಕೆಲವರು ನಂಬುವ ಹಾಗೆ ಕೊಹ್ -ಇ -ನೂರ್ ಅಥವಾ "ಬೆಟ್ಟದ ಬೆಳಕು 'ನ್ನು ನೀಡಿದರು. ತಮ್ಮ ರಾಜ್ಯಭಾರವನ್ನು ಉಳಿಸಿಕೊಳ್ಳಲು ಈ ಕಾರ್ಯ ಮಾಡಿದರು ಎಂದು ನಂಬಲಾಗಿದೆ. ಈ ಕಾಣಿಕೆಯ ಕಾರಣದಿಂದಲೋ ಅಥವಾ ಅಲ್ಲವೋ, ಅವರ ಕುಟುಂಬ ಗ್ವಾಲಿಯರ್ ನಲ್ಲಿ ,ತಮ್ಮ ಆಳ್ವಿಕೆಯನ್ನು ಹೊಸ ಆಡಳಿತಾಧಿಕಾರಿ ತೈಮುರಿದ್ಸ್ ಆಶ್ರಯದಲ್ಲಿ ಮುಂದುವರಿಸಿತು. ಮೂರು ದಿನಗಳ ಯುದ್ಧದ ನಂತರ ಬಾಬರ್ , ದೆಹಲಿಯನ್ನು ತಲುಪಿದನು. ಜಮುನಾ ನದಿ ಯ ದಡದ ಮೇಲೆ ತನ್ನ ಆಗಮನದ ವಿಜಯೋತ್ಸವದ ಹಬ್ಬವನ್ನು ಆಚರಿಸಿದನು.ಹಾಗೂ ಶುಕ್ರವಾರದ (ಜಾಮ್ಅಹ ) ವರೆವಿಗೂ ಅಲ್ಲೇ ಉಳಿದನು, ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ ನಡೆದು,(ಧರ್ಮೋಪದೇಶ ) ಖುತ್ಬ ನೀಡಿ (ಸೇರ್ಮೊನ್ ),ತನ್ನ ಹೆಸರಿನಲ್ಲಿ ಜುಮ್ಮಾ ಮಸೀದಿ ಯಲ್ಲಿ ಪ್ರಾರ್ಥಿಸಿ ,ಸಾರ್ವಭೌಮತ್ವವನ್ನು ಸ್ಥಾಪಿಸಿದ ಹೆಗ್ಗುರುತಾಗಿದೆ. ನಂತರ ಹುಮಾಯುನ್ ನನ್ನು ಸೇರಲು ಆಗ್ರಾಕ್ಕೆ ಹೊರಟನು. ಬಾಬರ್ ನ ಆಗಮನವಾಗುತ್ತಿದ್ದಂತೆ,ಬೆಲೆ ಬಾಳುವ ವಜ್ರಗಳನ್ನು ಕಾಣಿಕೆಯಾಗಿ ನೀಡಲಾಯಿತು,ನಂತರ ಬಾಬರನು ಹೇಳಿದಂತೆ,"ನಾನು ಅದನ್ನು ವಾಪಸ್ಸು ಅವನಿಗೆ ಕೊಟ್ಟುಬಿಟ್ಟೆ." ತಿಳಿದವರು ಹೇಳಿದಂತೆ ಆ ವಜ್ರದ ಬೆಲೆಯೇ " ಇಡೀ ಪ್ರಪಂಚದ ಎಲ್ಲಾ ಜನರಿಗೆ ಎರಡೂವರೆ ದಿನ ಊಟಕ್ಕೆ ಹಾಕಬಹುದಾದಷ್ಟು ಬೆಲೆಯುಳ್ಳದ್ದಾಗಿದೆ "ಎಂಬುದು. ರಾಜಪೂತರೊಡನೆ ಸಮರ ದೆಹಲಿ ಮತ್ತು ಆಗ್ರಾವನ್ನು ವಶಪಡಿಸಿಕೊಂದರೂ , ಬಾಬರ್ ತನ್ನ ಆತ್ಮ ಕಥೆಯಲ್ಲಿ ಹೇಳಿಕೊಂಡಂತೆ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಯಿತು.ಇದಕ್ಕೆ ಕಾರಣನಾದವನು ಮೇವಾರ್ ದ ರಜಪೂತ ರಾಜ ರಣ ಸಂಗ . ಬಾಬರ್ ನ ಆಗಮನಕ್ಕೆ ಮೊದಲು; ರಜಪೂತ ದೊರೆಗಳು ,ಸುಲ್ತಾನರ ಕೆಲವು ಪ್ರಾಂತ್ಯಗಳನ್ನು ಯಶಸ್ವಿಯಾಗಿ ಗೆದ್ದಿದ್ದರು. ದಕ್ಷಿಣ -ಪಶ್ಚಿಮ ಪ್ರಾಂತ್ಯದ ಬಾಬರ್ ನ ಹೊಸ ಪ್ರದೇಶಗಳನ್ನು ನೇರವಾಗಿ ಆಳಿದ್ದರು.ಸಾಮಾನ್ಯವಾಗಿ ಹೇಳುವಂತೆ , ರಾಜಪುತಾನಭದ್ರಪಡಿಸಿದ ಚಕ್ರಾಧಿಪತ್ಯದ ಉತ್ತರ ಭಾರತದ ಕೆಲವು ಭಾಗಗಳು . ಇದು ಒಂದುಗೂಡಿದ ರಾಜ್ಯಭಾರವಾಗಿರಲಿಲ್ಲ , ಆದರೆ ರಣಸಂಗನ ಹಿರಿಯ ರಾಜದೂತ ವಂಶದ ಕೂಟಗಳಲ್ಲಿ ಅವನ ಆದರ್ಶಾನುಸಾರ ,ಅನೌಪಚಾರಿಕವಾದ ಚಕ್ರಾಧಿಪತ್ಯದ ಅಧೀನದಲ್ಲಿದ್ದವು. ಬಾಬರ್ ಲೋದಿಯೊಂದಿಗೆ ನಡೆಸಿದ ಯುದ್ಧದಲ್ಲಿ ಆದ ನಷ್ಟ, ಸಾವು-ನೋವುಗಳು ಗೊತ್ತಾಗಿ,ಬಹುಶಃ ದೆಹಲಿಯನ್ನು ಆಕ್ರಮಿಸಬಹುದು ಹಾಗು ಪ್ರಾಯಶಃ ಹಿಂದುಸ್ತಾನ್ ದ ಮೇಲೆ, ಎರಗಬಹುದೆಂದು ರಜಪೂತರು ತಿಳಿದಿದ್ದರು. ೧೧೯೨ ರಲ್ಲಿ ಸುಲ್ತಾನ್ ಷಾ -ಅಲ್ ದಿನ ಮಹಮ್ಮದ್ ಘೋರ್ ದೇಶದವನು , ರಜಪೂತ್ ಚೌಹಾನ್ ರಾಜ ಪ್ರಿಥ್ವಿರಾಜ್ III ರನ್ನು ಯುದ್ಧದಲ್ಲಿ ಸೋಲಿಸಿದ ೩೫೦ ವರ್ಷಗಳ ನಂತರ ,ಮತ್ತೊಮ್ಮೆ ಎಲ್ಲವನ್ನು ಹಿಂದೂ ರಜಪೂತರ ಕೈಗಳಿಗೆ ಸೇರಿಸುವ ಮೊದಲ ಪ್ರಯತ್ನದಲ್ಲಿದ್ದರು. ಹಾಗೆಯೇ ,ಬಾಬರ್ ನ ಸೈನ್ಯದ ಪಡೆಯ ವಿಭಾಗಗಳಲ್ಲಿ ಭೇದಗಳು ಇದ್ದ ಹಾಗೆ ರಜ್ಪುತರಿಗೆ ಮೊದಲೇ ತಿಳಿದಿತ್ತು. ಭಾರತದಲ್ಲಿ ಬೇಸಿಗೆಯ ಬಿರು ಬಿಸಿಲು ಕಾಲಿಟ್ಟಿತ್ತು. ಹಲವು ಪದಾತಿಗಳ ಸೈನ್ಯ ಸೆಂಟ್ರಲ್ ಏಷಿಯಾ ದ ತಣ್ಣನೆಯ ವಾತಾವರಣಕ್ಕೆ ಹಿತಿರುಗಳು ಪ್ರಯತ್ನಿಸಿದ್ದವು. ರಜಪೂತರ ಶೌರ್ಯ ಸಾಹಸ ದ ಹೆಸರಿಗೆ ಹೆದರಿ ಸೈನ್ಯ ಹಿಂದೆ ಬಿದ್ದಿತ್ತು.ಅಷ್ಟೇ ಅಲ್ಲದೆ ರಜಪೂತ ಸೈನಿಕರ ಹೆಚ್ಚಿನ ಸಂಖ್ಯೆ, ಬಾಬರನ ಸೈನ್ಯವನ್ನು ಹಿಮ್ಮೆಟ್ಟಿಸಿತ್ತು. ಬಾಬರ್ ನ ಸ್ವಂತ ಲೆಕ್ಕಾಚಾರದ ಪ್ರಕಾರ ರಜಪೂತರ ಶಕ್ತಿಶಾಲಿ ಸೈನ್ಯ ಪಡೆ ,ಪಾಣಿಪಟ್ ನಲ್ಲಿ ಸೋಲಿಸಿದ ಲೋದಿ ಪಡೆಗಿಂತ ಜಾಸ್ತಿಯೇ ಇತ್ತು. . ಬಾಬರನು ಮನಸ್ಸು ಮಾಡಿ ಇಲ್ಲಿ ಯುದ್ಧವನ್ನು ವಿಸ್ತರಿಸಲು ನಿರ್ಧರಿಸಿ,ಭಾರತದೊಳಕ್ಕೆ ನುಗ್ಗಲು ತೀರ್ಮಾನಿಸಿ ,ಈವರೆವಿಗೂ ತೈಮೂರರು ಮಾಡದ ಸಾಧನೆಯನ್ನು ಮಾಡಲಿಚ್ಚಿಸಿದನು. ಅವನಿಗೆ ತನ್ನ ಸೈನ್ಯ ಪಡೆ ರಜಪೂತರನ್ನು ಸೋಲಿಸುವುದು ಬೇಕಾಗಿತ್ತು. ಮುಂದೆ ನಡೆಯುವ ಯುದ್ಧದಲ್ಲಿ ಭಾಗಿಯಾಗಲು ,ಸೈನಿಕರಿಗೆ ಇಷ್ಟವಿಲ್ಲದಿದ್ದರೂ, ಬಾಬರ್ ತಾನು ರಜಪೂತರನ್ನು ಗೆದ್ದು,ಹಿಂದುಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದಾಗಿ ನಂಬಿದನು. ಮೊಟ್ಟ ಮೊದಲ ಬಾರಿಗೆ ಮುಸ್ಲಿಮರಲ್ಲದವರೊಡನೆ ಯುದ್ಧವನ್ನು ಮಾಡುತ್ತಿರುವುದಾಗಿ,ಹೆಚ್ಚಿನ ಸುದ್ದಿಯನ್ನು ಹರಡಿದನು. ಕಾಫಿರ್ ಜೊತೆಯಲ್ಲಿ ಯುದ್ಧ ಮಾಡುತ್ತಿದ್ದು,ಭಾಷೆಯನ್ನು ತೆಗೆದುಕೊಂಡಂತೆ ,ತಾನು ಇನ್ನು ಮುಂದೆ 'ಕುಡಿಯುವುದಿಲ್ಲವೆಂದು'(ಅವನ ಕಡೆಯವರಿಂದ ಕೆಲವರಿಂದ ಪ್ರಮಾಣ ಮಾಡಿಸಿ)ಜೀವನ ಪರ್ಯಂತ ಕುಡಿಯದೆ ದೈವ ಶಕ್ತಿಯನ್ನು ಪಡೆಯುವುದಾಗಿ ಹೇಳಿ ,ರಣ ಸಂಗ ನ ಮೇಲೆ ಯುದ್ಧ ಸಾರಿದನು. ಎರಡೂ ಕಡೆಯ ಸೈನ್ಯ ಪಡೆಗಳು ಪಶ್ಚಿಮ ಆಗ್ರಾದ 'ಖನ್ವ'ಬಳಿ ೪೦ ನೇ ಮೈಲಿಯಲ್ಲಿ ಯುದ್ಧ ನಡೆಸಿದರು. ಒಂದು ಸುಳ್ಳು ಕಥೆಯ ಪ್ರಕಾರ ಕಪ್ಪೆಯ ಪೂರ್ವ ವೃತ್ತಾಂತ ಸಮಾಜದ ವರದಿ ಹಾಗು ರಾಜಸ್ಥಾನ್ ನ ಪೂರ್ವ ವೃತ್ತಾಂತ ದಂತೆ , ಬಾಬರ್ ೧,೫೦೦ ಆಯ್ಕೆ ಮಾಡಲ್ಪಟ್ಟ ಅಶ್ವದಳವನ್ನು ಮುಂಚಿತವಾಗಿಯೇ ರಣಸಂಗನ ಮೇಲೆ ಎರಗಲು ಕಳುಹಿಸಿದ್ದು, 'ಸಂಗ'ನ ರಜಪೂತರು ಅವರನ್ನು ಭಾರಿಯಾಗಿ ಸೋಲಿಸಿದ್ದು, ಬಾಬರ್ ತದನಂತರ ಶಾಂತಿಯ ಮಾತುಕತೆ ನಡೆಸಲು ಮುಂದಾದನು. 'ಸಂಗ'ನು ತನ್ನ ಪ್ರಧಾನಿ ಸಿಲ್ಹಡಿ (ಶಿಲಾದಿತ್ಯ )ಯನ್ನು ಸಂಧಾನಕ್ಕೆ ಕಳುಹಿಸಿದನು. ಬಾಬರನು ಅವನೊಂದಿಗೆ ಮಾತನಾಡಿ ಶಿಲ್ಹಡಿಯ ಮನಸ್ಸನ್ನು ಗೆದ್ದು,ತಾನು ಅವನಿಗೆ ಒಂದು ಪ್ರಾಂತ್ಯದ ರಾಜನನ್ನಾಗಿ ಮಾಡುವ ಭರವಸೆ ನೀಡಿದನು, ಶಿಲ್ಹಡಿ ವಾಪಸ್ಸು ಬಂದು, ಬಾಬರನಿಗೆ ಶಾಂತಿ ಬೇಡವೆಂದು ,ಯುದ್ಧವನ್ನು ಮುಂದುವರೆಸುವುದಾಗಿ ತಿಳಿಸಿದನೆಂದು ಹೇಳಿದೆ. ಏಕೀಕರಣ/ಬಲಗೊಳಿಸುವಿಕೆ ರಾಜಪುತಾನ ಒಂದನ್ನು ಬಿಟ್ಟು ಬಾಬರನ ಮೊಮ್ಮಗ ಅಕ್ಬರ್ ನ ಕಾಲದಲ್ಲಿ ಇವನನ್ನು ಶಾಂತಗೊಳಿಸಲು ಮಾತ್ರ ಸಾಧ್ಯವಾಗಿದ್ದು, ಬಾಬರ್ ಈಗ ಮಾತ್ರ ಯಾರದೇ ಪ್ರತಿಭಟನೆ ಇಲ್ಲದ ಹಿಂದುಸ್ತಾನದ ರಾಜನಾದನು. (ಅಂದರೆ ಆಗಿನ ಕಾಲದ ವಾಯುವ್ಯ ಭಾರತ (ಉತ್ತರ-ಪಶ್ಚಿಮ ದಿಕ್ಕಿನ ಭಾಗ) ಮತ್ತು ಗಂಗಾನದಿಯ ಬಯಲು ಪ್ರದೇಶ );ಮತ್ತೊಮ್ಮೆ ತನ್ನ ರಾಜ್ಯವನ್ನು ವಿಸ್ತರಿಸಲು ಉದ್ಯುಕ್ತನಾದನು. ಅವನ ಸೈನ್ಯದಲ್ಲಿನ ಮುಖ್ಯಸ್ಥರಿಗೆ ಅಥವಾ ಉಮರಹ್ ನೇಮಕ ಮಾಡಿ ,ಅವರದೇ ಒಂದು ಸೈನ್ಯ ಪಡೆಯ ರಚನೆಗೆ ಅವಕಾಶ ಮಾಡಿಕೊಟ್ಟನು. ಬಾಬರ್ ನ ರಾಜ್ಯ ವಿಸ್ತರಿಸುವ ಆಕಾಂಕ್ಷೆಯನ್ನು ಅರಿತು,ಹಲವರಿಗೆ ಭೂಮಿಯ ಜಹಗೀರಿ ಯನ್ನು ನೀಡಲಾಗಿ , ಬಾಬರ್ ನ ಹಲವಾರು ಸೈನ್ಯದಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರೆತಂತಾಗಿದೇ. ಈ ಮಧ್ಯೆ ,ಅವನ ಇಬ್ಬರು ಸ್ವಂತ ಮಕ್ಕಳಿಗೆ ತನ್ನ ಕೇಂದ್ರದಿಂದ ದೂಒರದಲ್ಲಿ ಹೊಸ ಕೇಂದ್ರಗಳನ್ನು ಆಡಳಿತ ನಡೆಸಲು ಅವಕಾಶ ನೀಡಿ; ಕಮ್ರಾನ್ ಗೆ ಕಂದಾಹಾರದ ಆಡಳಿತವನ್ನು , ಅಸ್ಕರಿಗೆ ಬೆಂಗಾಲವನ್ನು ಮತ್ತು ಹುಮಾಯುನ್ ಗೆ ಬದಖ್ ಶಾನ್ ಅನ್ನು ನೀಡಿದ್ದು,ಬಾಬರನಿಗೆ ಬಾಬರನ ರಾಜ್ಯ ವಿಸ್ತರಣೆಯ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಪ್ರತ್ಯೇಕ ಪ್ರಾಂತ್ಯಗಳ ವ್ಯವಸ್ಥೆಯಾಯಿತು. ಉಸ್ತಾದ್ ಅಲಿ ಯ ಸಹಾಯದಿಂದ ಬಾಬರ್ ಹೊಸ ಹೊಸ ತಂತ್ರಜ್ಞಾನಗಳನ್ನುಬೆಳೆಸುತ್ತಾ,ತನ್ನ ಸೈನ್ಯದಲ್ಲಿ ಅಳವಡಿಸಿಕೊಳ್ಳುತ್ತಾ ಹೋದನು. ಕೋವಿಗಳ ಜೊತೆಗೆ , ಬಾಬರ್ ಮತ್ತು ಅಲಿಯು ಹೊಸ ರೀತಿಯ ಕೋವಿ ಶಸ್ತ್ರಾಸ್ತ್ರಗಳನ್ನು , ಅಂದರೆ ಫಿರಂಗಿಗಳನ್ನು , ಬಾಬರ್ ನೆನೆಸಿಕೊಂಡಂತೆ ,ಒಂದು ಮೈಲಿ ದೂರದಲ್ಲಿರುವ ಬಂಡೆಗಳನ್ನು ಒಡೆದುಹಾಕುವ ರೀತಿಯ ಫಿರಂಗಿಗಳ ನಿರ್ಮಾಣ ,(ದಾಖಲೆಯಲ್ಲಿ ತಿಳಿಸಿದಂತೆ ,ಪ್ರಥಮ ಪರೀಕ್ಷೆಯ ಸಂದರ್ಭದಲ್ಲಿ ೮ ಜನ ಮುಗ್ಧ ಸೈನಿಕರು ಜೀವ ತೆರಬೇಕಾಯಿತು). ಜೊತೆ ಜೊತೆಗೆ ,ಶೆಲ್ ಗಳನ್ನುತಯಾರಿಸಲಾಗಿ ಒತ್ತಡಕ್ಕೆ ಸ್ಪೋಟಗೊಳ್ಳುವಂತೆ ತಯಾರಿ ಮಾಡಿದರು. ದುಂದುಗಾರಿಕೆಯ ಜೀವನ ಶೈಲಿ ಹಾಗು ಅಂತಿಮ ಮಹಾಯುದ್ಧ. ೧೫೨೮ ರ ಕೊನೆಯಲ್ಲಿ ಬಾಬರ್ ಮಹಾ ಹಬ್ಬವನ್ನು ಅಥವಾ ತಮಾಶ ವನ್ನು ಆಚರಿಸಿದನು. ಎಲ್ಲಾ ಶ್ರೀಮಂತರು ಬೇರೆ ಬೇರೆ ಕಡೆಗಳಿಂದ ಅಲ್ಲಿಗೆ ಬಂದರು.ಅವರ ಜೊತೆಗೆ ತೈಮೂರ್‌ಅಥವಾ ಗೆನ್ಗೀಸ್ ಖಾನ್ ಕಡೆಯ ಶ್ರೀಮಂತರು ಎನಿಸಿಕೊಂಡವರೂ ಸಹ ಬಂದಿಳಿದರು. ಅವನ ಕಡೆಯ ತೈಮೂರ್ ಮತ್ತು ಗೆನ್ಗೀಸ್ ಖಾನರ , ಕ್ಹನಲ್ ಮತ್ತು ಚಿಂಗಿಸ್ಸಿದ್ ಕಡೆಯವರಿಗಾಗಿ ಈ ಸಂಭ್ರಮ ನಡೆಯಿತು.ಇವರೆಲ್ಲರೂ ಬಾಬರ್ ನಿಂದ ದೂರದಲ್ಲಿ ಅರೆ ವೃತ್ತಾಕಾರದಲ್ಲಿ ಕುಳಿತು, (ಸ್ವಾಭಾವಿಕವಾಗಿಯೇ ಬಾಬರನು ಮಧ್ಯದಲ್ಲಿದ್ದನು.) ೧೦೦ ಮೀಟರ್ ದೂರದಲ್ಲಿದ್ದನು. ಈ ದೊಡ್ಡ ಔತಣ ಕೂಟದಲ್ಲಿ ಕಾಣಿಕೆಗಳನ್ನು ಕೊಡುವ ತೆಗೆದುಕೊಳ್ಳುವ ಪ್ರಾಣಿಗಳ ಯುದ್ಧ,ಕುಸ್ತಿ,ನೃತ್ಯ ಮತ್ತು ದೊಂಬರಾಟಗಳಿದ್ದವು. ಬಂದಂತಹ ಅತಿಥಿಗಳು, ಬಾಬರ್ ನಿಗೆ ಚಿನ್ನ ಮತ್ತು ಬೆಳ್ಳಿಯ ಕಾಣಿಕೆಗಳನ್ನು ನೀಡಿದರು, ಅದಕ್ಕೆ ಪ್ರತಿಯಾಗಿ ಅವರಿಗೆ ಕಟ್ಟಿ-ಬೆಲ್ಟು ಮತ್ತು ಗೌರವಯುತವಾಗಿ ಮೇಲಂಗಿಯನ್ನು ಉಡುಗೊರೆಯಾಗಿ ನೀಡಲಾಯಿತು.(ಖಲತ್ಸ್ ). ಬಂದಂತಹ ಅತಿಥಿಗಳಲ್ಲಿ ಉಜ್ಬೇಗ್ಸ್ ( ಕೆಂದರ್ ಏಶಿಯಾದಿಂದ ತೈಮುರಿದ್ಸ್ ರನ್ನು ಶಾಯ್ಬನಿ ಖಾನ್ ನ ನೆರವಿನಿಂದ ಹೊರಗಟ್ಟಿ ,ಈಗ ಸಮರ್ಕಂಡ್‌ಅನ್ನು ಆಕ್ರಮಿಸಿರುವ) ಮತ್ತು ಟ್ರನ್ಸೊಕ್ಷಿಯಾನದಿಂದ ಬಂದ ರೈತರ ಗುಂಪುಗಳನ್ನು ಗುರುತಿಸಿ,ಬಹುಮಾನ ನೀಡಲಾಗಿದ್ದು, ಬಾಬರ್ ರಾಜನಾಗುವ ಮೊದಲಿನಿಂದಲೂ, ಬಾಬರನಿಗೆ ಇವರು ಸಹಾಯ ಮಾಡುತ್ತಾ ಬಂದವರಾಗಿದ್ದರು. ಹಬ್ಬದ ಸಂಭ್ರಮದ ನಂತರ ,ಬಂದ ಹಲವಾರು ಕೊಡುಗೆಗಳನ್ನು ಬಾಬರ್ ಕಾಬೂಲಿಗೆ ಕಳುಹಿಸಿದನು. "ಅವನ ಕುಟುಂಬದವರ ತೃಪ್ತಿಗಾಗಿ " , ಬಾಬರ್ ತನ್ನ ಸಂಪತ್ತಿನ ಮೇಲೆ ಬಹಳ ಉದಾರಿಯಾಗಿದ್ದನು.ಅವನು ಸಾಯುವ ಸಂದರ್ಭದಲ್ಲಿ ಅವನಿಗೆ ಶತ್ರುಗಳೆಂಬುವರು ಯಾರೂ ಯಾರಲಿಲ್ಲ,ಸೇನಾಧಿಪತಿಗಳಿಗೆ ಅವರ ಮೂರನೇ ಒಂದು ಭಾಗದ ಆದಾಯವನ್ನು ಖಾಜಾನೆಗೆ ಸಲ್ಲಿಸಲು ಆದೇಶಿಸಿದನು. ಕಫದಲ್ಲಿ ರಕ್ತ ಬರುವುದು, ಮುಖದ ಮೇಲೆಲ್ಲಾ ಬೊಬ್ಬೆಯ ರೀತಿಯ ಗುಳ್ಳೆಗಳು , ಶಿಯಾಟಿಕಖಾಯಿಲೆಯ ನರಳಾಟ ,ಕಿವಿಯ ಸೋಂಕಿನಿಂದ ರಕ್ತ ಸೋರುವಿಕೆ, ಎಲ್ಲವೂ ಅವನಿಗೆ ಗೊತ್ತಿತ್ತು. ಅವನು ಮಹಾನ್ ಕುಡುಕನಾಗಿದ. ಮತ್ತು ಹಶಿಶ್‌ಮಾದಕ ದ್ರವ್ಯ ತೆಗೆದುಕೊಳ್ಳುತ್ತಿದ್ದ ,ಬಹುಶಃ ಹಲವಾರು ಖಾಯಿಲೆಗಳಿಂದ ಹೊರಬರಲು ಹೀಗೆ ಮಾಡಿದ್ದಿರಬಹುದು. ಈ ಮಾದಕ ವಸ್ತುಗಳನ್ನು ಇಸ್ಲಾಮಿನ ಮೂಲಭೂತವಾದಿಗಳು ಕಡಾಖಂಡಿತವಾಗಿ ವಿರೋಧಿಸುವವರಾಗಿದ್ದರು. ಬಾಬರ್ ನಾಮ ದಲ್ಲಿ ಬಾಬರ್ ಹೇಳಿಕೊಂಡಂತೆ, ಫೆರ್ಘನದಲ್ಲಿ ಸಂಬಂಧಿಕರು ಹೇಳಿಕೊಂಡಂತೆ ಗಟ್ಟಿಯಾದ ಕುಡಿತದಲ್ಲಿ ನಿರತನಾಗಿದ್ದನು.(೧/) ಆದಾಗ್ಯೂ ಬಾಬರ್ , ಇಸ್ಲಾಂ ಗಾಗಿ ಹೋರಾಡಿದ ವೀರ ಯೋಧನಾಗಿದ್ದು , ಈಗ ಈ ರೀತಿಯಾಗಿ ವ್ಯಸನಕಾರಿಗೆ ಬಲಿಯಾಗಿದ್ದನು. (ಹರಾಮ್ ). 'ಹನ್ವುಅ/ಕನ್ವುಅ' ಯುದ್ಧ ರಂಗದ ಸಂಜೆ ಸಮಯದಲ್ಲಿ ,ತಾನು ಕುಡಿಯುತ್ತಿದ್ದ ಬಟ್ಟಲುಗಳನ್ನು ಒಡೆದುಹಾಕಿ ಮತ್ತೆಂದೂ ಕುಡಿಯುವುದಿಲ್ಲವೆಂದು ಶಪಥ ಮಾಡಿ ಅದರಂತೆ ನಡೆದುಕೊಂಡನು. ೧೫೨೯ ರ ಮೇ ೬ ರಂದು ಬಾಬರ್, ಇಬ್ರಾಹಿಂ ನ ಸಹೋದರ ಮಹಮೂದ್ ಲೋದಿ ( ಬಾಬರನ ಆಡಳಿತದಿಂದ ದೂರವಾಗಿದ್ದ) ಯನ್ನು ಘಘ್ರ ಯುದ್ಧದಲ್ಲಿ ಸೋಲಿಸಿದನು. ಇದು ಉತ್ತರ ಭಾರತ ದಲ್ಲಿನ ಲೋದಿ ಸಾಮ್ರಾಜ್ಯದ ಕೊನೆಯ ತಲೆಮಾರಿನ ವಂಶವಾಗಿತ್ತು. ಕಡೆಯ ದಿನಗಳು ಬಾಬರ್ ಗಂಭೀರವಾಗಿ ಅನಾರೋಗ್ಯ ಪೀಡಿತನಾದ ಸಂದರ್ಭದಲ್ಲಿ,ಬಾಬರನ ಆಸ್ಥಾನದಲ್ಲಿದ್ದ ಕೆಲವು ಹಿರಿಯ ನಾಯಕರು /ಶ್ರೀಮಂತರು , ವ್ಯೂಹವೊಂದನ್ನು ರಚಿಸಿ,ಬಾಬರನ ತಂಗಿಯ ಮಗ ಮಹದಿ ಖ್ವಾಜಾ ನನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿರುವ ವಿಷಯ ತಿಳಿದ ಹುಮಾಯುನ್, ಆಗ್ರಾಗೆ ದೌಡಾಯಿಸಿ ಬಂದು,ಅವರ ತಂದೆಯು ಮತ್ತೆ ಅಧಿಕಾರದಲ್ಲಿ ಉಳಿಯುವಂತೆ ಮಾಡಿದನು.ಇದರಿಂದಾಗಿ 'ಮಹದಿ ಖ್ವಾಜಾ' ತಾನು ನಾಯಕನಾಗುವ ಎಲ್ಲಾ ಆಶಯಗಳನ್ನು ಕಳೆದುಕೊಂಡಂತೆ ಆಗಿದ್ದು , ಹುಮಾಯುನನು ಆಗ್ರಾಕ್ಕೆ ಬಂದ ಸಂದರ್ಭದಲ್ಲಿ ಅವನಿಗೆ ಅನಾರೋಗ್ಯ ಉಂಟಾಗಿ ಸಾವಿಗೆ ಹತ್ತಿರವಾಗುವಷ್ಟು ಗಂಭೀರನಾದನು. ಬಾಬರನು ಇದರಿಂದ ನೊಂದು ,ತನ್ನ ಮಗನ ಹಾಸಿಗೆಯನ್ನು ಸುತ್ತುತ್ತಾ,ತನ್ನ ಮಗನನ್ನು ಉಳಿಸಬೇಕೆಂದು ,ತನ್ನ ಮಗನ ಬದಲು ತನ್ನ ಪ್ರಾಣವನ್ನು ಪಡೆಯಬೇಕೆಂದು ದೇವರಲ್ಲಿ ಮೊರೆಯಿಟ್ಟನು. ನಂಬಿಕೆಯ ಒಂದು ಕಥೆಯಾಗಿ ಕೇಳಿ ಬಂದಂತೆ , ಬಾಬರನು ಮತ್ತೆ ಜ್ವರದಿಂದ ಅನಾರೋಗ್ಯಕ್ಕೆ ತುತ್ತಾಗಿ, ಹುಮಾಯುನ್ ಆರೋಗ್ಯವನ್ತನಾಗಿ ಉಳಿದನು.ಬಾಬರನು ಹುಮಾಯುನನಿಗೆಹೇಳಿದ ಕೊನೆಯ ಮಾತು ' "ನಿನ್ನ ಸಹೋದರರ ವಿರುದ್ಧವಾಗಿ ಏನೂ ಮಾಡಬೇಡ (ತೊಂದರೆ ಕೊಡಬೇಡ), ಅವರು ಇದಕ್ಕೆ ಅರ್ಹರಾಗಿದ್ದರೂ ಸರಿಯೇ" ಎಂಬುದಾಗಿತ್ತು. ಬಾಬರನು ತನ್ನ ೪೭ ನೇ ವಯಸ್ಸಿನಲ್ಲಿ ನಿಧನನಾದ ನಂತರ ,ಹಿರಿಯ ಮಗ ಹುಮಾಯುನನುಅಧಿಕಾರಕ್ಕೆ ಬಂದನು. ಬಾಬರನ ಸಮಾಧಿಯನ್ನು,ಅವನು ಯಾವಾಗಲೂ ಇಷ್ಟಪಡುತ್ತಿದ್ದ ಕಾಬುಲಿನ ಒಂದು ತೋಟದಲ್ಲಿ ಮಾಡಬೇಕೆಂಬ ಆಸೆಯಿದ್ದರೂ ,ಅವನ ಸಮಾಧಿಯನ್ನು ಆಗ್ರಾದ ರಾಜಧಾನಿ ನಗರದ ದೊಡ್ಡ ಸಮಾಧಿ ಸ್ಥಳ ದಲ್ಲಿ ಮೊದಲು ಮಾಡಲಾಯಿತು. ಇದಾದ ಒಂಭತ್ತು ವರ್ಷಗಳ ನಂತರ ಅವನ ಆಸೆಯನ್ನು ಈಡೇರಿಸುವ ತೆರೆದಿ ಶೇರ್ ಶಾಹ್ ಸೂರಿ ಎಂಬುವವನು, ಬಾಬರ್ ನ ಸಮಾಧಿಯನ್ನು, ಕಾಬುಲಿನ ಸುಂದರವಾದ ತೋಟ ಬಾಗ್ಹ್ -ಎ ಬಾಬರ್ ನಲ್ಲಿ ನಿರ್ಮಿಸಿದನು.ಅದು ಈಗ ಅಫ್ಘಾನಿಸ್ತಾನ್ ದಲ್ಲಿದೆ. ಆ ಸಮಾಧಿಯ ಮೇಲೆ ಬರೆದಿರುವ ಬರಹ ಈ ರೀತಿ ಇದೆ. ( ಪರ್ಷಿಯನ್ ಭಾಷೆಯಲ್ಲಿ ): ಪರಂಪರೆ/ಮೃತ್ಯು ಲೇಖದಾನ ಬಾಬರನ ಪರಂಪರೆ ಹಲವು ಮಿಶ್ರಣದಿಂದ ಕೂಡಿದೆ. ಉಜ್ಬೇಕಿಸ್ತಾನ್ ಮತ್ತು ಕಿರ್ಗಿಜ್ ಸ್ತಾನ್ ನಲ್ಲಿ ಬಾಬರನು ರಾಷ್ಟ್ರೀಯ ನಾಯಕ ಎಂದು ತಿಳಿಯಲಾಗಿದೆ. ಟರ್ಕಿ ಮತ್ತು ಅಫ್ಘಾನಿಸ್ತಾನ್ ನಲ್ಲಿ ಸಮಾಧಿ ಮಾಡಿರುವ ಸ್ಥಳದಲ್ಲಿ ಉನ್ನತ ಮರ್ಯಾದೆಯ ಸ್ಥಾನವಿದೆ. ವಾಸ್ತುಶಿಲ್ಪದ ಮೇಲಿನ ಪ್ರಭಾವ ಬಾಬರನು ಹಲವಾರು ದೇಶಗಳನ್ನು ಸುತ್ತಿದನು.ಹಲವಾರು ಭೂಮಿಯ ಮೇಲ್ಮೈಯನ್ನು ,ದೃಶ್ಯಗಳನ್ನು ಗಮನಿಸಿದ್ದನು.ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಕಟ್ಟಡಗಳನ್ನು ಕಟ್ಟಲಾರಂಭಿಸಿದನು. ಅದರಲ್ಲಿ ಹಿಂದೂಗಳ ಕಟ್ಟಡಗಳ ಶೈಲಿ ಮತ್ತು ಸಂಪ್ರದಾಯಬದ್ಧವಾಗಿ ಬಂದ ಮುಸ್ಲಿಂ ರೀತಿಯ, ಪರ್ಷಿಯನ್ ಮತ್ತು ಟರ್ಕಿ ಶೈಲಿಯ ಕಟ್ಟಡಗಳು ತಲೆಯೆತ್ತಿದವು. ಭಯಭೀತಿಯಿಂದ ಚಂದೇರಿ ಕಟ್ಟಡದ ಬಗ್ಗೆ ಹೇಳುತ್ತಾನೆ;ಹಳ್ಳಿಯು ಕಲ್ಲಿನ ಶೃಂಗಾರದಿಂದ ಕೆತ್ತಲ್ಪಟ್ಟಿತು ,ಗ್ವಾಲಿಯರ್‌ನ ರಾಜ , ರಾಜ ಮಾನ್ ಸಿಂಗ್ ನ ಅರಮನೆ ಅದ್ಭುತ ಕಲ್ಲಿನ ಶೃಂಗಾರವಾಗಿತ್ತು. ಆದರೂ ಜೈನರ "ಪ್ರತಿಮೆಗಳನ್ನು " ಗ್ವಾಲಿಯರ್ ನಲ್ಲಿ , ಕಲ್ಲಿನಲ್ಲಿ ಕೆತ್ತಿರುವುದು ಅವನಿಗೆ ಇಷ್ಟವಾಗಲಿಲ್ಲ. ಅದೃಷ್ಟವಶಾತ್,ಆ ಕೆತ್ತನೆಯನ್ನು ಹಾಳುಗೆಡವಲಿಲ್ಲ, ಆದರೆ ಕೆಲವರ ಮುಖಭಾವಗಳನ್ನು,ಮನನೋಯಿಸುವ ಸನ್ನಿವೇಶಗಳನ್ನು ಮಾತ್ರ ತೆಗೆದುಹಾಕಲಾಯಿತು. (ಆಧುನಿಕ ವಾಸ್ತುಶಿಲ್ಪಿಗಳು ಆ ಮುಖಗಳನ್ನು ಮತ್ತೆ ಜೋಡಿಸಿರುತ್ತಾರೆ.) ತನ್ನ ಜ್ಞಾಪಕಾರ್ಥವಾಗಿ ಅವನು ಬಿಟ್ಟುಹೋದ ಭೂಮಿಯ ಗುರುತಿಗಾಗಿ, ಬಾಬರನು ಅಲ್ಲೆಲ್ಲಾ ತನ್ನ ಇಷ್ಟದ ಹಾಗೆ ಅತ್ಯುತ್ತಮ ರೀತಿಯ ಉದ್ಯಾನವನವನ್ನು ಸೃಷ್ಟಿಸಿದನು.ಎಲ್ಲಾ ಪ್ರಾಂತ್ಯಗಳಲ್ಲಿಯೂ ಉದ್ಯಾನವನಗಳನ್ನು ಬೆಳೆಯಿಸಿದನು.ಭಾರತದ ಉದಯಿಸುವ ಸೂರ್ಯನ ನೆರಳಲ್ಲಿ ಭಯದಿಂದ ಕುಳಿತನು. ಕಾಬುಲಿನಲ್ಲಿನ ತೋಟದಲ್ಲಿ , ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರಯತ್ನಿಸಿದ್ದನು.ಅವನ ನಂಬಿಕೆಯಂತೆ ಕಾಬೂಲಿನಲ್ಲಿನ ಉದ್ಯಾನವನ ಇಡೀ ವಿಶ್ವದಲ್ಲಿಯೇ ಹೆಚ್ಚು ಸೌಂದರ್ಯವುಳ್ಳದ್ದಾಗಿದೆ ಎಂದು ನಂಬಿದವನು.ಅಂತಹ ಒಂದು ಉದ್ಯಾನವನದಲ್ಲಿ ತನ್ನ ಸಮಾಧಿಯಾಗಬೇಕೆಂದು ಬಯಸಿದ್ದನು. ಬಾಬರನು ತನ್ನ ಆತ್ಮಕಥೆಯಲ್ಲಿ ಹಿಂದುಸ್ತಾನದ, ಗಿಡ ಮರಗಳು , ಪ್ರಾಣಿಗಳ ಸಂಕುಲದ ಬಗ್ಗೆ ೩೦ ಪುಟಗಳಷ್ಟು ವರ್ಣನೆಯನ್ನು ನೀಡಿದ್ದಾನೆ. ಬಾಬ್ರಿ ಮಸ್ಜಿದ್ ಅಯೋಧ್ಯಯಲ್ಲಿ ಬಾಬರನು ಬಾಬ್ರಿ ಮಸ್ಜಿದ್‌ಅನ್ನು ನಿರ್ಮಿಸುವ ನಂಬಿಕೆ ಹೊಂದಿದ್ದನು. ಆ ಸ್ಥಳದಲ್ಲಿಯೇ ದೇವಸ್ಥಾನ ಇದ್ದಿದ್ದು ಹಿಂದೂ ಮತ್ತು ಮುಸ್ಲಿಮರ ಮನಸ್ತಾಪಕ್ಕೆ ಕಾರಣವಾಗಿದೆ. ವರದಿಗಳು ಹೇಳುವಂತೆ , ಹಿಂದೂ ಮತ್ತು ಮುಸ್ಲಿಮರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಮಸೀದಯನ್ನು ೧೮೫೦ ರ ಮಧ್ಯದ ಸುಮಾರಿಗೆ ಮುಚ್ಚಲಾಗಿದೆ.(ಹಿಂದೂಗಳ ಪ್ರಾರ್ಥನೆ ಈ ದಿನದವರೆಗೂ ಮುಂದುವರಿದಿದೆ.)ಕೋಮು ಗಲಭೆಗೆ ಹಾಗು ಅಲ್ಲಹಾಬಾದ್ ಹೈಕೋರ್ಟ್ ನ ತೀರ್ಮಾನ ತಡೆಯಾಗಿ ಉಳಿದಿರುವುದರಿಂದ, ಮಸೀದಿಯನ್ನು ಅಯೋಧ್ಯೆಯಲ್ಲಿ ೬ ನೇ ಡಿಸೆಂಬರ್ ೧೯೯೨ ರಂದು ಕರ ಸೇವಕರು ಭಾರತದ ಎಲ್ಲಾ ಕಡೆಯಿಂದ ಬಂದು ಅವ್ಯವಸ್ಥೆಗೊಳಿಸಿ ನಾಶ ಮಾಡಿರುತ್ತಾರೆ.https://www.thehindu.com/news/national/the-hindu-explains-the-babri-masjid-case/article21248813.ece ಆಕರಗಳು ಸಹಾಯಕ ಆಕರಗಳು ದಿ ಬಾಬರ್ -ನಾಮ . ಬಾಬರನ ಆತ್ಮ ಚರಿತ್ರೆ ,ರಾಜ ಮತ್ತು ಚಕ್ರಾಧಿಪತಿ . ಭಾಷಾಂತರ , ಪರಿಷ್ಕರಣೆ ಮತ್ತು ವಿಮರ್ಷಣೆ - ವ್ಹೀಲರ್ ಎಂ . ಥಾಕ್ಸ್ಟನ್ (ನ್ಯೂಯಾರ್ಕ್ ) ೨೦೦೨ ಮಿರ್ಜಾ ಮುಹಮ್ಮದ್ ಹೈದರ್ ದುಘಲತ್ ತಾರಿಖ್ -ಎ ರಶೀದಿ ಭಾಷಾಂತರ ಮತ್ತು ಪರಿಷ್ಕರಣೆ ಇಂಗ್ಲೀಷ್ ಕಾದಂಬರಿಕಾರ ಡೆನಿಸನ್ ರೋಸ್ಸ್ (ಲಂಡನ್ ) ೧೮೯೮. ಭಾರತದ ಇತಿಹಾಸ ಕೇಂಬ್ರಿಡ್ಜ್ , ಆವೃತ್ತಿ . III ಮತ್ತು IV, "ಟರ್ಕಿಗಳು ಮತ್ತು ಆಫ್ಘನ್ನರು " ಮತ್ತು " ಮುಘಲರ ಕಾಲ ". (ಕೇಂಬ್ರಿಡ್ಜ್ ) ೧೯೨೮ ಮುಜಫ್ಫಾರ್ ಅಲಂ ಮತ್ತು ಸಂಜಯ್ ಸುಬ್ರಹ್ಮಣ್ಯನ್ (ಆವೃತ್ತಿಗಳು .) ದಿ ಮುಘಲ್ ಸ್ಟೇಟ್ ೧೫೨೬-೧೭೫೦ (ದೆಹಲಿ ) ೧೯೯೮ ವಿಲಿಯಂ ಇರ್ವಿನ್ ದಿ ಆರ್ಮಿ ಆಫ್ ದಿ ಇಂಡಿಯನ್ ಮೊಘುಲ್ಸ್ . (ಲಂಡನ್ ) ೧೯೦೨. (ಕೊನೆಯ ಪುನರಾವೃತ್ತಿ ೧೯೮೫ ) ಬಂಬೇರ್ ಗಸ್ಗೊಇನ್ ದಿ ಗ್ರೇಟ್ ಮೊಘುಲ್ಸ್ (ಲಂಡನ್ ) ೧೯೭೧. (ಕೊನೆಯ ಪುನರಾವೃತ್ತಿ ೧೯೮೭ ) ಜೋಸ್ ಗೊಮ್ಮನ್ಸ್ ಮುಘಲ್ ವಾರ್ ಫೇರ್ (ಲಂಡನ್ ) ೨೦೦೨ ಪೀಟರ್ ಜಾಕ್ಸನ್ ದಿ ಡೆಲ್ಲಿ ಸುಲ್ತಾನೇಟ್. ಎ ಪೊಲಿಟಿಕಾಲ್ ಅಂಡ್ ಮಿಲಿಟರಿ ಹಿಸ್ಟರಿ (ಕೇಂಬ್ರಿಡ್ಜ್ ) ೧೯೯೯ ಜಾನ್ ಎಫ್ . ರಿಚರ್ಡ್ಸ್ ದಿ ಮುಘಲ್ ಎಂಪೈರ್ (ಕೇಂಬ್ರಿಡ್ಜ್ ) ೧೯೯೩ ಜೇಮ್ಸ್ ತೊದ್ ಅನ್ನಲ್ಸ್ ಅಂಡ್ ಆಂಟಿಕ್ವಿಟಿಸ್ ಆಫ್ ರಾಜಸ್ಥಾನ್ (ಆಕ್ಸ್ಫರ್ಡ್ ) ೧೯೨೦ ಆವೃತ್ತಿ . ಡಬ್ಲ್ಯು ಎಂ ಕ್ರೂಕ್ ( ೩ ನೇ ಆವೃತ್ತಿ ) ಬಾಬರ್ ನಾಮ : ಜರ್ನಲ್ ಆಫ್ ಎಂಪೆರರ್ ಬಾಬರ್ , ಜಹೀರ್ ಉದ್ದೀನ್ ಮುಹಮ್ಮದ್ ಬಾಬರ್ , ಚಾಘತಯ್ ನಿಂದ ಭಾಷಾಂತರ ಟರ್ಕಿ ಬೈ ಅನ್ನೆತ್ತೆ ಸುಸಾನ್ನಃ ಬೆವೆರಿದ್ಜೆ , ಅಬ್ರಿದ್ಜೆದ್ , ಪರಿಷ್ಕರಣೆ ಮತ್ತು ಪರಿಚಯ ಬೈದಿಲೀಪ್ ಹಿರೋ . ಐ ಎಸ್ ಬಿ ಎನ್ ೯೭೮-೦-೧೪-೪೦೦೧೪೯-೧ ಅಥವಾ ಐ ಎಸ್ ಬಿ ಎನ್ ೦-೧೪-೪೦೦೧೪೯-೭. - ಪೂರ್ಣ ಬಾಬರ್ ನಾಮವು ನೇರ ಮಾಧ್ಯಮದಲ್ಲಿ ಏರಲಿ , ಅಬ್ರಾಹಂ . ಚಕ್ರಾಧಿಪತಿಗಳ ನವಿಲಿನ ಸಿಂಹಾಸನ , ಪೆನ್ ಗ್ವಿನ್ , ೨೦೦೦. ಐ ಎಸ್ ಬಿ ಎನ್ ೧೫೮೬೪೮೬೮೩೭ ಎಲ್ಲಿಅತ್ , ಸರ್ ಹೆಚ್ .ಎಂ ., ಪರಿಷ್ಕರಣೆ ಬೈ ದೌಸೋನ್ , ಜಾನ್ . ಭಾರತದ ಇತಿಹಾಸ ,ಇತಿಹಾಸಕಾರರು ಅವರೇ ಹೇಳುವಂತೆ ದಿ ಮುಹಮ್ಮದನ್ ಕಾಲ ; ಲಂಡನ್ ನ ತ್ರುಬನರ್ ಕಂಪನಿಯಿಂದ ಪ್ರಕಟಣೆ ೧೮೬೭–೧೮೭೭. (ನೇರ ಮಾಧ್ಯಮದ ಪ್ರತಿ : ದಿ ಹಿಸ್ಟರಿ ಆಫ್ ಇಂಡಿಯಾ ,ಇತಿಹಾಸಕಾರರು ಅವರ ಇತಿಹಾಸವನ್ನು ಅವರೇ ಹೇಳುವಂತೆ ದಿ ಮುಹಮ್ಮದನ್ ಪೀರಿಯಡ್ ; ಬೈ ಸರ್ ಹೆಚ್ . ಎಂ . ಎಲ್ಲಿಅತ್ ; ಪರಿಷ್ಕರಣೆ ಜಾನ್ ದೌಸೋನ್ ರವರಿಂದ ; ಲಂಡನ್ ತ್ರುಬನರ್ ಕಂಪನಿ 1867–1877 - ಈ ಆನ್ ಲೈನ್ ಪ್ರತಿಯನ್ನು ಕಳುಹಿಸಿದ್ದು, : ದಿ ಪ್ಯಾಕ್ಕರ್ದ್ ಹ್ಯುಮಾನಿಟಿಸ್ ಇನ್ಸ್ಟಿಟ್ಯೂಟ್ ; ಪರ್ಷಿಯನ್ ಭಾಷಾಂತರದ ಪುಸ್ತಕ ; ಹಾಗು ಇತರ ಇತಿಹಾಸದ ಪುಸ್ತಕಗಳ ಶೋಧನೆ : ಬರಹಗಾರರ ಪಟ್ಟಿ ಮತ್ತು ಶಿರೋನಾಮೆಗಳ ಪಟ್ಟಿ ) ಗೊರ್ಡೊನ್ , ಸ್ತೆವಾರ್ತ್ . ಯಾವಾಗ ಏಷ್ಯ ವಿಶ್ವದ್ದಾಗಿತ್ತೋ : ಪ್ರವಾಸಿಗ ವರ್ತಕ , ಪಂಡಿತರು , ಯೋಧರು ,ಮತ್ತು "ರಿಚಸ್ ಆಫ್ ದಿ ಈಸ್ಟ್ " ಅನ್ನು ರಚಿಸಿದ ಭಿಕ್ಷುಗಳು ದ ಕ್ಯಾಪೋ ಪ್ರೆಸ್ , ಪೆರ್ಸಯುಸ್ ಬುಕ್ಸ್ , ೨೦೦೮. ಐ ಎಸ್ ಬಿ ಎನ್ ೦-೪೭೧-೮೦೫೮೦-೭. ಹೊರಗಿನ ಕೊಂಡಿಗಳು ಬಾಬರ್ ಮತ್ತು ಬಾಬರನ ಮಕ್ಕಳು - ಟಿ ಸಿ ಎನ್ ನ್ಯೂಸ್ ಕಾಬುಲಿನಲ್ಲಿ ಚಕ್ರಾಧಿಪತಿ ಬಾಬರನ ಮಸೀದಿಯ ಹಳೆಯ ಚಿತ್ರಗಳು ಉಜ್ಬೆಕ್ ಸಾಹಿತ್ಯ -ಜಹಿರಿದ್ದೀನ್ ಮುಹಮ್ಮದ್ ಬಾಬರ್ ದಿ ಮುಘಲ್ಸ್ - ಬಾಬರ್ ಬಾಬರನ ಆತ್ಮಚರಿತ್ರೆ ಬಾಬರನ ಪ್ರಾಂತ್ಯದ ಬಗ್ಗೆ ಮುಘಲ್ ಭಿತ್ತಿಚಿತ್ರಗಳು ,ಅವನ ಆತ್ಮಕಥೆಯಲ್ಲಿನ ಉದಾಹರಣೆ ಸಹಿತ ಚಿತ್ರಗಳೂ ಸೇರಿವೆ, ಬಾಬರ್ ನಾಮ. ಗುರು ಗ್ರಂಥ ಸಾಹಿಬ್ ನಲ್ಲಿನ ಬಾಬರ್ - ರಾಜಕೀಯ ಚಳುವಳಿ/ಧರಣಿ ಗುರುನಾನಕ್ ದೇವ್ ರವರಿಂದ Babar ಬಾಬರ್ ನಾಮ , ಇಂಗ್ಲಿಷ್ ಗೆ ಭಾಷಾಂತರಗೊಂಡಿದೆ. ಮುಘಲ್ ಚಕ್ರಾಧಿಪತಿಗಳು ಟರ್ಕಿ ಆಡಳಿತಗಾರರು ೧೪೯೩ ಜನನ ೧೫೩೧ ನಿಧನ ಮೊಘಲ್ ಸಾಮ್ರಾಜ್ಯ ಭಾರತದ ಇತಿಹಾಸ
2411
https://kn.wikipedia.org/wiki/%E0%B2%85%E0%B2%95%E0%B3%8D%E0%B2%AC%E0%B2%B0%E0%B3%8D
ಅಕ್ಬರ್
ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್ (ಪರ್ಶಿಯನ್ ಭಾಷೆಯಲ್ಲಿ: جلال الدین محمد اکبر), (ಅಕ್ಟೋಬರ್ ೧೫ ೧೫೪೨ – ಅಕ್ಟೋಬರ್ ೨೭ ೧೬೦೫) ಹುಮಾಯೂನ್ ನ ಮಗ, ಮೊಘಲ್ ಸಾಮ್ರಾಜ್ಯ ದ ದೊರೆಯಾಗಿ ೧೫೫೬ರಿಂದ ೧೬೦೫ರ ವರೆಗೆ ಆಳಿದನು. ಅಕ್ಬರ್ ಸಿಂಹಾಸನವೇರಿದಾಗ ಕೇವಲ ೧೩ ವರ್ಷ ವಯಸ್ಸಾದರೂ ಮುಘಲ್ ಸಾಮ್ರಾಜ್ಯದ ಸರ್ವಶ್ರೇಷ್ಠ ದೊರೆಯಾಗಿ ಚರಿತ್ರೆಯಲ್ಲಿ ಪರಿಗಣಿತನಾಗಿದ್ದಾನೆ. ಬಾಲ್ಯ ಅಕ್ಬರನ ಜನ್ಮ ರಜಪೂತರ ಕೋಟೆಯಾದ ಉಮರ್ ಕೋಟೆಯಲ್ಲಿ ಆಶ್ರಯ ಪಡೆಯುತ್ತಿದ್ದಹುಮಾಯೂನ್ ಮತ್ತು ಹಮೀದಾ ಬಾನು ಬೇಗಂರಿಗೆ ಜನಿಸಿದನು. ೧೫೪೦ರಲ್ಲಿ ಆಫ್ಘನ್ ದೊರೆಯಾದ ಶೇರ್ ಷಾ ಸೂರಿ ಬಹಳಷ್ಟು ಕಾಳಗಗಳನ್ನು ಮಾಡಿ ಹುಮಾಯೂನನನ್ನು ಗಡೀಪಾರು ಮಾಡಿದನು. ಅಕ್ಬರನನ್ನು ಅವನ ಮಾವ ಅಸ್ಕರಿ ಮತ್ತು ಅವನ ಹೆಂಡತಿ ಆಫ್ಘಾನಿಸ್ತಾನದಲ್ಲಿ ಬೆಳೆಸಿದರು. ಬಾಲ್ಯಾವಸ್ಥೆಯನ್ನು ಬೇಟೆ ಆಡುತ್ತಾ, ಓಡುತ್ತಾ, ಮತ್ತು ಕಾದಾಡುತ್ತಾ ಕಳೆದು, ಓದು-ಬರಹ ಕಲಿಯಲಿಲ್ಲ.ಹುಮಾಯೂನ್ ದೆಹಲಿಯನ್ನು ೧೫೫೫ರಲ್ಲಿ ಮರುಕಬಳಿಸಿದನು. ಇದಾದ ಸ್ವಲ್ಪ ತಿಂಗಳುಗಳಲ್ಲಿಯೇ ಅಪಘಾತದಲ್ಲಿ ತೀರಿಹೋದನು. ರಾಜ್ಯಾಭಿಷೇಕ ಅಕ್ಬರನು ಫೆಬ್ರವರಿ ೧೪, ೧೫೫೬ರಲ್ಲಿ ಸಿಕಂದರ್ ಷಾನೊಂದಿಗೆ ಯುದ್ಧದ ಮಧ್ಯದಲ್ಲಿ ಸಿಂಹಾಸನವನ್ನೇರಿ ಷಹನ್ ಷಾ ಎಂಬ ಬಿರುದನ್ನು ಪಡೆದನು. ಹೇಮುವಿನೊಂದಿಗೆ ಕದನ ಸಿಂಹಾಸನವನ್ನೇರಿದ ಕೆಲವು ಕಾಲದಲ್ಲಿಯೇ ಶೇರ್ ಷಾ ಸಂತತಿಯಾದ ಸಿಕಂದರ್ ಷಾ ಸೂರಿಯ ವಿರುದ್ಧ ಪಂಜಾಬ್ ನಲ್ಲಿ ಕದನಕ್ಕೆ ಹೋದನು. ಸಿಕಂದರ್ ಷಾ ಅಕ್ಬರನಿಗೆ ಬಹಳ ತೊಂದರೆ ಕೊಡದೇ ಹಿಂದೆ ಸರಿದು ರಾಜ್ಯವನ್ನು ಬಿಟ್ಟುಕೊಟ್ಟನು. ಆದರೆ ಹೇಮು ಎಂಬ ಹಿಂದೂ ಯೋಧನು ಆಶ್ಚರ್ಯಕರ ರೀತಿಯಲ್ಲಿ ಅಕ್ಬರನ ಸೇನಾಪತಿಯನ್ನು ಸೋಲಿಸಿ ದೆಹಲಿಯನ್ನು ಆಕ್ರಮಿಸಿದನು. * ಈ ಸುದ್ದಿಯನ್ನು ತಿಳಿದ ಅಕ್ಬರ್ ಬಾಯಿರಾಂ ಜೊತೆಗೂಡಿ ದೆಹಲಿಯತ್ತ ಆಕ್ರಮಣ ಮಾಡಿ ನವೆಂಬರ್ ೫ ೧೫೫೬ರಂದು ಸಾಕಷ್ಟು ಸಂಖ್ಯೆಯಲ್ಲಿದ್ದ ಹೇಮುವಿನ ಸೈನ್ಯವನ್ನು ಎರಡನೇ ಪಾಣಿಪತ್ ಯುದ್ಧದಲ್ಲಿ ಸೋಲಿಸಿ ಕೊಂದನು. ಹೇಮುವಿನ ಕತ್ತರಿಸಿದ ರುಂಡವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಯಿತು. ಇನ್ನೂ ಅಮಾನುಷವಾಗಿ ಅಕ್ಬರನು ಸತ್ತ ಸೈನಿಕರ ರುಂಡಗಳಿಂದ ಜಯದ ಕಂಬವನ್ನು ಮಾಡಿಸಿದನು. ಈ ಜಯದಿಂದ ಅಕ್ಬರನಿಗೆ ೧,೫೦೦ ಕಾಳಗದ ಆನೆಗಳು ದೊರೆತು ಸಿಕಂದರ್ ಷಾನನ್ನು ಸೋಲಿಸಿದನು. ಸಿಕಂದರನ ಸಹೋದರ ಆದಿಲ್ ಷಾ ಬಂಗಾಳದಲ್ಲಿ ಒಂದು ಯುದ್ಧದಲ್ಲಿ ತೀರಿಹೋದನು. ಪುನಃ ಸ್ಥಾಪನೆ ಅಕ್ಬರನು ವಿವಿಧ ಧರ್ಮೀಯರನ್ನು ತನ್ನ ಮಂತ್ರಿಮಂಡಲಕ್ಕೆ ಆಹ್ವಾನಿಸಿದನು. ರಜಪೂತರ ಸ್ನೇಹ ಕೋರಿ ದೊರೆಯ ಮಗಳಾದ ಹೀರಾ ಕುಂವರಿಯನ್ನು ಮದುವೆಯಾದನು. ಇವಳು ಅಕ್ಬರನ ರಾಣಿಯಾಗಿ ಜೋಧಾಬಾಯಿ ಎಂಬ ಹೆಸರು ಪಡೆದಳು. ಸಲೀಂ ಎಂಬ ಮಗನನ್ನು ಹಡೆದಳು, ಇವನು ಜಹಾಂಗೀರನಾಗಿ ಮುಂದಿನ ಮುಘಲ್ ದೊರೆಯಾದನು. ಅಕ್ಬರನ ಕಾಲದಲ್ಲಿ ಅತಿ ಹೆಚ್ಚು ಹಿಂದೂಗಳನ್ನು ನಾಗರಿಕ ಸೇವೆಗೆ ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ಗೋವಾ ಪ್ರದೇಶದ ಮರಿಯಂ ಎಂಬ ಕ್ರೈಸ್ತ ಹುಡುಗಿಯನ್ನೂ ಮದುವೆಯಾದನು. ಇತರ ರಜಪೂತ ದೊರೆಗಳು ತಮ್ಮ ಹೆಣ್ಣುಮಕ್ಕಳನ್ನು ಅಕ್ಬರನಿಗೆ ಕೊಟ್ಟು ಮದುವೆ ಮಾಡಿದರು. ಇದರಿಂದ ಅಕ್ಬರನಿಗೆ ಅವರ ಸಹಕಾರ ದೊರೆಯಿತು. ರಜಪೂತ ಸೈನಿಕರು ಮುಘಲ್ ಸಾಮ್ರಾಜ್ಯದ ಪರವಾಗಿ ಮುಂದಿನ ೧೦೦ ವರ್ಷಗಳಷ್ಟು ಕಾಲ ಕಾದಾಡಿದರು. ಅಕ್ಬರನು ನಂತರ ಮುಘಲ್ ಸಾಮ್ರಾಜ್ಯವನ್ನು ಮಾಳ್ವ (೧೫೬೨), ಗುಜರಾತ್ (೧೫೭೨), ಬಂಗಾಳ (೧೫೭೪), ಕಾಬುಲ್ (೧೫೮೧), ಕಾಶ್ಮೀರ (೧೫೮೬), ಮತ್ತು ಕಂದೇಶ ಪ್ರದೇಶಗಳಲ್ಲಿ ವಿಸ್ತರಿಸಿದನು. ಅಕ್ಬರನ ತೆರಿಗೆ ಸುಧಾರಣೆಯು ಒಂದು ಗಮನಾರ್ಹ ಸಾಧನೆ. ಮುಘಲ್ ಸಾಮ್ರಾಜ್ಯದ ಖಜಾನೆ ಭರ್ತಿ ಮಾಡಲು ಇದು ಬಹಳಷ್ಟು ಕಾರಣವಾಯಿತು. ಅವನು ಮುಸ್ಲಿಮೇತರರ ಮೇಲೆ ಹೇರಿದ್ದ ಜಝಿಯಾ ಕರವನ್ನು ರದ್ದುಪಡಿಸಿದನು. ಅಕ್ಬರನ ವ್ಯಕ್ತಿತ್ವ ಅಕ್ಬರನು ಒಬ್ಬ ಉದಾರಶೀಲ ಮತ್ತು ಧೀಮಂತ ದೊರೆಯಾಗಿ ಪ್ರಜೆಗಳ ಪ್ರೀತ್ಯಾದರಗಳನ್ನು ಪಡೆದನು. ಅಬುಲ್ ಫಝಲ್ ಮತ್ತು ಅಕ್ಬರನ ತೀಕ್ಷ್ಣ ವಿಮರ್ಶಕ ಬಾದಯೂನಿ ಅಕ್ಬರನ ವ್ಯಕ್ತಿತ್ವವನ್ನು ಹೊಗಳಿದ್ದಾರೆ. ಯುದ್ಧಭೂಮಿಯಲ್ಲಿ ಧೈರ್ಯಶಾಲಿಯಾಗಿ ಕಾದಾಡಿ ಸಂಬಂಧಿಗಳಿಗೆ ಪ್ರೀತಿಪಾತ್ರನಾಗಿದ್ದನು. ಆದರೆ ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸದೇ ಬಿಡುತ್ತಿರಲಿಲ್ಲ. ಬಹಳಷ್ಟು ಚರಿತ್ರಾಕಾರರು ನಂಬುವ ಪ್ರಕಾರ ಅಕ್ಬರನಿಗೆ ಹೆಣ್ಣುಗಳ ಲಾಲಸೆಯಿತ್ತು. ಜೊತೆಗೆ ಕುಡಿತದ ಚಟವೂ ಇತ್ತು.ಅವನು ಮುಸ್ಲಿಮೇತರ ಪ್ರಜೆಗಳಿಗೆ ಜೆಸಿಯಾ ಕರವನ್ನು ತೆಗೆದು ಹಾಕಿದ್ದರು ಮತೀಯ ಸಾಮರಸ್ಯ ಅಕ್ಬರನ ಮತೀಯನೀತಿ ಇತಿಹಾಸದಲ್ಲಿ ಸ್ಮರಣೀಯ. ಉನ್ನತ ಧ್ಯೇಯಗಳನ್ನು ಹೊಂದಿ ಭಾವಜೀವಿಯಾಗಿದ್ದ ಆತ ಎಲ್ಲ ಮತಗಳ ತತ್ವ್ತಗಳನ್ನೂ ಗ್ರಹಿಸಿ ಮತೀಯ ಏಕತೆಯನ್ನು ಉಂಟುಮಾಡುವ ಗುರಿಯನ್ನು ಹೊಂದಿದ್ದ. ಈ ಗುರಿಯನ್ನು ಸಾಧಿಸಲು 1581ರಲ್ಲಿ ದೀನ್-ಏ-ಇಲಾಹಿ, ಎಂಬ ಹೊಸ ಮತವನ್ನು ಸ್ಥಾಪಿಸಿದ. ಅದು ಪ್ರಗತಿಪರ ವಿಚಾರಶೀಲರ ಸಂಘವಾಗಿತ್ತು; ಸರ್ವಧರ್ಮ ಸಹಿಷ್ಣುತೆಯ ಆದರ್ಶವಾಗಿತ್ತು. ಈ ಹೊಸ ಮತದ ಪ್ರಕಾರ ಸರ್ವಶಕ್ತನಾದ ದೇವರು ಒಬ್ಬನೇ. ಎಲ್ಲರೂ ದುರ್ಗುಣಗಳನ್ನು ತ್ಯಜಿಸಿ ಸದ್ಗುಣಗಳನ್ನು ಅನುಸರಿಸಿ ವಿವೇಚನೆಗೆ ತಲೆಬಾಗಬೇಕು. ಪುಜೆ-ಪುರಸ್ಕಾರ ಮತ್ತು ಪುರೋಹಿತರ ಆವಶ್ಯಕತೆ ಇಲ್ಲ. ದೀನ್-ಏ-ಇಲಾಹಿ ಸರ್ವ ಮತಗಳ ಆಧ್ಯಾತ್ಮಿಕ ಮತ್ತು ತಾತ್ವ್ತಿಕ ಸಂಪ್ರದಾಯಗಳ ಸಂಗ್ರಹವಾಗಿತ್ತು. ಧರ್ಮೋಪದೇಶಕರಿಗಾಗಲಿ ಮೌಢ್ಯ ಮತ್ತು ಕಂದಾಚಾರಗಳಿಗಾಗಲಿ ಈ ಮತದಲ್ಲಿ ಅವಕಾಶವಿರಲಿಲ್ಲ. ಈ ಮತಕ್ಕೆ ಸೇರಲು ಯಾರನ್ನೂ ಬಲಾತ್ಕರಿಸುತ್ತಿರಲಿಲ್ಲ. ವಿಚಾರಶೀಲರಾದ ಹದಿನೆಂಟು ಜನರು ಮಾತ್ರ ಅದನ್ನು ಅವಲಂಬಿಸಿದ್ದರು. ಅವರಲ್ಲಿ ರಾಜ ಬೀರಬಲ್ಲನೂ ಒಬ್ಬ. ಅಕ್ಬರ್ ವೈಯಕ್ತಿಕವಾಗಿ ಆಧ್ಯಾತ್ಮಿಕ ಜೀವನದ ರಹಸ್ಯಗಳನ್ನು ಅರಿಯಲು ಕುತೂಹಲಿಯಾಗಿದ್ದವನು. ಅವನು ಅನೇಕ ವೇಳೆ ಏಕಾಂಗಿಯಾಗಿ ತನ್ನ ಅರಮನೆಯ ಪ್ರಾಂಗಣದಲ್ಲಿ ಕುಳಿತು ಮಧ್ಯರಾತ್ರಿಯ ವರೆಗೂ ನಭೋಮಂಡಲವನ್ನು ವೀಕ್ಷಿಸುತ್ತ ಜೀವನದ ಸತ್ಯಾಸತ್ಯಗಳ ವಿಚಾರವಾಗಿ ದೀರ್ಘಾಲೋಚನೆಗಳಲ್ಲಿ ಮಗ್ನನಾಗುತ್ತಿದ್ದ. ಜನರ ಮತೀಯ ಮೌಢ್ಯಗಳನ್ನು ಕಂಡು ಮರುಗುತ್ತಿದ್ದ. ಸರ್ವಧರ್ಮಗಳ ಸಮನ್ವಯವಾದ ದೀನ್-ಇಲಾಹಿಯ ಮುಖಾಂತರ ಜನರ ಭಿನ್ನಭಾವಗಳನ್ನು ತೊಡೆದು ಹಾಕುವ ಗುರಿಯನ್ನು ಹೊಂದಿದ್ದ. ಈ ಪ್ರಯತ್ನದಲ್ಲಿ ಕೆಲವು ಅಂಶಗಳು ಅವನಿಗೆ ಸಹಕಾರಿಯಾದುವು. ಮೊದಲನೆಯದಾಗಿ ಆತನ ತಂದೆ ಮತ್ತು ತಾತ ಸಂಪ್ರದಾಯಶರಣರಾಗಿರದೆ ಉದಾರ ಪಂಥಿಗಳಾಗಿದ್ದರು. ಎರಡನೆಯದಾಗಿ ಆತನು ರಾಜಪುತ್ರ ರಾಜಕುಮಾರಿಯನ್ನು ವಿವಾಹವಾದದ್ದು ಅವನ ವಿಚಾರಧಾರೆಯನ್ನು ಬದಲಾಯಿಸಿತು. ಕೊನೆಯದಾಗಿ ನಿಕಟವರ್ತಿಗಳಾದ ಶೇಕ್ ಮುಬಾರಕ್, ಫೈಜಿ ಮತ್ತು ಅಬುಲ್ ಫಜ಼ಲ್ ಅವರ ಭಾವನೆಗಳು ಮತ್ತು ವಿಚಾರಧಾರೆಗಳು ಅಕ್ಬರನ ಮೇಲೆ ಪರಿಣಾಮ ಬೀರಿದುವು. ‘ಜೀವಾತ್ಮಗಳು ಪರಮಾತ್ಮನ ಅಂಶಗಳು ಮತ್ತು ಕೊನೆಗೆ ಪರಮಾತ್ಮನಲ್ಲೇ ಐಕ್ಯವಾಗುತ್ತವೆ', ಎಂಬ ಸೂಫಿó ತತ್ವ್ತದಲ್ಲಿ ಅವನಿಗೆ ಬಹಳ ನಂಬಿಕೆ. ಅಕ್ಬರ್ 1575ರಲ್ಲಿ ಸಿಕ್ರಿ ಎಂಬಲ್ಲಿ ಇಬದತ್ಖಾನವನ್ನು (ಪ್ರಾರ್ಥನಾಮಂದಿರ) ಕಟ್ಟಿಸಿದ. ಇಲ್ಲಿ ಸಾಮ್ರಾಜ್ಯದ ಎಲ್ಲ ಭಾಗಗಳಿಂದಲೂ ಹಿಂದೂ, ಜೈನ, ಪಾರಸಿ, ಕ್ರೈಸ್ತ ಮತ್ತು ಮಹಮದೀಯ ಮತದ ಪಂಡಿತರು ಸಭೆ ಸೇರಿ ಅಕ್ಬರನ ಸಂದೇಹಗಳನ್ನು ನಿವಾರಿಸ ಬೇಕಾಗಿದ್ದಿತು. ಆದರೆ ನಾನಾ ಪಂಥಗಳ ವಿದ್ವಾಂಸರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮುಂದುಮಾಡಿಕೊಂಡು ವಾದ ವಿವಾದದಲ್ಲಿ ನಿರತರಾಗಿ ಸಮಸ್ಯೆಗಳನ್ನೇ ಸೃಷ್ಟಿಸಿದರು. ಆದ್ದರಿಂದ ಅಕ್ಬರ್ ತಾನೇ ಸರ್ವಧರ್ಮಗಳ ಮುಖಂಡತ್ವವನ್ನು ವಹಿಸಿಕೊಂಡು ಮತೀಯ ಕಚ್ಚಾಟಗಳನ್ನು ನಿಲ್ಲಿಸಿ ತನ್ನ ತೀರ್ಪನ್ನು ಅವರು ಒಪ್ಪುವಂತೆ ವಿಧೇಯಕ ಮಾಡಿದ. ಅಕ್ಬರ್ ತಾನೊಬ್ಬ ಪ್ರವಾದಿ ಎಂದು ನಂಬಿಯೂ ಇರಲಿಲ್ಲ. ಹಾಗೆ ಪ್ರಚಾರವನ್ನೂ ಮಾಡಲಿಲ್ಲ. ಆದರೆ ವಿಭಿನ್ನ ಮತೀಯರನ್ನು ಸಮತೆಯ ಆಧಾರದ ಮೇಲೆ ಒಂದುಗೂಡಿಸಲು ಸತತವಾಗಿ ಪ್ರಯತ್ನಪಟ್ಟ. ಅಲ್ಲದೆ ಅವನ ಆಳ್ವಿಕೆಯು ಮಹಾ ಘಟನಾವಳಿಗಳಿಂದ ಕೂಡಿದ ಉಜ್ವಲ, ಐತಿಹಾಸಿಕ ಕಾಲವಾಗಿತ್ತು. ಆದ್ದರಿಂದ ಚರಿತ್ರಕಾರರು ಅಕ್ಬರನನ್ನು ಮಹಾಶಯ ಎಂದು ಕರೆದರು. ಅಕ್ಬರನ ಕಾಲದಲ್ಲಿ ಮುಘಲ್ ಸಾಮ್ರಾಜ್ಯದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಇದ್ದರು. ಅಕ್ಬರನು ಸಿಂಹಾಸನವನ್ನೇರಿದ ಕಾಲದಲ್ಲಿ ಮುಘಲ್ ಸಾಮ್ರಾಜ್ಯದಲ್ಲಿ ಹಿಂದೂಗಳು ಬಹುಸಂಖ್ಯೆಯಲ್ಲಿದ್ದರು. ಆದರೆ ಆಡಳಿತಗಾರರು ಎಲ್ಲರೂ ಮುಸ್ಲಿಮರಾಗಿದ್ದರು. ಇಂತಹ ಧ್ರುವೀಕೃತ ಕಾಲದಲ್ಲಿ ಅಕ್ಬರನು ಧರ್ಮ ಸಹಿಷ್ಣುತೆಯನ್ನು ಪ್ರೋತ್ಸಾಹಿಸಿದನು. ಹಿಂದೂಗಳನ್ನು ಉನ್ನತಹುದ್ದೆಗಳಿಗೆ ಏರಿಸಿದನು. ಜಝಿಯಾ ಕರವನ್ನು ರದ್ದುಪಡಿಸಿದನು. ಕ್ಯಾಥೊಲಿಕ್ ಚರ್ಚಿನ ಜೊತೆಗೂ ಒಳ್ಳೆ ಸಂಬಂಧ ಹೊಂದಿದ್ದ ಅಕ್ಬರ್ ತನ್ನ ಮೂರು ಮೊಮ್ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದನು. (ಇವರು ನಂತರ ಮುಸ್ಲಿಮರಾಗಿ ಮತಾಂತರ ಹೊಂದಿದರು) ಅಕ್ಬರನು ಇಬಾದತ್ ಖಾನಾ ಎಂಬ ಕಟ್ಟಡವನ್ನು ಕಟ್ಟಿಸಿದನು. ಇದರಲ್ಲಿ ಧಾರ್ಮಿಕ ತರ್ಕಗಳನ್ನು ಏರ್ಪಡಿಸುತ್ತಿದ್ದನು. ಇಸ್ಲಾಮೀಯ ಸೂಫಿ ಪಂಥ ಮತ್ತು ಹಿಂದೂ ಧರ್ಮದ "ಭಕ್ತಿ" ಪಂಥಗಳನ್ನು ಆಧರಿಸಿ ದಿನ್-ಇ-ಇಲಾಹಿ ಎಂಬ ಧರ್ಮವನ್ನು ಹುಟ್ಟುಹಾಕಿದನು. ಇವನ ಧಾರ್ಮಿಕ ನಂಬಿಕೆಯನ್ನು ಕಟ್ಟಾ ಮುಸ್ಲಿಮರು ಸಹಿಸಲಿಲ್ಲ. ಇವರು ಅಕ್ಬರನ ವಿರುದ್ಧ ಬಹಳಷ್ಟು ಗಾಳಿಸುದ್ದಿಯನ್ನು ಹಬ್ಬಿಸಿದರು. ಹಿಂದೂ-ಮುಸ್ಲಿಮ್ ಭಾವೈಕ್ಯತೆಗಾಗಿ ಇಷ್ಟು ದುಡಿದರೂ ಕೊನೆಗೆ ೧೬ನೇ ಶತಮಾನದ ಅಂಚಿನಲ್ಲಿ ಈ ಸಂಬಂಧಗಳು ಬಹಳಷ್ಟು ಹಳಸಿದವು. ಅಕ್ಬರನು ಬಾಲ್ಯ ವಿವಾಹ ಮತ್ತು ಸತಿಯ ವಿರುದ್ಧ ರಾಜಾದೇಶವನ್ನು ಹೊರಡಿಸಿದನು. ನವರತ್ನಗಳು ಅಕ್ಬರನ ಆಸ್ಥಾನದಲ್ಲಿ ನವರತ್ನ ಅಂದರೆ ಒಂಬತ್ತು ಅಸಾಧಾರಣ ಕಲಾಕಾರರಿದ್ದರು. ಇವರು: ಅಬುಲ್ ಫಝಲ್ - ಅಕ್ಬರನ ಮುಖ್ಯ ಸಲಹೆಗಾರ ಮತ್ತು ಅಕ್ಬರನ ಜೀವನಚರಿತ್ರೆಯಾದ ಅಕ್ಬರ್ ನಾಮಾ ಲೇಖಕ ಫೈಜಿ ತಾನ್ ಸೇನ್ - ಕಂಠ ಮತ್ತು ಸಂಗೀತಕ್ಕೆ ಪ್ರಖ್ಯಾತ ಬೀರಬಲ್ - ತೀಕ್ಷ್ಣ ಬುದ್ಧಿಗೆ ಪ್ರಖ್ಯಾತ ರಾಜಾ ತೋದರ್ ಮಲ್ ರಾಜಾ ಮಾನ್ ಸಿಂಗ್ ಅಬ್ದುಲ್ ರಹೀಂ ಖಾನ್-ಇ-ಖಾನಾ ಫಕೀರ್ ಅಝಿಯಾಓದಿನ್ ಮುಲ್ಲಾ ದೋಪ್ಯಾಝಾ ಕೊನೆಯ ದಿನಗಳು ಅಕ್ಬರನ ಜೀವನದ ಕೊನೆಯ ವರ್ಷಗಳು ಮಕ್ಕಳ ಕೆಟ್ಟ ನಡತೆಯಿಂದ ತುಂಬಿಹೋಗಿದ್ದವು. ಕುಡಿತದ ಚಟದಿಂದ ಇಬ್ಬರು ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಸತ್ತು ಹೋದರು. ಮೂರನೆಯವನಾದ ಸಲೀಂ ಬಹಳಷ್ಟು ಸಲ ತಂದೆಯ ವಿರುದ್ಧ ದಂಗೆಯೆದ್ದನು. ಇವನೇ ಜಹಾಂಗೀರ್. ಈ ದುರ್ಘಟನೆಗಳು ಅಕ್ಬರನ ಸ್ವಾಸ್ಥ್ಯ ಹದಗೆಡುವಂತೆ ಮಾಡಿ ಕೊನೆಗೆ ಆಗ್ರಾದಲ್ಲಿ ಮಡಿದನು. ಆಗ್ರಾದ ಸಮೀಪ ಸಿಕಂದ್ರಾ ಎಂಬ ಸ್ಥಳದಲ್ಲಿ ಅಕ್ಬರನ ಸಮಾಧಿಯಿದೆ. ಮಾಧ್ಯಮಗಳಲ್ಲಿ ಅಕ್ಬರ್ "ಮುಘಲ್-ಎ-ಆಝಮ್" ಹಿಂದಿ ಚಲನಚಿತ್ರದಲ್ಲಿ ಪೃಥ್ವಿರಾಜ್ ಕಪೂರ್ ಅಕ್ಬರನ ಪಾತ್ರದಲ್ಲಿ. ಝೀ ಟಿವಿಯಲ್ಲಿ ಅಕ್ಬರ್-ಬೀರಬಲ್ ಹಿಂದಿ ಭಾಷೆಯ ಧಾರಾವಾಹಿ ೧೯೯೦ರ ದಶಕದಲ್ಲಿ ಪ್ರಸಾರ. ಸಂಜಯ್ ಖಾನ್ ನಿರ್ದೇಶನದಲ್ಲಿ ಅಕ್ಬರ್ ದಿ ಗ್ರೇಟ್ ಹೆಸರಿನ ಧಾರಾವಾಹಿ ದೂರದರ್ಶನದಲ್ಲಿ ೧೯೯೦ರ ದಶಕದಲ್ಲಿ ಪ್ರಸಾರ. ಅಕ್ಬರ್-ಜೋಧಾ ಹೆಸರಿನಲ್ಲಿ ಅಶುತೋಷ್ ಗೊವಾರಿಕರ್ ಚಲನಚಿತ್ರವನ್ನು ತಯಾರಿಸುತ್ತಿದ್ದಾರೆ. ಅಮರ್ತ್ಯ ಸೇನ್ ತಮ್ಮ ಪುಸ್ತಕ ದಿ ಆರ್ಗ್ಯುಮೆಂಟೇಟಿವ್ ಇಂಡಿಯನ್ (ವಿತಂಡವಾದಿ ಭಾರತೀಯ)ದಲ್ಲಿ ಅಕ್ಬರನನ್ನು ಪ್ರಮುಖ ಉದಾಹರಣೆಯನ್ನಾಗಿ ಕೊಡುತ್ತಾರೆ. ಇವನ್ನೂ ನೋಡಿ ಮೊಘಲ್ ಸಾಮ್ರಾಜ್ಯ ಅಕ್ಬರ್ ನಾಮಾ ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ ಅಕ್ಬರ್ ಕುರಿತಾದ ಪುಟ:ಕೆಳಗೆ ಕೊಂಡಿ ಇದೆ. ಚಕ್ರವರ್ತಿ ಅಕ್ಬರ್‌ ಪತ್ನಿ ಜೋಧಾಬಾಯಿ ಪೋರ್ಚುಗೀಸ್‌ ಮಹಿಳೆ, ರಜಪೂತ ರಾಣಿಯಲ್ಲ!;ಏಜೆನ್ಸಿಸ್‌;4 Apr, 2017 ಟಿಪ್ಪಣಿ ಉಲ್ಲೇಖಗಳು ಅಬುಲ್ ಫಝಲ್ ನ ಅಕ್ಬರ್ ನಾಮಾ ಸಂಪಾದಕ ಮೊಹಮ್ಮದ್ ಸಾದಿಕ್ ಅಲಿ (ಕಾನ್ಪುರ-ಲಖ್ನೋ: ನವಲ್ ಕಿಶೋರ್) ೧೮೮೧-೩ (ಪರ್ಶಿಯನ್ ಭಾಷೆ) ಅಬುಲ್ ಫಝಲ್ ನ ಅಕ್ಬರ್ ನಾಮಾ ಸಂಪಾದಕ ಮೌಲ್ವಿ ಅಬ್ದಲ್ ರಹೀಂ. (ಕಲ್ಕತ್ತಾ: ಏಷ್ಯಾಟಿಕ್ ಸೊಸೈಟಿ ಆಫ್ ಬಂಗಾಳ (ಪರ್ಶಿಯನ್ ಭಾಷೆ) ಹೆನ್ರಿ ಬೆವರಿಜ್ (ಅನು.) ಅಬುಲ್ ಫಝಲನ ಅಕ್ಬರ್ ನಾಮಾ (ಕಲ್ಕತ್ತಾ: ಏಷ್ಯಾಟಿಕ್ ಸೊಸೈಟಿ ಆಫ್ ಬಂಗಾಳ) ೧೮೯೭ ಹಾಜಿ ಮೊಹಮ್ಮದನ ಆರಿಫ್ ಕಂದಹಾರಿ ತಾರಿಖ್-ಇ-ಕಂದಹಾರಿ ಸಂಪಾದಕ ಹಾಜಿ ಮೊಯಿನುದ್ದಿನ್ ನಡವಿ, ಡಾ. ಅಝರ್ ಅಲಿ ದಿಹಲವಿ ಮತ್ತು ಇಂತಿಯಾಜ್ ಅಲಿ ಅರ್ಷಿ (ರಾಮ್ಪುರ: ರಝಾ ಲೈಬ್ರರಿ) ೧೯೬೨ (ಪರ್ಶಿಯನ್ ಭಾಷೆ) ಹೊರಗಿನ ಸಂಪರ್ಕಗಳು ಅಕ್ಬರ್ ಅಕ್ಬರನ ಆಳ್ವಿಕೆ ಅಕ್ಬರ್ ಮುಘಲ್ ದೊರೆ ಅಕ್ಬರನ ಜೀವನಚರಿತ್ರೆ ಮೊಘಲ್ ಸಾಮ್ರಾಜ್ಯ ೧೫೪೨ ಜನನ ೧೬೦೫ ನಿಧನ ಭಾರತೀಯ ಇತಿಹಾಸದ ಪ್ರಮುಖರು ಅರಸರು ಭಾರತದ ಇತಿಹಾಸ
2412
https://kn.wikipedia.org/wiki/%E0%B2%9C%E0%B2%B9%E0%B2%BE%E0%B2%82%E0%B2%97%E0%B3%80%E0%B2%B0%E0%B3%8D
ಜಹಾಂಗೀರ್
ಜಹಾಂಗೀರ್'ಭಾರತದ ನಾಲ್ಕನೆಯ ಮೊಘಲ್ ಚಕ್ರವರ್ತಿ. ಷಹಜಹಾನ್ನ ತಂದೆ.ಇವನ ಮೂಲ ಹೆಸರು ಮಿರ್ಜಾ ನೂರ್ ಉದ್ದೀನ್ ಬೇಗ್ ಮೊಹಮ್ಮದ್‍ಖಾನ್ ಸಲೀಂ ಎಂದು. ಮೊಘಲ್ ವಂಶದ ಒಬ್ಬ ಚಕ್ರವರ್ತಿ. ಅಕ್ಬರನ ಮಗ. ಜನನ 1569ರಲ್ಲಿ ರಜಪೂತ ತಾಯಿಗೆ ಜನಿಸಿದ. ಚಕ್ರವರ್ತಿಯಾಗುವ ಮುನ್ನ ಸಲೀಮ್ ಎಂಬುದು ಇವನ ಹೆಸರು. ಪಟ್ಟಾಭಿಷೇಕದ ಸಮಯದಲ್ಲಿ ನೂರುದ್ದೀನ್ ಮಹಮ್ಮದ್ ಜಹಾಂಗೀರ್ ಪಾದಷಾ ಘಾಜಿûೀ ಎಂಬ ಬಿರುದನ್ನು ಧರಿಸಿದ. ರಾಜ್ಯಭಾರ ತಂದೆ ಬದುಕಿದ್ದಾಗಲೇ, 1601-1604ರಲ್ಲಿ, ಜಹಾಂಗೀರ್ ಅವನ ವಿರುದ್ಧ ದಂಗೆ ಎದ್ದಿದ್ದರೂ ತಂದೆ ಇವನನ್ನು ಕ್ಷಮಿಸಿದ್ದ. 1605ರ ಅಕ್ಟೋಬರಿನಲ್ಲಿ ಅಕ್ಬರ್ ನಿಧನ ಹೊಂದಿದ ಒಂದು ವಾರದ ಅನಂತರ ಸಿಂಹಾಸನಾರೂಢನಾದ. ಇಸ್ಲಾಂ ಮತವನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಮಾಡಿ ಇವನು ರಾಜ್ಯಭಾರವನ್ನಾರಂಭಿಸಿದನಾದರೂ ತಂದೆಯ ಉದಾರ ದೃಷ್ಟಿಯನ್ನು ಸ್ವಲ್ಪಮಟ್ಟಿಗೆ ಇವನೂ ಪಡೆದಿದ್ದ. ಆಳ್ವಿಕೆಯ ಆರಂಭದಲ್ಲೆ ಇವನು ಮಗ ಖುಸ್ರುವಿನ ದಂಗೆಯನ್ನು ಎದುರಿಸಬೇಕಾಯಿತು. ಅಕ್ಟರನ ಅನಂತರ ತಾನೇ ರಾಜ್ಯವಾಳಬೇಕೆಂಬುದು ಅವನ ಆಕಾಂಕ್ಷೆಯಾಗಿತ್ತು. ಆಗಲೇ ಅವನು ದಂಗೆ ಎದ್ದಿದ್ದ. ಈತ ಪುನಃ ತಂದೆಯ ವಿರುದ್ಧ ಅವನು ದಂಗೆ ಎದ್ದು ಪಂಜಾಬಿಗೆ ಓಡಿಹೋಗಿ ಲಾಹೋರನ್ನು ವಶಪಡಿಸಿಕೊಂಡ. ಆದರೆ ಜಹಾಂಗೀರ್ ಆತನನ್ನು ಸೋಲಿಸಿ ಸೆರೆಹಿಡಿದು, ಆತನ ಅನುಯಾಯಿಗಳಿಗೆ ಮರಣದಂಡನೆ ವಿಧಿಸಿದ. ಖುಸ್ರು 1622ರಲ್ಲಿ ಕಾರಾಗೃಹದಲ್ಲೇ ನಿಧನ ಹೊಂದಿದ. ಮಗನ ವಿರುದ್ಧ ನಡೆಸಿದ ಕಾರ್ಯಾಚರಣೆಗಳ ಅಂಗವಾಗಿ ಸಿಕ್ಖರ ಐದನೆಯ ಗುರು ಅರ್ಜುನನನ್ನು ಜಹಾಂಗೀರ್ ಗಲ್ಲಿಗೇರಿಸಿದಾಗ ಸಿಖ್ ಜನತೆ ಜಹಾಂಗೀರನ ವಿರುದ್ಧ ದಂಗೆಯೇಳುವ ಪರಿಸ್ಥಿತಿ ಉಂಟಾಯಿತು. ಅಕ್ಬರನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯಕ್ಕೆ ಸೇರ್ಪಡೆಯಾಗಿದ್ದ ಬಂಗಾಲದಲ್ಲಿ ಆಫ್ಘನರು ಪುನಃ ದಂಗೆ ಎದ್ದರು. ಉಸ್ಮಾನ್‍ಖಾನ್ ದಂಗೆಕೋರರ ನೇತೃತ್ವವನ್ನು ವಹಿಸಿ, ಪ್ರಾಂತ್ಯಾಧಿಕಾರಿಯಾಗಿದ್ದ ಇಸ್ಲಾಮ್ ಖಾನನನ್ನು ಎದುರಿಸಿದ. ಆದರೆ ಇಸ್ಲಾಮ್‍ಖಾನ ಉಸ್ಮಾನನನ್ನು ಸೋಲಿಸಿ ದಂಗೆಯನ್ನು ಅಡಗಿಸಿದ. ತಲೆಗೆ ತಾಗಿದ ಪೆಟ್ಟೊಂದರಿಂದ ಉಸ್ಮಾನ್ ಪ್ರಾಣ ಬಿಟ್ಟ. ಇವನ ಮರಣದ ಬಳಿಕ ಬಂಗಾಲದ ಆಫ್ಘನರೊಡನೆ ಸಂಬಂಧ ಹೆಚ್ಚು ಸೌಹಾರ್ದಪೂರಿತವಾಯಿತು. ದಖನ್ನಿನ ಸುಲ್ತಾನರ ವಿಚಾರದಲ್ಲಿ ಜಹಾಂಗೀರ್ ತಂದೆಯ ನೀತಿಯನ್ನೇ ಅನುಸರಿಸಿ ಅಹಮದ್ ನಗರದೊಡನೆ ದೀರ್ಘ ಕಾಲ ಕಾದಿದ. ಯುವರಾಜ ಖುರ್ರಮನನ್ನು ದಕ್ಷಿಣದ ದಂಡೆಯಾತ್ರೆಗೆ ನೇಮಿಸಿದ. ಅವನು ಅಹಮದ್ ನಗರದ ಕೋಟೆಯನ್ನು ಹಿಡಿದರೂ ಅದರಿಂದ ದೊರಕಿದ ಯಶಸ್ಸು ಕೇವಲ ತಾತ್ಕಾಲಿಕವಾದ್ದಾಗಿತ್ತು. ಆದರೆ ಈ ವಿಜಯದಿಂದಾಗಿ ಖುರ್ರಮನಿಗೆ ಷಾಹಜಹಾನನೆಂಬ ಬಿರುದು ಲಭಿಸಿತು. ಮೇವಾಡದ ಮೇಲೆ ವಿಜಯ ಸ್ಥಾಪಿಸಿದ್ದು ಜಹಾಂಗೀರನ ಇನ್ನೊಂದು ಸಾಧನೆ. ಖುರ್ರಮ್ ಅದರ ಮೇಲೆ ದಂಡೆತ್ತಿಹೋಗಿ ಜಹಾಂಗೀರನ ಸಾರ್ವಭೌಮತ್ವವನ್ನು ರಾಣಾ ಅಮರಸಿಂಹ ಅಂಗೀಕರಿಸುವಂತೆ ಮಾಡಿದ. ಮೂಲ ತೈಮೂರ್ ಮನೆತನದ ಅರಸರಿಗೆ ಸೇರಿದ್ದ ಟ್ರಾನ್ಸ್ ಆಕ್ಸೀಯಾನ ರಾಜ್ಯವನ್ನು ಆಕ್ರಮಿಸುವುದು ಇವನ ಹೆಬ್ಬಯಕೆಯಾಗಿತ್ತು. ಆದರೆ ಅದಕ್ಕೆ ಬೇಕಾದ ಸಾಮರ್ಥ್ಯ ಮಾತ್ರ ಇವನಿಗೆ ಇರಲಿಲ್ಲ. ರಾಜ್ಯದ ಆಂತರಿಕ ದಂಗೆಗಳನ್ನು ಅಡಗಿಸುವುದರಲ್ಲೇ ಈತ ಬಹಳ ಕಾಲವನ್ನೂ ಶಕ್ತಿಸಂಪತ್ತುಗಳನ್ನೂ ವ್ಯಯಿಸಿದ. ಇದರ ಪ್ರಯೋಜನ ಪಡೆದ ಪರ್ಷಿಯದ ದೊರೆ ಷಾ ಅಬ್ಬಾಸನು ಕಾಂದಾಹಾರ್ ಪ್ರಾಂತ್ಯವನ್ನು ಮುತ್ತಿವಶಪಡಿಸಿಕೊಂಡ. ಅದನ್ನು ಮರಳಿ ಪಡೆಯಲು ಜಹಾಂಗೀರ್ ತನ್ನ ಮಗ ಷಾಹಜಹಾನನಿಗೆ ಆಜ್ಞೆ ಇತ್ತ. ಆದರೆ ಅರಮನೆಯಲ್ಲಿಯ ರಾಜಕೀಯ ಚಟುವಟಿಕೆಗಳಿಂದ ಹೊರಗಿರಲು ಇಚ್ಛಿಸದ ಷಾಹಜಹಾನ್ ತಂದೆಯ ಅಣತಿಯನ್ನು ಅಲ್ಲಗಳೆದ. ನೂರ್ ಜಹಾನ್ ಇವನ ಜೀವನದ ಅತ್ಯಂತ ಮಹತ್ತ್ವಪೂರ್ಣವಾದ ಘಟನೆಯೆಂದರೆ ಇವನು ನೂರ್ ಜಹಾನಳನ್ನು ಮದುವೆಯಾದದ್ದು (1611). ಪರ್ಷಿಯದಿಂದ ಬಂದಿದ್ದ ಮಿರ್ಜಾ ಘಯಾಸ್ ಬೇಗನ ಮಗಳಾದ ಮೆಹರುನ್ನೀಸಾ 17ನೆಯ ವಯಸ್ಸಿನಲ್ಲಿ ಅಲಿಕುಲಿ ಬೇಗನನ್ನು ಮದುವೆಯಾಗಿದ್ದಳು. ಷೇರ್ ಆಪ್ಘನ್ ಎಂಬ ಬಿರುದನ್ನು ಪಡೆದಿದ್ದ ಈತ ಬಂಗಾಲದ ಬದ್ರ್ವಾನನ್ನು ಜಹಾಂಗೀರನಿಂದ ಜಾಗೀರಾಗಿ ಪಡೆದಿದ್ದ. ಆದರೆ ಅವಿಧೇಯನಾಗಿ ವರ್ತಿಸಿದ ಈತನನ್ನು ಜಹಾಂಗೀರನ ಆದೇಶದಂತೆ ಬಂಗಾಲದ ಪ್ರಾಂತ್ಯಾಧಿಕಾರಿ ಎದುರಿಸಿದ. ಪ್ರಾಂತ್ಯಾಧಿಕಾರಿಯನ್ನೇ ಕೊಂದ ಷೇರ್ ಆಪ್ಘನನನ್ನು 1607ರಲ್ಲಿ ಸೈನಿಕರು ಸೆರೆಹಿಡಿದು ಕೊಂದರು. ಮೆಹರುನ್ನೀಸಳನ್ನು ರಾಜಧಾನಿಗೆ ಒಯ್ಯಲಾಯಿತು. ಅರಮನೆಯಲ್ಲಿ ಊಳಿಗಕ್ಕೆ ಸೇರಿದ್ದ ಇವಳ ಸೌಂದರ್ಯಕ್ಕೆ ಮರುಳಾಗಿ ಜಹಾಂಗೀರ್ ಇವಳನ್ನು ಮದುವೆಯಾಗಿ ನೂರ್ ಮಹಲ್ (ಅರಮನೆಯ ಬೆಳಕು) ಎಂದು ಕರೆದ. ನೂರ್ ಜಹಾನ್ (ವಿಶ್ವದ ಬೆಳಕು) ಎಂಬುದ ಅನಂತರ ಇವಳಿಗೆ ಬಂದ ಹೆಸರು. ವ್ಯವಹಾರಜ್ಞಾನ, ಬುದ್ಧಿಕುಶಲತೆ ಮತ್ತು ಮಹತ್ತ್ವಾಕಾಂಕ್ಷೆಗಳಿಂದ ಕೂಡಿದ್ದ ಈಕೆ ಸಾಮ್ರಾಟನನ್ನು ಮರುಳುಗೊಳಿಸಿ, ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಎಲ್ಲವನ್ನೂ ನಿಯಂತ್ರಿಸತೊಡಗಿದಳು. ರಾಜ್ಯಭಾರದಲ್ಲಿ ಜಹಾಂಗೀರನ ಆಸಕ್ತಿ ಕ್ರಮೇಣ ಕಡಿಮೆಯಾಯಿತು. ಮದ್ಯಪಾನ ಮಾಂಸಾಹಾರಗಳಲ್ಲಿ ಕಾಲಕಳೆಯುತ್ತಿದ್ದ ಜಹಾಂಗೀರನನ್ನು ಮೂಲೆಗೆ ತಳ್ಳಿ ನೂರ್‍ಜಹಾನಳೇ ಸರ್ವಾಧಿಕಾರಿಣಿಯಾದಳು. ಅವಳ ಹೆಸರನ್ನು ಟಂಕಿಸಿದ ನಾಣ್ಯಗಳೂ ಚಲಾವಣೆಗೆ ಬಂದುವು. ಮಗನ ದಂಗೆ ಜಹಾಂಗೀರನ ಮೂರನೆಯ ಮಗ ಖುರ್ರಂ (ಷಾಹಜಹಾನ್) 1622ರಲ್ಲಿ ತಂದೆಯ ವಿರುದ್ಧ ದಂಗೆಯೆದ್ದ. ತನ್ನ ಸೇನಾಧಿಕಾರಿ ಮೊಹಬ್ಬತ್ ಖಾನನ ನೆರವಿನಿಂದ ಅವನನ್ನು ಅಡಗಿಸಲಾಯಿತು. ಆದರೆ ಮರುವರ್ಷ ಮೊಹಬ್ಬತ್‍ಖಾನನೇ ದಂಗೆಯೆದ್ದ. ಜಹಾಂಗೀರನೂ ಸ್ವಲ್ಪಕಾಲ ಸೆರೆಯಾಗಿದ್ದ. ಆದರೆ ನೂರಜಹಾನಳ ಯುಕ್ತಿಯಿಂದ ಜಹಾಂಗೀರ್ ಬಿಡುಗಡೆ ಹೊಂದಿದ. ಮೊಹಬ್ಬತ್‍ಖಾನ್ ಮಣಿಯಬೇಕಾಯಿತು. ಜಹಾಂಗೀರನ ಎರಡನೆಯ ಮಗ ಪರ್ವೀಜ್ 1626ರಲ್ಲಿ ತೀರಿಕೊಂಡ. ಮರಣ 1628ರಲ್ಲಿ ಜಹಾಂಗೀರ್ ಮರಣ ಹೊಂದಿದ. ಆಡಳಿತ ಜಹಾಂಗೀರ್ ಕಲಾಪ್ರಿಯ. ಅವನ ಆಶ್ರಯ ಪಡೆದ ಇಬ್ಬರು ಮುಸ್ಲಿಂ ಕಲಾವಿದರು ಅಬುಲ್ ಹಸನ್ ಮತ್ತು ಮನ್ಸೂರ್. ನ್ಯಾಯ ಪರಿಪಾಲನೆಯಲ್ಲಿ ಜಹಾಂಗೀರನಿಗೆ ವಿಶೇಷವಾದ ಆಸಕ್ತಿಯಿತ್ತು. ಪ್ರಜೆಗಳ ಕುಂದುಕೊರತೆಗಳನ್ನು ಸ್ವತಃ ಅರಿತು ನ್ಯಾಯದಾನ ಮಾಡುವ ಸಲುವಾಗಿ ಅವನು ಯಮುನಾನದೀ ತೀರದಲ್ಲಿ ನಿಲ್ಲಿಸಲಾದ ಒಂದು ಕಂಬಕ್ಕೂ ಆಗ್ರದ ಕೋಟೆಯೊಳಗಿನ ಷಾಬುರ್ಜಿ ಕಟ್ಟಡಕ್ಕೂ ನಡುವೆ ಒಂದು ನ್ಯಾಯಗಂಟೆಯನ್ನು ಸ್ಥಾಪಿಸಿದ. ಹನ್ನೆರಡು ವಿಧಿಗಳನ್ನು ನಿರೂಪಿಸಿ, ಎಲ್ಲರೂ ಅವನ್ನು ಪಾಲಿಸಬೇಕೆಂದು ಆಜ್ಞೆ ಮಾಡಿದ. ಮದ್ಯ ಮುಂತಾದ ಮಾದಕ ದ್ರವ್ಯಗಳ ಮಾರಾಟ, ಜಕಾತ್ ಎಂಬ ತೆರಿಗೆಯ ವಸೂಲಿ, ಅಪರಾಧಿಗಳ ಕಿವಿ-ಮೂಗುಗಳನ್ನು ಕೊಯ್ದು ಅವರ ಮನೆಗಳನ್ನು ವಶಪಡಿಸಿಕೊಳ್ಳುವುದು, ನಿಯಮಿತ ದಿನಗಳಲ್ಲಿ ಪ್ರಾಣಿವಧೆ, ಬಲವಂತವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು (ಘಸ್ಬಿ) -ಇವುಗಳನ್ನೆಲ್ಲ ನಿಷೇಧಿಸಿದ. ಹಾದಿಗಳ್ಳತನ ಮತ್ತು ಸುಲಿಗೆಗಳಾಗದಂತೆ ವ್ಯವಸ್ಥೆ ಮಾಡಿ, ಪ್ರಜೆಗಳಿಗಾಗಿ ಆಸ್ಪತ್ರೆಗಳನ್ನು ಕಟ್ಟಿಸಿ ವೈದ್ಯರನ್ನು ನೇಮಿಸಿದ. ಧಾರ್ಮಿಕ ದತ್ತಿಗಳನ್ನು, ಮನ್‍ಸಬ್ ಮತ್ತು ಜಾಗೀರ್‍ಗಳನ್ನು ಖಾಯಂಗೊಳಿಸಿದ. ಆದರೆ ಇವಾವುವೂ ನಿರೀಕ್ಷಿತ ಫಲಗಳನ್ನು ನೀಡಲಿಲ್ಲ. ಕಲಾಪ್ರಿಯ ಪ್ರಕೃತಿಸೌಂದರ್ಯೋಪಾಸಕನೂ ಕಲಾಭಿಜ್ಞನೂ ಆಗಿದ್ದ ಜಹಾಂಗೀರನಲ್ಲಿ ಅನೇಕ ಗುಣಗಳು ಮನೆಮಾಡಿಕೊಂಡಿದ್ದುವು. ದಯೆ ಮತ್ತು ಕ್ರೌರ್ಯ, ಸಂಸ್ಕøತಿ ಮತ್ತು ಪಾಶವೀಮನೋಭಾವ, ಕರುಣೆ ಮತ್ತು ಕೋಪಗಳು ಇವನಲ್ಲಿ ಸಂದರ್ಭೋಚಿತವಾಗಿ ಪ್ರಕಟಗೊಳ್ಳುತ್ತಿದ್ದುವು. ಉದ್ಯಾನಗಳೆಂದರೆ ಈತನಿಗೆ ಅಭಿಮಾನ. ಕಾಶ್ಮೀರದ ಷಾಲಿಮಾರ್ ಉದ್ಯಾನ ಇವನ ಆಸಕ್ತಿಯ ಫಲ. ಚಿತ್ರಕಲೆಗೆ ವಿಶೇಷ ಪ್ರೋತ್ಸಾಹ ನೀಡಿದ ಈತ ಧಾರ್ಮಿಕ ವಿಷಯಗಳಲ್ಲಿ ನಿಷ್ಠೆ ತೋರಿಸುತ್ತಿದ್ದ. ಈತ ತನ್ನ ಆತ್ಮಕಥೆಯನ್ನು ಬರೆದಿಟ್ಟಿದ್ದಾನೆ. ಮೊಘಲ್ ಅರಸರಲ್ಲಿ ಇವನದು ಒಂದು ವಿಶಿಷ್ಟವಾದ ಸ್ಥಾನ. ಬಾಹ್ಯ ಸಂಪರ್ಕಗಳು Jehangir and Shah Jehan The World Conqueror: Jahangir Tūzuk-i-Jahangīrī Or Memoirs of Jahāngīr Jains and the Mughals ಭಾರತೀಯ ಇತಿಹಾಸದ ಪ್ರಮುಖರು
2413
https://kn.wikipedia.org/wiki/%E0%B2%B7%E0%B2%B9%E0%B2%9C%E0%B2%B9%E0%B2%BE%E0%B2%A8%E0%B3%8D
ಷಹಜಹಾನ್
ಭಾರತದ ಮೊಘಲ್ ಚಕ್ರವರ್ತಿ. ಔರಂಗ್ಜೇಬ್ನ ತಂದೆ. ತನ್ನ ಮಡದಿ ಮುಂತಾಜ್ ಮಹಲ್ ನೆನಪಿನಲ್ಲಿ ಕಟ್ಟಿಸಿರುವ ಸ್ಮಾರಕ ತಾಜ್ ಮಹಲ್ ವಿಶ್ವ ವಿಖ್ಯಾತ ಸ್ಮಾರಕವಾಗಿದೆ. ಭಾರತೀಯ ಇತಿಹಾಸದ ಪ್ರಮುಖರು ವಿಲೀನಗೊಳಿಸಬೇಕಿರುವ ಲೇಖನಗಳು
2414
https://kn.wikipedia.org/wiki/%E0%B2%94%E0%B2%B0%E0%B2%82%E0%B2%97%E0%B2%9C%E0%B3%87%E0%B2%AC%E0%B3%8D
ಔರಂಗಜೇಬ್
ಔರಂಗಜೇಬ್(3 ನವೆಂಬರ್ 1618 – 3 ಮಾರ್ಚ್ 1707), ಭಾರತದ ಆರನೆಯ ಮೊಘಲ್ ಚಕ್ರವರ್ತಿ. ಷಹಜಹಾನನ (ನೋಡಿ- ಷಾಜಹಾನ್) ಮೂರನೆಯ ಮಗ. ಇವನು ೧೬೫೯ರಿಂದ ೧೭೦೭ ರವರೆಗೆ ೪೯ ವರ್ಷಗಳ ಕಾಲ ಆಳ್ವಿಕೆ ಮಾಡಿದನು. ಇವನು ಒಬ್ಬ ವಿಸ್ತರಣಾವಾದಿಯಾಗಿದ್ದು ಇವನ ಕಾಲದಲ್ಲಿ ಮೊಘಲ ಸಾಮ್ರಾಜ್ಯವು ತನ್ನ ಅತ್ಯಂತ ವಿಸ್ತಾರವಾಗಿತ್ತು.ಇವನು ಒಬ್ಬ ಕಟ್ಟಾ ಮುಸ್ಲಿಮನಾಗಿದ್ದನು. ಅಕ್ಬರನ ಕಾಲದಲ್ಲಿದ್ದ ಜಾತ್ಯಾತೀತ ತತ್ವಗಳನ್ನು ಬದಿಗೆ ತಳ್ಳಿದ್ದನು.ಇವನ ಆಡಳಿತದಲ್ಲಿ ಧರ್ಮ ಅಸಹಿಷ್ಣುತೆಯು ತಾಂಡವವಾಡುತ್ತಿತ್ತು. ಇವನು ಒಬ್ಬ ಉತ್ತಮ ಆಡಳಿತಗಾರನಾಗಿದ್ದು ಇವನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯವು ತನ್ನ ಉಚ್ಚ್ರಾಯ ಸ್ಥಿತಿಯನ್ನು ಮುಟ್ಟಿತ್ತು. ಇವನ ನಿಧನಾನಂತರ ಮೊಘಲ್ ಸಂತತಿ ವೇಗವಾಗಿ ತನ್ನ ಅವನತಿಯನ್ನು ಕಂಡಿತು. ಬಾಲ್ಯ 1618ರ ನವೆಂಬರ್ 23 ರಂದು ಗುಜರಾತಿನ ದೋಹಾದಿನಲ್ಲಿ ಜನಿಸಿದ. ತಾಯಿ ಮಮ್ತಾಜ್ ಮಹಲ್. ಚಿಕ್ಕಂದಿನಲ್ಲಿ ಈತ ಒಳ್ಳೆಯ ಶಿಕ್ಷಣ ಪಡೆದ. ಅರಬ್ಬೀ ಮತ್ತು ಪಾರಸೀ ಭಾಷೆಯನ್ನು ಚೆನ್ನಾಗಿ ಅರಿತ. ಈತನ ತಾಯಿನುಡಿ ಉರ್ದು. ಹಿಂದಿ ಮತ್ತು ತುರ್ಕಿ ಭಾಷೆಗಳಲ್ಲಿ ಮಾತಾಡಬಲ್ಲವನೂ ಆಗಿದ್ದ. ರಾಜಕೀಯ ಜೀವನ 1636ರಲ್ಲಿ ದಖನ್ ಪ್ರಾಂತ್ಯಗಳ ವೈಸ್ರಾಯಿಯಾಗಿ ನೇಮಕವಾದಾಗಲೇ ಈತನ ಯೋಗ್ಯತೆ ಪ್ರಥಮವಾಗಿ ಪ್ರಕಾಶಕ್ಕೆ ಬಂತು. ಆದರೆ ಅಣ್ಣನಾದ ದಾರಾಗೂ ಈತನಿಗೂ ಮನಸ್ತಾಪ ಬಂದುದರಿಂದ ಔರಂಗ್ಜೇಬ್ ಈ ಹುದ್ದೆಗೆ ರಾಜೀನಾಮೆ ಕೊಟ್ಟ. ಮರುವರ್ಷ ಇವನಿಗಾಗಿ ಗುಜರಾತಿನ ರಾಜ್ಯಪಾಲ ಹುದ್ದೆ ಕಾದಿತ್ತು. 1647ರಲ್ಲಿ ಇವನನ್ನು ಬಲ್ಜ್‌ ಮತ್ತು ಬಡಕ್ಷಾನ್ ಪ್ರದೇಶಕ್ಕೆ ಕಳಿಸಲಾಯಿತು. ಮಧ್ಯ ಏಷ್ಯದಲ್ಲಿ ಮೊಗಲರಿಗೆ ಹಿಂದೆ ಸೇರಿದ್ದ ಪ್ರಾಂತ್ಯಗಳನ್ನು ಗೆಲ್ಲಬೇಕೆಂದು ತಂದೆ ಷಾಜಹಾನನ ಆಕಾಂಕ್ಷೆಯಾಗಿತ್ತು. ಆದರೆ ಈ ಯುದ್ಧಗಳು ನಿರ್ಣಾಯಕವಾಗಿ ಪರಿಣಮಿಸಲಿಲ್ಲ. ಖಜಾನೆ ಬರಿದಾಯಿತು. ಔರಂಗಜೇಬನ ಶೌರ್ಯಕೌಶಲಗಳು ಅಸಾಧಾರಣವಾದುವಾಗಿದ್ದರೂ ಆ ಚಳಿನಾಡಿನಲ್ಲಿ ಹೋರಾಟ ಮುಂದುವರಿಸುವುದು ಸೂಕ್ತವೆನಿಸಲಿಲ್ಲವಾದ್ದರಿಂದ ತಂದೆ ಇವನನ್ನು ಹಿಂದಕ್ಕೆ ಕರೆಯಿಸಿಕೊಂಡ. 1648ರಲ್ಲಿ ಈತ ಮುಲ್ತಾನಿನ ರಾಜ್ಯಪಾಲನಾದ. ಮರುವರ್ಷ ಸಿಂಧ್ ಕೂಡ ಇವನ ಆಡಳಿತಕ್ಕೆ ಒಳಪಟ್ಟಿತು. ಪರ್ಷಿಯನ್ನರು ಏರಿಬಂದಿದ್ದ ಕಾಂದಹಾರಿನ ವಿಮೋಚನೆಗಾಗಿ 1649ರಲ್ಲಿ ಇವನನ್ನು ಸೈನ್ಯದೊಂದಿಗೆ ಕಳಿಸಲಾಯಿತು. ಆದರೆ ಔರಂಗ್ಜೇóಬ್ ಹೋಗುವ ವೇಳೆಗೆ ಅದು ಅವರಿಗೆ ಅಧೀನವಾಗಿತ್ತು. ಪರ್ಷಿಯನ್ನರನ್ನು ಜಗ್ಗಿಸಲು ಇವನ ಸೈನ್ಯದಿಂದಾಗಲಿಲ್ಲ. ಮೂರು ವರ್ಷಗಳ ಅನಂತರ ಮತ್ತೆ ನಡೆಸಿದ ಯತ್ನವೂ ವಿಫಲವಾಯಿತು. 1652ರಲ್ಲಿ ಈತ ಮತ್ತೆ ದಖನ್ನಿನ ವೈಸ್ರಾಯಿಯಾದ. ಅಲ್ಲಿಯ ಆಡಳಿತವನ್ನು ಸುಧಾರಿಸಿ, ವರಮಾನ ಹೆಚ್ಚಿಸಿದ. ಗೋಲ್ಕಂಡ ಮತ್ತು ಬಿಜಾಪುರಗಳ ಮೇಲೆ ಕ್ರಮವಾಗಿ 1656 ಮತ್ತು 1657ರಲ್ಲಿ ದಂಡೆತ್ತಿಹೋದ. ಆದರೆ ಷಾಜಹಾನ್ ಅಡ್ಡಬಂದುದರಿಂದ ಈ ಆಕ್ರಮಣಗಳನ್ನು ಔರಂಗ್ಜೇóಬ್ ಮುಂದುವರಿಸಲಾಗಲಿಲ್ಲ. ಅಧಿಕಾರಕ್ಕಾಗಿ ಹೋರಾಟ 1657 ರಲೀ ಷಾಜಹಾನ್ ಕಾಯಿಲೆಯಿಂದ ಮಲಗಿದ. ತನ್ನ ಹಿರಿಯ ಮಗ ದಾರಾ ಷುಕೋ ಚಕ್ರವರ್ತಿಯಾಗಬೇಕೆಂಬುದು ಷಾಜಹಾನನ ಇಚ್ಛೆಯಾಗಿತ್ತು. ಆತ ತಂದೆಯೊಡನೆಯೇ ದೆಹಲಿಯಲ್ಲಿದ್ದ. ಎರಡನೆಯ ಮಗ ಷೂಜಾ ಬಂಗಾಲದಲ್ಲಿ ವೈಸ್ರಾಯಿಯಾಗಿದ್ದ. ಔರಂಗಜೇಬನ ತಮ್ಮ-ಷಾಜಹಾನನ ಕೊನೆಯ ಮಗ-ಮುರಾದ್ ಇದ್ದದ್ದು ಗುಜರಾತಿನಲ್ಲಿ ವೈಸ್ರಾಯಿಯಾಗಿ. ತಂದೆಯ ಜಡ್ಡಿನ ಸುದ್ದಿ ಬಂದೊಡನೆಯೇ ಷೂಜಾ ಬಂಗಾಳದ ಚಕ್ರವರ್ತಿಯೆಂದು ಸಾರಿಕೊಂಡ. ಮುರಾದನೂ ಷೂಜಾನ ಮಾರ್ಗವನ್ನೇ ಅನುಸರಿಸಿದ. ಈ ಸ್ಪರ್ಧೆಯಲ್ಲಿ ಔರಂಗ್ಜೇ಼ಬ್ ಹಿಂದೆ ಬೀಳಲಿಲ್ಲ. ಸಾಮ್ರಾಜ್ಯವನ್ನು ಎರಡು ಭಾಗ ಮಾಡಿ ತನಗೊಂದು ಪಾಲು ಕೊಡಬೇಕೆಂಬ ಷರತ್ತಿನ ಮೇಲೆ ಮುರಾದನಿಗೆ ಜೊತೆಯಾದ. ಇವರಿಬ್ಬರ ಸಂಯುಕ್ತ ಸೇನೆಗಳಿಗೂ ಷಾಜಹಾನನ ಸೇನೆಗೂ ನಡುವೆ ಯುದ್ಧಗಳು ನಡೆದುವು. ದಾರಾ ಷುಕೋ ಸೋತು ಆಗ್ರಕ್ಕೆ ಪಲಾಯನ ಮಾಡಿದ. ಔರಂಗಜೇಬ್ ಮುರಾದರ ಸೈನ್ಯಗಳು ಬೆನ್ನಟ್ಟಿ ನಡೆದು, ಆಗ್ರವನ್ನು ಮುತ್ತಿ ಗೆದ್ದುವು (1658ರ ಜೂನ್ 8). ಷಾಜಹಾನ್ ಆಮರಣಾಂತ ಬಂದಿಯಾದ. 1657ರಲ್ಲಿ ಗುಜರಾತಿನಲ್ಲಿ ತನ್ನ ದಿವಾನನ ಕೊಲೆ ಮಾಡಿಸಿದನೆಂಬ ಅಪವಾದವನ್ನು ಮುರಾದನ ಮೇಲೆ ಔರಂಗ್ಜೇóಬ್ ಹೊರಿಸಿ ಅವನನ್ನು ಮರಣಕ್ಕೆ ಗುರಿಪಡಿಸಿದ. ಈ ನಡುವೆ ದಾರಾನ ಮಗನಿಂದ ಹಿಂದೆಯೇ ಸೋತಿದ್ದ ಷೂಜಾ ಗರಿಗೂಡಿಸಿಕೊಳ್ಳುತ್ತಿದ್ದದ್ದನ್ನು ಅರಿತ ಔರಂಗ್ಜೇóಬ್ ಅವನ ವಿರುದ್ದವಾಗಿ ಖುದ್ಧಾಗಿ ಯುದ್ಧ ನಡೆಸಿದಾಗ ಷೂಜಾ ಸೋತ. ಓಡಿಹೋಗುತ್ತಿದ್ದ ಅವನನ್ನು ಔರಂಗ್ಜೇóಬನ ಸೈನ್ಯ ಬೆನ್ನಟ್ಟಿತು. ಆತ ದಖನ್ನಿಗೆ ಹೋಗಿ ಅಲ್ಲಿಂದ ಅರಕಾನಿಗೆ ಪಲಾಯನ ಮಾಡಿದ. ಅವನೂ ಅವನ ಸಂಸಾರದವರೂ ಅಲ್ಲಿ ನಾಶಹೊಂದಿದರು. ಇನ್ನುಳಿದಿದ್ದವ ದಾರಾ ಮಾತ್ರ. ಆಗ್ರದಿಂದ ಓಡಿಹೋಗಿದ್ದ ಅವನೊಂದಿಗೆ ಔರಂಗ್ಜೇóಬನ ಸೈನ್ಯ ಕಾದಿ ಅವನನ್ನು ಹಿಡಿತಂದಿತು. ದಾರಾಗೆ ಔರಂಗ್ಜೇóಬನಿಂದ ಆದ ಅವಮಾನ ಅಷ್ಟಿಷ್ಟಲ್ಲ. ಧರ್ಮಭ್ರಷ್ಟನೆಂಬ ಅಪವಾದದ ಮೇಲೆ ಅವನನ್ನು ವಿಚಾರಣೆಗೆ ಗುರಿಪಡಿಸಲಾಯಿತು. ತಪ್ಪು ಸಾಬೀತಾಯಿತು. 1659ರ ಆಗಸ್ಟ್‌ 30ರಂದು ಆತ ಮರಣದಂಡನೆಗೆ ಗುರಿಯಾದ. ಔರಂಗ್ಜೇóಬನ ಸೋದರರೆಲ್ಲ ನಿರ್ನಾಮವಾದ ಮೇಲೆ ಅವನಿಗೆ ನಿರಾತಂಕವಾಯಿತು. 1658ರ ಜುಲೈ 21ರಂದೇ ಷಾ ಜಹಾನ್ ಬಂಧನಕ್ಕೊಳಗಾದಾಗ-ಅನೌಪಚಾರಿತನಾಗಿ ಕಿರೀಟಧಾರಿಯಾಗಿದ್ದ ಔರಂಗ್ಜೇóಬನ ಕೈ ತಡೆಯುವವರು ಯಾರೂ ಇರಲಿಲ್ಲ. 1659ರ ಜೂನಿನಲ್ಲಿ ಆತ ಅಲಂಗೀರ್ (ವಿಶ್ವವಿಜೇತ) ಎಂಬ ಬಿರುದು ತಾಳಿ ಅಧಿಕೃತವಾಗಿ ಸಿಂಹಾಸನವನ್ನೇರಿ ದೀರ್ಘಕಾಲ ಆಳ್ವಿಕೆ ನಡೆಸಿದ. ಸಾಮ್ರಾಜ್ಯ ವಿಸ್ತರಣೆ ತನ್ನ ಹಿರಿಯರಂತೆ ಔರಂಗಜೇಬನೂ ಭಾರತದಲ್ಲಿ ಮೊಗಲ್ ಚಕ್ರಾಧಿಪತ್ಯವನ್ನು ವಿಸ್ತರಿಸಿದ. ಇವನ ಆಳ್ವಿಕೆಯ ಮೊದಲ ಭಾಗ (1658-81) ಉತ್ತರ ಭಾರತದಲ್ಲಿ ತನ್ನ ಅಧಿಕಾರವನ್ನು ಕ್ರೋಡೀಕರಿಸಿಕೊಳ್ಳುವುದಕ್ಕೇ ವಿನಿಯೋಗವಾಯಿತು. 1662ರಲ್ಲಿ ಪಶ್ಚಿಮ ಅಸ್ಸಾಂ ಇವನ ಅಧೀನವಾಯಿತು. ಔರಂಗ್ಜೇóಬ್ 1666ರಲ್ಲಿ ಚಿತ್ತಗಾಂಗನ್ನು ವಶಪಡಿಸಿಕೊಂಡ. ವಾಯವ್ಯಗಡಿನಾಡಿನಲ್ಲಿ ದಂಗೆಯೆದ್ದ (1667) ಆಫ್ಘನರನ್ನು 1675ರ ವೇಳೆಗೆ ಅಡಗಿಸಲಾಯಿತು. ಅನೇಕ ವಿದೇಶೀ ಮುಸ್ಲಿಂ ರಾಜ್ಯಗಳು ಇವನೊಂದಿಗೆ ರಾಯಭಾರ ಸಂಬಂಧ ಬೆಳೆಸಿದುವು. 1679ರಲ್ಲಿ ರಜಪುತರೊಂದಿಗೆ ಔರಂಗ್ಜೇಬ್ ಯುದ್ಧ ಹೂಡಿದ. 1681ರ ಮೇವಾಡದ ರಾಣನೊಂದಿಗೆ ಶಾಂತಿಯ ಒಪ್ಪಂದ ಮಾಡಿಕೊಳ್ಳಲಾಯಿತು. ಅನಂತರ ಔರಂಗ್ಜೇóಬನ ಗಮನ ದಕ್ಷಿಣದತ್ತ ತಿರುಗಿತು. 1685ರಲ್ಲಿ ಈತ ಬಿಜಾಪುರದ ಮುಸ್ಲಿಂ ಷಿಯ ರಾಜ್ಯಗಳನ್ನು ಗೆದ್ದುಕೊಂಡ. 1689ರಲ್ಲಿ ಗೋಲ್ಕಂಡ ಇವನ ಬಗಲಿಗೆ ಬಿತ್ತು. ಹೀಗೆ ಇವನ ಚಕ್ರಾಧಿಪತ್ಯ ಕೋರಮಂಡಲದಿಂದ ಚಿತ್ತಗಾಂಗಿನವರೆಗೂ ಉತ್ತರದಲ್ಲಿ ಹಿಂದೂಕುಷ್ವರೆಗೂ ಹಬ್ಬಿತಾದರೂ ದಖನ್ ಪ್ರದೇಶ ಇವನಿಗೆ ತೊಂದರೆ ಕೊಡುತ್ತಲೇ ಇತ್ತು. ಮರಾಠರನ್ನು ಅಡಗಿಸುವುದು ಸಾಧ್ಯವಾಗಲಿಲ್ಲ. 1689ರಲ್ಲಿ ಶಿವಾಜಿಯ ಮಗನಾದ ಶಂಭುಜಿಯನ್ನು ಹಿಡಿದು ಕೊಲ್ಲಲಾಯಿತು. ರಾಜಧಾನಿ ರಾಯಗಢವೂ ವಶವಾಯಿತು. ಶಿವಾಜಿಯ ಕಿರಿಯ ಮಗ ಸಾಹುವನ್ನು ಔರಂಗಜೇಬ್ ಸೆರೆಯಲ್ಲಿಟ್ಟ. ತಂಜಾವೂರು ತಿರುಚಿನಾಪಳ್ಳಿಗಳ ಹಿಂದೂ ರಾಜರು ಔರಂಗಜೇಬನ ಸಾಮಂತರಾದರು. ಅವನತಿಯ ಹಾದಿ ಆದರೂ ಔರಂಗ್ಜೇóಬನಿಗೆ ನೆಮ್ಮದಿ ದೊರಕಲಿಲ್ಲ. ಇವನ ಮಹಾ ಸಾಮ್ರಾಜ್ಯದ ಅತಿಯಾದ ವಿಸ್ತೀರ್ಣವೇ ಒಂದು ಹೊರೆಯಾಯಿತು. ಇದರ ಮೇಲೆ ಹತೋಟಿ ಇಟ್ಟುಕೊಳ್ಳುವುದು ಸುಲಭವಾಗಲಿಲ್ಲ. ಒಂದು ಕೇಂದ್ರದಿಂದ ಒಬ್ಬನ ನಿರ್ವಹಣೆಗೆ ಇದನ್ನೆಲ್ಲ ಒಳಪಡಿಸುವುದು ಅಸಾಧ್ಯವೇ ಎನಿಸಿತು. 1667-75ರ ಆಪ್ಘನ್ ಯುದ್ಧಗಳಿಂದಾಗಿ ಔರಂಗ್ಜೇóಬನ ಬೊಕ್ಕಸ ಬರಿದಾಗಿತ್ತು. ಆಫ್ಘನ್ ಸಿಪಾಯಿಗಳನ್ನು ಯುದ್ದಕ್ಕೆ ಬಳಸಿಕೊಳ್ಳುವುದಂತೂ ಸಾಧ್ಯವಿರಲಿಲ್ಲ. ಶಿವಾಜಿಯ ವಿರುದ್ಧವಾಗಿ ಸೆಣಸುವುದು ಕಠಿಣವಾದುದಕ್ಕೆ ಇದೂ ಒಂದು ಕಾರಣ. 1669ರಲ್ಲಿ ಮಥುರಾದಲ್ಲಿ ಜಾಟರೂ 1671ರಲ್ಲಿ ಬುಂದೇಲ್ಖಂಡ ಮತ್ತು ಮಾಳ್ವದಲ್ಲಿ ಬುಂದೇಲರೂ 1672ರಲ್ಲಿ ಪಟಿಯಾಲದ ಶತಮಾನಿಗಳು ಆಳ್ವರದ ಮೇವಟಿಗಳೂ ದಂಗೆಯೆದ್ದರು. ಇವರನ್ನೆಲ್ಲ ನಿರ್ದಯೆಯಿಂದ ಔರಂಗ್ಜೇóಬ್ ಅಡಗಿಸಿದ. ಆದರೂ ಈ ದಂಗೆಗಳು ಮೊಗಲ್ ಆಳ್ವಿಕೆಯ ವಿರುದ್ಧ ಇದ್ದ ಶಕ್ತಿಗಳ ಪ್ರತೀಕಗಳಾಗಿದ್ದುವು. ಪಂಜಾಬಿನಲ್ಲಿ ಸಿಖ್ಖರಲ್ಲಿ ಜಾಗೃತಿ ಉಂಟಾಗಿತ್ತು. ಅವರೂ ಸಂಘಟಿತರಾಗುತ್ತಿದ್ದರು. 1663ರಲ್ಲಿ ತಮ್ಮ ಮೇಲೆ ಹೊರಿಸಲಾಗಿದ್ದ ಕೌಲನ್ನು ಅಸ್ಸಾಮಿನ ಅಹೋಂಗಳು ಕಿತ್ತೊಗೆದು 1671ರಲ್ಲಿ ತಮ್ಮ ನೆಲವನ್ನು ಮತ್ತೆ ಗೆದ್ದುಕೊಂಡರು. ಮರಾಠರಾದರೂ ಸುಮ್ಮನಿರಲಿಲ್ಲ. ಶಂಭೂಜಿಯ ತಮ್ಮ ರಾಜಾರಾಮನೂ ಅವನ ಮರಣಾನಂತರ ಅವನ ಪತ್ನಿ ತಾರಾಬಾಯಿಯೂ ಮೊಗಲರ ವಿರುದ್ಧ ಹೋರಾಟ ಮುಂದುವರಿಸಿದರು. ಔರಂಗಜೇಬನ ಕಣ್ಣಮುಂದೆಯೇ ಎಷ್ಟೋ ಪ್ರದೇಶಗಳು ಮರಾಠರ ವಶವಾದುವು. ಹೀಗೆ ಔರಂಗ್ಜೇóಬನ ಆಳ್ವಿಕೆಯ ಕಾಲದ ಉತ್ತರಾರ್ಧವನ್ನೆಲ್ಲ (1681-1707) ಆತ ದಖನನ್ನು ಮೆಟ್ಟಿನಿಲ್ಲುವುದಕ್ಕೆ ವಿನಿಯೋಗಿಸಬೇಕಾಯಿತು. ಇದಕ್ಕಾಗಿ ಮಾಡಬೇಕಾಗಿಬಂದ ವೆಚ್ಚ ಅಗಾಧ. ಈ ಘಟನೆಗಳು ಮೊಗಲ್ ಸಾಮ್ರಾಜ್ಯವನ್ನು ವಿನಾಶದ ಹಾದಿಯಲ್ಲಿ ಕೊಂಡೊಯ್ದುವು. 1679-80ರ ರಜಪುತ ಯುದ್ಧದಲ್ಲಿ ಔರಂಗ್ಜೇóಬ್ ಗೆದ್ದಿದ್ದನಾದರೂ ಅಲ್ಲೂ ಈತ ಹಿಂದೂ ದೊರೆಗಳ ವಿರೋಧ ಗಳಿಸಿಕೊಂಡ. ಅಕ್ಬರನ ಸ್ನೇಹಮಾರ್ಗವನ್ನು ಈತ ಅನುಸರಿಸಲಿಲ್ಲ. ರಾಷ್ಟ್ರವೇ ಧರ್ಮಕ್ಕೆ ಅಧೀನವಾಯಿತು. ಕುರಾನಿನ ನ್ಯಾಯಕ್ಕನುಸಾರನಾಗಿ ರಾಜ್ಯವಾಳಲು ಯತ್ನಿಸಿದ ಈ ಸುನ್ನಿ ಮುಸಲ್ಮಾನ ಬುದ್ಧಿವಂತನಾದರೂ ಅವಿವೇಕಿ; ವಾಸ್ತವದೃಷ್ಟಿಹೀನ; ಮತಾಂಧ. ನಿಷ್ಠಾವಂತ ಮುಸ್ಲಿಮನ ನಿಷ್ಠುರ ನಿಯಮಗಳನ್ನೆಲ್ಲ ಈತ ತನ್ನ ಮೇಲೆ ವಿಧಿಸಿಕೊಂಡನಷ್ಟೇ ಅಲ್ಲ; ಇಡೀ ಚಕ್ರಾಧಿಪತ್ಯವನ್ನೇ ಇಸ್ಲಾಂ ಸಾಮ್ರಾಜ್ಯವಾಗಿ (ದಾರ್-ಉಲ್-ಇಸ್ಲಾಂ) ಪರಿವರ್ತಿಸಲೆತ್ನಿಸಿದ. ಇದರಿಂದ ಉದ್ಭವವಾದ ಅಸಹನೆಯ ನೆಲೆಗಟ್ಟಿನ ಮೇಲೆ ಆಡಳಿತ ನಡೆಸಲು ಯತ್ನಿಸಿದ್ದೇ ಔರಂಗಜೇಬನ ಆಳ್ವಿಕೆಯ ಮಹಾದುರಂತ. 1564ರಲ್ಲಿ ಅಕ್ಬರ್ ರದ್ದುಮಾಡಿದ್ದ ಜೆಸಿಯಾ ಕಂದಾಯವನ್ನು ಈತ 1679 ರಲ್ಲಿ ಮತ್ತೆ ವಿಧಿಸಿದ. ಉನ್ನತ ಹುದ್ದೆಗಳಿಗೆ ಹಿಂದೂಗಳನ್ನು ನೇಮಿಸಿಕೊಳ್ಳುವುದನ್ನು ನಿಷೇಧಿಸಿದನೆಂದೂ ಅನೇಕ ಹಳೆಯ ಹಿಂದೂ ದೇವಸ್ಥಾನಗಳನ್ನು ನಾಶಗೊಳಿಸಿದನೆಂದೂ ಹೊಸದಾಗಿ ದೇಗುಲಗಳ ನಿರ್ಮಾಣ ಮಾಡಕೂಡದೆಂದು ವಿಧಿಸಿದನೆಂದೂ ಜೋಧಪುರದ ದೊರೆಯಾಗಿದ್ದ ಜಸ್ವಂತ್ ಸಿಂಗನ ಮಗನನ್ನು ಬಲಾತ್ಕಾರದಿಂದ ಹಿಡಿದು ಇಸ್ಲಾಂ ಮತಕ್ಕೆ ಪರಿವರ್ತಿಸಲು ಪ್ರಯತ್ನಸಿದನೆಂದೂ ಹೇಳಲಾಗಿದೆ. ವಿ. ರಾಘವೇಂದ್ರರಾಯರು ಹಿಂದೂ ಮುಸ್ಲಿಂ ಮೈತ್ರಿಯನ್ನು ಬೆಳೆಸಿದ ರಾಜರು ಎಂಬ ಪುಸ್ತಕದಲ್ಲಿ ಔರಂಗ್ಜೇóಬನ ರಾಜ್ಯಭಾರದ ಬಗ್ಗೆ ಹೀಗೆ ಹೇಳುತ್ತಾರೆ; ಔರಂಗಜೇಬನ ರಾಜ್ಯವ್ಯವಹಾರ ಭಿನ್ನಾಭಿಪ್ರಾಯಗಳಿಗೆ ಗುರಿಯಾಗಿದೆ. ಮುಸಲ್ಮಾನರು ಇವನನ್ನು ಒಬ್ಬ ಪೀರ್ ಅಂದರೆ ಸಂತನೆಂದು ತಿಳಿದಿರುವರು. ಕೆಲವು ಹಿಂದೂಗಳು ಇವನನ್ನು ಅಸರೀ ಸ್ವಭಾವದವನೆಂದು ತಿಳಿದಿದ್ದಾರೆ. ಇವನಿಗೆ ಹಿಂದೂಗಳ ಮೇಲೆ ವೈಷಮ್ಯವಿದ್ದುದೇನೋ ನಿಜ. ಆದರೆ ಅದು ಅವನ ಮನಸ್ಸಿನಲ್ಲಿ ಏಕಾಏಕಿ ಹುಟ್ಟಲಿಲ್ಲ. ಪಟ್ಟಾಭಿಷಿಕ್ತನಾದ ಹತ್ತು ವರ್ಷಕಾಲ ಹಿಂದೂಗಳನ್ನು ರಕ್ಷಣೆಮಾಡಲು ಪ್ರಯತ್ನಪಟ್ಟ. ಕಾಶಿ ದೇವಾಲಯದ ಅರ್ಚಕರಿಗೆ ಅವರ ಹಕ್ಕು ಬಾಧ್ಯತೆಗಳನ್ನು ಸುರಕ್ಷಿತವಾಗಿ ಪಾಲಿಸುವೆನೆಂದು ಒಂದು ಅಭಯಪತ್ರ ಕೊಟ್ಟ. ಕಾಲಕ್ರಮದಲ್ಲಿ ಧರ್ಮಬೋಧಕರ ಕೈಯ ಸೂತ್ರದ ಬೊಂಬೆಯಾದ. ಹಿಂದೂಗಳ ಮೇಲೆ ಜೆóಸಿಯಾ ತಲೆಗಂದಾಯವನ್ನು ಹಾಕಿದ. ಇಸ್ಲಾಮೀ ರಾಜನೀತಿಯಲ್ಲಿ ಜಿಮ್ಮಿಗಳ ಪುರಾತನ ದೇವಾಲಯಗಳನ್ನು ಸುರಕ್ಷಿತವಾಗಿ ಇಡಬಹುದು; ಆದರೆ ಹೊಸ ದೇವಸ್ಥಾನಗಳ ಸ್ಥಾಪನೆಗೆ ಅವಕಾಶವಿಲ್ಲ. ಈ ನೀತಿಯನ್ನು ಅನುಸರಿಸಿ ಔರಂಗ್ಜೇóಬ್ ಅರ್ವಾಚೀನ ದೇವಸ್ಥಾನಗಳನ್ನು ನೆಲಸಮ ಮಾಡಬೇಕೆಂದು ಆಜ್ಞೆ ಇತ್ತ. ಇದೊಂದು ಸುಸಮಯವೆಂದು ತಿಳಿದು ಅಶಿಕ್ಷಿತರಾದ ಇವನ ಅಧಿಕಾರಿಗಳು ಹಿಂದಿನವು ಇಂದಿನವು ಎಂದು ಎಣಿಸದೆ ಎಲ್ಲಾ ದೇವಸ್ಥಾನಗಳನ್ನು ಲೂಟಿಮಾಡಿ ತಮ್ಮ ಚಕ್ರವರ್ತಿಯನ್ನು ಅಪಕೀರ್ತಿಗೆ ಗುರಿಮಾಡಿದರು; ರಾಜ್ಯದಲ್ಲಿ ದೊಡ್ಡ ಕ್ರಾಂತಿಯ ಬೀಜ ಬಿತ್ತಿದರು. ಔರಂಗಜೇóಬನಿಗೆ ಹಿಂದೂಗಳಲ್ಲಿ ವ್ಯಕ್ತಿಶಃ ದ್ವೇಷವಿರಲಿಲ್ಲ. ರಜಪುತರಾಜರು ಮೊದಲಿನಂತೆ ಇವನ ಸೈನ್ಯದಲ್ಲಿ ದುಡಿದರು; ಇವನಿಗೋಸ್ಕರ ಕಾಬೂಲ್ ಪ್ರಾಂತ್ಯದಲ್ಲೂ ದಖನ್ ಪ್ರಾಂತ್ಯದಲ್ಲೂ ತಮ್ಮ ಜೀವಗಳನ್ನು ಅರ್ಪಿಸಿದರು. ಇವನ ಖಾಸ ಕಾರ್ಯದರ್ಶಿ ವಾಲೀರಾಮ್ ಹಿಂದೂ ಇವನ ಹಣಕಾಸಿನ ಮಂತ್ರಿಗಳಲ್ಲಿ ಒಬ್ಬನಾದ ರಘುನಂದನರಾಯನೂ ಹಿಂದೂವೇ. ಈ ಚಕ್ರವರ್ತಿ ಕೇವಲ ಸಂಕುಚಿತ ಮನಸ್ಕನಾಗಿ ಸ್ವಂತ ಮಕ್ಕಳನ್ನೂ ಕೂಡ ನಂಬಲಿಲ್ಲ. ಆದ್ದರಿಂದಲೇ ಇವನ ತನುಜರೂ ಇವನ ಮುಸಲ್ಮಾನ್ ಸರದಾರರೂ ಇವನ ಮೇಲೆ ದಂಗೆ ಎದ್ದು ರಾಜ್ಯವನ್ನು ಚೂರುಚೂರಾಗಿ ಮಾಡಿದರು. ಇವರು ಹಾಕಿದ ಮೇಲ್ಪಂಕ್ತಿಯನ್ನು ರಜಪುತರೂ ಮರಾಠರೂ ಸಿಖ್ಖರೂ ಅನುಸರಿಸಿದರು. ಇವರ ದಂಗೆ ಸ್ವರಾಜ್ಯಸ್ಥಾಪನೆಗೋಸ್ಕರ ಕೈಗೊಂಡದ್ದು; ಧರ್ಮವೈಷಮ್ಯದಿಂದ ಉದಿಸಿದುದು ಎಂಬುದು ನಿರಾಧಾರವಾದ ತಪ್ಪಿನ ಅಭಿಪ್ರಾಯ. ಮುಸಲ್ಮಾನರೂ ದಂಗೆಯೆದ್ದರು, ಹಿಂದೂಗಳೊಬ್ಬರೇ ಔರಂಗ್ಜೇóಬನನ್ನು ಹಾಳು ಮಾಡಿದರೆಂಬುದು ತಪ್ಪಭಿಪ್ರಾಯ. ನಿಧನ ಈ ವಿಚಾರ ಹೇಗಾದರೂ ಇರಲಿ, ಔರಂಗ್ಜೇóಬ್ ದಖನ್ನನ್ನು ಹತೋಟಿಯಲ್ಲಿಟ್ಟುಕೊಳ್ಳುವ ಪ್ರಯತ್ನದಲ್ಲೇ ಅಹಮದ್‍ನಗರದಲ್ಲಿ ಸತ್ತ (1707ರ ಮಾರ್ಚ್ 3); ಅಶಾಂತಿಯ ಗೊಂದಲವನ್ನೆಬ್ಬಿಸಿ ಚಕ್ರಾಧಿಪತ್ಯವನ್ನು ತನ್ನ ಉತ್ತರಾಧಿಕಾರಿಗಳಿಗೆ ಬಿಟ್ಟುಹೋದ. ಇವನ ಜೀವಮಾನದ ಕಾಲದಲ್ಲೇ ಐರೋಪ್ಯ ಶಕ್ತಿಗಳು ಭಾರತದ ಮೇಲೆ ಕಣ್ಣುಹಾಕಿದ್ದುವು. ಈ ಸುಪ್ತ ಅಪಾಯವನ್ನು ಔರಂಗ್ಜೇóಬ್ ಕಂಡರಿಯಲಿಲ್ಲ. ಹಿಂದೂ-ಮುಸ್ಲಿಂ, ಷಿಯ-ಸುನ್ನಿ ಮುಂತಾದ ಬಗೆಬಗೆಯ ಒಡಕುಗಳನ್ನು ಹೆಚ್ಚಿಸಿ ಭಾರತವನ್ನು ಪಾಶ್ಚಾತ್ಯರ ಕೈಯಲ್ಲಿಡಲು ಈತನೂ ತನಗರಿವಿಲ್ಲದೆಯೇ ಕಾರಣನಾದ. ಕುಟುಂಬ ಔರಂಗ್ಜೇóಬನ ಮುಖ್ಯ ಪತ್ನಿ ದಿಲ್ರಸ್ ಬಾನು ಬೇಗಂ. ಇವನಿಗೆ ಐವರು ಮಕ್ಕಳಿದ್ದರು. ತಾನು ತನ್ನ ತಂದೆಗೆ ಮಾಡಿದ್ದನ್ನೆ ತನ್ನ ಮಕ್ಕಳು ತನಗೂ ಮಾಡಿಯಾರೆಂದು ಈತ ಬಹಳ ಅಂಜಿದ್ದ. ಅವರನ್ನು ಆದಷ್ಟು ದೂರ ಇಟ್ಟಿದ್ದ. ಯಾರನ್ನೇ ಆಗಲಿ ನಂಬುವುದು ಇವನ ಸ್ವಭಾವವೇ ಅಲ್ಲ. ಈತನ ಮಕ್ಕಳ ಪೈಕಿ ಮಹಮ್ಮದ್ 1676ರಲ್ಲಿ ಗುಪ್ತ ಕೊಲೆಗೀಡಾದ. ಔರಂಗ್ಜೇóಬನ ಅನಂತರ ಅಧಿಕಾರಕ್ಕೆ ಬಂದಾತ ಮುಅಜ಼ಮ್. ಮೂರನೆಯ ಅಜ಼ಂ. ಸಿಂಹಾಸನಕ್ಕಾಗಿ ನಡೆಸಿದ ಹೋರಾಟದಲ್ಲಿ ಈತ ಮಡಿದ. ನಾಲ್ಕನೆಯ ಮಗ ಅಕ್ಬರ್ ತಂದೆಯ ವಿರುದ್ಧವಾಗಿ ದಂಗೆ ಎದ್ದು ದೇಶಭ್ರಷ್ಟನಾಗಿ ಪರ್ಷಿಯಕ್ಕೆ ಹೋಗಿ ಅಲ್ಲಿ ಸತ್ತ (1704). ಕೊನೆಯ ಕಾಂ ಬಕ್ಷನೂ ಸಿಂಹಾಸನಕ್ಕಾಗಿ ನಡೆದ ಬಡಿದಾಟದಲ್ಲಿ 1700ರಲ್ಲಿ ಪ್ರಾಣ ತೆತ್ತ. ಬಾಹ್ಯ ಸಂಪರ್ಕಗಳು Aurangzeb, as he was according to Mughal Records Article on Aurganzeb from MANAS group page, UCLA The Tragedy of Aureng-zebe Text of John Dryden's drama, based loosely on Aurangzeb and the Mughal court, 1675 Coins of Aurangzeb ಭಾರತೀಯ ಇತಿಹಾಸದ ಪ್ರಮುಖರು ಮೊಘಲ್ ಸಾಮ್ರಾಜ್ಯ
2415
https://kn.wikipedia.org/wiki/%E0%B2%AE%E0%B3%81%E0%B2%AE%E0%B3%8D%E0%B2%A4%E0%B2%BE%E0%B2%9C%E0%B3%8D%20%E0%B2%AE%E0%B2%B9%E0%B2%B2%E0%B3%8D
ಮುಮ್ತಾಜ್ ಮಹಲ್
ಮುಮ್ತಾಜ್ ಮಹಲ್ ಷಹಜಹಾನ್ನ ಹೆಂಡತಿ. ಇವಳ ಮರಣಾನಂತರ ನೆನಪಿನಲ್ಲಿ ಕಟ್ಟಿಸಿರುವ ಸ್ಮಾರಕ ತಾಜ್ ಮಹಲ್ ವಿಶ್ವ ವಿಖ್ಯಾತ ಸ್ಮಾರಕವಾಗಿದೆ. ಭಾರತೀಯ ಇತಿಹಾಸದ ಪ್ರಮುಖರು
2416
https://kn.wikipedia.org/wiki/%E0%B2%AC%E0%B2%B9%E0%B2%BE%E0%B2%A6%E0%B3%81%E0%B2%B0%E0%B3%8D%20%E0%B2%B6%E0%B2%BE%E0%B2%B9%E0%B3%8D%20%E0%B2%9C%E0%B2%AB%E0%B2%B0%E0%B3%8D
ಬಹಾದುರ್ ಶಾಹ್ ಜಫರ್
ಅಬು ಜಫರ್ ಸಿರಾಜುದ್ದೀನ್ ಮುಹಮ್ಮದ್ ಬಹಾದುರ್ ಶಾಹ್ ಜಫರ್ ( ), ಅಥವಾ ಬಹಾದುರ್ ಶಾಹ್ ಮತ್ತು ಬಹಾದುರ್ ಶಾಹ್ ೨ ( ) (೨೪ ಅಕ್ಟೋಬರ್ ೧೭೭೫ - ೭ ನವೆಂಬರ್ ೧೮೬೨) ಮೊಘಲ್ ಸಾಮ್ರಾಜ್ಯ ಮತ್ತು ತಿಮುರಿದ್ ರಾಜವಂಶದ ಕೊನೆಯ ಚಕ್ರವರ್ತಿ. ಇವನ ತಂದೆ ಅಕ್ಬರ್ ಶಾಹ್ ೨ ಮತ್ತು ತಾಯಿ ರಾಜಪೂತರ ಹಿಂದೂ ರಾಣಿಯಾದ ಲಾಲ್‌ಬಾಯಿ. ಇವನ ತಂದೆಯ ನಿಧನದ ನಂತರ ೨೮ ಸೆಪ್ಟೆಂಬರ್ ೧೮೩೮ರಂದು ಮೊಘಲ್ ಚಕ್ರವರ್ತಿಯಾದನು. ಭಾರತೀಯ ಇತಿಹಾಸದ ಪ್ರಮುಖರು ಮೊಘಲ್ ಸಾಮ್ರಾಜ್ಯ ೧೭೭೫ ಜನನ ೧೮೬೨ ನಿಧನ
2417
https://kn.wikipedia.org/wiki/%E0%B2%95%E0%B2%B2%E0%B3%8D%E0%B2%AA%E0%B2%A8%E0%B2%BE
ಕಲ್ಪನಾ
ಮಿನುಗುತಾರೆ ಕಲ್ಪನಾ(18-7-1943-/12-5-1979)ಎನಿಸಿ ಚಿತ್ರ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದ, ನಟಿ ಕಲ್ಪನಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರು . ಚಿತ್ರರಂಗವನ್ನು ಪ್ರವೇಶಿಸುವ ಮೊದಲು ಅವರ ಹೆಸರು 'ಶರತ್ ಲತಾ'.1943 ಜುಲೈ 18ರ ಮಧ್ಯಾಹ್ನ 3ಗಂಟೆಗೆ ಶ್ರೀಯುತ ಎನ್.ಎಸ್.ಕೃಷ್ಣಮೂರ್ತಿ ಮತ್ತು ಎಂ.ಜಾನಕಮ್ಮನವರ ಪುತ್ರಿಯಾಗಿ ಮಂಗಳೂರಿನ ವೆನ್ ಲ್ಯಾಕ್ ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದರು.1963ರಲ್ಲಿ ಪಂತುಲುರವರ 'ಸಾಕುಮಗಳು' ಚಿತ್ರದಿಂದ ಆರಂಭವಾದ ಸಿನಿಮಾ ಪಯಣ 1978ರ ಶ್ರೀಯುತ ಜ್ಞಾನಪೀಠಿ ಶಿವರಾಮ ಕಾರಂತರ ನಿರ್ದೇಶನದ 'ಮಲೆಯಮಕ್ಕಳು' ರವರೆಗೂ 78 ಸಿನಿಮಾಗಳಲ್ಲಿ ಅಭಿನಯಿಸುವಂತೆ ಮಾಡಿತು.ಅಂತಹ ಒಬ್ಬ ಮಹಾನ್ ತಾರೆ ಕಲ್ಪನಾ ರವರ ಬಗ್ಗೆ ಮೈಸೂರಿನ ಯುವ ಸಾಹಿತಿ ವಿ.ಶ್ರೀಧರ ಸುಮಾರು 1114ಪುಟಗಳ "ರಜತರಂಗದ ಧ್ರುವತಾರೆ"(ಮಿನುಗುತಾರೆ ಕಲ್ಪನಾರ ಸಂಸ್ಮರಣ ಗ್ರಂಥ) ಬೃಹತ್ ಸಂಸ್ಮರಣ ಗ್ರಂಥವನ್ನು ತಂದಿರುವುದು ಕಲ್ಪನಾರಿಗೆ ನೀಡಿರುವ ಬಹು ದೊಡ್ಡ ಗೌರವ. ಜನನ, ವೃತ್ತಿರಂಗ ಹುಟ್ಟಿದ್ದು ೧೯೪೩ರ ಜುಲೈ ೧೮ ರಂದು. ಇವರ ಮಾತೃ ಭಾಷೆ ತುಳು. ತಂದೆ ಕೃಷ್ಣಮೂರ್ತಿ, ತಾಯಿ ಜಾನಕಮ್ಮ. ಕಲ್ಪನಾ ಬಾಲ್ಯದಲ್ಲೇ ಕಲಾವಿದೆಯಾಗುವ ಕನಸು ಕಂಡವರು. ಅವರ ಕುಟುಂಬದಲ್ಲಿ ಯಾರೂ ಕಲಾವಿದರಿರಲಿಲ್ಲ. ಅಂತಹ ಕನಸಿಗೆ ಇಂಬು ನೀಡವವರೂ ಇರಲಿಲ್ಲ. ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ನಾಟಕ ಮಂಡಳಿಯ ಮೂಲಕ ರಂಗಭೂಮಿ ಪ್ರವೇಶಿಸಿ ಚಿತ್ರರಂಗದ ಮಿನುಗುತಾರೆ ಎನಿಸಿದ್ದ ಕಲ್ಪನಾ ಅಭಿನಯದ ಮೊದಲ ಕನ್ನಡ ಚಲನಚಿತ್ರಬಿ.ಆರ್. ಪಂತುಲು ನಿರ್ದೇಶನದಲ್ಲಿ ಬಂದ ಸಾಕು ಮಗಳು. *೧೯೬೭ರಲ್ಲಿ ಬಿಡುಗಡೆಯಾದ ಚಿತ್ರ ಬೆಳ್ಳಿಮೋಡ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಬೆಳ್ಳಿ ಮೋಡ, ಗೆಜ್ಜೆ ಪೂಜೆ, ಶರಪಂಜರ, ಎರಡು ಕನಸು, ಗಂಧದ ಗುಡಿ ಮೊದಲಾದ ಚಲನಚಿತ್ರಗಳಲ್ಲಿ ಕಲ್ಪನಾ ಅತ್ಯಂತ ಉತ್ತಮವಾಗಿ ಅಭಿನಯಿಸಿದ್ದಾ ರೆ. ಕಲ್ಪನಾಗೆ, ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳತ್ತ ಆಸಕ್ತಿ. ಮುಖಕ್ಕೆ ಬಣ್ಣ ಬಳಿಸಿಕೊಳ್ಳುವ ಹಂಬಲ. ಬೆಳ್ಳಿಮೋಡ ಚಿತ್ರದ "ಬೆಳ್ಳಿಮೋಡದ ಅಂಚಿನಿಂದಾ ಓಡಿಬಂದಾ ಮಿನುಗುತಾರೆ" ಎಂಬ ಹಾಡೇ ನಟಿ ಕಲ್ಪನಾರವರಿಗೆ 'ಮಿನುಗುತಾರೆ' ಎಂಬ ಬಿರುದನ್ನು ನೀಡಿದ್ದು. ಕನ್ನಡದ ೬೫ ಚಿತ್ರಗಳೂ ಸೇರಿದಂತೆ ಒಟ್ಟು ೭೪ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಕಲ್ಪನಾ.ಕಲ್ಯಾಣಕುಮಾರ್ ನಿರ್ಮಾಣದ "ಪೋಲೀಸನ ಮಗಳು" ಚಿತ್ರವು ಅರ್ಧದಲ್ಲಿಯೇ ಉಳಿಯಿತು,"ಬೆಳ್ಳಿಮೋಡ", "ಹಣ್ಣೆಲೆ ಚಿಗುರಿದಾಗ", "ಶರಪಂಜರ" ಚಲನ ಈ ಚಿತ್ರಗಳಲ್ಲಿನ ಅಭಿನಯಕ್ಕೆ ೩ ಸಲ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದ ಕಲ್ಪನಾಗೆ ಪುಸ್ತಕ ಓದುವ ಹವ್ಯಾಸವೂ ಇತ್ತು. ಈಕೆಯ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ಮಾತುಗಳೂ ಇದ್ದವು. ವಾಸ್ತವವಾಗಿ ಕಲ್ಪನಾಳಿಗೆ ಹತ್ತಿರವಿರುವವರು ಹೇಳುವ ಮಾಹಿತಿಯಂತೆ ಕಲ್ಪನಾರಿಗೆ ಚರ್ಮದ ಸಮಸ್ಯೆ ಇತ್ತು. ಚರ್ಮ ಪೊರೆ (ಮೇಲ್ಪದರ) ಬಿಟ್ಟಂತಾಗುತ್ತಿತ್ತು (ಹುರುಪು-ಗ್ರಾಮೀಣಭಾಷೆಯಲ್ಲಿ ಅದು ಉರುಪೆ). ಚಿತ್ರಗಳಲ್ಲಿ ಅರ್ಧ ತೋಳು ತೊಟ್ಟು ಅಭಿನಯಿಸಬೇಕಾದ ಸನ್ನಿವೇಶ ಗಳೆಲ್ಲಾ ಬಹಳ ಹಿಂಸೆ. ಗ್ಲ್ಯಾಮರ್ ನಟಿಗೆ, ಇದರ ಬಗ್ಗೆ ದುಃಖವೂ ಇತ್ತು. ಎಷ್ಟೋ ಬಾರಿ ಅತ್ತಿದ್ದೂ ಉಂಟು. ಅದಕ್ಕೇ, ಹೆಚ್ಚು ಚಿತ್ರಗಳಲ್ಲಿ ತುಂಬು ತೋಳಿನ ಅಂಗಿಯನ್ನೇ ಧರಿಸಿದ್ದಾರೆ. ಎಷ್ಟು ಮೇಕಪ್ ಮಾಡಿಕೊಂಡರೂ ಆ ತೊಂದರೆ ಹೋಗುತ್ತಿರಲಿಲ್ಲ. ಆದರೆ ಕಲ್ಪನಾರಿಗೆ, ಆ ಸತ್ಯವನ್ನು ಹೇಳಲಾಗದೇ ನುಂಗಿಕೊಳ್ಳುವ ಅನಿವಾರ್ಯತೆ ಬದುಕಿಗಿತ್ತು. ಒಮ್ಮೆ ಈ ಸಂಗತಿ ಬಯಲಾದರೆ ತನ್ನ ತಾರಾಮೌಲ್ಯಕ್ಕೆ ಧಕ್ಕೆಯಾದೀತೆಂಬ ಭಯ. ಎಲ್ಲವೂ ಒಟ್ಟಾಗಿ ಅವರ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ವದಂತಿಗೆ ಕಾರಣವಾಗಿತ್ತು. ಬಹುಮುಖ ತಾರೆಯ ವಿಶೇಷಣಗಳು ಸುಮಾರು ಇಪ್ಪತ್ತೇಳು ಕನ್ನಡ ಚಿತ್ರಗಳಲ್ಲಿ ಬಹುಮುಖ ಪ್ರತಿಭೆಯಾಗಿ ಮಿಂಚಿದ ಮಿನುಗುತಾರೆ ತಮಿಳು ಭಾಷೆಯಲ್ಲೂ ಕಂಡರು ಅದರಲ್ಲಿ ಮುಖ್ಯವಾಗಿ "ಮಡ್ರಾಸ್ ಟು ಪಾಂಡಿಚರಿ" ಚಿತ್ರವು ಕಲ್ಪನಾ ಅವರನ್ನು ಯಶಸ್ಸಿನ ಶಿಖರವನ್ನೇರಿಸಿತು ಆ ಚಿತ್ರ ಹಿಂದಿ ಭಾಷೆಗೂ ರಿಮೇಕ್ ಆಗಿ ಅಮಿತಾಬ್ , ಅರುಣಾ ಇರಾನಿ ಮುಖ್ಯಭೂಮಿಕೆಯಲ್ಲಿ ತೆರೆಕಂಡು ಯಶಸ್ಸು ಗಳಿಸಿತು. ಇಡೀ ಚಿತ್ರೋಧ್ಯಮದಲ್ಲಿ ಅತ್ಯುತ್ತಮ ಪ್ರತಿಭೆಯಾಗಿ, ಅವರ ಮಾತಿನ ಶೈಲಿ, ಚುರುಕು ಚಟುವಟಿಕೆ, ಅಸಾಂಪ್ರದಾಯಿಕ ಜೀವನ ಶೈಲಿ, ಅವರ ಉಡುಗೆ ತೊಡುಗೆ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟವು. ಆ ಕಾಲದ (೧೯೬೫ -೭೫)ಮಾಡ್ರನ್‍ ಉಡುಗೆಯನ್ನು ತೊಟ್ಟು ತನ್ನದೇ ಆದ ಟ್ರೆಂಡ್ ಹುಟ್ಟು ಹಾಕಿಕೊಂಡಾಕೆ , ದೊಡ್ಡ ದೊಡ್ಡ ಓಲೆಗಳು ಅದಕ್ಕೆ ಒಪ್ಪುವಂತಹ ದೊಡ್ಡ ದೊಡ್ಡ ಉಂಗುರಗಳು, ಗಿಡ್ಡ ಸೆರಗು, ಹಾರದಂತಹ ಸರಗಳು, ಗಿಡ್ಡ ಗಿಡ್ಡ ತೋಳಿನ ಬೌಸುಗಳನ್ನು ಧರಿಸಿ ತಮ್ಮದೇ ಆದ ಟ್ರೆಂಡ್ ಪ್ರಾರಂಭಿಸಿದರು. ಈ ಚೆಲುವೆಯ ಅಭಿನಯ ಕಂಡು ಬೆರಗಾಗದವರಿಲ್ಲ. ಹಣ್ಣೆಲೆ ಚಿಗುರಿದಾಗ , ಶರಪಂಜರ , ಬೆಳ್ಳಿಮೋಡ ಚಿತ್ರಗಳಲ್ಲಿ ಅತ್ಯದ್ಭುತ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡು ಕನ್ನಡ ಚಿತ್ರೋಧ್ಯಮದಲ್ಲಿ ರಾಣಿಯಂತೆ ಶೋಭಿಸಿದ ಕಲ್ಪನಾ ಬಣ್ಣದ ಜಗತ್ತಿನಲ್ಲಿ ತಮ್ಮ ಚಿನ್ನದಂತಹ ಜೀವನವನ್ನು ತಮ್ಮ ಕೈಯಾರ ಹಾಳುಮಾಡಿಕೊಂಡರು ಮಿನುಗು ತಾರೆ ಅಂದಿಗು,ಇಂದಿಗು,ಎಂದೆಂದಿಗೂ ಮಿನುಗು ತಾರೆಗೆ ಸರಿ ಸಾಟಿಯಾರಿಲ್ಲ. ಮಿನುಗುತಾರೆ ಆಕಾಶದಲ್ಲೆಂದೆದೂ ಮಿನುಗುತ್ತಿರುತ್ತಾರೆ. "ಕಲ್ಪನಾ ವಿಲಾಸ" ಎಂಬ ಹೆಸರಿನ ನಟಿ ಕಲ್ಪನಾರ ಜೀವನ ಚರಿತ್ರೆಯ ಪುಸ್ತಕವೊಂದಿದೆ.ಜೊತೆಗೆ ಮೈಸೂರಿನ ಯುವ ಸಾಹಿತಿ ವಿ.ಶ್ರೀಧರ್ ಸುಮಾರು 1114ಪುಟಗಳ "ರಜತರಂಗದ ಧ್ರುವತಾರೆ"(ಮಿನುಗುತಾರೆ ಕಲ್ಪನಾರ ಸಂಸ್ಮರಣ ಗ್ರಂಥ) ಬೃಹತ್ ಸಂಸ್ಮರಣ ಗ್ರಂಥವನ್ನು ತಂದಿರುವುದು ವಿಶೇಷ. ಸೆಪ್ಟೆಂಬರ್ ೨೦ ೨೦೦೯ರಲ್ಲಿ ಬೆಂಗಳೂರು ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ 'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಗುಡಗೇರಿ ಬಸವರಾಜ್ ಅವರು ಭಾಗವಹಿಸಿ ಮಾತನಾಡುತ್ತಾ- ಒಂದು ವೇಳೆ ಮಿನುಗುತಾರೆ ಕಲ್ಪನಾ ಇಂದು ಬದುಕಿದ್ದಿದ್ದರೆ ನಾನು ಮತ್ತು ಆಕೆ ರಂಗಭೂಮಿಯ 'ಧ್ರುವತಾರಾ ದಂಪತಿ'ಗಳಾಗಿರುತ್ತಿದ್ದೆವು. ಆಕೆಯ ವಿಷಯದಲ್ಲಿ ನಾನು ನಿರಪರಾಧಿ. ಆಕೆ ತುಂಬಾ ದುಡುಕಿನ ನಿರ್ಧಾರ ತೆಗೆದುಕೊಂಡರು ಎಂದು ಹೇಳಿದ್ದಾರೆ. ಆತ್ಮಹತ್ಯೆಗೆ ಕಾರಣಗಳು ೩-೫-೧೯೭೯ ರಂದು ಕಲ್ಪನಾ ಆತ್ಮ ಹತ್ಯೆ ಮಾಡಿಕೊಂಡರು. ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ ರಾತ್ರಿ ಸುಮಾರು ೨-೩೦ರ ವೇಳಗೆ ಸಂಕೇಶ್ವರದಲ್ಲಿ ‘ಕುಮಾರ ರಾಮ’ ನಾಟಕ ನಡೆದಿತ್ತು. ಅದರಲ್ಲಿ ಗುಡಗೇರಿ ಬಸವರಾಜು ಕುಮಾರ ರಾಮನಾಗಿದ್ದರೆ ಕಲ್ಪನಾ ಮಲತಾಯಿಯ ಪಾತ್ರದಲ್ಲಿದ್ದರು. ನಾಟಕದಲ್ಲಿ ಭಾಗವಹಿಸುವಾಗಲೇ ಕಲ್ಪನಾ ಅನ್ಯಮನಸ್ಕರಾಗಿದ್ದರು. ನಾಟಕದಲ್ಲಿ ಕುಮಾರ ರಾಮ ತನಗೆ ‘ಹಸಿವಾಗಿದೆ’ ಎಂದಾಗ ‘ರೊಟ್ಟಿ ತಿನ್ನು’ ಎಂದು ಹೇಳುವ ಬದಲು ‘ಹುಲ್ಲು ತಿನ್ನು’ ಎಂದು ಹೇಳಿದ್ದರು. ಜನ ಬಿದ್ದು ಬಿದ್ದು ನಕ್ಕರು. ಇದರಿಂದ ಅವಮಾನಿತನಾದ ಬಸವರಾಜ ‘ ಹೌದು ನಾನು ಹಸು, ಹಲ್ಲು ಕೊಡು’ ಎಂದು ಹೇಳುತ್ತಾ ವೇದಿಕೆಯ ತುಂಬಾ ಓಡಾಡಲು ಆರಂಭಿಸಿದರು. ಜನ ಇನ್ನಷ್ಟು ಕೇಕೆ ಹಾಕಲು ಆರಂಭಿಸಿದಾಗ ಅಪಮಾನಗೊಂಡ ಬಸವರಾಜ್ ನಾಟಕವನ್ನು ಅಲ್ಲಿಗೇ ನಿಲ್ಲಿಸಿದರು. ಪರದೆ ಬಿದ್ದ ನಂತರ ನೇರವಾಗಿ ಕಲ್ಪನಾರ ಕಡೆ ಧಾವಿಸಿ ಕೆನ್ನೆಗೆ ಹೊಡೆದರು. ಇದರಿಂದ ವಿಚಲಿತರಾದ ಅವರು ವೇಷ ಕೂಡ ಬದಲಾಯಿಸದೆ ನೇರವಾಗಿ ಗೋಟೂರು ಪ್ರವಾಸಿ ಧಾಮಕ್ಕೆ ಬಂದು ಆತ್ಮ ಹತ್ಯೆ ಮಾಡಿಕೊಂಡರು ಎಂದು ಒಂದೆಡೆ ಬರೆಯುತ್ತಾರೆ. ಸಿನಿಮಾ ಕುರಿತ ಸಂವೇದನಾಶೀಲ ಬರಹಗಾರ ಎನ್.ಎಸ್. ಶ್ರೀಧರಮೂರ್ತಿಯವರು. ಪೋಸ್ಟ್ ಮಾರ್ಟಂ ವರದಿ ಪ್ರಕಾರ ಕಲ್ಪನಾ ೫೬ ನಿದ್ದೆ ಮಾತ್ರೆಗಳನ್ನು ನುಂಗಿದ್ದರು. ಮಾನಸಿಕವಾಗಿ ವಿಚಲಿತರಾದಾಗಲೆಲ್ಲ ನಿದ್ದೆ ಮಾತ್ರೆ ನುಂಗುವ ಹವ್ಯಾಸ ಅವರಿಗಿತ್ತು. ಹಿಂದೆ ಎರಡು ಮೂರು ಬಾರಿ ಹೀಗೆ ಸಾವಿನ ಅಂಚನ್ನು ಮುಟ್ಟಿ ಬಂದಿದ್ದರು. ಈ ಸಲ ನಿದ್ರಾ ಮಾತ್ರೆಗಳ ಪ್ರಮಾಣ ಅವರನ್ನು ಸೀದಾ ಯುಮಪುರಿಗೇ ಕರೆದುಕೊಂಡು ಹೋಗಿತ್ತು. ಕಲ್ಪನಾ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಒಲವನ್ನು ಇಟ್ಟು ಕೊಂಡಿದ್ದರು. ಪುಸ್ತಕ ಪ್ರೇಮಿಯಾಗಿದ್ದರು. ಒಳ್ಳೆಯ ಕವಿತೆಗಳನ್ನು ಬರೆದಿದ್ದರು. ಅಂಕಣಗಳನ್ನು ಬರೆದಿದ್ದರು. ‘ಯಾವ ಜನ್ಮದ ಮೈತ್ರಿ’ ಚಿತ್ರದ ಪಾತ್ರ ವಿವಾದಕ್ಕೆ ಸಿಲುಕಿದಾಗ ದಾಖಲೆಗಳೊಂದಿಗೆ ತಾವೇ ಸಮರ್ಥಿಸಿಕೊಂಡಿದ್ದರು ಮೊದಲಾದ ಹಲವು ಅಂಶಗಳು ಚರಿತ್ರೆಯಲ್ಲಿ ದಾಖಲಾಗಲಿಲ್ಲ. ಕಲ್ಪನಾ ನಟಿಸಿರುವ ಚಿತ್ರಗಳು ಸಾಕು ಮಗಳು ಚಿನ್ನದ ಗೊಂಬೆ ಕವಲೆರಡು ಕುಲವೊಂದು ಬೆಳ್ಳಿಮೋಡ ಬಂಗಾರದ ಹೂವು ಗೆಜ್ಜೆಪೂಜೆ ಶರಪಂಜರ ಸೋತು ಗೆದ್ದವಳು ಸರ್ವಮಂಗಳಾ ಕಪ್ಪು ಬಿಳುಪು ಮಣ್ಣಿನ ಮಗ ಕರುಳಿನ ಕರೆ ನಾಂದಿ ಉಯ್ಯಾಲೆ ಬಯಲು ದಾರಿ ಹಣ್ಣೆಲೆ ಚಿಗುರಿದಾಗ ಸೀತಾ ನಾ ಮೆಚ್ಚಿದ ಹುಡುಗ ಮರೆಯದ ದೀಪಾವಳಿ ಭಲೇ ಅದೃಷ್ಟವೋ ಅದೃಷ್ಟ ಮಲೆಯ ಮಕ್ಕಳು ಉಲ್ಲೇಖ ೧೯೬೩ರಲ್ಲಿ ಕನ್ನಡ ಚಲನಚಿತ್ರ ನಟಿಯರು ಚಲನಚಿತ್ರ ನಟಿಯರು
2418
https://kn.wikipedia.org/wiki/%E0%B2%87%E0%B2%82%E0%B2%97%E0%B3%8D%E0%B2%B2%E0%B3%86%E0%B2%82%E0%B2%A1%E0%B3%8D
ಇಂಗ್ಲೆಂಡ್
ವಾಯುವ್ಯ ಯುರೋಪ್ ಖಂಡದಲ್ಲಿರುವ ಬ್ರಿಟಿಷ್ ದ್ವೀಪಗಳ ಹಲವು ವಿಂಗಡನೆಗಳ ವಿವರಣೆಗೆ ಈ ಲೇಖನವನ್ನು ನೋಡಿಇಂಗ್ಲೆಂಡ್ ದೇಶವನ್ನು ಒಳಗೊಂಡ ರಾಜಕೀಯ ಸಂಘಟನೆಯಾದ ಯುನೈಟೆಡ್ ಕಿಂಗ್ಡಮ್ ಬಗ್ಗೆ ಮಾಹಿತಿಗೆ ಈ ಲೇಖನವನ್ನು ನೋಡಿ ಯುನೈಟೆಡ್ ಕಿಂಗ್ಡಮ್ ರಾಜಕೀಯ ಸಂಘಟನೆಯ ನಾಲ್ಕು ದೇಶಗಳಲ್ಲಿ ಅತಿ ದೊಡ್ಡ ಮತ್ತು ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ ಇಂಗ್ಲೆಂಡ್. ಯೂರೋಪ್ ಖಂಡದ ಪಶ್ಚಿಮ ಭಾಗದಲ್ಲಿರುವ ಬ್ರಿಟಿಷ್ ದ್ವೀಪಗಳಲ್ಲಿ ಆತಿ ದೊಡ್ಡದಾದ ಗ್ರೇಟ್ ಬ್ರಿಟನ್ ದ್ವೀಪದ ಮೂರು ಘಟಕಗಳಲ್ಲಿ ಅತ್ಯಂತ ವಿಸ್ತಾರವಾದ ದೇಶ. ಭೌಗೋಳಿಕ ನಿವೇಶನ ಇದರ ದಕ್ಷಿಣಕ್ಕೆ ಇಂಗ್ಲಿಷ್ ಕಡಲ್ಗಾಲುವೆ ಮತ್ತು ಡೋವರ್ ಜಲಸಂಧಿ ; ಪೂರ್ವಕ್ಕೆ ಉತ್ತರ ಸಮುದ್ರ ; ಉತ್ತರಕ್ಕೆ ಸ್ಕಾಟ್ಲೆಂಡ್ ; ಪಶ್ಚಿಮಕ್ಕೆ ಐರಿಷ್ ಸಮುದ್ರ ಹಾಗೂ ವೇಲ್ಸ್ ಸಂಸ್ಥಾನ, ಬ್ರಿಸ್ಟಲ್ ಕಡಲ್ಗಾಲುವೆ ಮತ್ತು ಅಟ್ಲಾಂಟಿಕ್ ಮಹಾಸಾಗರ. ವಿಸ್ತೀರ್ಣ ಇದರ ವಿಸ್ತೀರ್ಣ 1.30.360 ಚ,ಕಿ.ಮೀ. (50,869 ಚ.ಮೈ.) ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತರಾಜ್ಯದಲ್ಲೇ (ಯುನೈಟೆಡ್ ಕಿಂಗ್‍ಡಮ್) ಅತ್ಯಂತ ದೊಡ್ಡ ಘಟಕವಾದ ಇಂಗ್ಲೆಂಡು ಉಳಿದ ಎಲ್ಲ ಘಟಕಗಳಿಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವುದಲ್ಲದೆ ಕೈಗಾರಿಕೆಯಲ್ಲೂ ಹೆಚ್ಚು ಮುಂದುವರಿದಿದೆ. ಲಂಡನ್ ಇದರ ರಾಜಧಾನಿ. ಯೂರೋಪ್ ಖಂಡಕ್ಕೂ ಇಂಗ್ಲೆಂಡಿಗೂ ನಡುವೆ ಕಡಲಿರುವುದಾದರೂ ಇದರ ದಕ್ಷಿಣ ಹಾಗೂ ನೈಋತ್ಯತೀರಕ್ಕೂ ಯೂರೋಪ್ ಖಂಡಪ್ರದೇಶದ ಪಶ್ಚಿಮ ಭಾಗದಲ್ಲಿರುವ ಫ್ರಾನ್ಸಿಗೂ ಬಹಳ ಸಮೀಪ. ಡೋವರ್ ಜಲಸಂಧಿಯಂತೂ ಬಹಳ ಕಿರಿದು. ಇದರ ಅಗಲ ಕೇವಲ 21 ಮೈಲಿ. ಆದರೆ ಈ ಪ್ರದೇಶದಲ್ಲಿ ಬೀಸುವ ಕ್ಲುಪ್ತ ಮಾರುತಗಳೂ ಸಮುದ್ರದ ಉಬ್ಬರವಿಳಿತಗಳೂ ಶತ್ರುನೌಕೆಗಳಿಗೆ ಪ್ರತಿಕೂಲಕರವೆನಿಸಿದೆ. ಇಂಗ್ಲೆಂಡನ್ನು ಆಕ್ರಮಿಸಲೆಳಿಸಿದ ಫ್ರಾನ್ಸ್, ಸ್ಪೇನ್ ಮುಂತಾದ ದೇಶಗಳ ಪ್ರಯತ್ನಗಳು ಈ ಹಿಂದೆ ವಿಫಲವಾಗಲು ಈ ಸಮುದ್ರವೇ ಅಡ್ಡಿ ಆದರೆ ಇತರ ದೇಶಗಳೊಂದಿಗೆ ವಾಣಿಜ್ಯವೇ ಮುಂತಾದ ಸ್ನೇಹಸಂಬಂಧಗಳನ್ನು ಬೆಳೆಸುವುದಕ್ಕೂ ಸಾಮ್ರಾಜ್ಯ ಕಟ್ಟುವುದಕ್ಕೂ ಈ ಸಮುದ್ರ ಅಡ್ಡಿಯಾಗುವ ಬದಲು ಅನುಕೂಲಕರವಾಗಿಯೇ ಪರಿಣಮಿಸಿದೆ. ಪ್ರಾಕೃತಿಕ ಭೂವಿವರಣೆ ಇಂಗ್ಲೆಂಡಿನ ಏಳಿಗೆಗೆ ಇದರ ಹಿತಕರ ವಾಯುಗುಣವೂ ಒಂದು ಕಾರಣ ಯಾವ ಪ್ರದೇಶವೂ ಸಮುದ್ರಕ್ಕಿಂತ ತುಂಬ ದೂರದಲ್ಲಿಲ್ಲ. ಪಶ್ಚಿಮತೀರದ ಹತ್ತಿರ ಗಲ್ಫ್ ಸ್ಟ್ರೀಂ ಎಂಬ ಉಷ್ಣೋದಕ ಪ್ರವಾಹ ಹರಿಯುತ್ತದೆ. ಚಳಿಗಾಲದಲ್ಲಿ ನೈಋತ್ಯದಿಂದಲೂ ಬೇಸಗೆಯಲ್ಲಿ ಪಶ್ಚಿಮದಿಂದಲೂ ಬೀಸುವ ಮಾರುತಗಳು ಬೇಸಗೆಯ ಸೆಕೆಯನ್ನೂ ಚಳಿಗಾಲದ ಚಳಿಯನ್ನೂ ತಗ್ಗಿಸುತ್ತವೆ. ಪೂರ್ವಕ್ಕಿಂತ ಪಶ್ಚಿಮದ ಕಡೆಯ ಪ್ರದೇಶ ಹೆಚ್ಚು ಹಿತಕರ. ಪಶ್ಚಿಮದ ಮಾರುತಗಳು ವಾಯುಗುಣವನ್ನು ಸಮಧಾತುವಾಗಿ ಇಡುವುದರ ಜೊತೆಗೆ ಪಶ್ಚ್ಚಿಮತೀರಕ್ಕೆ ಹೆಚ್ಚು ಮಳೆ ಬೀಳಿಸುತ್ತವೆ. ಇಂಗ್ಲೆಂಡು ಸಾಮಾನ್ಯವಾಗಿ ತಗ್ಗುಪ್ರದೇಶವಾದ್ದರಿಂದ ಒಟ್ಟಿನಲ್ಲಿ ಇಲ್ಲಿ ಮಳೆ ಕಡಿಮೆ ಪೂರ್ವದಲ್ಲಿ ವರ್ಷಕ್ಕೆ 30" ಗಿಂತ ಕಡಿಮೆ ಮಳೆ ಬೀಳುತ್ತದೆ. ಇದರಿಂದ ಗೋಧಿ ಮುಂತಾದ ಧಾನ್ಯಗಳು ಮಾಗುವುದು ಸಾಧ್ಯ. ಥೇಮ್ಸ್ ಆಳಿವೆಯ ಬಳಿ ಬೀಳುವ ಮಳೆಯ ಪ್ರಮಾಣವೇ ಕನಿಷ್ಠ. ಅಲ್ಲಿ ವರ್ಷಕ್ಕೆ 13" ಮಳೆ ಬೀಳುತ್ತದೆ ಲಂಡನ್ನಿನಿಂದ ಪಶ್ಚಿಮಕ್ಕೂ ದಕ್ಷಿಣಕ್ಕೂ ಕೆಲವೇ ಮೈಲಿಗಳಾಚೆಗೆ ವರ್ಷಕ್ಕೆ 30" ಮಳೆ ಆಗುತ್ತದೆ. ಪರ್ವತಪ್ರದೇಶಗಳಲ್ಲಿ 40"-45" ನೈಋತ್ಯ ಪರ್ಯಾಯ ದ್ವೀಪದ ಡಾರ್ಟ್ ಮೂರ್ ಎಂಬಲ್ಲಿ 60" ಮಳೆಯಾಗುತ್ತದೆ. ಉತ್ತರದ ಪನ್ನೈನ್ ಪರ್ವತ ಪ್ರದೇಶವೇ ಅತ್ಯಂತ ಹೆಚ್ಚಿನ ಮಳೆಯಾಗುವ ಪ್ರದೇಶ. ಹೆಚ್ಚು ಉಷ್ಣತೆ ಇಲ್ಲದ್ದರಿಂದ ಮಳೆಯ ನೀರು ಬೇಗ ಆವಿಯಾಗದೆ ನೆಲದಲ್ಲೇ ಊರುತ್ತದೆ. ಇದರಿಂದ ಸಸ್ಯಗಳ ಬೆಳವಣಿಗೆಗೆ ಅನುಕೂಲ. ಇಂಗ್ಲೆಂಡಿನ ದಕ್ಷಿಣಭಾಗದಲ್ಲಿ ದಿನಕ್ಕೆ ಸುಮಾರು ಐದು ಗಂಟೆ ಬಿಸಿಲಿರುತ್ತದೆ. ಉತ್ತರದಲ್ಲೂ ಮಧ್ಯಪ್ರದೇಶದಲ್ಲೂ ನಾಲ್ಕು ಗಂಟೆಗಿಂತ ಕಡಿಮೆ. ಪಶ್ಚಿಮದಲ್ಲಿ ಚಳಿಗಾಲದಲ್ಲಿ ಕೊದರೆಯುವ ಚಳಿಯಿರುವುದಿಲ್ಲ. ಉತ್ತರಕ್ಕಿಂತ ದಕ್ಷಿಣದಲ್ಲಿ ಬೇಸಗೆಯ ಚುರುಕು ಜಾಸ್ತಿ. ಇಂಗ್ಲೆಂಡಿನಲ್ಲಿ ವ್ಯಾಪಕವಾದ ಪರ್ವತಪ್ರದೇಶಗಳಿಲ್ಲ. ಆದರೆ ಅಲ್ಲಿ ಮಟ್ಟಸವಾದ ಬಯಲುಗಳೂ ಇಲ್ಲ. ದೇಶದ ಬಹುಭಾಗ ಸ್ವಲ್ಪ ಇಳಿಜಾರಾಗಿದೆ. ಇಡೀ ಬ್ರಿಟನ್ನಿನ ಕರಾವಳಿಯಂತೆ ಇಂಗ್ಲೆಂಡಿನ ಕರಾವಳಿಯೂ ವೈವಿಧ್ಯಮಯ. ನದಿಗಳು ತಮ್ಮ ಮುಖದ ಬಳಿ ತಂದು ತುಂಬುವ ಮಣ್ಣನ್ನು ಕಡಲಿನ ಉಬ್ಬರವಿಳಿತಗಳು ಕೊಚ್ಚಿಹಾಕುತ್ತಿರುತ್ತವೆ. ಆದ್ದರಿಂದ ನದಿಗಳು ಸಮುದ್ರವನ್ನು ಕೂಡುವೆಡೆಗಳಲ್ಲಿ ಅಳಿವೆಗಳಾಗಿವೆ. ಇವು ಬಂದರುಗಳಿಗೆ ಬಹಳ ಅನುಕೂಲಕರ. ಪೂರ್ವತೀರದಲ್ಲಿ ಉತ್ತರದ ಟೈನ್ ನದಿಯ ಮುಖದ ಬಳಿಯಲ್ಲಿ ನ್ಯೂಕ್ಯಾಸಲ್ ಎಂಬ ರೇವುಪಟ್ಟಣವಿದೆ. ವೇರ್ ನದಿಯ ಮುಖದಲ್ಲಿ ಸಂಡರ್‍ಲೆಂಡ್ ಎಂಬ ಪಟ್ಟಣವಿದೆ. ಟೀಸ್ ಮುಖದ ಬಳಿಯಲ್ಲಿ ಮಿಡ್ಲ್ಸ್ ಬರೊ ಎಂಬ ಪಟ್ಟಣವಿದೆ. ಇದು ಬಹಳ ದೊಡ್ಡದಾದ ಕಬ್ಬಿಣ-ಉಕ್ಕು ಕೈಗಾರಿಕೆಯ ಕೇಂದ್ರ. ಈಚೆಗೆ ಈ ಪ್ರದೇಶದಲ್ಲಿ ಅನೇಕ ರಾಸಾಯನಿಕ ಕೈಗಾರಿಕೆಗಳ ನಗರಗಳು ಎದ್ದಿವೆ. ಇವುಗಳಲ್ಲಿ ಬಿಲ್ಲಿಂಗ್ ಹ್ಯಾಂ ಎಂಬುದು ಮುಖ್ಯ. ಹಂಬರ್ ನದಿಯ ಮುಖದಲ್ಲಿ ಹಲ್ ರೇವುಪಟ್ಟಣವಿದೆ. ಢೇಮ್ಸ ನದಿಯ ಅಳಿವೆಯ ಮೇಲಂತೂ ಬ್ರಿಟನ್ನಿನ ಅತ್ಯಂತ ದೊಡ್ಡ ನಗರ ಹಾಗೂ ರೇವುಪಟ್ಟಣವಾದ ಲಂಡನ್ ಇದೆ. ಬಂಡೆಗಳಿಲ್ಲದ ಈ ನದಿಯ ಪಾತ್ರದ ಉದ್ದಕ್ಕೂ ಸದಾ ಹೂಳು ತೆಗೆಸುತ್ತ್ತಿರುವುದರಿಂದ ಸಾಗರಗಾಮಿ ಹಡಗುಗಳು ಲಂಡನ್ನಿನ ಹೊರ ರೇವುಪಟ್ಟಣವಾದ ಟಿಲ್‍ಬರಿಯವರೆಗೂ ಬರುತ್ತವೆ. ಸಾಗರಕ್ಕೆ ಕೊಂಡೊಯ್ಯುವ ಹಡಗುಗಳು ಲಂಡನ್ನಿನ ವಕ್ಷಸ್ಥಲವನ್ನೇ ಪ್ರವೇಶಿಸುತ್ತವೆ. ದಕ್ಷಿಣದಲ್ಲಿ ಕೆಲವು ಕಿರಿ ಆಳದ ಕೊಲ್ಲಿಗಳಿವೆ. ಇವುಗಳಲ್ಲಿ ಎರಡರ ಮೇಲೆ ಪೋತ್ರ್ಸ್‍ಮತ್ ಮತ್ತು ಲ್ಯಾಂಗ್ಸ್‍ಟನ್ ರೇವುಗಳಿವೆ. ಸೌತಾಂಪ್ಟನ್ ವಾಟರ್ ಎಂಬಲ್ಲಿರುವ ಸೌತಾಂಪ್ಟನ್ ಬಂದರು ಬಲು ದೊಡ್ಡದು. ಪ್ಲಿಮತ್ ಮತ್ತು ಡೇವನ್‍ಪೋರ್ಟ್ ಇನ್ನೆರಡು ರೇವುಗಳು. ವಾಯುವ್ಯದಲ್ಲಿ ಡೀನದಿಯ ಅಳಿವೆ ಆಳವಿಲ್ಲ. ಇಲ್ಲಿನ ಚೆಸ್ಟರ್ ಎಂಬ ರೇವುಪಟ್ಟಣ ರೋಮನ್ ಆಧಿಪತ್ಯದ ಕಾಲದಲ್ಲಿ ಪ್ರಸಿದ್ಧವಾಗಿತ್ತು. ಮರ್ಸಿನದಿಯ ಮುಖದಲ್ಲಿ ಲಿವರ್‍ಪೂಲ್, ಬರ್ಕನ್‍ಹೆಡ್ ಬಂದರಿವೆ. ಇವು ಲಂಡನ್ನಿಗೂ ಸವಾಲು ಹಾಕುವಷ್ಟು ಉತ್ತಮವಾಗಿವೆ. ಭೂ ಇತಿಹಾಸ ಭೂ ಇತಿಹಾಸದ ಅಧ್ಯಯನದಲ್ಲಿ ಇಂಗ್ಲೆಂಡಿಗೆ (ವೇಲ್ಸ್ ಸಹ ಸೇರಿ) ಒಂದು ವಿಶಿಷ್ಟ ಸ್ಥಾನವಿದೆ. ಭೂ ಇತಿಹಾಸದ ವಿವಿಧ ಘಟ್ಟಗಳ ಎಲ್ಲ ಶಿಲಾಪ್ರಸ್ತರಗಳನ್ನು ನಾವಿಲ್ಲಿ ನೋಡಬಹುದು. ಬಹುಶ: ಇತರ ಯಾವ ಭಾಗದಲ್ಲೂ ಈ ಬಗೆಯ ಶಿಲಾಶ್ರೇಣಿಗಳನ್ನು ನೋಡಲಾರೆವು. ಆಂಗ್ಲಿಸಿಯಿಂದ ಲಂಡನ್ನಿಗೆ ನೇರ ಹಾದುಹೋದಲ್ಲಿ ಆರ್ಷೇಯ (ಆರ್ಕೀಯನ್) ಶಿಲೆಗಳಿಂದ ಮೊದಲಾಗಿ ಅನುಕ್ರಮವಾಗಿ ಎಲ್ಲ ಭೂಯುಗಗಳ ಶಿಲಾಪ್ರಸ್ತರಗಳು-ಮೆಯೊಸೀನ್ ಕಲ್ಪವನ್ನು ಬಿಟ್ಟು (ಆಗ ಇಡೀ ಇಂಗ್ಲೆಂಡ್ ಭೂ ಪ್ರದೇಶವಾಗಿತ್ತು). ಒಂದಾದ ಮೇಲೊಂದು ಗೋಚರಗೊಳ್ಳುತ್ತ ಇಡೀ ಭೂ ಇತಿಹಾಸದ ಎಲ್ಲ ಪುಟಗಳನ್ನೂ ಒಂದೂ ತಪ್ಪಿಹೋಗದಂತೆ ತಿರುವಿ ಹಾಕಿದ ಅನುಭವವಾಗುತ್ತದೆ. ಹೀಗೆ ಕಂಡು ಬರುವ ವಿವಿಧ ಭೂಯುಗಗಳ ಶಿಲಾಶ್ರೇಣಿಗಳ ಸೂಕ್ಷ್ಮ ಪರಿಚಯವನ್ನಿಲ್ಲಿ ಕೊಟ್ಟಿದೆ. ಪ್ರಿಕೇಂಬ್ರಿಯನ್ ಕಲ್ಪ (600 ದಶಲಕ್ಷ ವರ್ಷಗಳಿಂದಲೂ ಹಿಂದೆ) ಈ ಕಲ್ಪದ ಶಿಲೆಗಳನ್ನು ಆಂಗ್ಲಿಸಿ, ವೇಲ್ಸಿನ ನೆವಿನ್ ಮತ್ತು ಬಾಡ್ರ್ಸೆ ದ್ವೀಪಗಳ ನಡುವಿನ ಲೆನ್ ಪರ್ಯಾಯದ್ವೀಪ, ಲಾಂಗ್‍ಮಿಂಡ್ ಶ್ರೇಣಿ. ಶೆಕಿನ್ ಬೆಟ್ಟಗಳು, ಚಾರ್ನ್‍ವುಡ್ ಮತ್ತು ಮಾಲ್‍ವೆರ್ನುಗಳಲ್ಲಿ ನೋಡಬಹುದು. ಇವುಗಳಲ್ಲಿ ಬಹುಭಾಗ ನೈಸ್ (ಗೀರು) ಶಿಲೆಗಳು. ಇವು ಶ್ರೇಣಿಯ ಅತ್ಯಂತ ಹಿರಿದಾದ ಶಿಲೆಗಳೂ ಹೌದು. ಮುಂದೆ ತಲೆದೋರಿದ ಭೂ ಚಟುವಟಿಕೆಗಳಿಗೆ ಒಳಗಾಗಿ ನೈಸುಗಳು ಅಲ್ಲಲ್ಲೆ ಮಡಿಸಿ ಹೋಗಿವೆ. ಸವೆದ ಶಿಲೆಗಳ ಮೇಲೆ ಚಾರ್ನ್‍ವುಡ್, ಮಾಲ್‍ವೆರ್ನ್ ಮುಂತಾದ ಕಡೆಗಳಲ್ಲಿ ಜ್ವಾಲಾಮುಖಜ ಶಿಲಾಪ್ರಸ್ತರಗಳಿವೆ. ಲಾಂಗ್‍ಮಿಂಡ್ ಮತ್ತು ಇತರ ಕೆಲವಡೆಗಳಲ್ಲಿ ಕಂಡುಬರುವ ಗ್ರೀಟ್ ಮತ್ತು ಜೇಡು ಶಿಲಾಪ್ರಸ್ತರಗಳು ಈ ಯುಗದ ಜಲಜಶಿಲೆಗಳು ಸ್ಕಾಟ್ಲೆಂಡಿನ ಟಾರಿಡೋನಿಯನ್ ಜಲಜಶಿಲೆಗಳಿಗೆ ಸರಿಸಮವೆಂದು ಪರಿಗಣಿತವಾಗಿವೆ. ಒಟ್ಟಿನಲ್ಲಿ ಈ ಕಲ್ಪದ ಶಿಲೆಗಳು ಇಡೀ ಇಂಗ್ಲೆಂಡ್-ವೇಲ್ಸ್ ಉದ್ದಕ್ಕೂ ಅಂತರ್ಗತವಾಗಿದ್ದು ಅವುಗಳ ಮೇಲೆ ಇತರ ಭೂಯುಗಗಳ ಶಿಲಾಪ್ರಸ್ತರಗಳು ನಿಕ್ಷೇಪಗೊಂಡುವೆಂದೂ ಅಭಿಪ್ರಾಯಪಡಲಾಗಿದೆ. ಬಹುಶಃ ಈ ಭೂಭಾಗ ಉತ್ತರದಲ್ಲಿನ ಶಾಶ್ವತ ಭೂಖಂಡವಾಗಿದ್ದ ಅಟ್ಲಾಂಟಿಸ್ಸಿನ ಆಗ್ನೇಯ ತೀರಪ್ರದೇಶವಾಗಿತ್ತೆಂದೂ ಭೂ ವಿಜ್ಞಾನಿಗಳ ಊಹೆ. ಈ ವಿಶೇಷ ಸನ್ನಿವೇಶದ ಪರಿಣಾಮವಾಗಿಯೇ ಇಂಗ್ಲೆಂಡಿನಲ್ಲಿ ಭೂ ಇತಿಹಾಸದ ಎಲ್ಲ ಹಂತಗಳ ಶಿಲೆಗಳನ್ನೂ ನೋಡಲು ಸಾಧ್ಯವಾಗಿದೆ. ಕೇಂಬ್ರಿಯನ್ ಕಲ್ಪ (500-600 ದಶಲಕ್ಷ ವರ್ಷಗಳ ಹಿಂದಿನ ಕಾಲ) : ಪ್ರಿಕೇಂಬ್ರಿಯನ್ ಕಲ್ಪದ ಭೂಭಾಗದ ಸವೆತ ಮತ್ತು ಭೂ ಚಟುವಟಿಕೆಗಳ ಪ್ರಭಾವದಿಂದ ಈ ಕಲ್ಪದಲ್ಲಿ ಇಂಗ್ಲೆಂಡ್ ಅಷ್ಟು ಆಳವಿರದ ಸಮುದ್ರವಾಗಿ ಮಾರ್ಪಟ್ಟಿತು. ಇಲ್ಲಿ ಎಂದಿನಂತೆ ವಿವಿಧ ಜನಜಶಿಲೆಗಳ ಸಂಚಯನ ಮೊದಲಾಯಿತು. ಬಲು ವಿಸ್ತಾರವಾದ ಪ್ರದೇಶದಲ್ಲಿ ದಪ್ಪ ಮರಳು ಶಿಲೆಗಳೂ ಮತ್ತು ಪೆಂಟಿ ಶಿಲೆಗಳೂ ಕೊಂಚ ಆಳವಾದ ಭಾಗಗಳಲ್ಲಿ ಸುಣ್ಣ ಶಿಲೆಯೂ ಶೇಖರಗೊಂಡು ಸಮುದ್ರದ ತಳ ಕ್ರಮೇಣ ಕುಗ್ಗುತ್ತ ಹೋಯಿತು. ಮುಂದೆ ಜೇಡುಶಿಲಾಪ್ರಸ್ತರಗಳೂ ನಿಕ್ಷೇಪಗೊಂಡುವು. ಈ ಬಗೆಯ ಜಲಜಶಿಲಾಪರಂಪರೆ ಮುಂದೆ ಅನೇಕ ಹಂತಗಳಲ್ಲಿ ತಲೆದೋರಿತು. ಹೀಗಾಗಿ ಯುಗ ಮುಂದುವರೆದಂತೆಲ್ಲ ವೇಲ್ಸ್ ಮತ್ತು ಇಂಗ್ಲೆಂಡಿನ ಬಹುಭಾಗ ಜಲಾಶಯವಾಗಿ ಪರಿವರ್ತಿತವಾಗಿ ನಿಕ್ಷೇಪಗಳು ತಲೆದೋರಿದುವು. ಮೆರಿಯೊನೆತ್ ಮತ್ತು ಡೆನ್‍ಬಿಗ್‍ಷೈರುಗಳ ಕೇಂಬ್ರಿಯನ್ ಶಿಲಾಶ್ರೇಣಿಗಳ ಮುಂದೆ 16,000' ಗಳನ್ನೂ ಮೀರಿದೆ. ಮೆರಿಯೊನೆತ್ತಿನ ಹಾರ್ಲೆಕ್ ಉಬ್ಬಿನಲ್ಲಿ ಈ ಕಲ್ಪದ ಶಿಲೆಗಳು ಬಲು ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿವೆ. ಆರ್ಡೊವಿಶಿಯನ್ ಮತ್ತು ಸೈಲೂರಿಯನ್ ಕಲ್ಪಗಳು (400-500 ದಶಲಕ್ಷ ವರ್ಷಗಳ ಹಿಂದಿನ ಕಾಲ) ಈ ಕಲ್ಪಗಳಲ್ಲಿ ವಿಸ್ತಾರವಾದ ಜಿಯೊಸಿಂಕ್ಲೈನಲ್ ಸಮುದ್ರವಿತ್ತು. ಇದರ ವಾಯವ್ಯದತ್ತ ಉತ್ತರ ಅಟ್ಲಾಂಟಿಕ್ ಶಾಶ್ವತ ಭೂಖಂಡ ಮತ್ತು ಫೆನೊಸ್ಕಾಂಡಿಯಾಗಳಿದ್ದವು. ಈ ಭೂಭಾಗಗಳನ್ನು ನದಿಗಳು ಸವೆಯಿಸಿ ಆ ಮೂಲಕ ಹೊತ್ತು ತಂದ ಶಿಲಾಕಣಗಳನ್ನು ಸಮುದ್ರದಲ್ಲಿ ಕಲೆಹಾಕಿದವು. ನೀರಿನ ಮಟ್ಟದಲ್ಲಿ ಮತ್ತು ಭೂ-ಜಲಗಳ ಹರವಿನಲ್ಲಿ ವ್ಯತ್ಯಾಸಗಳು ಆಗಾಗ ತಲೆದೋರಿ ಶಿಲಾಪ್ರಸ್ತರಗಳಲ್ಲೂ ವೈವಿದ್ಯ ಉಂಟಾಯಿತು. ಆರ್ಡೊವಿಶಿಯನ್ ಕಲ್ಪದ ಅತ್ಯಂತ ಹಳೆಯ ಎರೆನಿಗ್ ಶಿಲಾಶ್ರೇಣಿಯಲ್ಲಿ ಅನುಕ್ರಮವಾಗಿ ಅಡಿಯಿಂದ ದಪ್ಪ ಹರಳಿನ ಗ್ರಿಟ್, ಮರಳುಶಿಲೆ, ಮರುಳುಯುಕ್ತ ಜೇಡು ಶಿಲೆ ಮತ್ತು ಕಟ್ಟಕಡೆಗೆ ಕರಿಯ ಜೇಡಿನ ಶಿಲಾಪ್ರಸ್ತರಗಳನ್ನು; ನೋಡಬಹುದು. ಇವುಗಳ ಅಧ್ಯಯನದಿಂದ ಜಲಾಶಯದ ಆಳ ಹೆಚ್ಚಿದಂತೆಲ್ಲ ಅದರ ಕರಾವಳಿ ದೂರ ದೂರ ಸರಿಯಿತೆಂದು ವ್ಯಕ್ತವಾಗಿದೆ. ಅಲ್ಲದೆ ಮಧ್ಯ ಅರ್ಡೊವಿಶಿಯನ್ ಕಲ್ಪದಲ್ಲಿ ಭೂಭಾಗ ತೀವ್ರಗತಿಯಲ್ಲಿ ಮೇಲಕ್ಕೆ ಎತ್ತಲ್ಪಟ್ಟಿತು. ಆಗ ದಪ್ಪ ಕಣಗಳ ಗ್ರಿಟ್ಟುಗಳು ಶೇಖರವಾದುವು. ಮುಂದೆ ಬಾಲಾಹಂತದಲ್ಲಿ ನಯಕಣ ರಚನೆಯ ಮರಳುಶಿಲೆ ಮತ್ತು ಜೇಡುಶಿಲಾಪ್ರಸ್ತರಗಳೂ ನಿಕ್ಷೇಪಗೊಂಡವು. ಈ ವೇಳೆಗೆ ಮಧ್ಯ ಇಂಗ್ಲೆಂಡಿನ ಭಾಗ ಬಹುಪಾಲು ನೆಲವಾಗಿತ್ತು. ಸೈಲೂರಿಯನ್ ಕಲ್ಪದ ಆದಿಯಲ್ಲಿ ಕ್ಯಾಲಿಡೋನಿಯನ್ ಪರ್ವತಜನ್ಯ ಶಕ್ತಿಗಳ ಅವಿರ್ಭಾವ ಮೊದಲಾಯಿತು. ಸಮುದ್ರದ ನಡುವೆ ನೀಳ ದಿಬ್ಬವೊಂದು ಉದ್ಬವಿಸಿ ಜಲಾಶಯ ಎರಡು ಪಾಲಾಯಿತು. ಹೊಸ ಬೆಟ್ಟಗಳ ಸಾಲೂ ಕಾಣಿಸಿಕೊಂಡಿತು. ಈ ದಿಬ್ಬ ಬೆರ್ವಿಕ್ಕಿನಿಂದ ಮೊದಲಾಗಿ ಸಾಲ್ವೆ ಮೂಲಕ ಹಾದು ವೆಕ್ಸ್ ಫರ್ಡಿನಲ್ಲಿ ಕೊನೆಮುಟ್ಟಿತು. ಸಮುದ್ರದಲ್ಲಿ ಅತಿ ಸೂಕ್ಷ್ಮಕಣಗಳು ಸಂಚಿತವಾದುವು. ಕ್ರಮೇಣ ಸಮುದ್ರದ ಉತ್ತರಾರ್ದ ನೆಲಭಾಗವಾಗಿ ಮಾರ್ಪಟ್ಟಾಗ ಮರುಳುಶಿಲೆಗಳು ನಿಕ್ಷೇಪಗೊಂಡುವು. ಕಾರ್ಡಿಗನ್‍ಷೈರಿನ ಲ್ಯಾಂಡೋವರಿಯನ್ ಶಿಲಾಶ್ರೇಣಿಯಲ್ಲಿ ಗ್ರೇ ವ್ಯಾಕ್ ಮತ್ತು ಜೇಡುಶಿಲಾಪ್ರಸ್ತರಗಳು ಒಂದಾದ ಮೇಲೊಂದು ಕಂಡು ಬಂದಿವೆ. ಆರ್ಡೊವಿಶಿಯನ್ ಕಲ್ಪದ ಉತ್ತರಾರ್ಧದಲ್ಲಿ ಲೇಕ್ ಜಿಲ್ಲೆಯಲ್ಲಿ ಅಗ್ನಿಪರ್ವತಗಳ ಚಟುವಟಿಕೆಯಿಂದ ಲಾವಾ, ಟಫ್, ಅಗ್ಲಾಮರೇಟ್ ಶಿಲಾಪ್ರಸ್ತರಗಳು ತಲೆದೋರಿ ಬಾರೊಡೇಲ್ ಶ್ರೇಣಿ ಉಂಟಾಯಿತು. ತದನಂತರ ಜೇಡು ಮತ್ತು ಗ್ರಿಟ್ ಪ್ರಸ್ತರಗಳು ಶೇಖರವಾಗಿ ಮುಂದೆ ರೂಪಾಂತರ ಹೊಂದಿ ಸ್ಕಿಡಾವಾ ಜೇಡುಶಿಲಾ ಶ್ರೇಣಿಗಳೆನಿಸಿದುವು. ಅಷ್ಟು ತೀವ್ರವಲ್ಲದ ಭೂ ಚಟುವಟಿಕೆಗಳ ದೆಸಿಯಿಂದ ಶಿಲಾಪ್ರಸ್ತರಗಳು ಮಡಿಕೆ ಬಿದ್ದು ಕಲ್ಪದ ಅಂತ್ಯದಲ್ಲಿ ನೆಲಭಾಗ ಮತ್ತೆ ಕುಸಿದು ಸಮುದ್ರವಾಗಿ ಮಾರ್ಪಟ್ಟಿತು. ಈಗಿನ ವಾಯುವ್ಯ ಇಂಗ್ಲೆಂಡಿನಲ್ಲಿರುವ ಆಷ್‍ಗಿಲನ್ ಮತ್ತು ಸೈಲೂರಿಯನ್ ಶಿಲಾಪ್ರಸ್ತರಗಳ ನಿಕ್ಷೇಪ ಮೊದಲಾಯಿತು. ಉತ್ತರ ಭಾಗದಲ್ಲಿ ತಲೆದೋರಿದ್ದ ಕ್ಯಾಲಿಡೋನಿಯನ್ ಪರ್ವತಜನ್ಯ ಶಕ್ತಿಗಳ ಪ್ರಭಾವ ಇಂಗ್ಲೆಂಡ್, ವೇಲ್ಸುಗಳಿಗೂ ಹಬ್ಬಿತು. ಈ ಕಾಲದಲ್ಲೇ ಲೇಕ್ ಜಿಲ್ಲೆಯ ಉಬ್ಬು ಉಂಟಾಯಿತು. ಉತ್ತರ ಮತ್ತು ಪಶ್ಚಿಮ ವೇಲ್ಸನಲ್ಲಿ ಅಸಂಖ್ಯಾತ ಪರಸ್ಪರ ಸಮಾಂತರ ಮೇಲ್ಮಡಿಕೆಗಳೂ ಕೆಳಮಡಿಕೆಗಳೂ ತಲೆದೋರಿದುವು. ಡಿವೋನಿಯನ್ ಕಲ್ಪ (350-400 ದಶಲಕ್ಷ ವರ್ಷಗಳ ಹಿಂದಿನ ಕಾಲ) ಈ ವೇಳೆಗೆ ಇಂಗ್ಲಿಂಡಿನ ಲೇಕ್ ಜಿಲ್ಲೆ ಮತ್ತು ಉತ್ತರ ವೇಲ್ಸಿನ ಬಹುಭಾಗ ಭೂಖಂಡವಾಗಿ ಉಳಿದಿತ್ತು. ಅಸಂಖ್ಯಾತ ನೂತನ ಪರ್ವತಶ್ರೇಣಿಗಳಿಂದ ಕೂಡಿದ ಉತ್ತರ ಅಟ್ಲಾಂಟಿಸ್ ಶಾಶ್ವತ ಭೂಖಂಡವೂ ಇತ್ತು. ಫೆನೊಸ್ಕಾಂಡಿಯಾ ಹೆಚ್ಚು ವಿಸ್ತಾರಗೊಂಡು ಉತ್ತರ ಸಮುದ್ರದ ದಕ್ಷಿಣ ಭಾಗವನ್ನು ಅತಿಕ್ರಮಿಸಿತ್ತು. ಉತ್ತರ ಇಂಗ್ಲೆಂಡ್, ವೇಲ್ಸ್ ಮತ್ತು ಮಧ್ಯ ಐರ್ಲ್‍ಂಡುಗಳನ್ನೊಳಗೊಂಡ ದೊಡ್ಡ ಪರ್ಯಾಯದ್ವೀಪ ತಲೆದೋರಿತು. ಕಲ್ಪದ ಉದ್ದಕ್ಕೂ ಕ್ಯಾಲಿಡೋನಿಯನ್ ಪರ್ವತಜನ್ಯ ಶಕ್ತಿಗಳ ಪ್ರಭಾವ ಕ್ರಮೇಣ ಕುಂದುತ್ತ ಪರ್ಯಾಯದ್ವೀಪದ ವಿಸ್ತೀರ್ಣ ಮತ್ತು ರಚನೆಯಲ್ಲಿ ಅನೇಕ ಬದಲಾವಣೆಗಳು ಕಂಡುಬಂದವು. ಉತ್ತರ ಅಟ್ಲಾಂಟಿಸ್ ಮತ್ತು ಪರ್ಯಾಯದ್ವೀಪದ ನಡುವೆ ಅಸಂಖ್ಯಾತ ಖಾರಿಗಳೂ ದಿಬ್ಬಗಳೂ ಇದ್ದು ಶಿಲಾ ನಿಕ್ಷೇಪದ ಕಾರ್ಯಗತಿಯನ್ನು ಬಹುಮಟ್ಟಿಗೆ ಪ್ರಚೋದಿಸಿದುವು. ವೇಲ್ಸಿನ ಕೆಳ ಡಿವೋನಿಯನ್ ಕಲ್ಪದ ಮರಳುಶಿಲಾ ಪ್ರಸ್ತರಗಳು ದಕ್ಷಿಣ ಭಾಗದಲ್ಲಿ ನದೀಮುಖಜ ಭೂಮಿಯೋಪಾದಿ ನಿಕ್ಷೇಪಗೊಂಡುವು. ಮಧ್ಯ ಮತ್ತು ಮೇಲಿನ ಡಿವೋನಿಯನ್ ಕಲ್ಪಗಳಲ್ಲಿ ಉತ್ತರ ಮತ್ತು ಮಧ್ಯ ವೇಲ್ಸ್ ಭೂಪ್ರದೇಶ ಉತ್ತರ ದಿಕ್ಕಿನತ್ತ ವಿಸ್ತಾರಗೊಂಡು ಅಟ್ಲಾಂಟಿಸ್ ಭೂಖಂಡದೊಡನೆ ಸೇರಿ ಹೋಯಿತು. ಹೀಗೆಯೇ ದಕ್ಷಿಣದ ಕಡೆಯೂ ವಿಸ್ತಾರಹೊಂದಿ ಇಡೀ ದಕ್ಷಿಣ ವೇಲ್ಸನ್ನು ಆಕ್ರಮಿಸಿತು. ಬಹುಶ: ಈ ಹಂತದಲ್ಲೇ ಡೆವಾನ್ ಪ್ರಾಂತ್ಯದ ಡಿವೋನಿಯನ್ ಶಿಲಾಪ್ರಸ್ತರಗಳು ನಿಕ್ಷೇಪಗೊಂಡವು. ಕಾರ್ಬೊನಿಫೆರಸ್ ಕಲ್ಪ (280-350 ದಶಲಕ್ಷ ವರ್ಷಗಳ ಹಿಂದಿನ ಕಾಲ) ಡಿವೋನಿಯನ್ ಕಲ್ಪದಲ್ಲೇ ಉತ್ತರ ಅಟ್ಲಾಂಟಿಸಿನ ಬಹುಭಾಗ ಸವೆತಕ್ಕೆ ಒಳಗಾಗಿತ್ತು. ಈ ಬೃಹತ್ ಖಂಡದ ಅಳಿದುಳಿದ ಭಾಗಗಳು ಮಧ್ಯ ಸ್ಕಾಟ್ಲೆಂಡ್ ಮತ್ತು ಐಸ್ಲೆಂಡುಗಳ ನಡುವೆ ಅಲ್ಲಲ್ಲೇ ಚದರಿಹೋಗಿದ್ದುವು. ಸ್ಕಾಂಡಿನೇವಿಯ ಭೂಖಂಡವಾಗಿತ್ತು. ಯೂರೋಪು ಖಂಡದ ಬಹುಬಾಗ ನೀರಿನಲ್ಲಿ ಮುಳುಗಿ ಅಲ್ಲಲ್ಲೇ ಸಣ್ಣಪುಟ್ಟ ದ್ವೀಪಗಳಾದುವು. ಇವುಗಳಲ್ಲಿ ಸೇಂಟ್‍ಜಾರ್ಜ್ ಲ್ಯಾಂಡ್, ಈಸ್ಟ್ ಜಾರ್ಜ್ ಛಾನೆಲ್ ಮತ್ತು ವೇಲ್ಸನ ಬಹುಭಾಗ ದ್ವೀಪಗಳೋಪಾದಿಯಲ್ಲಿದ್ದವು. ಸಮುದ್ರಭಾಗಗಳಲ್ಲಿ ಬಗೆಬಗೆಯ ಶಿಲಾಕಣಗಳು ನಿಕ್ಷೇಪಗೊಳ್ಳುತ್ತಿದ್ದವು. ಸಮುದ್ರ ಅಷ್ಟು ಆಳವಿರದಿದ್ದರೂ ಅದರ ತಳ ಕುಗ್ಗುತ್ತಲೇ ಇತ್ತು. ಇಂಗ್ಲೆಂಡಿನಲ್ಲಿ ಕೆಳ ಕಾರ್ಬೊನಿಫೆರಸ್ ಶ್ರೇಣಿಗಳನ್ನು ಆವೋನಿಯನ್ ಶ್ರೇಣಿಗಳೆಂದೂ ಹೆಸರಿಸಿದ್ದಾರೆ. ಇವುಗಳ ಮುಖ್ಯ ಪ್ರಸ್ತರಗಳು ಅಸಂಖ್ಯಾತ ಜೀವಾವಶೇಷಗಳಿಂದ ಕೂಡಿದ ಸುಣ್ಣಶಿಲೆ. ಇವನ್ನು ಆಧರಿಸಿ ಇಡೀ ಶ್ರೇಣಿಯನ್ನು ಕೆಳ ಆವೋನಿಯನ್ (ಟೂರ್ನೇಸಿಯನ್) ಮತ್ತು ಮೇಲಿನ ಆವೋನಿಯನ್ (ವೈಸಿಯನ್) ಎಂದು ವಿಭಜಿಸಲಾಗಿದೆ. ಕೆಲವಡೆ ಕಾರಲ್ ದಿಬ್ಬಗಳಿದ್ದ ದಾಖಲೆಗಳಿವೆ. ಉತ್ತರ ಇಂಗ್ಲೆಂಡ್, ಲೇಕ್ ಜಿಲ್ಲೆ, ವಾಯವ್ಯ ಮತ್ತು ದಕ್ಷಿಣ ವೇಲ್ಸ್ ಮತ್ತು ಕೆಂಟ್-ಇಲ್ಲೆಲ್ಲ ಸುಣ್ಣಶಿಲಾಪ್ರಸ್ತರಗಳು ವ್ಯಾಪಿಸಿದ್ದುವು. ವೈಸಿಯನ್ ಹಂತದಲ್ಲಿ ವಾಯವ್ಯ ಇಂಗ್ಲೆಂಡಿನತ್ತ ನೀರಿನ ಮಟ್ಟದಲ್ಲಿ ಏರು ಪೇರುಗಳಾಗಿ ಜೌಗು ಮತ್ತು ಸಮುದ್ರ ಪ್ರದೇಶಗಳು ಅನುಕ್ರಮವಾಗಿ ಆವಿರ್ಭವಿಸುತ್ತ್ತಿದ್ದುವು. ಹೀಗಾಗಿ ಮರಳು ಶಿಲಾಪ್ರಸ್ತರಗಳ ನಡುವೆ ಅಲ್ಲಲ್ಲೆ ಕಲ್ಲಿದ್ದಲಿನ ತೆಳುವಾದ ಸಿರಗಳು ನಿಕ್ಷೇಪವಾದುವು. ನಡುವೆ ಸುಣ್ಣಶಿಲಾ ಪ್ರಸ್ತರಗಳೂ ಜೇಡು ಯೋರ್‍ಡೇಲ್ ಶ್ರೇಣಿಗಳೆಂದು ಕರೆಯಲಾಗಿದೆ. ಮೇಲಿನ ಕಾರ್ಬೊನಿಫೆರಸ್ (ನಮೂರಿಯನ್) ಶಿಲಾಪ್ರಸ್ತರಗಳನ್ನು ಕೆಳಗಿನ ಕಾರ್ಬೊನಿಫೆರಸ್ (ಆವೋನಿಯನ್) ಪ್ರಸ್ತರಗಳಿಂದ ಸುಲಭವಾಗಿ ಗುರುತಿಸಬಹುದು. ಈ ಹಂತಗಳ ನಡುವೆ ಮಂದಗತಿಯ ಭೂ ಚಟುವಟಿಕೆಗಳು ತಲೆದೋರಿ ಆ ಕಾಲದ ಸಮುದ್ರಗಳಲ್ಲಿನ ನಿಕ್ಷೇಪ ಕಾರ್ಯವಿಧಾನವೇ ಬಲುಮಟ್ಟಿಗೆ ಬದಲಾಯಿತು. ಸೇಂಟ್ ಜಾರ್ಜ್‍ಲ್ಯಾಂಡ್ ಮತ್ತು ಪೂರ್ವ ಆಂಗ್ಲಿಯ ಒಂದಾಗಿ ಕ್ರಮೇಣ ಬ್ರಂಬಟ್ ದ್ವೀಪದೊಡನೆ ಐಕ್ಯವಾಗಿ ದಕ್ಷಿಣ ಇಂಗ್ಲೆಂಡ್ ವಿಸ್ತಾರಗೊಂಡಿತು. ಬ್ರಿಸ್ಟಲ್ ಕಾಲುವೆ ಇನ್ನೂ ವಿಸ್ತಾರವಾಗಿತ್ತು. ಇಲ್ಲಿ ಜೇಡು ಮತ್ತು ಮರಳು ಶಿಲಾಪ್ರಸ್ತರಗಳಿಂದಾದ ಕಲ್ಮ್ ಮೆಷರ್ಸ್ ಎಂಬ ಶಿಲಾಶ್ರೇಣಿ ನಿಕ್ಷೇಪಗೊಂಡಿತು. ಪೆನ್ನೈನ್ ಪ್ರದೇಶಗಳಲ್ಲಿ ವಿಸ್ತಾರವಾದ ನದೀಮುಖಜ ಭೂಮಿ ಉಂಟಾಗಿ ಇಡೀ ಉತ್ತರ ಇಂಗ್ಲೆಂಡ್ ಮತ್ತು ಈಶಾನ್ಯ ವೇಲ್ಸನ್ನೂ ಕ್ರಮೇಣ ಆಕ್ರಮಿಸಿಕೊಂಡು ಬಹು ವಿಸ್ತಾರವಾದ ಭೂಭಾಗ ತಲೆದೋರಿತು. ಇದು ನಮ್ಮ ದೇಶದ ಗಂಗಾ-ಬ್ರಹ್ಮಪುತ್ರ ಬಯಲಿನಷ್ಟು ವಿಸ್ತಾರವಾಗಿತ್ತೆಂದು ಊಹಿಸಲಾಗಿದೆ. ಇದರ ಶಿಲಾಸಂಯೋಜನೆ ಏಕರೀತಿಯದಾಗಿರದೆ ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಯಿಸುತ್ತಿತ್ತು. ಆಗ ಶೇಖರವಾದ ದಪ್ಪ ಕಣ ರಚನೆಯ ಮರಳು ಶಿಲೆಗಳನ್ನು ಮಿಲ್‍ಸ್ಟೋನ್‍ಗ್ರಿಟ್ ಎಂದು ಹೆಸರಿಸಿದ್ದಾರೆ. ಭೂಭಾಗದ ಅನೇಕ ಕಡೆ ಕಾಡುಗಳಿದ್ದವು. ಆಗಾಗ ತೋರಿದ ಭೂ ಕುಸಿತಗಳ ಪರಿಣಾಮವಾಗಿ ಸಸ್ಯರಾಶಿ ಆಳದಲ್ಲಿ ಹುದುಗಿ ಮರಳಿನಿಂದ ಮುಚ್ಚಿಹೋಗಿ ಕಲ್ಲಿದ್ದಲ ಪ್ರಸ್ತರಗಳಾಗಿ ಮಾರ್ಪಟ್ಟಿತು. ಇಂದಿನ ಅನೇಕ ಕಲ್ಲಿದ್ದಲ ಗಣಿಗಳು ಈ ಭಾಗದಲ್ಲೇ ಇವೆ. ಕಲ್ಪದ ಅಂತ್ಯದಲ್ಲಿ ತೀವ್ರಗತಿಯ ಭೂ ಚಟುವಟಿಕೆಗಳು ಮತ್ತೆ ತಲೆದೋರಿದುವು, ಇದಕ್ಕೆ ಸಂಬಂಧಿಸಿದ ಪರ್ವತಜನ್ಯ ಶಕ್ತಿಗಳನ್ನು ಆರ್ವೊರಿಕನ್, ಹರ್ಸಿನಿಯನ್, ಆಲ್ಟಾಯಿಡ್ ಮತ್ತು ವಾರ್ಸಿಕನ್ ಎಂದು ವಿವಿಧ ಘಟ್ಟಗಳಾಗಿ ಹೆಸರಿಸಲಾಗಿದೆ. ಇದು ಬಹುಮಟ್ಟಿಗೆ ಭೂಭಾಗಗಳ ಮೇಲ್ಮೈ ಲಕ್ಷಣಗಳನ್ನೇ ಬದಲಾಯಿಸಿದವು. ಯೂರೋಪು ಖಂಡದಲ್ಲಂತೂ ಇವುಗಳ ಹಾವಳಿ ಬಹು ತೀವ್ರವಾಗಿತ್ತು. ಬಹುಶ: ಪ್ಲಿಯೊಸೀನ್ ಕಲ್ಪಕ್ಕೆ ಕೊಂಚ ಮೊದಲು ಈ ಶಕ್ತಿಗಳು ಕುಗ್ಗಿದುವು. ಪರ್ಮಿಯನ್ ಮತ್ತು ಟ್ರಯಾಸಿಕ್ ಕಲ್ಪಗಳು : ರ್(10-280 ದಶಲಕ್ಷ ವರ್ಷಗಳ ಹಿಂದಿನ ಕಾಲ) ಕಾರ್ಬೊನಿಫೆರಸ್ ಕಲ್ಪದ ಅನಂತರ ಮತ್ತು ಪರ್ವತ ಜನ್ಯ ಕಲ್ಪದಲ್ಲಿ ಇಡೀ ಬ್ರಿಟನ್ನಿನಲ್ಲಿ ಉಷ್ಣವಲಯದ ಮರಳುಗಾಡಿನ ವಾತಾವರಣವಿತ್ತು. ಮರಳು ಶಿಲೆಗಳು ನಿಕ್ಷೇಪಗೊಂಡವು. ಹಲವಾರು ಸರೋವರಗಳಲ್ಲಿ ಲವಣಗಳು ಶೇಖರವಾದುವು. ಚೆಷೈರ್ ಪ್ರಾಂತ್ಯದ ಸಮುದ್ರ ಭಾಗಗಳು ಭೂಮಧ್ಯ ಸಮುದ್ರವಾದ ಟೆಥಿಸಿನೊಡನೆ ಸಂಪರ್ಕ ಹೊಂದಿತ್ತು. ಟ್ರಯಾಸಿಕ್ ಶಿಲಾಪ್ರಸ್ತರಗಳು ಮೀಸೋಜೋಯಿಕ್ ಯುಗದ ಮೊದಲ ಹಂತಕ್ಕೆ ಸೇರಿವೆ. ಪೆನ್ನೈನ್ ಶ್ರೇಣಿ ಈಡನ್ ಮತ್ತು ಕ್ಲಡ್ ಕಣಿವೆಗಳಲ್ಲಿ ಇವು ಅಷ್ಟು ಮಂದವಲ್ಲದ ಪ್ಲಿಸ್ಟೋಸೀನ್ ಹಿಮಕಲ್ಪದ ಪ್ರಸ್ತರಗಳಿಂದ ಆವೃತವಾಗಿದೆ. ಜೂರಾಸಿಕ್ ಕಲ್ಪ (135ರ್-10 ದಶಲಕ್ಷ ವರ್ಷಗಳ ಹಿಂದಿನ ಕಾಲ) : ಈ ಕಲ್ಪದ ಶ್ರೇಣಿಯಲ್ಲಿ ಮರಳು ಶಿಲೆ ಮತ್ತು ಜೇಡು ಶಿಲಾಪ್ರಸ್ತರಗಳಿವೆ. ಇವು ನೀಳವಾದ ಜಾಡಿನಲ್ಲಿ ಡಾಸ್ರ್ಟೆಟ್ ತೀರದಲ್ಲಿ ಪ್ರಾರಂಭವಾಗಿ ನಾರ್ಥ್ಯಾಂಪ್ಟನ್ ಷೈರ್, ಹಂಬರ್ ಕಣಿವೆ. ಪಿಕರಿಂಗ್ ಕಣಿವೆ, ಕ್ಲೀವ್‍ಲ್ಯಾಂಡ್ ಬೆಟ್ಟಗಳು ಮತ್ತು ಉತ್ತರ ಯಾರ್ಕ್‍ಷೈರ್ ಮೈದಾನಗಳಲ್ಲಿ ವಿಸ್ತಾರಗೊಂಡಿವೆ. ಕಲ್ಪದಲ್ಲಿ ಇಂಗ್ಲೆಂಡಿನ ಬಹುಭಾಗ ಭೂಪ್ರದೇಶವಾಗಿತ್ತು. ಕ್ರಿಟೇಷಿಯಸ್ ಕಲ್ಪ (65-135 ದಶ ಲಕ್ಷ ವರ್ಷಗಳ ಹಿಂದಿನ ಕಾಲ) ನೆಲದ ಮಟ್ಟ ಕುಗ್ಗುತ್ತ ಟೆಥಿಸ್ ಸಮುದ್ರ ಹೆಚ್ಚು ವಿಸ್ತಾರವಾಗುತ್ತ ಹೋಯಿತು ಕ್ರಿಟೇಷಿಯಸ್ (ವೀಲ್ಡನ್) ಪ್ರಸ್ತರಗಳು ಆಗ್ನೇಯ ಇಂಗ್ಲೆಂಡಿನ ತೀರದುದ್ದಕ್ಕೂ ನಿಖರವಾದುವು. ಕಡಲ ತೀರ ಕ್ರಮೇಣ ವೇಲ್ಸಿನತ್ತ ಸರಿಯಿತು. ವೀಲ್ಡ್‍ಜೊಡುಶಿಲೆ ಮತ್ತು ಹಸಿರು ಮರಳುಶಿಲೆ ಈ ಕಾಲದ ಮುಖ್ಯ ನಿಕ್ಷೇಪಗಳು. ಮೇಲಿನ ಕ್ರಿಟೇಷಿಯಸ್ ಕಲ್ಪದ ವೇಳೆಗೆ ಯೂರೋಪಿನ ಬಹುಭಾಗ (ಬ್ರಿಟನ್ನೂ ಸೇರಿ) ಮುಳುಗಡೆಯಾಗಿತ್ತು. ಇದಕ್ಕೆ ಮೂಲಕಾರಣ ಆಲ್ಬಿಯನ್ ಮತ್ತು ಸೈನೊಮೇನಿಯನ್ ಸಮುದ್ರದ ಆಕ್ರಮಣಗಳು. ಹೀಗೆ ಆವೃತವಾದ ಭೂಭಾಗಗಳಲ್ಲಿ ಗಾಲ್ಪ್ ಜೇಡು ಮತ್ತು ಚಾಕ್ (ಸೀಮೆಸುಣ್ಣ) ಶಿಲಾಪ್ರಸ್ತರಗಳು ನಿಕ್ಷೇಪ ಕೊಂಡುವು, ಚಾಕ್ ಪ್ರಸ್ತರಗಳನ್ನು ಸ್ಯಾಲಿಸ್ ಬರಿ, ಡಾರ್ಸೆಟ್, ಚಿಲ್ಟರ್ನ್ ಬೆಟ್ಟಗಳು, ಡೋವರ್ ಮತ್ತು ಉತ್ತರಕ್ಕೆ ಯಾರ್ಕ್‍ಷೈರ್ ವೋಲ್ಡುಗಳ ತನಕ ಗುರುತಿಸಬಹುದು. ಹೀಗೆ ಚಾಕ್ ಬ್ರಿಟನ್ನಿನ ಬಹುಭಾಗವನ್ನು ಆವರಿಸಿತ್ತು. ಕಲ್ಪದ ಅಂತ್ಯದಲ್ಲಿ ಇಂಗ್ಲೆಂಡಿನ ಬಹುಭಾಗ ಮಟ್ಟಸವಾದ ಚಾಕ್ ಪ್ರಸ್ತರಗಳಿಂದ ಆವೃತವಾಗಿತ್ತು. ಆಲ್ಪಾನ್ ಪರ್ವತಜನ್ಯ ಕಲ್ಪವೂ ಮೊದಲಾಗಿ ಮುಂದೆ ಇಡೀ ಟರ್ಷಿಯರಿ ಯುಗದ ಉದ್ದಕ್ಕೂ ಪಸರಿಸಿತು. ಇದು ಯೂರೋಪಿನಲ್ಲಿ ಬಹು ತೀವ್ರವಾಗಿದ್ದು ಇಂಗ್ಲೆಂಡಿನಲ್ಲಿ ಅದರ ಬಿಸಿ ಮಾತ್ರ ತಟ್ಟಿತ್ತು. ವೀಲ್ಡ್ ಉಬ್ಬು ಮತ್ತು ಥೇಮ್ಸ್ ತಗ್ಗು ಈ ಕಾಲದಲ್ಲೇ ತಲೆದೋರಿದುವು. ಪೇಲಿಯೊಸೀನ್, ಇಯೋಸಿನ್, ಮತ್ತು ಅಲಿಗೋಸಿನ್ ಕಲ್ಪಗಳು (25-65 ದಶಲಕ್ಷ ವರ್ಷಗಳ ಹಿಂದಿನ ಕಾಲ) ಇಯೋಸಿನ್ ಕಲ್ಪದಲ್ಲಿ ಇಳಿಕಲು ಜಲಾಶಯದ ತುಂಬ ವಿವಿಧ ಬಗೆಯ ಮರಳು ಮತ್ತು ಜೇಡಿಮಣ್ಣು ಶೇಖರವಾದುವು. ಈ ಕಲ್ಪದ ಉತ್ತಮ ಉದಾಹರಣೆ ಹ್ಯಾಂಪ್‍ಷೈರ್ ತಗ್ಗು.ಆಲಿಗೊಸೀನ್ ಯುಗದಲ್ಲಿ ಶೇಖರಣೆ ಬಹುಮಟ್ಟಿಗೆ ಹೀಗೆಯೇ ಮುಂದುರಿಯಿತಾದರೂ ಆಗಾಗ ಕಡಲಿನ ಮತ್ತು ಸರೋವರ ಸನ್ನಿವೇಶಗಳು ಉಂಟಾಗುತ್ತಿದ್ದುವು. ಮಯೊಸೀನ್ ಕಲ್ಪ (12-25 ದಶಲಕ್ಷ ವರ್ಷಗಳ ಹಿಂದಿನ ಕಾಲ) ನೆಲಭಾಗ ವಿಸ್ತಾರವಾಯಿತು. ಇದಕ್ಕೆ ಕಾರಣ ಭೂಭಾಗ ಮೇಲಕ್ಕೆ ಒಯ್ಯಲ್ಪಟ್ಟಿತು ಅಥವಾ ನೀರಿನ ಮಟ್ಟ ಕುಗ್ಗುತ್ತ ಹೋಯಿತು. ಹೀಗಾಗಿ ಈಗಿನ ಇಡೀ ಇಂಗ್ಲೆಂಡ್ ರೂಪುಗೊಂಡಿತೆನ್ನಬಹುದು ಯಾವ ಬಗೆಯ ಜಲಜನಿಕ್ಷೇಪಗಳೂ ಶೇಖರವಾಗಲಿಲ್ಲ ನೆಲಭಾಗದಲ್ಲಿ ಭೂಸವೆತ ಮುಖ್ಯವಾಗಿತ್ತು ಪಶ್ಷಿಮ ಭಾಗಗಳಲ್ಲಿದ್ದ ಚಾಕ್ ಪ್ರಸ್ತರಗಳು ನಶಿಸಿ ವೇಲ್ಸಿನ ಬೆಟ್ಟಗಳು ಪೆನ್ನೈನ್ ಬೆಟ್ಟಗಳು ಲೇಕ್ ಜಿಲ್ಲೆಯ ಮತ್ತು ಇತರ ಬೆಟ್ಟಗಳ ಸಾಲು ರೂಪುಗೊಂಡುವು. ಟ್ರಯಾಸಿಕ್ ಶ್ರೇಣಿಗಳು ಸವೆತಕ್ಕೊಳಗಾಗಿ ಪ್ರಸ್ಥಭೂಮಿ ತಲೆದೋರಿತು. ಒಟ್ಟಿನಲ್ಲಿ ಈಗಿನ ಮೇಲ್ಮೈ ಲಕ್ಷಣ ರೂಪುಗೊಂಡಿತು. ಪ್ಲಿಯೊಸೀನ್ ಕಲ್ಪ (1-11 ದಶಲಕ್ಷ ವರ್ಷಗಳ ಹಿಂದಿನ ಕಾಲ) ಇಂಗ್ಲೆಂಡಿನ ಸಣ್ಣಪುಟ್ಟ ಪ್ರದೇಶಗಳಲ್ಲಿ ಅದರಲ್ಲೂ ಪೂರ್ವ ಆಂಗ್ಲಿಯ ಮತ್ತು ಥೇಮ್ಸ್ ತಗ್ಗುಗಳಲ್ಲಿ ನೀರು ತುಂಬಿತು ಸಮುದ್ರದ ನೀರಿನ ಮಟ್ಟದಲ್ಲೂ ಕೊಂಚ ಏರುಪೇರಾಯಿತು. ಹೀಗಾಗಿ ಕ್ರ್ಯಾಗ್ ಎಂಬ ವಿಶೇಷ ರೀತಿಯ ಮರಳು, ಜೇಡು ಮತ್ತು ಕಪ್ಪೆಚಿಪ್ಪಿನ ಚೂರುಗಳಿಂದ ಕೂಡಿದ ಜಲಜಶಿಲೆ ಪೂರ್ವ ಆಂಗ್ಲಿಯದ ಕರಾವಳಿಯುದ್ದಕ್ಕೂ ನಿಕ್ಷೇಪಗೊಂಡಿತು. ಪ್ಲಿಸ್ಟೊಸೀನ ಕಲ್ಪ (1 ದಶಲಕ್ಷ ವರ್ಷಗಳನ್ನು ಹಿಂದಿನವರಗೆ) ಪ್ಲಿಯೊಸೀನ್ ಕಲ್ಪದ ಅಂತ್ಯದಲ್ಲಿ ಶೀತವಾಯುಗುಣ ತಲೆದೋರಿ ಇಂಗ್ಲೆಂಡಿನ ಅನೇಕ ಭಾಗಗಳು ನೀರ್ಗಲ್ಲಿನ ಪ್ರವಾಹಗಳಿಂದ ಆವೃತವಾದುವು. ಅಲ್ಲದೆ, ಇವುಗಳ ಕಾರ್ಯಚರಣೆ ಈಗಿನ ಇಂಗ್ಲೆಂಡಿನ ನೈಸರ್ಗಿಕ ಚೆಲುವಿಗೆ ಮೂಲಕಾರಣವಾಯಿತು. ಖನಿಜ ಸಂಪತ್ತು ವೇಲ್ಸ್ ಭೂಭಾಗವೂ ಸೇರಿದ ದಕ್ಷಿಣ ಬ್ರಿಟನ್ನಿನ ಭೂಪ್ರದೇಶವನ್ನು ಉತ್ತರ-ಪಶ್ಚಿಮಗಳು ಎತ್ತರ ಪ್ರದೇಶವೆಂದೂ ದಕ್ಷಿಣ-ಪೂರ್ವಗಳು ತಗ್ಗು ಪ್ರದೇಶವೆಂದೂ ವಿಂಗಡಿಸುವುದು ಸಾಧ್ಯ ಇದೇ ಆಧಾರದ ಮೇಲೆ ಇದರ ಭೂಗುಣವನ್ನೂ ವಿಂಗಡಿಸಬಹುದು. ಉತ್ತರ-ಪಶ್ಚಿಮ ಪ್ರದೇಶದ ಮಣ್ಣು ಆಮ್ಲಮಯ. ಅದರ ಫಲವತ್ತು ಕಡಿಮೆ. ಅಧಿಕವಾಗಿ ಬೀಳುವ ಮಳೆಯಿಂದ ಅದರ ಸಾರ ಕೊಚ್ಚ್ಚಿಹೋಗಿದೆ ದಕ್ಷಿಣ ಪೂರ್ವ ಪ್ರದೇಶದಲ್ಲಿ ಆಮ್ಲತ್ವವಿಲ್ಲ: ಕ್ಷಾರಗುಣವಿದೆ ಒಟ್ಟಾರೆ ಇಲ್ಲಿ ಕಲ್ಲು ನೆಲದಿಂದ ಜೇಡಿಮಣ್ಣಿನವರೆಗೆ ಅನೇಕ ಬಗೆಯ ಭೂಗುಣಗಳಿವೆ ಮಳೆ ತೊಳೆದ ಪರ್ವತಪ್ರದೇಶಗಳಿಂದ ಹಿಡಿದು, ಮೆಕ್ಕಲು ಮಣ್ಣಿನ ನದೀಪ್ರದೇಶದವರೆಗೆ ಉದ್ದಕ್ಕೂ ಮೇಲುಮಣ್ಣಿನ ಪದರದ ಗಾತ್ರವೂ ವ್ಯತ್ಯಾಸವಾಗುತ್ತದೆ. ದಕ್ಷಿಣ-ಪೂರ್ವದ ಇಳಿ ನೆಲದಲ್ಲಿ ವ್ಯವಸಾಯ ಹೆಚ್ಚು ಸುಸೂತ್ರ. ಈ ಪ್ರದೇಶದಲ್ಲಿ ವೈವಿಧ್ಯ ಪೂರಿತವಾದ ಖನಿಜಸಂಪತ್ತು ಸಾಕಷ್ಟು ಹರಡಿದೆ. ಖನಿಜಗಳಲ್ಲಿ ಕಲ್ಲಿದ್ದಲು ಮುಖ್ಯ. ಇದು ಅನೇಕ ಕಡೆಗಳಲ್ಲಿ ದೊರಕುತ್ತದೆ. ಪೆನ್ನೈನ್ ಪರ್ವತಶ್ರೇಣಿಯ ಪೂರ್ವ ಪಾಶ್ರ್ವದಲ್ಲಿ ಯಥೇಷ್ಟವಾಗಿದೆ. ಇದನ್ನು ಕಿಟ್ಟವಾಗಿ ಪರಿವರ್ತಿಸಿ ಲೋಹಕೈಗಾರಿಕೆಯಲ್ಲಿ ಉಪಯೋಗಿಸುತ್ತಾರೆ. ಯಾರ್ಕ್‍ಷೈರಿನ ಈಶಾನ್ಯದಲ್ಲಿರುವ ಕ್ಲೀವ್‍ಲ್ಯಾಂಡಿನಲ್ಲೂ ಉತ್ತರ ಲ್ಯಾಂಕಷೈರಿನ ಫರ್ನಿಸ್ ಜಿಲ್ಲೆಯಲ್ಲೂ ಕಬ್ಬಿಣ ಸಿಕ್ಕುತ್ತದೆ. ದೇಶಕ್ಕೆ ಅಗತ್ಯವಾದ್ದಕ್ಕಿಂತ ಹೆಚ್ಚು ಕಲ್ಲಿದ್ದಲು ದೊರಕುವುದರಿಂದ ಅಧಿಕವಾದದ್ದನ್ನು ನಿರ್ಯಾತ ಮಾಡುವುದು ಸಾಧ್ಯ. ಆದರೆ ದೊರಕುವ ಕಬ್ಬಿಣ ದೇಶಕ್ಕೆ ಸಾಲದು. ಇದನ್ನು ಹೊರಗಿನಿಂದಲೂ ತರಿಸಿಕೊಳ್ಳಬೇಕಾಗುತ್ತದೆ. ದಕ್ಷಿಣ ಬ್ರಿಟನ್ನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಖನಿಜವಸ್ತುಗಳೂ ಪಿಂಗಾಣಿ ಕ್ಯೆಗಾರಿಕೆಗೆ ಅಗತ್ಯವಾದ ಜೇಡಿಮಣ್ಣೂ ದೊರಕುತ್ತವೆ. ಸುಣ್ಣಕಲ್ಲು, ಮರಳುಗಲ್ಲು, ಗ್ರ್ರಾವೆಲ್ ಇವು ಎಲ್ಲೆಲ್ಲೂ ಸಿಗುತ್ತವೆ. ಒಳ್ಳೆಯ ಗ್ರಾನೈಟ್ ಶಿಲೆ ಕಾರ್ನ್ ವಾಲ್ ಲೀಸೆಸ್ಟರುಗಳಲ್ಲೂ ಕಡಪಾಕಲ್ಲು ಕಾರ್ನ್ ವಾಲ್ ಮತ್ತು ಡೇವನ್ನಿನಲ್ಲೂ ಸೀಮೆಸುಣ್ಣದ ಕಲ್ಲು ಕೆಂಟಿನಲ್ಲೂ ಜಿಪ್ಸಂ, ಕಲ್ಲುಪ್ಪು, ಕಬ್ಬಿಣಕಲ್ಲು ಚಕಮಕಿ ಕಲ್ಲು ಇವು ದಕ್ಷಿಣ ಬ್ರಿಟನ್ನಿನಲ್ಲೂ ಇವೆ. ಕಾರ್ನ್‍ವಾಲ್ ಒಂದಾನೊಂದು ಕಾಲದಲ್ಲಿ ತವರಕ್ಕೆ ಪ್ರಖ್ಯಾತವಾಗಿತ್ತು. ಆದರೆ ಅದೆಲ್ಲವೂ ಮುಗಿದಿದೆ ಚಿನ್ನ ಬೆಳ್ಳಿಗಳೂ ಅಲ್ಲಲ್ಲಿವೆ. ಆದರೆ ಸಾಕಷ್ಟು ಪ್ರಮಾಣದಲ್ಲಿಲ್ಲವಾದ್ದರಿಂದ ಅವನ್ನು ತೆಗೆಯುವ ಪ್ರಯತ್ನ ಲಾಭದಾಯಕವಲ್ಲ. ವನಸಂಪತ್ತು ಈ ದೇಶದ ಒಟ್ಟು ವಿಸ್ತೀರ್ಣದಲ್ಲಿ ಶೇಕಡಾ ಐದಕ್ಕಿಂತಲೂ ಕಡಿಮೆ ಪ್ರದೇಶದಲ್ಲಿ ಕಾಡುಗಳಿವೆ. ಆದರೆ ಮರಗಳಿಲ್ಲದ ಸ್ಥಳವೇ ಬಹಳ ವಿರಳ ಅತ್ಯಂತ ಎತ್ತರದ ಪರ್ವತ ಶಿಖರದ ಕೋಡುಗಲ್ಲಿನ ಮೇಲ್ಬಾಗವನ್ನೂ ಅತಿ ತಗ್ಗಿನ ಜೌಗುನೆಲವನ್ನೂ ಬಿಟ್ಟರೆ ಉಳಿದೆಲ್ಲ ಕಡೆಗಳಲ್ಲೂ ಮರಗಳು ಅಸಂಖ್ಯಾತವಾಗಿವೆ. ಬೇಸಾಯದ ನೆಲವನ್ನು ವಿಸ್ತರಿಸುವುದಕ್ಕಾಗಿಯೂ ಮರದ ದಿಮ್ಮಿಗಳಿಗಾಗಿಯೂ ಹಿಂದಿನ ಕಾಲದ ಕಾಡುಗಳು ಬೇಗ ಕರಗುತ್ತಿವೆ. ಲೋಹ ಕೈಗಾರಿಕೆಗೆ ಅಗತ್ಯವಾದ ಇದ್ದಲಿಗೂ ಮರಗಳನ್ನು ಧಾರಾಳವಾಗಿ ಕಡಿಯಲಾಗುತ್ತಿತ್ತು. ಈಗ ಕಲ್ಲಿದ್ದಲ ಕಿಟ್ಟವನ್ನು ಇದಕ್ಕಾಗಿ ಉಪಯೋಗಿಸುತ್ತಿರುವುದರಿಂದ ಈ ಕಾರಣಕ್ಕಾಗಿ ಮರಗಳು ನಾಶವಾಗುತ್ತಿಲ್ಲ. ಈಚೆಗೆ ಮರದ ದಿಮ್ಮಿಗಳನ್ನೂ ಹೆಚ್ಚಾಗಿ ಆಯಾತ ಮಾಡಿಕೊಳ್ಳಲಾಗುತ್ತಿದೆ. ಹೊಸದಾಗಿ ಮರನೆಡುವ ಕಾರ್ಯವೂ ಸಾಗುತ್ತಿದೆ. ಹ್ಯಾಂಪ್‍ಷೈರಿನಲ್ಲೂ ಗ್ಲಾಸೆಸ್ಟರಿನಲ್ಲೂ ಎರಡು ಕಾಡುಗಳನ್ನು ಮಧ್ಯಯುಗದಿಂದಲೂ ರಕ್ಷಿಸಿಡಲಾಗಿದೆ. ಹಳೆಯ ಕಾಲದ ವನವೈಭವವನ್ನೂ ಸ್ವಲ್ಪಮಟ್ಟಿಗೆ ಇಲ್ಲಿ ಕಾಣಬಹುದು. ಉಳಿದ ಕಡೆಗಳಲ್ಲಿ ಕಾಡುಗಳು ಹೆಚ್ಚು ಕಡಿಮೆ ಅದೃಶ್ಯವಾಗಿವೆ. ದಕ್ಷಿಣದಲ್ಲಿ ಮರಗಳು ಹೊರವಾಗಿ ಬೆಳೆಯುತ್ತವೆ. ಆದರೆ ಇವುಗಳಲ್ಲಿ ಹೆಚ್ಚು ವೈವಿಧ್ಯವಿಲ್ಲ. ಬಹಳ ಹಿಂದೆ, ಹಿಮಯುಗದ ಹಿಂದಿನ ಕಾಲದಲ್ಲಿ ಇಲ್ಲಿದ್ದ ಅನೇಕ ಜಾತಿಯ ಮರಗಳು ಹಿಮಾಚ್ಛಾದದಿಂದ ನಾಶವಾದವು. ಹಿಮದ ಕವಚ ಕರಗುವ ವೇಳೆಗೆ ಅಲ್ಲಿ ಇಂಗ್ಲಿಷ್ ಕಡಲ್ಗಾಲುವೆ ಉದ್ಭವವಾಯಿತು. ಬ್ರಿಟಿಷ್ ಓಕ್, ಬರ್ಚ್, ಬೀಚ್, ಆಷ್, ವಿಲ್ಲೊ, ಆಸ್ಪೆನ್, ಆಲ್ಡರ್ ಮುಂತಾದ, ಚಳಿಗಾಲದಲ್ಲಿ ಎಲೆ ಉದುರುವ ಜಾತಿಯ ಮರಗಳು ಸಾಮಾನ್ಯವಾದುವು. ಈ ಜಾತಿಗೆ ಸೇರದ ಮರಗಳೂ ಉಂಟು. ವಾಲ್ನಟ್, ಚೆಸ್‍ನಟ್, ಪೈನ್ ಮತ್ತು ಬಾಕ್ಸ್ ಮರಗಳನ್ನು ಹೊರಗಿನಿಂದ ತಂದು ಇಲ್ಲಿ ಬೆಳೆಸಲಾಗಿದೆ. ದಕ್ಷಿಣ ಬ್ರಿಟನ್ನಿನಲ್ಲಿ ಮರಗಳಿಗಿಂತ ಕುರುಚಲುಗಳು ಅಧಿಕ. ಗ್ರಾಮ ಪ್ರದೇಶದಲ್ಲಿ ಬೇಲಿಗಾಗಿ ಬೆಳೆಸುವ ಹಥಾರ್ನ್ ಅಲ್ಲದೆ ಹನಿಸಕ್ಲ್, ಹೇಜೆಲ್, ಬ್ರಿಯರ್, ಹಾಲಿಗಾರ್ಸ್ ಮತ್ತು ಹೀದರ್ ಮುಂತಾದವು ಬೆಳೆಯುತ್ತದೆ. ಇನ್ನೂ ನಾನಾ ಗಿಡ ಮೂಲಿಕೆಗಳೂ ಉಂಟು. ಇಲ್ಲಿನ ಸಾಹಿತ್ಯದಲ್ಲೂ ಇವುಗಳ ಉಲ್ಲೇಖವಿದೆ. ಅನೆಮೊನೆ, ಬ್ಲೂಬೆಲ್, ಪ್ರಿಮ್‍ರೋಸ್, ಹೈಯಸಿಂಥ್, ಐರಿಸ್, ವೂಡ್ರಫ್, ಸ್ಟ್ರಾಬೆರಿ, ಬಟರ್‍ಕಪ್, ಡೇಯ್ಸಿ, ಡಾಂಡೆಲಿಯನ್, ಕಾಡು ಜಿರೇನಿಯಂ, ಸ್ಕಾರ್ಲೆಟ್ ಪಾಪಿ, ಮೆಡೋಸ್ವೀಟ್, ಕೋಲ್ಟ್ಸ್‍ಫೂಟ್, ಸ್ಪೀಡ್‍ವೆಲ್, ಪೆನ್ನಿವಾರ್ಟ್ ಮುಂತಾದುವು ಇಂಥ ಕೆಲವು ಸಸ್ಯಗಳು. ಹುಲ್ಲೂ ಧಾರಾಳ. ಜೌಗು ನೆಲದಲ್ಲಿ ಫರ್ನ್ ಮತ್ತು ಸೆಡ್ಜ್ ಬೆಳೆಯುತ್ತದೆ. ಇಲ್ಲಿದ್ದ ಅನೇಕ ಸಸ್ತನಿ ಪ್ರಾಣಿಗಳು ಈ ನಾಡಿನ ದೀರ್ಘ ಭೂಇತಿಹಾಸ ಕಾಲದಲ್ಲಿ ನಶಿಸಿ ಹೋಗಿವೆ. ಈಚಿನವರೆಗೂ ಇದ್ದ ತೋಳ ಈಗಿಲ್ಲ. ಕೆಂಪು ಜಿಂಕೆಯೂ ಹೆಚ್ಚು ಕಡಿಮೆ ಸಾಕುಪ್ರಾಣಿಯಾಗಿದೆ. ನರಿಯೂ ಮೊಲವೂ ಬೇಟೆಗಾರನ ಸ್ವಾರ್ಥಮೂಲವಾದ ಕೃಪೆಯಿಂದ ಇನ್ನೂ ಉಳಿದಿವೆ. ಕುಂದಿಲಿಯೂ ಅಳಿಲೂ ಸ್ವಬುದ್ಧಿಬಲದಿಂದ ಪುರೋಭಿವೃದ್ಧಿ ಹೊಂದುತ್ತಿವೆ. ಜೌಗು ನೆಲಗಳೂ ಹಳ್ಳ ಕೊಳ್ಳಗಳೂ ಬತ್ತಿರುವುದುರಿಂದಲೂ ರಕ್ಷಣೆಯ ಅಭಾವದಿಂದಲೂ ಅನೇಕ ಹಕ್ಕಿಗಳು ಕಣ್ಮರೆಯಾಗಿವೆ. ಇಂಗ್ಲಿಷ್ ಗುಬ್ಬಚ್ಚಿಯೂ ಪಾರಿವಾಳವೂ ರೆಡ್‍ಬ್ರೆಸ್ಟ್ ಪಕ್ಷಿಯೂ ಉಳಿದುಕೊಂಡಿವೆ. ಬ್ಲಾಕ್‍ಬರ್ಡ್, ಕಕ್ಕೂ, ಲಾರ್ಕ್, ನೈಟಿಂಗೇಲ್, ಟಿಟ್‍ಮೌಸ್, ಫೆಸೆಂಟ್ ಮುಂತಾದವು ಇನ್ನೂ ಬದುಕಿವೆ. ಜನಸಾಂದ್ರತೆ, ಜನಜೀವನ ಇಂಗ್ಲೆಂಡಿನ ಜನಸಂಖ್ಯೆ ಒಂದೇ ರೀತಿಯಾಗಿ ಹರಡಿಲ್ಲ. ನಗರ ಪ್ರದೇಶದಲ್ಲಿ ಎಕರೆಗೆ 200 ಜನರಿದ್ದರೆ ಪರ್ವತ ಪ್ರದೇಶದಲ್ಲಿ ನೂರು ಎಕರೆಗೆ ಒಬ್ಬನಂತೆಯೂ ಇಲ್ಲ. ಕಲ್ಲಿದ್ದಲ ಗಣಿಗಳ ಬಳಿಯ ಕೈಗಾರಿಕಾ ಕೇಂದ್ರಗಳಲ್ಲೂ ಲಂಡನ್, ಮ್ಯಾಂಚೆಸ್ಟರ್, ಬರ್ಮಿಂಗ್‍ಹ್ಯಾಂ ಮುಂತಾದ ಕೈಗಾರಿಕಾ ನಗರಗಳಲ್ಲೂ ಜನಸಾಂದ್ರತೆ ಹೆಚ್ಚು. ವ್ಯವಸಾಯ ಪ್ರದೇಶಗಳಲ್ಲಿ ಸಾಂದ್ರತೆ ಕಮ್ಮಿ. ಕಳೆದ ಕೆಲವು ಶತಮಾನಗಳಲ್ಲಿ ವಿವಿಧ ಪ್ರದೇಶಗಳ ಜನಸಾಂದ್ರತೆ ವ್ಯತ್ಯಾಸವಾಗುತ್ತಿದೆ. ಮೊದಲು ಹಳ್ಳಿಗಳಿಂದ ಪಟ್ಟಣಗಳ ಕಡೆಗೆ ಜನಪ್ರವಾಹವಿತ್ತು. ಹೊಲಕ್ಕೆ ಆವರಣ ಹಾಕುವ ಚಳುವಳಿಯ ಫಲವಾಗಿ ಅನೇಕರು ನೆಲ ಕಳೆದುಕೊಂಡು ಪಟ್ಟಣಗಳಿಗೆ ಬಂದರು. ಹದಿನೆಂಟನೆಯ ಶತಮಾನದ ಕೊನೆಯಲ್ಲೂ ಹತ್ತೊಂಬತ್ತನೆಯ ಶತಮಾನದಲ್ಲೂ ಸಂಭವಿಸಿದ ಕೈಗಾರಿಕಾ ಕ್ರಾಂತಿಯಿಂದ ಪಟ್ಟಣಗಳು ಬೆಳೆದುವು. ಮೊದಲು ಕಲ್ಲಿದ್ದಲ ಗಣಿಗಳ ಬಳಿ ಜನದಟ್ಟಣೆ ಹೆಚ್ಚಿತು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಿಂದ ಕೈಗಾರಿಕೆಗಳು ಕಲ್ಲಿದ್ದಲನ್ನೇ ನೇರವಾಗಿ ಅವಲಂಬಿಸುವುದು ಕಮ್ಮಿಯಾಗಿ ಇತರ ಕಡೆಗಳಲ್ಲೂ ಕೈಗಾರಿಕೆಗಳು ಬೆಳೆದುವು. ಅನೇಕ ನಗರಗಳು ಅತಿಯಾಗಿ ಬೆಳೆದುವು. ಕೈಗಾರಿಕಾ ಜನಸಂಖ್ಯೆಯ ಭೌಗೋಲಿಕ ವಿತರಣೆಯನ್ನು ಕುರಿತ ಬಾರ್ಲೊ ಸಮಿತಿಯ ಸಲಹೆಯಂತೆ ಲಂಡನ್ನಿನ ಸುತ್ತಲೂ ವಾಯವ್ಯ ಇಂಗ್ಲೆಂಡಿನಲ್ಲೂ ಡರ್‍ಹ್ಯಾಮಿನಲ್ಲೂ ಹೆಚ್ಚುವರಿ ಜನಸಂಖ್ಯೆಗಾಗಿ ಹೊಸ ನಗರಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಯಿತು. . 1944ರಲ್ಲಿ ರಚಿತವಾಗಿದ್ದ ವಿಚಾರಣಾ ಸಮಿತಿಯವರು 1949ರಲ್ಲಿ ನೀಡಿದ ವರದಿಯ ಪ್ರಕಾರ ಅಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಜನಸಂಖ್ಯೆಯ ಬೆಳವಣಿಗೆ ಹತ್ತೊಂಬತ್ತನೆಯ ಶತಮಾನದಲ್ಲಿದ್ದ ಬೆಳೆವಣಿಗೆಗಿಂತ ಕಮ್ಮಿ. ನಲವತ್ತೈದು ವರ್ಷಗಳ ಕೆಳಗಿನವರ ಮರಣ ಪ್ರಮಾಣ ಇಳಿಯುತ್ತಿದೆ. ಆಯುಃಪ್ರಮಾಣ ವಿಸ್ತರಿಸುತ್ತಿದೆ. ಜನನ ಪ್ರಮಾಣ 1920-22 ರಿಂದ 1933ರ ವರೆಗಿನ ಅವಧಿಯಲ್ಲಿ ಬಹಳಮಟ್ಟಿಗೆ ಇಳಿಯಿತು; 1933ರಿಂದ 1941ರ ವರೆಗೆ ಹೆಚ್ಚು ಕಡಿಮೆ ಸ್ಥಿರವಾಗಿತ್ತು; ೪೧-೪೨ರಿಂದ ಏರಲಾರಂಭಿಸಿತು. 1920 ರಿಂದ 1941ರ ವರೆಗೆ ಜನನ ಪ್ರಮಾಣ ಇಳಿದಿದ್ದರಿಂದ 1950ರ ಹಾಗೂ 1960ರ ದಶಕಗಳಲ್ಲಿ ಹದಿನೈದರಿಂದ ಹತ್ತೊಂಬತ್ತು ವಯಸ್ಸಿನ ವರೆಗಿನವರ ಪ್ರಮಾಣ ಇಳಿಯುವುದೆಂದೂ ಅರುವತ್ತೈದಕ್ಕಿಂತ ಹೆಚ್ಚು ವಯಸ್ಸಿನವರ ಪ್ರಮಾಣ ಏರುವುದೆಂದೂ ಆ ಸಮಿತಿ ಅಭಿಪ್ರಾಯಪಟ್ಟಿತ್ತು. ಇಂಗ್ಲೆಂಡಿನಲ್ಲಿ ಬಹಳ ಹಿಂದಿನಿಂದಲೂ ಗಂಡಸರಿಗಿಂತ ಹೆಂಗಸರ ಸಂಖ್ಯೆಯೇ ಹೆಚ್ಚಾಗಿದೆ; ಆದರೆ ಜನಿಸುವ ಶಿಶುಗಳಲ್ಲಿ ಗಂಡುಮಕ್ಕಳದೇ ಹೆಚ್ಚಿನ ಸಂಖ್ಯೆ. ಗಂಡಸರಲ್ಲಿ ಸಾವಿನ ಪ್ರಮಾಣ ಹೆಚ್ಚು. 1953ರಲ್ಲಿ ಪ್ರತಿಸಾವಿರ ಜನಸಂಖ್ಯೆಗೂ 12.2 ಮಂದಿ ಪುರುಷರೂ 10.7 ಮಂದಿ ಸ್ತ್ರೀಯರೂ ಸತ್ತರು. ಇಂಗ್ಲೆಂಡಿನ ಜನರು ನಾನಾ ಬುಡಕ್ಕಟುಗಳಿಗೆ ಸೇರಿದವರಾದರೂ ಸಮಾನ ಲಕ್ಷಣ ಹೊಂದಿದ್ದಾರೆ. ಹಿಂದೆ ಇಲ್ಲಿದ್ದ ಪುರಾತನ ಶಿಲಾಯುಗದ ಜನರದಾಗಲಿ ಕಂದುಕಂಚಿನ ಯುಗದ ಜನರದಾಗಲಿ ಕುರುಹುಗಳು ಈಗಿನ ಜನರಲ್ಲಿ ಕಾಣಿಸುವುದಿಲ್ಲ. ಕೆಲ್ಟಿಕ್ ಮಾತಾಡುತ್ತಿದ್ದ ಒರಟಾದ, ಉದ್ದನೆಯ, ಉದ್ದತಲೆಯ, ನಸು ಹೊಂಬಣ್ಣದ ಬ್ರಿಟನ್ ಜನರ ಛಾಯೆ ಬಹುಮಟ್ಟಿಗೆ ವೇಲ್ಸಿನಲ್ಲೂ ಕೆಲಮಟ್ಟಿಗೆ ಇಂಗ್ಲೆಂಡಿನಲ್ಲೂ ಉಳಿದಿದೆ. ನಾಲ್ಕು ಶತಮಾನಗಳ ಕಾಲ ರೋಮನ್ನರು ಈ ದೇಶವನ್ನಾಕ್ರಮಿಸಿದ್ದರೆ ಫಲವಾಗಿ ನಿರೀಕ್ಷಿಸಿದಷ್ಟಿಲ್ಲದಿದ್ದರೂ ಅಷ್ಟಿಷ್ಟು ಮಟ್ಟಿಗಾದರೂ ಇಲ್ಲಿ ಮೆಡಿಟರೇನಿಯನ್ ಜನರ ಲಕ್ಷಣಗಳು ಬೆರೆತಿವೆ. ಆಂಗ್ಲ, ಸ್ಯಾಕ್ಸನ್, ಜೂಟ್ ಮತ್ತು ಡೇನ್ ವಲಸೆಗಾರರ ಗುಣಗಳು ಬಹಳಮಟ್ಟಿಗೆ ಮಿಶ್ರವಾಗಿವೆ. ನಾರ್ಮನ್ ಆಕ್ರಮಣವಾದ ಬಹುಕಾಲದ ಮೇಲೆ ಐರಿಷ್ ವಲಸೆಗಾರರೂ ಇಲ್ಲಿ ಮಿಶ್ರಗೊಂಡಿದ್ದಾರೆ. ಆದರೆ ನಾರ್ಮನ್ನರ ಪ್ರಭಾವ ತುಂಬ ಹೆಚ್ಚು. ಯಹೂದಿ ಹಾಗೂ ಹ್ಯೂಗನಾಟ್‍ಗಳ ರಕ್ತಗಳೂ ಸ್ವಲ್ಪ ಮಟ್ಟಿಗೆ ಬೆರೆತಿವೆ. ಮತ 1851ರಿಂದೀಚೆಗೆ ಬ್ರಿಟಿಷ್ ಜನಗಣತಿಯಲ್ಲಿ ಪ್ರಜೆಗಳ ಮತಸಂಬಂಧವಾದ ಅಂಕಿ ಅಂಶಗಳನ್ನು ಸೂಚಿಸುತ್ತಿಲ್ಲ. ಆಂಗ್ಲಿಕನ್ ಚರ್ಚಿಗೆ ಸೇರಿದವರಿಗಿಂತ ರೋಮನ್ ಕೆಥೋಲಿಕ್ ಚರ್ಚಿಗೆ ಸೇರಿದವರ ಸಂಖ್ಯೆಯೇ ಸ್ವಲ್ಪ ಹೆಚ್ಚಾಗಿದೆಯೆಂದು ತಿಳಿದುಬಂದಿದೆ. ಈ ಎರಡು ಪಂಗಡಗಳವರ ಸಂಖ್ಯೆಯನ್ನು ಸೇರಿಸಿದರೆ ಅದು ಇತರ ಎಲ್ಲ ಪ್ರಾಟೆಸ್ಟಂಟ್ ಪಂಗಡಗಳಿಗಿಂತ ಸ್ವಲ್ಪ ಹೆಚ್ಚು. ಆದರೂ ಇಂಗ್ಲೆಂಡಿನಲ್ಲೂ (ವೇಲ್ಸಿನಲ್ಲೂ) ನೆರವೇರುವ ಎಲ್ಲ ವಿವಾಹಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಂಖ್ಯೆಯ ಮದುವೆಗಳು ಆಂಗ್ಲಿಕನ್ ಚರ್ಚಿನಲ್ಲಿ ನಡೆಯುತ್ತವೆ. ನೂರಕ್ಕೆ ಹತ್ತಕ್ಕಿಂತ ಕಡಿಮೆ ಸಂಖ್ಯೆಯ ವಿವಾಹಗಳು ರೋಮನ್ ಕೆಥೋಲಿಕ್ ಚರ್ಚಿನಲ್ಲಿ ನಡೆಯುತ್ತವೆ. ಶೇಕಡಾ 30ರಷ್ಟು ಶಾಸನಿಕ ವಿವಾಹಗಳು ನಡೆಯುತ್ತವೆ. ಆಂಗ್ಲಿಕನ್ ಚರ್ಚಿಗೆ ವಿಧಿಬದ್ದವಾಗಿ ಸೇರದಿದ್ದರೂ ಇಂಗ್ಲೆಂಡಿನಲ್ಲಿ ಹೆಚ್ಚು ಸಂಖ್ಯೆಯ ಜನ ಆ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆಂಬುದು ಈ ಅಂಕಿಗಳಿಂದ ವ್ಯಕ್ತವಾಗುತ್ತದೆ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು English Heritage – National body protecting English heritage Natural England – Wildlife and the natural world of England VisitEngland – English Tourist Board BBC News – England – News items from BBC News relating to England GOV.UK – Website of the British Government ಯುರೋಪ್ ಖಂಡದ ದೇಶಗಳು ಬ್ರಿಟೀಷ್ ಸಾಮ್ರಾಜ್ಯ
2419
https://kn.wikipedia.org/wiki/%E0%B2%B8%E0%B2%BE.%E0%B2%B6%E0%B2%BF.%E0%B2%AE%E0%B2%B0%E0%B3%81%E0%B2%B3%E0%B2%AF%E0%B3%8D%E0%B2%AF
ಸಾ.ಶಿ.ಮರುಳಯ್ಯ
ಸಾ.ಶಿ. ಮರುಳಯ್ಯನವರು (28-01-1931 / 05-02-2016) ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಸಾಸಲು ಗ್ರಾಮಲ್ಲಿ 11 ರಲ್ಲಿ ಜನಿಸಿದರು. ತಂದೆ ಶಿದ್ರಯ್ಯ, ತಾಯಿ ಸಿದ್ದಮ್ಮ.ಪ್ರಾಥಮಿಕ ವಿದ್ಯಾಭ್ಯಸ ಸಾಸಲು ಗ್ರಾಮದಲ್ಲಿ. ಕಾಲೇಜು ಕಲಿತಿದ್ದು ಚಿತ್ರದುರ್ಗದಲ್ಲಿ. ಇಂಟರ್‌ಮೀಡಿಯಟ್‌ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಕೆಲಕಾಲ ಗುಮಾಸ್ತರಾಗಿ ಕೆಲಸ ಮಾಡಿದರು.ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಬಂದ ಸಾ.ಶಿ.ಮರುಳಯ್ಯ ಬಿ.ಎ ಆನರ್ಸ್‌ನಲ್ಲಿ ಡಿ.ಎಲ್.ಎನ್, ತ.ಸು.ಶಮರಾಯ, ಎಸ್.ವಿ.ಪರಮೇಶ್ವರ ಭಟ್ಟ, ಎಸ್.ವಿ.ರಂಗಣ್ಣ, ಕುವೆಂಪು, ದೇಜಗೌ ರಂಥ ವಿದ್ವಾಂಸರ ಮಾರ್ಗದರ್ಶನ ದೊರೆಯಿತು. ಎಂ.ಎ. ಓದಲು ಅಡಚಣೆಯಾಗಿ ಮತ್ತೆ ಉದ್ಯೋಗಕ್ಕೆ ಸೇರಿದರು. ಚಾಮರಾಜನಗರ ಕಾಲೇಜಿನ ಅರೆಕಾಲಿಕ ಶಿಕ್ಷಕರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದರು. ನಂತರ ಇವರು 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿಯನ್ನು 1971 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ 'ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ' ಕುರಿತ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನೂ ಪಡೆದರು.ಪ್ರಾಥಮಿಕ ವಿದ್ಯಾಭ್ಯಾಸ ಸಾಸಲು ಗ್ರಾಮದಲ್ಲಿ. ಕಾಲೇಜು ಕಲಿತಿದ್ದು ಚಿತ್ರದುರ್ಗದಲ್ಲಿ. ಇಂಟರ್‌ಮೀಡಿಯಟ್‌ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಕೆಲಕಾಲ ಗುಮಾಸ್ತರಾಗಿ ಕೆಲಸ ಮಾಡಿದರು.ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಬಂದ ಸಾ.ಶಿ.ಮ ಅವರಿಗೆ ಬಿ.ಎ ಆನರ್ಸ್‌ನಲ್ಲಿ ಡಿ.ಎಲ್.ಎನ್, ತ.ಸು.ಶಾಮರಾಯ, ಎಸ್.ವಿ.ಪರಮೇಶ್ವರ ಭಟ್ಟ, ಎಸ್.ವಿ.ರಂಗಣ್ಣ, ಕುವೆಂಪು, ದೇಜಗೌ ರಂಥ ವಿದ್ವಾಂಸರ ಮಾರ್ಗದರ್ಶನ ದೊರೆಯಿತು. ಎಂ.ಎ. ಓದಲು ಅಡಚಣೆಯಾಗಿ ಮತ್ತೆ ಉದ್ಯೋಗಕ್ಕೆ ಸೇರಿದರು. ಚಾಮರಾಜನಗರ ಕಾಲೇಜಿನ ಅರೆಕಾಲಿಕ ಶಿಕ್ಷಕರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದರು. ನಂತರ ಇವರು 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿಯನ್ನು 1971 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ 'ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ' ಕುರಿತ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನೂ ಪಡೆದರುಅವರು ಎಂ.ಎ ಪೂರ್ಣಗೊಳಿಸಿ ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಾಮರಾಜನಗರ, ಚನ್ನಪಟ್ಟಣ, ಮಂಗಳೂರು, ಬೆಂಗಳೂರುಗಳ ಕಾಲೇಜುಗಳಲ್ಲಿ ಅಧ್ಯಾಪಕರಾಗಿ,ಬೋಧನಾ ವೃತ್ತಿ ಮುಂದುವರಿಸಿದರು. ಪ್ರಾಂಶುಪಾಲರಾಗಿ, ಪ್ರವಾಚಕರಾಗಿ,ಪ್ರಾಧ್ಯಾಪಕರಾಗಿ,ಮೂವತ್ತು ವರ್ಷಗಳ ವಿಷಯ ವೈವಿಧ್ಯಮಯವಾ ರೂಪಕಗಳನ್ನು ರಚಿಸಿದ್ದಾರೆ ಕನ್ನಡದಲ್ಲಿ ವಿಶಿಷ್ಟ ಪರಂಪರೆಯನ್ನು ಹುಟ್ಟಿಹಾಕಿದರು. ಜನನ ಸಾ.ಶಿ. ಮರುಳಯ್ಯನವರು (28-01-1931 / 05-02-2016) ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಸಾಸಲು ಗ್ರಾಮದಲ್ಲಿ 1931ರಲ್ಲಿ ಜನಿಸಿದರು. ತಂದೆ ಶಿವರುದ್ರಯ್ಯ, ತಾಯಿ ಸಿದ್ದಮ್ಮ. ಶಿಕ್ಷಣ ಪ್ರಾಥಮಿಕ ವಿದ್ಯಾಭ್ಯಾಸ ಸಾಸಲು ಗ್ರಾಮದಲ್ಲಿ. ಕಾಲೇಜು ಕಲಿತಿದ್ದು ಚಿತ್ರದುರ್ಗದಲ್ಲಿ. ಇಂಟರ್‌ಮೀಡಿಯಟ್‌ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಕೆಲಕಾಲ ಗುಮಾಸ್ತರಾಗಿ ಕೆಲಸ ಮಾಡಿದರು.ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಬಂದ ಸಾ.ಶಿ.ಮ ಅವರಿಗೆ ಬಿ.ಎ ಆನರ್ಸ್‌ನಲ್ಲಿ ಡಿ.ಎಲ್.ಎನ್, ತ.ಸು.ಶಾಮರಾಯ, ಎಸ್.ವಿ.ಪರಮೇಶ್ವರ ಭಟ್ಟ, ಎಸ್.ವಿ.ರಂಗಣ್ಣ, ಕುವೆಂಪು, ದೇಜಗೌ ರಂಥ ವಿದ್ವಾಂಸರ ಮಾರ್ಗದರ್ಶನ ದೊರೆಯಿತು. ಎಂ.ಎ. ಓದಲು ಅಡಚಣೆಯಾಗಿ ಮತ್ತೆ ಉದ್ಯೋಗಕ್ಕೆ ಸೇರಿದರು. ಚಾಮರಾಜನಗರ ಕಾಲೇಜಿನ ಅರೆಕಾಲಿಕ ಶಿಕ್ಷಕರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದರು. ನಂತರ ಇವರು 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿಯನ್ನು 1971 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ 'ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ' ಕುರಿತ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನೂ ಪಡೆದರು. ಬೋಧನಾ ವೃತ್ತಿ ಮತ್ತು ಸಾಹಿತ್ಯ ಸೇವೆ ಅವರು ಎಂ.ಎ ಪೂರ್ಣಗೊಳಿಸಿ ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಾಮರಾಜನಗರ, ಚನ್ನಪಟ್ಟಣ, ಮಂಗಳೂರು, ಬೆಂಗಳೂರುಗಳ ಕಾಲೇಜುಗಳಲ್ಲಿ ಅಧ್ಯಾಪಕರಾಗಿ,ಬೋಧನಾ ವೃತ್ತಿ ಮುಂದುವರಿಸಿದರು. ಪ್ರಾಂಶುಪಾಲರಾಗಿ, ಪ್ರವಾಚಕರಾಗಿ,ಪ್ರಾಧ್ಯಾಪಕರಾಗಿ,ಮೂವತ್ತು ವರ್ಷಗಳ ಬೋಧನಾನುಭವವನ್ನು ಹೊಂದಿದ್ದಾರೆ. ಜೊತೆಗೆ ಆಡಳಿತಾನುಭವವನ್ನು ಹೊಂದಿರುವ ಅವರ ಅಧ್ಯಯನ - ಬರವಣಿಗೆಗಳಲ್ಲಿ ಆಳ ಹರಹುಗಳಿವೆ. ವಿಷಯ ವೈವಿಧ್ಯಮಯವಾದದ್ದು ಅಂದರೆ ಕಾವ್ಯ, ಪ್ರಹಸನ, ಜೀವನ ಚಿತ್ರಣ, ಕಾದಂಬರಿ, ಸಣ್ಣಕಥೆ, ನಾಟಕ, ವಿಮರ್ಶೆ, ಸಂಶೋಧನೆ, ಜಾನಪದ, ವ್ಯಾಕರಣ ಮುಂತಾದ ಪ್ರಕಾರಗಳಲ್ಲಿ ತೊಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. 1995ರಿಂದ 1998ರವರೆಗೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ರಾಜ್ಯಭಾಷಾ ಆಯೋಗದ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಕೃತಿಗಳು ಅವರು 40ಕ್ಕೂ ಹೆಚ್ಚು ನೃತ್ಯ ರೂಪಕಗಳನ್ನು ರಚಿಸಿದ್ದಾರೆ ಕನ್ನಡದಲ್ಲಿ ವಿಶಿಷ್ಟ ಪರಂಪರೆಯನ್ನು ಹುಟ್ಟಿಹಾಕಿದರು. ಅವರ ಪ್ರಮುಖ ಕೃತಿಗಳು: ಕಾವ್ಯ ಶಿವತಾಂಡವ ಕೆಂಗನಕಲ್ಲು ರಾಸಲೀಲೆ ರೂಪಸಿ ಕಾದಂಬರಿ ಪುರುಷಸಿಂಹ ಹೇಮಕೂಟ ಸಾಮರಸ್ಯದ ಶಿಲ್ಪ ನಾಟ್ಯಮಯೂರಿ ವರಕವಿ ನಾಟಕ ವಿಜಯವಾತಾಪಿ ಎರಡು ನಾಟಕಗಳು ಮರೀಬೇಡಿ ಕಥಾಸಂಕಲನ ನೆಲದ ಸೊಗಡು ಸಂಶೋಧನಾ ಕೃತಿಗಳು ವಚನ ವೈಭವ ಸ್ಪಂದನ ಅವಲೋಕನ ವಿಮರ್ಶೆ ಮಾಸ್ತಿಯವರ ಕಾವ್ಯಸಮೀಕ್ಷೆ ಅಭಿವ್ಯಕ್ತ ಅನುಶೀಲನ ಪ್ರಶಸ್ತಿಗಳು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ದೇವರಾಜ ಬಹದ್ದೂರ್ ಪ್ರಶಸ್ತಿ ಎಚ್.ನರಸಿಂಹಯ್ಯ ಪ್ರಶಸ್ತಿ ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಸಂದಿತ್ತು. ವಿಧಿವಶ ಸಾ.ಶಿ. ಮರುಳಯ್ಯನವರು (85) ಶುಕ್ರವಾರ ೫-೨-೨೦೧೬ ಬೆಳಿಗ್ಗೆ ನಿಧನರಾದರು. ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಕೆಲ ದಿನಗಳಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಲ್ಲೇಖಗಳು ಸಾಹಿತಿಗಳು ಲೇಖಕರು
2420
https://kn.wikipedia.org/wiki/%E0%B2%9C%E0%B2%BF.%E0%B2%8E%E0%B2%B8%E0%B3%8D.%E0%B2%B6%E0%B2%BF%E0%B2%B5%E0%B2%B0%E0%B3%81%E0%B2%A6%E0%B3%8D%E0%B2%B0%E0%B2%AA%E0%B3%8D%E0%B2%AA
ಜಿ.ಎಸ್.ಶಿವರುದ್ರಪ್ಪ
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ (ಫೆಬ್ರುವರಿ ೭,೧೯೨೬ - ಡಿಸೆಂಬರ್ ೨೩, ೨೦೧೩), ಜಿ. ಎಸ್. ಶಿವರುದ್ರಪ್ಪ ಅಥವಾ ಜಿ.ಎಸ್.ಎಸ್ ಎಂದೇ ಪರಿಚಿತರಾದ ಕನ್ನಡದ ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ. ಗೋವಿಂದ ಪೈ, ಕುವೆಂಪು ನಂತರ 'ರಾಷ್ಟ್ರಕವಿ' ಗೌರವಕ್ಕೆ ಪಾತ್ರರಾದವರು. ನವೆಂಬರ್ ೧, ೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. ಅವರನ್ನು ಸಮನ್ವಯ ಕವಿ ಎಂದೇ ಗುರುತಿಸಲಾಗುತ್ತದೆ. ಓದು/ವಿದ್ಯಾಭ್ಯಾಸ ಡಾ.ಜಿ.ಎಸ್.ಶಿವರುದ್ರಪ್ಪ ಶಿವಮೊಗ್ಗಜಿಲ್ಲೆಯ ಶಿಕಾರಿಪುರದ ತಾಲೂಕಿನ ಈಸೂರುಗ್ರಾಮದಲ್ಲಿ ಫೆಬ್ರವರಿ ೭, ೧೯೨೬ ರಂದು ಜನಿಸಿದರು. ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಾಯಿ ವೀರಮ್ಮ. ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ (೧೯೪೯) ಪದವಿ ಪಡೆದರು. ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು ನಂತರ ಎಂ.ಎ. (೧೯೫೩) ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. ೧೯೫೫ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ. ಕುವೆಂಪುರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು. ಕುವೆಂಪು ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಸಮೀಕ್ಷೆ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದರು. ವೃತ್ತಿ ಜೀವನ/ನಿರ್ವಹಿಸಿರುವ ಜವಾಬ್ದಾರಿಗಳು ೧೯೫೫ ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ. ಡಾ.ಜಿ.ಎಸ್.ಶಿವರುದ್ರಪ್ಪ ನವರು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ೧೯೬೩ರ ನವೆಂಬರ್‌ನಿಂದ ೨ ವರ್ಷಗಳ ಕಾಲ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ೧೯೭೧ರ ನವೆಂಬರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾದ ಅವರು, ಮುಂದೆ ಅದು "ಕನ್ನಡ ಅಧ್ಯಯನ ಕೇಂದ್ರ" ವಾಗಿ ಪರಿವರ್ತಿತವಾದಾಗ, ಅದರ ನಿರ್ದೇಶಕರೂ ಆದರು. ಹಸ್ತಪ್ರತಿಗಳ ಸಂಗ್ರಹಣೆ, ಅವುಗಳ ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು ೧೯೭೧ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಹಸ್ತಪ್ರತಿ ವಿಭಾಗ' ವನ್ನು ಪ್ರಾರಂಭಿಸಿದರು. ಕೇವಲ ೪ ವರ್ಷಗಳಲ್ಲಿ ೩೦೦೦ಕ್ಕೂ ಹೆಚ್ಚು ಓಲೆಗರಿಯ ಹಾಗೂ ೧೦೦೦ಕ್ಕೂ ಹೆಚ್ಚು ಕಾಗದದ ಹಸ್ತ ಪ್ರತಿಗಳ ಸಂಗ್ರಹಣೆಯಾಯಿತು. ತಾವು ಓದಿದ ಮೈಸೂರು ವಿಶ್ವವಿದ್ಯಾನಿಲಯದಲ್ಲೇ ೧೯೪೯ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು. ೧೯೬೩ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೬೬ ರ ವರೆವಿಗೂ ಅಲ್ಲಿ ಸೇವೆ ಸಲ್ಲಿಸಿದರು. ೧೯೬೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ ೧೯೮೭ ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು. ನಿವೃತ್ತಿಯ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠ ದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನ ದ ಕವಿಗೋಷ್ಠಿಯ ಅಧ್ಯಕ್ಷರಾಗಿ, ಮದರಾಸಿನ ಕನ್ನಡ ಸಮ್ಮೇಳನ ದ ಅಧ್ಯಕ್ಷರಾಗಿ, ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ. ಕೃತಿಗಳು ಕವನ ಸಂಕಲನಗಳು ಸಾಮಗಾನ (೧೯೪೭) ಚೆಲುವು-ಒಲವು (೧೯೫೧) ದೇವಶಿಲ್ಪ (೧೯೫೩) ದೀಪದ ಹೆಜ್ಜೆ (೧೯೫೬) ಕಾರ್ತಿಕ (೧೯೫೯) ಅನಾವರಣ (೧೯೬೧) ತೆರೆದ ದಾರಿ (೧೯೬೩) ಗೋಡೆ (೧೯೬೬) ಕಾಡಿನ ಕತ್ತಲಲ್ಲಿ (೧೯೭೨) ಪ್ರೀತಿ ಇಲ್ಲದ ಮೇಲೆ (೧೯೮೨) ಚಕ್ರಗತಿ (೧೯೮೭) ವ್ಯಕ್ತಮಧ್ಯ (೧೯೯೩) ಅಗ್ನಿಪರ್ವ (೨೦೦೦) ತೀರ್ಥವಾಣಿ (೧೯೫೩) ಜಾರಿದ ಹೊವು ಸಮಗ್ರ ಕಾವ್ಯ ಎದೆತುಂಬಿ ಹಾಡಿದೆನು ಮೇರಾ ದಿಯಾ ಮತ್ತು ಇತರ ಕವನಗಳು (ರಾಜಮಂಗಲ ಪಬ್ಲಿಕೇಷನ್ಸ್ 2022) ವಿಮರ್ಶೆ/ಗದ್ಯ ಪರಿಶೀಲನ ವಿಮರ್ಶೆಯ ಪೂರ್ವ ಪಶ್ಚಿಮ ಸೌಂದರ್ಯ ಸಮೀಕ್ಷೆ. (ಇದು ಅವರ ಪಿಹೆಚ್‌ಡಿ ಮಹಾ ಪ್ರಬಂಧ) ಕಾವ್ಯಾರ್ಥ ಚಿಂತನ ಗತಿಬಿಂಬ ಅನುರಣನ ಪ್ರತಿಕ್ರಿಯೆ ಕನ್ನಡ ಸಾಹಿತ್ಯ ಸಮೀಕ್ಷೆ ಮಹಾಕಾವ್ಯ ಸ್ವರೂಪ ಕನ್ನಡ ಕವಿಗಳ ಕಾವ್ಯ ಕಲ್ಪನೆ ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ ಕುವೆಂಪು : ಪುನರವಲೋಕನ ಸಮಗ್ರ ಗದ್ಯ ಭಾಗ ೧, ೨ ಮತ್ತು ೩ ಬೆಡಗು ನವೋದಯ - ಕುವೆಂಪು-ಒಂದು ಪುನರ್ವಿಮರ್ಶೆ - ಕರ್ನಾಟಕ ಸರ್ಕಾರಕ್ಕೆ ಕುವೆಂಪು ಮೇಲೆ ಜೀವನಚರಿತ್ರೆಯ ಕೆಲಸ ಪ್ರವಾಸ ಕಥನ ಮಾಸ್ಕೋದಲ್ಲಿ ೨೨ ದಿನ -(ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ) ಇಂಗ್ಲೆಂಡಿನಲ್ಲಿ ಚತುರ್ಮಾಸ ಅಮೆರಿಕದಲ್ಲಿ ಕನ್ನಡಿಗ ಗಂಗೆಯ ಶಿಖರಗಳಲ್ಲಿ ಜೀವನ ಚರಿತ್ರೆ ಕರ್ಮಯೋಗಿ (ಸಿದ್ದರಾಮನ ಜೀವನ ಚರಿತ್ರೆ) ಪ್ರಶಸ್ತಿ/ಪುರಸ್ಕಾರಗಳು ಮತ್ತು ಪಡೆದ ಇಸವಿ ಜಿ.ಎಸ್.ಶಿವರುದ್ರಪ್ಪನವರಿಗೆ ವಿಮರ್ಶೆಗಾಗಿ ೧೯೮೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು. ಇದಲ್ಲದೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨), ರಾಜ್ಯೋತ್ಸವ ಪ್ರಶಸ್ತಿ, ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ (೧೯೭೩)ಸಹ ಶಿವರುದ್ರಪ್ಪನವರಿಗೆ ದೊರೆತಿವೆ. ೨೦೦೬ನೆಯ ಸಾಲಿನಲ್ಲಿ ಜರಗುತ್ತಿರುವ ಸುವರ್ಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕ ಸರಕಾರವು ರಾಷ್ಟ್ರಕವಿ (೨೦೦೬) ಎನ್ನುವ ಗೌರವವನ್ನು ಪ್ರಧಾನಿಸಿದೆ. ಇತರೆ ಪ್ರಶಸ್ತಿಗಳು ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಜಿ.ಎಸ್.ಶಿವರುದ್ರಪ್ಪನವರು ೧೯೯೨ ರಲ್ಲಿ ದಾವಣಗೆರೆಯಲ್ಲಿ ಜರುಗಿದ ೬೧ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ಸ್ನೇಹ ಕಾರ್ತೀಕ,ಗೌರವ,ಹಣತೆ, ಇವು ಜಿ.ಎಸ್.ಎಸ್ ಅವರಿಗೆ ಅಭಿಮಾನಿಗಳು ಸಲ್ಲಿಸಿದ ಅಭಿನಂದನಾ ಗ್ರಂಥಗಳು. ನಿಧನ ಜಿ.ಎಸ್.ಶಿವರುದ್ರಪ್ಪನವರು 23 ಡಿಸೆಂಬರ್ 2013ರಂದು ತಮ್ಮ ಬನಶಂಕರಿಯ ನಿವಾಸದಲ್ಲಿ ನಿಧನರಾದರು. ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಅಂದು ಸ್ವರ್ಗಸ್ಥರಾದರು. ಜಿ.ಎಸ್.ಶಿವರುದ್ರಪ್ಪನವರ ಆಣತಿಯಂತೆಯೆ ಅವರ ದೇಹವನ್ನು ಮರಣಾನಂತರ ಮಣ್ಣು ಮಾಡದೆ ಸುಡಲಾಯಿತು. ಬೆಂಗಳೂರು ವಿ.ವಿ. ಸಮೀಪವಿರುವ ಕಲಾಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಸಕಲ ಸರ್ಕಾರಿ ಗೌರವ ಮರ್ಯಾದೆಯೊಂದಿಗೆ ದಿ. 24 ಡಿಸೆಂಬರ್ 2013ರಂದು ನೇರವೇರಿಸಲಾಯಿತು. ಓದು ಬರಹ ಬಿ. ಪಿ. ಆಶಾಕುಮಾರಿ ಅವರ ‛ಸುವರ್ಣ ಚೇತನ: ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ’ ಉಲ್ಲೇಖಗಳು ಪ್ರಕೃತಿ ಸೊಬಗಿಗೆ ಮಾರುಹೋಗಿದ್ದ ಜಿಎಸ್ಎಸ್‌ ಜಿಎಸ್ಎಸ್ ನಿಧನಕ್ಕೆ ಕಂಬನಿ ಮಿಡಿದ ದಾವಣಗೆರೆ ಕಲಾಗ್ರಾಮದಲ್ಲಿ ಜಿಎಸ್ಎಸ್‌ ಅಂತ್ಯಸಂಸ್ಕಾರ ಕಾವ್ಯ ಮೀಮಾಂಸೆಗೆ ಜಿಎಸ್‌ಎಸ್ ಕೊಡುಗೆ ಅಪಾರ ಚಿಂತನಶೀಲ, ಚಲನಶೀಲ ಗುರು... ಬರಗೂರು ರಾಮಚಂದ್ರಪ್ಪ ‘ಚೈತ್ರ’ದಲ್ಲಿ ನೋವು–ನಲಿವು ಭಾವ ಸಮ್ಮಿ ಲನ ರಾಷ್ಟ್ರಕವಿ ಜಿ. ಎಸ್ ಶಿವರುದ್ರಪ್ಪ ಇನ್ನಿಲ್ಲ ಕೋಟೆ ನಾಡಿನಲ್ಲಿ ರಾಷ್ಟ್ರಕವಿಯ ಹೆಜ್ಜೆಗಳು... ಜಿಎಸ್‌ಎಸ್‌ಗೆ ಜಯದೇವಶ್ರೀ ಪ್ರಶಸ್ತಿ ಪ್ರದಾನ , ಪ್ರಜಾವಾಣಿ ವಾರ್ತೆ Mon, 02/25/2013 - 01:38 ನಮ್ಮ ಕಾಲದ ಸಾಂಸ್ಕೃತಿಕ ನಾಯಕ , ನರಹಳ್ಳಿ ಬಾಲಸುಬ್ರಹ್ಮಣ್ಯ ರಾಷ್ಟ್ರಕವಿಗೆ ಸಾಹಿತ್ಯಾಭಿಮಾನಿಗಳ ಸಂತಾಪ 60 ವರ್ಷದ ಒಡನಾಡಿ ಜಿಎಸ್‌ಎಸ್‌ ನಿಧನಕ್ಕೆ ಕಂಬನಿ, ಒಡಲೆರಡು, ಜೀವವೂಂದೇ: ಕಣವಿ; ಶ್ರೇಷ್ಠ ಸಂಘಟಕ : ಕಲಬುರ್ಗಿ ಹೊರಗಿನ ಸಂಪರ್ಕಗಳು ತ ಸು ಶಾಮರಾಯರ ಬಗ್ಗೆ ಜಿ ಎಸ್ ಎಸ್ ಬರೆದ ಲೇಖನ ಓ ಎಲ್ ಎನ್ ಸ್ವಾಮಿಯವರು ನಡೆಸಿಕೊಟ್ಟ ಜಿ ಎಸ್ ಶಿವರುದ್ರಪ್ಪನವರ ಶ್ರಾವ್ಯ ಸಂದರ್ಶನ - ಸಂಪದದಲ್ಲಿ ಸಾಹಿತಿಗಳು ೧೯೨೬ ಜನನ ನೃಪತುಂಗ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು ಕನ್ನಡ ಸಾಹಿತಿಗಳು ಪಂಪ ಪ್ರಶಸ್ತಿ ಪುರಸ್ಕೃತರು ನಾಡೋಜ ಪ್ರಶಸ್ತಿ ಪುರಸ್ಕೃತರು ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರು
2421
https://kn.wikipedia.org/wiki/%E0%B2%95%E0%B3%86.%20%E0%B2%8E%E0%B2%B8%E0%B3%8D.%20%E0%B2%A8%E0%B2%BF%E0%B2%B8%E0%B2%BE%E0%B2%B0%E0%B3%8D%20%E0%B2%85%E0%B2%B9%E0%B2%AE%E0%B2%A6%E0%B3%8D
ಕೆ. ಎಸ್. ನಿಸಾರ್ ಅಹಮದ್
ಪ್ರೊ.ಕೆ.ಎಸ್.ನಿಸಾರ್ ಅಹಮದ್(5 ಫೆಬ್ರುವರಿ 1936 - 3 ಮೇ 2020) ಕನ್ನಡದ ಪ್ರಮುಖ ಕವಿಯಾಗಿದ್ದರು. ಅವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್. ಅವರು ಬರೆದ 'ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ' ಎಂಬ ಪದ್ಯವು ಬಹಳ ಜನಪ್ರಿಯವಾಗಿ ಅವರು ನಿತ್ಯೋತ್ಸವ ಕವಿಯೆಂದೂ ಕರೆಯಲ್ಪಡುತ್ತಿದ್ದರು. ಜೀವನ ನಿಸಾರ್ ಅಹಮದ್ ಬೆಂಗಳೂರ ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂರಚನಶಾಸ್ತ್ರ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತರು ಸಾಹಿತ್ಯ ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗೂ ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ. ೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು,ಗೀತೆಗಳು ಸಂಗೀತದೊಂದಿಗೆ ಪ್ರಚಾರಗೊಂಡಿತು. ಕುರಿಗಳು ಸಾರ್‍ ಕುರಿಗಳು, ರಾಜಕೀಯ ವಿಡಂಬನೆ ಕವನ ಭಾರತವು ನಮ್ಮ ದೇಶ (ಸರ್‍ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ) ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ. ಕೃತಿಗಳು ಕವನ ಸಂಕಲನಗಳು ಮನಸು ಗಾಂಧಿ ಬಜಾರು (೧೯೬೦) ನೆನೆದವರ ಮನದಲ್ಲಿ (೧೯೬೪) ಸುಮುಹೂರ್ತ (೧೯೬೭) ಸಂಜೆ ಐದರ ಮಳೆ (೧೯೭೦) ನಾನೆಂಬ ಪರಕೀಯ (೧೯ ನಿತ್ಯೋತ್ಸವ (೧೯೭೬) ಸ್ವಯಂ ಸೇವೆಯ ಗಿಳಿಗಳು (೧೯೭೭) ಅನಾಮಿಕ ಆಂಗ್ಲರು(೧೯೮೨), ಬಹಿರಂತರ (೧೯೯೦) ಸಮಗ್ರ ಕವಿತೆಗಳು (೧೯೯೧) ನವೋಲ್ಲಾಸ (೧೯೯೪) ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮) ಅರವತ್ತೈದರ ಐಸಿರಿ(೨೦೦೧) ಸಮಗ್ರ ಭಾವಗೀತೆಗಳು(೨೦೦೧) ಪ್ರಾತಿನಿಧಿಕ ಕವನಗಳು(೨೦೦೨) ನಿತ್ಯೋತ್ಸವ ಕವಿತೆ ಗದ್ಯ ಸಾಹಿತ್ಯ ಅಚ್ಚುಮೆಚ್ಚು ಇದು ಬರಿ ಬೆಡಗಲ್ಲೊ ಅಣ್ಣ ಷೇಕ್ಸ್ ಪಿಯರನ ಒಥೆಲ್ಲೊದ ಕನ್ನಡಾನುವಾದ ಅಮ್ಮ ಆಚಾರ ಮತ್ತು ನಾನು' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ) ಪ್ರಶಸ್ತಿ ಪುರಸ್ಕಾರಗಳು ೨೦೦೬ರ ಮಾಸ್ತಿ ಪ್ರಶಸ್ತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೊರೂರು ಪ್ರಶಸ್ತಿ ಅನಕೃ ಪ್ರಶಸ್ತಿ ಕೆಂಪೇಗೌಡ ಪ್ರಶಸ್ತಿ ಪಂಪ ಪ್ರಶಸ್ತಿ ೧೯೮೧ರ ರಾಜ್ಯೋತ್ಸವ ಪ್ರಶಸ್ತಿ ೨೦೦೩ರ ನಾಡೋಜ ಪ್ರಶಸ್ತಿ ೨೦೦೬ರ ಅರಸು ಪ್ರಶಸ್ತಿ ೨೦೦೬ ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಉಲ್ಲೇಖಗಳು ಹೊರಸಂಪರ್ಕಕೊಂಡಿಗಳು ನಿಸಾರ್‌ ಅಹಮದ್‌ ಸಂದರ್ಶನ | ಲಾಲ್‌ಬಾಗ್‌ ಏಕಾಂತಕ್ಕೆ ಗಾಂಧಿ ಬಜಾರು ಲೋಕಾಂತಕ್ಕೆ- ಪ್ರಜಾವಾಣಿ ಜೋಗದ ಸಿರಿ ಬೆಳಕಿನಲ್ಲಿ ಮರೆಯಾದ ನಿತ್ಯೋತ್ಸವ ಕವಿ By Anil Basur|d: Sunday, May 3, 2020 ಕೆ.ಎಸ್.ನಿಸಾರ್ ಅಹಮದ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ೧೯೩೬ ಜನನ ೨೦೨೦ ನಿಧನ ನಾಡೋಜ ಪ್ರಶಸ್ತಿ ಪುರಸ್ಕೃತರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಕವಿಗಳು ಪಂಪ ಪ್ರಶಸ್ತಿ ಪುರಸ್ಕೃತರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು
2422
https://kn.wikipedia.org/wiki/%E0%B2%A6%E0%B2%BF%E0%B2%A8%E0%B2%95%E0%B2%B0%20%E0%B2%A6%E0%B3%87%E0%B2%B8%E0%B2%BE%E0%B2%AF%E0%B2%BF
ದಿನಕರ ದೇಸಾಯಿ
ದಿನಕರ ದೇಸಾಯಿ (೧೯೦೯-೧೯೮೨) ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. "ಚುಟುಕ ಬ್ರಹ್ಮ"ನೆಂದು ಪ್ರಖ್ಯಾತರಾಗಿದ್ದಾರೆ. ವಿದ್ಯಾಭ್ಯಾಸ ಮತ್ತು ವೃತ್ತಿ-ಜೀವನ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಅಲಗೇರಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ದಿನಕರರ ತಂದೆ ದತ್ತಾತ್ರೇಯ ದೇಸಾಯಿ, ಶಾಲಾ ಮಾಸ್ತರರು. ತಾಯಿ ಅಂಬಿಕಾ. ಚಿಕ್ಕ ವಯಸ್ಸಿನಲ್ಲೇ ತಾಯನ್ನು ಕಳೆದುಕೊಂಡ ದಿನಕರರಿಗೆ ಏಕಾಂತ ಜೀವನ, ಪ್ರಕೃತಿಯ ಚೆಲುವು ಮನಸ್ಸಿನ ತುಂಬಾ ತುಂಬಿಕೊಂಡಿತ್ತು . ಕಿರಿಯ ವಯಸ್ಸಲ್ಲೇ ಕಾವ್ಯ ಅವರ ಮನದಲ್ಲಿ ಉದಯಿಸತೊಡಗಿತು. ಅದಕ್ಕೆ ನೀರೆರದು ಪೋಷಿಸಿದವರು ರಂಗರಾವ ಹಿರೇಕೆರೂರು ಎಂಬ ಪಂಡಿತರು. ಅವರ ಮಾರ್ಗದರ್ಶನದಲ್ಲಿ ದಿನಕರರು ವಿವಿಧ ಛಂದಸ್ಸುಗಳಲ್ಲಿ ಕಾವ್ಯ ರಚಿಸುವುದನ್ನು ಕಲಿತರು. 'ಚೌಪದಿ' ಅವರಿಗೆ ಪ್ರಿಯವಾದ ಕಾವ್ಯರಚನಾ ಛಂದಸ್ಸು. ಮೆಟ್ರಿಕ್ ಪರೀಕ್ಷೆಯನ್ನು ಬರೆಯಲು ಧಾರವಾಡಕ್ಕೆ ಹೋದಾಗ ಬಿ.ಎಂ.ಶ್ರೀ ಯವರ ಇಂಗ್ಲೀಷ್ ಗೀತೆಗಳನ್ನು ನೋಡಿ ಬೆರಗಾದರು. ಅವರ ಇಂಟರ್ ಮೀಡಿಯೇಟ್ ಶಿಕ್ಷಣ, ಬೆಂಗಳೂರಿನಲ್ಲಿ ಹಾಗೂ ಬಿ.ಎ. ಕನ್ನಡ, ಇತಿಹಾಸ, ರಾಜ್ಯಶಾಸ್ತ್ರದ ವ್ಯಾಸಂಗ ಮೈಸೂರಿನಲ್ಲಿ ಜರುಗಿತು. ಅವರ ಗುರುಗಳಲ್ಲಿ ಪ್ರಮುಖರು- ಬಿ.ಎಂ.ಶ್ರೀಕಂಠಯ್ಯ, ವಿ.ಸೀತಾರಾಮಯ್ಯನವರು ಹಾಗೂ ಟಿ.ಎಸ್.ವೆಂಕಣ್ಣಯ್ಯನವರಂಥ ಧೀಮಂತ ವ್ಯಕ್ತಿಗಳು. ಪದವಿ ಶಿಕ್ಷಣದ ಕೊನೆಯ ವರ್ಷದಲ್ಲಿ ಇತಿಹಾಸದ ವಿಷಯದಲ್ಲಿ ಪ್ರಸಿದ್ಧ " ಕ್ಯಾಂಡಿ ಪಾರಿತೋಷಕ' ಗಳಿಸಿದರು. ನಂತರ ಬೊಂಬಾಯಿನ, 'ಸೈಂಟ್ ಝೇವಿಯರ್ ಕಾಲೇಜ್' ನಲ್ಲಿ ಇತಿಹಾಸದ ವಿಷಯದೊಂದಿಗೆ, ಎಂ.ಎ. ಪದವಿಯನ್ನು ಉನ್ನತ ದರ್ಜೆಯಲ್ಲಿ ಮುಗಿಸಿದರು. ಅದರ ಜೊತೆ, ಎಲ್.ಎಲ್.ಬಿ ಪರೀಕ್ಷೆಯನ್ನೂ ಮುಗಿಸಿದರು. ಕಾರ್ಮಿಕ ಸಂಘಟಕರಾಗಿ ಬೊಂಬಾಯಿಯಲ್ಲಿ 'ಭಾರತ ಸೇವಕ ಸಮಾಜ' ದ ಬಗ್ಗೆ ಅರಿತು, ಅದರ ಸದಸ್ಯರಾದರು. ಎಮ್.ಎನ್. ಜೋಷಿಯವರೇ ಆ ಸಂಸ್ಥೆಯ ಕಾರ್ಮಿಕ ಮುಖಂಡರು. ಅವರು ಕೇಂದ್ರ ಅಸೆಂಬ್ಲಿಯ ಸದಸ್ಯರಾಗಿದ್ದರು. ಜೋಷಿಯವರ ಜೊತೆಯಲ್ಲಿ ದೆಹಲಿಗೆ ಹೋದ ದೇಸಾಯಿಯವರು, ಪತ್ರಿಕಾರಂಗಕ್ಕೂ ಪಾದಾರ್ಪಣೆ ಮಾಡಿದರು. 'ಅಸೆಂಬ್ಲಿಯ ಗ್ಯಾಲರಿಯಿಂದ,' ಎಂಬ ಶೀರ್ಷಿಕೆಯಡಿಯಲ್ಲಿ 'ಸಂಯುಕ್ತ-ಕರ್ನಾಟಕ' ಪತ್ರಿಕೆಗೆ, ವರದಿಗಳನ್ನು ಬರೆದು ಕಳಿಸುತ್ತಿದ್ದರು. ಜೋಷಿಯವರ ಆದೇಶದ ಮೇರೆಗೆ, ಗೋಕಾಕ್ ಗೆ ಹೋಗಿ ಅಲ್ಲಿನ 'ಗೋಕಾಕ್ ಹತ್ತಿ ಗಿರಣಿಯ ಕಾರ್ಮಿಕರ ಹೋರಾಟ' ದಲ್ಲಿ ಪಾಲ್ಗೊಂಡರು. ಇಲ್ಲಿ ದೊರೆತ ಅನುಭವದಿಂದ ಬೊಂಬಾಯಿನಲ್ಲಿ 'ಕಡಲ ಕೆಲಸಗಾರರ ಸಂಘ' ವನ್ನು ಕಟ್ಟಿಬೆಳೆಸಿದರು. ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಅದನ್ನು ಪ್ರತಿನಿಧಿಸಿದರು. ಉತ್ತರ ಕನ್ನಡ ಜಿಲ್ಲೆಯ ರೈತರನು ಸಂಘಟಿಸಿದರು.'ಉಳುವವನೇ ಭೂಮಿಯ ಒಡೆಯ' ತತ್ವವನ್ನು ಸಾರಿ ಎತ್ತಿಹಿಡಿದರು. ಬ್ರಿಟಿಷರ ಕೋಪಕ್ಕೆ ಗುರಿಯಾದರು. ಬ್ರಿಟಿಷ್ ಸರ್ಕಾರ ಅವರಿಗೆ ೫ ವರ್ಷ ' ಗಡೀಪಾರಿನ ಶಿಕ್ಷೆ ' ವಿಧಿಸಿತ್ತು. 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದಿನಕರ ದೇಸಾಯಿಯವರು, ಒಟ್ಟು ೧೨ ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ, ' ದಿನಕರನ ಚೌಪದಿ' 'ಕರ್ನಾಟಕ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ ' ಗೆ ಆಯ್ಕೆಯಾಯಿತು. ಅವರ ಚೌಪದಿಗಳಲ್ಲಿ ಎಲ್ಲಾ ರಸಗಳೂ ಅಡಕವಾಗಿರುತ್ತಿದ್ದವು. ಬಂಡಾಯ ಸಾಹಿತ್ಯ ಪರಂಪರೆ ಶುರುವಾಗುವ ದಶಕಗಳ ಮೊದಲೇ ೧೯೩೧ ರಲ್ಲಿ 'ಬಾರ್ಡೋಲಿ ಸತ್ಯಾಗ್ರಹ' ದ ಬಗೆಗೆ, ಚುಟುಕು ಪದ್ಯಗಳನ್ನು ರಚಿಸಿದ್ದರು. 'ಹಾಲಕ್ಕಿ ಜನಾಂಗ' ದ ಬಗೆಗೆ ಬರೆದ ಚುಟುಕ, 'ದೀನ-, ದಲಿತರ ಬಗೆಗೆ ಇದ್ದ ಕಾಳಜಿ' ಯನ್ನು ದರ್ಶಾಯಿಸುತ್ತದೆ. ಅವರ ಕವಿತೆಗಳಲ್ಲಿ 'ಅಲಂಕಾರಿಕ ಕುಸುರಿ ಕೆಲಸ' ವನ್ನು ಇಷ್ಟಪಡದೆ, ನೇರವಾಗಿ ಮನಸ್ಸಿಗೆ ನಾಟುವಂತೆ ಬರವಣಿಗೆ ಅವರಿಗೆ ಪ್ರಿಯವಾಗಿತ್ತು. 'ಇವನ ಮನೆಯೊಳಗಿಲ್ಲ ಸಾಕಷ್ಟು ಅಕ್ಕಿ ಆದರೂ ಈತನಿಗೆ ಹೆಸರು 'ಹಾಲಕ್ಕಿ' ಹಾಲು ಅಕ್ಕಿಗಳೆರಡೂ ಹೆಸರೊಳಗೆ ಮಾತ್ರ ಹಸಿವೆಯೊಂಬುದು ಇವನ 'ಹಣೆಯ ಕುಲಗೋತ್ರ' ಕೃತಿಗಳು ಅವರ ಪ್ರಥಮ ಸಂಕಲನದ ಹೆಸರು "ಕವನ ಸಂಗ್ರಹ" (೧೯೫೦) "ಹೂ ಗೊಂಚಲು" "ತರುಣರ ದಸರೆ" "ಕಡಲ ಕನ್ನಡ" ದಾಸಾಳ, ಮಕ್ಕಳ ಗೀತೆಗಳು, ಮತ್ತು ಮಕ್ಕಳ ಪದ್ಯಗಳುವಗೀತೆ ಹಾಗೂ ಶಿಶುಕವನಗಳ ಸಂಕಲನಗಳು. ಅವರು ಬರೆದ "ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್" ಎನ್ನುವದು ಮಕ್ಕಳಿಗೆ ಅತ್ಯಂತ ಪ್ರಿಯವಾದ ಕವನವಾಗಿತ್ತು. ಪ್ರವಾಸ ಕಥನ ನಾ ಕಂಡ ಪಡುವಣ" ಎಂಬ ಪ್ರವಾಸ ಕಥನವನ್ನೂ ಬರೆದಿದ್ದಾರೆ. ದಿನಕರರ ಆಯ್ದ ಚುಟುಕುಗಳು ೧. ಹೆಜ್ಜೆ ಹಾಕುತ ಬನ್ನಿರಿ ಮುಂದೆ, ನೋಡಲು ದಸರೆಯ ಹಬ್ಬವನು. ಉತ್ಸಾಹದ ಕಿರುಗೆಜ್ಜೆಯ ಕಟ್ಟಿ, ಹಾಡಿರಿ ನಾಡಿನ ಕಬ್ಬವನು. ೨. ಮನವು ನಲಿದಾಡಲಿಕೆ ಕಡಲು ಕುಣಿದಾಡುವುದು/ ಹಸಿರೇ ಉಸಿರಾಡುವುದು ಎಲ್ಲ ಕಡೆಗೆ/ ಗಗನವೇ ಮುತ್ತಿಡುವ ಉತ್ತುಂಗ ಶಿಖರವೇ / ಕಳಶವಲ್ಲವೇ ನಮ್ಮ ಬಾಳ ಗುಡಿಗೆ. ೩. ಸಾಗರವು ಆಗಸವನ್ನಾಲಂಗಿಸುವ ಕ್ಷಿತಿಜ / ನಮ್ಮ ಮನೆಯಂಗಳದ ಕೊನೆಯ ರೇಖೆ/ ನಮ್ಮ ಹೃದಯಾಕಾರ ಸಾಗದ ವಿಸ್ತಾರ / ಅದರಂತೆ ಆಳವೂ ಆಗದೇಕೆ ? ೪. ನಾ ಬರೆದ ಚುಟುಕುಗಳ ಸಂಖ್ಯೆ ವಿಪರೀತ / ಶೇಕಡಾ ತೊಂಬತ್ತು ಹೊಡೆಯುವವು ಗೋತಾ / ಉಳಿದ ಹತ್ತರ ಪೈಕಿ ಏಳೆಂಟು ಸತ್ತು / ಒಂದೆರಡು ಬದುಕಿದರೆ ಅವು ಮಾತ್ರ ಮುತ್ತು. ೫. ಇವನು ಅಂಕೋಲೆಯವ ಮುದುಕಾಗಿ ಸತ್ತ/ ಇವನ ಕೈಯೊಳಗಿತ್ತು ಚೌಪದಿಯ ಬೆತ್ತ/ ಹಾವಳಿಯನೆಬ್ಬಿಸಿದ ಈ ಬೆತ್ತದಿಂದ ಕಹಿ / ವಿಡಂಬನ ಗುಳಿಗೆ ಕನ್ನಡಕ ತಂದ ೬. ನಾನು ಹುಟ್ಟಿದ್ದು ಸಖಿ ಅಂಕೋಲೆಯಲ್ಲಿ / ಚಿಂತೆಯಿಲ್ಲದೆ ಸಾಯಬೇಕೆಂಬೆ ಅಲ್ಲಿ / ಅಂಕೋಲೆ ಎನ್ನುವುದು ಕನ್ನಡದ ಕಡಲು / ಈ ಕಡಲಿನೊಳಗಿರಲಿ ದಿನಕರನ ಒಡಲು. ಪತ್ರಿಕಾರಂಗದಲ್ಲಿ "ಜನಸೇವಕ" ಎಂಬ ಪತ್ರಿಕೆಯ ಮೂಲಕ ಜನಕ್ಕೆ ತಿಳಿವನ್ನೂ, ಅರಿವನ್ನೂ ಮೂಡಿಸಿದ ದಿನಕರ ದೇಸಾಯಿಯವರಿಗೆ ಸಾಹಿತ್ಯಲೋಕದಲ್ಲಿ ಅಪಾರ ಜನಪ್ರಿಯತೆ ತಂದು ಕೊಟ್ಟದ್ದು ಅವರ ಚುಟುಕುಗಳು. ಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ "ದೀನ ದಲಿತ ದೇವ ಬಡವ" ಎಂಬ ಕವಿತೆ ಬಹಳ ಪ್ರಸಿದ್ದಿಯಾಯಿತು. ಸುಧಾ - ವಾರಪತ್ರಿಕೆಯಲ್ಲಿ ದಿನಕರ ದೇಸಾಯಿಯವರ ಅನೇಕ ಚುಟುಕುಗಳು ಬೆಳಕು ಕಂಡಿದ್ದವು. ಅವರನ್ನು "ಚುಟುಕು ಬ್ರಹ್ಮ" ಎಂದೇ ಸಾಹಿತ್ಯಲೋಕದಲ್ಲಿ ಗುರುತಿಸುತ್ತಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ೧೯೫೫ ರಲ್ಲಿ ಅಂಕೋಲದಲ್ಲಿ ' ಜನಸೇವಕ ಕನ್ನಡ ವಾರ ಪತ್ರಿಕೆ' ಯ ಆರಂಭಮಾಡಿದರು. ಸುಮಾರು ೧೭ ವರ್ಷಗಳವರೆಗೆ ನಡೆಸಿಕೊಂಡು ಬಂದ ಈ ಪತ್ರಿಕೆಯಲ್ಲಿ ಗೌರೀಶ ಕಾಯ್ಕಿಣಿಯವರು, ಹಲವು ವರ್ಷಗಳ ಕಾಲ ಬರಹಗಳನ್ನು ಬರೆದರು. ಶ್ರೀ ದಿನಕರ ದೇಸಾಯಿಯವರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಶೈಕ್ಷಣಿಕ ಕ್ರಾಂತಿಗೆ ಹರಿಕಾರರಾದರು. ತಾಲೂಕು ಸ್ಥಳಗಳನ್ನು ಹೊರತುಪಡಿಸಿ, ಗ್ರಾಮೀಣ ಪ್ರದೇಶದಲ್ಲಿ ಶಾಲಾ ಸೌಲಭ್ಯಗಳು ಉತ್ತರ ಕನ್ನಡ ಜಿಲ್ಲೆಯ ಮಕ್ಕಳಪಾಲಿಗೆ ಗಗನ ಕುಸುಮವಾಗಿತ್ತು. ಹಳ್ಳಿಗಳಿಂದ ಮಕ್ಕಳು ತುಂಬಾದೂರದವರೆಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕಾಗಿ ಕಾಲುನಡಿಗೆಯಲ್ಲಿ ಹೋಗಬೇಕಾಗಿತ್ತು. ಈ ಕಷ್ಟವನ್ನು ಮನಗಂಡ ಶ್ರೀ ದಿನಕರರು, ಸ್ವಪ್ರಯತ್ನದಿಂದ ೧೯೫೩ ರಲ್ಲಿ "ಕೆನರಾ ವೆಲ್ ಫೇರ್ ಸೋಸೈಟಿ" ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಸುಮಾರು ೨೭ ಜನತಾ ವಿಧ್ಯಾಲಯಗಳನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಕ್ಕಳಿಗಾಗಿ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭಿಸಿದರು ಮತ್ತು ಅಂಕೋಲೆಯಲ್ಲಿ ಒಂದು 'ಗೋಖಲೆ ಸೆ೦ಟಿನರಿ ಕಾಲೇಜ ' ನ್ನು ಪ್ರಾರಂಭಿಸಿದರು . ೨೦೦೬ ರಲ್ಲಿ 'ಸುವರ್ಣ ಮಹೋತ್ಸವ' ವನ್ನು ಆಚರಿಸಿಕೊ೦ಡಿದೆ. ಶಿಕ್ಷಣ ಕ್ಶೇತ್ರದಲ್ಲೂ ರವರು ಗಮನಾರ್ಹ ಛಾಪನ್ನು ಮೂಡಿಸಿದ್ದರು. 'ಪ್ರೈಮರಿ ಎಜುಕೇಷನ್ ಇನ್ ಇಂಡಿಯ' ಎಂಬ ಆಂಗ್ಲ ಕೃತಿಯನ್ನು ರಚಿಸಿದರು. ರಾಜಕೀಯ ಕ್ಷೇತ್ರದಲ್ಲಿ ಧುಮುಕಿದ ದಿನಕರ್ ರವರು, 'ಬೊಂಬಾಯಿನ ಕಾರ್ಪೊರೇಷನ್ ನ ಕಾರ್ಪೊರೇಟರ್ ಆಗಿ ೧೩ ವರ್ಷ ದುಡಿದರು. ೧೯೬೭ ರಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ 'ಪಕ್ಷೇತ್ರರ ಸಂಸದ' ರಾಗಿ ಚುನಾಯಿತರಾಗಿದ್ದರು. 'ಸಮಾಜವಾದ ತತ್ವ' ದ ಪ್ರತಿಪಾದಕರಾಗಿದ್ದ ರ್ವರು, ಸಂಸತ್ ನಲ್ಲಿ ಸಾಮಾನ್ಯ ಜನರ ಬವಣೆಗಳ ಬಗೆಗೆ ದನಿಎತ್ತಿದ್ದರು. ನೇರ ಹಾಗೂ ಸರಳಜೀವಿಯಾಗಿದ್ದ ದೇಸಾಯಿಯವರು, 'ಇಂದಿರಾ ' ಅವರ ಜೊತೆ ವಿವಾಹವಾದರು. ವಿವಾಹಕ್ಕೆ ಸಂದ ಖರ್ಚು ಕೇವಲ ೭ ರೂಪಾಯಿಗಳು. ಅದೂ ನೋಂದಣಿಗಾಗಿ. ಸಂಸದರಾಗಿದ್ದಾಗಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಬಳಸುತ್ತಿದ್ದರು. ಪ್ರಚಾರಪ್ರಿಯತೆ ಅವರಿಗೆ ಸರಿಬರುತ್ತಿರಲಿಲ್ಲ. ಅವರ ಗೆಳೆಯರು ಆಪ್ತರೆಲ್ಲಾ ಸೆರಿ ಅವರ "ಶಷ್ಠ್ಯಬ್ದಿಪೂರ್ತಿ ಸಮಾರಂಭ " ವನ್ನು ಆಯೋಜಿಸಿದ್ದರು. ಆದರೆ ದಿನಕರ ದೇಸಾಯಿಯವರು ನಾಪತ್ತೆಯಾಗಿದ್ದರು. ಒಂದು 'ಚೌಪದಿ' ಯನ್ನು ಬರೆದು ತಮ್ಮ ಅನಿಸಿಕೆಗಳನ್ನು ಸ್ಪಷ್ಟಪಡಿಸಿದರು. " ನನಗೇಕೆ ಶಷ್ಠ್ಯಬ್ದಿ ಸಾಕು ಬರವಣಿಗೆ/ಕವಿಗೆ ಬೇಕಾಗಿಲ್ಲ ಯಾವ ಮೆರವಣಿಗೆ/ಮೂಲೆಯಲಿ ಕುಳಿತು ಬರೆದರೆ ಒಂದು ಪದ್ಯ/ತಾಯ್ನುಡಿಗೆ ಅರ್ಪಿಸಿದ ಹಾಗೆ ನೈವೇದ್ಯ " -ಎಂಬ ಸಾಲುಗಳು, ಅವರ 'ಮನೋಧರ್ಮ' ವನ್ನು ಪ್ರತಿಪಾದಿಸುತ್ತವೆ. ಮರಣ ದಿನಕರದೇಸಾಯಿಯವರು, ಅನೇಕ ಸಾಮಾಜಿಕ ಸಮಸ್ಯೆಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಸಮರ್ಥವಾಗಿ ನೀಡಿದ್ದಾರೆ. ಸಮಯಬಂದಾಗ, ಅವರ ಪರಿಮಿತಿಯಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿ ಅನುಕರಣೀಯರಾಗಿದ್ದಾರೆ. ಆದರ್ಶಮಯ ಜೀವನವನ್ನು ನಡೆಸಿದ ಜನಪರ-ಸಾಹಿತಿ, 'ದಿನಕರ್' ರವರು, ನವೆಂಬರ್, ೬, ರ ೧೯೮೨ ರಲ್ಲಿ ತಮ್ಮ ಕೊನೆಯುಸಿರೆಳೆದರು. ಹುಟ್ಟಿನಿಂದ ಮರಣದ ತನಕ ಬಡತನದಲ್ಲೇ ಜೀವಿಸಿದ ವ್ಯಕ್ತಿ. ದಿನಕರ ದೇಸಾಯಿ'ಯವರು ಇಂದಿರಾ ದೇಸಾಯಿಯವರನ್ನು ಲಗ್ನವಾದರು. ಆಕೆ ಸನ್, ೨೦೦೨ ರಲ್ಲಿ ತೀರಿಕೊಂಡರು. ಈ ದಂಪತಿಗಳಿಗೆ ಇಬ್ಬರು ಮಕ್ಕಳು. ಹಿರಿಯ ಮಗಳು ಉಷಾ ಪ್ರಧಾನ್, . ಕಿರಿಯಮಗಳು, ನಿಶಾ ವೆಂಗ್ ಸರ್ಕರ್, ಉಲ್ಲೇಖಗಳುಹೊರ ಸಂಪರ್ಕ :''' ದಿನಕರ ದೇಸಾಯಿ ದಿನಕರ ದೇಸಾಯಿ ಮುಂಬಯಿ ಕನ್ನಡಿಗರು ಕನ್ನಡ ಕವಿಗಳು ಮುಂಬಯಿನ ಲೇಖಕರು
2424
https://kn.wikipedia.org/wiki/%E0%B2%B0%E0%B2%BE%E0%B2%AE%E0%B2%95%E0%B3%83%E0%B2%B7%E0%B3%8D%E0%B2%A3%20%E0%B2%B9%E0%B3%86%E0%B2%97%E0%B2%A1%E0%B3%86
ರಾಮಕೃಷ್ಣ ಹೆಗಡೆ
ರಾಮಕೃಷ್ಣ ಹೆಗಡೆ (೨೯-೮-೧೯೨೬ -೧೨-೧-೨೦೦೪), ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ರಾಜಕೀಯ ಮುತ್ಸದ್ಧಿಯಾಗಿದ್ದರು. ಇವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಇವರು ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ. ಜನನ, ವಿದ್ಯಾಭ್ಯಾಸ, ವೃತ್ತಿ ಜೀವನ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದಲ್ಲಿ ೧೯೨೬, ಅಗಸ್ಟ್ ೨೯ ರಂದು , ಮಹಾಬಲೇಶ್ವರ ಹೆಗ್ಡೆ ಹಾಗು ಸರಸ್ವತಿ ಹೆಗ್ಡೆ ದಂಪತಿಗಳಿಗೆ ಹವ್ಯಕ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದರು. ಕೃಷಿಕ ಕುಟುಂಬದಿಂದ ಬಂದ ಇವರು ಮುಂದೆ ಇವರು ಕಾಶಿ ವಿದ್ಯಾಪೀಠ, ಬನಾರಸ್ ಹಾಗು ಲಕ್ನೋ ಯುನಿವರ್ಸಿಟಿ ಗಳಲ್ಲಿ ಓದಿ ನ್ಯಾಯ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸ್ವಾತಂತ್ರ್ಯ ಚಳುವಳಿಯಲ್ಲೂ ಭಾಗವಹಿಸಿದ್ದ ಇವರು ೧೯೪೨ ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನೊ ಅನುಭವಿಸಿದ್ದರು. ತನ್ನ ೨೦ನೇ ವಯಸಲ್ಲೇ ರೈತ ಚಳುವಳಿಯನ್ನು ರಾಜ್ಯದಲ್ಲಿ ರೂಪಿಸಿದರು. ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಲಾ ಹೆಗಡೆ. ಕನ್ನಡದ "ಮರಣ ಮೃದಂಗ" ಹಾಗೂ "ಪ್ರಜಾಶಕ್ತಿ" ಚಲನಚಿತ್ರಗಳಲ್ಲಿ ನಟಿಸಿದ್ಧಾರೆ. ರಾಜಕೀಯ ವಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ೧೯೫೪ ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ ಇವರು ೧೯೫೭ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾದರು. ಇಂದಿರಾ ಗಾಂಧಿ ೧೯೭೫ ರಲ್ಲಿ ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಜೈಲುವಾಸವನ್ನು ಕಂಡು, ಹೊರಬಂದ ನಂತರ ಜನತಾ ಪಾರ್ಟಿಯನ್ನು ಸೇರಿದ್ದರು. ೧೯೮೩ರಲ್ಲಿ ರಾಜ್ಯ ಭಾರತೀಯ ಜನತಾ ಪಕ್ಷದ ೧೮ ಶಾಸಕರ ಬೆಂಬಲದೊಂದಿಗೆ ರಾಜ್ಯದ ಮುಖ್ಯಮಂತ್ರಿಯಾದ ಇವರು ದೇಶದ ಮೊದಲ ಕಾಂಗ್ರೆಸ್ಸ್ಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.೧೯೮೫ರಲ್ಲಿ ನಡೆದ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಳಲ್ಲಿ ತನ್ನ ಪಕ್ಷದ ಸಾಮಾನ್ಯ ಗೆಲುವನ್ನು ಕಂಡ ರಾಮಕೃಷ್ಣ ಹೆಗಡೆ ಪಕ್ಷದ ಸೋಲಿನ ನೈತಿಕ ಜವಾಬ್ದಾರಿಯನ್ನು ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆ ವರ್ಷ ನಡೆದ ವಿದಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಪಂಚಾಯತ್ ರಾಜ್ ಕಾನೂನಿನಲ್ಲಿ ಹೆಗಡೆಯವರ ಪಾತ್ರ,ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ ರಾಮಕೃಷ್ಣ ಹೆಗಡೆಯವರ ಪಾತ್ರ, ರೈತರಿಗೆ ಸಾಲ ಮನ್ನ, ಕಡಿಮೆ ಬಡ್ಡಿ ಸಾಲ ಮುಂತಾದವು ರಾಜಕಾರಣ ಅಂದ ಕೂಡಲೇ ಜನಗಳ ನೆನಪಿಗೆ ಬರುವಂತದ್ದು. ೧೯೮೮ರಲ್ಲಿ ದೂರವಾಣಿ ಕದ್ದಾಲಿಕೆ ಹಗರಣದ ಕಾರಣ ಅವರು ರಾಜೀನಾಮೆ ಕೊಟ್ಟು ಹೊರಬಂದರು. ಅವರ ನಂತರ ಎಸ್. ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾದರು ೧೯೮೯ರಲ್ಲಿ ಬಸವನಗುಡಿಯಿಂದ ಮತ್ತೆ ವಿಧಾನಸಭೆಗೆ ಚುನಾಯಿತರಾದರು ೧೯೮೯ರಲ್ಲಿ ವಿ. ಪಿ. ಸಿಂಗ್ ನೇತೃತ್ವದ ಕೇಂದ್ರೇಯ ಯೋಜನಾ ಅಯೋಗದ ಉಪಾಧ್ಯಕ್ಷರಾಗಿದ್ದರು. ಇದರ ವಿರುದ್ಧ ಎ.ಕೆ.ಸುಬ್ಬಯ್ಯನವರು ಆಗಿನ ರಾಜ್ಯಪಾಲರಿಗೆ ದೂರು ನೀಡಿದ್ದರು ಹಾಗು ಕರ್ನಾಟಕ ಹೈ ಕೋರ್ಟ್ ಇದರ ವಿಚಾರಣೆ ಮಾಡಿ ಅಂತಿಮವಾಗಿ ಹೆಗಡೆಯವರ ಪರವಾಗಿ ತೀರ್ಪು ನೀಡಿತು ೧೯೯೧ರಲ್ಲಿ ಬಾಗಲಕೋಟೆಯಿಂದ ಲೋಕಸಭೆಗೆ ಸ್ಪರ್ಧಿಸಿ ಸಿದ್ದು ನ್ಯಾಮಗೌಡr ವಿರುದ್ಧ ಸೋತರು. ೧೯೯೮ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು ಮತ್ತು ವಾಜಪೇಯಿ ಸರ್ಕಾರದ ಪ್ರಬಲ ವಕ್ತಾರರಾಗಿದ್ದರು . ಪತ್ರಕರ್ತ ಆಗಬೇಕೆಂಬ ಮಹದಾಸೆ ಪತ್ರಕರ್ತ ಆಗಬಯಸಿದ್ದರು ಹೆಗಡೆ ಅವರಿಗೆ ಪತ್ರಕರ್ತ ಆಗಬೇಕೆಂಬ ಮಹದಾಸೆ ವಿದ್ಯಾರ್ಥಿ ದೆಸೆಯಿಂದಲೂ ಇತ್ತು. ಸಿರ್ಸಿ ಮಾರಿಕಾಂಬಾ ಹೈಸ್ಕೂಲ್‌ನಲ್ಲಿ ಕಲಿಯುತ್ತಿದ್ದಾಗ ಕೈಬರಹದ ಪತ್ರಿಕೆ ‘ಹೂವಿನ ಸರ’ಕ್ಕೆ ಲೇಖನ ಬರೆಯುತ್ತಿದ್ದರು. ಬನಾರಸ್‌ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡುವಾಗಲೂ ಸ್ಥಳೀಯ ಪತ್ರಿಕೆಗಳಲ್ಲಿ ಅವರ ಲೇಖನ ಪ್ರಕಟವಾಗುತ್ತಿದ್ದವು. ಕರ್ನಾಟಕಕ್ಕೆ ಮರಳಿದ ಹೆಗಡೆ ಪ್ರಾರಂಭದಲ್ಲಿ ಮಾಡಿದ್ದು ವಕೀಲ ವೃತ್ತಿಯನ್ನು ಹಾಗೂ ಕೆಲಕಾಲ ಸಿರ್ಸಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದರು. ನಂತರ ಕಾಲದ ಹೊರಳಿಗೆ ಸಿಕ್ಕು, ರಾಜಕೀಯದತ್ತ ಮುಖ ಮಾಡಿದರು. ಪತ್ರಕರ್ತನಾಗಲಿಲ್ಲ ಎಂದು ಬಹಳ ಸಾರಿ ನೊಂದುಕೊಂಡಿದ್ದೂ ಉಂಟು. ಬರಹಗಾರರಾಗಿ ಸ್ವತ: ಲೇಖಕರಾಗಿದ್ದ ಹೆಗಡೆ ರಾಜಕೀಯ ಹಾಗೂ ಅರ್ಥಶಾಸ್ತ್ರಗಳಿಗೆ ಸಂಬಂಧಪಟ್ಟಂತೆ ಹಲವಾರು ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆದವರು. “ ಎ ಕ್ಲೀನ್ ಗವರ್ನಮೆಂಟ್ “, “ ಪಾರ್ಲಿಮೆಂಟ್ ಅಂಡ್ ಪಿಲಿಟಿಕಲ್ ಕಲ್ಚರ್ “, “ ಅಡ್ಮಿನಿಸ್ಟ್ರೇಟಿವ್, ಸೋಶಿಯೋ, ಎಕನಾಮಿಕ್ ಛೇಂಜಸ್ ಇನ್ ಇಂಡಿಯಾ “, “ ಜುಡಿಶಿಯಲ್ ಥಿಯರಿ “, “ ಎಲೆಕ್ಟೋರಲ್ ರಿಫಾರ್ಮ್ಸ್ “ ಇನ್ನೂ ಮುಂತಾದ ಹೊತ್ತಗೆಗಳ ಲೇಖಕರು ಹೆಗಡೆ. “ಪಂಚಾಯತ್ ರಾಜ್ “ ಯೋಜನೆ ರಾಮಕೃಷ್ಣ ಹೆಗಡೆಯವರು ಜಾರಿಗೆ ತಂದ “ಪಂಚಾಯತ್ ರಾಜ್ “ ಯೋಜನೆ ದೇಶಕ್ಕೇ ಪ್ರಥಮ! ಅಧಿಕಾರವನ್ನು ಜನರಿದ್ದಲ್ಲಿಗೇ ಕೊಂಡೊಯ್ಯಬೇಕೆಂಬ ತಮ್ಮ ಮನದಿಂಗಿತವನ್ನು ಚಾಚೂತಪ್ಪದೆ ನಜೀರ ಸಾಬರ ಮೂಲಕ ಅನುಷ್ಟಾನಕ್ಕಿಳಿಸಿದರು ಹೆಗಡೆ!ಮುಂದೆ ಭಾರತದಲ್ಲಿಯೇ ಪಂಚಾಯತ್ ರಾಜ್ ಕಾನೂನಿಗೆ ತಿದ್ದುಪಡಿ ತರಲು ಪ್ರಧಾನಿ ರಾಜೀವ್ ಗಾಂಧಿ ಪ್ರೇರಣೆಗೊಂಡಿದ್ದು ಹೆಗಡೆಯವರ ಕಾಲದಲ್ಲಿನ ಕರ್ನಾಟಕದಲ್ಲಿ ಪ್ರಬಲವಾಗಿ ಅನುಷ್ಟಾನಗೊಂಡ ಪಂಚಾಯತ್ ಕಾನೂನಿನಿಂದ! ಬಂಜರು ಭೂಮಿಗಳನ್ನೂ ಕೃಷಿಗೆ ಉಪಯೋಗಿಸಕೊಳ್ಳಲು ಅನುಕೂಲವಾಗುವಂತೆ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ರೈತರ ಮುಖದಲ್ಲಿ ಸಂತೃಪ್ತಿಯ ನಗು ಕರುಣಿಸಿದ ಅವರ ಕೃಷಿ-ತೋಟಗಾರಿಕೆ ನೀತಿಯು ರಾಜೀವಗಾಂಧಿಯವರಿಂದ ರಾಷ್ಟ್ರೀಯ ತೋಟಗಾರಿಕಾ ನಿಗಮ ದ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು! ಇಲ್ಲಿಗೇ ಮುಗಿದು ಹೋಯಿತಾ..? ಇಲ್ಲ . ವಿಧವಾ ಪಿಂಚಣಿ, ರಾಜ್ಯ ಅಲ್ಪಸಂಖ್ಯಾತರ ಆಯೋಗ-ಅಭಿವೃಧ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃಧ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೨೫ ರ ಮೀಸಲಾತಿ, ದೇಶದಲ್ಲಿ ಯೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಹೀಗೆ ಸಾಲು ಸಾಲು ಪ್ರಥಮಗಳು ಅವರ ಅಧಿಕಾರದಲ್ಲಿ ಸಂಭವಿಸಿವೆ! ಲೋಕಾಯುಕ್ತರಿಗೆ ಸ್ವ ಇಚ್ಛೆಯಿಂದ ಮೊಕದ್ದಮೆಗಳನ್ನು ದಾಕಲಿಸಿಕೊಳ್ಳುವ ಉನ್ನತ ಅಧಿಕಾರವನ್ನು ಹೆಗಡೆ ಆಗಲೇ ನೀಡಿದ್ದರು! ಮುಖ್ಯಮಂತ್ರಿಯನ್ನೂ ಲೋಕಾಯುಕ್ತರು ಪ್ರಶ್ನಿಸಬಹುದಾಗಿತ್ತು! ಮಂತ್ರಿಗಳ ವಿರುಧ್ಧ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುವ ಅಧಿಕಾರವನ್ನು ಆಗಲೇ ಲೋಕಾಯುಕ್ತರು ಹೊಂದಿದ್ದರು! ಸಚಿವ ಸಂಪುಟದ ತೀವ್ರ ವಿರೋಧಗಳ ನಡುವೆ ಲೋಕಾಯುಕ್ತರ ಪರಮಾಧಿಕಾರವನ್ನು ಮೊಟಕುಗೊಳಿಸಲಾಯಿತೆಂಬುದು ಬೇರೆ ವಿಚಾರ. ಆದರೆ ಭ್ರಷ್ಟಾಚಾರದ ನಿರ್ಮೂಲನೆಯತ್ತ ಹೆಗಡೆಯವರಿಗಿದ್ದ ಕಳಕಳಿ ಮಾತ್ರ ಪ್ರಶ್ನಾತೀತವೇ. ವಿಧ್ಯಾರ್ಥಿಗಳ ಪ್ರಯಾಣಾನುಕೂಲಕ್ಕೆ ಬಸ್ ಪಾಸ್ ನೀಡಿಕೆಯ ಆರಂಭವೂ ಹೆಗಡೆಯವರ ಕಾಲದಿಂದಲೇ.. ಶಿಕ್ಷಣ ಕ್ಷೇತ್ರ ಬಹಳ ಸುಧಾರಣೆಗೊಂಡಿದ್ದು ಅವರ ಕಾಲದಲ್ಲಿಯೇ! ಕ್ಯಾಪಿಟೇಷನ್ ಶುಲ್ಕದ ರದ್ದತಿ,ರ್ಯಾಗಿಂಗ್ ಅನ್ನು ಕ್ರಿಮಿನಲ್ ಅಪರಾಧವೆಂದು ಮಾನ್ಯ ಮಾಡಿ,ಅದಕ್ಕಾಗಿ ಕಾನೂನನ್ನು ಜಾರಿಗೊಳಿಸಿ, ತನ್ಮೂಲಕ ರ್ಯಾಗಿಂಗ್ ಎಂಬ ಪೀಡೆಯನ್ನು ಮಟ್ಟಹಾಕುವಲ್ಲಿ ಅತ್ಯಂತ ಹೆಚ್ಚಿನ ಮಟ್ಟದ ಯಶಸ್ಸಿನ ಸಾಧನೆ ಹೆಗಡೆಯವರದ್ದು. ಹೆಗಡೆ ಜಾರಿಗೆ ತಂದ ಹತ್ತು ಹಲವಾರು ಜನ ಕಲ್ಯಾಣ ಯೋಜನೆಗಳಲ್ಲಿ ಕೆಲವು ದೇಶದಲ್ಲಿ ಪ್ರಥಮವಾಗಿ ಆರಂಭಗೊಂಡಂತವೆಂದರೆ ಹೆಗಡೆಯವರ ಜನನಾಯಕತ್ವ- ತಮ್ಮನ್ನಾರಿಸಿ ಕಳುಹಿಸಿದ ಮತದಾರವರ್ಗದ ಅಭ್ಯುದಯದತ್ತ ಅವರಿಗಿದ್ದ ಕಾಳಜಿ ಗುರುತಿಸುವಂಥಹವೇ! ರಾಜಕಾರಣಿ ಆರೋಪಗಳಿಗೆ ಹೊರತಲ್ಲ ಎಂಬಂತೆ, ಟೆಲಿಫೋನ್ ಕದ್ದಾಲಿಕೆ ಮುಂತಾದ ಆರೋಪಗಳು ಕೂಡ ಹೆಗಡೆಯವರನ್ನು ಸುತ್ತುವರಿದಿತ್ತು. ರಾಜಕಾರಣದಲ್ಲಿ ಮೌಲ್ಯಗಳಿಗೆ ಯಾವತ್ತೂ ಬೆಲೆಯಿಲ್ಲ ಎಂಬುದು ಸತ್ಯವೇ! ಆಗೀಗ ಕೆಲವಾರು ಆ ಮಾತಿಗೊಂದು ಅಪವಾದವೆಂಬ ನಿದರ್ಶನಗಳು ದೊರೆತರೂ, ತಾವು ಆಡುತ್ತ್ತಿದ್ದ ಮೌಲ್ಯಗಳನ್ನು ಚಾಚೂ ತಪ್ಪದೆ ಅನುಸರಿಸಿದವರು ಹೆಗಡೆ! “ಮೌಲ್ಯಾಧಾರಿತ ರಾಜಕಾರಣ“ ವೆಂದರೆ ಹೆಗಡೆ.. ರಾಜಕಾರಣದಲ್ಲಿ ಆ ಪದದ ಹುಟ್ಟಿಗೂ ಸಹ ಅವರೇ ಕಾರಣವೆಂದರೂ ಅತಿಶಯೋಕ್ತಿಯಲ್ಲ!! ಆದರೆ ತಮ್ಮ ರಾಜಕಾರಣದ ಪಡಸಾಲೆಗೆ ತಮ್ಮ ಸಂಬಂಧಿಕರನ್ನು ಬಿಟ್ಟುಕೊಂಡು ಹಾಗೂ ವಂಧಿ-ಮಾಗಧರ ಮಾತುಗಳನ್ನು ಕೇಳುತ್ತಲೇ, ದೂರವಾಣಿ ಕದ್ದಾಲಿಕೆ ಹಗರಣ, ರೇವಜೀತು ಹಗರಣ ಹಾಗೂ ಮೆಡಿಕಲ್ ಸೀಟ್ ಹಗರಣ ಮುಂತಾದ ಅನೇಕ ಪ್ರಕರಣಗಳು ಅವರ ರಾಜಕೀಯ ನಾಯಕ್ತ್ವಕ್ಕೆ ಕಪ್ಪು ವರ್ಚಸ್ಸನ್ನು ಮೂಡಿಸಿದರೂ ಮೆಡಿಕಲ್ ಸೀಟಿನ ಹಗರಣದಲ್ಲಿ ಮಗ ಭರತ್ ಹೆಗಡೆಯವರ ವಿರುಧ್ಧ ಹಾಗೂ ತಮ್ಮ ಹಿರಿಯ ಸಹೋದರರಾಗಿದ್ದ ದೊಡ್ಮನೆ ಗಣೇಶ್ ಹೆಗಡೆಯವರ ಮೇಲೆ ಅಕ್ಕಿ ದಾಸ್ತಾನು ಮತ್ತು ಸಾಗಾಟದ ಆರೋಪಗಳು ಎದುರಾದಾಗ ಅವರುಗಳ ಮೇಲೆಯೇ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು. ಹೆಗಡೆ ನಿಜವಾಗಿಯೂ ನೈತಿಕತೆಯನ್ನು ಪಾಲಿಸಿಕೊಂಡು ಬಂದಿದ್ದರು. “ ಕಿಂಗ್ ಶಿಪ್ ಹ್ಯಾಸ್ ನೋ ಕಿನ್ ಶಿಪ್“ ಎಂಬ ಮಾತಿಗೆ ನಿಜವಾಗಿಯೂ ಅರ್ಥ ತಂದುಕೊಟ್ಟ ಮಹಾ ಮುತ್ಸದ್ದಿ! ತನ್ನ ರಾಜಕೀಯ ಅವಧಿಯಲ್ಲಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ ಅವರು,ಮೇಲೆ ಹೇಳಿದಂತೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಕೇಂದ್ರ ಸಚಿವರಾಗಿ, ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿದ್ದವರು. ಉತ್ತಮ ಅರ್ಥಶಾಸ್ತ್ರಜ್ಞ ಹೆಗಡೆ ಕರ್ನಾಟಕ ರಾಜ್ಯದ ಅತ್ಯಂತ ಉತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ ೧೩ ಬಾರಿ ರಾಜ್ಯ ಆಯವ್ಯಯವನ್ನು ಮಂಡಿಸಿದ ಏಕೈಕ ಅರ್ಥ ಸಚಿವ!!! ರಾಜ್ಯದ ೧೯೮೩ ರ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಹೆಗಡೆ ಅಧಿಕಾರ ವಿಕೇಂದ್ರೀಕರಣದ ಪ್ರಬಲ ಶಿಫಾರಸುಗಾರರಾಗಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಂಚಾಯತ್ ರಾಜ್ ಮಸೂದೆ ಕೇವಲ ಮೂರು ಮತಗಳ ಅಂತರದಿಂದ ಬಿದ್ದು ಹೋದಾಗ, ಮಂತ್ರಿ ಪದವಿಗೆ ರಾಜೀನಾಮೆ ನೀಡಿ, ತಾವು ಅಧಿಕಾರದಾಹಿಯಲ್ಲ ಎಂಬುದನ್ನು ನಿರೂಪಿಸಿದವರು. ದೇವೇಗೌಡರು ಮುಖ್ಯಮಂತ್ರಿಗಳಾದ ನಂತರ ಕರ್ನಾಟಕ ರಾಜಕೀಯದಲ್ಲಿ ಹೆಗಡೆ ಅಪ್ರಸ್ತುತರಾದದ್ದಷ್ಟೇ ಅಲ್ಲ. ಕೇಂದ್ರ ದತ್ತ ತಮ್ಮ ಗಮನ ಕೇಂದ್ರೀಕರಿಸಿ, ವಾಜಪೇಯಿ ಯುಗದಲ್ಲಿ ವಾಣಿಜ್ಯ ಸಚಿವರಾದರು. ಜನವರಿ ೧೯೮೩ ರಿಂದ ಡಿಸೆಂಬರ್ ೧೯೮೪ ಹಾಗೂ ಮಾರ್ಚ್ ೧೯೮೫ ರಿಂದ ಆಗಸ್ಟ್ ೧೯೮೮ ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಹೆಗಡೆ ಅಲ್ಪಮತಸರಕಾರವನ್ನು ಮುನ್ನಡೆಸಿದ ಬಗೆ ಈಗಲೂ ಮನನೀಯ! ಸ್ವತ: ಪಿ.ಜಿ.ಆರ್.ಸಿಂಧ್ಯ ಮುಂತಾದ ನಾಯಕರು ಹೆಗಡೆಯವರ ೭೮ ನೇ ಜನ್ಮದಿನದಂದು ನಡೆದ ಸಮಾರಂಭದಲ್ಲಿ ಅದನ್ನು ಒಪ್ಪಿಕೊಂಡಿದ್ದರು! ಎಸ್.ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿಯೂ ಸೇವೆಸಲ್ಲಿಸಿದ್ದರು. ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ೧೯೮೩ ರಲ್ಲಿ ಅಧಿಕಾರ ವಹಿಸಿಕೊಂಡ ಹೆಗಡೆಯವರು, ರಾಜ್ಯದಲ್ಲಿ "ಪಂಚಾಯತ್ ರಾಜ್" ವ್ಯವಸ್ಥೆಯನ್ನು ಮೊದಲಿಗೆ ಜಾರಿಗೆ ತಂದರು. ಇವೆಲ್ಲವುದಕ್ಕಿಂತ ಮುಖ್ಯವಾಗಿ ರಾಮಕೃಷ್ಣ ಹೆಗಡೆ ತನ್ನ ನಂತರ ಕರ್ನಾಟಕ ರಾಜಕಾರಣಕ್ಕೆ ಹಲವಾರು ನಾಯಕರನ್ನು ಬಿಟ್ಟು ಹೋದರು..ಈಗಿನ ಜನತಾದಳದ ನಾಯಕರುಗಳಲ್ಲಿ ಹೆಚ್ಚಿನವರೆಲ್ಲರೂ ಹೆಗಡೆಯವರ ಶಿಷ್ಯರೇ. ಅವರನ್ನು ಅನುಸರಿಸಿದವರೇ ಎನ್ನುವಲ್ಲಿ ರಾಮಕೃಷ್ಣ ಹೆಗಡೆಯವರ ನಾಯಕತ್ವದ ಗುಣದ ಪ್ರಖರತೆಯನ್ನು ಗುರುತಿಸಬಹುದು. ಹೆಗಡೆ ತಾವೊಬ್ಬರೇ ಬೆಳೆಯಲಿಲ್ಲ. ಇತರರನ್ನೂ ಬೆಳೆಸಿದರು! ಬಿ.ಸೋಮಶೇಖರ್, ನಜೀರ್ ಸಾಬ್, ಜೀವಿಜಯ, ರಾಚಯ್ಯ, ಎಸ್. ಆರ್. ಬೊಮ್ಮಾಯಿ, ಪಿ.ಜಿ.ಆರ್.ಸಿಂಧ್ಯ, ಜೀವರಾಜ್ ಆಳ್ವ ಎಲ್ಲರೂ ಅವರಂಗಳದಿಂದಲೇ ಮುಂದೆ ನಡೆದವರು! ಮಾಜಿ ಮುಖ್ಯಮಣತ್ರಿ ಸಿದ್ಧರಾಮಯ್ಯನವರಂತೂ ಅವರನ್ನು ತಮ್ಮ ರಾಜಕೀಯ ಗುವೆಂದು ಘೋಷಿಸಿದ್ದಾರೆ. ತನ್ನ ಅಧಿಕಾರಾವಧಿಯಲ್ಲಿ ರಾಜ್ಯದ ಯಾವ ಮುಖ್ಯಮಂತ್ರಿಯೂ ಕರ್ನಾಟಕಕ್ಕೆ ನೀಡಿರದ ಸಾಂಸ್ಕೃತಿಕ ಮೆರಗನ್ನು ನೀಡಿದ್ದು ಹೆಗಡೆಯವರ ಆಡಳಿತ! ಸ್ವತ: ಯಕ್ಷಗಾನ ಕಲಾವಿದರಾಗಿದ್ದ ಹೆಗಡೆ, ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಿದವರು. ಕಲಾವಿದರಿಗೆ ಮಾಶಾಸನ, ಕನ್ನಡ ಚಿತ್ರಗಳಿಒಗೆ ಶೇಕಡಾ ೫೦ ರ ರಿಯಾಯಿತಿ ಮುಂತಾದ ಯೋಜನೆಗಳೂ ಅವರವೇ! ಬೆಂಗಳೂರಿನಲ್ಲಿ ಜಗತ್ಪ್ರಸಿಧ್ಧ ನೃತ್ಯಪಟುವಾಗಿದ್ದ ಪ್ರತಿಮಾ ಬೇಡಿಯ ನೃತ್ಯ ನಿಕೇತನದ ಸ್ಥಾಪನೆಗೆ ಸ್ಠಳ ನೀಡಿದ ಹೆಗಡೆಯವರ ಔದಾರ್ಯವನ್ನು ತನ್ನ ಆತ್ಮಕಥೆಯಲ್ಲಿ ಪ್ರತಿಮಾ ಬೇಡಿ ಉಲ್ಲೇಖಿಸಿದ್ದಾರೆ. ನಿಧನ ಹೆಗಡೆಯವರು ೨೦೦೪ ಜನವರಿ ೧೨ರಂದು ನಿಧನರಾದರು. ಉಲ್ಲೇಖಗಳು ರಾಜಕೀಯ ಕರ್ನಾಟಕದ ಮುಖ್ಯಮಂತ್ರಿಗಳು ಕರ್ನಾಟಕದ ವಿಧಾನಸಭಾ ಸದಸ್ಯರುಕರ್ನಾಟಕ ರಾಜಕಾರಣಿಗಳು
2425
https://kn.wikipedia.org/wiki/%E0%B2%95%E0%B2%BE%E0%B2%B5%E0%B3%87%E0%B2%B0%E0%B2%BF%20%E0%B2%A8%E0%B2%A6%E0%B2%BF
ಕಾವೇರಿ ನದಿ
ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸ್ಥಳದಲ್ಲಿ ಉಗಮಿಸುವ ಈ ನದಿ, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮುಖ್ಯವಾಗಿ ದಕ್ಷಿಣ-ಪೂರ್ವ ದಿಶೆಯಲ್ಲಿ ಹರಿಯುವ ಈ ನದಿಯ ಪಥ ಸುಮಾರು ೭೬೫ ಕಿ.ಮಿ.ಗಳಷ್ಟು ಉದ್ದವಾಗಿದೆ.ಜಲಾನಯನ ಪ್ರದೇಶ 81,155 km2 (31,334 sq mi) ಇತಿವೃತ್ತ ಕಾವೇರಿ ಜಲಾನಯನ ಪ್ರದೇಶ ೨೭,೭೦೦ ಚದುರ ಮೈಲಿಗಳಷ್ಟಿದ್ದು, ಕಾವೇರಿಯ ಉಪನದಿಗಳಲ್ಲಿ ಶಿಂಷಾ, ಹೇಮಾವತಿ, ಅರ್ಕಾವತಿ,[ಕಪಿಲಾ ಅಥವಾ ಕಬಿನಿ], ಲಕ್ಷ್ಮಣ ತೀರ್ಥ ಮತ್ತು ಲೋಕಪಾವನಿ ನದಿಗಳನ್ನು ಹೆಸರಿಸಬಹುದು. ಕಾವೇರಿ 'ದಕ್ಷಿಣ ಗಂಗೆ' ಯೆಂದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ. ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ. ಕೊಡಗರು ಕಾವೇರಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ. ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು, ಹಾಗೂ ದಕ್ಷಿಣದಲ್ಲಿರುವ ಏಕೈಕ ಮಹಾ ನದಿ. ಕಾವೇರಿ ಜಲಾನಯನ ಪ್ರದೇಶವು 81,155 ಚದರ ಕಿಲೋಮೀಟರ್ (31,334 ಚದರ ಮೈಲಿ) ಎಂದು ಅಂದಾಜಿಸಲಾಗಿದ್ದು, ಹರಂಗಿ, ಹೇಮಾವತಿ, ಕಬಿನಿ, ಭವಾನಿ, ಲಕ್ಷ್ಮಣ ತೀರ್ಥ, ನೊಯಾಲ್ ಮತ್ತು ಅರ್ಕಾವತಿ ಸೇರಿದಂತೆ ಹಲವು ಉಪನದಿಗಳಿವೆ. ನದಿ ಜಲಾನಯನ ಪ್ರದೇಶವು ಮೂರು ರಾಜ್ಯಗಳನ್ನು ಮತ್ತು ಕೇಂದ್ರ ಪ್ರದೇಶವನ್ನು ಈ ಕೆಳಗಿನಂತೆ ಒಳಗೊಂಡಿದೆ: ತಮಿಳುನಾಡು, 43,868 ಚದರ ಕಿಲೋಮೀಟರ್ (16,938 ಚದರ ಮೈಲಿ); ಕರ್ನಾಟಕ, 34,273 ಚದರ ಕಿಲೋಮೀಟರ್ (13,233 ಚದರ ಮೈಲಿ); ಕೇರಳ, 2,866 ಚದರ ಕಿಲೋಮೀಟರ್ (1,107 ಚದರ ಮೈಲಿ), ಮತ್ತು ಪುದುಚೇರಿ, 148 ಚದರ ಕಿಲೋಮೀಟರ್ (57 ಚದರ ಮೈಲಿ). ಕರ್ನಾಟಕದ ಕೊಡಗುದಲ್ಲಿರುವ ತಲಕವೇರಿಯಲ್ಲಿ ಏರುತ್ತಿರುವ ಇದು ಬಂಗಾಳಕೊಲ್ಲಿಯನ್ನು ಪ್ರವೇಶಿಸಲು ಆಗ್ನೇಯಕ್ಕೆ ಸುಮಾರು 800 ಕಿಲೋಮೀಟರ್ (500 ಮೈಲಿ) ಹರಿಯುತ್ತದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದು ಶಿವನಸಮುದ್ರ ದ್ವೀಪವನ್ನು ರೂಪಿಸುತ್ತದೆ, ಇದರ ಎರಡೂ ಬದಿಯಲ್ಲಿ ಸುಮಾರು 100 ಮೀಟರ್ (330 ಅಡಿ) ಇಳಿಯುವ ಸುಂದರವಾದ ಶಿವನಸಮುದ್ರ ಜಲಪಾತವಿದೆ. ನದಿ ವ್ಯಾಪಕವಾದ ನೀರಾವರಿ ವ್ಯವಸ್ಥೆಗೆ ಮತ್ತು ಜಲವಿದ್ಯುತ್ ಶಕ್ತಿಗೆ ಮೂಲವಾಗಿದೆ. ಈ ನದಿಯು ಶತಮಾನಗಳಿಂದ ನೀರಾವರಿ ಕೃಷಿಯನ್ನು ಬೆಂಬಲಿಸಿದೆ ಮತ್ತು ಪ್ರಾಚೀನ ಸಾಮ್ರಾಜ್ಯಗಳು ಮತ್ತು ದಕ್ಷಿಣ ಭಾರತದ ಆಧುನಿಕ ನಗರಗಳ ಜೀವನಾಡಿಯಾಗಿ ಕಾರ್ಯನಿರ್ವಹಿಸಿದೆ. ನದಿಯ ನೀರಿಗೆ ಪ್ರವೇಶವು ದಶಕಗಳಿಂದ ಭಾರತೀಯ ರಾಜ್ಯಗಳನ್ನು ಪರಸ್ಪರ ವಿರುದ್ಧವಾಗಿ ಮಾಡಿದೆ. ಇದನ್ನು ತಮಿಳು ಸಂಗಮ್ ಸಾಹಿತ್ಯದಲ್ಲಿ ಬಹಳವಾಗಿ ವಿವರಿಸಲಾಗಿದೆ ಮತ್ತು ಹಿಂದೂ ಧರ್ಮದಲ್ಲಿ ಬಹಳ ಗೌರವದಿಂದ ನಡೆಸಲಾಗುತ್ತದೆ. ಪುರಾಣ ಮೂಲದಲ್ಲಿ ಕಾವೇರಿ ೧)ಬ್ರಹ್ಮನ ಮಗಳಾದ ಲೋಪಾಮುದ್ರ ಭೂಲೋಕದಲ್ಲಿ ಲೊಕೊದ್ಧಾರಕ್ಕಾಗಿ ವಾಸಿಸುತಿದ್ದಳು. ಕವೇರನೆಂಬ ಮುನಿಯು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ಬ್ರಹ್ಮನಿಂದ ವರವನ್ನು ಪಡೆದನು. ನದಿಯ ಉಗಮಕ್ಕಾಗಿ ಮುನಿಗಳು ಸೂಕ್ತಜಾಗದ ಅನ್ವೇಷಣೆಯಲ್ಲಿ ಇರುವುದನ್ನು ತಿಳಿದಿದ್ದ ಗಣೇಶ ಇದೇ ಜಾಗ ಸೂಕ್ತವಾಗಿದೆ ಎಂದೆನಿಸಿ ಕಮಂಡಲವನ್ನು ನೆಲದ ಮೇಲೆ ಇಟ್ಟುಬಿಟ್ಟನು. ಅಲ್ಲಿಯೇ ಹಾರಾಡುತ್ತಿದ್ದ ಕಾಗೆಯೊಂದು ಕಮಂಡಲವನ್ನು ತಾಕುವಂತೆ ಕುಳಿತುಕೊಂಡಿತು. ಅಷ್ಟರಲ್ಲಿ ಹಿಂತಿರುಗಿದ ಅಗಸ್ತ್ಯ ಮುನಿಗಳು ಕಾಗೆಯನ್ನು ನೋಡಿ ಧಾವಂತದಿಂದ ಅದನ್ನು ಓಡಿಸಲು ಪ್ರಯತ್ನಿಸಿದಾಗ ಕಮಂಡಲದ ನೀರು ಚೆಲ್ಲಿತು. ಸಣ್ಣ ಪ್ರಮಾಣದ ಜಲವು ಜಲಧಾರೆಯಾಗಿ ನದಿಯಾಗಿ ಹರಿಯಿತು. ತಲಕಾವೇರಿಯ ಸ್ಥಳವನ್ನು ಈಗಲೂ ಪವಿತ್ರವೆಂದು ಪರಿಗಣಿಸಲಾಗುತ್ತಿದ್ದು, ಇಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಮಹಾಭಾರತದ ಆದಿಪರ್ವದಲ್ಲಿ ಅರ್ಜುನನು ತೀರ್ಥಯಾತ್ರೆಗೆ ಹೋಗಿದ್ದಾಗ, ಈ ನದಿಯಲ್ಲಿ ಸ್ನಾನ ಮಾಡಿದನೆಂಬ ಉಲ್ಲೇಖವಿದೆ. ರಾಜಸೂಯಯಾಗದ ಸಮಯದಲ್ಲಿ ನಕುಲನು ಇಲ್ಲಿಗೆ ಬಂದಿದ್ದನೆಂದು ನಂಬಲಾಗಿದೆ. ಅಗಸ್ತ್ಯ ಮಹಾಮುನಿಯು ಲೋಪಾಮುದ್ರೆಯನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತ ಪಡಿಸುತ್ತಾನೆ. ಅದಕ್ಕೆ ಲೋಪಾಮುದ್ರೆ ಮೊದಲು ನಿರಾಕರಿಸುತ್ತಾಳೆ. ನಂತರ ದಾರಿಯಲ್ಲಿ ತೆರಳುತ್ತಿರುವ ವೇಳೆ ಅಗಸ್ತ್ಯ ಮಹಾಮುನಿ ಭೇಟಿಯಾದಾಗ, ಲೋಪಾಮುದ್ರೆಯು ತನ್ನನ್ನು ಎಂದೂ ಕಾಯಿಸಬಾರದು, ಕಾಯಿಸಿದರೆ ನಾನು ಸ್ವತಂತ್ರಳು. ಇದಕ್ಕೆ ಒಪ್ಪುವುದಾದರೆ ಮದುವೆಯಾಗುವುದಾಗಿ ಹೇಳುತ್ತಾಳೆ. ಅದಕ್ಕೆ ಓಪ್ಪಿದ ಅಗಸ್ತ್ಯಮುನಿಯು ಲೋಪಾ ಮುದ್ರೆಯನ್ನು ಮದುವೆಯಾಗುತ್ತಾನೆ. ಒಂದು ದಿನ ಅಗಸ್ತ್ಯಮುನಿಯು ತನ್ನ ಶಿಷ್ಯಂದಿರಿಗೆ ಪಾಠ ಮಾಡುತ್ತಾ ತಲ್ಲೀನನಾಗಿ ಸಮಯವನ್ನು ಮರೆತು ಬಿಡುತ್ತಾನೆ. ಆಗ ಲೋಪಾಮುದ್ರೆಯು ಅಲ್ಲಿಂದ ಹೊರಟು ತಲಕಾವೇರಿಗೆ ಬಂದು ಅಂತರ್ಜಲದಲ್ಲಿ ಹಾರಿ ನದಿಯಾಗಿ ಹರಿಯುತ್ತಾಳೆ. ಅವಳು ಕವೇರನೆಂಬ ಮುನಿಯ ಮಗಳಾದುದರಿಂದ ಈ ನದಿಗೆ ಕಾವೇರಿಯೆಂಬ ಹೆಸರು ಬಂದಿದೆ. ಇನ್ನೊಂದು ಕಥೆಯ ಪ್ರಕಾರ ಅಗಸ್ತ್ಯ ಮುನಿಗಳ ಕಮಂಡಲ ಮಗುಚಿ ಬಿದ್ದಾಗ ಅದರ ನೀರು ಹೊರ ಚೆಲ್ಲಿತು ಅದೇ ಕಾವೇರಿ ನದಿಯಾಯಿತು. ಆ ಕಥೆ ಹೀಗಿದೆ :- ದಕ್ಷಿಣದ ಪ್ರಾಂತ್ಯವು ನೀರಿಲ್ಲದೆ ಬಂಜರಾಗಿತ್ತು. ಹಾಗಾಗಿ ಇಲ್ಲಿನ ಜಲಕ್ಷಾಮವನ್ನು ಹೋಗಲಾಡಿಸಲು ಮುನಿ ಅಗಸ್ತ್ಯರು, ಬ್ರಹ್ಮನ ಆಶಿರ್ವಾದದೊಂದಿಗೆ,ಶಿವನಿಂದ ಪವಿತ್ರವಾದ ಜಲವನ್ನು ಪಡೆದು ಅವರ ಕಮಂಡಲದಲ್ಲಿ ತುಂಬಿದ್ದರು. ಭೋರ್ಗರೆಯುತ್ತಾ ಉಕ್ಕಿ ಹರಿಯುವ ನದಿಯ ಸೃಷ್ಟಿಗಾಗಿ ಸೂಕ್ತ ಜಾಗವನ್ನು ಹುಡುಕುವ ಆಶಯದಿಂದ, ಅಗಸ್ತ್ಯ ಮುನಿಗಳು ದಕ್ಷಿಣ ಭಾಗಕ್ಕೆ ಪ್ರವಾಸ ಕೈಡೊಂಡು ಕೊಡಗಿನ ಬೆಟ್ಟ ಪ್ರದೇಶವನ್ನು ತಲುಪಿದರು. ವಾಸ್ತವವಾಗಿ, ಆ ಬಾಲಕ ವೇಷ ಮರೆಸಿದ ಗಣೇಶನಾಗಿದ್ದನು. ದೇಹಬಾಧೆ ಪೀಡಿತರಾಗಿದ್ದ ಅಗಸ್ತ್ಯ ಮುನಿಗಳು ಶೌಚಕ್ಕಾಗಿ ಸೂಕ್ತ ಸ್ಥಳವನ್ನು ಹುಡುಕುತ್ತಿದ್ದು, ತನ್ನ ಕೈಲಿರುವ ನೀರಿನ ಕಮಂಡಲವನ್ನು ಜಾಗರೂಕತೆಯಿಂದ ಹಿಡಿದುಕೊಳ್ಳಲು ಆ ಬಾಲಕನನ್ನು ವಿನಂತಿಸಿ ಕೊಳ್ಳುವುದು ಸಭಾಪರ್ವದಲ್ಲಿ ಬರುತ್ತದೆ. ನದಿಯ ಪಾತ್ರ ಕೊಡಗಿನ ಬೆಟ್ಟಗಳನ್ನು ಬಿಟ್ಟ ನಂತರ ಕಾವೇರಿ ನದಿ ದಕ್ಷಿಣ ಪ್ರಸ್ಥಭೂಮಿಯ ಮೇಲೆ ಪೂರ್ವಕ್ಕೆ ಹರಿಯುತ್ತದೆ. ಈ ನದಿಯಲ್ಲಿ ಮೂರು ದ್ವೀಪಗಳಿವೆ - ಕರ್ನಾಟಕದಲ್ಲಿ ಶ್ರೀರಂಗಪಟ್ಟಣ ಮತ್ತು ಶಿವನಸಮುದ್ರ, ಹಾಗೂ ತಮಿಳುನಾಡಿ ನಲ್ಲಿ ಶ್ರೀರಂಗ. ಶಿವನಸಮುದ್ರದಲ್ಲಿ ಈ ನದಿ ೩೨೦ ಅಡಿಗಳ ಎತ್ತರದಿಂದ ಧುಮುಕಿ, ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ. ಭಾರತದ ಮೊದಲ ಜಲವಿದ್ಯುದಾಗಾರ ಇಲ್ಲಿ ೧೯೦೨ ರಲ್ಲಿ ಕಟ್ಟಲ್ಪಟ್ಟು ಬೆಂಗಳೂರು ನಗರಕ್ಕೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತಿತ್ತು. ಹೊಗೇನಕಲ್ ಜಲಪಾತವಾಗಿ ಬಿದ್ದಾದ ಮೇಲೆ ತಮಿಳುನಾಡನ್ನು ಪ್ರವೇಶಿಸುವ ಈ ನದಿ, ತಂಜಾವೂರು ಜಿಲ್ಲೆಯ ಮುಖಾಂತರ ಹರಿದು ಕೊನೆಗೆ ಇಬ್ಭಾಗವಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ ಕಾವೇರಿ ಕರ್ನಾಟಕದಲ್ಲಿ ಕಾವೇರಿ ನದಿಗೆ ಹನ್ನೆರಡು ಜಲಾಶಯ ಮತ್ತು ಅಣೆಕಟ್ಟುಗಳಿವೆ. ಈ ಎಲ್ಲ ಅಣೆಕಟ್ಟುಗಳ ಮುಖ್ಯೋದ್ದೇಶ ನೀರಾವರಿ. ಮಡದಕಟ್ಟೆಯ ಬಳಿ ಇರುವ ಅಣೆಕಟ್ಟಿನಿಂದ ಹೊರಡುವ ಕಾಲುವೆ ೭೨ ಮೈಲಿಗಳಷ್ಟು ಉದ್ದವಿದ್ದು, ೧೦,೦೦೦ ಎಕರೆಗಳ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಇದೇ ಕಾಲುವೆ ಮೈಸೂರು ನಗರಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನೂ ಭಾಗಶಃ ಒದಗಿಸುತ್ತದೆ. ಶ್ರೀರಂಗಪಟ್ಟಣದ ಬಳಿ ಇರುವ ಬಂಗಾರ ದೊಡ್ಡಿ ನಾಲೆ ಮೈಸೂರಿನ ಒಡೆಯರ್‍ ರಾಜಮನೆತನದ ರಣಧೀರ ಕಂಠೀರವ ಕಟ್ಟಿಸಿದ್ದು. ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ಧ ಜಲಾಶಯ ಕೃಷ್ಣರಾಜಸಾಗರ. ತುಲಾ ಸಂಕ್ರಮಣ - ತಲಕಾವೇರಿಯ ತೀರ್ಥೋದ್ಭವ ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣವೆಂದು ಕರೆಯುತ್ತಾರೆ. ಈ ಶುಭ ದಿನವು ಸಾಧಾರಣವಾಗಿ ಆಂಗ್ಲದ ಅಕ್ಟೋಬರ್ ತಿಂಗಳಿನ ೧೭ನೇ ದಿನಾಂಕದಂದು ಬರುತ್ತದೆ. ಈ ಪುಣ್ಯ ದಿನದಂದು ಗಂಗೆಯೇ ಮೊದಲಾದ ಆರು ಪವಿತ್ರ ನದಿಗಳು ಕಾವೇರಿಯಲ್ಲಿ ಬಂದು ಸೇರುತ್ತವೆಂಬ ನಂಬಿಕೆಯಿದೆ. ಇದಕ್ಕೆ ಸಾಕ್ಷಿಯೆಂಬಂತೆ ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನ ನಿರ್ಧಾರಿತ ಲಗ್ನ ಹಾಗೂ ಮುಹೂರ್ತದಲ್ಲಿ ತಲಕಾವೇರಿಯ ಜ್ಯೋತಿ ಮಂಟಪದ ಮುಂದಿರುವ ಕುಂಡದಲ್ಲಿ ನೀರಿನ ಬುಗ್ಗೆ ಮೂರು ಬಾರಿ ಬರುತ್ತದೆ. ಇದನ್ನೆ ತೀರ್ಥೊದ್ಭವವೆಂದು ಕರೆಯಲಾಗುತ್ತದೆ. ಈ ಬುಗ್ಗೆಯಲ್ಲಿ ಮಿಕ್ಕ ಆರೂ ಪುಣ್ಯ ನದಿಗಳು (ಅಂದರೆ - ಗಂಗೆ, ಯಮುನೆ, ಗೋದಾವರೀ, ಸರಸ್ವತೀ, ನರ್ಮದೆ ಮತ್ತು ಸಿಂಧು) ಅಂತರ್ವಾಹಿನಿಯಾಗಿ ಬಂದು ಕಾವೇರಿಯನ್ನು ಸೇರಿ ತಾವು ಮನುಷ್ಯರನ್ನು ತೊಳೆದು ಪ್ರಾಪ್ತಿ ಮಾಡಿಕೊಂಡ ಕರ್ಮಗಳನ್ನು ಕಳೆದುಕೊಳ್ಳುತ್ತಾರೆಂಬ ಪ್ರತೀತಿಯಿದೆ. ಕೊಡವರಿಗೆ ಕಾವೇರಿಯೇ ಕುಲದೈವ. ಹಾಗಾಗಿ ಅವರಿಗೆ ತೀರ್ಥೊದ್ಭವವು ಸಂಭ್ರಮ ಸಡಗರದಿಂದ ಆಚರಿಸುವ ಪ್ರಮುಖ ಹಬ್ಬ ಹಾಗೂ ಧಾರ್ಮಿಕ ಆಚರಣೆಯಾಗಿದೆ. ತೀರ್ಥೊದ್ಭವದ ದಿನ ತಲಕಾವೇರಿಯಲ್ಲಿ ಮೀಯುವುದರಿಂದ ಸಕಲ ಪಾಪಗಳೂ ಪರಿಹಾರವಾಗುತ್ತವೆ ಎಂದು ಭಕ್ತರ ಧೃಢ ನಂಬಿಕೆ. ತೀರ್ಥೊದ್ಭವದ ದಿನ ತಲಕಾವೇರಿಯ ಕುಂಡದ ನೀರನ್ನು ಶೇಖರಿಸಿಕೊಂಡು ತಮ್ಮ ಬಂಧು ಮಿತ್ರರಲ್ಲಿ ವಿತರಿಸುವ ಆಚರಣೆಯೂ ವಾಡಿಕೆಯಲ್ಲಿದೆ. ಮೃತ್ಯು ಶಯ್ಯೆಯಲ್ಲಿರುವ ವ್ಯಕ್ತಿಗಳಿಗೆ ಈ ನೀರಿನ ಹನಿಗಳನ್ನು ಕುಡಿಸಿದಲ್ಲಿ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆಯೆಂದೂ ಆಸ್ತಿಕರು ನಂಬುತ್ತಾರೆ. ತಮಿಳು ನಾಡಿನ ಜನರಲ್ಲಿ ತುಲಾ ಮಾಸದ ಕಾವೇರಿ ಸ್ನಾನವು ಸರ್ವ ಪಾಪಗಳನ್ನು ಪರಿಹಾರ ಮಾಡುತ್ತದೆ ಎಂಬ ನಂಬಿಕೆ ಇರುವುದರಿಂದ, ಇಡೀ ತುಲಾ ಮಾಸದಲ್ಲಿ ಜನರು ಕಾವೇರಿಯ ದಡಗಳಲ್ಲಿರುವ ಪವಿತ್ರ ಸ್ಥಳಗಳನ್ನು ಸೇರಿ ಅಲ್ಲಿ ಸ್ನಾನವನ್ನಾಚರಿಸಿ ದೇವತಾ ದರ್ಶನ ಮೊದಲಾದ ಧಾರ್ಮಿಕ ಆಚರಣೆಗಳಲ್ಲಿ ತೊಡಗುತ್ತಾರೆ. ತಮಿಳು ನಾಡಿನಲ್ಲಿ ಕಾವೇರಿ ಹರಿವು: ತನ್ನ ಮೂಲದಿಂದ ಮುಖಜಭೂಮಿಯಲ್ಲಿ ಸಮುದ್ರ ಸೇರುವವರೆಗಿನ ಕಾವೇರಿ ನದಿಯ ಒಟ್ಟು ಉದ್ದ 800 ಕಿ.ಮೀ.. ಕರ್ನಾಟಕದಲ್ಲಿ 320 ಕಿ.ಮೀ. ಹರಿದು 416 ಕಿ.ಮೀ. ತಮಿಳುನಾಡಿನಲ್ಲಿ ಹರಿಯುವುದು. ಮತ್ತು 64 ಕಿ. ಮೀ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಸಮಾನವಾದ ಗಡಿಯನ್ನು ರೂಪಿಸುವುದು. 320+32=342 ಕಿ.ಮೀ. ಕರ್ನಾಟಕದಲ್ಲಿ; 416+32=448 ಕಿ,ಮೀ. ತಮಿಳುನಾಡಿನಲ್ಲಿ ಹರಿದಂತಾಯಿತು ತಮಿಳು ನಾಡಿನ ಮೆಟ್ಟೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ. ಕಾವೇರಿ ನದಿ ನೀರು ಹಂಚಿಕೆ ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ಧ ಜಲಾಶಯ ಕೃಷ್ಣರಾಜಸಾಗರ.ಅದರ ಗರಿಷ್ಟ ಮಟ್ಟ ೧೨೪.೮ ಅಡಿ.(ಅಲ್ಲಿಯ ನೆಲ ಮಟ್ಟದಿಂದ)ಕಾವೇರಿ ಕಣಿವೆಯ ನೀರಿನಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲನ್ನು ಈಗಾಗಲೆ ಗಿಟ್ಟಿಸಿದ್ದರೂ ತಮಿಳುನಾಡಿಗೆ ತೃಪ್ತಿ ಇಲ್ಲ. ಕಾವೇರಿ ಕಣಿವೆಯಲ್ಲಿರುವ ಒಟ್ಟು ನೀರು 740 ಟಿಎಂಸಿ ಅಡಿ. ಈ ಪೈಕಿ 419 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ, 270 ಟಿಎಂಸಿ ಅಡಿ ನೀರನ್ನು ಕರ್ನಾಟಕಕ್ಕೂ ನ್ಯಾಯಾಧಿಕರಣ ಈಗಾಗಲೆ ಹಂಚಿಕೆ ಮಾಡಿದೆ. ಒಟ್ಟು ನೀರು 740 ಟಿಎಂಸಿ ಅಡಿ.-ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಒಟ್ಟು ಲಭ್ಯವಾಗುವ ನೀರಿನ ಪ್ರಮಾಣ ;ಮಳೆ ಸರಾಸರಿ ಉತ್ತಮ ಮಳೆಯಾದಾಗ; ಕರ್ನಾಟಕವು ತನಗೆ ಲಭ್ಯವಾಗುವ ನೀರಿನಲ್ಲಿ 192 ಟಿ.ಎಮ್.ಸಿ.ಅಡಿ ನೀರನ್ನು ತಮಿಳನಾಡಿಗೆ ಬಿಡಬೇಕು. ಹಾಗೆ ಬಿಟ್ಟಾಗ ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರು ಉಳಿಯುವುದೆಂದು ಅಂದಾಜು. ಮಳೆ ಕಡಿಮೆಯಾದಾಗ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯ ಕಾವೇರಿ ಆಯೋಗ ನೀರಿನ ಪ್ರಮಾಣವನ್ನು ನಿರ್ಧರಿಸುವುದು. ಹೆಚ್ಚು ಕಡಿಮೆ ಶೇ.80ರಷ್ಟು ಕಾವೇರಿ ನೀರು ತನಗೇ ಸಲ್ಲಬೇಕು ಎಂಬುದು ತಮಿಳುನಾಡಿನ ಆಗ್ರಹ. ಅರ್ಥಾತ್ 740 ಟಿಎಂಸಿಗಳಲ್ಲ್ 566 ಟಿಎಂಸಿ ತನ್ನ ನ್ಯಾಯಯುತ ಪಾಲು ಎನ್ನುತ್ತದೆ.ಹೀಗಾಗಿ 419ಕ್ಕೆ ಸಮಾಧಾನ ಇಲ್ಲ. ಕರ್ನಾಟಕದ ಪಾಲಿನ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರ. ತೀರ್ಪು ಸಂಬಂಧ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಅಂಗೀ­ಕರಿಸಿದೆ. ಹೀಗಾಗಿ ನಾವು ಈ ವಿವಾದದ ವಿಚಾರಣೆ ನಡೆಸುವುದು ಸರಿಯಲ್ಲ ಎಂಬ ನಿಲುವನ್ನು ನ್ಯಾಯಮಂಡಳಿ ವ್ಯಕ್ತಪಡಿಸಿತು. ಏಳು ವರ್ಷದ ನಂತರ ಇದೇ ಮೊದಲ ಬಾರಿಗೆ ನ್ಯಾಯ­ಮಂಡಳಿಯು ಸಭೆ ಸೇರಿತ್ತು.ನ್ಯಾ. ಬಿ.ಎಚ್‌. ಚೌಹಾಣ್‌ ಕಾವೇರಿ ನ್ಯಾಯಮಂಡಳಿ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಸೇರಿದ ನ್ಯಾಯ­ಮಂಡಳಿ ಕಲಾಪ ಕೇವಲ ಒಂದು ಗಂಟೆಯೊಳಗೆ ಮುಗಿದು ಹೋಯಿತು.(15-7-2014) ಕಾವೇರಿ ನ್ಯಾಯಮಂಡಳಿ 2007ರ ಫೆಬ್ರುವರಿ ಐದರಂದು ಅಂತಿಮ ತೀರ್ಪು ನೀಡಿದೆ. ಅದರಂತೆ ಕಾವೇರಿ ಒಟ್ಟಾರೆ ನೀರಿನ ಪ್ರಮಾಣವನ್ನು 740 ಟಿಎಂಸಿ ಅಡಿ ಎಂದು ಅಂದಾಜಿಸಿದೆ. ಇದರಲ್ಲಿ ತಮಿಳುನಾಡಿಗೆ 419ಟಿಎಂಸಿ (ಬೇಡಿಕೆ 562ಟಿಎಂಸಿ ಅಡಿ), ಕರ್ನಾಟಕಕ್ಕೆ 270 ಟಿಎಂಸಿ ಅಡಿ (ಬೇಡಿಕೆ 465 ಟಿಎಂಸಿ ಅಡಿ) ಕೇರಳಕ್ಕೆ 30 ಟಿಎಂಸಿ ಅಡಿ, ಪುದುಚೇರಿಗೆ ಏಳು ಟಿಎಂಸಿ ಹಾಗೂ ಪರಿಸರ ಸಂರಕ್ಷಣೆಗೆ 10 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದೆ. ನ್ಯಾಯಮಂಡಳಿ ಐತೀರ್ಪು ಪ್ರಶ್ನಿಸಿ ತಮಿಳುನಾಡು ಮತ್ತು ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದು, ಈ ಅರ್ಜಿಗಳು ವಿಚಾರಣೆಗೆ ಅಂಗೀಕಾರ ಆಗಿವೆ. ನ್ಯಾಯಮಂಡಳಿ ಮುಂದೆಯೂ ಕೆಲವು ಸ್ಪಷ್ಟನೆಗಳನ್ನು ಕೇಳಿ ಸಂಬಂಧಪಟ್ಟ ರಾಜ್ಯಗಳು ಅರ್ಜಿ ಹಾಕಿವೆ.೩ ಕಾವೇರಿ ನದಿಯ ಮೇಕೆದಾಟು ಅಣೆಕಟ್ಟು ಯೋಜನೆ ಮತ್ತು ವಿವಾದ ಬೆಂಗಳೂರಿನಿಂದ ೧೦೦ ಕಿ.ಮೀ. ಹಾಗೂ ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮ ಸ್ಥಾನದಿಂದ ೪ ಕಿ.ಮೀ. ದೂರದಲ್ಲಿ ಮೇಕೆ ದಾಟು ಇದೆ. ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ಬಹುತೇಕ ತಾಲ್ಲೂಕುಗಳು ಬರಪೀಡಿತವಾಗಿದ್ದು, ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸಿವೆ. ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ಆದೇಶದಂತೆ ಕರ್ನಾಟಕ ನಿಗದಿತ ಪ್ರಮಾಣದ ನೀರನ್ನು ತಮಿಳು­ನಾಡಿಗೆ ಬಿಟ್ಟಿರುವುದಕ್ಕೆ ಅಂಕಿಅಂಶ, ಸಾಕ್ಷ್ಯಾಧಾರಗಳು ಲಭ್ಯವಿವೆ. ಆದರೂ ಈ ವಿಚಾರದಲ್ಲಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುತ್ತದೆ. ಉತ್ತಮವಾಗಿ ಮಳೆಯಾದಂತಹ ವರ್ಷಗಳಲ್ಲೂ ನೀರಿನ ಪ್ರಮಾಣದ ಬಗ್ಗೆ ತಮಿಳುನಾಡು ಆಕ್ಷೇಪ ಎತ್ತುತ್ತದೆ. ಇದನ್ನು ತಡೆಗಟ್ಟಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆಂಬುದು ಕರ್ನಾಟಕದ ಬಯಕೆ. ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಿಂದ ತಮಿಳುನಾಡಿನ ಗಡಿಯ ವರೆಗೆ ಕಾವೇರಿ ನದಿಯ ಜಲಾನಯನ ಪ್ರದೇಶ ೨೩,೨೩೧ ಚದರ ಕಿ.ಮೀ. ಕೆ.ಆರ್.ಎಸ್. ಜಲಾಶಯದ ಕೆಳಭಾಗದಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲಿ ಗಣನೀಯ ಪ್ರಮಾಣದ ಬಸಿ ನೀರು ಉತ್ಪತ್ತಿಯಾಗುತ್ತಿದೆ. ಇದು ಸಹ ಕಾವೇರಿ ನದಿಯೊಂದಿಗೆ ತಮಿಳುನಾಡನ್ನು ಸೇರುತ್ತದೆ. ಈ ಹರಿವಿನ ಮೇಲೂ ಕರ್ನಾಟಕಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ, ನ್ಯಾಯ ಮಂಡಳಿಯಿಂದ ನಿಗದಿಯಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರು ತಮಿಳುನಾಡಿಗೆ ಬಿಡುಗಡೆಯಾಗುತ್ತದೆ. ಆದರೂ ತಮಿಳುನಾಡು ಈ ಅಣೆಕಟ್ಟಿನ ವಿರುದ್ಧ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಕ್ಕೆ ದೂರು ತೆಗೆದುಕೊಂಡುಹೋಗಿದೆ. ಟಿ.ಎಂ.ಸಿ. ವಿಶೇಷ ಲೇಖನ:ಕಾವೇರಿ ನದಿ ನೀರಿನ ವಿವಾದ ನೋಡಿ ಭಾರತದ ನದಿಗಳು ಮೆಟ್ಟೂರು ಜಲಾಶಯದ ಚಿತ್ರ × ಇಂಗ್ಲಿಷ್` ತಾಣ ವಿವಾದ-ಹೊರ ಸಂಪರ್ಕ: ಕಾವೇರಿ ನದಿಯ ಮೇಕೆದಾಟು ಅಣೆಕಟ್ಟು ಯೋಜನೆ ಕಾವೇರಿ ಪುಷ್ಕರಲು ಉಲ್ಲೇಖ ೩.೧೬-೭-೨೦೧೪ ವಿಜಯ ಕರ್ನಾಟಕ ಮತ್ತು ಪ್ರಜವಾಣಿ ಜಲಸಮೂಹಗಳು ನದಿಗಳು ಭಾರತದ ನದಿಗಳು ಕರ್ನಾಟಕದ ನದಿಗಳು
2427
https://kn.wikipedia.org/wiki/%E0%B2%92%E0%B2%82%E0%B2%9F%E0%B3%86%20%28%E0%B2%9A%E0%B2%A6%E0%B3%81%E0%B2%B0%E0%B2%82%E0%B2%97%29
ಒಂಟೆ (ಚದುರಂಗ)
ಒಂಟೆ ಚದುರಂಗದಲ್ಲಿ ಉಪಯೋಗಗೊಳ್ಳುವ ಕಾಯಿಗಳಲ್ಲಿ ಒಂದು. ಅಂತರರಾಷ್ಟ್ರೀಯ ಮಟ್ಟದಲ್ಲಿನ ಪಂದ್ಯಾವಳಿಗಳಲ್ಲಿ ಒಂಟೆಯನ್ನು ಬಿಷಪ್ ಎಂದು ಕರೆಯಲಾಗುತ್ತದೆ. ಇದು ತನ್ನ ಚೌಕದ(ಮನೆಯ) ಸುತ್ತಲಿನ ನಾಲ್ಕು ದಿಕ್ಕುಗಳಲ್ಲಿ(ಈಶಾನ್ಯ, ವಾಯುವ್ಯ, ನೈರುತ್ಯ, ಆಗ್ನೇಯ) ನೇರ ರೇಖೆಗಳಲ್ಲಿ, ತನ್ನ ಬಣ್ಣದ ಮನೆಗಳ ಮೂಲಕ, ಚಲಿಸುತ್ತದೆ. ಬಿಳಿ ಮನೆಯಲ್ಲಿನ ಒಂಟೆ ಯಾವುದೇ ಸಂದರ್ಭದಲ್ಲಿ ಕಪ್ಪು ಮನೆಯ ಒಳಗೆ ಪ್ರವೇಶಿಸುವಂತಿಲ್ಲ. ಇದೇ ರೀತಿ, ಕಪ್ಪು ಮನೆಯಲ್ಲಿನ ಒಂಟೆ ಯಾವುದೇ ಸಂದರ್ಭದಲ್ಲಿ ಬಿಳಿಯ ಮನೆಯ ಒಳಗೆ ಹೋಗುವಂತಿಲ್ಲ. ಚದುರಂಗ ಕ್ರೀಡೆ ಚದುರಂಗದ ಕಾಯಿ
2437
https://kn.wikipedia.org/wiki/%E0%B2%AC%E0%B2%BF.%E0%B2%B5%E0%B2%BF.%20%E0%B2%B5%E0%B3%80%E0%B2%B0%E0%B2%AD%E0%B2%A6%E0%B3%8D%E0%B2%B0%E0%B2%AA%E0%B3%8D%E0%B2%AA
ಬಿ.ವಿ. ವೀರಭದ್ರಪ್ಪ
ಬಿ.ವಿ. ವೀರಭದ್ರಪ್ಪನವರು ದಾವಣಗೆರೆ ನಗರದ ಪ್ರಮುಖ ನಿವೃತ್ತ ಅಧ್ಯಾಪಕರು ಹಾಗು ಚಿಂತಕರು. ಇವರ "ವೇದಾಂತ ರೆಜಿಮೆಂಟ್" ಕನ್ನಡದ ಪ್ರಮುಖ ವೈಚಾರಿಕ ಪುಸ್ತಕಗಳಲ್ಲೊಂದು. ಇವರು ಲಂಕೇಶ್ ಪತ್ರಿಕೆಯಲ್ಲಿ ದಶಕಗಳ ಹಿಂದೆ ವೈಚಾರಿಕ ಲೇಖನಗಳ ಮೂಲಕ ನಂಬಿಕೆ ಸಂಪ್ರದಾಯಗಳ ಬುಡವನ್ನೇ ಪ್ರಶ್ನಿಸಿದ ವಿವಾದಾತ್ಮಕ ಲೇಖಕ ಎಂದು ಪ್ರಸಿದ್ಧ. ವೇದಾಂತ ರೆಜಿಮೆಂಟ್ ದಾವಣಗೆರೆಯ ಪ್ರಮುಖ ವ್ಯಕ್ತಿಗಳು ದಾವಣಗೆರೆ
2438
https://kn.wikipedia.org/wiki/%E0%B2%B6%E0%B2%BE%E0%B2%AE%E0%B2%A8%E0%B3%82%E0%B2%B0%E0%B3%81%20%E0%B2%B6%E0%B2%BF%E0%B2%B5%E0%B2%B6%E0%B2%82%E0%B2%95%E0%B2%B0%E0%B2%AA%E0%B3%8D%E0%B2%AA
ಶಾಮನೂರು ಶಿವಶಂಕರಪ್ಪ
ಶ್ಯಾಮನೂರ್ ಶಿವಶಂಕರಪ್ಪರವರು ೧೬ ಜೂನ್ ೧೯೩೧ರಂದು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ಇವರ ಹೆಂಡತಿ ಎಸ್ ಎಸ್ ಪಾರ್ವತಮ್ಮ, ಶಿವಶಂಕರಪ್ಪನವರು ದಾವಣಗೆರೆ ಜಿಲ್ಲೆಯ ದಕ್ಶಿಣ ಭಾಗದಿಂದ ಚುನಾವಣೆಯಲ್ಲಿ ಕಳೆದ ಸುಮಾರು ೧೦ ವರ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ. ಶಿವಶಂಕರಪ್ಪನವರು ಕಳೆದ ೩ ದಶಕಗಳಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೈತಿಯ ಖಜಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕರ್ನಾಟಕ ರಾಜ್ಯದ ಮಾಜಿ ತೋಟಗಾರಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇವರು, ತಾವು ಅಧಿಕಾರವನ್ನು ಸ್ವೀಕರಿಸಿದ ಕೆಲ ದಿನಗಳಲ್ಲಿ ತೋಟಗಾರಿಕಾ ಇಲಾಖೆಯೊಂದಿಗೆ ಮಲಗಿರುವ 1,000 ಕೋಟಿ ರೂಪಾಯಿಗಳನ್ನು ರಾಜ್ಯದಲ್ಲಿನ ತೋಟಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸಲು ವ್ಯವಸ್ಥಿತವಾಗಿ ಬಳಸಿಕೊಳ್ಳುವುದಾಗಿ ನಿರ್ಧರಿಸಿ ಈ ವಿಚಾರವನ್ನು ಮುನ್ನಡೆಸಿದರು. ಸಾಧನೆ ಶ್ಯಾಮನೂರ್ ಶಿವಶಂಕರಪ್ಪರವರು ದಾವಣಗೆರೆಯ ಅಂಗವಿಕಲರ ಆಶಕಿರಣ ಟ್ರಸ್ಟ್, ದಾವಣಗೆರೆ ಕ್ರಿಕೆಟ್ ಕ್ಲಬ್ ಮತ್ತು ದಾವಣಗೆರೆ ಸ್ಪೋರ್ಟ್ಸ್ ಕ್ಲಬ್‍ನ ಅಧ್ಯಕ್ಷರು.ಇವರು ಅಖಿಲ ಭಾರತ ವೀರಶಿವ ಮಹಾಸಭೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು, ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ಮತ್ತು ಹಲವಾರು ವೃತ್ತಿಪರ ಶಿಕ್ಷಣ ಸಂಸ್ಥೆಗಳು ಸೇರಿ ಸರಪಳಿಯಾಗಿರುವ, ಬಾಪುಜಿ ಎಂಜಿನಿಯರಿಂಗ್ ಅಸೋಸಿಯೇಷನ್‍ರ ಅಧ್ಯಕ್ಷರಾಗಿದ್ದಾರೆ. ಅವರು ಶಿಕ್ಷಣವಾದಿ ಮತ್ತು ಕೈಗಾರಿಕೋದ್ಯಮಿಯಾಗಿದ್ದು, ಸಕ್ಕರೆ ಮತ್ತು ಡಿಸ್ಟಿಲರೀಸ್‍ನ ವ್ಯಾಪಾರ ಮಾಡುವ ಶ್ಯಾಮನೂರ್ ಗ್ರೂಪ್ ಎಂದು ಕರೆಯಲ್ಪಡುವ ಒಂದು ಉದ್ಯಮದ ಗುಂಪನ್ನು ಹೊಂದಿದ್ದಾರೆ. ಚುನಾವಣೆಗಳು ಶಿವಶಂಕರಪ್ಪನವರು ದಕ್ಶಿಣ ದಾವಣಗೆರೆ ಜಿಲ್ಲೆಯ ೨೦೦೮ ಹಾಗು ೨೦೧೩ರ ವಿಧಾನ ಸಭಾ ಚುನಾವಣೆಯಲ್ಲಿ ಜಯವನ್ನು ಸಾಧಿಸಿ ಕಾಂಗ್ರೆಸ್ ಪಕ್ಶದ ಅತ್ಯಂತ ಅನುಭವಿ ಪ್ರತಿನಿಧಿಯಾಗಿಯೂ ಹಾಗು ಸಂಪುಟ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ೨೦೦೮ರ ಚುನಾವಣೆಗಳಲ್ಲಿ ಶಿವಶಂಕರಪ್ಪನವರು ಬಿಜೆಪಿ ಪಕ್ಷದ ಯಶವಂತ ರಾವ್ ಜಾಧವ್ ಅವರನ್ನು ಸುಮಾರು ೫೫೦೦ ಮತಗಳಿಂದ ಸೋಲಿಸಿ ದಕ್ಶಿಣ ದಾವಣಗೆರೆ ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರು. ಅತ್ಯಂತ ಪ್ರಭಾವಶಾಲಿಯಾದ ರಾಜಕಾರಣಿ ೨೦೦೮ರಿಂದ ತಮ್ಮನ್ನು ತಾವೆ ತೊಡಗಿಸಿಕೊಂಡು ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಸಮಯ ಹಾಗು ಸಂಪನ್ಮೂಲವನ್ನು ಕೇಂದ್ರೀಕರಿಸಿದ್ದಾರೆ. ೨೦೧೩ರ ಚುನಾವಣೆಯಲ್ಲಿಯೂ ಸಹ ಶಿವಶಂಕರಪ್ಪನವರು ಮೇಲ್ಕಂಡ ಕ್ಶೇತ್ರದಿಂದ ಸ್ಪರ್ಧಿಸಿ ಗೆಲುವಿನ ಪತಾಕೆ ಹಾರಿಸಿದರು. ಉಲ್ಲೇಖಗಳು ದಾವಣಗೆರೆಯ ಪ್ರಮುಖ ವ್ಯಕ್ತಿಗಳು ದಾವಣಗೆರೆ ರಾಜಕಾರಣಿಗಳು ಶಾಸಕರುಕರ್ನಾಟಕ ರಾಜಕಾರಣಿಗಳು
2458
https://kn.wikipedia.org/wiki/%E0%B2%B8%E0%B2%A4%E0%B3%8D%E0%B2%AF%E0%B2%9C%E0%B2%BF%E0%B2%A4%E0%B3%8D%20%E0%B2%B0%E0%B3%87
ಸತ್ಯಜಿತ್ ರೇ
ಸತ್ಯಜಿತ್ ರೇ (ಮೇ ೨, ೧೯೨೧ - ಏಪ್ರಿಲ್ ೨೩, ೧೯೯೨) ಪ್ರಸಿದ್ಧ ಬ೦ಗಾಳಿ ಚಿತ್ರ ನಿರ್ದೇಶಕರು, ಮತ್ತು ಭಾರತೀಯ ಚಿತ್ರರ೦ಗದ ಅತಿ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. ಪಥೇರ್ ಪಾ೦ಚಾಲಿ, ಅಪರಾಜಿತೊ ಮತ್ತು ಅಪ್ಪುವಿನ ಪ್ರಪ೦ಚ - ಈ ಮೂರು ಚಿತ್ರಗಳ ಸರಣಿ ಇವರ ಅತಿ ಪ್ರಸಿದ್ಧ ಚಿತ್ರಗಳನ್ನು ಒಳಗೊ೦ಡಿದೆ. ಅಕಿರಾ ಕುರೋಸಾವಾ, ಸ್ಟೀವನ್ ಸ್ಪೀಲ್‍ಬರ್ಗ್, ಮಾರ್ಟಿನ್ ಸೋರ್ಸೆಸಿ ಮೊದಲಾದ ಅನೇಕ ಹೆಸರಾ೦ತ ನಿರ್ದೇಶಕರು ಸತ್ಯಜಿತ್ ರೇ ಅವರ ಚಿತ್ರಗಳನ್ನು ಮೆಚ್ಚಿಕೊ೦ಡಿರುವುದು೦ಟು. ಶಿಕ್ಷಣ ಮತ್ತು ಆಸಕ್ತಿಗಳು ವಿಶ್ವ ಚಲನಚಿತ್ರರಂಗದ ಮಹಾನ್ ದಿಗ್ದರ್ಶಕರಲ್ಲೊಬ್ಬರರಾದ ಭಾರತರತ್ನ ಸತ್ಯಜಿತ್ ರೇ ಅವರು ಕಲ್ಕತ್ತೆಯಲ್ಲಿ ಮೇ ೨, ೧೯೨೧ರ ವರ್ಷದಲ್ಲಿ ಜನಿಸಿದರು. ಕಲ್ಕತ್ತೆಯ ವಿಶ್ವವಿದ್ಯಾಲಯದಲ್ಲಿ ಓದಿದ ನಂತರದಲ್ಲಿ ರವೀಂದ್ರನಾಥ ಠಾಕೂರರ ಶಾಂತಿನಿಕೇತನದಲ್ಲಿ ಕಲೆಯನ್ನು ಅಭ್ಯಸಿಸಿದ ಸತ್ಯಜಿತ್ ರೇ ಅವರಿಗೆ ಚಿಕ್ಕಂದಿನಿಂದ ಚಿತ್ರರಂಗದ ಆಳಗಳನ್ನು ಅರಿಯುವುದು ಮತ್ತು ವಿಶ್ವಪ್ರಸಿದ್ಧ ಸಂಗೀತವನ್ನು ಕೇಳುವುದು ಪ್ರಮುಖ ಆಸಕ್ತಿಯಾವಾಗಿತ್ತು. ಬಹುಮುಖ ಪ್ರತಿಭೆ ಸತ್ಯಜಿತ್ ರೇ ಅವರು ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಸಂಗೀತ ಸಂಯೋಜಕ, ಕಥೆಗಾರ ಮಾತು ಕಲಾ ವಿನ್ಯಾಸಕ ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭೆ. ಎಷ್ಟರ ಮಟ್ಟಿಗೆ ಅವರು ಸ್ವಾವಲಂಬಿ ಎಂದರೆ ಪೋಸ್ಟರುಗಳನ್ನು ಕೂಡಾ ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಅಕ್ಷರಗಳ ಅಚ್ಚುವಿನ್ಯಾಸವನ್ನು ಕೂಡಾ ತಾವೇ ಮಾಡಿಕೊಳ್ಳುತ್ತಿದ್ದರು. ತಮ್ಮ ತಾತ ಉಪೇಂದ್ರ ಕಿಶೋರ್ ರೇ ಅವರು ಬಂಗಾಳಿಯಲ್ಲಿ ಮಕ್ಕಳಿಗಾಗಿ ಅವರ ಕಾಲದಲ್ಲಿ ನಡೆಸುತ್ತಿದ್ದ ಸಂದೇಶ್ ಎಂಬ ಪತ್ರಿಕೆಯನ್ನು ೧೯೬೧ರ ವರ್ಷದಲ್ಲಿ ಪುನಃಶ್ಚೇತನಗೊಳಿಸಿದರು. ಆರಡಿ ನಾಲ್ಕಂಗುಲ ಎತ್ತರದ ಈ ಆಜಾನುಬಾಹು ವಿಶ್ವ ಚಲನಚಿತ್ರರಂಗದಲ್ಲಿ ಕೂಡಾ ಗೋಪುರ ಸದೃಶ ವ್ಯಕ್ತಿತ್ವವೇ ಆಗಿದ್ದರು. ೧೯೪೭ರಲ್ಲಿ ಕಲ್ಕತ್ತೆಯ ಪ್ರಥಮ ಚಲನಚಿತ್ರ ಸೊಸೈಟಿಯನ್ನು ನಿರ್ಮಿಸಿದ ಕೀರ್ತಿ ಅವರದು. ರವೀಂದ್ರರ ನಿಧನಾನಂತರದಲ್ಲಿ ಶಾಂತಿನಿಕೇತನದಿಂದ ಹೊರಬಂದ ಸತ್ಯಜಿತ್ ರೇ ೧೯೪೩ ರಿಂದ ೧೯೫೬ರ ಅವಧಿಯಲ್ಲಿ ವೃತ್ತಿಪರ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದರು. ಚಲನಚಿತ್ರ ಲೋಕದಲ್ಲಿ ಖಾಸಗಿ ಜಾಹಿರಾತು ಸಂಸ್ಥೆಯೊಂದರ ಉದ್ಯೋಗಿಯಾಗಿದ್ದುಕೊಂಡೇ ೧೯೫೫ರ ವರ್ಷದಲ್ಲಿ ‘ಪಥೇರ್ ಪಂಚಾಲಿ’ ಚಿತ್ರವನ್ನು ಸೃಜಿಸಿದರು. ಹಾಗೆಂದರೆ ‘ಸಣ್ಣ ಹಾದಿಯ ಹಾಡು’ ಎಂದರ್ಥ. ಈ ಚಿತ್ರದ ಅಪಾರ ಯಶಸ್ಸಿನ ಜೊತೆಗೆ ಕೇನ್ಸ್ ಅಂತರರಾಷ್ಟ್ರೀಯ ಉತ್ಸವದಲ್ಲಿ ಆ ಚಿತ್ರ ಪ್ರತಿಷ್ಟಿತ ‘ಗ್ರಾಂಡ್ ಪ್ರಿಕ್ಸ್’ ಗೌರವವನ್ನು ಗಳಿಸಿತು. ಪಥೇರ್ ಪಂಚಾಲಿ ಚಿತ್ರದೊಂದಿಗೆ ಅಪರಾಜಿತೋ (ಅಪರಾಜಿತ) ಮತ್ತು ಅಪೂರ್ ಸಂಸಾರ್ (‘ಅಪು’ವಿನ ಪರಿವಾರ) ಚಿತ್ರಗಳು ಸೇರಿ ‘ಅಪು ತ್ರಿವಳಿಗಳು’ ಎಂದು ವಿಶ್ವಪ್ರಸಿದ್ಧಿ ಪಡೆದಿವೆ. ಜಲ್ಸಾ ಘರ್( ಸಂಗೀತದ ಮನೆ), ದೇವಿ, ತೀನ್ ಕನ್ಯಾ, ಚಾರುಲತ (ಒಂಟಿ ಪತ್ನಿ), ನಾಯಕ್, ಅಸನಿ ಸಂಕೇತ್ (ದೂರದ ಬಿರುಗಾಳಿ), ಶತ್ರಂಜ್ ಖಿ ಖಿಲಾರಿ (ಚದುರಂಗದಾಟಗಾರರು), ಘರೇ ಬಜ್ರೆ (ಮನೆ ಮತ್ತು ಪ್ರಪಂಚ), ಗಣಶತ್ರು (ಜನಗಳ ಶತ್ರು), ಶಾಖಾ ಪ್ರಶಾಖಾ (ಶಾಖೆ ಮತ್ತು ಉಪಶಾಖೆಗಳು) ಮತ್ತು ಆಗಂತುಕ್ ಮುಂತಾದವು ಅವರ ಮುಂಬಂದ ಚಿತ್ರಗಳು. ಅಂತಃಸತ್ವ “ಯಾವುದು ಗುರುತಿಸಲ್ಪಡುವುದಿಲ್ಲವೋ ಅದೇ ಶ್ರೇಷ್ಠ ತಂತ್ರಜ್ಞಾನ” ಎಂಬುದು ಅವರ ಮೂರೂವರೆ ದಶಕದ ಚಿತ್ರರಂಗದ ಬದುಕಿನ ಅಚಲ ನಿಲುಮೆಯಾಗಿತ್ತು. ತಂತ್ರಜ್ಞಾನ ಎಂಬುದು ದಾರಿಯನ್ನು ಕ್ರಮಿಸಲಿಕ್ಕೆ ಬೇಕಿರುವ ಸಾಧನವಷ್ಟೆ. ಅಂತಃಸತ್ವವಿಲ್ಲದೆ ಕೇವಲ ವಿನ್ಯಾಸ ಶ್ರೀಮಂತಿಕೆಯ ತೋರ್ಪಡಿಕೆಗಾಗಿ ಚಿತ್ರ ನಿರ್ಮಾಣ ಮಾಡುವ ಕುರಿತು ಅವರಿಗೆ ಕಿಂಚಿತ್ತೂ ಆಸಕ್ತಿಯಿರಲಿಲ್ಲ. 1966ರ ವರ್ಷದಲ್ಲಿ ‘ನನ್ನ ಕ್ರಿಯಾಶೀಲತೆಯಲ್ಲಿನ ಕೆಲವೊಂದು ಅಂಶಗಳು’ ಎಂಬ ಕುರಿತು ಅಂಕಣವೊಂದನ್ನು ಬರೆದಿದ್ದು “ನಮ್ಮ ಚಿತ್ರಗಳು, ಅವರ ಚಿತ್ರಗಳು” ಎಂಬ ಅವರ ಪ್ರಕಟಿತ ಸಂಕಲನದಲ್ಲಿ ಅವನ್ನು ಪೋಣಿಸಿದ್ದರು. ವಿಶ್ವಶ್ರೇಷ್ಠ ಸಾಲಿನಲ್ಲಿ ವಿಶ್ವದ ಸಾರ್ವಕಾಲಿಕ ಶ್ರೇಷ್ಠರೆಂದು ಗುರುತಿಸಲ್ಪಡುವ ಸುಮಾರು ಹತ್ತು ಹನ್ನೆರಡು ಪ್ರಮುಖ ನಿರ್ದೇಶಕರಲ್ಲಿ ಪ್ರತಿಷ್ಠರಾಗಿರುವ ಸತ್ಯಜಿತ್ ರೇ ಅವರು ತಮ್ಮ ಚಿತ್ರಗಳಲ್ಲಿ ಮಾನವೀಯ ಸಂವೇದನೆಗಳ ಒಳನೋಟಗಳಿಗೆ ಅತ್ಯಂತ ಮಹತ್ವ ನೀಡಿದರು. ಅವರು ಚಿತ್ರಗಳನ್ನು ಮಾಡಿದ್ದು ಬಂಗಾಳಿಯಲ್ಲಿ ಮಾತ್ರ. ಆದರೂ ಅವು ವಿಶ್ವಮಟ್ಟದ ಆಸಕ್ತಿಯನ್ನು ಸೃಜಿಸುವುದರಲ್ಲಿ ಅತ್ಯಂತ ಯಶಸ್ವಿಯಾಗಿದ್ದವು. ಕಾರಣ ಅವು ಭಾಷೆಗೆ ಮಿಗಿಲಾದ ಮನುಷ್ಯ ಜೀವನ, ಅದರಲ್ಲಿನ ಸಂಬಂಧಗಳು, ಅನುಬಂಧಗಳು, ಭಾವುಕತೆಗಳು, ಬದುಕಿಗಾಗಿನ ಹೋರಾಟಗಳು, ದ್ವಂದ್ವಗಳು, ಸಂತಸ ಮತ್ತು ದುಃಖಗಳನ್ನು ಸಮಗ್ರವಾಗಿ ಕಟ್ಟಿಕೊಡುವಂತಹವಾಗಿದ್ದವು. ವಿಶ್ವಶ್ರೇಷ್ಠರ ಗೌರವ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಚಿತ್ರ ನಿರ್ದೇಶಕರ ಸಾಲಿನಲ್ಲಿ ಪ್ರಮುಖರಾದ ಅಕಿರಾ ಕುರಸೋವ ಹೇಳುತ್ತಾರೆ “ಮಾನವಜೀವನದ ಕುರಿತಾದ ಅತ್ಯಂತ ಪ್ರಶಾಂತ, ಆಳವಾದ ಒಳನೋಟ ಮತ್ತು ಪ್ರೇಮವನ್ನು ಹೊರಸೂಸುವ ಅಂಶಗಳು ಸತ್ಯಜಿತ್ ರೇ ಅವರ ಎಲ್ಲ ಚಿತ್ರಗಳ ವೈಶಿಷ್ಟ್ಯವಾಗಿದ್ದು ಅವು ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ” ಎಂದು. ವಿಶ್ವದ ಪ್ರತಿಷ್ಟಿತ ಚಿತ್ರ ನಿರ್ದೇಶಕರಲ್ಲೊಬ್ಬರಾದ ಮಾರ್ಟಿನ್ ಸ್ಕೊರ್ಸೆಸೆ ಅವರು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಸತ್ಯಜಿತ್ ರೇ ಕುರಿತು 2002ನೆ ವರ್ಷದಲ್ಲಿ ಬರೆದಿರುವ ಈ ಗೌರವಯುತ ಮಾತುಗಳು ಸತ್ಯಜಿತ್ ರೇ ಅವರ ಬಗೆಗಿನ ಸಂಪೂರ್ಣ ತಿಳುವಳಿಕೆಗೆ ಸಮಗ್ರ ಸಾರಾಂಶದಂತಿವೆ. “ಸತ್ಯಜಿತ್ ರೇ ಸಿನಿಮಾ ಮಾಡಿದಾಗ ಕೆಲವೊಂದು ಗಳಿಗೆಗಳು ನಿಮಗೇನೂ ಅರ್ಥವಾಗುವುದಿಲ್ಲ ಎಂಬ ಅಪರಿಚಿತ ವಾತಾವರಣವನ್ನು ಹುಟ್ಟಿಸಿಬಿಡುತ್ತವೆ ಕಾರಣ ಅವರು ಹೇಳುವ ಸಂಸ್ಕೃತಿ ಅತ್ಯಂತ ಸಂಕೀರ್ಣವಾದದ್ದು. ಆದರೆ ಕೆಲವೇ ಕ್ಷಣಗಳಲ್ಲಿ ಅಲ್ಲಿನ ವ್ಯಕ್ತಿಗಳು ನಿಮಗೆ ಹತ್ತಿರವಾಗುತ್ತಾ ಹೋಗುತ್ತಾರೆ ಜೊತೆಗೆ ಅವರ ಸಂಸ್ಕೃತಿಯನ್ನು ಕೂಡಾ ನಿಮಗೆ ರುಚಿಸುವಂತೆ ಹತ್ತಿರವಾಗಿಸುತ್ತಾರೆ. ಅವರು ಮಾತನಾಡುವ ವಿಷಯ ನಿಮಗೆ ಅರ್ಥವಾಗಬೇಕಿಲ್ಲ. ಅವರು ತೊಡುವ ಬಟ್ಟೆಗಳ ವಿನ್ಯಾಸ ನಿಮಗೆ ವಿಚಿತ್ರವಾಗಿರಲಿಕ್ಕೆ ಸಾಕು, ಅವರ ಪದ್ದತಿಗಳು ಸಂಪೂರ್ಣ ಬೇರೆಯೇ ಇರಬಹುದು. ಆದರೆ ಸತ್ಯಜಿತ್ ರೇ ನೀಡುವ ಸಹಜ ಮಾನವೀಯ ಸಂವೇದನೆಯಲ್ಲಿ ನಿಮಗೇ ಅರಿವಿಗೆ ಬಾರದಂತೆ ಅವೆಲ್ಲಾ ಆತ್ಮೀಯವಾಗುತ್ತಾ ಹೋಗುತ್ತದೆ. ಆ ವ್ಯಕ್ತಿಗಳ ಬದುಕು ನಿಮಗೆ ಅತ್ಯಂತ ಕುತೂಹಲ ಮತ್ತು ಅಚ್ಚರಿಗಳನ್ನು ಜೊತೆ ಜೊತೆಗೆ ಸೃಷ್ಟಿಸುವಂತಹವಾಗಿದ್ದು, ನಮ್ಮಿಂದಾಚೆಗೆ ಕೂಡಾ ಸಂಸ್ಕೃತಿಗಳಿವೆ ಎಂಬುದು ತಾನೇ ತಾನಾಗಿ ಗೋಚರಿಸತೊಡಗುತ್ತದೆ” ಪ್ರಶಸ್ತಿ ಗೌರವಗಳು ಸತ್ಯಜಿತ್ ರಾಯ್ ಅವರಿಗೆ ಪತ್ರಿಕೋದ್ಯಮ ಹಾಗು ಸಂಸ್ಕೃತಿಗಾಗಿ ೧೯೬೭ರ ರಾಮನ್ ಮೆಗ್ಸಾಸೆ ಪುರಸ್ಕಾರ ಲಭಿಸಿತು. .೧೯೭೮ರ ವರ್ಷದಲ್ಲಿ ಬರ್ಲಿನ್ ಚಿತ್ರೋತ್ಸವದ ನಿರ್ವಾಹಕ ಸಮಿತಿಯು ಸತ್ಯಜಿತ್ ರೇ ಅವರನ್ನು ವಿಶ್ವದ ಮೂರು ಶ್ರೇಷ್ಠ ನಿರ್ದೇಶಕರಲ್ಲೊಬ್ಬರು ಎಂದು ಕೊಂಡಾಡಿತು. ೧೯೯೨ರ ವರ್ಷದಲ್ಲಿ ಅವರಿಗೆ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಿತಿಯು ಜೀವಮಾನದ ಸಾಧನೆಯ ಗೌರವವನ್ನು ನೀಡಿತು. ಅವರಿಗೆ ಸಂದಿರುವ ಇತರ ಪ್ರಶಸ್ತಿಗಳೆಂದರೆ ಪ್ರಾನ್ಸ್ ದೇಶದ ಪ್ರತಿಷ್ಟಿತ ‘ಲೆಜೆನ್ ಡಿ ಹಾನರ್’ ಮತ್ತು ನಮ್ಮ ದೇಶದ ಚಿತ್ರರಂಗದ ಶ್ರೇಷ್ಠ ಗೌರವವಾದ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ' ಮತ್ತು ದೇಶದ ಅತ್ಯುಚ್ಚತಮ ಗೌರವವಾದ ‘ಭಾರತರತ್ನ’ ಪ್ರಶಸ್ತಿಗಳು. ವಿದಾಯ ಈ ಮಹಾನ್ ತಂತ್ರಜ್ಞ ಸತ್ಯಜಿತ್ ರೇ ಅವರು ಏಪ್ರಿಲ್ ೨೩, ೧೯೯೨ರಲ್ಲಿ ನಿಧನರಾದರು. ಈ ಮಹಾನ್ ಮಾನವೀಯ ಸೂಕ್ಷ್ಮಮತೆಗಳ ಆಳ ಅರಿವುಗಳ ಪ್ರಾಜ್ಞ ಮತ್ತು ಅಭಿವ್ಯಕ್ತಿಯ ಪರಮೋಚ್ಚ ಪ್ರತಿಭಾವಂತರು ನಿತ್ಯ ಸ್ಮರಣೀಯರೆನಿಸಿದ್ದಾರೆ. ಸತ್ಯಜಿತ್ ರಾಯ್ ಅವರ ಚಲನಚಿತ್ರಗಳು ಪಥೇರ ಪಾಂಚಾಲಿ (೧೯೫೫) ಅಪರಾಜಿತೊ (೧೯೫೬) ಪರಶ್ ಪಥೇರ್ (೧೯೫೮) ಜಲಸಾಘರ (೧೯೫೮) ಅಪೂರ ಸಂಸಾರ (೧೯೫೯) ದೇವಿ (೧೯೬೦) ತೀನ್ ಕನ್ಯಾ (೧೯೬೧) ಕಾಂಚನಜಂಗಾ (೧೯೬೨) ಅಬಿಜನ (೧೯೬೨) ಮಹಾನಗರ (೧೯೬೩) ಚಾರುಲತಾ (೧೯೬೪) ಕಾಪುರುಷ-ಓ-ಮಹಾಪುರುಷ (೧೯೬೫) ನಾಯಕ (೧೯೬೬) ಚಿಡಿಯಾಖಾನಾ (೧೯೬೭) ಗೂಪಿ ಗೈನೆ, ಬಾಘಾ ಬೈನೆ (೧೯೬೮) ಅರಣ್ಯೇರ್ ದಿನರಾತ್ರಿ (೧೯೬೯) ಪ್ರತಿದ್ವಂದಿ (೧೯೭೦) ಸೀಮಾಬದ್ಧ (೧೯೭೧) ಅಶಾನಿ ಸಂಕೇತ (೧೯೭೩) ಸೋನಾರ ಕೆಲ್ಲಾ (೧೯೭೪) ಜನ ಅರಣ್ಯ (೧೯೭೫) ಶತರಂಜ ಕೆ ಖಿಲಾಡಿ (೧೯೭೭)(ಹಿಂದಿಯಲ್ಲಿ) ಜೊಯ್ ಬಾಬಾ ಫೇಲೂನಾಥ (೧೯೭೮೦ ಹೀರಕ ರಾಜಾರ ದೇಶೆ (೧೯೮೦) ಸದ್ಗತಿ (೧೯೮೧) ಘರೆ ಬೈರೆ (೧೯೮೪) ಗಣಶತ್ರು (೧೯೮೯) ಶಾಖಾ ಪ್ರೊಶಾಖಾ (೧೯೯೦) ಆಗಂತುಕ (೧೯೯೧) ಬಾಹ್ಯ ಸ೦ಪರ್ಕಗಳು Satyajitray.org ಸತ್ಯಜಿತ್ ರೇ ಅಧಿಕೃತ ತಾಣ ಸತ್ಯಜಿತ್ ರೇ ರ ಜೀವನಚರಿತ್ರೆ ಚಿತ್ರರಂಗ ನಿರ್ದೇಶಕರು ಬಾಲಿವುಡ್ ೧೯೨೧ ಜನನ ೧೯೯೨ ನಿಧನ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
2462
https://kn.wikipedia.org/wiki/%E0%B2%AA%E0%B2%A5%E0%B3%87%E0%B2%B0%E0%B3%8D%20%E0%B2%AA%E0%B2%BE%E0%B2%82%E0%B2%9A%E0%B2%BE%E0%B2%B2%E0%B2%BF
ಪಥೇರ್ ಪಾಂಚಾಲಿ
ಪಥೇರ್ ಪಾಂಚಾಲಿ ಭಾರತದ ಅಗ್ರಗಣ್ಯ ನಿರ್ದೇಶಕ ಸತ್ಯಜಿತ್ ರೇರವರ ಪ್ರಥಮ ಚಿತ್ರ. ಹೆಸರಾಂತ 'ಅಪೂ ಚಿತ್ರಸರಣಿ'ಯ ಮೊದಲ ಭಾಗವಾಗಿರುವ ಇದು, ೧೯೫೫ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಆರ್ಥಿಕ ನೆರವಿನಿಂದ ನಿರ್ಮಾಣಗೊಂಡಿತು. ೧೯೨೯ರಲ್ಲಿ ಬಿಭೂತಿಭೂಷಣ್ ಬಂದೋಪಾಧ್ಯಾಯರು ಬರೆದ ಅದೇ ಹೆಸರಿನ ಕಾದಂಬರಿ ಆಧರಿಸಿ ತಯಾರಾದ ಈ ಚಿತ್ರವು, ಸುಬೀರ್ ಬ್ಯಾನರ್ಜಿ, ಕರುಣಾ ಬ್ಯಾನರ್ಜಿ, ಕಾನು ಬ್ಯಾನರ್ಜಿ, ಉಮಾ ದಾಸ್ ಗುಪ್ತ, ಚುನಿಬಾಲ ದೇವಿ ಅವರನ್ನು ಮುಖ್ಯಭೂಮಿಕೆಯಲ್ಲಿ ಒಳಗೊಂಡಿತ್ತು. ಇದು ಅಪೂ ಹಾಗೂ ದುರ್ಗಾರ ಬಾಲ್ಯದ ದಿನಗಳು ಮತ್ತು ಸ್ವಾತಂತ್ರ್ಯ ಪೂರ್ವದ ಹಳ್ಳಿಯ ಕಷ್ಟದ ದಿನಗಳ ಕುರಿತು ಬೆಳಕುಚೆಲ್ಲುತ್ತದೆ. ಚಿತ್ರವನ್ನು ಸ್ಥಳದಲ್ಲೇ(On spot) ಹೆಚ್ಚಾಗಿ ಚಿತ್ರೀಕರಿಸಲಾಗಿತ್ತು ಮತ್ತು ಸೀಮಿತ ಬಜೆಟ್ಅನ್ನು ಒಳಗೊಂಡಿತ್ತು. ಚಿತ್ರಕ್ಕೆ ಪಂ. ರವಿ ಶಂಕರ್ ಅವರು ಸಂಗೀತ ನಿರ್ದೇಶನ ಮಾಡಿದ್ದರು. ೧೯೫೫ರ ಅಮೆರಿಕಾದ ನ್ಯೂಯಾರ್ಕ್ನ 'ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ಸ್'ನಲ್ಲಿ ನಡೆದ ಪ್ರೀಮಿಯರ್ ನ ನಂತರ,ಅದೇ ವರ್ಷ ಕಲ್ಕತ್ತಾದಲ್ಲಿ ಬಿಡಿಗಡೆ ಮಾಡಲಾಯಿತು. ಚಿತ್ರಕ್ಕೆ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರದ ಸಹಜತೆ, ಮನಕಲಕುವ ನಿರೂಪಣೆ, ಮಾನವೀಯತೆ ಮುಂತಾದ ಅಂಶಗಳ ಕುರಿತು ವಿಮರ್ಶಕರು ಮೆಚ್ಚಿನ ಮಾತುಗಳನ್ನಾಡಿದರೆ, ಇನ್ನು ಕೆಲವರು ಚಿತ್ರದ ನಿಧಾನಗತಿಯ ನಿರೂಪಣೆಯನ್ನು ಹಿನ್ನಡೆ ಎಂದು ಭಾವಿಸಿದ್ದಾರೆ. ಚಿತ್ರದ ಕಥೆಯು ಮುಂದಿನ ಎರಡು ಭಾಗಗಳಾದ ಅಪರಿಜಿತೊ(ಅಜೇಯ) ಹಾಗೂ ಅಪುರ್ ಸಂಸಾರ್(ಅಪೂವಿನ ಜಗತ್ತು)ನೊಂದಿಗೆ ಮುಂದುವರೆಯುತ್ತದೆ. ಈ ಚಿತ್ರವನ್ನು ಭಾರತೀಯ ಚಿತ್ರರಂಗದ ಮೈಲಿಗಲ್ಲು ಎಂದು ಭಾವಿಸಲಾಗಿದೆ. ನಂತರದ ದಿನಗಳಲ್ಲಿ ಆರಂಭವಾದ ಪರ್ಯಾಯ ಸಿನಿಮಾ ಅಥವಾ ಕಲಾತ್ಮಕ ಚಿತ್ರಗಳಿಗೊಂದು ಮಹತ್ವದ ಅಡಿಪಾಯವನ್ನು ಈ ಚಿತ್ರವು ಹಾಕಿಕೊಟ್ಟಿತು. ೧೯೫೫ರ ಅತ್ಯತ್ತಮ ಭಾರತೀಯ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರವು, ಕ್ಯಾನೆ ಚಲನಚಿತ್ರೋತ್ಸವದಲ್ಲಿ 'ಬೆಸ್ಟ್ ಹ್ಯೂಮನ್ ಡಾಕ್ಯುಮೆಂಟ್ ಪ್ರಶಸ್ತಿ' ಪಡೆಯಿತಲ್ಲದೇ, ರೇರವರನ್ನು ಜಗದ್ವಿಖ್ಯಾತ ನಿರ್ದೇಶಕರಲ್ಲಿ ಒಬ್ಬರನ್ನಾಗಿ ಮಾಡಿತು. ತಾರಾ ಬಳಗ ಹರಿಹರ, ತಂದೆ: ಕಾನು ಬ್ಯಾನರ್ಜಿ. ಸರ್ಬಜಯ, ತಾಯಿ: ಕರುಣಾ ಬ್ಯಾನರ್ಜಿ. ಅಪ್ಪು: ಸುಬೀರ್ ಬ್ಯಾನರ್ಜಿ. ದುರ್ಗ, ಚಿಕ್ಕ ಹುಡುಗಿ: ಉಮಾ ದಾಸ್ ಗುಪ್ತ. ದುರ್ಗ, ಮಗು: ರುಂಕಿ ಬ್ಯಾನರ್ಜಿ. ಇಂದಿರ್ ಠಾಕ್ರುನ್, ವೃದ್ಧ ಚಿಕ್ಕಮ್ಮ: ಚುನಿಬಲ ದೇವಿ. ಮಿಠಾಯಿ ಮಾರುವಾತ ಪ್ರಶಸ್ತಿಗಳು ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫. ಅತ್ಯತ್ತಮ ಮಾನವೀಯ ದಾಖಲೆ, ಕ್ಯಾನೆ, ೧೯೫೬. ಡಿಪ್ಲೊಮ ಆಫ್ ಮೆರಿಟ್, ಎಡಿನ್ಬರ್ಗ್, ೧೯೫೬. ವ್ಯಾಟಿಕನ್ ಪ್ರಶಸ್ತಿ, ರೋಮ್, ೧೯೫೬. ಗೋಲ್ಡನ್ ಕಾರ್ಬಾವ್, ಮನಿಲಾ, ೧೯೫೬. ಅತ್ಯುತ್ತಮ ಚಿತ್ರ ಹಾಗೂ ನಿರ್ದೇಶನ, ಸಾನ್ ಫ್ರಾನ್ಸಿಸ್ಕೋ, ೧೯೫೭. ಸೆಲ್ಜ್ನಿಕ್ ಗೋಲ್ಡನ್ ಲಾರೆಲ್, ಬರ್ಲಿನ್, ೧೯೫೭. ಅತ್ಯುತ್ತಮ ಚಲನಚಿತ್ರ, ವ್ಯಾನ್ಕೋವರ್, ೧೯೫೮. ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ಚಲನಚಿತ್ರ, ಸ್ಟ್ರಾಟ್ಫೋರ್ಡ್, ಕೆನಡಾ, ೧೯೫೮. ಅತ್ಯುತ್ತಮ ವಿದೇಶೀ ಚಿತ್ರ, ನ್ಯೂ ಯಾರ್ಕ್, ೧೯೫೯. ಕಿನೆಮಾ ಜಂಪೊ ಪ್ರಶಸ್ತಿ: ಅತ್ಯುತ್ತಮ ವಿದೇಶೀ ಚಿತ್ರ, ಟೋಕ್ಯೋ, ೧೯೬೬. ಬೊಡಿಲ್ ಪ್ರಶಸ್ತಿ: ವರ್ಷದ ಅತ್ಯುತ್ತಮ ಯೂರೋಪೇತರ ಚಿತ್ರ, ಡೆನ್ಮಾರ್ಕ್, ೧೯೬೬. ಚಲನಚಿತ್ರಗಳು
2464
https://kn.wikipedia.org/wiki/%E0%B2%B5%E0%B3%87%E0%B2%A6
ವೇದ
ವೇದಗಳು ಪ್ರಾಚೀನ ಭಾರತದ ಸಾಹಿತ್ಯ. ಇವುಗಳನ್ನು ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದ್ದು, ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಧರ್ಮಗ್ರಂಥಗಳಾಗಿವೆ. ವೇದಗಳು ಅಪೌರುಷೇಯವಾಗಿವೆ. ಅಂದರೆ ಇವುಗಳನ್ನು ಮಾನವರು ರಚಿಸಿದ್ದಲ್ಲ ಎನ್ನಲಾಗುತ್ತದೆ. ವೇದಗಳಲ್ಲಿ ನಾಲ್ಕು ಪ್ರಕಾರಗಳಿವೆ. ಅವುಗಳೆಂದರೆ ಋಗ್ವೇದ, ಯಜುರ್ವೇದ, ಸಾಮವೇದ ಅಥರ್ವವೇದ. ಪ್ರತಿ ವೇದವು ನಾಲ್ಕು ಉಪವಿಭಾಗಗಳನ್ನು ಹೊಂದಿದೆ. ಸಂಹಿತೆಗಳು (ಮಂತ್ರಗಳು ಮತ್ತು ಆಶೀರ್ವಾದಗಳು) ಅರಣ್ಯಕಗಳು (ಆಚರಣೆಗಳು, ಸಮಾರಂಭಗಳು, ಯಜ್ಞಗಳು ಮತ್ತು ಸಾಂಕೇತಿಕ-ಯಜ್ಞಗಳ ಪಠ್ಯ) ಬ್ರಾಹ್ಮಣಗಳು (ಆಚರಣೆಗಳು, ಸಮಾರಂಭಗಳು ಮತ್ತು ಯಜ್ಞಗಳ ವ್ಯಾಖ್ಯಾನಗಳು) ಉಪನಿಷತ್ತುಗಳು (ಧ್ಯಾನವನ್ನು ಚರ್ಚಿಸುವ ಪಠ್ಯಗಳು, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಜ್ಞಾನ). ಕೆಲವು ವಿದ್ವಾಂಸರು ಐದನೇ ವರ್ಗವನ್ನು ಸೇರಿಸುತ್ತಾರೆ - ಉಪಾಸನಗಳು (ಪೂಜೆ). ಉಪನಿಷತ್ತುಗಳ ಗ್ರಂಥಗಳು ಭಿನ್ನಲಿಂಗೀಯ ಶ್ರಮಣ-ಸಂಪ್ರದಾಯಗಳಿಗೆ ಹೋಲುವ ವಿಚಾರಗಳನ್ನು ಚರ್ಚಿಸುತ್ತವೆ. ವೇದದ ಹೆಚ್ಚಿನ ವಿವರ ಪ್ರಸ್ಥಾವನೆ ಮೇಲೆ ತಿಳಿಸಿದಂತೆ ವೇದಗಳು ನಾಲ್ಕು. ಋಕ್, ಯಜುಸ್, ಸಾಮ, ಅಥರ್ವ. ವೇದವೆಂದರೆ ಜ್ಞಾನ -ತಿಳುವಳಿಕೆ ಎಂದು ಅರ್ಥ. ಋಗ್ವೇದವು ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ವಾಙ್ಮಯ(ಸಾಹಿತ್ಯ) ಎನಿಸಿದೆ. ಋಕ್, ಯಜುಸ್, ಸಾಮವೇದ ಇವು ಮೂರು ವೇದಗಳಿಗೆ ತ್ರಯೀ ಎಂದು ಹೆಸರು ಅವಕ್ಕೆ ಹೆಚ್ಚು ಮಹತ್ವ. ಋಗ್ವೇದದಲ್ಲಿ ದೇವತೆಗಳ ಸ್ತುತಿಗೆ ಎಂದರೆ ಋಕ್ಗಳಿಗೆ ಪ್ರಾಧಾನ್ಯ ಪ್ರಾಮುಖ್ಯತೆ. ಯಜುರ್ವೇದದಲ್ಲಿ ಯಜ್ಞಕ್ಕೆ ಸಂಬಂಧಪಟ್ಟ ಮಂತ್ರಗಳಿವೆ. ಅದರಲ್ಲಿ ಬಹಳಷ್ಟು ಋಗ್ವೇದ ಮಂತ್ರಗಳೇ ಇವೆ. ಸಾಮವೇದ ಮಂತ್ರಗಳು ಗಾನಕ್ಕೆ -ಯಜ್ಞದಲ್ಲಿ ಅಥವಾ ದೇವತೆಗಳ ಪ್ರೀತಿಗಾಗಿ ಹಾಡುವವು. ಅಥರ್ವದಲ್ಲಿ ಯಜ್ಞ, ಮದ್ದು, ಮಾಟ, ಇವುಗಳಿಗೆ ಸಂಬಂಧಪಟ್ಟ ಮಂತ್ರಗಳಿವೆ. ವೇದ ಸಂಹಿತೆಯನ್ನು ಅಷ್ಟಕ, ಅದ್ಯಾಯ, ವರ್ಗ ಎಂದು ವಿಭಾಗಿಸಿದ್ದಾರೆ. ಇನ್ನೊಂದು ಬಗೆಯ ವಿಭಾಗ, ಮಂಡಲ, ಅನುವಾಕ, ಸೂಕ್ತ, ಮಂತ್ರ, -ಈ ಎರಡನೆಯ ಬಗೆಯ ವಿಭಾಗ ಹೆಚ್ಚು ಪ್ರಚಲಿತವಾಗಿದೆ. ಅನವಾಕಗಳ ೮೫, ಅನುವಾಮದಲ್ಲಿ ಸೂಕ್ತಗಳು ೧೦೨೮, ಅದರಲ್ಲಿ ಮಂತ್ರಗಳು ೧೦೫೫೦. ಯಜ್ಞದಲ್ಲಿ ಋಗ್ವೇದವು ಹೋತೃವಿಗೆ ಸಂಬಂಧಿಸಿದೆ, ಯಜುರ್ವೇದವು -ಅಧ್ವರ್ಯುವಿಗೆ, ಸಾಮವೇದವು ಉದ್ಗಾತೃವಿಗೆ ಸಂಬಂಧಿಸಿವೆ. ಯಜ್ಞದಲ್ಲಿ ಬ್ರಹ್ಮ ಸ್ಥಾನದಲ್ಲಿರುವವನಿಗೆ ಅಥರ್ವವೇದ; ಅವನು ಎಲ್ಲರ ಮೇಲ್ವಿಚಾರಕ. ಶಾಖೆಗಳು ವೇದಗಳಲ್ಲಿ ಹಿಂದೆ ಅನಂತ ಶಾಖೆಗಳಿದ್ದು ಈಗ ೧೦-೧೨ ಶಾಖೆಗಳಿವೆ. ಪ್ರತಿಯೊಂದು ವೇದಕ್ಕೂ ನಾಲ್ಕು ಸ್ಕಂದಗಳಿವೆ (ಭಾಗ). ಸಂಹಿತೆ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತು. ಸಂಹಿತೆಗಳು ಮಂತ್ರ ಭಾಗ ಬ್ರಾಹ್ಮಣಗಳು ಯಜ್ಞ ಕ್ರಮ ಹೇಳುವವು, ಆರಣ್ಯಕಗಳಲ್ಲಿ ಯಾಗ ವಿಧಾನ, ಅಧ್ಯಾತ್ಮಿಕ ವಿಚಾರ, ಉಪನಿಷತ್ (ಬ್ರಹ್ಮ -ಮೂಲ ಚೈತನ್ಯ ವಿಚಾರ) ಚರ್ಚೆಗೆ ಮುಖ್ಯವಾದುದು. ಮಂತ್ರಗಳು ಪ್ರಾಚೀನವಾದವು ಉಪನಿಷತ್ ಅತ್ಯಂತ ಅನಂತರದ್ದು, ವೇದದ ಮೊದಲ ಮೂರುಭಾಗಗಳಿಗೆ ಕರ್ಮಕಾಂಡವೆಂತಲೂ, ಉಪನಿಷತ್ತಿಗೆ ಜ್ಞಾನ ಕಾಂಡವೆಂತಲೂ ಹೆಸರಿದೆ. ವೇದಗಳನ್ನು ಅಪೌರುಷೇಯವೆಂದು ಹೇಳುತ್ತಾರೆ. ಎಂದರೆ "ಮನುಷ್ಯರಿಂದ ರಚಿಲ್ಪಟ್ಟುದಲ್ಲ, ದೇವರಿಂದಲೇ ಬಂದಿದ್ದು" ಋಷಿಗಳ ಮನಸ್ಸಿಗೆ ತಾನಾಗಿ ಗೋಚರಿಸಿದ್ದು. ಅವು ಬಾಯಿಯಿಂದ ಬಾಯಿಗೆ ಬಂದದ್ದರಿಂದ ಶ್ರುತಿ (ಕೇಳಿದ್ದು) ಎಂಬ ಹೆಸರಿದೆ . ವೈದಿಕ ದೇವತೆಗಳಲ್ಲಿ ಪ್ರಮುಖರು: ಇಂದ್ರ, ಅಗ್ನಿ, ವರುಣ, ವಾಯು, ಯಮ, ವಿಷ್ಣು, ಮಿತ್ರ, ರುದ್ರ, ಬ್ರಹಸ್ಪತಿ, ಸರಸ್ವತಿ, ಪೃಥ್ವೀ, ರಾತ್ರೀ, ವಾಕ್, ಇಳಾ, ಸಂಧ್ಯಾ ಇತ್ಯಾದಿ ದೇವತೆಗಳಿದ್ದಾರೆ. ಆದಿತ್ಯರು ೧೨, ರುದ್ರರು ೧೧, ಮಾರುತಗಳು ಏಳು, ಹೀಗೆ ದೇವತೆಗಳ ಗುಂಪುಗಳು ಇವೆ. ವಿಶ್ವೇದೇವತೆಗಳೆಂದರೆ ಎಲ್ಲಾದೇವತೆಗಳು ಸೇರಿದ ಗುಂಪು. ದೇವತೆಗಳಲ್ಲಿ ವಿಭಾಗಗಳು ದೇವತೆಗಳಲ್ಲಿ ಮೂರು ಭಾಗಗಳು : ಪೃಥ್ವಿಸ್ಥಾನದವರು: ಅಗ್ನಿ, ಪೃಥ್ವೀ, ಸೋಮ, ನದಿ, ಬೃಹಸ್ಪತಿ, ಇತ್ಯಾದಿ. ಅಂತರಿಕ್ಷ ಸ್ಥಾನದವರು: ವಾಯು, ಇಂದ್ರ, ರುದ್ರ, ಮಾರುತ, ಆಪ, ಇತ್ಯಾದಿ. ದ್ಯುಸ್ಥಾನದವರು: ವರುಣ, ಮಿತ್ರ, ಸೂರ್ಯ, ಸವಿತಾ, ರಾತ್ರಿ, ಅದಿತಿ, ವಿಷ್ಣು, ಇತ್ಯಾದಿ. ಒಟ್ಟು - ಮೂವತ್ಮೂರು (೧೧×೩=೩೩) ದೇವತೆಗಳು. ಇವರೇ ಮೂವತ್ಮೂರು ಕೋಟಿ ಎನಿಸಲ್ಪಟ್ಟಿದ್ದಾರೆ. ಅನೇಕ ದೇವತೆಗಳಿದ್ದರೂ ಕೆಲವೆಡೆ ದೇವರೊಬ್ಬನೇ ಎಂಬ ವಿಚಾರವೂ ಇದೆ. ಏಕಂ ಸತ್ ವಿಪ್ರಾಃ ಬಹುದಾ ವದಂತಿ; ಋಗ್ವೇದದಲ್ಲಿ - ಸತ್ತವರು ಪಿತೃಲೋಕಕ್ಕೆ ಹೋಗಿ ಅಲ್ಲಿರುವ -ಅಲ್ಲಿ ವಾಸಿಸುವ ಕಲ್ಪನೆ ಇದ್ದಂತೆ ಕಾಣುತ್ತದೆ. ಪುನರ್ಜನ್ಮ ನಂತರದ ಕಲ್ಪನೆ ಎಂಬ ಅಭಿಪ್ರಾಯವಿದೆ. ಹಾಗಾಗಿ ದೇವತೆಗಳಲ್ಲದೆ ಪಿತೃಗಳದ್ದೂ ಒಂದು ಗುಂಪು ಇದೆ. ಮೊಟ್ಟಮೊದಲಿಗೆ ಪುರುಷಸೂಕ್ತವು ಪ್ರಪಂಚದ ವಿಕಾಸಕ್ಕೆ ಪುರುಷನೇ (ಬ್ರಹ್ಮ-ಮೂಲ ಚೈತನ್ಯ) ಕಾರಣವೆನ್ನುತ್ತದೆ. ವೇದಗಳು ಅತ್ಯಂತ ಪ್ರಾಚೀನವಾಗಿದ್ದು (೫೦೦೦ವರ್ಷಕ್ಕಿಂತ ಹಿಂದಿನದು), ಅದರ ಶುದ್ಧರೂಪವನ್ನು ಸ್ವಲ್ಪವೂ ಕೆಡದಂತೆ ಉಳಿಸಿಕೊಂಡು ಬಂದಿದ್ದು ಮಾನವನ ಇತಿಹಾಸಕ್ಕೆ ಒಂದು ಅಪೂರ್ವ ದಾಖಲೆಯಗಿದೆ. ಅದನ್ನು ಯಥಾ ರೂಪದಲ್ಲಿ ಕಾಪಾಡಿ ಕೊಂಡುಬರಲು ಜಟೆ, ಘನ, ಕ್ರಮ ಹೀಗೆ ಹೇಳುವ ಒಂದು ವಿಶಿಷ್ಟ ಪದ್ದತಿ ಕಾರಣವಾಗಿದೆ. ಉಲ್ಲೇಖಗಳು ನೋಡಿ ಋಗ್ವೇದ- ಯಜುರ್ವೇದ- ಸಾಮವೇದ- ಅಥರ್ವಣವೇದ- ಆಯುರ್ವೇದ ಉಪವೇದ ಐತಿಹಾಸಿಕ ವೈದಿಕ ಧರ್ಮಚಾರ್ವಾಕ ದರ್ಶನ; ಜೈನ ಧರ್ಮ - ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ; ವೀರಶೈವ; ಬಸವಣ್ಣ; ಭಾರತೀಯ ತತ್ವಶಾಸ್ತ್ರ ಸಮೀಕ್ಷೆ; ಭಗವದ್ಗೀತಾ ತಾತ್ಪರ್ಯ ; ಕರ್ಮ ಸಿದ್ಧಾಂತ ; ವೇದ--ಗೀತೆ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು ಹೊರಗಿನ ಕೊಂಡಿಗಳು (ಸಂಪರ್ಕ) ವೇದಸುಧೆ Veda In Hindi & Sanskrit GRETIL etexts The Vedas at sacred-texts.com Vedas: Rig, Sama, Yajur, and Atharva Vedas and Upanishads Complete set Glimpses of Vedic Literature - Kireet Joshi ಹಿಂದೂ ಧರ್ಮ ಧರ್ಮ ಸಂಸ್ಕೃತಿ ಹಿಂದೂ ಧರ್ಮಗ್ರಂಥಗಳು
2465
https://kn.wikipedia.org/wiki/%E0%B2%97%E0%B2%82%E0%B2%97%E0%B2%BE
ಗಂಗಾ
ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು. ಗಂಗಾ ನದಿಯು ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ "ದೇವನದಿ" ಎಂದು ವರ್ಣಿಸಲ್ಪಟ್ಟಿದೆ. ಭಾರತ ದೇಶದ ಉದ್ದಗಲಕ್ಕೂ ಗಂಗಾನದಿಯನ್ನು ಮಾತೃದೇವತೆಯ ರೂಪದಲ್ಲಿ ಪೂಜಿಸುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ. ಗಂಗಾನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ ೧೫೫೮ ಮೈಲಿಗಳಷ್ಟು (೨೫೦೭ ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಗಂಗಾ ನದಿಯ ವೈಶಿಷ್ಟ್ಯ ಹಿಂದೂಗಳ ಅತಿಶ್ರೇಷ್ಟ ಮತ್ತು ಪವಿತ್ರವಾದ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ಗಂಗೋತ್ರಿ. ಹಿಮಾಲಯ ಕೇವಲ ಹಿಮಶಿಖರಗಳ ಆಲಯವಲ್ಲ. ಋಷಿ ಮುನಿಗಳು ವಾಸವಾಗಿದ್ದ ಪ್ರದೇಶಗಳು. ಅಲ್ಲಿನ ಪರಿಸರ ಅಂದರೆ ಭೂಮಿ, ಜಲ, ಹನಿಗಳ ಉಪಯೋಗದಿಂದ ಆ ಸ್ಥಳಗಳ ಪಾವಿತ್ರತ್ಯೆ ಹೆಚ್ಚಿದೆ. ಈ ತೀರ್ಥಕ್ಷೇತ್ರಗಳಲ್ಲಿ ದೊರಕಬಹುದಾದ ಆಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿಯನ್ನು ಗೌರವಿಸಿ ಜಿಜ್ಞಾಸೆಗಳು, ಸಾಧಕರು, ಎದುರಿಸಬೇಕಾದ ಕಷ್ಟ ಕಾರ್ಪಣ್ಯಗಳನ್ನು, ಅಪಾಯಗಳನ್ನು, ಅನಾನುಕೂಲಗಳನ್ನು ಪರಿಗಣಿ ಸದೇ ಅತೀ ಕಠಿಣ ರಸ್ತೆ ಕ್ರಮಿಸಿ ಬರುತ್ತಾರೆ. ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸಿದ್ಧವಾದ ಹಲವಾರು ತೀರ್ಥಕ್ಷೇತ್ರಗಳಿವೆ. ಪ್ರಾಚೀನ ಗುರುಗಳು, ಅರ್ಚಾಯರು ಸಿದ್ಧರು ಮತ್ತು ಋಷಿಗಳು ಈ ಪ್ರದೇಶಗಳ ಅಮೂಲ್ಯವಾದ ಆಧ್ಯಾತ್ಮಿಕ ಸಂಪ್ತತನ್ನು ತಮ್ಮ ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಗಂಗೆಯ ಇತಿವೃತ್ತ ಉತ್ತರ ಭಾರತದಲ್ಲಿ 'ದೇವಭೂಮಿ' ಎಂದೇ ಪ್ರಸಿದ್ಧವಾದ ಹಿಮಾಲಯದ ನಾಲ್ಕು ಧಾಮಗಳಲ್ಲಿ ಒಂದು ಪಾವನ ಜಲವೆಂದು ಪೂಜಿಸುವ ಗಂಗೆಯ ಉಗಮ ಸ್ಥಳ ಗಂಗೋತ್ರಿ. ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದಿಂದ ಹೊರಡಬೇಕಾಗುತ್ತದೆ. ಹರಿದ್ವಾರ ಅಂದರೆ ಬದರಿನಾರಾಯಣ(ಹರಿ)ಕ್ಕೆ ಇಲ್ಲಿಂದ ಯಾತ್ರೆ ಆರಂಭಿಸು ವುದರಿಂದ ಇದಕ್ಕೆ 'ಹರಿದ್ವಾರ'ವೆಂತಲೂ ಕರೆಯುತ್ತಾರೆ, ಇಲ್ಲಿ ಗಂಗೆ ಎಲ್ಲಲ್ಲೂ ತಾನೇ ತಾನಾಗಿ ಕಣ್ಮನ ತಣಿಯುವಂತೆ ಹರಿಯುತ್ತಾಳೆ. ಹರಿದ್ವಾರದಿಂದ ೨೩ ಕಿ.ಮೀ. ದೂರದಲ್ಲಿ ಋಷಿಕೇಶ ಮಹಾ ಉತ್ತಮ ತೀರ್ಥ ಮತ್ತು ತಪೋಭೂಮಿಯಿದೆ. ಉತ್ತುಂಗ ಪರ್ವತಗಳ ಶಿಖರಗಳ ನಡುವೆ ಹರಿವ ಗಂಗೆಯ ಝಳು ಝಳು ನಿನಾದವೊಂದಿಗೆ ಜಲಧಾರೆ ಹರಿವು, ತಪ್ಪಲ ಪ್ರದೇಶಗಳನ್ನು ಸೇರುತ್ತದೆ. ಹರಿದ್ವಾರದಿಂದ ಗಂಗೋತ್ರಿಗೆ ೨೨೮.ಕಿ.ಮೀ. ಋಷಿಕೇಶ ದಾಟಿ ಚಂಬಾ ಪಟ್ಟಣದ ತನಕ (೨೯೦ ಅಡ್ಡಿ ಎತ್ತರ) ಉತ್ತಮವಾದ ಅತೀ ಕಡಿದಾದ, ಸಣ್ಣ, ತೀವ್ರ ತಿರುವುಗಳಿಂದ ಕೂಡಿದ ರಸ್ತೆ ಅಲ್ಲಿಂದ (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಿದ ರಾಜಧಾನಿ) ಉತ್ತರ ಕಾಶಿಯ ಕಡೆಗೆ ಹೊರಡಬೇಕು. ಉತ್ತರಕಾಶಿ ಒಂದು ಅಧುನಿಕ ಬಗೆಯಿಂದ ರಚಿತ ಸುಮಾರು ೫೦೦೦೦ ಜನಸಂಖ್ಯೆಯುಳ್ಳ ನಗರ. ಇಲ್ಲಿ ಈ ಜಿಲ್ಲೆಯ ಪ್ರಮುಖ ಕಾರ್ಯಾಲಯಗಳಿವೆ. ಉತ್ತರ ಕಾಶಿ ಉತ್ತರ ಕಾಶಿಯು ನೈಸರ್ಗಿಕ ಸೌಂದರ್ಯ, ಧಾರ್ಮಿಕ ಆಸ್ತಿಕತೆಯ ಅಪೂರ್ವ ಸಂಗಮ ಪ್ರದೇಶ. ಮನುಷ್ಯನ ಮನಸ್ಸಿಗೆ ರೋಮಾಂಚನ ತರುವ ಸ್ಥಳ ಮನಮೋಹಕ ದೃಶ್ಯ. ಭಕ್ತರ ಪಾಲಿಗೆ ಕಲ್ಯಾಣಕಾರಿ. ಪ್ರಕೃತಿಯ ಅನುಪಮ ನೋಟ ತಲೆ ಎತ್ತಿದರೆ ಗಗನಚುಂಬಿ ಬೆಟ್ಟಗಳು, ತಲೆ ತಗ್ಗಿಸಿದರೆ ನೀಳವಾಗಿ ಹರಿಯುವ ಗಂಗೆ, ಇದನ್ನೆಲ್ಲ ಹೋಗಿಯೇ ಅನುಭವಿಸಬೇಕು, ಆಸ್ವಾದಿಸಬೇಕು. ಉತ್ತರಕಾಶಿಯಲ್ಲಿ ಉಳಿದು ವಿಶ್ರಾಂತಿ ಪಡೆದು ಮುಂದೆ ಹೊರಡಬಹುದು. ಇಲ್ಲಿ ತಂಗಲು ಅನೇಕ ಧರ್ಮಶಾಲೆಗಳು, ವಸತಿಗಳು ಇವೆ. ನೂರು ವರುಷದಷ್ಟು ಹಳೆಯದಾದ ಕೈಲಾಸ ಆಶ್ರಮವೂ ಇದೆ. ಇಲ್ಲಿ ರಾತ್ರಿ ಎಂಟರವರೇಗೆ ಬೆಳಕು ಇರುತ್ತದೆ. ಸೂರ್ಯಾಸ್ತಮ ತಡವಾಗಿ ಆಗುತ್ತದೆ ಇದೇ ಇಲ್ಲಿನ ವೈಶಿಷ್ಟ್ಯ. ಹಾಗೆ ಬೆಳಿಗ್ಗೆ ೪-೩೦ ಕ್ಕೆಲ್ಲಾ ಇಲ್ಲಿ ಬೆಳಕಾಗುತ್ತದೆ (ಸೂರ್ಯೋದಯವೂ ಬೇಗ). ಇದಕ್ಕೆ ಉತ್ತರ ಕಾಶಿಯೆಂದು ಹೆಸರು ಬಂದಿದ್ದು, ಇಲ್ಲೆ ನೆಲೆಸಿರುವ ಶಿವನಿಂದಾಗಿ. ಉತ್ತರದ ಕಡೆ ಮುಖ ಮಾಡಿರುವ ಶಿವನ ದೇವಾಲಯ ಇಲ್ಲಿದೆ. ಅದಕ್ಕೆ ಎದುರಾಗಿ ಆದಿಶಕ್ತಿಯ ದೇವಸ್ಥಾನವಿದೆ. ಅಲ್ಲಿನ ವಿಶೇಷ ಸುಮಾರು ೧೦೦ ಅಡಿ ಎತ್ತರದ ಹಿತ್ತಾಳೆಯ ತರ ಇರುವ ಲೋಹದ ತ್ರಿಶೂಲವಿದೆ. ಅದನ್ನು ಅದಿಶಕ್ತಿಯೇ ರಕ್ಕಸರ ಸಂಹಾರದ ನಂತರ ಅಲ್ಲಿ ನೆಟ್ಟಿರುವುದು ಪಾತಾಳಕ್ಕೆ ಹೋಗಿದೆ ಎಂಬುದು ಅಲ್ಲಿನವರ ಹೇಳಿಕೆ. ಅದನ್ನು ತಿಳಿಯಲು ಅನೇಕ ವೈಜ್ಞಾನಿಕ ಪ್ರಯೋಗಗಳಾದರೂ ಸತ್ಯವನ್ನು ತಿಳಿಯಲು ಇನ್ನು ಸಾದ್ಯವಾಗಿಲ್ಲ. ಉತ್ತರ ಕಾಶಿಯಿಂದ ಬೆಳಿಗ್ಗೆ ಬೇಗ ೫ ಗಂಟೆಗೆ ಹೊರಟರೆ ಸಂಜೆಗೆ ವಾಪಾಸ್ಸು ಉತ್ತರ ಕಾಶಿಗೆ ಬಂದು ಸೇರಬಹುದು. ಉತ್ತರ ಕಾಶಿಯಿಂದ ಗಂಗೋತ್ರಿಗೆ ಹೊರಟಾಗ ದಾರಿಯಲ್ಲಿ ಸಿಗುವ ಸುಂದರ ತಾಣ 'ಹಸ್ಲಿಲ'. ಈ ಪ್ರದೇಶವು 'ಸೇಬು ಮರ'ಗಳಿಂದ ತುಂಬಿ ತುಳುಕುತ್ತದೆ. ಉತ್ತರ ಕಾಶಿ ಯಿಂದ ೧೫.ಕಿ.ಮೀ. ದೂರದಲ್ಲಿ ಮನೇರಿ ಡ್ಯಾಂ ಇದೆ. ಇಲ್ಲಿಯ ನಂತರ ಗಂಗೆ ತನ್ನ ಗಾತ್ರವನ್ನು ಕುಗ್ಗಿಸುತ್ತಾಳೆ. ಬೆಟ್ಟದ ಅಡಿಯಿಂದ ಉತ್ತರಕಾಶಿ ತನಕ ಹೋಗುತ್ತಾಳೆ. ಇಲ್ಲಿಂದ ಮುಂದೆ ಭೂ ಕುಸಿತಗಳ ಪ್ರಕರಣಗಳು ಹೆಚ್ಚು, ಹಾಗೇನಾದರು ಆದರೆ ಗಂಟೆಗಟ್ಟಲೆ-ದಿನಗಟ್ಟಲೆ ಸಾಲುಸಾಲಾಗಿ ವಾಹನಗಳು ನಿಲ್ಲುತ್ತವೆ. ಮಿಲಿಟ್ರಿಯವರು ಬಂದು ತೆರವು ಮಾಡಿದ ಮೇಲೆ ಹೊರಡಬೇಕಾಗುತ್ತದೆ. ಹಸ್ಲಿಲದಲ್ಲಿ ಮಿಲಿಟ್ರಿ ಕ್ಯಾಂಪ್ ಇದೆ, ಆ ಸ್ಥಳದ ಸುತ್ತ ಮುತ್ತಲೇ 'ರಾಮತೇರಿ ಗಂಗಾಮೈಲಿ' ಹಿಂದಿ ಸಿನಿಮಾ ತೆಗೆದದ್ದನ್ನು ಅಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ನಂತರ ಸಿಗುವುದೇ ಭೈರವ ಘಾಟಿ. ಇಲ್ಲಿ ಭೈರವನ ದೇವಸ್ಥಾನವಿದೆ. ಊಟ-ತಿಂಡಿ ಚಾಯ್ ಹೋಟೆಲುಗಳಿವೆ. ಯಾತ್ರಿಕರು ವಿಶ್ರಾಂತಿ ಪಡೆದು ಮುಂದೆ ಹೊರಡ್ತಾರೆ. ಭೈರವ ಘಾಟಿಯ ನಂತರ ಗಂಧಕ ಪರ್ವತಗಳ ತಾಣವಿದೆ. ಇಲ್ಲಿ ಬಿಸಿನೀರಿನ ಬುಗ್ಗೆಗಳನ್ನು ನೋಡಬಹುದು. ಯಾತ್ರಿಕರು ಅಲ್ಲಿ ಸ್ನಾನ ಮಾಡಿ ಮುಂದಕ್ಕೆ ಹೊರಡುತ್ತಾರೆ. ಅಲ್ಲಿ ದಾರಿಯುದ್ದಕ್ಕೂ ಪಾದಯಾತ್ರಿಕರನ್ನು ನೋಡುತ್ತೇವೆ (ಸನ್ಯಾಸಿಗಳು-ಸಿಖ್ಖ್‌ರು ಹೆಚ್ಚು) ಸಿಖ್ಖ್‌ರು ಡೋಲಿಯ ತರದಲ್ಲಿ ಇರುವ ಗಾಡಿಯಲ್ಲಿ ಗಂಗಾ ಜಲವನ್ನು ಇಟ್ಟು ಭಜನೆ ಮಾಡುತ್ತಾ ಹೋಗುವುದನ್ನು ಕಾಣಬಹುದು. ಥಂಡಿ ಹವಾ-ತುಂತುರು ಮಳೆ (ಜುಲೈ ತಿಂಗಳು) ಎರಡು ಕಡೆ ಕಡಿದಾದ ಎತ್ತರ ಬೆಟ್ಟಗಳು ಮೇಲಿನಿಂದ ಸಣ್ಣದಾಗಿ ಬೀಳುವ ನೀರಿನಿಂದ ಝರಿಗಳು, ಮೋಡಗಳು, ಪಾತಾಳ ದಲ್ಲಿ ಭೋರ್ಗರೆದು ಹರಿಯುವ ಗಂಗೆ. ಬ್ರಹ್ಮ ಸೃಷ್ಠಿಯನ್ನೇ ಕಡೆದು ಅಲ್ಲಿ ಇಟ್ಟಿದ್ದಾನೆನ್ನುವಂತಿದೆ. ಗಂಗೋತ್ರಿ ಸಮುದ್ರ ಮಟ್ಟದಿಂದ ೩೧೦೦ ಮೀಟರ್(೧೦,೩೫೫ ಅಡಿ) ಎತ್ತರದಲ್ಲಿದೆ. ಗಂಗೋತ್ರಿ ತಲುಪುವ ವೇಳೆಗೆ ಎಲ್ಲ ಆಯಾಸಗಳನ್ನು ಮರೆತುಬಿಡುತ್ತೇವೆ. ಗಂಗೆಯ ದಡದಲ್ಲಿ ಕೂತರೆ, ಆಕೆ ಹಿಮಾಲಯದಿಂದ ವೋ ಎಂದು ಸದ್ದು ಮಾಡುತ್ತಾ ಭೋರ್ಗರೆದು ಹರಿದು ಬರುವ ದಾರಿ(ಹರಿದ್ವಾರದಲ್ಲಿ ಶಾಂತವಾಗಿ ಹರಿಯುತಾಳೆ)ಯ ದೃಶ್ಯ ನಮ್ಮನ್ನು ತಲ್ಲೀನವಾಗಿಸುತ್ತದೆ. ಆಕೆಯನ್ನು ಸ್ಪರ್ಶಿಸಿದರೆ ತಣ್ಣಗೆ ಕೊರೆಯುತ್ತಾಳೆ. ಇಲ್ಲಿ ಗಂಗಾಮಾತೆಯ ವಿಶಾಲ ದೇವಾಲಯವಿದೆ. ಇದರಲ್ಲಿ ಗಂಗಾ, ಜಮುನಾ, ಸರಸ್ವತಿ, ಲಕ್ಷ್ಮೀ ಪಾರ್ವತಿ ಮತ್ತು ಸರಸ್ವತಿ ದೇವತೆಗಳ ಪ್ರಾಚೀನ ಪ್ರತಿಮೆಗಳಿವೆ. ಭಗೀರಥ ಮಹಾರಾಜ ಎದುರಿಗೆ ಕೈ ಜೋಡಿಸಿ ನಿಂತಿರುವ ಪ್ರತಿಮೆಯಿದೆ. ಇಲ್ಲಿ ಪೂಜಿಸುವ ವಸ್ತುಗಳೆಲ್ಲ ಚಿನ್ನದವು. ಇಲ್ಲಿ ಒಂದು ಸ್ಥಳದಲ್ಲಿ ಗಂಗೆ ಶಿವಲಿಂಗದ ಮೇಲೆಯೇ ಬೀಳುತ್ತಾಳೆ. ಇಲ್ಲಿ ಶೀತಗಾಳಿ ಹೆಚ್ಚು. ನಾವು ಗಂಗೆಯಲ್ಲಿ ಇಳಿದು ಸ್ನಾನ ಮಾಡುವುದು ಅತ್ಯಂತ ಕಷ್ಟಕರ. ತಲೆ ಮೇಲೆ ಪ್ರೋಕ್ಷಣೆ ಮಾಡುವಷ್ಟರಲ್ಲಿಯೇ ಕೈ ಶೀತದಿಂದ ಮರಗಟ್ಟಿರು ತ್ತದೆ. ದುರ್ಗಮ ಘಟ್ಟಗಳ ಮಧ್ಯೆ ಪಾಪ ಕಳೆಯುವ ಪತೀತ ಪಾವನೆ ಈ ಗಂಗಾ ಮಾತೆಯ ಮುಂದಿರುವ ಸ್ಥಳ ಸಗರರಾಜ ಭಗೀರಥ ಕುಳಿತು ತಪಸ್ಸು ಮಾಡಿದ ಸ್ಥಳ ಎಂದು ಹೇಳುವ ದೊಡ್ಡ ಕಲ್ಲು ಹಾಸಿಗೆ ಇದೆ. ಈ ಸ್ಥಳದಲ್ಲಿ ಮಾಡುವಂತಹ ಪೂಜೆ ಮಂಗಳಕಾರಿ ಇಲ್ಲಿ ವರ್ಷದ ೬ ತಿಂಗಳು ಮಾತ್ರ ಪೂಜೆ ನಡೆಯುತ್ತದೆ. ಇನ್ನು ೬ ತಿಂಗಳು ಹಿಮದಿಂದ ತುಂಬಿ ಹೋಗಿರುತ್ತದೆ. ಆಗ ಬೆಟ್ಟದ ಕೆಳಗಿರುವ ಮುಖೀಮಠದಲ್ಲಿ ಪೂಜೆ ನಡೆಯುತ್ತದೆ. ಅಲ್ಲಿ ಯಾರೂ ಇರಲು ಸಾಧ್ಯವಿಲ್ಲ. ಉನ್ನತ ಪರ್ವತಗಳ ನಡುವೆ ಕಿಲಕಿಲ ನಗುತ್ತಾ ತಂಪಾಗಿ ಕೊರೆಯುತ್ತಾ ಹರಿಯುವ ಗಂಗಾಜಲ ಧಾರೆಯು ದೃಶ್ಯ ನಮಗೊಂದು ಅಲೌಕಿಕ ಆನಂದ ಕೊಡುತ್ತದೆ (ಇಲ್ಲಿ ಯಾತ್ರೆಗೆ ಮೇ-ಸೆಫ್ಟೆಂಬರ್). ಇಲ್ಲಿ ಗಂಗೆಯ ಪೂಜೆ ಮಾಡಿಸಲು ಪೂಜಾರಿಗಳು ಅನೇಕರು ಹಿಂದೆ ಹಿಂದೆ ಬರುತ್ತಾರೆ. ಪೂಜೆ ಮಾಡಿಸಿದರೆ ಮನೆತನದ ಹಿರಿಯರಿಗೆ ಮುಕ್ತಿ ಸಿಗುತ್ತದೆ ಎನ್ನುವ ಪ್ರತೀತಿ. ಇಲ್ಲಿ ಅನೇಕ ಕ್ಷೇತ್ರಗಳು ಮತ್ತು ಧರ್ಮಶಾಲೆಗಳು, ಸಣ್ಣ ಪೇಟೆಯು ಇದೆ. ಗಂಗೋತ್ರಿಯ ಬಗ್ಗೆ ಹರಿದ್ವಾರದಿಂದ ಗಂಗೋತ್ರಿಗೆ ೨೯೭.ಕಿ.ಮೀ. ಋಷಿಕೇಶ ದಾಟಿ ಚಂಬಾ ಪಟ್ಟಣದ ತನಕ (೨೯೦೦ ಅಡ್ಡಿ ಎತ್ತರ) ಉತ್ತಮವಾದ ಕಡಿದಾದ, ಸಣ್ಣ, ತೀವ್ರ ತಿರುವುಗಳಿಂದ ಕೂಡಿದ ರಸ್ತೆಯ ಮುಖಾಂತರ ಹೋಗಬೇಕು. (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಿದ ರಾಜಧಾನಿ ) ಇಲ್ಲಿಂದ ಉತ್ತರ ಕಾಶಿಯ ಕಡೆಗೆ ಹೊರಡಬೇಕು. ಗಂಗೋತ್ರಿಯು ಗಂಗೆಯ ಉಗಮ ಸ್ಥಳವಲ್ಲ. ಅಲ್ಲಿಂದ ೧೮ ಕಿ.ಮಿ ಮುಂದಿರುವ 'ಗೋಮುಖ' ಗಂಗೆಯ ಉಗಮವೆನ್ನುತ್ತಾರೆ. ೩೬೫ ದಿನಗಳು ಹಿಮ ಬೀಳುವ ಪ್ರದೇಶ, ಅತೀ ಕಡಿದಾದ ಸ್ಥಳ ಗೋಮುಖ. ಗೋಮುಖ ಸಮುದ್ರ ಮಟ್ಟದಿಂದ ೧೨,೭೭೦ ಅಡಿ ಎತ್ತರ. ಅಲ್ಲಿಂದ ನೀಳವಾಗಿ ಹೊರಟ ಗಂಗೆ ಗಂಗೋತ್ರಿಗೆ ಬರುವಷ್ಟರಲ್ಲಿಯೇ ಭೋರ್ಗರೆಯ ತೊಡಗುತ್ತಾಳೆ. (ಮಿಲಿಟರಿ ಪರವಾನಿಗೆ ಪಡೆದೇ ಗೋಮುಖಕ್ಕೆ ಹೋಗಬೇಕು. ಅತೀ ಸಾಹಸದ ಚಾರಣದ ಸ್ಥಳವಿದು. ಅಲ್ಲಿನ ಗೈಡ್ ಜೊತೆಗಿದ್ದರೆ ಇಡೀ ಒಂದು ದಿನ ಬೇಕು. ಗೋಮುಖಕ್ಕೆ ಹೋಗುವವರು ಪೂರ್ಣ ಸ್ವಸ್ಥ ಹಾಗೂ ಸಾಹಸಿಗಳಾಗಿರಬೇಕು. ಯೋಗ್ಯ ಸಾಧನಗಳನ್ನು ತೆಗೆದುಕೊಂಡೇ ಹೋಗಬೇಕು. ಇದು ಅತ್ಯಂತ ಕಠಿಣ ದಾರಿ, ಗೈಡ್ ಇಲ್ಲದೇ ಹೋಗುವುದು ಕಷ್ಟವಾಗುತ್ತದೆ. ಇಲ್ಲಿ ದೊಡ್ಡ ದೊಡ್ಡ ಹಿಮ ಶಿಲಾಖಂಡಗಳು ಕಾಣಸಿಗುತ್ತವೆ. ಯಾತ್ರಿಕರ ನಕ್ಷೆ, ಉಣ್ಣೆಯ ಬಟ್ಟೆಗಳು, ಅಗತ್ಯ ಔಷಧಗಳು, ಧರ್ಮಶಾಲೆ ಯ ವಿವರಗಳು, ಈ ಅಂಶಗಳು ಯಾತ್ರಿಕರು ಗಮನದಲ್ಲಿಟ್ಟುಕೊಳ್ಳುವ ಅಂಶಗಳು. ಹಿಮಾಲಯದ ನಾಲ್ಕು ಧಾಮಗಳು ೧. ಕೇದಾರನಾಥ, ೨. ಬದರಿನಾಥ, ೩. ಗಂಗೋತ್ರಿ ಮತ್ತು ೪. ಯಮುನೋತ್ರಿ. ಹಿಂದೂಗಳ ಅತಿಶ್ರೇಷ್ಟ ಮತ್ತು ಪವಿತ್ರವಾದ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ನಾಲ್ಕು ಧಾಮಗಳು ಹಿಮಾಲಯ ಕೇವಲ ಹಿಮ ಶಿಖರಗಳಲ್ಲ. ಋಷಿಮುನಿಗಳು ವಾಸವಾಗಿದ್ದ ಪ್ರದೇಶಗಳು. ಅಲ್ಲಿನ ಪರಿಸರ ಅಂದರೆ ಭೂಮಿ, ಜಲ, ಅಗ್ನಿಗಳ ಉಪಯೋಗದಿಂದ ಆ ಸ್ಥಳಗಳ ಪಾವಿತ್ರತ್ಯೆ ಹೆಚ್ಚಿವೆ. ಈ ತೀರ್ಥಕ್ಷೇತ್ರಗಳಲ್ಲಿ ದೊರಕಬಹುದಾದ ಆಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿಯನ್ನು ಗೌರವಿಸಿ, ಜಿಜ್ಞಾಸಿಗಳು, ಸಾಧಕರು, ಅತೀ ಕಠಿಣ ರಸ್ತೆ ಕ್ರಮಿಸುವಾಗ, ಎದುರಿಸಬೇಕಾದ ಕಷ್ಟ ಕಾರ್ಪಣ್ಯಗಳನ್ನು, ಅಪಾಯಗಳನ್ನು, ಅನಾನುಕೂಲಗಳನ್ನು ಪರಿಗಣಿಸದೇ ಬರುತ್ತಾರೆ. ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸ್ಧಿವಾದ ಹಲವಾರು ತೀರ್ಥಕ್ಷೇತ್ರಗಳಿವೆ. ಪ್ರಾಚೀನ ಗುರುಗಳು, ಅರ್ಚಾಯರು ಸಿದ್ಧರು ಮತ್ತು ಋಷಿಗಳು ಈ ಪ್ರದೇಶಗಳ ಅಮೂಲ್ಯವಾದ ಆಧ್ಯಾತ್ಮಿಕ ಸಂಪ್ತತನ್ನು ತಮ್ಮ ಮುಂದಿನ ಜನಾಂಗಕ್ಕೆ ಕೂಡುಗೆಯಾಗಿ ಕೊಟ್ಟಿದ್ದಾರೆ. ಋಷಿಕೇಶದಿಂದ ಮೂರು ರಸ್ತೆಗಳು ಇವೆ. ಒಂದು ಗಂಗೋತ್ರಿ, ಇನ್ನೊಂದು ರಸ್ತೆ ಯಮುನೋತ್ರಿ, ಮತ್ತೊಂದು ಬದರಿನಾಥಕ್ಕೆ ಹಾಗೂ ಕೇದಾರನಾಥಕ್ಕೆ. ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದ ಮೂಲಕವೇ ಹೊರಡಬೇಕಾಗುತ್ತದೆ. ಹರಿದ್ವಾರಕ್ಕೆ ದೆಹಲಿಯಿಂದ ೬ ಗಂಟೆ ಪ್ರವಾಸ ಮಾಡಬೇಕು. ಹರಿ ಅಂದರೆ ಬದರಿನಾರಾಯಣ ಹಿಮಾಲಯದ ನಾಲ್ಕು ಧಾಮಗಳಿಗೆ ಇಲ್ಲಿಂದ ಯಾತ್ರೆ ಆರಂಭಿಸುವುದರಿಂದ ಇದಕ್ಕೆ ಹರಿದ್ವಾರವೆಂತಲೂ ಕರೆಯುತ್ತಾರೆ. ಇಲ್ಲಿ ಗಂಗೆ ಎಲ್ಲೆಲ್ಲೂ ತಾನೇ ತಾನಾಗಿ ಕಣ್ಮನ ತಣಿಯುವಂತೆ ಹರಿಯುತ್ತಾಳೆ. ಋಷಿಕೇಶದಿಂದ ಬದರೀನಾಥದವರೆಗೆ ಕೇದಾರನಾಥ ೩೨೦ಕಿ ಮೀ, ದೂರ ಇದೆ. ಯಮುನೋತ್ರಿ, ಗಂಗೋತ್ರಿ ೨೨೨ ಕಿ,ಮೀ, ಋಷಿಕೇಶದಿಂದ ಹೊರಡುವ ಮೂರು ರಸ್ತೆಗಳಲ್ಲಿ ಒಂದು ಗಂಗೋತ್ರಿ , ಯಮುನೋತ್ರಿ, ಬದರೀನಾಥಕ್ಕೆ ಹೊರಡುತ್ತವೆ. ಹರಿದ್ವಾರ ಹರಿದ್ವಾರಕ್ಕೆ ಹಿಂದೆ 'ಮಾಯಾಪುರಿ' ಎಂಬ ಹೆಸರಿತ್ತ್ತು. ಇಲ್ಲಿ ಹರ ಕಿ ಪೌಡಿ ಮುಖ್ಯ ಸ್ಥಳ. ಪ್ರತಿನಿತ್ಯ ಸಂಜೆ ಗಂಗಾಮಾತೆಗೆ ಆರತಿ ನೋಡುವುದಕ್ಕೆ, ಎರಡು ಕಣ್ಣು ಸಾಲದು. ಹರ ಕಿ ಪೌಡಿಯ ಎರಡು ಕಡೆ ಪರ್ವತಗಳ ಶಿಖರಗಳಲ್ಲಿ ದೇವಿಯರಿದ್ದಾರೆ. ಒಂದು ಕಡೆ ಮಾನಸದೇವಿ ಪರ್ವತ, ಇನ್ನೊಂದು ಕಡೆ ಚಂಡಿದೇವಿ ಪರ್ವತ. ಇಲ್ಲಿ ಮಂದಿರಗಳಿಗೆ ಹೋಗಲು ಟ್ರಾಲಿಯ ಸೌಲಭ್ಯವಿದೆ. ಶುಂಭ-ನಿಶುಂಭ ರಂತಹ ಅಸುರರಿಗೆ ಮುಕ್ತಿ ನೀಡಲು ದೇವಿಯರು ಇಲ್ಲಿ ಅವತಾರವೆತ್ತಿದರು. ದಾರಿಯಲ್ಲಿ ಮಾತೆ ಕಾಳಿ ದೇವಿಯ ಪ್ರಾಚೀನ ಮಂದಿರ- ಇಲ್ಲಿ ತಂತ್ರಸಾಧನೆಗಾಗಿ ಹುಲಿಯ ಬುರುಡೆ ಈಗಲೂ ಇದೆ. ಸ್ಕಂಧ ಪುರಾಣದ ಹಿನ್ನೆಲೆಯಲ್ಲಿ ಗಂಗೆ ಗಂಗಾಮಾತೆ ಶಿವನ ಪತ್ನಿ. ತನ್ನ ಜಟೆಯಲ್ಲಿ ಶಿವ ಆಕೆಗೆ ಸ್ಥಾನ ನೀಡಿದ್ದಾನೆ. ಆಕೆಯನ್ನು ಭೂಮಿಗೆ ತರಲು ದೇವತೆಗಳು ಉಪಾಯ ಹೂಡಿದರು ಎನ್ನುತ್ತಾರೆ ಸ್ಥಳೀಯರು. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆ- ಗಂಗೆಯನ್ನು ಭೂಮಿಗೆ ತಂದ ಶ್ರೇಯಸ್ಸು ಭಗೀರಥ ರಾಜನಿಗೆ ಸಲ್ಲುತ್ತದೆ. ಇಕ್ವಾಕು ವಂಶದ ಸಗರರಾಜನೆಂಬ ಚಕ್ರವರ್ತಿ ಅಶ್ವಮೇಧವೆಂಬ ಯಜ್ಙಕ್ಕಾಗಿ ಕುದುರೆಯನ್ನು ಬಿಟ್ಟಿದ್ದ. ಅಶ್ವಮೇಧ ಯಜ್ಞ ಮುಗಿದರೆ, ಇಂದ್ರ ತನ್ನ ಪದವಿ ಹೋಗುವ ಭಯದಿಂದ ಅದನ್ನು ಕದ್ದು ಕಪಿಲ ಮುನಿ ಆಶ್ರಮದಲ್ಲಿ ಕಟ್ಟಿದ್ದ. (ಪಶ್ಚಿಮ ಬಂಗಾಳದಲ್ಲಿನ -ಸಮುದ್ರ ತೀರ) ಕುದುರೆಗಾಗಿ ಅಲ್ಲಿಗೆ ಬಂದ ಸಗರರಾಜ ೬೦೦೦೦ ಪುತ್ರರು, ಧ್ಯಾನಸ್ಥರಾಗಿದ್ದ ಕಪಿಲ ಮಹರ್ಷಿಗಳನ್ನು ಅವಹೇಳನ ಮಾಡತೊಡಗಿದರು. ಅದರಿಂದ ಕುಪಿತರಾದ ಮುನಿಗಳು ಅವರನ್ನು ಭಸ್ಮಗೊಳಿಸಿದರು. ಅವರಿಗೆ ಮುಕ್ತಿ ಸಿಗದೆ ಮೃತ್ಯುಲೋಕದಲ್ಲಿಯೇ ಅಲೆಯತೊಡಗಿದರು. ಈ ಸಂಧರ್ಭದಲ್ಲಿ ಭಗೀರಥ ಗಂಗೆಯನ್ನು ಭೂಮಿಗೆ ತಂದು ಸಗರರಾಜನ ೬೦೦೦೦ ಪುತ್ರರಿಗೆ ಶಾಪ ವಿಮೋಚನೆ ಮಾಡಿದನೆಂದು ಹೇಳಲಾಗಿದೆ. ಕೇದಾರನಾಥ ಹಿಮಾಲಯದ ಕೇದಾರನಾಥವು ಹಿಮಾಲಯದ ಇಳಿಜಾರಿನಲ್ಲಿರುವ ಮಂದಾಕಿನಿ ನದಿ ತೀರದಲ್ಲಿ ಸುಮಾರು ೧೧,೭೬೦ ಅಡಿ ಎತ್ತರದ ಸ್ಥಳದಲ್ಲಿದೆ. ಮಹಾಭಾರತದ ಯುದ್ಧದ ನಂತರ ಪಾಂಡವರು ಪಾಪ ಪ್ರಾಯಶ್ಚಿತ್ತಕ್ಕಾಗಿ ಶಿವಲಿಂಗ ಸ್ಥಾಪಿಸಿದರು ಎನ್ನುವುದು ಪುರಾಣದ ನಂಬಿಕೆ. ಚರಿತ್ರೆಯ ಪ್ರಕಾರ ೮ನೇ ಶತಮಾನದಲ್ಲಿ ನಿರ್ಮಾಣವಾದ ದೇವಸ್ಥಾನ ಕೇದಾರನಾಥ. ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ. ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದ್ದು ಇದನ್ನು ಸುಮಾರು ೮ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು. ಚತುರ್ಧಾಮ ಯಾತ್ರೆಯಲ್ಲಿ ಇದೊಂದು ಮುಖ್ಯ ಯಾತ್ರಾ ಸ್ಥಳ. ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರು, ಶ್ರೀಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ಇಲ್ಲಿನ ಕೇದಾರನಾಥ ಲಿಂಗವು ೮ ಅಡಿ ಎತ್ತರ, ೫ ಅಡಿ ಸುತ್ತಳತೆಯನ್ನು ಹೊಂದಿದೆ. ಇಲ್ಲಿ ಬೆಳಿಗ್ಗೆ ನಿರ್ವಾಣ ಪೂಜೆ ಮತ್ತು ರಾತ್ರಿ ಶೃಂಗಾರ ಪೂಜೆ ನಡೆಯುವುದೊಂದು ವಿಶೇಷ. ಇದರ ಒಂದು ಭಾಗಕ್ಕೆ ಜಲ ಪುಷ್ಪಾದಿಗಳ ಅರ್ಚನೆಯಾದರೆ, ಇನ್ನೊಂದು ಭಾಗಕ್ಕೆ ಘೃತ ಲೇಪನವಾಗುತ್ತದೆ. ಕೇದಾರಲಿಂಗವನ್ನು ಮುಟ್ಟಿ ಪೂಜೆ ಮಾಡಬಹುದು. ಈ ದೇವಸ್ಥಾನದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಸಮಾಧಿ ಸ್ಥಳವಿದೆ. ಇಲ್ಲಿನ ಪ್ರಾಚೀನ ಶೈವ ಪೀಠಗಳ್ಲಲೊಂದಾದ ಕೇದಾರರಾಧ್ಯ ಪೀಠವು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಖ್ಯಾತಿ ಗಳಿಸಿದೆ. ಇದರ ಮುಖ್ಯಸ್ಥರು ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ. ಕೇದಾರನಾಥ ಗರ್ಭಗುಡಿಯು ತೆಗೆಯುವುದು ಶಿವರಾತ್ರಿಯಂದು ನಿರ್ಧಾರವಾಗುತ್ತದೆ. ಬದರಿನಾಥ ಕ್ಷೇತ್ರ ಬದರಿನಾಥ ಕ್ಷೇತ್ರವು ವರ್ಷದಲ್ಲಿ ಆರು ತಿಂಗಳ ಕಾಲ ಮಾತ್ರವೇ ತೆರೆದಿರುತ್ತದೆ. ಉಳಿದ ಸಮಯ ಇದು ಪೂರ್ಣವಾಗಿ ಹಿಮದಲ್ಲಿ ಮುಚ್ಚಿಹೋಗಿರುತ್ತದೆ. ಸಾಮಾನ್ಯವಾಗಿ ಜೂನ್‌ ನಿಂದ - ಸೆಪ್ಟೆಂಬರ್ ವರೆಗೆ ಬದರಿನಾಥ ಕ್ಷೇತ್ರವನ್ನು ದರ್ಶಿಸಲು ಉತ್ತಮ ಕಾಲ. ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆಗಳನ್ನು ಸಲ್ಲಿಸುವನೆಂದು ಒಂದು ನಂಬಿಕೆ. ಇಲ್ಲಿನ ಐದು ವೈಶಿಷ್ಟ್ಯಗಳೆಂದರೆ- ವಿಶಾಲ ಬದರಿ : ಬದರಿನಾಥ ಕ್ಷೇತ್ರ ಯೋಗ ಬದರಿ : ಪಾಂಡುಕೇಶ್ವರದಲ್ಲಿರುವ ಈ ದೇವಾಲಯದಲ್ಲಿ ಸಹ ಬದರಿನಾಥನು ಧ್ಯಾನಮುದ್ರೆಯಲ್ಲಿ ದರ್ಶನವೀಯುವನು. ಐತಿಹ್ಯಗಳ ಪ್ರಕಾರ ಪಾಂಡು ಮಹಾರಾಜನು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದನು. ಭವಿಷ್ಯ ಬದರಿ : ಜ್ಯೋತಿರ್ಮಠ ( ಜೋಷಿಮಠ)ದಿಂದ ೧೭ ಕಿ.ಮೀ. ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ ಮುಂದೊಂದು ದಿನ ಬದರಿನಾಥ ಕ್ಷೇತ್ರವು ಭೂಮಿಯಿಂದ ಮರೆಯಾದಾಗ ಬದರಿನಾಥನು ಇಲ್ಲಿ ನೆಲೆನಿಂತು ದರ್ಶನ ಕೊಡುವನು. ಆದ್ದರಿಂದಲೇ ಇದು ಭವಿಷ್ಯ ಬದರಿ. ವೃದ್ಧ ಬದರಿ : ಜ್ಯೋತಿರ್ಮಠದಿಂದ ೭ ಕಿ.ಮೀ. ದೂರದಲ್ಲಿ ಆನಿಮಠದಲ್ಲಿದೆ. ಕಥನಗಳ ಪ್ರಕಾರ ಬದರಿನಾಥನ ಮೂಲ ಪೂಜಾಸ್ಥಾನವು ಇದೇ ಆಗಿದ್ದಿತು. ಆದಿ ಬದರಿ : ಕರ್ಣಪ್ರಯಾಗದಿಂದ ೧೭ ಕಿ.ಮೀ. ದೂರದಲ್ಲಿದೆ. ೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ೩ ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ. ಗಂಗಾನದಿಯ ಮಾಲಿನ್ಯತೆ ‘ಗಂಗಾ ನದಿ ಉದ್ದಕ್ಕೂ ಹೋಗುವ 39 ಸ್ಥಳಗಳಲ್ಲಿ, ಕೇವಲ ಒಂದು ಸ್ಥಳದಲ್ಲಿ ಮಾತ್ರ ನದಿಯ ನೀರು ಶುದ್ಧವಾಗಿದೆ. ಉಳಿದ ಕಡೆಗಳಲ್ಲಿ ನೀರು ಮಲಿನಗೊಂಡಿದೆ’ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಮಂಡಳಿಯು ಮುಂಗಾರಿಗೂ ಮುನ್ನ ಮತ್ತು ಮುಂಗಾರಿನ ನಂತರ 39 ಸ್ಥಳಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿತು; ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಈ ಅಧ್ಯಯನ ಅವುಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈಗ ಅಧ್ಯಯನದ ವರದಿಯನ್ನು ಮಂಡಳಿಯು ಬಿಡುಗಡೆ ಮಾಡಿದೆ.‘ಮುಂಗಾರಿಗೂ ಮೊದಲು 41 ಸ್ಥಳಗಳಲ್ಲಿ ಮಂಡಳಿ ಅಧ್ಯಯನ ಮಾಡಿತ್ತು. ಅವುಗಳಲ್ಲಿ 37 ಸ್ಥಳಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಮಲಿನಗೊಂಡಿರುವುದು ಕಂಡುಬಂದಿತ್ತು. ಒಂದು ಸ್ಥಳದಲ್ಲಿ ಮಾತ್ರ ನೀರು ಶುದ್ಧವಾಗಿತ್ತು. ಉಳಿದ ಮೂರು ಸ್ಥಳಗಳಲ್ಲಿ ನೀರು ಸ್ವಲ್ಪ ಮಲಿನಗೊಂಡಿತ್ತು’ ಎಂದು ವರದಿಯಲ್ಲಿ ವಿವರಿಸಲಾಗಿದೆ. ಹರಿವು ಕಡಿತ ನದಿಯ ನೀರು ಶುದ್ಧವಾಗಿರಲು ಮತ್ತು ಮಾಲಿನ್ಯಮುಕ್ತವಾಗಿರಲು ನದಿಯು ಹರಿಯುತ್ತಲೇ ಇರಬೇಕು. 2,525 ಕಿ.ಮೀ. ಉದ್ದ ಹರಿಯುವ ಗಂಗಾ ನದಿಗೆ ಆರು ಬೃಹತ್ ಅಣೆಕಟ್ಟು ಮತ್ತು ನಾಲ್ಕು ಜಲಾಶಯಗಳನ್ನು ನಿರ್ಮಿಸಲಾಗಿದೆ. ಅಣೆಕಟ್ಟು ಒಡೆತನದ ಅಲಕ್‌ನಂದಾ ಕಂಪನಿಯು ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ 330 ಮೆ.ವಾ. ಶಕ್ತಿಯನ್ನು ರಾಯಧನದ ರೂಪದಲ್ಲಿ ಉಚಿತವಾಗಿ ಕೊಡುತ್ತಿದೆ. ರಾಜ್ಯ ಸರ್ಕಾರಿ ಅಧೀನದ ಮನೇರಿಭಾಲಿ ಎರಡನೇ ಹಂತದ ಡ್ಯಾಂಗಳ ಆಡಳಿತ ಮಂಡಳಿಗಳು ತಮ್ಮ ವರಮಾನವನ್ನೇ ಮುಂದು ಮಾಡಿ, ಕೇಂದ್ರೀಯ ಜಲ ಆಯೋಗ ಆದೇಶಿಸಿದಷ್ಟು ನೀರನ್ನು ಅಣೆಕಟ್ಟೆಯಿಂದ ಹೊರಬಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿವೆ. ಆಯೋಗದ ನಿಬಂಧನೆ ಅವೈಜ್ಞಾನಿಕ ಮತ್ತು ತಾನು ಈಗಾಗಲೇ ಉತ್ತರಾಖಂಡ ಹೈಕೋರ್ಟ್‌ನ ಆದೇಶದಂತೆ ಶೇ 15 ರಷ್ಟು ಹೊರಹರಿವನ್ನು ಕಾಪಾಡಿಕೊಂಡಿರುವುದರಿಂದ ಆಯೋಗದ ಶಿಫಾರಸನ್ನು ಪಾಲಿಸಲು ಸಾಧ್ಯವೇ ಇಲ್ಲ ಎಂದು ಹಟ ಹಿಡಿದಿದೆ. ಉತ್ತರ ಭಾರತದ ಜೀವನದಿ ಗಂಗೆ, ಖಾಸಗಿ ಒಡೆತನದ ಅಣೆಕಟ್ಟುಗಳ ಮಾಲೀಕರ ಹಟಮಾರಿ ಧೋರಣೆಯಿಂದ ತನ್ನ ಸ್ವಾಭಾವಿಕ ಹರಿವನ್ನು ಕಳೆದುಕೊಂಡು, ಅಣೆಕಟ್ಟಿನ ಕೆಳಪಾತಳಿಯಲ್ಲಿ ಜೀವಿಸುವ ಅಪರೂಪದ ಜೀವಿಪ್ರಭೇದಗಳನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ. ವ್ಯವಸಾಯ, ಉದ್ಯಮ, ವಿದ್ಯುತ್ ಉತ್ಪಾದನೆಗೆ ನೀರು ಕೊಡುವುದರ ಜೊತೆಗೆ 2020ರ ಅಂತ್ಯಕ್ಕೆ ಗಂಗಾ ನದಿಯ ಪುನಶ್ಚೇತನ ಮುಗಿಯಬೇಕಿದೆ. ಕಂಪನಿಗಳಿಗಾಗುವ ಆರ್ಥಿಕ ನಷ್ಟವನ್ನು ತುಂಬಿಕೊಡಬಹುದು. ಆದರೆ ನದಿಯಲ್ಲಿನ ಅಪರೂಪದ ಜೀವಿಪ್ರಭೇದ ಶಾಶ್ವತವಾಗಿ ಕಣ್ಮರೆ ಯಾದರೆ ಅದನ್ನೆಲ್ಲಿಂದ ತರುವುದು ಎಂದು ಪ್ರಶ್ನಿಸಿರುವ ಪರಿಸರವಾದಿಗಳು, ಹೊರಹರಿವಿನ ಪ್ರಮಾಣ ಏರಿಸಿ ನದಿಯನ್ನು ಕಾಪಾಡಿ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆಕರ ಗ್ರಂಥ ಪುರಾಣನಾಮ ಚೂಡಾಮಣಿ -ಬೆನಗಲ್ ರಾಮರಾವ್ ಉಲ್ಲೇಖಗಳು ಉಲ್ಲೇಖ ನದಿಗಳು ಭಾರತ ಭಾರತದ ನದಿಗಳು
2467
https://kn.wikipedia.org/wiki/%E0%B2%A1%E0%B3%80%E0%B2%AA%E0%B3%8D%20%E0%B2%AC%E0%B3%8D%E0%B2%B2%E0%B3%82
ಡೀಪ್ ಬ್ಲೂ
ಡೀಪ್ ಬ್ಲೂ ಐಬಿಎಂ ಸಂಸ್ಥೆಯ ಚದುರಂಗವನ್ನು ಆಡುವ ಗಣಕಯಂತ್ರ. ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲ್ಪಟ್ಟ ಡೀಪ್ ಥಾಟ್ ಗಣಕಯಂತ್ರದ ವಿಕಸಿತ ರೂಪ ಡೀಪ್ ಬ್ಲೂ. ಡೀಪ್ ಬ್ಲೂ ಒಂದು "ಸಮಾನಾಂತರ ಗಣಕಯಂತ್ರ" - ಇದರಲ್ಲಿ ಅನೇಕ ಸಿಪಿಯುಗಳು ಒಟ್ಟಿಗೆ ಕೆಲಸ ಮಾಡುತ್ತವಲ್ಲದೆ ಚದುರಂಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ೪೮೦ ಸಿಪಿಯುಗಳನ್ನು ಸಹ ಒಳಗೊಂಡಿದೆ. ಚೆಸ್ ನ ವಿಶ್ವ ಚಾಂಪಿಯನ್ ಒಬ್ಬರ ಮೇಲೆ ಚದುರಂಗದ ಪಂದ್ಯಾವಳಿಯನ್ನು ಗೆದ್ದ ಮೊದಲ ಗಣಕಯಂತ್ರ ಡೀಪ್ ಬ್ಲೂ. ಫೆಬ್ರವರಿ ೧೯೯೬ ರಲ್ಲಿ ಆಗಿನ ವಿಶ್ವಚಾಂಪಿಯನ್ ಆಗಿದ್ದ ಗ್ಯಾರಿ ಕ್ಯಾಸ್ಪರೋವ್ ಅವರನ್ನು ಇದು ಪಂದ್ಯವೊಂದರಲ್ಲಿ ಸೋಲಿಸಿದರೂ ಒಟ್ಟು ಪಂದ್ಯಾವಳಿಯನ್ನು ಗ್ಯಾರಿ ಕ್ಯಾಸ್ಪರೋವ್ ೪-೨ ಅಂತರದಲ್ಲಿ ಗೆದ್ದರು. ಇದರ ನಂತರ ಅಪ್‍ಗ್ರೇಡ್ ಮಾಡಲ್ಪಟ್ಟ ಡೀಪ್ ಬ್ಲೂ ಮೇ ೧೯೯೭ ರಲ್ಲಿ ಇನ್ನೊಂದು ಪಂದ್ಯಾವಳಿಯಲ್ಲಿ ಗ್ಯಾರಿ ಕ್ಯಾಸ್ಪರೋವ್ ರನ್ನು ೩.೫-೨.೫ ಅಂತರದಲ್ಲಿ ಸೋಲಿಸಿತು. ಈ ಪಂದ್ಯಾವಳಿಯ ನಂತರ ಈ ಗಣಕಯಂತ್ರವನ್ನು ಐಬಿಎಂ "ನಿವೃತ್ತಗೊಳಿಸಿತು." ಈಗ ಡೀಪ್ ಬ್ಲೂ ಅನ್ನು ಅಮೆರಿಕದ ರಾಷ್ಟ್ರೀಯ ಚಾರಿತ್ರಿಕ ವಸ್ತುಪ್ರದರ್ಶನದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಇತಿಹಾಸ ಡೀಪ್ ಬ್ಲೂ ಬಗೆಗಿನ ಮೊದಲ ಕೆಲಸ ಪ್ರಾರಂಭಿಸಿದ್ದು ಫೆಂಗ್-ಹ್ಸಿಂಗ್ ಹ್ಸು ಅವರು, ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಲ್ಲಿನ ಚಿಪ್‍ಟೆಸ್ಟ್ ಎಂಬ ಯೋಜನೆಯ ಹೆಸರಿನಲ್ಲಿ. ಮೊದಲು ಈ ಗಣಕಯಂತ್ರವನ್ನು ಡೀಪ್ ಥಾಟ್ ಎಂದು ಹೆಸರಿಸಲಾಯಿತು(ಒಂದು ಕಾಲ್ಪನಿಕ ಗಣಕಯಂತ್ರದ ಹೆಸರಿನಿಂದ ಪ್ರಭಾವಿತವಾಗಿ). ೧೯೮೯ರಲ್ಲಿ ಹ್ಸು ಅವರು ಐಬಿಎಂ ಕಂಪನಿಯನ್ನು ಸೇರಿ ಮರ್ರೆ ಕ್ಯಾಂಪ್‍ಬೆಲ್ ಅವರೊಡನೆ ಸಮಾನಂತರ ಕಂಪ್ಯೂಟಿಂಗ್ ಸಮಸ್ಯೆಗಳ ಬಗ್ಗೆ ಕೆಲಸಮಾಡತೊಡಗಿದರು. ಆ ಸಮಯದಲ್ಲೇ 'ಡೀಪ್ ಬ್ಲೂ'ವನ್ನು ತಯಾರಿಸಲಾಯಿತು. ಮೊದಲಿನ ಡೀಪ್ ಥಾಟ್ ಹೆಸರು ಮತ್ತು ಐಬಿಎಂ ಕಂಪನಿಯ ನಿಕ್‍ನೇಮ್ ಬಿಗ್‍ಬ್ಲೂ ಎರಡನ್ನೂ ಸೇರಿಸಿ, ಡೀಪ್ ಬ್ಲೂ ಎಂಬ ಹೆಸರನ್ನು ನಾಮಕರಣ ಮಾಡಲಾಯಿತು. ಬಾಹ್ಯ ಸಂಪರ್ಕಗಳು ಡೀಪ್ ಬ್ಲೂ ಡೀಪ್ ಬ್ಲೂ ನ ಪಂದ್ಯಗಳು ಚದುರಂಗ ಕ್ರೀಡೆ ತಂತ್ರಜ್ಞಾನ ಗಣಕಯಂತ್ರ
2485
https://kn.wikipedia.org/wiki/%E0%B2%B8%E0%B3%8D%E0%B2%AF%E0%B2%BE%E0%B2%95%E0%B3%8D%E0%B2%B8%E0%B3%8B%E0%B2%AB%E0%B3%8B%E0%B2%A8%E0%B3%8D
ಸ್ಯಾಕ್ಸೋಫೋನ್
ಸ್ಯಾಕ್ಸೊಫೋನ್ ಸಾಮಾನ್ಯವಾಗಿ ಹಿತ್ತಾಳೆಯಿ೦ದ ಮಾಡಲ್ಪಡುವ ಒಂದು ಸ೦ಗೀತ ವಾದ್ಯ. ೧೮೪೦ ರ ದಶಕದಲ್ಲಿ ಅಡಾಲ್ಫ್ ಸ್ಯಾಕ್ಸ್ ಅವರಿ೦ದ ಆವಿಷ್ಕರಿಸಲ್ಪಟ್ಟ ಈ ವಾದ್ಯ ಮುಖ್ಯವಾಗಿ ಪಾಪ್ ಸ೦ಗೀತ ಮತ್ತು ಸ೦ಗೀತದ ಬ್ಯಾ೦ಡುಗಳಲ್ಲಿ ಉಪಯೋಗಗೊಳ್ಳುತ್ತಿತ್ತು. ಇತ್ತೀಚೆಗೆ ಕರ್ನಾಟಕ ಸಂಗೀತ ಪದ್ಧತಿಯಲ್ಲೂ ಈ ವಾದ್ಯ ಉಪಯೋಗಗೊಳ್ಳುತ್ತಿದೆ (ಹೆಚ್ಚಾಗಿ ಕದ್ರಿ ಗೋಪಾಲನಾಥ್ ಅವರ ಪ್ರಯತ್ನಗಳಿಂದ). ಕೇವಲ ಹಿತ್ತಳೆಯಲ್ಲದೆ ಕೆಲವೊಮ್ಮೆ ಸ್ಯಾಕ್ಸೊಫೋನ್ ಗೆ ಬೆಳ್ಳಿ, ಚಿನ್ನ, ನಿಕೆಲ್ ಮೊದಲಾದ ಲೋಹಗಳ ಲೇಪನ ಕೊಡುವುದು೦ಟು. ಒಂದು ತುದಿಯಿ೦ದ ಊದುವುದಕ್ಕೆ ಇರುವ ಭಾಗ ಪ್ಲಾಸ್ಟಿಕ್, ಮರ, ದಪ್ಪ ರಬ್ಬರ್, ಅಥವಾ ಕೆಲವೊಮ್ಮೆ ಗಾಜಿನಿ೦ದ ಮಾಡಲ್ಪಡುತ್ತದೆ. ಇದನ್ನು ನುಡಿಸುವ ವಿಧಾನ ಯಾವ ರೀತಿಯ ಸಂಗೀತಕ್ಕೆ ಉಪಗೋಗವಾಗುತ್ತಿದೆ ಎನ್ನುವುದನ್ನು ಅವಲಂಬಿಸುತ್ತದೆ. ಕರ್ನಾಟಕ ಸ೦ಗೀತಕ್ಕೆ ಇದನ್ನು ಅವಳಡಿಸುವ ವಿಧಾನದ ಸಂಶೋಧನೆ ಮುಖ್ಯವಾಗಿ ಕದ್ರಿ ಗೋಪಾಲನಾಥ್ ಅವರಿ೦ದ ನಡೆದಿದೆ. ಸಂಗೀತ ವಾದ್ಯಗಳು
2489
https://kn.wikipedia.org/wiki/%E0%B2%AE%E0%B3%8D%E0%B2%AF%E0%B2%BE%E0%B2%82%E0%B2%A1%E0%B3%8A%E0%B2%B2%E0%B2%BF%E0%B2%A8%E0%B3%8D
ಮ್ಯಾಂಡೊಲಿನ್
ಮ್ಯಾಂಡೊಲಿನ್ ಅನೇಕ ರೀತಿಯ ಸಂಗೀತ ಪದ್ಧತಿಗಳಲ್ಲಿ ಉಪಯೋಗಗೊಳ್ಳುವ ಒಂದು ತಂತಿ ವಾದ್ಯ. ೧೮ ನೆಯ ಶತಮಾನದಲ್ಲಿ ಮ್ಯಾಂಡೊರಾ ಎಂಬ ವಾದ್ಯದಿಂದ ಮ್ಯಾಂಡೊಲಿನ್ ವಿಕಾಸಗೊಂಡಿತು. ಮ್ಯಾಂಡೊಲಿನ್ ನಲ್ಲಿರುವ ತಂತಿಗಳ ಸಂಖ್ಯೆ ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿದೆ. ಸಾಧಾರಣವಾಗಿ ಪಾಶ್ಚಾತ್ಯ ಶೈಲಿಯ ಮ್ಯಾಂಡೊಲಿನ್ ಗಳಲ್ಲಿ ನಾಲ್ಕು ಮುಖ್ಯ ಅವಳಿ ತಂತಿಗಳಿದ್ದು ಒಂದು ಜೊತೆ ಸಹಾಯಕ ತಂತಿಗಳಿರುತ್ತವೆ. ಮೊದಲಿಗೆ ಪಾಶ್ಚಾತ್ಯ ಸಂಗೀತದಲ್ಲಿ ಮಾತ್ರ ಉಪಯೋಗಿಸುತ್ತಿದ್ದ ಈ ವಾದ್ಯವನ್ನು ಇತ್ತೀಚೆಗೆ ಕರ್ನಾಟಕ ಸ೦ಗೀತ ಪದ್ಧತಿಯಲ್ಲೂ ಉಪಯೋಗಿಸಲಾಗುತ್ತಿದೆ. ಭಾರತೀಯ ಸಂಗೀತಕ್ಕೆ ಮ್ಯಾಂಡೊಲಿನ್ ಸ್ವಭಾವತಃ ಒಗ್ಗುವ ವಾದ್ಯವಲ್ಲ. ಭಾರತೀಯ ಸಂಗೀತದಲ್ಲಿ ಬಹಳ ಮುಖ್ಯವಾದ ಗಮಕಗಳನ್ನು ನುಡಿಸಲು ಪಾಶ್ಚಾತ್ಯ ಮ್ಯಾಂಡೊಲಿನ್ ಗಳಲ್ಲಿ ಕಷ್ಟಸಾಧ್ಯ. ಪಾಶ್ಚಾತ್ಯ ಮ್ಯಾಂಡೊಲಿನ್ ಅನ್ನು ಭಾರತೀಯ ಸಂಗೀತಕ್ಕೆ ಅಳವಡಿಸಲಿಕ್ಕಾಗಿ ಅದರಲ್ಲಿರುವ ನಾಲ್ಕು ಅವಳಿ ತಂತಿಗಳೊಂದಿಗೆ ಐದನೆಯ ಜೊತೆಯನ್ನು ಸೇರಿಸಲಾಯಿತು. ಕರ್ನಾಟಕ ಸಂಗೀತದಲ್ಲಿ ಮ್ಯಾಂಡೊಲಿನ್ ವಾದನದಲ್ಲಿ ಪ್ರಸಿದ್ಧಿ ಪಡೆದಿರುವವರು ಯು ಶ್ರೀನಿವಾಸ್. ಮ್ಯಾಂಡೊಲಿನ್ ಅನ್ನು ಕರ್ನಾಟಕ ಸಂಗೀತಕ್ಕೆ ಮೊದಲಿಗೆ ಅಳವಡಿಸಿ ಇದರ ಉಪಯೋಗವನ್ನು ಜಾರಿಗೆ ತಂದವರು ಸಹ ಶ್ರೀನಿವಾಸ್ ಅವರು. ಮ್ಯಾಂಡೋಲಿನ್ (ಇಟಾಲಿಯನ್: ಮ್ಯಾಂಡೋಲಿನೋ ಉಚ್ಚರಿಸಲಾಗುತ್ತದೆ [ಮಾಂಡೋಲಿನಾ]; ಅಕ್ಷರಶಃ "ಸಣ್ಣ ಮಂಡೋಲಾ") ಲೂಟ್ ಕುಟುಂಬದಲ್ಲಿ ಸ್ಟ್ರಿಂಗ್ ಸಂಗೀತ ವಾದ್ಯವಾಗಿದ್ದು, ಇದನ್ನು ಸಾಮಾನ್ಯವಾಗಿ ಪೆಲೆಕ್ಟ್ರಮ್ ಅಥವಾ "ಪಿಕ್" ನಿಂದ ಹಿಡಿಯಲಾಗುತ್ತದೆ. ಐದು (೧೦ ತಂತಿಗಳು) ಮತ್ತು ಆರು (೧೨ ತಂತಿಗಳು) ಕೋರ್ಸ್ ಆವೃತ್ತಿಗಳು ಅಸ್ತಿತ್ವದಲ್ಲಿವೆಯಾದರೂ, ಸಾಮಾನ್ಯವಾಗಿ ಇದು ಸಾಮರಸ್ಯದಲ್ಲಿ (೮ ತಂತಿಗಳು) ಟ್ಯೂನ್ ಮಾಡಲಾದ ನಾಲ್ಕು ರೀತಿಯ ಲೋಹದ ತಂತಿಗಳನ್ನು ಹೊಂದಿದೆ. ಈ ಶಿಕ್ಷಣವನ್ನು ಸಾಮಾನ್ಯವಾಗಿ ಪರಿಪೂರ್ಣ ಫಿಫ್ತ್ಗಳ ಅನುಕ್ರಮವಾಗಿ ಟ್ಯೂನ್ ಮಾಡಲಾಗುತ್ತದೆ. ಇದು ಮಂಡೋಲಾ, ಆಕ್ಟೇವ್ ಮ್ಯಾಂಡೊಲಿನ್, ಮ್ಯಾಂಡೊಸೆಲ್ಲೋ ಮತ್ತು ಮ್ಯಾಂಡೋಬಾಸ್ ಅನ್ನು ಒಳಗೊಂಡಿರುವ ಒಂದು ಕುಟುಂಬದ ಸೋಪ್ರಾನ ಸದಸ್ಯ. ಮ್ಯಾಂಡೋಲಿನ್ ಅನೇಕ ಶೈಲಿಗಳಿವೆ, ಆದರೆ ಮೂರು ಸಾಮಾನ್ಯವಾಗಿವೆ, ನೇಪಾಯಿಂಟ್ ಅಥವಾ ಸುತ್ತಿನಲ್ಲಿ-ಬೆಂಬಲಿತ ಮ್ಯಾಂಡೋಲಿನ್, ಕೆತ್ತಿದ ಟಾಪ್ ಮ್ಯಾಂಡೋಲಿನ್ ಮತ್ತು ಫ್ಲಾಟ್ ಬ್ಯಾಕ್ಡ್ ಮ್ಯಾಂಡೋಲಿನ್. ಸುತ್ತಿನ ಹಿಂಭಾಗವು ಆಳವಾದ ತಳಭಾಗವನ್ನು ಹೊಂದಿದೆ, ಮರಗಳ ಪಟ್ಟಿಗಳಿಂದ ನಿರ್ಮಿಸಲಾಗಿದೆ, ಒಂದು ಬಟ್ಟಲಿಗೆ ಒಟ್ಟಿಗೆ ಅಂಟಿಕೊಂಡಿರುತ್ತದೆ. ಕೆತ್ತಿದ ಟಾಪ್ ಅಥವಾ ಆರ್ಕ್ ಟಾಪ್ ಮ್ಯಾಂಡೊಲಿನ್ ಹೆಚ್ಚು ಆಳವಿಲ್ಲದ, ಕಮಾನಿನ ಹಿಂಭಾಗದಲ್ಲಿ ಮತ್ತು ಕಮಾನಿನ ಮೇಲ್ಭಾಗವನ್ನು ಮರದಿಂದ ಕೆತ್ತಲಾಗಿದೆ. ಫ್ಲಾಟ್ ಬ್ಯಾಕ್ಡ್ ಮ್ಯಾಂಡೊಲಿನ್ ದೇಹಕ್ಕೆ ತೆಳುವಾದ ಹಾಳೆಗಳನ್ನು ಬಳಸುತ್ತದೆ, ಗಿಟಾರ್ಗೆ ಹೋಲುವಂತೆಯೇ ಶಕ್ತಿಯನ್ನು ಒಳಗಡೆ ಇಟ್ಟುಕೊಳ್ಳುತ್ತದೆ. ಪ್ರತಿ ವಾದ್ಯದ ಶೈಲಿಯು ತನ್ನ ಸ್ವಂತ ಧ್ವನಿ ಗುಣಮಟ್ಟವನ್ನು ಹೊಂದಿದೆ ಮತ್ತು ಸಂಗೀತದ ನಿರ್ದಿಷ್ಟ ರೂಪಗಳೊಂದಿಗೆ ಸಂಬಂಧ ಹೊಂದಿದೆ. ಐರೋಪ್ಯ ಶಾಸ್ತ್ರೀಯ ಸಂಗೀತ ಮತ್ತು ಸಾಂಪ್ರದಾಯಿಕ ಸಂಗೀತದಲ್ಲಿ ನೇಪಾಳಿ ಮ್ಯಾಂಡೊಲಿನ್ಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ಕೆತ್ತಿದ-ಟಾಪ್ ವಾದ್ಯಗಳು ಅಮೇರಿಕನ್ ಜಾನಪದ ಸಂಗೀತ ಮತ್ತು ಬ್ಲ್ಯೂಗ್ರಾಸ್ ಸಂಗೀತದಲ್ಲಿ ಸಾಮಾನ್ಯವಾಗಿರುತ್ತವೆ. ಫ್ಲ್ಯಾಟ್ ಬ್ಯಾಕ್ಡ್ ನುಡಿಸುವಿಕೆಗಳನ್ನು ಸಾಮಾನ್ಯವಾಗಿ ಐರಿಷ್, ಬ್ರಿಟಿಷ್ ಮತ್ತು ಬ್ರೆಜಿಲಿಯನ್ ಜಾನಪದ ಸಂಗೀತದಲ್ಲಿ ಬಳಸಲಾಗುತ್ತದೆ. ಕೆಲವು ಆಧುನಿಕ ಬ್ರೆಜಿಲಿಯನ್ ವಾದ್ಯಗಳು ಪ್ರಮಾಣಿತ ನಾಲ್ಕನೇ ಕೋರ್ಸ್ಗಿಂತ ಐದನೇ ಕೆಳಭಾಗದಲ್ಲಿ ಹೆಚ್ಚುವರಿ ಐದನೇ ಕೋರ್ಸ್ ಅನ್ನು ಹೊಂದಿವೆ. ಇತರ ಮ್ಯಾಂಡೋಲಿನ್ ಪ್ರಭೇದಗಳು ಪ್ರಾಥಮಿಕವಾಗಿ ತಂತಿಗಳ ಸಂಖ್ಯೆಯಲ್ಲಿ ಭಿನ್ನವಾಗಿರುತ್ತವೆ ಮತ್ತು ಬ್ರೀಸಿಯನ್ ಮತ್ತು ಕ್ರೆಮೊನೆಸ್, ಮಿಲಾನೀಸ್, ಲೊಂಬಾರ್ಡ್ ಮತ್ತು ಸಿಸಿಲಿಯನ್ ಮತ್ತು ೬ ಕೋರ್ಸ್ ವಾದ್ಯಗಳಂತಹ ಆರು ಸ್ಟ್ರಿಂಗ್ ವಿಧಗಳು (ನಾಲ್ಕನೇಯಲ್ಲಿ ಟ್ಯೂನ್ಡ್) ನಂತಹ ನಾಲ್ಕು-ಸ್ಟ್ರಿಂಗ್ ಮಾದರಿಗಳನ್ನು (ಫಿಫ್ತ್ಗಳಲ್ಲಿ ಟ್ಯೂನ್ ಮಾಡಲಾಗಿದೆ) ಜಿನೋಯಿಸ್ನಂತಹ ೧೨ತಂತಿಗಳ (ಕೋರ್ಸ್ಗೆ ಎರಡು ತಂತಿಗಳು). ಹನ್ನೆರಡು-ಸ್ಟ್ರಿಂಗ್ (ಮೂರು ತಂತಿಗಳು ಕೋರ್ಸ್) ಮತ್ತು ಹದಿನಾರು-ತಂತಿಗಳ (ವಾದ್ಯಗೋಷ್ಠಿಗೆ ನಾಲ್ಕು ತಂತಿಗಳು) ಒಂದು ಸಲಕರಣೆ ಕೂಡ ಇದೆ. ಬಹಳಷ್ಟು ಬಗೆಯ ಮ್ಯಾಂಡೊಲಿನ್ ಅಭಿವೃದ್ಧಿಯು ಸೌಂಡ್ಬೋರ್ಡ್ (ಮೇಲ್ಭಾಗ) ದ ಸುತ್ತ ಸುತ್ತುತ್ತದೆ. ಮುಂಚೆ-ಮ್ಯಾಂಡೊಲಿನ್ ನುಡಿಸುವಿಕೆಗಳು ಸ್ತಬ್ಧ ವಾದ್ಯಗಳು, ಕರುಳಿನ ತಂತಿಗಳ ಆರು ಕೋರ್ಸ್ಗಳೊಂದಿಗೆ ಕಟ್ಟಲ್ಪಟ್ಟವು ಮತ್ತು ಬೆರಳುಗಳಿಂದ ಅಥವಾ ಕ್ವಿಲ್ನಿಂದ ಹಿಡಿಯಲ್ಪಟ್ಟವು. ಆದಾಗ್ಯೂ, ಆಧುನಿಕ ಸಲಕರಣೆಗಳು ಲೋಹದ ತಂತಿಗಳ ನಾಲ್ಕು ಕೋರ್ಸ್ಗಳನ್ನು ಜೋರಾಗಿ ಬಳಸುತ್ತವೆ, ಇದು ಕರುಳಿನ ತಂತಿಗಳಿಗಿಂತ ಹೆಚ್ಚು ಒತ್ತಡವನ್ನು ಬೀರುತ್ತದೆ. ಆಧುನಿಕ ಧ್ವನಿ ಫಲಕವು ಮುಂಚಿನ ವಾದ್ಯಗಳನ್ನು ಮುರಿಯುವ ಲೋಹದ ತಂತಿಗಳ ಒತ್ತಡವನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಧ್ವನಿ ಹಲಗೆಯು ಅನೇಕ ಆಕಾರಗಳಲ್ಲಿ ಬರುತ್ತದೆ - ಆದರೆ ಸಾಮಾನ್ಯವಾಗಿ ಸುತ್ತಿನಲ್ಲಿ ಅಥವಾ ಕಣ್ಣೀರು-ಆಕೃತಿಯಿಂದ, ಕೆಲವೊಮ್ಮೆ ಸ್ಕ್ರಾಲ್ಗಳು ಅಥವಾ ಇತರ ಪ್ರಕ್ಷೇಪಗಳೊಂದಿಗೆ. ಧ್ವನಿಪದರದಲ್ಲಿ ಒಂದು ಅಥವಾ ಹೆಚ್ಚು ಶಬ್ದ ರಂಧ್ರಗಳು ಸಾಮಾನ್ಯವಾಗಿ ಸುತ್ತಿನಲ್ಲಿ, ಅಂಡಾಕಾರದಂತೆ ಅಥವಾ ಕ್ಯಾಲಿಗ್ರಫಿಕಲ್ ಎಫ್ (ಎಫ್-ಹೋಲ್) ರೀತಿಯಲ್ಲಿ ಆಕಾರದಲ್ಲಿರುತ್ತವೆ. ಒಂದು ಸುತ್ತಿನ ಅಥವಾ ಅಂಡಾಕಾರದ ಧ್ವನಿ ರಂಧ್ರವನ್ನು ಅಲಂಕಾರಿಕ ರೊಸೆಟ್ಗಳು ಅಥವಾ ಪರ್ಫಲಿಂಗ್ಗಳೊಂದಿಗೆ ಸುತ್ತುವರಿಯಬಹುದು ಅಥವಾ ಗಡಿಮಾಡಬಹುದು. ಇತಿಹಾಸ ೧೭ ನೇ ಮತ್ತು ೧೮ ನೇ ಶತಮಾನಗಳಲ್ಲಿ ಇಟಲಿಯ ಲೂಟ್ ಕುಟುಂಬದಿಂದ ಮ್ಯಾಂಡೊಲಿನ್ಗಳು ವಿಕಸನಗೊಂಡಿತು, ಮತ್ತು ಆಳವಾದ ಬೌಂಡಲ್ ಮ್ಯಾಂಡೊಲಿನ್, ವಿಶೇಷವಾಗಿ ನೇಪಲ್ಸ್ನಲ್ಲಿ ನಿರ್ಮಾಣಗೊಂಡವು, ೧೯ ನೇ ಶತಮಾನದಲ್ಲಿ ಸಾಮಾನ್ಯವಾಯಿತು. ಮುಂಚಿನ ಪೂರ್ವಗಾಮಿಗಳು ಸುಮಾರು ಸಿ. ಕ್ರಿಸ್ತಪೂರ್ವ ೧೩೦೦೦, ಫ್ರಾನ್ಸ್ನ ಟ್ರೋಯಿಸ್ ಫ್ರೆರೆಸ್ ಗುಹೆಯಲ್ಲಿರುವ ಒಂದು ಗುಹೆಯ ವರ್ಣಚಿತ್ರವು ಸಂಗೀತ ವಾದ್ಯ, ಒಂದು ಏಕ-ತಂತಿ ವಾದ್ಯ ವಾದ್ಯವಾಗಿ ಬಳಸಲಾಗುವ ಬೇಟೆ ಬಿಲ್ಲ ಎಂದು ಕೆಲವು ನಂಬುತ್ತಾರೆ. ಸಂಗೀತ ಬಿಲ್ಲೆಯಿಂದ, ತಂತಿ ವಾದ್ಯಗಳ ಕುಟುಂಬಗಳು ಅಭಿವೃದ್ಧಿಗೊಂಡಿವೆ; ಪ್ರತಿಯೊಂದು ವಾಕ್ಯವೂ ಒಂದು ಏಕೈಕ ಟಿಪ್ಪಣಿಯನ್ನು ಆಡಿರುವುದರಿಂದ, ತಂತಿಗಳು ಹೊಸ ಟಿಪ್ಪಣಿಗಳನ್ನು ಸೇರಿಸುತ್ತವೆ, ಬಿಲ್ಲು ಹಾರ್ಪ್ಸ್, ಹಾರ್ಪ್ಸ್ ಮತ್ತು ಲೈರ್ಗಳನ್ನು ರಚಿಸುತ್ತವೆ. ಪ್ರತಿಯಾಗಿ, ಇದು ಡೈದ್ಗಳು ಮತ್ತು ಸ್ವರಮೇಳಗಳನ್ನು ಆಡಲು ಸಾಧ್ಯವಾಯಿತು. ಬಿಲ್ಲು ಹಾರ್ಪ್ ನೇರಗೊಳಿಸಿದಾಗ ಮತ್ತೊಂದು ನಾವೀನ್ಯತೆ ಸಂಭವಿಸಿತು ಮತ್ತು ಸ್ಟಿಕ್-ಕುತ್ತಿಗೆಯಿಂದ ತಂತಿಗಳನ್ನು ಎತ್ತುವಂತೆ ಸೇತುವೆ ಬಳಸಿತು, ಇದು ಲೂಟ್ ಅನ್ನು ರಚಿಸಿತು. ಉಲ್ಲೇಖಗಳು ಸಂಗೀತ ವಾದ್ಯಗಳು ಕರ್ನಾಟಕ ಸಂಗೀತ
2491
https://kn.wikipedia.org/wiki/%E0%B2%AE%E0%B3%83%E0%B2%A6%E0%B2%82%E0%B2%97
ಮೃದಂಗ
ಮೃದಂಗವು ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಉಪಯೋಗಿಸುವ, ಅವನದ್ಧ ವಾದ್ಯಗಳ ಗುಂಪಿಗೆ ಸೇರಿದ ಒಂದು ಪ್ರಮುಖ ಲಯ ವಾದ್ಯವಾಗಿದೆ. ಇದನ್ನು ತಾಳ ವಾದ್ಯ ಎನ್ನುವುದಕ್ಕಿಂತಲೂ ಲಯವಾದ್ಯ ಎನ್ನುವುದೇ ಹೆಚ್ಚು ಸೂಕ್ತ. ಮೃದಂಗದ ರಚನಾಕ್ರಮ ಮೃದಂಗವನ್ನು ತಯಾರಿಸಲು ಬೇಕಾಗುವ ಕಚ್ಚಾ ಸಾಮಗ್ರಿಗಳು ಮರ, ಚರ್ಮ ಮತ್ತು ಕರಣೆ ಕಲ್ಲು. ಒಳಗೆ ಟೊಳ್ಳಾಗಿರುವ ಮರದ ಭಾಗಕ್ಕೆ ಹೊಳವು ಅಥವಾ ಕಳಸಿಗೆ ಎಂದು ಹೆಸರು. ಮೃದಂಗಕ್ಕೆ ಆ ಹೆಸರು ಬಂದದ್ದು "ಮೃತ್" ಮತ್ತು "ಅಂಗ" ಎಂಬ ಎರಡು ಸಂಸ್ಕೃತ ಪದಗಳಿಂದ. ಮೃತ್ ಎಂದರೆ ಮಣ್ಣು. ಪ್ರಾಚೀನ ಕಾಲದಲ್ಲಿ ಕಳಸಿಗೆಯನ್ನು ಮಣ್ಣಿನಿಂದಲೇ ತಯಾರಿಸುತ್ತಿದ್ದರು. ದೀರ್ಘ ಬಾಳಿಕೆಯ ದೃಷ್ಟಿಯಿಂದ ಈಗ ಹಲಸು, ಹೆಬ್ಬಲಸು, ಸಂಪಿಗೆ, ತೇಗ, ಬೇವು, ಬಿಲ್ವರ ಮುಂತಾದ ಮರಗಳಿಂದ ತಯಾರಿಸಲಾಗುತ್ತಿದೆ. ಹೊಳವು ಒಳಗೆ ಖಾಲಿ ಇದ್ದು, ಮಧ್ಯದಲ್ಲಿ ಉಬ್ಬಿ, ಕಡೆಯ ಭಾಗಗಳಲ್ಲಿ ಚಿಕ್ಕದಾಗಿರುತ್ತದೆ. ಕಡೆಯ ಭಾಗಗಳನ್ನು ಎಡ ಮತ್ತು ಬಲ ಎಂದು ಕರೆಯುತ್ತಾರೆ. ಬಲ ಭಾಗದ ವ್ಯಾಸವು ಎಡ ಭಾಗಕ್ಕಿಂತ ಕಡಿಮೆ ಇರುತ್ತದೆ. ಉಬ್ಬಿದ ಭಾಗವನ್ನು "ಹರಡ" ಅಥವಾ "ಕಡಗ" ಎಂದು ಕರೆಯುತ್ತಾರೆ. ಹೊಳವಿನ ಉದ್ದ ಹಾಗೂ ಎರಡು ಮುಖಗಳ ವ್ಯಾಸ ನೇರವಾಗಿ ಮೃದಂಗದ ಶ್ರುತಿಗೆ ಸಂಬಂಧಿಸಿದೆ. ಉದ್ದ ಹಾಗೂ ಬಲದ ವ್ಯಾಸ ಹೆಚ್ಚಿದ್ದರೆ ತಗ್ಗು ಶ್ರುತಿಗೆ ಹೊಂದಿಸಬಹುದು. ಕಡಿಮೆಯಿದ್ದರೆ ಹೆಚ್ಚು ಶ್ರುತಿಗೆ ಹೊಂದಿಸಬಹುದು. ಬಲ ಮುಚ್ಚಿಗೆಗೆ ಮೇಕೆ ಹಾಗೂ ಹಸುವಿನ ಚರ್ಮ ಬೇಕಾಗುತ್ತದೆ. ಮೇಕೆ ಮತ್ತು ಹಸುವಿನ ಚರ್ಮಗಳನ್ನು ಹದಮಾಡಿ ವೃತ್ತಾಕಾರದಲ್ಲಿ ಕತ್ತರಿಸುತ್ತಾರೆ. ಬಲ ಮುಚ್ಚಿಗೆಯಲ್ಲಿ ಮೂರು ಪದರಗಳು ಇವೆ. ಮೊದಲನೆಯ ಪದರವಾದ ಮೇಕೆ ಚರ್ಮವನ್ನು "ಒತ್ತು ಚರ್ಮ"ವೆಂದು ಕರೆಯುತ್ತಾರೆ. ಎರಡನೆಯ ಪದರವಾದ ಮೇಕೆ ಚರ್ಮವನ್ನು "ಜೀವಾಳಿ" ಅಥವಾ "ಛಾಪು ಪದರ"ವೆಂದು ಕರೆಯುತ್ತಾರೆ. ಮೂರನೆಯ ಮತ್ತು ಹೊರಗಿನ ಪದರವಾದ ಹಸುವಿನ ಚರ್ಮವನ್ನು "ಮೀಟು ರೆಪ್ಪೆ" ಎಂದು ಕರೆಯುತ್ತಾರೆ. ವೃತ್ತಾಕಾರದಲ್ಲಿ ಕತ್ತರಿಸಲ್ಪಟ್ಟ ಈ ಮೂರೂ ಪದರಗಳನ್ನು ಒಂದರ ಮೇಲೊಂದಿಟ್ಟು ಹೊಳವಿನ ಬಲಭಾಗದ ಮೇಲಿರಿಸಿ, ಬಾರುಗಳ ಮೂಲಕ (leather straps) ತುದಿಗಳನ್ನು ಎಳೆದು ಬಿಗಿಯುತ್ತಾರೆ. ಚರ್ಮದ "ಬಾರ್"ಅನ್ನು ಎಮ್ಮೆಯ ಚರ್ಮದಿಂದ ತಯಾರಿಸುತ್ತಾರೆ. ಇದಾದ ಬಳಿಕ ಮುಚ್ಚಿಗೆಯ ಅಂಚಿನ ಸುತ್ತಲೂ ರಂಧ್ರಗಳನ್ನು ಮಾಡಿ, ಎಮ್ಮೆಯ ಚರ್ಮದಿಂದ ಹೆಣೆಯುತ್ತಾರೆ. ಇದನ್ನು "ಇಂಡಿಗೆ" ಎಂದು ಕರೆಯುತ್ತಾರೆ. ನಂತರ ಇದನ್ನು ಬಿಸಿಲಿನಲ್ಲಿ ಒಣಗಿಸಿ, ಉಳಿದ ಭಾಗಗಳನ್ನು ಕತ್ತರಿಸುತ್ತಾರೆ. ಈ ಪ್ರಕಾರವಾಗಿ ಬಲ ಮುಚ್ಚಿಗೆಯು ತಯಾರಾಗುತ್ತದೆ. ಎಡ ಮುಚ್ಚಿಗೆಗೂ ಮೇಕೆ ಮತ್ತು ಹಸುವಿನ ಚರ್ಮಗಳು ಅಗತ್ಯ. ಇದರಲ್ಲಿ ಎರಡೇ ಪದರಗಳು ಇರುತ್ತವೆ. ಒಳಗಿನ ಪದರವಾದ ಮೇಕೆ ಚರ್ಮವನ್ನು "ಜೀವಾಳಿ ಚರ್ಮ" ಅಥವಾ "ತೊಪ್ಪಿ" ಎಂದು ಕರೆಯುತ್ತಾರೆ. ಹೊರಗಿನ ಪದರವಾದ ಹಸುವಿನ ಚರ್ಮವನ್ನು "ರೆಪ್ಪೆ ಚರ್ಮ"ಎಂದು ಕರೆಯುತ್ತಾರೆ. ವೃತ್ತಾಕಾರದಲ್ಲಿ ಕತ್ತರಿಸಲ್ಪಟ್ಟ ಈ ಎರಡೂ ಪದರಗಳನ್ನು ಒಂದರ ಮೇಲೊಂದಿಟ್ಟು ಹೊಳವಿನ ಎಡಭಾಗದ ಮೇಲಿರಿಸಿ, ಬಾರುಗಳ ಮೂಲಕ ತುದಿಗಳನ್ನು ಎಳೆದು ಬಿಗಿಯುತ್ತಾರೆ. ನಂತರ ಮುಚ್ಚಿಗೆಯ ಅಂಚಿನ ಸುತ್ತಲೂ ರಂಧ್ರಗಳನ್ನು ಮಾಡಿ, ಎಮ್ಮೆಯ ಚರ್ಮದಿಂದ ಹೆಣೆಯುತ್ತಾರೆ. ಬಿಸಿಲಿನಲ್ಲಿ ಒಣಗಿಸಿದ ನಂತರ, ಹೊರಪದರದ ಮಧ್ಯದಲ್ಲಿ ವೃತ್ತಾಕಾರವಾಗಿ ಸುಮಾರು ನಾಲ್ಕು ಅಂಗುಲ ವ್ಯಾಸದಷ್ಟು ಕತ್ತರಿಸಿ, ಮೇಕೆಯ ಚರ್ಮವನ್ನು ಒಳಗೆ ಇಂಡಿಗೆಯ ಹತ್ತಿರ ಚರ್ಮದ ಸಣ್ಣ ಪಟ್ಟಿಗಳ ಸಹಾಯದಿಂದ ಕಟ್ಟುತಾರೆ. ಈ ಪ್ರಕಾರವಾಗಿ ಎಡ ಮುಚ್ಚಿಗೆಯು ತಯಾರಾಗುತ್ತದೆ. ಬಾರ್ (leather strap) ಅನ್ನು ಎಮ್ಮೆಯ ಚರ್ಮವನ್ನು ಸುಮಾರು ಕಾಲು ಅಂಗುಲ ಅಗಲ ಮತ್ತು ಇಪ್ಪತ್ತು ಮೀಟರ್ ಉದ್ದ ಕತ್ತರಿಸಿ ತಯಾರಿಸುತ್ತಾರೆ. ತಯಾರಾದ ಎಡ ಮತ್ತು ಬಲ ಮುಚ್ಚಿಗೆಗಳನ್ನು ಹೊಳವಿನ ಮೇಲೆ ಕೂಡಿಸಿ, ಇವುಗಳನ್ನು ಬಾರಿನ ಸಹಾಯದಿಂದ ಇಂಡಿಗೆಯ ಮೂಲಕ ಹಾದುಹೋಗುವಂತೆ ಬಿಗಿಯಾಗಿ ಕಟ್ಟುತ್ತಾರೆ. ಕರಣೆಯು ಒಂದು ವಿಶಿಷ್ಟವಾದ ಕಲ್ಲಿನಿಂದ ತಯಾರಿಸಲ್ಪಡುತ್ತದೆ. ಇದು ಕಪ್ಪು ಬಣ್ಣದ್ದಾಗಿದ್ದು, ಮ್ಯಾಂಗನೀಸ್ ಮತ್ತು ಕಬ್ಬಿಣದ ಅಂಶಗಳನ್ನು ಹೊಂದಿದೆ. ಈ ಕಲ್ಲನ್ನು ಅರೆದು, ನುಣುಪಾದ ಪುಡಿ ತಯಾರಿಸಿ, ಅನ್ನದ ಜೊತೆಗೆ ಹದವಾಗಿ ಕಲಸಿ ಉಂಡೆ ಮಾಡಲಾಗುತ್ತದೆ. ಬಲ ಮುಚ್ಚಿಗೆಯ ಮಧ್ಯದಲ್ಲಿ ಮೊದಲು ಅನ್ನದ ಅಂಟನ್ನು ಲೇಪಿಸಿ, ಅದರ ಮೇಲೆ ಈ ಉಂಡೆಯ ಸಣ್ಣ ಸಣ್ಣ ಗುಳಿಗೆಗಳನ್ನು ಒಂದೊಂದಾಗಿ ಚಪ್ಪಟೆಯಾಗಿ ಇಡಲಾಗುತ್ತದೆ. ಪ್ರತಿ ಗುಳಿಗೆ ಪದರವನ್ನು ಲೇಪಿಸಿದ ನಂತರ ನಯವಾದ ಒಂದು ಕಲ್ಲಿನಿಂದ ಉಜ್ಜಲಾಗುತ್ತದೆ. ಹೀಗೆ ವೃತ್ತಾಕಾರವಾಗಿ ಹಚ್ಚುವಾಗ ಮಧ್ಯ ಭಾಗವು ಸ್ವಲ್ಪ ದಪ್ಪವಾಗಿಯೊ, ಸುತ್ತಲೂ ತೆಳುವಾಗಿ ಇದ್ದು, ಸಣ್ಣ ಸಣ್ಣ ಬಿರುಕುಗಳು ಏರ್ಪಡುತ್ತವೆ. ಮೃದಂಗದಿಂದ ಒಳ್ಳೆಯ ನಾದ ಬರಲು ಈ ಬಿರುಕುಗಳೇ ಕಾರಣ. ಈ ರೀತಿ ಕರಣೆಯನ್ನು ಹಾಕಿದ ನಂತರ ಪೊರಕೆಯ ಕಡ್ಡಿಗಳನ್ನು ಸಣ್ಣ ಸಣ್ಣ ಚೂರು ಮಾಡಿ (ಹದಿನಾರು), ರೆಪ್ಪೆ ಮತ್ತು ಛಾಪು ಪದರಗಳ ಮಧ್ಯೆ ಸೇರಿಸಲಾಗುತ್ತದೆ. ಕಡ್ಡಿಗಳ ಬದಲಾಗಿ ಕರಣೆ ಕಲ್ಲಿನ ತರಿಯನ್ನು ಕೂಡಾ (ಕಪ್ಪಿ) ಹಾಕುವ ರೂಢಿ ಇದೆ. ಮೃದಂಗ ವಾದಕರು ತಮ್ಮ ಇಚ್ಛೆಯಂತೆ ಕಡ್ಡಿ ಅಥವಾ ಕಪ್ಪಿ ಹಾಕಿದ ಮೃದಂಗವನ್ನು ಬಳಸುತ್ತಾರೆ. ಮೃದಂಗದ ಶ್ರುತಿ ಸೇರಿಸುವ ಕ್ರಮ ಆಧಾರ ಶ್ರುತಿಯನ್ನು ಅವಲಂಭಿಸಿ ಮೃದಂಗವನ್ನು ಶ್ರುತಿ ಮಾಡಲಾಗುತ್ತದೆ. ಇದಕ್ಕೆ ಒಂದು ಕಲ್ಲು ಗುಂಡು ಮತ್ತು ಒಂದು ಗಟ್ಟಿ ಮರದ ತುಂಡು (ಗಟ್ಟ ಅಥವಾ ಕುಟ್ಟಿ) ಅಗತ್ಯ. ಮೃದಂಗದ ಶ್ರುತಿ ಹೆಚ್ಚಿಸಲು ಬಲ ಮುಚ್ಚಿಗೆಯ ಇಂಡಿಗೆಯ ಮೇಲೆ ಗಟ್ಟವನ್ನು ಇಟ್ಟು, ಕಲ್ಲಿನಿಂದ ಗಟ್ಟಕ್ಕೆ ಹೊಡೆಯಲಾಗುತ್ತದೆ. ಶ್ರುತಿಯನ್ನು ತುಂಬಾ ಹೆಚ್ಚಿಸಬೇಕಾದರೆ ಬಾರುಗಳ ಮಧ್ಯೆ ಗಟ್ಟಗಳನ್ನು ಸೇರಿಸಲಾಗುತ್ತದೆ. ಶ್ರುತಿಯನ್ನು ಕಡಿಮೆ ಮಾಡಲು ಇಂಡಿಗೆಯ ಕೆಳಗೆ ಗಟ್ಟವನ್ನು ಇಟ್ಟು ಕಲ್ಲಿನಿಂದ ಗಟ್ಟಕ್ಕೆ ಹೊಡೆಯಲಾಗುತ್ತದೆ. ಆಧಾರ ಶ್ರುತಿಯನ್ನು ಕೇಳುತ್ತಾ, "ಛಾಪು" ಮತ್ತು "ಧೀಂ" ಶಬ್ದಾಕ್ಷರಗಳನ್ನು ನುಡಿಸಿ ಶ್ರುತಿ ಸೇರಿಸಲಾಗುವುದು. ಎಡ ಭಾಗದ ಶ್ರುತಿ ಸೇರಿಸುವುದಕ್ಕೆ ರವೆ ಮತ್ತು ನೀರು ಅಗತ್ಯ. ರವೆಯನ್ನು ನೀರಿನಲ್ಲಿ ಹದವಾಗಿ ಕಲೆಸಿ ಎಡ ಭಾಗದ ಜೀವಾಳಿ ಚರ್ಮದ ಮಧ್ಯದಲ್ಲಿ ಅಂಟಿಸಲಾಗುತ್ತದೆ. ರವೆಯನ್ನು ಹಾಕಿದಾಗ ಶ್ರುತಿಯು ಕಡಿಮೆಯಾಗುತ್ತದೆ, ತೆಗೆದರೆ ಶ್ರುತಿ ಹೆಚ್ಚಾಗುತ್ತದೆ. ರವೆ ಮತ್ತು ನೀರಿನ ಬದಲಿಗೆ ಎಡ ಭಾಗಕ್ಕೂ ಕರಣೆ ಹಾಕುವ ಪದ್ಧತಿ ಇದೆ. ಇತ್ತೀಚೆಗೆ ಒಂದು ವಿಶೇಷ ಮಾದರಿಯ ಅಂಟನ್ನು (ಗ್ಲಾಸ್ ಪುಟ್ಟಿ) ರವೆಯ ಬದಲಿಗೆ ಉಪಯೋಗಿಸುತ್ತಾರೆ. ಪ್ರಸಿದ್ಧ ಮೃದಂಗ ವಾದಕರು ಮೃದಂಗ ವಾದನದಲ್ಲಿ ಅನೇಕ ಮಹಾನ್ ವಿಧ್ವಾಂಸರುಗಳು ತಮ್ಮ ಕೈಚಳಕವನ್ನು ತೋರಿಸಿದ್ದಾರೆ, ತೋರಿಸುತ್ತಿದ್ದಾರೆ. ಇವರಲ್ಲಿ ಕೆಲವರ ಹೆಸರುಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ: ಗೋಪಾಲರಾವ್ ಅಪ್ಪ, ಶಿವಸ್ವಾಮಿ ಅಪ್ಪ, ನಾರಾಯಣಸ್ವಾಮಿ ಅಪ್ಪ, ಮಾನ್ಪೂಂಡಿಯಾ ಪಿಳ್ಳೆ, ಪುದುಕ್ಕೋಟ್ಟೈ ದಕ್ಷಿಣಾಮೊರ್ತಿ ಪಿಳ್ಳೆ, ಮುತ್ತುಸ್ವಾಮಿ ತೇವರ್, ಕುಂಞುಮಣಿ ಅಯ್ಯರ್, ಹೆಚ್.ಪುಟ್ಟಾಚಾರ್, ಟಿ.ಎಂ.ಪುಟ್ಟಸ್ವಾಮಯ್ಯ, ಪಾಲಕ್ಕಾಡ್ ಸುಬ್ಬಯ್ಯರ್, ಪಾಲ್ಘಾಟ್ ಮಣಿ ಅಯ್ಯರ್, ಸಿ.ಕೆ.ಅಯ್ಯಾಮಣಿ ಅಯ್ಯರ್ ವೆಲ್ಲೂರು ರಾಮಭದ್ರನ್, ಉಮಯಾಳಪ್ಪುರಮ್ ಶಿವರಾಮನ್, ಕಾರೈಕುಡಿ ಮಣಿ, ತಿರುವಾರೂರು ಭಕ್ತವತ್ಸಲನ್, ಮನ್ನಾರ್ಗುಡಿ ಈಶ್ವರನ್, ಟಿ.ಕೆ.ಮೊರ್ತಿ, ಪಾಲ್ಘಾಟ್ ರಘು, ಶ್ರೀಮುಷ್ಣಂ ರಾಜಾರಾವ್, ಟಿ.ವಿ.ಗೋಪಾಲಕೃಷ್ಣನ್. ಗರುವಾಯುರ್ ದೊರೆ, ಟಿ.ಎ.ಎಸ್.ಮಣಿ, ಟಿ.ವಿ.ಭದ್ರಾಚಾರ್, ಪಿ.ಜಿ.ಲಕ್ಷ್ಮೀನಾರಾಯಣ, ಎ.ವಿ.ಆನಂದ್, ಎಮ್.ಟಿ.ರಾಜಕೇಸರಿ, ಟಿ.ಎ.ಎಸ್.ಮಣಿ, ಎಮ್.ವಾಸುದೇವರಾವ್, ಕೆ.ವಿ.ಪ್ರಸಾದ್, ಚೆಲುವರಾಜ, ಎಚ್.ಎಸ್.ಸುಧೀಂದ್ರ, ಅರ್ಜುನ್ ಕುಮಾರ್, ಆನೂರು ಅನಂತಕೃಷ್ಣ ಶರ್ಮ,ಜಿ ಎಸ್ ರಾಮಾನುಜಮ್, ಹೆಚ್. ಎಲ್. ಶಿವಶಂಕರ ಸ್ವಾಮಿ,ತುಮಕೂರು ರವಿಶಂಕರ,ನಿಕ್ಶಿತ್ ಪುತ್ತೂರು ಉಡುಪಿಯ ಮೃದಂಗ ವಾದಕರು: ಬಾಲಚಂದ್ರ ಆಚಾರ್ಯ, ಬಾಲಚಂದ್ರ ಭಾಗವತ, ದೇವೇಶ ಭಟ್ ಸಂಗೀತ ವಾದ್ಯಗಳು ಕರ್ನಾಟಕ ಸಂಗೀತ
2494
https://kn.wikipedia.org/wiki/%E0%B2%A4%E0%B3%8D%E0%B2%AF%E0%B2%BE%E0%B2%97%E0%B2%B0%E0%B2%BE%E0%B2%9C
ತ್ಯಾಗರಾಜ
ಶ್ರೀ ತ್ಯಾಗರಾಜರು (ತೆಲುಗು:త్యాగరాజు) ಕರ್ನಾಟಕ ಸಂಗೀತ ಪದ್ಧತಿಯ ಮುಖ್ಯ ರಚನಕಾರರಲ್ಲಿ ಒಬ್ಬರು. ಮುತ್ತುಸ್ವಾಮಿ ದೀಕ್ಷಿತ ಮತ್ತು ಶ್ಯಾಮಾ ಶಾಸ್ತ್ರಿ ಇವರ ಜೊತೆಯಲ್ಲಿ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ಅವರು ಶ್ರೀರಾಮನ ಪರಮ ಭಕ್ತರಾಗಿದ್ದರು. ದಕ್ಷಿಣ ಭಾರತದ ಎಲ್ಲ ಮುಖ್ಯ ದೇವಸ್ಥಾನಗಳಿಗೆ ಭೇಟಿಯಿತ್ತ ತ್ಯಾಗರಾಜರು ಅಲ್ಲಿನ ದೇವ-ದೇವತೆಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಸುಮಾರು ಏಳುನೂರು ಕೃತಿಗಳನ್ನು ರಚಿಸಿರುವ ತ್ಯಾಗರಾಜರು ಕರ್ನಾಟಕ ಸಂಗೀತದ ಮೂಲಪುರುಷರಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ. ಜೀವನ ಮೇ ೪, ೧೭೬೭ (ಕೆಲವು ಚರಿತ್ರಜ್ಞರ ಪ್ರಕಾರ ೧೭೫೯) ರಲ್ಲಿ ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ ರಾಮಬ್ರಹ್ಮಮ್ ಮತ್ತು ಸೀತಮ್ಮನವರ ಪುತ್ರರಾಗಿ ತ್ಯಾಗರಾಜರು ಜನಿಸಿದರು. ಇವರ ಅಜ್ಜ ಗಿರಿರಾಜ ಕವಿ ತಂಜಾವೂರಿನ ಆಸ್ಥಾನದಲ್ಲಿ ಕವಿ-ಸಂಗೀತಗಾರರಾಗಿದ್ದರು. ತ್ಯಾಗರಾಜರ ಮೊದಲ ಪತ್ನಿ ಪಾರ್ವತಮ್ಮ - ಇವರ ನಿಧನದ ನಂತರ ಕಮಲಾಂಬಾರನ್ನು ಮದುವೆಯಾದರು. ಸಂಗೀತ ತ್ಯಾಗರಾಜರು ಸಂಗೀತದ ಮೊದಲ ಶಿಕ್ಷಣವನ್ನು ಶ್ರೀ ಸೊಂಟಿ ವೆಂಕಟರಮಣಯ್ಯನವರಿಂದ ಪಡೆದರು. ದೇವರನ್ನು ಅನುಭವಿಸುವ ದಾರಿಯಾಗಿ ಸಂಗೀತವನ್ನು ಕಂಡ ತ್ಯಾಗರಾಜರು ಭಾವ ಪೂರ್ಣ ಸಂಗೀತಕ್ಕೆ ರಾಗ- ಮತ್ತು ತಾಳ-ಬದ್ಧ ಸಂಗೀತಕ್ಕಿ೦ತ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದವರು. ೧೩ ನೇಯ ವಯಸ್ಸಿನಲ್ಲಿಯೇ ತಮ್ಮ ಕೃತಿಗಳಲ್ಲಿ ಒಂದಾದ "ನಮೋ ನಮೋ ರಾಘವ" ವನ್ನು ರಚಿಸಿದರು. ಇವರ "ಎಂದರೋ ಮಹಾನುಭಾವುಲು" ಕೃತಿಯನ್ನು ಕೇಳಿದ ನಂತರ ಸೊಂಟಿ ವೆಂಕಟರಮಣಯ್ಯನವರು ತಂಜಾವೂರಿನ ರಾಜರಿಗೆ ಇವರ ಬಗ್ಗೆ ಪ್ರಭಾವೀ ಸಲಹೆ ನೀಡಿದರು. ಆದರೆ ತ್ಯಾಗರಾಜರು ಮಹಾರಾಜರ ಆಸ್ಥಾನ ಸಂಗೀತಗಾರರಾಗುವ ಆಹ್ವಾನವನ್ನು ನಿರಾಕರಿಸಿದರು. ಅವರು ಶ್ರೀ ನಾರದರಿಂದ ತಮ್ಮ ಸಂಗೀತದ ಪಾಂಡಿತ್ಯಕ್ಕಾಗಿ ಆಶೀರ್ವಾದವನ್ನು ಪಡೆದ ಸಂದರ್ಭದಲ್ಲಿ ಶ್ರೀ ನಾರದ ಮುನಿ ಕೃತಿಯನ್ನು ಹಾಡಿದರು ಎಂಬ ನಂಬಿಕೆ. ಪುರಂದರದಾಸರ ಪ್ರಭಾವ ತ್ಯಾಗರಾಜರು ಚಿಕ್ಕಂದಿನಲ್ಲಿ, ಅವರ ತಾಯಿ ಹಾಡುತ್ತಿದ್ದ ಪುರಂದರದಾಸರ ದೇವರನಾಮಗಳಿಂದ ಪ್ರಭಾವಿತರಾಗಿದ್ದರೆಂದು ಹೇಳಲಾಗಿದೆ. ಇವರ ಹಲವು ಕೃತಿಗಳು ಪುರಂದರದಾಸರ ಕೆಲವು ಪದಗಳಲ್ಲಿ ಇರುವ ಭಾವನೆಯನ್ನೇ ವ್ಯಕ್ತ ಪಡಿಸುವುದು ಗಮನಾರ್ಹ. ಉದಾಹರಣೆಗೆ ರೇವಗುಪ್ತಿ ರಾಗದ ಗ್ರಹಬಲಮೇಮಿ ಎಂಬ ಕೃತಿ ಪುರಂದರರ ಸಕಲ ಗ್ರಹಬಲನೀನೆ ಎಂಬ ರಚನೆಯನ್ನು ಹೋಲುತ್ತಿದ್ದರೆ, ಜಿಂಗಲ ರಾಗದ ಅನಾಥುಡನು ಗಾನು ಎಂಬ ರಚನೆ ಪುರಂದರ ದಾಸರ ನಿನ್ನಂಥ ತಾಯಿ ಎನಗುಂಟು ನಿನಗಿಲ್ಲ ಎಂಬ ಉಗಾಭೋಗದ ಭಾವನೆಯನ್ನೇ ಹೇಳುತ್ತದೆ. ತ್ಯಾಗರಾಜರು ಅವರ ಪ್ರಹ್ಲಾದ ಭಕ್ತಿ ವಿಜಯದ ಮಂಗಳಶ್ಲೋಕದಲ್ಲಿ, ಪುರಂದರದಾಸರನ್ನು ಸ್ಮರಿಸಿದ್ದಾರೆ. ಪಂಚರತ್ನ ಕೃತಿಗಳು ತ್ಯಾಗರಾಜರು ಅವರ ಕಾಲದಲ್ಲಿ ಪ್ರಚಲಿತವಿಲ್ಲದ ಹಲವಾರು ರಾಗಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಖರಹರಪ್ರಿಯ, ಹರಿಕಾಂಭೋಜಿ ಮೊದಲಾದ ಕೆಲವು ಮೇಳಕರ್ತರಾಗಗಳನ್ನು ಪ್ರಸಿದ್ಧಿಗೆ ತಂದವರು ತ್ಯಾಗರಾಜರೇ. ಘನರಾಗಗಳಾದ ನಾಟ,ಗೌಳ,ಆರಭಿ,ವರಾಳಿ ಮತ್ತು ಶ್ರೀ ರಾಗಗಳಲ್ಲಿ ಇವರು ರಚಿಸಿರುವ ವಿಶೇಷ ಕೃತಿಸಮೂಹಕ್ಕೆ ಘನರಾಗ ಪಂಚರತ್ನ ಎಂದು ಕರೆಯಲಾಗುತ್ತೆ. ಹೀಗೇ ತಿರುವೊಟ್ರಿಯೂರಿನ ತ್ರಿಪುರಸುಂದರಿಯ ಮೇಲೆ, ಕೋವೂರು ಸುಂದರೇಶ್ವರನ ಮೇಲೆ, ಮತ್ತು ಶ್ರೀರಂಗಂ ನ ರಂಗನಾಥನಮೇಲೆ ಇವರು ರಚಿಸಿರುವ ಐದೈದು ಕೃತಿಗಳ ಗುಂಪುಗಳು, ತಿರುವೊಟ್ರಿಯೂರ್ ಪಂಚರತ್ನ, ಕೋವೂರು ಪಂಚರತ್ನ ಮತ್ತು ಶ್ರೀರಂಗಂ ಪಂಚರತ್ನ ಕೃತಿಗಳೆಂದೇ ಪ್ರಸಿದ್ಧವಾಗಿವೆ. ತ್ಯಾಗರಾಜರು ತಮ್ಮ ಕಡೆಗಾಲದವರೆಗೂ ಕೃತಿಗಳನ್ನು ರಚಿಸುತ್ತಿದ್ದರೆಂದು ತಿಳಿದುಬಂದಿದೆ. ಮನೋಹರಿ ರಾಗದ ಪರಿತಾಪಮುಕನಿಯಾಡಿನ, ಶಹಾನ ರಾಗದ ಗಿರಿಪೈನೆಲಕೊನ್ನ, ಮತ್ತು ವಾಗಧೀಶ್ವರಿ ರಾಗದ ಪರಮಾತ್ಮುಡು ವೆಲಿಗೇ ಎಂಬ ಕೃತಿಗಳನ್ನು ಅವರು ತಮ್ಮ ಜೀವನದ ಕಡೆಯ ಹತ್ತು ದಿನಗಳಲ್ಲಿ ರಚಿಸಿದರೆಂದು ಅಭಿಪ್ರಾಯ ಪಡಲಾಗಿದೆ. ತ್ಯಾಗರಾಜ ಆರಾಧನೆ ಕರ್ನಾಟಕ ಸಂಗೀತಕ್ಕೆ ತ್ಯಾಗರಾಜರ ಕಾಣಿಕೆಯ ನೆನಪಾಗಿ ಪ್ರತಿ ವರ್ಷ ತಿರುವಯ್ಯಾರಿನಲ್ಲಿ ಪುಷ್ಯ ಬಹುಳ ಪಂಚಮಿಯಂದು (ಜನವರಿ ಅಥವಾ ಫೆಬ್ರವರಿ ತಿ೦ಗಳುಗಳ ಸಮಯ) "ತ್ಯಾಗರಾಜ ಆರಾಧನೆ" ಉತ್ಸವ ನಡೆಯುತ್ತದೆ. ಅನೇಕ ಮುಖ್ಯ ಸಂಗೀತಗಾರರ ಕಛೇರಿಗಳು ಈ ಸಮಯದಲ್ಲಿ ನಡೆಯುವುದುಂಟು. ವರ್ಷದ ಬೇರೆಬೇರೆ ಸಮಯಗಳಲ್ಲಿ ಅಮೆರಿಕದಲ್ಲೂ ವಿವಿಧೆಡೆಗಳಲ್ಲಿ ತ್ಯಾಗರಾಜ ಆರಾಧನೆ ನಡೆಯುತ್ತದೆ! ನಿಧನ ತ್ಯಾಗರಾಜರು ಜನವರಿ ೬, ೧೮೪೭ ರಂದು ನಿಧನರಾದರು. ಭಾರತದ ಸಂಗೀತಗಾರರು ಶಾಸ್ತ್ರೀಯ ಸಂಗೀತಗಾರರು ಕರ್ನಾಟಕ ಸಂಗೀತ ಭಾರತದ ಗಣ್ಯರು ಸಂಗೀತಗಾರರು ತೆಲುಗು ಪ್ರಮುಖರು
2495
https://kn.wikipedia.org/wiki/%E0%B2%AE%E0%B3%81%E0%B2%A4%E0%B3%8D%E0%B2%A4%E0%B3%81%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%20%E0%B2%A6%E0%B3%80%E0%B2%95%E0%B3%8D%E0%B2%B7%E0%B2%BF%E0%B2%A4
ಮುತ್ತುಸ್ವಾಮಿ ದೀಕ್ಷಿತ
ಮುತ್ತುಸ್ವಾಮಿ ದೀಕ್ಷಿತರು (ಮಾರ್ಚ್ ೨೪, ೧೭೭೫) ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ಇನ್ನಿಬ್ಬರು ತ್ಯಾಗರಾಜರು ಮತ್ತು ಶ್ಯಾಮಾ ಶಾಸ್ತ್ರಿಗಳು. ಬಹುತೇಕ ವಾಗ್ಗೇಯಕಾರರು ತೆಲುಗಿನಲ್ಲಿ ಹೆಚ್ಚು ಕೃತಿಗಳನ್ನು ರಚಿಸಿದ್ದರೆ ದೀಕ್ಷಿತರ ಕೃತಿಗಳೆಲ್ಲವೂ ಸಂಸ್ಕೃತದಲ್ಲಿ ರಚಿತವಾಗಿರುವುದು ಮಹತ್ವದ ವಿಚಾರವಾಗಿದೆ. ‘ಗುರುಗುಹ’ ಎಂಬ ಕಾವ್ಯನಾಮದ ಹಾಸುಹೊಕ್ಕು ದೀಕ್ಷಿತರ ಕೃತಿಗಳಲ್ಲಿ ಕಂಡುಬರುವುದು ಮತ್ತೊಂದು ಪ್ರಧಾನ ಅಂಶ. ಕರ್ಣಾಟಕ ಸಂಗೀತದಲ್ಲಿ ಹಂಸಧ್ವನಿಯಲ್ಲಿರುವ ‘ವಾತಾಪಿ ಗಣಪತಿಂ ಭಜೇ’ ಕೃತಿಯನ್ನು ಅರಿಯದವರೇ ಇಲ್ಲ. ಅಂತಹ ಅಸಂಖ್ಯಾತ ಮಹಾನ್ ಕೃತಿಗಳ ಕರ್ತಾರರಾದವರು ಮುತ್ತುಸ್ವಾಮಿ ದೀಕ್ಷಿತರು. ಇವರ ಸಂಗೀತ ಶೈಲಿಯನ್ನು ನಾರಿಕೇಳಪಾಕಕ್ಕೆ ಹೋಲಿಸಲಾಗುತ್ತದೆ. ತೆಂಗಿನಕಾಯಿಯಲ್ಲಿ, ಹೇಗೆ ಹೊರಗೆ ಕಠಿಣವಾದ ಕರಟವಿದ್ದು ಒಳಗೆ ಸವಿಯಾದ ಎಳನೀರೂ, ರುಚಿಯಾದ ಕಾಯಿಯೂ ಇರುತ್ತದೋ ಅದೇ ರೀತಿ, ಮೇಲ್ನೋಟಕ್ಕೆ ಇವರ ಕೃತಿಗಳು ಕಠಿಣವಾಗಿ ತೋರಿದರೂ,ಅವುಗಳಲ್ಲಿನ ಸಂಗೀತ ಸಾಹಿತ್ಯದ ಅಂಶಗಳಿಂದಾಗಿ, ಅವರ ಅತಿ ಉತ್ತಮ ದರ್ಜೆಯ ವಾಗ್ಗೇಯಕಾರತ್ವಕ್ಕೆ ನಿದರ್ಶನವಾಗಿವೆ. ಜೀವನ ಮುತ್ತುಸ್ವಾಮಿ ದೀಕ್ಷಿತರು ಜನಿಸಿದ ದಿನ ಮಾರ್ಚ್ ೨೪, ೧೭೭೫. ಮುತ್ತುಸ್ವಾಮಿ ದೀಕ್ಷಿತರ ಪೂರ್ವಜರು ತಮಿಳುನಾಡು ಆಂಧ್ರಪ್ರದೇಶಗಳ ಗಡಿ ಪ್ರದೇಶವಾದ ವಿರಿಂಚಿಪುರಂನಲ್ಲಿದ್ದವರು. ದೀಕ್ಷಿತರ ತಂದೆ ರಾಮಸ್ವಾಮಿ ದೀಕ್ಷಿತರೂ ಮಹಾನ್ ಮೇಧಾವಿ ಸಂಗೀತ ವಿದ್ವಾಂಸರು. ಇನ್ನೆರಡು ಸಂಗೀತ ತ್ರಿಮೂರ್ತಿಗಳಂತೆ ಮುತ್ತುಸ್ವಾಮಿ ದೀಕ್ಷಿತರು ಜನಿಸಿದ್ದೂ ತಮಿಳುನಾಡಿನ ತಿರುವಾರೂರಿನಲ್ಲಿ. ಇವರು ತಮ್ಮ ಜೀವನಕಾಲದಲ್ಲಿ ಹಲವಾರುಕಡೆ ಪ್ರಯಾಣಿಸಿ, ಹಲವೆಡೆ ವಾಸಿಸಿ, ಕೊನೆಗೆ ತಿರುನೆಲ್ವೇಲಿ ಬಳಿಯ ಎಟ್ಟಯಪುರಮ್ ನ ಆಸ್ಥಾನದಲ್ಲಿ ಆಶ್ರಯ ಪಡೆದವರು. ಮುತ್ತುಸ್ವಾಮಿ ದೀಕ್ಷಿತರು ತಮ್ಮ 16ನೇ ವಯಸ್ಸಿಗೇ ವೇದಾಧ್ಯಯನ, ಕಾವ್ಯಾಲಂಕಾರ, ಜ್ಯೋತಿಷ್ಯ ಶಾಸ್ತ್ರ, ವೈದ್ಯ ಮತ್ತು ಮಂತ್ರಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು. ದೈವಾನುಗ್ರಹ ಇವರು ತಮ್ಮ ಗುರುಗಳ ಅಣತಿಯಂತೆ ಕಾಶಿಯ ಗಂಗೆಯಲ್ಲಿ ಮಿಂದು ಪ್ರಾರ್ಥಿಸಿದಾಗ ಇವರ ಬೊಗಸೆಯ ನೀರಿನಲ್ಲಿ ವೀಣೆಯ ದರ್ಶನವಾಯಿತಂತೆ. ನಿಷ್ಣಾತ ವೈಣಿಕರಾಗಿದ್ದ ದೀಕ್ಷಿತರು ಪಂಚದಶ ಗಮಕಗಳನ್ನೂ ಪ್ರಯೋಗಮಾಡಿ ತೋರಿಸಿದ್ದರು. ಇವರು ತಿರುತ್ತಣಿಯ ಷಣ್ಮುಖನ ಆರಾಧಕರೂ ಮತ್ತು ಸುಬ್ರಹ್ಮಣ್ಯನನ್ನು ಒಲಿಸಿಕೊಂಡವರೂ ಆಗಿದ್ದರು. ಸ್ವಾಮಿ ಇವರಿಗೆ ವಲ್ಲಿ-ದೇವಯಾನಿ ಸಮೇತ, ಮಯೂರ ವಾಹನನಾಗಿ ಸಾಕ್ಷಾತ್ಕಾರವಿತ್ತಿದ್ದರೆಂಬ ಪ್ರತೀತಿಯಿತ್ತು. ತಾವು ಈ ’ಗುರುಗುಹ’ನ ದಾಸ, ಅವನ ಪಾದಧೂಳಿಯಿಂದ ಅನುಗ್ರಹ್ರೀತರಾದರೆಂಬ ಭಕ್ತಿಭಾವದಿಂದ ತಮ್ಮ ಮೊಟ್ಟ ಮೊದಲ ಕೃತಿ "ಶ್ರೀನಾಥಾದಿ ಗುರುಗುಹೋ ಜಯತಿ ಜಯತಿ.." ರಚನೆಯನ್ನು ಮಾಯಾ ಮಾಳವಗೌಳ ರಾಗದಲ್ಲಿ ರಚಿಸಿದರು. ಈ ಕೃತಿಯಲ್ಲಿ ಭಗವಂತನ ಚರಣ ಒಂದೇ ಎಲ್ಲದಕ್ಕೂ ಆಶ್ರಯ ಎಂಬ ಪುನೀತಭಾವದ ಅಭಿವ್ಯಕ್ತಿಯಿದೆ. ದೀಕ್ಷಿತರು ಶ್ರೀವಿದ್ಯೆಯ ಉಪಾಸಕರೂ ಆಗಿದ್ದರು. ಅವರು ರಚಿಸಿದ ಕೃತಿಗಳಲ್ಲಿ ಅವರ ವಿದ್ವತ್ಪೂರ್ಣ ಪಾಂಡಿತ್ಯಗಳ ಅನುಭಾವ ಕಾಣಸಿಗುತ್ತದೆ. ಕೃತಿಗಳಲ್ಲಿ ಅವರು ಅದರ ರಚನೆಯ ರಾಗದ ಹೆಸರನ್ನು ಸಹಾ ಅತ್ಯಂತ ಅರ್ಥಪೂರ್ಣವಾಗಿ ಹೊಂದಿಸಿರುವುದೂ ಕೂಡ ಒಂದು ವಿಶೇಷತೆಯೇ. ಅದ್ಭುತ ರಚನಾಶಕ್ತಿ ದೀಕ್ಷಿತರು ಅನೇಕ ಚಿಕ್ಕ ಚಿಕ್ಕ ಕೃತಿಗಳನ್ನು ಸಮಷ್ಠಿ ಚರಣಗಳನ್ನೊಳಗೊಂಡಂತೆ ಅದ್ಭುತವಾಗಿ ರಚಿಸಿದ್ದಾರೆ. ದೀಕ್ಷಿತರು ತಮ್ಮ ಕ್ಷೇತ್ರ ಕೃತಿಗಳಲ್ಲಿ ಆಯಾ ಕ್ಷೇತ್ರದ ವಿವರಣೆ, ವಿಶೇಷತೆಯನ್ನು ಅಳವಡಿಸಿದ್ದಾರೆ. ನವಗ್ರಹ ಕೃತಿಗಳಲ್ಲಿ ಗ್ರಹಗಳ ಪರಿಚಯ ಮತ್ತು ಸ್ಥಾನಗಳನ್ನು ವಿವರಿಸಿದ್ದಾರೆ. ಮೋಕ್ಷ ಸಾಧನೆಗೆ ಕರ್ಮ, ಭಕ್ತಿ ಮತ್ತು ಜ್ಞಾನ ಮಾರ್ಗಗಳನ್ನು ಅನುಸರಿಸಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ. ದೀಕ್ಷಿತರು ಶ್ರೀ ಶಂಕರಾಚಾರ್ಯರ ವೇದಾಂತ ಸೂತ್ರಗಳಿಗೆ ಅನುಗುಣವಾಗಿ ಇಡೀ ವಿಶ್ವವು ಮಾಯೆಯಿಂದ ಸೃಷ್ಟಿಸಲ್ಪಟ್ಟಿದೆ, ಪರಮಾತ್ಮನ ಸಾಕ್ಷಾತ್ಕಾರ ನಮ್ಮಲ್ಲಿಯೇ ನಮಗೆ ಆಗಬೇಕಾದರೆ, ನಾವು ಮಾಯೆಯನ್ನು ಜಯಿಸಬೇಕೆಂದು ತೋರಿಸಿದವರು.ದೀಕ್ಷಿತರು ಎಲ್ಲಾ ೭೨ ಮೇಳಕರ್ತ ರಾಗಗಳಲ್ಲೂ ರಚಿಸಿದ್ದಾರೆ. ನಾದೋಪಾಸನೆ ದೀಕ್ಷಿತರು ತಮ್ಮ ಜೀವಿತದ ಕೊನೆಯ ಉಸಿರಿರುವವರೆಗೂ ಪರಮಾತ್ಮನ ಧ್ಯಾನದಲ್ಲಿ ನಿರತರಾಗಿದ್ದವರು. ಬಹಳ ಮೃದು ಹೃದಯಿಗಳೂ, ಕರುಣಾಮಯಿಯೂ ಆಗಿದ್ದರು. ತಮ್ಮ ಶಿಷ್ಯನೊಬ್ಬನ ಹೊಟ್ಟೆ ಶೂಲೆಯನ್ನು ಪರಿಹರಿಸುವ ಸಲುವಾಗಿ, ಅವನಿಗೆ ಗುರು ಮತ್ತು ಶನಿ ಗ್ರಹಗಳನ್ನು ಬಲ ಪಡಿಸುವುದಕ್ಕೋಸ್ಕರವೇ ಅವರು ಗುರು, ಶನಿ ಗ್ರಹಗಳನ್ನು ಕುರಿತು ಕೃತಿ ರಚಿಸಿದರಂತೆ. ಅನ್ಯಕುಲದವನಾದ ತಾನು ನವಗ್ರಹ ಶಾಂತಿ ಮಾಡುವುದಾದರೂ ಹೇಗೆ ಎಂದು ವ್ಯತಿಥನಾಗಿದ್ದ ಆತನಿಗೆ ಸ್ವಯಂ ಈ ಕೃತಿಗಳನ್ನು ಬೋಧಿಸಿದರಂತೆ. ಮಂತ್ರಗಳಿಂದ ಹೇಗೆ ನಾವು ದೇವತೆಗಳನ್ನು ಒಲಿಸಿಕೊಂಡು ಗ್ರಹಗಳ ಶಾಂತಿ ಮಾಡಿಕೊಳ್ಳಬಹುದೋ ಅಂತೆಯೇ ಅದನ್ನು ಸಂಗೀತ ಮುಖೇನ ಕೂಡಾ ಮಾಡಲು ಸಾಧ್ಯವೆಂಬುದನ್ನು ಶಿಷ್ಯನಿಗೆ ತಿಳಿಸಿಕೊಟ್ಟರಂತೆ. ತನ್ಮಯನಾಗಿ, ಭಕ್ತಿಯಿಂದ ಅಭ್ಯಸಿಸಿದ ಶಿಷ್ಯನ ಉದರ ಬೇನೆ ವಾಸಿಯಾಗಿತ್ತು. ಹೀಗೆ ದೀಕ್ಷಿತರು ಮಂತ್ರಾನುಷ್ಠಾನದ ಫಲವನ್ನು ನಾದೋಪಾಸನೆಯಿಂದ ಮಾಡಬಹುದೆಂದು ಜ್ಯೋತಿಷ್ಯ ಶಾಸ್ತ್ರದ ವಿಶೇಷಗಳನ್ನೆಲ್ಲಾ ಒಟ್ಟಾಗಿಸಿ, ನವಗ್ರಹ ಕೃತಿಗಳನ್ನು ರಚಿಸಿದರು. ಈ ಕೃತಿಗಳು ಸಂಗೀತ ಲೋಕದಲ್ಲೇ ಅತ್ಯಂತ ಶ್ರೇಷ್ಠ ಕೃತಿಗಳೆನಿಸಿವೆ. ಶ್ರೀಚಕ್ರಉಪಾಸನೆ ಶ್ರೀ ಚಕ್ರ ಉಪಾಸನೆಯಲ್ಲಿ ದೇವಿಯನ್ನು ನಾನಾ ವಿಧವಾಗಿ ಅತ್ಯಂತ ಭಕ್ತಿಯಿಂದ ಆರಾಧಿಸುವ ಅನುಷ್ಠಾನಗಳಿವೆ. ಇದರಲ್ಲಿ ಒಂಭತ್ತು ಆವರಣಗಳಿವೆ. ಪ್ರತಿಯೊಂದು ಆವರಣದಲ್ಲೂ ಪೂಜೆಯ ವಿಧಾನಕ್ಕೆ ಬೇರೆಯದೇ ಆದ ಹೆಸರೂ ಮತ್ತು ಆ ಆವರಣದ ಅಧಿದೇವತೆಗಳೂ ಇದ್ದಾರೆ. ಇಲ್ಲಿರುವ ಒಂಭತ್ತು ಆವರಣಗಳನ್ನೂ ಪೂಜಿಸಿದ ನಂತರ ಶ್ರೀಚಕ್ರದ ಮಧ್ಯದಲ್ಲಿರುವ "ಬಿಂದು"ವಿನಲ್ಲಿ ನೆಲೆಸಿರುವ ದೇವಿಯ ಅನುಗ್ರಹ ನಮಗೆ ಲಭಿಸುವುದು. ಈ ನವ ಆವರಣಗಳಿಂದ ಕೂಡಿದ "ಶ್ರೀಚಕ್ರ"ದ ಉಪಾಸನೆಯೇ "ಶ್ರೀವಿದ್ಯೆ". ಆ ಲಲಿತಾಂಬಿಕೆ, ಜಗನ್ಮಾತೆ, ಪರಾಶಕ್ತಿ, ಬಿಂದು ಸ್ವರೂಪಳಾಗಿ ಶ್ರೀ ಚಕ್ರದಲ್ಲಿ ಕುಳಿತಿದ್ದಾಳೆ. ಶ್ರಿ ಚಕ್ರದ ಒಂಬತ್ತು ಆವರನಗಳ ಆರಾಧನೆಗಾಗಿ "ಕಮಲಾಂಬ ನವಾವರಣ" ಕೃತಿಗಳ ಗುಚ್ಛವನ್ನು ದೀಕ್ಷಿತರು ರಚಿಸಿದ್ದಾರೆ. ಸಾಟಿಯಿಲ್ಲದ ಅತ್ಯಂತ ಉತ್ಕೃಷ್ಟವಾದ ನವಾವರಣ ಕೃತಿಗಳಲ್ಲಿ ದೀಕ್ಷಿತರು ಬೀಜಾಕ್ಷರಗಳನ್ನು ಅಳವಡಿಸಿ, ಹಂತಹಂತವಾಗಿ ದೇವಿಯ ಪಾದಾರವಿಂದಗಳಲ್ಲಿ ಶರಣಾಗುವುದನ್ನು ವಿದ್ವತ್ ಪೂರ್ಣವಾಗಿ ತಿಳಿಸಿದ್ದಾರೆ. ಕೆಲವೊಂದು ಪ್ರಸಿದ್ಧ ಕೀರ್ತನೆಗಳು ಈ ಪರಿಯಾಗಿ ಮುತ್ತುಸ್ವಾಮಿ ದೀಕ್ಷಿತರು ಅಸಂಖ್ಯಾತ ಕೀರ್ತನೆಗಳನ್ನು ರಚಿಸಿದ್ದಾರೆ. ಇದುವರೆಗೆ ಗುರುತಿಸಲಾಗಿರುವ ಅವರ ಕೃತಿಗಳ ಸಂಖ್ಯೆಯೇ ಐದು ನೂರಕ್ಕೂ ಹೆಚ್ಚಿನದು. ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಲ್ಲಿ ಏಕದಂತಂ ಭಜೇಹಂ, ಸಿದ್ದಿ ವಿನಾಯಕಂ ಅನಿಶಂ, ಶ್ರೀಮಹಾ ಗಣಪತಿರವತುಮಾಂ, ವಾತಾಪಿ ಗಣಪತಿಂ, ಸುಬ್ರಮಣ್ಯೇನ ರಕ್ಷಿತೋಹಂ, ಸ್ವಾಮಿನಾಥ ಪರಿಪಾಲಯಾ ಸುಮಾಂ, ಕಾಮಕೋಟಿ ಪೀಠವಾಸಿನಿ ಸೌಗಂಧಿಂ, ಕಂಜದಳಾಯತಾಕ್ಷಿ ಕಾಮಾಕ್ಷಿ, ಶಿವಕಾಮೇಶ್ವರಿಂ ಚಿಂತಯೇಹಂ, ಶ್ರೀವಿಶ್ವನಾಥಂ ಭಜೇಹಂ, ಮಾಮವ ಪಟ್ಟಾಭಿರಾಮ, ಶ್ರೀ ರಾಮಂ ರವಿ ಕುಲಾಬ್ಧಿ ಸೋಮಂ, ಶ್ರೀರಂಗಪುರವಿಹಾರ, ಶ್ರೀವರಲಕ್ಷ್ಮಿ ನಮಸ್ತುಭ್ಯಂ, ಶ್ರೀ ಸರಸ್ವತಿ ನಮೋಸ್ತುತೆ, ವೀಣಾ ಪುಸ್ತಕಧಾರಿಣಿಂ ಆಶ್ರಯೇ, ಸರಸಿಜನಾಭ ಸೋದರಿ ಶಂಕರಿ ಮುಂತಾದವುಗಳು ಜನಸಾಮಾನ್ಯರಲ್ಲೂ ಅತ್ಯಂತ ಜನಪ್ರಿಯವಾಗಿವೆ. ಶ್ರೀ ದೀಕ್ಷಿತರು ಪಂಚ ತತ್ವಗಳನ್ನೊಳಗೊಂಡ ಪ್ರದೇಶಗಳಲ್ಲಿ ಪರಮೇಶ್ವರ ಕುರಿತಾದ ವಿಶೇಷ ಕೃತಿಗಳನ್ನು ರಚಿಸಿದ್ದಾರೆ. ನವಗ್ರಹ ಕೃತಿಗಳು, ನವಾವರಣ ಕೃತಿಗಳು, ನೀಲೋತ್ಪಲಾಂಬಿಕಾ ಕೃತಿಗಳು ಎಂಬ ಅನೇಕ ಗುಚ್ಛಗಳನ್ನು ರಚಿಸಿದ್ದಾರೆ. ವಿದಾಯ ಆಶ್ವೀಜ ಬಹುಳ ಚತುರ್ದಶಿ - ನರಕ ಚತುರ್ದಶಿ ದೀಪಾವಳಿ ಪರ್ವ ದಿನವಾದ್ದರಿಂದ ದೀಕ್ಷಿತರು (ಅಕ್ಟೋಬರ್ ೨೧, ೧೮೩೫) ಆ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾಯಂಕಾಲ ತಮ್ಮ ಎಲ್ಲಾ ಶಿಷ್ಯರನ್ನೂ ಕರೆದು ತಾವೇ ರಚಿಸಿದ ಪೂರ್ವಿ ಕಲ್ಯಾಣಿ ರಾಗದ "ಮೀನಾಕ್ಷಿ ಮುದಂ ದೇಹಿ" ಕೃತಿಯನ್ನು ವೀಣೆಯಲ್ಲಿ ನುಡಿಸುತ್ತಾ, ಎಲ್ಲರಿಗೂ ಹಾಡಲು ಹೇಳುತ್ತಾರೆ. "ಮೀನಲೋಚನಿ ಪಾಶಮೋಚನಿ" ಎಂಬ ಅನುಪಲ್ಲವಿಯ ಸಾಹಿತ್ಯವನ್ನು ಪದೇ ಪದೇ ಹಾಡಿಸುತ್ತಾ, ವೀಣೆ ಬದಿಗಿಟ್ಟು ತಂಬೂರಿಯ ನಾದ ಕೇಳುತ್ತಾ, ಆ ಜಗನ್ಮಾತೆಯ ಮಡಿಲಿನಲ್ಲಿ ಒರಗಿ ಬಿಡುತ್ತಾರೆ ತಾಯಿಯಲ್ಲಿ ಅವರ ಆತ್ಮ ಲೀನವಾಗಿ ಬಿಡುತ್ತದೆ. ನಮ್ಮ ಸಂಗೀತ ಪ್ರಪಂಚದಲ್ಲಿ ದೀಪಾವಳಿಯನ್ನು "ದೀಕ್ಷಿತರ ದಿನ" ಎಂದೇ ಆಚರಿಸಲಾಗುತ್ತಿದೆ. ಆಕರಗಳು ದೀಕ್ಷಿತರ ಕುರಿತಾದ ಅಂತರಜಾಲ ತಾಣ. ದೀಕ್ಷಿತರ ಕೃತಿಗಳು ಅರ್ಥರೂಪದೊಂದಿಗೆ. ದೀಕ್ಷಿತರ ಕೃತಿಗಳು ಅರ್ಥರೂಪದೊಂದಿಗೆ ಭಾರತದ ಸಂಗೀತಗಾರರು ಶಾಸ್ತ್ರೀಯ ಸಂಗೀತಗಾರರು ಕರ್ನಾಟಕ ಸಂಗೀತ ಸಂಗೀತಗಾರರು
2496
https://kn.wikipedia.org/wiki/%E0%B2%B6%E0%B3%8D%E0%B2%AF%E0%B2%BE%E0%B2%AE%E0%B2%BE%20%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%BF
ಶ್ಯಾಮಾ ಶಾಸ್ತ್ರಿ
ಶ್ಯಾಮಾ ಶಾಸ್ತ್ರಿ (ಜನನ-ಏಪ್ರಿಲ್ ೨೬, ಮರಣ-೧೭೬೨ -೧೮೨೭) ಕರ್ನಾಟಕ ಸಂಗೀತ ಕ್ಷೇತ್ರದ ಖ್ಯಾತ ವಾಗ್ಗೇಯಕಾರರಲ್ಲಿ ಒಬ್ಬರು. ಇವರನ್ನು ಕರ್ನಾಟಕ ಸಂಗೀತದ ತ್ರಿಮೂರ್ತಿ(ಇನ್ನಿಬ್ಬರು- ಮುತ್ತುಸ್ವಾಮಿ ದೀಕ್ಷಿತರು ಮತ್ತು ತ್ಯಾಗರಾಜರು)ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಶ್ಯಾಮಾ ಶಾಸ್ತ್ರಿಗಳು ಹುಟ್ಟಿದ್ದು ತೆಲುಗು ಮೂಲದ ಬ್ರಾಹ್ಮಣ ಕುಟುಂಬದಲ್ಲಿ. ಶಾಸ್ತ್ರಿಗಳ ಹಿರಿಯರು ಆಂಧ್ರಪ್ರದೇಶದ ಕುಂಭಮ್‌ನಿಂದ ತಮಿಳುನಾಡಿಗೆ ವಲಸೆ ಬಂದವರೆಂದು ಹೇಳಲಾಗುತ್ತದೆ. ಹಾಗಾಗಿ ಇವರ ಮನೆಭಾಷೆ ತೆಲುಗು. ತಂದೆ ವಿಶ್ವನಾಥ ಅಯ್ಯರ್ ಇವರು ಹುಟ್ಟಿದ್ದು ತಮಿಳುನಾಡಿನ ತಿರುವಾರೂರಿನಲ್ಲಿ. ಇವರ ಪೂರ್ವಜರು ಅರ್ಚಕ ವೃತ್ತಿಯವರಾಗಿದ್ದರು. ಬಾಲಕ ವೆಂಕಟಕೃಷ್ಣನಿಗೆ ಬಹಳ ಸುಮಧುರವಾದ ಧ್ವನಿಯಿದ್ದುದರಿಂದ, ರೂಢಿಯ ಸಂಸ್ಕೃತದ ಜೊತೆ ಸ್ವಲ್ಪ ಸಂಗೀತದ ಬಾಲಪಾಠಗಳೂ ಆದವು. ಸುಮಾರು ಬಾಲಕ ವೆಂಕಟಕೃಷ್ಣನಿಗೆ ಹದಿನೆಂಟು ವರ್ಷವಾದ ನಂತರ ವೆಂಕಟಕೃಷ್ಣನ ಕುಟುಂಬ ತಂಜಾವೂರಿಗೆ ತೆರಳಿದರು. ಅಲ್ಲಿ ಒಮ್ಮೆ ಆಂಧ್ರಪ್ರದೇಶದಿಂದ ತೀರ್ಥಯಾತ್ರೆಗಾಗಿ ಬಂದು ಚಾತುರ್ಮಾಸಕ್ಕಾಗಿ ನೆಲೆನಿಂತ, ಬ್ರಾಹ್ಮಣ ಸನ್ಯಾಸಿಯಾಗಿದ್ದ ಸಂಗೀತಸ್ವಾಮಿ ಎಂಬವರು, ಈ ಬಾಲಕನ ಕಂಠಸಿರಿಗೆ ಮಾರುಹೋಗಿ ಕೆಲವೇ ಸಮಯದಲ್ಲಿ ಈತನನ್ನು ಉತ್ತಮ ಸಂಗೀತಗಾರನನ್ನಾಗಿ ಮಾಡಿದರು. ಕಾಂಚೀಪುರದ ಕಾಮಾಕ್ಷಿಯ ಭಕ್ತರಾದ ಶ್ಯಾಮಾಶಾಸ್ತ್ರಿಯವರ ಬಹುಪಾಲು ಕೃತಿಗಳು ಕಾಮಾಕ್ಷಿಯನ್ನು ಕುರಿತವು. ತಂಜಾವೂರಿನ ಬಂಗಾರು ಕಾಮಾಕ್ಷಿ ದೇವಾಲಯದಲ್ಲಿ ಅರ್ಚಕರಾಗಿದ್ದ ಆದಿ ಅಪ್ಪಯ್ಯ, ಶ್ಯಾಮಾಶಾಸ್ತ್ರಿಗಳ ಇನ್ನೊಬ್ಬ ಗುರುಗಳು. ಶಾಸ್ತ್ರಿಗಳು ಒಟ್ಟು ೩೦೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರೆಂದು ಹೇಳಲಾಗುತ್ತದೆ ಆದರೂ ಈಗ ಲಭ್ಯವಿರುವುದು ಸುಮಾರು ೬೦-೭೦ರಷ್ಟು ಕೃತಿಗಳು ಮಾತ್ರ. ಇವರ ಕೃತಿಗಳು ಹೆಚ್ಚಾಗಿ ತೆಲುಗು, ಮತ್ತು ಸ್ವಲ್ಪ ಮಟ್ಟಿಗೆ ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿವೆ. ಮದುರೈಯ ಮೀನಾಕ್ಷಿಯನ್ನು ಕುರಿತು ರಚಿಸಿದ 'ನವರತ್ನಮಾಲಿಕೆ' ಶ್ಯಾಮಾ ಶಾಸ್ತ್ರಿಗಳ ಪ್ರಸಿದ್ಧ ಕೃತಿಗಳಲ್ಲಿ ಒಂದು. ಇವರ ಕೃತಿಗಳು ಶಾಮಕೃಷ್ಣ ಎಂಬ ಅಂಕಿತ ಹೊಂದಿವೆ. ಭಾರತದ ಸಂಗೀತಗಾರರು ಶಾಸ್ತ್ರೀಯ ಸಂಗೀತಗಾರರು ಕರ್ನಾಟಕ ಸಂಗೀತ
2509
https://kn.wikipedia.org/wiki/%E0%B2%AA%E0%B2%BF%E0%B2%9F%E0%B3%80%E0%B2%B2%E0%B3%81
ಪಿಟೀಲು
ಪಿಟೀಲು ಅಥವಾ ವಯೊಲಿನ್ ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತ ಪದ್ಧತಿಗಳಲ್ಲಿ ಜನಪ್ರಿಯವಾದ ಒಂದು ತಂತಿ-ವಾದ್ಯ. ಈ ವಾದ್ಯಕ್ಕಿರುವ ಇಂಗ್ಲಿಷಿನ "ಫಿಡ್ಲ್" ಹೆಸರಿನಿಂದ ನಮ್ಮ "ಪಿಟೀಲು" ತಯಾರಾಯಿತು. ಪಿಟೀಲುಗಳನ್ನು ೧೬ ನೆಯ ಶತಮಾನದ ಇಟಲಿ ದೇಶದಲ್ಲಿ ಆವಿಷ್ಕರಿಸಲಾಯಿತು ಎಂದು ನಂಬಲಾಗಿದೆ. ಇಂದೂ ಕಾಣಬಹುದಾದ ಅತ್ಯಂತ ಹಳೆಯ ಪಿಟೀಲು ೧೫೬೪ ರಲ್ಲಿ ಇಟಲಿಯ ಆಂಡ್ರಿಯ ಅಮಾತಿ ಅವರಿಂದ ಮಾಡಲ್ಪಟ್ಟಿದ್ದು. ೧೮ ನೆಯ ಶತಮಾನದ ಹೊತ್ತಿಗೆ ಆಧುನಿಕ ವಯೊಲಿನ್ ಗಳ ಆಕಾರ ಮತ್ತು ನುಡಿಸುವ ವಿಧಾನಗಳು ಚಾಲ್ತಿಗೆ ಬಂದವು. ಮೊದಲಿಗೆ ವಯೊಲಿನ್ ಕೇವಲ ಪಾಶ್ಚಾತ್ಯ ಸಂಗೀತದಲ್ಲಿ ಮಾತ್ರ ಉಪಯೋಗಗೊಳ್ಳುತ್ತಿತ್ತು - ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಸಂಗೀತಗಳೆರಡರಲ್ಲೂ ಉಪಯೋಗ ಕಂಡ ವಯೊಲಿನ್ ಸಾಕಷ್ಟು ಬೇಗನೆಯೇ ಭಾರತಕ್ಕೆ ಬಂದಿತು. ಚಾರಿತ್ರಿಕ ದಾಖಲೆಗಳ ಪ್ರಕಾರ, ಮೊದಲಿಗೆ ತಿರುವಾಂಕೂರಿನ ಮಹಾರಾಜ ಸ್ವಾತಿ ತಿರುನಾಳ್ (೧೮೧೩ - ೧೮೪೬) ರ ಆಸ್ಥಾನದಲ್ಲಿ ವಯೊಲಿನ್ ನ ಪ್ರದರ್ಶನ ನಡೆಯಿತು. ಮೊದಮೊದಲು ಹರಿಕಥೆಗೆ ಪಕ್ಕವಾದ್ಯವಾಗಿ ಉಪಯೋಗವಾದ ವಯೊಲಿನ್ ಕ್ರಮೇಣ ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಮುಖ್ಯ ಪಕ್ಕವಾದ್ಯವಾಗಿ ಬೆಳೆಯಿತು. ಕರ್ನಾಟಕ ಸಂಗೀತದ ಆಧುನಿಕ ಕಛೇರಿಗಳಲ್ಲಿ ವಯೊಲಿನ್ ಸರ್ವೇ ಸಾಮಾನ್ಯ..  ಪಾಶ್ಚಾತ್ಯ ಶೈಲಿಯ ವಯೊಲಿನ್ ಮತ್ತು ಭಾರತೀಯ ಶೈಲಿಯ ವಯೊಲಿನ್ ಗಳಲ್ಲಿ ಆಕಾರ, ಮಾಡುವಿಕೆಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ - ಆದರೆ ನುಡಿಸುವ ವಿಧಾನ ಬೇರೆ ಬೇರೆ. ಪಿಟೀಲಿನ ನಾದವನ್ನೂ, ಮಾಧುರ್ಯವನ್ನೂ ಹೆಚ್ಚಿಸಿ ಭಾರತೀಯ ಸಂಗೀತಕ್ಕೆ ಪಿಟೀಲನ್ನು ಹೊಂದಿಸುವ ನಿಟ್ಟಿನಲ್ಲಿ ಪ್ರಯೋಗಗಳು ನಡೆದಿವೆ. ಶ್ರೀ. ಚೌಡಯ್ಯನವರ ಏಳು ತಂತಿಗಳುಳ್ಳ ಪಿಟೀಲುವಾದ್ಯವನ್ನೂ, ಶ್ರೀ. ಎಲ್. ಶಂಕರ್‌ರ ವಿಸ್ತೃತ "ಡಬಲ್ ವಯೊಲಿನ್"ಅನ್ನೂ ಇಲ್ಲಿ ಹೆಸರಿಸಬಹುದು. ಭಾರತದ ಇನ್ನೊಂದು ಮುಖ್ಯ ಶಾಸ್ತ್ರೀಯ ಸಂಗೀತ ಪದ್ಧತಿಯಾದ ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ವಯೊಲಿನ್ ನ ಉಪಯೋಗ ಸ್ವಲ್ಪ ಕಡಿಮೆ - ಆದರೆ ಇತ್ತೀಚೆಗೆ ಶ್ರೀ ಡಾ|| ವಿ. ಜಿ. ಜೋಗ್‌, ಶ್ರೀಮತಿ ಡಾ|| ರಾಜಮ್, ಶ್ರೀಮತಿ ಕಲಾ ರಾಮನಾಥ್ ಮೊದಲಾದ ಸಂಗೀತಗಾರರಿಂದ ಹಿಂದುಸ್ತಾನಿ ಸಂಗೀತ ಕಛೇರಿಗಳಲ್ಲೂ ವಯೊಲಿನ್ ಉಪಯೋಗಗೊಂಡಿದೆ. ಕರ್ನಾಟಕ ಸಂಗೀತದ ಪ್ರಸಿದ್ಧ ವಯೊಲಿನ್-ವಾದಕರಲ್ಲಿ ಶ್ರೀಮಾನ್ ಪಿಟೀಲು ಟಿ. ಚೌಡಯ್ಯ, ಶ್ರೀಮಾನ್‌ ಎಂ. ಎಸ್. ಗೋಪಾಲಕೃಷ್ಣನ್, ಶ್ರೀಮಾನ್‌ ಲಾಲ್‍ಗುಡಿ ಜಯರಾಮನ್, ಮೈಸೂರು ಸಹೋದರರು (ಶ್ರೀಮಾನ್ ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್), ಶ್ರೀಮಾನ್ ಕುನ್ನಿಕುಡಿ ವೈದ್ಯನಾಥನ್,ಶ್ರೀಮಾನ್ ಕೋಲಾರದ ಕೊಳ್ಳೆಗಾಲ ಗೊಪಾಲಕೃಷ್ಣ ಮೊದಲಾದವರನ್ನು ಹೆಸರಿಸಬಹುದು. ಉಲ್ಲೇಖಗಳು ಬಾಹ್ಯ ಕೊಂಡಿಗಳು The violin: How to select a violin, its provenance and value Researches into the early history of the violin family (Carl Engel, 1883) - (Authentication required.) ಸಂಗೀತ ವಾದ್ಯಗಳು ಕರ್ನಾಟಕ ಸಂಗೀತ
2526
https://kn.wikipedia.org/wiki/%E0%B2%87%E0%B2%95%E0%B2%BF%E0%B2%B0%E0%B3%81
ಇಕಿರು
ಇಕಿರು ೧೯೫೨ ರಲ್ಲಿ ಹೊರಬಂದ ಅಕಿರಾ ಕುರೊಸಾವಾರವರು ನಿರ್ದೇಶಿಸಿದ ಜಪಾನ್ ದೇಶದ ಚಿತ್ರ. ಈ ಚಿತ್ರಕ್ಕೆ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಲಭಿಸಿದೆ. ಕಥೆ ಊರಿನ ನಾಗರಿಕ ಸೇವೆ, ನಗರ ಪಾಲಿಕೆ ಕಚೇರಿಯಲ್ಲಿ 'ಪಬ್ಲಿಕ್ ಅಫ್ಫೇರ್ಸ್' ನೋಡಿಕೊಳ್ಳುತ್ತಿದ್ದ 'ಕಾಂಜಿ ವಾಂತನಾಬೆ', ತನ್ನ ಮೂವತ್ತು ಕಾಲದ ಸರಕಾರೀ ನೌಕರಿಯಲ್ಲಿ ಮಾಡಿದ್ದೇನೂ ಇಲ್ಲ, ಕೇವಲ ಸಮಯ ಹಾಳು. ಇವನ ದಿನನಿತ್ಯದ ಕೆಲಸ ಸರಕಾರಿ ಕಚೇರಿಯಲ್ಲಿ ಕುಳಿತು ಕಚೇರಿಯ ಮುಖ್ಯಸ್ತನಾಗಿ ಕಾಗದ ಪತ್ರಗಳ ಮೇಲೆ ಸ್ಟ್ಯಾಂಪ್ ಹಾಕುವುದು. ದೂರುಗಳನ್ನು ಕೊಂಡೊಯ್ದ ನಾಗರಿಕರನ್ನು ಕಾರಣಗಳನ್ನೊಡ್ಡಿ ಬೇರೊಂದು ಇಲಾಖೆಗೆ ದೂರು ನೀಡುವಂತೆ ದಬ್ಬುವುದು. ಹೀಗೇ ನೀರಸ ಜೀವನ ಸಾಗಿದ್ದಾಗ ಒಮ್ಮೆಲೇ ತನಗೆ ಕರುಳಿನ ಕ್ಯಾನ್ಸರ್ ಇರುವುದೆಂದು 'ಕಾಂಜಿ ವಾಂತನಾಬೆ'ಗೆ ತಿಳಿಯುತ್ತದೆ. ಇನ್ನು ಕೆಲವೇ ಕಾಲ ತಾನು ಬದುಕಿರುವುದೆಂದು ತಿಳಿದ ಕಾಂಜಿಗೆ ನಿಜಜೀವನದ ಅರಿವಾಗುತ್ತದೆ. ತಾನು ತನ್ನ ಜೀವನದಲ್ಲಿ ಸಿಕ್ಕ ಸಮಯವನ್ನು ಹಾಳು ಮಾಡಿದ ಅರಿವಾಗುತ್ತದೆ. ಇನ್ನು ತನ್ನ ಅಂತ್ಯಕ್ಕೆ ಆರು ತಿಂಗಳಿಗಿಂತ ಹೆಚ್ಚು ಕಾಲ ಇಲ್ಲವೆಂದು ತಿಳಿದ ಕಾಂಜಿ ವಾಂತನಾಬೆ ಕೊನೆಗೊಂದು ನಿರ್ಧಾರಕ್ಕೆ ಬರುತ್ತಾನೆ. ಕೊಳಚೆ ಪ್ರದೇಶದ ಜನರು ಬಂದು ಆಗಾಗ ದೂರು ನೀಡುತ್ತಿದ್ದ ಕೊಳಕಿನ ನಾಲೆಯನ್ನು ಸ್ವಚ್ಛಗೊಳಿಸಿ ಅಲ್ಲೊಂದು ಪಾರ್ಕ್ ಸ್ಥಾಪಿಸುವಲ್ಲಿ ಅವಿರತ ಪ್ರಯತ್ನ ಮಾಡಿ ಕೊನೆಗೆ ಯಶಸ್ವಿಯಾಗುತ್ತಾನೆ. ಕೊನೆಗೊಂದು ದಿನ ಅದೇ ಪಾರ್ಕಿನಲ್ಲಿ ತನ್ನ ಜೀವನದಲ್ಲಿ ಕಾಣಿಸಿಕೊಂಡ ಹೊಸ ತೃಪ್ತಿಯಿಂದ, ಸಂತೋಷದಿಂದ ಪ್ರಾಣ ಬಿಡುತ್ತಾನೆ. ನಿರ್ದೇಶನ ಜಪಾನಿನ ಸುಪ್ರಸಿದ್ಧ ನಿರ್ದೇಶಕರಾದ ಅಕಿರಾ ಕುರೊಸಾವಾರವರ ಚಿತ್ರವಿದು. ಅಮೇರಿಕಾ ದೇಶದ ಹಲವು ಸಿನಿಮಾ ವಿಮರ್ಶಕರ ಪ್ರಕಾರ ಇದು ಕುರೊಸಾವಾರವರ ಜೀವನದ ಅತ್ಯುತ್ತಮ ಚಿತ್ರ. ಅಂತರರಾಷ್ಟ್ರೀಯ ಸಿನಿಮಾ ಕುರೋಸಾವಾ ಚಿತ್ರಗಳು
2532
https://kn.wikipedia.org/wiki/%E0%B2%86%E0%B2%AA%E0%B3%8D%E0%B2%A4%E0%B2%AE%E0%B2%BF%E0%B2%A4%E0%B3%8D%E0%B2%B0
ಆಪ್ತಮಿತ್ರ
'ಆಪ್ತಮಿತ್ರ' - ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರಗಳಲ್ಲೊಂದು. ಸಿನಿಮಾ ವಿಮರ್ಶಕರ ಪ್ರಕಾರ ಇತ್ತೀಚಿನ ಎಲ್ಲಾ ದಾಖಲೆಗಳನ್ನೂ ಮುರಿದು ಒಂದು ವರ್ಷದ ಸತತ ಪ್ರದರ್ಶನ ಪೂರೈಸಿದೆ. ಚಿತ್ರದ ನಿರ್ಮಾಪಕರು 'ಕನ್ನಡ ಚಿತ್ರರಂಗದ ಕುಳ್ಳ' ಎಂದೇ ಪ್ರಖ್ಯಾತರಾಗಿರುವ ದ್ವಾರಕೀಶ್. ರಾಜ್ಯದ ಹಲವಾರು ಕಡೆ ಶತ ದಿನೊತ್ಸವ, ರಜತೋತ್ಸವ ಆಚರಿಸಿದ ಈ ಚಿತ್ರ ಒಂದು ವರ್ಷ ತೆರೆಕಂಡ ಸಾಧನೆ ಮಾಡಿದೆ. ಈ ಚಿತ್ರದ "ಪಟ ಪಟ", "ರಾ ರಾ", "ಕಣ ಕಣದೀ ಶಾರದೆ", "ಅಂಕು ಡೊಂಕು" ಹಾಡುಗಳು ಭಾರೀ ಜನಪ್ರಿಯತೆ ಗಳಿಸಿವೆ. ವಿಷ್ಣುವರ್ಧನ್ ರವರ ಮನೋವೈದ್ಯನ ಪಾತ್ರ ಅಮೋಘವೆಂದು ವಿಮರ್ಶಕರ ಅಭಿಪ್ರಾಯ. ನಟಿ ಸೌಂದರ್ಯ ಅವರ ನಾಗವಲ್ಲಿ ಪಾತ್ರ ಪ್ರೇಕ್ಷಕರ ಮನದಲ್ಲಿ ಮನೆಮಾಡುವಂತದ್ದೆಂದು ವಿಮರ್ಶಕರು ಬಣ್ಣಿಸುತ್ತಾರೆ. ಅಮೇರಿಕಾದಲ್ಲೂ ಪ್ರದರ್ಶನ ಕಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರ ತಮಿಳಿನಲ್ಲಿ "ಚಂದ್ರಮುಖಿ" ಯಾಗಿ ಬಿಡುಗಡೆಯಾಗಿದೆ. ರಜನೀಕಾಂತ್, ಜ್ಯೋತಿಕಾ, ಪ್ರಭು ಚಂದ್ರಮುಖಿ ಚಿತ್ರದ ಪಾತ್ರವರ್ಗದಲ್ಲಿದ್ದಾರೆ."ಚಂದ್ರಮುಖಿ" ಚಿತ್ರವನ್ನೇ ತೆಲುಗು ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು.ಹಿಂದಿ ಭಾಷೆಯಲ್ಲಿ "ಭೂಲ್ ಭುಲಯ್ಯಾ" ಎಂದು ಬಿಡುಗಡೆಯಾಯಿತು. ಅಕ್ಷಯ್ ಕುಮಾರ್,ಶೈನಿ ಅಹೂಜಾ,ವಿದ್ಯಾ ಬಾಲನ್,ಅಮೀಷಾ ಪಟೇಲ್, ಚಿತ್ರದ ಪಾತ್ರವರ್ಗದಲ್ಲಿದ್ದರು.ಬೆಂಗಾಲಿ ಭಾಷೆಯಲ್ಲಿ "ರಾಜ್ ಮಹಲ್" ಎಂದು ಚಿತ್ರ ತಯಾರಾಯಿತು. ಪ್ರೋಸೇನ್ ಜಿತ್ ಚಟರ್ಜಿ,ಅಭಿಷೇಕ್ ಚತರ್ಜಿ,ಅನು ಚೌಧರಿ,ರಚನಾ ಬ್ಯಾನರ್ಜಿ ಚಿತ್ರದ ತಾರಾಬಳಗದಲ್ಲಿದ್ದವರು.ಇವೆಲ್ಲವಕ್ಕೂ ಮೂಲ ಚಿತ್ರ ಮಲಯಾಳಂ ಭಾಷೆಯಲ್ಲಿ ಬಂದ "ಮಣಿಚಿತ್ರತಾಳ್", ಮೋಹನ್ ಲಾಲ್,ಸುರೇಶ್ ಗೋಪಿ,ಶೋಭನಾ,ವಿನಯ ಪ್ರಕಾಶ್ ಮುಂತಾದವರು ನಟವರ್ಗದಲ್ಲಿದ್ದವರು. Cast ಕನ್ನಡ ಸಿನೆಮಾ ಕನ್ನಡ ಚಲನಚಿತ್ರಗಳು ಶತದಿನೋತ್ಸವದ ಕನ್ನಡ ಚಿತ್ರಗಳು ರಜತಮಹೋತ್ಸವದ ಕನ್ನಡ ಚಿತ್ರಗಳು ಸುವರ್ಣಮಹೋತ್ಸವದ ಕನ್ನಡ ಚಿತ್ರಗಳು ವರ್ಷ-೨೦೦೪ ಕನ್ನಡಚಿತ್ರಗಳುವಿಷ್ಣುವರ್ಧನ್ ಚಲನಚಿತ್ರಗಳು
2534
https://kn.wikipedia.org/wiki/%E0%B2%B8%E0%B3%8C%E0%B2%82%E0%B2%A6%E0%B2%B0%E0%B3%8D%E0%B2%AF%20%28%E0%B2%9A%E0%B2%BF%E0%B2%A4%E0%B3%8D%E0%B2%B0%E0%B2%A8%E0%B2%9F%E0%B2%BF%29
ಸೌಂದರ್ಯ (ಚಿತ್ರನಟಿ)
ಸೌಂದರ್ಯ (ಜುಲೈ ೧೮, ೧೯೭೨ – ಏಪ್ರಿಲ್ ೧೭, ೨೦೦೪) ಭಾರತೀಯ ಚಲನಚಿತ್ರರಂಗದ ನಟಿ, ನಿರ್ಮಾಪಕಿ. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಹಲವು ಬಾರಿ ನಟನೆಗೆ ಪ್ರಶಸ್ತಿಗಳನ್ನು ಪಡೆದ ಅವರು, ೨೦೦೨ರಲ್ಲಿ ನಿರ್ಮಿಸಿದ ದ್ವೀಪ ಕನ್ನಡ ಚಿತ್ರಕ್ಕಾಗಿ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಗಳಿಸಿದರು. ಆರಂಭಿಕ ಜೀವನ ಸೌಂದರ್ಯ ಅವರ ಬಾಲ್ಯದ ಹೆಸರು ಸೌಮ್ಯ. ಹುಟ್ಟಿದ್ದು ಜುಲೈ 18, 1972ರಂದು, ಕೋಲಾರದ ಮುಳುಬಾಗಿಲಿನಲ್ಲಿ. ಚಿತ್ರ ನಿರ್ಮಾಪಕ ಮತ್ತು ಲೇಖಕರಾಗಿದ್ದ ಸತ್ಯನಾರಾಯಣ ಅವರ ತಂದೆ. ವೃತ್ತಿ ಜೀವನ ಹಂಸಲೇಖ ನಿರ್ಮಿಸಿದ, ನಿರ್ದೇಶಿಸಿದ 1992ರ ಗಂಧರ್ವ ಚಿತ್ರ ಸೌಂದರ್ಯ ಅವರ ಮೊದಲ ಚಿತ್ರ. ಅದೇ ವರ್ಷ ಕನ್ನಡದ ನಾಲ್ಕು ಮತ್ತು ತೆಲುಗಿನ ಎರಡು ಚಿತ್ರಗಳಲ್ಲಿ ನಟಿಸಿದರು. 1992ರಿಂದ 2004ರವರೆಗೆ ಅವರು ನಟಿಸಿದ ಚಿತ್ರಗಳ ಸಂಖ್ಯೆ ಸುಮಾರು 140. ಕನ್ನಡ ಚಿತ್ರರಂಗದಲ್ಲಿ ಸೌಂದರ್ಯ ನಟಿಸಿದ ಮೊದಲ ಚಿತ್ರ ಕನ್ನಡದ ಗಂಧರ್ವ. ಸುಮಾರು 20ಕ್ಕೂ ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಸೌಂದರ್ಯ, ರವಿಚಂದ್ರನ್ ನಿರ್ದೇಶಿಸಿದ ಸಿಪಾಯಿ, ಪಿ. ವಾಸು ನಿರ್ದೇಶಿಸಿದ ಆಪ್ತಮಿತ್ರ ಚಿತ್ರಗಳ ನಟನೆಗೆ ಮೆಚ್ಚುಗೆ ಗಳಿಸಿದರು. ಸಿ. ಎನ್. ಮುಕ್ತಾ ಅವರ ಕಾದಂಬರಿ ಆಧರಿಸಿ ಮೂಡಿಬಂದ ದೋಣಿ ಸಾಗಲಿ ಚಿತ್ರದ ಕ್ಷಮಾ ಪಾತ್ರ ನಿರ್ವಹಿಸಿದ ಸೌಂದರ್ಯ, ಅದೇ ಚಿತ್ರಕ್ಕಾಗಿ ಕರ್ನಾಟಕ ಸರ್ಕಾರ ನೀಡುವ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದರು. 2002ರಲ್ಲಿ ಬಿಡುಗಡೆಯಾದ ದ್ವೀಪ ಚಿತ್ರವನ್ನು ನಿರ್ಮಾಣ ಮಾಡಿದ ಸೌಂದರ್ಯ, ರಾಷ್ಟ್ರೀಯ ಸ್ವರ್ಣಕಮಲ ಪ್ರಶಸ್ತಿ ಪಡೆದರು. ಅಣೆಕಟ್ಟೆಗಾಗಿ ಭೂಮಿ ನೀಡಬೇಕಾದ ಜನರ ಜೀವನದ ಸುತ್ತ ಹೆಣೆದ ಆ ಚಿತ್ರವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ತೆಲುಗು ಚಿತ್ರರಂಗದ ಆಧುನಿಕ ಸಾವಿತ್ರಿ ಎಂಬ ಹಿರಿಮೆ ಪಡೆದ ಸೌಂದರ್ಯ ತಮ್ಮ ವೃತ್ತಿ ಜೀವನದ ಹೆಚ್ಚು ಚಿತ್ರಗಳನ್ನು ತೆಲುಗಿನಲ್ಲಿ ಅಭಿನಯಿಸಿದ್ದಾರೆ. ಸಮಕಾಲೀನ ನಟರೆಲ್ಲರ ಜೊತೆ ಅಭಿನಯಿಸಿದ ಸೌಂದರ್ಯ, ನಟ ವಿಕ್ಟರಿ ವೆಂಕಟೇಶ್ ಜೊತೆಗೆ ಯಶಸ್ವೀ ತಾರಜೋಡಿ ಎನಿಸಿತ್ತು. ತಾವು ನಟಿಸಿದ 140ಕ್ಕೂ ಹೆಚ್ಚಿನ ಚಿತ್ರಗಳಲ್ಲಿ 80 ಚಿತ್ರಗಳು ತೆಲುಗಿನವೇ ಆಗಿವೆ. ಇತರೆ ಭಾಷೆಗಳಲ್ಲಿ ತೆಲುಗು, ಕನ್ನಡದ ಬಳಿಕ ಸೌಂದರ್ಯ ನಟಿಸಿದ ಹೆಚ್ಚು ಚಿತ್ರಗಳು ತಮಿಳಿನವು. ರಜನೀಕಾಂತ್ ಮುಂತಾದ ನಟರೊಂದಿಗೆ ನಟಿಸಿದ ಸೌಂದರ್ಯ, ಮಲಯಾಳಂ ಭಾಷೆಯಲ್ಲೂ ನಟಿಸಿದ್ದಾರೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ಸೂರ್ಯವಂಶ ಚಿತ್ರದಲ್ಲಿ ನಟಿಸಿದ್ದಾರೆ. ನಿಧನ ಸೌಂದರ್ಯ ಅವರು ಏಪ್ರಿಲ್ 17, 2004ರ ಶನಿವಾರದಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು. ಅಗ್ನಿ ಎವಿಯೇಷನ್‌ಗೆ ಸೇರಿದ ನಾಲ್ಕು ಆಸನಗಳ ಮಿನಿ ವಿಮಾನ(Cessna-180 single engine aircraft)ದಲ್ಲಿ ಆಂಧ್ರಪ್ರದೇಶದ ಕರೀಂನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಬೆಂಗಳೂರಿನ ಜಕ್ಕೂರು ನಿಲ್ದಾಣದಿಂದ ಮೇಲೇರಿದ ಕೆಲವೇ ನಿಮಿಷಗಳಲ್ಲಿ ಸೌಂದರ್ಯ ಇದ್ದ ಕಿರುವಿಮಾನ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಪತನವಾಗಿತ್ತು. ಸೌಂದರ್ಯ, ಅವರ ತಮ್ಮ ಸೇರಿದಂತೆ ವಿಮಾನದಲ್ಲಿದ್ದ ನಾಲ್ವರೂ ನಿಧನ ಹೊಂದಿದರು. ಕನ್ನಡದಲ್ಲಿ ಇವರು ನಟಿಸಿದ ಪ್ರಮುಖ ಚಿತ್ರಗಳು Nanna Thangi ಸಿಪಾಯಿ ತೂಗುವೆ ಕೃಷ್ಣನ ದ್ವೀಪ ನಾನು ನನ್ನ ಹೆಂಡ್ತೀರು ಶ್ರೀಮಂಜುನಾಥ ನಾಗದೇವತೆ ಆರ್ಯಭಟ ದೋಣಿ ಸಾಗಲಿ ಆಪ್ತಮಿತ್ರ ಶ್ರೀ ರೇಣುಕಾದೇವಿ ಯಲ್ಲಮ್ಮ ಉಲ್ಲೇಖನ ಕನ್ನಡ ಚಲನಚಿತ್ರ ನಟಿಯರು ಚಲನಚಿತ್ರ ನಟಿಯರು
2538
https://kn.wikipedia.org/wiki/%E0%B2%95%E0%B2%97%E0%B3%86%E0%B2%AE%E0%B3%81%E0%B2%B6
ಕಗೆಮುಶ
ಕಗೆಮುಶ ೧೯೮೦ ರಲ್ಲಿ ಹೊರಬಂದ ಅಕಿರಾ ಕುರೊಸಾವಾರವರು ನಿರ್ದೇಶಿಸಿದ ಜಪಾನ್ ದೇಶದ ಚಿತ್ರ. ಜಪಾನೀಸ್ ಭಾಷೆಯಲ್ಲಿ 'ಕಗೆಮುಶ' ಎಂದರೆ 'ನೇಪಥ್ಯದ ಯೋಧ' ಎಂಬರ್ಥ ಮೂಡುತ್ತದೆ. ಕಥೆಯ ಸಾರಾಂಶ ಈ ಚಿತ್ರದ ಕಥೆ ೧೫೭೦ರಿಂದ ೧೫೭೫ರವರೆಗೆ ಜಪಾನಿನಲ್ಲಿ ಓಡಾ ನೊಬುನಾಂಗಾ ಹಾಗು ತೊಕುಗಾವಾ ಇಯಾಸು ನಡೆಸಿದ ಕೊನೆಯ ಹಂತದ ಯುದ್ಧಗಳನ್ನು ಆಧರಿಸಲ್ಪಟ್ಟಿದೆ. ಜಪಾನ್ ದೇಶವನ್ನು ಒಂದುಗೂಡಿಸುವ ಮುನ್ನ ಇವರಿಬ್ಬರು ಹೋರಾಡಿದ ವಿರೋಧಿಗಳನ್ನು ಕುರಿತದ್ದು, ಈ ಚಿತ್ರ. ಟಕೇಡಾ ಶಿಂಗೆನ್, ಕಾಯ್ ನ ದೊರೆ ಇವರಿಬ್ಬರ ಪರಮ ಶತ್ರು. ೧೫೭೩ರಲ್ಲಿ ಟೊಗುಕಾವಾ ಅರಮನೆಯನ್ನು ಸಂಪೂರ್ಣವಾಗಿ ಶಿಂಗೆನ್ ನ ಸೈನಿಕರು ಸುತ್ತುವರಿದಿರುತ್ತಾರೆ. ವಿಜಯ ಇನ್ನೇನು ಹತ್ತಿರವಿರುವಂತೆಯೇ ವಿಪರ್ಯಾಸವೆಂಬಂತೆ ದೂರಗಾಮಿ ಬಂದೂಕಿನಿಂದ ಸಿಡಿದ ಗುಂಡೊಂದು ಶಿಂಗೆನ್ ಗೆ ತಗುಲಿ, ಶಿಂಗೆನ್ ಗಾಯಗೊಳ್ಳುತ್ತಾನೆ. ಗಾಯಗೊಂಡ ದೊರೆಯ ಕೊನೆಯ ಆಸೆ ಟೊಕುಗಾವಾ ಅರಮನೆಯನ್ನು ಆಕ್ರಮಿಸಿಕೊಳ್ಳುವುದಾದರೂ, ತನ್ನ ಸಹಚರರಿಗೆ ಒಗ್ಗಟ್ಟಿನಿಂದಿರಲು, ಟೊಕುಗಾವಾ ಅರಮನೆಯನ್ನು ಮತ್ತೊಮ್ಮೆ ಆಕ್ರಮಣ ಮಾಡದಿರಲು ಸಲಹೆ ನೀಡುತ್ತಾನೆ. ಮೂರು ವರ್ಷಗಳ ಕಾಲ ತನ್ನ ಸಾವನ್ನು ಗೌಪ್ಯವಾಗಿಡಿ ಎಂದು ಆಜ್ಞೆಯಿತ್ತು ಮರಣವನ್ನಪ್ಪುತ್ತಾನೆ. ಆ ಹಂತದಲ್ಲಿ ಶಿಂಗೆನ್ ಸಾವಿನ ಸುದ್ದಿ ಹಬ್ಬಿದಲ್ಲಿ ಇಡಿಯ ಟಕೇಡಾ ಪಂಗಡಕ್ಕೇ ವಿನಾಶ ಕಾದಿರುತ್ತದೆ. ಪರಾಕ್ರಮಿಯಾದ, ಶೂರನೆಂದು ಶತ್ರುಗಳಿಂದ ಗೌರವವನ್ನು ಪಡೆದ ಶಿಂಗೆನ್ ನ ನಾಯಕತ್ವ ಮಹತ್ವದ್ದಾಗಿರುತ್ತದೆ. ಶಿಂಗೆನ್ ನ ಕೊನೆಯ ಆಜ್ಞೆಯನ್ನು ಪೂರೈಸಲು ಅವನ ಕೆಳಗಿದ್ದ ಮಂತ್ರಿಗಳು (ಪಾಲಕರು - ಸಮುರಾಯ್) ಮರಣ ಹೊಂದಿದ ದೊರೆಯಂತೆಯೇ ಇರುವ ಕಳ್ಳನೊಬ್ಬನನ್ನು ಕರೆತರುತ್ತಾರೆ. ಇವನು ಮುಂದೆ ದೊರೆಯಂತೆ ನಟಿಸುವ ದೊರೆಯ ನಕಲು. ಟಕೇಡಾ ಪಂಗಡವನ್ನು ಹೊಡೆದುರುಳಿಸಲು ಅವಕಾಶವನ್ನು ಯಾವಾಗಲೂ ಎದುರು ನೊಡುತ್ತಿದ್ದ ಓಡಾ ನೊಬುನಾಂಗಾ ಹಾಗು ತೊಕುಗಾವಾ ಇಯಾಸು, ಶಿಂಗೆನ್ ಸಾವಿನ ಬಗ್ಗೆ ಗಾಳಿ ಸುದ್ದಿ ಕಿವಿಗೆ ಬಿದ್ದು, ಧೃಡಪಡಿಸಿಕೊಳ್ಳಲು ಗೂಢಚರರನ್ನು ಕಳುಹಿಸುತ್ತಾರೆ. ದೊರೆಯ ನೆರಳಂತೆ ಇರುವವನ ನಟನೆ ಯಶಸ್ವಿಯಾಗಿ ಕೆಲಕಾಲ ಎಲ್ಲರೂ ದೊರೆ ಬದುಕಿದ್ದಾನೆಂಬ ಸುಳ್ಳನ್ನು ನಂಬುತ್ತಾರೆ. ಈ ಮಧ್ಯೆ ಶಿಂಗೆನ್ ನ ಮಗ ಕತ್ಸುುಯೋರಿ ತನ್ನ ತಂದೆಯ ಕೊನೆಯ ಆಜ್ಞೆಯನ್ನು ಉಲ್ಲಂಘಿಸಿ ಟೊಗುಕಾವಾ ಅರಮನೆಯ ಮೇಲೆ ಮತ್ತೊಮ್ಮೆ ಆಕ್ರಮಣ ನಡೆಸಿ ಯಶಸ್ವಿಯೂ ಆಗುತ್ತಾನೆ. ಈ ‌ಯಶಸ್ಸಿನಿಂದ ಪ್ರೇರಿತರಾದ ಹಾಗೂ ದೊರೆಯ ನಕಲಿಯನ್ನು ಇನ್ನಷ್ಟು ದಿನ ಸಂಬಾಳಿಸುವ ಕಷ್ಟಕ್ಕೆ ಒಗ್ಗದ ಮಂತ್ರಿಗಳು ಪಟ್ಟಕ್ಕೆ ಉತ್ತರಾಧಿಕಾರಿಯಾಗಿಲ್ಲದಿದ್ದರೂ ಕೂಡ ಕತ್ಸುಯೋರಿಯನ್ನು ನಾಯಕನನ್ನಾಗಿ ಮಾಡುತ್ತಾರೆ (ಸಾವನ್ನಪ್ಪಿದ ದೊರೆ, ತನ್ನ ಮೊಮ್ಮಗನನ್ನು ಉತ್ತರಾಧಿಕಾರಿಯಾಗಿ ಈ ಹಿಂದೆ ಹೆಸರಿಸಿರುತ್ತಾನೆ). ಅಧಿಕಾರ ಪಡೆದ ಕೂಡಲೇ ಕತ್ಸುಯೋರಿ ತನ್ನೆಲ್ಲ ಸೈನ್ಯವನ್ನು ಒಗ್ಗೂಡಿಸಿ ಓಡಾ ನೊಬುನಾಂಗಾ ಹಾಗು ತೊಕುಗಾವಾ ಇಯಾಸುಗಳ ಮೇಲೆ ಯುದ್ಧಕ್ಕೆ ಹೊರಡುತ್ತಾನೆ. ಸುಸಜ್ಜಿವಾಗಿ ಭದ್ರವಾಗಿದ್ದ ಟಕೇಡಾ ರಾಜ್ಯವನ್ನು ತೊರೆದು ತಾನಾಗಿಯೇ ಯುದ್ಧಕ್ಕೆ ಹೋದರೆ ಸೋಲು ತಪ್ಪದು ಎಂದು ಮಂತ್ರಿಗಳು ಬುದ್ಧಿ ಹೇಳಿದರೂ ಕೇಳದೆ ಕತ್ಸುಯೋರಿ ಸೈನ್ಯವನ್ನು ಯುದ್ಧಕ್ಕೆ ಎಡೆ ಮಾಡುತ್ತಾನೆ. ಓಡಾ ನೊಬುನಾಂಗಾ ಹಾಗು ತೊಕುಗಾವಾ ಇಯಾಸುಗಳ ಸೈನ್ಯ ಚಿಕ್ಕದಾದರೂ, ಗುಂಡಿನ ದಾಳಿಯಿಂದ ಬೃಹತ್ತಾದ ಟಕೇಡಾ ಸೈನ್ಯವನ್ನು ನುಚ್ಚು ನೂರು ಮಾಡುತ್ತಾರೆ, ಚಿತ್ರ ಇವರುಗಳ ಸಾವಿನೊಂದಿಗೆ ಮುಗಿಯುತ್ತದೆ. ಹಿಂದೊಮ್ಮೆ ಶಿಂಗೆನ್ ರಾಜನ ನೆರಳಂತೆ ನಟಿಸಿದ ನಕಲಿ, ಕೊನೆಯಲ್ಲಿ ಶಿಂಗೇನ್ ಚಿಹ್ನೆಯಾದ 'ಪರ್ವತ, ಕಾಡು, ಜ್ವಾಲೆ' ಬಾವುಟವನ್ನು ಹಿಡಿಯ ಹೋಗಿ ಗುಂಡಿಗೆ ಬಲಿಯಾಗುವುದನ್ನು ಚಿತ್ರೀಕರಿಸಿರುವ ರೀತಿ ವಿಮರ್ಶಕರಿಂದ ಹೊಗಳಲ್ಪಟ್ಟಿದೆ. ವಿಪರ್ಯಾಸವೆಂಬಂತೆ ದೊರೆಗೆ ಅತೀವ ಗೌರವವನ್ನು ಹೊಂದಿದ್ದ ಅವನ ನೆರಳಾಗಿ ನಟಿಸಿದವನು ದೊರೆಯನ್ನು ಸಮಾಧಿ ಮಾಡಿದ ನದಿಯಲ್ಲೇ ಕೊನೆಯುಸಿರೆಳೆಯುತ್ತಾನೆ. ನಿರ್ದೇಶನ ಅಕಿರಾ ಕುರೋಸಾವಾರವರ ಮತ್ತೊಂದು ಚಿತ್ರವಿದು. ಹಲವು ಪ್ರಶಸ್ತಿಗಳನ್ನು ಈ ಚಿತ್ರ ಪಡೆಯಿತು. ಅಲ್ಲದೇ ವಿಮರ್ಶಕರಿಂದ ಕುರೊಸಾವಾರವರ ಅತ್ಯಂತ ವರ್ಣಭರಿತ ಚಿತ್ರವೆಂದು ಹೊಗಳಲ್ಪಟ್ಟಿದೆ. ಅಂತರರಾಷ್ಟ್ರೀಯ ಸಿನಿಮಾ ಕುರೋಸಾವಾ ಚಿತ್ರಗಳು
2543
https://kn.wikipedia.org/wiki/%E0%B3%A7%E0%B3%AF%E0%B3%A6%E0%B3%AA
೧೯೦೪
ಪ್ರಮುಖ ಘಟನೆಗಳು ಜನನ ಅಕ್ಟೋಬರ್ ೨ - ಲಾಲ್ ಬಹಾದುರ್ ಶಾಸ್ತ್ರಿ ಡಿಸೆಂಬರ್ ೨೯ - ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ರಾ.ಶಿವರಾಂ ಮರಣ ೧೯೦೪
2549
https://kn.wikipedia.org/wiki/%E0%B3%A7%E0%B3%AF%E0%B3%AC%E0%B3%AC
೧೯೬೬
೧೯೬೬ - ೨೦ನೆ ಶತಮಾನದ ೬೬ನೆ ವರ್ಷ ಪ್ರಮುಖ ಘಟನೆಗಳು ಜನನ ಜನವರಿ ೧೯ - ಕನ್ನಡದ ಸಾಹಿತಿಗಳಲ್ಲೊಬ್ಬರಾದ ಮಮತಾ ಜಿ.ಸಾಗರ ನಿಧನ ಜನವರಿ ೧೧ - ಲಾಲ್ ಬಹಾದುರ್ ಶಾಸ್ತ್ರಿ ಮೀರ್ ಸುಲ್ತಾನ್ ಖಾನ್ - ಚದುರಂಗ ಆಟಗಾರ. ಇವನ್ನೂ ನೋಡಿ ೧೯೬೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು ೧೯೬೬ ವರ್ಷಗಳು
2552
https://kn.wikipedia.org/wiki/%E0%B2%9C%E0%B2%A8%E0%B2%B5%E0%B2%B0%E0%B2%BF%20%E0%B3%A7%E0%B3%A7
ಜನವರಿ ೧೧
- ಜನವರಿ ತಿಂಗಳ ಹನ್ನೊಂದನೇ ದಿನ. ಪ್ರಮುಖ ಘಟನೆಗಳು ಜನನ ನಿಧನ ೧೯೬೬ - ಲಾಲ್ ಬಹಾದುರ್ ಶಾಸ್ತ್ರಿ ದಿನಗಳು ಜನವರಿ
2555
https://kn.wikipedia.org/wiki/%E0%B3%A7%E0%B3%AF%E0%B3%AC%E0%B3%AA
೧೯೬೪
ಪ್ರಮುಖ ಘಟನೆಗಳು ಜೂನ್ ೯ - ಲಾಲ್ ಬಹಾದುರ್ ಶಾಸ್ತ್ರಿ ಭಾರತದ ಎರಡನೇಯ ಪ್ರಧಾನಮಂತ್ರಿಯಾಗಿ ಸೇವೆ ಪ್ರಾರಂಭಿಸಿದರು ಜನನ ಎಪ್ರಿಲ್ ೭ - ರಸೆಲ್ ಕ್ರೋವ್, ನ್ಯೂ ಝೀಲಂಡ್‍ನಲ್ಲಿ ಹುಟ್ಟಿದ ನಟ ಮರಣ ೧೯೬೪
2556
https://kn.wikipedia.org/wiki/%E0%B2%9C%E0%B3%82%E0%B2%A8%E0%B3%8D%20%E0%B3%AF
ಜೂನ್ ೯
ಪ್ರಮುಖ ಘಟನೆಗಳು ೧೯೬೪ - ಲಾಲ್ ಬಹಾದುರ್ ಶಾಸ್ತ್ರಿ ಭಾರತದ ಎರಡನೇಯ ಪ್ರಧಾನಮಂತ್ರಿಯಾಗಿ ಸೇವೆ ಪ್ರಾರಂಭಿಸಿದರು ಜನನ ೧೯೪೯ - ಭಾರತದಲ್ಲಿ ಪೋಲೀಸ್ ಸೇವೆ ಸೇರಿದ ಮೊದಲ ಮಹಿಳೆ ಹಾಗೂ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತೆ ಕಿರಣ್ ಬೇಡಿ. ಮರಣ ದಿನಗಳು
2558
https://kn.wikipedia.org/wiki/%E0%B2%AE%E0%B3%8A%E0%B2%98%E0%B2%B2%E0%B3%8D%E2%80%8C%E0%B2%B8%E0%B2%BE%E0%B2%B0%E0%B2%BE%E0%B2%AF%E0%B3%8D
ಮೊಘಲ್‌ಸಾರಾಯ್
ಭಾರತದ ಎರಡನೇಯ ಪ್ರಧಾನಮಂತ್ರಿ ಲಾಲ್ ಬಹಾದುರ್ ಶಾಸ್ತ್ರಿಯವರು ಜೂನ್ ೯ರಂದು ಉತ್ತರ ಪ್ರದೇಶದ ಈ ಸ್ಥಳದಲ್ಲಿ ಹುಟ್ಟಿದರು ಭೂಗೋಳ
2559
https://kn.wikipedia.org/wiki/%E0%B2%88%E0%B2%9C%E0%B2%BF%E0%B2%AA%E0%B3%8D%E0%B2%9F%E0%B3%8D
ಈಜಿಪ್ಟ್
ಆಫ್ರಿಕ ಖಂಡದ ಒಂದು ದೇಶ. ವಿಶ್ವ ವಿಖ್ಯಾತ ಪಿರಮಿಡ್‍ಗಳಿಗೆ ಈ ದೇಶ ಮನೆ. ನೈಲ್ ನದಿಯ ತೀರದಲ್ಲಿರುವ ಈ ದೇಶ, ಬಹುಪಾಲು ಮರುಭೂಮಿಯಿಂದ ಆವೃತವಾಗಿದೆ. ಈಜಿಪ್ಟ್ ದೇಶ ಬ್ರಿಟಿಷರಿಂದ ಆಳಲ್ಪಟ್ಟು ಕೊನೆಗೆ ಜೂನ್ ೧೮, ೧೯೫೩ರಂದು ಸ್ವಾತಂತ್ರ್ಯವನ್ನು ಘೋಷಿಸಲಾಯಿತು. ಜೆನೆರಲ್ ಮೊಹಮ್ಮದ್ ನಗಿಬ್ ಅವರು ಮೊದಲ ಅಧ್ಯಕ್ಷರಾದರು. ಇತಿಹಾಸ ರಾಜಕೀಯ ಪ್ರಸ್ತುತ ರಾಜಧಾನಿ -ಕೈರೋ ಪ್ರಸ್ತುತ (2023) ಪ್ರಧಾನಿ -ಮೋಸ್ತಾಪಾ ಮೊಡ ಬೌಲಿ. ಅಧ್ಯಕ್ಷ -ಅಬ್ದೇಲ್ ಪತ್ತಾಹ್ ಎಲ್.ಸಿ ಸಿ ಕರೆನ್ಸಿ -ಈಜಿಪ್ತಿಯನ್ ಪೌಂಡ್ ಸಂಸ್ಕೃತಿ ಈಜಿಪ್ಟಿನ ಅಲಂಕಾರಿಕ ಸಮಾಧಿಗಳು ವಿಶೇಷ ಲೇಖನ-ಇಂಗ್ಲಿಷ್‍ನೀದ ಅನುವಾದಿತ:ಈಜಿಪ್ಟ್‌ನ ಪಿರಮಿಡ್‌ಗಳು ಈಜಿಪ್ಟ್‌ನ ಫೆರೋಗಳ ಆಳ್ವಿಕೆಯಲ್ಲಿ ಲಕ್ಸರ್ ಅತ್ಯಂತ ವೈಭವದ ನಗರ. ಗ್ರೀಕರಿಗೆ ಥೀಬ್ಸ್ ಎಂದೂ ಸ್ಥಳೀಯರಿಗೆ ವೆಸಿ ಅಥವಾ ನೇ ನಗರವೆಂದೂ ತಿಳಿದಿದ್ದ ಇದು ಆಗಿನ ಕಾಲದಲ್ಲಿ ಸಂಪದ್ಭರಿತವಾಗಿತ್ತು. ನೈಲ್‌ ನದಿಯ ಪೂರ್ವದಂಡೆಯಲ್ಲಿ ಲಕ್ಸರ್‌ ಇದ್ದರೆ, ವೆಸ್ಟ್ ಬ್ಯಾಂಕ್ ಎಂದು ಕರೆಯುವ ಪಶ್ಚಿಮ ದಂಡೆಯಲ್ಲಿ ಮೂರು ಮುಖ್ಯ ಸ್ಥಳಗಳಿವೆ: ಕಿಂಗ್ಸ್ ವ್ಯಾಲಿ, ಕ್ವೀನ್ಸ್ ವ್ಯಾಲಿ ಮತ್ತು ಹಟ್‌ಷೆಪ್‌ಸುಟ್ ರಾಣಿಯ ದೇವಸ್ಥಾನ. ನೈಲ್ ನದಿಯ ಪಶ್ಚಿಮ ದಂಡೆಯ ಮೇಲೆ ಇರುವ ಇದನ್ನು ‘ಸಿಟಿ ಆಫ್ ದ ಡೆಡ್’(ಮೃತನಗರ) ಎಂದು ಕರೆಯುತ್ತಾರೆ. ಅಲ್ಲಿ ಪ್ರತಿ ಮೂಲೆಯಲ್ಲೂ ದೊರೆಗಳ ಗೋರಿಗಳಿವೆ. ಮೊದಲನೆ ಸಮಾಧಿಯೊಳಗಿನ ತಂಪುನೆಲದಲ್ಲಿ ನಿಂತು ಚಿತ್ತಾರದಲಂಕಾರದ ಮಾಳಿಗೆಯನ್ನೂ ನಡುಮನೆಯನ್ನೂ ನೋಡಿ, ಇಂತಹ ಕಲ್ಲಿನ ಶವಸಂಪುಟಗಳನ್ನು ನಿರ್ಮಿಸಿ ಅವುಗಳನ್ನು ಬಹು ಕಲಾವಂತಿಕೆಯಿಂದ ಅಲಂಕರಿಸಿದ ಕೌಶಲ ಹಾಗೂ ಸಂಪತ್ತಿಗಾಗಿ ಇತಿಹಾಸಕಾರರು ಆಶ್ಚರ್ಯಪಟ್ಟಿದ್ದಾರೆ.http://www.prajavani.net/news/article/2016/12/11/458160.html ಭೂಗೋಳ ಪೋಟೋಗಳು ಚಿತ್ರ ನೋಡಿ ಸಿಂಧೂತಟದ ನಾಗರೀಕತೆ ANCIENT EGYPT ಉಲ್ಲೇಖ ನಾಗರೀಕತೆ
2561
https://kn.wikipedia.org/wiki/%E0%B2%95%E0%B3%88%E0%B2%B0%E0%B3%8B
ಕೈರೋ
ಕೈರೋ ( ಅಲ್-ಖಾಹಿರ), ಈಜಿಪ್ಟ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಅಲ್-ಖಾಹಿರ ಎಂದರೆ ವಿಜಯಿ ಎಂದು ಅರ್ಥ. ಇದು ಅರಬ್ ಪ್ರಪಂಚದ ಅತ್ಯಂತ ದೊಡ್ಡ ನಗರ ಹಾಗೂ ಆಫ್ರಿಕ ಖಂಡದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಈಜಿಪ್ಟ್ನ ಅರೇಬಿಕ್ ಭಾಷೆಯಲ್ಲಿ ಇದನ್ನು ಮಸ್ರ್ ಎಂದೂ ಕರೆಯುತ್ತಾರೆ. ಭೌಗೋಳಿಕ ನಗರದ ಪೂರ್ವಕ್ಕಿರುವ ಅಲ್ ಮೊಕತ್ತಂ ಮರಳುಗುಡ್ಡದಿಂದ ಕೈರೋ ನಗರದ, ನದಿಯ ಮತ್ತು ದೂರದ ಗೀಜದ ಪಿರಮಿಡ್‍ಗಳ ಸುಂದರ ದೃಶ್ಯವನ್ನು ಕಾಣಬಹುದು. ಪಶ್ಚಿಮ ಏಷ್ಯ ಪ್ರದೇಶದಲ್ಲೇ ಮತ್ತು ಇಡೀ ಆಫ್ರಿಕದಲ್ಲೇ ಇದು ಅತ್ಯಂತ ದೊಡ್ಡ ನಗರ. ಜನಸಂಖ್ಯೆ ಜನಸಂಖ್ಯೆ 10,230,350(೨೦೧೧) . ವಾಯುಗುಣ ಬಹುತೇಕ ಇಡೀ ವರ್ಷ ಕೈರೋದಲ್ಲಿ ಶುಷ್ಕ ವಾಯುಗುಣ ಇರುತ್ತದೆ. ಹಗಲಿನ ಉಷ್ಣತೆಯ ಸರಾಸರಿ ಜನವರಿಯಿಂದ ಜುಲೈ-ಆಗಸ್ಟ್‍ಗಳವರೆಗೆ 600 ಫ್ಯಾ-960ಫ್ಯಾ.ಗಳ ಅಂತರದಲ್ಲಿರುತ್ತದೆ. ಏಪ್ರಿಲ್-ಮೇ ತಿಂಗಳುಗಳಲ್ಲಿ ಮರಳು ತುಂಬಿದ ಬಿಸಿಗಾಳಿ ದಕ್ಷಿಣದಿಂದ ಬೀಸಿದಾಗ 1000 ಫ್ಯಾ.ಗೂ ಮೀರಿ ಇಲ್ಲಿ ಉಷ್ಣತೆ ಇರುವುದುಂಟು. ಬೇಸಗೆಯ ಗರಿಷ್ಠ ಉಷ್ಣತೆ ಸು.1080 ಫ್ಯಾ. ವರ್ಷದಲ್ಲಿ ಮೂರು ನಾಲ್ಕು ಬಾರಿ ಮಾತ್ರ-ಅದೂ ಚಳಿಗಾಲದಲ್ಲಿ-ಮಳೆಯಾಗುತ್ತದೆ. ಮೆಟ್ರೋಪಾಲಿಟನ್ ಪ್ರದೇಶ ನಾಗರಿಕ ವಿಮಾನ ನಿಲ್ದಾಣದಿಂದ ಈಶಾನ್ಯಕ್ಕೆ ಸಾಗುವ ರಸ್ತೆ ಕೈರೋದ ಆಧುನಿಕ ಉಪನಗರವಾದ ಹೆಲಿಯೊಪೊಲಿಸಿನ ಮೂಲಕ ಹಾದು, ಷರಿಯ ರ್ಯಾಮಿಸೀಸ್ ಮತ್ತು ಷರಿಯ ಅಲ್ ಗೇಷ್‍ಗಳಿಗೆ ಕವಲೊಡೆಯುತ್ತದೆ. ಷರಿಯ ರ್ಯಾಮಿಸೀಸ್‍ನ ಕೊನೆಯಲ್ಲಿ ರೈಲ್ವೆ ನಿಲ್ದಾಣದ ಎದುರಿಗೆ ಇರುವುದೇ ರಾಮಿಸೀಸ್ ಚೌಕ. ಇಲ್ಲಿ 2ನೆಯ ರ್ಯಾಮಿಸೀಸ್‍ನ ಬೃಹದಾಕಾರದ ಪುರಾತನ ಪ್ರತಿಮೆಯಿದೆ. ಮೆಂಫಿಸ್ ಸ್ಥಳದಿಂದ ಇಲ್ಲಿಗೆ ಈ ಪ್ರತಿಮೆಯನ್ನು 1955ರಲ್ಲಿ ತರಲಾಯಿತು. ಇಲ್ಲಿಂದ ಹೊರಡುವ ಮುಖ್ಯ ರಸ್ತೆಗಳಲ್ಲೊಂದಾದ ಷರಿಯ ಅಲ್ ಗುಮ್ಹುರಿಯದಲ್ಲಿ ಸಾಗಿದರೆ ಒಪೆರ ಚೌಕ ಸಿಗುತ್ತದೆ. ಸೂಯೆಜ್ ಕಾಲುವೆಯ ಆರಂಭೋತ್ಸವದ ಅಂಗವಾಗಿ ಇಲ್ಲಿ 1869ರಲ್ಲಿ ಒಪೆರ ಭವನದ ಆರಂಭವಾಯಿತು. ಒಪೆರ ಚೌಕದ ನಡುವೆ ಮಹಮ್ಮದ್ ಆಲೀ ಪಾಷನ ಮಗ ಇಬ್ರಾಹಿಮನ ಸುಂದರ ಪ್ರತಿಮೆಯಿದೆ. ಅದಕ್ಕೆದುರಾಗಿ ಕಾಂಟಿನೆಂಟಲ್-ಸವಾಯ್ ಹೋಟೆಲು. ಹತ್ತಿರದಲ್ಲೇ ಅಲ್ ಎಜ್ಬೇóಕಿಯ ಸಾರ್ವಜನಿಕ ಉದ್ಯಾನ. ಇದರೊಳಗೆ ಹಾಯ್ದು ಹೋಗುವ ಉದ್ದನೆಯ ಬೀದಿಯೇ ಷರಿಯ ಜುಲೈ 26. ಮುಂದೆ ಇದು ನದಿಯನ್ನು ದಾಟಿ ಜೆಜಿಕೀರ ದ್ವೀಪಕ್ಕೆ ಸಾಗುತ್ತದೆ. ಷರಿಯ ಸುಲಿಮಾನ್ ಪಾಷ ರಸ್ತೆಯಲ್ಲಿ ದಕ್ಷಿಣಾಭಿಮುಖವಾಗಿ ಸಾಗಿದರೆ ಸುಲಿಮಾನ್ ಪಾಷ ಚೌಕ ಸಿಗುತ್ತದೆ. ಅಲ್ಲಿಂದ ಪೂರ್ವಕ್ಕೆ ಷರಿಯ ಕಸ್ರ್ ಅಲ್ ನಿಲ್. ಈಜಿಪ್ಟಿನ ರಾಷ್ಟ್ರೀಯ ಬ್ಯಾಂಕ್ (1898) ಅಲ್ಲಿದೆ. ಷರಿಯ ಸುಲಿಮಾನ್ ಪಾಷದ ಆಚೆಗೆ ಕೆಲವು ಮುಖ್ಯ ಪತ್ರಿಕಾ ಕಚೇರಿಗಳಿವೆ. ಸುಲಿಮಾನ್ ಪಾಷ ಚೌಕಕ್ಕೂ ನೈಲ್ ನದಿಗೂ ನಡುವೆ ಇರುವುದೇ ವಿಮೋಚನಾ (ತಹ್ರಿರ್) ಚೌಕ. ಹತ್ತು ರಸ್ತೆಗಳು ಕೂಡುವ ಸ್ಥಳವಿದು. ಇದರ ದಕ್ಷಿಣ ಪಾಶ್ರ್ವದಲ್ಲಿ ಸರ್ಕಾರಿ ಕಚೇರಿಗಳ ಆಧುನಿಕ ಕಟ್ಟಡಗಳುಂಟು. ಅಲ್ಲೇ ಎದುರಿಗೆ 1902ರಲ್ಲಿ ಕಟ್ಟಲಾದ ಈಜಿಪ್ಟ್ ವಸ್ತುಸಂಗ್ರಹಾಲಯವಿದೆ. 1928ರಲ್ಲಿ ನಿರ್ಮಿತವಾದ ಆಧುನಿಕ ಕಲಾ ವಸ್ತುಸಂಗ್ರಹಾಲಯ ಇರುವುದೂ ಹತ್ತಿರದಲ್ಲೇ. ಆಧುನಿಕ ಕೈರೋಗೂ ಅಲ್ ಮೊಕತ್ತಂ ಬೆಟ್ಟಗಳಿಗೂ ನಡುವೆ 11 ರಿಂದ 16ನೆಯ ಶತಮಾನಗಳ ನಡುವಣ ಕಾಲದಲ್ಲಿ ನಿರ್ಮಿತವಾದ ಅರಬ್ ನಗರದ ಬಹುಭಾಗವಿದೆ. ವಿಶ್ವದ ಬೇರಾವುದೇ ನಗರದಲ್ಲಿಲ್ಲದಷ್ಟು ಅಧಿಕ ಸಂಖ್ಯೆಯಲ್ಲಿ ಅರಬ್ ವಾಸ್ತು ಸಂಪತ್ತು ಇಲ್ಲಿ ಸಾಂದ್ರೀಕೃತವಾಗಿದೆ. ಪಟ್ಟಿಮಾಡಲಾದ ಐತಿಹಾಸಿಕ ಸ್ಮಾರಕಗಳ ಸಂಖ್ಯೆಯೇ ಸುಮಾರು 400. ಇಲ್ಲಿ ಮಹಮ್ಮದ್ ಆಲಿ ಕಟ್ಟಿಸಿದ ಆಟೊಮನ್ ಶೈಲಿಯ ಸುಂದರ ಮಸೀದಿ ಇದೆ. ಇದರಲ್ಲಿ ಈತನನ್ನು 1849ರಲ್ಲಿ ಸಮಾಧಿ ಮಾಡಲಾಯಿತು. ಇದು 12ನೆಯ ಶತಮಾನದಲ್ಲಿ ಸಾಲಾದೀನ್ ಕಟ್ಟಿಸಿದ ಕೋಟೆಯೊಳಗಡೆ ಇದೆ. ಇಲ್ಲಿಯೇ 1946ರಲ್ಲಿ ಬ್ರಿಟಿಷ್ ಸೈನ್ಯ ಈಜಿಪ್ಟ್ ಸೈನ್ಯಕ್ಕೆ ಅಧಿಕಾರವನ್ನು ವಹಿಸಿಕೊಟ್ಟದ್ದು. ಸಾಲಾದಿನ್ ಚೌಕವಿರುವುದು ಈ ಕೋಟೆಯಿಂದ ಕೆಳಕ್ಕೆ. ಇಸ್ಲಾಂ ವಾಸ್ತುಶಿಲ್ಪಕ್ಕೆ ಹೆಸರಾದ, 1361ರಲ್ಲಿ ಸುಲ್ತಾನ್ ಹಸನ್ ಕಟ್ಟಿಸಿದ, ಮಸೀದಿ ಈ ಚೌಕದಿಂದಾಚೆಗಿದೆ. 1912ರಲ್ಲಿ ಕಟ್ಟಿ ಮುಗಿಸಿದ ಅಲ್ ರಿಫಾಇಯ ಆಧುನಿಕ ಮಸೀದಿ ಇದೆ. ದೊರೆ ಫೌದ್ ಮತ್ತು ಆತನ ಕುಟುಂಬದವರ ಸಮಾಧಿ ಇರುವುದು ಇಲ್ಲೇ. ಕಲೋಪಾಸಕರಿಗೆ, ಪಂಡಿತರಿಗೆ ಮತ್ತು ಪ್ರಾಕ್ತನ ಶಾಸ್ತ್ರಜ್ಞರಿಗೆ ಇಲ್ಲಿಯ ಕಟ್ಟಡಗಳು ಒಂದು ಆಕರ್ಷಣೆ. ಉತ್ತರ ಆಫ್ರಿಕದ ಫಾತಿಮೈಟ್ ಆಕ್ರಮಣಕಾರರು 970ರಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯ ಅಲ್ ಅಜ್ó ಹರ್ ಮಸೀದಿ ಇರುವುದು ಈ ಬಳಿಯಲ್ಲೇ. ಇಲ್ಲಿಗೇ ಚೀನ, ಮೊರಾಕೋ, ಇಂಡೋನೇಷ್ಯ ಮತ್ತು ಸೋಮಾಲಿ ಲ್ಯಾಂಡ್ ಮುಂತಾದ ದೇಶಗಳಿಂದ ಮುಸ್ಲಿಂ ನ್ಯಾಯಶಾಸ್ತ್ರ, ಕೊರಾನ್, ಅರಬೀ ಭಾಷೆ, ತತ್ತ್ವಶಾಸ್ತ್ರ ಮತ್ತು ಇತಿಹಾಸದ ಅಧ್ಯಯನಕ್ಕೆ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಅಹ್ಮದ್ ಇಬ್ನ್‍ಟುಲುನ್ 876-879ರಲ್ಲಿ ಕಟ್ಟಿಸಿದ ಪ್ರಸಿದ್ಧ ಮಸೀದಿ ಹಳೆಯ ನಗರದ ದಕ್ಷಿಣಕ್ಕಿದೆ. ಅಹ್ಮದ್ ಇಬ್ನ್‍ಟುಲುನ್ ಬಾಗ್ದಾದಿನಿಂದ ಬಂದವನು. ಆದ್ದರಿಂದ ಈ ಮಸೀದಿಯಲ್ಲೂ ಬಾಗ್ದಾದಿನ ಸುಂದರ ಕೆತ್ತನೆಯನ್ನು ಕಾಣಬಹುದು. ಮ್ಯಾಮೆಲೂಕರ ಗೋರಿಯ ಆಗ್ನೇಯಕ್ಕೆ ಇರುವ ಅಲ್ ಪುಸ್ತಾತ್ ಜನರಹಿತ ಭಾಗ. ಅರಬರು ಈ ಪ್ರದೇಶವನ್ನು ಗೆದ್ದಾಗ 641ರಲ್ಲಿ ಸ್ಥಾಪಿಸಲಾದ, ಅತ್ಯಂತ ಹಳೆಯ, ವಸತಿಯ ಪ್ರದೇಶವಿದು. ಅಲ್ ಪುಸ್ತಾತ್‍ಗೂ ನೈಲ್‍ನದಿಗೂ ನಡುವೆ ಹಳೆಯ ಕೈರೋ ಎಂದು ಕರೆಯುವ ಭಾಗವಿದೆ. ಇಲ್ಲಿ ಪುರಾತನ ಕಾಲದಿಂದಲೂ ಕಾಪ್ಟಿಕ್ ಕ್ರೈಸ್ತರು ವಾಸವಾಗಿದ್ದಾರೆ. ಇಲ್ಲಿ ಕಾಪ್ಟಿಕ್ ಶೈಲಿಯ ಹಳೆಯ ಚರ್ಚ್‍ಗಳೂ 1910ರಲ್ಲಿ ಸ್ಥಾಪಿಸಿದ ಕಾಪ್ಪಿಕ್ ಕಲಾ ವಸ್ತುಸಂಗ್ರಹಾಲಯವೂ ಇವೆ. ಇದರ ಹತ್ತಿರ ಬಿಜಾನ್‍ಟೈನ್ ರೋಮನರ ಹೆಬ್ಬಾಗಿಲಿದೆ. ಹಳೆಯ ಕೈರೋದಿಂದ ಆಧುನಿಕ ಕೈರೋಗೆ ಅನೇಕ ರಸ್ತೆಗಳುಂಟು. ಇವುಗಳಲ್ಲಿ ಷರಿಯ ಕಸ್ರ್ ಅಲ್ ಐನಿ ಎಂಬುದು ಮುಖ್ಯ. ಇದು ಕೈರೋ ವಿಶ್ವವಿದ್ಯಾಲಯ ವೈದ್ಯಕೀಯ ಶಾಲೆ ಮತ್ತು ಆ್ಯಂಟಿರಾಬಿಕ್ ಆಸ್ಪತ್ರೆಯನ್ನು ಹಾದು ಹೋಗುತ್ತದೆ. ನೈಲ್ ನದಿಗೂ ಈ ರಸ್ತೆಗೂ ನಡುವೆ ಕೆಲವು ದೂತಾವಾಸಗಳೂ ತೋಟದ ನಗರವೂ ಇವೆ. ಈ ರಸ್ತೆಯ ಇನ್ನೊಂದು ಬದಿಗೆ ಹಲವು ಸಚಿವಾಲಯಗಳೂ 1923ರಲ್ಲಿ ನಿರ್ಮಿತವಾದ ಪಾರ್ಲಿಮೆಂಟ್ ಭವನವೂ ಉಂಟು. ಇದರ ಹತ್ತಿರವೇ ಸಾದ್ ಜಾóಗ್‍ಲುಲ್ ಎಂಬ ಪ್ರಸಿದ್ಧ ರಾಷ್ಟ್ರಪ್ರೇಮಿಯ ಗೋರಿಯೂ ಭೂವಿಜ್ಞಾನ ವಸ್ತುಸಂಗ್ರಹಾಲಯವೂ ಅಮೆರಿಕನ್ ವಿಶ್ವವಿದ್ಯಾಲಯವೂ ಇವೆ. ಪೂರ್ವದಲ್ಲಿರುವ ಗುಮ್ಹೂರಿಯ ಚೌಕದಲ್ಲಿ ಅರಬ್ ಗಣರಾಜ್ಯಾಧ್ಯಕ್ಷರ ಅಧಿಕೃತನಿವಾಸವುಂಟು. ಇದು ಹಿಂದೆ ದೊರೆ ಫರೂಕನ ಅಬ್‍ದಿನ್ ಅರಮನೆಯಾಗಿತ್ತು. ದೊಡ್ಡ ಉದ್ಯಾನದ ನಡುವೆ ಇರುವ ಸುಂದರ ಕಟ್ಟಡವಿದು. ಅರಮನೆಗೆ ಹಿಂದೆ ಇರುವ ಆಹ್ಮೆದ್ ಮಹೆರ್ ಚೌಕದಲ್ಲಿ ಇಸ್ಲಾಮೀ ಕಲಾವಸ್ತು ಸಂಗ್ರಹಾಲಯವಿದೆ. ಖೆಡಿವ್ ಇಸ್ಮೇಲ್ 1869ರಲ್ಲಿ ಸ್ಥಾಪಿಸಿದ ಈಜಿಪ್ಷಿಯನ್ ಗ್ರಂಥಾಲಯ ಇರುವುದು ಇಲ್ಲೇ. ಈ ಗ್ರಂಥಾಲಯದಲ್ಲಿ ಪಶ್ಚಿಮ ಏಷ್ಯ ಪ್ರದೇಶದ ಅನೇಕ ಗ್ರಂಥಗಳೂ ನಾಣ್ಯಗಳೂ ಇವೆ. ಕೈರೋಗೆ ಎದುರಾಗಿ ನೈಲ್ ನದಿಯಲ್ಲಿರುವ ಜೆಜೀóರ ಮತ್ತು ರೋಡ ದ್ವೀಪಗಳು ಬಹುತೇಕ ನಗರಕ್ಕೆ ಸೇರಿದಂತೆಯೇ ಇವೆ. ಇವಕ್ಕೂ ನಗರಕ್ಕೂ ಸಂಬಂಧ ಕಲ್ಪಿಸುವ ಅನೇಕ ಸೇತುವೆಗಳುಂಟು. ಜೆಜೀóರದ ಉದ್ದ 3 3/4 ಮೈ., ಗರಿಷ್ಠ ಅಗಲ 1ಮೈ. ಇದರ ಉತ್ತರಭಾಗ ವಾಸದ ಮನೆಗಳಿಂದ ಕೂಡಿದೆ. ಮಧ್ಯಭಾಗದಲ್ಲಿ ಜೆಜೀóರ ಕ್ರೀಡಾಸಂಘ, ಕುದುರೆ ಪಂದ್ಯ ಮೈದಾನ, ಪೋಲೋ ಮೈದಾನ, ಮತ್ತು ಈಜುಕೊಳಗಳಿವೆ. ಡೇವಿಸ್ ಕಪ್ ವಲಯ ಪಂದ್ಯಗಳು ನಡೆಯುವ ಟೆನಿಸ್ ಆಟದ ಅಂಗಳಗಳು ಇರುವುದು ಇಲ್ಲೇ. ಪೂರ್ವ ತೀರದಲ್ಲಿರುವ ಉದ್ಯಾನವೊಂದು ವಿಶ್ರಾಂತಿ ಸ್ಥಳ. ದಕ್ಷಿಣ ಭಾಗದಲ್ಲಿ ಪ್ರದರ್ಶನಾವರಣವೂ ಕೃಷಿಸಚಿವಾಲಯಕ್ಕೆ ಸೇರಿದ ತೋಟಗಾರಿಕೆ ಪ್ರಯೋಗ ಕ್ಷೇತ್ರವೂ ಕ್ರೀಡಾಸಂಘಗಳೂ ಉದ್ಯಾನವೂ ಆಸ್ಪತ್ರೆಯೂ ಇವೆ. ರೋಡದ್ವೀಪ ಜೆಜೀóರಕ್ಕಿಂತ ಚಿಕ್ಕದು. ಪ್ರವಾಹಕ್ಕೆ ಎದುರು ದಿಕ್ಕಿನಲ್ಲಿ ರೋಡದಿಂದ ಒಂದು ಮೈಲಿ ದೂರದಲ್ಲಿದೆ. ಇಲ್ಲಿ ಆಸ್ಪತ್ರೆ, ಅರಮನೆ, ಉದ್ಯಾನಗಳು ಮತ್ತು ವಾಸಗೃಹಗಳಿವೆ. ರೋಡ ದ್ವೀಪದ ದಕ್ಷಿಣ ತುದಿಯಲ್ಲಿ 1,000 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನೈಲ್ ನದಿಯ ಪ್ರವಾಹವನ್ನಳೆಯುತ್ತಿದ್ದ ನೈಲೋಮಾಪಕವನ್ನು ಕಾಣಬಹುದು. ಈ ದ್ವೀಪಗಳ ಪಶ್ಚಿಮಕ್ಕೆ ನದಿಯ ದಂಡೆಯ ಮೇಲೆ, ಅನೇಕ ಗ್ರಾಮಗಳೂ ಉಪನಗರಗಳೂ ಉಂಟು. 1798ರಲ್ಲಿ ನೆಪೋಲಿಯನ್ ಮ್ಯಾಮಲೂಕರನ್ನು ಸೋಲಿಸಿದ ಸ್ಥಳವಾದ ಎಂಬಾಬ ಇಲ್ಲಿದೆ. ಇದು ಈಗ ಕಾರ್ಮಿಕ ವಸತಿ ಪ್ರದೇಶ. ದಕ್ಷಿಣಕ್ಕಿರುವ ಗೀಜû ಬಡಜನರಿರುವ ಹಳೆನಗರ. ಕೈರೋ ವಿಶ್ವವಿದ್ಯಾಲಯ ಇರುವುದೂ ಇಲ್ಲೇ. ವಿಶ್ವವಿದ್ಯಾಲಯಕ್ಕೆದುರಾಗಿ ನೈಲ್ ನದಿಗೆ ಹೊಸಸೇತುವೆ ಕಟ್ಟಿದ್ದಾರೆ. ಪಿರಮಿಡ್, ಸ್ಫಿಂಕ್ಸ್‍ಗಳಿಗೆ ಹೋಗುವ ಮುಖ್ಯದಾರಿ ಗೀಜûದ ಮುಖಾಂತರವೇ ಹಾದುಹೋಗುತ್ತದೆ. ಕೈರೋಗೆ ಕೆಲವು ಮೈಲಿಗಳ ದಕ್ಷಿಣದಲ್ಲಿ ಪೂರ್ವದಂಡೆಯ ಮೇಲೆ ಇರುವುದು ಅಲ್ ಮಾದಿ ವನೋಪನಗರ. ಇನ್ನೂ ದಕ್ಷಿಣದಲ್ಲಿ ಮರಳುಗಾಡಿನ ಅಂಚಿನಲ್ಲಿರುವ ಹಲ್‍ವಾನ್ ಗಂಧಕದ ಚಿಲುಮೆಗೆ ಪ್ರಸಿದ್ಧ. ಈಗ ಇಲ್ಲೂ ಕೆಲವು ಕೈಗಾರಿಕೆಗಳು ಸ್ಥಾಪಿತವಾಗಿವೆ. ಸಾಂಸ್ಕೃತಿಕ ಸಂಸ್ಥೆಗಳು ಕೈರೋದಲ್ಲಿ ಅನೇಕ ಬಗೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿವೆ. ಅವುಗಳಲ್ಲಿ ಮುಖ್ಯವಾದವು ಸಹಕಾರಿ ತರಬೇತು ಕೇಂದ್ರ, ಅರಬ್ಬೀ ಅಕಾಡೆಮಿ, ಅರಬ್ಬೀ ಸಂಗೀತ ಅಕಾಡೆಮಿ ಮತ್ತು ಕಲಾಸಂಘ. ಅಲ್ಲದೆ ವಾಕ್-ಶ್ರವಣ ನೆರವು ಕೇಂದ್ರವೂ ಹಿಂದುಳಿದವರ ಏಳಿಗೆಗಾಗಿ ಶ್ರಮಿಸುತ್ತಿರುವ ಅನೇಕ ಸ್ವಯಂ ನಿಯಂತ್ರಿತ ಶಾಲೆಗಳೂ ಆಸ್ಪತ್ರೆಗಳೂ ಇವೆ. ಅಲ್ ಅಜಾóರ್, ಕೈರೋ, ಗೀಜ, ಐನ್ ಷಾಮ್ಸ್ ಮತ್ತು ಅಮೆರಿಕನ್ ವಿಶ್ವವಿದ್ಯಾಲಯಗಳಿವೆ. ಚರ್ಚುಗಳೂ ಯಹೂದ್ಯರ ಆರಾಧನ ಮಂದಿರಗಳೂ ಉಂಟು. ಸಾರಿಗೆ ಕೈರೋ ಒಂದು ಮುಖ್ಯ ಸಾರಿಗೆ ಕೇಂದ್ರ. ಆಫ್ರಿಕದ ಪ್ರಥಮ ರೈಲ್ವೆಯನ್ನು ಜಾರ್ಜ್ ಸ್ಟೀಫನ್‍ಸನನ ಮಗ ರಾಬರ್ಟ್ ನಿರ್ಮಿಸಿದ. 1855ರಲ್ಲಿ ಅಲೆಕ್ಸಾಂಡ್ರಿಯದಿಂದ ಕೈರೋಗೆ ರೈಲ್ವೆ ಸಂಪರ್ಕ ಏರ್ಪಟ್ಟಿತು. ಕೈರೋ-ಅಲೆಕ್ಸಾಂಡ್ರಿಯ, ಕೈರೋ-ಅಲ್ ಫಯ್ಯೂಂ, ಅಲ್ ಮಾಡಿ-ಸೋಖ್ನ (ಕೆಂಪು ಸಮುದ್ರದ ದಂಡೆ) ರಸ್ತೆಗಳು ಮುಖ್ಯವಾದವು. ಕೈರೋ ನಗರದ ಉತ್ತರಕ್ಕೆ 16 ಮೈ. ದೂರದಲ್ಲಿ ಕೈರೋ ಅಂತರರಾಷ್ಟ್ರೀಯ ವಿಮಾನನಿಲ್ದಾಣವಿದೆ. ಸರಕು ಸಾಗಿಸಲು ನೈಲ್ ನದಿ ತುಂಬ ಉಪಯುಕ್ತ. ಇಲ್ಲಿಂದ ದೇಶದ ಇತರ ಸ್ಥಳಗಳಿಗೆ ರಸ್ತೆಸಾರಿಗೆ ಸಂಪರ್ಕವುಂಟು. ವಾಣಿಜ್ಯ ಕೈರೋದಲ್ಲಿ ಅನೇಕ ಕೈಗಾರಿಕೆಗಳಿವೆ. ಈಜಿಪ್ಟಿನ ಪಂಚವಾರ್ಷಿಕ ಯೋಜನೆಯಂತೆ 1950ರಲ್ಲಿ ಹಲ್‍ವಾನ್ ಪ್ರದೇಶದಲ್ಲಿ ಉಕ್ಕು, ಕಬ್ಬಿಣ, ಸಿಮೆಂಟ್ ಮುಂತಾದ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಅಲ್ ಬಿಜಾ ಉಪನಗರ ಅರಬ್ಬೀ ಭಾಷೆಯ ಚಲನಚಿತ್ರಗಳ ತಯಾರಿಕಾ ಕೇಂದ್ರ. ಹೊಗೆಸೊಪ್ಪು, ಚರ್ಮ, ರಸಾಯನವಸ್ತು, ಕಟ್ಟಡ ನಿರ್ಮಾಣ ಮುಂತಾದ ಕೈಗಾರಿಕೆಗಳೂ ಕೈರೋದಲ್ಲಿವೆ. ಈ ಕೈಗಾರಿಕೆಗಳೂ ಸರ್ಕಾರಿ ಕಚೇರಿಗಳು, ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು, ನ್ಯಾಯಾಲಯಗಳು ಮುಂತಾದವು ಅನೇಕರಿಗೆ ಉದ್ಯೋಗ ದೊರಕಿಸಿಕೊಟ್ಟಿವೆ. ಇತಿಹಾಸ ಕೈರೋದ ಇತಿಹಾಸ ಬಲು ಪುರಾತನವಾದ್ದು. ಹಳೆಯ ಈಜೆಪ್ಷಿಯನ್ ಸಾಮ್ರಾಜ್ಯದ ರಾಜಧಾನಿ ಮೆಂಫಿಸ್ ಇದ್ದದ್ದು ನೈಲ್ ನದಿಯ ಪಶ್ಚಿಮದಂಡೆಯ ಮೇಲೆ-ಜೆಜಿóೀóರಕ್ಕೆ ದಕ್ಷಿಣದಲ್ಲಿ. ಒಮ್ಮೆ ಪ್ರಸಿದ್ಧವಾಗಿದ್ದ ಈ ನಗರದಲ್ಲಿ ಹೆಚ್ಚಾಗಿ ಏನೂ ಉಳಿದಿಲ್ಲ. ಅನಂತರ ರೋಮನ್-ಬಿಜಾಟಿನ್ ನಗರವಾದ ಬ್ಯಾಬಿಲಾನ್ ಸ್ಥಾಪಿತವಾಯಿತು. ಇದು ಈಗಿನ ಹಳೆಯ ಕೈರೋ ಭಾಗ ಇರುವಲ್ಲಿ ಇತ್ತು. ಈಜಿಪ್ಟನ್ನು ಜಯಿಸಿದ ಅರಬ್ಬೀ ವೀರ ಅಮರ್ ಇಬ್ನ್-ಅಲ್ ಅಸ್ ಇದರ ಮಹಾದ್ವಾರವನ್ನು 641ರಲ್ಲಿ ಪ್ರವೇಶಿಸಿದ. 9ನೆಯ ಶತಮಾನದಲ್ಲಿ ಅರಬ್ ರಾಜ್ಯಪಾಲರು ಈಜಿಪ್ಟನ್ನು ಬಾಗ್ದಾದಿನಿಂದ ಆಳುತ್ತಿದ್ದರು. ಅವರ ಪೈಕಿ ಒಬ್ಬನಾದ ಅಹ್ಮದ್ ಇಬ್ನ್ ಟುಲನ್ ಈಜಿಪ್ಟಿನ ಪ್ರಥಮ ಸ್ವತಂತ್ರ ಮುಸ್ಲಿಂ ದೊರೆಯಾದ. ಅಲ್ ಕತಾಯಿಯನ್ನು ಸ್ಥಾಪಿಸಿದವನಾತನೇ. ಅವನು ಕಟ್ಟಿಸಿದ ಪ್ರಸಿದ್ಧ ಮಸೀದಿ ಈಗಲೂ ಅಲ್ಲಿದೆ. 10ನೆಯ ಶತಮಾನದಲ್ಲಿ ಫಾತಿಮೈಟರು ಈಜಿಪ್ಟನ್ನು ಆಕ್ರಮಿಸಿಕೊಂಡರು. ಅವರ ಸೇನಾಪತಿ ಚೌಹರ್ ಅಲ್ ರೂಮಿ ಅಲ್ ಕತಾಯ್ ಉತ್ತರದಲ್ಲಿ ಅಲ್ ಕಹೀರ (ವಿಜೇತ) ಎಂಬ ಹೆಸರಿನ ಹೊಸ ರಾಜಧಾನಿ ಕಟ್ಟಿಸಿದ. ಕೈರೋ ಎಂಬ ಹೆಸರು ಬಂದದ್ದು ಇದರಿಂದ. ಇದರ ಸುತ್ತಣ ಕೋಟೆಯ ಒಂದು ಭಾಗವೂ ಮೂರು ಹೆಬ್ಬಾಗಿಲುಗಳೂ ಇಂದಿಗೂ ಉಳಿದಿವೆ. ಅನಂತರ ಈಜಿಪ್ಟನ್ನು ಅಯುಬೆಟ್ಸರು ಆಳಿದರು (1169-1250). ಈ ವಂಶದ ಮೊದಲಿಗ ಹಾಗೂ ದೊಡ್ಡ ದೊರೆ ಸಲಾದಿನ್. ಈತ ದುರ್ಗದ ಗೋಡೆಯನ್ನು ವಿಸ್ತರಿಸಿದ. 1250 ರಿಂದ 1517ರ ವರೆಗೆ ಮ್ಯಾಮಲೂಕ್ ವಂಶದವರು ಆಳಿದರು. ಇವರು ಕ್ರೂರಿಗಳೂ ಅನೈತಿಕರೂ ಆಗಿದ್ದರೂ ಇವರ ಕಾಲದಲ್ಲಿ ಒಳ್ಳೊಳ್ಳೆಯ ಕಟ್ಟಡಗಳೂ ಮಸೀದಿಗಳೂ ನಿರ್ಮಿತವಾದುವು. ಇಂದಿನ ಲೆಬನನ್, ಇಸ್ರೇಲ್, ಜಾರ್ಡನ್, ಸಿರಿಯ, ಈಜಿಪ್ಟ್ ಇವೆಲ್ಲ ಇವರ ಆಳ್ವಿಕೆಗೆ ಒಳಪಟ್ಟಿದ್ದುವು. ಕೈರೋ ಮತ್ತು ಡಮಾಸ್ಕಸ್‍ಗಳು ಈ ಸಾಮ್ರಾಜ್ಯದ ಜಂಟಿ ರಾಜಧಾನಿಗಳಾಗಿದ್ದುವು. ಇವೆರಡರ ನಡುವೆ 500 ಮೈಲಿಗಳ ದೂರವಿದ್ದರೂ ಇವೆರಡಕ್ಕೂ ಪರಸ್ಪರ ಸಂಪರ್ಕ ಏರ್ಪಡಿಸಲಾಗಿತ್ತು. 1517ರಲ್ಲಿ ಕೈರೋ ನಗರ ಆಟೊಮನ್ ತುರ್ಕರಿಗೆ ವಶವಾಯಿತು. ಮ್ಯಾಮಲೂಕರ ಕೊನೆಯ ಸುಲ್ತಾನನ ದೇಹವನ್ನು ಅವರು ಜóುವೇಲ ಮಹಾದ್ವಾರಕ್ಕೆ ನೇಣುಹಾಕಿದರು. ಇವರ ಕಾಲದಲ್ಲಿ ಕಲೆ ತಲೆಯೆತ್ತದಂತಾಯಿತು. ಮುಂದಿನ 300 ವರ್ಷಗಳಲ್ಲಿ ಇಲ್ಲಿ ಅನೇಕ ಮಸೀದಿಗಳ ನಿರ್ಮಾಣವಾದರೂ ಇವೆಲ್ಲ ಬಹುತೇಕ ಒಂದೇ ತೆರನಾಗಿದ್ದುವು. 1798ರಲ್ಲಿ ಕೈರೋ ಫ್ರೆಂಚರ ವಶವಾಯಿತು. 1801ರಲ್ಲಿ ಬ್ರಿಟಿಷ್ ಮತ್ತು ತುರ್ಕಿ ಸೈನ್ಯಗಳು ಫ್ರೆಂಚರನ್ನು ಓಡಿಸಿ ಅದನ್ನು ತುರ್ಕಿಗೆ ಕೊಟ್ಟುವು. ಈಜಿಪ್ಟಿನ ಜನ 1805ರಲ್ಲಿ ಮಹಮದ್ ಅಲಿಯನ್ನು ತಮ್ಮ ರಾಜ್ಯಪಾಲನಾಗಿ ಆಯ್ಕೆ ಮಾಡಿದರು. ಈತ ಇನ್ನೂ ಅಳಿದುಳಿದಿದ್ದ, ತನಗೆ ತೊಡಕಾಗಿದ್ದ ಮ್ಯಾಮಲೂಕರನ್ನು ಕೊಂದು ತಾನೇ ಸರ್ವಾಧಿಕಾರಿಯಾದ. ಅಂದಿನಿಂದ ಕೈರೋ ಮತ್ತೆ ಒಂದು ಸ್ವತಂತ್ರ ರಾಜ್ಯದ ರಾಜಧಾನಿಯಾಯಿತು. ಕೈರೋವನ್ನು ಬ್ರಿಟಿಷರು ಆಕ್ರಮಿಸಿಕೊಂಡದ್ದು 1882ರಲ್ಲಿ. ಎರಡನೆಯ ಮಹಾಯುದ್ಧದಲ್ಲಿ ಅದು ಬ್ರಿಟಿಷ್ ಮಧ್ಯಪೂರ್ವ ಸೇನಾಧಿಪತ್ಯದ ಮುಖ್ಯ ಕಚೇರಿಯ ಸ್ಥಳವಾಗಿತ್ತು. ಬ್ರಿಟಿಷ್ ಸೇನೆ ಕೈರೋವನ್ನು ಬಿಟ್ಟು ತೆರಳಿದ್ದು 1946ರಲ್ಲಿ. ಉಲ್ಲೇಖಗಳು ಹೊರಗಿನ ಸಂಪರ್ಕಗಳು ವಿಕಿಟ್ರಾವೆಲ್‌ನಲ್ಲಿ ಕೈರೋ ಕೈರೋ ನಗರದ ಅಧಿಕೃತ ತಾಣ Cairo City Government Coptic Churches of Cairo Mosques in Cairo Photos and videos Cairo 360-degree full-screen images Cairo Travel Photos Pictures of Cairo published under Creative Commons License Call to Cairo Time-lapse film of Cairo cityscapes Cairo, Egypt —video by Global Post Photos of Cairo / Travel ಆಫ್ರಿಕ ಖಂಡದ ಪ್ರಮುಖ ನಗರಗಳು
2564
https://kn.wikipedia.org/wiki/%E0%B2%95%E0%B3%81%E0%B2%B5%E0%B3%88%E0%B2%A4%E0%B3%8D
ಕುವೈತ್
ಕುವೈತ್ () ಏಷ್ಯಾ ಖಂಡದ ಪರ್ಷಿಯನ್ ಕೊಲ್ಲಿಯ ಕರಾವಳಿಯಲ್ಲಿರುವ ಒಂದು ಸ್ವತಂತ್ರ ಅರಬ್ ದೇಶ. ಇದರ ದಕ್ಷಿಣದಲ್ಲಿ ಸೌದಿ ಅರೇಬಿಯ ಮತ್ತು ಉತ್ತರ ಹಾಗು ಪಶ್ಚಿಮದಲ್ಲಿ ಇರಾಕ್ ದೇಶಗಳಿವೆ. ಕುವೈತ್ ಎಂದರೆ ಅರಬಿಕ್ ಭಾಷೆಯಲ್ಲಿ ನೀರಿನ ಹತ್ತಿರ ಕಟ್ಟಿರುವ ಕೋಟೆ ಎಂದು ಅರ್ಥ. ಇದರ ಜನಸಂಖ್ಯೆ ಸುಮಾರು ೩.೧ ದಶಲಕ್ಷ. ವಿಸ್ತೀರ್ಣ 5,800 ಚ. ಮೈ. ಕುವೈತ್ ನಗರ ಇದರ ರಾಜಧಾನಿ ನಗರ. ಕರಾವಳಿಯ ಬಳಿ ಇರುವ ಅನೇಕ ದ್ವೀಪಗಳು ಇದಕ್ಕೆ ಸೇರಿವೆ. ಇವುಗಳ ಪೈಕಿ ಫೇಲಕಾ ಮುಖ್ಯವಾದದ್ದು ಈ ದ್ವೀಪದಲ್ಲಿ ಕ್ರಿ. ಪೂ. 2500ರಷ್ಟು ಪ್ರಾಚೀನವಾದ ಅವಶೇಷಗಳು ದೊರಕಿವೆ. ಕುವೈತ್ ಮರಳುಗಾಡಿನಿಂದ ಕೂಡಿದ ಪ್ರದೇಶ. ಕುವೈತ್ ನಗರದ ಪಶ್ಚಿಮಕ್ಕೆ 18 ಮೈ. ದೂರದಲ್ಲಿ ಅಲ್ ಜಹ್ರಾ ಎಂದು ಒಂದು ಸಣ್ಣ ಓಯಸಿಸ್ ಇದೆ. ಕುವೈತ್‍ನಲ್ಲಿ ಬೇಸಗೆಯಲ್ಲಿ ಸೆಕೆ ವಿಪರೀತ. ವಾತಾವರಣದಲ್ಲಿ ತೇವಾಂಶ ಬಲು ಕಡಿಮೆ, ಚಳಿಗಾಲದಲ್ಲಿ ವಾಯುಗುಣ ಹಿತಕರವಾಗಿದೆ. ಆದರೆ ಆಗಾಗ್ಗೆ ಬೀಸುವ ಬಿರುಗಾಳಿ ದೂಳಿನಿಂದ ಕೂಡಿರುತ್ತದೆ. ಮಳೆ ಸಾಮಾನ್ಯವಾಗಿ ಬಲು ಕಡಿಮೆ, ಅದೂ ಚಳಿಗಾಲದಲ್ಲಿ. ಚರಿತ್ರೆ ಕುವೈತ್ ಎನ್ನುವ ಹೆಸರು ಕುತ್ (ಸಣ್ಣಕೋಟೆ) ಎನ್ನುವುದರಿಂದ ಬಂದಿದೆ ಎಂದು ಪ್ರತೀತಿ. ಅನೇಕ ಬುಡಕಟ್ಟಿನ ಮೂರು ಗುಂಪುಗಳು ತಮ್ಮ ಅಲೆಮಾರಿ ಜೀವನವನ್ನು ತೊರೆದು ಕುವೈತ್‍ನಲ್ಲಿ ನೆಲಸಿದುವು. ಈಗಿನ ಅಸ್-ಸಬಾ ರಾಜವಂಶ ಆರಂಭವಾದ್ದು 1756ರಲ್ಲಿ. ಷೇಖ್ ಸಬಾ ಅಬ್ದುಲ್ ರಹೀಂ ಇದರ ಮೂಲಪುರುಷ. ಕುವೈತನ್ನು ತುರ್ಕಿಗಳು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಹವಣಿಸಿದಾಗ ಆಗ ಆಳುತ್ತಿದ್ದ ಷೇಖ್ 1899ರಲ್ಲಿ ಬ್ರಿಟನಿನೊಡನೆ ಒಂದು ಕೌಲು ಮಾಡಿಕೊಂಡ. ಬರ್ಲಿನ್-ಬಾಗ್ದಾದ್ ರೈಲ್ವೆಯನ್ನು ಅಲ್ಲಿಯ ವರೆಗೂ ವಿಸ್ತರಿಸಬೇಕೆಂಬ ಜರ್ಮನ್ ಅಪೇಕ್ಷೆಯನ್ನು ಆತ ತಳ್ಳಿಹಾಕಿದ. ತುರ್ಕಿಯೊಡನೆ 1914ರಲ್ಲಿ ಯುದ್ಧ ಆರಂಭವಾದಾಗ ಬ್ರಿಟನ್ನು ಕುವೈತನ್ನು ತನ್ನ ರಕ್ಷಣೆಗೆ ಒಳಪಟ್ಟ ಸ್ವತಂತ್ರರಾಜ್ಯವೆಂದು ಸಾರಿತು. ನಜ್ದ್ (ಇಂದಿನ ಸೌದಿ ಅರೇಬಿಯ) ಒಡನೆ ಕುವೈತಿನ ಸಂಬಂಧ ಸೌಹಾರ್ದಯುತವಾಗಿರಲಿಲ್ಲ. ಅದು ವಹಾಬಿಗಳ ಆಕ್ರಮಣಕ್ಕೆ ಒಳಗಾಗಿತ್ತು. ಕುವೈತಿಗೂ ನಜ್ದಿಗೂ ನಡುವೆ 1922ರಲ್ಲಿ ಉಕೇರ್ ಕೌಲು ಏರ್ಪಟ್ಟಿತ್ತು. ಕುವೈತಿನ ಆಗ್ನೇಯಕ್ಕೆ ಸು. 2,200 ಚ.ಮೈ. ನೆಲವನ್ನು ತಟಸ್ಥ ಪ್ರದೇಶವೆಂದು ಸಾರಲಾಯಿತು. ಇದೇ ರೀತಿ 1923 ರಲ್ಲಿ ಇರಾಕ್ ಮತ್ತು ಕುವೈತ್ ನಡುವಣ ಗಡಿಯ ನಿಷ್ಕರ್ಷೆಯೂ ಆಯಿತು. ಆದರೆ ಬ್ರಿಟನಿಗೂ ಕುವೈತಿಗೂ ನಡುವೆ 1899ರಲ್ಲಿ ಆಗಿದ್ದ ಕೌಲನ್ನು ಈ ದೇಶಗಳು ಪರಸ್ಪರ ಒಡಂಬಡಿಕೆಯಿಂದ ವಿಸರ್ಜಿಸಿ ಕುವೈತಿನ ಸಂಪೂರ್ಣ ಸ್ವಾತಂತ್ರ್ಯವನ್ನು ಸಾರಿದಾಗ (1961), ಕುವೈತ್ ಇರಾಕಿನ ಒಂದು ಭಾಗ ಎಂದು ಇರಾಕಿನ ಪ್ರಧಾನಿ ಘೋಷಿಸಿದ. ಕುವೈತಿಗೆ ಆಕ್ರಮಣದ ಅಪಾಯ ಒದಗಿ ಬಂತು. ಕುವೈತಿನ ದೊರೆ ಬ್ರಿಟನಿನ ಸೇನಾ ನೆರವು ಬೇಡಿದ. ಬ್ರಿಟನಿನ ನೆರವಿನ ಆಗಮನದಿಂದ ಇರಾಕಿನ ಕೈಕಟ್ಟಿದಂತಾಯಿತು. ಇರಾಕ್-ಕುವೈತ್ ಸಂಬಂಧ ಕ್ರಮೇಣ ಸುಧಾರಿಸಿತು. 1967ರ ಜೂನ್ 5ರಂದು ಇಸ್ರೇಲ್-ಈಜಿಪ್ಟ್‍ಗಳ ನಡುವೆ ಯುದ್ಧ ಸಂಭವಿಸಿತು. ಜೂನ್ 6ರಂದು ಇದು ಅಮೆರಿಕ ಮತ್ತು ಬ್ರಿಟನ್‍ಗಳಿಗೆ ಎಣ್ಣೆ ಸರಬರಾಜನ್ನು ನಿಲ್ಲಿಸಿತು. 1968ರಲ್ಲಿ ಇರಾನ್ ಮತ್ತು ಸಂಯುಕ್ತ ಅರಬ್ ಗಣರಾಜ್ಯಗಳ ನಡುವೆ ಮಧ್ಯಸ್ಥಿಕೆ ವಹಿಸಿತು. 1969ರ ಏಪ್ರಿಲ್‍ನಲ್ಲಿ ಸೌದಿ ಆರೇಬಿಯದ ದೊರೆ ಫೈಸಲ್ ಕುವೈತಿನ ವಿದೇಶಾಂಗ ಮಂತ್ರಿ ಅರಬ್ ರಾಜ್ಯಗಳ ಕೂಟಕ್ಕೆ ತಮ್ಮ ಬೆಂಬಲ ಸೂಚಿಸಿದ. ಕೃಷಿ ಕುವೈತಿನ ಕೃಷಿ ಬಹಳ ಸೀಮಿತವಾದುದು. ಇದು ಆಹಾರ ಹಣ್ಣು ತರಕಾರಿಗಳ ವಿಚಾರದಲ್ಲಿ ಬಹುಮಟ್ಟಿಗೆ ಪರವಾಲಂಬಿ. ಕೃಷಿ ಉತ್ಪನ್ನದಲ್ಲಿ ಹೆಚ್ಚಳ ಸಾಧ್ಯವಿಲ್ಲದಿರುವುದಕ್ಕೆ ಈ ರಾಷ್ಟ್ರದ ಭೌಗೋಳಿಕ ಪರಿಸ್ಥತಿಯೇ ಕಾರಣ. ಹೆಚ್ಚಾಗಿ ಮರಳು ಕಾಡಿನಿಂದ ಆವೃತವಾಗಿರುವ ಈ ದೇಶದಲ್ಲಿ ಅಂಜೂರ, ಧಾನ್ಯ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದರೂ ಪ್ರಗತಿ ಗಮನಾರ್ಹವಾಗಿ ನಡೆದಿಲ್ಲ. ಸರ್ಕಾರ 90 ಎಕರೆಗಳ ಪ್ರಾಯೋಗಿಕ ಭೂಮಿಯಲ್ಲಿ ತಾನೇ ಕೃಷಿ ನಡೆಸುತ್ತಿದ್ದು, ಹೊಸ ಹೊಸ ವಿಧಾನಗಳ ಬಗ್ಗೆ ಪ್ರಚಾರಮಾಡುತ್ತಿದೆ. ತನ್ನ ಜಮೀನಿನಲ್ಲಿ ಹೈನು ಉದ್ಯಮವನ್ನು ಸಹ ಸರ್ಕಾರ ಕೈಗೊಂಡಿದೆ. ಇದರಿಂದ ಉತ್ತೇಜಿತರಾಗಿರುವ ಖಾಸಗಿ ಜನರು ಸಹ ಪಶುಪಾಲನೆಯ ಉದ್ಯಮವನ್ನು ಈಚೆಗೆ ಹೆಚ್ಚು ಹೆಚ್ಚಾಗಿ ಕೈಗೊಳ್ಳುತ್ತಿದ್ದಾರೆ ನೀರಿನ ಕೊರತೆಯೇ ಈ ದೇಶದ ಕೃಷಿ ವಿಸ್ತರಣೆಗಿರುವ ದೊಡ್ಡ ಸಮಸ್ಯೆ. ಆದರೆ ಷಾಟ್-ಅಲ್-ಅರಬ್ ನೀರಾವರಿ ಯೋಜನೆಯಿಂದಾಗಿ ನೀರು ದೊರೆಯುವಂತಾದಾಗ ಇಲ್ಲಿಯ ಕೃಷಿ ಉದ್ಯಮ ವಿಸ್ತಾರವಾಗುವ ಸಾಧ್ಯತೆ ಬಹಳ ಇದೆ. ಈ ಯೋಜನೆಯಿಂದಾಗಿ 7 ಕೋಟಿ ಗ್ಯಾಲನ್ ನೀರು ಕೃಷಿ ಹಾಗೂ ತೋಟಗಾರಿಕೆಗೆ ಸರಬರಾಜಾಗುವ ಸಾಧ್ಯತೆ ಇದೆ. ಅಂತರ್ಜಲ ನಿಕ್ಷೇಪಗಳನ್ನು ಪತ್ತೆಹಚ್ಚಲಾಗಿದೆ. ಕೃಷಿ ವಿಸ್ತರಣೆ, ಜಲ ಲಭ್ಯತೆ ಮತ್ತು ಭೂಸಾರಪರೀಕ್ಷೆಗಳಿಗಾಗಿ ಸರ್ಕಾರ ಒಂದು ತೀವ್ರ ಸಮೀಕ್ಷೆ ಕೈಗೊಂಡಿದೆ. ಮತ್ಸ್ಯೋದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿದೆ. ಕೈಗಾರಿಕೆಗಳು ತೈಲಕೈಗಾರಿಕೆಗೆ ಕುವೈತಿನಲ್ಲಿ ಪ್ರಥಮಸ್ಥಾನ. ಇತರ ಉತ್ಪಾದನ ಕೈಗಾರಿಕೆಗಳು ಈ ಅರ್ಥವ್ಯವಸ್ಥೆಯಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಬೆಳೆದಿಲ್ಲ. ಕುವೈತಿನಲ್ಲಿ ಉತ್ಪಾದಿತವಾಗುವ ತೈಲದಲ್ಲಿ ಸುಮಾರು 92% ರಷ್ಟು ಬ್ರಿಟಿಷ್-ಅಮೆರಿಕನ್ ತೈಲಸಂಸ್ಥೆಗಳ ಅಧೀನದಲ್ಲಿದೆ. ತೈಲಕ್ಷೇತ್ರದಿಂದ ರಾಷ್ಟ್ರೀಯ ಉತ್ಪನ್ನಕ್ಕೆ ಸೇ. 61ರಷ್ಟು ಕಾಣಿಕೆ ಸಲ್ಲುತ್ತದೆ. ಸರ್ಕಾರದ ಆದಾಯದ ಸೇ. 94ರಷ್ಟು ಬರುವುದು ತೈಲಕ್ಷೇತ್ರದಿಂದ. ತೈಲ ಉತ್ಪಾದನೆ ಮತ್ತು ಅದರ ವಿತರಣೆಯಲ್ಲಿ 7,000 ಜನ ಉದ್ಯೋಗಿಗಳಿದ್ದಾರೆ. ಒಟ್ಟು ಕಾರ್ಮಿಕರಲ್ಲಿ ಸೇ. 3.8ಕ್ಕೆ ಈ ರಂಗ ಉದ್ಯೋಗವನ್ನೊದಗಿಸುತ್ತಿದೆ. 1967ರಲ್ಲಿ ಕುವೈತಿನ ಪರಿಷ್ಕøತ ತೈಲ ಉತ್ಪಾದನೆ 99,13.20.000 ಅಮೆರಿಕನ್ ಬ್ಯಾರೆಲ್‍ಗಳಷ್ಟಿತ್ತು. ಇದು ಪ್ರಪಂಚದ ಒಟ್ಟು ಉತ್ಪಾದನೆಯ ಸೇ. 8 ರಷ್ಟು. ಈ ಉತ್ಪಾದನೆಯಲ್ಲಿ ಸುಮಾರು 93.4 ಕೋಟಿ ಬ್ಯಾರೆಲ್‍ಗಳನ್ನುರಫ್ತುಮಾಡಲಾಯಿತು. ತೈಲಕ್ಷೇತ್ರದಿಂದ 1966-67ರಲ್ಲಿ ಸರ್ಕಾರಕ್ಕೆ 23.19 ಕೋಟಿ ಕುವೈತ್ ದೀನಾರ್‍ಗಳ ವರಮಾನ ಬಂತು. ತೈಲ ಉತ್ಪಾದನೆಯಲ್ಲಿ ಕುವೈತಿನದು ವಿಶ್ವದಲ್ಲಿ ನಾಲ್ಕನೆಯ ಸ್ಥಾನ. ರಫ್ತಿನಲ್ಲಿ ಎರಡನೆಯ ಸ್ಥಾನ. ತೈಲ ಉತ್ಪಾದನ ವೆಚ್ಚ ಸಹ ಈ ದೇಶದಲ್ಲಿ ಬಹಳ ಕಡಿಮೆ. ತೈಲಕೈಗಾರಿಕೆಯನ್ನುಳಿದು ಇತರ ಕೈಗಾರಿಕೆಗಳು ಕುವೈತಿನಲ್ಲಿ ಹೆಚ್ಚಾಗಿ ಪ್ರಗತಿ ಹೊಂದಿಲ್ಲ. ಕಚ್ಚಾಸಾಮಗ್ರಿಯ ಕೊರತೆ, ನೀರಿನ ಅಭಾವ, ಕಾರ್ಮಿಕರ ವೇತನದ ಹೆಚ್ಚಳ-ಇವು ಮುಖ್ಯ ಕಾರಣಗಳು. ಇತರ ಕೈಗಾರಿಕೆಗಳಲ್ಲಿ ಇಟ್ಟಿಗೆ, ಹೆಂಚು, ಶೀತೋಪಕರಣಗಳು, ಸಣ್ಣ ಎಂಜಿನಿಯರಿಂಗ್ ವಸ್ತುಗಳು, ಸಿಮೆಂಟ್, ಉಪ್ಪು, ಕ್ಲೋರಿನ್ ಮತ್ತು ಅಮೃತಶಿಲೆ-ಇವು ಮುಖ್ಯ. ಕೈಗಾರಿಕಾ ರಂಗದಲ್ಲಿ ಕುವೈತಿನ ಇತ್ತೀಚಿನ ಗಮನಾರ್ಹ ಸಾಧನೆಯೆಂದರೆ, ಅದು 1966ರಲ್ಲಿ ಸ್ಥಾಪಿಸಿದ ಪೆಟ್ರೋಕೆಮಿಕಲ್ ಗುಂಪಿನ ಈ ಬೃಹತ್ ಉದ್ಯಮ. ಈ ಗುಂಪಿನ ಕೈಗಾರಿಕೆಗಳು ಅಮೋನಿಯ, ಯೂರಿಯ, ಸಲ್ಫ್ಯೂರಿಕ್ ಆಮ್ಲ, ಅಮೋನಿಯಂ ಸಲ್ಫೇಟ್ ಉತ್ಪಾದಿಸುತ್ತವೆ. 1967ರಲ್ಲಿ ತೈಲಶುದ್ಧೀಕರಣ ಉದ್ಯಮವೊಂದು ಸ್ಥಾಪಿತವಾಯಿತು. ಕುವೈತ್‍ನಲ್ಲಿ ವಿಶ್ವದಲ್ಲಿಯೇ ದೊಡ್ಡದಾದ ಸಮದ್ರಜಲಬಟ್ಟಿ ಇದೆ. ಹೊಸಕೈಗಾರಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರ ಬಹುವಾಗಿ ಶ್ರಮಿಸುತ್ತಿದೆ. ಕಟ್ಟಡ ಉದ್ಯಮವೂ ಬೆಳೆಯುತ್ತಿದೆ. ದೋಣಿ ಕಟ್ಟುವುದು ಇನ್ನೊಂದು ಮುಖ್ಯಉದ್ಯಮ. ಆಡಳಿತ ಮತ್ತು ಸಾಮಾಜಿಕ ಸ್ಥಿತಿ ಕುವೈತ್ ರಾಜ್ಯದ ಹೆಚ್ಚು ಸಂಖ್ಯೆಯ ಜನ ರಾಜಧಾನಿಯಾದ ಕುವೈತ್‍ನಲ್ಲಿ ವಾಸಿಸುತ್ತಾರೆ. ಇವರಲ್ಲಿ ಅಕ್ಕಪಕ್ಕದ ರಾಜ್ಯಗಳಿಂದ ಬಂದ ಅರಬರೂ ಇರಾನಿಯನರೂ ಪಾಕಿಸ್ತಾನರೂ ಭಾರತದವರೂ ಬ್ರಿಟಿಷ್ ಮತ್ತು ಅಮೆರಿಕನರೂ ಇದ್ದಾರೆ. ಕುವೈತಿನ ಷೇಖನೇ ಆ ದೇಶದ ಪ್ರಧಾನ ಮಂತ್ರಿ. 4 ಮಂದಿ ಚುನಾಯಿತರೂ ಷೇಖರಿಂದ ನೇಮಕವಾದ 10 ಮಂದಿ ಸದಸ್ಯರೂ ಇರುವ ಒಂದು ಮಂತ್ರಿ ಮಂಡಲವಿದೆ. 21 ವರ್ಷ ತುಂಬಿದ ಗಂಡಸರೆಲ್ಲ ಓಟುಮಾಡುವ ಹಕ್ಕನ್ನು ಪಡೆದಿದ್ದಾರೆ. ಅಲ್ಲಿ ಚುನಾಯಿತ ಪ್ರಜಾಪ್ರತಿನಿಧಿ ಸಭೆಯಿದೆ. ಮಂತ್ರಿಮಂಡಲದ ಸಹಾಯಕ್ಕೆ ಸುಮಾರು 4,000 ಸರ್ಕಾರಿ ಅಧಿಕಾರಿಗಳಿದ್ದಾರೆ. ರಾಜ್ಯವನ್ನು ಕುವೈತ್ (ರಾಜಧಾನಿ), ಅಹಮದಿ ಮತ್ತು ಹವಾಲಿ ಎಂಬುದಾಗಿ ಮೂರು ಆಡಳಿತ ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿದೆ. ಕುವೈತ್ ಆಯವ್ಯಯದ ಮುಂಗಡಪತ್ರವನ್ನು ಪ್ರಜಾಪ್ರತಿನಿಧಿಸಭೆಯಲ್ಲಿ ಮಂಡಿಸ ಬೇಕು. ಆದರೆ ಆಯವ್ಯಯದ ಮುಂಗಡ ಪತ್ರವನ್ನಾಗಲಿ, ಅಭಿವೃದ್ಧಿ ಕಾರ್ಯಕ್ರಮಗಳನ್ನಾಗಲಿ ಸಾರ್ವಜನಿಕವಾಗಿ ಪ್ರಕಟಪಡಿಸುವುದಿಲ್ಲ. ದೇಶದಲ್ಲಿ ಉಚಿತ ಶಿಕ್ಷಣವೂ ವೈದ್ಯಕೀಯ ಸೌಲಭ್ಯವೂ ಜಾರಿಯಲ್ಲಿವೆ. ರಾಜ್ಯಾದಾಯವನ್ನು ರಸ್ತೆಗಳು, ಬಂದರುಗಳು ಮತ್ತು ಕಟ್ಟಡಗಳ ನಿರ್ಮಾಣಕ್ಕೂ ವಿದ್ಯಾಭ್ಯಾಸ, ವೈದ್ಯಕೀಯ ಸೌಲಭ್ಯ, ನೀರು ಮತ್ತು ವಿದ್ಯುಚ್ಚಕ್ತಿಯನ್ನು ಒದಗಿಸಲೂ ಬಳಸುತ್ತಾರೆ. ಕುವೈತ್‍ನ ನಾಣ್ಯ ಕುವೈತ್ ದೀನಾರ್. ಕುವೈತ್ ನಗರ ಅತ್ಯಂತ ಆಧುನಿಕವಾದ್ದು. ಅಗಲವಾದ ರಸ್ತೆಗಳು, ಹೊಸ ಮಾರುಕಟ್ಟೆ ಮತ್ತು ದೊಡ್ಡ ಕಟ್ಟಡಗಳಿಂದ ಕೂಡಿದ ಈ ನಗರದ ಬಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಒಳ್ಳೆಯ ಬಂದರು. ತೈಲಾದಾಯದ ವಿತರಣೆಯ ಮುಖ್ಯ ಮಾಧ್ಯಮ ಕುವೈತ್ ಸರ್ಕಾರ. ಸರ್ಕಾರವೇ ಅತ್ಯಂತ ಹೆಚ್ಚಿನ ಉದ್ಯೋಗಗಳನ್ನು ನೇಮಿಸಿಕೊಂಡಿರುವ ಸಂಸ್ಥೆ. ಉದ್ಯೋಗಸ್ಥರಲ್ಲಿ ಸೇ. 46ರಷ್ಟಕ್ಕೆ ಸರ್ಕಾರ ಉದ್ಯೋಗವನ್ನೊದಗಿಸಿದೆ. ಕುವೈತ್ ಸರ್ಕಾರ ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಕಾಗಿ ತನ್ನ ಪ್ರಜೆಗಳ ಮೇಲೆ ಮಾಡುತ್ತಿರುವ ತಲಾ ವೆಚ್ಚ ಪ್ರಪಂಚದಲ್ಲೇ ಅತ್ಯಧಿಕವಾದ್ದು ಎಂದು ಅಂದಾಜುಮಾಡಲಾಗಿದೆ. ಇಡೀ ಪಶ್ಚಿಮ ಏಷ್ಯದಲ್ಲಿ ಕುವೈತ್‍ನ ನೌಕರರಿಗೆ ದೊರೆಯುವ ವೇತನ ಗರಿಷ್ಠ ಮಟ್ಟದ್ದು. ತನ್ನ ಕಾರ್ಯಕ್ರಮಗಳ ಪ್ರಗತಿಗಾಗಿ ಕುವೈತ್ ಪಂಚವಾರ್ಷಿಕ ಯೋಜನೆಯೊಂದನ್ನು ರೂಪಿಸಿಕೊಂಡಿದೆ. ವರ್ಷಕ್ಕೆ ಸೇ. 5ರ ಬೆಳೆವಣಿಗೆ ಸಾಧಿಸುವುದು ಯೋಜನೆಯ ಗುರಿ. ಸಾರಿಗೆ ರಸ್ತೆಸಾರಿಗೆ, ವಿಮಾನಸಾರಿಗೆ ಮತ್ತು ಜಲಸಾರಿಗೆ ಕುವೈತ್ ಅರ್ಥವ್ಯವಸ್ಥೆಯಲ್ಲಿ ಬಹಳ ಮುಖ್ಯವಾದವು. ರೈಲುಮಾರ್ಗವಿಲ್ಲ. ಪಶ್ಚಿಮ ಏಷ್ಯದ ಬಂದರುಗಳಲ್ಲಿ ಕುವೈತ್‍ಗೆ ಮುಖ್ಯವಾದ್ದು. ಅನೇಕ ಅಂತರರಾಷ್ಟ್ರೀಯ ವಿಮಾನಸಂಸ್ಥೆಗಳು ಕುವೈತ್‍ಗೆ ಸಂಪರ್ಕ ಕಲ್ಪಿಸಿವೆ. ವಾಣಿಜ್ಯ ವಿದೇಶೀ ವಾಣಿಜ್ಯರಂಗದಲ್ಲಿ ಕುವೈತ್ ಯಾವ ತೊಡಕನ್ನೂ ಎದುರಿಸುತ್ತಿಲ್ಲ. ತನ್ನ ಆಮದಿಗೆ ಬೇಕಾದ ಹಣಕ್ಕೆ ಯಾವ ಕೊರತೆಯೂ ಇಲ್ಲ. ಆಹಾರ, ಯಂತ್ರಸಾಮಗ್ರಿ ಮತ್ತು ಸಾರಿಗೆ ಸಲಕರಣೆಗಳನ್ನು ಮುಖ್ಯವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ, ಗ್ರೇಟ್ ಬ್ರಿಟನ್, ಜಪಾನ್ ಮತ್ತು ಜರ್ಮನಿಗಳಿಂದ ಅದು ಆಮದು ಮಾಡಿಕೊಳ್ಳುತ್ತದೆ. ತೈಲ ಇದರ ಮುಖ್ಯ ರಫ್ತುವಸ್ತು. ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಕುವೈತ್‌ನ ಎಮಿರ್‌ನ ಅಧಿಕೃತ ತಾಣ ವಿಕಿಟ್ರಾವೆಲ್‌ನಲ್ಲಿ ಕುವೈತ್ ಕುವೈತ್ ಮಾಹಿತಿ ಕೋಶ ಏಷ್ಯಾ ಖಂಡದ ದೇಶಗಳು ಮಧ್ಯ ಪ್ರಾಚ್ಯ
2566
https://kn.wikipedia.org/wiki/%E0%B2%B8%E0%B2%BF%E0%B2%B0%E0%B2%BF%E0%B2%AF%E0%B2%BE
ಸಿರಿಯಾ
ಸಿರಿಯಾ (), ಅಧಿಕೃತವಾಗಿ ಸಿರಿಯಾ ಅರಬ್ ಗಣರಾಜ್ಯ (), ನೈಋತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ. ಇದರ ಪಶ್ಚಿಮದಲ್ಲಿ ಲೆಬನನ್ ಮತ್ತು ಮೆಡಿಟರೇನಿಯನ್ ಸಮುದ್ರ; ನೈಋತ್ಯದಲ್ಲಿ ಇಸ್ರೇಲ್; ದಕ್ಷಿಣದಲ್ಲಿ ಜೋರ್ಡನ್; ಪೂರ್ವದಲ್ಲಿ ಇರಾಕ್ ಮತ್ತು ಉತ್ತರದಲ್ಲಿ ಟರ್ಕಿ ದೇಶಗಳು ಇವೆ. ಇದು ಏಪ್ರಿಲ್ ೧೯೪೬ರಲ್ಲಿ ಫ್ರಾನ್ಸ್ ದೇಶದಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ಬಾತ್ ಪಾರ್ಟಿ ದೇಶವನ್ನು ಆಳುತ್ತಿದೆ. ಇದರ ರಾಜಧಾನಿ ಡಮಾಸ್ಕಸ್. ನೋಡಿ ಹೊರ ಸಂಪರ್ಕ ಸಿರಿಯನ್ ಅಂತರ್ಯುದ್ಧ:ಸುಧೀಂದ್ರ ಬುಧ್ಯ;ದುಷ್ಟ ದೊರೆ ದುರುಳ ಪಡೆ ದಯೆಗೆ ತಾವೆಲ್ಲಿ?;21 Apr, 2017 ಉಲ್ಲೇಖ ಏಷ್ಯಾ ಖಂಡದ ದೇಶಗಳು ಸಿರಿಯಾ
2571
https://kn.wikipedia.org/wiki/%E0%B2%AC%E0%B2%BF%E0%B2%B2%E0%B3%8D%20%E0%B2%95%E0%B3%8D%E0%B2%B2%E0%B2%BF%E0%B2%82%E0%B2%9F%E0%B2%A8%E0%B3%8D
ಬಿಲ್ ಕ್ಲಿಂಟನ್
ಬಿಲ್ ಕ್ಲಿಂಟನ್ (ವಿಲಿಯಂ ಜೆಫರ್ಸನ್ ಕ್ಲಿಂಟನ್)(ಆಗಸ್ಟ್ ೧೯, ೧೯೪೬) - ಅಮೇರಿಕ ಸಂಯುಕ್ತ ಸಂಸ್ಥಾನ( ಯು.ಎಸ್.ಎ) ದೇಶದ ಹಿಂದಿನ ರಾಷ್ಟ್ರಪತಿಗಳಲ್ಲೊಬ್ಬರು. ಅವರು ಶೀತಲ ಸಮರದ ಕೊನೆಯಲ್ಲಿ ಅಧಿಕಾರ ವಹಿಸಿಕೊಂಡರು, ಮತ್ತು ಬೇಬಿ ಬೂಮರ್ ಪೀಳಿಗೆಯ ಮೊದಲ ರಾಷ್ಟ್ರಪತಿಯಾಗಿದ್ದರು. ಕ್ಲಿಂಟನ್ ಅವರನ್ನು ಒಬ್ಬ ನ್ಯೂ ಡೆಮೊಕ್ರ್ಯಾಟ್ ಎಂದು ವರ್ಣಿಸಲಾಗಿದೆ. ಕ್ಲಿಂಟನ್ ಎರಡನೇ ಮಹಾಯುದ್ಧದ ನಂತರ ಅಮೇರಿಕಾದ ಯಾವುದೇ ಅಧ್ಯಕ್ಷನಿಗಿಂತ ಅತ್ಯಂತ ಹೆಚ್ಚು ರೇಟಿಂಗ್‍ನ ಜೊತೆ ಕಚೇರಿಯನ್ನು ಬಿಟ್ಟುರು. ಅದಾದ ನಂತರ, ಕ್ಲಿಂಟನ್ ತಮ್ಮ ಜೇವನವನ್ನು ಸಾರ್ವಜನಿಕವಾಗಿ ಮಾತನಾಡುವ ಮತ್ತು ಮಾನವಹಿತಕಾರಿ ಕೆಲಸಗಳಿಗೆ ತೊಡಗಿಸಿಕೊಂಡಿದ್ದರೆ. ಕ್ಲಿಂಟನ್ ಏಡ್ಸ್ ಮತ್ತು ಜಾಗತಿಕ ತಾಪಮಾನ ತಡೆಗಟ್ಟಲು ಮತ್ತು ಪರಿಹರಿಸಲು ಅಂತಾರಾಷ್ಟ್ರೀಯವಾದ ವಿಲಿಯಂ ಜೆ ಕ್ಲಿಂಟನ್ ಫೌಂಡೇಶನ್ ಸ್ಥಾಪಿಸಿದರು. ೨೦೦೪ ರಲ್ಲಿ, ಕ್ಲಿಂಟನ್ ತಮ್ಮ ಆತ್ಮಚರಿತ್ರೆಯಾದ 'ಮೈ ಲೈಫ್'(ನನ್ನ ಜೀವನ) ಪ್ರಕಟಿಸಿದರು. ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳು ರಾಜಕೀಯ ೧೯೪೬ ಜನನ
2572
https://kn.wikipedia.org/wiki/%E0%B2%A8%E0%B2%BE%E0%B2%B0%E0%B3%8D%E0%B2%B5%E0%B3%87
ನಾರ್ವೇ
ನಾರ್ವೆ ಉತ್ತರ ಯುರೋಪ್ನ ಸ್ಕ್ಯಾಂಡಿನೇವಿಯ ದ್ವೀಪಕಲ್ಪದ ಒಂದು ದೇಶ. ಸ್ವೀಡನ್, ಫಿನ್‍ಲ್ಯಾಂಡ್ ಮತ್ತು ರಷ್ಯಾಗಳೊಂದಿಗೆ ದಕ್ಷಿಣಕ್ಕೆ ಗಡಿಯನ್ನು ಹಂಚಿಕೊಂಡಿರುವ ಈ ಉದ್ದವಾದ ದೇಶದ ಉತ್ತರಕ್ಕೆ ಮತ್ತು ಪೂರ್ವಕ್ಕೆ ಅಟ್ಲಾಂಟಿಕ್ ಮಹಾಸಾಗರವಿದೆ. ನಾರ್ವೆ ಕಲ್ಲೆಣ್ಣೆ, ನೈಸರ್ಗಿಕ ಅನಿಲ, ಖನಿಜಗಳು, ಕಟ್ಟಿಗೆ, ಕಡಲಾಹಾರ, ಸಿಹಿ ನೀರು, ಮತ್ತು ಜಲವಿದ್ಯುತ್ತಿನ ವ್ಯಾಪಕ ನಿಕ್ಷೇಪಗಳನ್ನು ಹೊಂದಿದೆ. ಉಲ್ಲೇಖಗಳು ಯುರೋಪ್ ಖಂಡದ ದೇಶಗಳು
2579
https://kn.wikipedia.org/wiki/%E0%B2%A8%E0%B2%B5%20%E0%B2%A6%E0%B3%86%E0%B2%B9%E0%B2%B2%E0%B2%BF
ನವ ದೆಹಲಿ
ನವ ದೆಹಲಿ (, , ) ಭಾರತದ ರಾಜಧಾನಿ. ನಗರದ ಅಡಿಪಾಯ ೧೯೧೧ ರ ದೆಹಲಿ ದರ್ಬಾರ್ ಸಮಯದಲ್ಲಿ ಜಾರ್ಜ್ V, ಭಾರತದ ಚಕ್ರವರ್ತಿ ರವರು ನೆರವೇರಿಸಿದರು. ಇದನ್ನು ಬ್ರಿಟಿಷ್ ವಾಸ್ತುಶಿಲ್ಪಿ ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದರು. ಹೊಸ ರಾಜಧಾನಿಯು ೧೩ನೇ ಫೆಬ್ರವರಿ ೧೯೩೧ ರಂದು ಭಾರತದ ವೈಸ್ರಾಯ್ ಮತ್ತು ಲಾರ್ಡ್ ಇರ್ವಿನ್ ಗವರ್ನರ್ ಜನರಲ್ ರವರು ಉದ್ಘಾಟಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಮುಖ ಸ್ಮಾರ್ಟ್ ನಗರಗಳ ಅಭಿಯಾನದ ಅಡಿಯಲ್ಲಿ ನವ ದೆಹಲಿಯು 'ಸ್ಮಾರ್ಟ್ ಸಿಟಿ' ಎಂದು ನೂರರಲ್ಲಿ ಒಂದು ನಗರವಾಗಿ ಆಯ್ಕೆಯಾಗಿದೆ. ಭಾರತದ ಪಟ್ಟಣಗಳು ಏಷ್ಯಾ ಖಂಡದ ರಾಜಧಾನಿ ನಗರಗಳು ಏಷ್ಯಾ ಖಂಡದ ನಗರಗಳು
2582
https://kn.wikipedia.org/wiki/%E0%B2%97%E0%B3%8D%E0%B2%B0%E0%B3%80%E0%B2%B8%E0%B3%8D
ಗ್ರೀಸ್
ಯುರೋಪ್ ಖಂಡದ ಒಂದು ದೇಶ. ಯುರೋಪ್ ಖಂಡದ ದೇಶಗಳು ಭೂಗೋಳ
2583
https://kn.wikipedia.org/wiki/%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3%20%E0%B2%8F%E0%B2%B7%E0%B3%8D%E0%B2%AF%E0%B2%BE
ದಕ್ಷಿಣ ಏಷ್ಯಾ
ದಕ್ಷಿಣ ಏಷ್ಯಾ ದಕ್ಷಿಣ ಏಷ್ಯಾವನ್ನು , ದಕ್ಷಿಣಾರ್ಧ ಏಷ್ಯಾ , ಎಂದು ಕೂಡ ಕರೆಯುತ್ತಾರೆ ಇದು ಏಷ್ಯಾ ಖಂಡದದಕ್ಷಿಣ ಪ್ರಾಂತ್ಯಗಳಾದ ಹಿಮಾಲಯದ ದಕ್ಷಿಣದಲ್ಲಿರುವ ದೇಶಗಳು ಹಾಗು ಕೆಲವು ಸ್ವತಂತ್ರ ಪ್ರಭುತ್ವ (ಮುಂದೆ ಓದಿ ) , ಇದರೊಂದಿಗೆ ಅಕ್ಕಪಕ್ಕದ ಪಶ್ಚಿಮ ಹಾಗು ಪೂರ್ವದಲ್ಲಿರುವ ಕೆಲವು ನೆರೆಯ ರಾಷ್ಟ್ರಗಳನ್ನು ಒಳಗೊಂಡಿದೆ. ಈ ಪ್ರದೇಶದ ಸ್ವರೂಪಕ್ಕೆ ಸಂಬಂಧಿಸಿದಂತೆ, ಹಿಮಾಲಯ ಹಾಗು ಹಿಂದುಕುಶ್ ಪರ್ವತದ ದಕ್ಷಿಣಕ್ಕೆ ಸಮುದ್ರದ ಮೇಲ್ಮಟ್ಟದಲ್ಲಿ ಎದ್ದಿರುವ ಭಾರತೀಯ ಉಪಖಂಡದ ರೂಪದಲ್ಲಿ ಚಾಚಿ ಕೊಂಡಿರುವ, ಭಾರತೀಯ ಮೇಲ್ಮೈ ಪ್ರದೇಶ (ಇಂಡಿಯನ್ ಪ್ಲೇಟ್) ಪ್ರಧಾನವಾಗಿದೆ. ದಕ್ಷಿಣ ಏಷ್ಯಾವು (ಪ್ರದಕ್ಷಿಣಕಾರವಾಗಿ, ಪಶ್ಚಿಮದಿಂದ ಪೂರ್ವಕ್ಕೆ) ಪಶ್ಚಿಮ ಏಷ್ಯಾ, ಮಧ್ಯ ಏಷ್ಯಾ, ಪೂರ್ವ ಏಷ್ಯಾ, ದಕ್ಷಿಣ-ಪೂರ್ವ ಏಷ್ಯಾ ಹಾಗು ಹಿಂದು ಮಹಾಸಾಗರದಿಂದ ಆವರಿಸಲ್ಪಟ್ಟಿದೆ. ದಕ್ಷಿಣ ಏಷ್ಯಾದ ಪ್ರಾತಿನಿಧಿಕ ವ್ಯಾಖ್ಯಾನ ವೈಶಿಷ್ಟ್ಯಪೂರ್ಣವಾಗಿ ಬಾಂಗ್ಲಾದೇಶ, ಭೂತಾನ, ಭಾರತ, ಮಾಲ್ಡೀವ್ಸ್, ನೇಪಾಳ, [[ಪಾಕಿಸ್ತಾನ ]] ಹಾಗು ಶ್ರೀಲಂಕಾ ದೇಶಗಳನ್ನು ಒಳಗೊಂಡಿದೆ. ಕೆಲವೊಂದು ನಿರೂಪಣೆಗಳು ಈ ದೇಶಗಳೊಂದಿಗೆ ಅಫ್ಘಾನಿಸ್ತಾನ , ಬರ್ಮಾ, ಟಿಬೆಟ್ , ಹಾಗು ಹಿಂದು ಮಹಾಸಾಗರದ ಬ್ರಿಟಿಷ್ ಆಡಳಿತದ ಪ್ರದೇಶ ಗಳನ್ನು ಕೂಡ ಒಳಗೊಂಡಿದೆ. ಇದಲ್ಲದೆ UN ಸಬ್ ರೀಜನ್ (ವಿಶ್ವಸಂಸ್ಥೆಯ ಉಪವಿಭಾಗ) ಕೂಡ ದಕ್ಷಿಣ ಏಷ್ಯಾಗೆ ಇರಾನ್ ಅನ್ನು ಸೇರಿಸಿದೆ, ಆದರೆ ಬೇರೆ ಹಲವಾರು ಮೂಲಗಳು ಇರಾನ್ ಪಶ್ಚಿಮ ಏಷ್ಯಾ ಎನುತ್ತವೆ. ಹಲವು ವಿಶ್ವವಿದ್ಯಾಲಯಗಳ ದಕ್ಷಿಣ ಏಷ್ಯಾದ ವಿಷಯಕ್ಕೆ ಸಂಬಂಧ ಪಟ್ಟ ವಿಭಾಗಗಳು ಕೂಡ ಸಾಮಾನ್ಯವಾಗಿ ಇರಾನ್ ದಕ್ಷಿಣ ಏಷ್ಯಾದ ಭಾಗವೆಂಬ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದಿಲ್ಲ. (ಮುಂದೆ ಓದಿ) ವಿಶ್ವದ ಜನಸಂಖ್ಯೆಯ ಸುಮಾರು ಐದನೇ ಒಂದು ಭಾಗದಷ್ಟು ಜನರು ದಕ್ಷಿಣ ಏಷ್ಯಾದಲ್ಲಿದ್ದಾರೆ, ಹೀಗಾಗಿ ಇದು ವಿಶ್ವದಲ್ಲಿಯೇ ಜನಸಂಖ್ಯೆಯು ಅತ್ಯಂತ ಹೆಚ್ಚಾಗಿರುವ ಹಾಗು ಜನನಿಬಿಡ ಭೌಗೋಳಿಕ ಪ್ರದೇಶವಾಗಿದೆ. ಈ ಪ್ರದೇಶದ ಎರಡು ಅಣ್ವಸ್ತ್ರ-ಹೊಂದಿರುವ ದೇಶಗಳಾದ ಪಾಕಿಸ್ತಾನ ಹಾಗು ಭಾರತ ನಡುವಿನ ಯುದ್ಧವು, ಒಳಗೊಂಡಂತೆ ಈ ಪ್ರದೇಶವು ಹಲವಾರು ಬಾರಿ ಅನೇಕ ಘರ್ಷಣೆ ಹಾಗು ರಾಜಕೀಯ ಅಸ್ಥಿರತೆಯನ್ನು ಕಂಡಿದೆ. ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘವು ಈ ಪ್ರದೇಶದಲ್ಲಿ ಆರ್ಥಿಕ ಸಹಕಾರಕ್ಕೆಂದು ಇರುವ ಸಂಸ್ಥೆ. ವ್ಯಾಖ್ಯಾನಗಳು ಒಂದು ಕಾಲದಲ್ಲಿ ಆಗಿನ ಬ್ರಿಟಿಷ್ ಇಂಡಿಯಾ ಸಾಮ್ರಾಜ್ಯದ, ಭಾಗವಾಗಿದ್ದ ಭಾರತ, ಪಾಕಿಸ್ತಾನ ಹಾಗು ಬಾಂಗ್ಲಾದೇಶಗಳು ದಕ್ಷಿಣ ಏಷ್ಯಾದ ಪ್ರಮುಖವಾದ ರಾಷ್ಟ್ರಗಳಾಗಿದ್ದವು. ಇದೂ ಅಲ್ಲದೆ ಸಿಲೋನ್ (ಈಗ ಶ್ರೀಲಂಕಾ), ಬರ್ಮಾ (ಅಧಿಕೃತ ಹೆಸರು: ಮಯನ್ಮಾರ್) ದೇಶಗಳನ್ನು ಒಳಗೊಂಡಿದೆ. ಆದರೆ ಅಡೆನ್ ಕಾಲೋನಿ,ಬ್ರಿಟಿಷ್ ಸೋಮಾಲಿಲ್ಯಾಂಡ್ ಹಾಗು ಸಿಂಗಪುರ, ಪ್ರಾಂತ್ಯಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದರೂ ಕೂಡ ಅವುಗಳನ್ನು ದಕ್ಷಿಣ ಏಷ್ಯಾದ ಭಾಗವೆಂದು ಪರಿಗಣಿಸಿಲ್ಲ. ಬ್ರಿಟಿಷ್ ಸಾಮ್ರಾಜ್ಯವು ನೇರವಾಗಿ ಆಡಳಿತ ನಡೆಸದೆ ಇದ್ದ 562 ಸ್ವತಂತ್ರ ರಾಜ್ಯಗಳನ್ನು , ಕೂಡ ಒಳಗೊಂಡಿತ್ತು. ಇವುಗಳಲ್ಲಿ ಕೆಲವು (ಹೈದರಾಬಾದ್ ರಾಜ್ಯ , ಮೈಸೂರು ಸಂಸ್ಥಾನ , ಬರೋಡ, ಗ್ವಾಲಿಯರ್ ಹಾಗು ಜಮ್ಮು ಕಾಶ್ಮೀರ್ ರಾಜ್ಯದ ಒಂದು ಭಾಗ) ಭಾರತಕ್ಕೆ ಸೇರ್ಪಡೆಯಾದರೆ, ಮತ್ತೆ ಕೆಲವು (ಭಾವಲ್ಪುರ, ಕಲಾಟ್, ಕೈರ್ಪುರ್, ಸ್ವಾಟ್ ಇದ್ದಲ್ಲದೆ ಜಮ್ಮು ಕಾಶ್ಮೀರದ ರಾಜ್ಯದ ಕೆಲವು ಭಾಗ)ಪಾಕಿಸ್ತಾನಕ್ಕೆ ಸೇರ್ಪಡೆಗೊಂಡವು. ಸಿಕ್ಕಿಂ 1975ರಲ್ಲಿ ಭಾರತವನ್ನು ಸೇರಿತು. ಜಮ್ಮು ಕಾಶ್ಮೀರದ ಒಂದು ಭಾಗ ಚೀನಾದೊಂದಿಗೆ ಸೇರಿತು. ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘವು (SAARC)(ಸಾರ್ಕ್), 1985ರಲ್ಲಿ ಸ್ಥಾಪಿತವಾದಾಗ ಇದು ಅಕ್ಕ-ಪಕ್ಕ ಇದ್ದ ಏಳು ದೇಶ — ಬಾಂಗ್ಲಾದೇಶ, ಭೂತಾನ, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಮತ್ತು ಶ್ರೀಲಂಕಾ — ಒಳಗೊಂಡಿತು, ಇದಲ್ಲದೆ 2006ರಲ್ಲಿ ಈ ಸಮೂಹದ ಎಂಟನೇ ಸದಸ್ಯನಾಗಿ ಅಫ್ಘಾನಿಸ್ತಾನವನ್ನು ಸೇರಿಸಿಕೊಳ್ಳಲಾಯಿತು. ವಿಶ್ವ ಬ್ಯಾಂಕ್ ಮಾತ್ರ ಈಗಲೂ ಮೂಲದ ಏಳು ರಾಷ್ಟ್ರಗಳು ಮಾತ್ರವೇ ಸಾರ್ಕ್ ಸದಸ್ಯ ರಾಷ್ಟ್ರಗಳೆಂದು ಪರಿಗಣಿಸಿ ಅಫ್ಘಾನಿಸ್ತಾನವನ್ನು ಈ ಸಮೂಹಕ್ಕೆ ಸೇರಿಸಿಲ್ಲ. ಈ ಸಮೂಹದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರದೆ ಇದ್ದ ಮೂರು ಸ್ವತಂತ್ರ ರಾಷ್ಟ್ರಗಳಾದ - ನೇಪಾಳ, ಭೂತಾನ ಹಾಗು ಅಫ್ಘಾನಿಸ್ತಾನ ಕೂಡ ಇದೆ. ಮಾಲ್ಡೀವ್ಸ್ ದೇಶಕ್ಕೆ ವಿಶೇಷ ಅವಕಾಶ ಕಲ್ಪಿಸುವ ಸಲುವಾಗಿ ಮಾಡಿದ್ದ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದವನ್ನು ಸಾರ್ಕ್ ನ ಮೂಲ ಏಳು ರಾಷ್ಟ್ರಗಳು ಅನುಮೋದಿಸಿ ಸಹಿ ಮಾಡಿದವು. ವಿಶ್ವ ಸಂಸ್ಥೆಯ ಜನಸಂಖ್ಯೆ ಮಾಹಿತಿ ಜಾಲವು {ಪಾಪುಲೇಷನ್ ಇನ್ಫರ್ಮೇಷನ್ ನೆಟವರ್ಕ್(POPIN)} ಅಫ್ಘಾನಿಸ್ತಾನ, ಬಾಂಗ್ಲಾದೇಶ , ಬರ್ಮಾ , ಭಾರತ , ಇರಾನ್, ನೇಪಾಳ, ಪಾಕಿಸ್ತಾನ ಹಾಗು ಶ್ರೀಲಂಕಾವನ್ನು ದಕ್ಷಿಣ ಏಷ್ಯಾದ ಭಾಗವೆಂದು, ಇದಲ್ಲದೆ ಮಾಲ್ಡೀವ್ಸ್ ದೇಶವನ್ನು ಅದರ ಪ್ರಾದೇಶಿಕ ಪರಿಸರ, ಗುಣ ಪರಿಗಣಿಸಿ ಅದನ್ನು ಪಸಿಫಕ್ POPIN ಸಬ್ ರೀಜಿನಲ್ ನೆಟವರ್ಕ್ (ಶಾಂತಮಹಾಸಾಗರದ ಉಪಭಾಗದ ಜನಸಂಖ್ಯ ಮಾಹಿತಿ ಜಾಲದ) ಸದಸ್ಯ ಎಂದು ಗುರುತಿಸಿದೆ. ರಾಜಕೀಯವಾಗಿಲ್ಲದಿದ್ದರೂ, ಸಾಂಸ್ಕೃತಿಕವಾಗಿ ಟಿಬೆಟ್ ದಕ್ಷಿಣ ಏಷ್ಯಾದ ಭಾಗವೆಂದು ಗುರುತಿಸಿದ್ದಾರೆ, ಇದಲ್ಲದೆ ಹಿಂದು ಮಹಾಸಾಗರದ ಬ್ರಿಟಿಷ್ ಆಡಳಿತ ಪ್ರದೇಶವನ್ನು ಈ ಭಾಗದ ಸುರಕ್ಷತೆಯ ದೃಷ್ಟಿಯಿಂದ ಸೇರಿಸಿಕೊಳ್ಳಲಾಗಿದೆ. ವಿಶ್ವ ಸಂಸ್ಥೆಯ ಉಪವಿಭಾಗ ವಿವರಣೆಯು ಇರಾನ್ ಒಳಗೊಂಡಂತೆ SAARC(ಸಾರ್ಕ್)ನ ಎಲ್ಲ ಎಂಟು ರಾಷ್ಟ್ರ ದಕ್ಷಿಣ ಏಷ್ಯಾದ ಭಾಗವೆಂದು ಪರಿಗಣಿಸುತ್ತವೆ, ಆದರೆ ವಿಶ್ವ ಸಂಸ್ಥೆಯ ಏಷ್ಯಾ ಹಾಗು ಶಾಂತ ಮಹಾಸಾಗರದ ಆರ್ಥಿಕ ಹಾಗು ಸಾಮಾಜಿಕ ಆಯೋಗದ ಹಿರ್ಚ್ಮನ್-ಹರ್ಫಿನ್ದಾಲ್ ರ ಸೂಚಕವು SAARC(ಸಾರ್ಕ್)ನ ಮೂಲ ಏಳು ರಾಷ್ಟ್ರಗಳನ್ನು ಮಾತ್ರ ಗುರುತಿಸಿದೆ. ಅಫ್ಘಾನಿಸ್ತಾನವನ್ನು ಮಧ್ಯ ಏಷ್ಯಾ ಅಥವಾ ಮಧ್ಯ ಪೂರ್ವ , ಬರ್ಮಾವನ್ನು ದಕ್ಷಿಣಪೂರ್ವ ಏಷ್ಯಾ , ಮತ್ತು ಟಿಬೆಟ್ ಅನ್ನು ಮಧ್ಯ ಏಷ್ಯಾ ಅಥವಾ ಪೂರ್ವ ಏಷ್ಯಾ ದ ಭಾಗವೆಂದು ಪರಿಗಣಿಸಲಾಗುತ್ತದೆ. ದಕ್ಷಿಣ ಏಷ್ಯಾಗೆ ಒಂದು ಸ್ಪಷ್ಟವಾದ ವ್ಯಾಖ್ಯಾನವಿಲ್ಲದ ಕಾರಣ ದಕ್ಷಿಣ ಏಷ್ಯಾ ಬಗೆಗಿನ ವಿಶೇಷ ಅಧ್ಯಯನಗಳು ಕಡಿಮೆಯಾಗಿವೆ. ಅಲ್ಲದೇ ಈ ವಿಷಯದ ಬಗೆಗಿನ ಅಧ್ಯಯನಕ್ಕೆ ಒಲವು ಕೂಡ ಕಡಿಮೆಯಾಗಲು ಕಾರಣವಾಗಿದೆ. ಎರಡು ವರ್ಷಗಳ ಕಾಲ ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ, ಹಾಗು ಶ್ರೀಲಂಕಾಗಳಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಸಮೀಕ್ಷೆಯಲ್ಲಿ ಉತ್ತರಿಸಿದ ಬಹುತೇಕ ಮಂದಿಗೆ ಅವರು ದಕ್ಷಿಣ ಏಷ್ಯಾದವರು ಎಂಬ ತಿಳಿವಳಿಕೆ ಇರಲಿಲ್ಲ. ಭಾರತೀಯ ಉಪಖಂಡ ಭೌಗೋಳಿಕವಾಗಿ ಏಷ್ಯಾ ಖಂಡದಿಂದ ಬೇರೆಯಾಗಿರುವ ಸರ್ವಾನುಕೂಲಸಹಿತವಾದ ದೊಡ್ಡದಾದ ಭೂಪ್ರದೇಶಕ್ಕೆ ಭಾರತೀಯ ಉಪಖಂಡವೆಂದು ಕರೆಯುತ್ತಾರೆ. ಕೆಲವೊಂದು ಸಾಮ್ಯತೆಗಳಿರುವ ಕಾರಣಕ್ಕಾಗಿ ಹಲವಾರು ಅಧ್ಯಯನಗಳಲ್ಲಿ "ದಕ್ಷಿಣ ಏಷ್ಯಾ" ಹಾಗು "ಭಾರತೀಯ ಉಪಖಂಡ" ಗಳನ್ನು ಅದಲುಬದಲಾಗಿ ಬಳಸುತ್ತಾರೆ. ಆದರೆ ಕೆಲವು ರಾಜಕೀಯ ಸೂಕ್ಷ್ಮತೆಗಳಿಂದ ಕೆಲವರು, "ದಕ್ಷಿಣ ಏಷ್ಯಾ ಉಪಖಂಡ", ಇನ್ನೂ ಕೆಲವರು "ಭಾರತ-ಪಾಕ್ ಉಪಖಂಡ ", ಅಥವಾ ಕೇವಲ "ದಕ್ಷಿಣ ಏಷ್ಯಾ " ಯಾ "ಭಾರತೀಯ ಉಪಖಂಡದ" ದ ಬದಲು ಬರಿ "ಉಪಖಂಡ" ಎಂಬ ಪದವನ್ನು ಉಪಯೋಗಿಸುತ್ತಾರೆ. ಕೆಲವರ ಜಿಜ್ಞಾಸೆಗಳ ಪ್ರಕಾರ ಯುರೋಪ್ ಹಾಗು ಉತ್ತರ ಅಮೇರಿಕಾದಲ್ಲಿ, "ಉಪಖಂಡ" ಅಥವಾ "ಭಾರತೀಯ ಉಪಖಂಡ" ಎಂಬ ಪ್ರಯೋಗಗಳಿಗಿಂತ "ದಕ್ಷಿಣ ಏಷ್ಯಾ" ಪ್ರಯೋಗವು ಹೆಚ್ಚು ಬಳಕೆಯಲ್ಲಿದೆ. ಭಾರತಜ್ಞ ರೋನಾಲ್ಡ್ ಬಿ. ಇನ್ಡೆನ್ ಈ ಪ್ರದೇಶವನ್ನು ಪೂರ್ವ ಏಷ್ಯಾದಿಂದ ಸ್ಪಷ್ಟವಾಗಿ ಭೇದ ಮಾಡುಬಹುದಾದ ಕಾರಣದಿಂದ "ದಕ್ಷಿಣ ಏಷ್ಯಾ" ಎಂಬ ಪದಪ್ರಯೋಗವು ಹೆಚ್ಚಾಗುತ್ತಿದೆ, ಎಂದು ವಾದಿಸುತ್ತಾನೆ. ಆದರೆ, ಈ ಅಭಿಪ್ರಾಯವನ್ನು ಎಲ್ಲರೂ ಒಪ್ಪುವುದಿಲ್ಲ. ನಿಘಂಟಿನ ಪ್ರಕಾರ, ಉಪಖಂಡ ಎಂಬ ಪದಕ್ಕೆ "ಭೌಗೋಳಿಕವಾಗಿ ಯಾ ರಾಜಕೀಯವಾಗಿ ಸ್ವತಂತ್ರವಾಗಿರುವ" ಖಂಡವೊಂದರ ಪ್ರದೇಶ; ಅಥವಾ "ಖಂಡದ ಅಂಶವಾದ ಆದರೆ ಖಂಡದಷ್ಟು ವಿಶಾಲವಾಗಿರದ ಪ್ರದೇಶ." ಭೂಭೌತಿಕವಾಗಿ ಗಮನಿಸಬಹುದಾದ ವಿಷಯವೆಂದರೆ ಟಿಬೆಟ್ ನಲ್ಲಿರುವ ಸಾಂಗ್ ಪೋ ನದಿಯು ಉಪಖಂಡದ ರಚನೆಯ ಗಡಿಯ ಹೊರಗಡೆ ಇದ್ದರೆ, ತಜಕಿಸ್ತಾನದ ಪಾಮೀರ್ ಪರ್ವತಗಳು ಉಪಖಂಡದ ಗಡಿಯ ಒಳಗಡೆ ಇದೆ. ಒಂದು ವ್ಯಾಖ್ಯಾನದ ಪ್ರಕಾರ ಅದು ದಕ್ಷಿಣ ಏಷ್ಯಾದ ಬಹುಪಾಲು ಭಾಗಗಳುನ್ನು ಒಳಗೊಂಡಿದೆ, ಅಂದರೆ ಭೂಖಂಡದ ಹೊರಪದರದ (ಕಾಂಟಿನೆಂಟಲ್ ಕ್ರಸ್ಟ್) ಪ್ರದೇಶ (ಬಾಂಗ್ಲಾದೇಶ , ಭೂತಾನ , ಭಾರತ , ನೇಪಾಳ , ಹಾಗು ಪಾಕಿಸ್ತಾನ ), ದ ಜೊತೆಗೆ ಭೂಖಂಡದ ಚಾಚುವಿನಲ್ಲಿರುವ (ಕಾಂಟಿನೆಂನಟಲ್ ಶೆಲ್ಫ್) ದ್ವೀಪ ರಾಷ್ಟ್ರ (ಶ್ರೀಲಂಕಾ ), ಹಾಗು ಓಷಿಯಾನಿಕ್ ಕ್ರಸ್ಟ್ ನ ಮೇಲ್ಭಾಗದಲ್ಲಿರುವ ದ್ವೀಪ ರಾಷ್ಟ್ರ (ಮಾಲ್ಡೀವ್ಸ್)ಅನ್ನು ಒಳಗೊಂಡಿದೆ. ಇನ್ನೊಂದು ವಿಂಗಡಣೆಯ ಪ್ರಕಾರ ಉಪಖಂಡ ಬ್ರಿಟಿಷ್ ಸಾಮ್ರಾಜ್ಯದ, ಪ್ರಮುಖ ದೇಶಗಳಾದ ಬಾಂಗ್ಲಾದೇಶ, ಭಾರತ ಹಾಗು ಪಾಕಿಸ್ತಾನವನ್ನು ಮಾತ್ರ ಒಳಗೊಂಡಿದೆ. ಈ ವ್ಯಾಖ್ಯಾನದ ಅನುಸಾರ, ಒಂದು ಕಾಲದಲ್ಲಿ ಬ್ರಿಟಿಷ್ ಇಂಡಿಯಾ ದ ಜಮ್ಮು ಮತ್ತು ಕಾಶ್ಮೀರ ದ ಭಾಗವಾಗಿದ್ದ ಇಂದು ಚೀನಾದ ಸಿನ್ ಜಿಯಾಂಗ್ ಸ್ವಾಯತ್ತ ಪ್ರದೇಶಕ್ಕೆ ಸೇರಿರುವ, ವಿವಾದಿತ ಪ್ರದೇಶ ಆಕ್ಸಾಯಿ ಚಿನ್, ಕೂಡ ಸೇರಿದೆ. ಈ ಹಿಂದೆ 1959ರಲ್ಲಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಸ್ಟೇಟ್ (ಅಮೇರಿಕ ಸಂಸ್ಥಾನದ ಗೃಹ ಇಲಾಖೆ) ಪ್ರಕಟಿಸಿರುವ ಕಿರುಹೊತ್ತಿಗೆಯಲ್ಲಿ "ದಕ್ಷಿಣ ಏಷ್ಯಾದ ಉಪಖಂಡ"ವು ಅಫ್ಘಾನಿಸ್ತಾನ, ಸಿಲೋನ್ (ಶ್ರೀಲಂಕಾ), ಭಾರತ, ನೇಪಾಳ, ಹಾಗು ಪಾಕಿಸ್ತಾನವನ್ನು ಒಳಗೊಂಡಿದೆ. . ದಕ್ಷಿಣ ಏಷ್ಯಾವನ್ನು ಸೂಚಿಸಲು ಭಾರತೀಯ ಉಪಖಂಡ ಎಂಬ ಪದಪ್ರಯೋಗ ಬಳಸಿದಾಗ, ದ್ವೀಪ ರಾಷ್ಟ್ರಗಳಾದ ಶ್ರೀಲಂಕಾ ಹಾಗು ಮಾಲ್ಡೀವ್ಸ್ ಗಳನ್ನು ಒಳಗೊಂಡಿರುವುದಿಲ್ಲ, ಆದರೆ ಸಂದರ್ಭಕ್ಕೆ ತಕ್ಕಹಾಗೆ ಟಿಬೆಟ್ ಹಾಗು ನೇಪಾಳವನ್ನು ಸೇರಿಸಿಕೊಳ್ಳಲಾಗುತ್ತೆ, ಅಥವಾ ಬಿಡಲಾಗುತ್ತದೆ. ದಕ್ಷಿಣ ಏಷ್ಯಾ ಬಗ್ಗೆ ವಿಶೇಷ ಅಧ್ಯಯನಗಳಿಗೆ ಮೀಸಲಾಗಿರುವ ವಿಭಾಗಗಳ ಪ್ರಕಾರ ದಕ್ಷಿಣ ಏಷ್ಯಾದ ವ್ಯಾಖ್ಯಾನಗಳು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಡಿಯಲ್ಲಿ 1964ರಲ್ಲಿ ಸ್ಥಾಪಿತವಾದ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರವು ಪ್ರಮುಖವಾಗಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಹಿಮಾಲಯದ ಅರಸೊತ್ತಿಗೆ ನಾಡುಗಳಾದ (ನೇಪಾಳ , ಭೂತಾನ , ಹಾಗು ಸಿಕ್ಕಿಂ ), ಮತ್ತು ಬರ್ಮಾ (ಈಗ ಅಧಿಕೃತವಾಗಿ ಮಯನ್ಮಾರ್) ದೇಶಗಳ ಅಧ್ಯಯನಕ್ಕೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ಪ್ರೋತ್ಸಾಹಿಸುವ ಕೆಲಸ ಮಾಡುತಿತ್ತು. ಆದರೆ, ಕಾಲಕ್ರಮೇಣ ಇದರ ಚಟುವಟಿಕೆಗಳು ವಿಸ್ತರಿಸಿ ಥೈಲ್ಯಾಂಡ್ , ಮಲೇಷಿಯಾ, ಸಿಂಗಪುರ, ವಿಯೆಟ್ನಾಂ , ಕಾಂಬೋಡಿಯ, ಲಾವೋಸ್, ಇಂಡೋನೇಷಿಯ, ಫಿಲ್ಲಿಫೈನ್ಸ್ ಹಾಗು ಹಾಂಗ್ ಕಾಂಗ್ ದೇಶಗಳ ಅಧ್ಯಯನವನ್ನು ಕೂಡ ಒಳಗೊಂಡಿದೆ. ಮಿಷಿಗನ್ ವಿಶ್ವವಿದ್ಯಾಲಯ ಹಾಗು ವರ್ಜಿನಿಯ ವಿಶ್ವವಿದ್ಯಾಲಯ ಗಳ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರಗಳು SAARC(ಸಾರ್ಕ್)ನ ಏಳು ರಾಷ್ಟ್ರಗಳ ಜೊತೆಗೆ ಟಿಬೆಟ್ ಕೂಡ ದಕ್ಷಿಣ ಏಷ್ಯಾದ ದೇಶವೆಂದು ಸೇರಿಸಿ ಮಾಲ್ಡೀವ್ಸ್ ಅನ್ನು ಬಿಟ್ಟಿವೆ. ರುತ್ಗರ್ಸ್ ವಿಶ್ವವಿದ್ಯಾನಿಲಯದ ದಕ್ಷಿಣ ಅಧ್ಯಯನದ ಕಾರ್ಯಕ್ರಮ, ಹಾಗು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಬರ್ಕ್ಲಿಯ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರವು ಕೂಡ ಇದನ್ನೇ ಮಾಡಿವೆಯಾದರೂ ಮಾಲ್ಡೀವ್ಸ್ ಅನ್ನು ಬಿಟ್ಟಿಲ್ಲ. ಇದರ ಹೊರತು ಬ್ರಾಂಡಿಸ್ ವಿಶ್ವವಿದ್ಯಾಲಯ ಪ್ರಕಾರ ದಕ್ಷಿಣ ಏಷ್ಯಾವು "ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಭೂತಾನ ಹಾಗು ಕೆಲವೊಂದು ಸಂದರ್ಭಗಳಲ್ಲಿ ಅಫ್ಘಾನಿಸ್ತಾನ, ಬರ್ಮಾ, ಮಾಲ್ಡೀವ್ಸ್ ಹಾಗು ಟಿಬೆಟ್ " ದೇಶಗಳನ್ನು ಒಳಗೊಂಡಿದೆ ಎಂದು ವ್ಯಾಖ್ಯಾನ ಕೊಟ್ಟಿದೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ಇದೆ ರೀತಿಯ ಕಾರ್ಯಕ್ರಮವು ಟಿಬೆಟ್ ಅನ್ನು ಒಳಗೊಂಡು ಅಫ್ಘಾನಿಸ್ತಾನ ಹಾಗು ಮಾಲ್ಡೀವ್ಸ್ ಎರಡನ್ನು ಬಿಟ್ಟಿದೆ. ಭೂಗೋಳ ] ದಕ್ಷಿಣ ಏಷ್ಯಾ ಯಾವತ್ತು ಭೂರಾಜ್ಯಶಾಸ್ತ್ರದ ದೃಷ್ಟಿಯಲ್ಲಿ ಪರಸ್ಪರ ಹೊಂದಾಣಿಕೆಯಿರದ ಪ್ರದೇಶವಾಗಿದ್ದರೂ ಸಹ, ಇದು ಸ್ಪಷ್ಟ ಭೌಗೋಳಿಕ ಸ್ವರೂಪ ಹೊಂದಿದೆ. ದಕ್ಷಿಣ ಏಷ್ಯಾದ ಸ್ವರೂಪ ವಿವರಿಸುವ ವ್ಯಾಖ್ಯಾನಕ್ಕೆ ಅನುಸಾರವಾಗಿ ದಕ್ಷಿಣ ಏಷ್ಯಾದ ಗಡಿಯು ಬದಲಾಗುತ್ತ ಹೋಗುತ್ತದೆ. ದಕ್ಷಿಣ ಏಷ್ಯಾದ ಉತ್ತರ, ಪೂರ್ವ ಹಾಗು ಪಶ್ಚಿಮದ ಗಡಿಯು ವ್ಯಖ್ಯಾನಗಳೊಂದಿಗೆ ಬದಲಾಗುತ್ತ ಹೋಗುತ್ತದೆ. ಹಿಂದು ಮಹಾಸಾಗರವು ದಕ್ಷಿಣ ಏಷ್ಯಾದ ದಕ್ಷಿಣದ ಗಡಿ. UN ಸಬ್ ರೀಜನ್ (ವಿಶ್ವ ಸಂಸ್ಥೆಯ ಉಪವಿಭಾಗ) ವ್ಯಾಖ್ಯಾನದ ಪ್ರಕಾರ ದಕ್ಷಿಣ ಏಷ್ಯಾದ ಉತ್ತರದ ಗಡಿ ಹಿಮಾಲಯವು , ಅದರ ಪಶ್ಚಿಮದ ಗಡಿ ಇರಾನ್-ಇರಾಕ್ ಗಡಿ, ಟರ್ಕಿ-ಇರಾನ್ ಗಡಿ, ಅರ್ಮೇನಿಯ-ಇರಾನ್ ಗಡಿ ಹಾಗು ಅಜರ್ಬೈಜಾನ್-ಇರಾನ್ ಗಡಿಗಳಾಗಿದೆ. ಮೇಲಾಗಿ, ಇದರ ಪೂರ್ವದ ಗಡಿಯು ಭಾರತ-ಬರ್ಮಾದ ಗಡಿ ಹಾಗು ಬಾಂಗ್ಲಾದೇಶ-ಬರ್ಮಾದ ಗಡಿಯಾಗಿರುತ್ತದೆ. ಈ ಭಾಗದ ಬಹುತೇಕ ಪ್ರದೇಶವು ಯುರೇಶಿಯಾದದಿಂದ ಬೇರ್ಪಟ್ಟಿರುವ, ಭಾರತೀಯ ಮೇಲ್ಮೈಯ (ಇಂಡೋ-ಆಸ್ಟ್ರೇಲಿಯನ್ ಮೇಲ್ಮೈದ ಉತ್ತರದ ಭಾಗ) ಮೇಲೆ ಸ್ಥಿತವಾಗಿರುವ,ಉಪಖಂಡವೆನಿಸಿ ದೆ. ಸುಮಾರು 50-55 ದಶಲಕ್ಷ ವರ್ಷಗಳ ಹಿಂದೆ, ಈ ಭಾಗವು ಒಂದು ಪುಟ್ಟ ಖಂಡವಾಗಿತ್ತು, ಇದು ಯುರೇಷಿಯನ್ ಮೇಲ್ಮೈಯೊಂದಿಗೆ ಸಂಲಯಿಸಿದಾಗ ಹಿಮಾಲಯ ಪರ್ವತ ಶ್ರೇಣಿ ಹಾಗು ಟಿಬೆಟ್ ಪ್ರಸ್ಥ ಭೂಮಿಯ ಉಗಮವಾಯಿತು. ಹಿಮಾಲಯ ಹಾಗು ಕ್ಯುನ್ ಲುನ್ ಪರ್ವತ ಶ್ರೇಣಿಗಳ ದಕ್ಷಿಣಕ್ಕೆ, ಇಂಡಸ್ ನದಿ ಹಾಗು ಇರಾನಿನ ಪ್ರಸ್ಥಭೂಮಿಯ ಪೂರ್ವಕ್ಕೆ ಇರುವ ಈ ಪರ್ಯಾಯ ದ್ವೀಪವು ದಕ್ಷಿಣದಲ್ಲಿ ಹಿಂದು ಮಹಾಸಾಗರದ ನೈಋತ್ಯದಲ್ಲಿ ಅರಬ್ಬಿ ಸಮುದ್ರ ಹಾಗು ಆಗ್ನೇಯದಲ್ಲಿ ಬಂಗಾಳ ಕೊಲ್ಲಿಯ ಮಧ್ಯೆ ಚಾಚಿಕೊಂಡಿದೆ. ಈ ಪ್ರದೇಶವು, ದೊಡ್ಡ ಖಂಡಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಿಮನದಿಗಳು, ಕಾಡುಗಳು, ಕಣಿವೆಗಳು, ಮರುಭೂಮಿ ಹಾಗು ಹುಲ್ಲುಹಾಸಿಗೆಗಳು ಹೀಗೆ, ದಂಗುಬಡಿಸುವಂತಹ ಅನೇಕ ಭೌಗೋಳಿಕ ವೈವಿಧ್ಯತೆ ಹೊಂದಿದೆ. ಈ ಭಾಗವು ಮೂರು ಸಮುದ್ರಗಳಾದ ಬಂಗಾಳ ಕೊಲ್ಲಿ, ಹಿಂದು ಮಹಾಸಾಗರ ಹಾಗು ಅರೇಬ್ಬಿ ಸಮುದ್ರ ದಿಂದ ಅವೃತ್ತಗೊಂಡಿದೆ. ಈ ವಿಶಾಲವಾದ ಭಾಗದ ಹವಾಮಾನವು ದಕ್ಷಿಣದಲ್ಲಿ ಉಷ್ಣವಲಯ ಮತ್ತು ಮುಂಗಾರಿನಿಂದ ಹಿಡಿದು ಉತ್ತರದ ಸಮಶೀತೋಷ್ಣ ವಲಯ ಇದೆ. ಹೀಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಬಹಳ ವೈವಿಧ್ಯತೆಯಿಂದ ಕೂಡಿದೆ. ಈ ವೈವಿಧ್ಯತೆಗೆ -ಎತ್ತರ, ಸಮುದ್ರ ತೀರದಿಂದ ಅಂತರ,ಕಾಲಕಾಲಕ್ಕೆ ಆಗುವ ಮುಂಗಾರಿನ (ಹಿಂದು ಮಹಾಸಾಗರದಲ್ಲಿ ಬೇಸಿಗೆಯಲ್ಲಿ ನೈಋತ್ಯದಿಂದ ಬೀಸುವ ಒಂದು ಕ್ಲುಪ್ತವಾದ ಗಾಳಿ) ಪರಿಣಾಮ, ಎಲ್ಲವೂ ಕಾರಣವಾಗಿದೆ. ಈ ಪ್ರದೇಶದ ದಕ್ಷಿಣದಲ್ಲಿರುವ ಭಾಗಗಳು ಬೇಸಿಗೆಯಲ್ಲಿ ಸಾಮಾನ್ಯವಾಗಿ ಸುಡುವ ಬಿಸಿಲಿದ್ದು, ಮುಂಗಾರಿನಲ್ಲಿ ಮಳೆಯಾಗುತ್ತದೆ. ಹಿಂದು-ಗಂಗಾ ಬಯಲು ಪ್ರದೇಶದ ಉತ್ತರ ವಲಯವು ಬೇಸಿಗೆಯಲ್ಲಿ ಸುಡುಬಿಸಿಲಿದ್ದರೂ ಕೂಡ ಚಳಿಗಾಲದಲ್ಲಿ ತಂಪಾಗಿರುತ್ತದೆ. ಉತ್ತರದ ಭಾಗವು ಪರ್ವತಗಳಿಂದ ಕೂಡಿದ್ದು ಶೀತವಲಯವಾಗಿದೆ, ಹಿಮಾಲಯದ ಶ್ರೇಣಿಯ ಎತ್ತರದ ಭಾಗದಲ್ಲಿ ಹಿಮಪಾತವಾಗುತ್ತಿರುತ್ತದೆ. ಉತ್ತರ-ಏಷ್ಯಾದ ಕಟು ಚಳಿಗಾಳಿಯನ್ನು ಹಿಮಾಲಯವು ತಡೆಯುವುದರಿಂದ, ಹಿಮಾಲಯದ ಕೆಳಗಿನ ಬಯಲು ಪ್ರದೇಶದ ತಾಪಮಾನವು ಸಾಕಷ್ಟು ಸೌಮ್ಯವಾಗಿರುತ್ತದೆ. ಸಾಮಾನ್ಯವಾಗಿ ಈ ಭಾಗದ ಹವಾಮಾನವು - ಮುಂಗಾರು ಋತುವಿನ ಹವಾಮಾನವಾಗಿರುತ್ತದೆ; ಅಂದರೆ ಬೇಸಿಗೆಯಲ್ಲಿ ತೇವಾಂಶ, ಹಾಗು ಚಳಿಗಾಲದಲ್ಲಿ ಒಣಹವೆಯಿರುತ್ತದೆ - ಇದು ಇಲ್ಲಿ ಸೆಣಬು , ಟೀ, ಭತ್ತ, ಹಾಗು ವಿವಿಧ ತರಕಾರಿಗಳನ್ನು ಬೆಳೆಯಲು ಸಹಾಯಕಾರಿಯಾಗಿದೆ. ಇತಿಹಾಸ ಸಾಮಾನ್ಯವಾಗಿ ದಕ್ಷಿಣ ಏಷ್ಯಾದ ಪೂರ್ವದ ಇತಿಹಾಸಪೂರ್ವ ಚರಿತ್ರೆಯು ಸಿಂಧೂತಟದ ನಾಗರೀಕತೆಯು ಸಾಮಾಪ್ತಿಯಾಗುವುದರೊಂದಿಗೆ ಪ್ರಾರಂಭವಾಗುತ್ತದೆ, ನಂತರದ ವೇದಗಳ ಕಾಲದ ಪ್ರಾಚೀನ ಕತೆಗಳು, ಮಹಾಜನಪದರ ಆಳ್ವಿಕೆಯ (ಪ್ರಾದೇಶಿಕ ಪ್ರಭುತ್ವಗಳು ಹಾಗು ನಂತರದ ಪ್ರಾಚೀನ ಸಾಮ್ರಾಜ್ಯಗಳಿಗು ಹಿಂದಿನ) ಬಗೆಗಿನ ಅಲ್ಪಸ್ವಲ್ಪ ವಿವರಗಳನ್ನು ಒಳಗೊಂಡಿದೆ. ಮಧ್ಯಕಾಲೀನ ಸಾಮ್ರಾಜ್ಯಗಳ ಐತಿಹಾಸಿಕ ವಿವರಣೆಗಳೊಂದಿಗೆ ಹಾಗು ಯುರೋಪಿನ ವ್ಯಾಪಾರಿಗಳ ಅಗಮನದೊಂದಿಗೆ ಅಂತ್ಯವಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ದಕ್ಷಿಣ ಏಷ್ಯಾದ ರಾಷ್ಟ್ರಗಳು ಒಂದಲ್ಲ ಒಂದು ಕಾಲದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಯುರೋಪಿನ ವಸಾಹತುವಿನ ದಾಸ್ಯದ ಪ್ರದೇಶಗಳಾಗಿದ್ದವು. ಗ್ರೇಟ್ ಬ್ರಿಟನ್ ಇಂದಿನ ಭಾರತದ ಬಹುಭಾಗ, ಪಾಕಿಸ್ತಾನ, ಬಂಗ್ಲಾದೇಶ ಮತ್ತು ಮಯನ್ಮಾರ್ ಎಲ್ಲವನ್ನು ಕ್ರಮೇಣವಾಗಿ ವಶಪಡಿಸಿಕೊಂಡು ಆಳ್ವಿಕೆ ನಡೆಸಿತು. ಸುಮಾರು 1757 ರಿಂದ ಪ್ರಾರಂಭವಾದ ಈ ಆಳ್ವಿಕೆಯು 1857ರಲ್ಲಿ ತನ್ನ ತುತ್ತ ತುದಿಯನ್ನು ಮುಟ್ಟಿ 1947ರ ತನಕ ಮುಂದುವರೆಯಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ನೇಪಾಳ ಹಾಗು ಭೂತಾನ ಎರಡೂ ಒಂದು ರೀತಿಯಲ್ಲಿ ಗ್ರೇಟ್ ಬ್ರಿಟನ್ ನ ಆಶ್ರಿತ ಪ್ರದೇಶಗಳಾಗಿದ್ದವು. ದಕ್ಷಿಣ ಏಷ್ಯಾದ ಶತಮಾನಗಳ ದೀರ್ಘ ಇತಿಹಾಸದಲ್ಲಿ ಯುರೋಪಿನ ಸ್ವಾಧೀನದ ಈ ಅವಧಿಯು ತೀರಾ ಚಿಕ್ಕದಾದರೂ, ಇದು ತೀರಾ ಇತ್ತೀಚೆಗೆ ನಡೆದದ್ದು, ಹಾಗು ಈ ಭಾಗದ ಮೇಲಿನ ಗಾಢ ಪ್ರಭಾವದಿಂದಾಗಿ, ಗಮನಸೆಳೆಯುತ್ತದೆ. ಸಾರಿಗೆ ಸೌಕರ್ಯ,ದೂರ ಸಂಪರ್ಕ ಜಾಲದ ವ್ಯವಸ್ಥೆ, ಬ್ಯಾಂಕುಗಳ ವ್ಯವಸ್ಥೆ, ಇವುಗಳಿಗೆ ಬೇಕಾದ ಉದ್ಯೋಗಿಗಳ ತರಬೇತಿ ವ್ಯವಸ್ಥೆ, ಹಾಗು ಪ್ರಸ್ತುತ ಇರುವ ರೈಲು, ಅಂಚೆ, ತಂತಿಅಂಚೆ, ಶಿಕ್ಷಣ ಸೌಲಭ್ಯಗಳು ಎಲ್ಲವು ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿಅಸ್ತಿತ್ವಕ್ಕೆ ಬಂದವು. ಇದನ್ನು ಸಾಮಾನ್ಯವಾಗಿ ಬ್ರಿಟಿಷ್ ರಾಜ್ ಎಂದು ಕರೆಯುತ್ತೇವೆ, ಅಲ್ಲದೇ ಇವು ಸ್ಥಾಪಿತದೊಂದಿಗೆ ಅಭಿವೃದ್ಧಿಯಾಗಿವೆ. ಎರಡನೇ ಮಹಾಯುದ್ಧದ ಅಂತ್ಯದಲ್ಲಿ ಅಂದರೆ ಸುಮಾರು 1940 ನೆ ದಶಕದ ಕಡೆಯ ಭಾಗದಲ್ಲಿ ಈ ಭಾಗದ ಬಹುತೇಕ ಭಾಗಗಳು ಯುರೋಪಿನಿಂದ ಸ್ವಾತಂತ್ರ ಪಡೆದವು. ಟಿಬೆಟ್ ಪ್ರಾಂತ್ಯವು ಕೆಲವೊಮ್ಮೆ ಸ್ವತಂತ್ರವಾಗಿ ಆಡಳಿತ ನಡೆಸಿದರೆ, ಕೆಲವೊಮ್ಮೆ ಚೀನಾದ ಆಡಳಿತಕ್ಕೆ ಒಳಪಟ್ಟಿತು., ಚೀನಾದ ವಶಕ್ಕೆ ಅದು 18ನೆ ಶತಮಾನದ ವೇಳೆಗೆ ಬಂದಿತು. ಈ ಪ್ರದೇಶವು 20 ನೇ ಶತಮಾನದ ಶುರುವಿನಲ್ಲಿ ಬ್ರಿಟಿಷ್ ರ ವಶಪಡಿಸಿಕೊಳ್ಳುವ ಪ್ರಯತ್ನದ ನಡುವೆಯೂ ಚೀನಾದವರ ಆಶ್ರಿತ ಪ್ರದೇಶವಾಗಿತ್ತು. ಚೀನಾ-ಟಿಬೆಟ್ ಸಂಬಂಧದ ಬಗ್ಗೆ ಟಿಬೆಟಿನವರ ಹಾಗು ಚೀನಿಯವರ ಅಭಿಪ್ರಾಯಗಳು ಗಮನಾರ್ಹವಾಗಿ ಬೇರೆಬೇರೆಯಾಗಿದೆ. ದಲೈ ಲಾಮರ ಮಂಚು ಚಕ್ರವರ್ತಿಯ ಜೊತೆಗಿನ ಸಂಬಂಧವನ್ನು ಟಿಬೆಟ್ ರು ಧಾರ್ಮಿಕವಾಗಿ ಕಂಡರೆ ಹೊರತು ರಾಜಕೀಯವಾಗಿ ಕಾಣಲಿಲ್ಲ. 1947 ರ ಆನಂತರದಲ್ಲಿ, ಬಹುಪಾಲು ದಕ್ಷಿಣ ಏಷ್ಯಾದ ರಾಷ್ಟ್ರಗಳು ಎಲ್ಲಾ ಕ್ಷೇತ್ರದಲ್ಲಿಯೂ ಮಹತ್ತರ ಅಭಿವೃದ್ದಿ ಸಾಧಿಸಿವೆ. ಶಿಕ್ಷಣ, ಉದ್ಯಮ, ವೈದ್ಯಕೀಯ ಸೇವೆ, ಮಾಹಿತಿ ತಂತ್ರಜ್ಞಾನ ಹಾಗು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು, ಆತ್ಯಂತ ಮುಂದುವರೆದ ವಿಜ್ಞಾನದ ಕ್ಷೇತ್ರದಲ್ಲಿನ ಸಂಶೋಧನೆಗಳು, ಸೈನಿಕ ಸಂಪನ್ಮೂಲಗಳಿಗೆ ಸಂಬಂಧ ಪಟ್ಟ ಸ್ವಾವಲಂಬಿ ಯೋಜನೆಗಳು, ಅಂತರ್-ರಾಷ್ಟ್ರೀಯ ಮತ್ತು ಜಾಗತಿಕ ವ್ಯಾಪಾರ, ವ್ಯಾಪಾರ ವಹಿವಾಟು, ಹಾಗು ಮಾನವ ಸಂಪನ್ಮೂಲಗಳ ಹೊರಗುತ್ತಿಗೆ; ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಹೀಗಾದರೂ, ಧಾರ್ಮಿಕತೆಯ ಅತಿ ಪ್ರತಿಪಾದನೆ, ಭ್ರಷ್ಷಾಚಾರ, ಗಡಿಯ ಬಗ್ಗೆ ವಿವಾದಗಳು, ಹಾಗು ಸಂಪತ್ತಿನ ನ್ಯಾಯಸಮ್ಮತ್ತವಲ್ಲದ ಹಂಚಿಕೆ ಹೀಗೆ ಹಲವಾರು ಸಮಸ್ಯೆಗಳಿವೆ. ಪ್ರದೇಶ ಹಾಗು ಪ್ರಾದೇಶಿಕ ಮಾಹಿತಿಗಳು ಸೂಚಿಸಿದಾಗ ಹೊರತುಪಡಿಸಿ 2009ರ ಜನಸಂಖ್ಯೆಯ ಅಂಕಿಅಂಶ ಪರಿಗಣಿಸಲಾಗಿದೆ. ಪ್ರಮುಖ ದೇಶಗಳು ದಕ್ಷಿಣ ಏಷ್ಯಾದ ಪ್ರಮುಖ ದೇಶಗಳು ಸುಮಾರು 4,480,000 ಚದರ ಕಿ.ಮೀ. (1,729,738 ಚದರ ಮೈಲಿಗಳು)ವ್ಯಾಪಿಸಿರುವ ಇದು ಏಷ್ಯಾದ ಸುಮಾರು ಶೇಕಡಾ 10ರಷ್ಟು ಭಾಗವಿದೆ. ಈ ಪ್ರದೇಶದ ಜನಸಂಖ್ಯೆಯು ಏಷ್ಯಾದ ಜನಸಂಖ್ಯೆಯ ಶೇಕಡಾ 40ರಷ್ಟಿದೆ. ಕೆಲವೊಂದು ವ್ಯಾಖ್ಯಾನಗಳ ಪ್ರಕಾರದ ಹೆಚ್ಚುವರಿ ದೇಶಗಳು ಹಾಗು ಪ್ರದೇಶಗಳು ಈ ಪಟ್ಟಿಯಲ್ಲಿರುವ ದೇಶಗಳ ಪೈಕಿ ಅಫ್ಘಾನಿಸ್ತಾನವನ್ನು ಹೆಚ್ಚು ಜನ ದಕ್ಷಿಣ ಏಷ್ಯಾದ ದೇಶವೆಂದು ವ್ಯಾಖ್ಯಾನಿಸುತ್ತಾರೆ. ಪ್ರಾದೇಶಿಕ ಗುಂಪುಗಳಿಗೆ ಸೇರಿದ ದೇಶಗಳು ಜನಸಂಖ್ಯಾಶಾಸ್ತ್ರ ಜನಾಂಗೀಯ ಗುಂಪುಗಳು ಬಾಂಗ್ಲಾದೇಶ ,ಭೂತಾನ,ಭಾರತ ,ಮಾಲ್ಡೀವ್ಸ್ ,ನೇಪಾಳ ,ಪಾಕಿಸ್ತಾನ ಹಾಗು ಶ್ರೀಲಂಕಾ ಗಳನ್ನು ಒಳಗೊಂಡ ದಕ್ಷಿಣ ಏಷ್ಯಾದಲ್ಲಿ ಚಿಕ್ಕ ಸಂಖ್ಯಾಬಲದ ಬುಡಕಟ್ಟಿನ ಗುಂಪಿನಿಂದ ಹಿಡಿದು ದೊಡ್ದ ದಶಲಕ್ಷ ಸಂಖ್ಯೆಯು ಸಮುದಾಯಗಳಿವೆ. ಹೀಗೆ ಒಟ್ಟು ಸುಮಾರು 2000ಕ್ಕೂ ಹೆಚ್ಚು ಜನಾಂಗೀಯ ಪ್ರಬೇಧಗಳಿದ್ದು ಜನಾಂಗೀಯವಾಗಿ ಬಹಳ ವೈವಿಧ್ಯಮಯವಾಗಿದೆ. ಹಲವಾರು ದ್ರಾವಿಡರ, ಇಂಡೋ-ಆರ್ಯನ್ ಹಾಗು ಇರಾನಿಯರ ಗುಂಪುಗಳಿವೆ. ಇದೂ ಅಲ್ಲದೆ ಇನ್ನೂ ಹಲವಾರು ಪಂಗಡಗಳು ಅನೇಕ ಶತಮಾನಗಳಿಂದ ದಕ್ಷಿಣ ಏಷ್ಯಾವನ್ನು ಹಲವಾರು ಬಾರಿ ಆಕ್ರಮಣ ಮಾಡಿ, ಅಲ್ಲಿಯ ನೆಲೆಸಿವೆ ಕೂಡ. ಮೇಲಾಗಿ ದ್ರಾವಿಡರ, ಇಂಡೋ-ಆರ್ಯನ್ ಹಾಗು ಸ್ಥಳೀಯ ಸಮಾಜದ ಜೊತೆಗಿನ ಪರಸ್ಪರ ಸಾಂಗತ್ಯವು ಹಲವಾರು ಪರಸ್ಪರ ಹೋಲುವ ನಂಬಿಕೆಗಳು, ಸಂಪ್ರದಾಯಗಳು ಹಾಗು ಆಚಾರ-ವಿಚಾರಗಳ ಒಂದು ಸಂಯುಕ್ತ ಸಂಸ್ಕೃತಿಯ ಉಗಮಕ್ಕೆ ಕಾರಣವಾಗಿದೆ. ಹೀಗಿದ್ದರೂ, ದಕ್ಷಿಣ ಏಷ್ಯಾದ ಹಲವಾರು ಪಂಗಡಗಳ ಸಂಪ್ರದಾಯಗಳು ಹಿಂದಿನ ಸಂಪ್ರದಾಯಗಳಿಗಿಂತ ಆಧುನಿಕವಾಗಿ ಮಾರ್ಪಟ್ಟು ಬೇರೆಯಾಗಿದೆ, ಹೀಗಾದಾಗ ಕೆಲವೊಮ್ಮೆ ಇದು ಗಟ್ಟಿಯಾಗಿ ಬೇರೂರಿರುವ ಪ್ರಾದೇಶಿಕ ಸಂಪ್ರದಾಯಗಳಿಗೆ, ಉದಾಹರಣೆಗೆ ದಕ್ಷಿಣ ಭಾರತ ದಂತಹರಲ್ಲಿ ವಿಶಿಷ್ಟ ಸಂಸ್ಕೃತಿಯ ಉಗಮಕ್ಕೆ ಕಾರಣವಾಗಿದೆ. ನಂತರ ಮುಖ್ಯವಾಗಿ ಮಧ್ಯೆ ಏಷ್ಯಾ ಹಾಗು ಇರಾನನಿಂದ ಒಬ್ಬರ ಹಿಂದೆ ಒಬ್ಬರ ಹಾಗೆ ಬಂದಂತಹ ಶಕರು, ಕುಶಾನರು, ಹನ್ಸರು ಮೊದಲಾದ ಜನಾಂಗೀಯ ಪಂಗಂಡದವರು ದಕ್ಷಿಣ ಏಷ್ಯಾದಲ್ಲಿದ ಮುಂಚೆಯೆ ಇದ್ದ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದವು. ಇವರಲ್ಲಿ ಕೊನೆಯದಾಗಿ ಬಂದವರೆಂದರೆ ಅರಬ್ಬರು, ಇವರ ಹಿಂದೆ ತುರ್ಕರು ಪಶ್ತೂನರು,(ಗುಡ್ಡಗಾಡು ಜನಾಂಗ) ಹಾಗು ಮೊಘಲರು ಬಂದರು. ಆದರೆ, ಸಂಸ್ಕೃತಿಯ ಮೇಲೆ ಅರಬ್ಬ್ ರ ಪ್ರಭಾವಕ್ಕೆ ಹೋಲಿಸಿದರೆ ತುರ್ಕರ,ಪಶ್ತೂನರ, ಮೊಘಲರಿಗೆ ಹೋಲಿಸಿದರೆ ಅಲ್ಪವಾಗಿದೆ. ಇವರುಗಳ ಸಾಂಸ್ಕೃತಿಕ ಪ್ರಭಾವದಿಂದಾಗಿ, ಇಂದೂ ಪ್ರಚಲಿತದಲ್ಲಿರುವ ಉರ್ದು ಎಂಬ (ಭಾರತ-ಪರಶೀಯನ್ ಪರಂಪರೆಯ) ಸಮನ್ವಯದ ಭಾಷೆಯ ಜನ್ಮಕ್ಕೆ ಕಾರಣವಾಯಿತು. ಇಂಗ್ಲೀಷ್ ಜನಾಂಗದವರು ಹಾಗು ಇತರ ಬ್ರಿಟನ್ ರು ಈ ಪ್ರದೇಶದ ಮೇಲೆ ತಮ್ಮ ಎರಡು ಶತಕಗಳ ದೀರ್ಘ ಕಾಲದ ಆಳ್ವಿಕೆಯ ನಂತರ ಇಂದು ಸಾಮಾನ್ಯವಾಗಿ ಇಲ್ಲವಾದರೂ ಕೂಡ ಸಮಾಜದ ಶ್ರೇಷ್ಠರ ಮೇಲೆ ಇವರು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವನ್ನು ಅಚ್ಚೊತ್ತಿದ್ದಾರೆ. ಭಾಷೆಗಳು ಈ ಪ್ರದೇಶದ ಬಹುಸಂಖ್ಯಾತ ಜನ ಅಂದರೆ ಸುಮಾರು 422 ದಶಲಕ್ಷ ಜನ ಮಾತನಾಡುವ ಭಾಷೆಯಾಗಿ ಮೊದಲ ಸ್ಥಾನದಲ್ಲಿ ಹಿಂದಿ ಇದ್ದರೆ; ಬೆಂಗಾಳಿ, ಸುಮಾರು 210 ದಶಲಕ್ಷ ಜನ ಮಾತನಾಡುವ ಭಾಷೆಯಾಗಿ, ಅತೀ ಹೆಚ್ಚು ಜನ ಮಾತಾನಾಡುವ ಎರಡನೇ ಭಾಷೆಯಾಗಿದೆ. ಉರ್ದುವು ಕೂಡ ಉಪಖಂಡದ,ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನ ಹಾಗು ಭಾರತದ , ಪ್ರಮುಖ ಭಾಷೆಯಾಗಿದೆ. ಭಾಷಾಶಾಸ್ತ್ರದ ಅಧಾರದ ಮೇಲೆ ಹೇಳುವುದಾದರೆ ಉರ್ದುವು ಹಿಂದಿಯನ್ನೇ ಬಹುತೇಕ ಹೋಲುತ್ತದೆ. ಹಿಂದಿ ಹಾಗು ಉರ್ದು ಎರಡು ಸೇರಿ ಹಿಂದೂಸ್ಥಾನಿಯಾಗುತ್ತದೆ. ಹಿಂದಿಯನ್ನು ಭಾರತದ ಬಹಳ ರಾಜ್ಯಗಳಲ್ಲಿ ಮಾತಾನಾಡುತ್ತಾರೆ, ಇದು ಭಾಷಿಕವಾಗಿ ಉರ್ದುವನ್ನು ಹೋಲುತ್ತದೆ. ಬಹುತೇಕ ಭಾರತೀಯರು ಸ್ಥಳೀಯ, ಪ್ರಾದೇಶಿಕ ಭಾಷೆ ಮಾತನಾಡುತ್ತಾರೆ. ಅಲ್ಲದೇ ಇವರಿಗೆ ಹಿಂದಿ ಚೆನ್ನಾಗಿ ಗೊತ್ತಿರುವುದಿಲ್ಲ; ಎಂಬ ವಿಷಯವೆ ಅನೇಕರಿಗೆ ತಿಳಿದಿರುವುದಿಲ್ಲ. ಈ ಭಾಗದ ಬೇರೆ ಭಾಷೆಗಳು ಕೆಲವು ಪ್ರಮುಖ ಭಾಷಾಧ್ಯಯನದ ಗುಂಪುಗಳಾದ ದ್ರಾವಿಡರ ಭಾಷಾ ಇಂಡೋ-ಆರ್ಯನ್ ಭಾಷಾ, ಹಾಗು ಇಂಡೋ-ಯುರೋಪಿಯನ್ ಭಾಷಾ ಗುಂಪಿನ ಉಪವಿಭಾಗವಾದ ಇಂಡೋ-ಇರಾನಿಯನ್ ಭಾಷಾ ವಿಭಾಗಗಳಿಗೆ ಸೇರುತ್ತವೆ. ಇಂಡೋ-ಇರಾನಿಯನ್ ಭಾಷಾ ವಿಭಾಗದ ಮತ್ತೊಂದು ಮುಖ್ಯವಾದ ಉಪವಿಭಾಗವಾದ ಇರಾನಿಯನ್ ಭಾಷೆ ಕೂಡ ಇಂದಿನ ಪಾಕಿಸ್ತಾನದ ವಾಯವ್ಯದ ಗಡಿ ಭಾಗದಲ್ಲಿರುವ ಪಶ್ತೂ ಹಾಗು ಬಲೂಚಿ ಗಳಿಂದ ವ್ಯಾಪಕವಾಗಿ ಬಳಸಲಾಗುತ್ತದೆ. ಟಿಬೆಟೊ-ಬರ್ಮನ್ ಗೆ ಸೇರಿದ ಹಲವಾರು ಜನಾಂಗಗಳು, ಅವರವರ ಸ್ಥಳೀಯ ಭಾಷೆಯನ್ನಾಡುವ, ಭಾರತದ ಈಶಾನ್ಯ ರಾಜ್ಯಗಳಲ್ಲಿ, ಟಿಬೆಟ್, ನೇಪಾಳ ಹಾಗಿ ಭೂತಾನಿನಲ್ಲಿ ಕಾಣಸಿಗುತ್ತಾರೆ. ಇದಲ್ಲದೆ ಆಸ್ಟ್ರೋ-ಏಷಿಯಾಟಿಕ್ ಭಾಷಾ ವಿಭಾಗಕ್ಕೆ ಸೇರಿದ ಭಾಷೆಗಳನಾಡುವ ಚಿಕ್ಕ ಪಂಗಡಗಳು ಕೂಡ ದಕ್ಷಿಣ ಏಷ್ಯಾದಲ್ಲಿ ಸಿಗುತ್ತವೆ. ಮೇಲಾಗಿ, ಇಂಗ್ಲೀಷ್ ಭಾಷೆ ಕೂಡ ದಕ್ಷಿಣ ಏಷ್ಯಾದಲ್ಲಿ ಪ್ರಧಾನ ಭಾಷೆಯಾಗಿದೆ. ಅದರಲ್ಲೂ ಮುಖ್ಯವಾಗಿ ಉನ್ನತ ಶಿಕ್ಷಣ ಹಾಗು ಸರ್ಕಾರಿ ಆಡಳಿತದ ಮಾಧ್ಯಮವಾಗಿದೆ.ದಕ್ಷಿಣ ಏಷ್ಯಾದ ಬಹಳ ಜನ ಬರೆಯಲು ಬ್ರಾಹ್ಮಿ ಮೂಲದ ಅಬುಗಿಡಗಳನ್ನು ಬಳಸಿದರೆ, ಇನ್ನು ಕೆಲವರು ಪೆರ್ಸೋ-ಆರೆಬಿಕ್ ಲಿಪಿಯಿಂದ ಪಡೆದಂತಹ ಉರ್ದು, ಪಶ್ತೂ, ಸಿಂಧಿ ಭಾಷೆಗಳನ್ನು ಉಪಯೋಗಿಸುತ್ತಾರೆ. ದಕ್ಷಿಣ ಏಷ್ಯಾದ ಎಲ್ಲಾ ಭಾಷೆಗಳು ಈ ದ್ವಿಭಜನೆಯನ್ನು ಪಾಲಿಸುವುದಿಲ್ಲ. ಉದಾಹರಣೆಗೆ: ಕಾಶ್ಮೀರಿ ಯನ್ನು ಪೆರ್ಸೋ-ಆರೆಬಿಕ್ ಲಿಪಿ ಹಾಗು ದೇವನಾಗರಿ ಲಿಪಿಯನ್ನು ಎರಡರಲ್ಲಿಯು ಬರೆಯುತ್ತಾರೆ. ಹೀಗೆಯೆ, ಪಂಜಾಬಿಯನ್ನು ಕೂಡ ಶಾಹಮುಕಿ ಹಾಗು ಗುರುಮುಕಿ ಎಂಬ ಎರಡು ಲಿಪಿಯನ್ನು ಬಳಸಿ ಬರೆಯಬಹುದು. ಧಿವೆಹಿ ಯನ್ನು ಆರೇಬಿಕ್ ಅಕ್ಷರಗಳು ಹಾಗು ಒಂದು ಅಬುಗಿಡದ ಗುಣಗಳಿರುವ ಟಾನ ಎಂಬ ಲಿಪಿ ಯನ್ನು ಬಳಸಿ ಬರೆಯುತ್ತಾರೆ. ಧರ್ಮಗಳು ದಕ್ಷಿಣ ಏಷ್ಯಾದಲ್ಲಿ ಹಿಂದೂ ಧರ್ಮ ಹಾಗು ಇಸ್ಲಾಂ ಧರ್ಮ , ಇತರ ಕೆಲವು ದೇಶಗಳಲ್ಲಿ ಬೌದ್ಧ ಧರ್ಮಪ್ರಬಲ ವಾಗಿದೆ. ಇದಲ್ಲದೆ ಗಮನಾರ್ಹ ಸಂಖ್ಯೆಯ ಜನ ಕ್ರೈಸ್ಥ ಧರ್ಮ ಹಾಗು ಇತರ ಭಾರತೀಯ ಧರ್ಮಗಳನ್ನು ಅನುಸರಿಸುತ್ತಾರೆ.ಐತಿಹಾಸಿಕವಾಗಿ, ಇಂಡೋ-ಆರ್ಯನ್ , ವೈದಿಕ ಧರ್ಮದ ಜೊತೆಗೆ ಸ್ಥಳಿಯ ದಕ್ಷಿಣ ಏಷ್ಯಾದ ಶ್ರಮಣ ಸಂಪ್ರದಾಯ ಮುಂತಾದ ಇತರೆ ದ್ರಾವಿಡ ಮತ್ತು ಸ್ಥಳೀಯ ಬುಡಕಟ್ಟುಗಳ ನಂಬಿಕೆಗಳೊಂದಿಗಿದೆ. ಈ ಸಾಂಗತ್ಯವು ಮೊದಲು ಪ್ರಾಚೀನ ಧರ್ಮಗಳಾದ ಹಿಂದೂ, ಜೈನ ಹಾಗು ಬೌದ್ಧ ಧರ್ಮ ಹಾಗು ನಂತರ ಸಿಖ್ ಧರ್ಮಗಳ ಉಗಮಕ್ಕೆ ಕಾರಣವಾಯಿತು. ಸಿಖ್ ಧರ್ಮದ ಪ್ರಾರಂಭದ ದಿನಗಳಲ್ಲಿ ಹಾಗು ಅದರ ಪವಿತ್ರ ಧರ್ಮಗ್ರಂಥಗಳ ಮೇಲೆ ಇಸ್ಲಾಂನ ಸೂಫಿ ಸಂಪ್ರಾದಾಯಗಳು ಕೂಡ ಪ್ರಭಾವ ಬೀರಿದವು. ಹೀಗಾಗಿ, ಈ ನಾಲ್ಕು ಧರ್ಮಗಳಲ್ಲಿ ಒಂದೆ ರೀತಿಯ ಹಲವಾರು ಸಾಂಸ್ಕೃತಿಕ ಆಚರಣೆ, ಹಬ್ಬ ಹಾಗು ಸಂಪ್ರಾದಯಗಳಿವೆ.ಅಬ್ರಾಹಾಮಿಕ್ ಧರ್ಮವಾದ ಇಸ್ಲಾಂ ಧರ್ಮವನ್ನು ಅರಬ್ಬರು ಮೊದಲು ದಕ್ಷಿಣ ಏಷ್ಯಾದ ಇಂದಿನ ಕೇರಳ ಹಾಗು ಮಾಲ್ಡಿವ್ ದ್ವೀಪ, ಹಾಗು ನಂತರ ಸಿಂಧ್, ಬಲೂಚಿಸ್ಥಾನ ಹಾಗು ಪಂಜಾಬಿನ ಬಹುತೇಕ ಪ್ರದೇಶಗಳಲ್ಲಿ ಆಚರಣೆಗೆ ತಂದರು. ಆನಂತರದ ದಿನಗಳಲ್ಲಿ, ಮುಸ್ಲಿಂ ಟರ್ಕರು/ಪಶ್ತೂನರು/ಮೊಘಲರು ಈ ಧರ್ಮವನ್ನು ಪಂಜಾಬಿ ಕಾಶ್ಮೀರಿದ ಜನರಿಗಷ್ಟೆ ಅಲ್ಲದೆ ಹಿಂದೂ-ಗಂಗಾ ಬಯಲು ಪ್ರದೇಶದ ಸುತ್ತಲೂ, ಹಾಗು ದಕ್ಷಿಣದ ಡೆಕ್ಕನ್ ವರೆಗೆ ಹರಡಿದರು. ವಿತ್ತ/ಆರ್ಥಿಕ ವ್ಯವಸ್ತೆ ತಲಾವಾರು ಒಟ್ಟು ರಾಷ್ಟ್ರೀಯ ಅದಾಯದ (GDP ಪರ್ ಕ್ಯಾಪಿಟಾ) ಸೂಚಂಕ್ಯ ಅತೀ ಕಡಮೆಯಿರುವ ದಕ್ಷಿಣ ಏಷ್ಯಾ, ಆಫ್ರಿಕಾ ಉಪ-ಸಹಾರದ ಮಾದರಿಯಲ್ಲಿಯೇ ಪ್ರಪಂಚದ ಅತ್ಯಂತ ಬಡ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಬಡತನವು ಎಲ್ಲಾ ಭಾಗಗಳಲ್ಲಿ ವ್ಯಾಪಿಸಿದೆ. ವಿಶ್ವಬ್ಯಾಂಕಿನ ಬಡತನದ ಮಾಹಿತಿಯ (ಆಧ್ಯಯನದ) ಪ್ರಕಾರ, 2005ರಲ್ಲಿ ಈ ಭಾಗದ ಶೇಕಡಾ 40ಕಿಂತಲೂ ಅಧಿಕ ಜನ ದಿನಕ್ಕೆ 1.25 ಡಾಲರ್ ಗಿಂತ ಕಡಿಮೆ ಹಣದಲ್ಲಿ ಬದುಕುತ್ತಿದ್ದಾರೆ . (ಭಾರತದಲ್ಲಿ ಸುಮಾರು ಶೇಕಡಾ 45ರಷ್ಟು ಜನ ಈ ಬಡತನದ ರೇಖೆಗಿಂತ ಕೆಳಗಿದ್ದಾರೆ) ಇದಕ್ಕೆ ಹೋಲಿಸಿದರೆ ಆಫ್ರಿಕಾ ಉಪ-ಸಹಾರ ಪ್ರದೇಶದ ಶೇಕಡಾ 50ರಷ್ಟು ಜನರು ಈ ರೇಖೆಗಿಂತ ಕೆಳಗಡೆ ಇದ್ದಾರೆ. ಈ ಪ್ರದೇಶದಲ್ಲಿ ಭೂತಾನವು ಅತಿಹೆಚ್ಚು ತಲಾವಾರು ಒಟ್ಟು ರಾಷ್ಟ್ರೀಯ ಆದಾಯ (GDP ಪರ್ ಕ್ಯಾಪಿಟಾ) ಹೊಂದಿದ್ದರೆ, ನೇಪಾಳ ಅತಿ ಕಡಿಮೆ ಹೊಂದಿದೆ. ಭಾರತ ಈ ಭಾಗದ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿದೆ. ಇದು ಜಗತ್ತಿನ 12ನೇ ದೊಡ್ಡ ಆರ್ಥಿಕ ವ್ಯವಸ್ಥೆಯೆಂದು, ಅಥವಾ ಖರೀದಿಸುವ ಶಕ್ತಿ ಹಾಗು ವಿನಿಮಯದರವನ್ನು ಸರಿಹೊಂದಿಸಿ ಹೇಳುವುದಾದರೆ ಇದು ಜಗತ್ತಿನ 4ನೇ ದೊಡ್ಡ ವ್ಯವಸ್ಥೆಯೆಂದು ಪರಿಗಣಿಸಲ್ಪಟ್ಟಿದೆ. ಪಾಕಿಸ್ತಾನ ಈ ಪ್ರದೇಶದ ಎರಡನೇ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿದೆ. ಅದಲ್ಲದೇ ಇದು ಪ್ರತಿವ್ಯಕ್ತಿಯ ರಾಷ್ಟ್ರೀಯ ಆದಾಯದ ಪ್ರಕಾರ ಐದನೇ ಸ್ಥಾನ ಪಡೆದಿದೆ, ನಂತರದ ಸ್ಥಾನದಲ್ಲಿ ಬಂಗ್ಲಾದೇಶವಿದೆ. ಇರಾನ್ ಕೂಡ ಈ ಪ್ರದೇಶಕ್ಕೆ ಸೇರಿದ ದೇಶವೆಂದು ಪರಿಗಣಿಸಿದರೆ, ಆಗ ಇರಾನ್ ಈ ಪ್ರದೇಶದ ಆತ್ಯಂತ ಶ್ರೀಮಂತ ಹಾಗು ಎರಡನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗುತ್ತದೆ. ವಿಶ್ವ ಬ್ಯಾಂಕಿನ 2007ರ ವರದಿಯ ಪ್ರಕಾರ ದಕ್ಷಿಣ ಏಷ್ಯಾವು ಪ್ರಪಂಚದಲ್ಲಿಯೆ ಅತ್ಯಂತ ಕಡಿಮೆ ಆರ್ಥಿಕವಾಗಿ ಸಂಘಟಿತವಾಗಿರುವ ಪ್ರದೇಶವೆಂದು ಪರಿಗಣಿಸಲ್ಪಟ್ಟಿದೆ; ದಕ್ಷಿಣ ಏಷ್ಯಾದ ದೇಶಗಳ ನಡುವಿನ ವ್ಯಾಪಾರವು ಈ ಪ್ರದೇಶದ ಒಟ್ಟು ರಾಷ್ಟ್ರೀಯ ಆದಾಯವು ಸುಮಾರು ಶೇಕಡಾ 2ರಷ್ಟು ಮಾತ್ರ ಇದೆ. ಇದಕ್ಕೆ ಹೋಲಿಸಿದರೆ ಪೂರ್ವ ಏಷ್ಯಾದಲ್ಲಿ ಇದು ಸುಮಾರು ಶೇಕಡಾ 20ರಷ್ಟಿದೆ. ರಾಜಕೀಯ ಭಾರತವು ಈ ಭಾಗದ ಪ್ರಭಾವಶಾಲಿ ರಾಜಕೀಯ ಶಕ್ತಿ. ಈ ಉಪಖಂಡದ ಒಟ್ಟು ಭೂಪ್ರದೇಶದ ಸುಮಾರು ಮೂರನೇ-ನಾಲ್ಕರಷ್ಟು ಭಾಗವನ್ನು ವ್ಯಾಪಿಸಿರುವ ಭಾರತ ಈ ಭಾಗದ ಅತಿ ದೊಡ್ಡ ದೇಶವೆಂಬ ಅಂಶವು ಇದಕ್ಕೆ ಪೂರಕವಾಗಿದೆ. ಇದು ಈ ಪ್ರದೇಶದ ಆತ್ಯಂತ ಹೆಚ್ಚು ಜನಸಂಖ್ಯೆಯಿರುವ ದೇಶ-ಅಂದರೆ ಈ ಉಪಖಂಡದ ಉಳಿದ ಆರು ದೇಶಗಳ ಒಟ್ಟು ಜನಸಂಖ್ಯೆಯ ಸುಮಾರು ಮೂರರಷ್ಟು ದೊಡ್ಡದಾಗಿದೆ. ಭಾರತವು ಜಗತ್ತಿನ ಅತಿ ದೊಡ್ಟ ಪ್ರಜಾಪ್ರಭುತ್ವ ಹಾಗು ಅಣ್ವಸ್ತ್ರ ದೇಶವಾಗಿದೆ. ವಿಸ್ತೀರ್ಣವಾರು ಹಾಗು ಜನಸಂಖ್ಯೆಯ ಪ್ರಕಾರ ಈ ಉಪಖಂಡದ ಎರಡನೇ ದೊಡ್ಡ ದೇಶ - ಪಾಕಿಸ್ತಾನ, ಸಂಪ್ರದಾಯಿಕವಾಗಿ ಇದು ಅರಬ್ ರಾಷ್ಟ್ರಗಳು ಹಾಗು ನೆರೆಯ ಚೀನಾ ದೇಶದೊಂದಗಿನ ತನ್ನ ಅನುಕೂಲಕರ ಸಂಬಂಧದಿಂದಾಗಿ ಈ ಪ್ರದೇಶದ ಶಕ್ತಿಸಮತೋಲನವನ್ನು ಕಾಪಾಡಿಕೊಂಡಿದೆ. ಪಾಕಿಸ್ತಾನ ಜಗತ್ತಿನಲ್ಲಿ ಜನಸಂಖ್ಯೆಯ ಪ್ರಕಾರ ಆರನೇ ದೊಡ್ದ ದೇಶ. ಮೇಲಾಗಿ, ಇದು ಕೂಡ ಆಣ್ವಸ್ತ್ರ ಹೊಂದಿರುವ ರಾಷ್ಟ್ರ. ಆರೋಗ್ಯ ಮತ್ತು ಪೌಷ್ಟಿಕತೆ ವಿಶ್ವಬ್ಯಾಂಕಿನ ಪ್ರಕಾರ ದಕ್ಷಿಣ ಏಷ್ಯಾದ ಜನಸಂಖ್ಯೆಯ ಶೇಕಡ 70ರಷ್ಟು ಜನ ಹಾಗು ದಕ್ಷಿಣ ಏಷ್ಯಾದ ಸುಮಾರು ಶೇಕಡ75ರಷ್ಟು ಬಡವರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಅದಲ್ಲದೇ ಅವರಲ್ಲಿ ಬಹಳ ಮಂದಿ ತಮ್ಮ ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ ಜಗತ್ತಿನಲ್ಲಿ ದಕ್ಷಿಣ ಏಷ್ಯಾವು ಮಕ್ಕಳ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ಒಂದಾಗಿದೆ. UNICEF (ಯುನಿಸೆಫ್) ಇತ್ತೀಚಿಗೆ 2008ರಲ್ಲಿ ಪ್ರಕಟಿಸಿರುವ ಹಸಿವಿನ ಕುರಿತು ನಡೆಸಿದ ಜಾಗತಿಕ ಆಧ್ಯಯನದ ವರದಿಯ ಪ್ರಕಾರ (ಅಪೌಷ್ಟಿಕತೆಯಿಂದ) ಸಾವಿಗೀಡಾಗುವ ಮಕ್ಕಳ ಸಂಖ್ಯೆ ಸುಮಾರು 2.1 ದಶಲಕ್ಷ. ಭಾರತವು 2008ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 66ನೇ ಸ್ಥಾನದಲ್ಲಿದೆ. ಈ ಹಿಂದೆ 2006ರ ವರದಿಯ ಪ್ರಕಾರ "ಈ ಪ್ರದೇಶದಲ್ಲಿ ಕಡಿಮೆ ತೂಕದ ಮಕ್ಕಳ ಸಂಖ್ಯೆಯು ಹೆಚ್ಚಾಗಿರುವುದಕ್ಕೆ ಪ್ರಮುಖ ಕಾರಣ- ದಕ್ಷಿಣ ಏಷ್ಯಾದಲ್ಲಿನ ಮಹಿಳೆಯರ ಹೀನಸ್ಥಿತಿಯು ಹಾಗು ಪೌಷ್ಟಿಕತೆಯ ವಿಚಾರದಲ್ಲಿ ಅವರ ಆಜ್ಞಾನ" ಎಂದು ಹೇಳಿದೆ. ಭಾರತದಲ್ಲಿ ಆಹಾರದ/ಪೌಷ್ಟಿಕತೆಯ ಸಮಸ್ಯೆಗೆ ಭ್ರಷ್ಟಚಾರ ಹಾಗು ಸರಕಾರ ಈ ದಿಸೆಯಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಕೊರತೆಯೆ ಪ್ರಮುಖ ಕಾರಣ. ಹಳ್ಳಿಗಳಲ್ಲಿನ ಅನಕ್ಷರತೆಯು ಪ್ರಮುಖ ಸಮಸ್ಯೆಯಾಗಿದೆ. ಅಲ್ಲದೇ ಇದರ ಬಗ್ಗೆ ಸರಕಾರ ವಿಶೇಷ ಗಮನ ಹರಿಸಬೇಕಾಗಿದೆ. ಈ ವರದಿ ಹಸಿರು ಕ್ರಾಂತಿಯಿಂದಾಗಿ ದಕ್ಷಿಣ ಏಷ್ಯಾದಲ್ಲಿ ಅಪೌಷ್ಟಿಕತೆಯ ಪ್ರಮಾಣ ಕಡಮೆಯಾಗಿದೆಯಾದರೂ, ದಕ್ಷಿಣ ಏಷ್ಯಾದಲ್ಲಿನ ಅಸಮರ್ಪಕ ಆಹಾರ ಹಾಗು ಮಕ್ಕಳ ಆರೈಕೆಯ ಪದ್ದತಿಗಳು ಕಳವಳದ ವಿಷಯಗಳಾಗಿದೆ ಎಂದು ಹೇಳಿದೆ.. ಇವನ್ನೂ ನೋಡಿ ಬೃಹತ್ ಭಾರತ ಭಾರತಶಾಸ್ತ್ರ ದಕ್ಷಿಣ ಏಷ್ಯಾದ ಪಾಕಪದ್ಧತಿ ಭಾರತೀಯ ಉಪಖಂಡ ಟಿಪ್ಪಣಿಗಳು ಮತ್ತು ಉಲ್ಲೇಖಗಳು ಬಾಹ್ಯ ಕೊಂಡಿಗಳು ವರ್ಲ್ದ ಬ್ಯಾಂಕ್, ಸೌತ್ ಏಷ್ಯಾ ರೀಜನ್ ಬಿಬಿಸಿ ನ್ಯೂಸ್ ಸೌತ್ ಏಷ್ಯಾ ಬರ್ಡಿಂಗ್ ಇನ್ ಸೌತ್ ಏಷ್ಯಾ ಸೌತ್ ಏಷ್ಯನ್ ಆವೆರ್ನೆಸ್ ನೆಟ್ ವರ್ಕ್ ಕಾನ್ಫರೆನ್ಸ್ ವೆಬ್ ಸೈಟ್ ಡಿಜಿಟಲ್ ಸೌತ್ ಏಷ್ಯಾ ಲೈಬ್ರರಿ ದಕ್ಷಿಣ ಏಷ್ಯಾ ಏಷ್ಯಾದ ಪ್ರದೇಶಗಳು ಏಷ್ಯಾ ಖಂಡ ಭೂಗೋಳ
2584
https://kn.wikipedia.org/wiki/%E0%B2%8E%E0%B2%B8%E0%B3%8D.%E0%B2%AA%E0%B2%BF.%E0%B2%AC%E0%B2%BE%E0%B2%B2%E0%B2%B8%E0%B3%81%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%A3%E0%B3%8D%E0%B2%AF%E0%B2%82
ಎಸ್.ಪಿ.ಬಾಲಸುಬ್ರಹ್ಮಣ್ಯಂ
ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ(ಎಸ್‍ಪಿಬಿ) (೪ನೇ ಜೂನ್, ೧೯೪೬ - ೨೫ನೇ ಸೆಪ್ಟೆಂಬರ್ ೨೦೨೦) ಭಾರತದ ಖ್ಯಾತ ಹಿನ್ನೆಲೆ ಗಾಯಕರು. ಭಾರತದ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತೀಯ ಸಾಧನೆ. ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲಿ ಅವರು ನಿರಂತರವಾದ ಸಾಧನೆ ಮಾಡಿದ್ದಾರೆ. ಜನನ, ಜೀವನ ಬಾಲಸುಬ್ರಹ್ಮಣ್ಯಂ ಅವರು ಹುಟ್ಟಿದ ದಿನ ಜೂನ್ ೪, ೧೯೪೬. ಅವರು ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು. ಬಾಲು ವ್ಯವಸ್ಥಿತವಾಗಿ ಸಂಗೀತ ಕಲಿಯಲಿಲ್ಲ. ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ.ಸಾಂಬಮೂರ್ತಿ ಯವರೇ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆದರು. ಮುಂದೆ ಮೇರು ಪ್ರಸಿದ್ಧಿ ಪಡೆದ ನಂತರದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು. ೧೯೬೬ರ ವರ್ಷದಲ್ಲಿ ಬಾಲು ಅವರು, ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದರು. ಇಬ್ಬರಿಂದಲೂ ಅವರಿಗೆ ಮೆಚ್ಚುಗೆಯ ಸುರಿಮಳೆಯಾಯಿತು. ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ 'ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ'ದಲ್ಲಿ ಹಾಡಲು ಬಾಲೂಗೆ ಅವಕಾಶ ನೀಡಿದರು. ಬಾಲು ಹೇಳುತ್ತಾರೆ 'ನಾನು ಘಂಟಸಾಲ ಅವರ ಏಕಲವ್ಯ ಶಿಷ್ಯ'. ಆಗಷ್ಟ್ ೫ರಂದು ಅವರಿಗೆ ಕೋವಿಡ್ ಸೊಂಕು ತಗಲಿರುವುದು ದೃಡಪಟ್ಟಿತು. ೫೧ ದಿನಗಳ ಸುದೀರ್ಘ ಹೋರಾಟದ ನಂತರ ಸೆಪ್ಟೆಂಬರ್ ೨೫ರಂದು ಚೆನೈನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಎಲ್ಲೆಲ್ಲೂ ಸಂದವರು ಆಗೊಂದು ಯುಗ, ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ ಎಂ ಸೌಂದರ್ ರಾಜನ್, ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಸಾರ್ವಭೌಮರು. ಬಾಲು ಚಿತ್ರರಂಗಕ್ಕೆ ಬಂದು ಈ ಎಲ್ಲ ಭಾಷೆಗಳಿಗೂ ಸಾರ್ವಭೌಮರಾಗಿಬಿಟ್ಟರು. ಒಮ್ಮೆ ಅವರು ತಮಿಳು ತೆಲುಗಿನಲ್ಲಿ ಒಂದೇ ದಿನದಲ್ಲಿ ೧೯ ಗೀತೆಗಳನ್ನು ಧ್ವನಿಮುದ್ರಿಸಿದ್ದರು. ಕನ್ನಡದಲ್ಲಿ ಒಂದೇ ದಿನ ೧೭ ಗೀತೆಗಳನ್ನು ಧ್ವನಿಮುದ್ರಿಸಿದ್ದರು, ಹಿಂದಿಯಲ್ಲಿ ಒಂದೇ ದಿನ ೧೬ ಹಾಡುಗಳನ್ನು ಧ್ವನಿಮುದ್ರಿಸಿದ್ದರು. ಇದು ಎಸ್ ಪಿ ಬಿ ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆ, ಅವರಿಗಿರುವ ವೈಶಾಲ್ಯತೆಗಳಿಗಿರುವ ನಿದರ್ಶನ. ಸಂಗೀತ ಪ್ರಧಾನವಾದ ಭಾರತೀಯ ಚಿತ್ರರಂಗದಲ್ಲಿ ಒಂದು ರೀತಿಯಲ್ಲಿ ಹಿನ್ನೆಲೆ ಗಾಯಕರು ಅಭಿನಯಿಸುವವರ ಆತ್ಮವಿದ್ದಂತೆ. ಇದನ್ನೇ ಡಾ. ರಾಜ್ ಕುಮಾರ್ ಅವರು ಒಮ್ಮೆ ಪಿ ಬಿ ಎಸ್ ಬಗ್ಗೆ ಹೇಳುತ್ತಾ ‘ಪಿ ಬಿ ಎಸ್ ನನ್ನ ಆತ್ಮ, ನಾನು ಶರೀರ’ ಎನ್ನುತ್ತಿದ್ದರು. ರಾಜ್ ಕಪೂರ್ ಮುಖೇಶ್ ಬಗ್ಗೆ ಇದನ್ನೇ ಹೇಳುತ್ತಿದ್ದರು. ಹಾವಿನ ದ್ವೇಷ ಹನ್ನೆರಡು ವರುಷ ಎಂದು ಎಸ್. ಪಿ. ಹಾಡಿದಾಗ ವಿಷ್ಣುವರ್ಧನ್ ರಾಮಾಚಾರಿಯಾಗಿಬಿಟ್ಟರು. ಸ್ನೇಹದ ಕಡಲಲ್ಲಿ ಎಂದು ಹಾಡಿದಾಗ ಶ್ರೀನಾಥ್ ಗರಿಗೆದರಿಬಿಟ್ಟರು. ಎಲ್ಲಿರುವೇ ಮನವ ಕಾಡುವ ರೂಪಸಿಯೇ ಎಂದು ಅನಂತ್ ನಾಗ್ ಆಕಾಶಕ್ಕೆ ಹಾರಿದರು. ನಲಿವಾ ಗುಲಾಬಿ ಹೂವೆ ಎಂದು ಶಂಕರ್ ಭಾವಸ್ಥರಾದರು. ದಕ್ಷಿಣ ಭಾರತದ ರಜನೀಕಾಂತ್, ಕಮಲಹಾಸನ್, ಚಿರಂಜೀವಿ ಹೀಗೆ ಎಪ್ಪತ್ತು ಎಂಭತ್ತರ ದಶಕದಿಂದ ಎರಡು ಸಾವಿರದ ದಶಕದವರೆಗಿನ ಬಹುತೇಕ ಹೀರೋಗಳ ಅಂತರ್ಧ್ವನಿ ಶಕ್ತಿ ಬಾಲು ಅವರದ್ದು. ಅವರ ಧ್ವನಿಯ ಮೋಡಿ ಎಂ.ಜಿ. ಆರ್, ಶಿವಾಜಿ ಗಣೇಶನ್, ಎನ್ ಟಿ ರಾಮರಾವ್, ರಾಜ್ ಕುಮಾರ್, ಅಕ್ಕಿನೇನಿ ಅಂತಹ ಹಿರಿಯರಿಗೆ ಕೂಡಾ ಆಗಾಗ ಇಣುಕಿತ್ತು. ಹಿಂದಿಯಲ್ಲಿ ಏಕ್ ದೂಜೇ ಕೆ ಲಿಯೇ ಬಂದಾಗ ಬಾಲು ಹಿಂದಿ ಚಿತ್ರರಂಗವನ್ನೂ ತಮ್ಮ ಮೋಡಿಗೆ ಸೆಳೆದುಕೊಂಡರು. ಸಾಜನ್, ಮೈ ನೇ ಪ್ಯಾರ್ ಕಿಯಾ ಮುಂತಾದ ಚಿತ್ರಗಳು ಬಂದಾಗ ರಫಿ, ಕಿಶೋರ್ ಅವರನ್ನು ಕಳೆದುಕೊಂಡು ಕಂಗಾಲಾಗಿದ್ದ ಹಿಂದಿ ಚಿತ್ರರಂಗಕ್ಕೆ ಬಾಲು ಬೆನ್ನೆಲುಬಾಗಿದ್ದರು. ಮಹತ್ಸಾಧನೆ ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ಬಾಲು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ, ಪದ್ಮಭೂಷಣ, ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಎಸ್ ಪಿ ಬಿ ಅವರು ಹಾಡಿರುವ ಹಾಡುಗಳ ಸಂಖ್ಯೆ ೪೦,೦೦೦ಕ್ಕೂ ಹೆಚ್ಚು. ವಿವಿಧ ಭಾಷೆಗಳ ಪರಿಧಿಯಲ್ಲಿ ಇಷ್ಟೊಂದು ಗೀತೆಗಳನ್ನು ಹಾಡಿರುವವರು ಇವರೊಬ್ಬರೇ. ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಕಂಠದಾನ ಕಲಾವಿದರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಸುಲಭವಾಗಿ ಕಾಣಬಹುದಾಗಿದೆ. ಅವರ ಒಟ್ಟಾರೆ ಪ್ರಮುಖ ಸಾಧನೆಗಳನ್ನು ಹೇಳುವುದಾದರೆ ಅದು ಅಪರಿಮಿತವಾದುದು. ಪ್ರಶಸ್ತಿ, ಗೌರವ ಮತ್ತು ಪುರಸ್ಕಾರ ವಿವಿಧ ಭಾಷೆಗಳ ಪರಿಧಿಯಲ್ಲಿ ೪೦,೦೦೦ ಕ್ಕೂ ಹೆಚ್ಚು ಹಾಡುಗಳು ನಾಲ್ಕು ಭಾಷೆಗಳಲ್ಲಿ ಒಟ್ಟು ೬ ರಾಷ್ಟ್ರ ಪ್ರಶಸ್ತಿಗಳು ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ೨೫ ಬಾರಿ ಆಂಧ್ರಪ್ರದೇಶ ಸರ್ಕಾರದ 'ನಂದಿ' ಪ್ರಶಸ್ತಿ. ೪ ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ. ಹಲವು ವಿಶ್ವ ವಿದ್ಯಾಲಯಗಳ ಡಾಕ್ಟರೇಟ್ ಎದೆ ತುಂಬಿ ಹಾಡುವೆನು ದೂರದರ್ಶನದಲ್ಲಿ ಒಂದು ದಶಕದಿಂದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವಂತೆ, ಇತರ ಭಾಷೆಗಳಲ್ಲೂ ಅಂತದೇ ಕಾರ್ಯಕ್ರಮಗಳನ್ನು ಬಾಲು ನಡೆಸಿದರು. ಅವರು ಪುಟ್ಟ ಮಕ್ಕಳಿಂದ ಹಿಡಿದು ಸಂಗೀತದ ದಿಗ್ಗಜಗಳವರೆಗೆ ಹಿರಿಯರು ಕಿರಿಯರು ಎಲ್ಲರನ್ನೂ ಗೌರವಪೂರ್ಣವಾಗಿ ನಡೆಸಿಕೊಳ್ಳುವುದನ್ನು ಕಾಣುವುದೇ ಒಂದು ಚೆಂದ ಎಂಬುದು ಅವರ ಅಭಿಮಾನಿ ವೀಕ್ಷಕರುಗಳಗಳ ನುಡಿ. ನಿಧನ ಎಸ್ ಪಿ ಬಿ ಅವರು ಉಸಿರಾಟ ತೊಂದರೆಯಿಂದ ಚಿಕಿತ್ಸೆ ಫಲಿಸದೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ೨೫ ಸೆಪ್ಟೆಂಬರ್ ೨೦೨೦ ರಂದು ಮರಣ ಹೊಂದಿದರು. ಕೊರೊನಾ ವೈರಾಣು ದಾಳಿಗೆ ತುತ್ತಾಗಿದ್ದ ಅವರ ಆರೋಗ್ಯ, ಕೆಲದಿನಗಳಿಂದ ತೀವ್ರವಾಗಿ ಹದಗೆಟ್ಟಿತ್ತು. ವೈರಾಣು ದಾಳಿಯಿಂದಾಗಿ ಅವರ ಶ್ವಾಸಕೋಶಕ್ಕೆ ಗಂಭೀರವಾದ ಹಾನಿಯಾಗಿತ್ತು. ಇದರಿಂದಾಗಿ ಉಸಿರಾಟಕ್ಕೆ ತೊಂದರೆಯಾಗಿತ್ತು. ಈ ಕಾರಣದಿಂದಾಗಿ ಅವರಿಗೆ ಹೆಚ್ಚುವರಿ ಆಮ್ಲಜನಕವನ್ನು ಪೂರೈಸಲು ಇಸಿಎಮ್‍ಓ ಸಾಧನವನ್ನು ಅಳವಡಿಸಿ, ಚೆನ್ನೈನಲ್ಲಿರುವ ಎಮ್‍ಜಿಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ೭೪ ವರ್ಷ ವಯಸ್ಸಾಗಿತ್ತು. ಉಲ್ಲೇಖಗಳು ಆಕರಗಳು ಎಸ್ ಪಿ ಬಾಲಸುಬ್ರಮಣ್ಯಂ ಕುರಿತ 'ಫಿಲ್ಮಿ ಬೀಟ್' ಕನ್ನಡ ಲೇಖನ ಮಾಲಿಕೆ ಎಸ್ ಪಿ ಬಿ ಆಯ್ದ ಕನ್ನಡ ಗೀತೆಗಳ ವಿಕೀಪಿಡಿಯ ಪಟ್ಟಿ ಎಸ್ ಪಿ ಬಿ- ವಿಶ್ವ ಕನ್ನಡ ಸಮ್ಮೇಳನದ ಆಕರ್ಷಣೆ ಕರ್ನಾಟಕದ ಕುರಿತು ಎಸ್ ಪಿ ಬಿ ಹಿನ್ನೆಲೆ ಗಾಯಕರು ೨೦೨೦ ನಿಧನ ೧೯೪೬ ಜನನ ಕೋವಿಡ್ ಸಾವುಗಳು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
2590
https://kn.wikipedia.org/wiki/%E0%B2%85%E0%B2%B8%E0%B3%8D%E0%B2%B8%E0%B2%BE%E0%B2%AE%E0%B2%BF
ಅಸ್ಸಾಮಿ
ಅಸ್ಸಾಂ ರಾಜ್ಯದ ಅಧಿಕೃತ ಭಾಷೆ. ಈ ಭಾಷೆಯನ್ನು ಸ್ವಭಾಷೆಯಲ್ಲಿ ಅಹೋಮಿ ಎಂದು ಕರೆಯುತ್ತಾರೆ. ಪೀಠಿಕೆ ಭವ್ಯ ಇತಿಹಾಸವನ್ನುಳ್ಳ ಭಾಷೆಗಳಲ್ಲೊಂದು. ಅಸ್ಸಾಮೀ ಎಂಬುದು ಅಸಮೀಯ ಎಂಬುದರ ಆಂಗ್ಲ ರೂಪ; axamia ಎಂಬುದು ಅಸಮೀಯ ಎಂಬುದರ ಉಚ್ಚಾರಣೆ. ಈ ಹೆಸರಿಂದಲೇ ಆ ಪ್ರಾಂತ್ಯದ ಜನರಲ್ಲಿ ಅದು ರೂಢಿಯಾಗಿದೆ. ಭಾರತದ ಸಂವಿಧಾನದಲ್ಲಿ ಅಧಿಕೃತವಾಗಿ ಅಂಗೀಕೃತವಾಗಿರುವ ಇಪ್ಪತ್ತೆರಡು ರಾಷ್ಟ್ರೀಯ ಭಾಷೆಗಳಲ್ಲಿ ಇದು ಕೂಡ ಒಂದಾಗಿದೆ. ಇದು ಅತ್ಯಂತ ಪೂರ್ವದಿಕ್ಕಿಗಿರುವ ಅಸ್ಸಾಂ ಪ್ರಾಂತ್ಯದಲ್ಲಿ, ಮುಖ್ಯವಾಗಿ ಪೂರ್ವದಿಕ್ಕಿಗೆ ಉತ್ತರ ಲಖಿಮ್‍ಪುರ್, ಪಶ್ಚಿಮ ದಿಕ್ಕಿಗೆ ಗೋಯಲ್‍ಪಾರ ಇವನ್ನೊಳಗೊಂಡ ವಿಸ್ತಾರವಾದ ಪ್ರದೇಶವನ್ನು ವ್ಯಾಪಿಸಿದ ಬ್ರಹ್ಮಪುತ್ರ ಕಣಿವೆಯ ಜಿಲ್ಲೆಗಳಲ್ಲಿ, ಇದು ಜನರ ಆಡುಮಾತಾಗಿದೆ. ಸುಮಾರು ೧೩೦ ಲಕ್ಷ ಜನರ ಆಡುಭಾಷೆ. ಅಲ್ಲದೆ ಹೆಚ್ಚು ಸಂಖ್ಯೆಯ ಇತರ ಪ್ರಾಂತ್ಯವಾಸಿಗಳು ದ್ವಿತೀಯ ಭಾಷೆಯಾಗಿ ಇದನ್ನು ಮಾತನ್ನಾಡುತ್ತಾರೆ; ಅರ್ಥಮಾಡಿಕೊಳ್ಳುತ್ತಾರೆ. ಅಸ್ಸಾಮೀಭಾಷೆ ಸುತ್ತಲೂ ಪ್ರಸಿದ್ಧವಾದ ಸೈನೋ ಟಿಬೆಟನ್ ಮತ್ತು ಥಾಯ್-ಕಡೆ ಭಾಷಾ ಪರಿವಾರದಿಂದ ಆವೃತವಾಗಿದ್ದು ನಡುವೆ ಆಸ್ಟ್ರಿಕ್ ಭಾಷೆಯಾದ ಖಾಸಿ ಭಾಷಿಕವಾಗಿ ಒಂದು ಸಣ್ಣ ದ್ವೀಪವನ್ನು ರಚಿಸಿಕೊಂಡಿದೆ. ಅದು ಮಾಗಧಿ, ಪ್ರಾಕೃತ ಮತ್ತು ಅದರ ಅಪಭ್ರಂಶ ಉಪಭಾಷೆಗಳಿಂದ-ಭಾರತದ ಈಶಾನ್ಯ ದಿಕ್ಕಿನ ಎಲ್ಲ ಪ್ರಮುಖ ಆರ್ಯನ್ ಭಾಷೆಗಳಿಗೆ (ಎಂದರೆ, ಅಸ್ಸಾಮಿ, ಬಂಗಾಳಿ, ಒರಿಯ ಮತ್ತು ಬೆಹರಿ ಉಪಭಾಷೆಗಳು) ನಿಕಟತಮ ಮೂಲವಾಗಿದ್ದವುಗಳಿಂದ-ಉತ್ಪನ್ನವಾದ ಇಂಡೋ ಆರ್ಯನ್ ಭಾಷೆ. ಡಾ. ಎಸ್. ಕೆ. ಚಟರ್ಜಿಯವರ ಪ್ರಕಾರ, ಮಾಗಧೀ ಪ್ರಾಕೃತ ರಾಧಾ, ವಂಗ, ವಾರೇಂದ್ರ, ಮತ್ತು ಕಾಮರೂಪ-ಎಂಬ ನಾಲ್ಕು ಅಪಭ್ರಂಶ ಉಪಭಾಷಾವರ್ಗಗಳಿಗೆ ಜನ್ಮ ಕೊಟ್ಟಿದೆ ಹಾಗೂ ಕಾಮರೂಪ ಉಪಭಾಷಾ ವರ್ಗದಿಂದ ಉತ್ತರ ಬಂಗಾಳದ ಮತ್ತು ಅಸ್ಸಾಮಿನ ಭಾಷೆ ರೂಪಗೊಂಡಿದೆಯೆಂಬದಾಗಿ ತಿಳಿಯುವುದು . ಪ್ರಾಚೀನ ಕಾಲದಲ್ಲಿ ಉತ್ತರ ಬಂಗಾಳ ಮತ್ತು ಅಸ್ಸಾಮಿನ ಭಾಷೆ ಏಕ ಉಪಭಾಷಾವರ್ಗವಾಗಿತ್ತು. ಈಗ ಉತ್ತರ ಬಂಗಾಳದಲ್ಲಿರುವ ಕೂಛ್‍ಬಿಹಾರಿನ ಕೂಛ ದೊರೆಗಳು ಅಸ್ಸಾಮೀ ಭಾಷೆ ಸಾಹಿತ್ಯಗಳನ್ನು ಘೋಷಿಸಿದರು. ವಾಸ್ತವವಾಗಿ ಅಸ್ಸಾಮೀ ಸಾಹಿತ್ಯ ಕ್ರಿ.ಶ. 15-16ನೆಯ ಶತಮಾನಗಳಲ್ಲಿ, ಮಹಾರಾಜ ನರನಾರಾಯಣ ಮತ್ತು ಚಿಲಾರಾಯರ ಆಶ್ರಯದಲ್ಲಿ, ತನ್ನ ಉಚ್ಛ್ರಾಯ ದೆಸೆಯನ್ನು ಮುಟ್ಟಿತು. ಕಳೆದ ಶತಮಾನದಲ್ಲಿ ಉತ್ತರ ಬಂಗಾಳದ ಭಾಷೆ ಅದರ ಪ್ರಬಲ ನೆರೆಭಾಷೆಯಾದ ಬಂಗಾಳಿಯಿಂದ ಬಲುಮಟ್ಟಿಗೆ ಪ್ರಭಾವಿತವಾಯಿತು. ಆ ಪ್ರದೇಶ ರಾಜಕೀಯವಾಗಿ ಬಂಗಾಳದೊಡನೆ ಬೆರೆತುಹೋದ ಮೇಲೆ ಬದಲಾವಣೆಯ ಕಾರ್ಯ ತ್ವರೆಗೊಂಡಿತು. ಪ್ರಾಚೀನ ಉಲ್ಲೇಖಗಳು ಮತ್ತು ಉದಾಹರಣೆಗಳು ಪ್ರಸಿದ್ಧ ಚೀನಾಯಾತ್ರಿಕನಾದ ಹುಯೆನ್‍ತ್ಸಾಂಗ್ ಕ್ರಿ.ಶ. 643ರಲ್ಲಿ, ಕುಮಾರ ಭಾಸ್ಕರವರ್ಮನ ಆಡಳಿತಕಾಲದಲ್ಲಿ, ಇಂದಿನ ಅಸ್ಸಾಮಿಗೆ ಪ್ರಾಚೀನ ಕಾಲದ ಹೆಸರಾಗಿರುವ ಕಾಮರೂಪಕ್ಕೆ ಭೇಟಿ ಕೊಟ್ಟಿದ್ದ. ಆತ ಆ ನಾಡಿನ ಭಾಷೆ ಮಧ್ಯಭಾರತದ ಭಾಷೆಗಿಂತ ಸ್ವಲ್ಪಮಟ್ಟಿಗೆ ಬೇರೆಯೆಂಬುದಾಗಿ ಉಲ್ಲೇಖಿಸಿರುತ್ತಾರೆ. ಕಾಮರೂಪ ಕ್ರಿ.ಪೂ. 200ರಿಂದ ಕ್ರಿ.ಶ. 200ರ ಅವಧಿಯಲ್ಲಿ ಆರ್ಯೀಕೃತವಾಗಿತ್ತು. ಕುಮಾರ ಭಾಸ್ಕರವರ್ಮ ಸಂಸ್ಕೃತವಿದ್ಯೆ ಮತ್ತು ಸಂಸ್ಕೃತಿಗಳಿಗೆ ಪೋಷಣೆಯಿತ್ತ ಹಿಂದೂ ದೊರೆ. ಆದ್ದರಿಂದ, ಕ್ರಿ.ಶ. 7ನೆಯ ಶತಮಾನದ ಹೊತ್ತಿಗೆ ಬಂಗಾಳದವರೆಗೆ ವಿಸ್ತರಿಸಿದ್ದ ಕುಮಾರನ ರಾಜ್ಯ ಆರ್ಯಜನರಿಂದ ತುಂಬಿದ್ದುದಾಗಿರಬೇಕು ಮತ್ತು ಅವರು ತಮ್ಮ ಹೆಚ್ಚುಗಾರಿಕೆಯಿಂದಾಗಿ ಆರ್ಯನ್ ಭಾಷೆಯನ್ನು ಬೆಳೆಸಿರಬೇಕು ಎಂದು ಹೇಳಬಹುದು. ಚೀನಾ ಯಾತ್ರಿಕ ಮಧ್ಯಭಾರತದಲ್ಲಿರುವುದಕ್ಕಿಂತ ಸ್ವಲ್ಪ ಮಟ್ಟಿಗೆ ಬೇರೆಯಾದ-ಎಂಬುದಾಗಿ ಹೇಳಿರುವುದನ್ನು ನೋಡಿದರೆ ಆತ ಪೂರ್ವದ ಅಪಭ್ರಂಶ ಉಪಭಾಷೆಯ ಸ್ವತಂತ್ರವಾದ ಬೆಳೆವಣಿಗೆಯನ್ನು ಗಮನಿಸಿರಬೇಕು. ಇದೇ ಅಸ್ಸಾಮಿಯಾಗಿ ಮುಂದೆ ರೂಪುಗೊಂಡಿತು. ಅಸ್ಸಾಮಿ ಭಾಷೆ ದೇಶದ ಇತರ ಎಲ್ಲ ಸೋದರಿ ಭಾಷೆಗಳಿಂದ ತೀರ ಪ್ರತ್ಯೇಕವಾದ ವಿಶಿಷ್ಟ ರೂಪರಚನೆಗಳಿಂದ ಕಂಡು ಬರುವ ಹಾಗೆ ಧ್ವನ್ಯಾತ್ಮಕ ರೂಪಾತ್ಮಕ ಮತ್ತು ಪದಕೋಶಾತ್ಮಕ ಶಾಖೆಗಳೆಲ್ಲದರಲ್ಲೂ ಬೇಕಾದಷ್ಟು ಬದಲಾವಣೆಗಳನ್ನು ಅಂಗೀಕರಿಸಿದೆ. ಈ ಹೊಸ ಬದಲಾವಣೆ ಅಥವಾ ವೈಲಕ್ಷಣ್ಯಗಳು ಆರ್ಯ ಮತ್ತು ಆರ್ಯೇತರ ಭಾಷಾಜನ ಒಂದೇ ಒಕ್ಕೂಟದ ಒಂದೇ ಭಾಷಾಮಾಧ್ಯಮದ (ಎಂದರೆ ಅಸ್ಸಾಮೀ) ದೆಸೆಯಿಂದಾಗಿ ಬೆರೆತು ಹೋದುದರ ಫಲವೆನ್ನಬಹುದು. ಈ ಬೆಸುಗೆ ಬಹಳ ಹಿಂದಯೇ ಆಯಿತೆಂಬುದಕ್ಕೆ ಹುಯೆನ್‍ತ್ಸಾಂಗ್ ಈ ಭಾಷೆಯ ಬಗೆಗೆ ಆಡಿರುವ ಮಾತುಗಳು ಸಾಕ್ಷ್ಯವಾಗಿವೆ. ಆರ್ಯನ್ ಭಾಷೆ ಆರ್ಯೇತರ ಜನರ ಮೇಲೆ ಹೇರಲ್ಪಟ್ಟಿತು. ಅವರು ಅದನ್ನು ಅತಿ ಹಿಂದಿನ ಕಾಲದಿಂದಲೂ ಬಹುಭಾಷೀಯ ಪೂರ್ವಭಾರತವೆಲ್ಲಕ್ಕೂ ಒಂದು ರಾಷ್ಟ್ರಭಾಷೆಯಾಗಿ ಒಪ್ಪಿಕೊಂಡರು. ಅದಕ್ಕೆ ಅನುಗುಣವಾದ ಸಂಗತಿಗಳಿಂದಲೂ ವೈಶಿಷ್ಟ್ಯದಿಂದಲೂ ಅದನ್ನು ಹಾಗೆ ರೂಪಿಸಿದರು. ಅಹೋಂ ದೊರೆಗಳ ಮೂಲಕವಾಗಿ 15-16ನೆಯ ಶತಮಾನಗಳ ಅವಧಿಯಲ್ಲಿ ಗುಡ್ಡಗಾಡಿನ ಪ್ರದೇಶದಲ್ಲಿ ಬಹುಭಾಗವನ್ನು ವ್ಯಾಪಿಸಿದ್ದ ಅಹೋಂ ರಾಜ್ಯ ಒಗ್ಗಟ್ಟಿಗಾಗಿ ಅಸ್ಸಾಮೀಯನ್ನು ಪ್ರಾಂತ್ಯಭಾಷೆಯನ್ನಾಗಿ ಒಪ್ಪಿಕೊಂಡಿದ್ದು, ಷಾನ್ ವಿಜೇತರು 300 ವರ್ಷಗಳ ಕಾಲದ ಆಡಳಿತದ ಅನುಭವದಿಂದ ಇಂದಿನ ಹೆಸರಾದ ಅಸ್ಸಾಂ ಎಂಬುದನ್ನು ರಾಜ್ಯಕ್ಕೆ ಕೊಟ್ಟದ್ದು - ಮೇಲಿನ ಮಾತಿಗೆ ಪೋಷಕವಾದ ಪ್ರಬಲ ಆಧಾರವಾಗಿದೆ. ಕ್ರಿ.ಶ. 5ನೆಯ ಶತಮಾನದಿಂದೀಚೆಗೆ ಲಿಖಿತವಾಗಿರುವ ಪ್ರಾಚೀನ ಅಸ್ಸಾಂ ದೊರೆಗಳ ತಾಮ್ರ ಶಾಸನಗಳು ಸಂಸ್ಕೃತದಲ್ಲಿ ಬರೆಯಲಾಗಿದ್ದರೂ ಆ ಕಾಲದ ಅಸ್ಸಾಮೀ ಭಾಷೆಯ ಕೆಲವು ಧ್ವನ್ಯಾತ್ಮಕ ಲಕ್ಷಣಗಳ ಬಗೆಗೆ ಸ್ಪಷ್ಟವಾದ ಸೂಚನೆಗಳನ್ನು ಕೊಡುತ್ತವೆ. ಆ ಲಕ್ಷಣಗಳು ಇಂದಿನ ಭಾಷೆಯವರೆಗೆ ಉಳಿದುಕೊಂಡು ಬಂದಿವೆ. ಆ ತಾಮ್ರ ಶಾಸನಗಳಲ್ಲಿ ಲಿಪಿಕಾರರ ಅಕ್ಷರ ವಿನ್ಯಾಸದ (ಕಾಗುಣಿತದ) ತಪ್ಪುಗಳಿಗೆ ಆಡುಮಾತಿನ ಸ್ವರಮೈತ್ರಿ ಕಾರಣವಾಗಿ, ಅದು ಸಂಸ್ಕೃತ ಭಾಷೆಯನ್ನು ಕೂಡ ವಿಕೃತಗೊಳಿಸಿದೆ. ಈಗ ಸಂಸ್ಕೃತದ ಎಲ್ಲ ಊಷ್ಮಗಳನ್ನು ಕಂಠ್ಯಗಳಾಗಿ ಉಚ್ಛರಿಸುವುದಕ್ಕೆ ಶ-ಷ-ಸ ಗಳನ್ನು ತೋರಿದಂತೆ ಬರೆಯುವ ಅಕ್ಷರವಿನ್ಯಾಸ ಭ್ರಾಂತಿಯ ನಿದರ್ಶನವೇ ಸಾಕು. ಹೀಗೆಯೇ ಸಂಸ್ಕೃತ ದಂತ್ಯ ಮತ್ತು ಮೂರ್ಧನ್ಯ ಸ್ಪರ್ಶಗಳ ವತ್ಸ್ರ್ಯಕರಣ ಮತ್ತು ತಾಲವ್ಯ ಮತ್ತು ಅನುಘರ್ಷಶ್ರೇಣಿಗಳ ವತ್ಸ್ರ್ಯಕರಣ ಮತ್ತು ಊಷ್ಮಿಕರಣ-ಇವುಗಳ ವಿಚಾರದಲ್ಲೂ ಇದು ಕಂಡುಬರುತ್ತದೆ. ಇದು ಏನೇ ಇರಲಿ, ಅಸ್ಸಾಮೀಯ ಪ್ರಾಚೀನತಮ ಉದಾಹರಣೆ ಚಾರ್ಯ ಎನ್ನುವ ಹೆಸರಿಂದ ಸುಪರಿಚಿತರಾಗಿರುವ ಬೌದ್ಧಮತೀಯ ಸಿದ್ಧಾಚಾರ್ಯರು ರಚಿಸಿರುವಂಥ ಅನುಭಾವೀ ದೋಹಾಗಳನ್ನು ಮೊದಲು ಕಂಡುಹಿಡಿದು ನೇಪಾಳದಿಂದ ಭಾರತಕ್ಕೆ ತಂದವರು ಮಹಾಮಹೋಪಧ್ಯಾಯ ಹರಪ್ರಸಾದ ಶಾಸ್ತ್ರಿಗಳು. ಇವನ್ನು ರಚಿಸಿದವರು ಪೂರ್ವಭಾರತದ ಬೇರೆ ಬೇರೆ ಭಾಗಗಳಿಗೆ ಸೇರಿದ 84 ಜನ ಸಿದ್ಧರು. ಇವರಲ್ಲಿ ಕೆಲವರು ಕಾಮರೂಪಕ್ಕೆ ಸೇರಿದವರೆಂಬುದಾಗಿ ಡಾ|| ಜಿ. ತುಚ್ಚಿ ಮೊದಲಾದ ತಜ್ಞರು ನಿಶ್ಚಿತವಾಗಿ ಗುರುತಿಸಿದ್ದಾರೆ. ಡಾ|| ಪಿ. ಸಿ. ಬಾಗ್ಚಿಯವರ ಪ್ರಕಾರ ಈ ದೋಹಾಗಳು ಕ್ರಿ. ಶ. 8 ರಿಂದ 10ನೆಯ ಶತಮಾನದ ನಡುವೆ ರಚಿತವಾದವು. ದೋಹಾಗಳ ಭಾಷೆ ಈಚಿನ ಅಪಭ್ರಂಶ. ಆದ್ದರಿಂದ ನವೀನ ಇಂಡೋ-ಆರ್ಯನ್ ಭಾಷೆಗಳ ಬೆಳವಣಿಗೆಯ ಕಾಲವನ್ನು ಅದು ತೋರಿಸುತ್ತದೆ. ಅಲ್ಲಿಯ ಕೆಲವು ಧ್ವನ್ಯಾತ್ಮಕ ಮತ್ತು ರೂಪಾತ್ಮಕ ಲಕ್ಷಣಗಳು ಒಂದು ಮಾದರಿಯ ಅಸ್ಸಾಮೀ ಭಾಷೆಯವೆಂದೇ ಗುರುತಿಸಲ್ಪಟ್ಟಿವೆ. ಅವು ಶತಮಾನಗಳ ಕಾಲ ಸಾಗಿ ಇಂದಿನ ಜನಭಾಷೆಯವರೆಗೆ ಉಳಿದುಕೊಂಡು ಬಂದಿವೆ. ಕೆಲವು ನುಡಿಗಟ್ಟಿನಂಥ ಮಾತುಗಳು ಅಸ್ಸಾಮೀಯರಲ್ಲಿ ಇಂದಿಗೂ ತುಂಬಾ ಬಳಕೆಯವಾಗಿವೆ. ಭಾಷಿಕವಾದ ಲಕ್ಷಣಗಳಿರಲಿ, ದೋಹಾ ಎಂಬ ಸಾಹಿತ್ಯ ಪ್ರಕಾರ ಕೂಡ, ಆರಂಭ ಕಾಲದ ವೈಷ್ಣವ ಕವಿಗಳ ರಚನೆಯಾದ ಬಾರ್‍ಗೀತ್ ಎಂಬ ದಿವ್ಯಗೀತೆಗೆ ಪೂರ್ವಭಾವಿರೂಪವೇ ಆಗಿದೆ. ಆದರೆ ನಿಶ್ಚಿತವಾಗಿ ಅಸ್ಸಾಮೀ ಭಾಷೆಯದೆಂದು ಹೇಳಬಹುದಾದ ಪ್ರಾಚೀನತಮ ಸಾಹಿತ್ಯ ಕೃತಿಯೆಂದರೆ, ಕ್ರಿ. ಶ 13ನೆಯ ಶತಮಾನದ ಉತ್ತರಾರ್ಧದಲ್ಲಿ ರಚಿತವಾದ ಹೇಮಾ ಸರಸ್ವತಿಯ ಪ್ರಹ್ಲಾದ ಚರಿತ. ಈ ಲಘುಕಾವ್ಯದ ಭಾಷೆ ಇನ್ನೂ ಅದರ ಅಪಭ್ರಂಶ ಮಾತೆಯ ಪೋಷಣೆಯಲ್ಲೇ ಬೆಳೆದು ಬಂದಿರುವ ಹಾಗೆ ತೋರುತ್ತದೆ. ಕ್ರಿ. ಶ. 14ನೆಯ ಶತಮಾನದಿಂದೀಚೆಗೆ ಆಧುನಿಕ ಕಾಲದವರೆಗೆ ಅಸ್ಸಾಮೀ ಸಾಹಿತ್ಯ ನಿರಂತರವಾಗಿ ಹರಿದುಕೊಂಡು ಬಂದಿದೆ. ಗದ್ಯರಚನೆ 16ನೆಯ ಶತಮಾನದಲ್ಲಿ ಪ್ರಸಿದ್ಧ ವೈಷ್ಣವಸುಧಾರಕನಾದ ಶ್ರಿ ಶಂಕರದೇವನ ಏಕಾಂಕ ನಾಟಕಗಳಲ್ಲಿ ಮೊದಲ ಬಾರಿಗೆ ಬಳಕೆಗೆ ಬಂತು. ಅದರ ಮುಂದಿನ ಶತಮಾನದಲ್ಲಿ ವೈಕುಂಠನಾಥ ಭಟ್ಟಾಚಾರ್ಯ ಕವಿರತ್ನನ ಕೈಯಲ್ಲಿ, ಆತನ ಉತ್ಕøಷ್ಟ ಗದ್ಯಶೈಲಿಯ ಸಮಗ್ರ ಭಾಗವತ ಪುರಾಣಾನುವಾದ ಮತ್ತು ಗೀತಾನುವಾದಗಳಲ್ಲಿ ಅದು ಅಭಿವೃದ್ಧಿಗೆ ಬಂತು. 17ನೆಯ ಶತಮಾನದಲ್ಲಿದ್ದ ವೈಷ್ಣವಗುರುಗಳ ಗದ್ಯಾತ್ಮಕ ಜೀವನ ಚರಿತ್ರೆಯಾಗಿರುವ ಕಥಾ ಗುರುಚರಿತ ಮತ್ತು ಬುರಂಜಿಗಳೆಂಬ ಹೆಸರಿನಿಂದ ಹೆಚ್ಚು ಪರಿಚಿತವಾಗಿರುವ ಚಾರಿತ್ರಿಕ ರಚನೆಗಳು ಪ್ರಾಚೀನ ಅಸ್ಸಾಮೀ ಗದ್ಯಕೃತಿಗಳ ಹೆಮ್ಮೆಯ ಭಂಡಾರಕ್ಕೆ ನಿದರ್ಶನಗಳಾಗಿವೆ. ಉಪಭಾಷೆಗಳು ಮತ್ತು ಉಪಭಾಷಾ ವಿಭೇದಗಳು ಅಸ್ಸಾಮಿನ ಭಾಷಿಕ ನಕ್ಷೆಯಲ್ಲಿ ಉಪಭಾಷಿಕವಾಗಿ ಎರಡು ವಿಭಾಗಗಳನ್ನು ಗುರುತಿಸಬಹುದು. ಒಂದು, ನೌಗಾಂಗ್ ಜಿಲ್ಲೆಯ ತನಕ ಪೂರ್ವ ದಿಕ್ಕಿನ ಜಿಲ್ಲೆಗಳನ್ನೆಲ್ಲ ವ್ಯಾಪಿಸಿದ ಪೂರ್ವ ಅಸ್ಸಾಮಿ, ಇನ್ನೊಂದು ನೌಗಾಂಗಿನ ಪಶ್ಚಿಮಾರ್ಧದಿಂದ ಆರಂಭವಾಗಿ ಗೋಯಲ್‍ಪುರ ಜಿಲ್ಲೆಯತನಕ ವ್ಯಾಪಿಸಿರುವ ಪಶ್ಚಿಮ ಅಸ್ಸಾಮಿ. ತನ್ನ ಪ್ರದೇಶದಲ್ಲಿ ಹೆಚ್ಚಿನ ಏಕರೂಪತೆಯನ್ನು ಹೊಂದಿರುವ ಪೂರ್ವ ಅಸ್ಸಾಮಿ ಶಿಷ್ಟಭಾಷೆಯಾಗಿ ಪರಿಗಣಿತವಾಗಿದೆ; ಆಧುನಿಕ ಸಾಹಿತ್ಯದ ಮಾಧ್ಯಮವಾಗಿದೆ. ಪಶ್ಚಿಮ ಅಸ್ಸಾಮಿನ ಇನ್ನೂ ಹಲವು ಉಪಭಾಷೆಗಳಾಗಿ ವಿಭಜನೆಗೊಂಡಿದೆ; ಬ್ರಹ್ಮಪುತ್ರಾ ನದಿಯ ದಕ್ಷಿಣ ದಡದ ಜನ ಆಡುವ ಉಪಭಾಷೆಯಾದ ದಕ್ಷಿಣ ಕಾಮರೂಪಿ ಕೆಲಮಟ್ಟಿಗೆ ಏಕರೂಪತೆಯನ್ನುಳ್ಳದ್ದಾಗಿದೆ. ಆದರೆ ಉತ್ತರ ಕಾಮರೂಪಿ ಎರಡು ಉಪವಿಭಾಗಗಳಿಂದ ಕೂಡಿದ್ದಾಗಿದೆ. ಒಂದು ಪೂರ್ವ ಕಾಮರೂಪಿ ಉಪಭಾಷೆ, ಇನ್ನೊಂದು ಪಶ್ಚಿಮ ಕಾಮರೂಪಿ ಉಪಭಾಷೆ. ಮೊದಲನೆಯದು ಸಮಗ್ರ ಈಶಾನ್ಯ ಕಾಮರೂಪ ಮತ್ತು ದರ್ರಾಂಗ್ ನೌಗಾಂಗ್ ಜಿಲ್ಲೆಗಳ ಪಶ್ಚಿಮದ ಸೆರಗು_ಇವುಗಳ ಉಪಭಾಷೆಯನ್ನು ಒಳಗೊಳ್ಳುತ್ತದೆ. ಎರಡನೆಯದು, ಬರ್‍ಪೇಟ ಕೇಂದ್ರವಾಗಿರುವ ವಾಯುವ್ಯ ಕಾಮರೂಪದ ಉಪಭಾಷೆ. ಇದೇ ರೀತಿಯಲ್ಲಿ, ಅತ್ಯಂತ ಪಶ್ಚಿಮಕ್ಕಿರುವ ಗೋಯಲ್‍ಪಾರ ಜಿಲ್ಲೆಯ ಉಪಭಾಷೆ ಕೂಡ ಏಕರೂಪವಾಗಿಲ್ಲ. ಆ ಜಿಲ್ಲೆಯ ಪೂರ್ವಭಾಗಗಳಲ್ಲಿರುವ ಉಪಭಾಷೆ ಕಾಮರೂಪಿಯೊಡನೆ ಸ್ವಲ್ಪಮಟ್ಟಿಗೆ ಸಂಬಂಧವನ್ನು ತೋರುತ್ತದೆ. ಆದರೆ ಪಶ್ಚಿಮ ಗೋಯಲ್‍ಪಾರದ ಉಪಭಾಷೆಗಳು ತಮ್ಮ ಸುತ್ತುಮುತ್ತಿನ ಬಂಗಾಳಿ ರಾಜ್‍ಬಂಶೀ ಮತ್ತು ಗಾರೋ ಉಪಭಾಷೆಗಳ ಪ್ರಭಾವಕ್ಕೆ ಒಳಗಾಗಿರುವುದರಿಂದ ಬಲುಮಟ್ಟಿಗೆ ಬೇರೆಯಾಗಿ ತೋರುತ್ತವೆ. ಪ್ರಾಚೀನ ಅಸ್ಸಾಮೀಯಲ್ಲಿ ಇಡೀ ಪ್ರಾಂತ್ಯದಲ್ಲಿ ಒಂದೇ ಒಂದು ಉಪಭಾಷೆ-ಪಶ್ಚಿಮ ಅಸ್ಸಾಮಿ ಉಪಭಾಷೆ-ಪ್ರಚಲಿತವಾಗಿದ್ದಂತೆ ತೋರುತ್ತದೆ. ಸಮಗ್ರ ಪ್ರಾಚೀನ ಸಾಹಿತ್ಯ, ಪದ್ಯಾತ್ಮಕವಾಗಿರಲಿ, ಗದ್ಯಾತ್ಮಕವಾಗಿರಲಿ, ವೈಷ್ಣವ ಕವಿಗಳ ರಚನೆಗಳಾಗಿರಲಿ, ಚಾರಿತ್ರಿಕ ರಚನೆಗಳಾಗಿರಲಿ, ಅವೆಲ್ಲ ಈ ಉಪಭಾಷೆಯಲ್ಲೇ ಇವೆ. ಇಂದಿನ ಶಿಷ್ಟಸಾಹಿತ್ಯಿಕ ಭಾಷೆ 19ನೆಯ ಶತಮಾನದ ಮಧ್ಯ ಭಾಗದಲ್ಲಿ ವಿಕಾಸಗೊಂಡಿತೆಂದು ಹೇಳಬಹುದು. ಇದು ಆದದ್ದು ಅಮೇರಿಕಾದ ಬ್ಯಾಪ್ಟಿಸ್ಟ್ ಮಿಷನ್. ಪ್ರಥಮವಾಗಿ ಮುದ್ರಣಾಲಯವನ್ನು ಸ್ಥಾಪಿಸಿದುದು (1836), ಪತ್ರಿಕೆಯೊಂದನ್ನು ಪ್ರಕಟಿಸಲು ಆರಂಭಿಸಿದುದು (1846), ಎರಡನೆಯ ಅಸ್ಸಾಮೀ ವ್ಯಾಕರಣವನ್ನು ಮತ್ತು ಮೊದಲನೆಯ ಅಸ್ಸಾಮೀ ನಿಘಂಟನ್ನು ಮುದ್ರಿಸುದುದು (1846 ಮತ್ತು 1867), ಹೊಸ ಅಸ್ಸಾಮೀ ಸಾಹಿತ್ಯ ಸೃಷ್ಟಿಗೆ ಪ್ರೋತ್ಸಾಹಕ ವಾತಾವರಣವನ್ನು ನಿರ್ಮಿಸಿದುದು-ಈ ಪ್ರಯತ್ನಗಳಿಂದ. ಇವನ್ನೆಲ್ಲಾ ಅವರು ಪೂರ್ವ ಅಸ್ಸಾಮ್‍ನಲ್ಲಿ, ಅಸ್ಸಾಮ್ ಪ್ರಾಂತ್ಯದಲ್ಲಿಯ ತಮ್ಮ ಚಟುವಟಿಕೆಗಳಿಗೆ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡ ಶಿಬಸಾಗರ್ ಜಿಲ್ಲೆಯ ಉಪಭಾಷೆಯಲ್ಲಿ ಮಾಡಿದರು. ಹೀಗೆ ಅವರು ಅಸ್ಸಾಮ್‍ನಲ್ಲಿ ಈಗ ಶಿಷ್ಟರೂಪವಾಗಿ ಅಂಗಿಕೃತವಾಗಿರುವ ಆಧುನಿಕ ಅಸ್ಸಾಮೀ ಸಾಹಿತ್ಯಿಕ ಭಾಷೆಗೆ ಅಡಿಪಾಯ ಹಾಕಿದರು. ಜನರಲ್ಲಿ ವಿದ್ಯಾಭ್ಯಾಸದ ವ್ಯಾಪಕತೆ, ಪಶ್ಚಿಮ ಅಸ್ಸಾಂ ಜಿಲ್ಲೆಗಳಲ್ಲಿ ವಿದ್ಯಾವಂತ ಜನರ ಸಂಖ್ಯೆ ಬೆಳದದ್ದು-ಇವು ಕಾರಣವಾಗಿ ಪಶ್ಚಿಮ ಅಸ್ಸಾಮೀ ರೂಪಗಳು ಕೂಡ ಶಿಷ್ಟಸಾಹಿತ್ಯಕ ಶೈಲಿಯಲ್ಲಿ ನುಸುಳಿಕೊಂಡು ಬಂದಿವೆ. ಆದ್ದರಿಂದ ಅಸ್ಸಾಮೀಯ ಅಧಿಕೃತ ವ್ಯಾಕರಣಗಳಲ್ಲಿ ಜೊತೆಜೊತೆಗೆ ಎರಡೂ ಉಪಭಾಷೆಗಳನ್ನು ತೋರಿಸಿದೆ. ಪ್ರಮುಖ ಉಪಭಾಷಾವರ್ಗಗಳಾದ ಪೂರ್ವ ಮತ್ತು ಪಶ್ಚಿಮ ಅಸ್ಸಾಮಿಗಳೆರಡೂ ಬಲುಮಟ್ಟಿಗೆ ಧ್ವನ್ಯಾತ್ಮಕ ರೂಪಾತ್ಮಕ ಮತ್ತು ಪದಕೋಶಾತ್ಮಕ-ಈ ಎಲ್ಲ ಕ್ಷೇತ್ರಗಳಲ್ಲೂ ಖಚಿತವಾದ ವಿಭಿನ್ನತೆಯನ್ನು ತೋರಿಸುತ್ತದೆ. ಪರಿಣಾಮವಾಗಿ ಎರಡು ಭಾಷಾವರ್ಗಗಳ ಜನ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದೇ ಕಷ್ಟ. ಆದರೆ ಪಶ್ಚಿಮ ಅಸ್ಸಾಮಿನ ಉಪಭಾಷೆಗಳಲ್ಲಿಯ ವಿಭಿನ್ನತೆ ಮುಖ್ಯವಾಗಿ ಧ್ವನಿಮಾ ಶಾಸ್ತ್ರ(ನಿರ್ದಿಷ್ಟವಾಗಿ ಹೇಳುವುದಾದರೆ ಸ್ವರಲಹರಿ) ಮತ್ತು ವಿರಳವಾಗಿ ಪದಕೋಶ ಇವುಗಳಿಗೆ ಸಂಬಂಧಪಟ್ಟಿರುತ್ತದೆ. ಧ್ವನ್ಯಾತ್ಮಕ (1) ಪೂರ್ವ ಅಸ್ಸಾಮೀಯಲ್ಲಿ ಮಧ್ಯ ಬಲಾಘಾತವಿರುತ್ತಿದ್ದರೆ, ಪಶ್ಚಿಮ ಅಸ್ಸಾಮೀಯಲ್ಲಿ ಪ್ರಬಲವಾದ ಆದ್ಯ ಬಲಾಘಾತ ಇರುತ್ತದೆ. ಇದರ ಪರಿಣಾಮವಾಗಿ ಎರಡನೆಯದರಲ್ಲಿ ಪದಗಳು ವಿರೂಪಗೊಳ್ಳುತ್ತವೆ. (ಅ) ಬಲಾಘಾತಯುಕ್ತ ವರ್ಣದ ಪರದಲ್ಲಿ ಬರುವ ಸ್ವರ ಹೋಗಿ ವ್ಯಂಜನಗುಚ್ಛಗಳು ರೂಪುಗೊಳ್ಳುತ್ತವೆ. ಉದಾ : ನೀನು (ಮರ್ಯಾದಾಪುರ) ಮಾಡುವೆ-ಕರಿಬ ಲ ಕ್ರಬ; ಕುಂಬಳ-ಕೊಮೊರಲಕುಮ್ರ, ಇತ್ಯಾದಿ; ಅಥವಾ ಸಂಯುಕ್ತ ಸ್ವರಗಳೊ ತ್ರಿಸಂಯುಕ್ತ ಸ್ವರಗಳೊ ಆಗಿ ಉಳಿದುಕೊಳ್ಳುತ್ತವೆ. ಉದಾ : ಉಳುವವನು-ಹಲೋವಲಹೌಲ; ಒಂದು ಅಂಕಿತನಾಮ-ರತಿಯ ಲರೈತ; ಸಾಧು-ಕೆವಲಿಯಲಕೆಉಇಲ, ಇತ್ಯಾದಿ. (ಆ) ಅಂತ್ಯ ಸಂಯುಕ್ತ ಸ್ವರಗಳು ಮೂಲಸ್ವರಗಳಾಗುತ್ತವೆ. ಉದಾ : ರಾಣಿ-ಮದೈಲಮದೆ; ಬೇಡಿಕೆ-ಕಬೌಲಕಬೆ, ಇತ್ಯಾದಿ. (2) ಪೂರ್ವ ಅಸ್ಸಾಮೀಯಲ್ಲಿರುವ ಉಚ್ಚತರ ಮಧ್ಯಸ್ವರಗಳಿಗೆ ಪ್ರತಿಯಾಗಿ ಪಶ್ಚಿಮ ಅಸ್ಸಾಮಿಯಲ್ಲಿ ಉಚ್ಚಸ್ವರಗಳೇ ವಿಶೇಷ. ಹಾಗೆಯೇ ಅಲ್ಲಿಯ ನಿಮ್ನತರ-ಮಧ್ಯಸ್ವರಗಳಿಗೆ ಪ್ರತಿಯಾಗಿ ಇಲ್ಲಿ ನಿಮ್ನ ಸ್ವರಗಳಿರುತ್ತವೆ. ಉದಾ : ಬಟ್ಟೆ-ಕಪೊರ್‍ಲಕಪುರ್; ಬೆಲೆ-ಮೊಲ್‍ಲಮುಲ್; ನಿಂಬೆ -ನೆಮುಲನಿಮು; ಅವನು ಮಾಡಿದ್ದಾನೆ-ಕರಿಸೆ ಲಕರಿಸಿ. (3) ಪೂರ್ವ ಅಸ್ಸಾಮೀಯ ನಿಮ್ನತರ-ಮಧ್ಯಾಗ್ರ /e/ ದ ಸ್ಥಾನದಲ್ಲಿ ಪಶ್ಚಿಮ ಅಸ್ಸಾಮಿಯಲ್ಲಿ ಉಚ್ಚತರ ನಿಮ್ನಾಗ್ರ /ಛಿ/ ( ಇಂಗ್ಲೀಷಿನ ` ಬ್ಯಾಂಕ್` ನಲ್ಲಿರುವಂತೆ ) ಬರುತ್ತದೆ. (4) ಪೂರ್ವ ಅಸ್ಸಾಮೀ ಮಹಾಪ್ರಾಣಗಳನ್ನು ತೇಲಿಸುವುದರ ಕಡೆಗೆ ಒಲಿದರೆ, ಪಶ್ಚಿಮ ಅಸ್ಸಾಮೀ ಉಪಭಾಷೆಗಳಲ್ಲಿ ಮಹಾಪ್ರಾಣಗಳೇ ಅತಿ ಪ್ರಬಲ. ಅಕ್ಕ ಪಕ್ಕದ ವರ್ಣಗಳೊಡನೆ ಎರಡು ಮಹಾಪ್ರಾಣ ಸ್ಪರ್ಶಗಳು ಬರುವುದು ಪೂರ್ವ ಅಸ್ಸಾಮಿಯಲ್ಲಿ ತೀರ ವಿರಳ. (ಇದುವರೆಗೆ ಅಂಥ ಒಂದೇ ಒಂದು ತದ್ಭವ ಶಬ್ಧವನ್ನು ಗುರುತಿಸಲು ಸಾಧ್ಯವಾಗಿದೆ) . ಆದರೆ ಪಶ್ಚಿಮ ಅಸ್ಸಾಮಿಯಲ್ಲಿ ಅದು ತೀರ ಸಾಮಾನ್ಯ. ಉದಾ : ನೀರಿನ ಮಡಕೆ-ಘಗರಿ ಲಘಘ್ರಿ ; ಟೊಳ್ಳು-ಫೊಪೊಲ ಲ ಫಪ್ಲ. (5) ಎರಡೂ ಉಪಭಾಷಾವರ್ಗಗಳ ಸ್ವರಲಹರಿಯ ವಿನ್ಯಾಸಗಳು ಬೇರೆಬೇರೆ. (6) ಪೂರ್ವದ ಉಪಭಾಷೆಯ ಮಾತಿನ ವೇಗ ನಿಧಾನವಾದದ್ದು, ಪಶ್ಚಿಮದ ಉಪಭಾಷೆಗಳದು ತೀವ್ರ ಮತ್ತು ರಭಸವಾದದ್ದು. ಆಕೃತಿಮಾತ್ಮಕ (1) ನಾಮವಾಚಕಗಳ ವಿಭಕ್ತಿರೂಪದಲ್ಲಿ ದ್ವಿತೀಯ ಮತ್ತು ಚತುರ್ಥಿ ವಿಭಕ್ತಿಗಳು ಪಶ್ಚಿಮ ಅಸ್ಸಾಮಿಯಲ್ಲಿ ಒಂದಾಗಿರುತ್ತವೆ. (2) ಕಾಲ ಮತ್ತು ಸ್ಥಾನಗಳ ಸರ್ವನಾಮ ಸಾಧಿತಗಳು ಎರಡು ಭಾಷಾವರ್ಗಗಳಲ್ಲೂ ಬೇರೆ ಬೇರೆಯೇ ಆಗಿವೆ. ಉದಾ : ಪೂರ್ವ ಅಸ್ಸಾಮಿ ಎಲ್ಲಿ-ಕತ್, ಎಲ್ಲಿ (ಸಂಬಂಧಸೂಚಕ)-ಜûತ್, ಅಲ್ಲಿ-ತತ್; ಇಲ್ಲಿ-ಅತ್ ಇವುಗಳಿಗೆ ಪಶ್ಚಿಮ ಅಸ್ಸಾಮಿಯಲ್ಲಿ ಕ್ರಮವಾಗಿ ಕಹೇಂ~ಕಹಾಂಯ್, ಜûಹೇಂ~ಜಹಾಂಯ್ ಇತ್ಯಾದಿ ಮಾತುಗಳಿವೆ. (3) ಬಹುವಚನ ಅಕೃತಿಮಾಗಳು ಕೂಡ ಬೇರೆ ಬೇರೆಯೇ. ಉದಾ: ಪೂರ್ವ ಅಸ್ಸಾಮೀಯ- ಬೊರ್, -ಬಿಲಕ್ ಎಂಬುವುಗಳಿಗೆ ಪಶ್ಚಿಮ ಅಸ್ಸಾಮೀಯ ಉಪಭಾಷಾವರ್ಗ-ಗಿಲ, -ಗಿಲನ್, -ಗಿಲಕ್ ಇತ್ಯಾದಿಗಳನ್ನು ಬಳಸುತ್ತದೆ. (4) ಕ್ರಿಯಾಪದಗಳ ಕ್ರಿಯಾರೂಪದಲ್ಲಿ ವರ್ತಮಾನಕಾಲಕ್ಕೆ ಮಧ್ಯಮ ಪುರುಷ ಸಾಮಾನ್ಯದ ಅಂತ್ಯ ಪ್ರತ್ಯಯ ಪೂರ್ವ ಅಸ್ಸಾಮೀಯಲ್ಲಿ -ಅ ಮತ್ತು ಪಶ್ಚಿಮ ಅಸ್ಸಾಮೀಯಲ್ಲಿ -ಅಹ್. ಉದಾ : ನೀನು (ಸಾಮಾನ್ಯ) ತಿನ್ನುತ್ತಿದ್ದೀಯೆ-ತಯ್‍ಖಇಸ ಲ ತಂಯ್ ಖಇಹಸ್, ಇತ್ಯಾದಿ. ಭೂತಕಾಲಕ್ಕೆ ಪ್ರಥಮಪುರುಷದ ಅಂತ್ಯಪ್ರತ್ಯಯ ಪೂರ್ವ ಅಸ್ಸಾಮೀಯಲ್ಲಿ -ಎ ಮತ್ತು ಪಶ್ಚಿಮ ಅಸ್ಸಾಮೀಯಲ್ಲಿ -ಅ ಅಥವಾ ಅಕ್ ಉದಾ : ಅವನು ಮಾಡಿದನು-ಕರಿಲೆಲಕರಿಲ ಅಥವಾ ಕರಿಲಕ್ ಅಥವಾ ಕಲ್ಲಕ್ ಇತ್ಯಾದಿ. (5) ಕ್ರಿಯಾರ್ಥಕ ಪರಸರ್ಗಗಳು ಕೂಡ ಎರಡು ಭಾಷಾವರ್ಗಗಳಿಗೂ ಬೇರೆ ಬೇರೆಯೇ. ಪದಕೋಶ: ಎರಡು ಭಾಷಾವರ್ಗಗಳ ಉಪಭಾಷೆಗಳೂ ಸಮಗ್ರ ನಾಮಪದಗಳ ರಾಶಿಯಲ್ಲಿ ಶೇಕಡ ಸ್ವಲ್ಪಭಾಗ ಹೊರತಾಗಿ, ಸಮಾನ ಸಂದರ್ಭಗಳಲ್ಲಿ ತೀರ ವಿಭಿನ್ನವಾದ ಪದಗಳನ್ನು ಬಳಸುತ್ತವೆ. ನಿದರ್ಶನಾರ್ಥವಾಗಿ ಕೆಲವು ಉದಾಹರಣೆಗಳನ್ನು ಹೇಳಬಹುದಾದರೆ, ಪೂರ್ವ ಅಸ್ಸಾಮೀಯ ಬಾವಿ - ಕುವ, ಟವೆಲ್ -ಗಮೊಸ, ಬಾರುಕೊಲು -ಅಸರಿ, ತಂಬಾಕು -ಧಪತ್ ಇವುಗಳಿಗೆ ಪಶ್ಚಿಮ ಅಸ್ಸಾಮೀಯಲ್ಲಿ ಕ್ರಮವಾಗಿ ಲಹಣ್ಣ, ಪಲಿ, ಲರು, ತಙ್ಖು ಎಂಬ ಶಬ್ಧಗಳು ಕಂಡುಬರುತ್ತವೆ. ವ್ಯಂಜನಗಳು ಧ್ವನಿಮಾಗಳ ವಿತರಣೆ. /ಙ ವ ಯ/ ಹೊರತಾಗಿ ಉಳಿದ ಎಲ್ಲ ವ್ಯಂಜನಗಳೂ ಪದಾದಿಯಲ್ಲಿ ಸ್ವರ ಪೂರ್ವವಾಗಿ, ಮತ್ತು /ಪ ಟ ಕ ಬ ದ ಗ ಭ ಧ ಖ ಮ ನ ಸ ಜû ಹ/ ಇವು ಪದದಾದಿಯಲ್ಲಿ ವ್ಯಂಜನಪೂರ್ವವಾಗಿ ಬರುತ್ತವೆ. ಎಲ್ಲ ವ್ಯಂಜನಗಳೂ ಪದ ಮಧ್ಯದಲ್ಲಿ ಮತ್ತು ಕೊನೆಯಲ್ಲಿ ಸ್ವರಗಳ ಬಳಿಕ ಬರುತ್ತವೆ. / ಪ ಟ ದ ಧ ಸ ಜû ಹ/ ಧ್ವನಿಮಾಗಲು ಪದದ ಕೊನೆಯಲ್ಲಿ ಸಂಸ್ವನಿತವ್ಯಂಜನಗಳ ಬಳಿಕ ಬರುತ್ತವೆ. ಮಹಾಪ್ರಾಣ ಸ್ಪರ್ಶಗಳು ಅಂತಿಮವಾಗಿ ಬರುವುದು ಹೆಚ್ಚಾಗಿಲ್ಲ. ಅಘೋಷ ಧ್ವನಿಗಳು ಘೋಷಧ್ವನಿಗಳಿಗಿಂತ ಕಡಿಮೆ ಕಾಣಿಸಿಕೊಳ್ಳುತ್ತವೆ. ಎರಡು ಮಹಾಪ್ರಾಣ ಸ್ಪರ್ಶಗಳು ಒಂದೇ ಪದದಲ್ಲಿ-ವಿಶೇಷವಾಗಿ ತದ್ಭವಗಳಲ್ಲಿ-ಪರಸ್ಪರವಾಗಿ ಒಂದರ ಬಳಿಕ ಒಂದು ಬರುವುದು. ಅಥವಾ ಸ್ವರ-ವ್ಯಂಜನ ಕೂಡಿ ಬರುವುದು (ಸ್ವರ ಎಂದರೆ ಸ್ವರ ಮತ್ತು ಸ್ವರಗುಚ್ಛಗಳು, ವ್ಯಂಜನ ಎಂದರೆ ವ್ಯಂಜನ ಮತ್ತು ವ್ಯಂಜನಗುಚ್ಛಗಳು -ಎರಡೂ ಆಗಬಹುದು) ಶಿಷ್ಟವ್ಯವಹಾರಿಕದಲ್ಲಿ ತೀರ ವಿರಳ. ಮುಖ್ಯ ಪರಿಸರಣಾತ್ಮಕ ವಿಭಿನ್ನ ರೂಪಗಳು (1) ಸ್ವರಪೂರ್ವವಾಗಿ ಮತ್ತು /ಯ/ ಪರವಾಗಿ ಬಂದಾಗ; ಈ ಪರಿಸರದಲ್ಲಿ ಬರೆದಿರುವ /ಜ್ಞ್ ವ್ x ಹ್/ ಇವುಗಳ ಹೊರತಾಗಿ ಉಳಿದೆಲ್ಲ ವ್ಯಂಜನಗಳೂ ಅರ್ಧ ದೀರ್ಘ ಸಂಸ್ವನಗಳನ್ನು, ಮಹಾಪ್ರಾಣಗಳು ಅವುಗಳ ಸ್ಪರ್ಶಾಂಶವನ್ನು ಸ್ವಲ್ಪ ದೀರ್ಘ ಮಾಡಿಕೊಳ್ಳುತ್ತವೆ. (2) ಸ್ವರಪೂರ್ವವೂ /ರ್/ ಕಾರ ಪೂರ್ವದಲ್ಲೂ ಸ್ವರ ಪರದಲ್ಲಿಯೂ ಇದ್ದಾಗ. (3) /ರ್/ ಕಾರ ಪೂರ್ವದಲ್ಲು ಸ್ವರ ಪರದಲ್ಲಿಯೂ ಇದ್ದಾಗ. (2) ಮತ್ತು (3) ಎರಡರ ವ್ಯಂಜನಗಳಲ್ಲಿ ಅರ್ಧ ದೀರ್ಘಸಂಸ್ವಗಳು ದೀರ್ಘರಹಿತ ಸಮಸ್ವನಗಳೊಡನೆ ಸ್ವಚ್ಛಂದ ಪರಿವರ್ತನೆಯಲ್ಲಿರುತ್ತವೆ. (2) ನೆಯ ಪರಿಸರದಲ್ಲಿ /ತ್ ಥ್ ದ್ ಧ್ ನ್ ಲ್/ ಧ್ವನಿಮಾಗಳು ಸ್ವಲ್ಪಮಟ್ಟಿಗೆ ಮೂರ್ಧನ್ಯಗಳಾಗಿರುತ್ತವೆ. (4) ಅಂತಿಮವಾಗಿ. (ಅ) ಊಷ್ಮಧ್ವನಿಗಳು ಹೆಚ್ಚು ಕಡಿಮೆ ದೀರ್ಘತರವಾಗಿರುತ್ತದೆ. (ಆ) ಮಹಾಪ್ರಾಣಗಳು/ಫ್ ಭ್/ದ್ವಯೋಷ್ಠ್ಯವಾದ /ø/ ಮತ್ತು ಘೋಷಿತವಾದ [ß] ಗಳಾಗಿ ಊಷ್ಮೀಕೃತವಾಗುತ್ತದೆ. ಕೆಲವು ಉಪಭಾಷೆಗಳಲ್ಲಿ/ಖ್/ಕೂಡ ಕಂಠ್ಯ-ಅಘೋಷ-ಊಷ್ಮಧ್ವನಿ [x] ಆಗಿ ಎಚ್ಚರವಾಗುವ ಪ್ರವೃತ್ತಿ ತೋರುತ್ತದೆ. ಸ್ವರಗಳು ಎಂಟು ಸ್ವರಗಳಲ್ಲಿ ಎಲ್ಲವೂ ಅನುನಾಸಿಕತ್ವದ ಧ್ವನಿಮಾಗಳೊಡನೆ ಅನುನಾಸಿಕೀಯವಾಗಬಹುದು. ದೀರ್ಘತೆ ಧ್ವನಿಮೀಯವಲ್ಲ. ಪಶ್ಚಿಮ ಅಸ್ಸಾಮೀಯ ಉಪಭಾಷೆಗಳಲ್ಲಿ ಉಚ್ಚತರ ನಿಮ್ನಾಗ್ರವಾದ (x) ಶಿಷ್ಟ ವ್ಯವಹಾರಿಕದ ನಿಮ್ನತರಾಗ್ರ /e/ ವನ್ನು ಬದಲಿಸಿ ತಾನು ಬರುತ್ತದೆ. ವಿತರಣೆ ಸ್ವರಗಳ ವಿತರಣೆ ಕೆಲಮಟ್ಟಿಗೆ ವಿಲಕ್ಷಣವಾದುದು. ಎಂಟು ಸ್ವರಗಳು ಈ ರೀತಿಯ ವಿತರಣೆಯನ್ನು ತೋರಿಸುತ್ತವೆ : (1) /ಇ ಉ / ಸ್ವರಗಳು ಪರವರ್ಣದ ಆದಿಯಲ್ಲಿ ಬರದೆ ಇದ್ದಾಗ, ಸಂವೃತವರ್ಣಗಳಲ್ಲೂ ವಿವೃತವರ್ಣಗಳಲ್ಲೂ ಎಂಟು ರೀತಿಯ ವಿರೋಧಗಳು (ಕಾಂಟ್ರಾಸ್ಟ್) ಕಾಣಬಹುದು. (2) ಅನುನಾಸಿಕಗಳು ಅಥವಾ ಅನುನಾಸಿಕೀಯವಲ್ಲದ ಯಾವುದೇ ಒಂದು ವ್ಯಂಜನ ನಡುವೆ ಬರುವ /ಇ/ಕಾರಾದಿಯಾದ ವರ್ಣ ಪರದಲ್ಲಿದ್ದಾಗ ವಿವೃತವರ್ಣಗಳಲ್ಲಿ ಆರು ರೀತಿಯ ವಿರೋಧಗಳು ಕಾಣಬಹುದು. (3) ಯಾವುದಾದರೂ ವ್ಯಂಜನ /ಉ/ಕಾರ ಸಹಿತವಾಗಿ ಬಂದರೂ ರಹಿತವಾಗಿದ್ದರೂ ವಿವೃತವರ್ಣಗಳಲ್ಲಿ ಐದು ರೀತಿಯ ವಿರೋಧಗಳನ್ನು ಕಾಣಬಹುದು. ಮುಖ್ಯ ಪರಿಸರಣಾತ್ಮಕ ವಿಭಿನ್ನರೂಪಗಳು (1) ಎಲ್ಲ ಸ್ವರಗಳು ವರ್ಗೀಯ ಅನುನಾಸಿಕಗಳಾದ /ಮ ನ್ ಙï/ಗಳಿಗೆ ಅಥವಾ ಪೂರ್ವದಲ್ಲಿಯ ಅನುನಾಸಿಕೀಕೃತ ಸ್ವರದೊಡಗೂಡಿದ /ಹ್/ಗೆ ಪೂರ್ವದಲ್ಲಿ ಬಂದಾಗ ಅನುನಾಸಿಕಗಳಾಗಿತ್ತವೆ. ಮತ್ತು ಸ್ವರಗುಚ್ಛಗಳಲ್ಲಿ ಅನುನಾಸಿಕೀಕೃತ (ಧ್ವನಿಮೀಯ) ಸ್ವರಗಳು ಪೂರ್ವದಲ್ಲಿಯೋ ಪರದಲ್ಲಿಯೋ ಬಂದಾಗ ಕೂಡ ಅವು ಅನುನಾಸಿಕಗಳಾಗುತ್ತವೆ. (2) /ಇ/ ಹೊರತಾಗಿ ಎಲ್ಲ ಸ್ವರಗಳೂ /ಯ್/ ಸ್ವರಶ್ರುತಿಯನ್ನು ಅನುಸರಿಸುತ್ತವೆ ; ಪರದಲ್ಲಿಯ ವ್ಯಂಜನಗುಚ್ಛದ ಕೊನೆಯ ಧ್ವನಿ /ಯ/ ಆಗಿದ್ದರೆ ಹಾಗೆ ಆಗುತ್ತದೆ. (3) ವ್ಯಂಜನಗುಚ್ಛವೊಂದರಲ್ಲಿ /ರ್/ಕಾರಪೂರ್ವವಾಗಿ ಬಂದಾಗ, ಅಗ್ರ ಮತ್ತು ಪಶ್ಚ ಸ್ವರಗಳು ಸ್ವಲ್ಪಮಟ್ಟಿಗೆ ಕೇಂದ್ರೀಯವಾಗಿರುತ್ತವೆ ; ನಿಮ್ನ ಕೇಂದ್ರೀಯಸ್ವರ/ಅ/ ಸ್ವಲ್ಪಮಟ್ಟಿಗೆ ಉದಾತ್ತಸ್ವರವಾಗಿರುತ್ತದೆ. (4) ಉದ್ಗಾರದ ಆದಿಸ್ವರಗಳು ಕೆಲವೊಮ್ಮೆ ಸ್ವಲ್ಪಮಟ್ಟಿಗೆ ಕಾಕಲ್ಯೀಕೃತವಾಗಿರುತ್ತವೆ. (5) ಎಲ್ಲ ಸ್ವರಗಳೂ ಒಂದು ಪದದಲ್ಲಿ ಎಲ್ಲೆಲ್ಲಿ ಬರುತ್ತವೆ ಎಂಬ ಸ್ಥಾನಕ್ಕೆ ಅನುಗುಣವಾಗಿ ಸಂಸ್ವನೀಯಗಳಾದ ಬೇರೆ ಬೇರೆ ಪ್ರಮಾಣದ ದೀರ್ಘತೆಗಳನ್ನು ಪಡೆದಿರುತ್ತವೆ. ಧ್ವನಿಮಾ ಶಾಸ್ತ್ರವನ್ನು ಕುರಿತು ಒಂದು ಚಾರಿತ್ರಿಕ ಟಿಪ್ಪಣಿ ಅಸ್ಸಾಮೀ ವ್ಯಂಜನಾತ್ಮಕ ಬೆಳವಣಿಗೆಯ ಚರಿತ್ರೆ ಪ್ರಾಚೀನ ಇಂಡೋ ಆರ್ಯನ್ ಪದ್ಧತಿಯ ಧ್ವನಿಮೀಯ ಐಕ್ಯದ ಚರಿತ್ರೆಯೇ ಆಗಿದೆ. ಇದು ಅಸ್ಸಾಮೀ ಭಾಷೆಯಲ್ಲಿ, ದೇಶದ ಸಮಾನ ಉತ್ಪತ್ತಿ ಮೂಲಸಂಬಂಧಿಗಳಾದ ಭಾಷೆಗಳನ್ನೇ ಪ್ರತ್ಯೇಕಿಸುವ ವಿಶಿಷ್ಟ ಲಕ್ಷಣವಾಗಿದೆ. ಧ್ವನಿಮಾ ಪಟ್ಟಿಕೆಯಿಂದ, ಪ್ರಾಚಿನ ಇಂಡೋ ಆರ್ಯನ್ ಭಾಷೆಯ ಮೂರು ಮುಖ್ಯ ಶ್ರೇಣಿಗಳಲ್ಲಿ-ದಂತ್ಯ ಮೂರ್ಧನ್ಯ ಮತ್ತು ತಾಲವ್ಯಗಳು-ಈ ಭಾಷೆಯ ಕೊರತೆಯಿರುವುದು ಸ್ಪಷ್ಟವಾಗಿ ಕಾಣುತ್ತದೆ. ದಂತ್ಯ ಮತ್ತು ಮೂರ್ಧನ್ಯ ಸ್ಪರ್ಶಗಳು ಅಸ್ಸಾಮೀಯ ವತ್ಸ್ರ್ಯ ಸ್ಪರ್ಶಗಳಲ್ಲಿ ಐಕ್ಯಗೊಂಡಿವೆ. ತಾಲವ್ಯ ಅನುಘರ್ಷಗಳು /ಚ್, ಛ್/ ಮತ್ತು ಜ್, ಝ್/ಗಳು ಕ್ರಮವಾಗಿ ವತ್ಸ್ರ್ಯ /ಸ್/ ಮತ್ತು /ಜ್/ಗಳಾಗಿ ಐಕ್ಯವಾಗಿವೆ. ಮತ್ತು ಊಷ್ಮೀಕೃತವಾಗಿವೆ. /ಶ್, ಷ್/ ಮತ್ತು /ಸ್/ ಈ ಮೂರು ಊಷ್ಮಗಳು ತಮ್ಮ ಉಚಿತವಾದ ಉಚ್ಛಾರಣೆಯನ್ನು ಕಳೆದುಕೊಂಡು ಆದ್ಯತವಾಗಿ ಕಂಠ್ಯ-ಅಘೋಷ /ಛಿ/ವಾಗಿಯೂ ಅನ್ಯತ್ರ ಘೊಷಕಾಕಲ್ಯ /ಹ್/ವೂ ಆಗಿದೆ. ಸ್ವರಗಳ ವಿಚಾರದಲ್ಲಿ ಧ್ವನಿಮೀಯ ವಿಚ್ಛೇದನವಿದೆ. ಉದಾಹರಣೆಗೆ, ಪ್ರಾಚೀನ ಇಂಡೋ- ಆರ್ಯನ್ ಎ ಮತ್ತು ಅ ಇವು ಕ್ರಮವಾಗಿ /ee/ ಮತ್ತು /ಛಿಡಿ/ ಇವನ್ನು ಉಂಟುಮಾಡಿವೆ. ದಂತ್ಯ ಮತ್ತು ಮೂರ್ಧನ್ಯ ಧ್ವನಿಮಾಗಳು ಬಿದ್ದು ಹೋಗುವಿಕೆ, ಮತ್ತು ವತ್ಸ್ರ್ಯಗಳೊಡನೆ ಬೆರೆತು ಹೋಗುವಿಕೆ-ಈ ವೈಲಕ್ಷಣ್ಯಕ್ಕೆ ಇಡೀ ಅಸ್ಸಾಮೀಭಾಷಾಪ್ರದೇಶವನ್ನು ಸುತ್ತುವರಿದಿರುವ ಟಿಬೆಟೋ-ಬರ್ಮನ್ ಭಾಷೆಗಳ ಮತ್ತು ಉಪಭಾಷೆಗಳ ಪ್ರಭಾವವೇ ಕಾರಣವೆಂದು ತಿಳಿಯಲಾಗಿದೆ. ಆಕೃತಿಮಾ ವಿಜ್ಞಾನ ಅಸ್ಸಾಮಿಯಲ್ಲಿ ಆಕೃತಿಮಾತ್ಮಕ ರೂಪಗಳ ಮೂರು ವರ್ಗಗಳಿವೆ. (i) ನಾಮಪದಗಳೂ ಸೇರಿದ ನಾಮವಾಚಕಗಳು, ಸರ್ವನಾಮಗಳು ಮತ್ತು ಗುಣವಾಚಕಗಳು. (ii) ಕ್ರಿಯಾರ್ಥಕಗಳು. (iii) ಅವ್ಯಯಗಳು. ನಾಮವಾಚಕಗಳು ಗುಣವಾಚಕಗಳು ಮತ್ತು ಸರ್ವನಾಮಗಳು ನಾಮವಾಚಕಗಳ ಉಪವರ್ಗಗಳು. ಅನುಬಂಧಗಳಂತೆ ಗುಣವಾಚಕಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರುವುದಿಲ್ಲ. ಹೋಲಿಕೆಯಲ್ಲೂ ವಿಭಕ್ತಿ ರೂಪವಿಲ್ಲ. ಅದನ್ನು ಕೆಲವು ವರ್ಣನಾತ್ಮಕ ಶಬ್ಧಗಳಿಂದ ವ್ಯಕ್ತಗೊಳಿಸುವುದಾಗುತ್ತದೆ. ಸರ್ವನಾಮಗಳು ಐದು ವಿಭಕ್ತಿ ಪ್ರತ್ಯಗಳಲ್ಲಿ ನಡೆಯುತ್ತವೆ : ಪ್ರಥಮಾ, ದ್ವಿತೀಯಾ, ಚತುರ್ಥಿ, ಷಷ್ಠೀ ಮತ್ತು ಸಪ್ತಮೀ ವಿಭಕ್ತಿಗಳು. ತೃತಿಯ, ಮತ್ತು ಪಂಚಮೀ ವಿಭಕ್ತಿಗಳು ಕ್ರಮವಾಗಿ [ಎ] ಮತ್ತು [ಪರ] ಎಂಬ ವಾಕ್ಯಾತ್ಮಕ ಪಶ್ಚಸರ್ಗಗಳಿಂದ ವ್ಯಕ್ತವಾಗುತ್ತಿದ್ದು, ಅವು ಷಷ್ಠೀ ವಿಭಕ್ತಿರೂಪಗಳನ್ನು ಅನುಸರಿಸುತ್ತವೆ. ನಾಮ ಪದಗಳು ಇನ್ನೂ ಎರಡು ಉಪವರ್ಗಗಳಾಗಿ ವಿಭಜಿತವಾಗುತ್ತವೆ. ಸಂಬಂಧ ನಾಮಪದಗಳು ಮತ್ತು ಸಾಧಾರಣನಾಮಪದಗಳು. ಸಂಬಂಧ ನಾಮಪದಗಳು ಎರಡು ವಿಭಕ್ತಿ ರೂಪಗಳನ್ನುಳ್ಳ ಪದಗಳ ಒಂದು ಚಿಕ್ಕ ವರ್ಗ: (i) ಪುರುಷವಾಚಕ ಸಂಬಂಧ ವಿಭಕ್ತಿ ಪ್ರತ್ಯಯಗಳು (ii) ವಿಭಕ್ತಿ ಪ್ರತ್ಯಯಗಳು. ಪುರುಷವಾಚಕ ಸಂಬಂಧಗಳನ್ನು ಹೇಳುವ ಪೂರ್ತಿವರ್ಗ (ಮಿತ್ರರನ್ನು ಉದ್ದೇಶಸಿ ಹೇಳುವ x ಛಿಞhi, ಮಿತ ಇತ್ಯಾದಿ ಪದಗಳೂ ಸೇರಿ) ಈ ಪದಗಳ ವರ್ಗವನ್ನು ರೂಪಿಸುತ್ತದೆ. ಸಂಬಂಧವಾಚಕ ನಾಮಪದಗಳಲ್ಲಿ, ನಾಲ್ಕು ಪುರುಷಗಳಿಗೆ ವಿಭಕ್ತಿ ಕಾರ್ಯಗಳು ನಡೆಯುತ್ತವೆ. (1) ಉತ್ತಮ ಪುರುಷ : [ಅ ಇ ~ಜಿ] (2) ಮಧ್ಯಮ ಪುರಷ (ಮರ್ಯಾದಾಪುರ) [ಅರ್] (3) ಮಧ್ಯಮ ಪುರುಷ (ಸಾಧಾರಣ) : [ಅರ್] (4) ಪ್ರಥಮ ಪುರುಷ: [ಅಕ್] ಉದಾಹರಣೆಗಳು : ಮೊಮಯ್, ನನ್ನ ಸೋದರಮಾವ. ಮೊಮಯರ, ನಿನ್ನ (ಮರ್ಯಾದಾಪರ) ಸೋದರಮಾವ. ಮೊಮಯರ್, ನಿನ್ನ (ಸಾಧಾರಣ) ಸೋದರಮಾವ. ಮೊಮಯಕ್, ಅವನ ಸೊದರಮಾವ, ಇತ್ಯಾದಿ. ಪುರುಷವಾಚಕ ಸಂಬಂಧಗಳಿಗೆ ಈ ವಿಭಕ್ತಿ ಪ್ರತ್ಯಯಗಳು ಸೇರುವುದು ಆರ್ಯಭಾಷೆಗಳ ಮಟ್ಟಿಗೆ ಹೇಳುವುದಾದರೆ ಒಂದು ವಿಲಕ್ಷಣವಾದ ವ್ಶೆಚಿತ್ರ್ಯ. ಆರ್ಯೇತರ ಆಸ್ಟ್ರಿಕ್ ಮೂಲಗಳಿಂದ ಅದು ಬಂದಿದೆ. ಈ ನಾಮಪದಗಳ ವರ್ಗಗಳಿಗೆ ಸಾಧಾರಣ ವರ್ಗದ ನಾಮಪದಗಳಲ್ಲಿ ಯಾವುದೇ ಆಗಿರಲಿ ಹೇಗೆ ವಿಭಕ್ತಿ ಪ್ರತ್ಯಯಗಳು ಹತ್ತುತ್ತವೆಯೋ ಇವಕ್ಕೂ ಹತ್ತುತ್ತವೆ. ವಿಭಕ್ತಿಗಳು ನಾಮಪದಗಳಿಗೆ ಆರು ವಿಭಕ್ತಿಗಳಿವೆ : (i) ನಿರಪೇಕ್ಷ (ii) ಪ್ರಥಮಾ ವಿಭಕ್ತಿ [ಎ] (iii)ದ್ವಿತೀಯಾವಿಭಕ್ತಿ [ak] (iv) ಚತುರ್ಥೀ ವಿಭಕ್ತಿ [abi] (v) ಷಷ್ಠೀ ವಿಭಕ್ತಿ [ar] (vi) ಸಪ್ತಮೀ ವಿಭಕ್ತಿ [at] ನಿರಪೇಕ್ಷ ವಿಭಕ್ತಿಗೆ ಆಕೃತಿಮಾ ಇಲ್ಲ; ಅದು ಕರ್ತೃವಾಗಿಯೋ ಇಲ್ಲ ಕರ್ಮವಾಗಿಯೋ ವಾಕ್ಯಾತ್ಮಕವಾಗಿ ಬಳಸಲ್ಪಡುತ್ತದೆ. ದ್ವಿತೀಯ, ಚತುರ್ಥೀ ಮತ್ತು ಷಷ್ಠೀ, ಸಪ್ತಮೀ ಆಕೃತಿಮಾಗಳು ಸ್ವರಾಂತ್ಯವಾಗಿರುವ ನಾಮಪದಗಳಿಗೆ ಸೇರಿದಾಗ ತಮ್ಮ ಸ್ವರಗಳನ್ನು ಕಳೆದುಕೊಳ್ಳುತ್ತವೆ. ತೃತೀಯಾ ಮತ್ತು ಪಂಚಮೀ ವಿಭಕ್ತಿಗಳು ಸರ್ವನಾಮಗಳಂತೆ ಇದೇ ವಾಕ್ಯಾತ್ಮಕ ಪಶ್ಚಸರ್ಗಗಳಿಂದ ವ್ಯಕ್ತವಾಗುತ್ತವೆ. ವಚನ ಮತ್ತು ಲಿಂಗ ಅಸ್ಸಾಮೀಯಲ್ಲಿ ವ್ಯಾಕರಣಾತ್ಮಕ ವಚನಗಳಾಗಲಿ ಲಿಂಗಗಳಾಗಲಿ ಇಲ್ಲ. ಶಿಷ್ಟ ವ್ಯಾವಹಾರಿಕದಲ್ಲಿ—ಬೊರ್,--ಬಿಲಕ್ ಮತ್ತು ಹಂತ್ ಎಂಬ ಅಂತ್ಯ ಪ್ರತ್ಯಯಗಳನ್ನು ಸೇರಿಸುವುದರಿಂದ ಬಹುವಚನತ್ವ ವ್ಯಕ್ತವಾಗುತ್ತದೆ. ನಪುಂಸಕಲಿಂಗ --ಅ,--ಇ,--ಅನಿ, ಮತ್ತು--ರಿ ಇಂಥ ಸಾಧಿತರೂಪಗಳಿಂದ ಇಲ್ಲವೆ m x ಣ ಚಿ (ಪುಂ.,) ಮತ್ತು ಮಯ್‍ಕಿ ಅಥವಾ ಮತಿ (ಸ್ತ್ರೀ) ಎಂಬ ವರ್ಣನಾತ್ಮಕ ಶಬ್ದಗಳಿಂದ ವ್ಯಕ್ತವಾಗುತ್ತದೆ. ಪಶ್ರ್ಚಾಶ್ರಯಿ ಮತ್ತು ಸಂಖ್ಯಾವಾಚಿ ನಿಶ್ಚಿತಾರ್ಥಗಳು ಅಸ್ಸಾಮೀ ಭಾಷೆಯ ಇನ್ನೊಂದು ಬಹು ಮುಖ್ಯವಾದ ಪ್ರತ್ಯೇಕವಾದ ವೈಲಕ್ಷಣ್ಯವೆಂದರೆ, ಪಶ್ಚಾಶ್ರಯಿ ಮತ್ತು ಸಂಖ್ಯಾವಾಚಿ ನಿಶ್ಚಿತಾರ್ಥಗಳ ಬಳಕೆ. ಪಶ್ಚಾಶ್ರಯಿಗಳು ತಾವು ಸೇರುವ ನಾಮವಾಚಕಗಳ ಸ್ವರೂಪ ಆಕೃತಿ ಮತ್ತು ರಚನೆ ಇವುಗಳನ್ನು ವ್ಯಕ್ತಪಡಿಸುವ ರೂಪಗಳು. ಅಸ್ಸಾಮೀಯಲ್ಲಿ ಅವುಗಳನ್ನು ವರ್ಗವಿಭಜಕಗಳೆಂಬುದಾಗಿ ಕರೆಯಲಾಗದು; ಏಕೆಂದರೆ ಅವು ನಾಮಪದಗಳನ್ನು ನಿರ್ದಿಷ್ಟ ಗುಂಪುಗಳಾಗಿಯೊ ವರ್ಗಗಳಾಗಿಯೊ ವರ್ಗೀಕರಣ ಮಾಡುವುದಿಲ್ಲ. ಸಂಖ್ಯಾವಾಚಿ ನಿಶ್ಚಿತಾರ್ಥಕಗಳು ಸಂಖ್ಯಾಪೂರ್ವವಾಗಿ ಬರುವ ಪಶ್ಚಾಶ್ರಯಿಗಳು. ಸಂಖ್ಯಾವಾಚಿ ನಿಶ್ಚಿತಾರ್ಥಗಳು ಸ್ವತಂತ್ರರೂಪಗಳು, ಆದರೆ ಪಶ್ಚಾಶ್ರಯಿಗಳು ಹಾಗಲ್ಲ. ಈ ರೂಪಗಳು ಮನುಷ್ಯರಲ್ಲಿ ಮತ್ತು ವಸ್ತುಗಳಲ್ಲಿ ನಿಶ್ಚಿತತೆಯನ್ನು ವ್ಯಕ್ತಪಡಿಸುತ್ತವೆ. ಆದ್ದರಿಂದ ಇಂಗ್ಲಿಷಿನ ಉಪಪದಗಳಂತೆ ಇವುಗಳನ್ನು ಗಣಿಸಬೇಕು. ಬಹುಮುಖ್ಯ ನಿಶ್ಚಿತಾರ್ಥಕಗಳಿಗೆ ಕೆಲವು ಉದಾಹರಣೆಗಳನ್ನು ಈ ಕೆಳಗೆ ಕೊಟ್ಟಿದೆ : (i)--ತೊ : ಮನುಷ್ಯನನ್ನು (ಸಾಧಾರಣ) ಸೇರಿಸಿಕೊಂಡು ಪುಂ ವಾಚಕಗಳಿಗೆ ಪರದಲ್ಲಿ ಸೇರಿಸುವುದು ಉದಾ : ಮನುಷ್ಯ -ಮನುಹ್‍ತೊ; ನಾಯಿ-ಕುಕುರ್‍ತೊ; ಹಾಗೆಯೇ ವೃತ್ತ ಮತ್ತು ಊಧ್ರ್ವಾಕೃತಿಯ ವಸ್ತುಗಳಿಗೂ-ತೊ ಸೇರಿಸಲಾಗುತ್ತದೆ. ಉದಾ : ಮನೆ-ಘರ್‍ತೊ; ಬೆಟ್ಟ-ಪಹರ್‍ತೊ ಇತ್ಯಾದಿ. (ii)--ಖನ್ : ಚಪ್ಪಟೆಯಾಗಿರುವ, ಅಗಲ ಮತ್ತು ಉದ್ದವಾಗಿರುವ ವಸ್ತುಗಳಿಗೆ ಸೇರಿಸುವುದು. ಉದಾ: ಬಟ್ಟೆಯ ಚೂರು--ಕಪೊರ್‍ಖನ್ ; ಹೊಳೆ-ನಯಿಖನ್ ; ಪುಸ್ತಕ -ಕಿತಪ್ ಖನ್ ; ಹಾಗೂ ಸಂಸಾರ-ಘರ್‍ಖನ್ ; ಇತ್ಯಾದಿ. (iii) --ದಲ್ : ಉರುಟಾದುದು ಮತ್ತು ಉದ್ದವಾದುದು ಆಗಿರುವುದಕ್ಕೆ ಸೇರಿಸುವುದು. ಉದಾ: ಪೆನ್ಸಿಲ್ಲು-ಪೆನ್ಸಿಲ್‍ದಲ್ ; ಹಗ್ಗ-z,ಜಡಿiಜಚಿಟ ; ಮರದ ದಿಮ್ಮಿ—ಕಥ್‍ದಲ್. ಸಂಖ್ಯಾವಾಚಿ ನಿಶ್ಚಿತಾರ್ಥಕಗಳಿಗೆ ಉದಾಹರಣೆಗಳು ಒಂದು ಪುಸ್ತಕ (ಅನಿಶ್ಚಿತ) ಎಖನ್ ಕಿತಪ್ ಅಥವಾ ಕಿತಪ್ ಎಖನ್; ಇಬ್ಬರು ಹೆಂಗಸರು ಅಥವಾ ಆ ಇಬ್ಬರು ಹೆಂಗಸರು-ದುಗರಕಿ ತಿರೊತ ದುಗರಕಿ; (ಎರಡು ಸಾವಿರ ರೂಪಾಯಿಗಳು ಅಥವಾ ಆ ಎರಡು ಸಾವಿರ ರೂಪಾಯಿಗಳು -ದುಹಜûರ್ ತಕ ಅಥವಾ ತಕದುಹಜûರ್), ಇತ್ಯಾದಿ. ಈ ಮೇಲಿನ ಉದಾಹರಣೆಗಳಿಂದ ಸಂಖ್ಯಾವಾಚಿ ನಿಶ್ಚಿತಾರ್ಥಕ ನಾಮಪದಕ್ಕೆ ಪೂರ್ವವಾಗಿ ಬಂದಾಗ ಉಕ್ತವಾದ ಸಂಖ್ಯೆ ಅಥವಾ ಪರಿಮಾಣದ ನಿಶ್ಚಿತತೆಯನ್ನು ಹೇಳುತ್ತದೆ. ಕ್ರಿಯಾರ್ಥಕ ರೂಪಗಳು ಕ್ರಿಯಾರ್ಥಕಗಳಲ್ಲಿ ಸಮಾಪಕ ಮತ್ತು ಅಸಮಾಪಕ ಕ್ರಿಯಾಪದಗಳಿಗೆ ಪ್ರತ್ಯಯಗಳು ಹತ್ತುತ್ತವೆ. ಎಲ್ಲ ಸಮಾಪಕ ಕ್ರಿಯಾಪದಗಳಿಗೂ ನಾಲ್ಕು ಪುರುಷಗಳಲ್ಲೂ ಪ್ರತ್ಯಯಗಳುಂಟು; ಅಸಮಾಪಕ ಕ್ರಿಯಾಪದಗಳಿಗೆ ಪುರುಷವಾಚಕ ಪ್ರತ್ಯಯಗಳಿಲ್ಲ. ಸಮಾಪಕ ಕ್ರಿಯಾಪದಗಳು : ಪುರುಷಗಳು : ಉತ್ತಮ ಪುರುಷದ ಅಕೃತಿಮಾ [ಒo]ಇದಕ್ಕೆ ಭಿನ್ನರೂಪವಾಗಿ [ಮ] ಇದು ಕೂಡ ಬರುತ್ತದೆ. ಎರಡು ಮಧ್ಯಮ ಪುರುಷಗಳಿವೆ. ಮರ್ಯಾದಾಪರ [ಅ] ಮತ್ತು ಸಾಧಾರಣ. [ಚಿ] ಇವು ಆಕೃತಿಮಾತ್ಮಕವಾಗಿ [Φ] ಮತ್ತು [ಇ] ಎಂಬ ಭಿನ್ನರೂಪಗಳನ್ನು ಪಡೆದಿವೆ. ಪ್ರಥಮ ಪುರುಷದ ಆಕೃತಿಮಾ [ಎ] ಇದಕ್ಕೆ ಭಿನ್ನರೂಪಗಳು [Φ] ಮತ್ತು [ಚಿ]. ಕಾಲಗಳು ಮತ್ತು ಕ್ರಿಯಾಭಾವಗಳು [ಇಸ್] ಅಪೂರ್ಣಕಾಲಕ್ಕೆ, [ಇಲ್] ಭೂತಕಾಲಕ್ಕೆ [ಇಬ್] ಭವಿಷ್ಯತ್ ಕಾಲಕ್ಕೆ-ಹೀಗೆ ಮೂರು ಕಾಲವಾಚಕ ಆಕೃತಿಮಾಗಳಿವೆ. ಕೊನೆಯೆರಡು ಆಕೃತಿಮಾಗಳು ಸ್ವರಾಂತ್ಯವಾದ ಮೂಲರೂಪಗಳಿಗೆ ತಮ್ಮ ಸ್ವರಗಳನ್ನು ಕಳೆದುಕೊಳ್ಳುತ್ತವೆ. ಪುರುಷವಾಚಕ ಪ್ರತ್ಯಯಾತ್ಮಕ ಆಕೃತಿಮಾಗಳು ಮೂಲಕ್ರಿಯಾರೂಪ ಮತ್ತು ಕಾಲವಾಚಕ ಆಕೃತಿಮಾಗಳಿಂದಾದ ಧಾತುಗಳಿಗೆ ಸೇರುತ್ತವೆ. ಮೂಲಕ್ರಿಯಾರೂಪವೇ ವರ್ತಮಾನಕಾಲದ ಧಾತು. ಉದಾ : ಮಾಡು - ಕರ್; ನಾನು ಮಾಡುತ್ತೇನೆ-ಕರೊಂ; ನೀನು (ಮರ್ಯಾದಾಪರ) ಮಾಡುತ್ತೀಯೆ- ಕರ; (ಅವನು, ಇತ್ಯಾದಿ) ಮಾಡುತ್ತಾನೆ-ಕರೆ ಇತ್ಯಾದಿ. ಮೂಲರೂಪ ಮತ್ತು [ಇಸ್] ವರ್ತಮಾನಕಾಲದ ಅಪೂರ್ಣಧಾತುವನ್ನು ಹೇಳುತ್ತದೆ. ಉದಾ : ನಾನು ಮಾಡುತ್ತಿದ್ದೇನೆ ಅಥವಾ ನಾನು ಮಾಡುತ್ತಾ ಇದ್ದೇನೆ-ಕರಿಸೊಂ; ನೀನು (ಮರ್ಯಾದಾಪರ) ಮಾಡುತ್ತಿರುವೆ ಅಥವಾ ನೀನು ಮಾಡುತ್ತಾ ಇದ್ದೀಯೆ-ಕರಿಲ, ಇತ್ಯಾದಿ. ಭೂತಕಾಲದ ಧಾತು [ಇಲ್] ಇಂದ ಆಗುತ್ತದೆ. ಉದಾ : ನಾನು ಮಾಡಿದೆನು-ಕರಿಲೊಂ; ನೀನು (ಮರ್ಯಾದಾಪರ) ಮಾಡಿದೆ-ಕರಿಲ ಇತ್ಯಾದಿ. ಭೂತಕಾಲದ ಅಪೂರ್ಣ ಧಾತುವಿನಲ್ಲಿ [ಇಸ್] ಎಂಬುದು [ಇಲ್] ಗೆ ಪೂರ್ವದಲ್ಲಿ ಬರುತ್ತದೆ. ಉದಾ : ನಾನು ಮಾಡುತ್ತಿದ್ದೆ ಅಥವಾ ಮಾಡುತ್ತಾ ಇದ್ದೆ- ಕರಿಸಿಲೋಂ ; ನೀನು (ಮರ್ಯಾದಾಪರ) ಮಾಡುತ್ತಿದ್ದೆ ಅಥವಾ ನೀನು ಮಾಡುತ್ತಾ ಇದ್ದೆ, ಇತ್ಯಾದಿ. ಭವಿಷ್ಯತ್ ಕಾಲದ ಧಾತು ಮೂಲರೂಪ ಮತ್ತು [ಇಬ್] ಕೂಡಿ ಆಗುತ್ತದೆ. ಉದಾ : ನಾನು ಮಾಡುವೆನು- ಕರಿಮ್ ; ನೀನು (ಮುರ್ಯಾದಾಪರ) ಮಾಡುವೆ ಕರಿಬ, ಇತ್ಯಾದಿ. ಭವಿಷ್ಯತ್‍ಕಾಲದ ಅಪೂರ್ವ ಪ್ರತ್ಯಯಗಳಿಲ್ಲ. ವರ್ತಮಾನಕಾಲಿಕಧಾತು ಆಜ್ಞಾಸೂಚಕ (ವಿಧ್ಯರ್ಥ) ಧಾತುವಿನ ಕೆಲಸವನ್ನೂ ಮಾಡುತ್ತದೆ. ಆಜ್ಞಾಸೂಚಕ ಮಧ್ಯಮಪುರುಷ ಸಾಧಾರಣಕ್ಕೆ ಆಕೃತಿಯಾ ಇಲ್ಲ. ಉದಾ : ನೀನು (ಸಾಧಾರಣ) ಮಾಡು-ತರ್ ಕರ್; ನೀನು (ಮರ್ಯಾದಾಪರ) ಮಾಡು-ತುಮಿ ಕರ. ಇಂಗ್ಲಿಷಿನಲ್ಲಿರುವ ಹಾಗಲ್ಲದೆ, ಅಸ್ಸಾಮಿಯಲ್ಲಿ ಕರ್ತೃವೂ ಐಚ್ಛಿಕವಾಗಿ ಆಜ್ಞಾವಾಚಕದಲ್ಲಿ ವ್ಯಕ್ತವಾಗುತ್ತದೆ. ಅಸಮಾಪಕ ಕ್ರಿಯಾಪದಗಳು. ಈ ಕೆಳಗಿನವು ಅಸಮಾಪಕ ಕ್ರಿಯಾಪದಗಳು. (i) [ಇ] ಮತ್ತು [ಎ] ಗಳಲ್ಲಿ ಸಮುಚ್ಚಯಗಳು. (ii) [o]ನಲ್ಲಿ ಅಸಮಾಪಕ ಕ್ರಿಯಾಪದಗಳು. (iii) [ಅ] ನಲ್ಲಿ ಭೂತಕಾಲಿಕ ಕೃದಂತಗಳು. ಅರ್ಥಕ್ಕೆ ಅನುಗುಣವಾಗಿ ಬರುವ [ಇ] ರುಪದಲ್ಲಿ ಸಮುಚ್ಚಯ ಮತ್ತು [ಅ] ರೂಪದ ಭೂತಕೃದಂತ ಇವು ವರ್ತಮಾನ ಕಾಲದ ಧಾತುವಿಗೆ (ಎಂದರೆ ಮೂಲಧಾತುವಿಗೆ) ಅಂತ್ಯಪ್ರತ್ಯಯವಾಗಿ ಬರುತ್ತದೆ. ಉದಾ : ಮಾಡು -ಕರ್ ; ಮಾಡಿದ ಮತ್ತು ಮಾಡುತ್ತ-ಕರಿ, ಮಾಡಿದ್ದು ಅಥವಾ ಮಾಡುತ್ತಿದ್ದುದು ಕರ, ಇತ್ಯಾದಿ. ಸಮುಚ್ಚಯದ [ಎ] ಯನ್ನು ಭೂತಕಾಲಿಕ ಧಾತುರೂಪ [ಇಲ್]ಗೆ ಮತ್ತು ವರ್ತಮಾನ ಕಾಲಿಕ ಕೃದಂತ ಧಾತುರೂಪಗೆ ಸೇರಿಸಬಹುದು. ಉದಾ : (ಅದು) ಮಾಡಿದ್ದಾರೆ-ಕರಿಲೆ; ಮಾಡುತ್ತಿರುವಾಗ -ಕರೊಂತೆ, ಇತ್ಯಾದಿ. ಅಸಮಾಪಕ [o] ಪ್ರತ್ಯಯ ಭವಿಷ್ಯತ್ ಧಾತುರುಪಗಳನ್ನು ತೆಗೆದುಕೊಳ್ಳುತ್ತದೆ; ಪರಿಣಾಮವಾಗಿ ಬಂದ ರೂಪಕ್ಕೆ ನಿರಪೇಕ್ಷ ಚತುರ್ಥೀ ಪಂಚಮೀ ಮತ್ತು ಷಷ್ಠೀ ವಿಭಕ್ತಿಗಳು ಹತ್ತಬಹುದು. ನಿಷೇದಾತ್ಮಕ : ನಿಷೇಧಾತ್ಮಕ ಪ್ರತ್ಯಯಗಳು ನಿಷೇಧಾತ್ಮಕ ಆಕೃತಿಮಾ [ನೆ] ಯನ್ನು ಈಗಾಗಲೇ ಪ್ರತ್ಯಯ ಹಚ್ಚಿದ ರೂಪಗಳಿಗೆ ಮೊದಲು ಸೇರಿಸುವುದರಿಂದ ಬರುತ್ತವೆ. ಆಕೃತಿಮಾ [ನೆ] ಯಲ್ಲಿಯ ಸ್ವರ ಸ್ವರಾದಿಯಾದ ರೂಪದ ಮೊದಲಲ್ಲಿಯೇ ನಷ್ಟವಾಗುತ್ತದೆ. ಮತ್ತು ಕ್ರಿಯಾರೂಪದ ವ್ಯಂಜನದ ಆದಿಯ ಮೊದಲ ಸ್ವರದೊಡನೆ ಸ್ವರಮೈತ್ರಿಯನ್ನು ಪಡೆಯುತ್ತದೆ; ಆದರೆ ಆ ಸ್ಥಾನದಲ್ಲಿ ವ್ಯಂಜನ [ಅ] ಸ್ವರವನ್ನು ಆದಿಯಲ್ಲಿ ಪಡಿದಿದ್ದರೆ ಈ ಸ್ವರಮೈತ್ರಿ ಉಂಟಾಗದೆ ಹಾಗೆಯೇ ಉಳಿಯುತ್ತದೆ. ಉದಾ : ನಾನು ಮಾಡೆನು-ಟಿoಞoಡಿo ~; ನಾನು ಮಾಡಲಿಲ್ಲ—ನಕರಿಲೊಂ; ನಾನು ನೋಡೆನು-ನದಖೋಂ; (ಅದು) ಕೇಳಲ್ಪಡದಿದ್ದರೆ-ನುಕುನಿಲೆ; ನೀನು (ಮರ್ಯಾದಾಪರ) ಕೊಡೆ-ನಿಡಿಲ; ಆದರೆ ಸ್ವರಮೈತ್ರಿಯಿಲ್ಲದುದು. ನಾನು ತಿಂದೆನಿಲ್ಲ-ನಖಲೊಂ ಅಥವಾ ನೆಖಲೊಂ ಇತ್ಯಾದಿ. ಮಧ್ಯಮ ಪರುಷಗಳಲ್ಲಿಯ ಭವಿಷ್ಯತ್‍ಕಾಲದ ನಿಷೇಧಾತ್ಮಕ ವಿಧ್ಯರ್ಥಕ ನಿಷೇಧಾತ್ಮಕವನ್ನು ವ್ಯಕ್ತಪಡಿಸುತ್ತದೆ. ಕರ್ಮಣಿ ಪ್ರಯೋಗ : ವಿಶ್ಲೇಷಣಾತ್ಮಕವಾಗಿ ಇದನ್ನು ವ್ಯಕ್ತಪಡಿಸಲಾಗುತ್ತದೆ. ಆದಾಗ್ಯೂ ಪ್ರತ್ಯಯ ಹಚ್ಚಿದ ಕರ್ಮಣಿ ಪ್ರಯೋಗಗಳ ಅವಶೇಷಗಳು ಕೆಲವು ನುಡಿ ಕಟ್ಟಿನ ಉಕ್ತಿಗಳಲ್ಲಿ [ಇ] ಮತ್ತು [ಎ] ಎಂಬ ರೂಪಗಳಲ್ಲಿ ಕಾಣುತ್ತವೆ. ಕಾರಾಣಾರ್ಥಕಗಳು ಪ್ರಾತಿಪದಿಕಗಳು ಇತ್ಯಾದಿಗಳು ನಿಷ್ಪನ್ನ ಮೂಲಕ್ರಿಯಾರೂಪಗಳು ಮತ್ತು ಮೇಲ್ಕಂಡ ಪ್ರತ್ಯಯಗಳು ಕ್ರಮವಾಗಿ ಅವುಗಳಿಗೆ ಹತ್ತಬಹುದು. ಪದಕ್ರಮ : ಸಾಮಾನ್ಯವಾಗಿ ಒಂದು ಉಚ್ಚರಿತ ಪದಕ್ರಮ ಕರ್ತೃಪದದಿಂದ ಆರಂಭವಾಗುತ್ತದೆ. ಇದಾದ ಮೇಲೆ ಕರ್ಮಪದವಿದ್ದು, ಅಸಮಾಪಕ ಕ್ರಿಯಾಪದದಿಂದ ಕೊನೆಯಾಗುತ್ತದೆ. ಕರ್ತೃ, ಕರ್ಮ ಮತ್ತು ಅಸಮಾಪಕ ಕ್ರಿಯಾಪದಗಳಿಗೆ ಪೂರ್ವದಲ್ಲಿ ಅವುಗಳ ಅನುಬಂಧಗಳು ಬಂದಿರುತ್ತವೆ. ಈ ಸಾಮಾನ್ಯ ಪದಕ್ರಮ ಅವಧಾರಣಾತ್ಮಕ ಉಕ್ತಿಗಳಲ್ಲಿ ಅವಧಾರಣೆಯ ಸ್ವರೂಪಕ್ಕೆ ಅನುಗುಣವಾಗಿ ಬದಲಾಗುವುದು ಉಂಟು. ಪದಕೋಶ ಅಸ್ಸಾಮಿ ಪದಗಳಲ್ಲಿ ಸೇಕಡಾ ಅತಿ ಹೆಚ್ಚಿನ ಪಾಲು ತದ್ಭವಗಳಾಗಿರುತ್ತವೆ. ಈ ತದ್ಭವಗಳು ಸಂಸ್ಕøತದಿಂದ ಪ್ರಾಕೃತ ಮತ್ತು ಅಪಭ್ರಂಶ ಘಟ್ಟಗಳ ಮೂಲಕವಾಗಿ ನಿಷ್ಪನ್ನವಾದವಾಗಿವೆ. ಇವಲ್ಲದೆ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲೇ ತತ್ಸಮಗಳೂ ಅರ್ಧತತ್ಸಮಗಳೂ ದೇಶ್ಯಶಬ್ದಗಳೂ ಕಂಡು ಬರುತ್ತವೆ. ಅಸ್ಸಾಮೀ ಒಂದು ಸ್ವೀಕರಣ ಭಾಷೆ. ಅದು ತನ್ನ ಪದಕೋಶವನ್ನು ಅಸ್ಸಾಮಿನಲ್ಲಿ ಅದರ ಸುತ್ತಮುತ್ತಲೂ ಮಾತನಾಡುವ ಎಲ್ಲ ಆರ್ಯೇತರ ಗುಡ್ಡಗಾಡಿನ ಭಾಷೆಗಳಿಂದಲೂ ಉಪಭಾಷೆಗಳಿಂದಲೂ ಸಾಮಾನ್ಯವಾಗಿ ಪದಗಳನ್ನು ಸೇರಿಸಿಕೊಳ್ಳುವುದರಿಂದ ಬೆಳೆಸಿಕೊಂಡಿದೆ. ಬೇರೆ ನವೀನ ಇಂಡೋ ಆರ್ಯನ್ ಭಾಷೆಗಳು, ಅದರಲ್ಲೂ ಹಿಂದಿ ಮತ್ತು ಹಿಂದಿಯ ಮೂಲಕವಾಗಿ ಪರ್ಶಿಯನ್ ಅರಬ್ಬೀ ಮೊದಲಾದ ಇನ್ನಿತರ ಎಷ್ಟೂೀ ಭಾಷೆಗಳು ಕೂಡ ಈ ಕೆಲಸದಲ್ಲಿ ಕೆಲಮಟ್ಟಿಗೆ ನೆರವಾಗಿವೆ. ಇನ್ನು ಇಂಗ್ಲಿಷ್ ಪೋರ್ಚುಗೀಸ್ ಮೊದಲಾದ ಯೂರೋಪಿಯನ್ ಭಾಷೆಗಳೂ ಹೀಗೆಯೇ ನೆರವಾಗಿವೆ. ಕೆಲವು ಸ್ವೀಕೃತ ಪದಗಳು ಗುರುತು ಸಿಗದ ಮಟ್ಟಿಗೆ ಭಾಷೆಗೆ ಸಹಜವಾಗಿ ಹೊಂದಿಕೊಂಡು ಬಿಟ್ಟಿವೆ. ಜ್ಞಾನಪ್ರಸಾರ ಮತ್ತು ಅನ್ಯದೇಶಗಳ ಸಂಬಂಧದಿಂದಾಗಿ ಪದಗಳು ಅನ್ಯಭಾಷೆಗಳಿಂದ ಸಾಮಾನ್ಯವಾಗಿ ಪ್ರತಿದಿನವೂ ಭಾಷೆಯೊಳಗೆ ನುಸುಳಿಕೊಳ್ಳುತ್ತಿವೆ, ಭಾಷೆಯ ಸತ್ತ್ವವನ್ನು ಬೆಳೆಸುತ್ತಿವೆ. ಅನುಲೇಖನದ (ಆರ್ತೊಗ್ರಫಿ) ಮೇಲೆ ಒಂದು ಟಿಪ್ಪಣೆ ಇಂದಿನ ಅಸ್ಸಾಮಿ ಅನುಲೇಖನ (ಅಕ್ಷರ ಸಂಯೋಜನ) ಎರಡು ಅಕ್ಷರಗಳ ಹೊರತು ಬಂಗಾಳಿ ಭಾಷೆಗೆ ಸಮಾನವಾಗಿದೆ. ಅಸ್ಸಾಮೀ/ರ/ಕಾರದ ಸಂಕೇತ ಬಂಗಾಳಿಯ ಹಾಗಲ್ಲದೆ, ಮಧ್ಯದಲ್ಲಿ ಒಂದು ರೇಖೆಯನ್ನೊಳಗೊಂಡಿದೆ. /ವ/ಕಾರಕ್ಕೆ ಆದರೆ ಸಂಕೇತದ ಕೆಳಗೆ ರೇಖೆ ಬರುತ್ತದೆ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು Axamiyaa Bhaaxaar Moulik Bisar by Mr Devananda Bharali Tonkori (Affinities of the Ainu language of Japan with Assamese and some other languages) by Dr Satyakam Phukan Roots and Strings of the Assamese language, article by Dr Satyakam Phukan Candrakānta abhidhāna : Asamiyi sabdara butpatti aru udaharanere Asamiya-Ingraji dui bhashara artha thaka abhidhana. second ed. Guwahati : Guwahati Bisbabidyalaya, 1962. A Dictionary in Assamese and English (1867) First Assamese dictionary by Miles Bronson from (books.google.com) Assamese computing resources at TDIL Basic Assamese words and phrases Assamese proverbs, published 1896 ಭಾರತೀಯ ಭಾಷೆಗಳು ಇಂಡಿಕ್ ಭಾಷೆಗಳು ಭಾಷೆಗಳು
2594
https://kn.wikipedia.org/wiki/%E0%B3%A8%E0%B3%A6%E0%B3%A6%E0%B3%AB
೨೦೦೫
ಪ್ರಮುಖ ಘಟನೆಗಳು ಬೆಂಗಳೂರು ವಿಶ್ವವಿದ್ಯಾಲಯವು ಕನ್ನಡ ಚಿತ್ರರಂಗದ ನಟ ವಿಷ್ಣುವರ್ಧನ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿದೆ. ಜನನ ಸಪ್ತಮಿ ಅಷ್ಟಮಿ ನವಮಿ ದಶಮಿ ನಿಧನ ಹೆಚ್ ನರಸಿಂಹಯ್ಯ - ಜನವರಿ ೩೧ ಕೆ.ವಿ.ಸುಬ್ಬಣ್ಣ - ಜುಲೈ ೧೬ ಎ.ಎನ್.ಮೂರ್ತಿ ರಾವ್ -ಆಗಸ್ಟ್ ೨೪ ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ ಇವನ್ನೂ ನೋಡಿ ೨೦೦೫ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು ೨೦೦೫ ವರ್ಷಗಳು
2599
https://kn.wikipedia.org/wiki/%E0%B3%A7%E0%B3%AF%E0%B3%AD%E0%B3%AF
೧೯೭೯
ಪ್ರಮುಖ ಘಟನೆಗಳು ಜ್ಞಾನಪೀಠ - ಬಿರೇ೦ದ್ರ ಕುಮಾರ ಭಟ್ಟಾಚಾರ್ಯ, ಅಸ್ಸಾಮಿ ಜನನ ಮರಣ ೧೯೭೯
2601
https://kn.wikipedia.org/wiki/%E0%B3%A7%E0%B3%AF%E0%B3%AC%E0%B3%AB
೧೯೬೫
ಪ್ರಮುಖ ಘಟನೆಗಳು ಜ್ಞಾನಪೀಠ - ತಾರಶ೦ಕರ ಬ೦ಡೊಪಧ್ಯಾಯ, ಬ೦ಗಾಳಿ ಜನನ ೪೪೪ ಮರಣ ೧೯೬೫
2603
https://kn.wikipedia.org/wiki/%E0%B3%A7%E0%B3%AF%E0%B3%AC%E0%B3%AD
೧೯೬೭
ಪ್ರಮುಖ ಘಟನೆಗಳು ಜ್ಞಾನಪೀಠ - ಊಮಾಶ೦ಕರ ಜೊಷಿ (ಗುಜರಾತಿ), ಡಾ. ಕು. ವೆ೦ ಪುಟ್ಟಪ್ಪ(ಕನ್ನಡ) ಮಹಾಜನ್ ಆಯೋಗ ಜನನ ಮೇ ೧೫ - ಮಾಧುರಿ ದೀಕ್ಷಿತ್, ಭಾರತೀಯ ಚಿತ್ರನಟಿ ಮರಣ ಜೂನ್ ೧೦ - ಸ್ಪೆನ್ಸರ್ ಟ್ರೇಸಿ, ಅಮೇರಿಕಾದ ನಟ (ಜ. ೧೯೦೦) ೧೯೬೭
2605
https://kn.wikipedia.org/wiki/%E0%B3%A7%E0%B3%AF%E0%B3%AC%E0%B3%AE
೧೯೬೮
ಪ್ರಮುಖ ಘಟನೆಗಳು ಜ್ಞಾನಪೀಠ - ಸುಮಿತ್ರನ೦ದನ ಪ೦ತ್, ಹಿ೦ದಿ ಜನನ ಮರಣ ೧೯೬೮
2606
https://kn.wikipedia.org/wiki/%E0%B3%A7%E0%B3%AF%E0%B3%AC%E0%B3%AF
೧೯೬೯
ಪ್ರಮುಖ ಘಟನೆಗಳು ಚಂದ್ರನ ಮೇಲೆ ಮಾನವನ ಪದಾರ್ಪಣೆ ಜ್ಞಾನಪೀಠ - ಫಿರಾಖ್ ಗೊರಖಪುರಿ, ಊರ್ದು ಜನನ ಡಿಸೆಂಬರ್ ೧೧ - ವಿಶ್ವನಾಥನ್ ಆನಂದ್, ಭಾರತೀಯ ಚೆಸ್ ಗ್ರ್ಯಾಂಡ್‍ಮಾಸ್ಟರ್ ಮರಣ ಮೇ ೩ - ಜಾಕಿರ್ ಹುಸೇನ್; ಭಾರತದ ರಾಜಕಾರಣಿ, ಭಾರತದ ೩ನೇ ರಾಷ್ಟ್ರಪತಿ (ಜ. ೧೮೯೭) ೧೯೬೯
2609
https://kn.wikipedia.org/wiki/%E0%B3%A7%E0%B3%AF%E0%B3%AD%E0%B3%A6
೧೯೭೦
ಪ್ರಮುಖ ಘಟನೆಗಳು ಜ್ಞಾನಪೀಠ - ವಿಶ್ವನಾಥ ಸತ್ಯನಾರಯಣ, ತೆಲುಗು ಜನನ ಮನೋಜ್ ನೈಟ್ ಶ್ಯಾಮಲನ್ ಮರಣ ೧೯೭೦
2611
https://kn.wikipedia.org/wiki/%E0%B3%A7%E0%B3%AF%E0%B3%AD%E0%B3%A7
೧೯೭೧
೧೯೭೧ (MCMLXXI) ಗ್ರೆಗೋರಿಯನ್ ಪಂಚಾಂಗದ ಒಂದು ಶುಕ್ರವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು. ಪ್ರಮುಖ ಘಟನೆಗಳು ಜನವರಿ ೨೫ – ಹಿಮಾಚಲ ಪ್ರದೇಶ ಭಾರತದ ೧೮ನೆಯ ರಾಜ್ಯವಾಯಿತು. ಫೆಬ್ರುವರಿ ೮ – ನ್ಯಾಸ್‌ಡ್ಯಾಕ್ ಎಂದು ಕರೆಯಲಾದ ಒಂದು ಹೊಸ ಷೇರು ಮಾರುಕಟ್ಟೆ ಸೂಚ್ಯಂಕವು ಪ್ರಾರಂಭವಾಯಿತು. ಜ್ಞಾನಪೀಠ - ಭಿಷ್ಣು ಡೇ, ಬ೦ಗಾಳಿ ಜನವರಿ ೩- ಬಿ ಬಿ ಸಿ ಮುಕ್ತ ವಿಶ್ವವಿದ್ಯಾಲಯ ಯುನೈಟೆಡ್ ಕಿಂಗ್ಡಂಮ್ ನಲ್ಲಿ ಪ್ರಾರಂಭವಾಯಿತು.* ಜನವರಿ ೧೫ -ಆಸ್ವಾನ್ ಹೈ ಅಣೆಕಟ್ಟು ಇಜಿಪ್ಟ್ ನಲ್ಲಿ ತೆರೆಯಿತು. ಜನವರಿ ೧೯ ೨೩ ಪಶ್ಚಿಮ ತೈಲ ಕಂಪನಿಗಳ ಪ್ರತಿನಿಧಿಗಳು ತೈಲದ ಬೆಲೆಯನ್ನು ಸ್ಥಿರಗೊಳಿಸಲು ಟೆಹ್ರಾನ್ ನ ಒ ಪಿ ಎ ಕೆ ನಲ್ಲಿ ಮಾತುಕತೆಯನ್ನು ಪ್ರಾರಂಭಿಸಿದರು. ರೇಡಿಯೋ ಮತ್ತು ದೂರದರ್ಶನ ಸಿಗರೇಟ್ ಜಾಹೀರಾತುಗಳ ನಿಷೇಧವಾಗಬೇಕೆಂಬ ನಿಯಮ ಯುನೈಟೆಡ್ ಸ್ಟೇಟ್ಸ್ ನಲ್ಲಿ ಜಾರಿಗೆ ಜಾರಿಗೆ ಬಂತು. ಸಿಯೆರಾ ಲಿಯೋನ್ ಒಂದು ಗಣರಾಜ್ಯವಾಯಿತು ಜನನ ಮರಣ ಅ.ನ.ಕೃಷ್ಣರಾಯ ಉಲ್ಲೇಖಗಳು ೧೯೭೧
2613
https://kn.wikipedia.org/wiki/%E0%B3%A7%E0%B3%AF%E0%B3%AD%E0%B3%A8
೧೯೭೨
೧೯೭೨ - ೨೦ನೆ ಶತಮಾನದ ೭೨ನೆ ವರ್ಷ. ಪ್ರಮುಖ ಘಟನೆಗಳು ಜ್ಞಾನಪೀಠ - ರಾಮಧಾರಿ ಸಿಂಗ್ ದಿನಕರ, ಹಿಂದಿ ಜನನ ಹಿಂದುಸ್ತಾನಿ ಸಂಗೀತದ ಗಾಯಕ ಜಯತೀರ್ಥ ಮೇವುಂಡಿ ನಿಧನ ಕನ್ನಡ ರಂಗಭೂಮಿಯ ಖ್ಯಾತ ರಂಗಕರ್ಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗುಬ್ಬಿ ವೀರಣ್ಣ ೧೯೭೨ ವರ್ಷಗಳು
2614
https://kn.wikipedia.org/wiki/%E0%B3%A7%E0%B3%AF%E0%B3%AD%E0%B3%A9
೧೯೭೩
ಪ್ರಮುಖ ಘಟನೆಗಳು ಜ್ಞಾನಪೀಠ -ದತ್ತಾತ್ರೇಯ ರಾಮಚಂದ್ರ ಬೇಂದ್ರೆ(ಕನ್ನಡ), ಗೋಪಿನಾಥ ಮೊಹಂತಿ(ಓರಿಯ) ಜನನ ಮರಣ ೧೯೭೩
2617
https://kn.wikipedia.org/wiki/%E0%B3%A7%E0%B3%AF%E0%B3%AD%E0%B3%AE
೧೯೭೮
ಪ್ರಮುಖ ಘಟನೆಗಳು ಜ್ಞಾನಪೀಠ - ಎಸ್. ಎಚ್. ವಿ ಆಜ್ಞೇಯ, ಹಿ೦ದಿ ಜನನ ಮರಣ ೧೯೭೮
2619
https://kn.wikipedia.org/wiki/%E0%B3%A7%E0%B3%AF%E0%B3%AD%E0%B3%AD
೧೯೭೭
ಪ್ರಮುಖ ಘಟನೆಗಳು ಜ್ಞಾನಪೀಠ - ಕೋಟ ಶಿವರಾಮ ಕಾರಂತ, ಕನ್ನಡ ಜನನ ಕನ್ನಡ ರಂಗಭೂಮಿಯ ಶ್ರೇಷ್ಠ ನಟ ಅವಿನಾಶ್ ಕಾಮತ್ ಅವರ ಜನನ ಏಪ್ರಿಲ್ ೨೬. ಮರಣ ೧೯೭೭
2620
https://kn.wikipedia.org/wiki/%E0%B3%A7%E0%B3%AF%E0%B3%AE%E0%B3%A6
೧೯೮೦
ಪ್ರಮುಖ ಘಟನೆಗಳು ಜ್ಞಾನಪೀಠ - ಎಸ್. ಕೆ. ಪೊಟ್ಟೆಕ್ಕಟ್ಟು, ಮಲಯಾಳ೦ ಜನನ ಮರಣ ೧೯೮೦
2624
https://kn.wikipedia.org/wiki/%E0%B3%A7%E0%B3%AF%E0%B3%AE%E0%B3%A7
೧೯೮೧
ಪ್ರಮುಖ ಘಟನೆಗಳು ಜ್ಞಾನಪೀಠ - ಅಮ್ರಿತಾ ಪ್ರೀತಮ್, ಪ೦ಜಾಬಿ ಜನನ ಯುವರಾಜ್ ಸಿಂಗ್ ಮರಣ ನವೆಂಬರ್ ೧೨ - ವಿಲಿಯಮ್ ಹೋಲ್ಡನ್, ಅಮೇರಿಕಾದ ನಟ (ಜ. ೧೯೧೮) ೧೯೮೧
2626
https://kn.wikipedia.org/wiki/%E0%B3%A7%E0%B3%AF%E0%B3%AE%E0%B3%A8
೧೯೮೨
ಪ್ರಮುಖ ಘಟನೆಗಳು ಜ್ಞಾನಪೀಠ - ಮಹಾದೇವಿ ವರ್ಮ, ಹಿ೦ದಿ ಜನನ ಮರಣ ೧೯೮೨
2629
https://kn.wikipedia.org/wiki/%E0%B3%A7%E0%B3%AF%E0%B3%AE%E0%B3%A9
೧೯೮೩
ಪ್ರಮುಖ ಘಟನೆಗಳು ಜ್ಞಾನಪೀಠ - ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕನ್ನಡ ಜನನ ನಿಧನ ನಾ.ಕಸ್ತೂರಿ Da Ra Bendre ೧೯೮೩
2631
https://kn.wikipedia.org/wiki/%E0%B3%A7%E0%B3%AF%E0%B3%AE%E0%B3%AA
೧೯೮೪
ಪ್ರಮುಖ ಘಟನೆಗಳು ಜ್ಞಾನಪೀಠ - ಥಕ್ಕಳಿ ಶಿವಶ೦ಕರ ಪಿಳ್ಳೈ, ಮಲಯಾಳ೦ ಭೋಪಾಲ್ ದುರಂತ ಜನನ Basshunter ನಿಧನ ತ.ರಾ.ಸುಬ್ಬರಾಯ. ರಾ.ಶಿವರಾಂ. ೧೦ ಮಾರ್ಚ್- ಇ.ಸ್.ಜೊಹರ್,ನಟ,ನಿರ್ದೆಶಕ,ಲೇಖಕ,ನಿರ್ಮಾಪಕ.(ಜನನ ೧೯೨೦). ೬ ಜೂನ್- ಜರ್ನೈಲ್ ಸಿಂಗ್ ಭಿಂದರ್ವಾಲೆ,ಉಗ್ರಗಾಮಿ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಹತ್ಯೆ.(೧೯೪೭). ೩೧ ಅಕ್ಟೊಬರ್- ಇಂದಿರ ಗಾಂಧಿ ಪ್ರಧಾನ ಮಂತ್ರಿ ಹತ್ಯೆ.(ಜನನ ೧೯೧೭). ೫ ನವಂಬರ್- ರೆಹಮಾನ್,ನಟ. ೨೫ ನವಂಬರ್- ಯಶ್ವಂತ ರಾವ್ ಚವಾಣ್, ಮಹಾರಾಷ್ಟ್ರ''' ರಾಜ್ಯದ ಮುಖ್ಯಮಂತ್ರಿ (ಜನನ ೧೯೧೩). ೧೯೮೪
2633
https://kn.wikipedia.org/wiki/%E0%B3%A7%E0%B3%AF%E0%B3%AE%E0%B3%AB
೧೯೮೫
೧೯೮೫ - ೨೦ನೆ ಶತಮಾನದ ೮೫ನೆ ವರ್ಷ. ಪ್ರಮುಖ ಘಟನೆಗಳು ಜ್ಞಾನಪೀಠ - ಪನ್ನಲಾಲ್ ಪಟೇಲ್, ಗುಜರಾತಿ ಜನನ ನಿಧನ ಜೂನ್ ೫ - ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲೊಬ್ಬರಾದ ಪುಟ್ಟಣ್ಣ ಕಣಗಾಲ್ ಚಲನಚಿತ್ರಗಳು ರಾನ್ - ಅಕಿರಾ ಕುರೋಸಾವಾರವರ ಚಿತ್ರ. ಇವನ್ನೂ ನೋಡಿ ೧೯೮೫ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು ೧೯೮೫ ವರ್ಷಗಳು
2634
https://kn.wikipedia.org/wiki/%E0%B3%A7%E0%B3%AF%E0%B3%AE%E0%B3%AC
೧೯೮೬
ಪ್ರಮುಖ ಘಟನೆಗಳು ಜ್ಞಾನಪೀಠ - ಸಚ್ಚಿದಾನ೦ದ ರಾವುತ ರಾಯ್, ಓರಿಯ ಜನನ ನಿಧನ ಮಾಸ್ತಿ ವೆಂಕಟೇಶ ಅಯ್ಯಂಗಾರ್-ಜೂನ್ ೬ ಜಯದೇವಿತಾಯಿ ಲಿಗಾಡೆ ಗೀತಾ ಕುಲಕರ್ಣಿ ೧೯೮೬ ವರ್ಷಗಳು
2637
https://kn.wikipedia.org/wiki/%E0%B3%A7%E0%B3%AF%E0%B3%AE%E0%B3%AD
೧೯೮೭
ಪ್ರಮುಖ ಘಟನೆಗಳು ಜ್ಞಾನಪೀಠ - ವಿಷ್ಣು ವಾಮನ ಶಿರ್ವಾಡ್ಕರ್ ಕುಸುಮಾಗ್ರಜ, ಮರಾಠಿ ಜನನ ನಿಧನ ನಾ.ಕಸ್ತೂರಿ ೧೯೮೭
2638
https://kn.wikipedia.org/wiki/%E0%B3%A7%E0%B3%AF%E0%B3%AE%E0%B3%AE
೧೯೮೮
ಪ್ರಮುಖ ಘಟನೆಗಳು ಜ್ಞಾನಪೀಠ - ಸಿ. ನಾರಾಯಣನ್ ರೆಡ್ಡಿ, ತೆಲುಗು ಜನನ ಫೆಬ್ರವರಿ ೨೦ - ರಿಯಾನಾ, ಬಾರ್ಬಡಾಸ್‍ನ ಪಾಪ್ ಗಾಯಕಿ ಮರಣ ಜೂನ್ ೨ - ರಾಜ್ ಕಪೂರ್, ಭಾರತೀಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ (ಜ. ೧೯೨೪) ೧೯೮೮
2640
https://kn.wikipedia.org/wiki/%E0%B3%A7%E0%B3%AF%E0%B3%AE%E0%B3%AF
೧೯೮೯
ಪ್ರಮುಖ ಘಟನೆಗಳು ಜ್ಞಾನಪೀಠ - ಖುರ್ರತುಲೈನ್ ಹೈದರ್, ಊರ್ದು ಜನನ ಅಂಕಿತ್ ನಾರಂಗ್, ಭಾರತೀಯ ನಟ ನಿಧನ ಮೇ ೩ - ಭಾರತದ ಹಿಂದಿನ ರಾಷ್ಟ್ರಪತಿಗಳಲ್ಲೊಬ್ಬರಾದ ಜಾಕಿರ್ ಹುಸೇನ್ ೧೯೮೯
2643
https://kn.wikipedia.org/wiki/%E0%B3%A7%E0%B3%AF%E0%B3%AF%E0%B3%A6
೧೯೯೦
ಪ್ರಮುಖ ಘಟನೆಗಳು ಜ್ಞಾನಪೀಠ - ವಿನಾಯಕ ಕೃಷ್ಣ ಗೋಕಾಕ, ಕನ್ನಡ ಜನನ ನಿಧನ ಶಂಕರ್ ನಾಗ್ ಇವನ್ನೂ ನೋಡಿ ೧೯೯೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು ೧೯೯೦ ವರ್ಷಗಳು
2644
https://kn.wikipedia.org/wiki/%E0%B3%A7%E0%B3%AF%E0%B3%AF%E0%B3%A7
೧೯೯೧
೧೯೯೧ ಗ್ರೆಗೋರಿಯನ್ ಪಂಚಾಂಗದಲ್ಲಿ ೨೦ನೇ ಶತಮಾನದ ೯೧ನೇ ವರ್ಷ. ಪ್ರಮುಖ ಘಟನೆಗಳು ಸೋವಿಯೆಟ್ ಒಕ್ಕೂಟವು ಅಧಿಕೃತವಾಗಿ ಕೊನೆಗೊಂಡಿತು. ಬೋರಿಸ್ ಯೆಲ್ತ್ಸಿನ್ ಸ್ವತಂತ್ರ ರಷ್ಯಾದ ರಾಷ್ಟ್ರಪತಿಯಾದರು. ಯುಗೋಸ್ಲಾವಿಯ ದೇಶವು ಒಡೆದು ಕ್ರೊಯೇಶಿಯ ಮತ್ತು ಸ್ಲೊವೇನಿಯ ಸ್ವಾತಂತ್ರ್ಯ ಘೋಷಿಸಿಕೊಂಡವು. ಫೆಬ್ರುವರಿ ೨೮: ಕೊಲ್ಲಿ ಯುದ್ಧದ ಕೊನೆ. ಏಪ್ರಿಲ್ ೨೯: ಬಾಂಗ್ಲಾದೇಶವನ್ನು ಅಪ್ಪಳಿಸಿದ ಚಂಡಮಾರುತವು ಸುಮಾರು ೧೩೮,೦೦೦ ಜನರ ಸಾವಿಗೆ ಕಾರಣವಾಯಿತು. ಪ್ರಶಸ್ತಿಗಳು ಜ್ಞಾನಪೀಠ - ಸುಭಾಷ್ ಮುಖೋಪಧ್ಯಾಯ, ಬಂಗಾಳಿ ಭಾಷೆ. ನೊಬೆಲ್ ಪ್ರಶಸ್ತಿಗಳು: ಪಿಯೆರ್-ಗಿಲ್ ದೆ ಗೆನ್ನೆ (ಭೌತಶಾಸ್ತ್ರ); ರಿಚರ್ಡ್ ಆರ್. ಅರ್ನ್ಸ್ಟ್ (ರಸಾಯನಶಾಸ್ತ್ರ); ಎರ್ವಿನ್ ನೆಹರ್ ಮತ್ತು ಬೆರ್ಟ್ ಸಾಕ್ಮನ್ (ವೈದ್ಯಕೀಯ); ನಾಡೀನ್ ಗೊರ್ಡೀಮರ್ (ಸಾಹಿತ್ಯ); ಆಂಗ್ ಸಾನ್ ಸೂ ಕಿ (ಶಾಂತಿ). ಜನನ ನಿಧನ ಶಂ.ಬಾ. ಜೋಷಿ ಫೆಬ್ರುವರಿ ೬: ಸಾಲ್ವಡಾರ್ ಲೂರಿಯ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ಜೀವಶಾಸ್ತ್ರಜ್ಞ. ಮೇ ೨೧: ಭಾರತದ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರ ಹತ್ಯೆ. ಜುಲೈ ೨೧ - ಭಾರತದ ಸಂಗೀತಗಾರ ಬಸವರಾಜ ರಾಜಗುರು ಇವನ್ನೂ ನೋಡಿ ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು ದಶಕ-೧೯೯೧-೨೦೦೦
2648
https://kn.wikipedia.org/wiki/%E0%B3%A7%E0%B3%AF%E0%B3%AF%E0%B3%A8
೧೯೯೨
ಪ್ರಮುಖ ಘಟನೆಗಳು ಜ್ಞಾನಪೀಠ - ನರೇಶ್ ಮೆಹತಾ, ಹಿಂದಿ ಜನನ ನಿಧನ ಮೇ ೪ - ಪಾ.ವೆಂ.ಆಚಾರ್ಯ(ಲಾಂಗೂಲಾಚಾರ್ಯ) ಏಪ್ರಿಲ್ ೨೮ - ವಿನಾಯಕ ಕೃಷ್ಣ ಗೋಕಾಕ ಆಗಸ್ಟ್ ೨೫ - ಎಸ್.ಅನಂತನಾರಾಯಣ ೧೯೯೨
2649
https://kn.wikipedia.org/wiki/%E0%B3%A7%E0%B3%AF%E0%B3%AF%E0%B3%A9
೧೯೯೩
ಪ್ರಮುಖ ಘಟನೆಗಳು ಜ್ಞಾನಪೀಠ - ಸೀತಾಕಾ೦ತ ಮಹಾಪಾತ್ರ, ಓರಿಯ ಜನನ ಮರಣ ೧೯೯೩
2652
https://kn.wikipedia.org/wiki/%E0%B3%A7%E0%B3%AF%E0%B3%AF%E0%B3%AA
೧೯೯೪
ಪ್ರಮುಖ ಘಟನೆಗಳು ಜ್ಞಾನಪೀಠ - ಯು. ಆರ್. ಅನ೦ತಮೂರ್ತಿ, ಕನ್ನಡ ಜನನ ಮಾರ್ಚ್ ೧ – ಜಸ್ಟಿನ್ ಬೀಬರ್, ಕ್ಯಾನಡಾದ ಗಾಯಕ ನಿಧನ ಎಂ.ಆರ್.ವಿಠಲ್- ಅಕ್ಟೋಬರ್ ೧೨ ಕುವೆಂಪು ೧೯೯೪
2653
https://kn.wikipedia.org/wiki/%E0%B3%A7%E0%B3%AF%E0%B3%AF%E0%B3%AB
೧೯೯೫
ಪ್ರಮುಖ ಘಟನೆಗಳು ಜ್ಞಾನಪೀಠ - ಎಮ್. ಟಿ ವಾಸುದೇವನ್ ನಾಯರ್, ಮಲಯಾಳ೦ 14-10-1995 ಮರಣ ಮೊರಾರ್ಜಿ ದೇಸಾಯಿ ೧೯೯೫
2655
https://kn.wikipedia.org/wiki/%E0%B3%A7%E0%B3%AF%E0%B3%AF%E0%B3%AC
೧೯೯೬
ಪ್ರಮುಖ ಘಟನೆಗಳು ಜ್ಞಾನಪೀಠ - ಮಹಾಶ್ವೇತಾದೇವಿ, ಬ೦ಗಾಳಿ ಜನನ ಮರಣ ನೀಲಂ ಸಂಜೀವ ರೆಡ್ಡಿ ೧೯೯೬
2657
https://kn.wikipedia.org/wiki/%E0%B3%A7%E0%B3%AF%E0%B3%AF%E0%B3%AD
೧೯೯೭
ಪ್ರಮುಖ ಘಟನೆಗಳು ಜ್ಞಾನಪೀಠ - ಅಲಿ ಸರ್ದಾರ್ ಜಾಫ್ರಿ, ಊರ್ದು ಜನನ
2660
https://kn.wikipedia.org/wiki/%E0%B3%A7%E0%B3%AF%E0%B3%AF%E0%B3%AE
೧೯೯೮
ಪ್ರಮುಖ ಘಟನೆಗಳು ಜ್ಞಾನಪೀಠ - ಗಿರೀಶ್ ಕಾರ್ನಾಡ್, ಕನ್ನಡ ಅವಿನಾಶ್ ಕಾಮತ್ ಅವರು ದೊಡ್ಡವರಾದ ಮೇಲೆ ಮತ್ತೆ ಅಭಿನಯ ಪ್ರಾರಂಭಿಸಿದರು. ಜನನ ನಿಧನ ಚದುರಂಗ - ಅಕ್ಟೋಬರ್ ೧೯೯೮
2661
https://kn.wikipedia.org/wiki/%E0%B3%A7%E0%B3%AF%E0%B3%AF%E0%B3%AF
೧೯೯೯
ಪ್ರಮುಖ ಘಟನೆಗಳು ಜ್ಞಾನಪೀಠ - ನಿರ್ಮಲ ವರ್ಮ(ಹಿ೦ದಿ), ಗುರುದಯಾಳ ಸಿ೦ಗ್, (ಪ೦ಜಾಬಿ) ಜನನ ಮರಣ ದೊರೆಸ್ವಾಮಿ ಅಯ್ಯಂಗಾರ್ ೧೯೯೯
2664
https://kn.wikipedia.org/wiki/%E0%B3%A8%E0%B3%A6%E0%B3%A6%E0%B3%A6
೨೦೦೦
ಪ್ರಮುಖ ಘಟನೆಗಳು ಜ್ಞಾನಪೀಠ - ಇ೦ದಿರಾ ಗೋಸ್ವಾಮಿ, ಅಸ್ಸಾಮಿ ಜನನ ನಿಧನ ಜೆ ಹೆಚ್ ಪಟೇಲ್-ಕರ್ನಾಟಕದ ಮಾಜಿ ಮುಖ್ಯಮಂತ್ರಿ. ನಾಗೇಂದ್ರ - ಚಿತ್ರರಂಗದ ಖ್ಯಾತ (ರಾಜನ್-ನಾಗೇಂದ್ರ ಜೋಡಿಯಲ್ಲಿ ಒಬ್ಬರು) ಸಂಗೀತ ನಿರ್ದೇಶಕ. ೨೦೦೦
2665
https://kn.wikipedia.org/wiki/%E0%B3%A8%E0%B3%A6%E0%B3%A6%E0%B3%A7
೨೦೦೧
ಪ್ರಮುಖ ಘಟನೆಗಳು ಜ್ಞಾನಪೀಠ - ರಾಜೇ೦ದ್ರ ಕೇಶವಲಾಲ್ ಷಾ, ಗುಜರಾತಿ ಜನನ ನಿಧನ ಅರ್. ಕೆ. ನಾರಾಯಣ್ ವಿಜಯ ನಾರಸಿಂಹ - ಕನ್ನಡ ಚಿತ್ರ ಸಾಹಿತಿ ೨೦೦೧
2668
https://kn.wikipedia.org/wiki/%E0%B3%A8%E0%B3%A6%E0%B3%A6%E0%B3%A8
೨೦೦೨
ಪ್ರಮುಖ ಘಟನೆಗಳು ಜ್ಞಾನಪೀಠ - ಡಿ.ಜಯಕಂಟನ್, ತಮಿಳು ಜನನ ನಿಧನ ವಿಜಯಭಾಸ್ಕರ್ ೨೦೦೨
2671
https://kn.wikipedia.org/wiki/%E0%B3%A7%E0%B3%AF%E0%B3%AD%E0%B3%AA
೧೯೭೪
೧೯೭೪ - ೨೦ನೆ ಶತಮಾನದ ೭೪ನೆ ವರ್ಷ ಪ್ರಮುಖ ಘಟನೆಗಳು ಜ್ಞಾನಪೀಠ - ವಿಷ್ಣು ಸಖಾರಾಮ್ ಖಾಂಡೇಕರ್, ಮರಾಠಿ ಮಾರ್ಚ್ ೩-ಟರ್ಕಿಶ್ ಏರ್ಲೈನ್ಸ್ ವಿಮಾನ ೯೮೧ ಪ್ಯಾರಿಸ್ನಿಂದ ಲಂಡನ್ಗೆ ಹೊರಟಿರುವಾಗ ಪ್ಯಾರಿಸ್ ಬಳಿ ವಿಮಾನ ಅಪಘಾತದಲ್ಲಿ ಸುಮಾರು ೩೪೬ ಪ್ರಯಾಣಿಕರು ನಿಧನರಾದರು. ಮಾರ್ಚ್ ೮ -ಚಾರ್ಲ್ಸ್ ಡಿ ಗಾಲೆ ವಿಮಾನ ನಿಲ್ದಾಣ ಕಾರ್ಯಾಚರಿಸಲು ಪ್ರಾರಂಭವಾಯಿತು. ಮಾರ್ಚ್ ೧೦- ಜಪಾನಿನ ಎರಡನೆಯ ವಿಶ್ವ ಯುದ್ಧದಲ್ಲಿ ಎರಡನೆಯ ಲೆಫ್ಟಿನೆಂಟ್ ನಿರ್ಮಾಪಕರು,ಹಿರೂ ಒನೊಡ ಫಿಲಿಪ್ಪೀನ್ಸ್ ನಲ್ಲಿ ಶರಣಾಗತಿ. ಜನನ ನಿಧನ ಅಕ್ಟೋಬರ್ ೮ - ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲೊಬ್ಬರಾದ ಬಿ.ಆರ್.ಪಂತುಲು ಏಪ್ರಿಲ್ ೨- ಕ್ಯಾನ್ಸರ್ ನಿಂದ ಬಳಲುತ್ತಿದ್ದ ಫ್ರೆಂಚ್ ಅಧ್ಯಕ್ಷ ಜಾರ್ಜಸ್ ಪಾಂಪಿಡೌ,೬೩ ನೆಯ ವಯಸ್ಸಿನಲ್ಲಿ ನಿಧನರಾದರು. ಇವನ್ನೂ ನೋಡಿ ೧೯೭೪ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರಗಳು 'ಉಲ್ಲೇಖಗಳು ೧೯೭೪ ವರ್ಷಗಳು
2672
https://kn.wikipedia.org/wiki/%E0%B3%A7%E0%B3%AF%E0%B3%AD%E0%B3%AB
೧೯೭೫
೧೯೭೫ - ೨೦ನೆಯ ಶತಮಾನದ ೭೫ನೆ ವರ್ಷ ಪ್ರಮುಖ ಘಟನೆಗಳು ಜ್ಞಾನಪೀಠ - ಪಿ. ವಿ. ಅಕಿಲಂದಂ, ತಮಿಳು ಜನನ ಶ್ರೀ ಡಾ|| ಪುನೀತ್ ರಾಜ್ ಕುಮಾರ್ ನಿಧನ ಅಕ್ಟೋಬರ್ ೭ - ಕನ್ನಡದ ಖ್ಯಾತ ಸಾಹಿತಿಗಳಲ್ಲಬ್ಬರಾದ ಡಿ.ವಿ.ಗುಂಡಪ್ಪ ೧೯೭೫ ವರ್ಷಗಳು
2674
https://kn.wikipedia.org/wiki/%E0%B3%A7%E0%B3%AF%E0%B3%AD%E0%B3%AC
೧೯೭೬
೧೯೭೬ - ೨೦ನೇ ಶತಮಾನದ ೭೬ನೆ ವರ್ಷ. ಪ್ರಮುಖ ಘಟನೆಗಳು ಜ್ಞಾನಪೀಠ - ಆಶಾ ಪೂರ್ಣ ದೇವಿ, ಬಂಗಾಳಿ ಭಾರತದ ಸಂವಿಧಾನ - ೪೨ನೇ ತಿದ್ದುಪಡಿಯ ಮೂಲಕ ಜಾತ್ಯತೀತ ಎಂಬ ಪದವನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು. ಜನನ ನಿಧನ ಏಪ್ರಿಲ್ ೪ - ಭಾರತೀಸುತ (ಕನ್ನಡದ ಸಾಹಿತಿ) ಇವನ್ನೂ ನೋಡಿ ೧೯೭೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು ೧೯೭೬ ವರ್ಷಗಳು
2683
https://kn.wikipedia.org/wiki/%E0%B2%8E%E0%B2%B8%E0%B3%8D.%20%E0%B2%AC%E0%B2%82%E0%B2%97%E0%B2%BE%E0%B2%B0%E0%B2%AA%E0%B3%8D%E0%B2%AA
ಎಸ್. ಬಂಗಾರಪ್ಪ
ಸಾರೇಕೊಪ್ಪ ಬಂಗಾರಪ್ಪ ಕರ್ನಾಟಕ ರಾಜ್ಯದ ೧೨ ನೇ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಜನನ ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ. ಬಡವರ ಬಂಧು, ಮಾಜೀ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ನೇತಾರ, ಬಡಬಗ್ಗರ ಪಾಲಿನ ಆಶ್ರಯದಾತ ಹಾಗೂ ಹಲವು ಪಕ್ಷಗಳ ಸೃಷ್ಟಿಕರ್ತ. ಎಸ್. ಬಂಗಾರಪ್ಪ|ಎಸ್. ಬಂಗಾರಪ್ಪನವರು ತಮ್ಮ ಬೆಂಗಳೂರಿನ ಸದಾಶಿವ ನಗರ|ಸದಾಶಿವನಗರದ ಸ್ವಂತ ನಿವಾಸದಲ್ಲಿ ವಾಸಿಸುತ್ತಿದ್ದು, ತಮ್ಮ ಕೊನೆಯುಸಿರಿರುವವರೆಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ೧೯೩೩ ರ ಅಕ್ಟೋಬರ್, ೨೬ ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕುಬಟೂರು ಗ್ರಾಮದಲ್ಲಿ ಜನಿಸಿದರು. ತಂದೆ ಕಲ್ಲಪ್ಪ . ಹಾಗೂ ತಾಯಿ ಕಲ್ಲಮ್ಮ. ಬಂಗಾರಪ್ಪನವರು ಬಿ.ಎ, ಎಲ್.ಎಲ್.ಬಿ ಪದವೀಧರರಾಗಿದ್ದು 'ಸಮಾಜ ವಿಜ್ಞಾನದಲ್ಲಿ ಡಿಪ್ಲೊಮ' ಗಳಿಸಿದ್ದಾರೆ. ಸಮಾಜವಾದಿ ನಾಯಕ ಶಾಂತವೀರ ಗೋಪಾಲಗೌಡ|ಶಾಂತವೀರ ಗೋಪಾಲಗೌಡರ ಶಿಷ್ಯರಾಗಿ ೧೯೬೨ ರಲ್ಲಿ ರಾಜಕೀಯ ವಲಯಕ್ಕೆ ಪಾದಾರ್ಪಣೆ ಮಾಡಿದರು. ಸಾಗರ-ಸೊರಬ ಜಂಟಿ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಆಯ್ಕೆಗೊಂಡರು. ವಕೀಲಿವೃತ್ತಿಯನ್ನು ನಡೆಸುತ್ತಿದ್ದರು. ರಾಜಕೀಯ ಹಠದ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಸಾರೇಕೊಪ್ಪ ಬಂಗಾರಪ್ಪ ರಾಜಕಾರಣದಲ್ಲಿ ಹಲವಾರು ಪ್ರಥಮಗಳನ್ನು ದಾಖಲಿಸಿದ್ದಾರೆ. ಅತಿ ಹೆಚ್ಚು ಪಕ್ಷ ಸ್ಥಾಪನೆಯಿಂದ ಹಿಡಿದು ಶಾಸಕರನ್ನು ಸೃಷ್ಟಿಸುವ ಕಾರ್ಖಾನೆ ಎಂಬ ಬಿರುದನ್ನು ಸಹ ಪಡೆದವರು. ವಕೀಲ ವೃತ್ತಿ ಪ್ರವೇಶಿಸಿದ್ದ ವೇಳೆ ಸಮಾಜವಾದಿ ಚಳವಳಿಯಲ್ಲಿ ಗುರುತಿಸಿಕೊಂಡ ಯುವಕ ಬಂಗಾರಪ್ಪ 1967ರಲ್ಲಿ ಮೊದಲ ಬಾರಿಗೆ ಸೊರಬ ದಲ್ಲಿ ಸೋಷಲಿಸ್ಟ್‌ ಪಾರ್ಟಿಯಿಂದ ಸ್ಪರ್ಧಿಸಿದರು. ಮತ್ತೆ ರಾಜಕೀಯವಾಗಿ ತಿರುಗಿ ನೋಡಲೇ ಇಲ್ಲ. ತಮ್ಮ ರಾಜಕೀಯ ಜೀವನದ ಕೊನೆಯವರೆಗೂ ಜನಪ್ರತಿನಿಧಿಯಾಗಿಯೇ ಇದ್ದರೂ ಅಧಿಕಾರ ಅನುಭವಿಸಿದ್ದು ಮಾತ್ರ ಕಡಿಮೆ. ಸಮಾಜವಾದಿ ಹವಾ ಕಡಿಮೆ ಆಗುತ್ತಿದ್ದಂತೆ ಕಾಂಗ್ರೆಸ್‌ನತ್ತ ಹೊರಳಿದ ಬಂಗಾರಪ್ಪ 1983ರಲ್ಲಿ ಕರ್ನಾಟಕ ಕ್ರಾಂತಿರಂಗದ ನಾಯಕತ್ವ ವಹಿಸಿದರು. ಜನತಾ ಪಕ್ಷದೊಡನೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡು ಜನತಾರಂಗದ ಹೆಸರಿನಲ್ಲಿ ಚುನಾವಣಾ ಪ್ರಚಾರದ ನಾಯಕತ್ವ ವಹಿಸಿದರು. ಕ್ಷೇತ್ರಕ್ಕೆ ಬಾರದೆಯೇ ಗೆದ್ದವರು ಆ ಸಂದರ್ಭ ದಲ್ಲಿ ಸೊರಬದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ ಬಳಿಕ ಫಲಿತಾಂಶದ ಬಳಿಕವಷ್ಟೇ ಕ್ಷೇತ್ರಕ್ಕೆ ಮರಳಿ ಬರುವೆ. ಅಲ್ಲಿಯವರೆಗೆ ರಾಜ್ಯ ಪ್ರವಾಸ ಮಾಡುವೆ. ನನ್ನನ್ನು ಗೆಲ್ಲಿಸಿಕೊಡುವುದು ಸೊರಬದ ಜನತೆ ಕೆಲಸ ಎಂದು ಹೇಳಿ ಹೊರಟವರು ಕೊನೆಗೆ ಚುನಾವಣಾ ದಿನ ಮತ ಹಾಕಲು ಸೊರಬಕ್ಕೆ ಬಂದರು. ಆ ಚುನಾವಣೆ ಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದರು ಎಂಬುದು ಇತಿಹಾಸ. ಆದರೆ ಗೆಲುವು ಸಾಧಿಸಿ ಅಧಿಕಾರ ಹಿಡಿದ ಜನತಾರಂಗದ ನಾಯಕತ್ವ ಇದ್ದಕ್ಕಿದ್ದಂತೆ ರಾಮ ಕೃಷ್ಣ ಹೆಗಡೆ ಪಾಲಾಗಿ ಅವರು ಮುಖ್ಯಮಂತ್ರಿ ಯಾಗುತ್ತಿದ್ದಂತೆ ಮತ್ತೆ ಸೆಡ್ಡು ಹೊಡೆದ ಬಂಗಾರಪ್ಪ ಜನತಾರಂಗ ತೊರೆದು ಕಾಂಗ್ರೆಸ್‌ಗೆ ಮರಳಿದರು. 1990ರಲ್ಲಿ ಮುಖ್ಯಮಂತ್ರಿಯಾದರು. 92ರಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿಯವರು ಬಂಗಾರಪ್ಪ ಅವರನ್ನು ಅಧಿಕಾರ ದಿಂದ ಇಳಿಸಿ ವೀರಪ್ಪ ಮೊಯ್ಲಿಯವರನ್ನು ಮುಖ್ಯಮಂತ್ರಿ ಯಾಗಿ ಮಾಡಿದರು. ಪಕ್ಷಾಂತರ ಆಗ ಮತ್ತೆ ಕಾಂಗ್ರೆಸ್‌ ತೊರೆದು ತಮ್ಮದೇ ಆದ ಕರ್ನಾಟಕ ಕಾಂಗ್ರೆಸ್‌ ಪಾರ್ಟಿ(ಕೆಸಿಪಿ) ಸ್ಥಾಪಿಸಿದರು. ಚುನಾ ವಣೆ ಯಲ್ಲಿ ಸ್ಪರ್ಧಿಸಿ ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೂ ಕಾಂಗ್ರೆಸ್‌ ಪಕ್ಷವನ್ನು ಅಧಿ ಕಾರದಿಂದ ದೂರಕ್ಕೆ ಸರಿಸಿದರು. ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಮರಳಿದ ಬಂಗಾರಪ್ಪ, 1997ರಲ್ಲಿ ಪುನಃ ಕಾಂಗ್ರೆಸ್‌ ತೊರೆದು ಕರ್ನಾಟಕ ವಿಕಾಸ ಪಾರ್ಟಿ (ಕೆವಿಪಿ) ಎಂಬ ಇನ್ನೊಂದು ಪಕ್ಷ ಸ್ಥಾಪಿಸಿದರು. ನಂತರ ಅದನ್ನು ಕಾಂಗ್ರೆಸ್‌ ಜೊತೆ ವಿಲೀನ ಗೊ ಳಿಸಿದರು. 2004ರಲ್ಲಿ ಕೇಂದ್ರದಲ್ಲಿ ಮಂತ್ರಿಯಾ ಗಬಹುದು ಎಂಬ ಆಕಾಂಕ್ಷೆಯಿಂದ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಒಂದೇ ವರ್ಷದಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದರು. 2010ರಲ್ಲಿ ಆ ಪಕ್ಷವನ್ನೂ ತೊರೆದು ಜೆಡಿಎಸ್‌ ಸೇರಿದರು. ಅದೇ ಅವರ ಕೊನೆ ಪಕ್ಷವಾಗಿತ್ತು. ಆದರೆ ಅವರು ಯಾವುದೇ ಪಕ್ಷ ಸೇರಿದರೂ ಸೊರಬದ ಜನ ಅವರನ್ನು ಬೆಂಬಲಿಸುತ್ತಿದ್ದರು. ಅಲ್ಲದೆ ಯಾವುದೇ ಪಕ್ಷ ಸೇರಿದರೂ ಹಿಂದಿನ ಪಕ್ಷದಿಂದ ಗೆದ್ದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸದಾಗಿ ಸ್ಪರ್ಧೆ ಮಾಡುತ್ತಿದ್ದರು ಎಂಬುದು ವಿಶೇಷ. ಹಿಂದೆ ಮುಂದೆ ನೋಡದೆ ನಿರ್ಧಾರ ಕೈಗೊಳ್ಳುತ್ತಿದ್ದ ಅವರು ಹಠದಿಂದ ತಾವು ಅಂದು ಕೊಂಡಿದ್ದನ್ನು ಸಾಧಿಸುತ್ತಿದ್ದರು. ತಮ್ಮ ಸಿಟ್ಟಿಗೆ ಹಿರಿಯ ಪುತ್ರ ಕುಮಾರ್‌ ಬಂಗಾರಪ್ಪ ಅವರನ್ನು ಕೂಡ ದೂರ ಸರಿಸಿದರು. ಕೊನೆಯವರೆಗೂ ಪುತ್ರನನ್ನು ಹತ್ತಿರ ಸೇರಿಸಲಿಲ್ಲ. ಇನ್ನೊಬ್ಬ ಪುತ್ರ ಮಧು ಬಂಗಾರಪ್ಪನವರನ್ನು ಶಾಸಕನಾಗಿ ನೋಡ ಬೇಕೆಂದು ಹಠ ತೊಟ್ಟರು. ಆದರೆ 2004ರಲ್ಲಿ ಸೊರಬದಲ್ಲಿ ಮಧು ಬಂಗಾರಪ್ಪ ಮತ್ತು 2008 ರಲ್ಲಿ ತಮ್ಮ ಪುತ್ರರಿಬ್ಬರ ಸೋಲನ್ನು ನೋಡ ಬೇಕಾದ ದುರಂತ ಪರಿಸ್ಥಿತಿ ಅವರದ್ದಾಗಿತ್ತು. 2013ರಲ್ಲಿ ಮಧು ಬಂಗಾರಪ್ಪ ಶಾಸಕರಾಗುವ ವೇಳೆ ಬಂಗಾರಪ್ಪ ಇಹಲೋಕ ತೊರೆದಿದ್ದರು. ಸೋಲಿಲ್ಲದ ಸರದಾರ ಎಂಬ ಅಭಿದಾನವನ್ನು ಪಡೆದ ಬಂಗಾರಪ್ಪ ಸೊರಬದಲ್ಲಿ ನಿರಂತರವಾಗಿ ಯಾವುದೇ ಪಕ್ಷದಲ್ಲಿ ನಿಂತರೂ ಗೆಲ್ಲುತ್ತಿದ್ದರು ಎಂಬುದು ನಿಜ. ಆದರೆ 1994ರಲ್ಲಿ ಸೊರಬದಲ್ಲಿ ಕೆಸಿಪಿ ಸ್ಥಾಪಿಸಿದ್ದ ವೇಳೆ ಸಾಗರ ದಲ್ಲೂ ಒಂದು ಕೈ ನೋಡಿಯೇ ಬಿಡುವ, ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸುತ್ತೇನೆ ಎಂಬ ಭ್ರಮೆಗೆ ಸಿಕ್ಕು ಸ್ಪರ್ಧಿಸಿ ದರು. ಆದರೆ ಅಲ್ಲಿ 3ನೇ ಸ್ಥಾನ ಪಡೆಯಬೇಕಾಯಿತು. ಬಳಿಕ ಅವರು ಸೋಲು ಕಂಡಿದ್ದು 2008ರಲ್ಲಿ. ಶಿಕಾರಿಪುರ ಕ್ಷೇತ್ರದಲ್ಲಿ ಸಮಾಜ ವಾದಿ ಪಕ್ಷದಿಂದ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸುದ್ದಿ ಮಾಡಿದ್ದರು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪರೋಕ್ಷವಾಗಿ ಸಹಕರಿ ಸಿದ್ದವು. ಆದರೆ ಆಘಾತಕಾರಿ ಸೋಲು ಎದುರಾಗಿತ್ತು. ನಿಧನ ಶ್ರೀ.ಬಂಗಾರಪ್ಪ ನವರು ಸ್ವಲ್ಪದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು ಬೆಂಗಳೂರು ನಗರದ ಮಲ್ಯ ಆಸ್ಪತ್ರೆ ಗೆ ಡಿಸೆಂಬರ್ ೮ ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸನ್, ೨೦೧೧ ರ, ರವಿವಾರ, ಡಿಸೆಂಬರ್, ೨೫ ರಂದು, ಮಧ್ಯರಾತ್ರಿ ೧೨-೪೫ಕ್ಕೆ ಕೊನೆಯುಸಿರೆಳೆದರು. ಬಂಗಾರಪ್ಪನವರು ಪತ್ನಿ,ಶಕುಂತಲಾ ಬಂಗಾರಪ್ಪ, ಹಾಗೂ ಇಬ್ಬರು ಗಂಡು ಮಕ್ಕಳು, ಕುಮಾರ ಬಂಗಾರಪ್ಪ,, ಮಧು ಬಂಗಾರಪ್ಪ,, ಮೂರು ಜನ ಹೆಣ್ಣು ಮಕ್ಕಳು, ಸುಜಾತ, ಗೀತ, ಅನಿತ, ಸೇರಿದಂತೆ ಅಪಾರ ಬಂಧುವರ್ಗ ಮತ್ತು ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಅಂತಿಮ ಸಂಸ್ಕಾರ ಸನ್,೨೦೧೧ ರ, ಡಿಸೆಂಬರ್,೨೭, ಮಂಗಳವಾರದಂದು ಅಂತಿಮ ಸಂಸ್ಕಾರ ಜರುಗಿತು. ಅದರ ವಿವರಗಳು ಹೀಗಿವೆ. ಬೆಂಗಳೂರಿನಿಂದ ಕುಬಟೂರಿಗೆ ಶ್ರೀ.ಬಂಗಾರಪ್ಪನವರ ಶವವನ್ನು ಬೆಳಿಗ್ಗೆ ೪-೩೦ ಕ್ಕೆ ತರಲಾಯಿತು. ಅಲ್ಲಿಂದ ೪ ಕಿ.ಮೀ.ದೂರದ ಲಕ್ಕವಳ್ಳಿಯ ಅವರ ತೋಟದಲ್ಲಿ ಶ್ರೀ.ಬಂಗಾರಪ್ಪನವರ ತಂದೆ, ತಾಯಿಯರ ಸಮಾಧಿಯ ಎದುರಿಗೆ ಪೂಜೆಗಳನ್ನು ಸಲ್ಲಿಸಿ, ಪುನಃ ಕುಬಟೂರಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ಮೆರವಣಿಗೆ ಆನವಟ್ಟಿ, ಸಮನ ಹಳ್ಳಿ, ಕುಪ್ಪಗಡ್ಡೆ, ತವನಂದಿ, ಕೊರಗೋಡು, ಗುಡವಿಕಾನ್, ಮತ್ತು ಹಳೇ ಸೊರಬ ದಿಂದ ಸೊರಬಕ್ಕೆ ತೆರಳುವ ಹೊತ್ತಿಗೆ ಮಧ್ಯಾನ್ಹ ೩ ಗಂಟೆಯಾಗಿತ್ತು. 'ಸೊರಬದ ಪದವೀ ಪೂರ್ವ ಕಾಲೇಜಿನ ಮೈದಾನ'ದಲ್ಲಿ 'ಬಂಗಾರಪ್ಪನವರ ಶವ'ವನ್ನು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ತದ ನಂತರ 'ರಾಜ್ಯ ಪೋಲೀಸ್ ಪಡೆ' 'ರಾಷ್ಟ್ರಗೀತೆಯನ್ನು ಪಠಿಸಿ' ಸಕಲ ಮರ್ಯಾದೆಗಳೊಂದಿಗೆ, ಮೂರು ಸುತ್ತಿನ ಕುಶಾಲ ತೋಪಿನ ಗೌರವದೊಂದಿಗೆ ಸಂಸ್ಕಾರ ವಿಧಿ ಮುಗಿಯಿತು. ಶವ ಸಂಸ್ಕಾರದ ಪ್ರಮುಖ ವಿಧಿಗಳಲ್ಲೊಂದಾದ 'ಅಗ್ನಿಸ್ಪರ್ಶ ಕಾರ್ಯ'ವನ್ನು ಸಂಜೆ ೭-೧೫ ಕ್ಕೆ, ಶ್ರೀ.ಬಂಗಾರಪ್ಪನವರ ಕೊನೆಯ ಮಗ, ಮಧು ಬಂಗಾರಪ್ಪ ನವರು ಮಾಡಿದರು. ಅಪಾರ ಜನಸ್ತೋಮ ಅವರ ಸಾವಿಗೆ ಶೋಕವನ್ನು ವ್ಯಕ್ತಪಡಿಸಿತು. ಅಲ್ಲಿ ನೆರೆದಿದ್ದ ಪ್ರಮುಖ ರಾಜಕಾರಣಿಗಳೆಂದರೆ- ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ|ಸದಾನಂದ ಗೌಡ, ವಿರೋಧ ಪಕ್ಷದ ನಾಯಕ, ಸಿದ್ದರಾಮಯ್ಯ|ಸಿದ್ಧರಾಮಯ್ಯ, ರಾಜ್ಯ ಬಿ.ಜೆ.ಪಿ.ಘಟಕದ ಅಧ್ಯಕ್ಷ, ಕೆ.ಎಸ್. ಈಶ್ವರಪ್ಪ, ಶ್ರೀ.ಬಂಗಾರಪ್ಪನವರ ಪತ್ನಿ, ಪುತ್ರರು, ಪುತ್ರಿಯರು ಹಾಗೂ ಅಪಾರ ಹಿತೈಷಿಗಳು ಹಾಜರಿದ್ದು ತಮ್ಮ ಅಂತಿಮ ಗೌರವವನ್ನು ಸಲ್ಲಿಸಿದರು. ಶ್ರೀ.ಬಂಗಾರಪ್ಪನವರಿಗೆ, ಗೌರವ ಸೂಚಿಸುವ ಸಲುವಾಗಿ ಎಲ್ಲ ಸರಕಾರಿ ಕಚೇರಿಗಳ ಮೇಲೆ, ರಾಷ್ಟ್ರಧ್ವಜವನ್ನು ಅರ್ಥಮಟ್ಟದಲ್ಲಿ ಹಾರಿಸಲಾಯಿತು. ರಾಜಕೀಯ ಕರ್ನಾಟಕದ ವಿಧಾನಸಭಾ ಸದಸ್ಯರು ಕರ್ನಾಟಕದ ಮುಖ್ಯಮಂತ್ರಿಗಳು ಕರ್ನಾಟಕದ ಲೋಕ ಸಭೆ ಸದಸ್ಯರು ರಾಜಕಾರಣಿಗಳು
2688
https://kn.wikipedia.org/wiki/%E0%B2%B6%E0%B2%BF%E0%B2%B5%E0%B2%95%E0%B3%8B%E0%B2%9F%E0%B3%8D%E0%B2%AF%E0%B2%BE%E0%B2%9A%E0%B2%BE%E0%B2%B0%E0%B3%8D%E0%B2%AF
ಶಿವಕೋಟ್ಯಾಚಾರ್ಯ
ಪಂಪಯುಗದಲ್ಲಿ ರಚಿತದವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ‘’ವಡ್ಡಾರಾಧನೆ’’. ಇದನ್ನು ರಚಿಸಿದವನು ಶಿವಕೋಟ್ಯಾಚಾರ್ಯನು. ಇವನ ಕಾಲವು ಸುಮಾರು ಕ್ರಿ.ಶ. ೯೨೦ ರ ಸನಿಹದಲ್ಲಿದೆ. ಶಿವಕೋಟ್ಯಾಚಾರ್ಯ-ಗದ್ಯಾನುವಾದ ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯನು ಹಳೆಗನ್ನಡದಲ್ಲಿ ಸುಂದರವಾದ ಗದ್ಯ ಕಾವ್ಯವನ್ನು ರಚಿಸಿದನು.ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ.ಈ ಕಾವ್ಯವು 10 ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು.ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾನೆ. ನೀತಿ, ಚರಿತ್ರೆ, ದರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು.ಇದು ಒಂದು ಅದ್ಭುತ ಕಾವ್ಯ. ವಡ್ಡಾರಾಧನೆ-ಆರಾಧನಾ-ಕರ್ಣಾಟ-ಟೀಕೆ-ವಿಭಿನ್ನ-ಕೃತಿಗಳು. ಬಾಹ್ಯ ಕೊಂಡಿ http://kannadadeevige.blogspot.com/2015/10/blog-post_6.html http://siri-kannada.in/pustaka/shivakotyacharya/ ಉಲ್ಲೇಖ ಸಾಹಿತಿಗಳು ಕನ್ನಡ ಸಾಹಿತ್ಯ
2690
https://kn.wikipedia.org/wiki/%E0%B2%89%E0%B2%A6%E0%B2%AF%E0%B2%B5%E0%B2%BE%E0%B2%A3%E0%B2%BF
ಉದಯವಾಣಿ
ಉದಯವಾಣಿ ಹೆಚ್ಚು ಪ್ರಸಾರವಾಗುವ ಕನ್ನಡ ದಿನಪತ್ರಿಕೆಗಳಲ್ಲೊಂದು. ಇದು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ನವರಿಂದ ಪ್ರಕಟಗೊಳ್ಳುತ್ತದೆ. ಇದು ಮಣಿಪಾಲ,ಬೆಂಗಳೂರು ಮತ್ತು ಮುಂಬಯಿ ಗಳಿಂದ ಪ್ರಕಟಗೊಳ್ಳುತ್ತದೆ. ಇತಿಹಾಸ 1970 ಜನವರಿ 1ರಂದು ಪ್ರಾರಂಭವಾದ ಉದಯವಾಣಿ ರಾಜಧಾನಿ ಬಿಟ್ಟು ದೂರದಲ್ಲಿ ಸಮೃದ್ಧವಾಗಿ ಬೆಳೆದು ಬಂದ ಮುಖ್ಯವಾಹಿನಿಯ ಕನ್ನಡ ದಿನಪತ್ರಿಕೆ. ಅಂದಿನಿಂದ ಇಂದಿನವರೆಗೂ (2006) ಅದರ ಸಂಪಾದಕರು ಟಿ. ಸತೀಶ ಪೈ. ಅವರೇ ಪ್ರಕಾಶನ ಸಂಸ್ಥೆ ಮಣಿಪಾಲ ಪ್ರಿಂಟರ್ಸ್‌ ಅಂಡ್ ಪಬ್ಲಿಕೇಷನ್ಸ್‌ (ಈಗ ಮಣಿಪಾಲ ಮೀಡಿಯಾ ನೆಟ್ವರ್ಕ್) ಮಾಲೀಕರು ಕೂಡ. ಉದಯವಾಣಿ 1993ರಲ್ಲಿ ಬೆಂಗಳೂರಿನಲ್ಲಿ ರಾಜಧಾನಿ ಆವೃತ್ತಿ ಪ್ರಾರಂಭಿಸಿತು. ಮೊದಲ ಆರುವರ್ಷಗಳ ಕಾಲ ಈಶ್ವರ ದೈತೋಟ ಇದರ ಸ್ಥಾನಿಕ ಸಂಪಾದಕರಾಗಿದ್ದರು. ಈಗ ಡಾ. ಪುರ್ಣಿಮಾ ಸ್ಥಾನಿಕ ಸಂಪಾದಕರಾಗಿದ್ದಾರೆ. ಉದಯವಾಣಿ ಸೋದರಿ ಪ್ರಕಟಣೆಗಳಾಗಿ ತುಷಾರ (1973) ಮಾಸಪತ್ರಿಕೆ, ರೂಪತಾರಾ (1976) ಸಿನಿಮಾ ಮಾಸಿಕ, ತರಂಗ (1982) ವಾರಪತ್ರಿಕೆ ಹಾಗೂ ತುಂತುರು (1999) ಎಂಬ ಮಕ್ಕಳ ಪತ್ರಿಕೆಯನ್ನು ಕೂಡಾ ಓದುಗರಿಗೆ ಕೊಡುತ್ತದೆ. ಜೊತೆಗೆ ಉದಯವಾಣಿಯ ಇಂಟರ್ನೆಟ್ ಆವೃತ್ತಿಯೂ ಲಭ್ಯವಿದೆ ಹಾಗೂ ಮುಂಬಯಿ ಆವೃತ್ತಿಯನ್ನೂ (2000) ನಡೆಸುತ್ತಿದೆ. ಪ್ರತಿದಿನವೂ ಅಂಕಣಗಳನ್ನು ಪ್ರಾರಂಭಿಸಿದ್ದು ಈ ದೈನಿಕ. ದಿವಂಗತ ಕು.ಶಿ.ಹರಿದಾಸ ಭಟ್, ಪ್ರೊ ಸಿ.ಎನ್ ರಾಮಚಂದ್ರನ್ ಕೂಡಾ ಅಂಕಣ ಬರೆಯುತ್ತಿದ್ದವರಲ್ಲಿ ಸೇರಿದ್ದಾರೆ. ಸಂಸ್ಕೃತ ಪಾಂಡಿತ್ಯವುಳ್ಳ ಬನ್ನಂಜೆ ಸಹೋದರರಾದ ರಾಮಾಚಾರ್ ಹಾಗೂ ಗೋವಿಂದಾಚಾರ್ ಇದರ ಸಹ ಸಂಪಾದಕರಾಗಿ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಸವಲತ್ತುಗಳನ್ನು ಹೊಂದಿರುವ ಉದಯವಾಣಿ ಸಮೂಹದ ಪ್ರಕಟಣೆಗಳು ಅಚ್ಚುಕಟ್ಟಾದ ಸುಂದರ ಮುದ್ರಣಕ್ಕೆ ಅನೇಕ ಬಾರಿ ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿವೆ. ಸಂಪಾದಕರು ಉದಯವಾಣಿಯ ಬೆಂಗಳೂರು ಆವೃತ್ತಿಗೆ ತಿಮ್ಮಪ್ಪ ಭಟ್ ಸಂಪಾದಕರಾಗಿದ್ದಾರೆ. ಮಣಿಪಾಲ ,ಹುಬ್ಬಳ್ಳಿ, ಮುಂಬಯಿ ಆವೃತ್ತಿಗೆ ಎ. ವಿ. ಬಾಲಕ್ರಿಷ್ಣ ಹೊಳ್ಳ ಸಂಪಾದಕರು. ಹೊರಗಿನ ಸಂಪರ್ಕಗಳು ಉದಯವಾಣಿ ಅಂತರಜಾಲ ಆವೃತ್ತಿ ಕನ್ನಡ ಪತ್ರಿಕೆಗಳು ಕನ್ನಡ ದಿನಪತ್ರಿಕೆಗಳು
2694
https://kn.wikipedia.org/wiki/%E0%B2%B9%E0%B2%BF%E0%B2%82%E0%B2%A6%E0%B3%82%20%E0%B2%A7%E0%B2%B0%E0%B3%8D%E0%B2%AE
ಹಿಂದೂ ಧರ್ಮ
ಹಿಂದು ಧರ್ಮ ಎಂದರೆ ಅದು ಮಾನವ ಧರ್ಮ, ಅನಂತ ಸತ್ಯ ಧರ್ಮ, ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಯೋಗಿಕ ಸಂಪ್ರದಾಯಗಳು ಮತ್ತು ಕರ್ಮದ ಕಲ್ಪನೆಯನ್ನು ಆಧರಿಸಿದ "ದೈನಿಕ ಸದಾಚಾರ"ದ ವಿಶಾಲವಾದ ವೈವಿಧ್ಯ ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ. ಇತಿವೃತ್ತ ಅದರ ಮೂಲಗಳಲ್ಲಿ ಕಬ್ಬಿಣ ಯುಗದ ಭಾರತದ ಐತಿಹಾಸಿಕ ವೈದಿಕ ಧರ್ಮವಿದೆ, ಮತ್ತು ಹಲವುವೇಳೆ ಹಿಂದೂ ಧರ್ಮವು "ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಧರ್ಮ" ಅಥವಾ "ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಪ್ರಮುಖ ಸಂಪ್ರದಾಯ" ಎಂದು ಹೇಳಲಾಗುತ್ತದೆ. ಹಿಂದೂ ಧರ್ಮವು ವಿವಿಧ ಸಂಪ್ರದಾಯಗಳಿಂದ ರಚಿತವಾಗಿದೆ ಮತ್ತು ಒಬ್ಬ ಏಕಾಂಗಿ ಸಂಸ್ಥಾಪಕನನ್ನು ಹೊಂದಿಲ್ಲ. ಹಿಂದೂ ಧರ್ಮವು ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳ ನಂತರ ವಿಶ್ವದ ಮೂರನೇ ಅತಿ ದೊಡ್ಡ ಧರ್ಮವಾಗಿದೆ ಮತ್ತು ಭಾರತದಲ್ಲಿ ಸುಮಾರು ೮೩ ಕೋಟಿ ಅನುಯಾಯಿಗಳು ಹಾಗೂ ಒಟ್ಟಾರೆ ಸುಮಾರು ೧೦೦ ಕೋಟಿ ಅನುಯಾಯಿಗಳನ್ನು ಹೊಂದಿದೆ. ದೊಡ್ಡ ಪ್ರಮಾಣದ ಹಿಂದೂ ಜನಸಂಖ್ಯೆಯಿರುವ ಇತರ ರಾಷ್ಟ್ರಗಳನ್ನು ದಕ್ಷಿಣ ಏಷ್ಯಾದಾದ್ಯಂತ ಕಾಣಬಹುದು. ಭಾರತ, ನೇಪಾಳ ಹಾಗೂ ಶ್ರೀಲಂಕಾದ ಕೆಲವು ಭಾಗಗಳಲ್ಲಿ ಈ ಧರ್ಮದ ಬಹುಪಾಲು ಅನುಯಾಯಿಗಳು ನೆಲೆಸಿದ್ದಾರೆ. ಅದಲ್ಲದೇ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಇಂದು ಹಿಂದೂ ಧರ್ಮದ ಅನುಯಾಯಿಗಳನ್ನು ಕಾಣಬಹುದು. ಧರ್ಮಗ್ರಂಥಗಳು ಹಿಂದೂ ಧರ್ಮಗ್ರಂಥಗಳ ಅಗಾಧ ಮಂಡಲವನ್ನು ಶ್ರುತಿ (ಕೇಳಿದ್ದು) ಮತ್ತು ಸ್ಮೃತಿ (ಸ್ಮರಣೆಯಲ್ಲಿಟ್ಟಿದ್ದು) ಗ್ರಂಥಗಳು ಎಂದು ವಿಭಜಿಸಲಾಗುತ್ತದೆ. ಈ ಧರ್ಮಗ್ರಂಥಗಳು ಧರ್ಮಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಪುರಾಣಗಳನ್ನು ಚರ್ಚಿಸುತ್ತವೆ ಮತ್ತು ಧರ್ಮದ ಆಚರಣೆಯ ಬಗ್ಗೆ ಮಾಹಿತಿ ಒದಗಿಸುತ್ತವೆ. ಈ ಗ್ರಂಥಗಳ ಪೈಕಿ, ವೇದಗಳು ಮತ್ತು ಉಪನಿಷತ್ತುಗಳು ಅಧಿಕಾರ, ಮಹತ್ವ ಮತ್ತು ಪ್ರಾಚೀನತೆಯಲ್ಲಿ ಪ್ರಮುಖವಾದವುಗಳು. ಇತರ ಪ್ರಮುಖವಾದ ಧರ್ಮಗ್ರಂಥಗಳು, ಪುರಾಣಗಳು ಮತ್ತು ಮಹಾಕಾವ್ಯಗಳಾದ ಮಹಾಭಾರತ ಹಾಗೂ ರಾಮಾಯಣಗಳನ್ನು ಒಳಗೊಳ್ಳುತ್ತವೆ. ಕೃಷ್ಣನಿಂದ ನುಡಿಯಲಾದ ಮಹಾಭಾರತದ ಒಂದು ಪ್ರಕರಣ ಗ್ರಂಥವಾದ ಭಗವದ್ಗೀತೆಯನ್ನು ಕೆಲವೊಮ್ಮೆ ವೇದಗಳ ಆಧ್ಯಾತ್ಮಿಕ ಉಪದೇಶಗಳ ಸಾರಾಂಶವೆಂದು ಕರೆಯಲಾಗುತ್ತದೆ. ಶಬ್ದ ವ್ಯುತ್ಪತ್ತಿ ಹಿಂದೂ ಶಬ್ದವು ಪರ್ಶಿಯಾದ ಭಾಷೆಯಲ್ಲಿ ಸಿಂಧೂ ನದಿಯ ಹೆಸರು, ವೈದಿಕ ಸಂಸ್ಕೃತದ ಸಿಂಧು (ಅಂದರೆ ಸಿಂಧೂ ನದಿ) ಶಬ್ದಕ್ಕೆ ಸಮಾನವಾದ ಪರ್ಶಿಯಾದ ಭಾಷೆಯ ಶಬ್ದವಾದ ಹಿಂದೂ (ಹಂಡೂ) ಎಂಬಲ್ಲಿ ಮೊದಲು ಕಂಡಿತು. ಋಗ್ವೇದವು ಭಾರತೀಯ-ಆರ್ಯರ ನಾಡನ್ನು ಸಪ್ತ ಸಿಂಧು (ವಾಯವ್ಯ ದಕ್ಷಿಣ ಏಷ್ಯಾದಲ್ಲಿನ ಏಳು ನದಿಗಳಿರುವ ನಾಡು, ಸಿಂಧೂ ನದಿಯು ಅವುಗಳಲ್ಲಿ ಒಂದು) ಎಂದು ಉಲ್ಲೇಖಿಸುತ್ತದೆ. ಇದು ಪಾರ್ಸಿ ಮತದ ಪವಿತ್ರಗ್ರಂಥವಾದ ಅವೆಸ್ಟಾದ (ವೆನ್‌ಡಿಡಾಡ್ ಅಥವಾ ವಿಡೇವ್‌ಡಾಡ್ ೧.೧೮) ಹಪ್ಟ ಹಂಡೂ ಪದಕ್ಕೆ ಅನುರೂಪವಾಗಿದೆ. ಈ ಪದವನ್ನು ಭಾರತೀಯ ಉಪಖಂಡದಲ್ಲಿ ಸಿಂಧೂ ನದೀ ಪ್ರದೇಶ ಮತ್ತು ಅದರ ಪೂರ್ವಕ್ಕಿರುವ ಪ್ರದೇಶದಲ್ಲಿ ವಾಸಿಸುವವರಿಗೆ ಬಳಸಲಾಗಿತ್ತು. ಅರಬ್ಬೀ ಭಾಷೆಯಲ್ಲಿ, ಅಲ್-ಹಿಂದ್ ಪದವು 'ಆಧುನಿಕ ಭಾರತದ ಜನರ ನಾಡನ್ನೂ' ನಿರ್ದೇಶಿಸುತ್ತದೆ. ಪರ್ಶಿಯಾದ ಭಾಷೆಯ (ಮಧ್ಯಕಾಲೀನ ಪರ್ಶಿಯಾದ ಭಾಷೆ ಹಿಂದೂಕ್, ಹೊಸ ಪರ್ಶಿಯಾದ ಭಾಷೆ ಹಿಂದೂ) ಪದವಾದ ಇದು ದೆಹಲಿ ಸಲ್ತನತ್‌ನೊಂದಿಗೆ ಭಾರತವನ್ನು ಪ್ರವೇಶಿಸಿತು ಮತ್ತು ಕನಿಷ್ಠ ಕ್ರಿ.ಶ. ೧೩೨೩ರಿಂದ ದಕ್ಷಿಣ ಭಾರತೀಯ ಹಾಗೂ ಕಾಶ್ಮೀರದ ಪಠ್ಯಗಳಲ್ಲಿ, ಮತ್ತು ಹೆಚ್ಚಾಗಿ ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಕಾಣಿಸುತ್ತದೆ. ೧೮ನೆಯ ಶತಮಾನದ ಕೊನೆಯಿಂದ ಈ ಪದವನ್ನು ಉಪಖಂಡದ ಬಹುತೇಕ ಧಾರ್ಮಿಕ, ಆಧ್ಯಾತ್ಮಿಕ, ಹಾಗೂ ತಾತ್ವಿಕ ಸಂಪ್ರದಾಯಗಳಿಗೆ, ಸಾಮಾನ್ಯವಾಗಿ ಸಿಖ್ ಧರ್ಮ, ಜೈನ ಧರ್ಮ, ಬೌದ್ಧ ಧರ್ಮಗಳನ್ನು ಪ್ರತ್ಯೇಕವೆಂದು ಸೇರಿಸದೆ, ಒಂದು ಸರ್ವಾನ್ವಯ ಪದವಾಗಿ ಬಳಸಲಾಗಿದೆ. ಹಿಂದೂ ಧರ್ಮ ಎಂಬ ಪದವು ಭಾರತಕ್ಕೆ ಸ್ಥಳೀಯವಾದ ಧಾರ್ಮಿಕ, ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯಗಳನ್ನು ಸೂಚಿಸಲು ಇಂಗ್ಲಂಡ್‌ನ ಜನರಿಂದ ಪರಿಚಯಿಸಲ್ಪಟ್ಟಿತು. ಮುಂಚಿನ ಐರೋಪ್ಯ ಪ್ರವಾಸಿಗಳು ಮತ್ತು ಕ್ರೈಸ್ತ ಧರ್ಮಪ್ರಚಾರಕರು ಹಿಂದೂ ಸಮಾಜ ಹಾಗೂ ಧರ್ಮದ ಮೇಲೆ ಬ್ರಾಹ್ಮಣ ವರ್ಣದ ಪ್ರಾಬಲ್ಯದ ಕಾರಣ ಹಿಂದೂ ಧರ್ಮವನ್ನು ನಿರ್ದೇಶಿಸಲು "ಬ್ರಾಹ್ಮಣ ಧರ್ಮ" ಎಂಬ ಶಬ್ದವನ್ನು ಸೃಷ್ಟಿಸಿದರು. ಹಿಂದೂಗಳು ತಮ್ಮ ಧರ್ಮವನ್ನು, ಶಾಶ್ವತ ನಿಯಮಗಳನ್ನು ಆಧರಿಸಿರುವ ಕಾರಣ ಸನಾತನ ಧರ್ಮ ಎಂದು, ಅಥವಾ ವೇದಗಳ ಉಪದೇಶಗಳನ್ನು ಆಧರಿಸಿರುವ ಕಾರಣ ವೈದಿಕ ಧರ್ಮವೆಂದು ಕರೆಯಲು ಇಷ್ಟಪಡುತ್ತಾರೆ. ಹಿಂದೂಗಳ ನಾಡು ಅವರಿಗೆ ಸಾಂಪ್ರದಾಯಿಕವಾಗಿ ಭಾರತ ಅಥವಾ ಭಾರತದ ಒಬ್ಬ ಪ್ರಾಚೀನ ರಾಜನಾದ ಭರತನ ಹೆಸರಿನಿಂದ ವ್ಯುತ್ಪನ್ನವಾದ ಭರತವರ್ಷವೆಂದು ಪರಿಚಿತವಾಗಿದೆ. ಪ್ರಕಾರಗಳು ಜಾಗತಿಕ ಮಟ್ಟದಲ್ಲಿ ಮಾನವನ ವಿಭಾಗಿತ ಗುಂಪುಗಳಾಗಿ ಧರ್ಮಗಳು ಕಂಡುಬರುತ್ತವೆ. ಧಾರ್ಮಿಕ ಪುರುಷರ ಸತ್ವಯುತ ಚಿಂತನೆಗಳು, ಜೀವನ ನೀತಿ ಬೋಧನೆಗಳು ಒಂದೊಂದು ಜನ ಪ್ರಾದೇಶಿಕ ಜನಸಮುದಾಯಗಳ ಆಚಾರ ವಿಚಾರಗಳಾಗಿ, ಮಹತ್ವ ಪಡೆಯುತ್ತಾ ಬಂದಿವೆ. ಅದರಲ್ಲಿಯೂ ಲಿಂಗ, ವರ್ಗಗಳಲ್ಲಿ ತಾರತಮ್ಯ ಉಂಟಾದಾಗ ಸಂಘರ್ಷ ನಡೆದಿವೆ. ಧರ್ಮ ವಿಚಾರಗಳಲ್ಲಿ ಮತಬೇಧಗಳು ಉಂಟಾಗಿ ಹಲವು ಉಪ ಅಥವಾ ಧರ್ಮಗಳು ನಿರ್ಮಾಣವಾಗಿರುವುದೂ ಉಂಟು. ಕೆಲವು ಇವುಗಳಲ್ಲಿಯೇ ತಮ್ಮ ತಮ್ಮ ಧರ್ಮಗಳ ಮತ ವಿಚಾರಗಳು ಶ್ರೇಷ್ಠವೆಂದು ಸಂಘರ್ಷಗಳು ನಡೆದಿರುವುದುಂಟು. ಬಹುತೇಕ ಮಧ್ಯ ಏಷ್ಯಾ ಮೂಲ ಭಾಗದ ಸಮುದಾಯಗಳ ಧಾರ್ಮಿಕ ಜೀವನ ಪದ್ಧತಿಗಳನ್ನು ಮುಸ್ಲಿಂ ಹೆಸರಿನಿಂದ, ಯುರೋಪಿಯನ್ ದೇಶ ಸಮುದಾಯಗಳ ಧಾರ್ಮಿಕ ಜೀವನವನ್ನು ಕ್ರಿಶ್ಚಿಯನ್ ಹೆಸರಿನಿಂದ, ಭಾರತದಲ್ಲಿ ಮಾತ್ರ ಹತ್ತು ಹಲವು, ಬುಧ್ಧ, ಮಹಾವೀರ ಮೊದಲಾದಂತಹ ಧಾರ್ಮಿಕ ಸಂತರು ನಿರ್ದೇಶಿಸಿದ ಬೌದ್ಧ, ಜೈನ, ಸಿಖ್, ಯಹೂದಿಗಳೆಂದು ಜೀವನ ಪದ್ಧತಿಗಳು, ಧಾರ್ಮಿಕ ಸುಧಾರಣೆಗಳು ಇವೆ. ಇದಲ್ಲದೆ ಈ ಭಾರತ ದೇಶದಲ್ಲಿ ಬಹಳ ಪ್ರಾಚೀನವೆಂದು ಹಿಂದೂ ಮತ್ತು ಹಿಂದುತ್ವಗಳು ದೊಡ್ಡ ಮಟ್ಟದಲ್ಲಿ ಚರ್ಚಿತವಾಗುತ್ತಿರುವ ವಿಷಯವಾಗಿ ಗಂಭೀರವಾಗಿದೆ. ಭಾರತದಲ್ಲಿ ಹುಟ್ಟಿದ, ಇಲ್ಲಿಯೇ ಬೆಳೆದ ವ್ಯಕ್ತಿಗಳನ್ನು, ಅವರ ಜೀವನ, ನಂಬಿಕೆ-ಆಚಾರ ವಿಚಾರಗಳನ್ನು ಅನುಸರಿಸುತ್ತಾ, ಒಂದು ಪರಂಪರೆಯ ಪ್ರಾಥಮಿಕ ಅನುಸಂಧಾನವನ್ನು ಮಾಡಿಕೊಳ್ಳುತ್ತಾ, ವೈಯಕ್ತಿಕ ಬದುಕಿನಲ್ಲಿ ವಿಶಿಷ್ಠತೆಯನ್ನು ಕಾಯ್ದುಕೊಂಡು ಬೆಳೆದು ಬಂದ ಭಾರತೀಯ ಸಮುದಾಯದ ಅಖಂಡ ಧಾರ್ಮಿಕ ಜೀವನದ ಮಹತ್ವವನ್ನು ತಿಳಿಸುವ ಪದ ‘ಹಿಂದೂ’ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಹಿಂದೂ ಎಂಬ ಪದಕ್ಕೆ ಬಹಳ ಪ್ರಾಚೀನವಾದ ಇತಿಹಾಸವಿಲ್ಲ. ಭಾರತದಲ್ಲಿ ವೈಧಿಕ ಧರ್ಮ ಇತ್ತು ಎಂಬುದು, ಸನಾತನ ಧರ್ಮ ಇತ್ತು ಎಂಬುದು, ಚಾತುರ್ವರ್ಣ ಧರ್ಮ ಇತ್ತು ಎಂಬುದು, ಮನುಧರ್ಮವಿತ್ತು ಎಂಬುದು, ವೇದಗಳೇ ವೈಧಿಕ ಧರ್ಮದ ಆಧಾರ ಗ್ರಂಥಗಳೆಂದು, ಪ್ರಾಚೀನ ಋಷಿ-ಮುನಿಗಳು ಇವುಗಳ ರಚನೆಕಾರರು, ಅವರೇ ಈ ಧರ್ಮ ಸಂಸ್ಥಾಪಕರು ಎಂಬ ಚಿಂತನೆಗಳಿವೆ. ವೇದಗಳೇ ಸತ್ಯವೆಂಬ ಮಾತೂ ಇದೆ. ಯಜ್ಞ ಯಾಗಾದಿಗಳನ್ನು ಮಾಡುತ್ತ ಪ್ರಜೆಗಳಿಗೆ ಮಾರ್ಗದರ್ಶಕರಾಗಿ ಮುನಿಗಳು ವೈಧಿಕ ಧರ್ಮದ ಕರ್ತೃಗಳು ಎಂಬುದು ಬಹುತೇಕ ಭಾರತೀಯರ ನಂಬಿಕೆ. ಭಾರತೀಯ ಅರೆಸೊತ್ತಿಗೆಯ ರಾಜ್ಯಾಡಳಿತ ಕಾಲದಲ್ಲಿ ರಾಜಾ ಪ್ರತ್ಯಕ್ಷ ದೈವವೆಂಬ ನಂಬಿಕೆಯಲ್ಲಿ, ಆತನ ರಕ್ಷಣೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರೆಂಬ ಜನ ಸಮುದಾಯಗಳ ಸಂಘಟನೆಯಲ್ಲಿ ಬೆಳೆಯಿತು ಈ ಸನಾತನ ಧರ್ಮ. ಅನಂತರ ಬೆಳೆದು ಬಂದ ಪಂಚಮನ ಸೇರ್ಪಡೆಯೊಂದಿಗೆ ಭಾರತೀಯ ಜನವರ್ಗ ವೈಧಿಕಧರ್ಮದ ಅಡಿಯಲ್ಲಿ ಬದುಕು ಕಟ್ಟಿಕೊಳ್ಳುವಾಗ, ದೇವರು, ಸಂಪ್ರದಾಯ, ವಿಧಿ-ನಿಷೇಧಗಳು, ಪುನರ್ಜನ್ಮ, ಕರ್ಮಸಿದ್ದಾಂತ, ಪುರುಷಪ್ರಾಧಾನ್ಯ ಆಚರಣೆಗಳು, ಮೊದಲಾದ ಅಸ್ತ್ರಗಳ ಮೂಲಕ, ಧಾರ್ಮಿಕ ಅಲಿಖಿತ ಶಾಸನಗಳ ಭಯದೊಂದಿಗೆ ವೈಧಿಕ ಧರ್ಮ ಭಾರತೀಯರ ಬದುಕಿನ ಭಾಗವಾಗಿದೆ. ದೇವರ ಶಿರದಿಂದ ಬ್ರಾಹ್ಮಣನೂ, ತೋಳುಗಳಿಂದ ಕ್ಷತ್ರಿಯನೂ, ಹೊಟ್ಟೆ-ತೊಡೆಗಳಿಂದ ವೈಶ್ಯನೂ, ಪಾದಗಳಿಂದ ಶೂದ್ರನು ಹುಟ್ಟಿದನೆಂದು ಭಾರತದ ಜನ ಸಮುದಾಯದ ವೈಧಿಕರ ಜನ್ಮ ರಹಸ್ಯವನ್ನು ತಿಳಿಸಲಾಗಿದೆ. ಶೂದ್ರ ಸೇವಕ. ಪಶು ಸಮಾನ ಆತನಿಗೆ ಸುಖ ಜೀವನದ ಹಕ್ಕಿಲ್ಲ. ಶ್ರೇಣೀಕೃತವಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಸೇವೆಯನ್ನು ಕಾಯಾವಾಚಾಮನಸಾ ಮಾಡಿದಾಗ, ಮರುಜನ್ಮದಲ್ಲಿ ತನ್ನ ಕರ್ಮದಂತೆ ಉನ್ನತವಾದ ಸಮುದಾಯಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಲ್ಲಿ ಹುಟ್ಟಿ ದೇವರ ಪ್ರೀತಿ, ಸುಖ, ಭೋಗ ಜೀವನ ಅನುಭವಿಸಬಹುದು. ಇಲ್ಲದಿದ್ದರೆ ಇಲ್ಲ. ಬ್ರಾಹ್ಮಣನೇ ಶ್ರೇಷ್ಠ. ವೇದಗಳನ್ನು ನಿರ್ಮಿಸಿದ ಋಷಿಗಳ ಸಂತತಿ ಎಂಬುದು ತರ್ಕ. ಧರ್ಮ ಸುಧಾರಕರೂ ಅವರೇ ಆಗಿದ್ದರು.ಸಂಸ್ಕ್ರತ ದೇವಭಾಷೆ ಅಂದರೆ ಶ್ರೇಷ್ಟರ ಭಾಷೆ. ಆಡಳಿತ, ಶಿಕ್ಷಣ, ಧಾರ್ಮಿಕಾಚರಣೆಗಳೆಲ್ಲವೂ ಸಂಸ್ಕೃತ ದಲ್ಲಿಯೇ. ಪ್ರಾದೇಶಿಕ ಭಾಷೆಗಳು ಹತ್ತು ಹಲವು ಶೂದ್ರರಾದ ಜನಸಾಮಾನ್ಯರದು. ಹೆಣ್ಣು ಈ ಧರ್ಮದಲ್ಲಿ ದೈವಿಕವಾದ ಪಾತ್ರ, ಪುರುಷ ಪೋಷಕ, ಪುರುಷನ ಭೋಗವಸ್ತು. ಗೌರವದ ಪತಿವ್ರತೆ, ಗೃಹಿಣಿ. ಮಹಾಸತಿ. ಲಿಂಗತಾರತಮ್ಯವಿದ್ದರೂ ಅದು ದೈವೀ ಇಚ್ಛೆ. “ಮಹಿಳಾ ಮೌನಂ ಸುಖಪ್ರಾಪ್ತಂ” ಆಗಿತ್ತು. ಋಷಿ-ಮುನಿ ನಿರ್ಮಿತ ವೈಧಿಕ ಧರ್ಮದಲ್ಲಿ ಕಾಲಕಾಲಕ್ಕೆ ದೋಷಗಳನ್ನು ಗುರುತಿಸಿ, ಸುಧಾರಣಾ ತಿದ್ದುಪಡಿಗಳನ್ನು ತಂದಿರುವುದುಂಟು, ಅವುಗಳೇ ಸ್ಮ್ರತಿಗಳು, ಆಗಮ ಗ್ರಂಥಗಳು, ಧರ್ಮಶಾಸ್ತ್ರ ಗ್ರಂಥಗಳು ಮೊದಲಾದವು. ಇಲ್ಲಿ ಎಷ್ಟೇ ದೋಷ ನಿವಾರಣೆಯನ್ನು ತಂದರೂ, ಅದರಲ್ಲಿನ ಮೂಲ ಸ್ವರೂಪ ಬದಲಾಗಿಲ್ಲ. ಜನ ಸಮುದಾಯಗಳಲ್ಲಿನ ತಾರತಮ್ಯ ಬದಲಾಗಿಲ್ಲ. ಹೆಣ್ಣು-ಗಂಡಿನ ಬೇಧ ತಗ್ಗಲಿಲ್ಲ. ವೃತ್ತಿ-ಕಸುಬು ಆಧಾರಿತ ಖಾಯಂ ಜಾತಿ-ಗುಂಪುಗಳನ್ನು ಪೋಷಿಸಲಾಯಿತು. ಶ್ರಮ ಜೀವಿಗಳು ಕಷ್ಟ ಪಡುವಂತಾದರೆ, ಸುಖಜೀವಿಗಳು ಮತ್ತಷ್ಟು ಭೋಗಾಕಾಂಕ್ಷಿಗಳಾದರು. ದರ್ಪ, ದೌರ್ಜನ್ಯ, ಪಾಳೇಗಾರಿಕೆಗಳು ಹೆಚ್ಚಿದವು. ಶೂದ್ರರಲ್ಲಿ ಮತ್ತೂ ಶೂದ್ರ-ಪಂಚಮ ಅಸ್ಪ್ರಶ್ಯತೆಗಳು ಹೆಚ್ಚಾಗಿ ಶೋಷಣೆಯ ವಿಧಗಳು ಬೆಳೆದವು. ಹೆಣ್ಣು ರತ್ನವಾಗಿ, ಭೋಗಮಸಾಣಿಯಾಗಿ- ವೇಶ್ಯಯಾಗಿ, ವಂಶವನ್ನು ಹೆತ್ತುಕೊಡುವ ಯಂತ್ರವಾಗಿ ನೆಲೆನಿಂತಳು. ಸ್ವಪ್ರತಿಷ್ಟೆ, ಸ್ವಜನ ಪಕ್ಷಪಾತ, ಅಧಿಕಾರದಾಹಗಳು ಧರ್ಮವನ್ನು ಹಲವು ದಾರಿಗಳಾಗಿ ಸೀಳಿದವು. ಶೈವ, ವೈಷ್ಣವ, ಶಕ್ತಿ ಆರಾಧನೆ ಮೊದಲಾದ ಪಂಥಗಳು ಹುಟ್ಟಿಕೊಂಡವು. ಬೌದ್ಧ, ಜೈನ, ಸಿಖ್, ವೀರಶೈವ ಮೊದಲಾದ ಧರ್ಮಗಳು, ಈ ವೈಧಿಕ ಧರ್ಮದ ದೋಷಗಳನ್ನು ಕಂಡು ಸಿಡಿದು ಹೊಸ ರೂಪಗಳನ್ನು ಪಡೆದವು, ಬೆಳೆದವು. ಕಾಲಾಂತರದಲ್ಲಿ ಯಜ್ಞಯಾಗಾದಿಗಳು ಕೆಲವು ಸನಾತನಿಗಳಲ್ಲಿ ಉಳಿದು, ಆದಿ ಮೂಲದ ಮೂರ್ತಿಪೂಜೆ, ಆತ್ಮ ಪೂಜೆ, ಪ್ರಕೃತಿ ಪೂಜೆಗಳು ಶೂದ್ರರಾದಿಯಾಗಿ ಬೆಳೆದವು. ಶೂದ್ರರಲ್ಲಿ ದೇವರು, ಧರ್ಮಗಳ ಹುಡುಕಾಟದಲ್ಲಿ ಭಕ್ತಿಪಂಥಗಳೂ ಬೆಳೆದವು. ಮುಕ್ತಿಗೆ ಭಕ್ತಿಯೇ ಸಾಕೆಂಬ ಶರಣರ, ದಾಸರ, ತತ್ವಪದಕಾರರ ವಿಚಾರಗಳಿಂದ ಪ್ರೇರಿತವಾದ ಜನರು ಮೂರ್ತಿ ಪೂಜೆಯನ್ನು ಖಾಯಂಗೊಳಿಸಿ, ಪ್ರಕೃತಿ ಆರಾಧನೆಯಲ್ಲಿ ಖುಷಿ ಕಂಡರು. ಹೀಗೆ ಬೆಳೆದು ಬಂದ ಭಾರತ ಜಾತಿ ವ್ಯವಸ್ಥೆಯ ಬಹುತೇಕ ಸಮುದಾಯಗಳಲ್ಲಿ ಧರ್ಮವೆಂಬುದು, ಅನಿವಾರ್ಯದ ಭಾಗವೆಂದು ಅವರಿಗೆ ಅನಿಸಲೇ ಇಲ್ಲ. ಯಾವುದೋ ಗುರುಗಳು ಬಂದು ಧರ್ಮ ಬೋಧನೆ ಮಾಡಬೇಕು, ನಾವು ಅದನ್ನು ಪಾಲಿಸಬೇಕೆಂಬ ಪ್ರಜ್ಞೆಯೂ ಇಲ್ಲದಂತೆ ಅವರು ಬದುಕಿದರು. ಅವರವರಿಗೆ ಅವರದೇ ದೇವರು, ಅವರ ಪೂಜೆ- ಕರ್ಮಗಳೇ ಬೇರೆಯಾಗಿ ಹಿಂದೂ ಎಂದರೆ ಭಾರತದಲ್ಲಿ ಮೂರ್ತಿ ಪೂಜಾರಾಧಕರೆಂಬ ಕುರುಹು ಮಾತ್ರ ಉಳಿಯಿತು. ಹಿಂದೂ ಎಂಬುದು ಹೊಸ ಇತಿಹಾಸ ನಿರ್ಮಾಣವಾದ ಕಾಲಘಟ್ಟದಲ್ಲಿ ಹುಟ್ಟಿದ ಪದ. ಇತಿಹಾಸಕಾರರ ಪ್ರಕಾರ ಭಾರತದ ಮೂಲನಿವಾಸಿಗಳ ನೆಲೆ-ತಾಣ, ಸಿಂಧೂನದಿ ತೀರ ಪ್ರದೇಶ. ಸಿಂದೂನಾಗರೀಕತೆ ಭಾರತದ ಪೂರ್ವ ಇತಿಹಾಸವನ್ನು ತಿಳಿಸುವ ಗತಕಾಲದ ಉತ್ಖನನದ ದಾಖಲೆ. ಶ್ರೀಲಂಕಾ, ಬರ್ಮಾ, ನೇಪಾಳ, ಬಾಗ್ಲಾದೇಶ, ಪಾಕೀಸ್ಥಾನ ಮತ್ತು ಭಾರತಗಳು ಉಪಖಂಡವಾಗಿ ಒಂದಾಗಿದ್ದ ಕಾಲಘಟ್ಟದಲ್ಲಿ ಸಿಂದೂನದಿ ಪ್ರದೇಶವೇ, ಭಾರತದ ಜನಸಮುದಾಯಗಳ ನೆಲೆ. ಮಧ್ಯೆ ಏಷ್ಯಾದಿಂದ ಆ ಪ್ರದೇಶದ ಮೇಲೆ ದಾಳಿ ನಡೆದಾಗ ಪರ್ಷಿಯನ್ನರು. ಸಿಂದೂ ನದಿಯನ್ನು ಅವರಲ್ಲಿ ‘ಸ’ ಕಾರ ಇಲ್ಲದ್ದರಿಂದ ಹಿಂದೂನದಿ ಎಂದು ಕರೆದರೆಂದೂ, ಸಿಂದೂನದಿ ನಾಗರೀಕರನ್ನು, ಹಿಂದೂನದಿ ನಾಗರೀಕರೆಂದು ಕರೆದರೆಂದೂ ಆ ರೂಪಗಳೇ ಮುಂದೆ ಸಿಂದೂಸ್ಥಾನ- ಹಿಂದೂಸ್ಥಾನ ವಾಯಿತೆಂದು, ಇಲ್ಲಿನ ಜನ ಹಿಂದೂಗಳಾದರೆಂದು ವಿವರಗಳಿವೆ. ಯುರೋಪಿಯನ್ನರು ಆ ಕಾರಣಕ್ಕಾಗಿಯೇ INDIA- ಇಂಡಿಯಾ ಎಂಬ ಹೆಸರಿನಿಂದ ಭಾರತವನ್ನು ಕರೆದಿದ್ದಾರೆಂಬ ವಿವರಗಳು ಇತಿಹಾಸದಲ್ಲಿ ಸಿಗುತ್ತವೆ. ಪರ್ಷಿಯನ್ ಪದದ ಸಿಂದೂ-ಹಿಂದೂ ಜನರಾದ ಭಾರತೀಯರು, ಹಿಂದೂಗಳಾದರು. ಭಾರತೀಯರ ಧರ್ಮ, ಜನಾಂಗೀಯ ಪದವಾದ ಹಿಂದೂ ಪದ ಸೂಚಕವಾಗಿ ಹಿಂದೂ ಧರ್ಮವಾಯಿತು ಅಂಬೋಣ, ಭಾರತ ಮೂಲದ ಎಲ್ಲರೂ ಹಿಂದೂಗಳಾದರೆ, ಹಿಂದೂ ಹೆಸರಿನ ಅವರ ಮೂಲಧರ್ಮ ವೈಧಿಕ ಧರ್ಮ, ಸನಾತನ ಧರ್ಮ ಆಗಿತ್ತು. ಆದರೆ ಈ ಧರ್ಮಾಚರಣೆಗಳಲ್ಲಿ ಫಲಾನುಭವಿಗಳು ಹಳೆಯ ಚಾತುರ್ವರ್ಣ ವ್ಯವಸ್ಥೆಯ ರೂವಾರಿಗಳು. ಯಜ್ಞ-ಯಾಗಾದಿಗಳಲ್ಲಿ ಭಾಗವಹಿಸುತ್ತಾ ಬಂದವರೂ ಆದ ಪುರೋಹಿತಶಾಹಿಗಳು, ರಾಜ್ಯಶಾಹಿಗಳೂ ಆಗಿದ್ದರು. ಶೂದ್ರರಿಗೆ, ದೇವತೆಗಳ, ದೇವರುಗಳ ದರ್ಶನವಿಲ್ಲ. ಧಾರ್ಮಿಕಾಚರಣೆಗಳಲ್ಲಿ ಮೂಕ ಪ್ರೇಕ್ಷಕರು. ಪಾಲುದಾರರಲ್ಲ. ಭಾಗೀದಾರರಲ್ಲ. ಈ ಇಬ್ಬರಲ್ಲಿ ಒಂದು ಕಂದಕವಿತ್ತು. ಶೂದ್ರರಿಗೆ, ಅವರದೇ ಆದ ಪ್ರಕೃತಿ ದೈವಗಳು, ಮಾರ್ಗದರ್ಶನ ನೀಡಿ ಹುತಾತ್ಮರಾದ ಸತ್ವಪರುಷರು, ನೆಲ-ಜಲ ಭೂತ- ಪ್ರೇತಗಳು ದೇವರುಗಳಾಗಿ ಅವರ ಮೈಮೇಲೆ ಬಂದು ಸಹಾಯ ಮಾಡುವ ಪರಿಹಾರ ಸೂಚಕರೂ ಆಗಿದ್ದರು. ಅದರ ಜೊತೆಗೆ ಪುರಾಣ, ಕಾವ್ಯಗಳ ಶಿವ, ವಿಷ್ಣು, ಗಣಪ, ಪಾರ್ವತಿ, ಸರಸ್ವತಿ. ಲಕ್ಷ್ಮಿ ಎಲ್ಲರೂ ವರ ಕೊಡುವ ಆದರ್ಶ ದೇವತೆಗಳಾದರು. ಆದರೆ ಸನಾತನ ಯಜ್ಞ ಯಾಗಾದಿಗಳು ಇವರ ಆರಾಧನೆಗಳಲ್ಲವಾಗಿತ್ತು. ಅದರಿಂದ ಸನಾತನ ವೈಧಿಕರ ಪಂಥಕ್ಕೂ, ಶೂದ್ರರಾದ ಶ್ರಮಿಕರ ಪಂಥಕ್ಕೂ ವ್ಯತ್ಯಾಸಗಳು ಇದ್ದೇ ಇತ್ತು. ವೈಧಿಕರ ಜೊತೆ ಅನಿವಾರ್ಯವಾಗಿ ಸಾಮರಸ್ಯ- ಶೋಷಣೆ- ಬೇಸರಗಳ ನಡುವೆಯೇ ಹೆಸರಿಗೆ ವೈಧಿಕರಾಗಿದ್ದರು. ಆದರೆ ಅವರು ವೈಧಿಕರಲ್ಲ. ಭಾರತೀಯ ಮೂಲನಿವಾಸಿಗಳು ಮಾತ್ರ ಆಗಿದ್ದರು. ಪಿತೃ ಜೊತೆಗೆ ಮಾತೃವನ್ನೂ ಆರಾಧಿಸುವ ಸುಸಂಸ್ಕೃತರು ಇವರು. ವೈಧಿಕ ಧರ್ಮಕ್ಕೆ ಸಿಂಧೂ ನಾಗರೀಕತೆಯ ಅನ್ವೇಷಣೆಯ ನಂತರ ಹಿಂದೂ ಧರ್ಮವೆಂಬ ನಾಮಕರಣವಾದ ಸಂದರ್ಭದಲ್ಲಿ ಸನಾತನ ವೈಧಿಕಧರ್ಮದ ಶೂದ್ರರೆಲ್ಲರು ಒಂದೇ ಆಗಿ ಹಿಂದೂಗಳು ಎನಿಸಿಕೊಂಡರು. ಆದರೆ, ಹಿಂದೂಗಳಾದ ಮಾತ್ರಕ್ಕೆ ಭಾರತೀಯ ಶೂದ್ರರು ಸನಾತನ ಪುರೋಹಿತಶಾಹಿ ಹಿಂದೂಗಳಾಗಲಿಲ್ಲ. ಅವರೂ ಇವರನ್ನು ಸೇರಿಸಿಕೊಳ್ಳಲಿಲ್ಲ. ಭಾರತೀಯ ಶೂದ್ರರೆಂದು ಕರೆಸಿಕೊಂಡ ಆದಿ ಹಿಂದೂಗಳಾಗಿಯೇ ಉಳಿದರು. ಸನಾತನ ಹಿಂದೂಗಳೇ ಬೇರೆ, ಆದಿ ಹಿಂದೂಗಳೇ ಬೇರೆ. ಮೂರ್ತಿಪೂಜೆ ಮೊದಲಾದ ಕೆಲವೊಂದು ಆಚರಣೆ, ನಂಬಿಕೆಗಳಲ್ಲಿ ಇವರಿಬ್ಬರಲ್ಲಿ ಸಾಮ್ಯತೆಯಿದೆ ಎಂದು ಹೇಳಿದರೂ, ಯಜ್ಞ ಮೂಲದ ಸನಾತನ ಆಚರಣೆಗಳಿಲ್ಲ. ಮುಸ್ಲಿಮಲ್ಲಿ ಸುನ್ನಿ ಮತ್ತು ಶಿಯಾಗಳಿದ್ದಂತೆ, ಕ್ರಿಶ್ಚಿಯನ್ನರಲ್ಲಿ ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟರಿದ್ದಂತೆ , ಜೈನರಲ್ಲಿನ ಶ್ವೇತಾಂಬರ ಮತ್ತು ದಿಗಂಬರರಿದ್ದಂತೆ ಭಾರತದ ಹಿಂದೂಗಳಲ್ಲಿ ಸನಾತನ ಹಿಂದೂಗಳು ಮತ್ತು ಆದಿಹಿಂದೂಗಳು ಎಂಬ ವಿಭಾಗವಿದೆ. ಆದರೆ ಬೇರೆ ಧರ್ಮಗಳಂತೆ ಭಾರತದಲ್ಲಿ ಆ ಪ್ರತ್ಯೇಕತೆಯ ಗುರುತು ದಾಖಲೆಯಾಗಿಲ್ಲ. ಸನಾತನ ಧರ್ಮದ ಅನುಯಾಯಿಗಳು ಧರ್ಮದ ನೆಲೆಯಲ್ಲಿ ಅಸ್ತಿತ್ವ ಹುಡುಕಾಡಿದರೆ, ಆದಿಹಿಂದೂಗಳು ಶ್ರಮ, ಭೂಮಿ ತಾಯಿಯ ಮಡಿಲು ಮತ್ತು ಇತ್ತೀಚೆಗೆ ಸರ್ಕಾರದ ನೌಕರಿ, ವಿವಿಧ ಉಧ್ಯಮಗಳ ಹುಡುಕಾಟದಲ್ಲಿ ಅಧಿಕಾರ-ರಾಜಕಾರಣದ ಪರಿಚಯ ಪಡೆಯುತ್ತಿದ್ದಾರೆ. ಅದಕ್ಕೆ ಜಾತಿಯ ಬಳಕೆ ಉಪಯೋಗವಾಗುತ್ತಿದೆಯೆಂಬ ಭ್ರಮೆಯೂ ಇಣುಕಿನೋಡುತ್ತಿದೆ. ಬಹುತೇಕ ಶೂದ್ರರು ಹಿಂದೂ ಎಂಬ ಹೆಸರಿನಿಂದ ಭಾವಪರವಶರಾಗುವುದಿಲ್ಲ. ಆದರೆ ವೈಧಿಕ ಧರ್ಮ ಹುಟ್ಟು ಹಾಕಿದ ಜಾತಿ ಪದಕ್ಕೆ ವೈಚಾರಿಕ ನೆಲೆಯಲ್ಲಿ ಬೇಸರವಿದ್ದರೂ ಅನಿವಾರ್ಯತೆಯ ನೆಲೆಯಲ್ಲಿ ಭಾವಪರವಶರಾಗುವುದುಂಟು. ಸರ್ಕಾರಿ ದಾಖಲೆಗಳಲ್ಲಿ ಕಾಲಂ ತುಂಬಲು ಹಿಂದೂ ಪದ ಬಳಸುತ್ತಾರೆಂಬುದು ನಿಜವಾದರೂ, ಇವರಿಗೆ ಹಿಂದೂ ಎನ್ನಿಸಿಕೊಳ್ಳುವುದಕ್ಕಿಂತಲೂ ಭಾರತೀಯ ಎನ್ನುವುದು ಭಾವಾದ್ರೇಕಕ್ಕೆ ಕಾರಣವಾಗುತ್ತದೆ. ನನ್ನ ದೇಶ ಭಾರತ, ನಾಡು, ನುಡಿ ಅತ್ಯಂತ ಪ್ರೀಯವಾದುದು. ಭಾರತೀಯ ಹೆಮ್ಮೆಯ ವಿಷಯ. ಹಿಂದೂ ಅದು ವೈಯಕ್ತಿಕ ಅನುಭೂತಿ ಅಷ್ಟೇ. ಹಳೆಯ ಭಾರತದ ವೈಧಿಕ ಧರ್ಮ ಹುಟ್ಟು ಹಾಕಿದ ಜಾತಿ ಮಾತ್ರ ಅವರ ಬದುಕನ್ನು ನಿರ್ಧರಿಸುತ್ತಿದೆ, ಧರ್ಮ ಐಚ್ಛಿಕವಷ್ಟೇ. ಭಾರತೀಯ ಹಿಂದೂಗಳೆಲ್ಲರೂ ಜಾತಿಯನ್ನು ಮಾತ್ರ ಹಿಡಿದಿದ್ದಾರೆ. ಅಥವಾ ಅದೇ ಅವರನ್ನು ಬಿಟ್ಟು ಬಿಡಲಾರದಂತೆ ಹಿಡಿದಿದೆ. ಅದರಿಂದಲೇ, ಅವರ ನೋವು-ನಲಿವುಗಳಲ್ಲಿ ಅಲ್ಪ ತೃಪ್ತಿಯನ್ನು ಅನುಭವಿಸುತ್ತಿದ್ದಾರೆ. ಆಗಾಗ ಅಧಿಕಾರ, ರಾಜಕಾರಣಕ್ಕಾಗಿ ಸನಾತನ ಹಿಂದೂಗಳು, ಹಿಂದೂಗಳೆಲ್ಲರೂ ಒಂದೇ ಎಂಬ ಧರ್ಮದ ಅಪೀಮನ್ನು ಹರಡಲು ಪ್ರಯತ್ನ ಪಡುತ್ತಾ ಹೋರಾಡುತ್ತಾರೆ. ಅದಕ್ಕಾಗಿ ಆದಿ ಹಿಂದೂಗಳನ್ನು ಜಾತ್ಯಾತೀತವಾದಿಗಳು, ಧರ್ಮ ವಿರೋಧಿಗಳು ಎಂದು ಜರಿದು ಆವೇಶ ಭರಿತರಾಗುತ್ತಾರೆ. ಹಿಂದೂಗಳಿಗೆ ಪ್ರೇರಣೆ ನೀಡುತ್ತಿದ್ದೇವೆಂದು ಭ್ರಮೆಗೆ ಬೀಳುತ್ತಾರೆ. ಆದರೆ ಬಹಳಷ್ಟು ಆದಿ ಹಿಂದೂಗಳು ಮತ್ತು ಕೆಲವರಾದರೂ ಸನಾತನ ಹಿಂದೂಗಳು ಅದರ ಮೂಲ ಕೋಮುವಾದಿತನದಿಂದ ಬಿಡಿಸಿಕೊಳ್ಳಲು ನಿರ್ಧರಿಸಿ, ಅದು ಹುಟ್ಟು ಹಾಕಿದ ಜಾತಿ ಮೂಲವನ್ನು ಮರೆತು ಜಾತ್ಯಾತೀತತೆಯನ್ನು ಬೆಳೆಸಿಕೊಂಡು, ಇಂದಿನ ಅಖಂಡ ಭಾರತದ ಹಲವು, ಧರ್ಮ, ಸಂಸ್ಕೃತಿ, ಸಮುದಾಯಗಳಲ್ಲಿ ಬೆರೆತು ಮಾನವತನವನ್ನಷ್ಟೇ ಗುರುತಿಸಿಕೊಂಡು ವಿಶ್ವಮಾನವತೆಗಾಗಿ ದುಡಿಯಲು ಕಂಕಣಬದ್ಧರಾಗುತ್ತಿದ್ದಾರೆ. ಜಾತಿ, ಧರ್ಮ, ಕೋಮಿಗಿಂತಲೂ ಮಾನವ ಪ್ರೇಮ ಮುಖ್ಯವಲ್ಲವೇ. ಅದೇ ನಮ್ಮ ಗುರಿಯಾಗಬೇಕೆಂಬ ಧೋರಣೆ ಸ್ವಾಗತಾರ್ಹ. ಪ್ರಕೃತಿಯೊಡನೆ ಸ್ಪಂದಿಸಿ ಮನುಷ್ಯರಾಗುವುದು ಮುಖ್ಯವಾಗುತ್ತದೆಂಬುದು ನನ್ನ ಭಾವನೆ. ಎಲ್ಲಾ ಮನುಷ್ಯರು ಒಂದೇ, ಅವರಿಗೆ ಗೌರವ ಕೊಡಬೇಕು, ಪ್ರೀತಿ ತೋರಿಸಬೇಕು. ನಾವು ಸಹ ಅವನ್ನೆಲ್ಲಾ ಪಡೆಯಬೇಕು, ಇದರಿಂದ ಜಾತಿ, ಧರ್ಮಕ್ಕಿಂತ ಮನುಷ್ಯತ್ವ ಉಳಿಯುತ್ತದೆ. ಬುದ್ಧ, ಮಹಾವೀರ, ಬಸವಣ್ಣ, ಡಾ.ಬಿ.ಆರ್ ಅಂಬೇಡ್ಕರ್ ಅವರ ವಿಚಾರಶಕ್ತಿ ಮತ್ತು ಮಹಾಮಾನವತ್ವ, ಹಾಗೆಯೇ ಮಹಾತ್ಮ ಗಾಂಧೀಜಿಯವರ ಅಹಿಂಸೆ, ಸತ್ಯ, ಶಾಂತಿಗಳು ಜಗತ್ತನ್ನೂ ಬೆಳಗುವುದರಲ್ಲಿ ಎರಡು ಮಾತಿಲ್ಲ. ಅವು ನಮ್ಮವು ಮಾತ್ರ ಆದರೆ ‘ನಾವು ದೈವತ್ವಕ್ಕಿಂತ ಮಿಗಿಲಲ್ಲವೇ’. ನಮಗೆ ಪರಿಚಿತವಾಗಿರುವ ಹಿಂದೂ ಧರ್ಮವನ್ನು ಹಲವಾರು ಪ್ರಮುಖ ಪಥಗಳಾಗಿ ವಿಭಜಿಸಬಹುದು. ಆರು ದರ್ಶನಗಳಲ್ಲಿ ಐತಿಹಾಸಿಕ ವಿಭಜನೆಯ ಪೈಕಿ, ಕೇವಲ ಎರಡು ಪಂಥಗಳು, ವೇದಾಂತ ಮತ್ತು ರಾಜಯೋಗ ಅಸ್ತಿತ್ವದಲ್ಲಿವೆ. ವೈಷ್ಣವ ಪಂಥ, ಶೈವ ಪಂಥ, ಸ್ಮಾರ್ತ ಪಂಥ ಹಾಗೂ ಶಕ್ತಿ ಪಂಥ ಈಗಿರುವ ಹಿಂದೂ ಧರ್ಮದ ಪ್ರಮುಖ ವಿಭಾಗಗಳು. ಸಮಕಾಲೀನ ಹಿಂದೂ ಧರ್ಮವು ಪ್ರಧಾನವಾಗಿ ಏಕದೇವತಾವಾದಿಯಾಗಿದೆ, ಆದರೆ ಹಿಂದೂ ಸಂಪ್ರದಾಯವು ಸರ್ವ ದೇವತಾವಾದಿ, ಸರ್ವಬ್ರಹ್ಮವಾದಿ, ಬಹುದೇವತಾವಾದಿ, ಮತ್ತು ನಿರೀಶ್ವರವಾದಿ ಎಂದೂ ವಿವರಿಸಬಲ್ಲ ಅಂಶಗಳನ್ನು ಒಳಗೊಂಡಿದೆ. ಇತರ ಗಮನಾರ್ಹ ವೈಶಿಷ್ಟ್ಯಗಳು, ಪುನರ್ಜನ್ಮ ಹಾಗೂ ಕರ್ಮಗಳಲ್ಲಿ ನಂಬಿಕೆ, ಮತ್ತು ವೈಯಕ್ತಿಕ ಕರ್ತವ್ಯವಾದ ಧರ್ಮದಲ್ಲಿನ ನಂಬಿಕೆಯನ್ನು ಸಹ ಒಳಗೊಳ್ಳುತ್ತವೆ. ಹೆಚ್ಚಾಗಿ ಒಂದು ಸಂಕೀರ್ಣ ವಿಷಯದಲ್ಲಿನ ವಿವಿಧ ದೃಷ್ಟಿಗಳಿಗೆ ಸ್ಥಳಮಾಡಿಕೊಡುವ ಪ್ರಯತ್ನವಾಗಿ, ಮೆಕ್‌ಡ್ಯಾನಿಯಲ್ (೨೦೦೭) ಹಿಂದೂ ಧರ್ಮದ ಆರು ಜಾತಿವಾಚಕ "ಪ್ರಕಾರಗಳನ್ನು" ಗುರುತಿಸುತ್ತಾರೆ: ಕೋಮುವಾರು ಮಟ್ಟದಲ್ಲಿ ಸ್ಥಳೀಯ ಸಂಪ್ರದಾಯಗಳು ಹಾಗೂ ಸ್ಥಳೀಯ ದೇವತೆಗಳ ಪಂಥವನ್ನು ಆಧರಿಸಿದ ಮತ್ತು ಪ್ರಾಗೈತಿಹಾಸಿಕ ಅವಧಿಗೆ ಅಥವಾ ಲಿಖಿತ ವೇದಗಳಿಗಿಂತ ಮುಂಚಿನ ಕಾಲಕ್ಕೆ ವ್ಯಾಪಿಸುವ, ಜಾನಪದ ಹಿಂದೂ ಧರ್ಮ. ಸಾಂಪ್ರದಾಯಿಕ ಬ್ರಾಹ್ಮಣರಿಂದ (ಉದಾಹರಣೆಗೆ ಶ್ರೌತರು) ಇಂದೂ ಆಚರಿಸಲ್ಪಡುತ್ತಿರುವ ವೈದಿಕ ಹಿಂದೂ ಧರ್ಮ. ಉಪನಿಷತ್ತುಗಳ ತಾತ್ತ್ವಿಕ ವಿಧಾನವನ್ನು ಆಧರಿಸಿದ ವೇದಾಂತಿಕ ಹಿಂದೂ ಧರ್ಮ, ಉದಾಹರಣೆಗೆ ಅದ್ವೈತ (ಸ್ಮಾರ್ತ ಪಂಥ). ಯೋಗಿಕ ಹಿಂದೂ ಧರ್ಮ, ವಿಶೇಷವಾಗಿ ಪತಂಜಲಿಯ ಯೋಗ ಸೂತ್ರಗಳನ್ನು ಆಧರಿಸಿದ್ದು. ಕರ್ಮದ ಕಲ್ಪನೆ, ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಗಳನ್ನು ಆಧರಿಸಿದ "ಧಾರ್ಮಿಕ" ಹಿಂದೂ ಧರ್ಮ ಅಥವಾ "ದೈನಂದಿನ ಸದಾಚಾರ". ಭಕ್ತಿ, ವಿಶೇಷವಾಗಿ ವೈಷ್ಣವ ಸಂಪ್ರದಾಯದಲ್ಲಿರುವಂತೆ. ಪದದ ಅರ್ಥವಿವರಣೆಗಳು ಹಿಂದೂ ಧರ್ಮವು "ಒಂದು ಧರ್ಮಶ್ರದ್ಧೆ ಅಥವಾ ಒಂದು ಮತದ ಘೋಷಣೆಯಲ್ಲಿ ಸಂಕೇತೀಕರಿಸಲಾದ ನಂಬಿಕೆಯ ಏಕೀಕೃತ ವ್ಯವಸ್ಥೆ"ಯನ್ನು ಹೊಂದಿಲ್ಲ,</ref> ಬದಲಿಗೆ ವೈದಿಕ ಸಂಪ್ರದಾಯಗಳಲ್ಲಿ ಉತ್ಪತ್ತಿಯಾದ ಮತ್ತು ಅವುಗಳ ಮೇಲೆ ಆಧಾರಿತವಾದ ಧಾರ್ಮಿಕ ಸಂಗತಿಗಳ ಬಹುತ್ವವನ್ನು ಒಳಗೊಂಡಿರುವ ಒಂದು ಸರ್ವಾನ್ವಯ ಪದವಾಗಿದೆ. ಉತ್ಪತ್ತಿಯಲ್ಲಿ ಹಿಂದೂ ಪದವು ದೆಹಲಿ ಸಲ್ತನತ್‌ನ ಕಾಲದಿಂದ ಬಳಕೆಯಲ್ಲಿರುವ, ಭಾರತಕ್ಕೆ ಸ್ಥಳೀಯವಾದ ಯಾವುದೇ ಇಸ್ಲಾಂಯೇತರ ಸಂಪ್ರದಾಯವನ್ನು ನಿರ್ದೇಶಿಸುವ ಒಂದು ಪರ್ಶಿಯಾದ ಶಬ್ದವಾಗಿದೆ. ಹಿಂದೂ ಶಬ್ದವನ್ನು ೧೭ನೇ ಶತಮಾನದಿಂದ ಆಂಗ್ಲ ಭಾಷೆಯಲ್ಲಿ "ಭಾರತೀಯ ವಿಧರ್ಮಿ" ಎಂಬ ಅರ್ಥದಲ್ಲಿ ಬಳಸಲಾಗುತ್ತದೆ, ಆದರೆ ವಿಶ್ವ ಧರ್ಮಗಳ ಪೈಕಿ ಒಂದೆಂದು ಅರ್ಹತೆಪಡೆದು ಒಂದು ಗುರುತಿಸಬಲ್ಲ ಧಾರ್ಮಿಕ ಸಂಪ್ರದಾಯವಾಗಿ ಹಿಂದೂ ಧರ್ಮದ ಕಲ್ಪನೆ ೧೯ನೇ ಶತಮಾನದ ಅವಧಿಯಲ್ಲಿ ಮಾತ್ರ ಕಾಣಿಸಿಕೊಂಡಿತು. ನಂಬಿಕೆಗಳಲ್ಲಿನ ಭಿನ್ನತೆಗಳಿಗೆ ವಿಸ್ತಾರವಾದ ಸಹಿಷ್ಣುತೆಯ ವೈಶಿಷ್ಟ್ಯ, ಮತ್ತು ಹಿಂದೂ ಧರ್ಮದ ನಿರಂಕುಶ ಅಕೃತ್ರಿಮತೆಯು ಸಾಂಪ್ರದಾಯಿಕ ಪಾಶ್ಚಾತ್ಯ ಕಲ್ಪನೆಗಳ ಪ್ರಕಾರ ಅದನ್ನು ಒಂದು ಧರ್ಮವೆಂದು ಸೂತ್ರಿಸುವುದನ್ನು ಕಠಿಣವಾಗಿಸುತ್ತದೆ. ಅದರ ಬಹುಸಂಖ್ಯಾತ ಅನುಯಾಯಿಗಳಿಗೆ ಹಿಂದೂ ಧರ್ಮವು ಒಂದು ಸಂಪೂರ್ಣವಾಗಿ ವ್ಯವಹಾರ್ಯ ಪರಿಕಲ್ಪನೆಯಾಗಿದ್ದರೂ, ಪದದ ಒಂದು ವ್ಯಾಖ್ಯಾನಕ್ಕೆ ಬರುವಲ್ಲಿ ಹಲವರು ಸಮಸ್ಯೆಯನ್ನು ವ್ಯಕ್ತಪಡಿಸುತ್ತಾರೆ. ಮುಖ್ಯವಾಗಿ ಅದರೊಳಗೆ ಸೇರಿದ ಅಥವಾ ಅದು ಒಳಗೊಂಡಿರುವ ಸಂಪ್ರದಾಯಗಳು ಮತ್ತು ವಿಚಾರಗಳ ವಿಶಾಲವಾದ ವ್ಯಾಪ್ತಿಕ್ಷೇತ್ರದ ಕಾರಣದಿಂದ. ಕೆಲವೊಮ್ಮೆ ಒಂದು ಧರ್ಮವೆಂದು ನಿರ್ದೇಶಿಸಲಾದರೂ, ಹಿಂದೂ ಧರ್ಮವನ್ನು ಹಲವುವೇಳೆ ಒಂದು ಧಾರ್ಮಿಕ ಸಂಪ್ರದಾಯವೆಂದು ವ್ಯಾಖ್ಯಾನಿಸಲಾಗುತ್ತದೆ. ಆದ್ದರಿಂದ ಅದು ವಿಶ್ವದ ಧರ್ಮಗಳ ಪೈಕಿ ಅತ್ಯಂತ ಹಳೆಯದು ಮತ್ತು ಅತ್ಯಂತ ವೈವಿಧ್ಯವುಳ್ಳದ್ದೆಂದು ವಿವರಿಸಲಾಗುತ್ತದೆ. ಬಹುತೇಕ ಹಿಂದೂ ಪಂಥಗಳು ಧಾರ್ಮಿಕ ಅಥವಾ ಧರ್ಮ ಸಾಹಿತ್ಯದ ಒಂದು ಮಂಡಲವಾದ ವೇದಗಳನ್ನು ಪವಿತ್ರವೆಂದು ಭಾವಿಸುತ್ತವೆ, ಆದರೆ ಇದಕ್ಕೆ ಅಪವಾದಗಳಿವೆ. ನಿರ್ದಿಷ್ಟ ಧಾರ್ಮಿಕ ಸಂಸ್ಕಾರಗಳು ಮೋಕ್ಷಕ್ಕಾಗಿ ಆವಶ್ಯಕವೆಂದು ಕೆಲವು ಹಿಂದೂ ಧಾರ್ಮಿಕ ಸಂಪ್ರದಾಯಗಳು ಪರಿಗಣಿಸುತ್ತವೆ, ಆದರೆ ಈ ವಿಷಯದ ಸಂಬಂಧವಾಗಿ ವಿವಿಧ ಅಭಿಪ್ರಾಯಗಳು ಅಸ್ತಿತ್ವದಲ್ಲಿವೆ. ಕೆಲವು ಹಿಂದೂ ತತ್ತ್ವಶಾಸ್ತ್ರಗಳು ಬ್ರಹ್ಮಾಂಡದ ಸೃಷ್ಟಿ, ಪೋಷಣೆ, ಮತ್ತು ವಿನಾಶದ ಒಂದು ಆಸ್ತಿಕವಾದಿ ಸತ್ವವಿದ್ಯೆಯನ್ನು ಆಧಾರವಾಗಿ ಇಟ್ಟುಕೊಳ್ಳುತ್ತವೆ, ಆದಾಗ್ಗಿಯೂ ಕೆಲವು ಹಿಂದೂಗಳು ನಾಸ್ತಿಕರಾಗಿದ್ದಾರೆ. ಕೆಲವೊಮ್ಮೆ ಹಿಂದೂ ಧರ್ಮವನ್ನು ಕರ್ಮದ ನಿಯಮದಿಂದ ನಿರ್ಧರಿಸಲಾದ ಮರುಜನ್ಮದ (ಸಂಸಾರ) ನಂಬಿಕೆಯಿಂದ ಮತ್ತು ಮೋಕ್ಷವು ಪುನರಾವರ್ತಿಸುವ ಜನನ ಮತ್ತು ಮರಣಗಳ ಈ ಆವರ್ತದಿಂದ ಬಿಡುಗಡೆಯೆಂಬ ಕಲ್ಪನೆಯಿಂದ ನಿರೂಪಿಸಲಾಗುತ್ತದೆ. ಆದರೆ, ಬೌದ್ಧಧರ್ಮ ಮತ್ತು ಜೈನ ಧರ್ಮಗಳಂತಹ ಪ್ರದೇಶದ ಇತರ ಧರ್ಮಗಳು ಸಹ, ಹಿಂದೂ ಧರ್ಮದ ವ್ಯಾಪ್ತಿಯಲ್ಲಿರದ, ಕರ್ಮದಲ್ಲಿ ವಿಶ್ವಾಸವಿಡುತ್ತವೆ. ಹಾಗಾಗಿ, ಹಿಂದೂ ಧರ್ಮವನ್ನು ಅಸ್ತಿತ್ವದಲ್ಲಿರುವ ಎಲ್ಲ ಐತಿಹಾಸಿಕ ವಿಶ್ವಧರ್ಮಗಳ ಪೈಕಿ ಅತ್ಯಂತ ಸಂಕೀರ್ಣವಾದ ಧರ್ಮವೆಂದು ಕಾಣಲಾಗುತ್ತದೆ. ಅದರ ಸಂಕೀರ್ಣತೆಯ ಹೊರತಾಗಿಯೂ, ಹಿಂದೂ ಧರ್ಮವು ಕೇವಲ ಅಂಕೀಯವಾಗಿ ವಿಶಾಲವಾದ ಧರ್ಮವಷ್ಟೇ ಅಲ್ಲ, ಜೊತೆಗೆ ಪ್ರಾಗೈತಿಹಾಸದಲ್ಲಿ ಚಾಚಿರುವ ಬೇರುಗಳುಳ್ಳ, ಅಸ್ತಿತ್ವದಲ್ಲಿರುವ ಭೂಮಿಯ ಮೇಲಿನ ಅತ್ಯಂತ ಹಳೆಯ ಪ್ರಮುಖ ಸಂಪ್ರದಾಯವೂ ಆಗಿದೆ. ಒಬ್ಬ ಪ್ರಖ್ಯಾತ ಧರ್ಮಶಾಸ್ತ್ರಜ್ಞರೂ ಆಗಿದ್ದ ಭಾರತದ ಮೊದಲನೆಯ ಉಪ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್‌ರಿಂದ ಕೊಡಲ್ಪಟ್ಟ ಹಿಂದೂ ಧರ್ಮದ ಒಂದು ವ್ಯಾಖ್ಯಾನವು ಹಿಂದೂ ಧರ್ಮವು "ಕೇವಲ ಒಂದು ಧರ್ಮ"ವಷ್ಟೇ ಅಲ್ಲ, ಜೊತೆಗೆ ತನ್ನೊಳಗೇ ಕಾರಣ ಮತ್ತು ಅಂತರ್ದೃಷ್ಟಿಗಳ ಸಂಯೋಜನೆಗೆ ಸಂಬಂಧಿಸಿದೆ ಎಂದು ಹೇಳುತ್ತದೆ. ಹಿಂದೂ ಧರ್ಮವನ್ನು ವ್ಯಾಖ್ಯಾನಿಸಲಾಗುವುದಿಲ್ಲ. ಆದರೆ ಅದನ್ನು ಕೇವಲ ಅನುಭವಿಸುಬಹುದು ಎಂದು ರಾಧಾಕೃಷ್ಣನ್ ವಿಶದವಾಗಿ ಹೇಳುತ್ತಾರೆ. ಹಾಗೆಯೇ, ಹಿಂದೂ ಧರ್ಮವನ್ನು ಒಂದು ಸುಸ್ಪಷ್ಟ ಮತ್ತು ಕಟ್ಟುನಿಟ್ಟಿನ ಘಟಕದ ಬದಲಾಗಿ "ಅಸ್ಪಷ್ಟವಾದ ತುದಿಗಳುಳ್ಳ" ಒಂದು ವರ್ಗವಾಗಿ ನೋಡಬಹುದೆಂದು ಕೆಲವು ಪಂಡಿತರು ಸೂಚಿಸುತ್ತಾರೆ. ಧಾರ್ಮಿಕ ಅಭಿವ್ಯಕ್ತಿಗಳ ಕೆಲವು ಪ್ರಕಾರಗಳು ಹಿಂದೂ ಧರ್ಮದ ತಿರುಳಾಗಿವೆ, ಮತ್ತು ಬೇರೆಯವು ಅಷ್ಟು ಪ್ರಮುಖವಾಗಿಲ್ಲ ಆದರೂ ವರ್ಗದೊಳಗೆ ಉಳಿದಿವೆ. ಇದನ್ನು ಆಧರಿಸಿ, ಫ಼ೆರೋ-ಲೂಟ್ಸಿ ಹಿಂದೂ ಧರ್ಮದ ವ್ಯಾಖ್ಯಾನಕ್ಕೆ ಒಂದು 'ಮಾತೃಕಾ ಸಿದ್ಧಾಂತ ವಿಧಾನ'ವನ್ನು (ಪ್ರೋಟಟೈಪ್ ಥೀಯರಿ ಅಪ್ರೋಚ್) ಅಭಿವೃದ್ಧಿಗೊಳಿಸಿದ್ದಾರೆ. ವಾಸ್ತವಿಕವಾಗಿ 'ಹಿಂದೂ ಧರ್ಮ' ಪದ ಏನು ಅರ್ಥಸೂಚಿಸುತ್ತದೆ ಎಂಬ ಒಂಟಿ ವ್ಯಾಖ್ಯಾನವುಳ್ಳ ಸಮಸ್ಯೆಗಳನ್ನು ಹಲವುವೇಳೆ ಹಿಂದೂ ಧರ್ಮವು ಒಂದು ಪ್ರತ್ಯೇಕ ಅಥವಾ ಸಾಮಾನ್ಯ ಐತಿಹಾಸಿಕ ಸಂಸ್ಥಾಪಕನನ್ನು ಹೊಂದಿಲ್ಲ ಎಂಬ ವಾಸ್ತವಾಂಶಕ್ಕೆ ಆರೋಪಿಸಲಾಗುತ್ತದೆ. ಹಿಂದೂ ಧರ್ಮ, ಅಥವಾ ಕೆಲವರು ಹೇಳುವಂತೆ 'ಹಿಂದೂ ಧರ್ಮಗಳು' ಮೋಕ್ಷದ ಒಂದು ಏಕಾಂಗಿ ವ್ಯವಸ್ಥೆಯನ್ನು ಹೊಂದಿಲ್ಲ ಮತ್ತು ಪ್ರತಿ ವರ್ಗ ಅಥವಾ ಪಂಥದ ಪ್ರಕಾರ ವಿಭಿನ್ನ ಗುರಿಗಳನ್ನು ಹೊಂದಿದೆ. ವೈದಿಕ ಧರ್ಮದ ಪ್ರಕಾರಗಳನ್ನು ಹಿಂದೂ ಧರ್ಮದ ಒಂದು ವಿಕಲ್ಪವಾಗಿ ಕಾಣದೆ ಅದರ ಅತ್ಯಂತ ಮುಂಚಿನ ಪ್ರಕಾರವಾಗಿ ಕಾಣಲಾಗುತ್ತದೆ, ಮತ್ತು ಬಹಳಷ್ಟು ಪಾಶ್ಚಾತ್ಯ ವಿದ್ವತ್ ಬರಹಗಳಲ್ಲಿ ವೈದಿಕ ಧರ್ಮ, ಬ್ರಾಹ್ಮಣ ಧರ್ಮ, ಮತ್ತು ಹಿಂದೂ ಧರ್ಮಗಳ ನಡುವಣ ಕಾಣುವ ವಿಭಜನಕ್ಕೆ ಅಲ್ಪ ಸಮರ್ಥನೆಯಿದೆ. "ಧರ್ಮ"ಕ್ಕೆ ಒಂದು ಸಮಾನಾರ್ಥಕ ಪದವಾಗಿ "ಮತ" ಪದದ ನಿತ್ಯಗಟ್ಟಳೆಯ ಬಳಕೆಯ ಕಾರಣ ಹಿಂದೂ ಧರ್ಮದ ಒಂದು ವ್ಯಾಖ್ಯಾನ ಮತ್ತೂ ಜಟಿಲವಾಗಿದೆ. ಕೆಲವು ವಿದ್ವಾಂಸರು ಮತ್ತು ಹಲವಾರು ಆಚರಣಕರ್ತರು ಹಿಂದೂ ಧರ್ಮವನ್ನು ಒಂದು ಸ್ಥಳೀಯ ವ್ಯಾಖ್ಯಾನವಾದ ಶಾಶ್ವತ ಸೂತ್ರ", ಅಥವಾ "ಶಾಶ್ವತ ಕ್ರಮ"ವೆಂಬ ಅರ್ಥಸೂಚಿಸುವ ಒಂದು ಸಂಸ್ಕೃತ ಪದಗುಚ್ಛವಾದ ಸನಾತನ ಧರ್ಮ ಎಂಬ ಪದವನ್ನು ಬಳಸಿ ನಿರ್ದೇಶಿಸುತ್ತಾರೆ. ನಂಬಿಕೆಗಳು ಹಿಂದೂ ಧರ್ಮವು ಆಂಗಿಕವಾಗಿ ಅರಳಿದ ಮತ್ತು ಗಮನಾರ್ಹ ಜನಾಂಗೀಯ ಹಾಗೂ ಸಾಂಸ್ಕೃತಿಕ ವೈವಿಧ್ಯದಿಂದ ಗುರುತಿಸಬಹುದಾದ ಒಂದು ವಿಶಾಲವಾದ ಪ್ರದೇಶದಲ್ಲಿ ಹರಡಿದ ಒಂದು ಧಾರ್ಮಿಕ ಮುಖ್ಯವಾಹಿನಿಯನ್ನು ನಿರ್ದೇಶಿಸುತ್ತದೆ. ಈ ಮುಖ್ಯವಾಹಿನಿಯು ಒಳಗಿನ ನಾವೀನ್ಯದಿಂದ, ಮತ್ತು ಹಿಂದೂ ಪದರದಲ್ಲಿ ಬಾಹ್ಯ ಸಂಪ್ರದಾಯಗಳು ಅಥವಾ ಪಂಥಗಳ ಸಮ್ಮಿಲನದಿಂದ ಅರಳಿತು. ಪರಿಣಾಮವಾಗಿ, ಅಸಂಖ್ಯಾತ ಸಣ್ಣ, ಸರಳ ಪಂಥಗಳಿಂದ ಶುರುವಾಗಿ ಇಡೀ ಉಪಖಂಡದಾದ್ಯಂತ ಹರಡಿರುವ ಲಕ್ಷಾಂತರ ಅನುಯಾಯಿಗಳಿರುವ ಪ್ರಮುಖ ಧಾರ್ಮಿಕ ಚಳವಳಿಗಳವರೆಗೆ ವ್ಯಾಪಿಸುವ ಧಾರ್ಮಿಕ ಸಂಪ್ರದಾಯಗಳ ಅಗಾಧವಾದ ವೈವಿಧ್ಯ ಉಂಟಾಗಿದೆ. ಪರಿಣಾಮವಾಗಿ, ಬೌದ್ಧಧರ್ಮ ಅಥವಾ ಜೈನ ಧರ್ಮದಿಂದ ಪ್ರತ್ಯೇಕವಾದ ಒಂದು ಸ್ವತಂತ್ರ ಧರ್ಮವಾಗಿ ಹಿಂದೂ ಧರ್ಮದ ಗುರುತಿಸುವಿಕೆಯು ಅದು ಸ್ವತಂತ್ರವಾಗಿದೆ ಎಂಬ ಅದರ ಅನುಯಾಯಿಗಳ ದೃಢೀಕರಣದ ಮೇಲೆ ಅವಲಂಬಿಸಿದೆ. ಹಿಂದೂ ನಂಬಿಕೆಗಳಲ್ಲಿನ ಗಮನ ಸೆಳೆಯುವ ಸಂಗತಿಗಳು, ಧರ್ಮ (ನೀತಿ ತತ್ವಗಳು/ಕರ್ತವ್ಯಗಳು), ಸಂಸಾರ (ಜನನ, ಬದುಕು, ಮರಣ ಮತ್ತು ಹೊಸಹುಟ್ಟಿನ ಮುಂದುವರಿಯುವ ಆವರ್ತ), ಕರ್ಮ (ಕ್ರಿಯೆ ಮತ್ತು ಅನಂತರದ ಪ್ರತಿಕ್ರಿಯೆ), ಮೋಕ್ಷ (ಸಂಸಾರದಿಂದ ಬಂಧವಿಮುಕ್ತಿ), ಮತ್ತು ವಿವಿಧ ಯೋಗಗಳನ್ನು (ಪಥಗಳು ಅಥವಾ ಆಚರಣೆಗಳು) ಒಳಗೊಂಡಿವೆ (ಆದರೆ ಇಷ್ಟಕ್ಕೇ ಸೀಮಿತವಲ್ಲ). ದೇವರ ಪರಿಕಲ್ಪನೆ ಹಿಂದೂ ಧರ್ಮವು ಏಕದೇವತಾವಾದ, ಬಹುದೇವತಾವಾದ, ಸರ್ವ ದೇವತಾವಾದ, ಸರ್ವಬ್ರಹ್ಮವಾದ, ಅದ್ವೈತವಾದ, ಮತ್ತು ನಿರೀಶ್ವರವಾದಗಳಿಗೆ ವ್ಯಾಪಿಸುವ ನಂಬಿಕೆಗಳುಳ್ಳ ಕಲ್ಪನೆಯ ಒಂದು ತರಹೇವಾರಿ ಮಂಡಲವಾಗಿದೆ. ಅದರ ದೇವರ ಪರಿಕಲ್ಪನೆಯು ಸಂಕೀರ್ಣವಾಗಿದೆ ಮತ್ತು ಪ್ರತಿಯೊಂದು ನಿರ್ದಿಷ್ಟ ಸಂಪ್ರದಾಯ ಹಾಗೂ ಜೀವನಕ್ರಮದ ಮೇಲೆ ಅವಲಂಬಿಸಿದೆ. ಅದು ಕೆಲವೊಮ್ಮೆ ಏಕದೇವೋಪಾಸಕವೆಂದು (ಅಂದರೆ, ಒಬ್ಬ ಪ್ರತ್ಯೇಕ ದೇವರಿಗೆ ಧರ್ಮನಿಷ್ಠೆಯನ್ನು ಒಳಗೊಂಡಿರುವ ಆದರೆ ಬೇರೆ ದೇವತೆಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುವ) ನಿರ್ದೇಶಿಸಲ್ಪಡುತ್ತದೆ, ಆದರೆ ಅಂತಹ ಯಾವುದೇ ಪದವು ಅತಿಸಾಮಾನ್ಯೀಕರಣವಾಗಿದೆ. and </ref> ಪ್ರತಿಯೊಬ್ಬ ಮನುಷ್ಯನ ನಿಜವಾದ "ತಾನು" ಆಗಿರುವ ಆತ್ಮ ಅಥವಾ ಚೇತನವು ಚಿರಂತನವಾದದ್ದೆಂದು ಬಹುತೇಕ ಹಿಂದೂಗಳು ನಂಬುತ್ತಾರೆ. ಹಿಂದೂ ಧರ್ಮದ (ಅದ್ವೈತದಂತಹ ಪಂಥ) ಅದ್ವೈತವಾದಿ/ಸರ್ವಬ್ರಹ್ಮವಾದಿ ಧರ್ಮಶಾಸ್ತ್ರಗಳ ಪ್ರಕಾರ, ಈ ಆತ್ಮವು ಮೂಲಭೂತವಾಗಿ ಪರಮಪ್ರಧಾನ ಚೇತನವಾದ ಬ್ರಹ್ಮದಿಂದ ಬೇರೆಯಲ್ಲ. ಆದ್ದರಿಂದ, ಈ ಪಂಥಗಳನ್ನು ಅದ್ವೈತವಾದಿಯೆಂದು ಕರೆಯಲಾಗುತ್ತದೆ. ಅದ್ವೈತ ಪಂಥದ ಪ್ರಕಾರ, ಒಬ್ಬರ ಆತ್ಮವು ಪರಮಪ್ರಧಾನ ಚೇತನವಾದ ಬ್ರಹ್ಮಕ್ಕೆ ಸರ್ವಾಂಗಸಮವಾಗಿದೆಯೆಂದು ಅರಿತುಕೊಳ್ಳುವುದು ಜೀವನದ ಗುರಿಯಾಗಿದೆ. ಆತ್ಮವು ಒಬ್ಬರ ಸ್ವಂತ ವ್ಯಕ್ತಿತ್ವದ ಅಂತರಾಳದ ತಿರುಳೆಂದು ಯಾರು ಸಂಪೂರ್ಣವಾಗಿ ಅರಿಯುತ್ತಾರೋ ಅವರು ಬ್ರಹ್ಮದೊಂದಿಗೆ ಒಂದು ಅನನ್ಯತೆಯನ್ನು ಅರಿಯುತ್ತಾರೆ. ಅದರಿಂದಾಗಿ ಮೋಕ್ಷವನ್ನು (ಬಂಧವಿಮುಕ್ತಿ ಅಥವಾ ಸ್ವಾತಂತ್ರ್ಯ) ತಲಪುತ್ತಾರೆಂದು ಉಪನಿಷತ್ತುಗಳು ಹೇಳುತ್ತವೆ. ದ್ವೈತವಾದಿ ಪಂಥಗಳು (ದ್ವೈತ ಮತ್ತು ಭಕ್ತಿ ನೋಡಿ) ಬ್ರಹ್ಮವು ವ್ಯಕ್ತಿತ್ವವನ್ನು ಹೊಂದಿರುವ ಒಬ್ಬ ಪರಮಶಕ್ತ ವ್ಯಕ್ತಿಯೆಂದು ಭಾವಿಸುತ್ತವೆ, ಮತ್ತು ಹಾಗಾಗಿ ಅವು, ಪಂಥವನ್ನು ಅವಲಂಬಿಸಿ, ಅವನನ್ನು ಅಥವಾ ಅವಳನ್ನು ವಿಷ್ಣು, ಬ್ರಹ್ಮ, ಶಿವ, ಅಥವಾ ಶಕ್ತಿಯ ರೂಪದಲ್ಲಿ ಆರಾಧಿಸುತ್ತವೆ. ಆತ್ಮವು ದೇವರನ್ನು ಅವಲಂಬಿಸಿದೆ. ಮೋಕ್ಷವು ದೇವರ ಪ್ರತಿ ಪ್ರೀತಿ ಮತ್ತು ದೇವರ ಅನುಗ್ರಹವನ್ನು ಅವಲಂಬಿಸಿದೆ. ದೇವರನ್ನು (ಅನಂತ ಮೂಲತತ್ವವೆಂದು ನೋಡುವ ಬದಲು) ಪರಮಶಕ್ತ ಸಶರೀರ ವ್ಯಕ್ತಿಯಾಗಿ ನೋಡಲಾದಾಗ, ದೇವರನ್ನು ಈಶ್ವರ ("ಪ್ರಭು"), ಭಗವಂತ ("ಮಂಗಳಕರ ನಾದವನು") ಅಥವಾ ಪರಮೇಶ್ವರನೆಂದು ("ಪರಮಶಕ್ತ ಪ್ರಭು") ಕರೆಯಲಾಗುತ್ತದೆ. ಆದರೆ ಈಶ್ವರ ಪದದ ಅರ್ಥವಿವರಣೆಗಳು, ಮೀಮಾಂಸಕರಿಂದ ಈಶ್ವರನಲ್ಲಿ ನಂಬಿಕೆಯಿಲ್ಲದಿರುವುದರಿಂದ ಅದ್ವೈತದಲ್ಲಿರುವಂತೆ ಬ್ರಹ್ಮ ಮತ್ತು ಈಶ್ವರ ಒಂದೇ ಎಂದು ಗುರುತಿಸಿಕೊಳ್ಳುವುದರವರೆಗೆ ವ್ಯಾಪಿಸಿ, ಬದಲಾಗುತ್ತವೆ. ವೈಷ್ಣವ ಪಂಥದ ಬಹಳಷ್ಟು ಸಂಪ್ರದಾಯಗಳಲ್ಲಿ ಅವನು ವಿಷ್ಣುವಾಗಿದ್ದಾನೆ. ವೈಷ್ಣವ ಪವಿತ್ರಗ್ರಂಥಗಳ ಪಠ್ಯಗಳಲ್ಲಿ ಈ ಜೀವಿಯನ್ನು, ಕೆಲವೊಮ್ಮೆ ಸ್ವಯಂ ಭಗವಾನ್ ಎಂದು ಉಲ್ಲೇಖಿಸಲಾದ, ಕೃಷ್ಣನೆಂದು ಗುರುತಿಸಲಾಗುತ್ತದೆ. ನಿರೀಶ್ವರವಾದಿ ಓಲಿಕೆಗಳನ್ನು ಹೊಂದಿರುವ ಸಾಂಖ್ಯದಂತಹ ಪಂಥಗಳೂ ಇವೆ.ದರ್ಶನಶಾಸ್ತ್ರ ಗಳು ಮುಖ್ಯವಾಗಿವೆ. ದೇವತೆಗಳು ಮತ್ತು ಅವತಾರಗಳು ಹಿಂದೂ ಧರ್ಮಗ್ರಂಥಗಳು ದೇವ (ಅಥವಾ ಸ್ತ್ರೀ ರೂಪದಲ್ಲಿ ದೇವಿ) ("ತೇಜಸ್ವಿಯಾಗಿರುವವರು") ಎಂದು ಕರೆಯಲಾದ ಅಲೌಕಿಕ ಅಸ್ತಿತ್ವಗಳನ್ನು ಉಲ್ಲೇಖಿಸುತ್ತವೆ. ದೇವತೆಗಳು ಹಿಂದೂ ಸಂಸ್ಕೃತಿಯ ಒಂದು ಅಖಂಡ ಭಾಗವಾಗಿದ್ದಾರೆ ಮತ್ತು ಕಲೆ, ವಾಸ್ತುಶಿಲ್ಪ, ಮತ್ತು ಮೂರ್ತಿಗಳ ಮೂಲಕ ಚಿತ್ರಿಸಲ್ಪಟ್ಟಿದ್ದಾರೆ, ಮತ್ತು ಅವರ ಬಗ್ಗೆ ಪೌರಾಣಿಕ ಕಥೆಗಳನ್ನು ಧರ್ಮಗ್ರಂಥಗಳಲ್ಲಿ ನಿರೂಪಿಸಲಾಗಿದೆ, ವಿಶೇಷವಾಗಿ ಭಾರತೀಯ ಮಹಾಕಾವ್ಯ ಮತ್ತು ಪುರಾಣಗಳಲ್ಲಿ. ಆದರೆ, ಹಲವುವೇಳೆ ಅವರನ್ನು, ಪರಮಶಕ್ತ ಸಶರೀರ ದೇವರಾದ ಈಶ್ವರನಿಂದ ಭಿನ್ನವಾಗಿ ನೋಡಲಾಗಿದೆ. ಹಲವಾರು ಹಿಂದೂಗಳು ಒಂದು ನಿರ್ದಿಷ್ಟ ರೂಪದಲ್ಲಿ ಈಶ್ವರನನ್ನು ತಮ್ಮ ಇಷ್ಟ ದೇವತೆಯಾಗಿ ಆರಾಧಿಸುತ್ತಾರೆ. ಆಯ್ಕೆಯು ವೈಯಕ್ತಿಕ ಒಲವು, ಮತ್ತು ಪ್ರಾದೇಶಿಕ ಹಾಗೂ ಮನೆತನದ ಸಂಪ್ರದಾಯಗಳ ವಿಷಯವಾಗಿದೆ. ಹಿಂದೂ ಮಹಾಕಾವ್ಯಗಳು ಮತ್ತು ಪುರಾಣಗಳು ಸಮಾಜದಲ್ಲಿ ಧರ್ಮವನ್ನು ಪುನಃ ಸ್ಥಾಪಿಸಲು ಹಾಗೂ ಮಾನವರಿಗೆ ಮೋಕ್ಷಕ್ಕೆ ದಾರಿ ತೋರಿಸಲು ದೈಹಿಕ ರೂಪದಲ್ಲಿ ಭೂಮಿಗೆ ದೇವರ ಅವರೋಹಣದ ಹಲವಾರು ಉಪಾಖ್ಯಾನಗಳನ್ನು ನಿರೂಪಿಸುತ್ತವೆ. ಅಂತಹ ಒಂದು ಮೂರ್ತರೂಪಕ್ಕೆ ಅವತಾರವೆಂದು ಕರೆಯಲಾಗುತ್ತದೆ. ಅತ್ಯಂತ ಪ್ರಸಿದ್ಧ ಅವತಾರಗಳು ವಿಷ್ಣುವಿನವು ಮತ್ತು ರಾಮ (ರಾಮಾಯಣದ ನಾಯಕ) ಹಾಗೂ ಕೃಷ್ಣರನ್ನು (ಮಹಾಭಾರತ ಮಹಾಕಾವ್ಯದಲ್ಲಿ ಒಬ್ಬ ಪ್ರಮುಖ ವ್ಯಕ್ತಿ) ಒಳಗೊಳ್ಳುತ್ತವೆ. ಕರ್ಮ ಮತ್ತು ಸಂಸಾರ ಕರ್ಮ ಎಂದರೆ ಅಕ್ಷರಶಃ ಕ್ರಿಯೆ, ಕೆಲಸ, ಅಥವಾ ಕಾರ್ಯ, ಮತ್ತು ಇದನ್ನು "ಕಾರಣ ಮತ್ತು ಫಲದ ನೈತಿಕ ನಿಯಮ"ವೆಂದು ವಿವರಿಸಬಹುದು. ಉಪನಿಷತ್ತುಗಳ ಪ್ರಕಾರ, ಜೀವಾತ್ಮನೆಂದು ಕರೆಯಲ್ಪಡುವ ಒಬ್ಬ ವ್ಯಕ್ತಿಯು ಶಾರೀರಿಕ ಅಥವಾ ಮಾನಸಿಕ ಕ್ರಿಯೆಗಳಿಂದ ಸಂಸ್ಕಾರಗಳನ್ನು ವಿಕಸಿಸಿಕೊಳ್ಳುತ್ತಾನೆ. ಭೌತಿಕ ಶರೀರಕ್ಕಿಂತ ಹೆಚ್ಚು ಗೂಢ ಆದರೆ ಅತ್ಮಕ್ಕಿಂತ ಕಡಿಮೆ ಗೂಢ ಶರೀರವಾದ ಲಿಂಗಶರೀರವು ಭಾವನೆಗಳನ್ನು ಉಳಿಸಿಕೊಂಡು ಮುಂದಿನ ಜನ್ಮಕ್ಕೆ ಅವುಗಳನ್ನು ಹೊತ್ತೊಯ್ಯುತ್ತದೆ ಮತ್ತು ವ್ಯಕ್ತಿಗಾಗಿ ಒಂದು ಅದ್ವಿತೀಯ ಪಥವನ್ನು ಸ್ಥಾಪಿಸುತ್ತದೆ. ಈ ಪ್ರಕಾರವಾಗಿ, ಒಂದು ವಿಶ್ವವ್ಯಾಪಿ, ನಿಷ್ಪಕ್ಷಪಾತ, ಮತ್ತು ಎಂದಿಗೂ ವಿಫಲಗೊಳ್ಳದ ಕರ್ಮದ ಪರಿಕಲ್ಪನೆಯು ಸಹಜವಾಗಿ ಪುನರವತಾರ ಮತ್ತು ಒಬ್ಬರ ವ್ಯಕ್ತಿತ್ವ, ಲಕ್ಷಣಗಳು, ಹಾಗೂ ಕುಟುಂಬವನ್ನು ವಿವರಿಸುತ್ತದೆ. ಕರ್ಮವು ಇಚ್ಛಾ ಸ್ವಾತಂತ್ರ್ಯ ಮತ್ತು ದೈವದ ಕಲ್ಪನೆಗಳನ್ನು ಒಟ್ಟಾಗಿ ಬಂಧಿಸುತ್ತದೆ. ಕ್ರಿಯೆ, ಪ್ರತಿಕ್ರಿಯೆ, ಜನನ, ಮರಣ ಹಾಗೂ ಪುನರ್ಜನ್ಮದ ಈ ಚಕ್ರವು ಸಂಸಾರವೆಂದು ಕರೆಯಲಾಗುವ ಒಂದು ನಿರಂತತೆಯಾಗಿದೆ. ಪುನರವತಾರ ಮತ್ತು ಕರ್ಮದ ಕಲ್ಪನೆಯು ಹಿಂದೂ ಚಿಂತನೆಯಲ್ಲಿ ಒಂದು ಪ್ರಭಾವಿ ಆಧಾರವಾಕ್ಯವಾಗಿದೆ.ಎಂದು ಭಗವದ್ಗೀತೆಯು ಹೇಳುತ್ತದೆ. ಸಂಸಾರವು ಕ್ಷಣಿಕ ಸಂತೋಷಗಳನ್ನು ಒದಗಿಸುತ್ತದೆ, ಮತ್ತು ಹಾಗಾಗಿ ಒಂದು ನಾಶವಾಗುವ ಶರೀರದ ಸಂತೋಷಗಳನ್ನು ಭೋಗಿಸಲು ಪುನರ್ಜನ್ಮವನ್ನು ಬಯಸುವಂತೆ ಜನರನ್ನು ಪ್ರೇರಿಸುತ್ತದೆ. ಆದರೆ, ಮೋಕ್ಷದ ಮೂಲಕ ಸಂಸಾರದ ಪ್ರಪಂಚದಿಂದ ಬಿಡುಗಡೆ ಹೊಂದುವುದು ಶಾಶ್ವತ ಸುಖ ಮತ್ತು ನೆಮ್ಮದಿಯನ್ನು ನಿಶ್ಚಿತಗೊಳಿಸುತ್ತದೆಂದು ನಂಬಲಾಗಿದೆ. ಹಲವಾರು ಮರುಜನ್ಮಗಳ ಬಳಿಕ, ಒಂದು ಆತ್ಮವು ಅಂತಿಮವಾಗಿ ಬ್ರಹ್ಮಾಂಡದ ಚೇತನದೊಂದಿಗೆ (ಬ್ರಹ್ಮ/ಪರಮಾತ್ಮ) ಏಕತೆಯನ್ನು ಅರಸುತ್ತದೆಂದು ಭಾವಿಸಲಾಗಿದೆ. ಮೋಕ್ಷ, ನಿರ್ವಾಣ ಅಥವಾ ಸಮಾಧಿಯೆಂದು ನಿರ್ದೇಶಿಸಲಾದ ಜೀವನದ ಅಂತಿಮ ಗುರಿಯನ್ನು ಹಲವು ವಿಭಿನ್ನ ರೀತಿಗಳಲ್ಲಿ ಅರ್ಥಮಾಡಿಕೊಳ್ಳಲಾಗುತ್ತದೆ: ದೇವರೊಂದಿಗೆ ಒಬ್ಬರ ಸಂಯೋಜನೆಯ ಸಾಕ್ಷಾತ್ಕಾರ; ದೇವರೊಂದಿಗೆ ಒಬ್ಬರ ಚಿರಂತನವಾದ ಸಂಬಂಧದ ಸಾಕ್ಷಾತ್ಕಾರ; ಎಲ್ಲ ಅಸ್ತಿತ್ವದ ಐಕಮತ್ಯದ ಸಾಕ್ಷಾತ್ಕಾರ; ಸಂಪೂರ್ಣ ನಿಸ್ವಾರ್ಥತೆ ಮತ್ತು ಆತ್ಮಜ್ಞಾನ; ಪರಿಪೂರ್ಣ ಮಾನಸಿಕ ಶಾಂತಿಯ ಸಿದ್ಧಿ; ಮತ್ತು ಪ್ರಾಪಂಚಿಕ ಕಾಮನೆಗಳಿಂದ ನಿರ್ಲಿಪ್ತತೆ. ಅಂತಹ ಸಾಕ್ಷಾತ್ಕಾರವು ಒಬ್ಬರನ್ನು ಸಂಸಾರದಿಂದ ವಿಮುಕ್ತಗೊಳಿಸುತ್ತದೆ ಮತ್ತು ಪುನರ್ಜನ್ಮದ ಆವೃತ್ತವನ್ನು ಕೊನೆಗೊಳಿಸುತ್ತದೆ. ಮೋಕ್ಷದ ಕರಾರುವಾಕ್ಕಾದ ಪರಿಕಲ್ಪನೆಯು ವಿವಿಧ ಹಿಂದೂ ತತ್ವ ಸಿದ್ಧಾಂತಗಳ ನಡುವೆ ಭಿನ್ನವಾಗಿದೆ. ಉದಾಹರಣೆಗೆ, ಮೋಕ್ಷಪ್ರಾಪ್ತಿಯ ನಂತರ ಆತ್ಮವು ತನ್ನನ್ನು ಒಬ್ಬ ವ್ಯಕ್ತಿಯೊಂದಿಗೆ ಗುರುತಿಸದೆ ಎಲ್ಲ ವಿಷಯಗಳಲ್ಲೂ ಬ್ರಹ್ಮದೊಂದಿಗೆ ಸಮಾನವೆಂದು ಗುರುತಿಸುತ್ತದೆಂದು ಅದ್ವೈತ ವೇದಾಂತವು ಅಭಿಪ್ರಾಯಪಡುತ್ತದೆ. ದ್ವೈತ ಪಂಥದ ಅನುಯಾಯಿಗಳು ತಮ್ಮನ್ನು ಬ್ರಹ್ಮದ ಭಾಗವೆಂದು ಗುರುತಿಸಿಕೊಳ್ಳುತ್ತಾರೆ, ಮತ್ತು ಮೋಕ್ಷಪ್ರಾಪ್ತಿಯ ನಂತರ ತಾವು ಆಯ್ದುಕೊಂಡ ರೂಪದ ಈಶ್ವರನ ಸಂಗಡ ಚಿರಕಾಲವನ್ನು ಸ್ವರ್ಗದಲ್ಲಿ ಕಳೆಯುವರೆಂದು ನಿರೀಕ್ಷಿಸುತ್ತಾರೆ. ಹಾಗಾಗಿ, ದ್ವೈತ ಪಂಥದ ಅನುಯಾಯಿಗಳು "ಸಕ್ಕರೆಯನ್ನು ಸವಿಯಲು" ಅಪೇಕ್ಷಿಸಿದರೆ ಅದ್ವೈತ ಪಂಥದ ಅನುಯಾಯಿಗಳು "ಸಕ್ಕರೆಯಾಗಲು" ಅಪೇಕ್ಷಿಸುತ್ತಾರೆಂದು ಹೇಳಲಾಗುತ್ತದೆ. ಮನುಷ್ಯ ಜನ್ಮದ ಉದ್ದೇಶಗಳು ಸಂಪ್ರದಾಯಬದ್ಧ ಹಿಂದೂ ಚಿಂತನೆಯು ಪುರುಷಾರ್ಥಗಳೆಂದು ಪರಿಚಿತವಾದ ಮುಂದೆ ಹೇಳಲಾದ ಮನುಷ್ಯ ಜನ್ಮದ ಉದ್ದೇಶಗಳನ್ನು ಒಪ್ಪಿಕೊಳ್ಳುತ್ತದೆ: ಧರ್ಮ "ಧರ್ಮಿಷ್ಠತೆ, ನೀತಿಶಾಸ್ತ್ರ;" ಅರ್ಥ "ಜೀವನಾಧಾರ, ಸಂಪತ್ತು;" ಕಾಮ "ಇಂದ್ರಿಯಾಪೇಕ್ಷೆಗಳು;" ಮೋಕ್ಷ "(ಸಂಸಾರದಿಂದ) ಬಂಧವಿಮುಕ್ತಿ, ಬಿಡುಗಡೆ". ಯೋಗ ಯಾವುದೇ ವಿಧಾನದಲ್ಲಿ ಒಬ್ಬ ಹಿಂದೂವು ಜೀವನದ ಗುರಿಯನ್ನು ಗೊತ್ತುಪಡಿಸಿದರೂ, ಆ ಗುರಿಯನ್ನು ತಲುಪಲು ಋಷಿಗಳು ಹೇಳಿಕೊಟ್ಟ ಹಲವಾರು ವಿಧಾನಗಳಿವೆ (ಯೋಗಗಳು). ಯೋಗಕ್ಕೆ ಮುಡುಪಾಗಿಡಲಾದ ಪಠ್ಯಗಳು, ಭಗವದ್ಗೀತೆ, ಯೋಗ ಸೂತ್ರಗಳು, ಹಠ ಯೋಗ ಪ್ರದೀಪಿಕಾ, ಮತ್ತು ಅವುಗಳ ತಾತ್ವಿಕ ಹಾಗೂ ಐತಿಹಾಸಿಕ ಆಧಾರವಾಗಿ ಉಪನಿಷತ್ತುಗಳನ್ನು ಒಳಗೊಂಡಿವೆ. ಜೀವನದ ಆಧ್ಯಾತ್ಮಿಕ ಗುರಿಯನ್ನು (ಮೋಕ್ಷ, ಸಮಾಧಿ ಅಥವಾ ನಿರ್ವಾಣ) ಸಾಧಿಸಲು ಒಬ್ಬರು ಅನುಸರಿಸಬಹುದಾದ ದಾರಿಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ: ಭಕ್ತಿಯೋಗ (ಪ್ರೀತಿ ಮತ್ತು ಭಕ್ತಿಯ ಮಾರ್ಗ) ಕರ್ಮಯೋಗ (ನ್ಯಾಯವಾದ ಕ್ರಿಯೆಯ ಮಾರ್ಗ) ರಾಜಯೋಗ (ಧ್ಯಾನದ ಮಾರ್ಗ) ಜ್ಞಾನಯೋಗ (ವಿವೇಕದ ಮಾರ್ಗ) ತನ್ನ ಒಲವು ಮತ್ತು ವಿವೇಚನೆಯ ಪ್ರಕಾರ ಒಬ್ಬ ವ್ಯಕ್ತಿಯು ಬೇರೆಯವುಗಳ ಬದಲು ಒಂದು ಅಥವಾ ಕೆಲವು ಯೋಗಗಳನ್ನು ಆರಿಸಿಕೊಳ್ಳಬಹುದು. ಈಗ ವಿಶ್ವವು ಕಲಿಯುಗದಲ್ಲಿರುವುದರಿಂದ (ಯುಗ ಆವರ್ತದ ಭಾಗವಾದ ನಾಲ್ಕು ಯುಗಗಳ ಪೈಕಿ ಒಂದು) ತಮ್ಮ ನಂಬಿಕೆಯನ್ನು ಆಧರಿಸಿ, ಬಹುತೇಕ ಜನರಿಗೆ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಸಾಧಿಸಲು ಭಕ್ತಿಯು ಏಕೈಕ ವ್ಯಾವಹಾರಿಕವಾದ ಮಾರ್ಗವೆಂದು ಕೆಲವು ಭಕ್ತಿ ಪಂಥಗಳು ಬೋಧಿಸುತ್ತವೆ. ಒಂದು ಯೋಗದ ಆಚರಣೆಯು ಬೇರೆಯವುಗಳನ್ನು ವರ್ಜಿಸುವುದಿಲ್ಲ. ವಿವಿಧ ಯೋಗಗಳು ಇತರ ಯೋಗಗಳಲ್ಲಿ ಸಹಜವಾಗಿ ಬೆರೆಯುತ್ತವೆ ಮತ್ತು ಇತರ ಯೋಗಗಳಿಗೆ ನೆರವಾಗುತ್ತವೆಂದು ಹಲವು ಪಂಥಗಳು ನಂಬುತ್ತವೆ. ಉದಾಹರಣೆಗೆ, ಜ್ಞಾನಯೋಗದ ಆಚರಣೆಯು ಸ್ವಾಭಾವಿಕವಾಗಿ ಪರಿಶುದ್ಧ ಪ್ರೇಮದೆಡೆಗೆ (ಭಕ್ತಿಯೋಗದ ಗುರಿ) ಕರೆದೊಯ್ಯುತ್ತದೆಂದು, ಮತ್ತು ವಿಪರ್ಯಯವಾಗಿ ಭಕ್ತಿಯೋಗದ ಆಚರಣೆ ಜ್ಞಾನಯೋಗದೆಡೆಗೆ ಕರೆದೊಯ್ಯುತ್ತದೆಂದು ಭಾವಿಸಲಾಗಿದೆ. (ರಾಜಯೋಗದಲ್ಲಿರುವಂತೆ) ಗಹನವಾದ ಧ್ಯಾನವನ್ನು ಅಭ್ಯಾಸ ಮಾಡುವ ಯಾರಾದರೂ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗಗಳ ಪ್ರಮುಖವಾದ ಮೂಲತತ್ವಗಳನ್ನು ಮೈದಾಳಿಸಿಕೊಂಡಿರಲೇಬೇಕು.</ref> ಆಚರಣೆಗಳು ಹಿಂದೂ ಆಚರಣೆಗಳು ಸಾಮಾನ್ಯವಾಗಿ ದೇವರ ಅರಿವನ್ನು ಅರಸುವ ಮತ್ತು ಕೆಲವೊಮ್ಮೆ ದೇವತೆಗಳಿಂದ ಆಶೀರ್ವಾದಗಳನ್ನು ಬೇಡುವುದನ್ನು ಸಹ ಒಳಗೊಂಡಿರುತ್ತವೆ. ಹಾಗಾಗಿ, ಹಿಂದೂ ಧರ್ಮವು ದಿನನಿತ್ಯದ ಜೀವನದ ನಡುವೆಯೂ ಒಬ್ಬರಿಗೆ ದೈವತ್ವದ ಬಗ್ಗೆ ಚಿಂತಿಸಲು ನೆರವಾಗುವ ಉದ್ದೇಶದಿಂದ ಅನೇಕ ಆಚರಣೆಗಳನ್ನು ವೃದ್ಧಿಪಡಿಸಿದೆ. ಹಿಂದೂಗಳು, ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ, ಪೂಜೆಯಲ್ಲಿ (ಆರಾಧನೆ ಅಥವಾ ಗೌರವ) ಭಾಗವಹಿಸಬಹುದು. ಮನೆಯಲ್ಲಿ, ಹಿಂದೂಗಳು ಹಲವುವೇಳೆ ತಮ್ಮ ಇಷ್ಟದೇವತೆಗಳಿಗೆ ಸಮರ್ಪಿತವಾದ ಮೂರ್ತಿಗಳಿರುವ ಒಂದು ದೇವರಮನೆಯನ್ನು ನಿರ್ಮಿಸುತ್ತಾರೆ. ದೇವಸ್ಥಾನಗಳು ಸಾಮಾನ್ಯವಾಗಿ ಒಬ್ಬ ಮುಖ್ಯ ದೇವತೆಗೆ, ಜೊತೆಗೆ ಸಂಬಂಧಿತ ಅಪ್ರಧಾನ ದೇವತೆಗಳಿಗೆ, ಸಮರ್ಪಿತವಾಗಿರುತ್ತವೆಯಾದರೂ ಕೆಲವು ದೇವಸ್ಥಾನಗಳು ಅನೇಕ ದೇವತೆಗಳನ್ನು ಹೊಂದಿರುತ್ತವೆ. ದೇವಸ್ಥಾನಗಳಿಗೆ ಭೇಟಿ ನೀಡುವುದು ಅನಿವಾರ್ಯವಲ್ಲ, ಮತ್ತು ಹಲವರು ಧಾರ್ಮಿಕ ಹಬ್ಬಗಳ ಅವಧಿಯಲ್ಲಿ ಮಾತ್ರ ದೇವಸ್ಥಾನಗಳಿಗೆ ಭೇಟಿಕೊಡುತ್ತಾರೆ. ಹಿಂದೂಗಳು ತಮ್ಮ ಪೂಜೆಯನ್ನು ಮೂರ್ತಿಗಳ ಮೂಲಕ ಮಾಡುತ್ತಾರೆ. ಮೂರ್ತಿಯು ಆರಾಧಕ ಮತ್ತು ದೇವರ ನಡುವೆ ಒಂದು ಪ್ರತ್ಯಕ್ಷ ಸಂಪರ್ಕವಾಗಿ ಕೆಲಸಮಾಡುತ್ತದೆ. ದೇವರು ಸರ್ವಾಂತರ್ಯಾಮಿಯಾಗಿರುವುದರಿಂದ ಮೂರ್ತಿಯನ್ನು ಹಲವುವೇಳೆ ದೇವರ ಅಭಿವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ. ಮೂರ್ತಿಯನ್ನು ಬರಿಯ ಕಲ್ಲು ಅಥವಾ ಕಟ್ಟಿಗೆಯಾಗಿ ಭಾವಿಸದೇ ದೈವತ್ವದ ಪ್ರಕಟವಾದ ರೂಪವಾಗಿ ಭಾವಿಸಬೇಕೆಂದು ಪದ್ಮ ಪುರಾಣವು ಹೇಳುತ್ತದೆ. ಆರ್ಯ ಸಮಾಜದಂತಹ ಕೆಲವು ಹಿಂದೂ ಪಂಥಗಳು ಮೂರ್ತಿಗಳ ಮೂಲಕ ದೇವರನ್ನು ಪೂಜಿಸುವುದನ್ನು ನಂಬುವುದಿಲ್ಲ. ಹಿಂದೂ ಧರ್ಮವು ಕಲೆ, ವಾಸ್ತುಶಾಸ್ತ್ರ, ಸಾಹಿತ್ಯ ಮತ್ತು ಪೂಜೆಯಲ್ಲಿ ಧಾರ್ಮಿಕವನ್ನು ಚಿತ್ರಿಸಲು ಸಂಕೇತ ಸಮೂಹ ಮತ್ತು ವಿಗ್ರಹ ನಿರ್ಮಾಣಶಾಸ್ತ್ರದ ವಿಕಸಿತ ವ್ಯವಸ್ಥೆಯನ್ನು ಹೊಂದಿದೆ. ಈ ಸಂಕೇತಗಳು ತಮ್ಮ ಅಂತರಾರ್ಥವನ್ನು ಧರ್ಮಗ್ರಂಥಗಳು, ಪುರಾಣ ಸಂಗ್ರಹಗಳು, ಅಥವಾ ಸಾಂಸ್ಕೃತಿಕ ಸಂಪ್ರದಾಯಗಳಿಂದ ಪಡೆಯುತ್ತವೆ. (ಪರಬ್ರಹ್ಮವನ್ನು ನಿರೂಪಿಸುವ) ಓಂ ವರ್ಣ ಮತ್ತು (ಶುಭವನ್ನು ಸಂಕೇತೀಕರಿಸುವ) ಸ್ವಸ್ತಿಕ ಚಿಹ್ನೆಗಳು ಹಿಂದೂ ಧರ್ಮವನ್ನೇ ಪ್ರತಿನಿಧಿಸುವಷ್ಟು ದೊಡ್ಡದಾಗಿ ಬೆಳೆದಿವೆ, ಮತ್ತು ತಿಲಕದಂತಹ ಇತರ ಚಿಹ್ನೆಗಳು ಮತದ ಒಬ್ಬ ಅನುಯಾಯಿಯನ್ನು ಗುರುತಿಸುತ್ತವೆ. ಹಿಂದೂ ಧರ್ಮವು, ಕಮಲ, ಚಕ್ರ ಮತ್ತು ವೀಣೆಯನ್ನು ಒಳಗೊಂಡಂತೆ, ಹಲವು ಸಂಕೇತಗಳನ್ನು ನಿರ್ದಿಷ್ಟ ದೇವತೆಗಳೊಂದಿಗೆ ಸಂಬಂಧಿಸುತ್ತದೆ. ಮಂತ್ರಗಳು ಅವುಗಳ ಅರ್ಥ, ಶಬ್ದ ಮತ್ತು ಪಠನ ಶೈಲಿಯ ಮೂಲಕ ಒಬ್ಬ ಭಕ್ತನಿಗೆ ಮನಸ್ಸನ್ನು ದೇವರ ಚಿಂತನೆಗಳ ಮೇಲೆ ಕೇಂದ್ರೀಕರಿಸಲು ಅಥವಾ ದೇವತೆಗಳ ಪ್ರತಿ ತನ್ನ ಭಕ್ತಿಯನ್ನು ವ್ಯಕ್ತಪಡಿಸಲು ನೆರವಾಗುವ ವಿಜ್ಞಾಪನೆಗಳು, ಸ್ತುತಿಗಳು ಮತ್ತು ಪ್ರಾರ್ಥನೆಗಳು. ಅನೇಕ ಭಕ್ತರು ಮುಂಜಾನೆಯ ಶುಧ್ಧಿಸ್ನಾನವನ್ನು ಗಾಯತ್ರಿ ಮಂತ್ರ ಅಥವಾ ಮಹಾಮೃತ್ಯುಂಜಯ ಮಂತ್ರಗಳನ್ನು ಪಠಿಸುತ್ತ ಒಂದು ಪವಿತ್ರವಾದ ನದಿಯ ದಡದಲ್ಲಿ ಮಾಡುತ್ತಾರೆ. ಮಹಾಭಾರತ ಮಹಾಕಾವ್ಯವು (ಅನೇಕ ಹಿಂದೂಗಳು ಈಗ ನಡೆಯುತ್ತಿರುವ ಯುಗವೆಂದು ನಂಬುವ) ಕಲಿಯುಗದಲ್ಲಿ ಜಪವನ್ನು (ವಿಧಿವತ್ತಾದ ಪಠನ) ಅತಿ ಮುಖ್ಯವಾದ ಕರ್ತವ್ಯವೆಂದು ಕೊಂಡಾಡುತ್ತದೆ. ಅನೇಕರು ಜಪವನ್ನು ತಮ್ಮ ಪ್ರಮುಖ ಆಧ್ಯಾತ್ಮಿಕ ಆಚರಣೆಯಾಗಿ ಅಳವಡಿಸಿಕೊಳ್ಳುತ್ತಾರೆ. ಧಾರ್ಮಿಕ ಸಂಸ್ಕಾರಗಳು ಹಿಂದೂಗಳು ಬಹುಸಂಖ್ಯೆಯಲ್ಲಿ ದೈನಂದಿನ ಆಧಾರದ ಮೇಲೆ ಧಾರ್ಮಿಕ ಸಂಸ್ಕಾರಗಳಲ್ಲಿ ಭಾಗವಹಿಸುತ್ತಾರೆ. ಬಹುತೇಕ ಹಿಂದೂಗಳು ಮನೆಯಲ್ಲಿ ಧಾರ್ಮಿಕ ಸಂಸ್ಕಾರಗಳನ್ನು ಆಚರಿಸುತ್ತಾರೆ, ಆದರೆ ಸಂಸ್ಕಾರಗಳ ಆಚರಣೆಯು ಪ್ರದೇಶಗಳು, ಹಳ್ಳಿಗಳು, ಮತ್ತು ವ್ಯಕ್ತಿಗಳ ನಡುವೆ ಬಹಳವಾಗಿ ಬದಲಾಗುತ್ತವೆ. ಶ್ರದ್ಧಾವಂತ ಹಿಂದೂಗಳು ಪ್ರಾತಃಕಾಲದಲ್ಲಿ ಸ್ನಾನದ ನಂತರ ಪೂಜೆ, (ಸಾಮಾನ್ಯವಾಗಿ ಒಂದು ಕೌಟುಂಬಿಕ ದೇವಸ್ಥಾನ ದಲ್ಲಿ ಮತ್ತು ವಿಶಿಷ್ಟವಾಗಿ ಒಂದು ದೀಪವನ್ನು ಬೆಳಗುವುದು ಮತ್ತು ದೇವತೆಗಳ ಮೂರ್ತಿಗಳಿಗೆ ನೈವೇದ್ಯಾರ್ಪಣೆಯನ್ನು ಒಳಗೊಳ್ಳುತ್ತದೆ. ಧಾರ್ಮಿಕ ಸಾಹಿತ್ಯದ ಪಠನ, ಭಜನೆ, ಧ್ಯಾನ, ಮಂತ್ರಗಳ ಪಠನ, ಧರ್ಮಗ್ರಂಥಗಳ ವಾಚನ ಇತ್ಯಾದಿ ದಿನನಿತ್ಯದ ಕೆಲಸಗಳನ್ನು ನೆರವೇರಿಸುತ್ತಾರೆ. ಪಾವಿತ್ರ್ಯ ಮತ್ತು ಮಾಲಿನ್ಯದ ನಡುವಣ ವಿಭಜನವು ಧಾರ್ಮಿಕ ಸಂಸ್ಕಾರದಲ್ಲಿನ ಒಂದು ಗಮನಾರ್ಹ ವೈಶಿಷ್ಟ್ಯವಾಗಿದೆ. ಧಾರ್ಮಿಕ ಸಂಸ್ಕಾರ ವಿಧಾನಗಳ ಮೊದಲು ಅಥವಾ ಅವುಗಳ ಅವಧಿಯಲ್ಲಿ ಪರಿಹರಿಸಿಕೊಳ್ಳಲೇಬೇಕಾದ ಅಥವಾ ಹೊರಗುಮಾಡಬೇಕಾದ ಆಚರಿಸುವವನ ಸ್ವಲ್ಪ ಪ್ರಮಾಣದ ಅಪವತ್ರಿತತೆ ಅಥವಾ ಮಲಿನತೆಯನ್ನು ಧಾರ್ಮಿಕ ವಿಧಿಗಳು ಭಾವಿಸಿಕೊಳ್ಳುತ್ತವೆ. ಹಾಗಾಗಿ ಶುದ್ಧೀಕರಣವು, ಸಾಮಾನ್ಯವಾಗಿ ನೀರಿನಿಂದ, ಬಹುತೇಕ ಧಾರ್ಮಿಕ ಕಾರ್ಯಗಳ ಒಂದು ವಿಶಿಷ್ಟ ಲಕ್ಷಣವಾಗಿದೆ. ಇತರ ವೈಶಿಷ್ಟ್ಯಗಳು, ಕಾಲ ಕಳೆದಂತೆ ಶೇಖರಣೆಯಾಗಿ ಮುಂದಿನ ಜಗತ್ತಿನಲ್ಲಿ ಕಷ್ಟಗಳನ್ನು ಕಡಿಮೆಮಾಡುವ, ದಾನದ ನೆರವೇರಿಕೆ ಅಥವಾ ಸುಕರ್ಮಗಳ ಮೂಲಕ ಪಡೆದ ಸಮರ್ಪಣೆಯ ಫಲದಾಯಕತೆಯಲ್ಲಿನ ನಂಬಿಕೆ ಮತ್ತು ಪುಣ್ಯದ ಪರಿಕಲ್ಪನೆಯನ್ನು ಒಳಗೊಂಡಿವೆ. ಅಗ್ನಿ ಆಹುತಿಯ ವೈದಿಕ ವಿಧಿಗಳು (ಯಜ್ಞ) ಈಗ ಕೇವಲ ಸಾಂದರ್ಭಿಕ ವಾಡಿಕೆಗಳಾಗಿವೆಯಾದರೂ ಸಿದ್ಧಾಂತದಲ್ಲಿ ಬಹಳ ಪವಿತ್ರವೆಂದು ಭಾವಿಸಲಾಗಿದೆ. ಆದರೆ ಹಿಂದೂ ವಿವಾಹ ಮತ್ತು ಶವ ಸಂಸ್ಕಾರ ಸಮಾರಂಭಗಳಲ್ಲಿ ಯಜ್ಞ ಮತ್ತು ವೈದಿಕ ಮಂತ್ರಗಳ ಪಠನ ಈಗಲೂ ರೂಢಿಯಲ್ಲಿವೆ. ಕ್ರಿಯಾವಿಧಿಗಳು, ಉಪಚಾರಗಳು ಕಾಲದೊಂದಿಗೆ ಬದಲಾಗುತ್ತವೆ. ಉದಾಹರಣೆಗೆ, ಕಳೆದ ಕೆಲವು ನೂರು ವರ್ಷಗಳಲ್ಲಿ, ಆಗಮ ಶಾಸ್ತ್ರದಿಂದ ವಿಧಿಸಲ್ಪಟ್ಟ ರೂಢಿಯಲ್ಲಿದ್ದ ಷೋಡಶೋಪಚಾರಗಳ ವರ್ಗದಲ್ಲಿನ ಧಾರ್ಮಿಕ ನಾಟ್ಯ ಮತ್ತು ಸಂಗೀತ ನಿವೇದನೆಗಳಂತಹ ಕ್ರಿಯಾವಿಧಿಗಳನ್ನು ಅನ್ನ ಮತ್ತು ಸಿಹಿ ಭಕ್ಷ್ಯಗಳ ನಿವೇದನೆಗಳಿಂದ ಬದಲಾಯಿಸಲಾಯಿತು. ಜನನ, ವಿವಾಹ, ಮತ್ತು ಮರಣದಂತಹ ಸಂದರ್ಭಗಳು ಹಲವುವೇಳೆ ವಿಸ್ತಾರವಾದ ವರ್ಗಗಳ ಧಾರ್ಮಿಕ ಸಂಪ್ರದಾಯಗಳನ್ನು ಒಳಗೊಳ್ಳುತ್ತವೆ. ಹಿಂದೂ ಧರ್ಮದಲ್ಲಿ, ಜೀವನ ಚಕ್ರದ ಸಂಸ್ಕಾರಗಳು, ಅನ್ನಪ್ರಾಶನ (ಶಿಶುವಿಗೆ ನೀಡುವ ಮೊದಲ ಗಟ್ಟಿ ಆಹಾರದ ಸಂದರ್ಭ), ಉಪನಯನ (ಮೇಲು ಜಾತಿಯ ಮಕ್ಕಳು ಶಾಸ್ತ್ರೋಕ್ತ ವಿದ್ಯಾಭ್ಯಾಸದಲ್ಲಿ ತಮ್ಮ ಉಪಕ್ರಮದ ಸಂದರ್ಭದಲ್ಲಿ ಒಳಗೊಳ್ಳುವ "ಪವಿತ್ರವಾದ ದಾರದ ಸಮಾರಂಭ") ಮತ್ತು ಶ್ರಾದ್ಧ (ಮೃತರ ಹೆಸರಿನಲ್ಲಿ ಜನರಿಗೆ ಔತಣನೀಡಿ ಸತ್ಕರಿಸುವ ಕ್ರಿಯಾವಿಧಿ) ಒಳಗೊಳ್ಳುತ್ತವೆ. ಭಾರತದಲ್ಲಿನ ಬಹುತೇಕ ಜನರಿಗೆ, ಯುವ ದಂಪತಿಗಳ ಮದುವೆ ತೀರ್ಮಾನ ಮತ್ತು ಮದುವೆಯ ಕರಾರುವಾಕ್ಕಾದ ದಿನಾಂಕ ಹಾಗೂ ಕಾಲಗಳು ಜ್ಯೋತಿಷಿಗಳ ಸಮಾಲೋಚನೆಯಲ್ಲಿ ತಂದೆತಾಯಂದಿರಿಂದ ನಿರ್ಧರಿಸಲ್ಪಡುವ ವಿಷಯಗಳಾಗಿವೆ. ಮರಣಾನಂತರ, ಸಂನ್ಯಾಸಿಗಳು, ಹಿಜಿಡ, ಮತ್ತು ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೊರತು ಬೇರೆಲ್ಲರಿಗೂ ದಹನಸಂಸ್ಕಾರವು ಅನಿವಾರ್ಯವೆಂದು ಪರಿಗಣಿಸಲಾಗುತ್ತದೆ. ದಹನಸಂಸ್ಕಾರವನ್ನು ವಿಶಿಷ್ಟವಾಗಿ ಬಟ್ಟೆಯಿಂದ ಶವವನ್ನು ಸುತ್ತಿ ಅದನ್ನು ಚಿತೆಯ ಮೇಲೆ ಸುಟ್ಟು ನೆರವೇರಿಸಲಾಗುತ್ತದೆ. ತೀರ್ಥಯಾತ್ರೆ ಮತ್ತು ಹಬ್ಬಗಳು ತೀರ್ಥಯಾತ್ರೆಯು ಹಿಂದೂ ಧರ್ಮದಲ್ಲಿ ಕಡ್ಡಾಯವಲ್ಲವಾದರೂ ಬಹಳ ಜನ ಅನುಯಾಯಿಗಳು ಅವನ್ನು ಕೈಗೊಳ್ಳುತ್ತಾರೆ. ಹಿಂದೂಗಳು ಅಲಹಾಬಾದ್, ಹರಿದ್ವಾರ, ವಾರಾಣಸಿ, ಮತ್ತು ವೃಂದಾವನವನ್ನು ಒಳಗೊಂಡಂತೆ ಭಾರತದ ಹಲವಾರು ಧಾರ್ಮಿಕ ನಗರಗಳನ್ನು ಗೌರವಿಸುತ್ತಾರೆ. ಪ್ರಸಿದ್ಧವಾದ ದೇವಾಲಯ ನಗರಗಳು, ಒಂದು ಪ್ರಮುಖ ವೈಷ್ಣವ ಜಗನ್ನಾಥ ದೇವಸ್ಥಾನ ಮತ್ತು ರಥಯಾತ್ರೆ ಉತ್ಸವದ ತಾಣವಾದ ಪುರಿ; ತಿರುಮಲ ವೆಂಕಟೇಶ್ವರ ದೇವಾಲಯದ ನೆಲೆಯಾದ ತಿರುಪತಿ; ಮತ್ತು ವೈಷ್ಣೋ ದೇವಿ ದೇವಸ್ಥಾನದ ತವರಾದ ಕಟ್ರಾವನ್ನು ಒಳಗೊಳ್ಳುತ್ತವೆ. ನಾಲ್ಕು ಪವಿತ್ರ ಸ್ಥಳಗಳಾದ ಪುರಿ, ರಾಮೇಶ್ವರ, ದ್ವಾರಕೆ, ಮತ್ತು ಬದರಿನಾಥ (ಅಥವಾ ಪರ್ಯಾಯವಾಗಿ ಹಿಮಾಲಯ ಪಟ್ಟಣಗಳಾದ ಬದರಿನಾಥ, ಕೇದಾರನಾಥ, ಗಂಗೋತ್ರಿ, ಮತ್ತು ಯಮುನೋತ್ರಿ) ಚಾರ್ ಧಾಮ್ (ನಾಲ್ಕು ನಿವಾಸಗಳು) ತೀರ್ಥಯಾತ್ರಾ ಸಂಚಾರವೆಂದು ಕರೆಸಿಕೊಳ್ಳುತ್ತದೆ. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳವು ಹಿಂದೂ ತೀರ್ಥಯಾತ್ರೆಗಳ ಪೈಕಿ ಅತ್ಯಂತ ಪವಿತ್ರವಾದದ್ದು; ಇದರ ನೆಲೆಯು ಅಲಹಾಬಾದ್, ಹರಿದ್ವಾರ, ನಾಸಿಕ್ ಮತ್ತು ಉಜ್ಜೈನ್‌ಗಳ ಮಧ್ಯೆ ಆವರ್ತವಾಗುತ್ತದೆ. ಶಕ್ತಿಯನ್ನು ಪೂಜಿಸಲಾಗುವ ಶಕ್ತಿ ಪೀಠಗಳು ಮತ್ತೊಂದು ಪ್ರಮುಖವಾದ ತೀರ್ಥಯಾತ್ರೆಗಳ ವರ್ಗವಾಗಿದೆ. ಇವುಗಳಲ್ಲಿ ಕಾಲಿಘಾಟ್ ಹಾಗೂ ಕಾಮಾಖ್ಯ ಎರಡು ಪ್ರಧಾನ ಪೀಠಗಳು. ಹಿಂದೂ ಧರ್ಮವು ವರ್ಷದಾದ್ಯಂತ ಅನೇಕ ಹಬ್ಬಗಳನ್ನು ಹೊಂದಿದೆ. ಹಿಂದೂ ಪಂಚಾಂಗವು ಅವುಗಳ ದಿನಾಂಕಗಳನ್ನು ಗೊತ್ತುಮಾಡುತ್ತದೆ. ಹಬ್ಬಗಳು ವಿಶಿಷ್ಟವಾಗಿ, ಹಲವುವೇಳೆ ಋತುಗಳ ಬದಲಾವಣೆಗಳೊಂದಿಗೆ ತಾಳೆಹೊಂದುವ, ಹಿಂದೂ ಪುರಾಣದ ಘಟನೆಗಳನ್ನು ಆಚರಿಸುತ್ತವೆ. ಮುಖ್ಯವಾಗಿ ನಿರ್ದಿಷ್ಟ ಪಂಥಗಳಿಂದ ಅಥವಾ ಭಾರತೀಯ ಉಪಖಂಡದ ನಿಶ್ಚಿತ ಪ್ರದೇಶಗಳಲ್ಲಿ ಆಚರಿಸಲಾಗುವ ಹಬ್ಬಗಳಿವೆ. ಮಹಾ ಶಿವರಾತ್ರಿ, ಹೋಳಿ, ರಾಮ ನವಮಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದುರ್ಗಾ ಪೂಜೆ, ಮತ್ತು ದೀಪಾವಳಿ, ವ್ಯಾಪಕವಾಗಿ ಆಚರಿಸಲಾಗುವ ಕೆಲವು ಹಿಂದೂ ಹಬ್ಬಗಳು. ಧರ್ಮಗ್ರಂಥಗಳು "ವಿಭಿನ್ನ ವ್ಯಕ್ತಿಗಳಿಂದ ವಿಭಿನ್ನ ಕಾಲಗಳಲ್ಲಿ ಅರಿಯಲಾದ ಆಧ್ಯಾತ್ಮಿಕ ಸೂತ್ರಗಳ ಶೇಖರಿಸಿದ ಭಂಡಾರ"ದ ಮೇಲೆ ಹಿಂದೂ ಧರ್ಮವು ಆಧಾರಿತವಾಗಿದೆ. ಅವುಗಳನ್ನು ಬರೆಯುವುದಕ್ಕೆ ಮೊದಲು, ಹಲವು ಶತಮಾನಗಳವರೆಗೆ ಕಂಠಪಾಠಕ್ಕೆ ನೆರವಾಗಲು ಧರ್ಮಗ್ರಂಥಗಳು ಮೌಖಿಕವಾಗಿ ಶ್ಲೋಕ ರೂಪದಲ್ಲಿ ಪ್ರಸಾರ ಮಾಡಲ್ಪಟ್ಟವು. ಅನೇಕ ಶತಮಾನಗಳ ಅವಧಿಯಲ್ಲಿ, ಋಷಿಗಳು ಉಪದೇಶಗಳನ್ನು ಪರಿಷ್ಕರಿಸಿ ಧರ್ಮಗ್ರಂಥಗಳನ್ನು ವಿಸ್ತರಿಸಿದರು. ವೈದಿಕೋತ್ತರ ಮತ್ತು ಈಗಿನ ಹಿಂದೂ ನಂಬಿಕೆಯಲ್ಲಿ, ಬಹುತೇಕ ಹಿಂದೂ ಧರ್ಮಗ್ರಂಥಗಳನ್ನು ವಿಶಿಷ್ಟವಾಗಿ ಪದಶಃವಾಗಿ ವ್ಯಾಖ್ಯಾನಿಸಲಾಗುವುದಿಲ್ಲ. ಅವುಗಳಿಂದ ಗ್ರಹಿಸಲಾದ ನೀತಿ ತತ್ವಗಳು ಮತ್ತು ರೂಪಕಾರ್ಥಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಬಹುತೇಕ ಧಾರ್ಮಿಕ ಪಠ್ಯಗಳು ಸಂಸ್ಕೃತದಲ್ಲಿವೆ. ಪಠ್ಯಗಳನ್ನು ಶ್ರುತಿ ಮತ್ತು ಸ್ಮೃತಿ ಎಂಬ ವರ್ಗಗಳಲ್ಲಿ ವರ್ಗೀಕರಿಸಲಾಗುತ್ತದೆ. ಶ್ರುತಿ ಶ್ರುತಿ (ಅಕ್ಷರಶಃ ಕೇಳಲ್ಪಟ್ಟದ್ದು) ಪದವು ಮೂಲತಃ, ಹಿಂದೂ ಧರ್ಮಗ್ರಂಥಗಳ ಅತ್ಯಂತ ಮುಂಚಿನ ದಾಖಲೆಯಾದ, ವೇದಗಳನ್ನು ನಿರ್ದೇಶಿಸುತ್ತದೆ. ಅನೇಕ ಹಿಂದೂಗಳು ವೇದಗಳು ಪ್ರಾಚೀನ ಋಷಿಗಳಿಗೆ ಬಹಿರಂಗಗೊಂಡ ಚಿರಂತನವಾದ ಸತ್ಯಗಳೆಂದು ಭಾವಿಸುತ್ತಾರಾದರೂ, ಕೆಲವು ಭಕ್ತರು ವೇದಗಳ ಸೃಷ್ಟಿಯನ್ನು ಒಬ್ಬ ದೇವತೆ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸುವುದಿಲ್ಲ. ಅವು, ಋಷಿಗಳಿಗೆ ಬಹಿರಂಗಗೊಳ್ಳದಿದ್ದರೂ ಅಸ್ತಿತ್ವದಲ್ಲಿರುತ್ತಿದ್ದ, ಆಧ್ಯಾತ್ಮಿಕ ಪ್ರಪಂಚದ ನಿಯಮಗಳೆಂದು ಭಾವಿಸಲಾಗಿದೆ. ವೇದಗಳ ಆಧ್ಯಾತ್ಮಿಕ ಸತ್ಯಗಳು ಚಿರಂತನವಾದ್ದರಿಂದ ಅವು ಹೊಸ ವಿಧಾನಗಳಲ್ಲಿ ವ್ಯಕ್ತಪಡಿಸಲಾಗುತ್ತಿವೆಯೆಂದು ಹಿಂದೂಗಳು ನಂಬುತ್ತಾರೆ. (ಋಗ್-, ಸಾಮ-, ಯಜುರ್- ಮತ್ತು ಅಥರ್ವ- ಎಂದು ಕರೆಯಲಾಗುವ) ನಾಲ್ಕು ವೇದಗಳಿವೆ. ಋಗ್ವೇದವು ಮೊದಲನೆಯ ಮತ್ತು ಅತ್ಯಂತ ಪ್ರಮುಖ ವೇದವಾಗಿದೆ. ಪ್ರತಿ ವೇದವು ನಾಲ್ಕು ಭಾಗಗಳಲ್ಲಿ ವಿಭಜನೆಗೊಂಡಿದೆ: ಪವಿತ್ರ ಮಂತ್ರಗಳನ್ನು ಒಳಗೊಳ್ಳುವ ಪ್ರಮುಖ ಭಾಗವಾದ ಸಂಹಿತೆಯು ನಿಖರವಾದ ಅರ್ಥದಲ್ಲಿ ವೇದವೆಂದು ಹೇಳಲಾಗುತ್ತದೆ. ಇತರ ಮೂರು ಭಾಗಗಳು, ಸಾಮಾನ್ಯವಾಗಿ ಗದ್ಯ ರೂಪದಲ್ಲಿರುವ, ಭಾಷ್ಯಗಳ ಒಂದು ಮೂರು-ಶ್ರೇಣಿಯ ಸಮಷ್ಟಿಯನ್ನು ರಚಿಸುತ್ತವೆ, ಮತ್ತು ಸಂಹಿತೆಗಿಂತ ಕಾಲದಲ್ಲಿ ಸ್ವಲ್ಪ ತಡವಾಗಿ ರಚಿತವಾದದ್ದೆಂದು ನಂಬಲಾಗಿದೆ. ಇವುಗಳು: ಬ್ರಾಹ್ಮಣಗಳು, ಆರಣ್ಯಕಗಳು, ಮತ್ತು ಉಪನಿಷತ್ತುಗಳು. ಮೊದಲ ಎರಡು ಭಾಗಗಳನ್ನು ನಂತರ ಕರ್ಮಕಾಂಡವೆಂದು (ಧಾರ್ಮಿಕ ಸಂಸ್ಕಾರದ ಭಾಗ) ಕರೆಯಲಾಯಿತು, ಮತ್ತು ಕೊನೆಯ ಎರಡು ಭಾಗಗಳು ಜ್ಞಾನಕಾಂಡವನ್ನು (ಜ್ಞಾನದ ಭಾಗ) ರಚಿಸುತ್ತವೆ. ವೇದಗಳು ಧಾರ್ಮಿಕ ಕ್ರಿಯಾವಿಧಿಗಳ ಮೇಲೆ ಪ್ರಾಧಾನ್ಯ ನೀಡಿದರೆ, ಉಪನಿಷತ್ತುಗಳು ಆಧ್ಯಾತ್ಮಿಕ ಒಳನೋಟ ಮತ್ತು ತತ್ವಶಾಸ್ತ್ರ ಸಂಬಂಧಿತ ಉಪದೇಶಗಳ ಮೇಲೆ ಪ್ರಾಧಾನ್ಯ ನೀಡುತ್ತವೆ, ಮತ್ತು ಬ್ರಹ್ಮ ಹಾಗೂ ಪುನರ್ಜನ್ಮವನ್ನು ಚರ್ಚಿಸುತ್ತವೆ. ಸ್ಮೃತಿಗಳು ಶ್ರುತಿಗಳನ್ನು ಬಿಟ್ಟು ಉಳಿದ ಹಿಂದೂ ಪಠ್ಯಗಳನ್ನು ಸಾಮೂಹಿಕವಾಗಿ ಸ್ಮೃತಿಗಳೆಂದು (ಸ್ಮರಣೆ) ಕರೆಯಲಾಗುತ್ತದೆ. ಮಹಾಭಾರತ ಮತ್ತು ರಾಮಾಯಣವನ್ನು ಒಳಗೊಂಡಿರುವ ಮಹಾಕಾವ್ಯಗಳು ಸ್ಮೃತಿಗಳ ಪೈಕಿ ಅತ್ಯಂತ ಪ್ರಸಿದ್ಧವಾದ ಕೃತಿಗಳು. ಭಗವದ್ಗೀತೆಯು ಮಹಾಭಾರತದ ಒಂದು ಸಮಗ್ರಕತಾವಶ್ಯಕ ಭಾಗ ಮತ್ತು ಹಿಂದೂ ಧರ್ಮದ ಅತ್ಯಂತ ಜನಪ್ರಿಯ ಧಾರ್ಮಿಕ ಪಠ್ಯಗಳ ಪೈಕಿ ಒಂದು. ಅದು ಒಂದು ಮಹಾಯುದ್ಧದ ಹಿಂದಿನ ದಿನದಂದು ವಿಷ್ಣುವಿನ ಅವತಾರನಾದ ಕೃಷ್ಣನಿಂದ ರಾಜಕುಮಾರ ಅರ್ಜುನನಿಗೆ ಹೇಳಲಾದ ತತ್ವಬೋಧನೆಗಳನ್ನು ಒಳಗೊಂಡಿದೆ. ಕೃಷ್ಣನಿಂದ ನುಡಿಯಲಾದ 'ಭಗವದ್ಗೀತೆಯು(ಭಗವದ್ಗೀತಾ ತಾತ್ಪರ್ಯ) ವೇದಗಳ ಸಾರಾಂಶವೆಂದು ವಿವರಿಸಲಾಗಿದೆ. ಆದರೆ, ವಿಷಯವಸ್ತುವು ಉಪನಿಷತ್ತಿನಂತೆ ಇರುವುದರಿಂದ, ಕೆಲವೊಮ್ಮೆ ಗೀತೋಪನಿಷತ್ ಎಂದೂ ಕರೆಯಲ್ಪಡುವ ಗೀತೆಯನ್ನು ಹೆಚ್ಚಾಗಿ ಶ್ರುತಿ ವರ್ಗದಲ್ಲಿ ಇರಿಸಲಾಗುತ್ತದೆ. ಸ್ಮೃತಿಗಳು, ವಿಶದವಾದ ಆಖ್ಯಾನಗಳ ಮೂಲಕ ಹಿಂದೂ ಕಲ್ಪನೆಗಳನ್ನು ವಿವರಿಸುವ ಪುರಾಣಗಳನ್ನೂ ಒಳಗೊಳ್ಳುತ್ತವೆ. ದೇವಿ ಮಹಾತ್ಮ್ಯ ತಂತ್ರಗಳು, ಯೋಗ ಸೂತ್ರಗಳು, ತಿರುಮಂತಿರಮ್, ಶಿವ ಸೂತ್ರಗಳು ಮತ್ತು ಆಗಮಗಳಂತಹ ಪಂಥೀಯ ಸ್ವರೂಪವುಳ್ಳ ಪಠ್ಯಗಳಿವೆ. ಹೆಚ್ಚು ವಿವಾದಿತ ಪಠ್ಯವಾದ ಮನುಸ್ಮೃತಿಯು ಜಾತಿ ಪದ್ಧತಿಯ ಸಾಮಾಜಿಕ ನಿಯಮಾವಳಿಗಳನ್ನು ಸಂಗ್ರಹಿಸುವ ಆದೇಶ ನ್ಯಾಯಗ್ರಂಥವಾಗಿದೆ. ಇತಿಹಾಸ ಭಾರತದಲ್ಲಿ ಪ್ರಾಗೈತಿಹಾಸಿಕ ಧರ್ಮಕ್ಕೆ ಅತ್ಯಂತ ಮೊದಲಿನ ಪ್ರಮಾಣವು ಮುಂಚಿನ ಹರಪ್ಪಾ ಅವಧಿಯ (ಕ್ರಿ.ಪೂ. ೫೫೦೦-೨೬೦೦) ನವಶಿಲಾಯುಗದ ಕೊನೆಯ ಕಾಲಘಟ್ಟಕ್ಕೆ ಸೇರಿದೆ. ಪೂರ್ವಶಾಸ್ತ್ರೀಯ ಯುಗದ (ಕ್ರಿ.ಪೂ. ೧೫೦೦-೫೦೦) ನಂಬಿಕೆಗಳು ಮತ್ತು ಆಚರಣೆಗಳನ್ನು "ಐತಿಹಾಸಿಕ ವೈದಿಕ ಧರ್ಮ" ಎಂದು ಕರೆಯಲಾಗುತ್ತದೆ. ಆಧುನಿಕ ಹಿಂದೂ ಧರ್ಮವು ವೇದಗಳಿಂದ ಜೀವತಳೆದಿದೆ, ಮತ್ತು ಕ್ರಿ.ಪೂ. ೧೭೦೦-೧೦೦೦ ಕಾಲಕ್ಕೆ ಸೇರಿದ ಋಗ್ವೇದವು ವೇದಗಳಲ್ಲಿ ಅತ್ಯಂತ ಹಳೆಯದಾದದ್ದು. ವೇದಗಳು ಇಂದ್ರ, ವರುಣ ಮತ್ತು ಅಗ್ನಿಯಂತಹ ದೇವತೆಗಳ ಉಪಾಸನೆ, ಮತ್ತು ಸೋಮ ಕ್ರಿಯಾವಿಧಿಯ ಮೇಲೆ ಕೇಂದ್ರೀಕರಿಸುತ್ತವೆ. ಯಜ್ಞವೆಂದು ಕರೆಯಲಾಗುವ ಅಗ್ನಿಆಹುತಿಗಳನ್ನು ಮಾಡಲಾಗುತ್ತಿತ್ತು ಮತ್ತು ವೈದಿಕ ಮಂತ್ರಗಳನ್ನು ಪಠಿಸಲಾಗುತ್ತಿತ್ತು, ಆದರೆ ದೇವಸ್ಥಾನಗಳು ಅಥವಾ ಮೂರ್ತಿಗಳನ್ನು ನಿರ್ಮಿಸಲಾಗುತ್ತಿರಲಿಲ್ಲ. ಅತ್ಯಂತ ಹಳೆಯ ವೈದಿಕ ಸಂಪ್ರದಾಯಗಳು ಪಾರಸಿ ಧರ್ಮ ಮತ್ತು ಇತರ ಇಂಡೋ-ಯೂರೋಪಿಯನ್ ಧರ್ಮಗಳಿಗೆ ತೀಕ್ಷ್ಣ ಸಾದೃಶ್ಯಗಳನ್ನು ತೋರಿಸುತ್ತವೆ. ಪ್ರಮುಖ ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು ಕ್ರೈಸ್ತಶಕದ ಪೂರ್ವದ ಕೊನೆಯ ಶತಮಾನಗಳು ಮತ್ತು ಕ್ರೈಸ್ತಶಕದ ಮೊದಲಿನ ಶತಮಾನಗಳ ದೀರ್ಘ ಕಾಲಾವಧಿಯಾದ್ಯಂತ ಸಂಕಲಿಸಲಾಗಿದೆ. ಅವು ಪ್ರಾಚೀನ ಭಾರತದ ಪ್ರಭುಗಳು ಮತ್ತು ಯುದ್ಧಗಳ ಪೌರಾಣಿಕ ಕಥೆಗಳನ್ನು ಹೊಂದಿವೆ, ಮತ್ತು ಅಲ್ಲಲ್ಲಿ ಮಧ್ಯದಲ್ಲಿ ಧಾರ್ಮಿಕ ಹಾಗೂ ದಾರ್ಶನಿಕ ಪ್ರಕರಣಗಳನ್ನು ಹೊಂದಿವೆ. ನಂತರದ ಪುರಾಣಗಳು ದೇವ ಮತ್ತು ದೇವಿಯರ ಕಥೆಗಳು, ಮನುಷ್ಯರೊಂದಿಗೆ ಅವರ ಸಂವಹನಗಳು ಮತ್ತು ರಾಕ್ಷಸರ ವಿರುದ್ಧ ನಡೆದ ಅವರ ಯುದ್ಧಗಳನ್ನು ವರ್ಣಿಸುತ್ತವೆ. ಮೂರು ಪ್ರಮುಖ ಚಳುವಳಿಗಳು ಹಿಂದೂ ಚಿಂತನೆಯ ಒಂದು ಹೊಸ ಅವಧಿಯ ಹುಟ್ಟಿಗೆ ಆಧಾರವಾದವು: ಭಾರತದ ವಿಶಾಲವಾದ ಭೂರಾಶಿಯಾದ್ಯಂತ ಉಪನಿಷದಾಧಾರಿತ, ಜೈನ, ಮತ್ತು ಬೌದ್ಧ ತಾತ್ವಿಕ-ಧಾರ್ಮಿಕ ಚಿಂತನೆಯ ಆಗಮನ ಮತು ಪ್ರಸಾರ. ಮೋಕ್ಷ ಅಥವಾ ನಿರ್ವಾಣವನ್ನು ಪಡೆಯಲು ಒಬ್ಬರು ವೇದಗಳ ಅಧಿಕಾರ ಅಥವಾ ಜಾತಿಪದ್ಧತಿಯನ್ನು ಒಪ್ಪಿಕೊಳ್ಳುವುದು ಅಗತ್ಯವಲ್ಲವೆಂದು ಮಹಾವೀರ (ಜೈನರ ೨೪ನೆಯ ತೀರ್ಥಂಕರ) ಮತ್ತು ಗೌತಮ ಬುದ್ಧ (ಬೌದ್ಧ ಧರ್ಮದ ಸಂಸ್ಥಾಪಕ) ಇಬ್ಬರೂ ಬೋಧಿಸಿದರು. ಆತ್ಮ/ಚೇತನ ಅಥವಾ ದೇವರ ಅಸ್ತಿತ್ವವು ಅನಗತ್ಯವೆಂದೂ ಬುದ್ಧನು ಪ್ರತಿಪಾದಿಸಿದನು. ಬೌದ್ಧ ಧರ್ಮವು, ಕ್ರಿ.ಪೂ. ೩ನೆಯ ಶತಮಾನದಲ್ಲಿ ಭಾರತೀಯ ಉಪಖಂಡವನ್ನು ಏಕೀಕರಿಸಿದ ಮೌರ್ಯ ಸಾಮ್ರಾಜ್ಯದ ಅಶೋಕನ ಆಳ್ವಿಕೆಯ ಅವಧಿಯಲ್ಲಿ ಅತ್ಯುಚ್ಛ್ರಾಯ ಸ್ಥಿತಿ ತಲುಪಿತು. ಕ್ರಿ.ಶ. ೨೦೦ರ ನಂತರ, ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವ-ಮೀಮಾಂಸ ಹಾಗೂ ವೇದಾಂತವನ್ನು ಒಳಗೊಡಂತೆ, ಹಲವಾರು ತತ್ವ ಸಿದ್ಧಾಂತಗಳು ಹಿಂದೂ ಸಿದ್ಧಾಂತದಲ್ಲಿ ವಿಧ್ಯುಕ್ತವಾಗಿ ಸಂಕೇತೀಕೃತಗೊಂಡವು. ಒಂದು ನಾಸ್ತಿಕ ಭೌತವಾದಿ ಪಂಥದ ಸಂಸ್ಥಾಪಕನಾದ ಚಾರ್ವಾಕನು ಕ್ರಿ.ಪೂ. ಆರನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ಗಮನ ಸೆಳೆದನು. ಕ್ರಿ.ಪೂ. ೪೦೦ ಮತ್ತು ಕ್ರಿ.ಶ. ೧೦೦೦ರ ನಡುವೆ ಬೌದ್ಧಧರ್ಮವು ಅವನತಿಹೊಂದಿ ಹಿಂದೂ ಧರ್ಮವು ವಿಸ್ತರಿಸಿತು. ಗುಪ್ತರ ಕಾಲದ ಅಂತ್ಯದ ನಂತರ ಸಂಸ್ಕೃತಾಧಾರಿತ ಸಂಸ್ಕೃತಿಯು ಅವನತಿಗೀಡಾಯಿತು. ಮೊದಲಿನ ಮಧ್ಯಯುಗದ ಪುರಾಣಗಳು ಸಾಂಸ್ಕೃತೀಕರಣಕ್ಕೀಡಾಗುತ್ತಿದ್ದ (ಅಕಲ್ಚರೇಶನ್) ಬರಹದ ಭಾಷೆಯಿರದ ಬುಡಕಟ್ಟು ಸಮಾಜಗಳ ನಡುವೆ ಒಂದು ಧಾರ್ಮಿಕ ಮುಖ್ಯವಾಹಿನಿಯನ್ನು ಸ್ಥಾಪಿಸಲು ನೆರವಾದವು. ಪುರಾಣಗಳ ರಚನಕಾರರ ಕೈಯಿಂದ ಬ್ರಾಹ್ಮಣ ಹಿಂದೂ ಧರ್ಮ ಮತ್ತು ಧರ್ಮಶಾಸ್ತ್ರಗಳ ತತ್ವಗಳು ಆಮೂಲಾಗ್ರ ರೂಪಾಂತರಕ್ಕೆ ಒಳಗಾದವು, ಪರಿಣಾಮವಾಗಿ ಎಲ್ಲ ಮುಂಚಿನ ಸಂಪ್ರದಾಯಗಳನ್ನು ಮರೆಮಾಡಿ ಒಂದು ಮುಖ್ಯವಾಹಿನಿ "ಹಿಂದೂ ಧರ್ಮ"ವು ಉದಯಿಸಿತು. ಭಾರತಕ್ಕೆ ಇಸ್ಲಾಂ ಧರ್ಮವು ಅರಬ್ ವ್ಯಾಪಾರಿಗಳ ಆಗಮನ ಹಾಗೂ ಸಿಂಧ್‌ನ ವಿಜಯದೊಂದಿಗೆ ಏಳನೇ ಶತಮಾನದ ಆದಿಯಲ್ಲಿ ಬಂದಿತಾದರೂ, ನಂತರದ ಮುಸ್ಲಿಮರ ವಿಜಯದ ಅವಧಿಯಲ್ಲಿ ಅದು ಒಂದು ಪ್ರಮುಖ ಧರ್ಮವಾಗಲು ಪ್ರಾರಂಭಿಸಿತು. ಈ ಅವಧಿಯಲ್ಲಿ ಬೌದ್ಧಧರ್ಮವು ತ್ವರಿತವಾಗಿ ಅವನತಿಹೊಂದಿತು. ಹಲವು ಹಿಂದೂಗಳು ಇಸ್ಲಾಂ ಧರ್ಮಕ್ಕೆ ಮತಾಂತರಹೊಂದಿದರು. ಔರಂಗ್‌ಜ಼ೇಬ್‌ನಂತಹ ಅನೇಕ ಮುಸ್ಲಿಮ್ ಶಾಸಕರು ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿದರು ಮತ್ತು ಮುಸ್ಲಿಮೇತರರನ್ನು ಹಿಂಸಿಸಿದರು; ಆದರೆ ಅಕ್ಬರ್‌ನಂತಹ ಕೆಲವರು ಹೆಚ್ಚು ಸಹಿಷ್ಣುವಾಗಿದ್ದರು. ಹಿಂದೂ ಧರ್ಮವು ತೀವ್ರ ಪರಿವರ್ತನೆಗಳಿಗೆ ಒಳಗಾಯಿತು. ಬಹುಮಟ್ಟಿಗೆ ರಾಮಾನುಜ, ಮಧ್ವ ಮತ್ತು ಚೈತನ್ಯರಂತಹ ಪ್ರಸಿದ್ಧ ಶಿಕ್ಷಕರ ಪ್ರಭಾವದಿಂದಾಗಿ. ಭಕ್ತಿ ಚಳುವಳಿಯ ಅನುಯಾಯಿಗಳು ಕೆಲವು ಶತಮಾನಗಳ ಹಿಂದೆ ವೇದಾಂತಿ ಆದಿ ಶಂಕರರಿಂದ ಕ್ರೋಡೀಕರಣಗೊಂಡ ಬ್ರಹ್ಮದ ಅಮೂರ್ತ ಪರಿಕಲ್ಪನೆಯಿಂದ ದೂರ ಸರಿದರು. ಭಾವಾತ್ಮಕ, ಭಾವೋದ್ರಿಕ್ತ ಭಕ್ತಿಯೊಂದಿಗೆ ಹೆಚ್ಚು ಸುಲಭ ಗಮ್ಯ ಅವತಾರಗಳತ್ತ ಹೊರಳಿದರು, ವಿಶೇಷವಾಗಿ ಕೃಷ್ಣ ಮತ್ತು ರಾಮಾವತಾರಗಳತ್ತ. ಐರೋಪ್ಯ ದೃಷ್ಟಿಕೋನದಿಂದ ಭಾರತೀಯ ಸಂಸ್ಕೃತಿಯನ್ನು ಅಧ್ಯಯನಮಾಡುವ ಒಂದು ಅಧ್ಯಯನ ವಿಭಾಗವಾಗಿ ಭಾರತಾಧ್ಯಯನವು (ಇಂಡಾಲಜಿ), ಮ್ಯಾಕ್ಸ್ ಮೂಲರ್ ಮತ್ತು ಜಾನ್ ವೂಡ್‌ರಾಫ಼್‌ರಂತಹ ವಿದ್ವಾಂಸರ ಮಾರ್ಗದರ್ಶನದಲ್ಲಿ, ೧೯ನೇ ಶತಮಾನದಲ್ಲಿ ಸ್ಥಾಪಿತವಾಯಿತು. ಅವರು ವೈದಿಕ, ಪೌರಾಣಿಕ ಮತ್ತು ತಾಂತ್ರಿಕ ಸಾಹಿತ್ಯ ಹಾಗೂ ತತ್ತ್ವಶಾಸ್ತ್ರವನ್ನು ಯೂರಪ್ ಮತ್ತು ಅಮೇರಿಕಾಕ್ಕೆ ತಂದರು. ಇದೇ ಅವಧಿಯಲ್ಲಿ, ಬ್ರಾಹ್ಮ ಸಮಾಜ ಹಾಗೂ ಥೀಯಸಾಫ಼ಿಕಲ್ ಸಸಾಯಿಟಿಯಂತಹ ಸಂಘಗಳು, ಸಮಾಜ ಸುಧಾರಣೆಯನ್ನು ಸ್ಥಾಪಿಸುವ ಪ್ರಯತ್ನವಾಗಿ, ಅಬ್ರಹಮೀ ಮತ್ತು ಧಾರ್ಮಿಕ ತತ್ತ್ವಶಾಸ್ತ್ರಗಳನ್ನು ಸುಸಂಗತಗೊಳಿಸಲು ಮತ್ತು ಒಂದುಗೂಡಿಸಲು ಪ್ರಯತ್ನಿಸಿದವು. ಈ ಅವಧಿಯು ಬಹಳ ಹೊಸತನವುಳ್ಳದ್ದಾಗಿದ್ದರೂ ದೇಶೀಯ ಸಂಪ್ರದಾಯದಲ್ಲಿ ಬೇರೂರಿದ ಚಳುವಳಿಗಳ ಉದಯವನ್ನು ಕಂಡಿತು. ಅವು ರಾಮಕೃಷ್ಣ ಪರಮಹಂಸ ಮತ್ತು ರಮಣ ಮಹರ್ಷಿಯಂತಹ ಗಣ್ಯವ್ಯಕ್ತಿಗಳು ಹಾಗೂ ಅವರ ಉಪದೇಶಗಳ ಮೇಲೆ ಆಧಾರಿತವಾಗಿದ್ದವು. ಅರವಿಂದ ಮತ್ತು ಸ್ವಾಮಿ ಪ್ರಭುಪಾದರನ್ನು ಒಳಗೊಂಡಂತೆ, ಪ್ರಖ್ಯಾತ ಹಿಂದೂ ತತ್ತ್ವಜ್ಞಾನಿಗಳು ಹಿಂದೂ ಧರ್ಮದ ಮೂಲಭೂತ ಪಠ್ಯಗಳನ್ನು ಸಮಕಾಲೀನ ಶ್ರೋತೃಗಳಿಗಾಗಿ ಹೊಸ ಆವೃತ್ತಿಗಳಲ್ಲಿ ಭಾಷಾಂತರಿಸಿದರು, ಪುನರ್ಪ್ರತಿಪಾದಿಸಿದರು ಮತ್ತು ಪರಿಚಯಿಸಿದರು. ಪರಿಣಾಮವಾಗಿ ಭಾರತ ಮತ್ತು ವಿದೇಶಗಳಲ್ಲಿ ಅನುಯಾಯಿಗಳನ್ನು ಮತ್ತು ಅನೇಕರ ಗಮನವನ್ನು ಸೆಳೆದರು. ಸ್ವಾಮಿ ವಿವೇಕಾನಂದ, ಪರಮಹಂಸ ಯೋಗಾನಂದ, ಬಿ. ಕೆ. ಎಸ್. ಅಯ್ಯಂಗಾರ್ ಮತ್ತು ಸ್ವಾಮಿ ರಾಮರಂತಹ ಇತರರೂ ಸಹ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಯೋಗ ಮತ್ತು ವೇದಾಂತದ ಗೋಚರತೆಯನ್ನು ಹೆಚ್ಚಿಸುವಲ್ಲಿ ಸಾಧನವಾಗಿದ್ದಾರೆ. ಇಂದು, ಇಸ್ಕಾನ್ ಮತ್ತು ಸ್ವಾಮಿನಾರಾಯಣ ಮತದಂತಹ ಆಧುನಿಕ ಚಳುವಳಿಗಳು ವಿಶ್ವದಾದ್ಯಂತ ಬಹುಸಂಖ್ಯೆಗಳಲ್ಲಿ ಅನುಯಾಯಿಗಳನ್ನು ಆಕರ್ಷಿಸುತ್ತವೆ. ಸಮಾಜ ಧಾರ್ಮಿಕ ಪಂಥಗಳು ಹಿಂದೂ ಧರ್ಮವು ಒಂದು ಪ್ರಧಾನ ಸೈದ್ಧಾಂತಿಕ ಶಾಸನವನ್ನು ಹೊಂದಿಲ್ಲ ಮತ್ತು ಧರ್ಮವನ್ನು ಆಚರಿಸುವ ಹಲವು ಹಿಂದೂಗಳು ತಾವು ಯಾವುದೇ ನಿರ್ದಿಷ್ಟ ಪಂಥಕ್ಕೆ ಸೇರಿದ್ದೇವೆಂದು ಹೇಳುವುದಿಲ್ಲ. ಆದರೆ, ಸಮಕಾಲೀನ ಹಿಂದೂ ಧರ್ಮವನ್ನು ವಿದ್ವಾಂಸರು ನಾಲ್ಕು ಪ್ರಮುಖ ಪಂಥಗಳಲ್ಲಿ ವರ್ಗೀಕರಿಸುತ್ತಾರೆ: ವೈಷ್ಣವ ಪಂಥ, ಶೈವ ಪಂಥ, ಶಕ್ತಿ ಪಂಥ ಮತ್ತು ಸ್ಮಾರ್ತ ಪಂಥ. ಈ ಪಂಥಗಳು ಮುಖ್ಯವಾಗಿ ಪರಮಶಕ್ತ ರೂಪವೆಂದು ಆರಾಧಿಸಲಾಗುವ ದೇವರ ವಿಷಯದಲ್ಲಿ ಮತ್ತು ಆ ದೇವರ ಆರಾಧನೆಗೆ ಸಂಬಂಧಿಸಿದ ಸಂಪ್ರದಾಯಗಳಲ್ಲಿ ಭಿನ್ನವಾಗಿವೆ. ವೈಷ್ಣವರು ವಿಷ್ಣುವನ್ನು ಪರಮಶಕ್ತ ದೇವರೆಂದು ಆರಾಧಿಸುತ್ತಾರೆ; ಶೈವರು ಶಿವನನ್ನು ಪರಮಶಕ್ತನೆಂದು ಆರಾಧಿಸುತ್ತಾರೆ; ಶಾಕ್ತರು ಸ್ತ್ರೀ ದೇವತೆ ಅಥವಾ ದೇವಿಯ ಮೂಲಕ ಮೂರ್ತಿಮತ್ತಾಗಿರುವ ಶಕ್ತಿಯನ್ನು ಆರಾಧಿಸುತ್ತಾರೆ; ಮತ್ತು ಸ್ಮಾರ್ತರು ಪರಮಶಕ್ತದ ಮೂರ್ತೀಕರಣಗಳೆಂದು ಐದು (ಪಂಚದೇವ) ಅಥವಾ (ತಮಿಳು ಹಿಂದೂಗಳು ಸ್ಕಂದನನ್ನು ಸೇರಿಸುವುದರಿಂದ) ಆರು (ಷಣ್ಮತ) ದೇವತೆಗಳ ಸಾರಭೂತವಾದ ಸಂಯೋಜನೆಯಲ್ಲಿ ನಂಬಿಕೆ ಇಡುತ್ತಾರೆ. ಹಿಂದೂ ಧರ್ಮವೆಂದರೇನು ಎಂಬುದರ ಪಾಶ್ಚಾತ್ಯ ಕಲ್ಪನೆಯನ್ನು ಸ್ಮಾರ್ತ ದೃಷ್ಟಿಕೋನದ ಮೂಲಕ ವ್ಯಾಖ್ಯಾನಿಸಲಾಗಿದೆ; ಸಮಕಾಲೀನ ಹಿಂದೂ ಧರ್ಮದಲ್ಲಿ ಅದ್ವೈತ ವೇದಾಂತವನ್ನು ತಿಳಿಯದ ಅಥವಾ ಅನುಸರಿಸದ ಹಲವಾರು ಹಿಂದೂಗಳು ಸಾಂಪ್ರದಾಯಿಕವಾಗಿ ದೇವರ ಹಲವು ಸ್ವರೂಪಗಳನ್ನು ಆರಾಧಿಸುವ ಷಣ್ಮತ ನಂಬಿಕೆಯನ್ನು ಅನುಸರಿಸುತ್ತಾರೆ. ಸ್ಮಾರ್ತ ಸಂಪ್ರದಾಯದ ಪ್ರಭಾವವನ್ನು ಗಮನಿಸಿದ ಒಬ್ಬ ವಿಶ್ಲೇಷಕರು, ಹಲವು ಹಿಂದೂಗಳು ತಾವು ಸ್ಮಾರ್ತರೆಂದು ನಿಖರವಾಗಿ ಗುರುತಿಸಿಕೊಳ್ಳದಿದ್ದರೂ, ಅಪಂಥೀಯತೆಯ ಆಧಾರವಾಗಿ ಅದ್ವೈತ ವೇದಾಂತದ ಮೇಲೆ ಅವಲಂಬಿಸುವುದರ ಮೂಲಕ ಅವರು ಪರೋಕ್ಷವಾಗಿ ಸ್ಮಾರ್ತ ಪಂಥದ ಅನುಯಾಯಿಗಳಾಗಿದ್ದಾರೆಂದು ಹೇಳಿದರು. ಗಾಣಪತ್ಯ ಮತ್ತು ಸೌರದಂತಹ ಇತರ ಪಂಥಗಳು ಅಷ್ಟೊಂದು ವ್ಯಾಪಕವಾಗಿಲ್ಲ. ಮೂರ್ತಿಪೂಜೆ ಮತ್ತು ಬಹುದೇವತಾರಾಧನೆಯನ್ನು ವರ್ಜಿಸುವ ಸ್ವಾಮಿ ದಯಾನಂದ ಸರಸ್ವತಿಯವರ ಆರ್ಯ ಸಮಾಜದಂತಹ, ಮೇಲೆ ಪ್ರಸ್ತಾಪಿಸಲಾದ ಯಾವುದೇ ವರ್ಗಗಳಲ್ಲಿ ಸುಲಭವಾಗಿ ಸೇರಿಸಲಾರದ ಚಳುವಳಿಗಳಿವೆ. ಅದು ವೇದಗಳು ಮತ್ತು ವೈದಿಕ ಯಜ್ಞಗಳ ಮೇಲೆ ಕೇಂದ್ರೀಕರಿಸುತ್ತದೆ. ಬ್ಯಾನರ್ಜಿಯವರು ಗಮನಿಸಿದಂತೆ, ತಾಂತ್ರಿಕ ಸಂಪ್ರದಾಯಗಳು ವಿವಿಧ ಪಂಥಗಳನ್ನು ಹೊಂದಿವೆ: ಪ್ರತಿಯೊಂದು ಧರ್ಮದಲ್ಲಿರುವಂತೆ, ಕೆಲವರು ತಮ್ಮ ಸ್ವಂತ ಪಂಥವನ್ನು ಇತರ ಪಂಥಗಳಿಗಿಂತ ಶ್ರೇಷ್ಠವೆಂದು ಕಾಣುತ್ತಾರೆ. ಆದರೆ, ಹಲವು ಹಿಂದೂಗಳು ಇತರ ಪಂಥಗಳನ್ನು ತಮ್ಮ ಸ್ವಂತ ಪಂಥದ ಸಂಪ್ರದಾಯವಿಹಿತ ಪರ್ಯಾಯಗಳೆಂದು ಪರಿಗಣಿಸುತ್ತಾರೆ. ಹಾಗಾಗಿ, ಹಿಂದೂಗಳಿಗೆ ಸಾಮಾನ್ಯವಾಗಿ ಪಾಷಂಡ ಸಂಪ್ರದಾಯವು ಒಂದು ವಿವಾದಾಂಶವಾಗಿಲ್ಲ. ಆಶ್ರಮಗಳು ಸಾಂಪ್ರದಾಯಿಕವಾಗಿ ಒಬ್ಬ ಹಿಂದೂ ಧರ್ಮೀಯನ ಜೀವನವನ್ನು ನಾಲ್ಕು ಆಶ್ರಮಗಳಲ್ಲಿ (ಹಂತಗಳು ಅಥವಾ ಘಟ್ಟಗಳು; ಅಸಂಬಂಧಿತ ಅರ್ಥಗಳು ಏಕಾಂತಗೃಹವನ್ನು ಒಳಗೊಳ್ಳುತ್ತವೆ) ವಿಭಜಿಸಲಾಗುತ್ತದೆ. ಒಬ್ಬರ ಜೀವನದ ಮೊದಲ ಭಾಗವಾದ, ಒಬ್ಬ ವಿದ್ಯಾರ್ಥಿಯಾಗಿರುವ ಹಂತವಾದ ಬ್ರಹ್ಮಚರ್ಯವು, ಒಬ್ಬ ಗುರುವಿನ ಮಾರ್ಗದರ್ಶನದಲ್ಲಿ ಅವಿವಾಹಿತ, ನಿಯಂತ್ರಿತ, ಸಂಯಮದ ಮತ್ತು ನಿರ್ಮಲವಾದ ಅವಲೋಕನದಲ್ಲಿ ಕಳೆಯಲಾಗುತ್ತದೆ. ಆಧ್ಯಾತ್ಮಿಕ ಜ್ಞಾನಕ್ಕಾಗಿ ಮನಸ್ಸನ್ನು ಬೆಳೆಸಲಾಗುತ್ತದೆ. ಗೃಹಸ್ಥವು ಮನೆಯವನ ಹಂತ, ಅಂದರೆ ಒಬ್ಬ ವ್ಯಕ್ತಿಯು ಮದುವೆಯಾಗಿ ತನ್ನ ವಿವಾಹಿತಜೀವನದಲ್ಲಿ ಕಾಮವನ್ನು ಹಾಗೂ ವೃತ್ತಿಜೀವನದಲ್ಲಿ ಅರ್ಥವನ್ನು ಈಡೇರಿಸಿಕೊಳ್ಳುವ ಹಂತ (ಮನುಷ್ಯ ಜನ್ಮದ ಉದ್ದೇಶಗಳು ನೋಡಿ). ಒಬ್ಬ ಹಿಂದೂ ಗೃಹಸ್ಥನ ನೈತಿಕ ಕರ್ತವ್ಯಗಳು, ಒಬ್ಬರ ಹೆತ್ತವರು, ಮಕ್ಕಳು, ಅತಿಥಿಗಳು ಮತ್ತು ಪೂಜ್ಯ ವ್ಯಕ್ತಿಗಳಿಗೆ ಆಸರೆಯಾಗಿರುವುದನ್ನು ಒಳಗೊಳ್ಳುತ್ತವೆ. ನಿವೃತ್ತಿಯ ಹಂತವಾದ ವಾನಪ್ರಸ್ಥವು ಐಹಿಕ ಪ್ರಪಂಚದಿಂದ ಕ್ರಮೇಣವಾಗಿ ಅನಾಸಕ್ತಿಯ ಹಂತ. ಇದು, ಒಬ್ಬರ ಕರ್ತವ್ಯಗಳನ್ನು ತಮ್ಮ ಮಕ್ಕಳಿಗೆ ವಹಿಸುವುದು, ಹೆಚ್ಚು ಸಮಯವನ್ನು ಧಾರ್ಮಿಕ ಆಚರಣೆಗಳಲ್ಲಿ ಕಳೆಯುವುದು ಮತ್ತು ಧಾರ್ಮಿಕ ತೀರ್ಥಯಾತ್ರೆಗಳಲ್ಲಿ ತೊಡಗುವುದನ್ನು ಒಳಗೊಳ್ಳಬಹುದು. ಕೊನೆಯದಾಗಿ ವೈರಾಗ್ಯದ ಹಂತವಾದ ಸಂನ್ಯಾಸದಲ್ಲಿ, ಒಬ್ಬ ವ್ಯಕ್ತಿಯು ಪ್ರಾಪಂಚಿಕ ಜೀವನದಿಂದ ನಿರ್ಲಿಪ್ತತೆಯ ಮೂಲಕ ಏಕಾಂತವಾಗಿ ದೈವಿಕವನ್ನು ಕಂಡುಕೊಳ್ಳಲು ಮತ್ತು ಮೋಕ್ಷಕ್ಕಾಗಿ ಶಾಂತಿಯುತವಾಗಿ ದೇಹವನ್ನು ತೊರೆಯಲು ಎಲ್ಲ ಪ್ರಾಪಂಚಿಕ ಬಂಧನಗಳನ್ನು ತ್ಯಜಿಸುತ್ತಾನೆ. ಸಂನ್ಯಾಸ ಮೋಕ್ಷ ಅಥವಾ ಬೇರೊಂದು ಬಗೆಯ ಆಧ್ಯಾತ್ಮಿಕ ಪರಿಪೂರ್ಣತೆಯ ಅನ್ವೇಷಣೆಯಲ್ಲಿ ಕೆಲವು ಹಿಂದೂಗಳು ಸಂನ್ಯಾಸಿ ಜೀವನವನ್ನು ಜೀವಿಸಲು ಆಯ್ದುಕೊಳ್ಳುತ್ತಾರೆ. ಸಂನ್ಯಾಸಿಗಳು ಸರಳತೆ, ಬ್ರಹ್ಮಚರ್ಯೆ, ಪ್ರಾಪಂಚಿಕ ಮನರಂಜನೆ ಗಳಿಂದ ನಿರ್ಲಿಪ್ತತೆ, ಮತ್ತು ದೇವರ ಅವಲೋಕನದ ಜೀವನಕ್ಕೆ ಬದ್ಧವಾಗಿರುತ್ತಾರೆ.</ref> ಒಬ್ಬ ಹಿಂದೂ ಬೈರಾಗಿಯನ್ನು ಸಂನ್ಯಾಸಿ, ಸಾಧು, ಅಥವಾ ಸ್ವಾಮಿಯೆಂದು ಕರೆಯಲಾಗುತ್ತದೆ. ಒಬ್ಬ ಸ್ತ್ರೀ ಬೈರಾಗಿಯನ್ನು ಸಂನ್ಯಾಸಿನಿಯೆಂದು ಕರೆಯಲಾಗುತ್ತದೆ. ಸ್ವಾರ್ಥತೆ ಮತ್ತು ಪ್ರಾಪಂಚಿಕತೆಯ ತಮ್ಮ ಬಾಹ್ಯ ವೈರಾಗ್ಯವು ಮಾನಸಿಕ ವಿರಕ್ತಿಗಾಗಿ ಶ್ರಮಿಸುವ ಗೃಹಸ್ಥರಿಗೆ ಸ್ಫೂರ್ತಿಯಾಗಿರುವುದರಿಂದ ಬೈರಾಗಿಗಳು ಹಿಂದೂ ಸಮಾಜದಲ್ಲಿ ವಿಶೇಷ ಗೌರವವನ್ನು ಪಡೆಯುತ್ತಾರೆ. ಕೆಲವು ಸಂನ್ಯಾಸಿಗಳು ಮಠಗಳಲ್ಲಿ ವಾಸಿಸಿದರೆ, ಇತರರು ಒಂದೆಡೆಯಿಂದ ಮತ್ತೊಂದೆಡೆಗೆ ಅಲೆದಾಡುತ್ತಾರೆ, ಮತ್ತು ತಮ್ಮ ಎಲ್ಲ ಅಗತ್ಯಗಳನ್ನು ಒದಗಿಸಲು ದೇವರಲ್ಲಿ ಮಾತ್ರ ವಿಶ್ವಾಸವಿಡುತ್ತಾರೆ. ಒಬ್ಬ ಗೃಹಸ್ಥನು ಸಂನ್ಯಾಸಿಗಳಿಗೆ ಆಹಾರ ಮತ್ತು ಇತರ ಅಗತ್ಯಗಳನ್ನು ಒದಗಿಸುವ ಕಾರ್ಯ ಅತ್ಯಂತ ಶ್ಲಾಘನೀಯವೆಂದು ಭಾವಿಸಲಾಗುತ್ತದೆ. ವ್ಯಕ್ತಿಯು ಶ್ರೀಮಂತನಿರಲಿ ಅಥವಾ ಬಡವನಿರಲಿ, ಉತ್ತಮನಿರಲಿ ಅಥವಾ ನೀಚನಿರಲಿ, ಸಂನ್ಯಾಸಿಗಳು ಎಲ್ಲರನ್ನೂ ಗೌರವ ಹಾಗೂ ಅನುಕಂಪದಿಂದ ಕಾಣಲು ಮತ್ತು ಹೊಗಳಿಕೆ, ದೂಷಣೆ, ನಲಿವು ಹಾಗೂ ನೋವುಗಳಿಗೆ ಔದಾಸೀನ್ಯವುಳ್ಳವರಾಗಿರಲು ಪ್ರಯತ್ನಿಸುತ್ತಾರೆ. ವರ್ಣಗಳು ಹಿಂದೂ ಸಮಾಜವು ಸಾಂಪ್ರದಾಯಿಕವಾಗಿ ವರ್ಣಗಳೆಂದು (ಸಂಸ್ಕೃತ: "ಬಣ್ಣ, ರೂಪ, ನೋಟ") ಕರೆಯಲಾಗುವ ನಾಲ್ಕು ವರ್ಗಗಳಲ್ಲಿ ವರ್ಗೀಕರಿಸಲ್ಪಟ್ಟಿದೆ: ಬ್ರಾಹ್ಮಣರು: ಶಿಕ್ಷಕರು ಮತ್ತು ಅರ್ಚಕರು; ಕ್ಷತ್ರಿಯರು: ಯೋಧರು, ಕುಲೀನರು ಮತ್ತು ದೊರೆಗಳು; ವೈಶ್ಯರು: ರೈತರು, ವರ್ತಕರು ಮತ್ತು ವ್ಯಾಪಾರಿಗಳು; ಮತ್ತು ಶೂದ್ರರು: ಸೇವಕರು ಮತ್ತು ಕಾರ್ಮಿಕರು. ವರ್ಣ ವ್ಯವಸ್ಥೆ ಎಂದು ಕರೆಯಲಾಗುವ ವ್ಯವಸ್ಥೆಯು ಧರ್ಮಗ್ರಂಥಗಳಿಂದ ನಿರ್ಬಂಧಿಸಲ್ಪಟ್ಟ ಹಿಂದೂ ಧರ್ಮದ ಒಂದು ಅಖಂಡ ಭಾಗವಾಗಿದೆಯೇ ಅಥವಾ ಒಂದು ಹಳತಾದ ಸಾಮಾಜಿಕ ಪದ್ಧತಿಯೇ ಎಂದು ಹಿಂದೂಗಳು ಮತ್ತು ವಿದ್ವಾಂಸರು ಚರ್ಚಿಸುತ್ತಾರೆ. ಧರ್ಮಗ್ರಂಥಗಳ ಪೈಕಿ, ಶ್ರುತಿಗಳು ವರ್ಣ ವ್ಯವಸ್ಥೆಯನ್ನು ಪ್ರಸ್ತಾಪಿಸುವ, ಆದರೆ ಬಹಳ ಮಿತವಾಗಿ ಮತ್ತು ವರ್ಣನಾತ್ಮಕವಾಗಿರುವ (ಅಂದರೆ ಆದೇಶವಾಗಿರದ), ಶ್ಲೋಕಗಳನ್ನು ಹೊಂದಿವೆ. ವಾಸ್ತವವಾಗಿ, ಋಗ್ವೇದದಲ್ಲಿ ಪುರುಷಸೂಕ್ತವು (೧೦.೯೦) ಎಲ್ಲ ನಾಲ್ಕು ವರ್ಣಗಳನ್ನು ಪ್ರಸ್ತಾಪಿಸುವ ಏಕಮಾತ್ರ ಶ್ಲೋಕವಾಗಿದೆ. ಇತರ ವರ್ಣಗಳಾದ ಬ್ರಹ್ಮ (ಅಂದರೆ ಬ್ರಾಹ್ಮಣ) ಮತ್ತು ರಾಜನ್ಯಗಳನ್ನು (ಅಂದರೆ ಕ್ಷತ್ರಿಯ) ಋಗ್ವೇದದಲ್ಲಿ ಕೆಲವು ಇತರ ಶ್ಲೋಕಗಳಲ್ಲಿ (ಉದಾಹರಣೆಗೆ ೧೦.೮೦.೧) ಮತ್ತು ಇತರ ವೇದಗಳಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸಲಾಗಿದೆ, ಮತ್ತು ಉಪನಿಷತ್ತುಗಳಲ್ಲಿ ಅಪರೂಪವಾಗಿ ಪ್ರಸ್ತಾಪಿಸಲಾಗಿದೆ. ನಿಖರವಾಗಿ ಬಹುತೇಕ ಸ್ಮೃತಿ ಪಠ್ಯಗಳನ್ನು ಒಳಗೊಂಡಂತೆ, ಕೆಲವು ಪಠ್ಯಗಳು ಇವುಗಳನ್ನು ನಾಲ್ಕು ವರ್ಣಗಳಲ್ಲಿ ಸಮಾಜದ ವಿಭಜನೆಯನ್ನು ವಿಧಿಸುವ ಆದೇಶಗಳೆಂದು ವಿವರಿಸಿವೆ. ಒಬ್ಬ ವ್ಯಕ್ತಿಯ ವೃತ್ತಿಯು ಕಡ್ಡಾಯವಾಗಿ ಆತನ ಕುಟುಂಬದ ವೃತ್ತಿಯಿಂದ ನಿರ್ಧರಿತವಾಗಿರಲಿಲ್ಲವೆಂದು ಋಗ್ವೇದದ ಒಂದು ಶ್ಲೋಕವು ಸೂಚಿಸುತ್ತದೆ: ವೈದಿಕ ಯುಗದಲ್ಲಿ, ವೇದಗಳನ್ನು ಕೇಳುವುದಕ್ಕೆ ಅಥವಾ, ಮುಂದಿನ ಸಮಯದಲ್ಲೂ ಇದ್ದಂತೆ, ಯಾವುದೇ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ಶೂದ್ರರ ಮೇಲೆ ಯಾವುದೇ ನಿಷೇಧವಿರಲಿಲ್ಲ. ಹಲವಾರು ಸಮಾಜಶಾಸ್ತ್ರಜ್ಞರಿಂದ ಸೂಚಿಸಲ್ಪಟ್ಟಂತೆ, ವರ್ಣಗಳೊಳಗಿನ ಸ್ವಲ್ಪ ಗತಿಶೀಲತೆ ಮತ್ತು ನಮ್ಯತೆಯು ಜಾತಿ ವ್ಯವಸ್ಥೆಯಲ್ಲಿನ ಸಾಮಾಜಿಕ ಭೇದಭಾವದ ಆಪಾದನೆಗಳನ್ನು ಆಕ್ಷೇಪಿಸುತ್ತವೆ. ವರ್ಣಗಳ ವೈದಿಕ ಪ್ರಸ್ತಾಪಗಳನ್ನು ಆದೇಶಗಳೆಂದು ವಿವರಿಸುವ ಸ್ಮೃತಿಗಳು, ನಾಲ್ಕು ವರ್ಣಗಳಲ್ಲಿ ಸಮಾಜದ ವಿಭಜನೆಯನ್ನು ಸ್ಪಷ್ಟವಾಗಿ ಅನುಮೋದಿಸುತ್ತವೆ, ಮತ್ತು, ಮುಂದೆ ಇಂದಿನ ಜನ್ಮಾಧಾರಿತ ಜಾತಿ ವ್ಯವಸ್ಥೆಯಾಗಿ ಹೊರಹೊಮ್ಮಿದ, ಈ ವರ್ಣಗಳೊಳಗಿನ ವಿವಿಧ ಉಪ-ವಿಭಾಗಗಳನ್ನೂ ಪ್ರಸ್ತಾಪಿಸುತ್ತವೆ. ಮಹಾತ್ಮಾ ಗಾಂಧಿ ಹಾಗೂ ಬಿ. ಆರ್. ಅಂಬೇಡ್ಕರ್‌ರನ್ನು ಒಳಗೊಂಡಂತೆ, ಅನೇಕ ಸಮಾಜ ಸುಧಾರಕರು ಜಾತಿ ತಾರತಮ್ಯವನ್ನು ಟೀಕಿಸಿದರು. ಧಾರ್ಮಿಕ ಶಿಕ್ಷಕರಾದ ಶ್ರೀ ರಾಮಕೃಷ್ಣರು (೧೮೩೬-೧೮೮೬) ಎಂದು ಬೋಧಿಸಿದರು. ಅಹಿಂಸೆ ಮತ್ತು ಸಸ್ಯಾಹಾರಾಚರಣೆ ಸಸ್ಯಗಳು ಮತ್ತು ಮನುಷ್ಯೇತರ ಪ್ರಾಣಿಗಳನ್ನು ಒಳಗೊಂಡಂತೆ, ದಿವ್ಯತೆಯು ಎಲ್ಲ ಜೀವಿಗಳ ಒಳವ್ಯಾಪಿಸುತ್ತದೆಂದು ನಂಬಲಾಗುವುದರಿಂದ, ಹಿಂದೂಗಳು ಅಹಿಂಸೆ ಮತ್ತು ಜೀವನದ ಪ್ರತಿ ಗೌರವವನ್ನು ಪ್ರತಿಪಾದಿಸುತ್ತಾರೆ. ಅಹಿಂಸೆ ಪದವು ಉಪನಿಷತ್ತುಗಳಲ್ಲಿ, ಮಹಾಭಾರತ ಮಹಾಕಾವ್ಯದಲ್ಲಿ ಕಾಣುತ್ತದೆ ಮತ್ತು ಪತಂಜಲಿಯ ಯೋಗ ಸೂತ್ರಗಳಲ್ಲಿ ಅಹಿಂಸೆಯು ಐದು ಯಮಗಳ (ಆತ್ಮನಿಗ್ರಹದ ಶಪಥಗಳು) ಪೈಕಿ ಮೊದಲಿನದು. ಅಹಿಂಸೆಗೆ ಅನುಗುಣವಾಗಿ, ಜೀವನದ ಉನ್ನತ ಸ್ವರೂಪಗಳನ್ನು ಗೌರವಿಸಲು ಅನೇಕ ಹಿಂದೂಗಳು ಸಸ್ಯಾಹಾರವನ್ನು ಅಂಗೀಕರಿಸುತ್ತಾರೆ. ಯಜುರ್ವೇದವು ಸಸ್ಯಾಹಾರಾಚರಣೆಯನ್ನು ಪ್ರಚಾರ ಮಾಡುತ್ತದೆ ಮತ್ತು ಸಾತ್ವಿಕ ಜೀವನಶೈಲಿಗಾಗಿ ಸಸ್ಯಾಹಾರಾಚರಣೆಯನ್ನು ಸೂಚಿಸಲಾಗುತ್ತದೆ. (ಎಲ್ಲ ಧರ್ಮಗಳ ಅನುಯಾಯಿಗಳನ್ನು ಒಳಗೊಂಡಂತೆ) ಭಾರತದಲ್ಲಿ ಕ್ಷೀರ ಸಸ್ಯಾಹಾರಿಗಳ ಸಂಖ್ಯೆಯ ಅಂದಾಜುಗಳು ಶೇಕಡ ೨೦ರಿಂದ ೪೨ರ ನಡುವೆ ಬದಲಾಗುತ್ತವೆ. ಆಹಾರ ಪದ್ಧತಿಗಳು ಸಮುದಾಯ ಮತ್ತು ಪ್ರದೇಶದೊಂದಿಗೆ ಬದಲಾಗುತ್ತವೆ, ಉದಾಹರಣೆಗೆ ಕೆಲವು ಜಾತಿಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಸ್ಯಾಹಾರಿಗಳಿರುವುದು ಮತ್ತು ಕರಾವಳಿ ತೀರದ ನಿವಾಸಿಗಳು ಕಡಲಾಹಾರದ ಮೇಲೆ ಅವಲಂಬಿಸಿರುವುದು. ಕೆಲವು ಹಿಂದೂಗಳು, ರಾಜಸಿಕ ಆಹಾರಗಳೆಂದು ಪರಿಗಣಿಸಲಾದ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ. ಕೆಲವರು ನಿರ್ದಿಷ್ಟ ಧಾರ್ಮಿಕ ದಿನಗಳಂದು ಮಾತ್ರ ಮಾಂಸ ತಿನ್ನುವುದಿಲ್ಲ. ಮಾಂಸ ತಿನ್ನುವ ಶ್ರದ್ಧಾವಂತ ಹಿಂದೂಗಳು ಬಹುತೇಕ ಎಂದೂ ಗೋಮಾಂಸ ತಿನ್ನುವುದಿಲ್ಲ. ಹಿಂದೂ ಸಮಾಜದಲ್ಲಿ ಹಸುವನ್ನು ಸಾಂಪ್ರದಾಯಿಕವಾಗಿ ರಕ್ಷಕ ಮತ್ತು ಮಾತೃಸಮಾನವಾಗಿ ಗುರುತಿಸಲಾಗುತ್ತದೆ ಮತ್ತು ಹಿಂದೂ ಸಮಾಜವು ಹಸುವನ್ನು ನಿಸ್ವಾರ್ಥ ದಾನದ ಒಂದು ಸಂಕೇತವೆಂದು ಗೌರವಿಸುತ್ತದೆ. ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಗೋಹತ್ಯೆಯನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಹೆಚ್ಚಿನ ಚರ್ಚೆಗೆ ಧರ್ಮದಲ್ಲಿ ಹಸು ಮತ್ತು ನಿಷಿದ್ಧ ಆಹಾರ ನೋಡಿ. ಮತಾಂತರ ಧರ್ಮಾಂತರ, ಧರ್ಮ ಪ್ರಚಾರ, ಮತ್ತು ಮತಾಂತರಿಸುವಿಕೆಯ ಪರಿಕಲ್ಪನೆಗಳು ಹಿಂದೂ ಪಠ್ಯಗಳಲ್ಲಿ ಕಾಣುವುದಿಲ್ಲ ಮತ್ತು ಆಚರಣೆಯಲ್ಲಿ ಎಂದೂ ಪ್ರಮುಖವಾದ ಪಾತ್ರವಹಿಸಿಲ್ಲವಾದರೂ ಮತಾಂತರಗೊಳ್ಳಲು ಸಿದ್ಧವಿರುವವರಿಗೆ ಸಮ್ಮತಿಯು ಹೆಚ್ಚು ಸಾಮಾನ್ಯವಾಗುತ್ತಿದೆ. ಅದರ ಇತಿಹಾಸದ ಮುಂಚಿನ ಭಾಗದಲ್ಲಿ, ಇತರ ಪ್ರತಿಸ್ಪರ್ಧಿ ಧರ್ಮಗಳ ಅನುಪಸ್ಥಿತಿಯ ಕಾರಣ, ಹಿಂದೂಗಳು ತಾವು ಸಂಧಿಸಿದ ಎಲ್ಲರನ್ನೂ ಹಿಂದೂಗಳೆಂದು ಪರಿಗಣಿಸುತ್ತಿದ್ದರು ಮತ್ತು ತಾವು ಭೇಟಿಯಾದ ಎಲ್ಲರೂ ಹಿಂದೂಗಳಾಗಿರಬೇಕೆಂದು ನಿರೀಕ್ಷಿಸುತ್ತಿದ್ದರು. ಇಂದಿಗೂ ಕೂಡ ಹಿಂದೂಗಳು ಮತಾಂತರದ ಸ್ವೀಕಾರಾರ್ಹತೆಯ ಐತಿಹಾಸಿಕ ವಿಚಾರಗಳಿಂದ ಪ್ರಭಾವಿತಗೊಳ್ಳುತ್ತಿದ್ದಾರೆ. ಹಾಗಾಗಿ, ಒಂದೆಡೆ ಅನೇಕ ಹಿಂದೂಗಳು ಹಿಂದೂ ಧರ್ಮವು ಜನ್ಮದಿಂದ ಮಾತ್ರ ಹೊಂದಬಹುದಾದ ಒಂದು ಗುರುತೆಂದು ಇಂದಿಗೂ ನಂಬಿದರೆ, ಇನ್ನೊಂದೆಡೆ ಹಿಂದೂ ನಂಬಿಕೆಗಳು ಮತ್ತು ಆಚರಣೆಗಳನ್ನು ಅನುಸರಿಸುವ ಯಾರಾದರೂ ಹಿಂದೂಗಳೆಂದು ಅನೇಕ ಇತರರು ನಂಬುತ್ತಾರೆ, ಮತ್ತು ಅನೇಕರು ಈ ಎರಡೂ ಸಿದ್ಧಾಂತಗಳ ಸ್ವಲ್ಪ ಭಾಗವನ್ನು ನಂಬುತ್ತಾರೆ. ಆದರೆ, ಇತರ ಪಮುಖ ಧರ್ಮಗಳ ಧರ್ಮ ಪ್ರಚಾರ, ಮತಾಂತರ ಮತ್ತು ಧರ್ಮಾಂತರ ಚಟುವಟಿಕೆಗಳ ಅವಗತವಾದ ಮತ್ತು ವಾಸ್ತವಿಕ ಅಪಾಯಕ್ಕೆ ಪ್ರತಿಕ್ರಿಯೆಯಾಗಿ ಬಹುತೇಕ ಹಿಂದೂಗಳು ವಾಸ್ತವಿಕವಾಗಿ (ಯಾವುದೇ) ಒಂದು ಧರ್ಮದಿಂದ (ಬೇರಾವುದೇ) ಮತ್ತೊಂದು ಧರ್ಮಕ್ಕೆ ಮತಾಂತರದ ಕಲ್ಪನೆಯನ್ನು ವಿರೋಧಿಸುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿನ ಹಿಂದೂಗಳು ಸಾಮಾನ್ಯವಾಗಿ ಮತಾಂತರಹೊಂದಲು ಇಷ್ಟಪಡುವವರನ್ನು ಸ್ವೀಕರಿಸಿ ಸ್ವಾಗತಿಸುತ್ತಾರೆ ಮತ್ತು ಭಾರತದಲ್ಲಿಯೂ ಮತಾಂತರಹೊಂದಲು ಇಷ್ಟಪಡುವವರಿಗೆ ಸಮ್ಮತಿಯು ಹೆಚ್ಚು ಸಾಮಾನ್ಯವಾಗುತ್ತಿದೆ. ಹಿಂದೂ ಪುನರುಜ್ಜೀವಕ ಚಳುವಳಿಗಳ ಹೆಚ್ಚಳದಿಂದ ಹಿಂದೂ ಧರ್ಮಕ್ಕೆ ಪುನರ್ಮತಾಂತರಗಳೂ ಹೆಚ್ಚಿವೆ. ಹಿಂದೂ ಧರ್ಮದ ಹೊರಗಿನ ಮತಾಂತರಗಳನ್ನು ಮಾನ್ಯಮಾಡಲಾಗದ ಕಾರಣ ಪುನರ್ಮತಾಂತರಗಳನ್ನು ಹೆಚ್ಚಾಗಿ ಒಪ್ಪಿಕೊಳ್ಳಲಾಗಿದೆ. ವಿವಾಹದ ಮೂಲಕ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಹೆಚ್ಚಾಗಿ ಅಂಗೀಕರಿಸಲಾಗಿದೆ ಮತ್ತು ಹಿಂದೂವಲ್ಲದ ಭಾಗದಾತನು ವಿಶಾಲ ಹಿಂದೂ ಕುಟುಂಬ ಹಾಗೂ ಸಮಾಜದೊಳಗಿನ ಆಧ್ಯಾತ್ಮಿಕ, ಧಾರ್ಮಿಕ, ಮತ್ತು ಸಾಂಸ್ಕೃತಿಕ ಕರ್ತವ್ಯಗಳಲ್ಲಿ ಸಂಪೂರ್ಣವಾಗಿ ಭಾಗವಹಿಸುವುದನ್ನು ಸಾಧ್ಯವಾಗಿಸಲು ಇದು ಹಲವುವೇಳೆ ನಿರೀಕ್ಷಿತವಾಗಿರುತ್ತದೆ. ಹಿಂದೂ ಧರ್ಮಕ್ಕೆ ಮತಾಂತರಹೊಂದಲು ಯಾವುದೇ ಶಾಸ್ತ್ರೋಕ್ತ ಪ್ರಕ್ರಿಯೆಯಿಲ್ಲವಾದರೂ, ಅನೇಕ ಸಂಪ್ರದಾಯಗಳಲ್ಲಿ ದೀಕ್ಷೆ ("ಉಪಕ್ರಮ") ಎಂದು ಕರೆಯಲ್ಪಡುವ ಒಂದು ಕ್ರಿಯಾವಿಧಿಯು ಆಧ್ಯಾತ್ಮಿಕ ಜೀವನದ ಆರಂಭವನ್ನು ಮಾನ್ಯಮಾಡುತ್ತದೆ. ಶುದ್ಧಿ ಎಂದು ಕರೆಯಲ್ಪಡುವ ಒಂದು ಕ್ರಿಯಾವಿಧಿಯು ಕೆಲವೊಮ್ಮೆ ಪುನರ್ಮತಾಂತರದ ನಂತರ ಆಧ್ಯಾತ್ಮಿಕ ಜೀವನಕ್ಕೆ ಪುನರಾಗಮನವನ್ನು ಮಾನ್ಯಮಾಡುತ್ತದೆ. ಆಧ್ಯಾತ್ಮಿಕ ಜೀವನದ ಉದ್ದೇಶಗಳನ್ನು, ಪ್ರಾಮಾಣಿಕವಾಗಿ ಆಚರಿಸಿದರೆ, ಯಾವುದೇ ಧರ್ಮದ ಮೂಲಕ ಸಾಧಿಸಬಹುದೆಂದು ಹಿಂದೂ ಪಂಥಗಳು ನಂಬುವ ಕಾರಣ, ಬಹುತೇಕ ಹಿಂದೂ ಪಂಥಗಳು ಮತಾಂತರಿಗಳನ್ನು ಅರಸುವುದಿಲ್ಲ. ಆದರೆ, ಆರ್ಯ ಸಮಾಜ, ಶೈವ ಸಿದ್ಧಾಂತ ಚರ್ಚ್, ಬಿಎಪಿಎಸ್, ಇಸ್ಕಾನ್‌ನಂತಹ ಕೆಲವು ಹಿಂದೂ ಪಂಥಗಳು ಮತ್ತು ಅಂಗಸಂಸ್ಥೆಗಳು ಹಿಂದೂ ಧರ್ಮವನ್ನು ಅನುಸರಿಸುವ ಅಪೇಕ್ಷೆಯಿರುವವರನ್ನು ಸ್ವೀಕರಿಸುತ್ತವೆ. ಸಾಮಾನ್ಯವಾಗಿ, ಹಿಂದೂ ಧರ್ಮದ ಧಾರ್ಮಿಕ ಸ್ವಾತಂತ್ರ್ಯದ ಆಶಯ ಮತಾಂತರಿಸುವ ಸ್ವಾತಂತ್ರ್ಯದ ಮೇಲೆ ಆಧರಿಸಿಲ್ಲ. ಬದಲಾಗಿ, ಒಬ್ಬರ ಧರ್ಮವನ್ನು ನಡೆಸಿಕೊಂಡು ಬರುವ ಹಕ್ಕು ಮತ್ತು ಮತಾಂತರಕ್ಕೆ ಒಳಪಡದೇ ಇರುವ ಸ್ವಾತಂತ್ರ್ಯದ ಮೇಲೆ ಆಧರಿಸಿದೆ. ಮತಾಂತರಿಸುವ ಧರ್ಮಗಳನ್ನು ಪ್ರೋತ್ಸಾಹಿಸುವ ಕಾರಣ, ಮಾನವ ಹಕ್ಕುಗಳ ವಿಶ್ವವ್ಯಾಪಿ ಘೋಷಣೆಯಲ್ಲಿರುವ ಧಾರ್ಮಿಕ ಸ್ವಾತಂತ್ರ್ಯದ ಅಧಿನಿಯಮದ ಈಗಿರುವ ಸೂತ್ರೀಕರಣವನ್ನು ಬದಲಾಯಿಸಬೇಕೆಂದು ಹಿಂದೂ ಮುಖಂಡರು ವಾದಿಸುತ್ತಿದ್ದಾರೆ. ಇವನ್ನೂ ನೋಡಿ ಹಿಂದೂ ಹಿಂದೂ ಧರ್ಮ ರಾಷ್ಟ್ರಗಳ ಅನುಸಾರವಾಗಿ ಸಂಬಂಧಿತ ಲೇಖನಗಳ ಪಟ್ಟಿ ಹಿಂದೂ ದೇವತೆಗಳು ಹಿಂದೂ ದೇವಸ್ಥಾನಗಳ ಪಟ್ಟಿ ಹಿಂದೂ ಪಂಚಾಂಗ ಹಿಂದೂ ಪಂಥಗಳು ಹಿಂದೂ ಸುಧಾರಣಾ ಚಳುವಳಿಗಳು ಹಿಂದೂ ಪುರಾಣ ಪ್ರಖ್ಯಾತ ಹಿಂದೂಗಳ ಪಟ್ಟಿ ಹಿಂದೂ ಧರ್ಮದ ಟೀಕೆ ಹಿಂದೂ ಧರ್ಮದಲ್ಲಿ ನಾಸ್ತಿಕತೆ ಸಂಬಂಧಿತ ಪದ್ಧತಿಗಳು ಮತ್ತು ಧರ್ಮಗಳು ಪ್ರಾಚ್ಯ ತತ್ತ್ವಶಾಸ್ತ್ರ ಹಿಂದೂ ತತ್ತ್ವಶಾಸ್ತ್ರ ತತ್ವಶಾಸ್ತ್ರ ಭಾರತದ ಧರ್ಮಗಳು ಪಾರ್ಸಿ ಮತ ಜೈನ ಧರ್ಮ ಬೌದ್ಧಧರ್ಮ ಲಿಂಗಾಯತ ಧರ್ಮ ಸಿಖ್ ಧರ್ಮ ಅಯ್ಯಾವಳಿ ಹಿಂದೂ ಧರ್ಮ ಮತ್ತು ಇತರ ಧರ್ಮಗಳು ಬೌದ್ಧಧರ್ಮ ಮತ್ತು ಹಿಂದೂ ಧರ್ಮ ಲಿಂಗಾಯತ ಧರ್ಮ ಮತ್ತು ಹಿಂದೂ ಧರ್ಮ ಸಿಖ್ ಧರ್ಮ ಮತ್ತು ಹಿಂದೂ ಧರ್ಮ ಗ್ರೀಸ್‌ನ ಮತ ಮತ್ತು ಹಿಂದೂ ಧರ್ಮ ಅಯ್ಯಾವಳಿ ಮತ್ತು ಹಿಂದೂ ಧರ್ಮ ಇಸ್ಲಾಂ ಮತ್ತು ಹಿಂದೂ ಧರ್ಮ ಆದ್ಯ-ಭಾರತೀಯ-ಇರಾನೀ ಧರ್ಮ ಮೊದಲಿನ-ಇಂಡೋ-ಯೂರೋಪಿಯನ್ ಧರ್ಮ ಟಿಪ್ಪಣಿಗಳು ಆಧಾರ ಗ್ರಂಥಗಳು ಹೆಚ್ಚಿನ ವಾಚನ ಹೊರಗಿನ ಸಂಪರ್ಕಗಳು ವಿದ್ವಾಂಸರು ಮತ್ತು ವಿದ್ಯಾರ್ಥಿಗಳಿಗಾಗಿ ಸಂಪನ್ಮೂಲಗಳು ಸ್ವಾಮಿ ಶಿವಾನಂದರ ಆಲ್ ಅಬೌಟ್ ಹಿಂದೂಯಿಸಮ್ (ಪಿಡಿಎಫ್) ಹಿಂದೂ ಧರ್ಮದ ತಿರುಳು: ಹಿಂದೂ ಸಂಪ್ರದಾಯಗಳ ಸ್ಥೂಲ ಸಮೀಕ್ಷೆ ಹಿಂದೂ ಧರ್ಮದ ಬಗ್ಗೆ ಮಾಹಿತಿ ಎಥಿಕಲ್ ಡಿಮಾಕ್ರಸಿಯ ನಿಯತಕಾಲಿಕ - ಹಿಂದೂ ಧರ್ಮದ ಬಗ್ಗೆ ಟಿಪ್ಪಣಿಗಳು ಹಿಂದೂ ಧರ್ಮದಲ್ಲಿ ಧಾರ್ಮಿಕ ಸಹಿಷ್ಣುತೆ ಪುಟ ಶ್ರವ್ಯ ಮಾಧ್ಯಮ (ಆಡಿಯೋ) ಹಿಂದೂ ಧರ್ಮದ ಬಗ್ಗೆ ಸ್ವಾಮಿ ವಿವೇಕಾನಂದರ ವಿದ್ವತ್ಪ್ರಬಂಧ - ೧೮೯೩ರ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಂಡಿಸಿದ್ದು (ಪಠ್ಯ + ಶ್ರವ್ಯ ಆವೃತ್ತಿ) ಆಕ್ಸ್‌ಫರ್ಡ್ ಸೆಂಟರ್ ಫಾರ್ ಹಿಂದೂ ಸ್ಟಡೀಸ್ ವಿದ್ವಾಂಸರು ಮತ್ತು ವಿದ್ಯಾರ್ಥಿಗಳಿಗಾಗಿ ಆಕರ ಮಾಹಿತಿಯಾಗಿ ಉಪನ್ಯಾಸಗಳು ಮತ್ತು ಚರ್ಚಾಗೋಷ್ಠಿಗಳು ಎಮ್‌ಪಿಥ್ರೀ ಶ್ರವ್ಯ ಫಾರ್ಮ್ಯಾಟ್‌ನಲ್ಲಿ. ಸಂಸ್ಕೃತಿ ಹಿಂದೂ ಧರ್ಮ